ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!

ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!

ಪಾಕಿಸ್ತಾನಕ್ಕೆ ಜೈಕಾರದ ಘೋಷಣೆಗಳು ರಾಜ್ಯದೆಲ್ಲೆಡೆ ಮೊಳಗುತ್ತಿವೆ. ಕಾಂಗ್ರೆಸ್ಸಿನ ಗೆಲುವಿನ ಹಿನ್ನೆಲೆಯಲ್ಲಿ ಈ ಘೋಷಣೆಗಳು ಎನ್ನುವುದು ನಿಜವಾದರೂ ಒಂದಷ್ಟು ಮುಸಲ್ಮಾನರ ಮಾನಸಿಕ ಸ್ಥಿತಿ ಬಹಳ ಕಾಲದಿಂದಲೂ ಹೀಗೆಯೇ ಇದೆ ಎನ್ನುವುದು ತಿಳಿಯದ ಸಂಗತಿ ಏನಲ್ಲ. ಎಡಪಂಥೀಯ ಬುದ್ಧಿಜೀವಿಗಳು, ಮುಸಲ್ಮಾನ ಪರ ಕೆಲವು ಹಿಂದೂ ಸಂಘಟನೆಗಳು ಮತ್ತು ಸ್ವತಃ ಮುಸಲ್ಮಾನರೊಂದಷ್ಟು ಜನ ಈ ಚಿಂತನೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಆದರೆ ಅವರಿಗೆ ಸದ್ಯದ ಪಾಕಿಸ್ತಾನದ ಪರಿಸ್ಥಿತಿ ಎಂಥದ್ದಿದೆ ಎಂಬುದರ ಅರಿವು ಇರಲಿಕ್ಕಿಲ್ಲ. ಅಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಜನ ಮತ್ತು ಸೇನೆಯ ನಡುವೆ ಕಾದಾಟ ಶುರುವಾಗಿದೆ. ಯಾವ ಸೇನೆಯ ವಿಶ್ವಾಸದಿಂದಲೇ ಭಾರತವನ್ನು ಎದುರಿಸುತ್ತೇವೆಂದು ಪಾಕಿಸ್ತಾನಿಗಳು ಹೇಳುತ್ತಿದ್ದರೋ ಇಂದು ಅದೇ ಸೇನೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಘರ್ಷಣೆ ಎಲ್ಲಿಗೆ ಹೋಗಿ ನಿಲ್ಲುವುದೋ ತಿಳಿದಿಲ್ಲ ನಿಜ. ಆದರೆ ಪಾಕಿಸ್ತಾನವೇ ಚೂರು-ಚೂರಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ. 1971ರಲ್ಲಿ ಪಾಕಿಸ್ತಾನವನ್ನು ಎರಡು ತುಂಡು ಮಾಡಿ ಬಿಸಾಡಿದ ಇಂದಿರಾಗೆ ಸಿಕ್ಕ ಗೌರವದ ನೂರ್ಪಟ್ಟು ಪಾಕಿಸ್ತಾನವನ್ನು ನಾಲ್ಕು ಚೂರು ಮಾಡುವ ಮೋದಿಗೆ ಸಿಕ್ಕರೂ ಸಿಗಬಹುದು. ಪಾಕಿಸ್ತಾನವೇ ಬಲೂಚಿಸ್ತಾನ, ಸಿಂಧ್, ಪಂಜಾಬು, ಕಾಶ್ಮೀರವೆಂದು ನಾಲ್ಕು ಭಾಗಗಳಾಗಿ ವಿಭಜನೆಗೊಂಡರೆ ಇವರು ಜೈಕಾರ ಹಾಕುವ ಪಾಕಿಸ್ತಾನಕ್ಕೆ ಅಸ್ತಿತ್ವವೇ ಇರುವುದಿಲ್ಲ. ಮುಸಲ್ಮಾನರನ್ನು ಈ ದಿಕ್ಕಿನಲ್ಲಿ ಭಡಕಾಯಿಸಿ ಅವರಿಂದ ಜೈಕಾರ ಹೇಳಿಸುವ ಮಂದಿ, ನಾಳೆಯ ದಿನ ಅಸ್ತಿತ್ವವೇ ಇಲ್ಲದ ಪಾಕಿಸ್ತಾನದ ಕಾರಣಕ್ಕೆ ಇವರೆಲ್ಲ ಅತಂತ್ರರಾಗುವುದನ್ನು ನೋಡಿ ನಗಲಿರುವುದಂತೂ ಸತ್ಯ.

ಪಾಕಿಸ್ತಾನದ ದುರಂತ ಪರ್ವ ಆರಂಭವಾಗಿದ್ದು ಮೋದಿಯ ಆಗಮನದ ನಂತರವೇ. ಅಲ್ಲಿಯವರೆಗೂ ಭಾರತದಲ್ಲಿ ಎಲ್ಲೆಂದರಲ್ಲಿ ಬಾಂಬ್ ಸ್ಫೋಟಗಳನ್ನು ಮಾಡಿಸುತ್ತಿದ್ದ ಪಾಕಿಸ್ತಾನ ಏಕಾಕಿ ದಿಗ್ಬಂಧನಕ್ಕೆ ಒಳಗಾಯ್ತು. ಭಾರತೀಯ ಬೇಹುಗಾರಿಕೆ ಎಷ್ಟು ಚುರುಕಾಯ್ತೆಂದರೆ ಕಾಶ್ಮೀರದಲ್ಲಿ ಕಂಡ-ಕಂಡಲ್ಲಿ ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಯ್ತು. ಭಯೋತ್ಪಾದನಾ ಕೃತ್ಯಕ್ಕೆ ತಮ್ಮ ತಾವು ಸಮರ್ಪಿಸಿಕೊಂಡ ಬುರ್ಹನ್ ವನಿಯಂಥವರನ್ನು ಹುಚ್ಚು ನಾಯಿಗಿಂತಲೂ ಕಡೆಯಾಗಿ ಕೊಲ್ಲಲಾಯ್ತು. ಅವನ ಶವವನ್ನು ಮನೆಯವರಿಗೆ ಕೊಟ್ಟು ಶವಯಾತ್ರೆಗೆಂದು ಬಂದಿದ್ದ ಮತ್ತಷ್ಟು ಭಯೋತ್ಪಾದಕ ನಾಯಕರನ್ನು ಹಿಂಬಾಲಿಸಿಕೊಂಡು ಹೋಗಿ ಕಾಶ್ಮೀರದ ಕೊಳ್ಳವನ್ನು ಇವರಿಂದ ಮುಕ್ತಗೊಳಿಸಲಾಯ್ತು. ಅತ್ತ ಬುರ್ಹನ್‌ವನಿಯ ಸಾವನ್ನು ಕಂಡು ಬೆದರಿದ ಹೊಸ ಪೀಳಿಗೆಯ ತರುಣರು ಭಯೋತ್ಪಾದನೆಯಿಂದ ದೂರ ಉಳಿಯಲು ನಿಶ್ಚಯಿಸಿದರು. ಪಾಕೀ ಸೇನೆಗೆ ಸಿಗಬಹುದಾಗಿದ್ದ ಕಚ್ಚಾ ವಸ್ತುಗಳೇ ಇಲ್ಲವಾಗಿ ಹೋದಮೇಲೆ ಸಂಕಟ ಎರಗಿದ್ದಂತೂ ನಿಜ. ನಿಧಾನವಾಗಿ ಕಾಶ್ಮೀರ ಶಾಂತವಾಯ್ತು, ದೇಶವೂ ಕೂಡ.

ಅತ್ತ ಪಾಕಿಸ್ತಾನದಲ್ಲಿ ನಿಧಾನವಾಗಿ ಅಸಹನೆ ಆರಂಭವಾಯ್ತು. ಭಾರತವನ್ನು ಅಶಾಂತವಾಗಿರಸಲೆಂದೇ ವಿದೇಶೀ ಹೂಡಿಕೆಯನ್ನು ಪಡೆಯುತ್ತಿದ್ದ ಪಾಕಿಸ್ತಾನಕ್ಕೆ ಈಗ ಬಲುದೊಡ್ಡ ಸಂಕಟ. ನೋಡ-ನೋಡುತ್ತಲೇ ಅವರ ವಿದೇಶೀ ವಿನಿಮಯ ಬರಿದಾಗುತ್ತಾ ಹೋಯ್ತು. ಮೋದಿ ಸರ್ಕಾರದ ನಿರಂತರ ಪ್ರಯಾಸದಿಂದಾಗಿ ಐಎಮ್ಎಫ್, ವಿಶ್ವಬ್ಯಾಂಕುಗಳು ಸಾಲ ಕೊಡುವುದನ್ನು ನಿಲ್ಲಿಸಿದವು. ಈ ಹೊತ್ತಿನಲ್ಲಿಯೇ ಭುಟ್ಟೋ ಮತ್ತು ಶರೀಫ್ ಕುಟುಂಬಗಳ ರಾಜಕಾರಣದಿಂದ ಬೇಸತ್ತಿದ್ದ ಸೇನೆಗೆ ಇವರಿಬ್ಬರನ್ನು ಬಿಟ್ಟು ಹೊಸಮುಖವೊಂದನ್ನು ಪಟ್ಟಕ್ಕೆ ಕೂರಿಸುವ ಆತುರವಿತ್ತು. ಆಗ ಕಣ್ಮುಂದೆ ಬಂದವನು ಇಮ್ರಾನ್ ಖಾನ್. ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್ ಪಕ್ಷವನ್ನು ಕಟ್ಟಿಕೊಂಡು ಓಡಾಟ ನಡೆಸುತ್ತಿದ್ದ ಆತ ಪರಿವಾರ ರಾಜಕಾರಣಕ್ಕೆ ಸಡ್ಡು ಹೊಡೆಯುವುದಾಗಿ ಸೇನೆಗೆ ಭರವಸೆ ಕೊಟ್ಟು ಮುನ್ನುಗ್ಗಿದ. 2018ರಲ್ಲಿ ಚುನಾವಣೆ ನಡೆದಾಗ ಇಮ್ರಾನ್ ಖಾನನಿಗೆ ಎಲ್ಲ ಬಗೆಯ ಸಹಕಾರವನ್ನು ಕೊಟ್ಟಿದ್ದು ಸೇನೆಯೇ. ಆತ ಚುನಾವಣೆಯನ್ನು ಗೆದ್ದು ಅಲ್ಪ ಬಹುಮತದೊಂದಿಗೆ ಪಾಕಿಸ್ತಾನದ ಚುಕ್ಕಾಣಿ ಹಿಡಿದುಬಿಟ್ಟ. ಆಗ ಸೇನೆಯ ಮುಖ್ಯಸ್ಥ ಕಾಶ್ಮೀರದ ವಿಚಾರದಲ್ಲಿ ವಿಶೇಷವಾದ ಪರಿಣಿತಿ ಹೊಂದಿದ್ದ ಜನರಲ್ ಕಮರ್ ಬಾಜ್ವಾ. ಇವರೀರ್ವರ ಸಂಬಂಧ ಎಷ್ಟು ಬಲವಾಗಿತ್ತೆಂದರೆ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಇಮ್ರಾನ್ ‘ನಾನು ಗೆಳೆತನವಿಟ್ಟುಕೊಂಡಿರೋದು ಪಾಕಿಸ್ತಾನೀ ಸೇನೆಯೊಂದಿಗೆ, ಶತ್ರು ಸೇನೆಯೊಂದಿಗಲ್ಲ. ನಾವು ಜೊತೆಗೂಡಿಯೇ ನಡೆಯುತ್ತೇವೆ’ ಎಂದಿದ್ದ. ಪಾಕಿಸ್ತಾನದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಬಾಜ್ವಾನೇ ಕಾರಣ ಎಂದು ಹೇಳುವುದಕ್ಕೆ ಆತ ಹಿಂಜರಿಯಲಿಲ್ಲ. ಅಧಿಕಾರ ಪಡೆದೊಡನೆ ಒಂದೇ ಪುಸ್ತಕದ ಒಂದೇ ಪುಟದಲ್ಲಿ ನಾವಿಬ್ಬರೂ ಇದ್ದೇವೆ ಎಂದೂ ತನ್ನ ಚಟುವಟಿಕೆಗಳನ್ನು ಸಮರ್ಥಿಸಿಕೊಂಡಿದ್ದ. 2020ರಲ್ಲಿ ಅಲ್‌ಜಝೀರಾದೊಂದಿಗೆ ಮಾತನಾಡುತ್ತಾ ಸೇನೆ ಮತ್ತು ಸರ್ಕಾರದ ಸಂಬಂಧಗಳು ಬಲು ಸೌಹಾರ್ದಯುತವಾಗಿದೆ ಎಂದಿದ್ದ. ಸೇನೆಯೂ ಈತನ ಕಾಲದಲ್ಲಿ ಎಲ್ಲ ಅಧಿಕಾರವನ್ನು ಮುಕ್ತವಾಗಿ ಅನುಭವಿಸಿತು. ಅನೇಕ ಸರ್ಕಾರಿ ನಿರ್ಣಯಗಳಲ್ಲೂ ಅವರು ಮೂಗು ತೂರಿಸುತ್ತಿದ್ದುದು ಸಾಮಾನ್ಯವಾಗಿತ್ತು. ಇದರ ಹಿಂದೆ ಬಿದ್ದ ಇಮ್ರಾನ್ ಆಡಳಿತವನ್ನು ಕಡೆಗಣಿಸಿದ. ಪರಿಣಾಮ ಕೊವಿಡ್‌ನ ಸಂದರ್ಭದಲ್ಲಿ ಜನ ಹಾಹಾಕರ ಪಡುವಂತಾಯ್ತು. ಪಾಕಿಸ್ತಾನದ ಆರ್ಥಿಕ ಸ್ಥಿತಿಯೂ ಹದಗೆಟ್ಟು ಅದನ್ನು ಹಳಿಗೆ ತರುವಲ್ಲಿ ಇಮ್ರಾನ್ ಸೋತುಹೋದ. ಜನರ ಅರಚಾಟ ಆರಂಭವಾಯ್ತು. ಇಮ್ರಾನನ ಮೇಲಿದ್ದ ಆಕ್ರೋಶವೆಲ್ಲ ಸ್ವಲ್ಪಮಟ್ಟಿಗೆ ಸೇನೆಯತ್ತಲೂ ತಿರುಗಿತು. ಪದವಿಯಲ್ಲಿ ಬೇರೆ-ಬೇರೆಯವರನ್ನು ತಾನೇ ಕೂರಿಸಿ ಹಿಂದಿನಿಂದ ಅಧಿಕಾರ ನಡೆಸುವ ಪಾಕೀ ಸೇನೆ ಎಂದೂ ಜನರ ಬೈಗುಳವನ್ನು ತಿಂದಿರಲಿಲ್ಲ. ಅದಕ್ಕೆ ಎದುರಿಗೆ ಅಧ್ಯಕ್ಷನೋ ಪ್ರಧಾನಿಯೋ ಇರುತ್ತಿದ್ದ. ಇಮ್ರಾನ್ ಥೇಟು ಕೇಜ್ರಿವಾಲನಂತೆ. ಎಷ್ಟು ಬೇಕಾದರೂ ನಾಟಕಗಳನ್ನು ಮಾಡಬಲ್ಲ, ಯಾರ ಮೇಲಾದರೂ ಗೂಬೆ ಕೂರಿಸಬಲ್ಲ, ಒಟ್ಟಿನಲ್ಲಿ ತಾನು ಗೆಲ್ಲಬೇಕಷ್ಟೇ! ಹೀಗಾಗಿಯೇ ಆತನ ಮೇಲಿದ್ದ ಆಕ್ರೋಶವೆಲ್ಲ ಸೇನೆಯ ವಿರುದ್ಧ ತಿರುಗಿತು. ತಡಮಾಡದೇ ಸೇನೆ ಇಮ್ರಾನನೊಂದಿಗಿದ್ದ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟು ಕುಂಡಿ ಝಾಡಿಸಿಕೊಂಡು ಎದ್ದುಬಿಟ್ಟಿತು. ಅಲ್ಲಿಗೆ ಇಮ್ರಾನ್ ಮತ್ತು ಸೇನೆ ಯುದ್ಧಕ್ಕೆ ನಿಂತರು. ಈ ವೇಳೆಗೆ ಜನರಲ್ ಬಾಜ್ವಾ ನಂತರ ಫೈಜ್ ಹಮೀದ್‌ನನ್ನು ಆ ಸ್ಥಾನಕ್ಕೆ ತರಬೇಕೆಂದು ಇಮ್ರಾನ್ ನಿಶ್ಚಯಿಸಿಕೊಂಡಿದ್ದ. ಅದಕ್ಕಾಗಿ ಆತನನ್ನು ಐಎಸ್ಐನ ನಿರ್ದೇಶಕನಾಗಿ ಮುಂದುವರೆಸಬೇಕೆಂದೂ ಆಗ್ರಹಿಸಿದ್ದ. ಆದರೆ ಬಾಜ್ವಾ ಹಮೀದ್‌ನನ್ನು ಪಕ್ಕಕ್ಕೆ ಸರಿಸಿ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಂನನ್ನು ಕೂರಿಸಿದ. ಇದು ಸೇನೆ ಮತ್ತು ಇಮ್ರಾನ್‌ನ ನಡುವಿನ ಕಾದಾಟವನ್ನು ತೀವ್ರಗೊಳಿಸಿತು. ಸಾಲದೆಂಬಂತೆ ರಷ್ಯಾ-ಉಕ್ರೇನ್ ಯುದ್ಧದ ಹೊತ್ತಲ್ಲಿ ಪಶ್ಚಿಮದ ಒತ್ತಡಕ್ಕೆ ಮಣಿದು ರಷ್ಯಾ ವಿರೋಧಿಸುವ ನಿರ್ಣಯ ಕೈಗೊಳ್ಳಲಾರೆನೆಂದು ಇಮ್ರಾನ್ ಹೇಳಿಕೆ ಕೊಟ್ಟರೆ, ಬಾಜ್ವಾ ಉಕ್ರೇನ್‌ನ ಪರವಾದ ಹೇಳಿಕೆಯನ್ನು ಕೊಟ್ಟು ಸರ್ಕಾರದ ವಿರುದ್ಧ ನಿಂತ. ಅಲ್ಲಿಗೆ ಇವರಿಬ್ಬರ ನಡುವಿನ ಕಂದಕ ಜಗಜ್ಜಾಹೀರಾಗುವಷ್ಟು ದೊಡ್ಡದಾಗಿತ್ತು.

ಪಾಕಿಸ್ತಾನದಲ್ಲಿ ಸೇನೆ ಮನಸ್ಸು ಮಾಡಿದರೆ ಏನು ಬೇಕಿದ್ದರೂ ಮಾಡಬಲ್ಲದು. 2022ರಲ್ಲಿ ಇಮ್ರಾನನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯ್ತು. ಈ ಗೊತ್ತುವಳಿ ಕಾನೂನು ಬಾಹಿರವಾಗಿದೆ ಎಂದು ಇಮ್ರಾನ್ ವಾದಿಸುವ ಪ್ರಯತ್ನ ಮಾಡಿದರೂ ಅದು ಅರಣ್ಯ ರೋದನವಾಯ್ತು. ಮೊದಲೇ ಹೇಳಿದಂತೆ ನಾಟಕ ಮಾಡುವುದರಲ್ಲಿ ನಿಸ್ಸೀಮನಾಗಿರುವ ಇಮ್ರಾನ್ ಅವಿಶ್ವಾಸ ಗೊತ್ತುವಳಿಯನ್ನು ಹೈಡ್ರಾಮಾ ಆಗುವಂತೆ ನೋಡಿಕೊಂಡ. ಈತನದ್ದೇ ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್ ಪಕ್ಷದ ಕೆಲವು ಸದಸ್ಯರು ಇವನ ವಿರುದ್ಧ ತಿರುಗಿಬಿದ್ದು ಈತ ಅಧಿಕಾರದಿಂದ ಕೆಳಗಿಳಿಯುವಂತಾಯ್ತು. ಆನಂತರ ಇಮ್ರಾನ್ ತನಗನಿಸಿದ್ದನ್ನು ನೇರವಾಗಿ ಹೇಳುವ ಚಾಳಿ ಬೆಳೆಸಿಕೊಂಡುಬಿಟ್ಟ. ದಿನ ಬೆಳಗಾದರೆ ಆತ ಸೇನೆಯನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದ. ಆತನ ಆರೋಪಗಳ ಕೇಂದ್ರಬಿಂದು ಸೇನಾಮುಖ್ಯಸ್ಥ ಬಾಜ್ವಾನೇ ಆಗಿರುತ್ತಿದ್ದ. ‘ಎಲ್ಲ ಬಗೆಯ ಕೆಟ್ಟ ಕೆಲಸಗಳನ್ನು ಮಾಡಿ ಅವನಿಗೆ ಅನುಭವವಿದೆ’, ‘ಸರ್ಕಾರದ ಹಿಂದೆನಿಂತು ಒತ್ತಡಹಾಕಿ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವವರು ಸೇನೆಯ ಮಂದಿ’ ಎಂದೆಲ್ಲ ಆರೋಪ ಮಾಡಿದ. ಈ ಹೊತ್ತಿಗೆ ಸರಿಯಾಗಿ ಪಾಕಿಸ್ತಾನದ ಪತ್ರಕರ್ತ ಅರ್ಷದ್ ಶರೀಫ್‌ನನ್ನು ಕೀನ್ಯಾದಲ್ಲಿ ಕೊಲೆ ಮಾಡಲಾಯ್ತು. ಆತ ಅವಿಶ್ವಾಸ ಗೊತ್ತುವಳಿಯ ಸಂದರ್ಭದಲ್ಲಿ ಸೇನೆಯ ವಿರುದ್ಧವಾಗಿ, ಇಮ್ರಾನನ ಪರವಾಗಿ ಸಾಕಷ್ಟು ವರದಿಗಳನ್ನು ಮಾಡಿದ್ದ. ಸೇನೆ ಅವನನ್ನು ಗುರಿಯಾಗಿಸಿಬಿಟ್ಟಿತ್ತು. ಬ್ರಿಗೇಡಿಯರ್ ಮೊಹಮ್ಮದ್ ಶಾಫಿಕ್, ಬ್ರಿಗೇಡಿಯರ್ ಫಹೀನ್ ರಜಾ ಮತ್ತು ಐಎಸ್ಐನ ಮೇಜರ್ ಜನರಲ್ ಫೈಜಲ್ ನಜೀರ್ ಇವರು ಆತನಿಗೆ ಬೆದರಿಕೆಯ ಕರೆ ಮಾಡಲಾರಂಭಿಸಿದರು. ಪತ್ರಕರ್ತ ಅರ್ಷದ್ ಶರೀಫ್ ಪಾಕಿಸ್ತಾನ ಬಿಟ್ಟು ಓಡಿದ. ಆತನ ಮಿತ್ರರೆಲ್ಲ ದುಬೈಯಲ್ಲೋ, ಲಂಡನ್ನಿನಲ್ಲೋ ಇದ್ದಾನೆ ಎಂದು ಭಾವಿಸಿಕೊಂಡಿದ್ದರೆ, ಕೀನ್ಯಾದಲ್ಲಿ ಹೆಣವಾಗಿದ್ದ. ನಿಸ್ಸಂಶಯವಾಗಿ ಇದು ಐಎಸ್ಐನ ಕೈವಾಡವೇ ಆಗಿತ್ತಲ್ಲದೇ ಫೈಜಲ್ ನಜೀರ್‌ನೇ ಇದರ ಹಿಂದಿದ್ದ ಎಂದು ಎಲ್ಲರೂ ನಂಬಿದರು. ಸ್ವತಃ ಶರೀಫ್ನ ತಾಯಿ ರಿಫಾತ್ ಅಲ್ವಿ ಪಾಕಿಸ್ತಾನದ ನ್ಯಾಯಾಧೀಶರಿಗೆ ಪತ್ರಬರೆದು ಅದರಲ್ಲಿ ಈ ವಿಚಾರವನ್ನು ಉಲ್ಲೇಖಿಸಿದರು. ಇಮ್ರಾನ್ ಇದನ್ನು ಬಲವಾಗಿ ಹಿಡಿದುಕೊಂಡ. ಆತ ಪದೇ-ಪದೇ ಡರ್ಟಿ ಹ್ಯಾರಿ ಎಂದು ಕರೆಯಲ್ಪಡುವ ಫೈಜಲ್ ನಜೀರ್‌ನ ವಿರುದ್ಧ ಮನಸೋ ಇಚ್ಛೆ ಮಾತನಾಡಲಾರಂಭಿಸಿದ. ಇದು ಐಎಸ್ಐಗೆ ಸರಿ ಕಾಣಲಿಲ್ಲ.


ಮತ್ತೊಂದೆಡೆ ತಾನು ಅಧಿಕಾರ ಕಳೆದುಕೊಂಡೊಡನೆ ಲಾಂಗ್‌ಮಾರ್ಚ್ ಆರಂಭಿಸಿದ ಇಮ್ರಾನ್ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರನ್ನು ಸೆಳೆಯತೊಡಗಿದ. ತನ್ನ ನಾಟಕೀಯ ಭಾಷಣಗಳಿಂದ ಅವರನ್ನು ಆಕರ್ಷಿಸುತ್ತಾ ಸೇನೆಯ ವಿರುದ್ಧ ಎತ್ತಿಕಟ್ಟುವಲ್ಲಿ ಸಫಲನಾಗುತ್ತಿದ್ದ. ಇದರ ಪರಿಣಾಮವೇ ಪಂಜಾಬಿನಲ್ಲಿ ಉಪ ಚುನಾವಣೆಗಳು ನಡೆದಾಗ ಇಮ್ರಾನ್ ಖಾನನ ಪಕ್ಷ ಜಯಭೇರಿ ಬಾರಿಸಿತು. ಸಹಜವಾಗಿಯೇ ಇದು ಆತಂಕದ ವಿಚಾರವಾಗಿತ್ತು. ಸೇನೆ, ಇಮ್ರಾನ್ ತಮ್ಮಿಂದ ಅಧಿಕಾರವನ್ನು ಕಸಿಯುತ್ತಾನೆ ಎಂಬುದು ಖಾತ್ರಿಯಾಗುತ್ತಿದ್ದಂತೆ ಆತನ ಭ್ರಷ್ಟಾಚಾರದ ಪ್ರಕರಣಗಳನ್ನು ಮುಂದಿಟ್ಟು ನ್ಯಾಯಾಲಯದ ಮೂಲಕ ಆತ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಯಮಗಳನ್ನು ಹೇರಿಬಿಟ್ಟಿತು. ಆತನ ಲಾಂಗ್ ಮಾರ್ಚ್ ಮತ್ತೆ ಮುಂದುವರಿಯಿತು. ಜನ ಮೊದಲಿಗಿಂತ ಹೆಚ್ಚಾದರೇ ಹೊರತು ಕಡಿಮೆಯಾಗಲಿಲ್ಲ. ಆತ ರ್ಯಾಲಿಯಲ್ಲಿ ಭಾಗವಹಿಸಿರುವಾಗಲೇ ಆತನ ಮೇಲೆ ಗುಂಡು ಹಾರಿಸಲಾಯ್ತು. ಕಾಲಿಗೆ ಮೂರು ಗುಂಡು ಹೊಕ್ಕಿದವೆಂದು ಇಮ್ರಾನನ ಬೆಂಬಲಿಗರು ಹೇಳಿದರು. ಆದರೆ ನೋಡುಗರಿಗೆ ಚುನಾವಣೆಯ ಹೊತ್ತಲ್ಲಿ ಪಶ್ಚಿಮ ಬಂಗಾಳದಲ್ಲಿ ದೀದಿ ಕಾಲಿಗೆ ಬ್ಯಾಂಡೇಜು ಕಟ್ಟಿಕೊಂಡಂತೆ ಕಾಣುತ್ತಿತ್ತು. ತನ್ನ ಭಿನ್ನ-ಭಿನ್ನ ಸ್ವರೂಪದ ನಾಟಕಗಳಿಂದ ಆತ ಜನರನ್ನು ಸೆಳೆಯುತ್ತಲೇ ಹೋದ. ಇನ್ನು ಈತನನ್ನು ತಡೆಯಲಾಗದು ಎಂದೇ ಆತನನ್ನು ಏಕಾಕಿ ಬಂಧಿಸುವ ನಿರ್ದೇಶನವನ್ನು ಸೇನೆ ಅಲ್ಲಿನ ಅರೆ ಸೈನಿಕಪಡೆಗೆ ಆದೇಶಿಸಿತು. ಇಮ್ರಾನನ ವಿರುದ್ಧ ಭ್ರಷ್ಟಾಚಾರದ ಪ್ರಕರಣವೊಂದಿದೆ. ಆತ ವಿದೇಶಗಳಿಗೆ ಹೋದಾಗಲೆಲ್ಲ ಅಲ್ಲಿ ಸಿಗುತ್ತಿದ್ದ ಉಡುಗೊರೆಗಳನ್ನು ಸರ್ಕಾರದ ತೋಷ್ಖಾನಗಳಿಗೆ ಕೊಟ್ಟು ಅಲ್ಲಿಂದ ಕಡಿಮೆ ಬೆಲೆಗೆ ಖರೀದಿಸಿ ತಾನು ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರುತ್ತಿದ್ದ. ಪಾಕಿಸ್ತಾನದ ಪ್ರಧಾನಿ ಎಂದು ಸಾಬೀತುಪಡಿಸಬೇಕಲ್ಲ, ಮತ್ತೇನಿದೆ ಮಾರ್ಗ? ರಾಷ್ಟ್ರಪತಿ ಪ್ರತಿಭಾ ಪಾಟಿಲ್ ತಾನು ಮರಳಿ ಮನೆಗೆ ಹೋಗುವಾಗ ತನಗೆ ಬಂದಿದ್ದ ಉಡುಗೊರೆಗಳನ್ನೆಲ್ಲ ಗಂಟುಮೂಟೆ ಕಟ್ಟಿಕೊಂಡು ಒಯ್ದಿದ್ದಳಲ್ಲ, ಇದು ಅಂಥದ್ದೇ ಮತ್ತೊಂದು ಕಥೆ ಅಷ್ಟೇ.


ವಿಚಾರಣೆಗೆಂದು ಸಾಗುತ್ತಿರುವ ಇಮ್ರಾನ್ ಖಾನನ ಬಂಧನದೊಂದಿಗೆ ಪಾಕಿಸ್ತಾನದಲ್ಲಿ ಅಕ್ಷರಶಃ ಬೆಂಕಿ ಹೊತ್ತಿಕೊಂಡಿತು. ಜನ ಬೀದಿಗೆ ಬಂದರು. ಸೇನಾ ಮುಖ್ಯನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದರು. ಅಲ್ಲಿನ ರೇಡಿಯೊ ಕೇಂದ್ರ ಹೊತ್ತಿ ಉರಿಯಿತು. ಅನೇಕ ಸೇನಾ ನಾಯಕರ ಮನೆಗಳು ಲೂಟಿಯಾದವು. ಅದಕ್ಕೆ ಬೆಂಕಿ ಹಚ್ಚಿ ಜನ ಆನಂದಿಸಿದರು. ಲೂಟಿಗೈಯ್ಯುತ್ತಿರುವ ಜನರನ್ನು ಪ್ರಶ್ನಿಸಿದಾಗ,‌ ಇದು ನಮ್ಮದ್ದೇ ದುಡ್ಡು. ಅದಕ್ಕೇ ಒಯ್ಯುತ್ತಿದ್ದೇವೆ ಎಂದು ಹೇಳುವುದನ್ನು ಕಂಡಾಗ, ಅವರಲ್ಲಿದ್ದ ಆಕ್ರೋಶ ಎದ್ದು ಕಾಣುತ್ತಿತ್ತು. ಅಚ್ಚರಿ ಎಂದರೆ ಜನರ ಈ ಆಕ್ರೋಶವನ್ನು ತಡೆಯುವಲ್ಲಿ ಸೇನೆ ತೋರಿದ ದಿವ್ಯ ನಿರ್ಲಕ್ಷ್ಯ. ಕೆಲವು ಕಡೆಯಲ್ಲಂತೂ ನುಗ್ಗಿ ಬರುತ್ತಿರುವ ಜನರ ಮೇಲೆ ಗುಂಡು ಹಾರಿಸಲೆಂದು ಕೊಟ್ಟ ಆದೇಶವನ್ನೂ ಧಿಕ್ಕರಿಸಲಾಗಿತ್ತು. ಇದು ಸೇನೆಯೊಳಗಿನ ಕುರ್ಚಿಯ ಕಾರಣಕ್ಕಾಗಿ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಅಂದರೆ ಇಮ್ರಾನ್ ಹಚ್ಚಿದ ಬೆಂಕಿ ಸೇನೆಯನ್ನೂ ಸುಡುತ್ತಿದೆ. ಭಾರತವನ್ನು ನಾಶ ಮಾಡುತ್ತೇವೆಂದು ಬದುಕು ಆರಂಭಿಸಿದ ಪಾಕಿಸ್ತಾನ ಇಂದು ತನ್ನ ಅಂಗಡಿಯನ್ನು ಗಂಟು-ಮೂಟೆ ಕಟ್ಟಿಕೊಂಡು ಭಾರತದೆದುರು ಗೋಗರೆಯಬೇಕಾದ ಪರಿಸ್ಥಿತಿಗೆ ಬಂದಿದೆ. ಇವ್ಯಾವನ್ನೂ ಅರಿಯದ ಇಲ್ಲಿನ ಮುಸಲ್ಮಾನರು ಮಸೀದಿಯಲ್ಲಿ ಮೌಲ್ವಿಯ ಮಾತು ಕೇಳಿ, ಬೀದಿಗೆ ಬಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುತ್ತಾರಲ್ಲ, ಅಯ್ಯೋ ಪಾಪ ಎನಿಸುತ್ತದೆ!

ಒಂದಂತೂ ಸತ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಟ್ಟು, ಮೀಸಲಾತಿಯನ್ನೂ ವಿಸ್ತರಿಸಿ ಜಾತಿ-ಜಾತಿಗಳ ನಡುವಿನ ಕದನವನ್ನು ತೀವ್ರಗೊಳಿಸಿತೆಂದರೆ ಸುಭಿಕ್ಷವಾಗಿದ್ದ ಕರ್ನಾಟಕವೂ ಪಾಕಿಸ್ತಾನದಂತಾಗಲು ಐದು ವರ್ಷ ಸಾಕು! ಆಗ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವ ಅಗತ್ಯವಿಲ್ಲ. ಮುಸಲ್ಮಾನರು ಕರ್ನಾಟಕವೂ ಪಾಕಿಸ್ತಾನವೇ ಎಂದು ಹೆಮ್ಮೆ ಪಡಬಹುದು!

ಸೋಲಿನ ಭೀತಿಯಿಂದ ಪತರಗುಟ್ಟಿದೆ ಕಾಂಗ್ರೆಸ್ಸು!

ಸೋಲಿನ ಭೀತಿಯಿಂದ ಪತರಗುಟ್ಟಿದೆ ಕಾಂಗ್ರೆಸ್ಸು!

ಮೋದಿಯ ಹವಾ ಶುರುವಾಗುತ್ತಿದೆ ಎಂದು ಎಲ್ಲರೂ ಭಾವಿಸಿಕೊಂಡಿದ್ದರು. ಆದರೆ ತಮ್ಮ ವಿಸ್ತಾರವಾದ ರ್ಯಾಲಿಯ ಮೂಲಕ ಅವರು ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದ್ದಾರೆ! ಅಣ್ಣಾಮಲೈಯವರು ಹೇಳಿದ್ದು ನಿಜ, ಮೋದಿ ಆಗಮನಕ್ಕಿಂತಲೂ ಮುಂಚೆ ಕಾಂಗ್ರೆಸ್ಸಿನ ಗೆಲುವು ಹೆಚ್ಚು-ಕಡಿಮೆ ನಿಶ್ಚಿತವಾಗಿತ್ತು. ಅವರು ತಮ್ಮದ್ದೇ ಆದ ಭಿನ್ನ-ಭಿನ್ನ ವಿಧಾನಗಳ ಮೂಲಕ ಜನರನ್ನು ಒಪ್ಪಿಸಿಬಿಟ್ಟಿದ್ದರು. ಮೋದಿಯ ಪ್ರಚಾರದ ಅಬ್ಬರ ಶುರುವಾಯ್ತು ನೋಡಿ, ದಿನೇ ದಿನೇ ಕಾಂಗ್ರೆಸ್ಸಿನ ಸಂಖ್ಯೆ ಕುಸಿಯುತ್ತಾ ಬಂದು, ಪ್ರಚಾರದ ಆರಂಭಕ್ಕೂ ಮುನ್ನ ಕಾಂಗ್ರೆಸ್ಸು ಯಾವ ಸ್ಥಿತಿಯಲ್ಲಿತ್ತೋ ಬಿಜೆಪಿ ಆ ಸ್ಥಿತಿಗೆ ತಲುಪಿತು ಮತ್ತು ನರೇಂದ್ರಮೋದಿ ಆಗಮನಕ್ಕೂ ಮುನ್ನ ಬಿಜೆಪಿಗೆ ಯಾವ ದೈನೇಸಿ ಸ್ಥಿತಿಯಿತ್ತೋ ಆ ಹಂತಕ್ಕೆ ಕಾಂಗ್ರೆಸ್ಸು ಇಳಿಯಿತು. ಬೆಂಗಳೂರಿನ ರ್ಯಾಲಿಯಂತೂ ಬಹುಶಃ ಈ ದೇಶದ ರಾಜಕಾರಣದ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾದ್ದು ಮತ್ತು ಜಗತ್ತಿನ ರಾಜಕಾರಣವೇ ನೆನಪಿಟ್ಟುಕೊಳ್ಳುವಂಥದ್ದು. ನಾಡಿನಲ್ಲೆಲ್ಲ ಚರ್ಚೆ ರ್ಯಾಲಿಯದ್ದಷ್ಟೇ ಅಲ್ಲ, ಮೋದಿಗಿರುವ ಅಂತಃಶಕ್ತಿಯದ್ದೂ ಕೂಡ. ದಿನಕ್ಕೆ ಮೂರು ಕಾರ್ಯಕ್ರಮ, ರ್ಯಾಲಿಗಳು, ನಡು-ನಡುವೆ ಅತ್ಯಂತ ಪ್ರಮುಖವಾದ ಮೀಟಿಂಗುಗಳು, ರಾತ್ರಿ ಕಳೆದು ಬೆಳಿಗ್ಗೆ ಏಳುವಾಗ ಮತ್ತದೇ ಉತ್ಸಾಹ-ಉಲ್ಲಾಸ. ಈ ಮನುಷ್ಯ ದೇವಮಾನವನೇ ಸರಿ! ಕಾಂಗ್ರೆಸ್ಸು ಅನಿವಾರ್ಯವಾಗಿ ಸುಳ್ಳುಗಳನ್ನು ಹರಡಿಸುವ ಪರಿಸ್ಥಿತಿಗೆ ತಲುಪಿದೆ. ಬಿ.ಎಲ್ ಸಂತೋಷ್ ಅವರು ಲಿಂಗಾಯಿತರ ವಿರುದ್ಧ ಆಡಿದ್ದಾರೆ ಎನ್ನಲಾಗುವ ಮಾತಿನಿಂದ ಹಿಡಿದು ಮೋದಿಯ ಪರವಾಗಿ ಬ್ಯಾಟಿಂಗ್ ಮಾಡುವ ಭರದಲ್ಲಿ ನಾನು ಸಾಮಾನ್ಯ ನಾಗರೀಕರನ್ನು ಬೈದಿದ್ದೇನೆ ಎನ್ನುವವರೆಗೆ ಅವರು ಅತ್ಯಂತ ನೀಚಮಟ್ಟದ ಪ್ರಚಾರಕ್ಕೆ ಇಳಿದಿದ್ದಾರೆ. ಈ ಹತಾಶ ಮನೋಭಾವವೇ ಅವರ ಸೋಲಿಗೆ ಸಾಕ್ಷಿ ನೀಡುತ್ತಿದೆ. ಪ್ರತೀ ಹಂತದಲ್ಲೂ ಮೋದಿಗೆ ಮತ ಹಾಕುವುದೇ ಸರಿಯಾದ್ದು ಎಂದು ಜನರಲ್ಲಿ ವಿಶ್ವಾಸ ಮೂಡಿಸುತ್ತಿದೆ. 

ಆರಂಭದಿಂದಲೂ ಪ್ರಚಾರದ ವಿಚಾರದಲ್ಲಿ ಮೇಲುಗೈ ಇದ್ದದ್ದು ಕಾಂಗ್ರೆಸ್ಸಿನದ್ದೇ. ಭ್ರಷ್ಟಸರ್ಕಾರ ಎನ್ನುವ ವಿಚಾರವನ್ನು ಸಮಾಜದ ಮುಂದೆ ಯಾವ ಪುರಾವೆಯೂ ಇಲ್ಲದೇ ಒಪ್ಪಿಸಿಬಿಟ್ಟಿದ್ದರು. ಸರ್ಜಿಕಲ್ ಸ್ಟ್ರೈಕ್‌ಗೂ ಪ್ರೂಫ್ ಕೇಳುವ ಈ ಅಯೋಗ್ಯ ಕಾಂಗ್ರೆಸ್ಸಿಗರು ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವಾಗ ಪುರಾವೆ ಕೊಡಬೇಕೆಂಬ ಸಾಮಾನ್ಯಜ್ಞಾನವೂ ಇಟ್ಟುಕೊಳ್ಳದಿದ್ದುದು ಅಚ್ಚರಿಯೇ ಸರಿ. ಹೀಗಾಗಿ ಅವರ ಪ್ರಚಾರದ ಭರಾಟೆ ಜೋರಾಗಿದ್ದರೂ ಜನಕ್ಕೆ ಅದು ರುಚಿಸಲಿಲ್ಲ. ಆರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಹತಪ್ರಭರೆನಿಸಿದರೂ ಬರು-ಬರುತ್ತಾ ಅದನ್ನು ಮೀರಿ ಬೆಳೆಯಲು ಸಾಧ್ಯವಾಯ್ತು. ಇಷ್ಟಕ್ಕೂ ಭ್ರಷ್ಟಾಚಾರದ ಆರೋಪ ಮಾಡಿದ ಕಾಂಗ್ರೆಸ್ಸಿಗರು ಶುದ್ಧರಾಗಿದ್ದರೇನು? ಯುಪಿಎ-2 ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರಗಳು ಇನ್ನೂ ಕನಿಷ್ಠ ಎರಡು ಅವಧಿಯವರೆಗೂ ಮೋದಿಯವರಿಗೆ ಗೆಲುವು ತಂದುಕೊಡಬಲ್ಲಷ್ಟಿದೆ. ಹೀಗಿರುವಾಗ ಮೋದಿಯನ್ನು, ಅವರ ಸರ್ಕಾರವನ್ನು ಭ್ರಷ್ಟರೆನ್ನುವುದಕ್ಕೆ ಕಾಂಗ್ರೆಸ್ಸಿಗೆ ನೈತಿಕವಾದ ಯಾವ ಅರ್ಹತೆಯೂ ಇಲ್ಲ. ಅದೇ ಅವರಿಗಾದ ಬಲುದೊಡ್ಡ ಹಿನ್ನಡೆ. ಇಂದು ನೆಲಮಟ್ಟದಲ್ಲಿ ಬಿಜೆಪಿಯ ಭ್ರಷ್ಟಾಚಾರ ಚರ್ಚೆಯ ವಸ್ತುವೇ ಅಲ್ಲ, ಏಕೆಂದರೆ ಇಂಧನಖಾತೆ ಸಚಿವರಾಗಿ ಡಿ.ಕೆ ಶಿವಕುಮಾರ್ ನಡೆಸಿದ್ದ ಕಾರುಬಾರೇನೆಂಬುದು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ. ಈ ಕಾರಣದಿಂದಲೇ ಹಂತ-ಹಂತಕ್ಕೂ ಭಿನ್ನ ಭಿನ್ನ ಪ್ರಚಾರ ತಂತ್ರವನ್ನು ಬಳಸಿದ ಕಾಂಗ್ರೆಸ್ಸು ಕಾರ್ಯಕರ್ತರ ಸ್ಫೂರ್ತಿಗಾಗಿ ಭಾರತ್ ಜೊಡೊ ಯಾತ್ರೆಯಲ್ಲಿ ತನ್ನ ಸಂಪೂರ್ಣ ಶ್ರಮವನ್ನು ವ್ಯಯಿಸಿತು, ಹಣವನ್ನೂ ಕೂಡ. ಆಯಾ ಕ್ಷೇತ್ರಗಳಲ್ಲಿ ರಾಹುಲ್ ಬಾಬಾನನ್ನು ಸ್ವಾಗತಿಸುವ ಜವಾಬ್ದಾರಿಯನ್ನು ಟಿಕೆಟ್ ಆಕಾಂಕ್ಷಿಗಳಿಗೆ ನೀಡಲಾಯ್ತು. ಸಹಜವಾಗಿಯೇ ಟಿಕೆಟ್ ತಪ್ಪಿದ ನಂತರ ಕೈಸುಟ್ಟುಕೊಂಡಿದ್ದ ಇವರೆಲ್ಲ ತಿರುಗಿನಿಂತರು. ಇಷ್ಟಾದರೂ ಕಾಂಗ್ರೆಸ್ಸು ಜನರ ಮುಂದೆ ಒಗ್ಗಟ್ಟಿನ ಮಂತ್ರವನ್ನು ಪಠಿಸುವಲ್ಲಿ ಯಶಸ್ವಿಯಾಯ್ತು. ಒಳಗಿನ ಬೆಂಕಿ ಮಾತ್ರ ಆರಿರಲಿಲ್ಲ. ಇತ್ತೀಚೆಗೆ ಪತ್ರಕರ್ತೆಯೊಬ್ಬರು ಈ ಕಾದಾಟದ ಕುರಿತಂತಹ ಪ್ರತ್ಯಕ್ಷ ಅನುಭವವನ್ನು ಹೇಳಿಕೊಂಡಿದ್ದಾರೆ. ವೇದಿಕೆಯ ಮೇಲೆ ರಾಹುಲ್ ಸಿದ್ದರಾಮಯ್ಯ, ಡಿಕೆಶಿ ಕೈ-ಕೈ ಹಿಡಿದು ನಿಲ್ಲುವಂತೆ ಮಾಡಿದ ನಂತರ ಸಿದ್ದರಾಮಯ್ಯ ಜನಮೆಚ್ಚುವ ಭಾಷಣ ಮಾಡಿದರಂತೆ. ಒಳಗೊಳಗೇ ಕುದಿಯುತ್ತಿದ್ದ ಡಿಕೆಶಿ ಆ ಪತ್ರಕರ್ತೆ ಮಾತನಾಡಿಸತೊಡಗಿದಾಗ, ‘ಹೋದೆಡೆಯೆಲ್ಲಾ ಇದನ್ನೇ ಮಾತನಾಡುತ್ತಾನೆ, ಹೊಸತೇನಿದೆ?’ ಎಂದು ಮೂದಲಿಸಿದರಂತೆ. ಆಕೆ ‘ಜನರ ಮುಂದೆ ಕೈ-ಕೈ ಹಿಡಿದವರು ಹಿಂದೆ ಉರಕೊಂಡು ಹೇಗೆ ಕೈ-ಕೈ ಮಿಲಾಯಿಸುತ್ತಾರೆ ನೋಡಿ’ ಎಂದು ಕುಹಕವಾಡಿರುವುದು ಟ್ವಿಟರ್‌ನಲ್ಲಿ ಭಾರೀ ದೊಡ್ಡ ಸದ್ದು ಮಾಡಿತು. ಇಷ್ಟಾದರೂ ಬಿಜೆಪಿಯವರಿಗಿಂತ ಹೆಚ್ಚು ಬಲವಾದ ಏಕತೆಯನ್ನು ಪ್ರದರ್ಶಿಸಿದ್ದು ಕಾಂಗ್ರೆಸ್ಸೇ! ಆದರೆ ಅವರು ಎಡವಿದ್ದು ಎಲ್ಲಿ ಗೊತ್ತೇ? ಆರಂಭದ ಮೋದಿಯ ಹವಾ ಬಿರುಗಾಳಿಯಾಗಿ ಪರಿವರ್ತಿತಗೊಳ್ಳುತ್ತಿದೆ ಎಂದರಿವಾದಾಗ. 

ಇಡಿಯ ಮಾಧ್ಯಮವನ್ನು ಮೋದಿಯಿಂದ ಬೇರೆಡೆಗೆ ಸೆಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್ಸು ಬಜರಂಗದಳವನ್ನು ಬಳಸಿಕೊಂಡಿತು. ಅದಾಗಲೇ ಬಜರಂಗದಳದ ಕಾರ್ಯಕರ್ತರು ಅನೇಕ ಕಡೆಗಳಲ್ಲಿ ಬಿಜೆಪಿಯ ವಿರುದ್ಧ ಕೂಗಾಡಿದ್ದರಲ್ಲದೇ ಬಂಡಾಯದ ಬಾವುಟ ಬೀಸಿದ್ದರು. ಹಳೆಯ ಕಾರ್ಯಕರ್ತರು ತಟಸ್ಥವಾಗಿ ಚುನಾವಣೆಯೇ ಬೇಡವೆಂದು ಬದಿಗೆ ಸರಿದುಬಿಟ್ಟಿದ್ದರು. ಹೀಗಾಗಿ ಈ ಹೊತ್ತಿನಲ್ಲಿ ಬಜರಂಗದಳದ ಕುರಿತು ಮಾತನಾಡಿದರೆ ಆ ಕಾರ್ಯಕರ್ತರೇನು ಮುಂದೆ ಬರುವುದಿಲ್ಲ, ಬದಲಿಗೆ ಮಾಧ್ಯಮದ ಚರ್ಚೆಯೆಲ್ಲಾ ಹಿಂದುತ್ವದ ಕುಕೃತ್ಯದ ಕಡೆಗೆ ತಿರುಗುತ್ತದೆ. ಮೋದಿ ಅದಕ್ಕೆ ಉತ್ತರಿಸುವಲ್ಲಿ ಹೈರಾಣಾಗುತ್ತಾರೆ ಎಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರವಾಗಿತ್ತು. ಒಂದು ವೇಳೆ ಬಜರಂಗಿಗಳು ಪ್ರತಿಭಟನೆಗೆಂದು ಬಂದರೂ ಕಾಂಗ್ರೆಸ್ ನಾಯಕರ ಘೇರಾವ್ ಮಾಡುವುದು, ಗಾಡಿಗಳ ಮೇಲೆ ಕಲ್ಲೆಸೆಯುವುದು ಮಾಡಿ ಕಾಂಗ್ರೆಸ್ಸಿಗರನ್ನು ಮಾಧ್ಯಮಗಳ ಮುಂದೆ ಅಳುವುದಕ್ಕೆ ಪ್ರೇರೇಪಿಸುತ್ತದೆ. ಮೋದಿಯವರ ಬಿರುಗಾಳಿಗೆ ಇದು ಪ್ರತಿದಾಳವೆಂಬುದು ಅವರ ಲೆಕ್ಕಾಚಾರವಾಗಿತ್ತು. ಸದಾ ಉಗ್ರವಾಗಿರುವ ಚಿಂತನೆ ಹೊಂದಿರುವ ಬಜರಂಗದಳದ ಕಾರ್ಯಕರ್ತರು ಈ ಬಾರಿ ಶಾಂತ ಪ್ರತಿಭಟನೆಗೆ ಮುಂದಾದದ್ದು ಕಾಂಗ್ರೆಸ್ಸಿನ ಪಾಲಿಗೆ ಔಟ್ ಆಫ್ ಸಿಲಬಸ್ಸು. ಮಂದಿರ ಮಂದಿರಗಳಲ್ಲಿ ಹನಮಾನ್ ಚಾಲಿಸಾ ಪಠಣ ಬಜರಂಗಿಯನ್ನು, ಬಜರಂಗದಳವನ್ನು ಸಮೀಕರಿಸಿಬಿಟ್ಟಿತು. ಪಿಎಫ್ಐನೊಂದಿಗೆ ಬಜರಂಗದಳವನ್ನು ಸಮೀಕರಿಸಿದ ಕಾಂಗ್ರೆಸ್ಸು ನಾಳೆ ಮಂದಿರಕ್ಕೆ ಹೋಗುವ ಸಾಮಾನ್ಯ ಕಾರ್ಯಕರ್ತರನ್ನು ಭಯೋತ್ಪಾದಕರೆನ್ನಲು ಹಿಂಜರಿಯುವುದಿಲ್ಲ ಎಂದೆನಿಸಿಬಿಟ್ಟಿತ್ತು ಜನರಿಗೆ. ಹೀಗಾಗಿ ಮನೆ-ಮನೆಯಲ್ಲೂ ಜನ ಆಕ್ರೋಶದಿಂದ ಕುದಿಯಲಾರಂಭಿಸಿದರು. ತನ್ನ ದಾಳ ತನಗೇ ತಿರುಮಂತ್ರವಾಗಿದ್ದು ಕಂಡು ಬೆಚ್ಚಿದ ಡಿಕೆಶಿ ಆಂಜನೇಯನ ಪಾದಗಳಿಗೆ ಹಣೆಹಚ್ಚಿ ‘ನಾನೂ ಹನುಮ ಭಕ್ತನೇ’ ಎಂದಿದ್ದು ಅವರ ಮೊದಲ ಸೋಲು. ಕಾಂಗ್ರೆಸ್ಸು ಎಂದಾದರು ಹಿಂದೂಗಳ ಪರವಾಗಿ ನಿಂತಿದ್ದು ನೆನಪಿದೆಯೇನು? ರಾಮ ಹುಟ್ಟಿದ್ದೇ ಸುಳ್ಳು ಎಂದು ಅವನ ಅಸ್ತಿತ್ವ ಪ್ರಶ್ನಿಸಿದವರು ಇವರು, ನ್ಯಾಯಾಲಯಕ್ಕೆ ಹಾಗೊಂದು ಅಫಿಡವಿಟ್ ಸಲ್ಲಿಸಿದರೂ ಕೂಡ. ರಾಮಸೇತು ಉಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂಬುದು ಅವರ ಭಾವನೆಯಾಗಿತ್ತು. ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನ ಡಿಗ್ರಿ ಪಡೆದಿದ್ದಾನೆ ಎಂದು ಕುಹಕವಾಡಿದ್ದರು ಇವರೆಲ್ಲ. ರಾಮಮಂದಿರದ ನಿರ್ಮಾಣಕ್ಕೆಂದು ಮುಂದಡಿಯಿಟ್ಟಿದ್ದ ಕರಸೇವಕರ ಮೇಲೆ ಗೋಲಿಬಾರ್ ಮಾಡಿಸಿದವರು ಇವರು. ಗೋದ್ರಾದಲ್ಲಿ ಕರಸೇವೆ ಮುಗಿಸಿ ಮರಳಿ ಬರುತ್ತಿದ್ದ ರಾಮಭಕ್ತರನ್ನು ಮುಸಲ್ಮಾನರು ರೈಲಿನಲ್ಲಿ ಜೀವಂತ ದಹಿಸಿದಾಗ ಅವರ ಬೆಂಬಲಕ್ಕೆ ನಿಂತಿದ್ದು ಇದೇ ಮಂದಿ. ರಾಮನ ಕುರಿತಂತೆ ಅವಹೇಳನಕಾರಿ ಮಾತುಗಳನ್ನು ಟಿವಿ ಡಿಬೆಟ್‌ಗಳಲ್ಲಿ ಆಡುತ್ತಾ ಹಿಂದೂಗಳನ್ನು ಮತ್ತೆ-ಮತ್ತೆ ನೋಯಿಸಿದರು. ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುವುದಕ್ಕೆ ಅಡ್ಡಗಾಲು ಹಾಕಿ, ಅದನ್ನು ವಿವಾದಿತ ಪ್ರದೇಶವಾಗಿ ಉಳಿಸಿದ್ದಲ್ಲದೇ 67 ಎಕರೆ ಜಮೀನಿಗೆ ಮತ್ತೊಬ್ಬ ಫಲಾನುಭವಿಯನ್ನು ಸೃಷ್ಟಿಸುವ ಪ್ರಯತ್ನ ಮಾಡಿದ್ದೂ ಅವರೇ. ಹಿಂದೂಗಳಲ್ಲಿ ಒಡಕು ತಂದು ಮುಸಲ್ಮಾನರಿಗೆ ಲಾಭ ಮಾಡಿಕೊಡುವ ಅವರ ಪ್ರಯತ್ನ ಒಂದೆರಡೇನು? ರಾಮಮಂದಿರಕ್ಕೇ ಇಷ್ಟೆಲ್ಲ ವಿರೋಧ ಮಾಡಿದ್ದ ಈ ಮಂದಿ ಆಂಜನೇಯನ ಪಾದಗಳಿಗೆ ಹಣೆ ಹಚ್ಚಿದ್ದಾರೆಂದರೆ ಅದು ನರೇಂದ್ರಮೋದಿಯವರ ಬಜರಂಗಬಲಿ ಘೋಷಣೆಗಲ್ಲದೇ ಮತ್ಯಾವುದಕ್ಕೆ ಹೇಳಿ? ನಾವೆಲ್ಲ ಹನುಮ ನಾಡಿನವರು ನಿಜ. ಆದರೆ ಕಾಂಗ್ರೆಸ್ಸಿಗರ ಬಾಯಲ್ಲೂ ಹನುಮನ ನಾಮ ಬರುವಂತೆ ಮಾಡಿದ ಮೋದಿ ನಿಜಕ್ಕೂ ಶ್ರೇಷ್ಠ ಹನುಮ ಸೇವಕ. ಹೀಗಾಗಿಯೇ ಜನ ಊರೂರಲ್ಲೂ ಅವರನ್ನು ಅಪ್ಪಿಕೊಳ್ಳಲು ಸಿದ್ಧವಾಗಿಬಿಟ್ಟಿದ್ದಾರೆ. 

ತಾವು ಎಸೆದ ದಾಳ ಉಲ್ಟಾ ಹೊಡೆಯುತ್ತಿದೆ ಎಂದು ಗೊತ್ತಾದೊಡನೆ ಆಂಜನೇಯನಿಗೆ ಮಂದಿರ ಕಟ್ಟಿಕೊಡುವ, ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಹಿಂದೂಗಳ ಓಲೈಕೆಯ ಮಂತ್ರವನ್ನು ಕಾಂಗ್ರೆಸ್ಸು ಪಠಿಸುತ್ತಿದ್ದಂತೆ ಮುಸಲ್ಮಾನರಿಗೆ ಅಸಮಾಧಾನವೂ ಅನುಮಾನವೂ ಶುರುವಾಯ್ತು. ಅವರೀಗ ಪೂರಾ ಗೊಂದಲದಲ್ಲಿದ್ದಾರೆ. ಅದಾಗಲೇ ಸತ್ತಿದ್ದ ಪಿಎಫ್ಐ ಅನ್ನು ಬ್ಯಾನ್ ಮಾಡುತ್ತೇನೆ ಎನ್ನುವುದು ಎಷ್ಟು ಮೂರ್ಖ ಸಂಗತಿಯಾಗಿತ್ತೋ, ಬಜರಂಗದಳ ಬ್ಯಾನ್ ಮಾಡುವುದು ಸ್ಥಳೀಯ ಸರ್ಕಾರಕ್ಕೆ ಅಸಾಧ್ಯವಾದ ಸಂಗತಿ ಎನ್ನುವುದು ಮುಸಲ್ಮಾನರಿಗೆ ತಿಳಿಯದುದೇನಾಗಿರಲಿಲ್ಲ. ಹೀಗಾಗಿ ಅವರೊಳಗೆ ಆಕ್ರೋಶದ ಬೀಜವಂತೂ ಬಿತ್ತಿದೆ. ಇತ್ತ ಹಿಂದೂ ಕಾರ್ಯಕರ್ತರು ಹಠಹಿಡಿದು ಅಖಾಡಕ್ಕೆ ಧುಮುಕಿದರೆ ಅತ್ತ ಮುಸಲ್ಮಾನರು ಕಾಂಗ್ರೆಸ್ಸಿನ ಪಲಾಯನವಾದಿ ರಾಜಕಾರಣ ಕಂಡು ಇವರಿಂದ ಒಂದು ಹೆಜ್ಜೆ ಹಿಂದೆ ಸರಿದಿರುವುದಂತೂ ಸ್ಪಷ್ಟ. ಈಗ ಕಾಂಗ್ರೆಸ್ಸಿಗೆ ಉಳಿದಿರುವುದು ಒಂದೇ ಮಾರ್ಗ. ಹಿಂದೂಗಳನ್ನು ಜಾತಿ-ಜಾತಿಗಳಲ್ಲಿ ಒಡೆದು ಬಿಸಾಡುವುದು ಮಾತ್ರ. ಹೀಗಾಗಿಯೇ ಬ್ರಾಹ್ಮಣ ಮತ್ತು ಲಿಂಗಾಯಿತರನ್ನು ಎತ್ತಿಕಟ್ಟುವ ಪ್ರಯತ್ನ ಆರಂಭಿಸಿದರು. ಬಿ.ಎಲ್ ಸಂತೋಷರನ್ನು ಇದಕ್ಕೆ ದಾಳವಾಗಿ ಉಪಯೋಗಿಸಬೇಕೆಂದು ಫೇಕ್ ಸುದ್ದಿಯನ್ನು ಸೃಷ್ಟಿಸಿದರು. ಇದ್ಯಾವುದಕ್ಕೂ ಎಂದಿಗೂ ತಲೆಕೆಡಿಸಿಕೊಳ್ಳದ ಅವರು ಈ ಬಾರಿ ಮಾತ್ರ ಹಠಕ್ಕೆ ಬಿದ್ದು ಸುದ್ದಿ ಹರಿದಾಡಿಸಿದವನ ವಿರುದ್ಧ ಕ್ರಮ ಕೈಗೊಂಡಿದ್ದಿದೆಯಲ್ಲ, ಇದು ಲಿಂಗಾಯಿತರ ಕಣ್ತೆರೆಸುವಂಥದ್ದು. ಹಾಗೆ ನೋಡಿದರೆ ವೀರಶೈವರನ್ನೂ ಲಿಂಗಾಯಿತರನ್ನೂ ಒಡೆದು ಮತಗಳನ್ನು ಬಾಚಿಕೊಳ್ಳಲು ಯತ್ನಿಸಿದ್ದು ಸಿದ್ದರಾಮಯ್ಯ ಮತ್ತವರ ತಂಡವೇ ಅಲ್ಲವೇನು? ಚುನಾವಣೆಯವರೆಗೂ ಹೋರಾಟಕ್ಕೆ ಕಾವು ತಂದುಕೊಡುವಲ್ಲಿ ದುಡಿದ ಈ ನಾಯಕರು ಆನಂತರ ಲಿಂಗಾಯಿತರ ಬಳಿಯೂ ಸುಳಿಯಲಿಲ್ಲವೆಂಬುದು ಸತ್ಯವಲ್ಲವೇನು? ಮೊದಲಾದರೆ ಜನ ಮರೆತುಬಿಡುತ್ತಿದ್ದರು. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಮತ್ತೆ ಮತ್ತೆ ನೆನಪಿಸುವ ವ್ಯವಸ್ಥೆ ಇರುವುದರಿಂದ ಕಾಂಗ್ರೆಸ್ಸು ಕಂಗಾಲಾಗಿರುವುದು ಕಾಣುತ್ತದೆ. ಜಾತಿ-ಜಾತಿಗಳು ಮೋದಿ ರ್ಯಾಲಿಯ ನಂತರ ಜಾತಿಯನ್ನೇ ಮರೆತು ಮೋದಿಯ ಮಾತಿಗೆ ಮತಹಾಕುವ ಹಂತಕ್ಕೆ ಬಂದಿರುವುದು ಕಾಂಗ್ರೆಸ್ಸಿಗರಿಗೆ ಸಹಿಸಲಾಗದ ಸುದ್ದಿ. 

ನರೇಂದ್ರಮೋದಿ ಈ ಬಾರಿ ಬಹುಮತದ ಸರ್ಕಾರ ಕೇಳಿಕೊಂಡಿದ್ದಾರೆ. 104ಕ್ಕೆ ಪ್ರತೀಬಾರಿ ನಿಲ್ಲಿಸುತ್ತೇವಲ್ಲ, ಅದು ಬಿಜೆಪಿಯನ್ನು ಅನಿವಾರ್ಯವಾಗಿ ಕೆಡುಕಿನತ್ತ ದೂಡುತ್ತದೆ. ಆಪರೇಶನ್ ಕಮಲಕ್ಕೆ ಪ್ರೇರೇಪಿಸುತ್ತದೆ. ಒಮ್ಮೆ ಪೂರ್ಣ ಬಹುಮತ ಕೊಟ್ಟರೆ ಉತ್ತರ ಪ್ರದೇಶದಲ್ಲಿ ನೀಡಿದಂತಹ ಸಮರ್ಥ ಆಡಳಿತವನ್ನು ಕರ್ನಾಟಕಕ್ಕೂ ನೀಡಬಹುದೆಂದು ಅವರ ಬಯಕೆ. ಹೀಗಿರುವಾಗ ಜವಾಬ್ದಾರಿಯುತವಾಗಿ ಮತ ಸಲ್ಲಿಸುವುದು ನಮ್ಮ ಹೊಣೆ. ಅಷ್ಟೇ ಅಲ್ಲ, ಬಿಜೆಪಿ ಈ ಬಾರಿ 70ಕ್ಕೂ ಹೆಚ್ಚು ಹೊಸಮುಖಗಳನ್ನು ಪರಿಚಯಿಸಿದೆ. ಇವರಲ್ಲಿ ಬಹುತೇಕರು ಸಾಮಾನ್ಯ ಕಾರ್ಯಕರ್ತರು, ಕೆರೆದರೂ ಅಕೌಂಟಿನಲ್ಲಿ ನಾಲ್ಕಾರು ಲಕ್ಷ ಸಿಗದವರು. ಈ ಬಾರಿ ಬಿಜೆಪಿಯ ಈ ಪ್ರಯೋಗಕ್ಕೆ ಸೋಲಾದರೆ ಇನ್ನೆಂದೂ ಯಾರೂ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ಯತ್ನ ಮಾಡಲಾರರು. ಟಿಕೆಟ್ ಕೊಡುವ ಮುನ್ನ ಅಪ್ಪ ಶಾಸಕನಾಗಿದ್ದಾನಾ ಎಂದು ಗುರುತಿಸಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ. ಅಲ್ಲಿಗೆ ಕಾರ್ಯಕರ್ತನ ಸಮಾಧಿ. ಕಾಂಗ್ರೆಸ್ಸಿನ ಕಾರ್ಯಕರ್ತರೂ ಈ ಕುರಿತಂತೆ ಗಂಭೀರವಾಗಿ ಯೋಚಿಸಬೇಕಿದೆ. ಸಾಯುವ ಕೊನೆ ಕ್ಷಣದಲ್ಲೂ ಕುರ್ಚಿಯ ಮೇಲಿರಬೇಕೆಂದು ಬಯಸುವ ಮಂದಿಯ ಜೀತ ಮಾಡಬಾರದೆಂದರೆ ಈ ಬಾರಿ ಅವರೂ ಬಿಜೆಪಿಗೆ ಮತಹಾಕಿ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ಈ ವಿಚಾರಧಾರೆಯನ್ನು ಗೆಲ್ಲಿಸಬೇಕಿದೆ. ಆಗಮಾತ್ರ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಾದರೂ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇಲ್ಲವಾದರೆ ಅಪ್ಪ, ಮಗ, ಮೊಮ್ಮಗ, ಮರಿಮಕ್ಕಳ ಪರಂಪರೆ ವರುಣಾದಲ್ಲಿ ಮುಂದುವರೆದಂತೆ ನಾಡಿನೆಲ್ಲೆಡೆಗೂ ಹಬ್ಬಲಿದೆ. 

ಈ ಕಾರಣಕ್ಕೇ ಮೇ 10 ಅತ್ಯಂತ ಪ್ರಮುಖವಾದ ದಿವಸ. ಮತ ಹಾಕಬೇಕೋ ಬೇಡವೋ ಎಂದು ಆಲೋಚಿಸುತ್ತಿರುವವರು ಮನೆಯಿಂದ ಹೊರಬನ್ನಿ. ಮೋದಿಯವರು ಕೇಳಿಕೊಂಡಂತೆ ಒಮ್ಮೆ ಅವರಿಗೆ ಬಹುಮತ ಕೊಡೋಣ. ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಮೋದಿಗೆ ಬಲಗೈಯ್ಯಾಗಿ ಮುನ್ನುಗ್ಗಲೆಂದು ಪ್ರಾರ್ಥಿಸೋಣ ಮತ್ತು 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸಲು ಈಗ ಅವರ ಗೆಲುವು ಮುಖ್ಯ ಎನ್ನುವುದನ್ನು ಮರೆಯದಿರೋಣ. ಹೌದಲ್ಲವೇ?

ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ರಾಮಾಯಣದಲ್ಲಿ ಎಲ್ಲೋ ಹೊರಗಿಂದ ನುಸುಳಿದ ಕಥೆಯಿದು. ಚೌಡೇಶ್ವರಿ ದೇವಿಯ ಬಳಿ ಭಾರತದ ಭವಿಷ್ಯದ ಕುರಿತಂತೆ ಕೆಲವಾರು ವರ್ಷಗಳ ಹಿಂದೆ ರಾಮಕೃಷ್ಣಾಶ್ರಮದ ಮಿತ್ರರೊಬ್ಬರು ಕೇಳಿದಾಗ ದೇವಿ ಹೇಳಿದ್ದಂತೆ, ‘ಇಂದ್ರಜಿತ್ ಸಾಯುವ ಮುನ್ನ ರಾಮನನ್ನು ಬಲು ದೈನ್ಯದಿಂದ ಕೇಳಿದನಂತೆ. ತಂದೆ ರಾವಣನಾದರೋ ತಪ್ಪಿತಸ್ಥ, ನಿಜ. ಆತ ಶಿವಭಕ್ತನಾದರೂ ರಾಕ್ಷಸನಂತೆ ವರ್ತಿಸಿದ್ದಾನೆ. ಸೀತೆಯನ್ನು ಅಪಹರಿಸಿಕೊಂಡು ಬಂದು ತಪ್ಪೆಸಗಿದ್ದಾನೆ. ಅವನಿಗೆ ಶಿಕ್ಷೆ ಕೊಡುವ ಭರದಲ್ಲಿ ಯಾವ ತಪ್ಪನ್ನೂ ಮಾಡದ ನನಗೇಕೆ ಈ ಶಿಕ್ಷೆ? ದೇವರ ದೇವ ನೀನೆನ್ನುತ್ತಾರೆ. ನಾನು ಒಂದು ದಿನವಾದರೂ ಲಂಕೆಯನ್ನು ಆಳದೇ ಪ್ರಾಣ ಬಿಡುತ್ತಿದ್ದೇನಲ್ಲ, ಇದು ನ್ಯಾಯವೇ? ಎಂದನಂತೆ. ರಾಮನ ಮನ ಕರಗಿತು. ಆತ ಮೈದಡವಿ ಕಲಿಯುಗದಲ್ಲಿ ನೂರು ವರ್ಷಗಳ ಕಾಲ ನೀನು ಮತ್ತು ನಿನ್ನ ಪರಿವಾರ ಭಾರತವನ್ನೇ ಆಳುವಂತಾಗಲಿ’ ಎಂದುಬಿಟ್ಟನಂತೆ. ಈ ಕಥೆಯನ್ನು ಕೇಳಿದೊಡನೆ ನಾನು ಅಚ್ಚರಿಯಿಂದ ಅತ್ತ ತಿರುಗಿ, ಹಾಗಾಯಿತೇನು? ಎಂದಾಗ, ಕಾಂಗ್ರೆಸ್ಸಿನ ಆಳ್ವಿಕೆಯ ಒಂದು ಕುಟುಂಬದ ಅಧಿಕಾರಕ್ಕೆ ನೂರು ವರ್ಷ ಕಳೆಯುತ್ತಾ ಬಂತಲ್ಲ, ಎಂದರು. ತಲೆಕೆರೆದುಕೊಂಡು ನೋಡಿದರೆ ಮೋತಿಲಾಲ್ ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾದದ್ದು 1919ರಲ್ಲಿ. ಮತ್ತೀಗ ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸ್ಪಷ್ಟತೆ ಬಂದಿದ್ದು 2019ರಲ್ಲಿ. ಬರೋಬ್ಬರಿ ನೂರು ವರ್ಷ! ಹೇಳಿದ ಪುಣ್ಯಾತ್ಮನ ಕಪೋಲಕಲ್ಪಿತ ಕಥೆಯೋ ಅಥವಾ ನಿಜವಾಗಿಯೂ ದೇವಿಯೇ ಹೇಳಿದ್ದಳೋ ನನಗಂತೂ ಗೊತ್ತಿಲ್ಲ. ಆದರೆ ಅಕ್ಷರಶಃ ಹೊಂದಾಣಿಕೆಯಂತೂ ಆಗುತ್ತಿದೆ. ಬೀದಿ-ಬೀದಿಗಳಲ್ಲಿ ರಾಹುಲ್ ಪಾದಯಾತ್ರೆ ಮಾಡುತ್ತಾ ಭಾರತವನ್ನು ಜೋಡಿಸುತ್ತೇನೆ ಎನ್ನುವಾಗ ಕಾಂಗ್ರೆಸ್ಸಿಗರ ಉತ್ಸಾಹ ಮುಗಿಲು ಮುಟ್ಟಿತ್ತು. ಕಾರ್ಯಕರ್ತರ ಗಡಣ ಬೀದಿಗಿಳಿದು ಅರಚಾಡುವಾಗ ಮುಂದಿನ ಐದ್ಹತ್ತು ವರ್ಷ ಇವರನ್ನು ಅಲುಗಾಡಿಸಲು ಸಾಧ್ಯವೇ ಇಲ್ಲವೇನೋ ಎನಿಸುತ್ತಿತ್ತು. ಮೋದಿ ಬೀದರ್‌ಗೆ ಕಾಲಿಟ್ಟರು ನೋಡಿ, ಎಲ್ಲರೂ ಚಡಪಡಿಸಲಾರಂಭಿಸಿದ್ದಾರೆ. ರಾಹುಲ್‌ನ ಯಾತ್ರೆಗೆ ಜನರನ್ನು ಕಷ್ಟಪಟ್ಟು ಕರೆತರುವುದಕ್ಕೂ, ಮೋದಿಯ ರ್ಯಾಲಿಗೆ ಜನ ಇಷ್ಟಪಟ್ಟು ಬರುವುದಕ್ಕೂ ಅಜಗಜಾಂತರವಿದೆ. ನಿಸ್ಸಂಶಯವಾಗಿ ಮೋದಿ ಭಾರತದ ಜನರ ಪಾಲಿನ ಸೂಪರ್ ಸ್ಟಾರ್. ಬಹುಶಃ ಅಟಲ್ ಬಿಹಾರಿ ವಾಜಪೇಯಿಯ ನಂತರ ಇಷ್ಟು ಜನಾನುರಾಗಕ್ಕೆ ಪಾತ್ರರಾದ ಮತ್ತೊಬ್ಬ ವ್ಯಕ್ತಿ ಬಂದಿರಲಿಕ್ಕಿಲ್ಲ. ವಾಜಪೇಯಿ ತಮ್ಮ ಖ್ಯಾತಿಯನ್ನು ಮತವಾಗಿ ಪರಿವರ್ತಿಸಿಕೊಳ್ಳುವಲ್ಲಿ ಸೋತರು. ಮೋದಿಯ ಹೆಗ್ಗಳಿಕೆಯೇನು ಗೊತ್ತೇ? ಅವರು ರ್ಯಾಲಿಗೆ ಬಂದ ಪ್ರತಿಯೊಬ್ಬ ವ್ಯಕ್ತಿಯನ್ನೂ ರಾಷ್ಟ್ರಭಕ್ತನಾಗಿಬಿಡುವಂತೆ ಮಾಡಿಬಿಡುವರು, ಅಲ್ಲಿಗೆ ಬಿಜೆಪಿಗೆ ಮತ ಖಾತ್ರಿ.

ನೀವು ಯೋಜನೆಗಳನ್ನು ರೂಪಿಸಿ, ಒಂದಷ್ಟು ಉಚಿತಗಳ ಘೋಷಣೆಮಾಡಿ, ಒಮ್ಮೆಯೋ ಎರಡು ಬಾರಿಯೋ ಮತಗಳಿಸಿಬಿಡಬಹುದು. ಆದರೆ ನಿಮ್ಮ ಸಾನಿಧ್ಯ ಮಾತ್ರದಿಂದಲೇ ಜನರ ಒಲವನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂದರೆ ಅದಕ್ಕೆ ದೈವೀಶಕ್ತಿಯೂ ಬೇಕು. ಕಾಂಗ್ರೆಸ್ಸು ಕೋಟಿಗಟ್ಟಲೆ ರೂಪಾಯಿ ಸುರಿದು ರಣನೀತಿ ರೂಪಿಸಲು ಜನರನ್ನು ಇಟ್ಟುಕೊಂಡಿದೆ. ಮೋದಿ ಸುಮ್ಮನೆ ನಾಲ್ಕು ಸುತ್ತು ತಿರುಗಾಡುತ್ತಾರೆ, ಜನ ಪ್ರೀತಿಯಿಂದ ಬಂದು ಮತಹಾಕಿ ಹೋಗುತ್ತಾರೆ. ಎಷ್ಟು ವಿಚಿತ್ರ ಅಲ್ಲವೇ?

ಮೋದಿಗಿರುವ ಶಕ್ತಿಯೇ ಅದು. ಅವರು ಜನರ ಹೃದಯದೊಂದಿಗೆ ನೇರವಾಗಿ ಮಾತನಾಡಬಲ್ಲರು. ಅವರು ಏನೇ ಮಾಡಿದರೂ ಅದು ನಾಟಕವೆನಿಸುವುದಿಲ್ಲ. ರಾಹುಲ್ ಅಪರೂಪಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಅದು ಸತ್ಯವೆನಿಸುವುದಿಲ್ಲ. ಮೋದಿಯನ್ನು ಶಾಲೆಗೇ ಹೋಗದವರೆಂದು ಇವರೆಲ್ಲ ಜರಿದರೂ ಮೋದಿ ಬುದ್ಧಿವಂತರೆಂಬುದನ್ನು ಇಡಿಯ ಜಗತ್ತು ಒಪ್ಪುತ್ತದೆ. ರಾಹುಲ್ ಕೇಂಬ್ರಿಡ್ಜ್ ನಿಂದಲೇ ಬಂದಿದ್ದಾರೆ ಎಂದು ಇವರೆಲ್ಲ ಬಡಾಯಿ ಕೊಚ್ಚಿಕೊಂಡರೂ ಆತ ಏನೂ ಅರಿಯದ ಮುಗ್ದನೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ, ಸ್ವತಃ ಕಾಂಗ್ರೆಸ್ಸಿಗರಿಗೂ! ಮೋದಿ ಈ ದೇಶದ ಜನರ ಮೇಲಿನ ತಮ್ಮ ನಿಷ್ಕಳಂಕ ಪ್ರೀತಿಯಿಂದಲೇ ಗೆಲುವು ಸಾಧಿಸಿಬಿಟ್ಟರು. ಬಡತನವನ್ನು ಅನುಭವಿಸಿಯೇ ಮೇಲಕ್ಕೆ ಬಂದ ಆ ಪುಣ್ಯಾತ್ಮ ಅವರ ಬದುಕನ್ನು ಸುಂದರಗೊಳಿಸಲೆಂದೇ ಯೋಜನೆಗಳನ್ನು ರೂಪಿಸಿದರು. ಅದನ್ನು ಜಾರಿಗೆ ತರಲು ಹಗಲು-ರಾತ್ರಿ ಶ್ರಮಿಸಿದರು. ಹೀಗಾಗಿ ಪ್ರತೀ ಊರಿನ, ಪ್ರತಿ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಮೋದಿ ಯೋಜನೆಯಿಂದ ಉಪಕೃತನಾದವನೇ. ಬೇರೆಲ್ಲವನ್ನು ಬದಿಗಿಟ್ಟು ಕರೋನಾ ಕಾಲದ ಮೋದಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಗಡ್ಡ ಬಿಟ್ಟು, ಋಷಿಯಂತಾಗಿಬಿಟ್ಟಿದ್ದರು ಅವರು. ಅನೇಕ ರಾತ್ರಿಗಳನ್ನು ನಿದ್ದೆಮಾಡದೇ ಕಳೆಯುತ್ತಿದ್ದ ಅವರು ಸಭೆಗಳಿಗೆಂದು ಬಂದಾಗ ಕಣ್ಣು ಸೊರಗಿ ಹೋಗಿರುತ್ತಿತ್ತು. ತನ್ನವರನ್ನು ಕಳೆದುಕೊಳ್ಳುವ ಆತಂಕ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸದಾಕಾಲ ಉತ್ಸಾಹದ ಚಿಲುಮೆಯಂತಿರುತ್ತಿದ್ದ ಮೋದಿ ಆ ಸಂದರ್ಭದಲ್ಲಿ ಮಾತ್ರ ಸೋತು ಸುಣ್ಣವಾದವರಂತೆ ಕಾಣುತ್ತಿದ್ದರು. ದೀರ್ಘಕಾಲದಿಂದ ಕಾಡುತ್ತಿದ್ದ ಯಾವುದೋ ರೋಗ ಉಲ್ಬಣವಾದರೆ ನಮ್ಮ ಸ್ಥಿತಿ ಹೇಗಿರುತ್ತದೆಯೋ ಹಾಗೆ. ಆದರೆ ಮೋದಿ ಎಲ್ಲ ಭಾರವನ್ನೂ ತಾನೇ ಹೊತ್ತರು, ತನ್ನ ಶಿಲುಬೆಯನ್ನು ತಾನೇ ಹೊತ್ತ ಏಸುವಿಗಿಂತ ಕೆಟ್ಟದ್ದಾಗಿ. ಕಾಂಗ್ರೆಸ್ಸಿಗರಾದಿಯಾಗಿ ಬುದ್ಧಿಜೀವಿಗಳೂ ಸೇರಿದಂತೆ ಕೆಲವು ಮುಂಚೂಣಿಯ ನಾಯಕರು ವಿದೇಶೀ ವ್ಯಾಕ್ಸಿನ್‌ಗಳನ್ನು ಕೊಂಡುಕೊಳ್ಳುವುದೊಳಿತು ಎಂದು ಮುಗಿಬಿದ್ದಾಗ ಮೋದಿ ಎಲ್ಲ ನೋವನ್ನೂ ಸಹಿಸಿಕೊಂಡರು. ಎಲ್ಲವನ್ನೂ ಮೈಮೇಲೆಳೆದುಕೊಂಡು ಸಂಕಟ ಜನಸಾಮಾನ್ಯರಿಗೆ ತಲುಪದಂತೆ ತಾವೇ ನುಂಗಿದರು, ವಿಷಕಂಠನಂತೆ. ಅವರ ಈ ಸಾಹಸದ ಪ್ರತಿಫಲವಾಗಿಯೇ ಭಾರತದಲ್ಲಿ ವ್ಯಾಕ್ಸಿನ್‌ಗಳು ತಯಾರಾಗಿದ್ದು. ನಿಮಗೆ ನೆನಪಿರಬೇಕು, ಈ ವ್ಯಾಕ್ಸಿನ್ ಮೇಲೆ ವಿಶ್ವಾಸವಿಲ್ಲ ಎಂದಿದ್ದರು ಕಾಂಗ್ರೆಸ್ಸಿಗರು. ನಂಬಿಕಸ್ಥ ಅಮೇರಿಕನ್ ವ್ಯಾಕ್ಸಿನ್ ಬಳಸುವುದು ದೇಸೀ ವ್ಯಾಕ್ಸಿನ್ ಬಳಕೆಗಿಂತ ಉತ್ತಮ ಎಂದಿದ್ದರೂ ಕೂಡ. ಮೋದಿ ತಲೆಕೆಡಿಸಿಕೊಳ್ಳಲಿಲ್ಲ. ಈ ನಾಡಿನ ವಿಜ್ಞಾನಿಗಳ ಮೇಲೆ ಅಪಾರವಾದ ಭರವಸೆಯನ್ನಿಟ್ಟು ವ್ಯಾಕ್ಸಿನ್ ಅನ್ನು ಮಾರುಕಟ್ಟೆಗೆ ತರಲು ಶ್ರಮಿಸಿದರು. ಅತ್ತ ಅಮೇರಿಕಾದ ವ್ಯಾಕ್ಸಿನ್ಗಳು ಈಗ ಜನರ ಮೇಲೆ ವಿಪರೀತ ಪರಿಣಾಮವನ್ನು ಉಂಟುಮಾಡುತ್ತಿದ್ದರೆ ಭಾರತದ ವ್ಯಾಕ್ಸಿನ್‌ಗಳು ಕರೋನಾಕ್ಕೆ ಇತಿಶ್ರೀ ಹಾಡಿ, ಜಗತ್ತಿನ ಹುಬ್ಬೇರುವಂತೆ ಮಾಡಿವೆ. ಹಾಗೆ ಸುಮ್ಮನೆ ಕರೋನಾ ಕಾಲದಲ್ಲಿ ಮೋದಿಯ ಜಾಗದಲ್ಲಿ ರಾಹುಲ್ ಇದ್ದಿದ್ದರೆ ಏನಾಗುತ್ತಿತ್ತೆಂಬುದನ್ನು ಊಹಿಸಿ ನೋಡಿ, ಗಾಬರಿಯಾಯ್ತಲ್ಲವೇ? ಮೋದಿ ಅಂಥದ್ದೊಂದು ಬಲವಾದ ಛಾಪನ್ನು ಭಾರತೀಯರ ಹೃದಯದೊಳಗೆ ಒತ್ತಿಬಿಟ್ಟಿದ್ದಾರೆ.

ಕಾಂಗ್ರೆಸ್ಸಿಗೆ ಬಡವರ ಕುರಿತಂತೆ ಮಾತನಾಡುವುದೆಂದರೆ ಆನಂದವೋ ಆನಂದ. ದೇಶದಲ್ಲಿ ಹೆಚ್ಚು-ಹೆಚ್ಚು ಬಡವರಿದ್ದಷ್ಟೂ ಅವರ ಮತಗಳಿಗೆ ಹೆಚ್ಚುತ್ತದೆ. ಬಡತನ ಎನ್ನುವುದು ಸಂಪತ್ತಿನ ಕೊರತೆಯಿಂದ ಉಂಟಾಗುವಂಥದ್ದಲ್ಲ. ಅದೊಂದು ಅತೃಪ್ತ ಮಾನಸಿಕತೆ. ದಿನಕ್ಕೆ ಒಂದು ಹೊತ್ತು ಊಟ ಮಾಡುವವನು ತನ್ನ ತಾನು ಸುಖಿ ಎಂದು ಭಾವಿಸಿ ಆನಂದದಿಂದ ಕಾಲ ಕಳೆದುಬಿಡುತ್ತಾನೆ. ಅದೇ ವೇಳೆಗೆ ತಿಂಗಳಿಗೆ ಎರಡು ಲಕ್ಷ ಸಂಪಾದಿಸುವ ವ್ಯಕ್ತಿಯೂ ತನಗೆ ಸಾಕಾದಷ್ಟು ಸಿಗುತ್ತಿಲ್ಲವೆಂದು ಗೋಳಾಡುತ್ತಲೇ ಇರುತ್ತಾನೆ. ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಡುವ ನೆಪದಲ್ಲಿ ಹೀಗೆ ಗೋಳಾಡುವವರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಬಡವರು ಹೆಚ್ಚಾದಷ್ಟು ಅವರ ಬೇಳೆ ಚೆನ್ನಾಗಿ ಬೇಯುತ್ತದೆ. ಮುಸಲ್ಮಾನರು ಹೆಚ್ಚಾದಷ್ಟು ಏಕತ್ರಗೊಂಡ ಹಿಂದೂಗಳ ಭೀತಿಯನ್ನು ಅವರ ಹೃದಯದೊಳಗೆ ತುಂಬಿ ಮತ ಪಡೆಯಲು ಅವರಿಗೆ ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಸಮಾಜ ಮೇಲು-ಕೀಳು, ಬಡವ-ಸಿರಿವಂತ, ಹಿಂದೂ-ಮುಸ್ಲೀಂ ಎಂದು ಒಡೆದಂತೆಲ್ಲ ಆನಂದವಾಗೋದು ಕಾಂಗ್ರೆಸ್ಸಿಗೇ. ಆದರೆ ಮೋದಿ ಇದನ್ನು ಪೂರ್ಣ ಬದಲಾಯಿಸಿದರು. ಅವರು ಬಡವರೆನಿಸಿಕೊಂಡವರ ಆತ್ಮಗೌರವವನ್ನು ಯಾವ ಮಟ್ಟಕ್ಕೊಯ್ದರೆಂದರೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ. ಜನವರಿ 26ಕ್ಕೆ ವಿಶ್ವವಿಖ್ಯಾತ ಪರೇಡ್ ನಡೆಯುತ್ತಲ್ಲ, ಪ್ರತಿವರ್ಷ ಅದನ್ನು ನೋಡಲು ವಿಐಪಿಗಳೆಲ್ಲ ಮುಂದಿನ ಸಾಲಿನಲ್ಲಿ ಕುಳಿತಿರುತ್ತಾರೆ. ಈ ವರ್ಷ ಮೋದಿ ಅಲ್ಲಿ ಕೂರಲು ಜಾಗಮಾಡಿಕೊಟ್ಟದ್ದು ಯಾರಿಗೆ ಗೊತ್ತೇನು? ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಕೆಲಸ ಮಾಡಿದ, ಕಾಶಿ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ ಕಾರಕೂನರ ಕುಟುಂಬಗಳಿಗೆ. ಇಂದು ಕಾರ್ಮಿಕರ ದಿನ ಬೇರೆ. ವರ್ಷಗಟ್ಟಲೆ ಕಾರ್ಮಿಕರ ಹೆಸರು ಹೇಳುತ್ತಾ ಪ್ರತಿಭಟನೆಗೆ ಬೀದಿಗೆ ಬಂದು ನಿಲ್ಲುವ ಕಮ್ಯುನಿಸ್ಟ್ ಮಂದಿಯೂ ಅಧಿಕಾರದಲ್ಲಿದ್ದಾಗ ಇಂಥದ್ದೊಂದು ಆಲೋಚನೆ ಮಾಡಿರಲಿಲ್ಲ. ಕೈಯ್ಯಲ್ಲಿ ಕರಣಿ ಹಿಡಿದ ಪ್ರತಿಯೊಬ್ಬ ಕಾರ್ಮಿಕನಿಗೂ ತಾನು ಈ ಕೆಲಸ ಮಾಡುತ್ತಿರುವುದಕ್ಕೆ ಈಗ ಬೇಸರವೂ ಇಲ್ಲ, ಅವಮಾನ ಎನಿಸುವುದೂ ಇಲ್ಲ. ಏಕೆಂದರೆ ತಮ್ಮದ್ದೇ ಸಂಕುಲದ ಮಂದಿ ವಿಐಪಿಗಳಂತೆ ಗಣರಾಜ್ಯೋತ್ಸವದ ಪರೇಡ್ ನೋಡಲು ಕುಳಿತಿದ್ದಾರಲ್ಲ. ಇಂದು ಯಾರನ್ನು ಕಾರಕೂನರೆಂದು ಕರೆಯುತ್ತೇವಲ್ಲ, ಅವರು ಕಡಿಮೆ ದುಡಿಯುತ್ತಿಲ್ಲ. ನೀವು ಕೊಡುವ ಉಚಿತ ಕೊಡುಗೆ ಅವರಿಗೆ ಬೇಕೇ ಇಲ್ಲ. ಅವರ ವೃತ್ತಿಯನ್ನು ಜನ ಆಯ್ದುಕೊಳ್ಳದಿರುವುದಕ್ಕೆ ಆತ್ಮಗೌರವದ ಕೊರತೆಯ ಕಾರಣವಿದೆಯಲ್ಲ, ಅದನ್ನು ಸರಿಪಡಿಸಬೇಕಷ್ಟೇ. ಮೋದಿ ಅದನ್ನು ಮಾಡುತ್ತಿರುವುದರಿಂದಲೇ ಅವರೆಲ್ಲರಿಗೂ ಮೋದಿಯನ್ನು ಕಂಡಾಗ ದೇವರನ್ನು ಕಂಡಂತೆ ಆಗೋದು!

ಕಾಂಗ್ರೆಸ್ಸಿಗರ ಪಾಲಿಗೆ ಬಡವರು ಎಂದರೆ ದಡ್ಡರು ಎಂದರ್ಥ. ಹೀಗಾಗಿಯೇ ನೋಟ್‌ಬ್ಯಾನ್ ಮಾಡಿ ಜನರ ಕೈಗೆ ಡಿಜಿಟಲ್ ಮನಿ ಕೊಡುತ್ತೇವೆ ಎಂದು ಮೋದಿ ಹೇಳಿದಾಗ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕುಹಕ ಮಾಡಿದ್ದರು. ಈ ದೇಶದ ಹಳ್ಳಿಗನಿಗೆ ಮೊಬೈಲ್ ಬಳಸಲು ಬರುವುದಿಲ್ಲ, ಆಧುನಿಕ ತಂತ್ರಜ್ಞಾನದ ಅರಿವಿಲ್ಲ, ಅಂಥವನಿಂದ ಏನನ್ನು ನಿರೀಕ್ಷಿಸುತ್ತೀರಿ ಎಂದಿದ್ದರು. ಮೋದಿ ಅಂದಿನ ದಿನ ಏನೂ ಮಾತನಾಡಲಿಲ್ಲ. ಆದರೆ ಇಂದು ಜಗತ್ತಿನ ಹೆಚ್ಚು ಡಿಜಿಟಲ್ ವಹಿವಾಟನ್ನು ಭಾರತವೇ ನಡೆಸುತ್ತಿದೆ ಎಂಬುದು ಅರಿವಾದಾಗ ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿದೆ. ಯಾವ ಹಳ್ಳಿಯ ಜನರನ್ನು ದಡ್ಡರೆಂದು ಕರೆದು ಸುಮಾರು 65 ವರ್ಷಗಳ ಕಾಲ ಇವರು ಆಳ್ವಿಕೆ ನಡೆಸಿದ್ದರೋ ಅದೇ ಹಳ್ಳಿಗರು ಇಂದು ಭಾರತದ ಆರ್ಥಿಕತೆ ಸದೃಢಗೊಳ್ಳಲು ಬಲವಾದ ಬೆನ್ನೆಲುಬಾಗಿಬಿಟ್ಟಿದ್ದಾರೆ. ಮೋದಿ ಇಟ್ಟ ಈ ವಿಶ್ವಾಸವನ್ನು ಹಳ್ಳಿಯಲ್ಲಿರುವ ಆ ಬಡಮಂದಿ ಮರೆಯುವುದಾದರೂ ಹೇಗೆ? ಅದಕ್ಕೆ ಮೋದಿ ತಮ್ಮೂರಿನ ಬಳಿ ಬರುತ್ತಿದ್ದಾರೆಂದರೆ ಆ ಜನ ಯಾವ ಪ್ರಶ್ನೆಯನ್ನೂ ಕೇಳದೇ ಧಾವಿಸಿಬರುತ್ತಾರೆ. ಅವರಿಗೆ ಕಾರ್ಯಕ್ರಮಕ್ಕೆ ಬರಲು ದುಡ್ಡು ಬೇಕಾಗುವುದಿಲ್ಲ, ಏಕೆಂದರೆ ತಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿದ ತಮ್ಮ ಪಾಲಿನ ದೇವರನ್ನು ಅವರಲ್ಲಿ ನೋಡುತ್ತಾರೆ.

ಕಾಂಗ್ರೆಸ್ಸು ಇಷ್ಟಕ್ಕೇ ನಿಲ್ಲಲಿಲ್ಲ. ಬಡವರು ಸದಾ ತಮ್ಮ ದಾಸರಾಗಿರಬೇಕೆಂದು ಅವರು ಆಲೋಚಿಸಿದರು. ಹೀಗಾಗಿಯೇ ಒಬ್ಬ ಒಮ್ಮೆ ಅಧಿಕಾರಕ್ಕೆ ಬಂದನೆಂದರೆ ಅವನ ಮಕ್ಕಳು, ಮೊಮ್ಮಕ್ಕಳೇ ಅಲ್ಲಿ ಕುಳಿತುಕೊಂಡು ಉಳಿದವರನ್ನೆಲ್ಲ ಕಾಲಡಿ ಕಸದಂತೆ ಕಂಡರು. ಸ್ವಲ್ಪ ಎಡವಟ್ಟಾಗಿದ್ದರೆ ಬಿಜೆಪಿ ಅದೇ ದಿಕ್ಕಿಗೆ ಹೋಗಿರುತ್ತಿತ್ತು. ನರೇಂದ್ರಮೋದಿ ಸಾಧ್ಯವಾದಷ್ಟು ಬದಲಾವಣೆಗೆ ಕೈಹಾಕಿದರು. ಅನೇಕ ಕಡೆಗಳಲ್ಲಿ ಯಾರೂ ಊಹಿಸದಿದ್ದ ಕಾರ್ಯಕರ್ತರಿಗೆ ಅವಕಾಶಕೊಟ್ಟರು. ಆರೇಳು ಬಾರಿ ಗೆದ್ದು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದವರನ್ನು, ಪಕ್ಷಕ್ಕೆ ತೊಂದರೆ ಉಂಟುಮಾಡಬಹುದೆಂದು ಗೊತ್ತಿದ್ದರೂ ಮುಲಾಜಿಲ್ಲದೇ ಮನೆಗೆ ಕಳಿಸಿದರು. ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತನಾಗಿರುವುದೆಂದರೆ ಜೀವನಪರ್ಯಂತ ಪರಿವಾರದ ಗುಲಾಮನಾಗಿರುವುದೆಂದರ್ಥ. ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ದುಡಿಯುವುದೆಂದರೆ ಒಂದಲ್ಲ ಒಂದು ದಿನ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವುದೆಂದರ್ಥ. ಕಾಂಗ್ರೆಸ್ಸು ತನ್ನ ಅವಧಿಯುದ್ದಕ್ಕೂ ಹೆಚ್ಚು ‘ದೊಡ್ಡ ಮನುಷ್ಯ’ರನ್ನು ಸೃಷ್ಟಿಸಿದೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ಮಾಡಿಕೊಂಡ ದೊಡ್ಡವರು. ಇವರನ್ನು ಹತಾಶೆಯ ಕಂಗಳಿಂದ ನೋಡುತ್ತಾ ನಿಂತ ಆ ಬಡ-ಮಧ್ಯಮ ವರ್ಗದವರು ಈ ದೇಶದ ಕಥೆಯಿಷ್ಟೇ ಎಂದುಕೊಳ್ಳುತ್ತಾ ತಮ್ಮ ವ್ಯಾಪ್ತಿಯಲ್ಲಿ ಒಂದಷ್ಟು ಹಣ ಮಾಡಿಟ್ಟುಕೊಂಡು ಸುಮ್ಮನಾಗಿಬಿಡುತ್ತಿದ್ದರು. ಮೋದಿ ಮುಲಾಜಿಲ್ಲದೇ ಈ ದೊಡ್ಡವರ ಬಾಲ ಕತ್ತರಿಸಿಬಿಟ್ಟರು. ಅನೇಕರನ್ನು ಜೈಲಿಗೂ ತಳ್ಳಿದರು. ಮೊದಲೆಲ್ಲ ವಿಮಾನದಲ್ಲಿ ಈ ದೊಡ್ಡ ಮನುಷ್ಯರು ಮಾತ್ರ ತಿರುಗಾಡುತ್ತಿದ್ದರು. ಮೋದಿ ಹವಾಯಿ ಚಪ್ಪಲಿಯವರನ್ನೂ ವಿಮಾನ ಹತ್ತಿಸಿದರು. ಬಡವರ ಓಟಾಟದ ರೈಲುಗಳೆಂದರೆ ಕೊಳಕು, ಸಮಯ ಮೀರಿದ್ದು, ರೈಲ್ವೇ ನಿಲ್ದಾಣಗಳಂತೂ ಕೇಳಲೇಬೇಡಿ. ಮೋದಿ ಬಡವರು ಹೆಚ್ಚಾಗಿ ಬಳಸುವ ಈ ವ್ಯವಸ್ಥೆಯನ್ನು ಅತ್ಯುತ್ಕೃಷ್ಟ ಮಟ್ಟಕ್ಕೇರಿಸಲು ಪ್ರಯತ್ನ ಹಾಕಿದರು. ಇಂದು ಅನೇಕ ರೈಲ್ವೆ ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ರೂಪಿಸಲ್ಪಟ್ಟಿವೆ. ಅಂದರೆ ಉಚಿತವಾಗಿ ಏನೂ ಕೊಡಬೇಕಾಗಿಲ್ಲ, ಅವನ ಬದುಕಿನ ಮಟ್ಟವನ್ನು ಏರಿಸಲು ಏನು ಬೇಕೋ ಅದನ್ನು ಮಾಡಿದರಾಯ್ತು ಎಂಬುದು ಮೋದಿಯವರ ಸಿದ್ಧಾಂತ.

ಇಷ್ಟಾದರೂ ನಮಗೆ ನಮ್ಮ ಬದುಕಿನ ಮಟ್ಟ ಏರುವುದು ಬೇಕಾಗಿಲ್ಲ, ತುತ್ತು ಕೂಳಿಗೆ ಕೈಚಾಚಿಕೊಂಡು ಬದುಕುವುದೇ ಬೇಸೆನಿಸಿದರೆ ಕಾಂಗ್ರೆಸ್ಸಿಗೇ ಮತ ಹಾಕಬೇಕಷ್ಟೇ. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಸ್ವಾಭಿಮಾನಿ ಕನ್ನಡಿಗ ಎಂದೆನಿಸಿದರೆ ನಿಸ್ಸಂಶಯವಾಗಿ ಮೋದಿಯ ಹಿಂದೆ ನಿಲ್ಲಬೇಕು. ಈ ಬಾರಿ ಮೋದಿಗೆ ಬಹುಮತ ಕೊಟ್ಟುಬಿಡೋಣ. ಪ್ರತೀಬಾರಿ ನಮ್ಮ ಜಾತಿಯ ಮಂತ್ರಿ-ಮುಖ್ಯಮಂತ್ರಿ ಎಂದೆಲ್ಲ ಬಡಿದಾಡುತ್ತೇವಲ್ಲ, ಈ ಒಂದು ಬಾರಿ ನಾಡುಕಟ್ಟಿದ ಮೈಸೂರಿನ ಮಹಾರಾಜರಂತಹ ದೂರದೃಷ್ಟಿಯ ನಾಯಕನೊಬ್ಬ ಅಧಿಕಾರಕ್ಕೇರಲೆಂದು ಪ್ರಾರ್ಥಿಸೋಣ. ಒಮ್ಮೆ ಮೋದಿಯನ್ನು ನಂಬೋಣ, ರಾಜ್ಯದಲ್ಲಿ ಅವರು ಕೇಳಿಕೊಂಡಂತೆ ಬಹುಮತದ ಸರ್ಕಾರ ತರೋಣ. ಏನಂತೀರಿ?

ಮೋದಿ ಬರೋವರ್ಗೂ ನಿಮ್ದೇ ಹವಾ!

ಮೋದಿ ಬರೋವರ್ಗೂ ನಿಮ್ದೇ ಹವಾ!

ಚುನಾವಣೆಗಳು ಎದುರಿಗಿವೆ. ಆದರೆ ಸದ್ದೇ ಇಲ್ಲ. ಇನ್ನು ಹದಿನೈದಿಪ್ಪತ್ತು ದಿನಗಳಲ್ಲಿ ಈ ರಾಜ್ಯದ ಐದು ವರ್ಷಗಳ ಭವಿಷ್ಯ ನಿರ್ಧಾರವಾಗಲಿದೆ ಎಂಬ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ. ಬಿಸಿಲ ಝಳ ಒಂದೆಡೆಯಾದರೆ, ಮತ್ತೊಂದೆಡೆ ಎಲ್ಲ ಪಕ್ಷಗಳ ನಾಯಕರಲ್ಲೂ ಮನೆಮಾಡಿರುವ ಆತಂಕ. ಎಲ್ಲಾ ಪಕ್ಷಗಳೂ ಬಹುಮತ ತಮಗೇ ಅಂತ ಮೇಲ್ನೋಟಕ್ಕೆ ಬೀಗುತ್ತಿವೆಯಾದರೂ ಮೈದಡವಿ ಮಾತನಾಡಿಸಿದಾಗ, ಸ್ವಲ್ಪ ಕಷ್ಟವಿದೆ ಎನ್ನುವುದನ್ನು ಒಪ್ಪುತ್ತಾರೆ. ಏಕೊ ಈ ಬಾರಿ ಜನ ಬೂತಿಗೆ ಬಂದು ವೋಟ್ ಮಾಡುವುದೇ ಅನುಮಾನ ಅನ್ನಿಸುತ್ತಿದೆ. ಉರಿಬಿಸಿಲು ಒಂದು ಕಾರಣವಾದರೆ, ಎಲ್ಲಾ ಪಕ್ಷಗಳು ಒಂದೇ ಎನ್ನುವ ತಾತ್ಸಾರ ಮನೋಭಾವ ಮತ್ತೊಂದು.

ಇಡೀ ಚುನಾವಣೆಯ ಪ್ರಮುಖ ಬೇಸರದ ಸಂಗತಿ ಏನು ಗೊತ್ತೇ? ಜಾತಿಯ ಕಾರ್ಡನ್ನು ಪಕ್ಷಗಳು ಬಳಸುತ್ತಿರುವಂತಹ ರೀತಿ. ಲಿಂಗಾಯತನೇ ಮುಖ್ಯಮಂತ್ರಿ ಎನ್ನುವ ಬಿಜೆಪಿ, ಗೌಡರನ್ನು ಮುಂದಿಟ್ಟುಕೊಂಡು ಕಾಳಗ ನಡೆಸುತ್ತಿರುವ ಕಾಂಗ್ರೆಸ್ಸು. ಜಾತಿ-ಜಾತಿಗಳನ್ನು ಇವರು ಸೆಳೆಯಲು ನಡೆಸುತ್ತಿರುವ ಕಸರತ್ತು, ಗಿರಾಕಿಯನ್ನು ಆಕರ್ಷಿಸುವ ಕೆಂಪುದೀಪ ಪ್ರದೇಶದ ಬೆಲೆವೆಣ್ಣುಗಳ ಸರ್ಕಸ್ಸಿನಂತಿದೆ. ಸ್ವಲ್ಪ ಕಟುವೆನಿಸಿದರೂ ಸತ್ಯವೇ. ತಾನು ಬ್ರಾಹ್ಮಣ ಪಕ್ಷವಲ್ಲವೆಂದು ಸಾಬೀತುಪಡಿಸಿಕೊಳ್ಳಲು ಬಿಜೆಪಿ ಜಾತಿವಾರು ಟಿಕೆಟ್ ಹಂಚಿಕೆ ಪಟ್ಟಿ ಪ್ರಕಟಿಸಿದರೆ, ಅತ್ತ ಕಾಂಗ್ರೆಸ್ಸು ಲಿಂಗಾಯತರನ್ನು ಸೆಳೆಯಲು ಒಡಕಿನ ಎಲ್ಲ ಪ್ರಯೋಗವನ್ನೂ ಮಾಡಿಯಾಗಿದೆ. ಅಲ್ಲದೇ ಮತ್ತೇನು? ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರೋದು ಸರಿ, ಆದರೆ ಅವರನ್ನು ತಮ್ಮತ್ತ ಸೆಳೆದ ಕಾಂಗ್ರೆಸ್ಸು ಲಿಂಗಾಯತರಿಗಾದ ಅವಮಾನವೆಂಬಂತೆ ಬಿಂಬಿಸಿತಲ್ಲ! ಶೆಟ್ಟರ್ ಕೂಡ ತಮ್ಮನ್ನು ಹೊರದಬ್ಬುವ ಪ್ರಕ್ರಿಯೆಯ ನಾಯಕರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ರನ್ನು ಬಿಂಬಿಸಿ, ಉರಿವ ಬೆಂಕಿಗೆ ತುಪ್ಪ ಸುರಿದರು. ಅವರದ್ದು ತಪ್ಪು ಎಂದು ಹೇಳಲಾಗದು. ರಾಜಕೀಯವಾಗಿ ತಾನು ಜೀವಂತವಾಗಿರಬೇಕೆಂದರೆ ಇಂಥದ್ದೊಂದು ಕಸರತ್ತು ಅವರಿಗೆ ಅಗತ್ಯವಿತ್ತು. ಅಚ್ಚರಿಯೇನು ಗೊತ್ತೇ? ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿ ಬಿಜೆಪಿ ಆಯ್ಕೆಮಾಡಿದ ಮತ್ತೊಬ್ಬ ವ್ಯಕ್ತಿಯೂ ಲಿಂಗಾಯತರೇ! ಹಾಗಿದ್ದಮೇಲೆ ಲಿಂಗಾಯತರಿಗೆ ಮೋಸವಾಗಿದ್ದೆಲ್ಲಿ? ಇನ್ನು ಎಲ್ಲಾ ಅನಿಷ್ಟಗಳಿಗೂ ಸಂತೋಷರನ್ನೇ ಕಾರಣವೆನ್ನುವ ಮಂದಿ ಮೋದಿ-ಅಮಿತ್‌ ಶಾರನ್ನು ಅಷ್ಟು ದಡ್ಡರೆಂದುಕೊಂಡಿದ್ದಾರೋ ಅಥವಾ ಟಿಕೆಟ್ ಹಂಚಿಕೆಯಲ್ಲಿ ಅವರ ಪಾತ್ರವೇ ಇಲ್ಲ ಎಂದು ಭಾವಿಸಿದ್ದಾರೋ, ನಾನಂತೂ ಅರಿಯೆ. ಸಮಿತಿಯೊಳಗೆ ಘಟಾನುಘಟಿಗಳ್ಯಾರ್ಯಾರಿಗೆ ಟಿಕೆಟ್ ನಿರಾಕರಿಸಬೇಕು ಎಂಬ ಚರ್ಚೆ ಮೇಲ್ಮಟ್ಟದಲ್ಲಿ ನಡೆದಮೇಲೆಯೇ ನಿರ್ಣಯವಾಗಿರುತ್ತಲ್ಲ. ಅಂದಮೇಲೆ ಒಬ್ಬರದ್ದೇ ಜವಾಬ್ದಾರಿ ಹೇಗೆ? ಹಾಗೆ ಒಬ್ಬರ ಹೆಗಲಿಗೇ ಎಲ್ಲವನ್ನೂ ವರ್ಗಾಯಿಸುವುದಾದರೆ, ಟಿಕೆಟ್ ಹಂಚಿಕೆಯಲ್ಲಿ ಹಿಂದೆಂದೂ ಕಾಣದಷ್ಟು ಹೊಸಮುಖಗಳನ್ನು ತಂದಿರುವ ಶ್ರೇಯವೂ ಸಂತೋಷ್ ಅವರಿಗೇ ಸಲ್ಲಬೇಕಲ್ಲ! ಬಿಜೆಪಿಯವರಿಗೆಲ್ಲ ನೆನಪಿರಬೇಕಾದ ಒಂದು ಸಂಗತಿ ಎಂದರೆ ಬಿಜೆಪಿ ಸಂಘದ ಅಂಗಸಂಸ್ಥೆಯಷ್ಟೆ. ಸಂಘ ಅದರ ಬಾಲವಲ್ಲ. ಹೀಗಾಗಿ ಭಾಜಪದೊಂದಿಗೆ ಎಷ್ಟಾದರೂ ಕಿತ್ತಾಡಿಕೊಳ್ಳಿ, ಸ್ವಯಂಸೇವಕರು ನಿಮ್ಮ ಮೇಲೆ ಪ್ರೀತಿ ಇಟ್ಟಿರುತ್ತಾರೆ. ಸಂಘದ ತಂಟೆಗೆ ಬಂದರೆ ನಿಮ್ಮನ್ನು ಸದ್ದಿಲ್ಲದೇ ಪಕ್ಕಕ್ಕೆ ಸರಿಸಿಬಿಡ್ತಾರೆ. ಶೆಟ್ಟರ್ ವಿಷಯದಲ್ಲಿ ಆದದ್ದೂ ಅದೇ. ಅವರು ಸ್ವಯಂ ಸೇವಕರ ಅನುಕಂಪವನ್ನು ಕಳಕೊಂಡರು. ಅತ್ತ ಕಾಂಗ್ರೆಸ್ಸಿಗರೂ ನಂಬಲಾಗದ ಸ್ಥಿತಿಯನ್ನು ತಲುಪಿಬಿಟ್ಟರು. ಅವರದ್ದೀಗ ಇಬ್ಬಂದಿ. ಹಾಗಂತ ಜಗದೀಶ್ ಶೆಟ್ಟರ್‌ರ ರಾಜಕೀಯ ಚಾಣಾಕ್ಷಮತಿಯನ್ನು ಅನುಮಾನಿಸಬೇಡಿ. ಅವರಿಗೆ ಗೆಲ್ಲುವ ತಂತ್ರಗಾರಿಕೆ ಗೊತ್ತಿದೆ. ಆದರೆ ಈ ಧಾವಂತದಲ್ಲಿ ಸೊರಗಿದ್ದು ಮಾತ್ರ ಲಿಂಗಾಯತ ಸಮುದಾಯ. ಬ್ರಾಹ್ಮಣ ಮತ್ತು ಲಿಂಗಾಯತರ ನಡುವಿನ ಕಂದಕವನ್ನು ಅವರು ಇನ್ನಷ್ಟು ದೊಡ್ಡದು ಮಾಡಿಬಿಟ್ಟರು. ಬಿಜೆಪಿಯಲ್ಲಿದ್ದಷ್ಟೂ ದಿನ ಎಲ್ಲರನ್ನೂ ಬೆಸೆಯುವ ಪ್ರಯತ್ನ ಮಾಡುತ್ತಿದ್ದವರು, ಕಾಂಗ್ರೆಸ್ಸಿಗೆ ಕಾಲಿಟ್ಟೊಡನೆ ಬೆಂಕಿಹಚ್ಚಲು ಸಿದ್ಧವಾಗಿಬಿಟ್ಟರು. ಬಹುಶಃ ಒಡಕು ತರೋದು ಕಾಂಗ್ರೆಸ್ಸಿನ ಹುಟ್ಟುಗುಣವೇನೋ! ಕಾಂಗ್ರೆಸ್ಸಿಗರು ಆತ್ಮೀಯತೆ ತೋರುತ್ತಿದ್ದಾರೆಂದರೆ ಏನೊ ಅವಘಡ ಕಾದಿದೆ ಎಂದೇ ಅರ್ಥ. ಮುಖದಲ್ಲಿ ನಗು, ಬಗಲಲ್ಲಿ ಚೂರಿ ಅನ್ನೋದು ಕಾಂಗ್ರೆಸ್ಸಿಗರನ್ನು ನೋಡಿಯೇ ಹುಟ್ಟಿರಬೇಕು! ಒಂದಂತೂ ಸತ್ಯ. ನಾಟಕ ಮಾಡಿದರೆ ಬಹಳ ಕಾಲ ಉಳಿಯುವುದಿಲ್ಲ. ಲಿಂಗಾಯತರ ಮೇಲೆ ವಿಶೇಷ ಪ್ರೀತಿ ತೋರಿದ ಸಿದ್ದರಾಮಯ್ಯ, ‘ಲಿಂಗಾಯತರೆಲ್ಲ ಭ್ರಷ್ಟರು. ಅವರನ್ನು ಮುಖ್ಯಮಂತ್ರಿ ಮಾಡಲಾರೆವು’ ಎಂದಿದ್ದು ಅಂತರಂಗದ ಮಾತನ್ನು ಹೊರಹಾಕಿದೆ. ಜಾತಿಯನ್ನೇ ನೆಚ್ಚಿಕೊಂಡು ಚುನಾವಣೆಗೆ ಹೋದರೆ ಅನುಭವಿಸಲೇಬೇಕಾದ್ದು ಇದು.

ಒಡಕು ಜಾತಿಯ ವಿಚಾರದಲ್ಲಷ್ಟೇ ಅಲ್ಲ. ಅಮೂಲ್, ನಂದಿನಿ ಗಲಾಟೆಯಲ್ಲೂ ಕೂಡ. ಗುಜರಾತಿನ ಅಮೂಲ್‌ಗೆ ಕರ್ನಾಟಕಕ್ಕೆ ಬರಲು ಅವಕಾಶ ಕೊಟ್ಟಿದ್ದೇ ಸಿದ್ದರಾಮಯ್ಯ. ಈಗ ಗಲಾಟೆ ಮಾಡುತ್ತಾ ಇರೋದೂ ಅವರೇ. ತಮ್ಮ ಮತಗಳಿಕೆಗಾಗಿ ರಾಜ್ಯ-ರಾಜ್ಯಗಳ ನಡುವೆ ಕದನ ಹಚ್ಚಿಸಲು ಯತ್ನಿಸುತ್ತಿರುವ ಈ ಮಂದಿ ವಿಕಾಸ ಮಾಡೋದು ಸಾಧ್ಯವೇನು? ಈ ರೀತಿಯಲ್ಲೇ ಈ ರಾಜಕಾರಣಿಗಳು ಕರ್ನಾಟಕ-ತಮಿಳುನಾಡುಗಳ ನಡುವೆ ವಿಷಬೀಜ ಬಿತ್ತಿದ್ದು. ಇವರು ಹಚ್ಚಿದ್ದ ಬೆಂಕಿ ಆರಿಸಲು ಯಡಿಯೂರಪ್ಪನವರೇ ಬರಬೇಕಾಯ್ತು. ಕಂಠಮಟ್ಟ ನಂದಿನಿಗಾಗಿ ಕಿತ್ತಾಡಿದ ಸಿದ್ದರಾಮಯ್ಯ ರಾಜ್‌ದೀಪ್ ಸರ್‌ದೇಸಾಯಿಗೆ ನೀಡಿದ ಸಂದರ್ಶನದಲ್ಲಿ, ತಾನೇ ಅಧಿಕಾರಕ್ಕೆ ಬಂದರೂ ಅಮೂಲ್ ನಿಷೇಧಿಸುವುದಿಲ್ಲ. ಆದರೆ ಜನರಿಗೆ ಅದನ್ನು ಕೊಂಡುಕೊಳ್ಳದಿರುವಂತೆ ಕೇಳಿಕೊಳ್ಳುವೆ ಎಂದಿರುವುದಂತೂ ಇಬ್ಬಂದಿತನದ ದ್ಯೋತಕವೇ. ಜಗತ್ತು ಆರ್ಥಿಕವಾಗಿ ಬೆಳವಣಿಗೆಗೆ ಎಲ್ಲ ಸಭ್ಯಮಾರ್ಗಗಳ ಮೊರೆ ಹೋಗುತ್ತಿರುವಾಗ ಒಂದು ರಾಜ್ಯದ ವಸ್ತು ಮಾರಲು ಬಿಡೆವು ಎಂದು ಇನ್ನೊಂದು ರಾಜ್ಯದಲ್ಲಿ ಹಠಹಿಡಿದು ಕುಳಿತ ಪಕ್ಷ ರಾಷ್ಟ್ರೀಯ ಪಕ್ಷವೆನಿಸಿಕೊಳ್ಳಲು ಯೋಗ್ಯವಲ್ಲ. ಅಲ್ಲವೇನು!?

ಇನ್ನು ಮುಸಲ್ಮಾನರ ಮೇಲಿನ ಕಾಂಗ್ರೆಸ್ ಪಕ್ಷದ ಹಿಡಿತ ಮೆಚ್ಚಬೇಕಾದ್ದೇ‌. ಕೆಮ್ಮಿದ್ದಕ್ಕೂ, ಕ್ಯಾಕರಿಸಿದ್ದಕ್ಕೂ ಬೀದಿಗೆ ಬಂದು ನಿಲ್ಲುವ ಮುಸಲ್ಮಾನರು, ಆತಿಕ್ ಮೊಹಮ್ಮದನ ಸಾವಿಗೆ ಪ್ರತಿಕ್ರಿಯೆಯನ್ನೇ ಕೊಡಲಿಲ್ಲ ನೋಡಿದಿರಾ? ದೇಶದ ಮೂಲೆ-ಮೂಲೆಯಲ್ಲಿ ಸದ್ದುಮಾಡಿದ ಈ ಮಂದಿ ಕರ್ನಾಟಕದಲ್ಲಿ ಇಷ್ಟು ಮುಗುಮ್ಮಾಗಿರೋದು ಏಕೆ? ತಮ್ಮ ಗಲಾಟೆಯಿಂದ ಹಿಂದೂಗಳು ಒಗ್ಗಟ್ಟಾಗಿಬಿಡುವರೇನೋ ಎನ್ನುವ ಭಯ. ಮುಸಲ್ಮಾನರಿಂದ ಅವೈಜ್ಞಾನಿಕವಾದ ಮೀಸಲಾತಿಯನ್ನು ಕಿತ್ತುಕೊಂಡು ಗೌಡರು, ಪಂಚಮಸಾಲಿಗಳಿಗೆ ಬಿಜೆಪಿ ಹಂಚಿದಾಗಲೂ ಅವರು ತುಟಿಪಿಟಿಕ್ ಎನ್ನಲಿಲ್ಲ. ಏಕಿರಬಹುದು? ಈಗ ಗಲಾಟೆ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರಣವಾಗುವ ಬದಲು ಸಂಯಮ ಕಾಯ್ದುಕೊಂಡು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದು, ಆನಂತರ ಬೇಕಾದ ಆಟ ಆಡಿದರಾಯ್ತು ಎಂಬ ಉದ್ದೇಶವೇ ತಾನೇ? ದೇಶದಾದ್ಯಂತ ಮುಸಲ್ಮಾನರನ್ನು ಈ ರೀತಿ ನಿಯಂತ್ರಣದಲ್ಲಿರಿಸಿಕೊಳ್ಳುವ ಸಾಮರ್ಥ್ಯ ಇರೋದು ಕಾಂಗ್ರೆಸ್ಸಿಗೆ ಮಾತ್ರ. ಅಂದರೆ ಮುಸಲ್ಮಾನರು ನಡೆಸುವ ಅನೇಕ ದಂಗೆಗಳ ಹಿಂದೆ ಕೈವಾಡ ಯಾರದ್ದಿರಬೇಕು ಹೇಳಿ? ಇಲ್ಲವಾದರೆ ಅಖಂಡ ಶ್ರೀನಿವಾಸರಿಗೆ ಟಿಕೆಟ್ ತಪ್ಪಿಸಿ, ‘ಮುಸಲ್ಮಾನ ಮುಖಂಡರ ವಿರೋಧ ಇದ್ದದ್ದರಿಂದ’ ಅಂತ ಡಿಕೆಶಿ ಏಕೆ ಹೇಳುತ್ತಿದ್ದರು? ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಕಾಂಗ್ರೆಸ್ಸಿಗೆ ವೋಟು ನೀಡುವುದು ಅಂದರೆ ಮತ್ತೊಮ್ಮೆ ಮುಸಲ್ಮಾನರು ಅಟ್ಟಹಾಸ ನಡೆಸಿ ಬೀದಿಗಿಳಿಯುವುದು ಎಂದರ್ಥ, ಟಿಪ್ಪು ಜಯಂತಿಯ ವೈಭವ ರಾಜ್ಯದ ಮೂಲೆ-ಮೂಲೆಯಲ್ಲೂ ಕಾಣುವುದು ಎಂದರ್ಥ, ಸಾಲು-ಸಾಲು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾಗುವುದು ಎಂದರ್ಥ.

ಈ ಬಾರಿ ಹಣ ಚುನಾವಣೆಯಲ್ಲಿ ಕಾವೇರಿ ನೀರಿಗಿಂತ ಜೋರಾಗಿ ಹರಿಯಲಿದೆ. ಚುನಾವಣೆಗೂ ಮುಂಚಿನ ಮೂರ್ನಾಲ್ಕು ದಿನ ಮತದಾರರಿಗೆ ಹಬ್ಬ. ನಾಯಕರಿಂದ ಹಂಚಲೆಂದು ಹಣ ಪಡೆದವರ ಕಥೆಯನ್ನು ಕೇಳಲೇಬೇಡಿ. ಕಾಂಗ್ರೆಸ್ಸು ದುಡ್ಡಿರುವವರನ್ನು ಹುಡು-ಹುಡುಕಿ ಆರಿಸಿಕೊಂಡಿದೆ. ಅವರು ಆಕಾಂಕ್ಷಿಗಳಿಂದಲೇ ಎರಡೆರಡು ಲಕ್ಷ ಪೀಕಿ ಹತ್ತಾರು ಕೋಟಿ ಮಾಡಿಕೊಂಡವರಲ್ಲವೇ! ಬಿಜೆಪಿ ಟಿಕೆಟ್ ಹಂಚುವಾಗ ಬಹುತೇಕ ಬ್ಯಾಂಕ್ ಬ್ಯಾಲೆನ್ಸ್ ನೋಡಲಿಲ್ಲವೆಂಬುದು ಸುವಿದಿತ. ಹೀಗಾಗಿ ಇಲ್ಲಿನ ಬಹುತೇಕ ಹೊರೆ ಬೊಮ್ಮಾಯಿಯವರೇ ಹೊರಬೇಕೇನೋ! ಪ್ರಜಾಪ್ರಭುತ್ವವಾದ್ದರಿಂದ ಚುನಾವಣೆಯ ನೆಪದಲ್ಲಿ ಪ್ರತಿಯೊಬ್ಬರೂ ಅಧಿಕಾರದಲ್ಲಿದ್ದಾಗ ಗಳಿಸಿದ್ದನ್ನು ಕಕ್ಕಲೇಬೇಕು. ಮೊದಲೆಲ್ಲ ಸ್ವಲ್ಪ ಕೊಟ್ಟರೆ ಸಾಕಿತ್ತು. ಈಗ ಇತರೆಲ್ಲ ಕ್ಷೇತ್ರಗಳಂತೆ ಇಲ್ಲೂ ಸಾಕಷ್ಟು ಸ್ಪರ್ಧೆ ಏರ್ಪಟ್ಟಿರುವುದರಿಂದ ಸಣ್ಣ-ಪುಟ್ಟ ಮೊತ್ತಕ್ಕೆ ಮತದಾರನೂ ಬಾಗಲಾರ. ಎಂತಹ ದುರಂತ ಅಲ್ಲವೇ! ಈ ಲೇಖನದ ಮುಕ್ಕಾಲುಭಾಗ ಜಾತಿ, ಹಣ, ಹೆಂಡಗಳೆಂಬ ಕೊಳಕು ಸಂಗತಿಯದ್ದೇ ಚರ್ಚೆಯಾಯ್ತು.

ವಾಸ್ತವವಾಗಿ, ಚುನಾವಣೆಯ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಗೆ ನಾವೂ ಸಿದ್ಧವಾಗಬೇಕು. ಯಾವ ವ್ಯಕ್ತಿಗೂ ಸತತ ಎರಡನೇ ಬಾರಿ ಗೆದ್ದನಂತರ, ಮೂರನೇ ಬಾರಿ ಟಿಕೆಟ್ ನೀಡಬಾರದು. ಹತ್ತು ವರ್ಷ ಶಾಸಕನಾಗಿಯೂ ಏನನ್ನೂ ಕಡಿದು ಗುಡ್ಡೆ ಹಾಕದವ, ಮುಂದಿನ ಹತ್ತು ವರ್ಷದಲ್ಲಿ ಅದೇನು ಮಹಾ ಸಾಧಿಸಬಲ್ಲ ಹೇಳಿ? ಸತತ ಐದು ಬಾರಿ ಶಾಸಕ ಎನ್ನುವುದು ಹೆಗ್ಗಳಿಕೆಯಲ್ಲ. ಐದಾರು ಬಾರಿ ಶಾಸಕನಾದರೂ ಕ್ಷೇತ್ರವಿನ್ನೂ ಹಾಗೆಯೇ ಇದೆಯಲ್ಲ ಎಂಬ ಕಾರಣಕ್ಕೆ ಆ ಪ್ರತಿನಿಧಿ ಆತ್ಮಹತ್ಯೆ ಮಾಡಿಕೊಳ್ಳಬೇಕು, ಅಲ್ಲವೇನು? ಜಾತಿಯ ಆಧಾರದ ಮೇಲೆ ಟಿಕೆಟ್ ಹಂಚುವುದಾದರೆ ಸಣ್ಣ-ಪುಟ್ಟ ಜಾತಿಗಳ ಪ್ರತಿಭಾವಂತರು ಎಂದೂ ರಾಜಕೀಯಕ್ಕೆ ಬರಲೇಬಾರದೇನು? ಅವರು ನೇತೃತ್ವವಹಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಡೆಸುವ ಕನಸು ಕಾಣಲೇಬಾರದೇನು? ಇದು ಮತದಾರರಾಗಿ ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಪ್ರತಿಭಾವಂತನಿಗೆದುರಾಗಿ ನನ್ನ ಜಾತಿಯ ದಡ್ಡನನ್ನೂ, ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದವನನ್ನೂ, ಪರಮಭ್ರಷ್ಟನನ್ನೂ ಆಯ್ದುಕೊಳ್ಳುತ್ತೇನೆಂದರೆ ಅದಕ್ಕಿಂತ ಹೇಸಿಗೆ ಯಾವುದಿದೆ! ದುರಂತ ಏನು ಗೊತ್ತೇ? ಹೀಗೆ ಜಾತಿಯವರನ್ನು ಆರಿಸಿಕೊಳ್ಳೋದು ಸಮಾಜದ ದಡ್ಡರೆಂದುಕೊಳ್ಳಬೇಡಿ, ಬುದ್ಧಿವಂತರೂ ಕೂಡ. ಎಲ್ಲವನ್ನೂ ತ್ಯಾಗ ಮಾಡಿ ಸನ್ಯಾಸ ಸ್ವೀಕರಿಸಿದ ಸ್ವಾಮಿಗಳೂ ತಮ್ಮ ಜಾತಿಗಾಗಿ ಲಾಬಿ ಮಾಡುವುದನ್ನು ನೋಡಿದಾಗ ತ್ಯಾಗವೆಂಬ ಪದ ಅದೆಷ್ಟು ಮೌಲ್ಯ ಕಳಕೊಂಡಿದೆ ಎಂದು ಅರಿವಾಗುತ್ತದೆ.

ಆದರೆ ಕಾರ್ಮೋಡದ ನಡುವೆಯೂ ಒಂದು ಬೆಳ್ಳಿರೇಖೆ ಯಾವುದು ಗೊತ್ತೇ? ಅದು ನರೇಂದ್ರಮೋದಿಯೇ‌. ಅವರು ಯಾವ ಜಾತಿಯವರೆಂದು ಅನೇಕರಿಗೆ ಗೊತ್ತಿಲ್ಲ. ಅವರು ತಮ್ಮ ಜಾತಿಯವರೆಂದು ಯಾರನ್ನೂ ಮಂತ್ರಿ ಮಾಡಿದ ಉದಾಹರಣೆ ಇಲ್ಲ. ಅವರೆಂದಿಗೂ ತಮ್ಮ ಜಾತಿಯ ಮಠಾಧೀಶನಿಗೆ ಮತ್ತೆ-ಮತ್ತೆ ಹೋಗಿ ಅಡ್ಡಬಿದ್ದುದನ್ನು ಕಂಡವರಿಲ್ಲ. ತಥಾಕಥಿತ ಮೇಲ್ವರ್ಗದ ಮಠಾಧೀಶರಿರಲಿ, ಕೆಳವರ್ಗದವರೇ ಇರಲಿ ಮೋದಿ ಎದುರು ನಿಂತಾಗ ಗೌರವದಿಂದ ನಮಿಸುತ್ತಾರೆ. ಜನರೂ ಅಷ್ಟೇ, ಮೋದಿಯ ಭಾವಚಿತ್ರ ಕೊಳಕಾಗಿದ್ದರೆ ತಮ್ಮ ಬಟ್ಟೆಯಿಂದಲೇ ಅದನ್ನು ಒರೆಸಿ, ‘ದೇವರಪ್ಪಾ’ ಅಂತಾರೆ. ಅವರು ಜಾತಿಯ ವಿಷಯ ತೆಗೆಯಲಿಲ್ಲ, ಹಣದ ಮಾತೆತ್ತಲಿಲ್ಲ. ಭಾರತದ ಮೌಲ್ಯಗಳಿಗೆ ತಕ್ಕಂತೆ ಬದುಕಿದರು. ಭೂಮಿಗೆ ಹತ್ತಿರವಾಗಿ ಬದುಕಿದರು. ಹೀಗಾಗಿಯೇ ಅವರು ಪ್ರಧಾನಿಯಾಗಿರುವುದನ್ನು ಎಲ್ಲ ಜಾತಿಯ, ಎಲ್ಲ ವರ್ಗದ ಮತ್ತು ಎಲ್ಲ ಪಕ್ಷದ ಜನ ಸಂಭ್ರಮಿಸುತ್ತಾರೆ. ಜಾತಿಯ ಕಾರಣಕ್ಕೆ ಮುಖ್ಯಮಂತ್ರಿಯ ಪಟ್ಟದಲ್ಲಿ ಕುಳಿತುಕೊಳ್ಳಬೇಕು ಎನ್ನುವವರಿಗೆ ಇವೆಲ್ಲ ಅರ್ಥವಾಗೋದು ಬಹಳ ಕಷ್ಟ.

ಮೋದಿ ಕರ್ನಾಟಕಕ್ಕೆ ಬರಲಿದ್ದಾರೆ. ಇನ್ನು ಕೆಲವು ದಿನ ಮತ್ತೆ ಮತ್ತೆ ಬರಲಿದ್ದಾರೆ. ಅವರು ಬರುವವರೆಗೆ ಅಷ್ಟೇ ಉಳಿದವರ ಹವಾ. ಅವರು ಬಂದಮೇಲೆ ಅವರದ್ದೇ ಹವಾ. ಆ ತಣ್ಣನೆ ಗಾಳಿ ಜೋರಾಗಿ ಬೀಸಲಿ, ಬಿಸಿಲ ಬೇಗೆಯನ್ನು ಕಡಿಮೆ ಮಾಡಿ ರಾಜ್ಯಕ್ಕೆ ತಂಪು ತರುವವರನ್ನು ಅಧಿಕಾರಕ್ಕೆ ಕೂಡಿಸಲಿ. ಏನಂತೀರಿ?

‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

ಅಸದ್ ಅಹ್ಮದ್ ಮತ್ತು ಗುಲಾಮ್ ಮೊಹಮ್ಮದ್ ಇವರಿಬ್ಬರ ಎನ್ಕೌಂಟರ್ ಉತ್ತರ ಪ್ರದೇಶದಲ್ಲಿ ಆಗುತ್ತಿದ್ದಂತೆ ದೇಶದೆಲ್ಲೆಡೆ ಸಂಚಲನ ಮೂಡಿತ್ತು. ಅದರ ಕುರಿತಂತೆ ಲೇಖನ ಬರೆಯಬೇಕು ಎನ್ನುವಷ್ಟರಲ್ಲಿ ಅವರಪ್ಪ ಆತಿಕ್ ಅಹಮ್ಮದ್‌ನ ಹೆಣ ಬಿದ್ದಿದೆ. ಮೇಲ್ನೋಟಕ್ಕೆ ಇದು ಬಾಡಿಗೆ ಹಂತಕರು ಮಾಡಿರುವ ಹತ್ಯೆ ಎಂಬುದು ಗೋಚರವಾಗುತ್ತದಾದರೂ ಅನೇಕ ಮಾಧ್ಯಮಮಂದಿ ಮತ್ತು ಭಯೋತ್ಪಾದಕರ ಕುರಿತಂತೆ ಅನುಕಂಪ ಹೊಂದಿರುವ ಮಂದಿ ಯೋಗಿ ಆದಿತ್ಯನಾಥರ ಕೈವಾಡವೆಂದು ಶಂಕಿಸುತ್ತಿದ್ದಾರೆ. ಆದರೆ ಒಂದಂತೂ ನಿಜ. ಆತಿಕ್‌ನ ಸಾವು ಬರಲಿರುವ ಘೋರ ವಿಪತ್ತಿನ ಸಣ್ಣ ಮುನ್ಸೂಚನೆ ಎಂದೆನಿಸುತ್ತದೆ. ಲೇಖನದುದ್ದಕ್ಕೂ ಅದು ಹೇಗೆಂದು ವಿವರಿಸಲು ಯತ್ನಿಸುವೆ. 

ಹಾಗೆ ನೋಡಿದರೆ ಆತಿಕ್ ಸಂತನೇನೂ ಅಲ್ಲ. ಪಾಲ್ಘರ್‌ನಲ್ಲಿ ಸಾಧುಗಳ ಹತ್ಯೆಯಾದಾಗ ಮಿಸುಕಾಡದ ಮಂದಿಯೆಲ್ಲ ಆತಿಕ್‌ನ ಹತ್ಯೆಯ ಕುರಿತಂತೆ ವ್ಯಕ್ತಪಡಿಸುತ್ತಿರುವ ಅನುಕಂಪದ ಪ್ರಮಾಣವನ್ನು ನೋಡಿದರೆ, ಅವರೆಲ್ಲರ ಪಾಲಿಗೆ ಆತ ಮಹಾತ್ಮಾ ಗಾಂಧೀಯೇನೊ ಎನಿಸುತ್ತಿದೆ. 43 ವರ್ಷಗಳಲ್ಲಿ ಆತಿಕ್‌ನ ಮೇಲೆ ನೂರಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಪಹರಣ, ಮಾನಭಂಗ, ದರೋಡೆಯಂಥವಲ್ಲದೇ ಕೊಲೆ ಪ್ರಕರಣಗಳೂ ಇವೆ. ಈ 43 ವರ್ಷಗಳಲ್ಲಿ ಅವನನ್ನು ಒಂದೇ ಒಂದು ಕೇಸಿನಲ್ಲಿ ಜೈಲಿಗೆ ತಳ್ಳುವುದು ಸಾಧ್ಯವಾಗಿರಲಿಲ್ಲ. ಆತನ ಕೇಸನ್ನು ಕೈಗೆತ್ತಿಕೊಳ್ಳುವುದಿಲ್ಲವೆಂದು ಅನೇಕ ಬಾರಿ ನ್ಯಾಯಾಧೀಶರುಗಳೇ ಕೈಚೆಲ್ಲಿ ಎದ್ದುಹೋದ ಉದಾಹರಣೆಯಿದೆ. ಯಾವುದಾದರೂ ಒಬ್ಬ ನ್ಯಾಯಾಧೀಶರು ಧೈರ್ಯ ಮಾಡಿ ವಿಚಾರಣೆಗೆ ನಿಂತರೆ ಅವನಿಗೆ ಜಾಮೀನು ಕೊಟ್ಟು ಮನೆಗೆ ಕಳಿಸುವುದಷ್ಟೇ ಅಲ್ಲದೇ ಬೇರೇನೂ ಮಾಡುತ್ತಿರಲಿಲ್ಲ. ನಿಮಗೆ ಅಚ್ಚರಿಯಾಗಬಹುದು. ಈ ಕೊಲೆಗಡುಕ ಐದು ಬಾರಿ ಶಾಸಕನಾಗಿದ್ದ! ಮೂರು ಬಾರಿ ಪಕ್ಷೇತರನಾಗಿ, ಒಮ್ಮೆ ಸಮಾಜವಾದಿ ಪಾರ್ಟಿಯಿಂದ, ಮತ್ತೊಮ್ಮೆ ಅಪ್ನಾದಲ್ ಪಾರ್ಟಿಯಿಂದ ಆಯ್ಕೆಯಾಗಿದ್ದ. 2004ರಲ್ಲಿ ಸಮಾಜವಾದಿ ಪಕ್ಷದಿಂದಲೇ ಸಂಸತ್ ಸದಸ್ಯನಾಗಿದ್ದ ಈತ ಪಾರ್ಟಿ ಹೊರಹಾಕಿದ ಮೇಲೆ 2009ರಲ್ಲಿ ಅಪ್ನಾದಲ್‌ನಿಂದ ಆಯ್ಕೆಯಾಗಿದ್ದ. 2012ರಲ್ಲಿ ಜೈಲಿನಿಂದಲೇ ಸ್ಪರ್ಧಿಸಿ 2005ರಲ್ಲಿ ತಾನೇ ಕೊಂದಿದ್ದ ರಾಜು ಪಾಲ್‌ ಪತ್ನಿಯ ಎದುರು ಸೋತಿದ್ದ. 2014ರಲ್ಲಿ ಸಮಾಜವಾದಿ ಪಕ್ಷ ಇಂತಹ ಕೊಲೆಗಡುಕ ಕ್ರಿಮಿನಲ್‌ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಸಂಸತ್ ಸದಸ್ಯನನ್ನಾಗಿಸುವ ಪ್ರಯತ್ನ ಮಾಡಿತ್ತು. ಮೋದಿ ಸುನಾಮಿಯಲ್ಲಿ ಅನೇಕ ಆತಿಕ್‌ಗಳು ಕೊಚ್ಚಿಹೋದರು. 

ಈಗ ಆತಿಕ್ ಸುದ್ದಿಯಾಗುತ್ತಿರುವುದೇಕೆಂದರೆ 2005ರಲ್ಲಿ ತನ್ನ ತಮ್ಮನ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದ ರಾಜುಪಾಲ್‌ನನ್ನು ಈತ ಶೂಟ್ಔಟ್‌ನಲ್ಲಿ ಕೊಂದಿದ್ದ. ಪ್ರತ್ಯಕ್ಷವಾಗಿ ಇದನ್ನು ನೋಡಿದ್ದ ಉಮೇಶ್ ಪಾಲ್ ಪೊಲೀಸರಿಗೆ ಎಲ್ಲ ವಿವರಗಳನ್ನೂ ಕೊಟ್ಟಮೇಲೆ, ಅಂದಿನ ಡಿಜಿಪಿ ಓಪಿಸಿಂಗ್ ಇವನ ಠಾಣ್ಯವನ್ನು ಹುಡುಕಿ ತನ್ನ ಪಡೆಯೊಂದಿಗೆ ಸುತ್ತುವರೆದು ನಿಂತಿದ್ದರು. ಕೆಲವೇ ನಿಮಿಷಗಳಲ್ಲಿ ಪೊಲೀಸರ ಸುತ್ತಲೂ ಆತಿಕ್ನ ಪಡೆ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ತೊಡೆ ತಟ್ಟಿಕೊಂಡು ನಿಂತುಬಿಟ್ಟಿತು. ಓಪಿಸಿಂಗ್ ನೇರವಾಗಿ ಆತಿಕ್‌ನನ್ನೇ ಹಿಡಿದು, ಪೊಲೀಸರ ಮೈಗೆ ಕೆರೆದ ಗಾಯವಾದರೂ ಇವನನ್ನು ಉಡಾಯಿಸಿಬಿಡುತ್ತೇನೆ ಎಂದಿದ್ದರು. ಎಲ್ಲವೂ ಥೇಟು ಸಿನಿಮಾದಂತೆಯೇ. ಆತನನ್ನು ಬಂಧಿಸಿ ಎಳೆದು ತರಬೇಕೆನ್ನುವಷ್ಟರಲ್ಲಿ ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಮಂದಿ ಒತ್ತಡ ತಂದು ಆತಿಕ್‌ನನ್ನು ಬಿಡಿಸಿಕೊಂಡರು! ಇತ್ತೀಚೆಗೆ ಓಪಿಸಿಂಗ್ ಇವೆಲ್ಲವನ್ನೂ ವಿವರವಾಗಿ ಹೇಳಿದ್ದಾರೆ. ತನ್ನ ವಿರುದ್ಧ ಇರಬಹುದಾಗಿದ್ದ ಸಾಕ್ಷಿ ಉಮೇಶ್ ಪಾಲ್‌ನನ್ನು ಮರುಕ್ಷಣವೇ ಅಪಹರಿಸಿ ತಂದ ಆತಿಕ್ ಹೊಡೆದು-ಬಡಿದು ಪೊಲೀಸರಿಗೆ ಆತ ಕೊಟ್ಟ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ಬರೆಸಿಕೊಂಡ. ಉಮೇಶ್ ಪಾಲ್ ಕೂಡ ಕಡಿಮೆ ಆಸಾಮಿಯಲ್ಲ. ಅವರಿಂದ ಬಿಡುಗಡೆಯಾಗಿ ಬಂದವನೇ ನೇರ ಪೊಲೀಸರ ಬಳಿಸಾರಿ ನಡೆದುದೆಲ್ಲವನ್ನೂ ಹೇಳಿ ಆತಿಕ್‌ನ ಕೊರಳಿಗೆ ಉರುಳನ್ನು ಗಟ್ಟಿಯಾಗಿಯೇ ಬಿಗಿದ. 

ಕಳೆದ ಫೆಬ್ರವರಿ ತಿಂಗಳಲ್ಲಿ ಉಮೇಶ್ ಪಾಲ್‌ನ ಹೇಳಿಕೆಯಿಂದಾಗಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗಿರುವ ಆತಿಕ್‌ನ ಇಂದಿನ ಪರಿಸ್ಥಿತಿಗೆ ಪ್ರತೀಕಾರವಾಗಿ ಅವನ ಮಗ ಅಸದ್ ಉಮೇಶ್‌ನನ್ನು ಮುಗಿಸುವ ಸಂಚು ರೂಪಿಸಿದ. ಪೊಲೀಸರು ಆನಂತರ ಇವರೆಲ್ಲರನ್ನೂ ಬಂಧಿಸಿದಾಗ ಇವರ ಯೋಜನೆಯ ಒಟ್ಟಾರೆ ರೂಪುರೇಷೆಗಳು ಹೊರಬಂದಿದೆ. 12 ಐಫೋನ್‌ಗಳನ್ನು ಆತಿಕ್‌ನ ಹೆಂಡತಿ ಯೋಜನೆಯಲ್ಲಿ ಭಾಗಿಯಾದವರಿಗೆಲ್ಲ ಕೊಡಿಸಿದ್ದಳು. ಪ್ರತಿಯೊಬ್ಬರೂ ತಮಗೆ ಪ್ರತ್ಯೇಕ ಗುಪ್ತನಾಮ ಕೊಟ್ಟುಕೊಂಡಿದ್ದರು. ಸಲ್ಮಾನ್ ಖಾನನ ಆರಾಧಿಸುತ್ತಿದ್ದ ಅಸದ್ ತನ್ನ ಹೆಸರನ್ನು ರಾಧೆ ಎಂದಿಟ್ಟುಕೊಂಡಿದ್ದನಂತೆ. ಸಲ್ಮಾನನ ಇತ್ತೀಚಿನ ಸಿನಿಮಾದ ಹೆಸರು ಅದು. ಇವರೆಲ್ಲರೂ ಐ ಮೆಸೇಜ್‌ಗಳ ಮೂಲಕ ಮಾತ್ರ ಚರ್ಚೆ ನಡೆಸುತ್ತಿದ್ದರು. ಗುಂಡು ಹೊಡೆಯುವವ, ಬಾಂಬ್ ಎಸೆಯುವವ, ಚಲನ-ವಲನಗಳ ಮಾಹಿತಿ ನೀಡುವವ, ಹೀಗೆ ಎಲ್ಲರಿಗೂ ಪ್ರತ್ಯೇಕವಾದ ಜವಾಬ್ದಾರಿ ನೀಡಲಾಗಿತ್ತು. ಉಮೇಶ್‌ಪಾಲ್‌ನ ಮೇಲೆ ಇವರು ದಾಳಿ ಮಾಡುವಾಗ ಎಲ್ಲ ಎಚ್ಚರಿಕೆಯನ್ನೂ ಇಟ್ಟುಕೊಂಡಿದ್ದರಾದರೂ ಸಿಕ್ಕ ಸಿಸಿಟಿವಿ ಕಡತಗಳ ಆಧಾರದ ಮೇಲೆ ಪೊಲೀಸರು ಇವರ ವಿರುದ್ಧ ಬಲೆ ಬೀಸಿದರು. ಸದನದಲ್ಲಿ ಈ ಕುರಿತಂತೆ ಕೋಲಾಹಲವೆದ್ದಿತು. ಮಾಫಿಯಾ ಡಾನ್‌ಗಳನ್ನು ಸಾಕಿ ಸಲಹಿದ ಸಮಾಜವಾದಿ ಪಕ್ಷಕ್ಕೆ ಸರಿಯಾಗಿಯೇ ತಪರಾಕಿ ಕೊಟ್ಟ ಯೋಗಿ, ಪ್ರತಿಯೊಬ್ಬ ಗೂಂಡಾನನ್ನು ಹುಡುಹುಡುಕಿ ಕೊಲ್ಲಲಾಗುವುದು ಎಂದಿದ್ದರು. ಆದಷ್ಟು ಬೇಗ ಈ ಸಾವಿಗೆ ಕಾರಣರಾದ ಗೂಂಡಾಗಳನ್ನು ಹಿಡಿಯುವುದು, ಅಗತ್ಯವಿದ್ದರೆ ಮುಗಿಸಿಬಿಡುವುದು ಅತ್ಯವಶ್ಯಕವಾಗಿತ್ತು. ಪೊಲೀಸರು ಚುರುಕಾದರು. ಭಿನ್ನ-ಭಿನ್ನ ತಂಡಗಳನ್ನು ರಚಿಸಿಕೊಂಡು 40 ದಿನಗಳ ಕಾಲ ಈ ಗೂಂಡಾಗಳನ್ನು ಅಟ್ಟಿಸಿಕೊಂಡು ಹೋದರು. ಇತರರನ್ನು ಕೊಲ್ಲುವಾಗ ಮೆರೆದಾಡುತ್ತಿದ್ದ ಅಸದ್ ಮತ್ತವನ ಸಹಚರರು ಪೊಲೀಸರು ಅಟ್ಟಿಸಿಕೊಂಡು ಬಂದಾಗ ನೀರಲ್ಲದ್ದಿದ ಬೆಕ್ಕಿನಂತಾಗಿಬಿಟ್ಟಿದ್ದರು. ಈ ತಂಡದ ಸದಸ್ಯರನೇಕರ ಮನೆಗಳನ್ನು ಬುಲ್ಡೋಜ್ ಮಾಡಿದ ಬಾಬಾ ಗೂಂಡಾಗಳ ಎದೆಯಲ್ಲಿ ಭಯ ಅವತರಿಸುವಂತೆ ಮಾಡಿಬಿಟ್ಟರು. ಈ ವೇಳೆಗಾಗಲೇ ಆತಿಕ್‌ನ ಅನೇಕ ಸೋದರ ಸಂಬಂಧಿಗಳು ಜೈಲು ಸೇರಿಯಾಗಿತ್ತು. ಆತಿಕ್‌ನ ಹೆಂಡತಿ ಮತ್ತು ತಮ್ಮನ ಹೆಂಡತಿಯರು ಉಟ್ಟಬಟ್ಟೆಯಲ್ಲಿ ಊರುಬಿಟ್ಟು ಓಡಿ ಹೋಗಿದ್ದರು. ಒಂದು ಕಾಲದಲ್ಲಿ ಉತ್ತರಪ್ರದೇಶವೇ ತಮ್ಮದೆಂದು ಮೆರೆದಾಡುತ್ತಿದ್ದವರೆಲ್ಲ ಈಗ ಬದುಕಿದೆಯಾ ಬಡಜೀವವೇ ಎಂಬಂತಾಗಿದ್ದರು. ಇಂತಹ ಒಂದು ಹೊತ್ತಲ್ಲಿಯೇ ಪೊಲೀಸರ ಕೈಗೆ ಸಿಕ್ಕುಬಿದ್ದ ಅಸದ್ ಎರ್ರಾಬಿರ್ರಿ ಗುಂಡು ಹಾರಿಸತೊಡಗಿದ. ಪೊಲೀಸರು ಮುಲಾಜು ನೋಡದೇ ಅಸದ್ ಮತ್ತು ಗುಲಾಮ್ ಇಬ್ಬರನ್ನೂ ನಡುರಸ್ತೆಯಲ್ಲಿಯೇ ಹೆಣವಾಗಿಸಿಬಿಟ್ಟರು! ಇತ್ತ ಜೈಲಿನಲ್ಲಿದ್ದ ಆತಿಕ್, ‘ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸರನ್ನು ನಾನು ಬಿಡುವುದಿಲ್ಲ. ಒಮ್ಮೆ ಜೈಲಿನಿಂದ ಹೊರಬಂದಮೇಲೆ ಗದ್ದಿಜಾತಿಯ ತಾಕತ್ತನ್ನು ತೋರಿಸುತ್ತೇನೆ’ ಎಂದಿದ್ದ. ಗಮನಿಸಬೇಕಾದ ಸಂಗತಿ ಇದು. ಸ್ವತಃ ವೈರ್ನ ಸಂಪಾದಕಿ ಅರ್ಫಾ ಖನ್ನುಂ ಆತಿಕ್ ಅಹ್ಮದ್‌ನನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಸಲ್ಮಾನರಲ್ಲಿಯೇ ಹಿಂದುಳಿದ ಜಾತಿಯಾದ ಗದ್ದಿ ಜನಾಂಗದವರಿಗೆ ಮಾಡುತ್ತಿರುವ ಅವಮಾನ ಎಂದಿದ್ದಳು. ‘ನಾವೆಲ್ಲ ಒಂದೆ ಜಾತಿ, ಒಂದೆ ಕುಲ’ ಎನ್ನುವ ಮುಸಲ್ಮಾನರು ಇಂತಹ ಸಂದರ್ಭಗಳಲ್ಲಿ ಜಾತಿಯ ಕಾರ್ಡ್ ಬಳಸಲು ಹಿಂದೆ-ಮುಂದೆ ನೋಡುವುದಿಲ್ಲ. ಕೆಲವು ಪತ್ರಕರ್ತರು ಅದೆಷ್ಟು ಲಜ್ಜೆಗೆಟ್ಟವರೆಂದರೆ, ರಾಜ್‌ದೀಪ್ ಸರ್‌ದೇಸಾಯಿ ಲಲ್ಲನ್‌ಟಾಪ್‌ನ ಸಂದರ್ಶನವೊಂದರಲ್ಲಿ ಆತಿಕ್ ಮನೆಯಲ್ಲಿ ತಿಂದ ತಂದೂರಿ ಎಷ್ಟು ಚೆನ್ನಾಗಿತ್ತು ಎಂದು ವರ್ಣಿಸಿದ್ದ. ಮಾಫಿಯಾ ಡಾನ್‌ಗೂ ಒಂದೊಳ್ಳೆ ಮುಖವಿದೆ ಎಂದು ಹೇಳುವ ಪ್ರಯತ್ನ ಅದು. 

ಇಲ್ಲಿಯವರೆಗೂ ಎಲ್ಲವೂ ಸರಿಯೇ. ಆದರೆ ಆತಿಕ್‌ನ ಹತ್ಯೆಯಾದದ್ದು ಮಾತ್ರ ಗಾಬರಿ ಹುಟ್ಟಿಸುವಂಥದ್ದು. ಮಾಧ್ಯಮದ ಎದುರಿಗೆ, ಪೊಲೀಸರ ನಡುವೆಯೇ ಅತ್ಯಾಧುನಿಕ ಶಸ್ತ್ರ ಹಿಡಿದುಬಂದು ಆಕ್ರಮಣ ಮಾಡುತ್ತಾರೆಂದರೆ ಇದರ ಹಿಂದೆ ದೊಡ್ಡದೊಂದು ಪಿತೂರಿ ಇರಲೇಬೇಕು. ಇಷ್ಟಕ್ಕೂ ಭಾರತದಲ್ಲಿ ನಾಯಕತ್ವ ಬದಲಾವಣೆಗೆ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಪೂರ್ವಭಾವಿಯಾಗಿ ಅಮೇರಿಕಾ ಎರಿಕ್ ಗಾರ್ಸಿಟಿಯನ್ನು ರಾಯಭಾರಿಯಾಗಿ ಭಾರತಕ್ಕೆ ಕಳಿಸಿತು. ಆತನನ್ನು ಈ ಹುದ್ದೆನೀಡಿ ಕಳಿಸಬೇಕೆಂದು 2021ರ ಮಧ್ಯಭಾಗದಲ್ಲಿಯೇ ನಿಶ್ಚಯಿಸಲಾಗಿತ್ತು. ಆದರೆ ಅಮೇರಿಕಾದ ಸೆನೆಟ್‌ನಲ್ಲಿ ಬಹುಮತವಿರದಿದ್ದುದರಿಂದ ಬೈಡನ್ ತಡೆ ಹಿಡಿದಿದ್ದ. ಬಹುಮತ ಖಾತ್ರಿಯಾದೊಡನೆ ಭಾರತಕ್ಕೆ ಕಳಿಸುವ ನಿಶ್ಚಯ ಮಾಡಿದ. ಈ ಎರಿಕ್ ಲಾಸ್ ಏಂಜಲೀಸ್‌ನ ಮೇಯರ್ ಆಗಿದ್ದವ ಮತ್ತು ಅಲ್ಲಿನ ಬುದ್ಧಿಜೀವಿಗಳ ಕಣ್ಮಣಿ. ಆತನ ಪತ್ನಿಯೊಂದಿಗೆ ಸೇರಿ ಅನೇಕ ಪ್ರತಿಭಟನೆಗಳಲ್ಲಿ ಆತ ಪಾಲ್ಗೊಂಡಿದ್ದಾನೆ. ಸಿಎಎ ವಿರುದ್ಧ ಭಾರತದಲ್ಲಿ ಪ್ರತಿಭಟನೆ ನಡೆಯುವಾಗ ಗಂಡ-ಹೆಂಡತಿ ಇಬ್ಬರೂ ಪ್ರತ್ಯಕ್ಷ-ಪರೋಕ್ಷವಾಗಿ ಅದರಲ್ಲಿ ಭಾಗಿಯಾಗಿದ್ದರು. ಆತನನ್ನು ರಾಯಭಾರಿ ಎಂದು ಘೋಷಿಸಿದೊಡನೆ ಆತ ಹೇಳಿದ್ದೇನು ಗೊತ್ತೇ? ‘ನನ್ನ ಅತ್ಯಂತ ಪ್ರಮುಖವಾದ ಕೆಲಸವೇ ಸಿಎಎ ಬಗೆಯ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ಮಾನವ ಹಕ್ಕುಗಳ ಸ್ಥಾಪನೆ ಮಾಡುವುದು. ಯಾರು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೋ ಅಂಥವರೊಡನೆ ನೇರವಾಗಿ ಮಾತುಕತೆಯಲ್ಲಿ ತೊಡಗುವುದು’ ಎಂದಿದ್ದ. ಇದರರ್ಥ ನೇರವಾಗಿ ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ಮೋದಿ ವಿರೋಧಿಗಳನ್ನೆಲ್ಲ ತನ್ನ ದೂತಾವಾಸದ ಛತ್ರಛಾಯೆಯಲ್ಲಿ ಒಂದುಗೂಡಿಸುವುದು ಅಂತ! ಉಕ್ರೇನ್‌ನಲ್ಲಿ ಅಮೇರಿಕಾ ತನ್ನ ಪ್ರಭಾವ ಬಳಸಿ ಅಲ್ಲಿನ ರಾಷ್ಟ್ರೀಯವಾದಿ ಅಧ್ಯಕ್ಷನನ್ನು ಅಧಿಕಾರದಿಂದ ಕೆಳಗಿಳಿಸಿ ಕೈಗೊಂಬೆಯಾಗಿರುವ ಶತಮೂರ್ಖ ಜೆಲ್ಸೆಂಕಿಯನ್ನು ಕೂರಿಸಿತಲ್ಲ, ಭಾರತದಲ್ಲೂ ಹಾಗೆ ಮಾಡುವ ಯೋಜನೆ ಅದರದ್ದು. ಮೋದಿಯನ್ನು ಕೆಳಗಿಳಿಸಿದ ನಂತರ ಜೆಲ್ಸೆಂಕಿಯಷ್ಟೇ ಮೂರ್ಖನೂ ಮತ್ತು ಕೈಗೊಂಬೆಯೂ ಆಗಬಲ್ಲ ನಾಯಕ ಯಾರಿರಬಹುದು ಹೇಳಿ?

ಅಮೇರಿಕಾ ಭಾರತದಲ್ಲಿ ದೊಡ್ಡ ತಳಮಳವನ್ನು ಸೃಷ್ಟಿಸುವ ಧಾವಂತದಲ್ಲಿದೆ. ಸಿಎಎ ವಿರುದ್ಧದ ಹೋರಾಟ ಅದಕ್ಕೊಂದು ಅಸ್ತ್ರವಾಗಿ ದೊರಕಿತ್ತು. ಸರ್ಕಾರ ಅದನ್ನು ನಿಭಾಯಿಸಿದ ರೀತಿ ಮತ್ತು ಅದನ್ನು ಜಾರಿಗೆ ತರುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯಿಂದಾಗಿ ಅಮೇರಿಕಾ ಪತರಗುಟ್ಟಿದೆ. ಹೀಗಾಗಿಯೇ ಅನವಶ್ಯಕವಾಗಿ ರಾಮನವಮಿಯ ಮೆರವಣಿಗೆಯ ಮೇಲೆ ಕಲ್ಲೆಸೆದು ಹಿಂದೂಗಳನ್ನು ಭಡಕಾಯಿಸುವ ಯೋಜನೆ ರೂಪಿಸುತ್ತಿರೋದು. ಪಿಎಫ್ಐ ನಿಷೇಧದ ನಂತರ ಈ ಯೋಜನೆಗಳನ್ನೆಲ್ಲ ನೇರವಾಗಿ ಕಾರ್ಯರೂಪಕ್ಕೆ ತರುವ ಒಂದು ಸಂಸ್ಥೆ ಇಲ್ಲವಾಗಿ ಅಮೇರಿಕಾ ಚಡಪಡಿಸುತ್ತಿದೆ. ಹೀಗಾಗಿಯೇ ಮೂರ್ಖರಂತಿರುವ ಈ ಮಂದಿಯನ್ನು ಭಡಕಾಯಿಸಲು ಭಿನ್ನ-ಭಿನ್ನ ಪ್ರಯತ್ನಗಳನ್ನು ಮಾಡುತ್ತಿರೋದು. ಅದರ ಒಂದು ಭಾಗವೇ ಆತಿಕ್‌ನ ಹತ್ಯೆ! 

ಅದಾಗಲೇ ಓವೈಸಿ, ಸರ್ಕಾರ ಬೇಕಂತಲೇ ಈ ಕೆಲಸವನ್ನು ಮಾಡಿಸಿದೆ ಎಂದು ಹೇಳಿಕೆ ನೀಡಿಬಿಟ್ಟಿದ್ದಾನೆ. ಮುಸಲ್ಮಾನರ ಪರವಾಗಿ ಸದಾ ನಿಲ್ಲುತ್ತಿದ್ದ ಆತಿಕ್‌ನಂಥವನನ್ನು ಪರಿವಾರ ಸಮೇತವಾಗಿಯೇ ಮುಗಿಸುತ್ತಾರೆಂದರೆ ಇನ್ನು ಸಾಮಾನ್ಯ ಮುಸಲ್ಮಾನನ ಕಥೆಯೇನು? ಎಂಬ ಪ್ರಶ್ನೆಯನ್ನು ಹಿಂಸೆ ತುರುಕುವ ಮಸೀದಿಗಳಲ್ಲಿ ಕೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಈ ಕೋಮು ಶಾಂತಿಯಿಂದ ಕೂಡಿರಬಹುದೇನೊ. ಆದರೆ ಇತರೆ ರಾಜ್ಯಗಳಲ್ಲಿ ಇದು ತೀವ್ರಸ್ವರೂಪ ಪಡೆದುಕೊಳ್ಳುತ್ತದೆ, 2024ರ ವೇಳೆಗೆ ಸಾಕಪ್ಪ, ಸಾಕು ಎನಿಸುವಷ್ಟರಮಟ್ಟಿಗೆ. ಇದಕ್ಕೆ ಪೂರಕವಾಗಿ ನ್ಯಾಯ ವ್ಯವಸ್ಥೆಯನ್ನೂ ಕೂಡ ಇವರು ಬಳಸಿಕೊಳ್ಳುತ್ತಿದ್ದಾರೆ. ಅದಾನಿಯ ವಿರುದ್ಧ ಅನವಶ್ಯಕವಾಗಿ ಸುಪ್ರೀಂಕೋರ್ಟು ರೂಪಿಸಿರುವ ತಂಡವನ್ನು ನೋಡಿದರೆ ಗೊತ್ತಾಗುತ್ತದೆ. ಇತ್ತೀಚೆಗೆ ನ್ಯಾಯಾಧೀಶರೊಬ್ಬರು ಪ್ರಧಾನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಶಕ್ತಿ ನಮಗೆ ಬೇಕು ಎಂದು ಕೇಳಿಕೊಂಡಿದ್ದು ಗಮನಿಸಬೇಕಾದ್ದೇ. ಮುಖ್ಯ ನ್ಯಾಯಾಧೀಶರು ‘ಇನ್ನು ಮುಂದೆ ಯಾರಾದರೂ, ಯಾವ ಕ್ಷಣದಲ್ಲಾದರೂ ಮನೆ ಉರುಳಿಸುವ, ಸರ್ಕಾರ ತೊಂದರೆ ಕೊಡುವ ವಿಚಾರದ ಕುರಿತಂತೆ ನೇರವಾಗಿ ನಮ್ಮ ಬಾಗಿಲು ಬಡಿಯಬಹುದು’ ಎಂದು ಹೇಳಿಕೆ ಕೊಟ್ಟಿರುವುದು ಸ್ಪಷ್ಟವಾಗಿ ಈ ಪ್ರತ್ಯೇಕತಾವಾದಿಗಳಿಗೆ ಶಕ್ತಿ ತುಂಬುವ ಪ್ರಕ್ರಿಯೆಯೇ. ಮುಸಲ್ಮಾನರನ್ನೇ ಮುಂದಿಟ್ಟುಕೊಂಡರೆ ಹಿಂದೂಗಳು ಒಟ್ಟಾಗಿ ನರೇಂದ್ರಮೋದಿಗೆ ವೋಟು ಹಾಕುವ ಸಂಭವವಿರುವುದರಿಂದ ಖಾಲಿಸ್ತಾನಿಗಳಿಗೆ ವಿಶೇಷ ಬೆಂಬಲವನ್ನು ಕೊಟ್ಟಿದ್ದು ಅಮೇರಿಕಾ-ಯುರೋಪುಗಳು. ಆದರೆ ಸರ್ಕಾರ ಅದನ್ನು ಸಂಭಾಳಿಸಿದ ರೀತಿ ಮಾತ್ರ ಮೆಚ್ಚಬೇಕಾದ್ದು. ಓಡಿ ಹೋದ ಖಾಲಿಸ್ತಾನೀ ನಾಯಕ ಅಮೃತ್‌ಪಾಲ್‌ಸಿಂಗ್ ತನ್ನ ತಾನು ಜನರ ನಡುವಿನ ಶ್ರೇಷ್ಠ ನಾಯಕ ಎಂದು ಬೊಗಳೆ ಕೊಚ್ಚಿಕೊಳ್ಳುತ್ತಿದ್ದ. ಅವನು ಕಾಣೆಯಾಗಿ ಇಷ್ಟು ದಿನ ಕಳೆದರೂ ಪಂಜಾಬಿನಲ್ಲಿ ಆತನ ಕುರಿತಂತೆ ನಯಾಪೈಸೆ ಚರ್ಚೆಯಿಲ್ಲ ಎಂದಾಗಲೇ ಇವನ ಯೋಗ್ಯತೆ ಅರಿವಾಗಿರಬೇಕು. 

ಆತಿಕ್ ಅಹ್ಮದ್ ತನ್ನ ಬಳಿ ಆಯುಧಗಳಿಗೆ ಬರವಿಲ್ಲವೆಂದೂ ಪಾಕಿಸ್ತಾನ ಡ್ರೋಣ್ ಮೂಲಕ ಪಂಜಾಬ್ ಗಡಿಗೆ ಅದನ್ನು ತಲುಪಿಸುವುದೆಂದೂ, ಕಾಶ್ಮೀರಿಗಳು ಅದನ್ನೇ ಬಳಸುತ್ತಾರೆ ಎಂದೂ ಹೇಳಿಕೆ ಕೊಟ್ಟಿದ್ದ. ಶತಾಯ-ಗತಾಯ ಪಂಜಾಬಿನಲ್ಲಿ ಅಧಿಕಾರ ನಡೆಸಬೇಕೆಂದು ಕೇಜ್ರಿವಾಲ್ ಪಣತೊಟ್ಟಿದ್ದೇಕೆಂದು ಅರ್ಥವಾಯ್ತೇನು? ಇನ್ನು ಕರ್ನಾಟಕದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯಲು ಹಾತೊರೆಯುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಐದು ವರ್ಷದ ಸರ್ಕಾರದ ನಂತರ ಭಾಜಪ ಅಧಿಕಾರಕ್ಕೆ ಬರದೇ ಹೋಗಿದ್ದರೆ, ಸಿದ್ದರಾಮಯ್ಯನವರೇ ಮತ್ತೊಮ್ಮೆ ಕುರ್ಚಿಯ ಮೇಲೆ ಕುಳಿತಿದ್ದರೆ, ಪಿಎಫ್ಐ ಇಲ್ಲೂ ಕೆಲವು ಆತಿಕ್ ಅಹ್ಮದ್‌ರನ್ನು ಸೃಷ್ಟಿಸುತ್ತಿತ್ತು! 

ಮತದಾನ ಮಾಡುವ ಮುನ್ನ ಇಡೀ ರಾಷ್ಟ್ರವನ್ನು ಕಣ್ಮುಂದೆ ತಂದುಕೊಳ್ಳಿ.

ಬೇರೆಯವರಿಗೆ ಬೆಂಕಿ ಹಚ್ಚೋದು ತಪಸ್ಸು ಹೇಗೆ?!

ಬೇರೆಯವರಿಗೆ ಬೆಂಕಿ ಹಚ್ಚೋದು ತಪಸ್ಸು ಹೇಗೆ?!

ಇದು ರಂಜಾನ್ ತಿಂಗಳು. ಮುಸಲ್ಮಾನರ ಅತ್ಯಂತ ಪವಿತ್ರವಾದ ಹಬ್ಬ. ಕುರಾನ್ ಅವತೀರ್ಣಗೊಂಡಿದ್ದು ಇದೇ ತಿಂಗಳಲ್ಲಿ ಎಂದು ಮುಸಲ್ಮಾನರು ನಂಬುತ್ತಾರೆ. ಅವತೀರ್ಣಗೊಳ್ಳೋದು ಅಂದರೆ ಇದು ಯಾರೊ ಬರೆದಿಟ್ಟದ್ದಲ್ಲ. ಬದಲಿಗೆ, ಭಗವಂತನೇ ಪ್ರವಾದಿಯವರಿಗೆ ಈ ವಾಕ್ಯಗಳು ಗೋಚರಿಸುವಂತೆ ಮಾಡಿದ್ದು. ಈ ಕಾರಣಕ್ಕಾಗಿ ಕುರಾನ್ ಮೇಲೆ ವಿಶೇಷವಾದ ಶ್ರದ್ಧೆ ಮತ್ತು ಗೌರವ. ಈ ತಿಂಗಳಲ್ಲೇ ಇದು ಅವತೀರ್ಣಗೊಂಡಿದ್ದರಿಂದ ಮುಸಲ್ಮಾನರ ಪಾಲಿಗೆ ಇದು ಪವಿತ್ರ ಮಾಸ ಕೂಡ. ಈ ತಿಂಗಳಲ್ಲಿ ಅವರು ಉಪವಾಸ ಮಾಡುತ್ತಾ ದಾನ-ಧರ್ಮಗಳಲ್ಲಿ ತೊಡಗಿಕೊಂಡು, ಕುರಾನಿನ ಪಠನ ಮಾಡಿ, ಅದರ ಸಾರವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡಿ ಆನಂತರ ಅದನ್ನು ಇಫ್ತಾರ್‌ನ ಮೂಲಕ ಮುರಿಯುತ್ತಾರೆ. ವಾಸ್ತವವಾಗಿ ಅರಾಬಿಕ್ ಮೂಲದಿಂದ ಬಂದಿರುವ ಈ ಪದದ ಅರ್ಥವೇನು ಗೊತ್ತೇ? ಚೆನ್ನಾಗಿ ಬೇಯುವುದು, ಉರಿದು ಹೋಗುವುದು, ಹೊಳೆಯುವುದು ಅಂತೆಲ್ಲ. ಸ್ವಲ್ಪ ನಮ್ಮ ಭಾಷೆಗೆ ತರ್ಜುಮೆ ಮಾಡಿದರೆ ತಪಸ್ಸು ಎಂದಷ್ಟೇ. ಇಷ್ಟನ್ನೂ ಏಕೆ ಹೇಳಬೇಕಾಯ್ತೆಂದರೆ ಈ ರಂಜಾನ್ ಮಾಸವನ್ನು ನೆಪವನ್ನಾಗಿರಿಸಿಕೊಂಡು ಇತ್ತೀಚೆಗೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮುಸಲ್ಮಾನರ ವಿರುದ್ಧ ನಯವಾದ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ‘ರಂಜಾನ್ ತಿಂಗಳು ಅತ್ಯಂತ ಪವಿತ್ರವಾಗಿರುವುದರಿಂದ ಈ ತಿಂಗಳಲ್ಲಿ ಮುಸಲ್ಮಾನರು ಯಾವ ದುಷ್ಕೃತ್ಯದಲ್ಲೂ ತೊಡಗಿರುವುದಿಲ್ಲ’ ಎಂದಿದ್ದಾರೆ. ವಾಸ್ತವವಾಗಿ ಅದು ಪಶ್ಚಿಮ ಬಂಗಾಳದ ರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನರು ನಡೆಸಿದ ಕಲ್ಲೆಸೆತದ ಆಕ್ರಮಣದಿಂದ ಅವರನ್ನು ಉಳಿಸುವ ಹೇಳಿಕೆಯಾಗಿತ್ತು. ದುರದೃಷ್ಟವೆಂದರೆ ಆಕೆ ಮುಸಲ್ಮಾನರನ್ನು ಶಾಶ್ವತವಾಗಿ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟಿದ್ದಾರೆ. ಅಲ್ಲದೇ ಮತ್ತೇನು? ರಂಜಾನಿನ ಒಂದು ತಿಂಗಳು ಅವರು ದುಷ್ಕೃತ್ಯದಲ್ಲಿ ತೊಡಗುವುದಿಲ್ಲವೆಂದರೆ ಉಳಿದ ಹನ್ನೊಂದು ತಿಂಗಳು ಅದೇ ಕೆಲಸವೆಂದಾಯ್ತಲ್ಲ ಮತ್ತು ರಂಜಾನ್ ತಿಂಗಳಲ್ಲೂ ಅವರೇ ಈ ಕೃತ್ಯವನ್ನು ಮಾಡಿದ್ದೆಂದು ಸಾಬೀತುಪಡಿಸಿಬಿಟ್ಟರೆ ದುಷ್ಕೃತ್ಯವೆಸಗುವುದೇ ಮುಸಲ್ಮಾನರ ಕೆಲಸವೆಂದು ದೀದಿಯ ಮಾತುಗಳು ಎಂದಾಯ್ತಲ್ಲ!

ದೀದಿ ಈ ಹೇಳಿಕೆ ನೀಡುವ ವೇಳೆಗೆ ಸರಿಯಾಗಿ ದುಬೈನ ಮುಸಲ್ಮಾನ ಮಿತ್ರರೊಬ್ಬರು ಮೊಬೈಲ್ ಸಂದೇಶವೊಂದನ್ನು ಕಳಿಸಿದ್ದರು. ದ.ರಾ ಬೇಂದ್ರೆಯ ವಾಕ್ಯವೆಂದು ಅವರು ಹೇಳುವ ಆ ಸಂದೇಶ ‘ಹಚ್ಚೋದಾದರೆ ದೀಪವನ್ನೇ ಹಚ್ಚು, ಬೆಂಕಿಯನ್ನಲ್ಲ; ಆರಿಸೋದಾದ್ರೆ ನೋವನ್ನು ಆರಿಸು, ನಗುವನ್ನಲ್ಲ’ ಎಂದಿತ್ತು. ಮೊದಲಿನಿಂದಲೂ ಕೆಣಕುವ ಸಂದೇಶವನ್ನೇ ಕಳಿಸುವ ರೂಢಿಯ ಆತ ಇದನ್ನು ಸಹೃದಯತೆಯಿಂದ ಕಳಿಸಿರಲಾರೆ ಎಂಬುದು ಗೊತ್ತಿದ್ದುದರಿಂದಲೇ ನಾನು ನಯವಾಗಿಯೇ, ‘ವಾಹ್! ಜಗವೆಲ್ಲ ಇದನ್ನು ಅರಿತಿದ್ದರೆ ಭಾರತ ಇಂದು ಅಖಂಡವಾಗಿರುತ್ತಿತ್ತು’ ಎಂದು ಉತ್ತರಿಸಿದೆ. ಅತ್ತಲಿಂದ ಈ ಕುರಿತ ಚರ್ಚೆ ಮುಂದುವರೆಯಲಿಲ್ಲ. ಮುಸಲ್ಮಾನರು ಹಿಂದೂಗಳ ಸಹವಾಸದಲ್ಲಿ ಎಷ್ಟು ಹಾಯಾಗಿ ನೆಮ್ಮದಿಯಿಂದಿದ್ದಾರೋ, ಜಗತ್ತಿನಲ್ಲೆಲ್ಲೂ ಹಾಗಿಲ್ಲ. ಆದರೂ ನೋವಿನ ಸಂಗತಿ ಎಂದರೆ ಭಾರತದ ಮುಸಲ್ಮಾನರು ದಿನಗಳೆದಂತೆ ಹೆಚ್ಚು-ಹೆಚ್ಚು ಮತಿಭ್ರಮಿತರಾಗುತ್ತಿದ್ದಾರೆ. ಹಿಂದುಗಳನ್ನು ಅವಹೇಳನ ಮಾಡಲು, ಅವರ ಮಂದಿರಗಳನ್ನು ಧ್ವಂಸಮಾಡಲು, ಮೂರ್ತಿಗಳನ್ನು ಭಂಜಿಸಲು ಅವರಿಗೆ ಇಂತಹ ಮಾಸವೇ ಆಗಬೇಕೆಂದೇನೂ ಇಲ್ಲ. ರಂಜಾನ್ ಸೇರಿದಂತೆ ಎಲ್ಲಾ ತಿಂಗಳಲ್ಲೂ ಈ ಕೆಲಸದಲ್ಲೇ ತೊಡಗಿಕೊಳ್ಳುತ್ತಾರೆ. ರಂಜಾನ್ ಜೋರಾಗಿ ನಡೆಯುತ್ತಿರುವಾಗಲೇ ರಾಜಸ್ಥಾನದಿಂದ ಒಂದು ಸುದ್ದಿ ಬಂತು. ಸಾಂಚಿ ಬುಡಕಟ್ಟು ಜಾತಿಗೆ ಸೇರಿದ ರಾಜುರಾಂ ಎಂಬ ಕೂಲಿ ಕಾರ್ಮಿಕನ ಹೆಂಡತಿ ಝಮ್ಮಾದೇವಿ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಬಾಗಿಲು ತೆರೆದು ನುಗ್ಗಿದ ಶಕೂರ್‌ಖಾನ್ ಆಕೆಯನ್ನು ಬಲಾತ್ಕರಿಸಲು ಯತ್ನಿಸಿದ. ಆಕೆ ಅರಚಾಡುತ್ತಿರುವಾಗಲೇ ಆಕೆಯನ್ನು ವಿವಸ್ತ್ರಗೊಳಿಸಿ ಮುಗಿಬಿದ್ದ. ಆಕೆ ತೀವ್ರವಾಗಿ ಪ್ರತಿಭಟಿಸಿದಳೆಂಬ ಕಾರಣಕ್ಕೆ ಥಿನ್ನರ್ ಅನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚೇಬಿಟ್ಟ. ಆಕೆಯನ್ನು ಉಳಿಸಲೆಂದು ಬಂದ ಅಕ್ಕಪಕ್ಕದವರನ್ನು ಆತ ತಳ್ಳಿ ಓಡಿಸಿದ, ಸಿಕ್ಕು ಬೀಳುತ್ತೇನೆಂದು ಗೊತ್ತಾಗುವಾಗ ತಾನೇ ಕಾಣೆಯಾದ. ಮಟ ಮಟ ಮಧ್ಯಾಹ್ನ ನಡೆದ ಈ ಘಟನೆಯ ಸುದ್ದಿ ತಿಳಿದು ಗಾಬರಿಗೊಂಡ ರಾಜುರಾಂ ತನ್ನ ಹಳ್ಳಿಗೆ ಓಡಿಬಂದು ನೋಡಿದರೆ ಅರ್ಧದಷ್ಟು ಭಾಗ ಬೆಂದು ಹೋಗಿರುವ ಝಮ್ಮಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿರುವಾಗ ಪೊಲೀಸ್ ಠಾಣೆಗೆ ಹೋಗಿ ದೂರುನೀಡಲು ಯತ್ನಿಸಿದರೆ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿಬಿಟ್ಟರು. ಕೊನೆಗೆ ಹಿಂದೂ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ಸ್ಥಳಿಯ ಬಿಜೆಪಿ ಘಟಕ ವ್ಯಾಪಕ ಪ್ರತಿಭಟನೆ ನಡೆಸಿದ ನಂತರ ಆತನ ವಿರುದ್ಧ ಪ್ರಕರಣ ದಾಖಲಿಸಲಾಯ್ತು. ಕಾಂಗ್ರೆಸ್ಸಿಗೆ ಸರಣಿ ಸೋಲುಗಳ ನಂತರವೂ ಬುದ್ಧಿ ಬಂದಿಲ್ಲವೆನ್ನುವುದು ಇದಕ್ಕೇ. ನಿರಂತರವಾಗಿ ಹಿಂದೂಗಳನ್ನು ಅಪಮಾನಗೊಳಿಸುತ್ತಲೇ ಬಂದ ಕಾಂಗ್ರೆಸ್ಸು ಇಂದು ವಿರೋಧಪಕ್ಷದ ಗೌರವವನ್ನು ಕಳೆದುಕೊಂಡು ಟ್ರೋಲ್‌ಗಳಿಗಿಂತ ಕಡೆಯಾಗಿ ಬೀದಿಗೆ ಬಂದು ಕೂರುತ್ತಿದೆ. ಇಷ್ಟಾದಾಗ್ಯೂ ತನ್ನ ಹಿಂದೂ ವಿರೋಧಿ ನಡೆಯನ್ನು ಸರಿಪಡಿಸಿಕೊಳ್ಳದೇ ಹೋಗಿರುವುದು ಅಚ್ಚರಿ ಎನಿಸುತ್ತಿದೆ. ಹಾಗಂತ ಇದು ಕಾಂಗ್ರೆಸ್ಸಿನ ಕಥೆಯಷ್ಟೇ ಅಲ್ಲ. ರಂಜಾನ್‌ಗಿಂತ ಕೆಲವು ದಿನಗಳ ಮುಂಚೆ ಬಿಹಾರದಲ್ಲಿ ಅರ್ಚನಾ ಕುಶ್ವಾಹ ಎಂಬ ಹುಡುಗಿಯನ್ನು ದಾನಿಶ್ ಆಲಂ ಇದೇ ರೀತಿ ಬಲಾತ್ಕರಿಸಿ ಬೆಂಕಿ ಹಚ್ಚಿಬಿಟ್ಟಿದ್ದ. ಅಲ್ಲೆಲ್ಲಾ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿರುವುದು ದೃಗ್ಗೋಚರ.

ರಾಜಸ್ಥಾನದ್ದೇ ಆಳ್ವಾರ್‌ನಲ್ಲಿ ರಂಜಾನಿನ ನಟ್ಟ ನಡುವೆಯೇ ಸಬೀರ್ ನಾಸಿರ್ ಮತ್ತು ನಜೀರ್ ಎಂಬಿಬ್ಬರು 16 ವರ್ಷದ ಹುಡುಗಿಯನ್ನು ಎಳೆದೊಯ್ದು ಬಲಾತ್ಕರಿಸಿದರು. ಹುಡುಗಿಯ ತಾಯಿ ಈ ಕುರಿತಂತೆ ದೂರನ್ನೂ ಕೊಟ್ಟಿದ್ದರು. ಆದರೇನು? ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳದೇ ಆ ಹೆಣ್ಣುಮಗಳನ್ನೇ ಅಪಹಾಸ್ಯಗೊಳಿಸುವಂತಹ ಸ್ಥಿತಿ ನಿರ್ಮಾಣಗೊಂಡಾಗ ಮಾನವನ್ನು ಕಳಕೊಂಡು ನ್ಯಾಯಕ್ಕೂ ಪರಿತಪಿಸಬೇಕಾದ ಸ್ಥಿತಿಗೆ ನಲುಗಿದ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನೇ ಮಾಡಿಕೊಂಡಳು. ಪವಿತ್ರ ಮಾಸದಲ್ಲಿ ಎಂಥದ್ದೆಲ್ಲಾ ಪ್ರಕರಣಗಳು! 

ಇದು ವರದಿಯಾದ ಪ್ರಕರಣಗಳಷ್ಟೇ. ಇದನ್ನು ಬಿಟ್ಟು ಅವರೇ ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಯಾವ ರೀತಿಯ ದೌರ್ಜನ್ಯ ನಡೆಯುತ್ತದೆಂಬುದನ್ನು ಹೇಳಿ ಮುಗಿಸುವುದು ಸಾಧ್ಯವಿಲ್ಲ. ಮಸೀದಿಗಳಲ್ಲಿ ಕಲ್ಲನ್ನು ಶೇಖರಿಸಿಟ್ಟುಕೊಂಡು ಹಿಂದೂಗಳ ಮೆರವಣಿಗೆಯ ಮೇಲೆ ಗುರಿಯಿಟ್ಟು ಎಸೆಯುವ ದುಷ್ಟರಿಗೇನು ಅವರಲ್ಲಿ ಕೊರತೆಯಿಲ್ಲ! ತಪಸ್ಸಿಗಾಗಿ ರಂಜಾನ್ ಎಂಬ ಮಾತಿಗೂ, ಇವರು ನಡೆದುಕೊಳ್ಳುವ ರೀತಿಗೂ ಅಜಗಜಾಂತರವಲ್ಲವೇನು? ಇಷ್ಟಕ್ಕೂ ಮುಸಲ್ಮಾನರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸಲು ಕಾರಣ ಯಾರು ಗೊತ್ತೇ? ಸಹಜವಾಗಿಯೇ ಆಳುವ ಮಂದಿ. ಉತ್ತರ ಪ್ರದೇಶದಲ್ಲಿ, ಗುಜರಾತಿನಲ್ಲಿ ಬಾಲಬಿಚ್ಚದ ಈ ಜನ ರಾಜಸ್ಥಾನದಲ್ಲಿ ಮೆರೆದಾಡುತ್ತಾರಲ್ಲ, ಹೇಗೆ? ಸಿದ್ದರಾಮಯ್ಯನವರ ಕಾಲದಲ್ಲಿ ಸರಣಿ ಹಿಂದೂ ತರುಣರ ಹತ್ಯೆಯಾಗಿದ್ದು ನೆನಪಿದೆಯಲ್ಲ? ಅವರು ಅಧಿಕಾರಕ್ಕೆ ಬಂದೊಡನೆ ಈಗ ದೇಶದ್ರೋಹಿ ಕಾರ್ಯಗಳಿಗಾಗಿ ನಿಷೇಧಗೊಳ್ಳಲ್ಪಟ್ಟಿರುವ ಪಿಎಫ್ಐನ ನೂರಾರು ಕೇಸುಗಳನ್ನು ಹಿಂಪಡೆದರಲ್ಲ, ಒಮ್ಮೆಯಾದರೂ ಅವರು ಇವೆಲ್ಲಕ್ಕೂ ಎದುರಿಗೆ ಬಂದು ಉತ್ತರಿಸಿದ್ದಾರೇನು? ಹನುಮ ಜಯಂತಿಯಂದು ಮಾಂಸಾಹಾರ ಮುಟ್ಟುವುದಿಲ್ಲವೆಂದು ಹೇಳಿದ ತಮ್ಮದೇ ಕಾರ್ಯಕರ್ತನಿಗೆ ಹನುಮನ ಹುಟ್ಟಿದ ದಿನಾಂಕ ಗೊತ್ತೇನೊ ಎಂದು ಮೂದಲಿಸುವ ಇಂತಹ ನಾಯಕರೇ ಕಲ್ಲೆಸೆಯುವ ಮಂದಿಗೆ ನಿಜವಾದ ಪ್ರೇರಣೆ. ಇನ್ನು ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತ ವರ್ಗವಿದೆ. ಅವರು ಸದಾ ಪುಂಡಾಟಿಕೆ ನಡೆಸುವ, ಅಲ್ಪಸಂಖ್ಯಾತರಾಗಿರುವ ಮಂದಿಯನ್ನು ವಿರೋಧಿಸುವ ಧೈರ್ಯ ತೋರದೇ ಇರುವುದೇ ಕಲ್ಲೆಸೆಯುವವರಿಗೆ ಶಕ್ತಿ ತುಂಬುತ್ತದೆ. ಹಾಗಂತ ಯಾರೂ ವಿರೋಧಿಸುವವರಿರುವುದಿಲ್ಲವೆಂದೇನೂ ಇಲ್ಲ. ಶಾಂತವಾಗಿರುವ ಬಹುಸಂಖ್ಯಾತ ಮಂದಿಯಲ್ಲಿಯೇ ವಿಕಾಸದ ದೃಷ್ಟಿಯಿಂದ ಯೋಚಿಸುವ ಕೆಲವೇ ಮಂದಿ ಇದ್ದಾರೆ. ಅವರಿಗೆ ತಮ್ಮ ಸಮುದಾಯ ಈ ಮೂಢನಂಬಿಕೆಗಳಿಂದ ಆಚೆ ಬಂದು ಎಲ್ಲರಂತೆ ಮುಖ್ಯಭೂಮಿಕೆಯಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕೆಂಬ ಬಯಕೆಯಿದೆ. ಆದರೆ ಅವರ ಮಾತುಗಳಿಗೆ ಶಕ್ತಿ ತುಂಬಬಲ್ಲಂತಹ ನಾಯಕತ್ವವಿಲ್ಲದೇ ಅವರು ಸೊರಗಿ ಹೋಗುತ್ತಾರೆ. ಈ ವಿಕಾಸ ಪರವಾದ ಮಂದಿ ಮೋದಿಯನ್ನು, ಯೋಗಿಯವರನ್ನು ಇಷ್ಟಪಡುವುದು, ಅವರ ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಉದ್ದೇಶದ ಕಾರಣಕ್ಕಾಗಿಯೇ. 

ಸೌದಿ ಅರೇಬಿಯಾದ ಈಗಿನ ಯುವರಾಜರು ಇದೇ ರೀತಿ ವಿಕಾಸದ ಕಲ್ಪನೆಯಿಟ್ಟುಕೊಂಡವ. ಹೀಗಾಗಿಯೇ ಆತ ಈ ಬಾರಿ ರಂಜಾನ್ ಆರಂಭವಾಗುವುದಕ್ಕೂ ಮುನ್ನ ಹತ್ತು ನಿಯಮಗಳನ್ನು ಅಲ್ಲಿನ ಮುಸಲ್ಮಾನರ ಮೇಲೆ ಹೇರಿದ್ದಾನೆ. ಮೌಲ್ವಿಗಳು ಮಸೀದಿಯಲ್ಲಿ ಇರಲೇಬೇಕೆಂದು, ಅವರೇ ಪ್ರಾರ್ಥನೆಯನ್ನು ನಿರ್ವಹಿಸಬೇಕೆಂದು ಕಡ್ಡಾಯ ಮಾಡಿದ್ದಾನೆ. ಯಾವ ಕಾರಣಕ್ಕೂ ಪ್ರಾರ್ಥನೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲವೆಂದೂ, ಹೀಗೆ ನಡೆಯವ ಪ್ರಾರ್ಥನೆಯನ್ನು ರೆಕಾರ್ಡ್ ಮಾಡಿ ಹಂಚುವಂತಿಲ್ಲವೆಂದು ಎಚ್ಚರಿಸಿದ್ದಾನೆ. ಇನ್ನೂ ಅಚ್ಚರಿ ಎಂದರೆ ಪ್ರಾರ್ಥನೆಯನ್ನು ಚುಟುಕಾಗಿ ಮತ್ತು ಸರಳವಾಗಿ ಮಾಡಿ ಮುಗಿಸಬೇಕೆಂದು ಹೇಳಿರುವುದಲ್ಲದೇ ಸಂಜೆಯ ಪ್ರಾರ್ಥನೆ ಯಾರಿಗೂ ತೊಂದರೆಯಾಗದಂತೆ ಬೇಗ ಮುಗಿಸಬೇಕೆಂಬ ನಿಯಮವನ್ನೂ ಹೇರಿದ್ದಾನೆ. ಅನೇಕ ಭಾರತೀಯ ಮುಸಲ್ಮಾನರಿಗೆ ಜೀರ್ಣವಾಗದ ಈ ಸಂಗತಿಗಳ ಜೊತೆಗೆ ಮಸೀದಿಯ ಹೊರಗೆಲ್ಲೂ ಇಫ್ತಾರ್ ಮಾಡಬಾರದು ಎಂಬ ಕಟುವಾದ ನಿಯಮವನ್ನು ಜೋಡಿಸಿ, ಇಫ್ತಾರ್ ಮುಗಿದೊಡನೆ ಆ ಸ್ಥಳವನ್ನು ಸ್ವಚ್ಛಗೊಳಿಸಬೇಕೆಂದೂ ಆದೇಶಿಸಿಬಿಟ್ಟಿದ್ದಾನೆ. ನಡು ರಸ್ತೆಯಲ್ಲೇ ಟಾರ್ಪಾಲನ್ನು ಹಾಸಿಕೊಂಡು, ಅಲ್ಲಿಯೇ ತಾವು ತಂದ ಅಡುಗೆಯನ್ನು ತಿಂದು, ಇಡಿಯ ರಸ್ತೆಯನ್ನು ಹೊಲಸುಗೊಳಿಸುವ ಇಫ್ತಾರ್ ಮುರಿಯುವ, ಭಾರತದ ಮುಸಲ್ಮಾನರಿಗೆ ಸೌದಿ ರಾಜನ ಕರೆ ಕೇಳುತ್ತದೇನೋ ನೋಡಬೇಕಷ್ಟೇ! ನೆನಪಿಡಿ, ಇಸ್ಲಾಂನ ಮೂಲ ಇದೇ ಸೌದಿ. ಭಾರತದ ಮುಸಲ್ಮಾನರೇನಿದ್ದರೂ ಅಲ್ಲಿನ ಆದೇಶವನ್ನು ಅನುಸರಿಸಬೇಕಷ್ಟೇ. ಅವರು ಅದನ್ನು ಧಿಕ್ಕರಿಸಿದರೆ ಇವರದ್ದು ಇಸ್ಲಾಂ ಎನಿಸಿಕೊಳ್ಳದೇ ಬೇರೆಯೇ ರಿಲಿಜನ್ ಆಗುತ್ತದೆ. 

ಸೌದಿಯ ಕಥೆ ಹಾಗಾದರೆ ಇತ್ತ ಚೀನಾದಲ್ಲಿ ಉಯ್ಘುರ್ ಮುಸಲ್ಮಾನರು ರಂಜಾನ್ ಸಂದರ್ಭದಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅಲ್ಲಿನ ಶಿಂಜಿಯಾಂಗ್ ಪ್ರಾಂತ್ಯದ 1811 ಹಳ್ಳಿಗಳಲ್ಲಿ ಹಬ್ಬಿಕೊಂಡಿರುವ ಈ ಮುಸಲ್ಮಾನರ ಮೇಲೆ ರಂಜಾನ್ ತಿಂಗಳಲ್ಲಿ ದಿನದ 24 ತಾಸೂ ವಿಶೇಷ ಕಣ್ಗಾವಲಿರಿಸಲಾಗಿದೆ. ಕಾರಣವೇನು ಗೊತ್ತೇ? ಚೀನಾ ಸರ್ಕಾರ ಇವರ್ಯಾರೂ ಉಪವಾಸ ಮಾಡುವಂತಿಲ್ಲವೆಂದು ಆದೇಶಿಸಿದೆ. ಪೋಷಕರು ಉಪವಾಸ ಮಾಡಿದರೆ ಸುಳಿವು ನೀಡುವಂತೆ ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡಲಾಗುತ್ತಿದೆ. ಸುಮಾರು ಒಂದುಕಾಲು ಕೋಟಿಯಿರುವ ಈ ಮುಸಲ್ಮಾನರು ರಂಜಾನ್‌ನ ಅವಧಿಯಲ್ಲಿ ವಿಚಿತ್ರವಾದ ಸಂಕಟಕ್ಕೆ ಸಿಲುಕಿದ್ದಾರೆ ಎಂದು ಉಯ್ಘುರ್‌ಗಳ ಜಾಗತಿಕ ಸಂಘಟನೆ ಗಲಾಟೆ ಎಬ್ಬಿಸಿದೆ. ಭಾರತದ ಮುಸಲ್ಮಾನರ ಬೆಂಬಲಕ್ಕೆ ತಾನಿದ್ದೇನೆಂದು ಪದೇ ಪದೇ ಹೇಳಿಕೊಳ್ಳುವ ಭಿಕಾರಿ ಪಾಕಿಸ್ತಾನ ಈ ಮುಸಲ್ಮಾನರ ಬಗ್ಗೆ ಮಾತ್ರ ದನಿಯೇ ಎತ್ತುವುದಿಲ್ಲ. ಅಚ್ಚರಿಯಲ್ಲವೇನು? ಭಿಕಾರಿ ಪಾಕಿಸ್ತಾನವೆಂದದ್ದಕ್ಕೆ ಕೆಲವರಿಗೆ ಬೇಸರವಾಗಬಹುದೇನೋ! ರಂಜಾನ್ ತಿಂಗಳಲ್ಲಿ ಗೋಧಿಹಿಟ್ಟು ಹಂಚಲೆಂದು ಸರ್ಕಾರ ವ್ಯವಸ್ಥೆ ಮಾಡಿಕೊಂಡಿದ್ದಾಗ ಅದನ್ನು ಪಡೆಯಲು ಧಾವಿಸಿದ ಮಂದಿಯಲ್ಲಿ ಅನೇಕರು ನೂಕುನುಗ್ಗಲಿಗೆ ಒಳಗಾಗಿಯೇ ಪ್ರಾಣಬಿಟ್ಟರಂತೆ. ಅಲ್ಲಿನ ಸರ್ಕಾರ ಭಾರತ ಹಾಕಿದ ದಿಗ್ಬಂಧನಕ್ಕೆ ಹೇಗೆ ಪತರಗುಟ್ಟಿದೆ ಎಂದರೆ ನಮ್ಮ ಪ್ರಭಾವದಿಂದಾಗಿಯೇ ಗ್ರೀಸ್ ಸಬ್ಮೆರಿನ್‌ಗೆ ಬೇಕಾದ ಬ್ಯಾಟರಿಗಳನ್ನು ಕೊಡಲು ನಿರಾಕಿರಿಸಿದೆ. ಗಾಯಕ್ಕೆ ಉಪ್ಪು ಹಾಕುವಂತೆ ಭಾರತ ಪಾಕಿಸ್ತಾನಕ್ಕೆ ಹರಿಯುವು ನೀರಿನ ಕುರಿಂತಂತಹ 1960ರ ಒಪ್ಪಂದವನ್ನು ಪುನರ್ ನವೀಕರಿಸಲು ಕಳಿಸಿದ ಪತ್ರಕ್ಕೆ ವಿಶ್ವಬ್ಯಾಂಕಿನಿಂದಲೂ ಸಹಾಯ ಸಿಗದೇ ಹೋದಾಗ ಪಾಕಿಸ್ತಾನ ಬಾಯ್ಮುಚ್ಚಿಕೊಂಡು ಸಂಧಾನಕ್ಕೆ ಬರಲೊಪ್ಪಿದೆ. ಇದೂ ಕೂಡ ರಂಜಾನ್ ತಿಂಗಳಲ್ಲೇ ನಡೆದದ್ದು. 

ಕೆಲವೇ ಕೆಲವು ಪುಂಡ ಮುಸಲ್ಮಾನರು ರಾಜಕೀಯದ ಮಂದಿಯ ಆಮಿಷಕ್ಕೆ ಒಳಗಾಗಿ ಹಿಂದೂ-ಮುಸಲ್ಮಾನ್ ಬಾಂಧವ್ಯವನ್ನು ಕೆಡಿಸಲೆತ್ನಿಸಿದಾಗ ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತರು ಸದ್ದು ಮಾಡಬೇಕಾದ ಅಗತ್ಯವಿದೆ. ರಂಜಾನ್ ತಿಂಗಳಿನ ತಪಸ್ಸಿನ ವೇಳೆ ಅವರು ಈ ಸಂಕಲ್ಪ ಮಾಡದೇ ಹೋದರೆ ಭವಿಷ್ಯದ ದಿನಗಳಲ್ಲಿ ಇಸ್ಲಾಂ ಜಾಗತಿಕ ಅಧಃಪತನ ಕಾಣುವುದು ನಿಶ್ಚಿತ. ಬೇಂದ್ರೆಯವರೇ ಹೇಳಿದ್ದಾರಲ್ಲ, ‘ಹಚ್ಚೋದಾದ್ರೆ ದೀಪವನ್ನು ಹಚ್ಚು, ಬೆಂಕಿಯನ್ನಲ್ಲ’ ಅಂತ. ಬೆಂಕಿಯನ್ನು ಹಚ್ಚುವ ಮಂದಿ ದೀರ್ಘಕಾಲ ಉಳಿಯುವುದು ಸಾಧ್ಯವಿಲ್ಲ ಏಕೆಂದರೆ ನೆರಮನೆಯನ್ನು ಸುಡಲೆಂದು ಹಚ್ಚುವ ಬೆಂಕಿ ಆನಂತರ ತನ್ನನ್ನೇ ಸುಡುತ್ತದೆ. ಅಲ್ಲವೇನು?

ಭಾರತ್ ತೊಡೊದ ಅಂತಿಮ ಚರಣ ಕೇಂಬ್ರಿಡ್ಜ್ ಭಾಷಣ!

ಭಾರತ್ ತೊಡೊದ ಅಂತಿಮ ಚರಣ ಕೇಂಬ್ರಿಡ್ಜ್ ಭಾಷಣ!

ಮೊದಲ ಬಾರಿ ರಾಹುಲ್‌ನ ಪೂರ್ಣ ಭಾಷಣ ಕೇಳಿದೆ. ಎಂದಿಗೂ ಹತ್ತು ನಿಮಿಷಕ್ಕಿಂತ ಹೆಚ್ಚು ಕೇಳುವುದು ಸಾಧ್ಯವೇ ಆಗುತ್ತಿರಲಿಲ್ಲ. ಈ ಬಾರಿ ಆತನ ಕೇಂಬ್ರಿಡ್ಜ್‌ ‌ನ ಭಾಷಣವನ್ನು ಪಟ್ಟುಹಿಡಿದು ಕೇಳಿದೆ. ಒಬ್ಬ ವ್ಯಕ್ತಿ ತಾನು ಹುಟ್ಟಿದ ದೇಶವನ್ನೇ, ತಾನು ಆಳಲು ಬಯಸುವ ದೇಶವನ್ನೇ ಇಷ್ಟೊಂದು ದ್ವೇಷಿಸಲು ಹೇಗೆ ಸಾಧ್ಯ ಎಂದು ತಿಳಿಯಬೇಕಿತ್ತು. ತನ್ನ ದೇಶಕ್ಕೆ ಶತ್ರುವಾಗಿ ಕಾಡುತ್ತಿರುವ, ತನ್ನ ದೇಶದ ನಾಶವನ್ನು ಬಯಸುತ್ತಿರುವ ಮತ್ತೊಂದು ರಾಷ್ಟ್ರವನ್ನು ಯಾರಾದರೊಬ್ಬರು ಎಷ್ಟೆಲ್ಲಾ ಪ್ರೀತಿಸಬಹುದು ಎಂಬುದನ್ನು ಅರಿಯಲಿಕ್ಕೆ ಈ ಭಾಷಣ ಕೇಳಲೇಬೇಕಾಯಿತು. ಕಾಂಗ್ರೆಸ್ಸಿನ ಮೇಲ್ಮಟ್ಟದ ನಾಯಕರು ಈ ಭಾಷಣವನ್ನು ಸಂಭ್ರಮಿಸುತ್ತಿದ್ದಾರೆ. ಅದು ಭಾಷಣದ ವಿಷಯವಸ್ತುವಿಗಾಗಿ ಅಲ್ಲ, ಕೇಂಬ್ರಿಡ್ಜ್ ನಲ್ಲಿ ಮಾತನಾಡಿದ ಎಂಬುದಕ್ಕಾಗಿ. ಕೇಂಬ್ರಿಡ್ಜ್ ನಮ್ಮೆಲ್ಲ ವಿಶ್ವವಿದ್ಯಾಲಯಗಳಿಗಿಂತಲೂ ಶ್ರೇಷ್ಠವಾದುದು ಎಂಬ ಗುಲಾಮೀ ಮಾನಸಿಕತೆಯ ಪರಿಣಾಮ ಅದು. ಈ ಹಿಂದೆ ಶಶಿತರೂರ್ ಕೂಡ ವಿದೇಶಗಳಲ್ಲಿ ಕೆಲವೊಂದು ಭಾಷಣ ಮಾಡಿದ್ದಾರೆ. ಆತ ಯಾವ ಪಾರ್ಟಿಯವನು ಎಂಬುದನ್ನೂ ಲೆಕ್ಕಕ್ಕಿರಿಸಿಕೊಳ್ಳದೇ ಆ ಭಾಷಣವನ್ನು ಕೇಳಿದ್ದಷ್ಟೇ ಅಲ್ಲ, ನಮ್ಮಲ್ಲನೇಕರು ಇತರರೊಂದಿಗೂ ಹಂಚಿಕೊಂಡಿದ್ದರು. ತರೂರರ ಎರಾ ಆಫ್ ಡಾರ್ಕ್‌ನೆಸ್ ಇಂದಿಗೂ ನನ್ನ ಫೇವರಿಟ್ ಕೃತಿಗಳಲ್ಲೊಂದು. ಪಕ್ಷ ಯಾವುದೆಂಬುದು ಮುಖ್ಯವಲ್ಲ. ನೀವು ಪ್ರತಿನಿಧಿಸುತ್ತಿರುವ ದೇಶ ಯಾವುದೆಂಬುದು ಬಲುಮುಖ್ಯ. ರಾಹುಲ್‌ನ ಕೇಂಬ್ರಿಡ್ಜ್ ಭಾಷಣದಲ್ಲಿ ಅನುಮಾನವುಂಟಾಗುವುದು ಇಲ್ಲಿಯೇ. ಈ ಲೇಖನದುದ್ದಕ್ಕೂ ಒಂದಷ್ಟು ವಿಶ್ಲೇಷಣೆ ಮುಂದಿರಿಸುವೆ, ಸರಿಯೆನಿಸಿದರೆ ಸ್ವೀಕರಿಸಿ. 

ಭಾಷಣವನ್ನು ಆರಂಭಿಸುತ್ತಾ ರಾಹುಲ್ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾದ ಪಾರ್ಲಿಮೆಂಟು ಅಪಾಯದಲ್ಲಿದೆ ಎನ್ನುತ್ತಾನೆ. ಅದರ ಕಾರಣದಿಂದಾಗಿಯೇ ಮಾಧ್ಯಮ ಮತ್ತು ನ್ಯಾಯವ್ಯವಸ್ಥೆಯೂ ಪ್ರಜಾಪ್ರಭುತ್ವದ ನೇತೃತ್ವ ವಹಿಸದೇ ನಾಶ ಹೊಂದಿಬಿಟ್ಟಿವೆ ಎನ್ನುತ್ತಾನೆ. ಇತ್ತೀಚೆಗೆ ತಾನೇ ಭಾರತದ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ಅವರು ಎಲೆಕ್ಷನ್ ಕಮಿಷನರ್ ನೇಮಕದ ಹೊತ್ತಲ್ಲಿ ಪ್ರಧಾನಮಂತ್ರಿ, ವಿಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಜೊತೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದಿದ್ದಾರೆ. ಏನಿದರ ಅರ್ಥ? ಸುಪ್ರೀಂಕೋರ್ಟು ಸರ್ಕಾರದ ಪರವಾಗಿ ನಿಂತಿದ್ದರೆ ಹೀಗೊಂದು ನಿರ್ಣಯ ಬರುತ್ತಿತ್ತೇನು? ಅಚ್ಚರಿಯೇನು ಗೊತ್ತೇ? ಬಿಜೆಪಿಗೆ ಮತ ಹಾಕುವ ಬಹುತೇಕ ಮಂದಿ ಸುಪ್ರೀಂಕೋರ್ಟು ಬಿಜೆಪಿಯ ವಿರೋಧಿಗಳಿಗೆ ಮಧ್ಯರಾತ್ರಿಯಲ್ಲಿ ಬಾಗಿಲು ತೆಗೆದು ವಿಶೇಷ ಆತಿಥ್ಯ ನೀಡುವುದನ್ನು ದಿನ ಬೆಳಗಾದರೆ ವಿರೋಧಿಸುತ್ತಾರೆ. ಮಾಧ್ಯಮಗಳು ಸರ್ಕಾರದ ಪರವಾಗಿವೆ ಎಂದೆನ್ನುವ ರಾಹುಲ್ ಭಾರತ್ ಜೊಡೊಗೆ ಸಿಕ್ಕ ಪ್ರಚಾರ ಮತ್ತು ಅಲ್ಲಿ ಬಂದ ಮಾಧ್ಯಮದ ಮಂದಿ, ಅರವಿಂದ್ ಕೇಜ್ರಿವಾಲನ ಎಲ್ಲ ಕುಕರ್ಮಗಳನ್ನು ನೋಡಿಯೂ ನೋಡದಂತೆ ಸುಮ್ಮನಿರುವ ಪರಿ ಇವೆಲ್ಲವನ್ನೂ ಒಮ್ಮೆ ತುಲನೆ ಮಾಡಿ ನೋಡಿದರೊಳಿತು. ಇನ್ನು ಸಂಸತ್ತಿನ ಸುದ್ದಿಗೇ ಬರುವುದಾದರೆ ಅಧಿವೇಶನಕ್ಕೆ ಒಂದೆರಡು ದಿನಗಳ ಮುನ್ನವೇ ತವಾಂಗ್‌ನಲ್ಲಿ ಭಾರತ-ಚೀನಾದ ಗಲಾಟೆ ನಡೆದ ಸುದ್ದಿ ಕಾಂಗ್ರೆಸ್ಸಿಗೆ ಸಿಗುತ್ತದೆ. ಅಧಿವೇಶನದ ಕೆಲವು ದಿನ ಮುನ್ನವೇ ಹಿಂಡನ್‌ಬರ್ಗ್‌ನ ವರದಿ ಬಂದು ಅದಾನಿಯ ಶೇರುಗಳು ಕುಸಿಯಲಾರಂಭಿಸುತ್ತವೆ. ಅಧಿವೇಶನಕ್ಕೆ ಕೆಲವು ದಿನ ಮುನ್ನವೇ ಗಾಲ್ವಾನ್ ಕದನ ನಡೆಯುತ್ತದೆ. ಅಧಿವೇಶನಕ್ಕೆ ಕೆಲವು ದಿನ ಮುನ್ನವೇ ಪೆಗಾಸಸ್ ಹಗರಣದ ಆರೋಪವನ್ನು ಕಾಂಗ್ರೆಸ್ಸು ಮಾಡುತ್ತದೆ. ಅಧಿವೇಶನಕ್ಕೂ ಈ ಎಲ್ಲ ಘಟನೆಗಳಿಗೂ ಏನು ಸಂಬಂಧ? ಕಾಂಗ್ರೆಸ್ಸಿಗೆ ಅಧಿವೇಶನಕ್ಕೆ ಒಂದೆರಡು ದಿನಗಳ ಮುನ್ನವೇ ಈ ಎಲ್ಲ ಘಟನೆಗಳ ವಿವರ ಸಿಗುವುದಾದರೂ ಹೇಗೆ? ಒಟ್ಟಾರೆ ಸಂಸತ್ತಿನ ಚಿತ್ರಣವನ್ನು ವಿಪರೀತವಾಗಿ ತೋರಿಸುವ ಬಯಕೆ ಕಾಂಗ್ರೆಸ್ಸಿಗೆ ಏಕೆ? ಅಂತಿಮವಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಹೇಳುವ ಉದ್ದೇಶ ತಾನೇ? ಈ ಭಾಷಣದಲ್ಲಿ ಮಾತನಾಡುವ ರಾಹುಲ್ ಪ್ರತಿಭಟನೆಗೆ ಸಂಸತ್ ಭವನದ ಹೊರಗೆ ಕೂತ ಸಂಸತ್ ಸದಸ್ಯರನ್ನು ಬಲಪ್ರಯೋಗ ಮಾಡಿ ಒಳತಳ್ಳಲಾಗುತ್ತದೆ ಎಂದಿದ್ದಾನೆ. ಭಾರತದಲ್ಲಿ ಕುಳಿತು ಇದನ್ನು ಕೇಳುವ ಪ್ರತಿಯೊಬ್ಬನಿಗೂ ಇದು ಹಾಸ್ಯಾಸ್ಪದವೆನಿಸದೇ ಇರಲಾರದು. ಇಷ್ಟಕ್ಕೂ ಇವನ ಅಜ್ಜಿ ಈ ದೇಶದ ಪ್ರಧಾನಿಯಾಗಿದ್ದಾಗ ಸಂಸತ್ತೂ ನಡೆಯುತ್ತಿರಲಿಲ್ಲ, ಪತ್ರಿಕೆಗಳಿಗೆ ಸ್ವಾತಂತ್ರ್ಯ ಇರಲಿಲ್ಲ, ರಾಜಕೀಯ ವಿರೋಧಿಗಳನ್ನು ಹಿಡಿದು ಜೈಲಿಗಟ್ಟಲಾಗುತ್ತಿತ್ತು, ಕೊನೆಗೆ ಸಾಮಾನ್ಯ ಜನರ ಬದುಕೇ ದುಸ್ಸಹವಾಗಿತ್ತು. ಹೌದು, ಭಾರತದ ಇತಿಹಾಸದ ಕರಾಳ ಅಧ್ಯಾಯವಾದ ಎಮರ್ಜೆನ್ಸಿಯನ್ನು ಬರೆದಿದ್ದು ಕಾಂಗ್ರೆಸ್ಸಿನ ಇಂದಿರಾಳೇ. ಪ್ರಜಾಪ್ರಭುತ್ವವೆಂಬುದು ಭಾರತದಲ್ಲಿ ಸತ್ತಿದೆ ಎನ್ನುತ್ತಾರಲ್ಲ ರಾಹುಲ್ ಅದು ಅವನಜ್ಜಿಯ ಕಾಲದ ಕಥೆ. ಅವರಮ್ಮ ಏನು ಕಡಿಮೆ ಇರಲಿಲ್ಲ. ಮಾತೇ ಆಡದ ಮನಮೋಹನ ಸಿಂಗರನ್ನು ಕೂರಿಸಿಕೊಂಡು ತನಗೆ ಅನಿಸಿದ್ದನ್ನು ಮಾಡುತ್ತಲೇ ಹೋದರು. ಪ್ರಜಾಪ್ರಭುತ್ವ ಆಗ ಅಕ್ಷರಶಃ ಸತ್ತೇಹೋಗಿತ್ತು! ಮನಮೋಹನ್ ಸಿಂಗರನ್ನು ಬದಿಗೆ ಸರಿಸಿ ಮೋದಿಯನ್ನು ಅಧಿಕಾರಕ್ಕೆ ತರಲು ಜನ ದಂಡು-ದಂಡಾಗಿ ಬೀದಿಗೆ ಬಂದರಲ್ಲ, ಅದು ಈ ಕಾರಣಕ್ಕಾಗಿಯೇ. ರಾಹುಲ್ಗೆ ಇವೆಲ್ಲವನ್ನೂ ಮತ್ತೊಮ್ಮೆ ನೆನಪಿಸಬೇಕಿದೆ. 

ವಿದೇಶಿಗರ ಮುಂದೆ ಮಾತನಾಡುತ್ತಾ ರಾಹುಲ್ ಪೆಗಾಸಸ್ ಎಂಬ ಆಪ್ನ ಮೂಲಕ ಸರ್ಕಾರ ತಾನಾಡಿದ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದೆ ಎಂದು ಹೇಳುವಾಗ ಸ್ವಲ್ಪವಾದರೂ ಎಚ್ಚರಿಕೆ ವಹಿಸಬೇಕಿತ್ತು. ಈ ಕಾರಣಕ್ಕಾಗಿ ಕಂಠಮಟ್ಟ ಕೂಗಾಡಿದ ಕಾಂಗ್ರೆಸ್ಸಿಗರು ಸುಪ್ರೀಂಕೋರ್ಟಿನ ಮೆಟ್ಟಿಲು ಹತ್ತಿದ್ದರು. ತಾನೇ ಒಂದು ಕಮಿಟಿಯನ್ನು ರಚಿಸಿ ವಿಚಾರಣೆಗೆ ಯತ್ನಿಸಿದ ನ್ಯಾಯಾಲಯ ಕೊನೆಗೂ ಈ ಆರೋಪದಲ್ಲಿ ಹುರುಳಿಲ್ಲ ಎಂದು ತೀರ್ಪುಕೊಟ್ಟಿತು. ಈ ನಾಡಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ ವಿದೇಶಗಳಲ್ಲಿ ಈ ರೀತಿ ಮಾತನಾಡುವ ವ್ಯಕ್ತಿಯನ್ನು ಜವಾಬ್ದಾರಿಯುತ ನಾಗರಿಕನೆನ್ನಬಹುದೇನು? ಆತನ ಕೈಗೆ ದೇಶದ ಚುಕ್ಕಾಣಿಯನ್ನು ಕೊಡಬಹುದೇನು? ವಾಸ್ತವವಾಗಿ ಆತ ತನ್ನ ಮೇಲೆ ಅನುಕಂಪ ಬರುವಂತೆ ಮಾತನಾಡುತ್ತಿದ್ದ. ತಾನು ಎಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತದಲ್ಲಿ ನೆಲೆ ನಿಂತಿದ್ದೇನೆ ಎಂದು ಅಂತರ್ರಾಷ್ಟ್ರೀಯ ವೇದಿಕೆ ಮೇಲೆ ಆತ ಹೇಳಬೇಕಿತ್ತು. ತನ್ನ ದೇಶವನ್ನು ಜರಿದಾದರೂ ಸರಿಯೇ ಆತ ಹೇಳಬೇಕಿತ್ತು!

ಮುಂದುವರೆಸಿ ಆತ ಗಾಂಧೀಜಿಯವರ ಸತ್ಯಾಗ್ರಹದ ಕಲ್ಪನೆಯನ್ನಿಟ್ಟುಕೊಂಡೇ ಭಾರತ್ ಜೊಡೊ ಯಾತ್ರೆ ನಡೆಸಿದ್ದು ಎನ್ನುತ್ತಾನೆ. ತನಗೆ ಬೇಕಾದ್ದನ್ನು ಸಾತ್ವಿಕ ಪ್ರತಿಭಟನೆಯ ಮೂಲಕ ಪಡೆದುಕೊಳ್ಳುವ ಪ್ರಯತ್ನ ಅದು. ಆತನ ಯಾತ್ರೆ ಗಾಂಧೀಜಿಯ ಮಾರ್ಗದ್ದಾದರೆ ಅಡ್ವಾಣಿಯ ರಾಮಮಂದಿರ ಯಾತ್ರೆ ಅದೇಕೆ ಸತ್ಯಾಗ್ರಹ ಮಾರ್ಗದ್ದಲ್ಲ? ಕಾಶ್ಮೀರದಲ್ಲಿ ತಿರಂಗಾ ಹಾರಿಸಬೇಕೆಂಬ ವಿಸ್ತಾರವಾಗಿರುವ ಯಾತ್ರೆಯ ಹಿಂದೆ ಇರುವ ಗಾಂಧೀಜಿಯವರ ಸತ್ಯಾಗ್ರಹದ ಚಿಂತನೆಯನ್ನು ಅಲ್ಲಗಳೆಯುವುದು ಸಾಧ್ಯವೇನು? ಈ ಯಾತ್ರೆಯನ್ನು ಮನಸೋ ಇಚ್ಛೆ ಬಣ್ಣಿಸುವ ರಾಹುಲ್, ಒಬ್ಬ ವ್ಯಕ್ತಿಯೇ ಸರ್ವಸ್ವವಾಗುವುದನ್ನು ತಪ್ಪಿಸಲು ಜನರೊಂದಿಗೆ ಒಂದಾಗಬಲ್ಲ ಈ ರೀತಿಯ ಯಾತ್ರೆಗಳು ಅಗತ್ಯವಾಗಿ ಬೇಕು ಎನ್ನುತ್ತಾನೆ. ಆದರೆ ಅವನ ಮುತ್ತಜ್ಜ ನೆಹರೂಗಿಂತ ಏಕವ್ಯಕ್ತಿ ಪ್ರದರ್ಶಕ ಮತ್ತೊಬ್ಬನಿರಲಿಲ್ಲ. ವಿದೇಶಾಂಗ ನೀತಿಯ ಚರ್ಚೆ ಸಂಸತ್ತಿನಲ್ಲಿ ನಡೆಯುವಾಗ ಆಚಾರ್ಯ ಕೃಪಲಾನಿ ನೀವೇಕೆ ಮಹತ್ವದ ನಿರ್ಧಾರಗಳನ್ನು ಎಲ್ಲರೊಡನೆ ಚರ್ಚಿಸಿ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಎಲ್ಲವನ್ನೂ ಎಲ್ಲರ ಬಳಿ ಚರ್ಚಿಸಲಾಗುವುದಿಲ್ಲ ಎಂಬರ್ಥದ ಉತ್ತರವನ್ನು ಸುದೀರ್ಘವಾಗಿ ನೆಹರೂ ಕೊಟ್ಟಾಗ ಕೃಪಲಾನಿಯವರು ಎದ್ದುನಿಂತು ‘ನನ್ನ ಮಾತನ್ನು ಮರಳಿ ಪಡೆಯುತ್ತೇನೆ. ಭಾರತದ ವಿದೇಶಾಂಗ ನೀತಿ ಒನ್ ಮ್ಯಾನ್ ಪಾಲಿಸಿ ಎನ್ನುವುದನ್ನು ಒಪ್ಪುತ್ತೇನೆ’ ಎಂದಿದ್ದರು. ಅದು ಅಂದಿನ ಪ್ರಧಾನಿಯೆಡೆಗಿನ ವ್ಯಂಗ್ಯವಾಗಿತ್ತು. ಕಾಂಗ್ರೆಸ್ಸಿಗರು ಅದನ್ನೂ ಸಂಭ್ರಮಿಸಿರಲು ಸಾಕು. 

ರಾಹುಲ್ ಈ ಭಾಷಣದಲ್ಲಿ ಒಂದಷ್ಟು ಭಾವನೆಗಳನ್ನು ಜಾಗೃತಗೊಳಿಸುವ ಪ್ರಯತ್ನವನ್ನೂ ಮಾಡಿದ. ಗ್ಯಾಂಗ್‌ ರೇಪ್‌ಗೊಳಗಾದ ಹೆಣ್ಣುಮಗಳು ತನ್ನ ಕೈಹಿಡಿದು ಹಂಚಿಕೊಂಡ ಕಥೆಯನ್ನು, ಮಕ್ಕಳೊಡನೆ ಆಡಬೇಡಿ ಅವರು ಕೊಳಕಾಗಿದ್ದಾರೆ ಎಂದು ಹೇಳಿದ್ದನ್ನೂ ಆತ ಹೆಮ್ಮೆಯಿಂದ ಹೇಳಿದ. ಇವೆಲ್ಲವೂ ನಿಸ್ಸಂಶಯವಾಗಿ ಆತನಿಗೆ ಹೊಸತೇ ಆಗಿರಬೇಕು. ಹುಟ್ಟಿದಾಗಿನಿಂದಲೂ ಬಾಯಲ್ಲಿ ಚಿನ್ನದ ಚಮಚವನ್ನೇ ಇಟ್ಟುಕೊಂಡು ಬಂದಿರುವ ಆತನಿಗೆ ಜನಸಾಮಾನ್ಯರ ಸಂಪರ್ಕ ಇರುವುದು ಸಾಧ್ಯವೇ ಇರಲಿಲ್ಲ ಬಿಡಿ. ಮೊದಲ ಬಾರಿಗೆ ಆತ ಇಷ್ಟು ಹತ್ತಿರದಿಂದ ಭಾರತವನ್ನು, ಭಾರತೀಯರನ್ನೂ ನೋಡಿದ್ದಾನೆ. ಹೀಗಾಗಿ ಇವೆಲ್ಲ ಹೊಸತೆನಿಸಬಹದು. ಗಣರಾಜ್ಯೋತ್ಸವದ ವೈಭವವನ್ನು ನೋಡಲು ಕಟ್ಟಡ ಕಾರ್ಮಿಕರನ್ನು ವಿಐಪಿಯಾಗಿ ಕೂರಿಸಿಕೊಂಡ, ಕಾಶಿಯಲ್ಲಿ ಮಂದಿರ ನಿರ್ಮಾಣಕ್ಕೆ ಕಾರಣರಾದ ಮಂದಿಗೆ ಹೂವು ಎರಚಿ ಸಂಭ್ರಮಿಸಿದ, ಪೌರ ಕಾರ್ಮಿಕರ ಕಾಲ್ತೊಳೆದು ಅವರ ಗೌರವವನ್ನು ನೂರ್ಮಡಿಸಿದ ಮೋದಿಯೆದುರು ಆತ ಸಾಕಷ್ಟು ಕಲಿಯಬೇಕಾದ ಅಗತ್ಯವಿದೆ. ಏಕೆಂದರೆ ಮೋದಿ ಬಡತನದ ಬೆವರುಂಡೇ ಬಂದವರು. 

ಅಂತರ್ ರಾಷ್ಟ್ರೀಯ ವೇದಿಕೆಯ ಮೇಲೆ ಪುಲ್ವಾಮಾ ದಾಳಿಯನ್ನು ಸ್ಮರಿಸಿಕೊಂಡ ರಾಹುಲ್ ಕಾರ್‌ ಬಾಂಬಿಗೆ ಸತ್ತ ಸೈನಿಕರ ಉಲ್ಲೇಖ ಮಾಡುತ್ತಾನೆ. ವಾಸ್ತವವಾಗಿ ಅದು ಕಾರ್ಬಾಂಬ್ ಅಲ್ಲ. ಪಾಕಿಸ್ತಾನದಿಂದ ಪ್ರೇರಣೆಯನ್ನೂ ತರಬೇತಿಯನ್ನೂ ಪಡೆದುಕೊಂಡ ಭಯೋತ್ಪಾದಕನೊಬ್ಬ ನಡೆಸಿದ ಕುಕೃತ್ಯ. ಅದರ ಕುರಿತಂತೆ ಹೇಳುವ ಧೈರ್ಯವನ್ನೇ ಆತ ತೋರಲಿಲ್ಲ. ಅನೇಕ ಕಡೆಗಳಲ್ಲಿ, ತನಗೆ ಸೂಕ್ತವಾದ ರಕ್ಷಣೆ ಒದಗಿಸಲಿಲ್ಲ. ಕೇಂದ್ರ ಸರ್ಕಾರ ತನ್ನನ್ನು ಕೊಲ್ಲುವ ಯತ್ನ ಮಾಡುತ್ತಿದೆ ಎಂದೆಲ್ಲ ಆರೋಪಿಸಿದ್ದ ರಾಹುಲ್ ಕಾಶ್ಮೀರದಲ್ಲಿ ನನಗೆ ಹೆಚ್ಚು ರಕ್ಷಣೆ ಕೊಟ್ಟರು, ಇದು ಸ್ಥಳೀಯರಿಂದ ನನ್ನನ್ನು ಬೇರ್ಪಡಿಸುವ ತಂತ್ರ ಎಂದು ಹಲಬುತ್ತಾನಲ್ಲ, ಈತನನ್ನು ತಮ್ಮ ನಾಯಕನೆಂದು ಹೇಳಿಕೊಳ್ಳುವ ಮಂದಿಗೆ ಏನೆನ್ನಬೇಕು ಹೇಳಿ? 

ಇಡಿಯ ಭಾಷಣದಲ್ಲಿ ನನಗೆ ಅಚ್ಚರಿ ಎನಿಸಿದ್ದು ರಾಹುಲನ ಚೀನಾ ಪ್ರೇಮ. ಅಮೇರಿಕಾದ ಕುರಿತಂತೆ ಮಾತನಾಡುತ್ತಾ ಆತ ತಾನು ಓದುತ್ತಿರುವಾಗ ಅಮೇರಿಕಾದ ವಿಮಾನ ನಿಲ್ದಾಣದೊಳಕ್ಕೂ ಯಾವ ಪರೀಕ್ಷೆಯೂ ಇಲ್ಲದೇ ಹೋಗಬಹುದಿತ್ತು. ಆದರೀಗ ಹಾಗಿಲ್ಲ. ಒಸಾಮನ ಆಕ್ರಮಣದ ನಂತರ ಅಮೇರಿಕಾ ಮೊದಲಿನಷ್ಟು ಸ್ವಾತಂತ್ರ್ಯ ಭರಿತವಾಗಿಲ್ಲ ಎನ್ನುತ್ತಾನೆ. ಒಂದು ಒಸಾಮನ ಆಕ್ರಮಣಕ್ಕೆ ಅಮೇರಿಕಾ ಹೀಗಿರಬಹುದಾದರೆ, 65 ವರ್ಷಗಳ ಅತ್ಯಂತ ಕೆಟ್ಟ ನೀತಿಯಿಂದಾಗಿ ಇಡಿಯ ಪಾಕಿಸ್ತಾನವೇ ನಿರಂತರ ಭಾರತದ ಮೇಲೆ ಛದ್ಮಯುದ್ಧ ಮಾಡುವಂತೆ ಕಾಂಗ್ರೆಸ್ ಮಾಡಿಬಿಟ್ಟಿತಲ್ಲ, ಭಾರತದ ಸ್ಥಿತಿ ಹೇಗಿರಬೇಕಿತ್ತು ಹೇಳಿ? ಈ ಪ್ರಶ್ನೆ ಕಾಂಗ್ರೆಸ್ಸಿನ ಕಾರ್ಯಕರ್ತರು ರಾಹುಲ್ ಸಿಕ್ಕಾಗ ಕೇಳಬೇಕಿದೆ. ಅಮೇರಿಕಾದ ಈ ಬದಲಾವಣೆಗೆ ಎದುರಾಗಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ರಾಷ್ಟ್ರವೆಂದರೆ ಚೀನಾ ಎನ್ನುತ್ತಾನೆ ಆತ. ಅಮೇರಿಕಾದಂತೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಗಮನ ಕೊಡದೇ ಎಲ್ಲರೂ ಸಹಬಾಳ್ವೆಯಿಂದ ಬದುಕುವುದಕ್ಕೆ ಚೀನಾ ವ್ಯವಸ್ಥೆ ಮಾಡಿಕೊಡುತ್ತದೆ ಎನ್ನುತ್ತಾನೆ. ಸುದೀರ್ಘಕಾಲ ಆಂತರಿಕ ಸಮಸ್ಯೆಗಳಿಂದ ಬೆಂದು ಈಗ ಅದು ಅವೆಲ್ಲವುಗಳನ್ನೂ ಮೀರಿ ಬೆಳೆದು ನಿಂತಿರುವ ಪರಿ ಅಚ್ಚರಿ ಎನ್ನುತ್ತಾನೆ. ಅವರ ಈ ಬಗೆಯ ಅಭಿವೃದ್ಧಿಯ ಪರಿಕಲ್ಪನೆಯಿಂದಾಗಿಯೇ ಒನ್ ಬೆಲ್ಟ್ ಒನ್ ರೋಡ್ ನಿರ್ಮಾಣವಾಗುತ್ತಿರುವುದು ಎಂದೂ ಹೇಳುತ್ತಾನೆ. ಜಗತ್ತಿನ ಸಮುದ್ರ ವಹಿವಾಟಿನ ಪ್ರಾಬಲ್ಯದ ವಿರುದ್ಧ ಸಟೆದು ನಿಂತಿರುವ ಚೀನಾ ಎನ್ನುವ ರಾಹುಲನ ಮಾತು ಕೇಳಿದಾಗ ಆತನ ಮೂಲ ಉದ್ದೇಶವೇನೆಂಬುದೇ ಅರಿವಾಗುವುದಿಲ್ಲ. ಏಷ್ಯಾದ ಪ್ರಬಲ ಶಕ್ತಿಯಾಗಿ ಬೆಳೆಯಬೇಕೆಂದು ಬಯಸುತ್ತಿರುವ ಭಾರತ ಚೀನಾಕ್ಕಿಂತ ಬಲು ಹಿಂದಿದೆ ಎನ್ನುವ ಸಂದೇಶ ನೀಡುತ್ತಿದ್ದಾನೋ, ಅಥವಾ ಜಗತ್ತೆಲ್ಲ ಚೀನಾದ ಪ್ರಾಬಲ್ಯವನ್ನು ಮುರಿಯಬೇಕೆಂದು ಒಟ್ಟಾಗುತ್ತಿದ್ದರೆ ಭಾರತೀಯರು ಚೀನಾದ ಬೆಳವಣಿಗೆಗೆ ಕಟಿಬದ್ಧರಾಗಿದ್ದಾರೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾನೋ ನನಗಂತೂ ಗೊತ್ತಾಗಲಿಲ್ಲ. ಅವನ ಮುತ್ತಜ್ಜ ನೆಹರೂ ಹೀಗೇ ಮಾಡಿದ್ದರಲ್ಲ. ಭಾರತಕ್ಕೆ ಸಿಗಬೇಕಾಗಿದ್ದ ಜಾಗತಿಕ ಸೌಲಭ್ಯಗಳನ್ನೆಲ್ಲ ಚೀನಾಕ್ಕೆ ವರ್ಗಾಯಿಸಿ ಜಗತ್ತು ನಮ್ಮ ಮೇಲಿಡಬಹುದಾಗಿದ್ದ ವಿಶ್ವಾಸವನ್ನೇ ನಷ್ಟಗೊಳಿಸಿಬಿಟ್ಟಿದ್ದರು. ಜಗತ್ತಿನ ತಂತ್ರಜ್ಞಾನವನ್ನು ಕದ್ದು ತನ್ನದ್ದೇ ಎಂದು ಹೇಳುವ ಚೀನಾದ ವಾದವನ್ನು ಸಮರ್ಥಿಸುವ ರಾಹುಲ್‌ನ ಮಾತುಗಳಂತೂ ಎಂಥವನಿಗೂ ಅಚ್ಚರಿ ತರಿಸುವಂಥದ್ದೇ! 

ವಾಸ್ತವವಾಗಿ ಈ ಭಾಷಣದಿಂದ ಆತನಿಗೆ ಭಾರತದಲ್ಲಿ ಒಂದು ವೋಟೂ ಹೆಚ್ಚಿಗೆ ಬೀಳುವುದು ಸಾಧ್ಯವಿಲ್ಲ. ಅಂದರೆ ಆತ ಇದನ್ನು ಬೇರೆ ಯಾವುದೋ ಕಾರಣಕ್ಕಾಗಿ ಮಾಡಿದ್ದಾನೆ. ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲವೆನ್ನುವ ಸೊರೊಸ್‌ನ ಮಾತುಗಳಿಗೂ ರಾಹುಲನ ಈ ವಾಕ್ಚೇಷ್ಟೆಗಳಿಗೂ ಹತ್ತಿರದ ಸಂಬಂಧವಿದೆ ಎನಿಸುತ್ತದೆ. ಉದ್ದೇಶ ನಾವಂದುಕೊಂಡಷ್ಟು ಸರಳವಾಗಿಲ್ಲ. 

ಇಷ್ಟಕ್ಕೂ ಈ ಭಾಷಣದಲ್ಲಿ ನಾನು ಅರ್ಥಮಾಡಿಕೊಳ್ಳದ ಅನೇಕ ಸಂಗತಿಗಳಿರಬಹುದು. ಆತನ ಮಾತು ನನಗೆಂದೂ ಪೂರ್ಣವಾಗಿ ಅರ್ಥವೇ ಆಗಲಿಲ್ಲ. ಹೀಗಾಗಿ ನನಗೂ ಅರ್ಥವಾಗದ ಅನೇಕ ಒಳಸುಳುಹುಗಳಿದ್ದರೆ ನೀವೇ ಅದನ್ನು ಪೂರ್ಣ ಕೇಳಿ ತಿಳಿಯಬೇಕಾಗಿ ವಿನಂತಿಸುವೆ ಅಷ್ಟೇ!

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ಪ್ರಿಯ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಪ್ರೀತಿಯ ನಮಸ್ಕಾರ.

ಸೈದ್ಧಾಂತಿಕವಾಗಿ ನಾವು ಕಿತ್ತಾಡಬಹುದು. ವೈಚಾರಿಕ ಮತ ಭೇದ ಖಂಡಿತ ಇದ್ದಿರಬಹುದು. ಕೆಲವೊಮ್ಮೆ ಹದ ಮೀರಿ ಕಾಲೆಳೆದಿರಬಹುದು, ಅಪಹಾಸ್ಯವನ್ನೂ ಮಾಡಿರಬಹುದು. ಆದರೆ ದೇಶದ ವಿಚಾರ ಬಂದಾಗ ಮಾತ್ರ ನಮ್ಮಲ್ಲಿ ಮತ ಭೇದ ಇರುವಂತಿಲ್ಲ. ರಾಷ್ಟ್ರ ನನಗಿಂತಲೂ, ಒಂದು ಪರಿವಾರಕ್ಕಿಂತಲೂ, ಒಂದು ಊರಿಗಿಂತಲೂ ಬಲು ದೊಡ್ಡದ್ದು. ಹೀಗಾಗಿಯೇ ಬಲುಮುಖ್ಯವಾದ ಕೆಲವು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲೆಂದು ಈ ಪತ್ರ. 

ಅನೇಕ ಸಂಗತಿಗಳ ಕುರಿತಂತೆ ನಾವು ನಿಮ್ಮನ್ನು ವಿರೋಧಿಸುವುದಿದೆ. ಸರದಾರ್ ಪಟೇಲರಿಂದ ಅಧಿಕಾರವನ್ನು ಕಸಿದುಕೊಂಡ ಜವಾಹರ್‌ಲಾಲ್ ನೆಹರೂ ಬಗ್ಗೆ ಬೇಸರವಿದೆ. ಆದರೆ ನಾವದನ್ನು ಮರೆತಿದ್ದೇವೆ. ಇಂದಿರಾ ಬಾಬಾಸಾಹೇಬ್ ಅಂಬೇಡ್ಕರ್‌ರ ಸಂವಿಧಾನವನ್ನು ಗಾಳಿಗೆ ತೂರಿ ಎಲ್ಲ ಸ್ವಾತಂತ್ರ್ಯವನ್ನು ಕಸಿಯುವ ತುರ್ತು ಪರಿಸ್ಥಿತಿಯನ್ನು ಹೇರಿ ಭಾರತದ ಇತಿಹಾಸದಲ್ಲೊಂದು ಆರದ ಗಾಯವನ್ನು ಮಾಡಿಬಿಟ್ಟರಲ್ಲ, ನಾವದನ್ನು ನೆನಪಿಸಿಕೊಳ್ಳುವುದಿಲ್ಲ. ಇಂದಿರಾ ತೀರಿಕೊಂಡಾಗ ಸಿಖ್ಖರ ಹತ್ಯೆಯನ್ನು ನೀವೆಲ್ಲ ಸೇರಿ ಮಾಡಿದ್ದಿರಲ್ಲ, ಆ ಕುರಿತು ಸಿಖ್ಖರ ಕಣ್ಣೀರೇ ಇಂಗಿಹೋಗಿಬಿಟ್ಟಿದೆ, ಇನ್ನು ನಮ್ಮದೇನು ಲೆಕ್ಕ! ವಿಷಯ ಬಂತೆಂದೆ ನೆನಪಿಸಿಬಿಡುತ್ತೇನೆ. ಗೋಡ್ಸೆ ಗಾಂಧಿಯವರ ಹತ್ಯೆ ಮಾಡಿದ ಎಂಬ ಕಾರಣಕ್ಕೆ ಚಿತ್ಪಾವನ ಬ್ರಾಹ್ಮಣರನ್ನು ಅಟ್ಟಾಡಿಸಿ ಕೊಂದಿರಲ್ಲ, ಪಾಪ ಆ ಮಂದಿಯೂ ಅದನ್ನು ಮರೆತು ನೀವು ಅಪ್ಪಿ-ತಪ್ಪಿ ‘ಭಾರತ್ ಮಾತಾ ಕಿ’ ಎಂದರೆ ‘ಜೈ’ ಎಂದು ದನಿಗೂಡಿಸುತ್ತಾರೆ. ಬಿಡಿ, ಈ ದೇಶದವರೇ ಅಲ್ಲದ ಸೋನಿಯಾ ಪ್ರಧಾನಿಯಾಗಲೆಂದು ನೀವೆಲ್ಲ ಹಠ ಹಿಡಿದು ಕುಳಿತಿರಿ. ಆಕೆಯ ಮಗ ರಾಹುಲ್ ಇತ್ತೀಚೆಗೆ ಭಾರತ್ ಜೊಡೊ ಯಾತ್ರೆಯಲ್ಲಿ ಭಾರತವನ್ನು ತುಂಡರಿಸುವ ಸಂಕಲ್ಪಗೈದವರನ್ನೆಲ್ಲ ಜೊತೆಗೂಡಿಸಿಕೊಂಡು ನಡೆದ. ‘ಪಾಂಡವರಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡುತ್ತಿದ್ದರೇನು?’ ಎಂದಾತ ಪ್ರಶ್ನಿಸುವಾಗ ಯಾವುದೋ ಹಳ್ಳಿಯ ಮೂರನೇ ತರಗತಿಯ ಮಗುವನ್ನು ಮಾತನಾಡಿಸುತ್ತಿದ್ದೇವೇನೋ ಎನಿಸಿಬಿಡುತ್ತದೆ. ಆತನನ್ನೇ ಪ್ರಧಾನಿ ಮಾಡೋಣ ಎಂದು ನೀವಂದಾಗ ಪ್ರಜಾಪ್ರಭುತ್ವದ ಮರ್ಯಾದೆ ಕಾಪಾಡಲು ನಾವು ನಕ್ಕು ಸುಮ್ಮನಾಗಿಬಿಡುತ್ತೇವೆ. ಇನ್ನು ಈ ಪರಿವಾರದ ಅಳಿಯ ಎಂಬ ಒಂದೇ ಕಾರಣಕ್ಕೆ ರಾಬರ್ಟ್ ವಾದ್ರಾ ಪಡೆದ ಸವಲತ್ತು, ತೋರುವ ಧಿಮಾಕು ನೀವು ನೋಡಿದ್ದೀರಲ್ಲ, ಅದನ್ನೂ ನಾವು ಮನಸ್ಸಿನಲ್ಲಿಟ್ಟುಕೊಂಡಿಲ್ಲ ಏಕೆಂದರೆ ಇವರೆಲ್ಲರೂ ನಾಳೆ ತಮ್ಮದ್ದೇ ಒಂದು ದೇಶಕ್ಕೆ ಮರಳಿಬಿಡಬಲ್ಲರು. ನಾನು, ನೀವು ಇಲ್ಲಿಯೇ ಇರಬೇಕು. ಇದು ನಮ್ಮ ಪೂರ್ವಜರು ಜತನದಿಂದ ಕಟ್ಟಿದ ದೇಶ. ಇದು ಬೆಳೆದಷ್ಟೂ ಲಾಭವುಣ್ಣುವವರು ನಾವಷ್ಟೇ ಅಲ್ಲ, ಇಡಿಯ ಜಗತ್ತು. 

ಈಗೇಕೆ ಧಾವಂತದಿಂದ ಈ ಪತ್ರವೆಂದರೆ ಜಾರ್ಜ್ ಸೊರೊಸ್ ಇತ್ತೀಚೆಗಷ್ಟೇ ಮ್ಯುನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ನಲ್ಲಿ ಭಾರತದ ವಿರುದ್ಧ ಗುಟುರು ಹಾಕಿದ್ದಾನೆ, ‘ಮೋದಿ ಮತ್ತು ಅದಾನಿ ಇಬ್ಬರೂ ಆತ್ಮೀಯರು. ಅದಾನಿಯ ಕಂಪನಿ ಸ್ಟಾಕ್ ಮಾರುಕಟ್ಟೆಯಿಂದ ಹಣ ಕ್ರೋಢೀಕರಿಸಲು ಹೋಗಿ ಸೋತಿದೆ. ಆತ ಸ್ಟಾಕ್ಗಳ ಏರುಪೇರಿಗೆ ಕಾರಣನಾದವ. ಈ ವಿಷಯದಲ್ಲಿ ಮೋದಿ ಸುಮ್ಮನಿದ್ದಾರೆ. ಅವರು ವಿದೇಶದ ಹೂಡಿಕೆದಾರರಿಗೆ ಮತ್ತು ತಮ್ಮ ಸಂಸತ್ತಿಗೆ ಉತ್ತರ ಕೊಡಬೇಕಿದೆ’ ಎಂದಿದ್ದಾನಲ್ಲದೇ ಪ್ರಜಾಪ್ರಭುತ್ವವನ್ನು ಉಳಿಸಲಿಕ್ಕಾಗಿ ಭಾರತದಲ್ಲಿ ಸರ್ಕಾರವನ್ನು ಬೇಕಿದ್ದರೂ ಬದಲಾಯಿಸಬಲ್ಲೆ ಎಂಬ ಹೇಳಿಕೆ ಕೊಟ್ಟಿದ್ದಾನೆ. ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಕೂಡ ರಾಷ್ಟ್ರೀಯವಾದಿ ನಾಯಕರನ್ನು ಕಿತ್ತುಬಿಸುಟಲು ತಾನು ಹಣ ಹೂಡುವುದಾಗಿ ದರ್ಪದಿಂದಲೇ ಹೇಳಿದ್ದ. ಆತನ ದೃಷ್ಟಿ ನರೇಂದ್ರಮೋದಿಯವರತ್ತಲೇ ನೆಟ್ಟಿತೆಂಬುದು ಎಂಥವನಿಗೂ ಅರಿವಾಗುವಂತಿತ್ತು. 

ಅದರಲ್ಲೇನು ಮಹಾ? ಅನೇಕರು ರಾಷ್ಟ್ರದ ಪ್ರಮುಖರನ್ನು ಬದಿಗೆ ಸರಿಸಿ ಮತ್ತೊಬ್ಬರನ್ನು ಕೂರಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ಭಾರತದಲ್ಲಿ 28 ಪಕ್ಷಗಳು ಒಟ್ಟಾಗಿ ಮೋದಿಯನ್ನು ಕೆಳಗಿಳಿಸಿ ತಾವುಗಳೇ ಪ್ರಧಾನಿಯಾಗಲು ಹಾತೊರೆಯುತ್ತಿದ್ದಾರೆ. ಜಾರ್ಜ್ ಸೊರೊಸ್‌ದೇನು ವಿಶೇಷ? ಗಮನಿಸಬೇಕಾಗಿರುವ ಸಂಗತಿ ಇರುವುದೇ ಇಲ್ಲಿ. ಹಂಗೇರಿಯಲ್ಲಿ ಹುಟ್ಟಿದ ಸೊರೊಸ್ ಮೂಲತಃ ಯಹೂದಿ ಕುಟುಂಬಕ್ಕೆ ಸೇರಿದವ. ಆದರೆ ನಾಜಿಗಳ ಒತ್ತಡ ತೀವ್ರವಾದಾಗ ತನ್ನ ತಾನು ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡು ನಾಜಿಗಳೊಂದಿಗೆ ಕಪಟವಾಡಿಕೊಂಡು ಇದ್ದುಬಿಟ್ಟ. ಓರಗೆಯ ಅನೇಕ ಯಹೂದಿಗಳನ್ನು ನಾಜಿಗಳಿಗೆ ಗುರುತಿಸಲು ಸಹಾಯ ಮಾಡಿದವ ಈತನೇ ಎಂದು ಆರೋಪಿಸಲಾಗುತ್ತದೆ. ತಾನು ನೀಡಿದ ಸಂದರ್ಶನವೊಂದರಲ್ಲಿ ಆತ ಇದನ್ನು ಪರಿಪೂರ್ಣವಾಗಿ ಏನೂ ಅಲ್ಲಗಳೆದಿಲ್ಲ. ಯಹೂದಿಗಳ ಮೇಲಿನ ಅಂದಿನ ಆಕ್ರೋಶ ಅವನಿಗೆ ಇಂದೂ ತೀರಿದಂತೆ ಕಾಣುವುದಿಲ್ಲ. ಹೀಗಾಗಿ ಇಸ್ರೇಲ್ ರಾಷ್ಟ್ರವಾಗಬೇಕು ಎಂದು ಬಯಸುತ್ತಾನಾದರೂ ಅಲ್ಲಿಯೂ ರಾಷ್ಟ್ರವಾದ ಉಳಿಯಬಾರದು ಎಂದು ತನ್ನದ್ದೇ ವಾದ ಮಂಡಿಸುತ್ತಾನೆ. 1956ರಲ್ಲಿ ಉದ್ಯೋಗವರಸಿಕೊಂಡು ನ್ಯೂಯಾರ್ಕಿಗೆ ಬಂದ ಸೊರೊಸ್ ಕಡು ಕಷ್ಟದಿಂದಲೇ ಮೇಲೇರಿದವ. ತನ್ನ ವ್ಯಾಪಾರಿ ಚಾಕಚಕ್ಯತೆಯನ್ನು ಬಳಸಿಕೊಂಡು ಶೇರು ಮಾರುಕಟ್ಟೆಯಲ್ಲಿ ಹಣಹೂಡುವ ಧಂಧೆ ಆರಂಭಿಸಿದ. ಡಬಲ್ ಈಗಲ್, ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ ಕಂಪನಿಗಳು ಅವನದ್ದೇ. ಆತ ಅಮೇರಿಕಾದ ಇತಿಹಾಸದಲ್ಲೇ ಒಬ್ಬ ಯಶಸ್ವೀ ಹೂಡಿಕೆದಾರ ಎಂಬ ಹೆಸರು ಮಾಡಿದ್ದಾನೆ. ನೂರು ಹರ್ಷದ್ ಮೆಹ್ತಾಗಳನ್ನು ಹಾಕಿದರೆ ಒಬ್ಬ ಸೊರೊಸ್ ಹುಟ್ಟಬಹುದೇನೋ! ಸೊರೊಸ್ ಎಷ್ಟು ಸವಾಲುಗಳನ್ನು ಮೈಮೇಲೆಳೆದುಕೊಂಡನೆಂದರೆ ಅಷ್ಟೇ ವೇಗವಾಗಿ ತನ್ನ ಕಂಪನಿಯ ಮೌಲ್ಯವನ್ನೂ ವರ್ಧಿಸುತ್ತಾ ಹೋದ. ಅನೇಕ ರಾಷ್ಟ್ರಗಳು ಆತನನ್ನು ಕ್ರಿಮಿನಲ್ನಂತೆ ಕಾಣುತ್ತವೆ. 1992ರಲ್ಲಿ ಆತ ಬ್ರಿಟೀಷ್ ಸ್ಟಾಕ್ ಮಾರುಕಟ್ಟೆಯಲ್ಲಿ ತಾನು ಹೂಡಿದ್ದ 10 ಬಿಲಿಯನ್ ಡಾಲರ್‌ಗಳನ್ನು ಏಕಾಕಿ ತೆಗೆದು ಇಡಿಯ ಮಾರುಕಟ್ಟೆ ಕುಸಿಯುವಂತೆ ಮಾಡಿಬಿಟ್ಟಿದ್ದ. ಅಲ್ಲಿನ ಬ್ಯಾಂಕುಗಳು ಪತರಗುಟ್ಟಿಹೋಗಿದ್ದವು. ಬ್ರಿಟೀಷ್ ಪೌಂಡು ನೋಡನೋಡುತ್ತಲೇ ಕುಸಿದುಹೋಯ್ತು. ಕುಳಿತಲ್ಲೇ ಸೊರೊಸ್ ಒಂದು ಶತಕೋಟಿ ಅಮೇರಿಕನ್ ಡಾಲರ್ಗಳನ್ನು ಸಂಪಾದಿಸಿಬಿಟ್ಟ. ಇಂಗ್ಲೆಂಡಿನ ಬ್ಯಾಂಕು ಮುರಿದವ ಎಂದೇ ಆತನಿಗೆ ಹೆಸರು. 

1997ರಲ್ಲಿ ಏಷ್ಯಾದಲ್ಲಿ ಆರ್ಥಿಕ ಸಮಸ್ಯೆ ಎದುರಾಯ್ತಲ್ಲ, ಅದರ ಹಿಂದೆ ಇದ್ದ ದೊಡ್ಡ ಕೈ ಸೊರೊಸ್‌ನದ್ದೇ. ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾಗಳಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಮಂದಿ ಈ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾದರು. ಅಷ್ಟೂ ಜನರ ರಕ್ತ ಮೆತ್ತಿಕೊಂಡಿರುವುದು ಸೊರೊಸ್ನ ಕೈಗೇ! ಮಲೇಷಿಯಾದ ಪ್ರಧಾನಮಂತ್ರಿ ಮಹತಿರ್ ಮೊಹಮ್ಮದ್ ಆ ರಾಷ್ಟ್ರದ ಕರೆನ್ಸಿ ಕುಸಿಯಲು ಕಾರಣ ಸೊರೊಸ್ ಎಂದೇ ಆರೋಪಿಸುತ್ತಾರೆ. 1988ರಲ್ಲಿ ಫ್ರಾನ್ಸ್ ನಲ್ಲಿ ಸ್ಟಾಕ್ ಮಾರುಕಟ್ಟೆ ಏರುಪೇರಾಗಲು ಸೊರೊಸ್ ಕಾರಣನಾಗಿದ್ದ ಎಂಬುದಕ್ಕೆ ಅಲ್ಲಿನ ನ್ಯಾಯಾಲಯ 2002ರ ಡಿಸೆಂಬರ್ನಲ್ಲಿ ಆತನಿಗೆ 29 ಲಕ್ಷ ಡಾಲರ್ಗಳ ದಂಡ ವಿಧಿಸಿತ್ತು. ಕಾಲಕ್ರಮದಲ್ಲಿ ಆತನ ಕಂಪನಿ ಇತರರಿಂದ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಿತು. ಈ ವೇಳೆಗಾಗಲೆ ಅನೇಕ ರಾಷ್ಟ್ರಗಳೊಂದಿಗೆ ಆಟವಾಡಿದ ಸೊರೊಸ್ ತಾನೇ ಬಿಲಿಯನೇರ್ ಆಗಿಬಿಟ್ಟಿದ್ದ. ತಾನು ಮಾಡಿದ ಯಾವ ಕೆಲಸಕ್ಕೂ ಪಶ್ಚಾತ್ತಾಪ ಪಡಬೇಕಿಲ್ಲ ಎಂಬುದೇ ಆತನ ವಾದವಾಗಿತ್ತು. ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ರಷ್ಯಾ ಇಲ್ಲಿನ ಆರ್ಥಿಕತೆ ಕುಸಿಯಲು ಕಾರಣವಾಗಿದ್ದಕ್ಕೆ ನಿಮಗೆ ಬೇಸರವಿದೆಯೇ? ಎಂದು ಪತ್ರಕರ್ತ ಕೇಳಿದರೆ, ‘ನಾನು ಲಾಭ ಗಳಿಸಲೆಂದೇ ವ್ಯಾಪಾರ ಮಾಡುತ್ತೇನೆ. ಈ ವಿಚಾರ ಬಂದಾಗ ಅದನ್ನು ಬಿಟ್ಟು ಬೇರೆ ಯೋಚಿಸುವುದಿಲ್ಲ. ಈ ಹಂತದಲ್ಲಿ ನಡೆಯುವ ಯಾವುದೇ ಸಾಮಾಜಿಕ ಅವಘಡಗಳಿಗೂ ನಾನು ಜವಾಬ್ದಾರನಲ್ಲ. ಆದರೆ ಮಾನವೀಯತೆ ವಿಚಾರ ಬಂದಾಗ ನಾನು ಬೇರೆ ರೀತಿ ಯೋಚಿಸುತ್ತೇನಷ್ಟೆ’ ಎನ್ನುತ್ತಾನೆ. ಒಂದೆಡೆ ಸಾವಿರಾರು ಮಂದಿಯ ಸಾವಿಗೆ ಕಾರಣನಾಗಿ ಮತ್ತೊಂದೆಡೆ ಈ ಲಾಭದ ಒಂದಷ್ಟು ಹಣವನ್ನು ಸತ್ತವರ ಮಕ್ಕಳ ಅಧ್ಯಯನಕ್ಕೆಂದು ಮೀಸಲಾಗಿಟ್ಟುಬಿಟ್ಟರೆ ಆದೀತೇನು? 

ಸೊರೊಸ್ ಕೆಲಸ ಮಾಡುವ ಸ್ವರೂಪ ಹೇಗೆ ಗೊತ್ತೇ? ಆತ 1984ರಲ್ಲಿ ಓಪನ್ ಸೊಸೈಟಿ ಫೌಂಡೇಶನ್ ಎಂಬ ದತ್ತಿ ಸಂಸ್ಥೆಯನ್ನು ಆರಂಭಿಸಿದ. ಆತನ ವೆಬ್ಸೈಟನ್ನು ನಂಬುವುದಾದರೆ ಇದುವರೆಗೂ 32 ಬಿಲಿಯನ್ ಡಾಲರ್‌ಗಳಷ್ಟು ಸ್ವಂತ ಹಣವನ್ನು ಅದಕ್ಕಾಗಿ ನೀಡಿದ್ದಾನೆ. ಈ ಫೌಂಡೇಶನ್ ಜಗತ್ತಿನಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ದಾನ ನೀಡುತ್ತದೆ. ಆ ಮೂಲಕ ಆಯಾ ರಾಷ್ಟ್ರಗಳಲ್ಲಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಈ ಸ್ವಯಂ ಸೇವಾ ಸಂಸ್ಥೆಗಳು ಬಹುಪಾಲು ಎಡಪಂಥೀಯ ಚಿಂತಕರದ್ದೇ ಆಗಿದ್ದು ದೇಶ ವಿಭಜಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವಂಥವು. ಸ್ವತಃ ಪ್ರಧಾನಮಂತ್ರಿ ಮನಮಹೋನ್ ಸಿಂಗರ ಮಗಳು ಅಮೃತಾ ಸಿಂಗ್ ಈ ಸಂಸ್ಥೆಯ ನಿರ್ದೇಶಕಿಯಾಗಿ ದುಡಿದಿದ್ದವಳು. ಪ್ರಧಾನಮಂತ್ರಿಯೊಬ್ಬರ ಮಗಳು ಇಂತಹ ಸಂಸ್ಥೆಯೊಂದರಲ್ಲಿ ಇದ್ದಾಳೆ ಎಂದರೆ ಸರ್ಕಾರದ ಮೇಲೆ ಸೊರೊಸ್ ಹೊಂದಿದ್ದ ಪ್ರಭಾವ ಎಂಥದ್ದಿರಬಹುದು ಎಂದು ಯೋಚಿಸಿ! ಇಷ್ಟೇ ಅಲ್ಲ, ಸೋನಿಯಾ ಆಪ್ತನಾಗಿದ್ದ ಹರ್ಷ್ ಮಂದಾರ್ ಕೂಡ ಈತನೊಡನೆ ಕೆಲಸ ಮಾಡುತ್ತಿರುವವನೇ. ಹರ್ಷ್ ಮಂದಾರ್ ಸಾಮಾನ್ಯವಾದ ವ್ಯಕ್ತಿಯಲ್ಲ. ಆತ ಐಎಎಸ್ ಅಧಿಕಾರಿಯಾಗಿದ್ದು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ, 2002ರಲ್ಲಿ ನಡೆದ ಗುಜರಾತ್ ದಂಗೆಯ ನೆಪಹೇಳಿ ರಾಜಿನಾಮೆ ಕೊಟ್ಟು, ತನ್ನದ್ದೇ ಆದ ಸಾಮಾಜಿಕ ಸೇವಾ ಸಂಘಟನೆಗಳ ಮೂಲಕ ಆರಾಮದಾಯಕ ಬದುಕನ್ನು ಅನುಭವಿಸುತ್ತಿದ್ದಾನೆ. ಈತನ ಸರ್ಕಾರೇತರ ಸಂಸ್ಥೆಗಳಿಗೆ ಸೊರೊಸ್ ಉದಾರವಾಗಿ ಹಣ ನೀಡುತ್ತಾನೆ. ನಿಮಗೆ ಗಾಬರಿಯಾಗುವ ಸಂಗತಿ ಹೇಳಲೇ? ಆತ ಸೊನಿಯಾ ಯುಪಿಎ ಸರ್ಕಾರದ ಸಂದರ್ಭದಲ್ಲಿ ರೂಪಿಸಿಕೊಂಡಿದ್ದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯನೂ ಆಗಿದ್ದ. ಆ ಹೊತ್ತಿನಲ್ಲೇ ಬಂದ ಹಿಂದೂವಿರೋಧಿ ಕಮ್ಯುನಲ್ ವೈಯಲೆನ್ಸ್ ಬಿಲ್ ಈತನೇ ತಯಾರಿಸಿದ್ದು. ಆ್ಯಕ್ಷನ್ ಏಡ್ ಇಂಡಿಯಾ ಎಂಬ ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥನಾಗಿರುವ ಈತ ತನ್ನ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್‌ಗೆ ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಗಳಿಂದ ಪಡೆದುಕೊಂಡಿದ್ದಾನೆ. ಎನ್ಕೌಂಟರ್‌ಗೆ ಒಳಗಾದ ಇಶ್ರತ್ ಜಹಾನ್‌ಳಿರಲಿ, ಮುಂಬೈ ದಾಳಿಗೆ ಕಾರಣನಾದ ಯಾಕುಬ್ ಮೆಮನ್ ಇರಲಿ, ಕೊನೆಗೆ ಅಜ್ಮಲ್ ಕಸಬ್, ಅಫ್ಜಲ್ ಗುರುಗಳಾದರೂ ಸರಿ ಅವರೆಲ್ಲರ ಪರವಾಗಿ ದನಿ ಎತ್ತುವವರಲ್ಲಿ ಹರ್ಷ್ ಇದ್ದೇ ಇರುತ್ತಾನೆ. ಅಯೋಧ್ಯೆಯಲ್ಲಿ ರಾಮಮಂದಿರವಾಗಬೇಕೆಂಬ ಆದೇಶ ಬಂದಾಗ ಅದನ್ನು ಪರಿಶೀಲಿಸಬೇಕೆಂದು ನ್ಯಾಯಾಲಯಕ್ಕೆ ಹೋದ 40 ಮಂದಿಯಲ್ಲಿ ಈತನೂ ಇದ್ದ. ಸಿಎಎ ವಿರುದ್ಧ ದೆಹಲಿಯ ಶಾಹಿನ್‌ಬಾಗ್‌ನಲ್ಲಿ ಪ್ರತಿಭಟನೆಗೆ ಕೂತಿದ್ದರಲ್ಲ, ಆಗ ತನ್ನ ಕಾರ್ವಾನ್-ಎ-ಮೊಹಬ್ಬತ್ ಎಂಬ ಸಂಘಟನೆಯ ಮೂಲಕ ಪ್ರತಿಭಟನೆಯ ಸೂತ್ರದಾರ ಶರ್ಜಿಲ್ ಇಮಾಮ್‌ನಿಗೆ ಬೆಂಬಲ ಸೂಚಿಸಿದ್ದಲ್ಲದೇ ‘ಈಗ ನಿರ್ಣಯ ಸಂಸತ್ತಿನಲ್ಲೋ, ನ್ಯಾಯಾಲಯದಲ್ಲೋ ಆಗದು. ಅಯೋಧ್ಯೆ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಜಾತ್ಯತೀತತೆಯನ್ನು ರಕ್ಷಿಸಲಿಲ್ಲ. ಹೀಗಾಗಿಯೇ ಕದನ ಬೀದಿಯಲ್ಲೇ ನಡೆದುಬಿಡಲಿ’ ಎಂದಿದ್ದ. 

ಇಷ್ಟಕ್ಕೇ ಮುಗಿಯಲಿಲ್ಲ ಕರ್ನಾಟಕದ ಹರ್ತಿಕೋಟೆಯ ಸಲಿಲ್ ಶೆಟ್ಟಿ ಭಾರತ್ ಜೊಡೊ ಯಾತ್ರೆಯಲ್ಲಿ ರಾಹುಲ್ ಕೈ ಕೈ ಹಿಡಿದು ನಡೆದಿದ್ದ. ಆತ ಸೊರೊಸ್‌ನ ಓಪನ್ ಸೊಸೈಟಿ ಫೌಂಡೇಶನ್ ಜಾಗತಿಕ ಉಪಾಧ್ಯಕ್ಷ. ಆತನೇ ಈ ಹಿಂದೆ ಆಮ್ನೆಸ್ಟಿ ಇಂಟರ್ನ್ಯಾಷನಲ್‌ನ ಕಾರ್ಯದರ್ಶಿಯೂ ಆಗಿದ್ದ. ಅಂದಹಾಗೆ ಇದೇ ಸಂಸ್ಥೆ ಭಾರತ ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆಯಾಗಿ ವರ್ತಿಸುತ್ತಿದೆ ಎಂಬ ವರದಿ ಕೊಟ್ಟಿತ್ತು. ಈಗ ಆ ವರದಿಯ ಮಹತ್ವ ಅರಿವಾಗುತ್ತಿದ್ದಿರಬಹುದಲ್ಲವೇ? 

ಸೊರೊಸ್ ತನ್ನ ತಂಡದ ಮೂಲಕ ಅನೇಕ ಮಾಧ್ಯಮಗಳಿಗೂ ಹಣ ನೀಡುತ್ತಾನೆ. ಆ ಮೂಲಕ ಅಭಿಪ್ರಾಯವನ್ನೇ ಕೊಂಡುಕೊಳ್ಳುತ್ತಾನೆ. ಅನೇಕ ರಾಷ್ಟ್ರಗಳಲ್ಲಿ ತನಗೆ ಬೇಕಾದ, ತಾನು ಹೇಳಿದಂತೆ ಕೇಳುವ ಪಕ್ಷಗಳನ್ನು ಅಧಿಕಾರಕ್ಕೆ ತರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾನೆ. ಹಂಗೇರಿಯಂತಹ ಅನೇಕ ರಾಷ್ಟ್ರಗಳು ಆತನ ಹೂಡಿಕೆಯನ್ನು ವಿರೋಧಿಸುವುದು ಈ ಕಾರಣಕ್ಕಾಗಿಯೇ. 

ಈಗ ಎಲ್ಲವನ್ನೂ ಮತ್ತೊಮ್ಮೆ ಅವಲೋಕಿಸಿ ನೋಡಿ. ಸ್ವತಃ ಕ್ರಿಮಿನಲ್‌ಗಳ ಸಾಲಿಗೆ ಸೇರುವ ಸೊರೊಸ್ ಭಾರತದಲ್ಲಿ ಅನೇಕ ಸೇವಾ ಸಂಸ್ಥೆಗಳ ಮೂಲಕ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಾನೆ. ಮಾಧ್ಯಮಗಳನ್ನು ಹಿಡಿತದಲ್ಲಿರಿಸಿಕೊಳ್ಳುವ ಮೂಲಕ ಜನಾಭಿಪ್ರಾಯ ರೂಪಿಸುತ್ತಾನೆ. ಜಾಗತಿಕ ವರದಿಗಳು ಭಾರತದ ವಿರುದ್ಧ ಇರುವಂತೆ ನೋಡಿಕೊಳ್ಳುತ್ತಾನೆ. ಅಜೀಂ ಪ್ರೇಮ್‌ಜಿ ಥರದವರ ಮೂಲಕ ಇಲ್ಲಿ ಜನಮೆಚ್ಚುಗೆಯ ಕಾರ್ಯ ನಡೆಸುವಂತೆ ಮಾಡಿ ಪಿತೂರಿ ಮಾಡುತ್ತಾನೆ. ಕೊನೆಗೆ ಇವೆಲ್ಲದರ ಲಾಭ ಪಡೆಯಲು ಕಾಂಗ್ರೆಸ್ ನಾಯಕರ ಯಾತ್ರೆಗಳಿಗೆ ಹಣ ಕೊಡುತ್ತಾನೆ, ತನ್ನವರನ್ನೂ ಕಳಿಸುತ್ತಾನೆ. ವಿದೇಶದಲ್ಲಿ ಕೂತು ಭಾರತವನ್ನು ಚೂರು ಮಾಡುವ ಈ ಕಲ್ಪನೆ ಬ್ರಿಟೀಷರು ಭಾರತವನ್ನಾಳಿದಂತಲ್ಲವೇನು? 

ಆಕ್ರಮಣಕಾರಿಗಳನ್ನು ತುಂಡು ಬಟ್ಟೆ ಧರಿಸಿ ಮಹಾತ್ಮ ಓಡಿಸಿದರೆ, ಆತನ ಹೆಸರಿಟ್ಟುಕೊಂಡು ಬೇರೊಂದು ರೂಪದಲ್ಲಿ ಅವರನ್ನೇ ಕರೆತರಲು ಯತ್ನಿಸುವುದು ಎಷ್ಟು ಸರಿ?  ಮೊದಿಯನ್ನು ವಿರೋಧಿಸಿ ಅಭ್ಯಂತರವಿಲ್ಲ. ಆದರೆ ಆ ಧಾವಂತದಲ್ಲಿ ಭಾರತವನ್ನೇ ಪ್ರಪಾತಕ್ಕೆ ತಳ್ಳಬೇಡಿ. 

ಇದು ನನ್ನ ಕಳಕಳಿಯ ಕೋರಿಕೆ ಅಷ್ಟೆ!

ಎಲ್ಲದ್ದಕ್ಕೂ ರಾಜಕಾರಣವೇ ಪರಿಹಾರವಾ?

ಎಲ್ಲದ್ದಕ್ಕೂ ರಾಜಕಾರಣವೇ ಪರಿಹಾರವಾ?

ಮತ್ತೊಂದು ಚುನಾವಣೆ ಬಂತು. ಎಷ್ಟೋ ಜನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ರಾತೋ ರಾತ್ರಿ ದೇಶಭಕ್ತರು, ಹಿಂದುತ್ವನಿಷ್ಠರೂ ಆಗಿಬಿಡುತ್ತಾರೆ. ಕಾಂಗ್ರೆಸ್ಸಿನ ಟಿಕೆಟ್ ಬೇಕೆಂದುಕೊಂಡವರು ಲೋಡುಗಟ್ಟಲೆ ಹೂವು, ಹಣ್ಣುಗಳನ್ನು ಹಿಡಿದುಕೊಂಡು ನಾಯಕರುಗಳ ಮನೆಮುಂದೆ ನಿಂತು ಜೀ ಹುಜೂರಿ ಮಾಡುತ್ತಾರೆ. ಜೆಡಿಎಸ್‌ನಲ್ಲೇ ಆರಾಮು. ಅಲ್ಲಿ ಒಂದು ಪರಿವಾರದ ಮುಂದೆ, ಒಬ್ಬ ವ್ಯಕ್ತಿಯ ಮುಂದೆ ನಿಂತರೆ ಸಾಕು. ಗೆಲ್ಲುವ ಭರವಸೆ ಇದೆಯೋ ಇಲ್ಲವೋ ಟಿಕೆಟ್ ಸಿಗುವ ಭರವಸೆಯಂತೂ ಇದೆ. ಅಚ್ಚರಿಯೇನು ಗೊತ್ತೇ? ಟಿಕೆಟ್ ಕೇಳುವ ಪ್ರತಿಯೊಬ್ಬನೂ ತಾನೇ ಗೆಲ್ಲುತ್ತೇನೆ ಎಂಬುದಕ್ಕೆ ಸಾಕಷ್ಟು ಅಂಕಿ-ಅಂಶಗಳನ್ನು ಸಿದ್ಧಪಡಿಸಿ ಅದನ್ನೂ ಜೊತೆಗೇ ತಂದಿರುತ್ತಾನೆ. ನಿರಂತರವಾಗಿ ಚುನಾವಣೆಗಳನ್ನು ಗೆಲ್ಲುತ್ತಾ ಜನರಿಂದ ಅಜಾತಶತ್ರು ಎನಿಸಿಕೊಂಡಿರುವ ವ್ಯಕ್ತಿಗಳ ಮುಂದೆಯೂ ತಾವು ಗೆಲ್ಲಬಹುದಾಗಿರುವ ಮಾರ್ಗವನ್ನು ಈ ಎದುರಾಳಿಗಳು ಹೇಳುವುದನ್ನೆಲ್ಲ ಕಂಡಾಗ ಅನೇಕ ಬಾರಿ ನಗು ಬರುತ್ತದೆ. ಕಾಶಿಯಲ್ಲಿ ಮೋದಿಯವರ ವಿರುದ್ಧ ಗೆದ್ದೇ ಗೆಲ್ಲುತ್ತೇನೆಂದು ಕೇಜ್ರಿವಾಲ್ ಹೇಳಿರಲಿಲ್ಲವೇ? ಇವರಿಗೆಲ್ಲ ಠೇವಣಿ ಉಳಿಸಿಕೊಳ್ಳುವುದೂ ಕಷ್ಟವಾಗಿಬಿಟ್ಟಿತ್ತು. ರಾಜಕೀಯ ಕ್ಷೇತ್ರವೇ ಏಕೆ ಬೇಕು ಎಂದು ಕೇಳಿದರೆ, ಜನಸೇವೆ ಮಾಡಲು ಎಂಬ ಸಿದ್ಧ ಉತ್ತರ ಇವರ ಬಳಿ ಇರುತ್ತದೆ. ಜನರ ಸೇವೆ ಮಾಡಲು ಬೇರೆ ದಾರಿಯೇ ಇಲ್ಲವೇ? ಎಂದು ಕೇಳಿನೋಡಿ, ಅಧಿಕಾರವಿದ್ದರೆ ಹೆಚ್ಚು ಜನರನ್ನು ತಲುಪಬಹುದು ಎನ್ನುತ್ತಾರೆ. ಇವರಿಗಿರುವ ದೂರದೃಷ್ಟಿ, ಕಾಳಜಿ ಇವುಗಳನ್ನು ಗಮನಿಸಿದರೆ ಇವರು ಎಷ್ಟು ಹೆಚ್ಚು ಮಂದಿಗೆ ತಲುಪಬಲ್ಲರೋ ಎಂಬುದನ್ನು ಎಂಥವರೂ ಊಹಿಸಬಲ್ಲ. ವಾಸ್ತವವಾಗಿ ರಾಜಕಾರಣಿಯಾಗಿ ಜನಸೇವೆ ಮಾಡುತ್ತೇನೆ ಎನ್ನುವುದು ಅಕ್ಷರಶಃ ಮೋಸ. ಆತ ಶಾಸಕನಾಗಿ, ಮಂತ್ರಿಯಾಗಿ ತನ್ನ ಕರ್ತವ್ಯವನ್ನು ಮಾಡಬೇಕಾಗಿದೆ, ಸೇವೆ ಎಂಬ ಉಪಕಾರವನ್ನೇನೂ ಅಲ್ಲ!

Sridhar Vembu in the Tenkasi office of ZOHO

ಇಷ್ಟಕ್ಕೂ ರಾಜಕಾರಣ ಒಂದೇ ಅಂತಿಮ ಗುರಿ ಎಂದು ಜನ ಭಾವಿಸುವಂತಾಗಿರುವುದು ಬಲು ದುರದೃಷ್ಟಕರ ಸಂಗತಿ. ನೀವು ಮಾಡುವ ಎಲ್ಲ ಕೆಲಸಗಳನ್ನು ಬದಿಗಿಟ್ಟು ರಾಜಕಾರಣಕ್ಕೆ ಧುಮುಕಬೇಕೆಂದು ಎಲ್ಲರೂ ಅಪೇಕ್ಷಿಸುತ್ತಾರೆ. ಮೋದಿಯ ಅಲೆಯಲ್ಲಿ ಜನರಿಗೆ ಪರಿಚಯವೇ ಇಲ್ಲದ ವೈದ್ಯರೊಬ್ಬರು ಸುಶಿಕ್ಷಿತನಾಗಿರುವ ತಾನು ಸಂಸತ್ ಸದಸ್ಯನಾಗಿ ಮೋದಿಗೇಕೆ ಬೆಂಬಲವಾಗಿ ನಿಲ್ಲಬಾರದು ಎಂದು ಕೇಳಿದಾಗ, ನಗುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಅನೇಕ ಐಎಎಸ್ ಅಧಿಕಾರಿಗಳು ತಾವು ಅಧಿಕಾರದಲ್ಲಿರುವಾಗಲೇ ರಾಜಕಾರಣಿಯಾಗುವ ಕನಸನ್ನು ಕಾಣುತ್ತಿರುವುದು ಈಗ ಹೊಸತೇನೂ ಅಲ್ಲ. ರಾಜಕಾರಣವೆಂಬ ಈ ಕುಲುಮೆ ಸದ್ಯಕ್ಕಂತೂ ಚೆನ್ನಾಗಿ ಕುದಿಯುತ್ತಿದೆ. ಇಂಥವರ ಬಳಿ ನೀವು ಜನಸೇವೆಯ ಭಿನ್ನ-ಭಿನ್ನ ಸ್ವರೂಪಗಳ ಕುರಿತಂತೆ ಮಾತನಾಡಿದರೆ ಅವರ ತಲೆಗೆ ಹತ್ತುವುದೇ ಇಲ್ಲ. ವಾಸ್ತವವಾಗಿ ರಾಜಕಾರಣ ಸರಿಯಾದ ದಿಕ್ಕಿನಲ್ಲಿರಬೇಕೆಂದರೆ ಸಮರ್ಥ ಸಮಾಜದ ನಿರ್ಮಾಣ ಆಗಬೇಕು. ಹಾಳಾದ ಸಮಾಜ ನಿಕೃಷ್ಟ ವ್ಯಕ್ತಿಗಳನ್ನೇ ಭಿನ್ನ ಭಿನ್ನ ಕ್ಷೇತ್ರಗಳಿಗೆ ಕೊಡುಗೆಯಾಗಿ ನೀಡುತ್ತದೆ. ರಾಜಕೀಯ ಕ್ಷೇತ್ರವೂ ಅದರಿಂದ ಹೊರತಲ್ಲ. ಹೀಗಾಗಿ ಶ್ರೇಷ್ಠ ರಾಜಕಾರಣಿಗಳು ಬೇಕೆಂದರೆ ಶ್ರೇಷ್ಠ ಸಮಾಜ ಮಾತ್ರ ಅದನ್ನು ಕೊಡಬಲ್ಲದು. ಹೀಗಾಗಿ ಯಾರ್ಯಾರು ಸಮಾಜ ಸೇವೆ ಎಂಬ ಮಾತುಗಳನ್ನಾಡುತ್ತಾರೋ ಅವರನ್ನೆಲ್ಲ ಸಮಾಜ ನಿರ್ಮಾಣದ ಕಾರ್ಯಕ್ಕೆ ಕೆಲದಿನ ಹಚ್ಚಿದರೆ ಸರಿಯಾದೀತೇನೋ! ಇತ್ತೀಚೆಗೆ ದೊಡ್ಡ ಉದ್ಯಮಿಯೊಬ್ಬರನ್ನು ಭೇಟಿಯಾಗಿದ್ದೆ. ದೊಡ್ಡ ಕಂಪನಿಯೊಂದರ ಟ್ರಸ್ಟಿಯಾಗಿದ್ದ ಅವರು ಈಗ ಪತ್ರಿಕೆಗಳಿಗೆ ಬರೆಯುತ್ತಾ ಟಿವಿ ಡಿಬೆಟ್‌ಗಳಲ್ಲಿ ಕೂರುತ್ತಾ ಭಾರತ ನಿರ್ಮಾಣದ ಕುರಿತಂತೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರೊಡನೆ ಮಾತನಾಡುವಾಗ ಅವರು ಸಾಮಾಜಿಕ ಚಟುವಟಿಕೆ ಮಾಡುವವರನ್ನು ಕೆಲಸಕ್ಕೆ ಬಾರದವರೆಂದು ಜರಿದದ್ದಲ್ಲದೇ ಸಣ್ಣಪುಟ್ಟ ಕೆಲಸಗಳಿಂದ ಮಹತ್ತರ ಬದಲಾವಣೆ ಸಾಧ್ಯವಿಲ್ಲ, ಅದಕ್ಕೆ ಆರ್ಥಿಕವಾಗಿ ಭಾರತವನ್ನು ಬಲಾಢ್ಯಗೊಳಿಸುವುದೊಂದೇ ಮಾರ್ಗ ಎಂದರು. ನನಗೇನೂ ವಿಶೇಷವೆನಿಸಲಿಲ್ಲ. ಬಂಡವಾಳಶಾಹಿ ಮಾನಸಿಕತೆಯ ಪ್ರತಿಯೊಬ್ಬನಿಗೂ ಭಾರತ ಮತ್ತೊಮ್ಮೆ ಶ್ರೇಷ್ಠ ಮಟ್ಟಕ್ಕೇರಬೇಕೆಂದರೆ ಆರ್ಥಿಕ ಮಾರ್ಗವೊಂದೇ ಸೂಕ್ತವಾದ್ದು ಎನಿಸುತ್ತದೆ. ಎಲ್ಲಿಯವರೆಗೂ ಮೋದಿ ವ್ಯಾಪಾರಿಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿರುತ್ತಾರೋ ಅಲ್ಲಿಯವರೆಗೂ ಅವರ ಪಾಲಿಗೆ ಆತ ಅದ್ಭುತವೆನಿಸುತ್ತಾನೆ. ಮೋದಿ ಸ್ವಲ್ಪಮಟ್ಟಿಗೆ ವ್ಯಾಪಾರ ವಹಿವಾಟುಗಳಿಂದ ಆಚೆಬಂದು ಸಾಂಸ್ಕೃತಿಕ ನಿರ್ಮಾಣದ ತಯಾರಿಯಲ್ಲಿ ನಿಂತೊಡನೆ ಇವರೆಲ್ಲ ಸೆಕ್ಯುಲರಿಸಂ ಚಿಂತನೆಗೆ ಭಂಗ ಬಂತೆಂದು ಬೊಬ್ಬಿಡುತ್ತಾರೆ. ಇವರುಗಳಿಗೂ ತಮ್ಮ ಆಲೋಚನೆಯನ್ನು ಸಾಕಾರಗೊಳಿಸದ ಮಂತ್ರಿ, ಮುಖ್ಯಮಂತ್ರಿಗಳು ದಡ್ಡರೆನಿಸುತ್ತಾರೆ. ಸಾಂಸ್ಕೃತಿಕವಾಗಿ ಭಾರತ ಗಟ್ಟಿಗೊಳ್ಳಬೇಕೆಂದು ಇವರಿಗೆ ಎಂದಿಗೂ ಅನಿಸುವುದೇ ಇಲ್ಲ. ಅಚ್ಚರಿಯೇನು ಗೊತ್ತೇ? ಇವರನ್ನು ಭೇಟಿಮಾಡುವ ಒಂದು ತಿಂಗಳ ಹಿಂದೆಯೇ ಶ್ರೀಧರ್ ವೆಂಬು ಅವರನ್ನು ಸಂದರ್ಶಿಸಿದ್ದೆ. ಜೊಹೊ ಕಾರ್ಪೊರೇಶನ್‌ನ ಮೂಲಕ ವರ್ಷಕ್ಕೆ ಸಾವಿರಾರು ಕೋಟಿರೂಪಾಯಿ ಲಾಭ ಗಳಿಸುತ್ತಿರುವ ಆತ ಈ ದೇಶದ ಐವತ್ತನೇ ದೊಡ್ಡ ಶ್ರೀಮಂತ. ಸಹಜವಾಗಿಯೇ ಇಷ್ಟು ಶ್ರೀಮಂತಿಕೆ ಏನನ್ನಿಸುತ್ತದೆ ಎಂದು ಕೇಳಿದ್ದಕ್ಕೆ, ನಗುನಗುತ್ತಲೇ ಉತ್ತರಿಸಿದ ವೆಂಬು ‘ಮೊದಲು ಬೆಳಗ್ಗಿನ ಉಪಾಹಾರಕ್ಕೆ ಐದು ಇಡ್ಲಿ ತಿನ್ನುತ್ತಿದ್ದೆ. ಈಗಲೂ ಅಷ್ಟೆ. ಐವತ್ತನೇ ಶ್ರೀಮಂತ ಎಂಬುದೆಲ್ಲ ಸಂಖ್ಯೆ ಮಾತ್ರ. ನಿಜವಾಗಿಯೂ ಆಗಬೇಕಾದ್ದು ತನ್ನ ಜೊತೆಗಿರುವವರ ಏಳ್ಗೆ. ನನಗೆ ಹೆಮ್ಮೆ ಇರುವುದು ಆ ವಿಚಾರದಲ್ಲಿ’ ಎಂದರು. ಈ ಉತ್ತರ ಸಾಮಾನ್ಯ ಭಾರತೀಯನ ಆಲೋಚನೆಗಳಿಗೆ ಹತ್ತಿರವಾಗಿದೆ ಎನಿಸಿ ಇಂತಹ ದೊಡ್ಡ ಆಲೋಚನೆ ನಿಮ್ಮ ಮನಸ್ಸಿಗೆ ಬಂದದ್ದಾದರೂ ಏಕೆ ಎಂದು ಕೇಳಿದೆ. ವಿಸ್ತಾರವಾಗಿ ಉತ್ತರಿಸುತ್ತಾ ಅವರು ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ತಂದೆಯೊಡನೆ ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಾಗ ಚಿಕ್ಕ ಹುಡುಗ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದನಂತೆ, ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಜರು ಇಷ್ಟು ಭವ್ಯ ದೇಗುಲವನ್ನು ಕಟ್ಟಿರಬಹುದಾದರೆ ನಾವು ಈಗೇಕೆ ಪ್ರಯತ್ನಿಸಲು ಸಾಧ್ಯವಿಲ್ಲ ಅಂತ. ಇದು ಅವರಿಗೆ ಮೂಲ ಇಂಧನವಾಯ್ತು. ಅದಕ್ಕೆ ರಾಷ್ಟ್ರೀಯತೆಯ ಕಿಡಿ ಸೇರಿಕೊಂಡು ಧಗಧಗನೆ ಹೊತ್ತಿ ಉರಿಯಲಾರಂಭಿಸಿತು. ಹೀಗಾಗಿ ಬಹಳ ದಿನ ವಿದೇಶದಲ್ಲಿ ಅವರಿಗೆ ಇರಲಾಗಲಿಲ್ಲ. ಈಗ ದೊಡ್ಡ ಉದ್ಯಮಿಯಾಗಿದ್ದಾರೆ ಮತ್ತು ತಮ್ಮ ಹಳ್ಳಿಯ ಜನರ ಬದುಕಿಗೆ ಬೆಳಕಾಗಿದ್ದಾರೆ. ಅವರ ಹಳ್ಳಿಯ ಹೆಸರು ತೆಂಕಾಶಿ. ದಕ್ಷಿಣದ ಕಾಶಿ ಎಂಬುದು ಅದಕ್ಕೆ ಅರ್ಥವಿರಬೇಕು. ಹೀಗಾಗಿ ಅವರು ಮಾತನಾಡುತ್ತಾ ತಮ್ಮದ್ದೊಂದು ಭವ್ಯವಾದ ಕನಸನ್ನು ಹಂಚಿಕೊಂಡರು. ಉತ್ತರದ ಕಾಶಿಯನ್ನು ದಕ್ಷಿಣದಲ್ಲಿ ನಿರ್ಮಿಸಿ ಅದಕ್ಕೆ ದಕ್ಷಿಣ ಕಾಶಿ ಎಂದು ಕರೆಯಬಹುದಾದರೆ, ಕಾಂಚಿಯ ದೇವಸ್ಥಾನವನ್ನು ಉತ್ತರದಲ್ಲಿ ನಿರ್ಮಿಸಿ ಅದನ್ನೇಕೆ ಉತ್ತರ ಕಾಂಚಿ ಎಂದು ಕರೆಯಬಾರದು ಎಂದರು. ಇದನ್ನು ಹೇಳುವಾಗ ಅವರ ಕಣ್ಣುಗಳಲ್ಲಿ ವಿಶೇಷವಾದ ಕಾಂತಿಯಿತ್ತು. ನನಗೂ ಒಮ್ಮೆ ಮೈ ಬೆಚ್ಚಗಾದ ಅನುಭವ. ಕಾಶಿಯಲ್ಲಿ ಇಂಥದ್ದೊಂದು ಪ್ರಯತ್ನ ಮಾಡಬೇಕೆಂದು ಅದಾಗಲೇ ಅವರು ತಲೆಕೆಡಿಸಿಕೊಂಡಿದ್ದಾರೆ. ತಾವಿರುವ ಸುತ್ತ-ಮುತ್ತ ಶಿಥಿಲವಾಗಿದ್ದ ದೇವಸ್ಥಾನಗಳಲ್ಲಿ ನಿರಂತರ ಪೂಜೆ ನಡೆಯುವಂತೆ ಮಾಡಿ ಅದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಒಂದೆಡೆ ಕಂಪನಿಯನ್ನು ಕಟ್ಟಿ ಲಾಭ ಮಾಡುತ್ತಿರುವುದೂ ಅಲ್ಲದೇ ಮತ್ತೊಂದೆಡೆ ಭಾರತದ ಸಾಂಸ್ಕೃತಿಕ ಪುನರುದ್ಧಾರಕ್ಕಾಗಿ ತಮ್ಮದ್ದೇ ಆದ ರೀತಿಯಲ್ಲಿ ಕೊಡುಗೆಯನ್ನೂ ನೀಡುತ್ತಿದ್ದಾರೆ. ಚುನಾವಣೆಗೆ ನಿಲ್ಲದೇ ಭಾರತದ ಆಸ್ಥೆಯನ್ನು ವೃದ್ಧಿಸುತ್ತಿರುವ ಇಂತಹ ಮಂದಿಯನ್ನು ಹೇಗೆ ಕಾಣಬೇಕು ಹೇಳಿ?! ಆಂತರಿಕ ಜಗತ್ತಿನಲ್ಲಿ ಆನಂದದಿಂದ ವಿಹರಿಸುತ್ತಾ ಬಹಿರಂಗದಲ್ಲೂ ಸಮರ್ಥವಾಗಿ ಕೆಲಸ ಮಾಡುವ ಇಂತಹ ಮಂದಿಯೇ ಭಾರತದ ಐಕಾನ್‌ಗಳಾಗುತ್ತಾರೆಯೇ ಹೊರತು ಬರಿ ಆರ್ಥಿಕ ವೃದ್ಧಿಯ ದರವನ್ನೇ ಮಾಪನವಾಗಿಟ್ಟುಕೊಂಡು ಭಾರತೀಯರ ಸಾಧನೆಗಳನ್ನು ಅಳೆಯುವ ಮಂದಿಯಲ್ಲ. 

ನಿಜವಾಗಿಯೂ ದೊಡ್ಡ ಸಾಧನೆ ಇರುವುದು ಆಂತರಿಕ ಮತ್ತು ಬಾಹ್ಯ ಜಗತ್ತಿನ ಸಮನ್ವಯ ಸಾಧಿಸುವಲ್ಲಿ. ಇಂದಿನ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಜನಸಾಮಾನ್ಯರು ಸೋಲುತ್ತಿರುವುದು ಅಲ್ಲಿಯೇ. ರಾಜಕಾರಣಿಗಳು ಆಂತರಿಕ ಜಗತ್ತಿನಿಂದ ದೂರ ಬಂದುಬಿಟ್ಟಿದ್ದಾರೆ. ಅವರ ಅಂತರಾತ್ಮ ಸತ್ತು ಹೋಗಿದೆ. ಅವರು ತಪ್ಪು ಮಾಡುವಾಗ, ಲಂಚ ಪಡೆಯುವಾಗ, ಇತರರೆದುರು ಪುಂಖಾನುಪುಂಖವಾಗಿ ಸುಳ್ಳು ಹೇಳುವಾಗ ಎಚ್ಚರಿಸಬೇಕಾಗಿದ್ದ ಅಂತರಂಗ ಶಾಂತವಾಗಿ ಕುಳಿತುಬಿಟ್ಟಿದೆ. ಹೀಗಾಗಿಯೇ ಅವರು ಭರ್ಜರಿಯಾಗಿ ದುಡ್ಡು ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಮಕ್ಕಳು, ಮೊಮ್ಮಕ್ಕಳು ಈ ಪರಂಪರೆಯನ್ನು ಮುಂದುವರಿಸಲೆಂದು ಅವರನ್ನೂ ಅಧಿಕಾರದ ಪಡಸಾಲೆಗೆ ಕರೆತರುತ್ತಾರೆ. ನಾಯಕರುಗಳ ಈ ದೂರದೃಷ್ಟಿಯ ಅಭಾವದ ಕೊರತೆಯನ್ನು ಸಮಾಜ ಅನೇಕ ದಶಕಗಳ ಕಾಲ ಅನುಭವಿಸಬೇಕಾಗುತ್ತದೆ. ಇತ್ತೀಚೆಗೆ ಕೊಪ್ಪಳದ ಬಳಿಯ ಹುಲಿಗಿ ದೇವಸ್ಥಾನಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ದೇವಸ್ಥಾನದ ಸುತ್ತ-ಮುತ್ತಲಿನ ಕೊಳಕನ್ನು ಕಂಡು ಅಸಹ್ಯವೆನಿಸಿತು. ಮಂಗಳವಾರ ಮತ್ತು ಶುಕ್ರವಾರಗಳು ಬಂತೆಂದರೆ ಕುರಿ, ಮೇಕೆ, ಟಗರು, ಕೋಳಿಗಳ ಬಲಿ ಇಲ್ಲಿ ನಡೆಯುತ್ತದೆ. ಹೀಗೆ ಬಲಿಕೊಟ್ಟವರು ಅಲ್ಲಿಯೇ ಅಡುಗೆ ಮಾಡಿ, ಉಂಡು, ಮನೆಗೆ ತೆರಳುತ್ತಾರೆ. ಚಕ್ಕಡಿ ಗಾಡಿಗಳಲ್ಲಿ, ಟ್ರಾಕ್ಟರ್ಗಳಲ್ಲಿ ಗುಂಪು-ಗುಂಪಾಗಿ ಬರುವ ಹಳ್ಳಿಯ ಮಂದಿ ನೋಡಿದರೆ ಹಳ್ಳಿಯನ್ನೇ ಬಿಟ್ಟು ಗುಳೆ ಹೊರಟವರಂತೆ ಕಾಣುತ್ತಾರೆ. ಆದರೆ ಅದು ಹುಲಿಗೆಮ್ಮನ ಮೇಲಿನ ಭಕ್ತಿ. ಇಡಿಯ ಮಂದಿರದ ಆವರಣವನ್ನು ಸ್ವಚ್ಛವಾಗಿರಿಸಿಕೊಳ್ಳಲು ಸರ್ಕಾರ ನಡೆಸಿರುವ ಪ್ರಯತ್ನ ನಗಣ್ಯವಾದ್ದು. ನಿಮಗೆ ಅಚ್ಚರಿಯಾಗುವ ಸಂಗತಿಯೇನು ಗೊತ್ತೇ? ಈ ಮಂದಿರದ ವಾರ್ಷಿಕ ಆದಾಯ ಕನಿಷ್ಠ ಹತ್ತು ಕೋಟಿ ರೂಪಾಯಿ. ದೇವಸ್ಥಾನಕ್ಕೆ ಬರುವ ಇತರೆ ದಾನ, ದಕ್ಷಿಣೆಗಳು ಬೇರೆ. ಹೊರಗಿನಿಂದ ಬರುವ ಅಂಗಡಿ ಬಾಡಿಗೆಗಳೂ ಕೂಡ ಬೇರೆ. ಬರಿಯ ಹುಂಡಿಯಿಂದಲೇ ಸಂಗ್ರಹವಾಗುವ ಇಷ್ಟು ಹಣದಲ್ಲಿ ಎಷ್ಟನ್ನು ದೇವಸ್ಥಾನಕ್ಕೆ ಅಭಿವೃದ್ಧಿ ಕಾರ್ಯದ ಹೆಸರಲ್ಲಿ ಮರಳಿಸಿದ್ದೀರಿ ಎಂದು ಸರ್ಕಾರವನ್ನು ಕೇಳಿನೋಡಿ, ಅದು ಶೂನ್ಯಕ್ಕೆ ಬಲು ಹತ್ತಿರ! ಜನ ಬರುತ್ತಾರಾದ್ದರಿಂದಲೇ ಇದು ಕೊಳಕು ಎಂದು ವಾದ ಮಂಡಿಸುವ ಮಂದಿಯನ್ನು ನೋಡಿದರೆ ಪಿಚ್ಚೆನಿಸುತ್ತದೆ. ಏಕೆಂದರೆ ಅನೇಕ ರಾಷ್ಟ್ರಗಳು ಹೆಚ್ಚು ಜನ ಬರಲೆಂದು ತಮ್ಮ ಪ್ರವಾಸೀ ತಾಣಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸುತ್ತಾರೆ. ನಾವಾದರೋ ಜನ ಹೆಚ್ಚು ಬರುವುದನ್ನೇ ಸಮಸ್ಯೆಯಾಗಿ ನೋಡುತ್ತೇವೆ. ಕಾಶಿಯ ವಿಶ್ವನಾಥ ಮಂದಿರವನ್ನೇ ಮೋದಿ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಬಹುದಾದದರೆ ಹುಲಿಗೆಮ್ಮ ದೇವಸ್ಥಾನದ ಆವರಣವನ್ನು ನಾವೇಕೆ ಭಕ್ತೋಪಯೋಗಿಯಾಗಿ ರೂಪಿಸಲಾಗದು? ಇಲ್ಲಿ ಬೇಕಾಗಿರುವುದು ದೂರದೃಷ್ಟಿ ಮತ್ತು ತಮ್ಮ ಜನರ ಮೇಲಿನ ಕಾಳಜಿ ಮಾತ್ರ. 

ಜನಸಾಮಾನ್ಯರನ್ನು ಅವರಿರುವ ಹಂತದಿಂದ ಮೇಲಕ್ಕೆತ್ತಿ, ಅವರ ಬದುಕನ್ನು ಸುಂದರಗೊಳಿಸುವ ಹೊಣೆಗಾರಿಕೆ ಜನ ಪ್ರತಿನಿಧಿಗಳದ್ದಲ್ಲವೇನು? ಇನ್ನೆಷ್ಟು ದಿನ ಕೊಳಕಿನಲ್ಲಿ ಕೊಳಕಾಗಿ ಅದೇ ಹಣೆಪಟ್ಟಿಯನ್ನು ಹಚ್ಚಿಕೊಂಡು ಉತ್ತರ ಕರ್ನಾಟಕದವರು ಬದುಕಬೇಕು ಹೇಳಿ? ನಾವು ಊಹಿಸಲಾಗದಷ್ಟು ಹಿಂದೆ ಇದ್ದೇವೆ. ತಮ್ಮ ಜೀವನಶೈಲಿಯನ್ನು ವಿದೇಶಿಗರ ಮಟ್ಟಕ್ಕೆ ಏರಿಸಿಕೊಳ್ಳುವ ಧಾವಂತದಲ್ಲಿ ತಮ್ಮ ಜನರ ಬದುಕನ್ನು ಸಾಮಾನ್ಯಕ್ಕಿಂತ ಕೆಳಮಟ್ಟಕ್ಕೆ ತಳ್ಳುತ್ತಿರುವ ಈ ನಾಯಕರುಗಳಿಂದ ಸತ್ಯವಾಗಿಯೂ ಮಹತ್ವವಾದ್ದನ್ನು ನಿರೀಕ್ಷಿಸುತ್ತಿರುವಿರೇನು? ಇಲ್ಲವೆಂದು ಚುನಾವಣೆಗಳು ಆರಂಭಗೊಳ್ಳುವ ಹೊತ್ತಿನಲ್ಲೇ ಅರಿವಾಗುತ್ತದೆ. ಪಕ್ಷಕ್ಕೆ ಹಣವನ್ನು ಖರ್ಚು ಮಾಡುವವ ಬೇಕು, ಕಾರ್ಯಕರ್ತರಿಗೆ ಹಣವನ್ನು ನೀರಿನಂತೆ ಹರಿಸುವವರು ಬೇಕು. ಜನಸಾಮಾನ್ಯರಾದ ನಮಗೆ ಚುನಾವಣೆಗೆ ಮುನ್ನ ಹೆಚ್ಚು ದುಡ್ಡು ಕೊಡುವವ ಬೇಕು. ಎಲ್ಲ ದಿಕ್ಕಿನಿಂದಲೂ ಹಣವಿದ್ದವನನ್ನೇ ಎಲ್ಲರೂ ಹುಡುಕುವುದಾದರೆ ದೂರದೃಷ್ಟಿಗೆ ಬೆಲೆಯಾದರೂ ಎಲ್ಲಿ ಹೇಳಿ? ಇದೇ ಈ ರಾಷ್ಟ್ರದ ದುರಂತ! 

ತುರ್ತಾಗಿ ಆಗಬೇಕಿರೋದು ಶ್ರೇಷ್ಠ ಮಾನಸಿಕತೆಯುಳ್ಳ ಸಮಾಜದ ನಿರ್ಮಾಣ. ರಾಜಕಾರಣಿಗಳು ಕೊಡುವ ಎಂಜಲು ಕಾಸಿಗೆ ಕೈ ಚಾಚದ, ಬಿಟ್ಟಿ ಭಾಗ್ಯಗಳಿಗೆ ಜೊಲ್ಲು ಸುರಿಸದ, ತನ್ನ ಹಕ್ಕುಗಳಿಗಾಗಿ ಕೊನೆಯವರೆಗೂ ಬಡಿದಾಡುವ, ಅಗತ್ಯಬಿದ್ದರೆ ಸಮಾಜದ ಯಾವ ಕೆಲಸವನ್ನೂ ಹೆಗಲಮೇಲೆ ಹೊತ್ತುಕೊಂಡು ರಾಷ್ಟ್ರನಿರ್ಮಾಣಕ್ಕಾಗಿ ಕೊಡಗಟ್ಟಲೆ ಬೆವರು ಸುರಿಸುವವ ಬೇಕಾಗಿದ್ದಾನೆ. ಅಂಥವನನ್ನು ತಯಾರು ಮಾಡಲು ಒಂದಷ್ಟು ಜನ ಸಮಾಜದಲ್ಲಿರಬೇಕಾಗಿದೆ. ಕನಿಷ್ಠಪಕ್ಷ ಅಂತಹ ಸಾಮರ್ಥ್ಯದ್ದವರಾದರೂ ರಾಜಕಾರಣವನ್ನು ಹೊಕ್ಕದೇ ಹೊರಗೆ ನಿಂತು ಬದಲಾವಣೆ ತರಲು ಯತ್ನಿಸಬಹುದೇ? ಎಂಬುದು ಪ್ರಶ್ನೆ.

ಜಿಂಪಿಂಗ್ ಸೀನಿದರೆ ರಾಹುಲ್‌ಗೆ ನೆಗಡಿ!

ಜಿಂಪಿಂಗ್ ಸೀನಿದರೆ ರಾಹುಲ್‌ಗೆ ನೆಗಡಿ!

ಗಮನಿಸಿದ್ದೀರೋ ಇಲ್ಲವೋ. ಒಂದರ ಹಿಂದೆ ಮೂರು ಒಂದೇ ಬಗೆಯ ಘಟನೆಗಳು. ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟನ್ನು ಸುಳ್ಳು ಎಂದರು. ಇದು ಪುಲ್ವಾಮಾದಂತಹ ದಾಳಿ ಅಲ್ಲವೇ ಅಲ್ಲ. ಜನರ ಗಮನವನ್ನು ಬೇರೆಡೆ ತಿರುಗಿಸಲು ಸರ್ಕಾರ ಈ ಪ್ರಯತ್ನ ಮಾಡಿದೆ ಎಂದು ಕುಕ್ಕರ್‌ನಲ್ಲಿ ಬಾಂಬಿಟ್ಟು ಸಂಘ ನಿಕೇತನದಲ್ಲಿ ಮುಗ್ಧ ಮಕ್ಕಳನ್ನು ಉಡಾಯಿಸುವ ಯೋಜನೆ ಮಾಡಿದ್ದವರಿಗೆ ಕವರಿಂಗ್ ಫೈರ್ ಕೊಟ್ಟರು! 

ಭಾರತ್ ಜೊಡೊ ಯಾತ್ರೆಯಲ್ಲಿರುವ ಕಾಂಗ್ರೆಸ್ಸಿಗರ ಪ್ರಧಾನಮಂತ್ರಿ ಅಭ್ಯರ್ಥಿ ರಾಹುಲ್ ಪತ್ರಿಕಾಗೋಷ್ಠಿಯಲ್ಲಿ ‘ಪತ್ರಕರ್ತರು ಜಗತ್ತಿನ ಎಲ್ಲ ಪ್ರಶ್ನೆಗಳನ್ನು ನನಗೆ ಕೇಳುತ್ತೀರಿ. ಆದರೆ ಚೀನಿಯರು ಭಾರತೀಯ ಸೈನಿಕರನ್ನು ಬಡಿದ ಘಟನೆಯನ್ನು ಬಿಟ್ಟು’ ಎಂದ. ಆತನ ದೃಷ್ಟಿಯಲ್ಲಿ ಭಾರತೀಯ ಸೈನಿಕರು ಚೀನಿಯರ ಕೈಲಿ ಹೊಡೆತ ತಿಂದು ಗಡಿಯೊಳಕ್ಕೆ ಓಡಿಬಂದುಬಿಟ್ಟಿದ್ದರು. ಭಾರತೀಯ ಸೇನೆಯ ಸಾಹಸದ ಆಧಾರದ ಮೇಲೆ ಸರ್ಕಾರ ಸಂಸತ್ತಿನಲ್ಲಿ ಕೊಟ್ಟ ಹೇಳಿಕೆಯನ್ನು ಸಂಶಯಿಸುವ ರಾಹುಲ್‌ನನ್ನು ಭಾರತ ಭವಿಷ್ಯದ ನಾಯಕನೆಂದು ಒಪ್ಪಬೇಕಲ್ಲ ಎಂಬುದೇ ಕಾಂಗ್ರೆಸ್ಸಿಗರ ಪಾಲಿಗಾದರೂ ಆತಂಕವಾಗಬೇಕು. ಭಾರತೀಯ ಸೇನೆ ಚೀನಿಯರನ್ನು ಬಡಿಯುವ ವಿಡಿಯೊ ಸೂಕ್ತ ಕಾಲದಲ್ಲಿ ವೈರಲ್ ಆಗಿ ಸಾಕಷ್ಟು ಸದ್ದು ಮಾಡಿದ್ದರಿಂದ ಉಳಿದವರೆಲ್ಲ ತೆಪ್ಪಗಾಗಿದ್ದಾರೆ. ಇಲ್ಲವಾಗಿದ್ದರೆ ಇದು ನಿಸ್ಸಂಶಯವಾಗಿ ಭಾರತದ ವಿರುದ್ಧ ತಿರುಗಿಕೊಳ್ಳುವ ಹೇಳಿಕೆಯಾಗಿರುತ್ತಿತ್ತು. 

ಕರ್ನಾಟಕ, ಭಾರತ ಆದಮೇಲೆ ಕಾಂಗ್ರೆಸ್ಸಿಗರ ಪ್ರೀತಿಯ ನೆಲ ಪಾಕಿಸ್ತಾನವೇ ಅಲ್ಲವೇನು? ವಿಶ್ವಸಂಸ್ಥೆಯ ಆವರಣದಲ್ಲಿ ನಿಂತು ಅಲ್ಲಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನರೇಂದ್ರಮೋದಿಯವರ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಾ, ಅಮೇರಿಕಾಕ್ಕೆ ಬರದಂತೆ ನಿಷೇಧ ಹೇರಿಸಿಕೊಂಡಿದ್ದ ವ್ಯಕ್ತಿಯೊಬ್ಬ ಭಾರತದ ಪ್ರಧಾನಿಯಾಗಿದ್ದಾನೆ ಎಂದು ಮೂದಲಿಸುವ ಪ್ರಯತ್ನ ಮಾಡಿದ್ದ. ಮನಮೋಹನ್ ಸಿಂಗರನ್ನು ಬರ್ಖಾ ದತ್‌ಳೊಂದಿಗೆ ಸಂವಾದವೊಂದರಲ್ಲಿ ಪಾಕಿಸ್ತಾನದ ಅಧ್ಯಕ್ಷ ಹಳ್ಳಿ ಹೆಂಗಸಿನಂತೆ ಎಂದು ಮೂದಲಿಸಿದಾಗ ಆಗಿನ್ನೂ ಪ್ರಧಾನಿಯಾಗದ ಮೋದಿ ಬಲವಾಗಿ ಖಂಡಿಸಿ ನಮ್ಮ ದೇಶದ ಪ್ರಧಾನಿಯ ತಂಟೆಗೆ ಬಂದರೆ ಹುಷಾರ್ ಎಂದಿದ್ದರು. ಆದರೆ ಬಿಲಾವಲ್ ಭುಟ್ಟೊನ ಹೇಳಿಕೆಗಳನ್ನು ಇಂದು ಪ್ರತಿಯೊಬ್ಬ ಕಾಂಗ್ರೆಸ್ಸಿಗನೂ ಸಂಭ್ರಮಿಸುತ್ತಿರುವುದನ್ನು ನೋಡಿದರೆ ಇವರ ಮಟ್ಟ ಎಂಥದ್ದೆಂಬುದು ಅರಿವಾಗುತ್ತದೆ. 

ಈ ಮೂರೂ ಹೇಳಿಕೆಗಳನ್ನು ಒಂದಕ್ಕೊಂದು ತಾಳೆ ಹಾಕಿ ನೋಡಿ. ಭಾರತ ವಿರೋಧಿ ಶಕ್ತಿಗಳಿಗೆ ಬೆಂಬಲ ಕೊಡುವ ಪ್ರಯತ್ನವನ್ನೇ ಇವರು ಮಾಡುತ್ತಿರುವುದು ಸ್ಪಷ್ಟ. ಇಂಥವರ ಕೈಗೆ ರಾಜ್ಯವನ್ನು, ದೇಶವನ್ನು ಕೊಟ್ಟರೆ ಏನಾಗಬಹುದೆಂದು ಊಹಿಸಿ ನೋಡಿ. ಬಿಲಾವಲ್ ಭುಟ್ಟೊ ಈ ರೀತಿಯ ಹೇಳಿಕೆ ಕೊಡುವ ಮುನ್ನ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪ್ರಹಸನವೊಂದು ನಡೆದುಹೋಗಿತ್ತು. ಮೊದಲು ಮಾತಾಡಿದ ಪಾಕಿಸ್ತಾನದ ಈ ವಿದೇಶಾಂಗ ಸಚಿವ ಅನವಶ್ಯಕವಾಗಿ ಕಾಶ್ಮೀರದ ವಿಷಯವನ್ನು ತೆಗೆದು ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ. ಭಾರತ ಪ್ರತಿಕ್ರಿಯಿಸಿದ ರೀತಿ ಇತ್ತಲ್ಲ ಅದು ಹಿಂದೆಂದೂ ಕೇಳರಿಯದಂಥದ್ದು. ನಮ್ಮ ವಿದೇಶಾಂಗ ಸಚಿವ ಜೈಶಂಕರ್ ತಮ್ಮ ಸರತಿ ಬಂದಾಗ ಮಾತನಾಡಿ, ‘ಒಸಾಮ ಬಿನ್ ಲಾಡೆನ್‌ನನ್ನು ಸಾಕಿ ಸಲಹಿದ ದೇಶವೊಂದು ಜಗತ್ತಿಗೆ ಬುದ್ಧಿ ಹೇಳುವ ಸ್ಥಾನವನ್ನಲಂಕರಿಸುವುದು ಒಳಿತಲ್ಲ’ ಎಂದುಬಿಟ್ಟರು. ಇದು ಜಗತ್ತಿಗೆಲ್ಲ ಎಚ್ಚರಿಕೆಯ ಸಂದೇಶವಾಗಿತ್ತು. ಪಾಕಿಸ್ತಾನ ಜಾಗತಿಕ ಕ್ಯಾನ್ಸರ್ ಎಂಬುದನ್ನು ವಿವರಿಸಲು ಇದಕ್ಕಿಂತ ಒಳ್ಳೆಯ ಮಾರ್ಗವಿರಲಿಲ್ಲ. ಭುಟ್ಟೊ ತನ್ನ ನಿಂತ ನೆಲ ಕುಸಿಯುತ್ತಿರುವುದನ್ನು ಆಗಲೇ ಗಮನಿಸಿದ್ದ. ಸುತ್ತಿ ಬಳಸಿ ಚೀನಾಕ್ಕೆ ಅನುಕೂಲವಾಗುವ ವಾತಾವರಣವನ್ನು ನಿರ್ಮಿಸಿಕೊಡಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಇದು ಬಲುದೊಡ್ಡ ತಪರಾಕಿ. ಆಗ ಬಾಯಿಬಿಟ್ಟಿದ್ದು ರಾಹುಲ್. ಆತ ಚೀನೀ ಸೈನಿಕರ ಭಾರತ ಗಡಿ ಪ್ರವೇಶಿಸುವ ದುಸ್ಸಾಹಸವನ್ನು ಭಾರತ ವಿರೋಧಿಯಾಗಿ ಚಿತ್ರಿಸುವುದು ಬಿಟ್ಟು ಭಾರತೀಯ ಸೈನಿಕರನ್ನೇ ಹೇಡಿಗಳನ್ನಾಗಿ ಚಿತ್ರಿಸಿದ್ದು ಬಲು ದುರಂತಕಾರಿಯಾಗಿತ್ತು! ಅಂದರೆ ಚೀನಾ ಭಾರತದ ಗಡಿಯೊಳಕ್ಕೆ ನುಗ್ಗುವ, ನಮ್ಮ ಸೈನಿಕರನ್ನು ಬಡಿಯುವ ಯೋಜನೆ ಮೊದಲೇ ರೂಪುಗೊಂಡಿತ್ತು. ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ಅದು ಕಾಂಗ್ರೆಸ್ಸಿಗೆ ಅಸ್ತ್ರವಾಗಿ ದಕ್ಕಬೇಕಿತ್ತು. ಆದರೆ ಮೊದಲೇ ಈ ಆಕ್ರಮಣವನ್ನು ಊಹಿಸಿದ್ದ ಭಾರತೀಯ ಸೇನೆ ಚೀನಾದ ಡ್ರೋಣ್‌ಗಳ ಹಾರಾಟವನ್ನು ಗುರುತಿಸಿತ್ತಲ್ಲದೇ ಅದಕ್ಕೆ ವಿರುದ್ಧವಾಗಿ ಸುಖೋಯ್‌ಗಳ ಹಾರಾಟವನ್ನು ನಡೆಸಿ ತನ್ನ ಸಿದ್ಧತೆಯನ್ನು ಮಾಡಿಕೊಂಡಿತ್ತು. ತವಾಂಗ್‌ನಲ್ಲಿ ಚೀನೀ ಪಡೆ ಅಚಾನಕ್ಕಾಗಿ ನುಗ್ಗಿದೊಡನೆ ನಮ್ಮ ಪಡೆಯೂ ಚೀನಿಯರಿಗೆ ಅಚ್ಚರಿ ಎನಿಸುವಂತಹ ರೀತಿಯಲ್ಲಿ ಪ್ರತಿಕ್ರಿಯಿಸಿಬಿಟ್ಟಿತು. ಈಗ ತವಾಂಗ್ ಭಾಗದ ರಸ್ತೆಗಳು ಕಾಂಗ್ರೆಸ್ಸಿಗರ ಕಾಲದ ರಸ್ತೆಗಳಂತಿಲ್ಲ. ಅನೇಕ ಸುರಂಗ ಮಾರ್ಗಗಳು ನಿರ್ಮಾಣಗೊಂಡಿವೆ ಮತ್ತು ನಿರ್ಮಾಣಗೊಳ್ಳುತ್ತಿವೆ. ಇವೆಲ್ಲವೂ ಸೇರಿ ಗಡಿಯೆಡೆಗೆ ಭಾರತೀಯ ಸೈನಿಕ ತಲುಪುವ ಕಾಲವನ್ನು ಅಗಾಧವಾಗಿ ಕಡಿಮೆ ಮಾಡಿವೆ. ಹೀಗಾಗಿಯೇ ಈ ಬಾರಿ ಚೀನಾಕ್ಕೆ ಬಲವಾದ ತಪರಾಕಿ ಬಿದ್ದದ್ದು. ಚೀನಿಯರು ಮರಳಿ ತಮ್ಮ ಬಂಕರ್‌ಗಳಿಗೆ ಓಡಿಹೋಗಿ ಸೇರಿಕೊಂಡರಲ್ಲದೇ ಒಪ್ಪಂದವನ್ನೂ ಮುರಿದು ಎಚ್ಚರಿಕೆಯ ಗುಂಡುಗಳನ್ನು ಹಾರಿಸಬೇಕಾಗಿ ಬಂತು. ಕಾಂಗ್ರೆಸ್ಸಿಗರಿಗೆ ಜೀರ್ಣವಾಗದೇ ಇರುವ ಸಂಗತಿ ಏನೆಂದರೆ ಈ ಬಾರಿ ಭಾರತೀಯರು ಗಡಿ ದಾಟಿ ಚೀನಾದ ಒಳಕ್ಕೆ ಹೋಗಿ ಸಾಕಷ್ಟು ಸಮಯ ಅಲ್ಲಿಯೇ ಇದ್ದು ಚೀನಾದ ಲಿಲ್ಲಿಪುಟ್‌ಗಳನ್ನು ಬೆದರಿಸಿ ಬಂದಿದ್ದಾರೆ! 

ಸಂಸತ್ ಅಧಿವೇಶನ ಆರಂಭವಾಗುವ ಹೊತ್ತಿನಲ್ಲಿ ಸರಿಯಾಗಿ ಈ ಸುದ್ದಿ ಪತ್ರಿಕೆಗಳಲ್ಲಿ ಬ್ರೇಕ್ ಆಯ್ತಲ್ಲದೇ ಚೀನಾದಿಂದ ಸುಮಾರು ಒಂದೂವರೆ ಕೋಟಿ ರೂಪಾಯಿಯನ್ನು ರಾಜೀವ್ ಗಾಂಧಿ ಫೌಂಡೇಶನ್ ಪಡೆದುಕೊಂಡಿರುವ ಸ್ಫೋಟಕ ಸುದ್ದಿಯನ್ನು ಗೃಹ ಸಚಿವರು ಅಂದೇ ಹೊರಹಾಕುವುದರಲ್ಲಿದ್ದರು. ಚೀನಾದ ಆಕ್ರಮಣದ ಮಹಾತಂಕದ ನಡುವೆ ಈ ಸುದ್ದಿಯನ್ನು ಸಮಾಧಿಯಾಗಿಸಲಾಯ್ತು. ಬಹುಶಃ ಕಾಂಗ್ರೆಸ್ಸಿನ ಪ್ರತಿಯೊಬ್ಬ ನಾಯಕನೂ ಅವರ ಕಾರ್ಯಕರ್ತನಿಗೆ ಮತ್ತು ಈ ದೇಶಕ್ಕೆ ಉತ್ತರಿಸಲೇಬೇಕಾದ ಪ್ರಶ್ನೆ ಎಂದರೆ ಈ ಹಣ ಸ್ವೀಕಾರದ್ದು. ಒಂದೂವರೆ ಕೋಟಿ ರೂಪಾಯಿಯನ್ನು ಚೀನಾದಿಂದ ಪಡೆದಿದ್ದಾರೂ ಏಕೆ? ಅದನ್ನು ಯಾವುದರ ಅಧ್ಯಯನಕ್ಕೆಂದು ಬಳಸಲಾಯ್ತು? ಶತ್ರು ರಾಷ್ಟ್ರವೊಂದರಿಂದ ಹೀಗೆ ಹಣ ಪಡೆಯುವುದು ಎಷ್ಟರಮಟ್ಟಿಗೆ ಸರಿ? ನನಗೆ ಗೊತ್ತು. ಗುಲಾಮೀ ಮಾನಸಿಕತೆ ಎಷ್ಟರಮಟ್ಟಿಗೆ ಆವರಿಸಿಕೊಂಡುಬಿಟ್ಟಿದೆ ಎಂದರೆ ಪರಿವಾರವೊಂದರ ಜೀತ ಮಾಡುವ ಮಂದಿ ದೇಶಕ್ಕಾಗುವ ನಷ್ಟವನ್ನು ಗಣಿಸಲಾರರು ಎಂಬುದು ಶತಃಸಿದ್ಧ. 

ಇಷ್ಟಕ್ಕೂ ಷಿ ಜಿಂಪಿಂಗ್ ಹೆದರುತ್ತಿದ್ದಾನಾ? ನನಗಂತೂ ಹೌದೆನಿಸುತ್ತಿದೆ. ಆತ ಇಡಿಯ ಚೀನಾದ ಆತ್ಮವನ್ನೇ ಕೊಂದು ಕಳೆದ ಕೆಲವಾರು ದಶಕಗಳಲ್ಲಿ ಚೀನಾವನ್ನು ಅಮೇರಿಕಾಕ್ಕೆ ಸರಿಸಾಟಿಯಾಗಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾನೆ. ಈ ಹಾದಿಯಲ್ಲಿ ಅವನಿಗಿದ್ದದ್ದು ಎರಡೇ ಅಡೆತಡೆಗಳು. ಒಂದು ರಷ್ಯಾ, ಮತ್ತೊಂದು ಭಾರತ. ರಷ್ಯಾ ಜಾಗತಿಕ ಮಟ್ಟದಲ್ಲಿ ಸುದೀರ್ಘಕಾಲ ತನ್ನ ಪ್ರತಿಸ್ಪರ್ಧಿಯಾಗಿರಲಾರದು ಎಂದರಿತ ಆತ ಕಾಂಗ್ರೆಸ್ಸನ್ನು ಬಳಸಿಕೊಂಡು ಭಾರತವನ್ನು ಶಾಶ್ವತವಾಗಿ ತನ್ನ ಅಡಿಯಾಳಾಗಿಸುವ ಪ್ರಯತ್ನ ಮಾಡಿದ. ಅಚ್ಚರಿ ಎನಿಸುತ್ತದಲ್ಲವೇ? ಯುಪಿಎ ಎರಡು ಅವಧಿಗೆ ಅಧಿಕಾರದಲ್ಲಿತ್ತಲ್ಲ, ಅದಕ್ಕೂ ಮುನ್ನ ಅಟಲ್ ಬಿಹಾರಿ ವಾಜಪೇಯಿ ಭಾರತದ ಆರ್ಥಿಕತೆಯನ್ನು ಸಾಕಷ್ಟು ಬಲಗೊಳಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದರು. ಆದರೆ ಹತ್ತೇ ವರ್ಷಗಳಲ್ಲಿ ಅದನ್ನು ಹಳ್ಳ ಹಿಡಿಸಿದ್ದು ಆರ್ಥಿಕ ತಜ್ಞ ಮನಮೋಹನ್ ಸಿಂಗ್! ರಾಹುಲ್ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡಾಗ ಅದರೊಳಗೆ ಏನೇನು ಬರೆಯಲಾಗಿತ್ತೋ ದೇವರೇ ಬಲ್ಲ. ಆದರೆ ಅಲ್ಲಿಯವರೆಗೂ ಭಾರತ ಮತ್ತು ಚೀನಾದ ನಡುವೆ ಇದ್ದ ಆಮದು-ರಫ್ತುಗಳ ವಿತ್ತೀಯ ಕೊರತೆ ಒಂದು ಬಿಲಿಯನ್ ಡಾಲರ್‌ನಷ್ಟಾಗಿತ್ತು. ಹತ್ತು ವರ್ಷದಲ್ಲಿ ಅದು 36 ಬಿಲಿಯನ್ ಡಾಲರ್ ದಾಟಿತು. ಅಂದರೆ ಸುಮಾರು 36 ಪಟ್ಟು ಅಥವಾ ಎರಡೂವರೆ ಸಾವಿರ ಪ್ರತಿಶತದಷ್ಟು ಹೆಚ್ಚು. ಸಿದ್ಧ ವಸ್ತುಗಳು, ಔಷಧ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು, ರಾಸಾಯನಿಕ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನೆಲ್ಲ ನಾವು ಆಮದು ಮಾಡಿಕೊಳ್ಳಲು ಹೆಚ್ಚಿಸಿದ್ದು ಇದೇ ಹೊತ್ತಿನಲ್ಲಿ. ಇದು ಭಾರತದ ವ್ಯವಸ್ಥೆಯ ಬೆನ್ನೆಲುಬನ್ನೇ ಮುರಿದುಬಿಟ್ಟಿತು. ನಾವು ನಮ್ಮ ಕಾರ್ಖಾನೆಗಳನ್ನು ಕೊಂದೆವಲ್ಲದೇ ಅದನ್ನು ಬೆಳೆಸಲು ಚೀನಾದ ಕಚ್ಚಾ ವಸ್ತುಗಳ ಮೇಲೆ ಅವಲಂಬಿತವಾಗಬೇಕಾಗಿ ಬಂತು. ಹೇಗೆಂದರೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಔಷಧ ವಸ್ತುಗಳ ತಯಾರಿಕೆ ಮಾಡುವಂತಹ ರಾಷ್ಟ್ರವಾಗಿ ಭಾರತವನ್ನು ರೂಪಿಸಬೇಕಾದರೆ ಭಾರತ ಕಚ್ಚಾ ವಸ್ತುಗಳಿಗಾಗಿ ಚೀನಾವನ್ನೇ ಅವಲಂಬಿಸಬೇಕಾಗಿರುವಂತಹ ಸ್ಥಿತಿ ಕಾಂಗ್ರೆಸ್ಸಿನ ಕಾರಣಕ್ಕೆ ನಿರ್ಮಾಣಗೊಂಡಿತು. ಅಧಿಕಾರಕ್ಕೆ ಬಂದೊಡನೆ ಇದನ್ನು ಸೂಕ್ಷ್ಮವಾಗಿ ಗಮನಿಸಿದ ನರೇಂದ್ರಮೋದಿ ಹಂತ-ಹಂತವಾಗಿ ಈ ನಿರ್ಭರತೆಯನ್ನು ಕಡಿಮೆ ಮಾಡುತ್ತಾ ಬಂದರು. ಮೊದಲೈದು ವರ್ಷದಲ್ಲಿ ಭಾರತ ತಾನಿಲ್ಲದೇ ಬದುಕಲಾರದೆಂಬ ದುರಹಂಕಾರದಲ್ಲಿ ಮೆರೆಯುತ್ತಿದ್ದ ಷಿ, ನರೇಂದ್ರಮೋದಿ ಸ್ಪಷ್ಟವಾದ ಹೆಜ್ಜೆ ಇಡುತ್ತಿರುವುದನ್ನು ಕಂಡು ಗಾಬರಿಗೊಂಡ. ಮೋದಿ ನಿಧಾನವಾಗಿ ಚೀನಾಕ್ಕೆ ರಫ್ತು ಮಾಡುತ್ತಿದ್ದ ಪ್ರಮಾಣವನ್ನು ಏರಿಸಲಾರಂಭಿಸಿದರು. ಕಾಂಗ್ರೆಸ್ ಅಧಿಕಾರ ಬಿಟ್ಟುಕೊಟ್ಟಾಗ 11 ಬಿಲಿಯನ್ ಡಾಲರ್ಗಳಷ್ಟಿದ್ದ ರಫ್ತು ಕಳೆದ ಎಂಟು ವರ್ಷಗಳಲ್ಲಿ ಸುಮಾರು 100 ಪ್ರತಿಶತದಷ್ಟು ಹೆಚ್ಚಾಗಿ 22 ಬಿಲಿಯನ್ ಡಾಲರ್ಗಳಿಗೆ ಏರಿದೆ. ಸಹಜವಾಗಿ ಅನೇಕ ಕಚ್ಚಾ ವಸ್ತುಗಳಿಗಾಗಿ ಚೀನಾದ ಮೇಲೆಯೇ ನಿರ್ಭರವಾಗಿದ್ದರಿಂದ ಆಮದಿನ ಪ್ರಮಾಣ 60 ಬಿಲಿಯನ್ ಡಾಲರ್‌ನಿಂದ 95 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಶೇಕಡಾ 55 ರಷ್ಟು ಹೆಚ್ಚಳ! ಒಟ್ಟಾರೆ ಲೆಕ್ಕ ಹೇಳಬೇಕೆಂದರೆ ವಿತ್ತೀಯ ಕೊರತೆ ಕಾಂಗ್ರೆಸ್ ಮೋದಿಯ ಕೈಗೆ ದೇಶವನ್ನು ಕೊಟ್ಟಾಗ 36 ಬಿಲಿಯನ್ ಡಾಲರ್‌ಗಳಷ್ಟಿತ್ತು. ಈಗ 72 ಬಿಲಿಯನ್ ಡಾಲರ್‌ಗಳಷ್ಟಾಗಿದೆ. ಅಂದರೆ ಶೇಕಡಾ ನೂರರಷ್ಟು ಹೆಚ್ಚಳ ಮಾತ್ರ. ಕಾಂಗ್ರೆಸ್ಸಿನ ಹತ್ತು ವರ್ಷದಲ್ಲಿ 36 ಪಟ್ಟು ಹೆಚ್ಚಿದ್ದ ವಿತ್ತೀಯ ಕೊರತೆಯನ್ನು ಮೋದಿ ಎರಡು ಪಟ್ಟಿಗೆ ತಂದು ನಿಲ್ಲಿಸಿರುವುದು ಅಸಾಧಾರಣವಾದ ಸಾಧನೆಯೇ! ಇವೆಲ್ಲವೂ ಹೇಗೆ ಸಾಧ್ಯವಾಯ್ತು ಗೊತ್ತೇ? ಆತ್ಮನಿರ್ಭರ ಭಾರತ ಎನ್ನುವ ಹೆಸರಿನಡಿ ಪಿಎಲ್ಐ ಸ್ಕೀಮ್‌ಗಳನ್ನು ತಂದು ಉತ್ಪಾದಕರಿಗೆ ಉತ್ತೇಜನ ನೀಡಿ ಅವರಿಗೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಟ್ಟರು. ಹೀಗಾಗಿಯೇ ಈ ದೀಪಾವಳಿಯಲ್ಲಿ ಬಹುತೇಕ ಭಾರತ ಬೆಳಗಿಸಿದ್ದು ಭಾರತದ ದೀಪಗಳನ್ನೇ. ಷಿ ಇದನ್ನೆಲ್ಲ ಗಮನಿಸುತ್ತಿಲ್ಲ ಎಂದುಕೊಂಡಿರೇನು? ಭಾರತ ಇದೇ ವೇಗದಲ್ಲಿ ಮುಂದುವರಿದರೆ ಮುಂದಿನ ಐದು ವರ್ಷದಲ್ಲಿ ನರೇಂದ್ರಮೋದಿ ಈ ವಿತ್ತೀಯ ಕೊರತೆಯನ್ನು ಇಲ್ಲವಾಗಿಸಬಲ್ಲರು. ಅದಕ್ಕೆ ಪಾಪ ರಾಹುಲ್ ಬಡಬಡಾಯಿಸುತ್ತಿದ್ದಾರೆ. 2030ರ ವೇಳೆಗೆ ಭಾರತ ಜಗತ್ತಿನ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ನಿಲ್ಲಲಿದೆ ಎನ್ನುವ ಭವಿಷ್ಯವನ್ನು ಎಲ್ಲರೂ ನುಡಿಯುತ್ತಿದ್ದಾರೆ. ಮೊನ್ನೆ ಭಾರತೀಯ ಸೈನಿಕರು ಚೀನೀ ಸೈನಿಕರನ್ನು ಬಡಿದಿರುವ ರೀತಿ ನೋಡಿದರೆ ಭಾರತ ಚೀನಾವನ್ನು ಸೈನಿಕ ಶಕ್ತಿಯಿಂದಲೂ ಎದುರಿಸಬಲ್ಲದು ಎನ್ನುವ ವಿಶ್ವಾಸ ಜಗತ್ತಿಗೆ ಮೂಡುತ್ತಿದೆ. ಇನ್ನು ಪಾಕಿಸ್ತಾನವನ್ನು ನೆಚ್ಚಿಕೊಂಡು ಭಾರತವನ್ನು ಮಟ್ಟಹಾಕಲು ಯತ್ನಿಸಿದ್ದ ಚೀನಾ ಭಾರತದ ಕುಟಿಲ ನೀತಿಯಿಂದಾಗಿ ಪಾಕಿಸ್ತಾನವನ್ನೇ ಬಿಟ್ಟೋಡಬೇಕಾದ ಸ್ಥಿತಿ ಬರುತ್ತಿದೆ. ತಾಲಿಬಾನಿಗಳು ಭಾರತದ ಯೋಧರಾಗಿ ಪಾಕಿಸ್ತಾನಿಗಳ ವಿರುದ್ಧ ಹೋರಾಟ ಮಾಡುತ್ತಿರುವುದು ಜಗತ್ತಿಗೇ ಅಚ್ಚರಿಯಾಗಿದೆ. ಬಲೂಚಿಸ್ತಾನ ದಿನ ಬೆಳಗಾದರೆ ಪಾಕಿಸ್ತಾನದ ಠಾಣ್ಯಗಳನ್ನು ಉಡಾಯಿಸುತ್ತಿರುವುದು ನೋಡಿದರೆ ಪಾಕಿಸ್ತಾನದ ಪರಿಸ್ಥಿತಿ ಖಂಡಿತವಾಗಿಯೂ ಚೆನ್ನಾಗಿಲ್ಲ. ಇತ್ತ ನೇಪಾಳವನ್ನು ನಂಬಿಕೊಂಡಿದ್ದ ಚೀನಾಕ್ಕೆ ಅಲ್ಲಿಯೂ ಭಾರತದ ಪರವಾಗಿರುವ ಸರ್ಕಾರ ಬಂದಮೇಲೆ ನಿಂತ ನೆಲ ಕುಸಿದಿರುವಂತೆ ಭಾಸವಾಗಿದೆ. ಶ್ರೀಲಂಕಾ ಈಗ ಭಾರತಕ್ಕೆ ಶರಣು ಬಂದಿರುವುದು ಇನ್ನೊಂದಷ್ಟು ತಲೆನೋವು. ಷಿ ರಾತ್ರಿಯ ನಿದ್ದೆ ಕಳೆದುಕೊಂಡಿರುವುದು ಸ್ಪಷ್ಟ. ಅವನಿಗಿರುವ ಒಂದೇ ಭರವಸೆ ತನ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ಸು ಮಾತ್ರ. ರಾಹುಲ್‌ನ ಆತಂಕವನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ.

ಇಷ್ಟೇ ಅಲ್ಲ, ಭಾರತದ ಪ್ರಜಾಪ್ರಭುತ್ವ ಯಾವ ಕಾಲಘಟ್ಟದಲ್ಲಿ ಎಲ್ಲಿ ನಿಂತು ನೋಡಿದರೂ ಚೀನಾವನ್ನು ಮೆಟ್ಟಿ ನಿಲ್ಲಬಲ್ಲಂಥದ್ದು. ಆರ್ಥಿಕ ಶಕ್ತಿ ಎಂಬ ಒಂದೇ ಕಾರಣಕ್ಕೆ ಚೀನಾಕ್ಕೆ ಗೌರವ. ಬಿಟ್ಟರೆ ಪ್ರಜಾಪ್ರಭುತ್ವದ ದೃಷ್ಟಿಯಿಂದ, ನಾಗರೀಕತೆಯ ದೃಷ್ಟಿಯಿಂದಲೂ ಭಾರತ ಅಗಾಧ ಶಕ್ತಿಯೇ. ಚೀನಾ ನಮ್ಮಲ್ಲಿ ಸಮರ್ಥ ನಾಯಕತ್ವವನ್ನು ಹಿಂದಿಕ್ಕಿ ಮುಂದೆ ಸಾಗಲು ತಿಣುಕಾಡಬೇಕಿದೆ. ಹೀಗಾಗಿಯೇ ಷಿ ಹೆದರುತ್ತಿದ್ದಾನೆ ಎಂದು ಆರಂಭದಲ್ಲಿಯೇ ಹೇಳಿದ್ದು. 

ಈಗ ಮತ್ತೊಮ್ಮೆ ಮೊದಲ ಮೂರು ಪ್ಯಾರಾಗ್ರಾಫ್‌ಗಳನ್ನು ಓದಿ. ಸಂಸತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ಚೀನಾ ಸಂಬಂಧದ ಬಗ್ಗೆ ಗೃಹ ಸಚಿವರು ಮಾತನಾಡಬೇಕು, ಅದೇ ಹೊತ್ತಿಗೆ ಸರಿಯಾಗಿ ಚೀನೀ ಸೈನಿಕರು ಷಿಯ ಆದೇಶದ ಮೇಲೆ ಗಡಿಯೊಳಗೆ ನುಗ್ಗುವ ಪ್ರಯತ್ನ ಮಾಡುತ್ತಾರೆ, ರಾಹುಲ್ ಅದನ್ನು ಅಸ್ತ್ರವಾಗಿ ಬಳಸಲು ತಯಾರಿ ಮಾಡಿಕೊಳ್ಳುತ್ತಾನೆ, ಬಿಲಾವಲ್ ಭುಟ್ಟೊ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಧಾನಮಂತ್ರಿಯನ್ನು ಮತಾಂಧ ಎಂದು ಬಿಂಬಿಸಲು ಪ್ರಯತ್ನ ಮಾಡುತ್ತಾನೆ, ಇಲ್ಲಿ ಮುಸಲ್ಮಾನರ ಮತಾಂಧತೆಯನ್ನು ಬಚ್ಚಿಟ್ಟು ಪಾಕಿಸ್ತಾನಿಯರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಡಿ.ಕೆ ಶಿವಕುಮಾರ್‌ರು ಮಾಡುತ್ತಾರೆ. ಚುಕ್ಕಿಗಳನ್ನು ಜೋಡಿಸಿಕೊಂಡರೆ ದೇಶದ ಬೆನ್ನಿಗೆ ಚೂರಿ ಇರಿಯುವ ಸಮಗ್ರ ಚಿತ್ರ ಕಂಡು ಬರುತ್ತದೆ. ಹೌದಲ್ಲವೇನು?

ಇನ್ನೆಷ್ಟು ಹಿಂದೂ ಹೆಣ್ಣುಮಕ್ಕಳ ಬಲಿ?!

ಇನ್ನೆಷ್ಟು ಹಿಂದೂ ಹೆಣ್ಣುಮಕ್ಕಳ ಬಲಿ?!

ಲವ್ ಜಿಹಾದ್ ಎಂಬ ಪದವನ್ನು ಮೊದಲ ಬಾರಿಗೆ ಹಿಂದೂಪರ ಸಂಘಟನೆಗಳು ಹೇಳುವಾಗ ಅನೇಕರು ಮೂಗು ಮುರಿದಿದ್ದರು, ಆಡಿಕೊಂಡಿದ್ದರು. ಅಂಥದ್ದೇನು ಇರುವುದು ಸಾಧ್ಯವೇ ಇಲ್ಲ ಎಂದು ಬಟ್ಟೆ ಹರಕೊಂಡು ವಾದಿಸಿದ್ದರು. ಮೊದಲ ಬಾರಿಗೆ ಕೇರಳದ ಕಮ್ಯುನಿಸ್ಟ್ ನಾಯಕರು ಮುಸಲ್ಮಾನರ ಈ ವ್ಯವಸ್ಥಿತ ಯೋಜನೆಯ ಕುರಿತಂತೆ ಮಾತನಾಡಿದಾಗಲೇ ದೇಶ ಒಮ್ಮೆ ಅದರಿತ್ತು. ಪ್ರೇಮ ಎನ್ನುವ ಪದಕ್ಕೆ ಇಸ್ಲಾಂನಲ್ಲಿ ಸೂಕ್ತ ಸ್ಥಾನವಿರುವುದೇ ಅನುಮಾನವಿದೆ. ಘನೀಭವಿಸಿದ ಪ್ರೇಮ ಭಕ್ತಿಯಾಗುವುದಾದರೆ ಅಲ್ಲಿ ಯಾರೊಂದಿಗೆ ಭಕ್ತಿ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇಸ್ಲಾಂ ಹುಟ್ಟಿದ್ದು, ಹರಡಿಕೊಂಡಿದ್ದು ಇವೆಲ್ಲವೂ ರಾಜಕೀಯ ಸಿದ್ಧಾಂತವಾಗಿಯೇ ಹೊರತು ಆಂತರಿಕವಾದ ಬೆಳವಣಿಗೆಯ ದೃಷ್ಟಿಯಿಂದಲ್ಲ. ಹೀಗಾಗಿ ಮುಸಲ್ಮಾನನೊಬ್ಬ ‘ಪ್ರೀತಿಸುತ್ತೇನೆ’ ಎಂದರೆ ಪಕ್ಕೆಲುಬು ಮುರಿಯುವಂತೆ ನಗಬೇಕೇ ಹೊರತು ಮತ್ತೇನೂ ಅಲ್ಲ. ಯಾಕಿಷ್ಟನ್ನೂ ಹೇಳಬೇಕಾಯ್ತೆಂದರೆ ದೆಹಲಿಯಲ್ಲಿ ಇತ್ತೀಚೆಗಷ್ಟೇ ಅಫ್ತಾಬ್ ಎಂಬ ಮುಸಲ್ಮಾನ ಯುವಕ ಶ್ರದ್ಧಾ ಎಂಬ ಹಿಂದೂ ಹೆಣ್ಣುಮಗಳೊಂದಿಗೆ ಅನೇಕ ವರ್ಷಗಳ ಕಾಲ ಇದ್ದು, ಕೊನೆಗೊಮ್ಮೆ ಆಕೆಯನ್ನು 35 ಚೂರು ಮಾಡಿ, ಫ್ರೀಜರ್‌ನಲ್ಲಿಟ್ಟು ದಿನಕ್ಕೆರಡು ಚೂರಿನಂತೆ ಅದನ್ನು ಹುಗಿದು ಬರುತ್ತಿದ್ದನಲ್ಲ, ಈ ಪಾಶವೀ ಕೃತ್ಯಕ್ಕೆ ಏನೆನ್ನಬೇಕು ಹೇಳಿ? ಉತ್ಕಟ ಕ್ಷಣವೊಂದರಲ್ಲಿ ಒಬ್ಬರು ಮತ್ತೊಬ್ಬರ ಕೊಲೆ ಮಾಡಿಬಿಡುವುದು ಆಗಾಗ ಕೇಳಸಿಗುತ್ತದೆ. ಇದಕ್ಕೆ ಜಾತಿ-ಮತ-ಪಂಥಗಳ ಬಂಧನವಿಲ್ಲ, ನಾನೂ ಒಪ್ಪುತ್ತೇನೆ. ಆದರೆ ಶ್ರದ್ಧಾ ಮತ್ತು ಅಫ್ತಾಬ್‌ಳ ವಿಚಾರದಲ್ಲಿ ನಡೆದಿರುವುದು ಅತ್ಯಂತ ಹೇಯವಾದ್ದು. ಅವಳನ್ನು ಕೊಲೆ ಮಾಡಿ ರಕ್ತ ಒರೆಸಿ, ಅಷ್ಟೂ ತುಂಡನ್ನು ಹೊಸದೊಂದು ರೆಫ್ರಿಜರೇಟರ್ ಖರೀದಿಸಿ ಅದರಲ್ಲಿ ಆತ ತುಂಬಿಸಿಟ್ಟಿದ್ದ. ಅಷ್ಟೇ ಅಲ್ಲ, ಆಕೆಯ ತುಂಡಾದ ದೇಹದ ಚೂರುಗಳು ಹೀಗೆ ಮನೆಯಲ್ಲಿರುವಾಗಲೇ ಇನ್ನೊಂದಷ್ಟು ಹಿಂದೂ ಯುವತಿಯರನ್ನು ಮನೆಗೆ ಕರೆಸಿಕೊಂಡು ಅವರೊಂದಿಗೆ ಸರಸ-ಸಲ್ಲಾಪಗಳನ್ನು, ಲೈಂಗಿಕ ಕ್ರಿಯೆಗಳನ್ನು ನಡೆಸುತ್ತಿದ್ದ! ಇದನ್ನು ಪ್ರೇಮವೆನ್ನಬಹುದೇನು? ಇವರೆಲ್ಲ ಉದ್ದೇಶವಿಟ್ಟುಕೊಂಡೇ ಹಿಂದೂ ಹೆಣ್ಣುಮಕ್ಕಳನ್ನು ಗುರಿ ಮಾಡಿಕೊಂಡು ಈ ರೀತಿಯ ಕೃತ್ಯ ನಡೆಸುತ್ತಾರೆ ಎಂಬುದಕ್ಕೆ ಈಗಂತೂ ಯಾವ ಅನುಮಾನವೂ ಉಳಿದಿಲ್ಲ. ಕಳೆದ ಕೆಲವಾರು ದಿನಗಳಿಂದ ಹೊರಬರುತ್ತಿರುವ ಅನೇಕ ಘಟನೆಗಳು ಇದನ್ನು ಸಾಬೀತುಪಡಿಸುವಂತಿವೆ. 

ಈ ತಿಂಗಳಲ್ಲೇ ನಡೆದ ಒಂದಷ್ಟು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಉತ್ತರ ಪ್ರದೇಶದ ಭಾಗ್‌ಪತ್‌ನಲ್ಲಿ ಸುಹೈಲ್ ಎಂಬ ಹುಡುಗ ತನ್ನ ಹೆಸರನ್ನು ಬದಲಾಯಿಸಿಕೊಂಡು ಒಂಭತ್ತನೇ ತರಗತಿಯ ಹುಡುಗಿಯೊಬ್ಬಳನ್ನು ಪಟಾಯಿಸಿಕೊಂಡ. ಅವಳನ್ನು ಲೈಂಗಿಕ ತೃಷೆಗಾಗಿ ಬಳಸಿಕೊಳ್ಳುವ ಧಾವಂತವೂ ಅವನಲ್ಲಿತ್ತು. ಅಷ್ಟರೊಳಗೆ ಮನೆಯವರಿಗೆ ವಿಚಾರ ಗೊತ್ತಾಗಿ ಹುಡುಗಿಗೆ ಒತ್ತಡ ಹೇರಲಾರಂಭಿಸಿದರು. ಹುಡುಗಿ ಮುಂದೆ ಮಾಡಿದ್ದೇನು ಗೊತ್ತೇ? ಶಾಲೆಗೆ ಹೋಗುತ್ತೇನೆಂದು ಹೇಳಿ ಕೊಳಚೆ ನೀರು ಸಾಗಿಸುವ ಡ್ರೈನೇಜ್ ಪೈಪ್ ಒಂದರಲ್ಲಿ ಅಡಗಿ ಕುಳಿತುಬಿಟ್ಟಳು. ಅತ್ತ ತನ್ನನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿರುವ ಸುಹೈಲ್, ಇತ್ತ ಅವನಿಂದ ಬಿಡಿಸಲು ಯತ್ನಿಸುತ್ತಿರುವ ತಂದೆ-ತಾಯಿಯರು. ಆ ಹುಡುಗಿಯ ಪರಿಸ್ಥಿತಿ ಎಂಥದ್ದಿರಬಹುದೆಂದು ನೀವೇ ಊಹಿಸಿ! ಮಗು ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರುಕೊಟ್ಟ ತಂದೆ-ತಾಯಿಯರು ಕೊನೆಗೂ ಒಂಭತ್ತು ಗಂಟೆಗಳ ಕಾಲ ಈ ಕೊಳವೆಯ ಅಸಹ್ಯಕರ ಪರಿಸ್ಥಿತಿಯಲ್ಲಿ ಯಾತನೆಯಿಂದ ತನ್ನನ್ನು ತಾನು ಅಡಗಿಸಿಕೊಂಡಿದ್ದ ಆ ಮಗುವನ್ನು ಹುಡುಕಿ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆಯನ್ನು ಮೋಸಗೊಳಿಸಿ ತನ್ನ ವಾಂಛೆಗೆ ಉಪಯೋಗಿಸಿಕೊಳ್ಳಲು ಯತ್ನಿಸಿದ ಸುಹೈಲ್ನನ್ನು ಯಾವುದರಲ್ಲಿ ಬಡಿಯಬೇಕು ಹೇಳಿ!

ಅದೇ ಯುಪಿಯ ಬರೇಲಿಯಲ್ಲಿ ಬಾಬು ಕುರೇಷಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಅಕ್ಲೀಂ ಹಿಂದೂ ಹುಡುಗಿಯೊಬ್ಬಳನ್ನು ಇಷ್ಟಪಟ್ಟ. ಆದರೆ ಆಕೆಯನ್ನು ಸಂಪರ್ಕಿಸುವುದು ಹೇಗೆ? ಆಕೆಯ ಬ್ಯೂಟಿ ಪಾರ್ಲರ್‌ಗೆ ನಿರಂತರವಾಗಿ ಹೋಗುತ್ತಿದ್ದ ತನ್ನ ಸೋದರಿಯರಾದ ತರನ್ನುಮ್ ಮತ್ತು ಶಬಾನಾರನ್ನು ಬಳಸಿಕೊಂಡ. ಇವರೀರ್ವರೂ ಅಕ್ಲೀಮನಿಗೆ ಹಿಂದೂ ಹುಡುಗಿಯ ಪರಿಚಯ ಮಾಡಿಸಿದರು. ಕೊನೆಗೊಮ್ಮೆ ಆಕೆಯನ್ನು ಓಲೈಸಿಕೊಂಡು ಮನೆಗೂ ಒಯ್ದರು. ಆಕೆಗೆ ಮತ್ತು ಬರಿಸುವ ಔಷಧಿ ಕುಡಿಸಿ ಅಕ್ಲೀಂ ಆಕೆಯನ್ನು ಬಳಸಿಕೊಳ್ಳಲು ಯತ್ನಿಸಿದ. ಆ ಸ್ಥಿತಿಯಲ್ಲಿಯೂ ಆಕೆ ಪ್ರತಿಭಟಿಸಿದಾಗ ಬಂದೂಕು ತೋರಿಸಿ ಕೊಲ್ಲುವ ಬೆದರಿಕೆ ಹಾಕಿ ಆಕೆಯನ್ನು ಬಲಾತ್ಕರಿಸಿದ. ಅವನೊಬ್ಬನೇ ಅಲ್ಲ, ಆತನ ಮಿತ್ರರೂ ಒಬ್ಬರಾದ ಮೇಲೆ ಒಬ್ಬರು ಆಕೆಯ ಮಾನಭಂಗಕ್ಕೆ ಕಾರಣರಾದರು. ದುರಂತವೇನು ಗೊತ್ತೇ? ಗೆಳತಿಯರಾದ ತರನ್ನುಮ್ ಮತ್ತು ಶಬಾನಾರೇ ಈ ಇಡಿಯ ಘಟನೆಯ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಆಕೆಯನ್ನು ಬ್ಲಾಕ್ ಮೇಲ್ ಮಾಡುವ ಪ್ರಯತ್ನ ಮಾಡಿದರು. ಒಂದಾದ ಮೇಲೊಂದು ಈ ಬಗೆಯ ಪ್ರಕರಣಗಳು ಹೊರಬರುತ್ತಿದ್ದಂತೆ ಧೈರ್ಯ ತಡೆದ ಹಿಂದೂ ಹುಡುಗಿ ಪೊಲೀಸರಿಗೆ ವಿಚಾರ ಮುಟ್ಟಿಸಿ ಆರು ಜನರ ಬಂಧನಕ್ಕೆ ಕಾರಣಳಾಗಿದ್ದಾಳೆ. ಇದೇ ಬಗೆಯ ಸುದ್ದಿಯೊಂದು ಮಂಡ್ಯದಿಂದಲೂ ಹೊರಗೆ ಬಂದಿದೆ. 13 ವರ್ಷದ ಹುಡುಗಿಯೊಂದಿಗೆ ಯೂನುಸ್ ಪಾಷ ಸಂಪರ್ಕ ಬೆಳೆಸಿಕೊಂಡ. ಈ ಅಯೋಗ್ಯನಿಗೆ ಅದಾಗಲೇ ಮದುವೆಯೂ ಆಗಿತ್ತು. ಹುಡುಗಿಗೆ ಮೊಬೈಲ್ ಕೊಡಿಸಿದ, ಚೆನ್ನಾಗಿ ಮಾತನಾಡುತ್ತಿದ್ದ, ಆಗಾಗ ವಿಡಿಯೊ ಕಾಲ್ ಕೂಡ ಮಾಡಿ ಆಕೆಯನ್ನು ಅಂಗಾಂಗ ಪ್ರದರ್ಶನಕ್ಕೆ ಪ್ರಚೋದಿಸುತ್ತಿದ್ದ. ಹೀಗೆ ಆಕೆ ತನ್ನ ಗುಪ್ತಾಂಗಗಳ ಪ್ರದರ್ಶನ ಮಾಡಿದ್ದೆಲ್ಲ ಆತ ವಿಡಿಯೊ ಚಿತ್ರೀಕರಣ ಮಾಡಿಟ್ಟುಕೊಂಡ. ಆಕೆಯನ್ನು ಬ್ಲಾಕ್ ಮೇಲ್ ಮಾಡಲಾರಂಭಿಸಿದ. ಲೈಂಗಿಕವಾಗಿ ಆಕೆಯನ್ನು ಬಳಸಿಕೊಳ್ಳುವ ಕುರಿತಂತೆ ಒತ್ತಾಯ ಹೇರಲಾರಂಭಿಸಿದ. ಗಾಬರಿ ಬಿದ್ದ ಹುಡುಗಿ ಒಳಗೊಳಗೇ ದುಃಖವನ್ನನುಭವಿಸಿದಳು. ಆತನಿಂದ ದೂರಹೋಗುವ ಧಾವಂತದಲ್ಲಿ ತನ್ನ ಅಜ್ಜಿಯ ಮನೆಗೆ ಹೋಗಿ ಉಳಿದಳು. ಆಕೆಯ ಜಾಡು ಹಿಡಿದು ಬಂದ ಯೂನುಸ್ ಆಕೆಯನ್ನು ಮೋಹಿಸಿ ನಿದ್ದೆಯ ಮಾತ್ರೆ ಕೊಟ್ಟು ಬಲಾತ್ಕರಿಸಿ ಕಾಣೆಯಾದ. ಖಿನ್ನತೆಗೆ ಒಳಗಾದ ಈ ಹೆಣ್ಣುಮಗಳನ್ನು ಗಮನಿಸಿದ ತಂದೆ-ತಾಯಿಯರು ಘಟನೆಯ ಜಾಡುಹಿಡಿದು ನೋಡಿದಾಗ ಯೂನುಸ್ ಪಾಷ ಸಿಕ್ಕಿಬಿದ್ದ. ಈಗ ಆತ ಪೊಕ್ಸೊದ ಅಡಿಯಲ್ಲಿ ಬಂಧಿತನಾಗಿದ್ದಾನೆ. ಇದೇ ಬಗೆಯ ಪ್ರಕರಣ ಗುಜರಾತಿನ ಅಹ್ಮದಾಬಾದಿನಿಂದ ವರದಿಯಾಗಿದೆ. ಸಮೀರ್ ಪ್ರಜಾಪತಿ ಎಂಬ ಹೆಸರಿನಿಂದ ಫೇಸ್ಬುಕ್ ಪ್ರೊಫೈಲ್ ಸೃಷ್ಟಿಸಿಕೊಂಡಿದ್ದ ನಾಸಿರ್ ಹಿಂದೂ ಹುಡುಗಿಯೊಬ್ಬಳನ್ನು ಪರಿಚಯ ಮಾಡಿಕೊಂಡ. ಆತನನ್ನು ಹಿಂದೂವೆಂದೇ ಭಾವಿಸಿದ ಆಕೆ ಸಹಜವಾಗಿ ಬಲೆಗೆ ಬಿದ್ದಳು. ನಿಧಾನವಾಗಿ ಆಕೆಯನ್ನು ಒಲಿಸಿಕೊಂಡು ಲಿವ್ಇನ್ ಸಂಬಂಧವನ್ನು ಬೆಳೆಸಿಕೊಂಡ. ಅಚ್ಚರಿಯೇನು ಗೊತ್ತೇ? ಸ್ವತಃ ನಾಸಿರ್‌ನ ಹೆಂಡತಿ ಮತ್ತು ಆಕೆಯ ತಮ್ಮ ಈ ಕೃತ್ಯದಲ್ಲಿ ಅವನಿಗೆ ಸಹಕಾರಿಗಳು! ಇವರೆಲ್ಲರೂ ಸೇರಿ ಆಕೆಯನ್ನು ಎಷ್ಟರಮಟ್ಟಿಗೆ ಪೀಡಿಸಿದರೆಂದರೆ ಆಕೆ ದುಡಿದದ್ದೆಲ್ಲವನ್ನೂ ಖರ್ಚು ಮಾಡುತ್ತಿದ್ದರು ಮತ್ತು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲಿಕ್ಕಾಗಿ ನಾಸಿರ್‌ನಷ್ಟೇ ಅಲ್ಲದೇ ಇತರರನ್ನೂ ಕರೆಸಿ ಆಕೆಯ ಬದುಕನ್ನು ದುರ್ಭರಗೊಳಿಸಿಬಿಟ್ಟರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆಕೆಯನ್ನು ಅಕ್ಷರಶಃ ಬೆಲೆವೆಣ್ಣಾಗಿ ಪರಿವರ್ತಿಸುವ ಕುಕೃತ್ಯ ಇದು. ಇವರ ಹಿಂಸೆಯನ್ನು ತಾಳಲಾಗದೇ ಆಕೆ ಪೊಲೀಸರ ಬಳಿ ಓಡಿಬಂದಾಗಲೇ ಘಟನೆ ಬೆಳಕು ಕಂಡಿತು. ಇದೇ ರೀತಿ ಹೆಸರನ್ನು ಬದಲಿಸಿಕೊಂಡು ಹಿಂದೂ ಹೆಣ್ಣುಮಕ್ಕಳನ್ನು ಪಟಾಯಿಸುವ ಪ್ರಕರಣ ಈ ತಿಂಗಳಲ್ಲೇ ಮೀರತ್‌ನಿಂದಲೂ ವರದಿಯಾಗಿದೆ. ರಿಂಕು ಎಂದು ತನ್ನ ಪರಿಚಯ ಮಾಡಿಕೊಂಡ ಮುಜಮ್ಮಿಲ್ ನೇಹಾ ಎನ್ನುವ ಹುಡುಗಿಯನ್ನು ಖೆಡ್ಡಾಕೆ ಕೆಡವಿದ. ಈತನನ್ನು ನಂಬಿ ಆಕೆ ತನ್ನದೆಲ್ಲವನ್ನೂ ಸಮರ್ಪಿಸಿಕೊಂಡಳು. ಶುದ್ಧ ಪ್ರೇಮವಿರಬಹುದೆಂದು ಆಕೆಯ ಭಾವನೆಯಾಗಿತ್ತು. ಆದರೆ ಮುಜಮ್ಮಿಲ್ ಅದಕ್ಕೆ ಯೋಗ್ಯನಾಗಿರಲಿಲ್ಲ. ಮದುವೆಗೆ ಒತ್ತಾಯಿಸಿದರೆ ತಾನು ಅಫ್ತಾಬ್‌ನಾಗಿ ಬದಲಾಗಿ ಶ್ರದ್ಧಾಳಂತೆ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಸಿಬಿಟ್ಟ! ನೇಹಾ ಈ ಬಾರಿ ಸಹಿಸಿಕೊಳ್ಳಲಿಲ್ಲ. ಹೇಗೆ ಶ್ರದ್ಧಾ ಸಹಿಸಿಕೊಂಡು ಹೆಣವಾಗಿಹೋದಳೋ ನೇಹಾ ಅದಕ್ಕೆ ವಿರುದ್ಧವಾಗಿ ಪ್ರತಿಭಟಿಸಿನಿಂತಿದ್ದರ ಫಲವಾಗಿ ಇಂದು ಆಕೆ ಉಳಿದಳು. ಇನ್ನು ಪತ್ರಿಕೆಗಳಲ್ಲಿ ಸಾಕಷ್ಟು ಸುದ್ದಿ ಮಾಡಿದ ಘಟನೆ ಲಕ್ನೌನ ಮೊಹಮ್ಮದ್ ಸುಫಿಯಾನ್‌ನದು. ಹೀಗೆ ಹೆಸರು ಬದಲಾಯಿಸಿಕೊಂಡು ನಿಧಿಯನ್ನು ಆತ ತನ್ನ ತಥಾಕಥಿತ ಪ್ರೇಮದ ಬಲೆಗೆ ಕೆಡವಿದ. ಅದು ಪ್ರೇಮವಲ್ಲ, ಕಾಮತೃಷೆ ಎಂದು ಅರಿವಾಗುವ ವೇಳೆಗೆ ಸಾಕಷ್ಟು ತಡವಾಗಿತ್ತು. ಆದರೆ ನಿಧಿಯನ್ನು ಮೆಚ್ಚಬೇಕು. ತಂದೆ-ತಾಯಿಯರ ಮಾತನ್ನು ಕೇಳಿದ ಆಕೆ ಈ ಸಂಬಂಧದಿಂದ ಮರಳಿ ಬಂದಳು. ಆತ ಬಿಡಲಿಲ್ಲ. ಮತ್ತೆ ಒಲಿಸಿಕೊಳ್ಳುವ ಪ್ರಯತ್ನ ಮಾಡಿ ಮದುವೆಯಾಗುವ ಭರವಸೆಕೊಟ್ಟ. ಆದರೆ ಆತನ ಒಂದೇ ಒಂದು ನಿಯಮವೆಂದರೆ ಆಕೆ ಇಸ್ಲಾಮಿಗೆ ಮತಾಂತರವಾಗಬೇಕಿತ್ತು. ಆಕೆ ವಿರೋಧಿಸಿದಾಗ ಆಕೆಯನ್ನು ನಾಲ್ಕನೇ ಮಹಡಿಯ ಮೇಲಿಂದ ನೂಕಿಬಿಟ್ಟ. ತಂದೆ-ತಾಯಿಯರು ಏನಾಯ್ತೆಂದು ನೋಡುವಷ್ಟರಲ್ಲಿ ತಪ್ಪಿಸಿಕೊಂಡೂ ಹೋದ. ರಕ್ತದ ಮಡುವಲ್ಲಿ ಬಿದ್ದಿದ್ದ ನಿಧಿ ಉಳಿಯುವ ಯಾವ ಲಕ್ಷಣವೂ ಇರಲಿಲ್ಲ. ಪೊಲೀಸರು ಕೊನೆಗೂ ಸೂಫಿಯಾನನ ಕಾಲಿಗೆ ಗುಂಡುಹೊಡೆದು ಬಂಧಿಸಬೇಕಾಗಿ ಬಂತು. ಛಂಡೀಘಡದಲ್ಲಿ ಮೊಹಮ್ಮದ್ ಶಾರಿಕ್ ಮಮತಾಳೊಂದಿಗೆ ಎರಡು ವರ್ಷದಿಂದ ಸಂಪರ್ಕವಿರಿಸಿಕೊಂಡಿದ್ದ. ತನಗೆ ಮದುವೆಯಾಗಿದ್ದನ್ನು ಮುಚ್ಚಿಟ್ಟು ಆಕೆಯಂದಿಗೆ ಈ ರೀತಿಯ ಗೆಳೆತನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈತನ ಮದುವೆಯ ವಿಚಾರ ಹೊರಬಂದೊಡನೆ ಆಕೆ ಪ್ರತಿಭಟಿಸಿದಳು. ಆತನಿಂದ ದೂರವಾದಳು. ಕೊನೆಯ ಪಕ್ಷ ಹೆಂಡತಿಗೆ ವಿಚ್ಛೇದನ ಕೊಟ್ಟು ಬಾ ಎಂಬ ಆಕೆಯ ಒತ್ತಾಯಕ್ಕೆ ಶಾರಿಕ್ ಮಣಿಯಲಿಲ್ಲ. ಆಕೆಯ ಕೊಲೆಯನ್ನೇ ಮಾಡಿಬಿಟ್ಟ. ಬಿಹಾರದ ಈತ ಓಡಿಹೋಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ. ರಾಜ್ ರಜಪೂತ್ ಎಂಬ ಹೆಸರಿನಿಂದ ಜೂಲಿಕುಮಾರಿಯನ್ನು ಪ್ರೀತಿಸುವ ನಾಟಕವಾಡಿದ ತೌಫಿಕ್ ಆಲಂ, ಜೂಲಿಯಷ್ಟೇ ದೊಡ್ಡವನಾಗಿರುವ ಮಗನೊಬ್ಬನಿದ್ದಾನೆ ಎಂಬ ವಿಚಾರವೇ ಗೊತ್ತಾಗದಂತೆ ನೋಡಿಕೊಂಡಿದ್ದ. ಆಕೆಗೆ ಈ ವಿಚಾರ ಗೊತ್ತಾಗಿ ಪ್ರತಿಭಟನೆ ಶುರುವಾದೊಡನೆ ಕೊಲ್ಲುವ ಬೆದರಿಕೆ ಒಡ್ಡಿದನಲ್ಲ, ಜೂಲಿ ಬುದ್ಧಿವಂತಿಕೆಯಿಂದ ಪೊಲೀಸರ ಬಳಿ ಎಲ್ಲವನ್ನೂ ಹೇಳಿಕೊಂಡಳು. ತೌಫಿಕ್ ಈಗ ಸರಳುಗಳ ಹಿಂದಿದ್ದಾನೆ. ಮಧ್ಯಪ್ರದೇಶದಲ್ಲೂ ಸೊಹೈಲ್ ಖಾನ್ ಸುನೀತಾಳಿಗೆ ಮೋಸ ಮಾಡಿ ಮದುವೆಯಾಗಿ ಕೊನೆಗೆ ಆಕೆಯನ್ನು ಮತಾಂತರಿಸಿದ. ಒಮ್ಮೆ ಹಿಂದೂ ದೇವರಿಗೆ ನಮಸ್ಕಾರ ಮಾಡಿದಳು ಎಂಬ ಕಾರಣಕ್ಕೆ ಅವಳನ್ನು ನಿತ್ಯವೂ ಬಡಿಯುತ್ತಿದ್ದ. ಸಹಿಸಲಾಗದೇ ಆಕೆ ಈಗ ಪೊಲೀಸರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಕೇಳಿ ಕೇಳಿ ಸಾಕಾಯ್ತಲ್ಲವೇ. ಆದರೆ ಈ ಕೃತ್ಯದಲ್ಲಿ ನಿರತರಾದ ಈ ಪಾಪಿಗಳಿಗೆ ಸಾಕೆನಿಸುವುದಿಲ್ಲ. ಬೇಸರವಿರುವುದು ನಮ್ಮ ಹೆಣ್ಣುಮಕ್ಕಳ ಬಗ್ಗೆಯೇ. ಎಷ್ಟು ಬೇಗನೇ ಇವರು ತೋಡಿದ ಖೆಡ್ಡಾಕೆ ಬಿದ್ದು ಬಿಡುತ್ತಾರಲ್ಲವೇ? ತಾಜ್ ಮಹಲ್ ಕಟ್ಟಿಸಿದ ಶಹಜಹಾನ ಮುಮ್ತಾಜ್‌ಳ ನೆನಪಿಗಾಗಿ ಕಟ್ಟಿದನೆಂದು ಬೂಸಿ ಬಿಡುತ್ತಾರಷ್ಟೆ. ಅವನ ಜನಾನಾದಲ್ಲಿ ನೂರಾರು ಹೆಣ್ಣುಮಕ್ಕಳಿದ್ದುದನ್ನು ನಮ್ಮೊಂದಿಗೆ ಎಂದೂ ಹಂಚಿಕೊಳ್ಳುವುದೇ ಇಲ್ಲ. ನೂರಾರು ಮಂದಿಯೊಂದಿಗೆ ಸಂಪರ್ಕವಿರಿಸಿಕೊಂಡವನಿಗೆ ಒಬ್ಬಳೊಂದಿಗೆ ಸ್ಮಾರಕವೊಂದನ್ನು ಕಟ್ಟಿಸಬಲ್ಲಷ್ಟು ಪ್ರೀತಿ ಇದೆ, ಎಂಬುದನ್ನು ಯಾರಿಗಾದರೂ ನಂಬಲು ಸಾಧ್ಯವೇನು? ಜಾಕಿರ್ ನಾಯ್ಕ್ ಹೇಳುತ್ತಾನಲ್ಲ, ಒಬ್ಬ ಪುರುಷನಿಗೆ ನಾಲ್ಕು ಸ್ತ್ರೀಯರನ್ನು ಸಂಭಾಳಿಸುವ ತಾಕತ್ತಿದೆಯಂತಲೇ ಆತನಿಗೆ ನಾಲ್ಕು ಮದುವೆಗೆ ಅವಕಾಶ ಕೊಟ್ಟಿರೋದು ಅಂತ! ನಾಚಿಕೆಗೇಡಿನ ಮಂದಿ ಇವರೆಲ್ಲ. ಗಂಡು ಭಾವನಾತ್ಮಕ ಜಗತ್ತಿನಲ್ಲಿ ಒಬ್ಬ ಹೆಣ್ಣನ್ನಲ್ಲ, ಹತ್ತಾರು ಹೆಣ್ಣುಮಕ್ಕಳನ್ನು ಸಂಭಾಳಿಸಬಲ್ಲ. ಅವನು ಏಕಕಾಲಕ್ಕೆ ತಾಯಿಗೆ ಒಳ್ಳೆಯ ಮಗನಾಗಬಲ್ಲ, ಅತ್ತಿಗೆಗೆ ಒಳ್ಳೆಯ ಮೈದುನನಾಗಬಲ್ಲ, ಅಕ್ಕನಿಗೆ ಒಳ್ಳೆಯ ತಮ್ಮನಾಗಬಲ್ಲ, ತಂಗಿಗೆ ಒಳ್ಳೆಯ ಅಣ್ಣನಾಗಬಲ್ಲ, ಮಗಳಿಗೆ ಒಳ್ಳೆಯ ತಂದೆಯಾಗಬಲ್ಲ.  ಈ ರೀತಿ ಯೋಚನೆ ಮಾಡುವ ಸಾಮರ್ಥ್ಯ ‘ಲವ್‌ಜಿಹಾದ್’ ಅನ್ನು ಹಬ್ಬಿಸುವ ಈ ಮಂದಿಗಿದೆಯೇನು?

ಅವರ ಪಾಲಿಗೆ ಧರ್ಮಯುದ್ಧಕ್ಕೆ ಒಂದೇ ಮಾರ್ಗ, ಅನ್ಯಮತೀಯರನ್ನೆಲ್ಲ ತಮ್ಮ ಮತದವರನ್ನಾಗಿಸಿಕೊಳ್ಳುವುದು ಮಾತ್ರ. ಅವರು ಸ್ವರ್ಗಕ್ಕೆ ಹೋಗಲು ನಮ್ಮ ಹೆಣ್ಣುಮಕ್ಕಳು ಅವರ ಪಾಲಿಗೆ ಎಂಟ್ರೆನ್ಸ್ ಪಾಸ್ ಇದ್ದಂತೆ. ಅದಕ್ಕಾಗಿಯೇ ತಮ್ಮ ಹೆಸರನ್ನು ಬದಲಾಯಿಸಿಕೊಂಡು, ಹಿಂದೂಗಳಂತೆ ನಾಟಕ ಮಾಡುತ್ತಾ, ಪ್ರೇಮಿಸುವ ಬೂಟಾಟಿಕೆಯೊಂದಿಗೆ ಒಲಿಸಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಆನಂತರ ಅವರನ್ನು ತಮ್ಮ ಗೆಳೆಯರಿಗೆ, ಗಿರಾಕಿಗಳಿಗೆ ದೇಹ ಹಂಚಿಕೊಳ್ಳಲು ಪ್ರಚೋದಿಸುತ್ತಾರೆ, ಅದರಿಂದ ಲಾಭ ಮಾಡಿಕೊಳ್ಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ವಿದೇಶಕ್ಕೆ ಕಳಿಸಿಕೊಟ್ಟು ಐಸಿಸ್ನ ಕ್ರೂರಿ ರಕ್ಕಸರಿಗೆ ಆಹಾರವಾಗಿಸಿಬಿಡುತ್ತಾರೆ! ಸಂಕಟವಾಗೋದು ಆಗಲೇ..

ಸುಳ್ಳಿಗೆ ದೊಂಬಿ ಬೇಕು, ಸತ್ಯ ಒಬ್ಬಂಟಿಯೇ!

ಸುಳ್ಳಿಗೆ ದೊಂಬಿ ಬೇಕು, ಸತ್ಯ ಒಬ್ಬಂಟಿಯೇ!

ಕಳೆದ ಕೆಲವಾರು ದಿನಗಳಿಂದ ಹಿಂದೂಧರ್ಮದ ಕುರಿತ ಚರ್ಚೆ ವ್ಯಾಪಕವಾಗಿದೆ. ಅನೇಕ ತರುಣರು ಧರ್ಮವನ್ನು ಅರಿಯಲು ಯತ್ನಿಸುತ್ತಿರುವುದು ಹೆಮ್ಮೆ ಮೂಡಿಸುವಂತಿದೆ. ಅದು ಯಾವಾಗಲೂ ಹಾಗೆಯೇ, ಬೊಗಳುವ ಸದ್ದು ಕೇಳಿದಾಗಲೇ ಜನ ಅತ್ತ ತಿರುಗಿ ನೋಡುವುದು. ನಿತ್ಯದ ಸದ್ದಿಗೆ ಯಾರೂ ಕತ್ತು ಹೊರಳಿಸುವುದಿಲ್ಲ. ಈಗ ಸಾವರ್ಕರ್‌ರ ಹಿಂದುತ್ವ ಕೃತಿಗೆ ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆ ಬಂದಿದೆ. ಸಂತೋಷವೇ ಅಲ್ಲವೇನು? 

ಬಹುತೇಕರಿಗೆ ಹಿಂದೂಧರ್ಮದ ಸ್ಥಾಪಕರು ಯಾರು ಎಂಬ ಪ್ರಶ್ನೆ ಇದೆ. ಏಕೆಂದರೆ ಅವರು ಜಾಗತಿಕವಾಗಿ ನೋಡಿರುವ ರಿಲಿಜನ್‌ಗಳಲ್ಲೆಲ್ಲಾ ಒಬ್ಬ ಮೂಲಪುರುಷ ಅಥವಾ ಸಂಸ್ಥಾಪಕ ಇದ್ದೇ ಇರುತ್ತಾನೆ. ಹೀಗಾಗಿ ಈ ಪ್ರಶ್ನೆ ಮೇಲೇಳುವುದು ಉಚಿತವೇ, ಆದರೆ ಸಹಜವಲ್ಲ. ಹಿಂದೂಗಳು ಅನೇಕ ಸಾವಿರ ವರ್ಷಗಳಿಂದ ಈ ನಾಡಿನಲ್ಲಿ ಬದುಕಿದ್ದಾರೆ. ಜಗತ್ತಿಗೆಲ್ಲಾ ಶ್ರೇಷ್ಠತೆಯ ಸಂದೇಶವನ್ನು ಒಯ್ದಿದ್ದಾರೆ. ಆದರೆ ಅವರಿಗೆಂದಿಗೂ ಈ ಪ್ರಶ್ನೆ ಹುಟ್ಟಲೇ ಇಲ್ಲ. ಏಕೆಂದರೆ ಧರ್ಮ ಮತ್ತು ರಿಲಿಜನ್‌ಗಳ ನಡುವಿನ ಅಂತರ ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಿಂದೂಧರ್ಮವನ್ನು ಸ್ಥಾಪಿಸಿದವರ ಕುರಿತಂತೆ ಅರಿಯುವ ಮೊದಲು ಪಶ್ಚಿಮದ ರಿಲಿಜನ್ನಿನ ಕಲ್ಪನೆಯನ್ನು ತಿಳಿದುಕೊಳ್ಳುವುದೊಳಿತು. ಅಲ್ಲಿ ಹುಟ್ಟಿರುವ ಯಾವುದೇ ರಿಲಿಜನ್‌ಗೆ ಅವಶ್ಯಕವಾಗಿ ಮೂರು ಸಂಗತಿಗಳು ಬೇಕೇ ಬೇಕು. ಮೊದಲನೆಯದಾಗಿ ಒಬ್ಬ ದೇವರು, ಎರಡನೆಯದಾಗಿ ಆತನ ಸಂದೇಶವನ್ನು ಜನರಿಗೆ ಮುಟ್ಟಿಸಬಲ್ಲ ಒಂದು ವಾಹಕ ಮತ್ತು ಮೂರನೆಯದ್ದು ಭಗವಂತನ ಅವತೀರ್ಣಗೊಂಡ ವಾಣಿಗಳುಳ್ಳ ಒಂದು ಪುಸ್ತಕ. ಯಾವ ಮಾರ್ಗದಲ್ಲಿ ಈ ಮೂರೂ ಇಲ್ಲವೋ ಅದನ್ನವರು ರಿಲಿಜನ್ ಎಂದು ಒಪ್ಪಿಕೊಳ್ಳುವುದೇ ಇಲ್ಲ! ನಮಗೆ ಸಮಸ್ಯೆ ಬಂದಿದ್ದು ಈ ವಿದೇಶಿಗರು ಭಾರತಕ್ಕೆ ಬಂದಾಗ ಇಲ್ಲಿರುವ ಈ ಧರ್ಮವನ್ನು ನೋಡಿ, ಇದರ ಪ್ರಮುಖ ಗ್ರಂಥವನ್ನು, ದೇವರನ್ನು ಮತ್ತು ಮೂಲಪುರುಷನ ಹುಡುಕಾಟವನ್ನು ಅವರು ಆರಂಭಿಸಿದಾಗ. ಪಶ್ಚಿಮದ ಈ ಮತಪ್ರವರ್ತಕರು ಇಲ್ಲಿಗೆ ಬಂದು ತಮ್ಮ ರಿಲಿಜನ್‌ಗೆ ಪೂರಕವಾಗಿ ಯಾವ ಸಂಗತಿಗಳನ್ನೂ ಕಾಣದೇ ಹೋದಾಗ ಈ ಜನರನ್ನು ಅವರು ಅನಾಗರಿಕರೆಂದು ಕರೆದರು. ಆದರೆ ವಾಸ್ತವವಾಗಿ ಅವರೆಲ್ಲರಿಗಿಂತಲೂ ಎತ್ತರದಲ್ಲಿದ್ದ ಶ್ರೇಷ್ಠ ಜನಾಂಗ ಇದಾಗಿತ್ತು. ಅವರು ಕಣ್ಣಿಗೆ ಕಾಣದ ಆಗಸದಲ್ಲೆಲ್ಲೋ ಇರಬಹುದಾಗಿರುವ ಒಬ್ಬ ದೇವನ ಕುರಿತಂತೆ ಮಾತನಾಡುತ್ತಿದ್ದರೆ ಹಿಂದೂಧರ್ಮ ಆತ್ಮದ ಕುರಿತಂತೆ ಅದಾಗಲೇ ಸಾಕಷ್ಟು ಸಾಹಿತ್ಯವನ್ನೇ ಸೃಜಿಸಿತ್ತು. ಇದನ್ನರಿಯಲಾಗದೇ ಮೌಢ್ಯದಲ್ಲಿದ್ದ ಪಶ್ಚಿಮದ ಜನ ಇಲ್ಲಿನವರನ್ನು ಬಹುದೇವತಾ ವಿಶ್ವಾಸಿಗಳು ಎಂದು ಜರಿದರು. 

ಅವರು ಒಂದು ಗ್ರಂಥವನ್ನು ಅನುಸರಿಸಿಕೊಂಡೇ ಬದುಕು ನಡೆಸುವವರಾಗಿದ್ದರೆ ನಮ್ಮ ಬಳಿ ಆತ್ಮಸಾಕ್ಷಾತ್ಕಾರಕ್ಕೆ ಭಿನ್ನ-ಭಿನ್ನ ಮಾರ್ಗಗಳನ್ನು ಹುಡುಕುವ ಸಾಹಿತ್ಯರಾಶಿಯೇ ಇತ್ತು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರದ್ದು ಸಂದೇಶವಾಹಕ ಹೇಳಿದ್ದನ್ನು ಒಪ್ಪಿ ತಗ್ಗಿ-ಬಗ್ಗಿ ನಡೆಯುವ ಮಾರ್ಗವಾದರೆ ನಮ್ಮದ್ದು ಅರಿವಿಗೆ ಬರುವವರೆಗೂ ಪರೀಕ್ಷಿಸುತ್ತಲೇ ಸಾಗುವ ಚಿಕಿತ್ಸಕ ಮಾರ್ಗವಾಗಿತ್ತು. ಈ ಹಂತದಲ್ಲೇ ಅವರಿಗೆ ಹಿಂದೂಧರ್ಮದ ಮೂಲಪುರುಷರ ಪ್ರಶ್ನೆಯೂ ಉದ್ಭವವಾಗಿದ್ದು. ಒಬ್ಬ ವ್ಯಕ್ತಿಯಿಲ್ಲದೇ ಒಂದು ಧರ್ಮ ಇರಬಹುದೆಂಬುದನ್ನು ಅವರು ನಂಬಲು ಸಿದ್ಧರೇ ಇರಲಿಲ್ಲ!

ಹಿಂದೂಧರ್ಮದ ನಂಬಿಕೆ ಬಲು ವಿಶಿಷ್ಟವಾದ್ದು. ಇಲ್ಲಿ ಧರ್ಮದ ಮೂಲಪುರುಷರೆಂದು ಯಾರೂ ಇಲ್ಲವೇ ಇಲ್ಲ. ನಾವು ನಂಬಿರುವ ದೇವ-ದೇವತೆಗಳೂ ಈ ಧರ್ಮದ ಚೌಕಟ್ಟಿನಲ್ಲೇ ಅನುಷ್ಠಾನ ನಡೆಸುವಂಥವರು. ಪರಂಪರಾನುಗತವಾಗಿ ಈ ಧರ್ಮ ಹರಿದುಬಂದಿದೆ. ಇಲ್ಲಿ ಆಟವಾಡಲು ಬಯಸುವವನಿಗೆ ಕಡಿಮೆ ನೀರಿರುವ ನದಿಯ ತೀರವೂ ಸಿಗುತ್ತದೆ. ರತ್ನವೇ ಬೇಕೆನ್ನುವವನಿಗೆ ಮುಳುಗು ಹಾಕಿದಷ್ಟೂ ಸಮುದ್ರ ದೊರೆಯುತ್ತದೆ. ಹೀಗಾಗಿಯೇ ಒಮ್ಮೆ ಇದರ ಸ್ವಾರಸ್ಯವನ್ನು ಅರಿತವರು ಮತ್ತೆ-ಮತ್ತೆ ಆಳದಿಂದ ಆಳಕ್ಕೆ ಮುಳುಗು ಹಾಕುತ್ತಲೇ ಇರುತ್ತಾರೆ. ಧರ್ಮವೆನ್ನುವುದು ನಿತ್ಯದ ಬದುಕಿಗೆ ಸಂಬಂಧವೇ ಇಲ್ಲದ ಒಂದಷ್ಟು ನಂಬಿಕೆಗಳ ಕಂತೆ ನಮ್ಮ ಪಾಲಿಗಂತೂ ಅಲ್ಲ. ಅದು ಆರೋಗ್ಯಕರ ಮತ್ತು ಸರ್ವೋಪಯೋಗಿಯಾಗಿರುವ ಬದುಕಿಗೆ ಬೇಕಾಗುವಂಥದ್ದು. ನಮ್ಮ ತಿಳಿವಿನಂತೆ ಧರ್ಮ ಸಹಜವಾಗಿಯೇ ಇರುವಂಥದ್ದು. ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಎಂಬುದನ್ನು ನ್ಯೂಟನ್ ಕಂಡು ಹಿಡಿದದ್ದೇ ಹೊರತು ಅದಕ್ಕೆ ಆ ಶಕ್ತಿಯನ್ನು ಕೊಟ್ಟವನೇ ನ್ಯೂಟನ್ ಅಲ್ಲ. ಹಾಗೇ ಧರ್ಮದ ವಿಚಾರವೂ. ಯಾವುದಿಲ್ಲವಾದರೆ ಆ ವಸ್ತುವಿಗೆ ಅಸ್ತಿತ್ವವೇ ಇಲ್ಲವೋ ಅದೇ ಧರ್ಮ. ಸುಡುವ ಶಕ್ತಿ ಇಲ್ಲವಾದರೆ ಬೆಂಕಿ ಎಂದು ಕರೆಯುವಿರೇನು? ಅಚಲವಾಗಿ ನಿಲ್ಲುವ ಶಕ್ತಿ ಇಲ್ಲವಾದರೆ ವಸ್ತುವೊಂದನ್ನು ಜಡವೆನ್ನುವಿರೇನು? ಹಾಗೆಯೇ ಮಾನವನಿಗೂ ಒಂದು ಧರ್ಮವಿದೆ. ಆತನ ಅಸ್ತಿತ್ವದ ಮೂಲವಿರುವುದು ಆತನೊಳಗಿರುವ ಆತ್ಮಶಕ್ತಿಯಿಂದಾಗಿ. ಜೀವಿಯೇ ದೇವನಾಗುವ ಶಕ್ತಿ ಆತನ ಪಾಲಿಗೆ ಧರ್ಮ. ಭಾರತ ಇದನ್ನು ಸವಿಸ್ತಾರವಾಗಿ ಹೇಳುವುದಲ್ಲದೇ ಆ ಅಸ್ತಿತ್ವದ ಪರಿಕಲ್ಪನೆ ಇಲ್ಲದ ಸ್ಥಳವೇ ಇಲ್ಲ ಎಂಬುದನ್ನು ಸಾರಿ ಹೇಳುತ್ತದೆ. ಈಶಾವಾಸ್ಯೋಪನಿಷತ್ತು ‘ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್’ ಎನ್ನುತ್ತದೆ. ಜಗತ್ತಿನಲ್ಲಿ ಇರುವುದೆಲ್ಲದರಲ್ಲೂ ಈಶನೇ ಇದ್ದಾನೆ ಎಂಬ ನಮ್ಮ ಧರ್ಮದ ಅಡಿಪಾಯವಾಗಿರುವ ವಾಕ್ಯ ಅದು.

ಇವೆಲ್ಲವನ್ನೂ ಸೂಕ್ಷ್ಮವಾಗಿ ಸಂಕಲಿಸಬೇಕೆಂದರೆ, ಬೆಂಕಿಗೆ ಉರಿವ ಗುಣದ ಪರಿಚಯ ಯಾರೂ ಹೇಗೆ ಕಲಿಸಿಕೊಡಬೇಕಿಲ್ಲವೋ, ಕೆಚ್ಚಲಿಗೆ ಬಾಯಿ ಹಾಕಿದರೆ ಹಾಲು ದಕ್ಕುವುದೆಂಬ ಪಾಠವನ್ನು ಕರುವಿಗೆ ಯಾರೂ ಹೇಳಿಕೊಡಬೇಕಿಲ್ಲವೋ, ಹಾಗೆಯೇ ಮಾನವನೊಳಗಿನ ಮಾಧವತ್ವದ ಪರಿಚಯವೂ ಕೂಡ. ಹೀಗಾಗಿ ಧರ್ಮಕ್ಕೆ ಮೂಲಪುರುಷರಿರುವುದಿಲ್ಲ. ಆದರೆ, ಆ ಮಾಧವನನ್ನು ಅರಸುವ ಮಾರ್ಗ ಅದನ್ನು ಮತ-ಪಂಥ ಎಂದು ಗುರುತಿಸುವುದಾದರೆ, ಇರುವ ಅಸಂಖ್ಯ ಮಾರ್ಗಗಳಲ್ಲಿ ಒಂದೊಂದನ್ನು ಪರಿಚಯಿಸುವ ಭಿನ್ನ-ಭಿನ್ನ ಗುರುಗಳೋ ಸಂದೇಶವಾಹಕರೋ ಸಂತರೋ ಮುನಿಗಳೋ ಪ್ರವಾದಿಗಳೋ ಇರುತ್ತಾರೆ. ಅವರು ಮಾರ್ಗವನ್ನು ತೋರಬಲ್ಲರು. ಅದು ಮೂಲಧರ್ಮದೆಡೆಗೆ ನಮ್ಮನ್ನು ಕರೆದುಕೊಂಡು ಹೋಗಬಹುದು. 

ಸ್ವಲ್ಪ ಗೊಂದಲವೆನಿಸಿದರೆ ಸರಳವಾಗಿ ತಿಳಿಹೇಳುವ ಪ್ರಯತ್ನ ಮಾಡುತ್ತೇನೆ. ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಎಂಬೆಲ್ಲಾ ವಿಭಾಗಗಳಿವೆ. ಭೌತಶಾಸ್ತ್ರವನ್ನು ಕಂಡು ಹಿಡಿದವನ್ಯಾರು ಎಂಬ ಪ್ರಶ್ನೆ ಕೇಳಿದರೆ ಉತ್ತರ ಕೊಡಲಾದೀತೇನು? ಆದರೆ ಆ ಭೌತಶಾಸ್ತ್ರದಲ್ಲಿ ಭಿನ್ನ ಭಿನ್ನ ಮಾರ್ಗಗಳಲ್ಲಿ ನಡೆದ ವಿಜ್ಞಾನಿಗಳ ಹೆಸರನ್ನು ಹೇಳಬಹುದು. ಬೃಹತ್ಕಾಯಗಳ ಕುರಿತಂತೆ ಅಧ್ಯಯನ ಮಾಡಿದ ನ್ಯೂಟನ್, ಸೂಕ್ಷ್ಮಕಾಯಗಳ ಕುರಿತಂತೆ ಚರ್ಚಿಸಿದ ಮ್ಯಾಕ್ಸ್ ಪ್ಲಾಂಕ್, ಸಸ್ಯಗಳಲ್ಲಿರುವ ಜೈವಿಕ ಲಕ್ಷಣಗಳನ್ನು ಗುರುತಿಸಲು ಪ್ರಯತ್ನಿಸಿದ ಜಗದೀಶ ಚಂದ್ರಬೋಸ್ ಹೀಗೆ ಇನ್ನೂ ಅನೇಕರು. ಮೂಲವಿಜ್ಞಾನಕ್ಕೆ ಮೂಲಪುರುಷರಿರುವುದಿಲ್ಲ. ಅದರೊಳಗಿನ ಶಾಖೆಗಳಿಗೆ ಹೆತ್ತವರಿರುತ್ತಾರೆ. ಹಿಂದೂಧರ್ಮ ಮೂಲವಿಜ್ಞಾನದಂತೆ. ಎಲ್ಲರ ಕೊನೆಯ ಗುರಿ ಏನಾಗಿರಬೇಕೋ ಅದನ್ನು ಸೂಚಿಸುವುದು ಈ ಧರ್ಮ. ಹೀಗಾಗಿಯೇ ಇದಕ್ಕೆ ಮೂಲಪುರುಷರು ಇಲ್ಲ. ಇದು ಹೆಮ್ಮೆಯ ಸಂಗತಿಯೇ. ನಾಚಿ ತಲೆತಗ್ಗಿಸಬೇಕಾದ್ದಲ್ಲ.

ರಿಲಿಜನ್ ಎನ್ನುವುದು ಪದಶಃ ಅರ್ಥವೇ ಹೇಳುವಂತೆ ಕಾಣದ ಶಕ್ತಿಯೊಂದರ ಮೇಲೆ ನಂಬಿಕೆ ಮತ್ತು ಅದರ ಪೂಜೆ. ಧರ್ಮ ಹಾಗಲ್ಲ. ಇದರ ಮೂಲಭೂತ ಅರ್ಥವೇ ಯಾವುದು ನಮ್ಮನ್ನು ಧರಿಸಿದೆಯೋ ಅದು ಧರ್ಮ. ಧರ್ಮ ಬಲು ವಿಸ್ತಾರವಾದ ಅರ್ಥವುಳ್ಳದ್ದು. ರಿಲಿಜನ್ ಇಲ್ಲದೇ ನಾವೆಲ್ಲ ಬದುಕಿಯೇಬಿಡಬಹುದು. ಆದರೆ ಧರ್ಮವಿಲ್ಲದೇ ಬದುಕಲಾರೆವು. 

ರಿಲಿಜನ್ ಎನ್ನುವುದು ನಂಬಿಕೆಯ ಪ್ರಶ್ನೆಯಾದರೆ ಧರ್ಮ ಅನುಭವದ ಆಧಾರದ ಮೇಲೆ ನಿಂತಿರುವಂಥದ್ದು. ಹಿಂದೂಧರ್ಮ ಹುಡುಕಾಟದ ಆಧಾರದ ಮೇಲೆ ನಿಂತಿದೆ. ದೇವರೆಂಬುವವನು ಇರುವನಾದರೆ ಅವನು ಪಕ್ಷಪಾತಿಯಾಗಿರಲು ಸಾಧ್ಯವಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡುವ ಸಮದರ್ಶಿಯಾಗಿರಬೇಕು. ಹಾಗಿದ್ದಮೇಲೆ ಆತ ಕಾಣದೇ ಬಚ್ಚಿಟ್ಟುಕೊಳ್ಳುವಂತೆಯೂ ಇಲ್ಲ. ಹಿಂದಿನವರು ಅವನನ್ನು ಕಂಡಿರುವುದು ನಿಜವಾದರೆ ಇಂದಿನವರು ಕಾಣಲು ಸಾಧ್ಯವಾಗಲೇಬೇಕು, ಮುಂದಿನವರೂ ಅವನನ್ನು ಗುರುತಿಸಿಕೊಳ್ಳಲು ಸಾಧ್ಯವಾಗಬೇಕು. ಇದು ನಮ್ಮೆಲ್ಲರ ಮೂಲ ಚಿಂತನೆ. ರಿಲಿಜನ್ ಹಾಗಲ್ಲ. ಅಲ್ಲಿ ಒಬ್ಬ ಹೇಳಿದ್ದನ್ನು ಉಳಿದವರು ಶ್ರದ್ಧೆಯಿಂದ ಸ್ವೀಕಾರ ಮಾಡಿ ಒಪ್ಪಿಕೊಳ್ಳಬೇಕು ಅಷ್ಟೇ. ತನ್ನನ್ನು ದೇವರ ಮಗನೆಂದು ಕರೆದುಕೊಂಡವನೊಬ್ಬ ಉಪ್ಪು ಸಿಹಿಯಾಗಿರುತ್ತದೆ ಎಂದರೆ ಆತನ ಅನುಯಾಯಿಗಳೆಲ್ಲ ಉಪ್ಪನ್ನು ಸಿಹಿ ಎಂದೇ ಹೇಳಬೇಕು. ಪಶ್ಚಿಮದ ರಿಲಿಜನ್‌ಗಳ ಮಿತಿಯೇ ಇದು. ಕೋಪರ್ನಿಕಸ್ ಮತ್ತು ಗೆಲಿಲಿಯೋ ಸೂರ್ಯನನ್ನು ಭೂಮಿ ಸುತ್ತು ಹಾಕುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಉದ್ಘೋಷಿಸಲಾಗದೇ ಹೆಣಗಾಡಿದ್ದು ರಿಲಿಜನ್‌ಗಳ ಈ ಮಿತಿಯಿಂದಾಗಿಯೇ. ಈ ಮಿತಿ ಅವರಿಗೆ ಅದೆಷ್ಟಿದೆ ಎಂದರೆ ಸಾಮಾನ್ಯರು ಕೇಳಬಹುದಾದ ಅನೇಕ ಪ್ರಶ್ನೆಗಳಿಗೆ ಅವರು ಉತ್ತರಿಸುವುದು ಕಷ್ಟವಷ್ಟೇ ಅಲ್ಲ, ಅಸಾಧ್ಯವೂ ಕೂಡ. ಪ್ರವಾದಿಯೊಬ್ಬ ತನ್ನನ್ನು ದೇವರ ಮಗ ಎಂದು ಕರೆದುಕೊಂಡರೆ ಒಪ್ಪಬಹುದು ನಿಜ. ಆದರೆ ದೇವರಿಗೆ ಆತನೊಬ್ಬನೇ ಏಕೆ ಮಗ? ಉಳಿದವರೆಲ್ಲಾ ಏಕೆ ಅಲ್ಲ? ಎಂಬ ಪ್ರಶ್ನೆಗೆ ಉತ್ತರವಿದೆಯೇನು?! ಹೋಗಲಿ, ನಮ್ಮೆಲ್ಲರನ್ನೂ ಆತ ಮಕ್ಕಳೆಂದೇ ಭಾವಿಸುವುದಾದರೆ ಆತನಿಗೆ ಹೇಳಿದ ಸತ್ಯಗಳನ್ನು ನಮ್ಮೊಂದಿಗೇಕೆ ಹಂಚಿಕೊಳ್ಳಲಾರ? ಹಾಗೆಯೇ, ಆತ ಎಲ್ಲರೊಂದಿಗೂ ಈ ಸತ್ಯವನ್ನು ಹಂಚಿಕೊಳ್ಳುತ್ತಾನೆಂದರೆ ಮತ್ತೊಬ್ಬ ಪ್ರವಾದಿ ನಾನೇ ಕೊನೆಯವನು ಎಂದದ್ದಾದರೂ ಏಕೆ? ಹೋಗಲಿ, ದೇವರ ಕುರಿತಾದ ಪುಸ್ತಕ ಒಂದೇ ಇರುವುದು ಹೇಗೆ ಸಾಧ್ಯ? ತನ್ನ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲವಾಗಿ ದೇವರೂ ಖಾಲಿಯಾಗಿಬಿಟ್ಟನೇ? ಈ ಪ್ರಶ್ನೆಯನ್ನು ನಾವ್ಯಾರೂ ಕೇಳುವಂತೆಯೇ ಇಲ್ಲ. ಏಕೆಂದರೆ ಇದು ನಂಬಿಕೆಯ ಪ್ರಶ್ನೆ. ಆದರೆ ವಿಜ್ಞಾನ ಹೀಗೆ ಕುರುಡು ನಂಬಿಕೆಯ ಮೇಲೆ ನಡೆಯುವಂಥದ್ದಲ್ಲ. ಪ್ರಶ್ನೆಗಳಿಲ್ಲದೇ ಯಾವುದನ್ನೂ ಒಪ್ಪಿಕೊಳ್ಳಲು ವಿಜ್ಞಾನ ಸಮ್ಮತಿಸುವುದಿಲ್ಲ. ಹೀಗಾಗಿಯೇ ವಿಜ್ಞಾನದ ಮೂಸೆಯಲ್ಲಿ ಚೆನ್ನಾಗಿ ಪರೀಕ್ಷಿಸಬಹುದಾದದ್ದು ಧರ್ಮ ಮಾತ್ರ, ರಿಲಿಜನ್ ಅಲ್ಲ. ಹೀಗಾಗಿಯೇ ಹಿಂದೂಧರ್ಮದ ಕುರಿತು ನೀವು ಪ್ರಶ್ನೆಗಳನ್ನು ಕೇಳಬಹುದು. ರಿಲಿಜನ್ ಕುರಿತು ಕೇಳಿದರೆ ‘ಸರ್ ತನ್ ಸೆ ಜುದಾ’ ಅಷ್ಟೇ!

ನಂಬಿಕೆಗೆ ಕೆಲವೊಂದು ದೌರ್ಬಲ್ಯಗಳಿವೆ. ಅದನ್ನು ಕಾಪಾಡಿಕೊಳ್ಳಲು ನಂಬುವವರ ಸಂಖ್ಯೆ ದೊಡ್ಡದ್ದಾಗಿರಬೇಕು ಮತ್ತು ಆ ನಂಬಿಕೆಯನ್ನು ವಿರೋಧಿಸುವವರನ್ನು ಕೊಲ್ಲುವ ಕ್ರೌರ್ಯ ಅವರಲ್ಲಿರಬೇಕು. ಇಲ್ಲವಾದರೆ ಕಾಲ ಕಳೆದಂತೆ ಹೊಸ ಪೀಳಿಗೆಯ ಜನ ಹೊಸ ವೈಜ್ಞಾನಿಕ ಅನ್ವೇಷಣೆಗಳೊಂದಿಗೆ ಈ ಹಳೆಯ ಚಿಂತನೆಗಳನ್ನು ಪ್ರಶ್ನಿಸಲಾರಂಭಿಸುತ್ತಾರೆ. ಸಹಜವಾಗಿಯೇ ಉತ್ತರ ಸಿಗದೇ ಹೋದಾಗ ಅದನ್ನು ಧಿಕ್ಕರಿಸುತ್ತಾರೆ ಕೂಡ. ಸಂಖ್ಯೆ ದೊಡ್ಡದ್ದಾಗಿದ್ದರೆ, ಭಯೋತ್ಪಾದನೆ ನಡೆಸುವ ಸಾಮರ್ಥ್ಯವಿದ್ದರೆ ಇಂತಹ ಪೃಚ್ಛಕರನ್ನು ಬೆದರಿಸಿಯೇ ಕೂರಿಸಬಹುದು. ಅನೇಕ ರಿಲಿಜನ್‌ಗಳು ಈ ಕಾರಣಕ್ಕಾಗಿಯೇ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ, ಅದನ್ನು ಕಾಯ್ದುಕೊಳ್ಳಲು ಬೆದರಿಸುವ ಧಾವಂತಕ್ಕೆ ಬಿದ್ದಿರೋದು. ಹಿಂದೂಧರ್ಮ ಇದಕ್ಕೆ ತದ್ವಿರುದ್ಧ. ಸುಳ್ಳು ಸತ್ಯವೆನಿಸಿಕೊಳ್ಳಲು ಅದರ ಹಿಂದೆ ನೂರಾರು ಮಂದಿ ಬೇಕು. ಆದರೆ ಸತ್ಯ ಒಂಟಿಯಾಗಿಯೂ ಸತ್ಯವೇ. ಹಿಂದೂಧರ್ಮ ಇಂತಹ ಸತ್ಯದ ಹುಡುಕಾಟದಲ್ಲಿ ನಿರತವಾಗಿರುವಂಥದ್ದು. ಈ ಸತ್ಯವನ್ನು ದರ್ಶಿಸಿದ ದೃಷ್ಟಾರ ಋಷಿಯಾಗುತ್ತಾನಲ್ಲದೇ, ತಾನು ಸಾಗಿದ ಹಾದಿಯಲ್ಲಿಯೇ ಇತರರೂ ಸಾಗಿ ಈ ಅನುಭವಗಳನ್ನು ತಮ್ಮದಾಗಿಸಿಕೊಳ್ಳಬಹುದೆಂದು ಘಂಟಾಘೋಷವಾಗಿ ಸಾರುತ್ತಾನೆ. ಹಾಗಂತ ಇಲ್ಲೆಲ್ಲಾ ನಂಬಿಕೆಗೆ ಅವಕಾಶವೇ ಇಲ್ಲವೆಂದಲ್ಲ. ಎಲ್ಲ ಶ್ರೇಷ್ಠ ಕಾರ್ಯಗಳೂ ಆರಂಭವಾಗುವುದು ಈ ಶ್ರದ್ಧೆಯಿಂದಲೇ. ಆದರೆ ಶ್ರದ್ಧೆಯೊಂದೇ ಗುರಿಮುಟ್ಟಲು ಸಾಲದು. ನಿರಂತರವಾದ ಸಾಧನೆಯೂ ಬೇಕು. ನಾನು ಬೆಟ್ಟ ಹತ್ತಬಲ್ಲೆ ಎಂಬ ವಿಶ್ವಾಸ ಬೇಕು ನಿಜ. ಆದರೆ ಆನಂತರ ಹತ್ತುವ ಕೆಲಸವಾಗಬೇಕಲ್ಲ. ಹಿಂದೂಧರ್ಮ ಇವೆರಡನ್ನೂ ಸೂಕ್ತವಾಗಿ ಜೋಡಿಸಿಕೊಡುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿ ವ್ಯಕ್ತಿ ತನ್ನ ತಾನರಿಯುವ ಪ್ರಯತ್ನಕ್ಕೆ ಹೆಚ್ಚು ಮೌಲ್ಯ. ಆತ ದೊಂಬಿ ಕಟ್ಟಿಕೊಂಡು ಮೋಕ್ಷದ ಹಾದಿಯಲ್ಲಿ ನಡೆಯುವುದಿಲ್ಲ. ತಾನೊಬ್ಬನೇ ತನ್ನಂತರಂಗವನ್ನು ಪರೀಕ್ಷಿಸುತ್ತಾ ಭಗವತ್ಸಾಕ್ಷಾತ್ಕಾರಕ್ಕೆ ಸಿದ್ಧನಾಗುತ್ತಾನೆ. ಬಹುಶಃ ಈಗ ಎಲ್ಲ ವಿಚಾರಗಳೂ ಸ್ಪಷ್ಟವಾಗಿರಬೇಕು. ಹಿಂದೂಧರ್ಮದಲ್ಲಿ ಮತಾಂತರ ಮಾಡುವ ಉದ್ದೇಶ ನಮಗಿಲ್ಲ ಏಕೆಂದರೆ ಸತ್ಯವನ್ನು ಸಮರ್ಥಿಸಿಕೊಳ್ಳಲು ದೊಂಬಿ ಬೇಕಿಲ್ಲ. ಹಿಂದೂಧರ್ಮ ವಾರದಲ್ಲಿ ಒಂದೇ ದಿನ, ಒಂದೆಡೆ ಕಡ್ಡಾಯವಾಗಿ ಪ್ರಾರ್ಥನೆ ನಡೆಸಬೇಕೆಂದು ತಾಕೀತು ಮಾಡುವುದಿಲ್ಲ ಏಕೆಂದರೆ ಹಿಂದೂಧರ್ಮದ ಗುರಿ ಆತ್ಮನಿರೀಕ್ಷಣೆಯ ಮೂಲಕ ಪರಮಾತ್ಮನ ತಲುಪುವುದು ಮಾತ್ರ. ಹೀಗಾಗಿ ಎಲ್ಲ ರಿಲಿಜನ್‌ಗಳಿಗಿಂತಲೂ ಭಿನ್ನವಾದ್ದು ಹಿಂದೂಧರ್ಮ. 

ಪ್ರಶ್ನೆ ಕೇಳುವವರು ಕೇಳುತ್ತಾರೆ, ಚರ್ಚೆಗೆ ಬರದೇ ಪಲಾಯನ ಮಾಡುತ್ತಾರೆ. ಹಿಂದೂಧರ್ಮದವನು ಮಾತ್ರ ಹೆಮ್ಮೆಯಿಂದ ನಿಲ್ಲುತ್ತಾನೆ, ಏಕೆಂದರೆ ಸತ್ಯಕ್ಕೆ ಭೀತಿಯಿಲ್ಲ!

ಆಂತರಿಕ ದಂಗೆಯ ಹೊಸ್ತಿಲಲ್ಲಿ ಕಾಶ್ಮೀರದ ಕನಸು!

ಆಂತರಿಕ ದಂಗೆಯ ಹೊಸ್ತಿಲಲ್ಲಿ ಕಾಶ್ಮೀರದ ಕನಸು!

‘ಅನೇಕ ಶಕಸ್ಥಾನ, ಹೂಣಸ್ಥಾನಗಳನ್ನು ನುಂಗಿರುವ ಹಿಂದೂಸ್ಥಾನಕ್ಕೆ ಪಾಕಿಸ್ತಾನ ಯಾವ ಲೆಕ್ಕ? ಕೆಲವು ಕಾಲ ಅಸಹ್ಯಕರ ಬದುಕು ನಡೆಸಿ ಕೊನೆಗೊಮ್ಮೆ ಅದು ಹಿಂದೂಸ್ಥಾನದೊಂದಿಗೆ ವಿಲೀನಗೊಳ್ಳುತ್ತದೆ’ ಎಂದಿದ್ದರು ಸಾವರ್ಕರ್. ಅವರು 50 ವರ್ಷಗಳ ಕಾಲಮಿತಿಯನ್ನು ವಿಧಿಸಿದ್ದರು. ಹೆಚ್ಚೇನೂ ಆಗಿಲ್ಲ. 75 ವರ್ಷವಾಗಿದೆ ಅಷ್ಟೇ. ಭಾರತ ನಾಶವಾಗುವುದೇ? ಎಂಬ ಪ್ರಶ್ನೆಯನ್ನು ಕೇಳಿಕೊಂಡು ಸ್ವಾಮಿ ವಿವೇಕಾನಂದರು, ‘ಅದು ಸಾಧ್ಯವೇ ಇಲ್ಲ. ಹಾಗಾದಲ್ಲಿ ಜಗತ್ತೇ ನಾಶವಾಗುವುದು’ ಎಂದಿದ್ದರು. ಅದರರ್ಥ ಎಲ್ಲಿಯವರೆಗೆ ಭಾರತದೊಂದಿಗೆ ಸಾರ್ಥಕ ಸಂಬಂಧವಿದೆಯೋ ಅಲ್ಲಿಯವರೆಗೆ ಆಯಾ ರಾಷ್ಟ್ರಗಳು ಶ್ರೇಷ್ಠ ಬದುಕನ್ನೇ ನಡೆಸುತ್ತವೆ. ಭಾರತದಿಂದ ದೂರವಾದರೆ ಆ ರಾಷ್ಟ್ರಗಳು ತಮ್ಮನ್ನೇ ತಾವು ಕಳೆದುಕೊಂಡುಬಿಡುತ್ತವೆ. ವಿವೇಕಾನಂದರ ಭಾವ ಅದೇ ಆಗಿರಲು ಸಾಕು. ಏಕೆಂದರೆ ಭಾರತದ್ದೇ ಅಂಗವಾಗಿದ್ದ ಗಾಂಧಾರ ದೂರವಾಗಿ ಅಫ್ಘಾನಿಸ್ತಾನವಾದ ಮೇಲೆ ಇಂದಿನ ಅದರ ಪರಿಸ್ಥಿತಿ ನೋಡಿ! 1947ರವರೆಗೂ ನಮ್ಮದ್ದೇ ಭಾಗವಾಗಿದ್ದ ಪಾಕಿಸ್ತಾನ, ಬಾಂಗ್ಲಾಗಳು ಇಂದು ಹೇಗಾಗಿವೆ ನೊಡಿ. ಶ್ರೀಲಂಕಾ ಸ್ವಲ್ಪ ಚೀನಾದತ್ತ ವಾಲಿತಷ್ಟೇ, ದಿವಾಳಿಯೇ ಆಗಿ ಬೀದಿಗೆ ಬಂದಿತು. ನೇಪಾಳ ಅದೇ ಸರತಿಯಲ್ಲಿದೆ. ಹೀಗೆಲ್ಲ ಏಕೆಂದರೆ ಭಾರತವೆಂಬುದು ಬರಿಯ ರಾಷ್ಟ್ರವಲ್ಲ. ಅದೊಂದು ಆದರ್ಶಗಳ ಮುದ್ದೆ. ಸತ್ಯವನ್ನು ಅರಸುವ, ಬೆಳಕಿನತ್ತಲೇ ಮುಖಮಾಡಿ ನಿಲ್ಲುವ ಆದರ್ಶವನ್ನು ಪ್ರತಿಯೊಬ್ಬರಿಗೂ ಹಂಚುತ್ತಾ ಸಾಗಿರುವ ನಾಡು. ಆಕ್ರಮಣಕ್ಕೊಳಗಾಗಿ ಎಷ್ಟೋ ರಾಷ್ಟ್ರಗಳು ತಮ್ಮ ಮೂಲ ನೆಲೆಯನ್ನೇ ಕಳಕೊಂಡವು. ಭಾರತ ಇಂದಿಗೂ ಬಲವಾಗಿ ಉಳಿದಿದೆ. ಅದಕ್ಕೆ ಕಾರಣ ಇದನ್ನು ರಕ್ಷಿಸುವ ಮನಸ್ಥಿತಿಯುಳ್ಳ ಜನರಷ್ಟೇ ಅಲ್ಲದೇ, ಭಾರತದ ಅಂತಃಶಕ್ತಿಯ ಪ್ರವಾಹವೂ ಕೂಡ ಹೌದು. 

ಇಷ್ಟೆಲ್ಲ ಪೀಠಿಕೆ ಏಕೆಂದರೆ ಪಾಕಿಸ್ತಾನದ ಇಂದಿನ ಸ್ಥಿತಿ ಬಲು ಗಂಭೀರವಾಗಿದೆ. ತನ್ನ ಪ್ರತಿಯೊಂದು ದುಃಖದ ಪರಿಸ್ಥಿತಿಗಳಿಗೂ ಭಾರತವನ್ನೇ ಹೊಣೆಯಾಗಿಸುವ ಪಾಕಿಸ್ತಾನ ಈಗಲೂ ಕೂಡ ಪಾಕಿಸ್ತಾನವನ್ನು ತುಂಡರಿಸುವ ಯೋಜನೆಯನ್ನು ಭಾರತ ರೂಪಿಸುತ್ತಿದೆ ಎಂದೇ ಅರಚುತ್ತಿದೆ. ಇಷ್ಟಕ್ಕೂ ಇಮ್ರಾನ್ ಖಾನನ ಮೇಲೆ ಮೊನ್ನೆ ನಡೆದ ದಾಳಿ ಅಚಾನಕ್ಕು ನಡೆದದ್ದೇನೂ ಅಲ್ಲ. ಕಳೆದ ನಾಲ್ಕಾರು ವರ್ಷಗಳಿಂದಲೂ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅದು ಆಂತರಿಕವಾಗಿ ಕುಸಿಯುವ ಎಲ್ಲ ಲಕ್ಷಣಗಳನ್ನೂ ತೋರಿದ್ದವು. ನಿಮಗೆ ನೆನಪಿರಬೇಕು. ಪ್ರಧಾನಮಂತ್ರಿ ನವಾಜ್ ಶರೀಫರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿ ಇಮ್ರಾನ್‌ಖಾನ್ ಬೀದಿ ಬೀದಿಯಲ್ಲಿ ಜನರನ್ನು ಒಗ್ಗೂಡಿಸಿದನಲ್ಲ, ಅವನ ಹಿಂದೆ ನಿಂತು, ಅವನಿಗೆ ಬೇಕಾದ ಎಲ್ಲ ಸೌಕರ್ಯಗಳನ್ನೂ ಒದಗಿಸಿಕೊಟ್ಟಿದ್ದು ಸ್ವತಃ ಪಾಕಿಸ್ತಾನೀ ಸೇನೆಯೇ. ಆಗಿನ ಸೇನಾ ಮುಖ್ಯಸ್ಥ ಕಮರ್ ಬಾಜ್ವಾ ಮತ್ತು ಐಎಸ್ಐನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಇಬ್ಬರೂ ಶತಾಯ-ಗತಾಯ ಇಮ್ರಾನ್‌ಖಾನ್‌ನನ್ನು ಗೆಲ್ಲಿಸಬೇಕೆಂದು ಪಣಕ್ಕೆ ಬಿದ್ದಿದ್ದರು. ಇಷ್ಟಕ್ಕೂ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವೆಂಬುದು ಹಾಸ್ಯಾಸ್ಪದವಷ್ಟೇ. ಸೇನೆ ಏನನ್ನು ನಿರ್ಣಯಿಸುತ್ತದೆಯೋ ಅಲ್ಲಿ ನಡೆಯೋದು ಅದೇ. ಅವರು ಬೇಕೆಂದಾಗ ಪ್ರಧಾನಮಂತ್ರಿಯನ್ನು ಕೂರಿಸುತ್ತಾರೆ, ಬೇಡವೆಂದಾಗ ಎಬ್ಬಿಸಿ ಮನೆಗೆ ದಬ್ಬುತ್ತಾರೆ. ಈ ನಡುವೆ ಚುನಾವಣೆಗಳ ತೊಗಲು ಬೊಂಬೆಯಾಟ ಬೇರೆ. ಇಮ್ರಾನ್ ಖಾನನು ಸೂತ್ರದ ಬೊಂಬೆಯಾಗಿಯೇ ಅಧಿಕಾರದ ಚುಕ್ಕಾಣಿ ಹಿಡಿದವ. ಗೆದ್ದು ಬಂದ ಆರಂಭದ ದಿನಗಳಲ್ಲಿಯೇ ಸೇನೆಯೊಂದಿಗೆ ಸೇರಿಯೇ ತಾನು ಪಾಕಿಸ್ತಾನದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸುತ್ತೇನೆ ಎಂದಿದ್ದ. ಆದರೆ ಆನಂತರದ ದಿನಗಳಲ್ಲಿ ಅವನ ಆಲೋಚನೆಗಳಿಗೂ ಸೇನೆಯ ಕಲ್ಪನೆಗಳಿಗೂ ಹೊಂದಾಣಿಕೆಯಾಗಲಿಲ್ಲ. ಸೇನೆ ಅವನಿಂದ ಕೈತೊಳಕೊಂಡರೆ ಸಾಕೆಂದು ಯೋಚಿಸಲಾರಂಭಿಸಿತ್ತು. ಇಷ್ಟೆಲ್ಲಾ ಕಿರಿಕಿರಿ ಇರುವಾಗ ಸೇನೆಯೇ ಅಧಿಕಾರ ಏಕೆ ನಡೆಸಬಾರದು? ಎಂಬ ಪ್ರಶ್ನೆ ಸಹಜವೇ. ಸೇನಾ ಮುಖ್ಯಸ್ಥರು ರಾಷ್ಟ್ರ ನಡೆಸಲು ಕುಳಿತರೆ ಜಾಗತಿಕ ಸಹಕಾರ ದೊರೆಯದು ಎಂಬ ಆತಂಕವೇ ಸೇನೆಯನ್ನು ಹಿಂಬಾಗಿಲಿನಿಂದ ಅಧಿಕಾರ ನಡೆಸುವಂತೆ ಮಾಡಿಬಿಡುತ್ತದೆ. ಮುಂದೆ ಕಾಣಿಸುವ ಪ್ರಧಾನಮಂತ್ರಿ ಸೇನೆ ಹೇಳಿದಂತೆ ಕುಣಿಯುವ ನರ್ತಕಿಯಷ್ಟೇ. ಇದು ಇಡಿಯ ಜಗತ್ತಿಗೇ ಗೊತ್ತಿದೆ. ಇಮ್ರಾನ್ ಜನರಿಗೆ ಧಾವಂತದಲ್ಲಿ ಅತಿಹೆಚ್ಚಿನ ಭರವಸೆ ಕೊಟ್ಟುಬಿಟ್ಟಿದ್ದ, ಥೇಟು ಕೇಜ್ರಿವಾಲನಂತೆ. ದೆಹಲಿಯಲ್ಲಿ ಉಚಿತ ನೀರು, ವಿದ್ಯುತ್ ಕೊಡುವುದು ಸುಲಭ. ಏಕೆಂದರೆ ಅಲ್ಲಿ ಆತನಿಗೆ ಮಾಡಲು ಇರುವ ಕೆಲಸಗಳೇ ಕಡಿಮೆ. ಆದರೆ ಪಂಜಾಬ್ ನಲ್ಲಿ ಭರವಸೆ ಕೊಟ್ಟು ಆತನ ನೀರಿಳಿಯುತ್ತಿದೆ. ಪ್ರಶ್ನೆ ಮಾಡುವ ಮಂದಿ ಈಗ ಹೆಚ್ಚುತ್ತಿದ್ದಾರೆ. ಇಮ್ರಾನನ ಕಥೆಯೂ ಅಂಥದ್ದೇ. ಧಾವಂತಕ್ಕೆ ಬಿದ್ದು ತೈಲ ಬೆಲೆಯನ್ನು ಕಡಿತಗೊಳಿಸಿದ. ಜನಕ್ಕೆ ಆರಂಭಿಕ ಆನಂದವೇನೋ ನಿಜ, ಆದರೆ ಆ ಹೊರೆಯನ್ನು ಬೊಕ್ಕಸ ತಡೆದುಕೊಳ್ಳಲಿಲ್ಲ. ಬೊಕ್ಕಸ ತುಂಬಿಸಲು ಭಿಕ್ಷಾ ಪಾತ್ರೆ ಹಿಡಿದು ಜಗತ್ತಿನ ಸಿರಿವಂತ ರಾಷ್ಟ್ರಗಳ ಮುಂದೆ ಅಲೆದಾಡಿದ. ವಿದೇಶದಲ್ಲಿ ಆತನನ್ನು ಅಕ್ಷರಶಃ ಭಿಕ್ಷುಕನಂತೆ ನೋಡಲಾಯ್ತು. ತಾವು ಇಂಗ್ಲೆಂಡಿನ ಮಂದಿಗೆ ಎಂದೂ ಸಮನಾಗಲು ಸಾಧ್ಯವಿಲ್ಲ. ‘ಕತ್ತೆಯ ಮೇಲಷ್ಟು ಗೆರೆಗಳನ್ನು ಬರೆದರೆ ಅದು ಜೀಬ್ರಾ ಆಗುವುದೇನು?’ ಎಂದು ತನ್ನ ಯೋಗ್ಯತೆಯನ್ನು ತಾನೇ ಜಗಜ್ಜಾಹೀರುಗೊಳಿಸಿಕೊಂಡ. ಸಾಲದ ಮೊತ್ತ ಏರುತ್ತಲೇ ಇತ್ತು. ಭಾರತ ಫೈನಾನ್ಶಿಯಲ್ ಅಸಿಸ್ಟೆನ್ಸ್ ಟಾಸ್ಕ್ ಫೋರ್ಸ್‌‌ನಿಂದ ಪಾಕಿಸ್ತಾನ ಹೊರಬರದಂತೆ ಅದನ್ನು ಕಂದುಪಟ್ಟಿಯಲ್ಲಿರಿಸಲು ಬೇಕಾದ ಎಲ್ಲ ಕಸರತ್ತನ್ನು ಮಾಡುತ್ತಿದ್ದುದರಿಂದ ಏರಿನಿಂತ 15 ಬಿಲಿಯನ್ ಡಾಲರ್ಗಳಷ್ಟು ಸಾಲ ತೀರಿಸಲಾಗದೇ ಹೆಣಗಾಡಿದ. ಎಲ್ಲರ ಕಣ್ಣು ಬಾಜ್ವಾನತ್ತ ತಿರುಗಿತು. ವಿದೇಶಾಂಗ ನೀತಿಯನ್ನು ಇಮ್ರಾನ್ ಖಾನ್ ಹೇಗೆ ಚಿಂದಿಯಾಗಿಸಿದನೆಂದರೆ ಸ್ವತಃ ಅಮೇರಿಕಾ ಕಿರಿಕಿರಿ ಅನುಭವಿಸಿತು. ಸೇನಾ ಮುಖ್ಯಸ್ಥ ಬಾಜ್ವಾ ಇಮ್ರಾನ್ ನನ್ನು ಅಧಿಕಾರಕ್ಕೆ ತಂದು ತಾನೇ ಕೈ-ಕೈ ಹಿಸುಕಿಕೊಂಡ. ಸಾಲದೆಂಬಂತೆ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ನನ್ನು ಐಎಸ್ಐ ನಿರ್ದೇಶಕ ಹುದ್ದೆಯಿಂದ ತೆಗೆದು ಜನರಲ್ ನದೀಂ ಅಂಜುಂನನ್ನು ತರಬೇಕೆಂಬುದು ಬಾಜ್ವಾನ ಇಚ್ಛೆಯಾಗಿತ್ತು. ಚುನಾವಣೆಯವರೆಗೂ ಫೈಜ್ ಇದ್ದರೆ ತನಗೆ ಅನುಕೂಲವೆಂಬುದು ಗೊತ್ತಿದ್ದುದರಿಂದ ಇಮ್ರಾನ್ ಬಾಜ್ವಾನಿಗೆ ಸೊಪ್ಪು ಹಾಕಲಿಲ್ಲ. ಗಲಾಟೆ ಎಷ್ಟು ತಾರಕಕ್ಕೇರಿತೆಂದರೆ ಬಿಬಿಸಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಬಾಜ್ವಾ ಮುಖ್ಯಸ್ಥ ನಾನಾಗಿರುವುದರಿಂದ ನನ್ನ ನಿರ್ಣಯವೇ ಅಂತಿಮ ಎಂದು ಅಂಜುಂನನ್ನು ಆಯ್ಕೆ ಮಾಡಿಯೂಬಿಟ್ಟ. ಆತನ ನೇಮಕಾತಿಯ ಘೋಷಣೆ ಮಾಡಬೇಕಿದ್ದ ಇಮ್ರಾನ್ ಇಡಿಯ ಕಡತವನ್ನು ಮೂಲೆಗೆಸೆದು ಕುಳಿತುಬಿಟ್ಟ. ಆಗ ನಡೆದದ್ದು ಅವಿಶ್ವಾಸ ಗೊತ್ತುವಳಿಯ ಮಹಾ ಪ್ರಹಸನ. ಪಾಕಿಸ್ತಾನದಲ್ಲಿ ಮೂರು ಪ್ರಮುಖ ಪಕ್ಷಗಳಿವೆ. ಇಮ್ರಾನನ ತೆಹರೀಕ್-ಎ-ಇನ್ಸಾಫ್, ನವಾಜ್ ಶರೀಫರ ಮುಸ್ಲೀಂ ಲೀಗ್ ಮತ್ತು ಭುಟ್ಟೋಳ ಪೀಪಲ್ಸ್ ಪಾರ್ಟಿ. ಇಮ್ರಾನ್ ಅತಿ ಕಡಿಮೆ ಬಹುಮತದಿಂದ ಅಧಿಕಾರ ಪಡೆದಿದ್ದವ. ಈಗ ಸೇನೆಯೂ ಆತನ ವಿರುದ್ಧವಿದ್ದುದರಿಂದ ಸಹಜವಾಗಿಯೇ ಪ್ರತಿಪಕ್ಷಗಳು ಚುರುಕಾಗಿಬಿಟ್ಟವು. ಆತನ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿಯೇಬಿಟ್ಟವು. ಇಮ್ರಾನನೇನು ಕಡಿಮೆಯಲ್ಲ. ಅಮೇರಿಕಾ ತಾನು ಅಧಿಕಾರದಲ್ಲಿರುವುದನ್ನು ವಿರೋಧಿಸುತ್ತಿದೆಯಾದ್ದರಿಂದ ಈ ಅವಿಶ್ವಾಸ ಗೊತ್ತುವಳಿಯಲ್ಲಿ ವಿದೇಶಿ ಹಸ್ತಕ್ಷೇಪವಿದೆ ಎನ್ನುವುದು ಸಾಬೀತಾಗಿದೆ ಎಂದ. ಅದೇ ಆಧಾರದ ಮೇಲೆ ಸಭಾಪತಿಗಳ ಮೂಲಕ ಇಡಿಯ ಗೊತ್ತುವಳಿಯನ್ನು ಕಾನೂನು ಬಾಹಿರ ಎಂದು ಘೋಷಿಸಿಬಿಟ್ಟ. ಅದು ಕಾನೂನಿನ ಮುಂದೆ ನಿಲ್ಲಲಿಲ್ಲವೆಂದು ಗೊತ್ತಾದಾಗ ಸರ್ಕಾರವನ್ನೇ ವಿಸರ್ಜಿಸಿ ಚುನಾವಣೆಗೆ ಹೋಗುವುದೆಂದು ನಿರ್ಧರಿಸಿದ. ಸರ್ವೋಚ್ಚ ನ್ಯಾಯಾಲಯ ಆತನ ನಿರ್ಣಯವನ್ನು ಮೂಲೆಗೆ ತಳ್ಳಿ ಅವಿಶ್ವಾಸ ಗೊತ್ತುವಳಿಗೆ ಅವಕಾಶ ಮಾಡಿಕೊಟ್ಟಿತು. ಇಮ್ರಾನ್ ಸೋತು ನವಾಜ್ ಶರೀಫನ ಕಿರಿಯ ತಮ್ಮ ಶಾಬಾಸ್ ಶರೀಫ್ ಅಧಿಕಾರಕ್ಕೆ ಬಂದ. ಪಂಜಾಬಿನ ಜವಾಬ್ದಾರಿ ಹೊತ್ತಾಗಿನಿಂದಲೂ ವೇಗಕ್ಕೆ ಹೆಸರುವಾಸಿಯಾದ ಶಾಬಾಸ್ ಬಂದೊಡನೆ ಇಡಿಯ ಸರ್ಕಾರಕ್ಕೆ ಚುರುಕು ತರುವ ಪ್ರಯತ್ನ ಮಾಡಿದ. ಇಮ್ರಾನ್ ಹೇಳುತ್ತಿದ್ದ ಸುಳ್ಳುಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವೂ ಆರಂಭವಾಯ್ತು. ಆದರೆ ನಾಟಕದಲ್ಲಿ ಕೇಜ್ರಿವಾಲನ ಒಂದು ಕೈ ಮೀರಿಸುವ ಇಮ್ರಾನ್ ಜನರ ನಡುವೆ ದಿನಕ್ಕೊಂದು ಪ್ರಕರಣವನ್ನೋಯ್ದು ಗಲಾಟೆ ಮಾಡಲಾರಂಭಿಸಿದ. ಪತ್ರಕರ್ತ ಅರ್ಷದ್ ಶರೀಫ್‌ನ ಕೊಲೆ ಆತನಿಗೆ ವರದಾನವಾಗಿ ಲಭಿಸಿತು. ತನಗಾಗದವರನ್ನು ಸರ್ಕಾರ ಮತ್ತು ಸೇನೆ ಸದ್ದಿಲ್ಲದೇ ಮುಗಿಸುತ್ತಿದೆ ಎಂದು ಪುಕಾರು ಹಬ್ಬಿಸಿ ತನ್ನನ್ನೂ ಕೂಡ ಸೇನೆ ಹೀಗೆಯೇ ಮುಗಿಸಿಬಿಡುತ್ತದೆ ಎಂದು ಜನರ ಅನುಕಂಪವನ್ನು ಗಿಟ್ಟಿಸಿದ. ಇದರ ಆಧಾರದ ಮೇಲೆಯೇ ಸರ್ಕಾರವನ್ನು ಕೆಳಗಿಳಿಸಿ ತುರ್ತು ಚುನಾವಣೆಗೆ ಹೋಗುವ ಬೇಡಿಕೆಯನ್ನಿಟ್ಟುಕೊಂಡು ಲಾಹೋರಿನಿಂದ ಇಸ್ಲಾಮಾಬಾದಿನವರೆಗೆ ಹಕೀಕಿ ಆಜಾದಿ ಎಂಬ ಮಹಾ ಮೆರವಣಿಗೆಯನ್ನು ಸಂಘಟಿಸಿದ. ಮೆರವಣಿಗೆಯುದ್ದಕ್ಕೂ ಮಾಡಿದ ಭಾಷಣಗಳಲ್ಲಿ ತನ್ನ ಕೊಲೆಗೆ ಯತ್ನಿಸುತ್ತಿದ್ದಾರೆ ಎಂಬ ಸಂಗತಿಯನ್ನು ಮತ್ತೆ ಮತ್ತೆ ಹೇಳುತ್ತಾ ನಡೆದ. 

ಈ ನಡುವೆ ಸೇನೆಯ ಮುಖ್ಯಸ್ಥ ಬಾಜ್ವಾ ತನಗೆ ನಿಷ್ಠರಾಗಿದ್ದ 12 ಮೇಜರ್ ಜನರಲ್ಗಳನ್ನು ಬಡ್ತಿ ಕೊಟ್ಟು ಮುಂದಿನ ಹಂತಕ್ಕೆ ಏರಿಸಿದ. 30 ಬ್ರಿಗೇಡಿಯರ್ ಗಳನ್ನು ಮೇಜರ್ ಜನರಲ್‌ಗಳಾಗಿಸಿದ. ಹೀಗೆ ಬಡ್ತಿಯನ್ನು ಪಡೆದ ವ್ಯಕ್ತಿಯಲ್ಲಿ ಒಬ್ಬ ಮೇಜರ್ ಜನರಲ್ ಫೈಜಲ್ ನಾಜ್ರೀನ್. ಅವಕಾಶ ಸಿಕ್ಕಾಗಲೆಲ್ಲ ಇಮ್ರಾನನ ಮೇಲೆ ಬೆಂಕಿಯುಗುಳುತ್ತಿದ್ದ ಈತ ಈಗ ಪ್ರಮುಖ ಸ್ಥಾನದಲ್ಲಿದ್ದಾನಲ್ಲದೇ ಮುಂದೊಮ್ಮೆ ಚುನಾವಣೆ ನಡೆದು ಇಮ್ರಾನನೇ ಅಧಿಕಾರಕ್ಕೆ ಬಂದರೂ ಸೇನೆಯಲ್ಲಿ ಆತನ ಮಾತು ನಡೆಯದಂತೆ ಮಾಡುವ ಎಲ್ಲ ವ್ಯವಸ್ಥೆಯನ್ನೂ ಅವರು ರೂಪಿಸಿಕೊಂಡುಬಿಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಕೆಲವು ದಿನಗಳ ಹಿಂದೆಯಷ್ಟೇ ಐಎಸ್ಐನ ಮುಖ್ಯ ನಿರ್ದೇಶಕ ಅಂಜುಂ ನದೀಂ ಮತ್ತು ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಇವರಿಬ್ಬರೂ ಪತ್ರಿಕಾಗೋಷ್ಠಿ ನಡೆಸಿ ದಿನಬೆಳಗಾದರೆ ಸುಳ್ಳು ಹೇಳುವ ಇಮ್ರಾನ್ ದೇಶಕ್ಕೆ ಕಂಟಕವಾದವನು ಎಂದೆಲ್ಲ ಹೇಳಿಬಿಟ್ಟರು. ಹೀಗೆ ಐಎಸ್ಐ ಮತ್ತು ಸೇನೆಯ ಮುಖ್ಯಸ್ಥರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿದ್ದು ಪಾಕಿಸ್ತಾನದ ಇತಿಹಾಸದಲ್ಲಿ ಇರಲಾರದು. ಇವೆಲ್ಲವೂ ಒಂದು ವಿಷಯವನ್ನಂತೂ ಸಾಬೀತುಪಡಿಸುತ್ತಿದ್ದವು. ಜನರ ಮನಸ್ಸಿನಲ್ಲಿ ಇಮ್ರಾನ್ ಬಲಗೊಳ್ಳುತ್ತಿದ್ದಾನೆ ಎಂಬುದು ಮತ್ತು ಸೇನೆಯಲ್ಲಿಯೂ ಅತೃಪ್ತ ಆತ್ಮಗಳು ಇಮ್ರಾನಿನ ಪರವಾಗಿ ನಿಂತು ಶಾಂತವಾಗಿ ಬದಲಾವಣೆಗೆ ಪ್ರಯತ್ನಿಸುತ್ತಿದೆ ಎನ್ನುವುದು. 

ಇಷ್ಟೆಲ್ಲದರ ಮುಂದುವರೆದ ಭಾಗವಾಗಿ ಮೊನ್ನೆಯಷ್ಟೇ ಇಮ್ರಾನನ ಲಾಂಗ್ ಮಾರ್ಚ್ ನಡುವೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯೂ ಎಷ್ಟು ನಿಗೂಢವೆಂದರೆ ಸದ್ದು ಕೇಳುವುದು ಎರಡೇ ಗುಂಡಿನದ್ದಾದರೂ ಇಮ್ರಾನನಿಗೆ ಹೊಕ್ಕಿದ್ದು ಮಾತ್ರ ಮೂರು ಗುಂಡು ಎನ್ನಲಾಯ್ತು. ತೀರಾ ಇತ್ತೀಚೆಗೆ ತನಗೆ ಹೊಕ್ಕಿದ್ದು ನಾಲ್ಕು ಗುಂಡು ಎಂದು ಆತನೇ ಹೇಳಿಕೊಂಡಿದ್ದಾನೆ. ಲಾರಿಯ ಮೇಲೆ ನಿಂತವನಿಗೆ ನೆಲದ ಮೇಲೆ ನಿಂತವ ಗುಂಡು ಹೊಡೆದರೆ ಅದು ತಲೆಗೋ ಎದೆಗೋ ಬಡಿಯಬೇಕು. ಎಲ್ಲ ಬಿಟ್ಟು ಕಾಲಿಗೆ ಬಡಿಯುವುದೆಂದರೆ ಏನರ್ಥ? ಇನ್ನೂ ಸಾಕಷ್ಟು ವಿವರಗಳು ಹೊರಬರಬೇಕಿವೆ. ಇಮ್ರಾನ್ ಈ ಮಟ್ಟದ ನೌಟಂಕಿ ಮಾಡಿರುವ ಸಾಧ್ಯತೆ ಇದೆಯೇ? ಗೊತ್ತಿಲ್ಲ. ಆದರೆ ಒಂದಂತೂ ಹೌದು, ಭಾರತ ಬಲು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಮೇರಿಕಾ ಪಾಕಿಸ್ತಾನಕ್ಕೆ ಏಕಾಕಿ ಬೆಂಬಲ ಕೊಡುತ್ತಿರುವ ರೀತಿ ನೋಡಿದರೆ ಅದು ಚಿಗಿತುಕೊಳ್ಳಬಹುದಾಗಿದ್ದ ಎಲ್ಲ ಅವಕಾಶಗಳೂ ಈಗ ಕಮರಿದಂತೆ ಕಾಣುತ್ತಿದೆ. ಈ ಎಲ್ಲ ಘಟನೆಗೂ ಎರಡು ದಿನಗಳ ಮುನ್ನವಷ್ಟೇ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುತ್ತೇವೆ ಎಂದಿದ್ದರಲ್ಲದೇ ಅದು ನಮ್ಮ ಅವಿಭಾಜ್ಯ ಅಂಗ ಎಂದು ದೃಢವಾಗಿ ಹೇಳಿದ್ದರು. ಸೇನೆಯೂ ಪ್ರತಿಕ್ರಿಯಿಸಿ ಆದೇಶ ಸಿಕ್ಕರೆ ಅದನ್ನು ಮರಳಿ ತರುವುದು ದೊಡ್ಡ ಕೆಲಸವಲ್ಲ ಎಂದುಬಿಟ್ಟಿತು. ಅದರ ಮುಂದುವರೆದ ಭಾಗವಾಗಿ ಇಮ್ರಾನ್ ಹೇಳಿಕೆಯೊಂದನ್ನು ಕೊಟ್ಟು ಪಾಕಿಸ್ತಾನ ಸರ್ಕಾರ ಮಾಡುತ್ತಿರುವ ಅನ್ಯಾಯ 70ರ ದಶಕದಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಶೋಷಣೆಯ ಮಾದರಿಯಲ್ಲಿದೆ. ಹೀಗಾಗಿ ಏನು ಬೇಕಿದ್ದರೂ ಆಗಬಹುದು ಎಂದಿದ್ದಾನೆ. 

ಹೌದು, ಏನು ಬೇಕಿದ್ದರೂ ಆಗಬಹುದು. ಯಾವುದನ್ನೂ ಹೇಳಿ ಮಾಡದ ಮೋದಿ, ಈ ಬಾರಿ ಪಿಒಕೆಯನ್ನು ಮರಳಿ ಪಡೆಯುತ್ತೇವೆ ಎಂದು ಹೇಳಿಸಿರುವುದನ್ನು ನೋಡಿದರೆ, ಭವಿಷ್ಯದ ಗರ್ಭದಲ್ಲಿ ಮಹತ್ವವಾದುದೇನೋ ಅಡಗಿರುವುದು ನಿಚ್ಚಳವಾಗಿ ಕಾಣುತ್ತಿದೆ. ಕಾಶ್ಮೀರ ಬೇಕೆಂದು ಬಂಬಡ ಬಜಾಯಿಸುತ್ತಿದ್ದ ಪಾಕಿಸ್ತಾನ ತನ್ನನ್ನು ತಾನು ಉಳಿಸಿಕೊಂಡರೆ ಸಾಕಾಗಿದೆ!

ಭಾರತವ ಜೋಡಿಸಿದವಗೆ ಅಖಂಡ ಭಾರತದ ಕೊಡುಗೆ

ಭಾರತವ ಜೋಡಿಸಿದವಗೆ ಅಖಂಡ ಭಾರತದ ಕೊಡುಗೆ

ಇದನ್ನೇ ವಿಪರ್ಯಾಸ ಅನ್ನೋದು. ಭಾರತ್ ಜೊಡೊ ಎಂದು ಪಾದಯಾತ್ರೆ ಮಾಡಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸುವ ಪ್ರಯತ್ನ ಮಾಡಿದ ಕಾಂಗ್ರೆಸ್ಸಿಗರು ಎಂದೂ ಹೆಮ್ಮೆಯಿಂದ ಸರದಾರ್ ಪಟೇಲರನ್ನು ಸ್ಮರಿಸಿಕೊಳ್ಳಲೇ ಇಲ್ಲ. ಅತ್ತ ಪಟೇಲರು ಕಾಂಗ್ರೆಸ್ಸಿನ ನಾಯಕರಾದರೂ ಅವರು ಈಗಿನ ಭಾರತ ನಿರ್ಮಿಸಿಕೊಟ್ಟ ಸಂಭ್ರಮ ಇರೋದು ಬಿಜೆಪಿಗರಿಗೆ. ನರೇಂದ್ರಮೋದಿ ಬರುವವರೆಗೂ ಪಟೇಲರ ಸ್ಮರಣೆ ವ್ಯಾಪಕವಾಗಿ ಭಾರತದಲ್ಲಿ ನಡೆಯಲೇ ಇಲ್ಲ. ಈಗ ಕಾಂಗ್ರೆಸ್ಸಿಗರು ಭಾರತವನ್ನು ಜೋಡಿಸಲು ಪಾದಯಾತ್ರೆ ನಡೆಸಿದ್ದರೆ ಮೋದಿ ಪಟೇಲರ ಗೌರವಕ್ಕೆಂದು ಎಲ್ಲೆಡೆ ಏಕತಾ ಓಟವನ್ನೇ ನಡೆಸುವಂತೆ ಪ್ರೇರೇಪಿಸಿರುವುದು ಅವರ ಆಲೋಚನೆಗಳು ಇವರಿಗಿಂತ ಎಷ್ಟೊಂದು ಮುಂದಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಕಾಂಗ್ರೆಸ್ಸಿಗರ ದೈನೇಸಿ ಸ್ಥಿತಿ ಎಂಥದ್ದೆಂದರೆ ಅವರು ತಮ್ಮ ಪಕ್ಷದವರೇ ಆಗಿದ್ದ ಪಟೇಲರನ್ನು ಹೆಮ್ಮೆಯಿಂದ ಸಂಭ್ರಮಿಸಲೂ ಆಗದಂತಾಗಿದ್ದಾರೆ. 

ಇರಲಿ, ದೇಶವನ್ನು ಒಗ್ಗೂಡಿಸುವ ಪಟೇಲರ ಸಾಹಸ ಸಾಮಾನ್ಯವಾದ್ದಾಗಿರಲಿಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ದೇಶ ವಿಭಜನೆಯ ನೆಹರೂ-ಜಿನ್ನಾ ಆಲೋಚನೆಗೆ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಸಂದಿಗ್ಧ ಬಂದಿತ್ತು. ಆದಷ್ಟೂ ಅದನ್ನು ಮುಂದೆ ತಳ್ಳುವ ಪ್ರಯತ್ನವನ್ನು ಪಟೇಲರು ಮಾಡಿದರಾದರೂ ಕೊನೆಗೂ ಬಾಗಬೇಕಾಯ್ತು. ಉಳಿದವರೆಲ್ಲ ಸ್ವತಂತ್ರ ಭಾರತದ ಪ್ರಮುಖ ಹುದ್ದೆಯನ್ನಲಂಕರಿಸುವ ಕನಸು ಕಾಣುತ್ತಿದ್ದರೆ, ಪಟೇಲರು ಭಾರತ ಭೂಪಟವನ್ನು ನಿರ್ಮಿಸುವ ಧಾವಂತದಲ್ಲಿದ್ದರು. ಖಂಡಿತ ಹೌದು. ಭಾರತ ಬ್ರಿಟೀಷರ ಆಗಮನದ ನಂತರವೇ ರಾಷ್ಟ್ರವಾಯ್ತು ಎಂದು ಕೆಲವರು ಮೂರ್ಖರು ಹೇಳಿಕೊಳ್ಳುವುದಿದೆ. ಮೌರ್ಯರ, ಗುಪ್ತರ, ಮರಾಠರ ಕಾಲದ ಸಾಮ್ರಾಜ್ಯಗಳೆಲ್ಲ ಇಡಿಯ ಭಾರತವನ್ನು ಒಂದುಗೂಡಿಸಿತ್ತು. ಬ್ರಿಟೀಷರು ಬರದೇ ಹೋಗಿದ್ದರೆ ಮೊಘಲ್ ಶಾಹಿಯನ್ನು ಮೆಟ್ಟಿನಿಂತು ಭಾರತದ ಪುನರ್ ನಿರ್ಮಾಣ ಮಾಡಿದ ಕೀರ್ತಿ ಮರಾಠರ ತೆಕ್ಕೆಗೆ ಹೋಗಿರುತ್ತಿತ್ತು. ಪ್ರತೀ ಬಾರಿ ದೇಶ ಸಂಕಟಕ್ಕೆ ಸಿಲುಕಿದಾಗಲೆಲ್ಲ ಅದರೊಳಗಿಂದಲೇ ಶಕ್ತಿಯೊಂದು ಜಾಗೃತವಾಗಿ ಬಂದು, ಅದನ್ನು ಪುನರ್ ರೂಪಿಸುವ ಘಟನೆಗಳು ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಆದರೆ ಎಡಪಂಥೀಯರ ವಾದವೇನೆಂದರೆ ಬ್ರಿಟೀಷರ ಆಗಮನದ ಮುನ್ನ ಭಾರತ ರಾಜ್ಯಗಳಾಗಿ ಹಂಚಿಹೋಗಿದ್ದು ಸಮಗ್ರ ಭಾರತದ ಕಲ್ಪನೆ ಯಾರಿಗೂ ಇರಲಿಲ್ಲ ಅಂತ. ಅಚ್ಚರಿಯೇನು ಗೊತ್ತೇ? ಬ್ರಿಟೀಷರು ಭಾರತವನ್ನು ಬಿಡುವಾಗಲೂ ಈ ದೇಶದಲ್ಲಿ ರಾಜ-ರಜವಾಡೆಗಳಿಗೆ ಕೊರತೆಯಿರಲಿಲ್ಲ. ಹೀಗಾಗಿಯೇ ಸ್ವಾತಂತ್ರ್ಯ ಬಂದೊಡನೆ ಪಟೇಲರಿಗಿದ್ದ ಸವಾಲೇನೆಂದರೆ 565ರಷ್ಟು ರಾಜ ಮನೆತನಗಳನ್ನು ಮತ್ತು ಅವರ ಪಾಲಿನ ಸಾಮ್ರಾಜ್ಯವನ್ನು ಭಾರತದೆಡೆಗೆ ಸೆಳೆದುಕೊಳ್ಳುವುದಾಗಿತ್ತು. ಮೌಂಟ್ ಬ್ಯಾಟನ್ನಿನೊಂದಿಗೆ ನೆಹರೂಗೆ ಮತ್ತು ಪಟೇಲರಿಗಿದ್ದ ಸಂಬಂಧಗಳು ಬೇರೆ-ಬೇರೆಯೇ. ಪಟೇಲರು ಮುತ್ಸದ್ದಿಯಂತೆಯೇ ಅವನೊಂದಿಗೆ ವ್ಯವಹರಿಸುತ್ತಿದ್ದರು. ಹೀಗಾಗಿ ಸ್ಪಷ್ಟ ಮಾತುಗಳಲ್ಲಿ ಸ್ವಾತಂತ್ರ್ಯ ಎಂಬ ಹಣ್ಣಿನ ಬುಟ್ಟಿಯನ್ನು ನನಗೆ ಕೊಡುವಾಗ 565ಕ್ಕಿಂತ ಒಂದೇ ಸೇಬುಹಣ್ಣು ಕಡಿಮೆಯಿದ್ದರೂ ಸ್ವೀಕರಿಸಲಾರೆ ಎಂದುಬಿಟ್ಟಿದ್ದರು. ಹಾಗಂತ ಅವನ ಮೇಲೆ ಭಾರ ಹೊರೆಸಿ ಸುಮ್ಮನಾಗಲಿಲ್ಲ. ತಾವೇ ಭಿನ್ನ-ಭಿನ್ನ ಸ್ವರೂಪದಲ್ಲಿ ಇವರನ್ನು ಒಲಿಸಿಕೊಳ್ಳುವ ಕಾರ್ಯಕ್ಕೆ ಮುಂದೆ ನಿಂತರು. ಸಮಸ್ಯೆಗಳೇನು ಕಡಿಮೆಯಿರಲಿಲ್ಲ. ಭೋಪಾಲದ ನವಾಬ ಮೊದಲಿಗೆ ಬಂಡಾಯ ಬಾವುಟ ಬೀಸಿ ಸ್ವತಂತ್ರವಾಗಿರುತ್ತೇನೆಂದರೆ, ತಿರುವಾಂಕುರಿನ ದಿವಾನ ಒಂದು ಹೆಜ್ಜೆ ಮುಂದೆಹೋಗಿ ಪಾಕಿಸ್ತಾನದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿ ಮಾಡಲು ಅಧಿಕಾರಿಯನ್ನು ನೇಮಿಸುವ ಮಾತನಾಡಿದ. ಬಿಕಾನೇರ್, ಪಟಿಯಾಲ, ಜೈಪುರ, ಜೋಧ್‌ಪುರಗಳ ಅರಸರು ಭಾರತದೊಂದಿಗೆ ಇರಬಯಸಿದರು. ಮೌಂಟ್ ಬ್ಯಾಟನ್ ಒಳಗೊಳಗೇ ಸಂಭ್ರಮಿಸಿರಲು ಸಾಕು. ತಾವು ಬಿಟ್ಟುಹೋದಾಗ ಭಾರತ ಛಿದ್ರ ಛಿದ್ರವಾಗುವುದನ್ನು ನೋಡಿ ಆನಂದಿಸಬೇಕಿತ್ತು; ಭಾರತೀಯರಿಗೆ ಆಳುವ ಸಾಮರ್ಥ್ಯವಿಲ್ಲ, ಆಳಿಸಿಕೊಳ್ಳುವ ಯೋಗ್ಯತೆಯಷ್ಟೆ ಎಂಬುದನ್ನು ಸಾಬೀತುಪಡಿಸಬೇಕಿತ್ತು. ಸರದಾರರು ಅವನ ಆಕಾಂಕ್ಷೆಗಳಿಗೆ ತಣ್ಣೀರೆರೆಚಿಬಿಟ್ಟರು! 

ಅವರ ಶೈಲಿ ಗಾಂಧಿಯದ್ದೋ, ನೆಹರೂವಿನದ್ದೋ ಅಥವಾ ಈಗಿನ ಮನಮೋಹನ್, ಅರವಿಂದ್ ಕೇಜ್ರಿವಾಲ್‌ಗಳದ್ದೋ ಅಲ್ಲ. ಪಾಕಿಸ್ತಾನ ಏನು ಕೊಡುವೆನೆನ್ನುತ್ತದೆಯೋ ಅದಕ್ಕಿಂತ ಹೆಚ್ಚಿನದ್ದನ್ನು ಈ ರಾಜರುಗಳಿಗೆ ನೀಡುವೆನೆನ್ನುತ್ತಾ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವ ತುಷ್ಟೀಕರಣದ ನೀತಿಯಲ್ಲ. ರಾಜರುಗಳ ಆತ್ಮಗೌರವಕ್ಕೆ ಬೆಲೆಕೊಟ್ಟು, ಪ್ರೀತಿಯಿಂದ ಕೇಳುತ್ತಾ ಅಗತ್ಯಬಿದ್ದರೆ ಅವರನ್ನು ಬೆದರಿಸಿಯೂ ಬಗ್ಗಿಸುವ ಅಕ್ಷರಶಃ ಭಾರತೀಯ ವಿಚಾರಧಾರೆ, ಥೇಟು ನರೇಂದ್ರಮೋದಿಯಂತೆ. ಆಗಸ್ಟ್ 15ಕ್ಕೆ ಭಾರತ ಸ್ವತಂತ್ರಗೊಳ್ಳಬೇಕು. ಪಟೇಲರು ಮೇ ತಿಂಗಳಲ್ಲೇ ಜೋಧ್‌ಪುರದ, ನವನಗರದ, ಪಟಿಯಾಲದ, ಕಾಥಿಯಾವಾಡದ ರಾಜರುಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಅವರು ಬಂದಿದ್ದಾರೆಂದು ಗೊತ್ತಾದಾಗ ತಾವೇ ಬಾಗಿಲ ಬಳಿ ಬಂದು ಗೌರವದಿಂದ ಸ್ವಾಗತಿಸಿ, ಪ್ರೀತಿಯಿಂದ ಮಾತನಾಡಿಸುತ್ತಾ ಭಾರತದೊಂದಿಗೆ ವಿಲೀನಗೊಳಿಸುವ ಮಾತುಕತೆಯಾಡುತ್ತಿದ್ದರು. ಅವರ ಮಾತಿನ ಪ್ರಭಾವ ಹೇಗಿತ್ತೆಂದರೆ ಭಾರತದೊಂದಿಗೆ ಸೇರಿಕೊಳ್ಳುವ ಮೊದಲ ಸುದ್ದಿಯನ್ನು ಯಾರು ನೀಡಬೇಕೆಂಬ ಆತುರ. ಗ್ವಾಲಿಯರ್‌ನ ರಾಜ ಪತ್ರಕ್ಕೆ ಸಹಿ ಮಾಡಿದ ಮೊದಲ ರಾಜನೆನಿಸಿಕೊಂಡ. ಆ ವಿಚಾರವನ್ನು ಮುಂದಿಟ್ಟುಕೊಂಡು ಪಟೇಲರು ಒಂದಾದಮೇಲೊಂದರಂತೆ ಎಲ್ಲ ರಾಜರುಗಳನ್ನೂ ಸೆಳೆದುಕೊಳ್ಳಲಾರಂಭಿಸಿದರು. ‘ಇಂಡಿಯಾ ಇಂಡಿಪೆಂಡೆನ್ಸ್ ಆ್ಯಕ್ಟ್‌ನ ಪ್ರಕಾರ ಆಗಸ್ಟ್ 15ಕ್ಕೆ ಎಲ್ಲ ರಾಜ್ಯಗಳೂ ಮುಕ್ತಗೊಳ್ಳುತ್ತವೆ. ತಾಂತ್ರಿಕವಾಗಿ, ಕಾನೂನುಬದ್ಧವಾಗಿ ಅವು ಸ್ವತಂತ್ರವಾಗಿಬಿಡುತ್ತವೆ. ಬ್ರಿಟೀಷರು ಹೊರಟೊಡನೆ ಉಂಟಾಗಬಹುದಾದ ಉತ್ಪಾತ ಮೊದಲು ಬಲಿ ತೆಗೆದುಕೊಳ್ಳುವುದು ರಾಜ್ಯಗಳನ್ನೇ. ಭೌಗೋಳಿಕ ಇತಿ-ಮಿತಿಗಳನ್ನು ಗಮನದಲ್ಲಿರಿಸಿಕೊಂಡು ಅವರು ಸೂಕ್ತ ನಿರ್ಣಯ ಕೈಗೊಳ್ಳುವುದೊಳಿತು ಮತ್ತು ಆಗಸ್ಟ್ 15ರೊಳಗೆ ವಿಲೀನಗೊಂಡರೆ ಸರಿಯಾದೀತು’ ಎಂದೂ ಹೇಳಿದ್ದರು. ಈ ಮಾತುಗಳನ್ನು ಎಚ್ಚರಿಕೆ ಎನ್ನುವಿರೋ, ತಿಳಿವಳಿಕೆ ಎನ್ನುವಿರೋ ಅಥವಾ ಪುಸಲಾಯಿಸುವ ರೀತಿ ಎನ್ನುವಿರೋ, ಪಟೇಲರು ಎಲ್ಲವನ್ನೂ ಮಾಡಿದರು. ಆಗಸ್ಟ್ 15ರ ವೇಳೆಗೆ ಈ ಮನುಷ್ಯನ ಪ್ರಭಾವಕ್ಕೆ ಒಳಗಾಗಿ ಹೈದರಾಬಾದು, ಕಾಶ್ಮೀರದಂತಹ ಎರಡು ಸೇಬು ಮತ್ತು ಜುನಾಗಢದಂತಹ ಪೀಚುಕಾಯಿಯೊಂದನ್ನು ಬಿಟ್ಟರೆ ಉಳಿದೆಲ್ಲವೂ ಭಾರತದ ತೆಕ್ಕೆಯಲ್ಲೇ ಇತ್ತು. ನಿಜಕ್ಕೂ ಭಾರತ್ ಜೊಡೊ ಪಟೇಲರು ಅಂದೇ ಮಾಡಿಬಿಟ್ಟಿದ್ದರು. 

ಹಾಗಂತ ಕಾಂಗ್ರೆಸ್ಸಿಗರು ಬಡಾಯಿ ಕೊಚ್ಚಿಕೊಳ್ಳುವಂತಯೇ ಇಲ್ಲ. ರಾಹುಲನ ಮುತ್ತಜ್ಜ ನೆಹರೂಗೆ ಈ ಜವಾಬ್ದಾರಿಯನ್ನು ವಹಿಸಿದ್ದಿದ್ದರೆ ಇಂದು ಪಾಕಿಸ್ತಾನದಷ್ಟು ಪುಟ್ಟ ಭಾರತವಿರುತ್ತಿತ್ತು ಮತ್ತು ಭಾರತದಷ್ಟು ಅಗಾಧವಾದ ಪಾಕಿಸ್ತಾನವಿರುತ್ತಿತ್ತು. ಪುರಾವೆಯಿಲ್ಲದೇ ಈ ಮಾತನ್ನು ಹೇಳುತ್ತಿಲ್ಲ. 562 ರಾಜ್ಯಗಳನ್ನು ಭಾರತದೊಂದಿಗೆ ತಮ್ಮ ಮಾತುಗಳಿಂದಲೇ ವಿಲೀನಗೊಳ್ಳುವಂತೆ ಮಾಡಿದ ಸರದಾರ್ ಪಟೇಲರಿಂದ ನೆಹರೂ ಕಾಶ್ಮೀರವೊಂದನ್ನು ಕಸಿದರು. ಅದನ್ನು ವಿಲೀನಗೊಳಿಸುವ ಹೊಣೆಗಾರಿಕೆ ತನ್ನದ್ದು ಎಂದರು. ಆಗಲೂ ಏಕಾಕಿ ಪಾಕಿಸ್ತಾನದ ಕಡೆಯಿಂದ ದಾಳಿಯಾದಾಗ ರಾಜ ಹರಿಸಿಂಗನಿಂದ ವಿಲೀನಪತ್ರ ಬರದೇ ಭಾರತ ಸಹಾಯ ಮಾಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕಳಿಸಿದ್ದು ಸರದಾರ್ ಪಟೇಲರೇ. ಬಹುಸಂಖ್ಯಾತ ಹಿಂದೂಗಳಿರುವ ಜುನಾಗಢಕ್ಕೆ ಜಿನ್ನಾ ಕೈ ಹಾಕಿದ್ದಕ್ಕೆ ಪಟೇಲರ ಪ್ರತೀಕಾರದ ಕ್ರಮವಾಗಿತ್ತು ಅದು. ಪೂರ್ಣ ಸರದಾರರ ಕೈಯ್ಯಲ್ಲೇ ಇದ್ದಿದ್ದರೆ ಇಂದು ಕಾಶ್ಮೀರದ ಕಿರಿಕಿರಿಯೇ ಇರುತ್ತಿರಲಿಲ್ಲ. ಯುದ್ಧದ ನಟ್ಟನಡುವೆ ನಾವು ಗೆಲುವಿನ ಹೊಸ್ತಿಲಲ್ಲಿದ್ದಾಗಲೇ ನೆಹರೂ ಮಧ್ಯ ಪ್ರವೇಶಿಸಿದರು. ಇಡಿಯ ಪ್ರಕರಣವನ್ನು ವಿಶ್ವಸಂಸ್ಥೆಗೊಯ್ದು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡರು. ಅದು ಪಾಕಿಸ್ತಾನಕ್ಕೆ ವರದಾನವೇ ಆಯ್ತು. ಕಾಶ್ಮೀರವನ್ನು ಮುಂದಿಟ್ಟುಕೊಂಡು ಭಾರತವನ್ನು ಹಳಿಯುವ ಮತ್ತು ಕಾಶ್ಮೀರದ ಮೂಲಕ ಭಾರತದಲ್ಲಿ ನಿರಂತರವಾಗಿ ಭಯೋತ್ಪಾದನೆಯನ್ನು ರಫ್ತು ಮಾಡುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಇಂದು ಭಾರತ ಇಸ್ಲಾಂ ಮತಾಂಧತೆಗೆ ಒಳಗಾಗಿ ನರಳುತ್ತಿದೆಯಲ್ಲ, ಬಹುಪಾಲು ಕೊಡುಗೆ ನೆಹರೂರವರದ್ದೇ. ಹೀಗಾಗಿಯೇ ಭಾರತ್ ಜೊಡೊ ಸಂದರ್ಭದಲ್ಲಿ ಎಲ್ಲಿಯಾದರೂ ಕಾಂಗ್ರೆಸ್ಸಿಗರು ಈ ಕಥೆಯನ್ನು ಹೇಳಬಹುದೇ ಎಂದು ಕಾಯುತ್ತ ಕುಳಿತಿದ್ದೆ. ಕೊನೆಯ ಪಕ್ಷ ಭಾಜಪದವರಾದರೂ ಈ ಪ್ರಶ್ನೆಯನ್ನು ಎತ್ತುತ್ತಾರೇನೊ ಎಂದುಕೊಂಡರೆ ಅದೂ ಆಗಲಿಲ್ಲ. ಅಚ್ಚರಿಯೇನು ಗೊತ್ತೇ? ಪಟೇಲರೇನಾದರೂ ಹೈದರಾಬಾದಿನ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯನ್ನು ನೆಹರೂಗೆ ಕೊಟ್ಟುಬಿಟ್ಟಿದ್ದರೆ ಇಂದು ಕರ್ನಾಟಕದ ಪಕ್ಕದಲ್ಲೂ ಒಂದು ಪಾಕಿಸ್ತಾನವಿರುತ್ತಿತ್ತು! 

ಪಟೇಲರೇನೋ ಭಾರತವನ್ನು ಈ ರೂಪಕ್ಕೆ ತಂದುಕೊಟ್ಟರು. ನಾವೀಗ ಅಖಂಡ ಭಾರತವನ್ನು ನಿರ್ಮಾಣ ಮಾಡಿ ಪಟೇಲರಿಗೆ ಗೌರವ ಸಲ್ಲಿಸಬೇಕಿದೆ. ಅಖಂಡ ಭಾರತದ ಕನಸು ವ್ಯಾಪಕವಾಗಿ ಕಾಣುವುದಕ್ಕೆ ಒಂದು ಕಾರಣವೂ ಇದೆ. ನಮಗೆಲ್ಲರಿಗೂ ಕಲ್ಪನಾ ದಾರಿದ್ರ್ಯವಿದೆ. 75 ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂದಿಬಿಟ್ಟರೆ ಉಳಿದವರು ಅಖಂಡ ಭಾರತವನ್ನು ತಮ್ಮ ಕನಸೆಂದು ಪರಿಗಣಿಸಲೇ ಇಲ್ಲ. ಅದನ್ನು ಮರೆತುಹೋದ ಇತಿಹಾಸವಾಗಿಸಿಬಿಟ್ಟರು. ಪಾಕಿಸ್ತಾನ-ಬಾಂಗ್ಲಾಗಳು ಖಡ್ಗ ಹಿಡಿದು ಕತ್ತರಿಸಿದ ಭಾರತಮಾತೆಯ ಕೈಗಳು ಎಂದು ಮರೆಯುವುದಾರೂ ಹೇಗೆ? ಆ ದುಃಖಮಯ ಕ್ಷಣಗಳನ್ನು ನೋಡಿದ ಅನೇಕ ಮಂದಿ ಇಂದಿಗೂ ಜೀವಂತವಾಗಿದ್ದಾರಲ್ಲ! ಗಾಂಧಾರವೆಂದು ಕರೆಯಲ್ಪಡುತ್ತಿದ್ದ ಈಗಿನ ಅಫ್ಘಾನಿಸ್ತಾನ ನಮ್ಮಿಂದ ಬೇರೆಯಾದ್ದನ್ನು ನೋಡಿದವರು ಇಂದು ಉಳಿದಿಲ್ಲ ಒಪ್ಪಿಕೊಳ್ಳುವೆ. ಆದರೆ ಪಾಕಿಸ್ತಾನದ ಕಥೆ ಹಾಗಲ್ಲ. ನಮ್ಮ ಭೂಮಿಯನ್ನು ಮತದ ಹೆಸರಲ್ಲಿ ತುಂಡರಿಸಿ ತಮ್ಮದಾಗಿಸಿಕೊಂಡಿದ್ದನ್ನು ಒಪ್ಪಿಕೊಳ್ಳುವುದು ಹೇಗೆ? ಹೀಗಾಗಿಯೇ ಪೀಳಿಗೆಯಿಂದ ಪೀಳಿಗೆಗೆ ಖಡ್ಗ ಹಿಡಿದು ಮತಾಂತರ ಮಾಡಿ, ಅವರನ್ನು ಹಿಂದೂಗಳ ವಿರುದ್ಧವೇ ಎತ್ತಿಕಟ್ಟಿ, ತಮಗಾಗಿ ಪ್ರತ್ಯೇಕ ರಾಷ್ಟ್ರವನ್ನೇ ನಿರ್ಮಿಸಿಕೊಂಡ ಮಂದಿ ಇವರು ಎಂದು ನೆನಪಿಸುತ್ತಿರಬೇಕಲ್ಲ. ಇಲ್ಲವಾದರೆ ಅಫ್ಘಾನಿಸ್ತಾನವೂ ನಮ್ಮದಾಗಿತ್ತು ಎನ್ನುವುದನ್ನೇ ಹೇಗೆ ಮರೆತೇ ಹೋಗಿದ್ದೇವೋ ಅದೇ ರೀತಿ ಪಾಕಿಸ್ತಾನವೂ ಒಂದು ಕಾಲದಲ್ಲಿ ನಮ್ಮ ಭಾಗವಾಗಿತ್ತು ಎಂಬುದನ್ನು ಮುಂದಿನ ಪೀಳಿಗೆಗೆಳು ಮರೆತುಬಿಡುತ್ತವೆ. ಕಳೆದ 75 ವರ್ಷಗಳಿಂದ ಏರುತ್ತಿರುವ ಮುಸಲ್ಮಾನರ ಜನಸಂಖ್ಯೆ, ಹೊರಗಡೆಯಿಂದ ನಿರಾಶ್ರಿತರನ್ನು ಒಳಸೇರಿಸಿಕೊಂಡು ಜನಸಂಖ್ಯಾಂಕಿಯನ್ನು ಬದಲಿಸಲು ಅವರು ಮಾಡುತ್ತಿರುವ ಯತ್ನ, ಇವೆಲ್ಲದರ ಕುರಿತಂತೆ ಮಾತನಾಡುತ್ತಾ ನಾವು ಈಗಿರುವ ಭಾರತವನ್ನು ಉಳಿಸಿಕೊಂಡರೆ ಸಾಕು ಎಂಬ ಹೀನಸ್ಥಿತಿಗೆ ತಲುಪಿಬಿಟ್ಟಿದ್ದೇವೆ. ಅದರರ್ಥ ಪಾಕಿಸ್ತಾನವನ್ನು ಇನ್ನೆಂದಿಗೂ ಕೇಳುವುದಿಲ್ಲ ಎಂದೇ. ಎಲ್ಲಿಯವರೆಗೂ ರಕ್ಷಣಾತ್ಮಕ ನಿಲುವಿನಲ್ಲಿರುತ್ತೇವೆಯೋ ಅಲ್ಲಿಯವರೆಗೂ ನಾವು ನಮ್ಮನ್ನುಳಿಸಿಕೊಳ್ಳಲು ಹೆಣಗಾಡುತ್ತಲೇ ಇರುತ್ತೇವೆ. ಸ್ವಲ್ಪ ಆಕ್ರಮಕವಾಗಿ ಮುನ್ನುಗ್ಗಬೇಕಿದೆ. ಈ ಬಾರಿಯ ಆಕ್ರಮಣ ಭಿನ್ನ ಭಿನ್ನ ಸ್ವರೂಪಗಳಲ್ಲಿ. ಮೊದಲನೆಯದ್ದು ಮಾನಸಿಕವಾಗಿ ಸಮಾಜವನ್ನು ಈ ದಿಕ್ಕಿಗೆ ತಯಾರು ಮಾಡಬೇಕಿದೆ. ಭಾವನಾತ್ಮಕವಾಗಿ ಭಿನ್ನ ಭಿನ್ನ ಕಾರ್ಯಕ್ರಮಗಳ ಮೂಲಕ ಜೋಡಿಸಿ, ಭಾರತದ ವಿಸ್ತಾರವನ್ನು ಮತ್ತೆ ನೆನಪಿಸಬೇಕಿದೆ. ಎರಡನೆಯದ್ದು, ಬೌದ್ಧಿಕವಾಗಿ ಇದಕ್ಕೆ ಬೇಕಾಗಿರುವ ಸರಕು ನಿರ್ಮಾಣ ಮಾಡಿ ಭಾರತದ ಮರುನಿರ್ಮಾಣದ ಅಗತ್ಯವನ್ನು ಒತ್ತಿ ಹೇಳಬೇಕಿದೆ. ಮೂರನೆಯದ್ದು, ಅಳಿದುಳಿದಿರುವ ಭಾರತವನ್ನು ಉಳಿಸಿಕೊಂಡರೆ ಸಾಕು ಎಂಬ ದೈನ್ಯ ಮನೋಭಾವವನ್ನು ಕೊಡವಿಕೊಂಡು ಭಾರತದಲ್ಲಿ ಧರ್ಮವನ್ನು ಬಿಟ್ಟುಹೋಗಿರುವವರನ್ನು ಮರಳಿ ತರುವೆವಲ್ಲದೇ ಪಾಕಿಸ್ತಾನದಲ್ಲಿರುವ ಮಂದಿಯನ್ನೂ ಮೂಲಧರ್ಮಕ್ಕೆ ಕರೆದುಕೊಂಡು ಬರುತ್ತೇವೆಂಬ ಆಕ್ರಮಕ ಆಲೋಚನೆಯನ್ನು ಮಾಡಬೇಕಿದೆ. ಜಿಡಿಪಿಯ ದೃಷ್ಟಿಯಿಂದಲೂ ಸಂಪತ್ತಿನ ದೃಷ್ಟಿಯಿಂದಲೂ ಸಾಮರ್ಥ್ಯದ ದೃಷ್ಟಿಯಿಂದಲೂ ಭಾರತದ ಎದುರಿಗೆ ಅರೆಕ್ಷಣ ನಿಲ್ಲದ ತಾಕತ್ತಿಲ್ಲದ ಪಾಕಿಸ್ತಾನ ಇಡೀ ಭಾರತವನ್ನೇ ಆಪೋಷನ ತೆಗೆದುಕೊಳ್ಳುವ ಕನಸು ಕಾಣುತ್ತಿದ್ದರೆ, ಭಾರತೀಯರಾಗಿ ನಾವು ಕೈಕಟ್ಟಿ ಕುಳಿತುಕೊಳ್ಳುವುದೇನು? ಕಲಾಂರು ಹೇಳುತ್ತಾರಲ್ಲ, ಚಂದ್ರನನ್ನೇ ಗುರಿಯಾಗಿಸಿಕೊಂಡರೆ ಮನೆಯ ತಾರಸಿಗಾದರೂ ತಲುಪಬಹುದು. ತಾರಸಿಯನ್ನೇ ಗುರಿಯಾಗಿಸಿಕೊಂಡರೆ ನೆಲದಿಂದ ಮೇಲೇಳಲೂ ಸಾಧ್ಯವಾಗದು! ನಾವೀಗ ನಮ್ಮ ಗುರಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕಿದೆ. ಭಾರತ್ ಜೊಡೊ ಪಟೇಲರು ಮಾಡಿಯಾಗಿದೆ. ನಾವೀಗ ಅಖಂಡ ಭಾರತ ಜೊಡೊದ ಸಂಕಲ್ಪ ಮಾಡಬೇಕಿದೆ..

ಮೋದಿಯಿಂದಲೇ ಆಯುರ್ವೇದಕ್ಕೂ ಬೆಲೆ!

ಮೋದಿಯಿಂದಲೇ ಆಯುರ್ವೇದಕ್ಕೂ ಬೆಲೆ!


ನನಗೆ ಗೊತ್ತು. ಶೀರ್ಷಿಕೆಯನ್ನು ಕಂಡೊಡನೆ ಅನೇಕರು ಮೈ ಪರಚಿಕೊಂಡಿರುತ್ತಾರೆ. ಮೋದಿ ಬರುವುದಕ್ಕೂ ಮುನ್ನ ಆಯುರ್ವೇದಕ್ಕೆ ಬೆಲೆ ಇರಲಿಲ್ಲವೇ? ಎಲ್ಲವನ್ನೂ ಮೋದಿಯ ಪದತಲಗಳಿಗೇ ಸಮರ್ಪಿಸುವ ಭಕ್ತರ ಪ್ರಲಾಪ ಇದು ಎಂದೆಲ್ಲ ಮಾತನಾಡಿಕೊಳ್ಳುತ್ತಾರೆ. ಸರಿಯೇ. ಸದಾಕಾಲ ಮೋದಿಯನ್ನು ತೆಗಳುತ್ತಾ, ಮಾಡಿರುವ ಪ್ರತಿಯೊಂದು ಕೆಲಸದಲ್ಲೂ ತಪ್ಪುಗಳನ್ನೇ ಹುಡುಕುತ್ತಾ ಕುಳಿತುಕೊಳ್ಳುವ ಮಂದಿಯಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ! ಅವರೆಲ್ಲ, ಹೇಳಿಕೊಟ್ಟ ನಂತರವೂ ಶ್ಲೋಕ ಉಚ್ಚರಿಸಲು ಬಾರದ ತಮ್ಮ ನಾಯಕನ ಬಾಲ ಹಿಡಿದು ನಡೆಯುವುದೇ ಸರಿ. ಇರಲಿ, ಮೋದಿಗೂ ಆಯುರ್ವೇದಕ್ಕೂ ಏನು ಸಂಬಂಧ ಎಂದು ಕೇಳುವುದಾದರೆ, ಅವರು ಪ್ರಧಾನಿಯಾದ ನಂತರವೇ ಆಯುರ್ವೇದ, ಹೋಮಿಯೋಪತಿ, ಸಿದ್ಧ, ಯುನಾನಿಗಳೇ ಮೊದಲಾದ ಚಿಕಿತ್ಸಾ ಪದ್ಧತಿಗಳಿಗಾಗಿ ಒಂದು ಪ್ರತ್ಯೇಕ ಮಂತ್ರಿ ಪದವಿಯನ್ನೇ ಸೃಷ್ಟಿಸಿದರು. ನಿನ್ನೆ ಈ ದೇಶ ಏಳನೇ ಆಯುರ್ವೇದ ದಿನಾಚರಣೆಯನ್ನು ಆಚರಿಸಿತು. ಸ್ವಾತಂತ್ರ್ಯ ಬಂದು 75 ವರ್ಷಗಳಾಯ್ತು. ಸಾವಿರಾರು ವರ್ಷಗಳಿಂದ ಭಾರತ ಆಯುರ್ವೇದ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ. ಶಸ್ತ್ರಚಿಕಿತ್ಸೆಯ ಪರಿಕಲ್ಪನೆಗಳು, ವಿಧಾನಗಳು ಇಲ್ಲಿಂದ ಜಗತ್ತಿಗೆ ಒಯ್ಯಲ್ಪಟ್ಟಿವೆ. ಆದರೆ ಆಯುರ್ವೇದ ದಿನಾಚರಣೆ ಮಾತ್ರ ಏಳನೆಯದ್ದು ಅಂದರೆ ಈ ಇಡಿಯ ಪದ್ಧತಿಯನ್ನು ನಾವದೆಷ್ಟು ಕಡೆಗಣಿಸಿದ್ದೆವು ಎಂಬುದು ಮನಸ್ಸಿಗೆ ಬಂದೀತು.


ಮೋದಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ದಾಸ್ಯ ಭಾವನೆಯನ್ನು ಕಳೆದುಕೊಳ್ಳುವ ಆಲೋಚನೆಯನ್ನು ಬಲಗೊಳಿಸಿಕೊಳ್ಳುತ್ತಲೇ ಬಂದರು. ತೀರಾ ಇತ್ತೀಚೆಗೆ ರಾಜಪಥವನ್ನು ಕಿತ್ತೆಸೆದು ಕರ್ತವ್ಯಪಥವಾಗಿಸಿದರಲ್ಲ ಈ ಪ್ರಕ್ರಿಯೆಯ ಆರಂಭವಾಗಿದ್ದೇ ಆಯುರ್ವೇದವನ್ನು ಗುರುತಿಸಿ ಗೌರವಿಸುವುದರ ಮೂಲಕ. ಭಾರತೀಯ ಚಿಕಿತ್ಸಾ ಪದ್ಧತಿಗಳನ್ನು ಮೂಲೆಗುಂಪು ಮಾಡಿ ಪಶ್ಚಿಮದ ಚಿಕಿತ್ಸಾ ಮಾದರಿಯೊಂದಿಗೆ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಭಾರತದಂತಹ ರಾಷ್ಟ್ರಗಳು ದೀರ್ಘಕಾಲ ಬದುಕಲಾರವು. ಏಕೆಂದರೆ ಪಶ್ಚಿಮದ ಚಿಕಿತ್ಸಾ ಪದ್ಧತಿಗಳು ಪ್ರಕೃತಿಯಿಂದ ದೂರವಾದವು ಮತ್ತು ಸಹಜವಾಗಿ ಬದುಕುವುದರಿಂದ ವಿಮುಖ ಮಾಡುವಂಥವು. ಆದರೆ ಆಯುರ್ವೇದ ಹಾಗಲ್ಲ. ಅದು ನಮ್ಮನ್ನು ಹೆಚ್ಚು-ಹೆಚ್ಚು ಸಹಜವಾಗಿರಲು ಪ್ರಚೋದಿಸುತ್ತದೆ.


ಅರ್ಥೈಸಿಕೊಳ್ಳಲು ಕಷ್ಟವೇನೂ ಇಲ್ಲ. ಈ ಪ್ರಪಂಚ, ಪದವೇ ಹೇಳುವಂತೆ ಪಂಚಭೂತಗಳಿಂದ ನಿರ್ಮಾಣಗೊಂಡಿದ್ದು. ನಮ್ಮ ದೇಹವೂ ಅಷ್ಟೇ. ಪಂಚಭೂತಗಳೇ ಇದರ ಮೂಲ ವಸ್ತು. ವಾಯು, ಜಲ, ಅಗ್ನಿ, ಪೃಥ್ವಿ, ಆಕಾಶ ಇವುಗಳೇ ಮೂಲವಸ್ತು ಆಗಿರುವುದರಿಂದ ಇವುಗಳಲ್ಲಿ ಸ್ವಲ್ಪ ಏರುಪೇರಾದರೂ ದೇಹ ಅದಕ್ಕೆ ಪ್ರತಿಸ್ಪಂದಿಸುತ್ತದೆ. ಆರೋಗ್ಯವೆಂದರೆ ಈ ಬದಲಾವಣೆಗಳನ್ನು ಸರಿಪಡಿಸಿಕೊಳ್ಳುವುದು ಎಂದರ್ಥ. ಆಯುರ್ವೇದ ಅದನ್ನೇ ಕಲಿಸಿ, ಸಹಜವಾಗಿ ಬದುಕುವುದನ್ನು ಹೇಳಿಕೊಡುತ್ತದೆ. ಪ್ರಕೃತಿಯೊಳಗೆ ಆಗುವ ಏರುಪೇರುಗಳಿಗೂ ನಮ್ಮ ದೇಹ ಪ್ರತಿಸ್ಪಂದಿಸುವುದು ಈ ಪಂಚಭೂತಗಳ ವ್ಯವಸ್ಥೆಯಿಂದಾಗಿಯೇ. ಹೀಗಾಗಿಯೇ ಆಯುರ್ವೇದವನ್ನು ಔಷಧಿ ವಿಜ್ಞಾನ ಎಂದು ಕರೆಯದೇ ಜೀವನ ವಿಜ್ಞಾನ ಎಂದು ಹೇಳಲಾಗುತ್ತದೆ. ನಾವು ಯಾವ ಯಾವ ಋತುಗಳಲ್ಲಿ ಯಾವ ರೀತಿ ಇರಬೇಕು? ಬೆಳಗಿನ ಹೊತ್ತಿನ ವ್ಯವಹಾರ ಹೇಗಿರಬೇಕು? ಕತ್ತಲಾದ ಮೇಲೆ ಬದುಕು ಹೇಗಿರಬೇಕು? ಇವೆಲ್ಲವನ್ನೂ ಇಲ್ಲಿ ವಿಸ್ತಾರವಾಗಿ ಚರ್ಚಿಸಲಾಗುತ್ತದೆ. ಎಲ್ಲವೂ ಸಂಹಿತೆಗಳ ಕಾಲದಂತೆ ಬದುಕಲು ಸಾಧ್ಯವಾಗುವುದಿಲ್ಲ ಎಂಬುದು ನಿಜವಾದರೂ, ಈ ದಿಕ್ಕಿನಲ್ಲಿ ಎಷ್ಟು ಪ್ರಯತ್ನ ಪಡುತ್ತೇವೆಯೋ ಆರೋಗ್ಯ ಅಷ್ಟು ಚೆನ್ನಾಗಿರುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆಯುರ್ವೇದ ಆರೋಗ್ಯದ ಬಗ್ಗೆ ಹೆಚ್ಚು ಆಲೋಚಿಸುತ್ತದೆ, ಔಷಧಿಗಳ ಬಗ್ಗೆ ಕಡಿಮೆ. ಖ್ಯಾತ ಆಯುರ್ವೇದ ತಜ್ಞರಾದ ಗಿರಿಧರ್ ಕಜೆಯವರು ಇತ್ತೀಚೆಗೆ ಮಾತನಾಡುತ್ತಾ ಆಯುರ್ವೇದ ಮನೆಯಲ್ಲಿ ಬಳಸುವ ಕಾರಿದ್ದಂತೆ, ಆಲೋಪತಿ ಎಮರ್ಜೆನ್ಸಿಗೆ ಬಳಸುವ ಆ್ಯಂಬುಲೆನ್ಸ್ ಇದ್ದಂತೆ ಎಂದಿದ್ದು ಸೂಕ್ತವಾಗಿಯೇ ಇತ್ತು. ಕಾರು ಎಲ್ಲ ಸಂದರ್ಭಗಳಲ್ಲೂ ಬಳಸುತ್ತೇವೆ. ತೀವ್ರತರವಾದ ತೊಂದರೆಯಾದಾಗ ಮಾತ್ರ ಆ್ಯಂಬುಲೆನ್ಸಿನ ಬಳಕೆಯಾಗುತ್ತದೆ. ಆಯುರ್ವೇದ ಆರೋಗ್ಯವಂತನನ್ನು ಸದಾಕಾಲ ಆರೋಗ್ಯವಂತನನ್ನಾಗಿರಿಸಲು ಬೇಕಾಗಿರುವ ಮಾರ್ಗದರ್ಶನವನ್ನೇ ಹೆಚ್ಚಾಗಿ ಕೊಡುತ್ತದೆ. ರೋಗ ಬಂದ ಮೇಲೆ ಪರಿಹಾರ ಹುಡುಕುವುದು ಪಶ್ಚಿಮದ ಪಥವಾದರೆ, ರೋಗ ಬರದಂತೆ ತಡೆಯುವ ಪ್ರಕ್ರಿಯೆಯನ್ನು ಭಾರತೀಯ ಪದ್ಧತಿಯೊಂದಿಗೆ ಜೋಡಿಸಿಕೊಳ್ಳಬಹುದು.


ಪಶ್ಚಿಮದ ಪದ್ಧತಿ ದೇಹವನ್ನು ವಿವಿಧ ಅಂಗಗಳನ್ನು ಜೋಡಿಸಿ ನಿರ್ಮಾಣ ಮಾಡಿದ್ದು ಎಂದು ಭಾವಿಸಿದರೆ, ಭಾರತೀಯ ಚಿಂತನೆಗಳ ಪ್ರಕಾರ ಇಡಿಯ ದೇಹ ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡಿರುವಂಥದ್ದು. ತಲೆನೋವಿಗೆ ಕಾರಣ ತಲೆಯಲ್ಲಿರಬೇಕೆಂದಿಲ್ಲ. ಅನೇಕ ಬಾರಿ ಹೊಟ್ಟೆಯಲ್ಲೂ ಇರುತ್ತದೆ. ಕೆಲವೊಮ್ಮೆಯಂತೂ ದೇಹಕ್ಕೆ ಯಾವ ಸಮಸ್ಯೆಯೂ ಇಲ್ಲದಾಗಲೂ ತಲೆನೋವು ಬರಲು ಮನಸ್ಸಿಗಾದ ಗಾಯವೂ ಕಾರಣವಾಗಿಬಿಡುತ್ತದೆ. ಇದೆಲ್ಲಕ್ಕೂ ಪಶ್ಚಿಮದ ವಿಜ್ಞಾನ ಪರಿಹಾರ ಹುಡುಕಲಾರದು. ಅದು ಕೈ, ಕಾಲು, ತಲೆ, ಹೊಟ್ಟೆ ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹೇಳುವುದಿರಲಿ ಬದಲಿಗೆ ಆ ಸಮಸ್ಯೆಯನ್ನು ಅನೇಕ ಬಾರಿ ಬೆಟ್ಟವಾಗಿಸಿಬಿಡುತ್ತದೆ. ಭಾರತೀಯ ಚಿಂತನೆಗಳ ಪ್ರಕಾರ ಅಂಡಾಣು ಮತ್ತು ವೀರ್ಯ ಸೇರಿ ಉಂಟಾದ ಜೀವಕೊಶ ತನ್ನನ್ನೇ ತಾನು ವಿಭಜಿಸಿಕೊಳ್ಳುತ್ತಾ ವಿಭಿನ್ನ ಅಂಗಾಂಶಗಳಾಗಿ, ಅಂಗಗಳಾಗಿ ಬೆಳೆಯುತ್ತದೆ. ಬೃಹದಾಕೃತಿಯನ್ನು ತಾಳಿರುವ ಈ ದೇಹದ ಮೂಲವಸ್ತು ಒಂದು ಜೀವಕೋಶವಷ್ಟೇ. ಅದೇ ಜೀವಕೋಶದ ಭಿನ್ನ ಭಿನ್ನ ಭಾಗಗಳಾಗಿ ಇತರೆ ಜೀವಕೋಶಗಳು ಬೆಳೆದಿರುವುದರಿಂದ ಈ ದೇಹದಲ್ಲಿ ಪ್ರತಿಯೊಂದೂ ಘನಿಷ್ಠವಾದ ಸಂಬಂಧವನ್ನು ಹೊಂದಿದೆ. ಆಯುರ್ವೇದ ಅಂತಹ ಸಂಬಂಧವನ್ನು ಹಾಳುಮಾಡದೇ ಉಳಿಸಿಕೊಂಡು ಹೋಗುವ ವ್ಯವಸ್ಥೆಯನ್ನು ನಮ್ಮೆದುರು ತೆರೆದಿಡುತ್ತದೆ. ಹಾಗಂತ ಇಷ್ಟೇ ಅಲ್ಲ, ಭಿನ್ನ ಭಿನ್ನ ಸಂಹಿತೆಗಳ ಅನುಸಾರ ಆಯುರ್ವೇದ ವಿಭಿನ್ನ ರೋಗಗಳಿಗೆ ಚಿಕಿತ್ಸೆಯನ್ನೂ ಕೊಡುತ್ತದೆ. ಇವೆಲ್ಲವೂ ನಿರಂತರ ಸಂಶೋಧನೆಗಳ ಪ್ರಭಾವವಾಗಿ ನಮ್ಮೆದುರು ತೆರೆದುಕೊಂಡಿದೆ. ಆದರೆ ದುರದೃಷ್ಟವೇನು ಗೊತ್ತೇ? ಆಯುರ್ವೇದ ತಾನು ಹುಟ್ಟಿದ ನಾಡಿನಲ್ಲಿಯೇ ಗೌರವವನ್ನು ಕಳೆದುಕೊಂಡಿತ್ತು. ಪರಿಣಾಮ ಜಗತ್ತಿನ ಎಲ್ಲಾ ರಾಷ್ಟ್ರಗಳ ಸ್ಥಳೀಯ ಆರೋಗ್ಯ ಪದ್ಧತಿಗಳನ್ನು ಗೌರವಿಸುವ ಮಂದಿಯೂ ಆಯುರ್ವೇದವನ್ನು ಸುಳ್ಳು ಎಂದು ಜರಿಯಲು ಹಿಂದೆ ಬೀಳಲಿಲ್ಲ. ವಿಕಿಪೀಡಿಯಾ ಅಂತು ಆಯುರ್ವೇದವನ್ನು ನಕಲಿ ವಿಜ್ಞಾನ ಎಂದು ಕರೆಯಲು ಹಿಂದೆ-ಮುಂದೆ ನೋಡಲಿಲ್ಲ. ನಾವಿನ್ನೂ ಸಹಿಸಿಕೊಂಡಿದ್ದೇವೆ ಏಕೆಂದರೆ ವಿಶ್ವಾಸ ನಮಗೇ ಇಲ್ಲವಲ್ಲ! ಸ್ವಲ್ಪಮಟ್ಟಿಗೆ ಆಯುರ್ವೇದದ ಕುರಿತಂತೆ ನಮ್ಮ ವಿಶ್ವಾಸವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿದ್ದು ನರೇಂದ್ರಮೋದಿಯವರೇ. ಕೀನ್ಯಾದ ಅಧ್ಯಕ್ಷರ ಮಗಳು ರೋಸ್ ಮೇರಿ ಕಣ್ಣಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಾಗ ದೃಷ್ಟಿಯನ್ನೇ ಕಳೆದುಕೊಂಡಿದ್ದಳಂತೆ. ತಂದೆ ಆಕೆಗೆ ಜಗತ್ತಿನ ಅತ್ಯುತ್ಕೃಷ್ಟ ಔಷಧಿಯನ್ನೆಲ್ಲ ಕೊಡಿಸಿದರೂ ಉಪಯೋಗವಾಗಲಿಲ್ಲ. ತುಂಬು ಯೌವ್ವನದಲ್ಲಿ ಅಂಧಳಾದ ಆಕೆಯ ಬದುಕನ್ನು ಕಂಡು ಆತ ರೋದಿಸುತ್ತಿದ್ದನಂತೆ. ಆಕೆಯ ಬದುಕು ಬದಲಾಗಿದ್ದು ಮಾತ್ರ ಭಾರತಕ್ಕೆ ಬಂದಮೇಲೆಯೇ. ಆಯುರ್ವೇದ ಪದ್ಧತಿಯ ಮೂಲಕ ಚಿಕಿತ್ಸೆಯನ್ನು ಪಡಕೊಂಡ ಆಕೆ ತನ್ನ ಕಣ್ಣುಗಳನ್ನು ಮರಳಿ ಪಡೆದು ತನ್ನ ಮಗುವಿನ ಮುಖವನ್ನು ನೋಡಿದಾಗ ಆಕೆಗೆ ಹೇಳಲಾಗದಷ್ಟು ಆನಂದವಾಗಿತ್ತು. ತುಂಬಿದ ಸಭೆಯಲ್ಲಿ ಮೋದಿ ಈ ಘಟನೆಯನ್ನು ವಿವರಿಸುವಾಗ ಸ್ವತಃ ರೋಸ್ ಮೇರಿ ಕಾರ್ಯಕ್ರಮದಲ್ಲಿ ಭಾವುಕಳಾಗಿ ಕುಳಿತಿದ್ದುದು ಆಯುರ್ವೇದಕ್ಕೆ ಹೆಗ್ಗಳಿಕೆಯೇ ಸರಿ. ಆದರೆ ಎಂದಾದರೂ ಆಯುರ್ವೇದ ಇದನ್ನು ಸಂಭ್ರಮಿಸಿದ್ದು ನೋಡಿದ್ದೀರೇನು? ಸಣ್ಣ ಗೆಲುವಿನಿಂದಲೂ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಮಾಡಿಕೊಳ್ಳುವ ಪಶ್ಚಿಮದ ಚಿಕಿತ್ಸಾ ಪದ್ಧತಿಗಳು ಒಮ್ಮೆಯಾದರೂ ಆಯುರ್ವೇದವನ್ನು ಮನಸಾರೆ ಹೊಗಳಿದ್ದನ್ನು ಕೇಳಿದ್ದೀರಾ? ಹೊಗಳುವುದು ಬಿಡಿ, ಮೋದಿ ಆಯುಷ್ ಎಂಬ ಸಚಿವಾಲಯವನ್ನು ಸೃಷ್ಟಿಸಿದಾಗ ಈ ರೀತಿಯ ನಕಲಿ ವಿಜ್ಞಾನಗಳಿಗೆ ಅವಕಾಶ ಕೊಡುವುದು ಅಪಾಯಕರ ಎಂದು ಇವರೆಲ್ಲ ಗರ್ಜಿಸಿದ್ದರು. ನರೇಂದ್ರಮೋದಿ ಹಿಂದೊಮ್ಮೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಓಪನ್ ಸೋರ್ಸ್‌ನ ಕುರಿತಂತೆ ಬಡಾಯಿ ಕೊಚ್ಚಿಕೊಳ್ಳುವ ಮಂದಿಯನ್ನು ಟೀಕಿಸುತ್ತಾ ಆಯುರ್ವೇದ ಸಾವಿರಾರು ವರ್ಷಗಳ ಹಿಂದೆಯೇ ಓಪನ್ ಸೋರ್ಸ್ ಆಗಿ ಬೆಳೆಯಿತು ಎಂಬುದನ್ನು ವಿಶೇಷವಾಗಿ ಹಂಚಿಕೊಂಡರು. ಮತ್ತೆ ಇಂದು ಅದೇ ರೀತಿ ಆಯುರ್ವೇದ ತನ್ನನ್ನು ತಾನು ವಿಸ್ತರಿಸಿಕೊಳ್ಳಬೇಕಿದೆ ಮತ್ತು ಜಗತ್ತಿನ ಮೂಲೆ-ಮೂಲೆಯನ್ನು ಮುಟ್ಟಬೇಕಿದೆ. ಈಗಾಗಲೇ ಈ ಕುರಿತ ಕೆಲಸ ವ್ಯಾಪಕವಾಗಿ ನಡೆಯುತ್ತಿದೆ. 2002ರಲ್ಲಿ ಕೊಚ್ಚಿನ್ನಲ್ಲಿ ನಡೆದ ಆಯುರ್ವೇದ ಮಹಾ ಸಮ್ಮೇಳನದಲ್ಲಿ ಡಾಕ್ಟರ್ ಸಿ.ಕೆ ಕೃಷ್ಣನಾಯಕ್ ಒಂದು ಅಪರೂಪದ ಸಂಗತಿಯನ್ನು ತೆರೆದಿಟ್ಟರು. ಭಾರತ ಮತ್ತು ರಷ್ಯಾಗಳು ಚರ್ನೊಬಿಲ್ ಅಣು ದುರಂತದಲ್ಲಿ ನೊಂದವರಿಗೆ ಪಂಚಕರ್ಮ ಚಿಕಿತ್ಸೆಗೆ ಒಪ್ಪಂದ ಮಾಡಿಕೊಂಡಿದ್ದನ್ನು ಅವರು ಎಲ್ಲರ ಮುಂದೆ ತೆರೆದಿಟ್ಟರು. ರಷ್ಯಾ ಈ ಒಪ್ಪಂದವನ್ನು ಸುಮ್ಮ-ಸುಮ್ಮನೆ ಮಾಡಿಕೊಂಡಿರಲಿಲ್ಲ. ಭಾರತದಿಂದ ಕೆಲವು ವೈದ್ಯರನ್ನು ಕರೆಸಿಕೊಂಡು ಈ ದುರಂತಕ್ಕೆ ಒಳಗಾದವರ ಮೇಲೆ ಪಂಚಕರ್ಮ ಚಿಕಿತ್ಸೆಯ ಪ್ರಭಾವವನ್ನು ಪರೀಕ್ಷಿಸಿ, ಅದು ದೇಹ ಹೊಕ್ಕಿರುವ ವಿಷವನ್ನು ತೆಗೆಯುವಲ್ಲಿ ಪರಿಣಾಮಕಾರಿ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರವೇ ಈ ನಿರ್ಣಯಕ್ಕೆ ಮುಂದಾಗಿದ್ದು. ಇದು ಪ್ರತಿಯೊಬ್ಬ ಭಾರತೀಯನೂ ಸಂಭ್ರಮಿಸಬೇಕಾದ ವಿಷಯ. ಇಂಗ್ಲೆಂಡು, ಅಮೇರಿಕಾ, ಜರ್ಮನಿ, ಫ್ರಾನ್ಸ್, ಸ್ವಿಡನ್, ಆಸ್ಟ್ರಿಯಾ, ಇಟಲಿ ಈ ರಾಷ್ಟ್ರಗಳಲ್ಲೆಲ್ಲಾ ಪರ್ಯಾಯ ವೈದ್ಯ ಪದ್ಧತಿಯ ಅಧ್ಯಯನ ಶಾಲೆಗಳನ್ನು ತೆರೆಯುವಾಗ ಆಯುರ್ವೇದಕ್ಕೆ ವಿಶೇಷ ಮಹತ್ವ ಕೊಡಲಾಯಿತು. ಆಯುರ್ವೇದ ದೇಹವನ್ನು ವಿಷಮುಕ್ತಗೊಳಿಸುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಶಿಷ್ಟವಾದ ಪ್ರಕೃತಿ ಪೂರಕವಾದ ಪದ್ಧತಿ ಎಂಬುದನ್ನು ಜಗತ್ತಿನ ಜನ ಅರಿತಿದ್ದರೂ ಭಾರತಕ್ಕೆ ಅದು ಇನ್ನೂ ವರ್ಜ್ಯವಾಗಿಯೇ ಇತ್ತು. ಈ ವಿಚಾರದಲ್ಲಿ ಪಶ್ಚಿಮದ ಮಂದಿ ಸಾಕಷ್ಟು ಅಧ್ಯಯನ ನಡೆಸಿ ನಮ್ಮೆಲ್ಲ ವಿಚಾರಗಳಿಗೂ ಪೇಟೆಂಟ್ ಪಡೆದುಕೊಂಡ ನಂತರ ಅದು ನಮ್ಮ ಬಳಿಗೆ ಬರುತ್ತಿತ್ತು. ಆಗ ನಾವು ಆಯುರ್ವೇದವನ್ನು ಪಶ್ಚಿಮದ ಮೂಲಕ ಸ್ವೀಕರಿಸಿ ಸಂಭ್ರಮಿಸುತ್ತಿದ್ದೆವು. ಸರಿಯಾದ ಸಂದರ್ಭಕ್ಕೆ ಮೋದಿ ಬಂದು ಚಿತ್ರಣವನ್ನು ಬದಲಾಯಿಸಿದರು.


ಅವರಿಗೆ ಪೂರಕವಾಗಿ ಕರೋನಾ ಕೂಡ ಜಾಗತಿಕ ಮಟ್ಟದಲ್ಲಿ ಆಯುರ್ವೇದದ ಮೌಲ್ಯವನ್ನು ಹೆಚ್ಚಿಸಿತು. ಪ್ರತಿಯೊಬ್ಬರೂ ಲಸಿಕೆಗಳ ಮೊರೆಹೋಗಿದ್ದು ನಿಜವಾದರೂ ಇವುಗಳ ವಿಪರೀತ ಪರಿಣಾಮವನ್ನು ಅರಿತಿದ್ದ ಜನ ಸಹಜವಾಗಿರುವಂತಹ ಚಿಕಿತ್ಸಾ ಪದ್ಧತಿಗೆ ತಮ್ಮನ್ನು ತೊಡಗಿಸಿಕೊಳ್ಳುವ ಚಿಂತನೆಯಲ್ಲಿದ್ದರು. ಆಗ ವರದಾನವಾಗಿ ದೊರಕಿದ್ದೇ ಭಾರತೀಯ ಪದ್ಧತಿ. ಮಾಡರ್ನ ಮತ್ತು ಫೈಸರ್‌ಗಳು ಆರಂಭದಲ್ಲಿ ಸಾಕಷ್ಟು ಸದ್ದು ಮಾಡಿತಾದರೂ ಈಗ ಅದರಿಂದಾಗುತ್ತಿರುವ ಅಡ್ಡ ಪರಿಣಾಮಗಳನ್ನು ಅಲ್ಲಿನ ಜನ ಅನುಭವಿಸುತ್ತಿದ್ದಾರೆ. ಅದೇ ವೇಳೆಗೆ ಕ್ಲಿನಿಕಲ್ ಎವಿಡೆನ್ಸ್‌ಗಳ ಮೂಲಕ ಆಯುರ್ವೇದ ಚಿಕಿತ್ಸೆಯನ್ನು ಪ್ರಮಾಣೀಕರಿಸಲು ಜಾಗತಿಕ ಸಂಸ್ಥೆಗಳು ಹಾತೊರೆಯುತ್ತಿವೆ. ಈ ಹಿಂದೆ ಆರ್ಥ್ರೈಟಿಸ್ ವಿಚಾರದಲ್ಲಿ ಈ ರೀತಿಯ ಪೂರಕ ಸಾಕ್ಷಿಗಳು ದೊರೆತಿದ್ದುದು ಜಗತ್ತಿಗೆ ವಿಶ್ವಾಸ ಮೂಡಿಸುವಂತಿದ್ದವು. ಹೀಗಾಗಿಯೇ ಮತ್ತೊಮ್ಮೆ ಭಾರತದ ಚಿಕಿತ್ಸಾ ಪದ್ಧತಿ ವಿಶ್ವವ್ಯಾಪಕಗೊಳ್ಳಲು ಸಿದ್ಧವಾಗಿರುವಾಗ ನಾವು ಹಿಂದುಳಿಯುವಂತಿಲ್ಲ. ಮನೆ-ಮನೆಗೂ ಆಯುರ್ವೇದವನ್ನು ಮುಟ್ಟಿಸಬೇಕಿದೆ. ಪ್ರತಿಕ್ಷಣವೂ ಆಯುರ್ವೇದವನ್ನು ಬದುಕಬೇಕಿದೆ. ಇಷ್ಟಕ್ಕೂ ಆಯುರ್ವೇದವೆನ್ನುವುದು ಔಷಧಿಯಲ್ಲವಲ್ಲ, ಅದು ಬದುಕಿನ ಶೈಲಿಯೇ ಆಗಿರುವುದರಿಂದ ನಮ್ಮನ್ನು ನಾವು ವ್ಯವಸ್ಥಿತವಾಗಿ ತಿದ್ದಿಕೊಂಡು ಆರೋಗ್ಯವಂತ ಭಾರತದ ನಿರ್ಮಾಣಕ್ಕೆ ಕಟಿಬದ್ಧರಾಗಬೇಕಿದೆ. ಇವಿಷ್ಟೂ ಆಲೋಚನೆಗೆ ಕಾರಣವಾದ್ದು ಆಯುರ್ವೇದ ದಿನಾಚರಣೆ. ಅದು ನರೇಂದ್ರಮೋದಿಯವರ ಕನಸಿನ ಫಲವಾಗಿಯೇ ಆಚರಣೆಗೆ ಬಂದಿರೋದು. ಹೀಗಾಗಿಯೇ ಅವರು ಅಧಿಕಾರಕ್ಕೆ ಬಂದಮೇಲೆ ಆಯುರ್ವೇದಕ್ಕೆ ಬೆಲೆ ಬಂತು ಎಂದು ಅನಿವಾರ್ಯವಾಗಿ ಹೇಳಬೇಕಾಯ್ತು. ಅಲ್ಲದೇ ಮತ್ತೇನು? ಚೀನಾದ ಕಮ್ಯುನಿಸ್ಟ್ ಪಾರ್ಟಿಯೊಂದಿಗೂ ಒಪ್ಪಂದ ಮಾಡಿಕೊಳ್ಳುವ ಮಂದಿಯಿಂದ ಆಯುರ್ವೇದದಂತಹ ಭಾರತೀಯ ಶಾಸ್ತ್ರದ ಬೆಳವಣಿಗೆಯನ್ನು ನಿರೀಕ್ಷಿಸಲಾದರೂ ಸಾಧ್ಯವೇನು?

ತುಕಡೆ ಗ್ಯಾಂಗಿಗೆ ಮೋಹನ್ ಭಾಗವತರ ಪಾಠ!

ತುಕಡೆ ಗ್ಯಾಂಗಿಗೆ ಮೋಹನ್ ಭಾಗವತರ ಪಾಠ!

ಈ ಬಾರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರ ವಿಜಯದಶಮಿ ಸಂದೇಶ ಸಾಕಷ್ಟು ಸದ್ದು ಮಾಡಿದೆ. ಜನಸಂಖ್ಯಾಂಕಿಯ ಬದಲಾವಣೆಯ ಕುರಿತಂತೆ ಅವರು ನಡೆಸಿರುವ ಚರ್ಚೆ ಬಹಳ ಎಚ್ಚರಿಕೆಯಿಂದ ಗಮನಿಸಬೇಕಾದ್ದು. ದುರದೃಷ್ಟವೆಂದರೆ ಬಹಳ ಮಂದಿ ಇದನ್ನು ಪ್ರೌಢಶಾಲೆಯ ಮಕ್ಕಳು ಬರೆಯುವ ಜನಸಂಖ್ಯಾ ಸ್ಫೋಟವೆಂಬ ಪ್ರಬಂಧದ ರೀತಿಯಲ್ಲಿ ಆಲೋಚಿಸುತ್ತಿದ್ದಾರೆ. ಜನಸಂಖ್ಯಾ ಹೆಚ್ಚಳದಿಂದ ಉಂಟಾಗುವ ಆರ್ಥಿಕ ಅಸಮಾನತೆ, ಸಂಪನ್ಮೂಲಗಳ ಕೊರತೆ ಇತ್ಯಾದಿಗಳ ಕುರಿತಂತೆ ಮೋಹನ್ ಭಾಗವತರು ಮಾತನಾಡಿದ್ದಾರೆಂದು ಭಾವಿಸಿಕೊಂಡುಬಿಟ್ಟಿದ್ದಾರೆ. ಇಷ್ಟಕ್ಕೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಜನರನ್ನು ಹೊರೆ ಎಂದು ಪರಿಗಣಿಸಿದ್ದನ್ನು ಕೇಳಿಯೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯನ್ನೂ ಜನ ಸಂಪನ್ಮೂಲವೆಂದೇ ಭಾವಿಸುವ ಆಲೋಚನಾ ಪಥಕ್ಕೆ ಸೇರಿದವರು ಅವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್ ಪ್ರಕಟ ಪಡಿಸಿದ ಪುಸ್ತಕವೊಂದರಲ್ಲಿ ಹೆಚ್ಚುತ್ತಿರುವ ಜನ ಸಂಪನ್ಮೂಲವನ್ನು ಸೂಕ್ತವಾಗಿ ಬಳಸಿಕೊಳ್ಳುವ ವಿಧಾನದ ಕುರಿತಂತೆ ಸಾಕಷ್ಟು ಚರ್ಚೆ ಮಾಡಲಾಗಿತ್ತು. ಹಾಗಿರುವಾಗ ಇಷ್ಟು ಬೇಗನೇ ಮೂಲ ವಿಚಾರಧಾರೆಯಲ್ಲಿ ಬದಲಾವಣೆ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಇಷ್ಟಕ್ಕೂ ಸರಸಂಘ ಚಾಲಕರು ತಮ್ಮ ಭಾಷಣದಲ್ಲಿ ತಿಮೋರ್, ಸುಡಾನ್ ಮತ್ತು ಕೊಸೊವೊಗಳನ್ನು ಉಲ್ಲೇಖಿಸಿರುವುದನ್ನು ನೋಡಿದರೆ ಅವರ ಗುರಿ ಯಾವ ದಿಕ್ಕಿಗಿದೆ ಎಂಬುದು ಅರಿವಾಗುತ್ತದೆ. 

ಉದಾಹರಣೆಗಾಗಿ ತಿಮೋರ್ ಅನ್ನೇ ತೆಗೆದುಕೊಳ್ಳೋಣ. ಆಸ್ಟ್ರೇಲಿಯಾದ ವಾಯವ್ಯ ಭಾಗಕ್ಕೆ 640 ಕಿ.ಮೀ ದೂರದಲ್ಲಿರುವ ಈ ಭೂಪ್ರದೇಶ ಇಂಡೋನೇಷ್ಯಾಕ್ಕೆ ಹೊಂದಿಕೊಂಡಿದೆ. ಅನೇಕ ಶತಮಾನಗಳ ಕಾಲ ಇಂಡೋನೇಷ್ಯಾದ ಅಡಿಯಲ್ಲಿದ್ದ ಭೂಭಾಗ ಅದು. 16ನೇ ಶತಮಾನದಲ್ಲಿ ಈ ಭೂಭಾಗವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಪೋರ್ಚುಗೀಸರು 17ನೇ ಶತಮಾನ ಮುಗಿಯುವ ವೇಳೆಗಾಗಲೇ ಇಲ್ಲಿಂದ ಚಂದನದ ಕೊರಡುಗಳನ್ನು ಕೊಂಡೊಯ್ಯಲಾರಂಭಿಸಿದರು. 19ನೇ ಶತಮಾನ ಮುಗಿಯುವ ವೇಳೆಗೆ ಈ ಭೂಭಾಗದಲ್ಲಿ ಪೋರ್ಚುಗೀಸರ ಪ್ರಭಾವ ಸಾಕಷ್ಟಿತ್ತು. ಇಲ್ಲಿನ ಸಂಪನ್ಮೂಲವನ್ನು ಕಂಡೇ ದ್ವಿತೀಯ ಮಹಾಯುದ್ಧದ ವೇಳೆಗೆ ಜಪಾನ್ ಕೂಡ ಈ ಭೂಭಾಗವನ್ನು ಆಕ್ರಮಿಸಿತ್ತು. 1974ರಲ್ಲಿ ಪೋರ್ಚುಗಲ್‌ನಲ್ಲಿ ಅಧಿಕಾರ ಬದಲಾವಣೆಯಾದ ನಂತರ ತಿಮೋರ್ ಅನ್ನು ಬಿಟ್ಟುಕೊಡಲಾಯ್ತು. ಮುಂದಿನ ಒಂದು ವಾರದೊಳಗೆ ತಿಮೋರ್ ತನ್ನ ತಾನು ಸ್ವತಂತ್ರವೆಂದು ಘೋಷಿಸಿಕೊಳ್ಳುವ ಮುನ್ನವೇ ಇಂಡೋನೇಷ್ಯಾ ತನ್ನ ಸೇನೆಯನ್ನು ಕಳಿಸಿ ತಿಮೋರ್ ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡುಬಿಟ್ಟಿತು. ಆಗ ಇಂಡೋನೇಷ್ಯಾ ಸುಹಾರ್ತೊ ಎಂಬ ಸರ್ವಾಧಿಕಾರಿಯ ಹಿಡಿತದಲ್ಲಿತ್ತು. ಸಹಜವಾಗಿಯೇ ಇಂಡೋನೇಷ್ಯಾ ಜಗತ್ತಿನ ಅತಿ ಹೆಚ್ಚು ಮುಸಲ್ಮಾನರನ್ನು ಹೊಂದಿದ ರಾಷ್ಟ್ರವಾಗಿತ್ತು. ಅಚ್ಚರಿ ಎನ್ನುವಂತೆ ಸುಹಾರ್ತೊ ಸೆಕ್ಯುಲರ್ ಆಗಿದ್ದ, ಅಷ್ಟೇ ಭ್ರಷ್ಟನೂ ಕೂಡ. ಈ ಸಂದರ್ಭದಲ್ಲಿಯೇ ತಿಮೋರ್ ವ್ಯಾಪಕ ಬಡತನಕ್ಕೆ ತಳ್ಳಲ್ಪಟ್ಟಿತು. ಬಡತನ ಇಣುಕಿದೊಡನೆ ಶಿಲುಬೆ ತೆಗೆದುಕೊಂಡು ಮಿಷನರಿಗಳು ಹಾಜರಾಗಿಬಿಡುತ್ತಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ಇಲ್ಲಿಯೂ ಹೀಗೇ ಆಯ್ತು. ಇಂಡೋನೇಷ್ಯಾ ತಿಮೋರ್ ಅನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ಕ್ರಿಶ್ಚಿಯನ್ನರ ಜನಸಂಖ್ಯೆ ಶೇಕಡಾ 20ರಷ್ಟು ಮಾತ್ರ. ಉಳಿದವರೆಲ್ಲ ಮುಸಲ್ಮಾನರೇ ಆಗಿದ್ದರು. ಸುಹಾರ್ತೊನ ಅಧಿಕಾರಾವಧಿಯಲ್ಲಿ ಹೆಚ್ಚಿದ ಬಡತನದ ಲಾಭವನ್ನು ಪಡೆದುಕೊಂಡು ಬಿಷಪ್ ಕಾರ್ಲೋಸ್ ಅನ್ನ ಕೊಡುವ ನೆಪದಲ್ಲಿ ಮುಸಲ್ಮಾನರ ಕುತ್ತಿಗೆಗೆ ಶಿಲುಬೆ ಹಾಕಿದ. ಬಹಳ ಕಾಲ ಹಿಡಿಯಲಿಲ್ಲ. ಹದಿನೈದೇ ವರ್ಷಗಳಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇಕಡಾ 90ನ್ನು ದಾಟಿಬಿಟ್ಟಿತು! ಇನ್ನೂ ಅಚ್ಚರಿ ಎಂದರೆ 1989ರಲ್ಲಿ ಪೋಪ್ ಈ ಭಾಗಕ್ಕೆ ಭೇಟಿಕೊಟ್ಟು ಅಲ್ಲಿನ ಜನರಲ್ಲಿ ಅಂತರ್ ರಾಷ್ಟ್ರೀಯ ಸಹಕಾರದ ಭರವಸೆಯ ಬೀಜವನ್ನು ಬಿತ್ತಿ ಹೋದರು. ಮುಂದಿನ ಕಥೆ ಏನು ಕೇಳುತ್ತೀರಿ. ಪೂರ್ವ ತಿಮೋರ್ನಲ್ಲಿದ್ದಂತಹ ಕ್ಯಾಥೋಲಿಕ್ ರಿಗೂ ಉಳಿದ ಇಂಡೋನೇಷ್ಯಾದ ಮುಸಲ್ಮಾನರಿಗೂ ತಿಕ್ಕಾಟ ಆರಂಭವಾಯ್ತು. ಭಯಾನಕವಾದ ಹಿಂಸೆ ಕಂಡುಬಂತು. ನಿರಂತರ ನಡೆದ ಈ ಹಿಂಸಾತ್ಮಕ ಹೋರಾಟವನ್ನು ತಡೆಗಟ್ಟಲು ಸರ್ಕಾರ ಬಲಪ್ರಯೋಗ ಮಾಡಬೇಕಾಗಿ ಬಂತು. ಕದನ ಆರಂಭಿಸಿದ್ದು ಕ್ರಿಶ್ಚಿಯನ್ನರೇ, ಅದನ್ನು ತಡೆಗಟ್ಟಲು ಯತ್ನಿಸಿದ್ದು ಸರ್ಕಾರ. ಜಾಗತಿಕ ಮಟ್ಟದಲ್ಲಿ ಇದನ್ನು ಬಹುಸಂಖ್ಯಾತ ಮುಸಲ್ಮಾನರು ಅಲ್ಪಸಂಖ್ಯಾತ ಕ್ರಿಶ್ಚಿಯನ್ನರ ಮೇಲೆ ನಡೆಸುತ್ತಿರುವ ದೌರ್ಜನ್ಯ ಎಂದು ಬಿಂಬಿಸಲಾಯ್ತು. ಎಲ್ಲೆಡೆಯಿಂದಲೂ ಕ್ರಿಶ್ಚಿಯನ್ನರಿಗೆ ಅನುಕಂಪದ ಮಹಾಪೂರ ಹರಿದುಬಂತು. ಇಂಡೋನೇಷ್ಯಾದ ಮೇಲೆ ಒತ್ತಡವೂ ಹೆಚ್ಚಾಯ್ತು. ವಿಶ್ವಸಂಸ್ಥೆಯ ಶಾಂತಿ ಪಡೆಗಳು ಬಂದವಲ್ಲದೇ ಈ ಭಾಗದಲ್ಲಿ ಒಂದು ಜನಮತಗಣನೆಯನ್ನು ನಡೆಸುವ ಇಚ್ಛೆಯನ್ನು ವಿಶ್ವಸಂಸ್ಥೆ ವ್ಯಕ್ತಪಡಿಸಿತು. ಪರಿಣಾಮ ಶೇಕಡಾ 75ಕ್ಕಿಂತಲೂ ಹೆಚ್ಚು ಮಂದಿ ಪೂರ್ವ ತಿಮೋರ್ ಪ್ರತ್ಯೇಕ ರಾಷ್ಟ್ರವಾಗಬೇಕೆಂಬುದಕ್ಕೆ ಒಪ್ಪಿಗೆಯ ಮುದ್ರೆ ಹಾಕಿದರು. ಆಮೇಲೇನು? ಜಗದ ಜನರ ಸಮ್ಮುಖದಲ್ಲೇ ಅದೊಂದು ಪ್ರತ್ಯೇಕ ರಾಷ್ಟ್ರವೂ ಆಯ್ತು. ಇಷ್ಟಕ್ಕೂ ಕಾರಣವೇನು? ಶೇಕಡಾ 20ರಷ್ಟಿದ್ದ ಕ್ರಿಶ್ಚಿಯನ್ನರ ಜನಸಂಖ್ಯೆ ಶೇಕಡಾ 90 ಆಗಿದ್ದು ತಾನೇ? ಅಂದರೆ ಜನಸಂಖ್ಯೆಯ ಸ್ಫೋಟವೇನೂ ಆಗಿರಲಿಲ್ಲ, ಆದರೆ ಇದ್ದವರೇ ತಮ್ಮ ರಾಷ್ಟ್ರನಿಷ್ಠೆಯನ್ನು ಬದಲಾಯಿಸಿಕೊಂಡಿದ್ದರು ಅಷ್ಟೇ!

ದಕ್ಷಿಣ ಸೂಡಾನಿನ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಇದೂ ಕೂಡ ಮುಸಲ್ಮಾನರೇ ಹೆಚ್ಚು ಸಂಖ್ಯೆಯಲ್ಲಿದ್ದ ಆಫ್ರಿಕಾದ ಒಂದು ಪುಟ್ಟ ರಾಷ್ಟ್ರ. ಇಲ್ಲಿ ಶೇಕಡಾ 95ರಷ್ಟು ಮುಸಲ್ಮಾನರೇ ಇದ್ದರೆ 90ರ ದಶಕದಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇಕಡಾ 5ಕ್ಕಿಂತಲೂ ಕಡಿಮೆ ಇತ್ತು. 2011ರ ವೇಳೆಗೆ ಮುಸಲ್ಮಾನರ ಜನಸಂಖ್ಯೆ ಶೇಕಡಾ 61ಕ್ಕೆ ಇಳಿದರೆ ಕ್ರಿಶ್ಚಿಯನ್ನರು ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತುಬಿಟ್ಟಿದ್ದರು. ಸೂಡಾನ್ ಕ್ರಾಂತಿಕಾರಿ ಪಕ್ಷ ರಚನೆಯೂ ಆಯ್ತು. ಎಂದಿನಂತೆ ಜನಮತ ಗಣನೆ ನಡೆದು ಪ್ರತ್ಯೇಕ ರಾಷ್ಟ್ರಕ್ಕೆ ಅಡಿಪಾಯ ಹಾಕಲಾಯ್ತು. 

ಯುಗೊಸ್ಲಾವಿಯಾದ ಭಾಗವಾಗಿದ್ದ ಕೊಸೊವೊ ಸೆರ್ಬಿಯಾದ ಭಾಗವಾದ ನಂತರ ಅಲ್ಲಿನ ಎರಡು ಪ್ರಮುಖ ಪಂಥಗಳ ನಡುವೆ ಕದನ ಆರಂಭವಾಯ್ತು. ಸಂಪ್ರದಾಯವಾದಿ ಕ್ಯಾಥೊಲಿಕ್ ಸೆರ್ಬಿಯನ್ನರು ಮತ್ತು ಅಲ್ಬೇನಿಯಾದ ಮುಸಲ್ಮಾನರು ಸಣ್ಣ-ಸಣ್ಣ ವಿಚಾರಗಳಿಗೂ ತಗಾದೆ ಮಾಡಿಕೊಳ್ಳುತ್ತಲೇ ಇದ್ದರು. ಅಲ್ಬೇನಿಯಾದ ಮುಸಲರ ಜನನ ಪ್ರಮಾಣ ಹೆಚ್ಚುತ್ತಲೇ ಇತ್ತು. ಪರಿಣಾಮ 1921ರಲ್ಲಿ ಶೇಕಡಾ 65ರಷ್ಟಿದ್ದ ಇವರ ಸಂಖ್ಯೆ ಏಳು ದಶಕಗಳಲ್ಲಿ ಶೇಕಡಾ 82ಅನ್ನು ದಾಟಿತು. ಮುಸಲರ ಸಂಖ್ಯೆ ಹೆಚ್ಚುತ್ತಿದ್ದಂತೆ ಇತರರು ಬದುಕುವುದು ಎಷ್ಟು ಕಷ್ಟವಾಗುತ್ತದೆಂದು ಭಾರತೀಯರಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದನ್ನು ತಡೆಯಲು ಸರ್ಕಾರ ಬಳಸುತ್ತಿದ್ದ ಕ್ರಮಗಳನ್ನು ಜಗತ್ತಿನಾದ್ಯಂತ ಅವರು ಮಾನವ ಹಕ್ಕುಗಳ ಉಲ್ಲಂಘನೆ ಎಂದು ತೋರಿಸಲಾರಂಭಿಸಿದರು. ಕೊಸೊವೊ ಮುಕ್ತಿ ಸೇನೆ ನಿರ್ಮಾಣಗೊಂಡಿತು. 1998ರ ಫೆಬ್ರವರಿಯಲ್ಲಿ ಯುಗೊಸ್ಲಾವಿಯಾದ ಸೇನೆಯೊಂದಿಗೂ ಕೊಸೊವೊ ಮುಕ್ತಿ ಸೇನೆಯೊಂದಿಗೂ ಗಲಾಟೆ ಆರಂಭವಾಯ್ತು. ಇದು ಯಾವ ಮಟ್ಟಕ್ಕೆ ಹೋಯ್ತೆಂದರೆ ಎರಡು ಲಕ್ಷ ಮಂದಿ ಇದ್ದ ನೆಲೆಯನ್ನು ಬಿಟ್ಟು ಓಡಿಹೋಗಬೇಕಾಯ್ತು. ವಿಶ್ವಸಂಸ್ಥೆ ಮತ್ತು ನ್ಯಾಟೊ ಪಡೆಗಳು ಕೊಸೊವೊವನ್ನು ಪಡೆದುಕೊಂಡವು. ಆಮೇಲೆ ಕೊಸೊವೊ ಪ್ರತ್ಯೇಕ ರಾಷ್ಟ್ರವೇ ಆಯ್ತು. 

ಕಾಂತಾರ ಒಂದು ದಂತಕಥೆ ಇರಬಹುದು. ಆದರೆ ಮೇಲೆ ಹೇಳಿದ ಯಾವುದೂ ಅಲ್ಲ. ಇವೆಲ್ಲವೂ ಇತ್ತೀಚಿನ ಕೆಲವು ದಶಕಗಳ ಹಿಂದೆ ನಮ್ಮ ಕಣ್ಣೆದುರಿಗೇ ನಡೆದುಹೋದ ಸತ್ಯ ಕಥನಗಳು. ಪ್ರತೀ ರಾಷ್ಟ್ರವೂ ಜನಸಂಖ್ಯಾಂಕಿಯ ಬದಲಾವಣೆಯ ನಂತರ ವಿಭಜನೆಗೆ ಸಿದ್ಧವಾಗುವುದನ್ನು ಈ ಮೂರೂ ಉದಾಹರಣೆಗಳಲ್ಲಿ ಕಂಡಿದ್ದೇವೆ. ಇದೇ ಉದಾಹರಣೆಯನ್ನು ವಿಸ್ತರಿಸಬೇಕೆಂದಾದರೆ ಇಂದು ಮುಸಲ್ಮಾನ್ ರಾಷ್ಟ್ರವಾಗಿರುವ ಅಫ್ಘಾನಿಸ್ತಾನ ಒಂದು ಕಾಲದಲ್ಲಿ ಗಾಂಧಾರ ದೇಶ. ಲಾಹೋರ್ ಲವನ ಸಾಮ್ರಾಜ್ಯ, ಲವಪುರ. ಆಕ್ರಮಣಕಾರಿಗಳಾಗಿ ಬಂದ ಮುಸಲ್ಮಾನರು ತಾವೂ ಈ ಭಾಗದಲ್ಲಿ ಉಳಿದುಕೊಂಡಿದ್ದಲ್ಲದೇ ಅನೇಕ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದುದರ ಪರಿಣಾಮವಾಗಿ ಅವರೆಲ್ಲರೂ ಎರಡು ಪೀಳಿಗೆ ಕಳೆಯುವುದರೊಳಗೆ ತಮ್ಮ ಮೂಲವನ್ನೇ ಮರೆತು ಇಸ್ಲಾಂ ರಾಷ್ಟ್ರಕ್ಕಾಗಿ ಆಗ್ರಹಿಸಲಾರಂಭಿಸಿದರು. ಅದರ ಪರಿಣಾಮವಾಗಿಯೇ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳು ನಿರ್ಮಾಣಗೊಂಡವು. ಕೊಸೊವೊದಲ್ಲಾದಂತೆ 90ರ ದಶಕದಲ್ಲಿ ಹಿಂದೂಗಳನ್ನು ಕಾಶ್ಮೀರದಲ್ಲಿ ಬಡಿಬಡಿದು ಓಡಿಸಲಾಯ್ತು. ಈ ನರಹತ್ಯೆಯನ್ನು ಜಗತ್ತು ಪ್ರತಿಭಟಿಸಲಿಲ್ಲ. ಏಕೆಂದರೆ ಭಾರತದಲ್ಲಿ ಮುಸಲ್ಮಾನರೆಂದರೆ ಅಲ್ಪಸಂಖ್ಯಾತರು ಎಂಬ ಭಾವನೆ ಬಲವಾಗಿ ಬೇರೂರಿಬಿಟ್ಟಿದೆಯಲ್ಲ. ಮುಸಲ್ಮಾನರು ತಿರುಗಿಬಿದ್ದರೆಂಬುದನ್ನು ಜಗತ್ತು ಎದೆಬಡಿದುಕೊಂಡು ಹೇಳಲಾರಂಭಿಸಿದರೆ ಅವರೇ ಒಪ್ಪಿದ ಸಿದ್ಧಾಂತ ತಲೆಕೆಳಗಾಗುತ್ತದಲ್ಲ! ಶೋಷಣೆ ಮಾಡುವವರು ಬಹುಸಂಖ್ಯಾತರು ಮತ್ತು ಶೋಷಣೆಗೆ ಈಡಾಗುವವರು ಅಲ್ಪಸಂಖ್ಯಾತರು ಎಂಬುದು ಜನಸಮಾನ್ಯರ ಭಾವನೆಯಲ್ಲವೇನು? ಈ ತಿಕ್ಕಾಟದ ನಡುವೆ ಪಂಡಿತ ಅನಾಥನಾದ. ಈ 75 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕಗೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣಗಳು ಎರಡೇ. ಒಂದು ಭಾರತ ಸರ್ಕಾರ ಭಿಕ್ಷಾ ರೂಪದಲ್ಲಿ ಕೊಡುತ್ತಿದ್ದ ಧನಸಹಾಯ. ಮತ್ತೊಂದು ಯಾರ ಬಲದ ಆಧಾರದ ಮೇಲೆ ಕಾಶ್ಮೀರ ಪ್ರತ್ಯೇಕತೆಯ ಮಾತುಗಳನ್ನಾಡುತ್ತಿತ್ತೋ ಆ ಪಾಕಿಸ್ತಾನ ಭಾರತದ ಮುಂದೆ ಪದೇ-ಪದೇ ಮಂಡಿಯೂರಿ ಕುಳಿತುಬಿಟ್ಟಿತ್ತು. ನರೇಂದ್ರಮೋದಿ ಆರ್ಟಿಕಲ್ 370ನ್ನು ತೆಗೆದು ನಮ್ಮಿಂದ ಪ್ರತ್ಯೇಕವಾಗಬೇಕೆಂದಿದ್ದ ಅವರ ಚಿಂತನೆಗಳನ್ನು ಶಾಶ್ವತವಾಗಿ ಸಮಾಧಿ ಮಾಡಿದ್ದಾರೆ. ಆದರೆ ಭಾರತವನ್ನು ತುಂಡು ಮಾಡಬೇಕೆಂದು ಬಯಸುವ ಮಂದಿಗೇನು ಕೊರತೆಯಿಲ್ಲ. ಅವರು ಈಗಲೂ ಭಿನ್ನ-ಭಿನ್ನ ಮಾರ್ಗಗಳನ್ನು ಬಳಸಿ ಜನಸಂಖ್ಯೆಯನ್ನು ವೃದ್ಧಿಸಿಕೊಳ್ಳುವುದಲ್ಲದೇ ಆ ಮೂಲಕ ಆಂತರಿಕ ದಂಗೆಗಳಿಗೂ ಕಾರಣವಾಗುತ್ತಿದ್ದಾರೆ. ಕೇಂದ್ರಸರ್ಕಾರದ ದಮನ ನೀತಿಯನ್ನು ಮುಂದಿರಿಸಿ ಜಾಗತಿಕ ಮಟ್ಟದಲ್ಲಿ ಜನಮತಗಣನೆಗೆ ತೆರೆದುಕೊಳ್ಳುವ ಉಪಾಯ ಅದರದ್ದು. ಅದನ್ನೇ ಸರಸಂಘ ಚಾಲಕರು ತಮ್ಮ ವ್ಯಾಖ್ಯಾನದಲ್ಲಿ ಪ್ರಸ್ತುತಪಡಿಸಿದ್ದು. ಅವರು ಹೇಳಿರುವ ಮೂರೂ ರಾಷ್ಟ್ರಗಳ ಕುರಿತಂತೆ ಅಧ್ಯಯನ ಮಾಡಿದ ಮೇಲೆ ಗೊತ್ತಾಗುವ ಕೆಲವು ಅಂಶಗಳಿವೆ. ಮೊದಲನೆಯದಾಗಿ, ಈ ರೀತಿ ಜನಸಂಖ್ಯಾಂಕಿಯ ಬದಲಾವಣೆ ಆದಾಗಲೆಲ್ಲ ತರುಣರ ಸಂಖ್ಯೆಯೇ ಹೆಚ್ಚಿರುವುದನ್ನು ಗಮನಿಸಬಹುದು. ಸುಡಾನ್, ಕೊಸೊವೊ ವತ್ತು ತಿಮೋರ್ಗಳಲ್ಲಿ ಏಕಾಕಿ ಹೆಚ್ಚಿದ ಒಂದೇ ಜನಾಂಗದ ತರುಣರು ಕ್ರೌರ್ಯದಲ್ಲಿ ಎಲ್ಲರಿಗಿಂತಲೂ ಮುಂದಿರುತ್ತಿದ್ದುದು ವಿಶೇಷ. ಎರಡನೆಯದು, ವ್ಯಾಪಕವಾದ ನಗರೀಕರಣದಿಂದ ಇಲ್ಲೆಲ್ಲ ಒಂದೇ ಜನಾಂಗದ ಜನ ಪ್ರಮುಖ ನಗರಗಳಿಗೆ ವಲಸೆ ಹೋಗಿ ಅಲ್ಲಿ ತಮ್ಮದ್ದೇ ಭೂಪ್ರದೇಶಗಳನ್ನು ರೂಪಿಸಿಕೊಂಡುಬಿಡುತ್ತಿದ್ದರು. ಇಂತಹ ಪ್ರದೇಶಗಳಿಗೆ ಬೇರೆ ಜನಾಂಗದವರು ಬರುವಂತಿರಲಿಲ್ಲ. ಆರ್ಥಿಕ ಅಸಮಾನತೆಯ ನೆಪವನ್ನು ಮುಂದಿಟ್ಟುಕೊಂಡು ಈ ಜನ ತಮ್ಮ ಶತ್ರುತ್ವವನ್ನು ವ್ಯಾಪಕವಾಗಿ ಬೆಳೆಸಿಕೊಳ್ಳುತ್ತಿದ್ದರು. ಅದರ ಪರಿಣಾಮ ಮೊದಲು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದರಲ್ಲದೇ ನೇರವಾಗಿ ಸರ್ಕಾರಿ ಪಡೆಗಳೊಂದಿಗೆ ಕದನಕ್ಕಿಳಿಯುತ್ತಿದ್ದರು. ಆರಂಭದಲ್ಲಿ ಕಲ್ಲೆಸೆಯುತ್ತಿದ್ದವರು ಆನಂತರ ಶಸ್ತ್ರಗಳ ಬಳಕೆ ಮಾಡುತ್ತಿದ್ದುದು ಈ ಮೂರು ರಾಷ್ಟ್ರಗಳಲ್ಲಿ ಕಂಡುಬಂದಿದೆ. ಅಚ್ಚರಿ ಎಂಬಂತೆ ಪ್ರಮುಖ ನಗರಗಳಲ್ಲಿ ಬಿಟ್ಟು ಬೇರೆಡೆ ವ್ಯಾಪಕವಾದ ಕದನಗಳು ಇಲ್ಲೆಲ್ಲೂ ಕಂಡುಬಂದಂತಿಲ್ಲ. ಒಮ್ಮೆ ಕದನಗಳು ತೀವ್ರ ಸ್ವರೂಪ ಪಡೆದುಕೊಂಡ ನಂತರ ಕದನದಲ್ಲಿ ನಿರತರಾದವರು ರಾಜಕೀಯ ಪಕ್ಷಗಳ ಮರ್ಜಿಗೆ ಕಾಯದಿರುವುದನ್ನು ಅನೇಕ ತಜ್ಞರು ಗಮನಿಸಿದ್ದಾರೆ. ಒಟ್ಟಾರೆ ಇಷ್ಟನ್ನೂ ದಾಖಲಿಸಬೇಕೆಂದರೆ ಮೊದಲು ಒಂದೇ ಜನಾಂಗದ ಜನಸಂಖ್ಯೆಯನ್ನು ಮಕ್ಕಳನ್ನು ಹೆರುವ ಮೂಲಕ, ಮತಾಂತರದ ಮೂಲಕ, ಕೊನೆಗೆ ಅನ್ಯರಾಷ್ಟ್ರಗಳಿಂದ ಕರೆಸಿಕೊಳ್ಳುವ ಮೂಲಕವಾದರೂ ಹೆಚ್ಚಿಸಿಕೊಳ್ಳಲಾಗುತ್ತದೆ. ನಿಧಾನವಾಗಿ ಕಳ್ಳತನ, ಲೂಟಿ, ದರೋಡೆ, ಮಾನಭಂಗಗಳನ್ನು ಇವರು ಮಾಡಲು ಆರಂಭಿಸುತ್ತಾರೆ. ಸರ್ಕಾರ ಕಠಿಣ ಕ್ರಮ ಕೈಗೊಂಡು ಇವರನ್ನು ಬಂಧಿಸಲಾರಂಭಿಸಿದೊಡನೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಂಬ ಕೂಗು ಕೇಳಿಬರುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಂತೆ ಪ್ರತಿಭಟನೆ ಆರಂಭವಾಗುತ್ತದೆ. ಹಿಂಸಾತ್ಮಕ ರೂಪಕ್ಕೆ ತಿರುಗಿಕೊಳ್ಳಬಹುದಾದ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸಿದೊಡನೆ ಆಂತರಿಕ ದಂಗೆಗಳು ಆರಂಭಗೊಳ್ಳುತ್ತವೆ. ಜಗತ್ತಿನ ಮಾರಾಟಗೊಂಡ ಪತ್ರಕರ್ತರೆಲ್ಲರೂ ಬೊಬ್ಬಿಡಲಾರಂಭಿಸುತ್ತಾರೆ. ಸಹಜವಾಗಿಯೇ ಅಂತರ್ ರಾಷ್ಟ್ರೀಯ ಒತ್ತಡ ನಿರ್ಮಾಣಗೊಂಡು ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಜನಮತಗಣನೆ ನಡೆಸುತ್ತದೆ, ಪ್ರತ್ಯೇಕ ರಾಷ್ಟ್ರವನ್ನು ಹರಿದು ಹಂಚಿಬಿಡುತ್ತದೆ. ಕಾಶ್ಮೀರ, ಪಂಜಾಬ್, ಕೇರಳ, ಈಶಾನ್ಯ ರಾಜ್ಯಗಳು, ತಮಿಳುನಾಡು, ಆಂಧ್ರ, ಪಶ್ಚಿಮ ಬಂಗಾಳ ಇವೆಲ್ಲವೂ ಈ ಜ್ವಾಲಾಮುಖಿಯ ತುದಿಯಲ್ಲೇ ಕುಳಿತಿವೆ. ರೋಹಿಂಗ್ಯಾಗಳಿಗೆ ಆಧಾರ್‌ಕಾರ್ಡ್ ಕೊಡಿಸುವ ಕಾಂಗ್ರೆಸ್ಸು, ಬಾಂಗ್ಲಾದೇಶಿಗಳಿಗೆ ವೋಟರ್ ಐಡಿ ಕೊಡಿಸುವ ತೃಣಮೂಲ ಕಾಂಗ್ರೆಸ್ಸು, ಭಿನ್ನ-ಭಿನ್ನ ಜಾಗಗಳಿಂದ ವಲಸೆ ಬಂದಿರುವ ಮುಸಲ್ಮಾನರ ಮತಗಳಿಂದಲೇ ಗೆಲ್ಲುವ ಮಾತಾಡುವ ದೆಹಲಿಯ ಆಮ್ಆದ್ಮಿ ಪಾರ್ಟಿ, ನಿರಂತರವಾಗಿ ನಡೆಯುತ್ತಿರುವ ಆಂಧ್ರ, ತೆಲಂಗಾಣಗಳ ಮತಾಂತರಗಳು, ಉತ್ತರ ಭಾರತೀಯರ ದೌರ್ಜನ್ಯಕ್ಕೆ ದಕ್ಷಿಣ ಭಾರತೀಯರು ನಲುಗುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿರುವ ದ್ರವಿಡ ಪಕ್ಷಗಳು ಇವರೆಲ್ಲರೂ ಈ ಪಾಪದಲ್ಲಿ ಭಾಗೀದಾರರೇ. ಹೀಗಾಗಿಯೇ ನರೇಂದ್ರಮೋದಿ ದೆಹಲಿಯಲ್ಲಿ ಸಿಎಎ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಾಗ್ಯೂ ಪ್ರಹಾರಕ್ಕೆ ಶಸ್ತ್ರ ಬಳಸಲಿಲ್ಲ. 

ಈಗ ಎಚ್ಚರಿಕೆ ನಾವು ತೆಗೆದುಕೊಳ್ಳಬೇಕಾಗಿದೆ. ಜನಸಂಖ್ಯಾ ಬದಲಾವಣೆಯ ಈ ಹೊತ್ತಲ್ಲಿ ಸರ್ಕಾರ ಸೂಕ್ತ ನೀತಿಗಳನ್ನು ಜಾರಿಗೆ ತರುವಂತೆ ಒತ್ತಾಯಿಸಬೇಕಿದೆ. ಮೋಹನ್ಜಿ ಭಾಗವತರು ಅದನ್ನೇ ಮಾಡಿದ್ದು..

ಹಿಂದೂ-ಮುಸಲ್ಮಾನ: ದಲಿತ ಒಂದೇ ಸಮಾನ!

ಹಿಂದೂ-ಮುಸಲ್ಮಾನ: ದಲಿತ ಒಂದೇ ಸಮಾನ!

ಇತ್ತೀಚೆಗೆ ಬಿಜೆಪಿಯ ಚಿಂತನಾ ಬೈಠಕ್ನಲ್ಲಿ ಮುಸಲ್ಮಾನರಲ್ಲಿ ದೊಡ್ಡ ಪ್ರಮಾಣದಲ್ಲಿರುವ ಪಸ್ಮಂಡಾಗಳ ಕುರಿತಂತೆ ವಿಶೇಷ ಗಮನವೀಯುವ ಮಾತಾಡಲಾಯಿತು. ಇದಾದಮೇಲೆ ಅನೇಕ ಮಾಧ್ಯಮಗಳು ಪಸ್ಮಂಡಾಗಳ ಕುರಿತಂತೆ ಆಲೋಚಿಸಲಾರಂಭಿಸಿದರಲ್ಲದೇ ವಿಶೇಷ ವರದಿಗಳನ್ನು ಪ್ರಕಟಿಸಿದವು. ಸುಮಾರು ನೂರು ವರ್ಷಗಳ ಹೋರಾಟದ ನಂತರ ಈಗ ಮುಸಲ್ಮಾನರಲ್ಲೇ ಹಿಂದುಳಿದ ದಲಿತ ವರ್ಗಕ್ಕೆ ಸೇರಿದ ಪಸ್ಮಂಡಾಗಳ ಕುರಿತ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಸಂತಸದ ಸಂಗತಿಯೇ. ತುಳಿತಕ್ಕೊಳಗಾದವರು ಯಾರೇ ಆಗಲಿ, ಎಲ್ಲೇ ಇರಲಿ, ಅವರ ಕುರಿತಂತೆ ಸಹಾನುಭೂತಿ, ಪ್ರೇಮ ಅತ್ಯಗತ್ಯ.

ಮುಸಲ್ಮಾನರಲ್ಲಿ ಜಾತಿಗಳೇ ಇಲ್ಲ ಎಂದು ಹೇಗೋ ನಮ್ಮನ್ನು ನಂಬಿಸಿಬಿಟ್ಟಿದ್ದಾರೆ. ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರರು ಈ ಮಾತನ್ನು ಒಪ್ಪಿರಲಿಲ್ಲ. ಮುಸಲ್ಮಾನರಲ್ಲಿನ ಸಹೋದರತ್ವದ ಕುರಿತಂತೆ ಅವರಿಗೆ ಅನುಮಾನ ಇದ್ದೇ ಇತ್ತು. ಒಂದೆಡೆಯಂತೂ ‘ಜೀತ ಮತ್ತು ಜಾತಿ ಇವೆರಡೂ ಅನಿಷ್ಟಗಳು. ಸರ್ಕಾರಗಳು ಕಾನೂನು ತಂದು ಜೀತವನ್ನೇನೋ ಮಟ್ಟ ಹಾಕಿವೆ. ಆದರೆ ಮುಸಲ್ಮಾನರಲ್ಲಿ ಜಾತಿ ಇನ್ನೂ ಹಾಗೆಯೇ ಉಳಿದುಕೊಂಡಿದೆ’ ಎಂದಿದ್ದರು. ಒಂದು ರೀತಿಯಲ್ಲಿ ದಲಿತರ ಪಾಲಿಗೆ ಮಸೀಹ ಆಗಿ ಕಂಡುಬಂದ ಕಾಂಶಿರಾಮ್ ‘ಮುಸಲ್ಮಾನರ ಐವತ್ತಕ್ಕೂ ಹೆಚ್ಚು ನಾಯಕರನ್ನು ಭೇಟಿಯಾದ ಮೇಲೆ ಭ್ರಮನಿರಸನವಾಯ್ತು, ಏಕೆಂದರೆ ಮೇಲ್ವರ್ಗದ ಸೈಯ್ಯದ್, ಶೇಖ್, ಮುಘಲ್, ಪಠಾನ್‌ಗಳು ಕೆಳವರ್ಗದ ಅನ್ಸಾರಿ, ಧುನಿಯಾ, ಖುರೇಷಿಗಳನ್ನು ಮುಂದೆ ಬರಲು ಬಿಡಲಾರರು. ನಾನು ದಲಿತ ವರ್ಗದಿಂದ ಮತಾಂತರಗೊಂಡವರಿಗಾಗಿ ಇನ್ನುಮುಂದೆ ಕೆಲಸ ಮಾಡುವೆ’ ಎಂದಿದ್ದರು. ಮುಸಲ್ಮಾನರಲ್ಲಿರುವ ಮೇಲ್ವರ್ಗ, ಕೆಳವರ್ಗದ ಈ ಗೊಂದಲ ಇಂದು ನಿನ್ನೆಯದಲ್ಲ. ಅರಬ್ಬರು, ತುರ್ಕರು ಆಕ್ರಮಣಕಾರಿಗಳಾಗಿ ಬಂದು ಇಲ್ಲಿ ನೆಲೆಸಿದರಲ್ಲ, ಅವರು ಸಹಜವಾಗಿಯೇ ಮೂಲ ಇಸ್ಲಾಂ ನೆಲೆಯಿಂದ ಬಂದವರಾದ್ದರಿಂದ ತಮ್ಮನ್ನು ತಾವು ಅಪ್ಪಟ ಮುಸಲ್ಮಾನರೆಂದು ಕರೆದುಕೊಂಡರು. ಇಲ್ಲಿ ಮತಾಂತರಗೊಂಡವರೆಲ್ಲ ಅವರಿಗಿಂತ ಕೆಳವರ್ಗದವರಾದರು. ಇಲ್ಲಿಯೂ ಕೂಡ ಎರಡು ವರ್ಗಗಳು ನಿರ್ಮಾಣಗೊಂಡವು. ಮೇಲ್ವರ್ಗದಿಂದ ಮತಾಂತರಗೊಂಡವರು ತಮ್ಮದ್ದೇ ಬೇರೆ ಪಂಗಡವೆಂದುಕೊಂಡರೆ ದಲಿತರಿಂದ ಮತಾಂತರಗೊಂಡವರು ಅಲ್ಲಿಯೂ ಬಹಿಷ್ಕೃತರಾಗಿಯೇ ಉಳಿದರು. ವಿದೇಶದಿಂದ ಬಂದ ಮುಸಲ್ಮಾನರನ್ನು ಅಶ್ರಫ್‌ಗಳು ಎನ್ನಲಾಯ್ತು. ಪ್ರವಾದಿಯವರ ನೇರ ಪರಂಪರೆಗೆ ಸೇರಿದವರಿವರು ಎಂಬುದು ಅವರ ಹೆಗ್ಗಳಿಕೆ. ಸೈಯ್ಯದ್, ಸಿದ್ದಿಖಿ, ಫಾರುಖಿ, ಪಠಾನ್, ಶೇಖ್ ಇವರೆಲ್ಲ ಸತ್ಕುಲ ಪ್ರಸೂತರೆನಿಸಿದರು. ಇನ್ನು ಭಾರತದಲ್ಲಿ ಮೇಲ್ವರ್ಗದಿಂದ ಮತಾಂತರಗೊಂಡವರು ಅಜ್ಲಫ್ಗಳಾದರೆ ದಲಿತ ವರ್ಗಕ್ಕೆ ಸೇರಿದವರನ್ನು ಅರ್ಜಾಲ್‌ಗಳೆಂದು ಕರೆಯಲಾಯ್ತು. ಇಷ್ಟಕ್ಕೇ ಮುಗಿಯದೇ ಇವರುಗಳಲ್ಲೂ ಅನೇಕ ಬಿರಾದರಿಗಳನ್ನು ಗುರುತಿಸಲಾಯ್ತು. ಈ ಬಿರಾದರಿಗಳು ಥೇಟು ನಮ್ಮಲ್ಲಿನ ಜಾತಿಗಳಿದ್ದಂತೆ. ನೇಕಾರರು ಅನ್ಸಾರಿಗಳಾದರೆ, ಕಟುಕರು ಖುರೇಷಿಗಳೆನಿಸಿದರು, ಜಾಡಮಾಲಿಗಳನ್ನು ಹಲಾಲ್‌ಕೋರರೆನ್ನಲಾಯ್ತು. ಹಿಂದೂಧರ್ಮದಿಂದ ಇಸ್ಲಾಂ ಸ್ವೀಕಾರ ಮಾಡಿದ್ದರಷ್ಟೆ. ಆದರೆ ಇಲ್ಲಿಯೂ ವೃತ್ತಿ ಆಧಾರಿತ ಜಾತಿ ಮುಂದುವರೆಯಿತು. ಅಜ್ಲಫ್‌ಗಳು ಅರ್ಜಾಲ್‌ಗಳು ಸೇರಿದರೆ ಈ ದೇಶದ ಶೇಕಡಾ 85ರಷ್ಟು ಮುಸ್ಲೀಂ ಜನಸಂಖ್ಯೆ. ಅಶ್ರಫ್‌ಗಳು ಕೇವಲ 15ರಷ್ಟು ಮಾತ್ರ. ಇಷ್ಟೇ ಇರುವ ಈ ಅಶ್ರಫ್‌ಗಳು ಶೇಕಡಾ 85ರಷ್ಟಿರುವ ಅಜ್ಲಫ್ ಮತ್ತು ಅರ್ಜಾಲ್‌ಗಳನ್ನು, ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪಸ್ಮಂಡಾಗಳನ್ನು ಶತಶತಮಾನಗಳಿಂದಲೂ ತಮ್ಮ ಅಂಕೆಯಲ್ಲಿಟ್ಟುಕೊಂಡೇ ಬಂದಿದ್ದಾರೆ. ಬಿಜೆಪಿ ತನ್ನ ಸಭೆಯಲ್ಲಿ ಈ 85 ಪ್ರತಿಶತ ಪಸ್ಮಂಡಾಗಳ ಕುರಿತಂತೆಯೇ ಚರ್ಚೆ ನಡೆಸಿದ್ದು. ಇಷ್ಟಕ್ಕೂ ಪಸ್ಮಂಡಾ ಪರ್ಷಿಯನ್ ಪದವಾಗಿದ್ದು ಹಿಂದುಳಿದವರು ಎಂಬುದೇ ಅದರ ಅರ್ಥ. ಪಸ್ಮಂಡಾಗಳಲ್ಲಿ ಕೆಲವರು ತಮ್ಮೊಳಗೆ ವಿವಾಹ ಸಂಬಂಧವನ್ನಿಟ್ಟುಕೊಂಡಿದ್ದಾರೆ. ಅತ್ತ ಅಶ್ರಫ್‌ಗಳಲ್ಲೂ ಅವರೊಳಗೇ ವಿವಾಹ ಸಂಬಂಧಗಳು ನಡೆಯುತ್ತವೆ. ಆದರೆ ಇವರೀರ್ವರ ನಡುವೆ ಸಂಬಂಧಗಳೇರ್ಪಡುವುದು ಹೆಚ್ಚು-ಕಡಿಮೆ ಅಸಾಧ್ಯ. ಇಸ್ಲಾಂನಲ್ಲಿ ಕುಫು ಎಂದರೆ ಮದುವೆಯಾಗಲು ಇರುವ ಸಮಾನ ನಿಯಮಗಳ ಕಂತೆ. ಇದರ ಪ್ರಕಾರ ಮದುವೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇರುವವರ ನಡುವೆಯೇ ಆಗಬೇಕು. ಮನೆತನ, ವಂಶಗಳು ಸಮಕ್ಕಿರಬೇಕು. ಅಂದರೆ ಸೈಯ್ಯದ್ ವಂಶಕ್ಕೆ ಸೇರಿದವ ಸಿದ್ಧಿಖಿ, ಫಾರುಖಿ ಇಂಥವರನ್ನು ಮಾತ್ರ ಮದುವೆಯಾಗಬಹುದು. ಮುಘಲ್, ಪಠಾನರೂ ಕೂಡ ಕೆಳವರ್ಗದವರಾಗುತ್ತಾರೆ. ಸಮಾನ ಮನೆತನ ಎಂದರೆ ಜಾತಿಯ ಸಮಾನತೆಯ ಕುರಿತಂತೆಯೇ ಅವರು ಮಾತನಾಡೋದು. ಹೀಗಾಗಿ ಮೇಲ್ಜಾತಿಯವರು ಕೆಳಜಾತಿಯವರನ್ನು ಮದುವೆಯಾಗುವಂತೆಯೇ ಇಲ್ಲ. ಅಲ್ಲಲ್ಲಿ ಅಪವಾದಗಳು ಕಾಣಬಹುದೇನೋ ಆದರೆ ಸಾಮಾನ್ಯವಾಗಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಕುಫು ಪ್ರಕಾರ ಮದುವೆಯಾಗುವ ಗಂಡು-ಹೆಣ್ಣು ಇಬ್ಬರೂ ಇಸ್ಲಾಮಿಗೆ ಮತಾಂತರಗೊಂಡಿರಲೇಬೇಕು. ಅದರಲ್ಲೂ ಆಗತಾನೇ ಮತಾಂತರಗೊಂಡ ಹುಡುಗಿಗಿಂತ ತಂದೆ-ತಾಯಿಯೂ ಮುಸಲ್ಮಾನರಾದವರೇ ಶ್ರೇಷ್ಠ ಎಂಬ ನಿಯಮವೂ ಇದೆ. ಇದನ್ನು ವಿಸ್ತಾರಗೊಳಿಸುವ ಅಗತ್ಯವಿಲ್ಲವೆನಿಸುತ್ತದೆ. ಇನ್ನು ಸಂಪತ್ತು ಮತ್ತು ವೃತ್ತಿಗಳಲ್ಲೂ ಈ ನಿಯಮಗಳು ಸಮಾನತೆಯನ್ನು ಬಯಸುತ್ತವೆ!

ಈ ರೀತಿಯ ಅಸಮಾನತೆಯನ್ನು ಮುಸಲ್ಮಾನರು ವಿರೋಧಿಸಲೇ ಇಲ್ಲವೇ? ಖಂಡಿತ ವಿರೋಧಿಸಿದ್ದಾರೆ. ಸುಮಾರು ನೂರು ವರ್ಷಗಳ ಹಿಂದೆ 1914ರಲ್ಲಿ ಕಲ್ಕತ್ತಾದಲ್ಲಿ ಫಲಾ-ಉಲ್ ಮೊಮಿನೀನ್ ಚಳವಳಿ ಆರಂಭವಾಗಿತ್ತು. ಇದರ ಆಧಾರದ ಮೇಲೆಯೇ 1926ರಲ್ಲಿ ಕಲ್ಕತ್ತಾದಲ್ಲಿ ಅಖಿಲ ಭಾರತ ಮೊಮಿನ್ ಸಮ್ಮೇಳನ ನಡೆದಿತ್ತು. ಅಶ್ರಫ್‌ಗಳಿಗೆ ಇದರಿಂದ ಬೆಂಕಿ ಬಿದ್ದಂತಾಯ್ತು. ಅವರು ಮುಸ್ಲೀಂ ಲೀಗ್ ಅನ್ನು ಕಟ್ಟಿಕೊಂಡರು. ಇವರ ಪಾಕಿಸ್ತಾನ ನೀತಿಯ ವಿರುದ್ಧ ಪಸ್ಮಂಡಾಗಳು ಸೇರಿಕೊಂಡು 1940ರ ಮೇ ತಿಂಗಳಲ್ಲಿ ದೆಹಲಿಯಲ್ಲಿ ನಲವತ್ತು ಸಾವಿರ ಜನ ಬೀದಿಗಿಳಿದರು. ಇವರೆಲ್ಲರೂ ಅನ್ಸಾರಿ ಬಿರಾದರಿಗೆ ಸೇರಿದವರಾಗಿದ್ದರು. ಮೇಲ್ವರ್ಗದವರಿಗೆ ತಮ್ಮ ಮನಸ್ಸಿಗೆ ಬಂದಂತೆ ಪಸ್ಮಂಡಾಗಳನ್ನು ದುಡಿಸಿಕೊಳ್ಳುವ ಚಾಕಚಕ್ಯತೆ ಇತ್ತು. ಮತದ ಅಫೀಮು ಕುಡಿಸಿ ಕಾಂಗ್ರೆಸ್ಸಿನ ವಿರುದ್ಧ ಭಡಕಾಯಿಸಿ ಕೊನೆಗೂ ಪ್ರತ್ಯೇಕ ರಾಷ್ಟ್ರವನ್ನು ತಾವು ಪಡೆದುಕೊಂಡೇ ಬಿಟ್ಟರು. ಮತ್ತೆ ಪಸ್ಮಂಡಾಗಳು ಇಲ್ಲಿಯೇ ಉಳಿದರು. ಅವರ ಶೋಷಣೆ ಮಾಡಲೆಂದೇ ಒಂದಷ್ಟು ಮೇಲ್ವರ್ಗದ ಮುಸಲ್ಮಾನರು ಇಲ್ಲಿಯೇ ಇದ್ದರು. ಈ ಹಿನ್ನೆಲೆಯಲಿಯೇ 1955ರಲ್ಲಿ ಕಾಕಾ ಸಾಹೇಬ್ ಕಾಳೇಕರ್ ಕಮಿಟಿ ಮುಸಲ್ಮಾನರಲ್ಲಿ ದಲಿತ ಶೋಷಣೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಒಪ್ಪಿಕೊಂಡಿತ್ತು. ಈ ಪರಿಸ್ಥಿತಿ ಹಿಂದೂಗಳಲ್ಲಿತ್ತಾದರೂ ಅವರು ಹೋರಾಟ ಮಾಡಿ ಹಿಂದುಳಿದ ವರ್ಗಕ್ಕೆ ವಿಶೇಷ ಸವಲತ್ತನ್ನು ಪಡೆದುಕೊಂಡಿದ್ದರು. ಆದರೆ ಮುಸಲ್ಮಾನರಲ್ಲಿ ಅಶ್ರಫ್‌ಗಳು ಅಲ್ಪಸಂಖ್ಯಾತ ಎಂಬ ಒಂದೇ ಹಣೆಪಟ್ಟಿಯನ್ನು ಮುಂದಿಟ್ಟುಕೊಂಡು ಹಿಂದುಳಿದವರನ್ನು ತುಳಿದು ತಾವು ಎಲ್ಲ ಸೌಲಭ್ಯವನ್ನು ಪಡೆದುಕೊಂಡರು. 1980ರಲ್ಲಿ ರೂಪುಗೊಂಡ ಮಂಡಲ್ ಕಮಿಷನ್ ಶೇಕಡಾ 90ರಷ್ಟು ಮುಸಲ್ಮಾನರು ಹಿಂದುಳಿದವರಾಗಿದ್ದು ಕನಿಷ್ಠ 82 ಜಾತಿಗಳಿವೆ ಎಂಬುದನ್ನು ಗುರುತಿಸಿತ್ತು. ಇಂದಿರಾಗಾಂಧಿ ಗೋಪಾಲ್ ಸಿಂಗ್ ಕಮಿಷನ್ ರಚನೆ ಮಾಡಿದರು. ಎಲ್ಲ ವರದಿಗಳನ್ನು ಮುಂದಿಟ್ಟುಕೊಂಡರೂ ಯಾವ ಸರ್ಕಾರವೂ ಸ್ಪಷ್ಟ ನಿರ್ಣಯ ಕೊಡಲು ಸೋಲುತ್ತಿತ್ತು ಏಕೆಂದರೆ ಅಧಿಕಾರದ ಮುಖ್ಯಭೂಮಿಕೆಯಲ್ಲಿದ್ದಿದ್ದು ಮೇಲ್ವರ್ಗದ ಮುಸಲ್ಮಾನರೇ! ಈ ಕುದಿ ಕೆಳವರ್ಗದ ಮುಸಲ್ಮಾನರನ್ನು ಆವರಿಸಿಕೊಂಡಿತ್ತು. ಮಹಾರಾಷ್ಟ್ರದಲ್ಲಿ ಹಿಂದುಳಿದ ಮುಸಲ್ಮಾನರ ಸಂಘಟನೆ ಆರಂಭಗೊಂಡಿತಲ್ಲದೇ ಅವರು ಧರ್ಮವನ್ನು ಪಕ್ಕಕ್ಕಿಟ್ಟು ಶಿಕ್ಷಣ, ಆರ್ಥಿಕ ಮತ್ತು ರಾಜಕೀಯ ಶಕ್ತಿಯಾಗಿ ಬೆಳೆಯುವತ್ತ ಗಮನ ನೀಡಲಾರಂಭಿಸಿದರು. ಇಸ್ಲಾಮಿನ ಇತಿಹಾಸದಲ್ಲಿ ಧರ್ಮವನ್ನು ಬದಿಗಿಟ್ಟು ವಿಕಾಸದ ಕುರಿತಂತೆ ಆಲೋಚನೆ ಮಾಡಿದ ಬಹುಶಃ ಮೊದಲ ದಾಖಲೆ ಇದು. ಉತ್ತರ ಪ್ರದೇಶ, ಬಂಗಾಳಗಳಲ್ಲೂ ಇದು ವೇಗ ಪಡೆದುಕೊಂಡಿತು. ಆದರೆ ನಿಜವಾದ ಹೋರಾಟದ ಭೂಮಿಕೆ ರೂಪುಗೊಂಡಿದ್ದು ಬಿಹಾರದಲ್ಲಿ. ಇಲ್ಲಿ ಶೇಕಡಾ 16.5ರಷ್ಟು ಮುಸಲ್ಮಾನರೇ ಇದ್ದರು. ಅವರಲ್ಲಿ ಶೇಕಡಾ 90ರಷ್ಟು ಕೆಳವರ್ಗದ ಮುಸಲ್ಮಾನರು. ಆದರೆ ಮುಸ್ಲೀಂ ರಾಜಕೀಯ ನಾಯಕರೆಲ್ಲ ಮೇಲ್ವರ್ಗದ ಅಶ್ರಫ್ಗಳೇ ಆಗಿದ್ದರು. 1998ರಲ್ಲಿ ಅಖಿಲ ಭಾರತ ಪಸ್ಮಂಡಾ ಮುಸ್ಲೀಂ ಸಂಘಟನೆ ಆರಂಭಗೊಂಡಿತು. 2002ರಲ್ಲಿ ಪಸ್ಮಂಡಾ ಜಾಗೃತಗೊಳಿಸಿ-ದೇಶವುಳಿಸಿ ಆಂದೋಲನ ಆರಂಭವಾಯ್ತು. 2004ರಲ್ಲಿ ದೆಹಲಿಯಲ್ಲಿ ದಲಿತ-ಮುಸ್ಲೀಂ ಮಹಾ ಪಂಚಾಯತ್ ನಡೆಯಿತು. ಇಲ್ಲಿ ಚರ್ಚೆಗೆ ಬಂದ ಸಂಗತಿಯ ಕುರಿತಂತೆ ಕೆ. ಎ ಅನ್ಸಾರಿ ತಮ್ಮ ಡಿಬೆಟಿಂಗ್ ಮುಸ್ಲೀಂ ರಿಸರ್ವೇಶನ್ ಪುಸ್ತಕದಲ್ಲಿ ವಿಸ್ತಾರವಾದ ಚರ್ಚೆ ಮಾಡಿದ್ದಾರೆ. ಮೇಲ್ವರ್ಗದ ಮುಸಲ್ಮಾನರು ದಲಿತ ಮುಸ್ಲೀಮರನ್ನು ಧುಲಿಯಾ, ಜುಲಾಹ, ಕಲಾಲ್, ಕಸಾಯಿ ಅಂತೆಲ್ಲ ಅವಹೇಳನಕಾರಿ ಜಾತಿ ಸೂಚಕ ಪದಗಳಿಂದ ನಿಂದಿಸುತ್ತಾರೆ ಮತ್ತು ಪಸ್ಮಂಡಾಗಳನ್ನು ನಮಾಜಿಗೆ ಮುಂದಿನ ಸಾಲಿನಲ್ಲಿ ಕೂರಲು ಬಿಡುವುದಿಲ್ಲ ಎಂದೆಲ್ಲಾ ಹೇಳಲಾಗಿತ್ತು.

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರಚನೆಯಾದ ಸಾಚಾರ್ ಕಮಿಟಿಯೂ ಮುಸಲ್ಮಾನರಲ್ಲಿನ ದಲಿತರ ಸ್ಥಿತಿಗತಿಯ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿತ್ತು. ಗಮನಿಸಬೇಕಾದ ಮಹತ್ವದ ಸಂಗತಿ ಎಂದರೆ ಈ ಎಲ್ಲ ಪಸ್ಮಂಡಾಗಳ ಹೋರಾಟದ ಮೂಲ ನೆಲೆಕಟ್ಟು ಸಾಮಾಜಿಕ ನ್ಯಾಯದ ಪರವಾದ ಮತ್ತು ಅಸಮಾನತೆಯ ವಿರುದ್ಧದ ಚಿಂತನೆಯಾಗಿತ್ತು. ಅವರೆಲ್ಲಿಯೂ ಅಲ್ಪಸಂಖ್ಯಾತ ಎನ್ನುವ ಪಟ್ಟವನ್ನು ಬಯಸಲಿಲ್ಲ. ಅಲಿ ಅನ್ವರ್ ರಂತೂ ತಮ್ಮ ಭಾಷಣವೊಂದರಲ್ಲಿ ‘ಪಸ್ಮಂಡಾಗಳು ತಮ್ಮ ಗುರುತನ್ನು ಮರಳಿ ಪಡೆಯುವ ಕಾಲ ಬಂದಿದೆ. ಇಷ್ಟೂ ದಿನಗಳ ಕಾಲ ಅಲ್ಪಸಂಖ್ಯಾತ ಎನ್ನುವ ಹೆಸರಿನಡಿ ಪಸ್ಮಂಡಾಗಳು ಕಳೆದುಹೋಗಿದ್ದರು. ಇನ್ನು ಈ ಸುಳ್ಳು ಪದದ ಕುರಿತಂತೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅಲ್ಪಸಂಖ್ಯಾತ ಎನ್ನುವ ಹೆಸರಿನಲ್ಲಿ ಕೆಲವರು ನಮ್ಮನ್ನು ಭಯಭೀತಗೊಳಿಸುತ್ತಾರೆ. ಮತ್ತೂ ಕೆಲವರು ನಮ್ಮಿಂದ ನಮ್ಮ ಹಕ್ಕನ್ನು ಕಸಿಯುತ್ತಾರೆ. ನಿಜ ಹೇಳಬೇಕೆಂದರೆ ಇವರ ಸಮಾಜದಲ್ಲಿ ನಾವು ಅಲ್ಪಸಂಖ್ಯಾತರಲ್ಲ, ನಾವೇ ಬಹುಸಂಖ್ಯಾತರು’ ಎಂದಿದ್ದರು. 2005ರಲ್ಲಿ ಈ ಪಸ್ಮಂಡಾ ಹೋರಾಟ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತು. ನಮ್ಮ ವೋಟು ನಿಮ್ಮ ಫತ್ವಾ ಇನ್ನು ನಡೆಯುವುದಿಲ್ಲ ಎಂಬ ಘೋಷಣೆ ಬಿಹಾರದುದ್ದಕ್ಕೂ ಮೊಳಗಿತ್ತು. ಆದರೇನು? ಅಶ್ರಫ್‌ಗಳಿಗೆ ತಮ್ಮ ತಾಳಕ್ಕೆ ತಕ್ಕಂತೆ ಎಲ್ಲರನ್ನೂ ಕುಣಿಸುವ ಕಲೆ ಗೊತ್ತಿದೆ. ಹೀಗಾಗಿಯೇ ಇಷ್ಟೂ ಹೋರಾಟಗಳ ನಂತರವೂ ದಲಿತ ಮುಸಲ್ಮಾನರ ಬದುಕಿನಲ್ಲಿ ಬದಲಾವಣೆ ಕಾಣಲಿಲ್ಲ. ಖಾಲಿದ್ ಅನೀಜ್ ಅನ್ಸಾರಿ ಪ್ರಿಂಟ್ ‌ಗೆ ಬರೆದ ಲೇಖನದಲ್ಲಿ 2019ರ ಲೋಕಸಭಾ ಚುನಾವಣೆಗೆ 7500 ಜನ ಸ್ಪರ್ಧಿಗಳಾಗಿದ್ದರೆ, ಅದರಲ್ಲಿ 400 ಜನ ಮುಸ್ಲೀಮರು, 340 ಜನ ಅಶ್ರಫ್‌ಗಳೇ ಆಗಿದ್ದರು. 60 ಜನ ಮಾತ್ರ ಪಸ್ಮಂಡಾ. ಭಾರತದ ಜನಸಂಖ್ಯೆಯಲ್ಲಿ 14 ಪ್ರತಿಶತದಷ್ಟು ಮುಸಲ್ಮಾನರಿದ್ದಾರಲ್ಲ, ಅದರಲ್ಲಿ ಶೇಕಡಾ 2ರಷ್ಟು ಮಾತ್ರ ಪಸ್ಮಂಡಾಗಳು. ಅವರಿಗೆ ಸುಮಾರು 5 ಪ್ರತಿಶತದಷ್ಟು ಚುನಾವಣೆಯಲ್ಲಿ ಸೀಟುಗಳು ದಕ್ಕಿದ್ದವು. ಪಸ್ಮಂಡಾಗಳು ಶೇಕಡಾ 12ರಷ್ಟು ಜನಸಂಖ್ಯೆ ಹೊಂದಿದ್ದರೂ ಅವರಿಗೆ ಒಂದು ಪ್ರತಿಶತದಷ್ಟೂ ಸೀಟು ದಕ್ಕಿರಲಿಲ್ಲ! ಉತ್ತರ ಪ್ರದೇಶಲ್ಲಂತೂ ಕಥೆ ಭಿನ್ನ. ಯೋಗಿ ಆದಿತ್ಯನಾಥರು ಚುನಾವಣೆ ಗೆದ್ದನಂತರ ಮೊಹಮ್ಮದ್ ಬಾಬರ್ ಅಲಿ ಸಂಭ್ರಮಿಸಿದ್ದ ಎನ್ನುವ ಕಾರಣಕ್ಕೆ ಅವನ ಹತ್ಯೆಯನ್ನೇ ಮಾಡಿಬಿಟ್ಟಿದ್ದರು. ಅವನು ಮಾಡಿದ ತಪ್ಪೇನು ಗೊತ್ತೇ? ಮೇಲ್ವರ್ಗದ ಅಶ್ರಫ್‌ಗಳು ಅಖಿಲೇಶ್‌ಗೆ ಮತ ಚಲಾಯಿಸಿರೆಂದು ಹೊರಡಿಸಿದ್ದ ಫತ್ವಾವನ್ನು ಆತ ಧಿಕ್ಕರಿಸಿದ್ದ ಅಷ್ಟೇ. ನೂಪುರ್ ಶರ್ಮಾಳನ್ನು ಬೆಂಬಲಿಸಿದ ಮುಸಲ್ಮಾನ ಹುಡುಗನೊಬ್ಬ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಏಕೆ ಗೊತ್ತೇ? ಅವನ ಹೆಸರು ಸಾದ್ ಅನ್ಸಾರಿ. ಅಲಿಘಡ ಮುಸ್ಲೀಂ ಯುನಿವರ್ಸಿಟಿ ಇರಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾವೇ ಇರಲಿ, ಹಮ್‌ದರ್ದ್ ವಿಶ್ವವಿದ್ಯಾಲಯ, ಅಂಜುಮನ್-ಎ-ಇಸ್ಲಾಂ, ಮುಸ್ಲೀಂ ಎಜುಕೇಷನ್ ಸೊಸೈಟಿ ಇವೆಲ್ಲವೂ ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯ ಸವಲತ್ತುಗಳನ್ನು ಪಡೆದುಕೊಂಡೇ ಬೆಳೆದು ನಿಂತಂತವು. ಹಿಡಿತವೆಲ್ಲ ಮೇಲ್ವರ್ಗದವರದ್ದೇ, ಇಲ್ಲೆಲ್ಲೂ ಪಸ್ಮಂಡಾಗಳಿಗೆ ಮಿಸಲಾತಿಯೂ ಇಲ್ಲ. ಪರಿಣಾಮ ಈ ಪಸ್ಮಂಡಾಗಳು ಉಚಿತ ಶಿಕ್ಷಣ ನೀಡುವ ಮದರಸಾಗಳಿಗೇ ತಮ್ಮ ಮಕ್ಕಳನ್ನು ಕಳಿಸಬೇಕು. ಅದರರ್ಥ ಮೇಲ್ವರ್ಗದವರು ಚೆನ್ನಾಗಿ ಕಲಿತು ವಿದೇಶಕ್ಕೆ ಹೋಗಲಿ, ಪಸ್ಮಂಡಾಗಳು ಆಧುನಿಕ ಶಿಕ್ಷಣವನ್ನು ಬಿಟ್ಟು ಮದರಸಾ ಶಿಕ್ಷಣ ಪಡೆದು ಕಟ್ಟರ್‌ಗಳಾಗಿ ಭಾರತ ವಿರೋಧಿಯಾಗಲಿ ಅಂತ. ಆಲಂ ಮತ್ತು ಕುಮಾರ್ 2019ರಲ್ಲಿ ಅಲಿಘಡ್ ಮುಸ್ಲೀಂ ಯುನಿವರ್ಸಿಟಿಯಲ್ಲಿ ಒಂದು ಅಧ್ಯಯನ ನಡೆಸಿ ಪಾಠ ಮಾಡುವ ಸುಮಾರು 90ರಷ್ಟು ಶಿಕ್ಷಕರು ಮೇಲ್ವರ್ಗದವರು ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದರು. ಆದರೇನು? ಪಸ್ಮಂಡಾಗಳ ಪರವಾಗಿ ಮಾತನಾಡಲು ಯಾರೂ ಮುಂದೆ ಬರಲಿಲ್ಲ. ಹಿಂದೂ-ಮುಸ್ಲೀಂ ಗಲಾಟೆಗಳು ನಡೆದಾಗ ಸಾಯುವುದು ಅದೇ ದಾದ್ರಿಯ ಅಖಲಾಖ್, ಹಾಪುರ್ನ ಕಾಸಿಂ ಖುರೇಷಿ, ರಾಜಸ್ಥಾನದ ರಾಖಸ್‌ ಖಾನ್. ಇವರ ಶವಯಾತ್ರೆ ಮಾಡಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವುದು ಮಾತ್ರ ಮೇಲ್ವರ್ಗದವರು. ಹಿಂದೂಗಳಲ್ಲಿ ಶೋಷಣೆಗೊಳಗಾದವರಿಗೆ ಮೀಸಲಾತಿಯಾದರೂ ಸಿಕ್ಕಿದೆ. ಆದರೆ ಮುಸಲ್ಮಾನರಲ್ಲಿ ಇಂದಿಗೂ ಶೋಷಣೆಗೊಳಗಾಗುತ್ತಿದ್ದರೂ ಮೀಸಲಾತಿ ಇರಲಿ, ಕಡೆಪಕ್ಷ ಆತ್ಮಗೌರವವೂ ಇಲ್ಲ!

ಆರ್‌ಎಸ್‌ಎಸ್‌ ನ ಆಳ ನೋಡಲು ಹೋಗಿ ಹಳ್ಳಕ್ಕೆ ಬಿದ್ದವರು!

ಆರ್‌ಎಸ್‌ಎಸ್‌ ನ ಆಳ ನೋಡಲು ಹೋಗಿ ಹಳ್ಳಕ್ಕೆ ಬಿದ್ದವರು!

ದೇವೇಗೌಡರ ಪಕ್ಷದಲ್ಲಿ ಸುದೀರ್ಘ ಕಾಲದಿಂದ ಇದ್ದು ಅನೇಕ ಹುದ್ದೆಗಳನ್ನು ದಾಟಿ ಬಂದವರಿಗೆ ದೇವೇಗೌಡರ ಆಳ ಮತ್ತು ಅಗಲವನ್ನು ಅರಿಯಲಾಗಲಿಲ್ಲ. ನರೇಂದ್ರಮೋದಿಯ ಜೊತೆಗಿದ್ದವರೇ ಅವರ ಮುಂದಿನ ನಿರ್ಣಯಗಳು ಏನಿರಬಹುದೆಂದು ಅಂದಾಜಿಸುವಲ್ಲಿ ಸೋಲುತ್ತಾರೆ. ಮಂತ್ರಿಮಂಡಲ ರಚನೆಯಾಗುವ ಮುನ್ನ ಯಾರಿಗೆ, ಯಾವ ಖಾತೆ ಎಂದು ತಾವೇ ನಿರ್ಣಯಿಸುತ್ತಿದ್ದ ದೆಹಲಿಯ ಪತ್ರಕರ್ತರು ರಾಷ್ಟ್ರಪತಿಯ ಹೆಸರು ಏನಾಗಿರಬಹುದೆಂದು ಊಹಿಸುತ್ತಾ ಕುಳಿತುಕೊಳ್ಳುವಂತೆ ಮೋದಿ ಮಾಡಿಬಿಟ್ಟಿದ್ದಾರೆ. ಈ ಹಿಂದೆ ಇಂದಿರಾಗಾಂಧಿಯ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆಕೆ ಜೊತೆಗಿದ್ದವರನ್ನು ನಂಬುತ್ತಿರಲಿಲ್ಲ ಮತ್ತು ಆಕೆಯ ಒಡನಾಡಿಗಳಿಗೂ ಆಕೆಯ ಅಂತರಂಗದ ಅರಿವಿರುತ್ತಿರಲಿಲ್ಲ. ವ್ಯಕ್ತಿಯೊಬ್ಬರ ಕಥೆಯೇ ಹೀಗಿರುವಾಗ ಇನ್ನು ಸಂಘಟನೆಯ ಪರಿಸ್ಥಿತಿ ಹೇಗಿರಬೇಡ? ಆರ್‌ಎಸ್‌ಎಸ್‌ ನ ಆಳ-ಅಗಲಗಳ ಕುರಿತು ದೇವನೂರು ಮಹಾದೇವರು ಬರೆದಿರುವ ಪುಸ್ತಕ ನೋಡಿದಾಗ ಹೀಗನ್ನಿಸಿತು. ಸಂಘದ ಪಡಸಾಲೆಗಳಲ್ಲಿ ಎಂದೂ ಕಾಣಿಸಿಕೊಳ್ಳದ, ಅದನ್ನು ಅರಿಯಲು ಪ್ರಾಮಾಣಿಕ ಪ್ರಯತ್ನವನ್ನೂ ಮಾಡದ ವ್ಯಕ್ತಿಯೊಬ್ಬರು ಸಂಶೋಧನಾ ಕೃತಿ ರಚಿಸಿದರೆ ಹೇಗಿರಬಹುದೆಂಬುದಕ್ಕೆ ಇದೇ ಉದಾಹರಣೆ. ನರೇಂದ್ರಮೋದಿಯವರ ಮೇಲಿನ ತಮ್ಮ ಆಕ್ರೋಶವನ್ನು, ಅವರು ಮತ್ತೆ-ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ, ಮುಂದೆಯೂ ಹಿಡಿಯಬಹುದಾಗಿರುವ ಪರಿಸ್ಥಿತಿಯನ್ನು ಕಂಡು ಒಳಗೊಳಗೇ ಕುದಿ ಹುಟ್ಟಿದರೆ ಹೊರಹೊಮ್ಮುವ ಲಾವಾದಲ್ಲಿ ಆರ್ ಎಸ್ ಎಸ್ ವಾಸನೆಯೇ ತುಂಬಿರುತ್ತದೆ ಎನ್ನುವುದಕ್ಕೆ ದೇವನೂರರೇ ಪಕ್ಕಾ ನಿದರ್ಶನ. ಹಿಂದೆ ಇಂಥದ್ದೇ ಆರ್ ಎಸ್ ಎಸ್ ವಾಸನೆ ಸಿದ್ದರಾಮಯ್ಯನವರ ಮೂಗಿಗೂ ಬಡಿದಿತ್ತು ಎನ್ನುವುದು ಇಲ್ಲಿ ನೆನಪಿಸಿಕೊಳ್ಳಬೇಕಷ್ಟೇ!

ಸಂಘಟನೆಯ ಆಳ ಅರಿವಾಗಬೇಕೆಂದರೆ ಅದರ ವಿಶೇಷವಾದ ಅಧ್ಯಯನ ಬೇಕು. ಅದರಲ್ಲೂ ನೂರು ವರ್ಷ ಕಾಣುತ್ತಿರುವ ಸಂಘಟನೆಯೊಂದನ್ನು ಅರಿಯಲು ಎಷ್ಟು ಅಧ್ಯಯನ ಮಾಡಿದರೂ ಕಡಿಮೆಯೇ. ಇನ್ನು ವಿಸ್ತಾರದ ಅರಿವಾಗಬೇಕೆಂದರೆ ಅದರೊಟ್ಟಿಗೆ ಒಡನಾಡಿರಬೇಕು. ಆಗ ಮಾತ್ರ ಅದರ ಬಾಹುಗಳು ಚಾಚಿರುವ ರೀತಿಯನ್ನು ಅಂದಾಜಿಸಿಕೊಳ್ಳಬಹುದು. ಹಾಗಲ್ಲವಾದರೆ, ಅಲ್ಲಿ-ಇಲ್ಲಿ ಸಿಕ್ಕ ಒಂದಷ್ಟು ಸಾಲುಗಳನ್ನು ತುಂಡರಿಸಿ ಮೆತ್ತಿ ಒಂದು ಪುಸ್ತಕವನ್ನು ರಚಿಸಿಬಿಡಬಹುದು. ದೇವನೂರರ ಆರ್‌ಎಸ್‌ಎಸ್ ಕುರಿತ ಅಜ್ಞಾನದ ಮಟ್ಟ ಎಷ್ಟಿದೆ ಎಂದರೆ ಆರ್‌ಎಸ್‌ಎಸ್‌ ನ ಮರಿ ಸಂಘಟನೆಗಳ ಕುರಿತಂತೆ ಹೇಳುತ್ತಾ ಶ್ರೀರಾಮ ಸೇನೆಯನ್ನು ಅದರ ಒಂದು ಭಾಗ ಎನ್ನುತ್ತಾರೆ, ಬಜರಂಗ ದಳವನ್ನು ಅಂಗವೆಂದು ಹೇಳುತ್ತಾ ಸಂಘವೇ ತಿರಸ್ಕರಿಸುತ್ತದೆ ಎಂಬುದನ್ನೂ ಹೇಳುತ್ತಾರೆ. ಅವರೊಳಗೆ ಈ ಕುರಿತ ಗೊಂದಲ ಮಾಯಲೇ ಇಲ್ಲ. ಸಂಘದ ಪ್ರಚಾರಕರಾಗಿದ್ದು ಅಭಿಪ್ರಾಯ ಭೇದಗಳಿಂದಾಗಿ ಹೊರಬಂದ ಪ್ರಮೋದ್ ಮುತಾಲಿಕರು ಶ್ರೀರಾಮ ಸೇನೆಯನ್ನು ಸ್ವತಂತ್ರ ಸಂಘಟನೆಯಾಗಿಯೇ ಬೆಳೆಸಿದ್ದು. ಈಗಲೂ ಸಂಘದೊಂದಿಗಿರುವ ತಮ್ಮ ವೈಚಾರಿಕ ಭಿನ್ನತೆಗಳ ಕುರಿತಂತೆ ಅವರು ಮುಲಾಜಿಲ್ಲದೇ ಮಾತನಾಡುತ್ತಾರೆ. ಮೂಲ ಕಾಂಗ್ರೆಸ್ಸಿನಿಂದ ಬೇರ್ಪಟ್ಟು ನಿರ್ಮಾಣಗೊಂಡ ಇಂದಿರಾ ಕಾಂಗ್ರೆಸ್ಸು ಮೂಲವನ್ನೇ ನುಂಗಿ ನೀರ್ಕುಡಿದುಬಿಟ್ಟಿತ್ತಲ್ಲ ಹಾಗೆಯೇ ಇಲ್ಲೂ ಆಗಬಹುದೆಂಬ ಕಾತರತೆ ಅವರಿಗಿರಬಹುದು. ಆದರೆ ಸಂಘದ ಕಾರ್ಯಶೈಲಿ ಭಿನ್ನ. ಈ ವಿಸ್ತಾರದ ಸಾಮಾನ್ಯ ಜ್ಞಾನವೂ ಈ ಕೃತಿಯಲ್ಲಿ ಕಂಡುಬರುವುದಿಲ್ಲ. ಇನ್ನು ಸಂಘದ ಎರಡನೇ ಸರಸಂಘ ಚಾಲಕರಾದ ಗೋಳ್ವಲ್ಕರ್ ಅವರ ಚಿಂತನ ಗಂಗಾ ಪುಸ್ತಕದ ಅಲ್ಲಲ್ಲಿ ಹೆಕ್ಕಿರುವ ಭಾಗಗಳನ್ನು ಉಲ್ಲೇಖಿಸಿ ಅದನ್ನೇ ಸಂಘದ ಆಳವೆಂದು ಬಿಂಬಿಸಿರುವ ರೀತಿ ನೋಡಿದರೆ ಪತ್ರಿಕೆಯ ಸಂಪಾದಕರೊಬ್ಬರು ಈ ಪುಸ್ತಕವನ್ನು ‘ಶುದ್ಧ ಮಣ್ಣಂಗಟ್ಟಿ’ ಎಂದು ಹೇಳಿರುವುದು ಅಕ್ಷರಶಃ ಸರಿ ಎನಿಸುತ್ತದೆ!

ಸಂಘವನ್ನು ನಾಜಿಯ ಮತ್ತು ಫ್ಯಾಸಿಸ್ಟ್ ಸಿದ್ಧಾಂತದ ಪ್ರಚಾರಕರೆಂದು ಬಿಂಬಿಸುವ ಎಡಪಂಥೀಯರ ಹಠ ಇವತ್ತಿನಿಂದ ಶುರುವಾದದ್ದಲ್ಲ. ಜಗತ್ತಿನ ಜನರ ಆಕ್ರೋಶವನ್ನು ಸೆಳೆಯಬಲ್ಲ ಪದಗಳಿಗಾಗಿ ಅವರು ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಕೋಮುವಾದ, ಲಿಂಚಿಂಗ್, ಕೇಸರೀಕರಣ, ಕೇಸರಿ ಭಯೋತ್ಪಾದನೆ ಇವೆಲ್ಲವೂ ಇದೇ ರೀತಿಯ ಪರಿಕಲ್ಪನೆ ಹೊತ್ತು ಬಂದವುಗಳೇ. ಒಂದು ಪದವನ್ನು ಹಿಡಿದುಕೊಂಡು ಅವರು ಅದೆಷ್ಟು ಜೋತು ಬೀಳುತ್ತಾರೆಂದರೆ ವಿರೋಧಿಗಳು ಅನಿವಾರ್ಯವಾಗಿ ಅದನ್ನೇ ಹಿಡಿದು ನೇತಾಡಬೇಕಾದ ಪರಿಸ್ಥಿತಿಯನ್ನು ನಿರ್ಮಿಸುತ್ತಾರೆ. ಸಂಘವನ್ನು ಫ್ಯಾಸಿಸ್ಟ್ ಎಂದು ಕರೆಯುವುದೂ ಕೂಡ ಅದರ ಒಂದು ಭಾಗವೇ. ಪ್ರಜಾಪ್ರಭುತ್ವವನ್ನು ತೆಗೆದು ಹಾಕಿ ಸರ್ವಾಧಿಕಾರತ್ವವನ್ನು ತರುವ ಪ್ರಯತ್ನ ಫ್ಯಾಸಿಸಂನ ಚಿಂತನೆಯದ್ದು. ಹಾಗೆ ನೋಡಿದರೆ ಪ್ರಜಾಪ್ರಭುತ್ವಕ್ಕೆ ಪೂರಕವಾಗಿ ನಿಂತಿರುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ಭಾಜಪವನ್ನು ಸಂಘದ ಕಲ್ಪನೆಯ ಕೂಸು ಎಂದು ಭಾವಿಸುವುದಾದರೆ ಈ ಪಕ್ಷದಿಂದ ಆಯ್ಕೆಯಾದ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳೆಲ್ಲ ಒಂದೇ ಪರಿವಾರಕ್ಕೆ ಸೇರಿದವರು; ಒಂದೇ ಜಾತಿಗೆ ಸೇರಿದವರೆಂದೇನೂ ಇಲ್ಲವಲ್ಲ. ಭಾಜಪ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದವರೆಲ್ಲರೂ ಕೂಡ ಸಮಾಜ ಗೌರವಿಸುವಂತಹ ಶ್ರೇಷ್ಠ ವ್ಯಕ್ತಿಗಳೇ ಆಗಿದ್ದಾರಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಪದ್ಮ ಪ್ರಶಸ್ತಿಗಳು ಮಾರಾಟವಾಗುವ ಮತ್ತು ಋಣ ಸಂದಾಯದ ಪ್ರಶಸ್ತಿಗಳಾಗಿದ್ದಾಗ ಅದನ್ನು ಸಾಮಾನ್ಯರಲ್ಲಿ ಅಸಾಮಾನ್ಯರು ಪಡೆಯುವಂತೆ ವ್ಯವಸ್ಥೆ ರೂಪಿಸಿದ್ದು ಬಿಜೆಪಿಯೇ ಅಲ್ಲವೇನು? ದೇವನೂರರು ಮೂಲನಿವಾಸಿ, ವನವಾಸಿ ಈ ಪದಗಳ ಕುರಿತಂತೆ ತಮ್ಮ ಜಿಜ್ಞಾಸೆಯನ್ನು ಇಲ್ಲಿ ಹುಟ್ಟುಹಾಕುವ ಪ್ರಯತ್ನ ಮಾಡಿದ್ದಾರೆ. ಅಚ್ಚರಿ ಎಂದರೆ ಅಂತಹ ಒಬ್ಬ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿರುವುದು ಬಿಜೆಪಿಯೇ ಅಲ್ಲವೇನು? ಯಾವ ಲೆಕ್ಕಕ್ಕೆ ಫ್ಯಾಸಿಸಂ? ದೇವನೂರರಿಗೂ ಗೊತ್ತಿರದ ಒಂದು ಸಂಗತಿ ಏನು ಗೊತ್ತೇ? ಫ್ಯಾಸಿಸಂ ಎಂಬ ಈ ಶಬ್ದ 40ರ ದಶಕದವರೆಗೂ ಎಲ್ಲರೂ ಅಭಿಮಾನದಿಂದ ಬಳಸುವಂಥದ್ದೆ ಆಗಿತ್ತು. ಒಂದು ರೀತಿಯಲ್ಲಿ ರಾಷ್ಟ್ರೀಯತೆಗೆ ಪರ್ಯಾಯ ಪದ. ಅದು ಹಿಟ್ಲರ್ ಜೊತೆ ಸೇರಿಕೊಂಡ ನಂತರ ವಿಪರೀತಾರ್ಥಕ್ಕೆ ತಿರುಗಿತು. ಸ್ವತಃ ಫ್ಯಾಸಿಸಂ ಆರಾಧಕರಾಗಿದ್ದ ಹೆನ್ರಿ ಫೋರ್ಡ್, ಚಾರ್ಲ್ಸ್ ಲಿಂಡನ್ ಬರ್ಗ್‌ಥರದವರು ಅಮೇರಿಕಾದಲ್ಲಿ ಹಿಟ್ಲರ್ ನನ್ನು ಬೆಂಬಲಿಸಿಕೊಳ್ಳಲು ಹಿಂಜರಿದಿರಲಿಲ್ಲ. ಯುರೋಪಿನಲ್ಲಿ ಸುದೀರ್ಘಕಾಲ ರಾಷ್ಟ್ರವಾದದ ಪ್ರಖರ ರೂಪವಾಗಿದ್ದ ಈ ಫ್ಯಾಸಿಸಂ ಅವರಿಗೆ ಬೇಡವೆಂದು ಅನಿಸಿದೊಡನೆ ಇವರಿಗೂ ಬೇಡವಾಯ್ತು. ಅದನ್ನು ಅತ್ಯಂತ ವಿಕಾರ ರೂಪದಲ್ಲಿ ಪ್ರಸ್ತುತ ಪಡಿಸಲಾರಂಭಿಸಿದರು. ಎಡಪಂಥೀಯ ಚಿಂತಕರ ಸಾಮರ್ಥ್ಯ ಅದು, ತಮಗೆ ಬೇಕಾದ್ದನ್ನು ನಂಬಿಸುವ, ಒಪ್ಪಿಸುವ ತಾಕತ್ತು. ಗೋಳ್ವಲ್ಕರ್ ಅವರ ‘ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್ಡ್’ ಎಂಬ ವಿಸ್ತೃತ ಪ್ರಬಂಧದಿಂದ ಪುಟಗಟ್ಟಲೆ ಉಲ್ಲೇಖಿಸಿರುವ ದೇವನೂರರು ಆ ಒಟ್ಟಾರೆ ಪ್ರಬಂಧವನ್ನು ಓದಿರುವುದೇ ಅನುಮಾನ. ಆ ಪ್ರಬಂಧದಲ್ಲಿ ರಾಷ್ಟ್ರದ ಪರಿಕಲ್ಪನೆಗಳನ್ನು, ಅದಕ್ಕೆ ಹೊಂದಿಕೊಂಡಿರುವ ವಿಭಿನ್ನ ಆಯಾಮಗಳನ್ನು ಗೊಳ್ವಲ್ಕರ್‌ರು ಮುಂದಿರಿಸಿ, ವಿಭಿನ್ನ ಸಾಧ್ಯತೆಗಳೆಡೆಗೆ ಓದುಗನ ಗಮನ ಸೆಳೆಯುತ್ತಾರೆ. ಹೀಗೆ ಸಾಧ್ಯತೆಗಳನ್ನು ಮುಂದಿರಿಸುವಾಗ ಯಾವುದರಿಂದ ಏನನ್ನು ಸ್ವೀಕರಿಸಬಹುದು ಎಂಬುದನ್ನು ಅರಿಯುವ ಪ್ರಯತ್ನ ಅಲ್ಲಿ ಕಂಡು ಬರುತ್ತದೆ. ಅಧ್ಯಯನಶೀಲನಾದ ಎಂಥವನಿಗೂ ಈ ಪ್ರಬಂಧದ ಆಶಯ ಖಂಡಿತವಾಗಿಯೂ ಅರಿವಾಗುತ್ತದೆ. ಆದರೆ ದೇವನೂರರು ತಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಂಡು ತಮ್ಮದ್ದೇ ಆದ ವ್ಯಾಖ್ಯೆಯನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ‘ಹೊರಗಿನಿಂದ ವಲಸೆ ಬಂದವರು.. ತಮ್ಮ ಪ್ರತ್ಯೇಕ ಅಸ್ತಿತ್ವದ ಅಸ್ಮಿತೆಯನ್ನು ಮತ್ತು ವಿದೇಶೀ ಮೂಲವನ್ನು ಮರೆತು ರಾಷ್ಟ್ರೀಯ ಜನಾಂಗದಲ್ಲಿ ಸ್ವಾಭಾವಿಕವಾಗಿ ಬೆರೆತುಕೊಳ್ಳಬೇಕಾಗಿದೆ’ ಎಂದು ಗೋಳ್ವಲ್ಕರ್‌ರು ಹೇಳಿರುವುದು ದೇವನೂರರಿಗೆ ಸಹಿಸಲಾಗುತ್ತಿಲ್ಲ. ಇದರ ಕಾರಣ ಏನೆಂದು ಎಂಥವನಿಗೂ ಅರ್ಥವಾಗುವಂಥದ್ದೇ! ಆಕ್ರಮಣಕಾರಿಗಳಾಗಿ ಭಾರತಕ್ಕೆ ಬಂದವರು ಭಾರತದಲ್ಲಿ ಉಳಿಯಬೇಕೆಂದರೆ ಇಲ್ಲಿನ ಸಂಸ್ಕೃತಿಯೊಂದಿಗೆ ಏಕರಸವಾಗಲೇಬೇಕಲ್ಲ? ಆಕ್ರಮಣಗೈದು, ಲೂಟಿ ಮಾಡಿ, ನಮ್ಮವರ ಮೇಲೆ ಅತ್ಯಾಚಾರ ಮಾಡಿ, ಅವರನ್ನು ಕೊಂದು, ಕೊನೆಗೆ ನಮ್ಮ ಆಚರಣೆಗಳನ್ನೇ ವಿರೋಧಿಸುತ್ತಾ ನಮ್ಮೊಡನೆ ಬದುಕುವುದು ಒಪ್ಪುವುದಾದರೂ ಹೇಗೆ? ಶಕರು ಆಕ್ರಮಣಕಾರಿಗಳಾಗಿ ಬಂದು ಭಾರತೀಯ ಸಂಸ್ಕೃತಿಯೊಂದಿಗೆ ಏಕರಸವಾಗಿಬಿಡಲಿಲ್ಲವೇ? ಒಂದುವೇಳೆ ಈ ಹೊರಗಿನ ಮಂದಿ ಇಲ್ಲಿ ಸ್ವಾಭಾವಿಕವಾಗಿ ಬೆರೆತುಕೊಳ್ಳುವಲ್ಲಿ ಸೋತರೆ ‘ರಾಷ್ಟ್ರದ ಎಲ್ಲ ನೀತಿ-ನಿಯಮ ಮತ್ತು ಸಂಹಿತೆಗಳ ಕಟ್ಟುಪಾಡಿಗೆ ಒಳಗಾಗಿ ಅದರ ಸಹಿಷ್ಣುತೆಯ ಕೃಪೆಯಲ್ಲಿ ಹಕ್ಕುಗಳಿಲ್ಲದೇ ಹೊರಗಿನವರಂತೆ ಬದುಕಬೇಕಾಗುತ್ತದೆ’ ಎಂದು ಗೋಳ್ವಲ್ಕರ್‌ರು ಹೇಳಿರುವುದರಲ್ಲಿ ತಪ್ಪೇನಿದೆ? ಸಂವಿಧಾನವನ್ನು ಒಪ್ಪುವುದಿಲ್ಲ, ನಮಗೆ ನಮ್ಮದ್ದೇ ಕಾನೂನು ಬೇಕು ಎಂದವರನ್ನು ಜೊತೆಯಲ್ಲಿಟ್ಟುಕೊಂಡು ಸಲಹುವುದು ಸಾಧ್ಯವೇ? ತಮ್ಮ ಸಂಖ್ಯೆ ಹೆಚ್ಚಾಗಿರುವುದರಿಂದ ನಮ್ಮ ಶಾಲೆಗಳಿಗೆ ಇನ್ನುಮುಂದೆ ಶುಕ್ರವಾರ ರಜೆ, ಭಾನುವಾರವಲ್ಲ ಎಂದು ಆಗ್ರಹಿಸುವವರನ್ನು ಸಹಿಸಿಕೊಳ್ಳುವುದಾದರೂ ಹೇಗೆ? ತಮ್ಮ ಮತದ ಪ್ರವರ್ತಕನನ್ನು ನ್ಯಾಯಬದ್ಧವಾಗಿ ಪ್ರಶ್ನಿಸಿದರೆ ತಲೆಕಡಿಯುವ ಮಾತಾಡುವ ಮಂದಿಯನ್ನು ಎಲ್ಲ ಹಕ್ಕುಗಳೊಂದಿಗೆ ಇರಿಸಿಕೊಳ್ಳುವುದು ಸಾಧ್ಯವೇ? ಬಹುಶಃ ದೇವನೂರರು ಗೋಳ್ವಲ್ಕರ್‌ರನ್ನು ವಿರೋಧಿಸುವ ಬದಲು ಅವರ ದೂರದೃಷ್ಟಿಯನ್ನು ಅಭಿನಂದಿಸಬೇಕಿತ್ತು! ಏಕೆಂದರೆ ಗೋಳ್ವಲ್ಕರ್‌ರು ಸಮಸ್ಯೆಯನ್ನಷ್ಟೇ ಮುಂದಿಡದೇ ಅದಕ್ಕೊಂದು ಸೂಕ್ತವಾದ ತಾರ್ಕಿಕ ಪರಿಹಾರವನ್ನು ನೀಡುತ್ತಾರೆ. ಹೊರಗಿನಿಂದ ಬಂದವರನ್ನು ರಾಷ್ಟ್ರೀಯ ಪ್ರವಾಹದಲ್ಲಿ ಐಕ್ಯವಾಗಿಸಬೇಕು ಅಥವಾ ಈ ರಾಷ್ಟ್ರದ ಕೃಪಾಶ್ರಯದಲ್ಲಿ ಇರಿಸಿ ಬೇಡವೆಂದಾಗ ತೊಲಗಿಸಲು ಸಿದ್ಧವಾಗಬೇಕು ಎನ್ನುತ್ತಾರೆ. ಇದೊಂದೇ ರಾಷ್ಟ್ರದೊಳಗೆ ಮತ್ತೊಂದು ರಾಷ್ಟ್ರವನ್ನು ಹುಟ್ಟು ಹಾಕುವ ಕ್ಯಾನ್ಸರ್ನಿಂದ ಭಾರತವನ್ನು ರಕ್ಷಿಸುತ್ತದೆ ಎಂದು ಹೇಳಲೂ ಅವರು ಮರೆಯುವುದಿಲ್ಲ. ಹೊರಗಿನಿಂದ ಬಂದವರು ಭಾರತದೊಳಗೆ ಏಕರಸವಾಗದಿದ್ದುದರ ಪರಿಣಾಮಕ್ಕೆ ಪಾಕಿಸಾನ್ತ, ಬಾಂಗ್ಲಾದೇಶಗಳು ಹುಟ್ಟಿಕೊಂಡವು, ದೇವನೂರರಂಥವರು ಇಂಥದ್ದೇ ಚಿಂತನೆಗಳನ್ನು ನೀರೆರೆದು ಪೋಷಿಸಿದರೆ ಇನ್ನಷ್ಟು ಪಾಕಿಸ್ತಾನಗಳು ಹುಟ್ಟಿಕೊಂಡರೂ ಅಚ್ಚರಿ ಪಡಬೇಕಿಲ್ಲ!

ವಿವೇಕಾನಂದರ ಕುರಿತಂತೆಯೂ ಅವರು ಹೀಗೆಯೇ ಮನಸ್ಸಿಗೆ ಬಂದದ್ದನ್ನು ಉಲ್ಲೇಖ ಮಾಡಿದ್ದಾರೆ. ಗೀತೆಯ ಕುರಿತಂತೆ ವಿಸ್ತಾರವಾಗಿ ಮಾತನಾಡಿರುವ ಸ್ವಾಮಿ ವಿವೇಕಾನಂದರು ಅದರ ಐತಿಹಾಸಿಕತೆಯ ಕುರಿತಂತೆ ವಿಭಿನ್ನ ಸಾಧ್ಯತೆಗಳನ್ನು ಚರ್ಚಿಸಿದ್ದಾರೆ. ವ್ಯಾಸ ಯಾರು ಎನ್ನುವುದರಿಂದ ಹಿಡಿದು ಗೀತೆ ಪ್ರಕ್ಷಿಪ್ತವೇ ಅಥವಾ ಮಹಾಭಾರತದೊಂದಿಗೇ ಸೇರಿಕೊಂಡಿರುವಂಥದ್ದೇ, ಯುದ್ಧ ಕಾಲದಲ್ಲಿ ಹೀಗೊಂದು ವಿಸ್ತಾರ ಚಿಂತನೆಗೆ ಅವಕಾಶವಿತ್ತೇ ಎಂಬೆಲ್ಲ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಪ್ರಚಲಿತದಲ್ಲಿದ್ದ ನಂಬಿಕೆಗಳನ್ನು ಹಂಚಿಕೊಳ್ಳುತ್ತಾರೆ. ಅದರದ್ದೇ ಭಾಗವಾಗಿ ‘ಕೆಲವರು ಶಂಕರಾಚಾರ್ಯರೇ ಗೀತೆಯ ಕರ್ತೃವೆಂದೂ ಅದನ್ನು ಮಹಾಭಾರತದಲ್ಲಿ ಸೇರಿಸಿದರೆಂದು ಹೇಳುತ್ತಾರೆ’ ಎಂದು ಹೇಳಿದ್ದಾರೆ. ಇದು ಅಂದಿನ ಕೆಲವರ ನಂಬಿಕೆಗಳ ಕುರಿತಂತೆ ಅವರು ಮಾತನಾಡಿರುವುದು. ಇದೇ ವ್ಯಾಖ್ಯಾನದಲ್ಲಿ ವಿವೇಕಾನಂದರು ಐತಿಹಾಸಿಕ ತಥ್ಯಗಳನ್ನು ಅರಿಯುವುದರಿಂದ ಗೀತೆಯ ಮಹತ್ವ ಬದಲಾಗುವುದಿಲ್ಲವಾದರೂ ಮೌಢ್ಯಗಳಿಗೆ ಬಲಿಯಾಗಿ ಒಪ್ಪಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾ ‘ಏಸುಕ್ರಿಸ್ತ, ಮೊಹಮ್ಮದ್ ಮೊದಲಾದ ಮಹಾಪುರುಷರೇ ಹಲವು ಮೂಢನಂಬಿಕೆಗಳನ್ನು ನಂಬಿದ್ದರು, ಅದರಿಂದ ಪಾರಾಗಿರಲಿಲ್ಲ’ ಎಂದೂ ಹೇಳುತ್ತಾರೆ. ಬಹುಶಃ ಈ ಸಾಲುಗಳನ್ನು ದೇವನೂರರು ಬೇಕಂತಲೇ ಓದದೇ ಮುಂದೆ ಹೋಗಿರಬೇಕು! ಆದರೆ ವಿವೇಕಾನಂದರು ಮಾತ್ರ ಜ್ಞಾನ, ಭಕ್ತಿಯೋಗಗಳ ಅನುಯಾಯಿಗಳು ತಮ್ಮದ್ದನ್ನೇ ಶ್ರೇಷ್ಠ ಮಾರ್ಗ ಎಂದು ಹೇಳುತ್ತಿರುವಾಗ ಗೀತೆ ಎಲ್ಲವನ್ನೂ ಸೌಹಾರ್ದ ದೃಷ್ಟಿಯಿಂದ ನೋಡಲು ಪ್ರಯತ್ನಿಸಿತು ಎಂದು ಹೇಳುವ ಮೂಲಕ ಅದರ ಸಾರ್ವಕಾಲಿಕತೆಯನ್ನು ಎತ್ತಿ ಹಿಡಿದಿದ್ದಾರೆ. ಎಡಪಂಥೀಯರು ಎಷ್ಟು ಬಾರಿ ಗೀತೆಯನ್ನು ಅಧಿಕೃತವಲ್ಲವೆಂದು ಸಾಬೀತುಪಡಿಸಲು ಪ್ರಯತ್ನ ಪಟ್ಟರೂ ಅದು ಮತ್ತೆ-ಮತ್ತೆ ಶ್ರೇಷ್ಠ ಕೃತಿಯಾಗಿ ಜನರ ನಡುವೆ ಹಾಗೆಯೇ ಉಳಿದಿದೆ.

ದೇವನೂರರಿಗೆ ಸಂಸ್ಕೃತದ ಮೇಲೂ ಅಷ್ಟೇ ಆಕ್ರೋಶ. ಅದನ್ನು ಸಂಪರ್ಕ ಭಾಷೆ ಮಾಡುವ ಚಿಂತನೆ ಗೋಳ್ವಲ್ಕರರಿಗಿತ್ತು ಎಂದು ಅವರು ಉಲ್ಲೇಖಿಸುತ್ತಾರೆ. ವಾಸ್ತವವಾಗಿ ಸ್ವತಃ ಅಂಬೇಡ್ಕರರು ಈ ಕುರಿತಂತೆ ತಮ್ಮ ವಾದ ಮಂಡಿಸಿದ್ದರು. ಕಳೆದ ವರ್ಷ ಮುಖ್ಯ ನ್ಯಾಯಾಧೀಶರಾದ ಬೋಬ್ಡೆ ವಿಚಾರ ಸಂಕಿರ್ಣವೊಂದರಲ್ಲಿ ಮಾತನಾಡುತ್ತಾ ತಮಿಳನ್ನು ಉತ್ತರ ಭಾರತೀಯರು ಒಪ್ಪಲಾರರು ಮತ್ತು ಹಿಂದಿಯನ್ನು ದಕ್ಷಿಣ ಭಾರತೀಯರು. ಹೀಗಾಗಿ ಸಂಸ್ಕೃತ ಒಂದೇ ಪರಿಹಾರ ಎಂಬುದು ಅವರ ಅಭಿಮತವಾಗಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ, ಈ ಭಾಷೆಯೊಂದೇ ಭಾರತದಲ್ಲಿ ಜಾತಿಯ ತಾರತಮ್ಯಗಳನ್ನು ತೊಡೆದು ಹಾಕಬಲ್ಲದೆಂಬ ನಂಬಿಕೆ ಅವರಿಗಿತ್ತು. ದುರಂತವೆಂದರೆ ದಲಿತ ಸಮುದಾಯದವರೇ ಇದನ್ನು ವಿರೋಧಿಸಿ ಅನೇಕ ದಶಕಗಳ ನಂತರ ಪಶ್ಚಾತ್ತಾಪ ಪಟ್ಟ ಉಲ್ಲೇಖಗಳೂ ಇವೆ. ದೇವನೂರರದ್ದು ಈ ಕುರಿತಂತೆ ದಿವ್ಯಮೌನ!

ಇನ್ನು ಹಳತಾಗಿ ಜಗತ್ತಿನ ಎಲ್ಲ ಪ್ರಜ್ಞಾವಂತರಿಂದ ಅವಗಣನೆಗೆ ತುತ್ತಾಗಿರುವ ಆರ್ಯ ಆಕ್ರಮಣ ಸಿದ್ಧಾಂತವನ್ನು ದೇವನೂರರು ಉದ್ದಕ್ಕೂ ಉಲ್ಲೇಖಿಸಿದ್ದಾರೆ. ಅವರು ಹೇಳುವಂತೆ ಹರಿಯಾಣಾದ ರಾಖಿಘರೀ ಉತ್ಖನನದ ನಂತರ ಆರ್ಯ ಆಕ್ರಮಣದ ಸಿದ್ಧಾಂತ ದೃಢಗೊಳ್ಳಲಿಲ್ಲ, ಬದಲಿಗೆ ಇನ್ನೂ ಹೆಚ್ಚು ದೃಢವಾಗಿ ನಿರಾಕರಿಸಲ್ಪಟ್ಟಿತು. ಸೆಲ್ ಎಂಬ ವೈಜ್ಞಾನಿಕ ಪತ್ರಿಕೆಯೊಂದು ಎರಡು ವರ್ಷಗಳ ಹಿಂದೆ ಈ ಕುರಿತಂತೆ ವಿಸ್ತಾರವಾಗಿ ಲೇಖನ ಪ್ರಕಟಿಸಿ ಆರ್ಯರ ಆಕ್ರಮಣ ಸಿದ್ಧಾಂತ ಬುಡವಿಲ್ಲದ್ದು ಎಂದು ಹೇಳಿಬಿಟ್ಟಿತು. ದೇವನೂರರಿರಲಿ, ಅವರ ಪರಮಶಿಷ್ಯ ಸಿದ್ದರಾಮಯ್ಯನವರೇ ಇರಲಿ ಇಂದಿಗೂ ಆರ್ಯ ಆಕ್ರಮಣ ವಾದಕ್ಕೆ ಜೋತಾಡಿಕೊಂಡಿರುವುದೇಕೆಂದರೆ ಇವರ ಬೇಳೆ ಬೇಯುವುದು ಈ ಬೆಂಕಿಯಲ್ಲಿ ಮಾತ್ರ.

ಹೇಳಲು ಬೇಕಾದಷ್ಟಿದೆ. ಹೇಳುತ್ತಾ ಹೋದಂತೆಲ್ಲ ದೇವನೂರರದ್ದೇ ಆಳ-ಅಗಲಗಳು ಅನಾವರಣಗೊಳ್ಳುತ್ತದೆ! ಹೀಗಾಗಿ ಇಲ್ಲಿಗೇ ಮುಗಿಸುತ್ತೇನೆ..

ಬದುಕಿದ್ದಾಗಲೇ ಭಾರತವನ್ನು ನರಕವಾಗಿಸಿಬಿಡುತ್ತಾರೆ!

ಬದುಕಿದ್ದಾಗಲೇ ಭಾರತವನ್ನು ನರಕವಾಗಿಸಿಬಿಡುತ್ತಾರೆ!

ನೂಪುರ್ ಶರ್ಮಾ ಈಗ ಜಗತ್ತಿನ ಕೇಂದ್ರಬಿಂದು. ಜಗತ್ತಿನ ಎಲ್ಲ ಮುಸಲ್ಮಾನ ರಾಷ್ಟ್ರಗಳು ಮತ್ತು ಅವರ ಭಯೋತ್ಪಾದನೆಯ ಆತಂಕಕ್ಕೆ ಒಳಗಾಗಿರುವ ಅನ್ಯ ಎಲ್ಲ ರಾಷ್ಟ್ರಗಳು ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುವಂತಾಗಿದೆ. ಮಾಧ್ಯಮದ ಚರ್ಚೆಯೊಂದರಲ್ಲಿ ಆಕೆಯಾಡಿದ ಮಾತುಗಳಿಂದ ಕುಪಿತಗೊಂಡ ಮುಸಲ್ಮಾನರು ಆಕೆಯನ್ನು ತಮಗೊಪ್ಪಿಸುವಂತೆ ಭಿನ್ನ-ಭಿನ್ನ ಸ್ವರೂಪದಲ್ಲಿ ಒತ್ತಡ ಹೇರುತ್ತಿದ್ದಾರೆ. ಅದಾಗಲೇ ಮುಸಲ್ಮಾನ ರಾಷ್ಟ್ರಗಳು ಭಾರತವನ್ನು ಹೆಡೆಮುರಿ ಕಟ್ಟುವ ಪ್ರಯತ್ನವನ್ನೂ ಮಾಡಿದ್ದು ಎಲ್ಲರಿಗೂ ತಿಳಿದಿರುವಂಥದ್ದೇ. ಈ ಸಾಲಿನಲ್ಲಿ ಹೊಸತು ಮೊನ್ನೆ ಶುಕ್ರವಾರದ ಗಲಾಟೆ. ಗಮನಿಸಬೇಕಾದ ಕೆಲವು ಸಂಗತಿಗಳು ಇಲ್ಲಿವೆ. ನೂಪುರ್ ಶರ್ಮಾ ಈ ಹೇಳಿಕೆಯನ್ನು ಕೊಟ್ಟು ಹತ್ತಾರು ದಿನಗಳೇ ಕಳೆದುಹೋಗಿವೆ. ಈಗ ಈ ಕುರಿತಂತೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವುದು ಅಚ್ಚರಿ ಹುಟ್ಟಿಸುವ ಪ್ರಕ್ರಿಯೆ. ಸುಮ್ಮನೆ ಈ ಪ್ರತಿಭಟನೆಗಳ ಹಿಂದಿರುವ ಏಕರೂಪತೆಯನ್ನು ಗಮನಿಸಿದರೆ ಇದು ಸಹಜವಾದ ಪ್ರಕ್ರಿಯೆಯಲ್ಲ ಎಂಬುದಂತೂ ಎಂಥವನಿಗೂ ಅರಿವಾಗುತ್ತದೆ. ಮೊದಲನೆಯದಾಗಿ ಈ ಪ್ರತಿಭಟನೆಗಳು ಆಕೆಯ ಹೇಳಿಕೆಯ ಮರುದಿನವೇ ನಡೆದಂಥದ್ದಲ್ಲ. ಹೀಗಾಗಿ ಸಹಜ ಆಕ್ರೋಶವಲ್ಲ ಎಂಬುದಂತೂ ಸತ್ಯ. ಎರಡನೆಯದ್ದು, ಅಂತರ್ರಾಷ್ಟ್ರೀಯ ಮಟ್ಟದ ಟೂಲ್ಕಿಟ್ನ ಯೋಜನೆಯಂತೆ ಕತಾರ್ನ ಕಿರಿಕಿರಿ ಮೊದಲು ಆರಂಭವಾಯ್ತು. ಅದರ ಹಿಂದು-ಹಿಂದೆಯೇ ಇನ್ನೂ ಕೆಲವು ಮುಸಲ್ಮಾನ ರಾಷ್ಟ್ರಗಳು ಭಾರತದ ವಿರುದ್ಧ ಹೇಳಿಕೆ ಕೊಡುವ ಪ್ರಯತ್ನ ಮಾಡಿದವು. ನೆನಪಿರಲಿ, ಈ ರಾಷ್ಟ್ರಗಳಲ್ಲಿ ಬಹುತೇಕ ಭಾರತಕ್ಕೆ ಇಂಧನವನ್ನು ಪೂರೈಕೆ ಮಾಡುವಂಥವು. ಭಾರತ ರಷ್ಯಾ-ಉಕ್ರೇನ್ ಯುದ್ಧದ ನಂತರ ರಷ್ಯಾದೊಂದಿಗೆ ತನ್ನ ಬಾಂಧವ್ಯವನ್ನು ಬಲಗೊಳಿಸಿಕೊಳ್ಳುತ್ತಿದೆಯಲ್ಲದೇ, ಅಲ್ಲಿನ ತೈಲ ಕಂಪೆನಿಗಳೊಂದಿಗೆ ಭಾರತ ತನ್ನ ವ್ಯಾಪಾರ ಕುದುರಿಸಿಕೊಳ್ಳುತ್ತಿದೆ. ಬಲುದೊಡ್ಡ ಪ್ರಮಾಣದಲ್ಲಿ ರಷ್ಯಾದಿಂದ ನಾವು ತೈಲ ಆಮದು ಮಾಡಿಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿರುವುದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಸಹಜವಾಗಿ ಅವರ ಆಕ್ರೋಶ ಟೂಲ್ ಕಿಟ್‌‌ನ ಭಾಗವಾಗಿ ಕಂಡುಬರುತ್ತದೆ. ಭಾರತ ಇದರ ಮುಂದುವರೆದ ಭಾಗವನ್ನು ನಿರೀಕ್ಷಿಸಿಯೇ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ರನ್ನು ಪಕ್ಷದಿಂದ ಹೊರಹಾಕಿ ಮುಂದಾಗಲಿರುವ ಯಾವ ಘಟನೆಗೂ ತನ್ನನ್ನು ಹೊಣೆ ಮಾಡದಿರುವಂತೆ ನೋಡಿಕೊಂಡಿತು. ಇದು ನಿಸ್ಸಂಶಯವಾಗಿ ಟೂಲ್ ಕಿಟ್ ರಚನೆ ಮಾಡಿದವರಿಗೆ ಔಟ್ ಆಫ್ ಸಿಲಬಸ್ ಪ್ರಶ್ನೆ! ಬಿಜೆಪಿಯಿಂದ ಇಂಥದ್ದೊಂದು ನಡೆಯನ್ನು ಅವರು ಊಹಿಸಿರಲಿಲ್ಲ. ಪ್ರಧಾನಮಂತ್ರಿಗಳು ಇಲ್ಲಿಗೇ ನಿಲ್ಲದೇ ಇರಾನಿನೊಂದಿಗೆ ತಮ್ಮ ಬಾಂಧವ್ಯವನ್ನು ಬಲಪಡಿಸಿಕೊಳ್ಳುವ ಲಕ್ಷಣ ತೋರಿದರು. ಇದರ ಹಿಂದು-ಹಿಂದೆಯೇ ಮುಸಲ್ಮಾನ ರಾಷ್ಟ್ರಗಳಲ್ಲಿ ಅನೇಕರು ಭಾರತದ ಕುರಿತಂತೆ ಮಾಡಿದ ಟ್ವೀಟ್‌ಗಳನ್ನು ಅಳಿಸಿ ಹಾಕಿ ತಮ್ಮನ್ನು ತಾವು ಉಳಿಸಿಕೊಳ್ಳುವ ಹಂತಕ್ಕೆ ಬಂದರು. ಆದರೆ ಅಷ್ಟು ಹೊತ್ತಿಗೆ ದಾಳಗಳನ್ನು ಎಸೆದಾಗಿತ್ತು. ಈ ಟೂಲ್ಕಿಟ್ನ ಮಹತ್ವದ ಭಾಗವಾಗಿದ್ದ ಪಿಎಫ್ಐ ಮತ್ತು ಎಸ್ಡಿಪಿಐಗಳು ತಮ್ಮ ಚಟುವಟಿಕೆಯನ್ನು ಆರಂಭಿಸಿಬಿಟ್ಟಿದ್ದವು. ಮುಸಲ್ಮಾನರಿಗೆ ಹೂಡಿದ ಬಾಣ ಚಲಾಯಿಸುವುದು ಮಾತ್ರ ಗೊತ್ತು. ಚಲಾವಣೆಯಾದ್ದನ್ನು ಹಿಂದೆ ಪಡೆಯುವುದು ಅವರಿಂದ ಸಾಧ್ಯವಿಲ್ಲ. ಹೀಗಾಗಿಯೇ ದೇಶದಾದ್ಯಂತ ಪಿಎಫ್ಐನ ಸಂಘಟನೆಯ ಪ್ರತಿಫಲವಾಗಿ ಏಕಕಾಲಕ್ಕೆ ಪ್ರತಿಭಟನೆಗಳು ನಡೆದವು. ಈ ಪ್ರತಿಭಟನೆಯ ಸೂತ್ರವನ್ನು ಗಮನಿಸಿ ನೋಡಿ. ಶುಕ್ರವಾರದ ನಮಾಜ್ ಮುಗಿಯುತ್ತಿದ್ದಂತೆ ದೆಹಲಿಯ ಜಾಮಾ ಮಸೀದಿಯಿಂದ ತಮಿಳುನಾಡಿನ ಮಸೀದಿಯವರೆಗೆ ಒಬ್ಬರ ಹಿಂದೆ ಮತ್ತೊಬ್ಬರು ಬೀದಿಗೆ ಬಂದರು. ಸಾರ್ವಜನಿಕ ಆಸ್ತಿಪಾಸ್ತಿಯನ್ನು ಧ್ವಂಸಗೊಳಿಸಿದರು, ಬೆಂಕಿ ಹಚ್ಚಿ ಸಂಭ್ರಮಿಸಿದರು. ಹಾಗಂತ ಇದನ್ನು ಹೊಸತೆಂದು ಭ್ರಮಿಸಿದಿರೇನು? ಖಂಡಿತ ಇಲ್ಲ. ಶುಕ್ರವಾರಕ್ಕೂ ಮುಸಲ್ಮಾನರಿಗೂ ಅವಿನಾಭಾವ ನಂಟು. ಭಾರತ-ಪಾಕಿಸ್ತಾನದ ಕ್ರಿಕೆಟ್ ಮ್ಯಾಚುಗಳು ಶುಕ್ರವಾರ ನಡೆದರೆ ಅವರು ಗೆಲ್ಲಲೇಬೇಕಿತ್ತು. ಸೋತರೆ ಒಂದಷ್ಟು ಮುಸಲ್ಮಾನರು ಬೀದಿಗೆ ಬಂದು ರೊಚ್ಚಿಗೆದ್ದು ಬೆಂಕಿ ಹಚ್ಚುತ್ತಿದ್ದರು. ಮಯನ್ಮಾರ್ ನಲ್ಲಿ ಮುಸಲ್ಮಾನರ ವಿರುದ್ಧ ಗಲಾಟೆಯಾದರೆ ಇಲ್ಲಿನ ಮುಸಲ್ಮಾನರು ಶುಕ್ರವಾರದ ನಮಾಜು ಮುಗಿಸಿ ಬೀದಿಗೆ ಬಂದು, ಅಮರ್ ಜವಾನ್ನಂತಹ ಸ್ಮಾರಕಗಳನ್ನು ಒದ್ದು ಉರುಳಿಸಿದ ಚಿತ್ರಗಳು ಈಗಲೂ ತಿರುಗಾಡುತ್ತವೆ. ಮಾಯಾನ್ಮಾರ್ಗೂ ಭಾರತಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗೆ ಈ ದಡ್ಡರ ಬಳಿ ಉತ್ತರವಿಲ್ಲ. ಹಾಗಂತ ಇದು ಈಗ ಮಾತ್ರವಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಖಲೀಫಾನ ವಿರುದ್ಧ ನಿರ್ಣಯ ತೆಗೆದುಕೊಂಡರು ಎಂಬ ಕಾರಣಕ್ಕೆ ಅವರು ಖಿಲಾಫತ್ ಚಳವಳಿ ಆರಂಭಿಸಿದ್ದು ಭಾರತದಲ್ಲಿ. ಜಗತ್ತಿನ ಯಾವ ಮೂಲೆಯಲ್ಲಿ ಮುಸಲ್ಮಾನರಿಗೆ ತೊಂದರೆಯಾದರೂ ಶುಕ್ರವಾರದ ನಮಾಜಿನಲ್ಲಿ ಅದರ ಉಲ್ಲೇಖವಾಗುತ್ತದೆ. ರೊಚ್ಚಿಗೆದ್ದ ಮುಸಲ್ಮಾನರು ಬೀದಿಗೆ ಬಂದು ಜನಸಾಮಾನ್ಯರ ಆಸ್ತಿ ನಾಶ ಮಾಡುತ್ತಾರೆ. ಇದನ್ನು ಬುದ್ಧಿವಂತಿಕೆ ಎಂದು ಸಮರ್ಥಿಸಿಕೊಳ್ಳುವ ಎಲ್ಲ ಬುದ್ಧಿಜೀವಿಗಳಿಗೂ, ಮೋದಿ ವಿರೋಧಿ ಅಂಧರಿಗೂ, ಮತಬ್ಯಾಂಕುಗಳ ಮೇಲೆ ದೃಷ್ಟಿಯಿಟ್ಟವರಿಗೂ ಎರಡು ನಿಮಿಷದ ಮೌನ ಸಮರ್ಪಿಸದೇ ಬೇರೆ ದಾರಿಯೇ ಇಲ್ಲ.


ಮರುಭೂಮಿಯಲ್ಲಿ ಹುಟ್ಟಿದ ಪಂಥಗಳ ಸಮಸ್ಯೆಯೇ ಇದು. ಹಿಂದೂ ದೇವರುಗಳ ಬಳಿ ಆಯುಧಗಳಿರುತ್ತವಲ್ಲ ಎಂದು ಅನೇಕ ಬುದ್ಧಿಜೀವಿಗಳು ನಮ್ಮನ್ನು ಮೂದಲಿಸುತ್ತಾರೆ. ಆದರೆ ಚಿಂತನೆಯ ವೈಶಿಷ್ಟ್ಯವನ್ನು ಗಮನಿಸಿ; ಹಿಂದುಗಳಲ್ಲಿ ಭಗವಂತ ಭಕ್ತರ ರಕ್ಷಣೆ ಮಾಡುತ್ತಾನೆ. ಆದರೆ ಇಸ್ಲಾಂ, ಕ್ರೈಸ್ತ ಪಂಥಗಳಲ್ಲಿ ಭಕ್ತರೇ ಭಗವಂತನ ರಕ್ಷಣೆ ಮಾಡಬೇಕು. ಹೀಗಾಗಿಯೇ ಹಿಂದೂಗಳಲ್ಲಿ ದೇವರುಗಳ ಕೈಲಿ ಆಯುಧವಿದ್ದರೆ, ಇಲ್ಲಿ ಭಕ್ತರ ಕೈಗಳಲ್ಲಿ ಆಯುಧ. ಹಿಂದೂಗಳಲ್ಲಿ ಯಾರಿಂದಾದರೂ ತೊಂದರೆಯಾದರೆ ದೇವರ ಮೊರೆ ಹೊಕ್ಕರೆ, ಇಲ್ಲೆಲ್ಲಾ ದೇವರನ್ನು, ಸಂದೇಶವಾಹಕನನ್ನು ಯಾರಾದರೂ ಹೀಯಾಳಿಸಿದರೆ ಆತ ಭಕ್ತರ ಮೊರೆ ಹೊಕ್ಕುತ್ತಾನೆ. ಹಿಂದೂಗಳು ಪ್ರತೀ ಬಾರಿ ತಮ್ಮ ದುಃಖವನ್ನು ಭಗವಂತನ ಮುಂದೆ ಕಣ್ಣೀರು ಹಾಕಿ ದೈವೀಶಕ್ತಿಯ ಪ್ರವೇಶವನ್ನು ಪ್ರಾರ್ಥಿಸುತ್ತಾ ಕುಳಿತರೆ ಇಲ್ಲಿ ದೇವರ ಕಣ್ಣೀರು ಒರೆಸಲು ಇವರು ಇತರರ ರಕ್ತ ಹರಿಸುತ್ತಾರೆ! ಈ ವೈರುಧ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮತ-ಪಂಥಗಳ ಕುರಿತ ನಮ್ಮ ಜಿಜ್ಞಾಸೆ ಪೂರ್ಣ ರೂಪವನ್ನು ಪಡೆದುಕೊಂಡೀತು. ಇನ್ನೂ ವಿಸ್ತಾರಗೊಳಿಸಬೇಕೆಂದಾದರೆ ಹಿಂದೂಗಳಲ್ಲಿ ಎಲ್ಲ ದುಃಖವನ್ನು ತಾಳಿಕೊಂಡು ಭಗವಂತನ ಮೊರೆ ಹೊಕ್ಕವನಿಗೆ ಭಗವಂತ ಮೋಕ್ಷವನ್ನು ಕರುಣಿಸಿ ಸಾನಿಧ್ಯ ನೀಡುತ್ತಾನೆ. ಮರುಭೂಮಿಯ ಪಂಥಗಳಲ್ಲಿ ಭಗವಂತನ ದುಃಖ ನಿವಾರಣೆಗೆ ಇತರರ ರಕ್ತ ಹರಿಸಿದವನಿಗೆ ಆತ ಸ್ವರ್ಗ ಕೊಟ್ಟು 72 ಮಂದಿ ಕನ್ಯೆಯರನ್ನು ಕೊಡುಗೆಯಾಗಿ ನೀಡುತ್ತಾನೆ. ಈ ಕಾರಣಕ್ಕಾಗಿಯೇ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರೂ ಶಾಶ್ವತ ಸ್ವರ್ಗ ಪ್ರಾಪ್ತಿಗಾಗಿ ಭೂಮಿಯ ಮೇಲೆ ನರಕ ಸೃಷ್ಟಿಗೆ ಸಜ್ಜಾಗಿಬಿಟ್ಟಿದ್ದಾರೆ! ಹಾಗಂತ ಇವರು ಕೊಲೆ ಮಾಡುವುದು ಇತರರನ್ನು ಮಾತ್ರವಲ್ಲ, ತಮ್ಮವರನ್ನೂ ಕೂಡ. ಪಾಕಿಸ್ತಾನದಲ್ಲಿ ಅವರನ್ನು ಅವರೇ ಸಾಯಿಸುತ್ತಾರೆ. ಆಫ್ಘಾನಿಸ್ತಾನ, ಇರಾಕ್, ಇರಾನ್ ಮೊದಲಾದ ರಾಷ್ಟ್ರಗಳು ಪೂರ್ಣ ಮುಸಲ್ಮಾನರಿಂದಲೇ ಕೂಡಿದ್ದರೂ ಬಡಿದಾಡಿಕೊಂಡು ಸಾಯುತ್ತವೆ. ಏಕೆ ಗೊತ್ತೇ? ಅವರಿಗೆ ತಾವು ಕಾಫಿರರನ್ನು ಕೊಂದು ಸಮಾಧಿ ಸೇರಿದರೆ ಸ್ವರ್ಗ ಸಿಗಲಾರದು. ಭೂಮಿಯ ಮೇಲಿರುವ ಪ್ರತಿಯೊಬ್ಬರೂ ಸತ್ತ ನಂತರವೇ ಭಗವಂತ ಬಂದು ಎಬ್ಬಿಸಿ, ಸ್ವರ್ಗ-ನರಕಗಳನ್ನು ಹಂಚಿಕೊಡುವುದು. ಅಂದರೆ, ಈ ಭೂಮಿ ಇನ್ನೂ ಸಾವಿರ ವರ್ಷಗಳ ಕಾಲ ಇದ್ದರೆ ಅಂದಿನಿಂದ ಮುಂದಿನ ಸಾವಿರ ವರ್ಷದವರೆಗೂ ತೀರಿಕೊಳ್ಳುವವರು ಸ್ವರ್ಗ ಕಾಣದೇ ಪರಿತಪಿಸುತ್ತಿರುತ್ತಾರೆ. ಹೀಗಾಗಿಯೇ ಅಶಾಂತಿ ಅವರ ಬದುಕಿನ ಅಂಗ. ಶಾಂತವಾಗಿ ಬದುಕಿರುವ ಯಾವ ಭೂಭಾಗವನ್ನೂ ಅವರು ಸಹಿಸಲಾರರು. ಮತಾಂಧತೆಯನ್ನು ಬಾಲ್ಯದಲ್ಲೇ ತುಂಬಿ ಪುಟ್ಟ ಮಕ್ಕಳೂ ಕೂಡ ಕ್ರೌರ್ಯವನ್ನು ರಕ್ತದ ಕಣಕಣದೊಳಗೆ ತುಂಬಿಕೊಳ್ಳುವಂತೆ ಅವರು ಮಾಡಿಬಿಡುತ್ತಾರೆ. ಈ ಕ್ರೌರ್ಯದ ಪರಿಯನ್ನು ನೀವು ಊಹಿಸಲೂ ಸಾಧ್ಯವಿಲ್ಲ.


ಇತ್ತೀಚೆಗೆ ನೂಪುರ್ ಶರ್ಮಾಳ ಪ್ರತಿಕೃತಿಯೊಂದರ ಮೇಲೆ ಮೂತ್ರ ಮಾಡುತ್ತಿರುವ ಮಕ್ಕಳ ವಿಡಿಯೊ ವೈರಲ್ ಆಯ್ತು. ಅದನ್ನು ಹಂಚಿಕೊಂಡಿದ್ದವ ಭವಿಷ್ಯದಲ್ಲಿ ಇದು ಸಹಜವಾಗಲಿದೆ, ಹೀಗಾಗಿ ಇಸ್ಲಾಮನ್ನು ಎದುರಿಸುವಾಗ ಎಚ್ಚರವಿರಲಿ ಎಂದು ಬರೆದಿದ್ದ. ಅದರರ್ಥವೇನು? ಮಕ್ಕಳು ತಮ್ಮ ಗುಪ್ತಾಂಗವನ್ನು ಬಳಸಿ ಹೆಣ್ಣುಮಕ್ಕಳನ್ನು ಅವಹೇಳನಕ್ಕೆ ಗುರಿಪಡಿಸಬಹುದು ಎಂಬುದನ್ನು ಅರಿತಿದ್ದಾರೆ ಎಂದು ತಾನೇ? ಹೆಣ್ಣುಮಕ್ಕಳನ್ನು ಮಾತನಾಡದಂತೆ ಒಳ ಕೂರಿಸುವುದಕ್ಕೆ ಮಾನಭಂಗದ ಹೆದರಿಕೆ ಹುಟ್ಟಿಸುವುದೊಂದೇ ಮಾರ್ಗ ಎಂಬುದನ್ನು ಅವರಲ್ಲಿ ಪುಟ್ಟ ಮಕ್ಕಳೂ ಅರಿತಿದ್ದಾರೆ. ತಾಲಿಬಾನ್ ಸಂಸ್ಕೃತಿಯಲ್ಲಿ ಕಂಡುಬರುವಂತಹ ಈ ಪ್ರಕರಣಗಳು ಭಾರತದಲ್ಲೂ ಕಾಣುತ್ತಿರುವುದು ಎಚ್ಚರಿಕೆಯ ಕರೆಗಂಟೆ! ಇವೇ ಮಕ್ಕಳು ಬೆಳೆದು ದೊಡ್ಡವರಾದಾಗ ಹೆಣ್ಣುಮಕ್ಕಳನ್ನು ಅಪಹರಿಸಿಕೊಂಡು ಹೋಗೋದು, ಮಾನಭಂಗ ಮಾಡೋದು, ಅಗತ್ಯಬಿದ್ದರೆ ಮತದ ಹೆಸರಿನಲ್ಲಿ ಕೊಲೆಗಳನ್ನೂ ಕೂಡ. ಅವರಿಗೆ ಪ್ರವಾದಿಯನ್ನು ಅವಹೇಳನ ಮಾಡಿದ್ದಾರೆ ಎಂಬುದು ನೆಪವಷ್ಟೆ. ಒಂಭತ್ತು ತಿಂಗಳುಗಳ ಕಾಲ ಜೈಲಿನಲ್ಲಿದ್ದ ಕಮಲೇಶ್ ತಿವಾರಿ ಹೊರಬಂದೊಡನೆ ಆತನನ್ನು ಇರಿದು ಕೊಂದರಲ್ಲ, ಇದು ನಾಲ್ಕು ವರ್ಷಗಳ ಹಿಂದೆ ಆತ ಮಾಡಿದ ಹೇಳಿಕೆಯೊಂದರ ಪ್ರತೀಕಾರವಾಗಿತ್ತು. 1920ರ ದಶಕದಲ್ಲಿ ಕೃಷ್ಣನ ಕುರಿತಂತೆ ಮತ್ತು ದಯಾನಂದ ಸರಸ್ವತಿಗಳ ಕುರಿತಂತೆ ಮುಸಲ್ಮಾನರು ಅವಹೇಳನಕಾರಿಯಾಗಿ ಬರೆದಿದ್ದಾಗ ಮಹಾಶಯ್ ರಾಜ್‌ಪಾಲ್‌ರು ರಂಗೀಲಾ ರಸೂಲ್ ಎಂಬೊಂದು ಪುಸ್ತಕವನ್ನು ತಮ್ಮ ಪ್ರಕಾಶನದಿಂದ ಹೊರತಂದಿದ್ದರು. ಕಿಡಿಕಿಡಿಯಾದ ಮುಸಲ್ಮಾನರು ಲೇಖಕನ ಹೆಸರನ್ನು ಬಹಿರಂಗ ಪಡಿಸುವಂತೆ ಮಹಾಶಯ್‌ರನ್ನು ಬಗೆ-ಬಗೆಯಾಗಿ ಪೀಡಿಸಿದರೂ ಅವರು ಬಾಗಲಿಲ್ಲ. ಕೊನೆಗೆ ಅನೇಕ ಬಾರಿ ಪ್ರಯತ್ನಿಸಿ ಏಳೆಂಟು ವರ್ಷಗಳ ನಂತರ ಅವರನ್ನು ಬಡಿಗೆ ಕೆಲಸ ಮಾಡುವವನೊಬ್ಬ ಕೊಂದು ಹಾಕಿದ. ತೀರಾ ಇತ್ತೀಚೆಗೆ ಗುಜರಾತಿನ ಕಿಶನ್ ಭಾರ್ವಾಡ ಪ್ರವಾದಿಯವರ ಚಿತ್ರವನ್ನು ಹಂಚಿಕೊಂಡಿದ್ದನೆಂಬ ಒಂದೇ ಕಾರಣಕ್ಕೆ ಆತನನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಶಿವಮೊಗ್ಗದ ಹರ್ಷನ ಕಥೆ ಇದಕ್ಕಿಂತಲೂ ಭಿನ್ನವಾಗಿರಲಿಲ್ಲ. ಹಾಗಂತ ಇದು ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಕೂಡ ಈ ಪ್ರಯತ್ನಗಳಾಗಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಲ್ಮಾನ್ ತಾಸಿರ್ ದೇವದೂಷಣೆಯ ಕುರಿತ ಕಾನೂನುಗಳು ಇಂಧನ ಯುಗಕ್ಕೆ ಸಲ್ಲದ್ದೆಂದು ಹೇಳಿ ಕಾಸಿಯಾ ಬೀಬಿಯ ಪರವಾಗಿ ನಿಂತಿದ್ದ ಎಂಬ ಒಂದೇ ಕಾರಣಕ್ಕೆ ಗುಂಡಿಟ್ಟು ಕೊಲ್ಲಲಾಗಿತ್ತು. ಪ್ಯಾರಿಸ್ನಲ್ಲಿ ಶಾಲೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿಯವರ ಚಿತ್ರವನ್ನು ತೋರಿಸಿದ ಎಂಬ ಒಂದೇ ಕಾರಣಕ್ಕೆ ಸ್ಯಾಮುಯಲ್ ಪ್ಯಾಟಿಯ ಕತ್ತು ಕಡಿಯಲಾಗಿತ್ತು. ನೈಜೀರಿಯಾದಲ್ಲಿ ದೆಬೊರಾ ಸ್ಯಾಮುಯಲ್ ಎಂಬ ವಿದ್ಯಾರ್ಥಿಗೂ ಇದೇ ಗತಿ ಕಾಣಿಸಲಾಗಿತ್ತು. ಪಾಕಿಸ್ತಾನದಲ್ಲಿದ್ದ ಶ್ರೀಲಂಕೆಯ ನೌಕರನೊಬ್ಬನನ್ನು ವಿನಾಕಾರಣ ಬಡಿದು ಕೊಂದದ್ದು ತೀರಾ ಇತ್ತೀಚಿನ ಘಟನೆಗಳಲ್ಲೊಂದು! ಇವಿಷ್ಟನ್ನೂ ಈಗೇಕೆ ಸ್ಮರಿಸಿಕೊಳ್ಳುತ್ತಿದ್ದೇನೆಂದರೆ ಮುಸಲ್ಮಾನರು ಸಂಘ ಜೀವನಕ್ಕೆ ಹೇಳಿ ಮಾಡಿಸಿದವರಲ್ಲ. ಅವರು ಸಾಗುತ್ತಿರುವ ಈಗಿನ ಹಾದಿಯನ್ನು ನೋಡಿದರೆ ಅವರು ತಿದ್ದಿಕೊಳ್ಳುವಂತೆಯೂ ಕಾಣುವುದಿಲ್ಲ. ಅದಕ್ಕೆ ಪೂರಕವಾಗಿ ನಾವೂ ಕೂಡ ಬದಲಾವಣೆ ತರಬಲ್ಲ ಯಾವ ಚಟುವಟಿಕೆಗಳನ್ನೂ ನಡೆಸುತ್ತಿಲ್ಲ. ಎನ್‌ಡಿಟಿವಿಯ ವಿಷ್ಣು ಸೋಮ್ ಇತ್ತೀಚಿನ ತನ್ನ ಚರ್ಚೆಯಲ್ಲಿ ದೇಶ್ ರತನ್ ಅಂತರ್ರಾಷ್ಟ್ರೀಯ ವರದಿಗಳ ಪ್ರಕಾರ ಇರುವ ಭಯೋತ್ಪಾದಕರಲ್ಲಿ 95 ಪ್ರತಿಶತ ಮಸುಲ್ಮಾನರೆಂದೂ, 95 ಪ್ರತಿಶತ ಸಂಘಟನೆಗಳೂ ಮುಸಲ್ಮಾನರದ್ದೆಂದು ಹೇಳಿದಾಗ ಏನೆಂದು ಪ್ರತಿಕ್ರಿಯಿಸಿದ ಗೊತ್ತೇ? ‘ಈ ವರದಿ ನಿಜವಾಗಿದ್ದರೂ ಅದನ್ನು ಜೋರಾಗಿ ಹೇಳಿ ಮುಸಲ್ಮಾನರಿಗೆ ನೋವುಂಟು ಮಾಡಬಾರದು’ ಅಂತ! ಭಯೋತ್ಪಾದಕರನ್ನು ಬಿಟ್ಟು ಉಳಿದವರು ಒಳ್ಳೆಯವರಿದ್ದಾರಲ್ಲ ಎಂಬುದು ಅವನ ಅಂಬೋಣ. ಆದರೆ ಆ ಉಳಿದ ಒಳ್ಳೆಯವರು ಭಯೊತ್ಪಾದಕರನ್ನು ತಿರಸ್ಕರಿಸದಿದ್ದರೆ, ಅವರನ್ನು ವಿರೋಧಿಸದಿದ್ದರೆ, ಅವರ ವಿರುದ್ಧ ಫತ್ವಾ ಹೊರಡಿಸುವ ತಾಕತ್ತು ತೋರದಿದ್ದರೆ ಅವರನ್ನು ಒಳ್ಳೆಯವರೆಂದು ಒಪ್ಪುವುದಾದರೂ ಹೇಗೆ?

ಭಾರತದ ಮುಸಲ್ಮಾನರು ಒಂದು ದಿಕ್ಕಿನಿಂದ ಸ್ಪಷ್ಟತೆಯನ್ನು ತಂದುಕೊಳ್ಳುತ್ತಿದ್ದಾರೆ. ಇದು ಅವರಿಗೆ ಕೊನೆಯ ಅವಕಾಶವೆಂಬುದು ಗೊತ್ತಿದೆ. ಮೋದಿ ತರುತ್ತಿರುವ ಒಂದೊಂದು ಸುಧಾರಣೆಯ ಕ್ರಮಗಳೂ ಅವರನ್ನು ಅನಿವಾರ್ಯವಾಗಿ ಮುಖ್ಯವಾಹಿನಿಯೊಂದಿಗೆ ಏಕರಸವಾಗಿಸುತ್ತಿವೆ. ಬಹುತೇಕ ಮುಸಲ್ಮಾನ ಮಹಿಳೆಯರು ಈಗ ಮುಸಲ್ಮಾನರ ಪುರುಷ ಪ್ರಧಾನ ಧೋರಣೆಯನ್ನು ಧಿಕ್ಕರಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಅವರಿಗೀಗ ಹಿಂದೂ ದೇವತೆಗಳನ್ನು ಅವಹೇಳನಗೊಳಿಸಿದ ಎಮ್.ಎಫ್ ಹುಸೇನನ ವಿಕೃತಿಯ ಕುರಿತಂತೆ, ಹಿಂದೂ ದೇವರುಗಳ ಕುರಿತಂತೆ ಮನಸೋ ಇಚ್ಛೆ ಮಾತನಾಡಿದ ಓವೈಸಿಯ ಭಾಷಣಗಳ ಕುರಿತಂತೆ ವ್ಯಾಪಕವಾಗಿ ಪರಿಚಯ ಮಾಡಿಸಿಕೊಡಬೇಕಿದೆ. ತಮ್ಮ ದೇವರು ಮಾತ್ರ ದೇವರು, ಉಳಿದವರ ದೇವರು ದೇವರಲ್ಲ ಎಂಬ ಈ ಧೋರಣೆಯನ್ನು ಭಾರತ ಸರಿಯಾಗಿ ಎದುರಿಸಬೇಕಿದೆ. ಕೇಂದ್ರ ಸರ್ಕಾರಕ್ಕೆ ಇನ್ನೂ ಎರಡು ವರ್ಷವಿದೆ. ಅಷ್ಟರೊಳಗೆ ಈ ಆತತಾಯಿಗಳಿಗೆ ಸರಿಯಾದ ಬುದ್ಧಿ ಕಲಿಸದೇ ಹೋದರೆ ಸತ್ತ ನಂತರದ ಸ್ವರ್ಗ-ನರಕಗಳ ಬಗ್ಗೆ ಗೊತ್ತಿಲ್ಲ, ಬದುಕಿದ್ದಾಗಲೇ ಇವರು ಭಾರತವನ್ನು ನರಕವಾಗಿಸಿಬಿಡುತ್ತಾರೆ!!

ಪಾಕಿಸ್ತಾನಕ್ಕೆ ಸಹಾಯ ಬೇಕಿದೆ, ಜಿಂದಾಬಾದ್ ಎನ್ನುವವರು ಹೋಗಬಹುದು!

ಪಾಕಿಸ್ತಾನಕ್ಕೆ ಸಹಾಯ ಬೇಕಿದೆ, ಜಿಂದಾಬಾದ್ ಎನ್ನುವವರು ಹೋಗಬಹುದು!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರಕ್ಕೆ ಕಠೋರವಾದ ಎಚ್ಚರಿಕೆ ಕೊಟ್ಟಿದ್ದಾನೆ. ಆರು ದಿನಗಳೊಳಗೆ ಚುನಾವಣೆಯನ್ನು ಘೋಷಿಸದಿದ್ದರೆ ತನ್ನ ಜೊತೆಗಾರರೊಂದಿಗೆ ಬೀದಿಗಿಳಿಯುತ್ತೇನೆ ಎಂದಿದ್ದಾನೆ. ಈ ಬಾರಿ ಬೀದಿಗಿಳಿದರೆ ಇದು ಹಿಂಸಾತ್ಮಕವಾಗಿರುವ ಹೋರಾಟವಾಗಬಹುದು ಎಂಬ ಹೆದರಿಕೆಯೂ ಎಲ್ಲರಲ್ಲಿದೆ. ಇತ್ತ ಪಾಕಿಸ್ತಾನದ ಈಗಿನ ಪ್ರಧಾನಿ ಶೆಹ್ಬಾಜ್ ಷರೀಫ್ ಪಾಕಿಸ್ತಾನದ ಇಂದಿನ ಪರಿಸ್ಥಿತಿಗಳಿಗೆಲ್ಲ ಇಮ್ರಾನ್ಖಾನನ ಸರ್ಕಾರವೇ ಕಾರಣ ಎಂದು ಒಪ್ಪಿಸುವ ಹಠಕ್ಕೆ ಬಿದ್ದಿದ್ದಾರೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿ ಲಾಹೋರಿನಲ್ಲಿ ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಂನಲ್ಲಿ ಹಣ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ! 

ಪಾಕಿಸ್ತಾನದ ಸ್ಥಿತಿ ಸದ್ಯದಲ್ಲೇ ಶ್ರೀಲಂಕಾದಂತೆ ಆದರೆ ಯಾರೂ ಅಚ್ಚರಿ ಪಡಬೇಕಿಲ್ಲ. ಅನೇಕರು ಇದರ ಮೂಲವನ್ನು ಭಾರತದ ನೋಟು ರದ್ದತಿಯಲ್ಲಿ ಹುಡುಕುತ್ತಾರೆ. ಅಲ್ಲಿಯವರೆಗೂ ನಕಲಿ ನೋಟುಗಳ ಮುದ್ರಣದಿಂದ ಸಾಕಷ್ಟು ಸಂಪಾದನೆ ಮಾಡುತ್ತಿದ್ದ ಪಾಕಿಸ್ತಾನ ಏಕಾಕಿ ಪ್ರಪಾತಕ್ಕೆ ಬಿತ್ತು ಎನ್ನುವುದು ಅಭಿಪ್ರಾಯ. ಅದು ಸತ್ಯವೂ ಇರಬಹುದು. ಏಕೆಂದರೆ ಅಲ್ಲಿಯವರೆಗೂ ಮೆರೆದಾಡುತ್ತಿದ್ದ ಪಾಕಿಸ್ತಾನ ಆನಂತರ ಏಕಾಕಿ ತುಮುಲಕ್ಕೆ ಬಿತ್ತು. ಮುಂದೆ ಬೀದಿಗಿಳಿದು ಹೋರಾಟ ಮಾಡುತ್ತಲೇ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಈ ಪರಿಸ್ಥಿತಿಯನ್ನು ಹಾಳುಗೆಡವಿದ. ವಾಸ್ತವವಾಗಿ ಆತ ಅಧಿಕಾರಕ್ಕೆ ಬಂದದ್ದೇ ಸೈನ್ಯದ ಸಹಕಾರದೊಂದಿಗೆ. ಪಾಕಿಸ್ತಾನದ ವಿಚಾರದಲ್ಲಿ ಇದೇನು ಹೊಸ ಸಂಗತಿಯಲ್ಲ ಬಿಡಿ. ಸೈನ್ಯದ ಅನುಮತಿಯಿಲ್ಲದೇ ಅಲ್ಲಿ ಯಾವ ರಾಜಕೀಯ ಚಟುವಟಿಕೆಗಳೂ ನಡೆಯುವುದಿಲ್ಲ. ಆದರೆ ತನಗೆ ಬೇಕಾದ ಅಧಿಕಾರಿಯೊಬ್ಬನನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿಕೊಳ್ಳಲು ಸೈನ್ಯ ಅನುಮತಿ ನಿರಾಕರಿಸಿದಾಗ ಎಲ್ಲ ಗೊಂದಲವೂ ಆರಂಭವಾದವು. ಐಎಸ್ಐನ ಡೈರೆಕ್ಟರ್ ಜನರಲ್ನನ್ನು ವರ್ಗಾವಣೆ ಮಾಡುವಂತೆ ಸೈನ್ಯ ಆದೇಶಿಸಿತ್ತು. ತನಗೆ ನಿಷ್ಠನಾಗಿರುವ ಆತನನ್ನು ಚುನಾವಣೆಯವರೆಗೂ ಉಳಿಸಿಕೊಳ್ಳಬೇಕಿತ್ತಲ್ಲದೇ ಅಗತ್ಯಬಿದ್ದರೆ ಸೈನ್ಯದ ಮುಖ್ಯಸ್ಥನನ್ನಾಗಿ ಮಾಡಬೇಕೆಂಬುದು ಇಮ್ರಾನನ ಬಯಕೆಯಾಗಿತ್ತು. ಯಾವಾಗ ಆತ ಸೈನ್ಯದ ಮಾತನ್ನು ಕೇಳುವುದನ್ನು ವಿರೋಧಿಸಿದನೋ ಅಂದೇ ಆತನ ಮೇಲಿದ್ದ ಅಭಯಹಸ್ತ ಹೊರಟುಹೋಯ್ತು. ಆತನ ಬಹುಮತಕ್ಕೆ ಕಾರಣವಾಗಿದ್ದ ಎರಡು ಚಿಕ್ಕ ಪಕ್ಷಗಳು ದಳ ಬದಲಾಯಿಸಿ ಕಾನೂನಾತ್ಮಕವಾಗಿಯೇ ಸರ್ಕಾರವನ್ನು ಉರುಳಿಸಿದರು. ಇಮ್ರಾನ್ ಸುಮ್ಮನಿರಲಿಲ್ಲ. ಸರ್ಕಾರವನ್ನೇ ಬರ್ಖಾಸ್ತು ಮಾಡುವ ಪ್ರಯತ್ನವನ್ನೂ ಮಾಡಿದ್ದ. ಆದರದು ನ್ಯಾಯಾಲಯದಲ್ಲಿ ಬಿದ್ದುಹೋಯ್ತು. ಹೀಗಾಗಿ ಆತ ಅನಿವಾರ್ಯವಾಗಿ ಅಧಿಕಾರದಿಂದ ಇಳಿಯಬೇಕಾಯ್ತು. ಈ ರೀತಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧಿಕಾರ ಕಳೆದುಕೊಂಡ ಪಾಕಿಸ್ತಾನದ ಮೊದಲ ಪ್ರಧಾನಿಯಾದ ಆತ! ಹಾಗಂತ ಅವಧಿ ಪೂರೈಸದೇ ಹೋದ ಮೊದಲನೆಯವನೇನೂ ಅಲ್ಲ. ಬಹುತೇಕ ಪಾಕಿಸ್ತಾನದ ಎಲ್ಲ ಪ್ರಧಾನಿಗಳೂ ಅವಧಿಗೆ ಮುನ್ನವೇ ಕೆಳಗಿಳಿಯುತ್ತಾರೆ ಏಕೆಂದರೆ ಅವರೆಲ್ಲರೂ ಸೈನ್ಯದ ಕೈಗೊಂಬೆಗಳೇ ಆಗಿರುತ್ತಾರೆ. 

ಆದರೆ ಇಮ್ರಾನ್‌ಖಾನನಿಗೆ ಜನಬೆಂಬಲ ಜೋರಾಗಿಯೇ ಇತ್ತು. ಒಮ್ಮೊಮ್ಮೆ ಆತ ಪಾಕಿಸ್ತಾನದ ಕೇಜ್ರಿವಾಲನಂತೆ ಕಾಣುತ್ತಾನೆ. ಅಗತ್ಯ ಬಿದ್ದಾಗ ಮಾತನ್ನು ಹೊರಳಿಸುತ್ತಾ, ಜನರನ್ನು ನಂಬಿಸುವುದರಲ್ಲಿ ನಿಸ್ಸೀಮ. ಐಎಮ್ಎಫ್ನ ಸಾಲಕ್ಕೆ ಸಹಿ ಹಾಕಿ ಬಂದವನು ಅವನೇ. ಆದರೆ ಈ ಸಾಲ ಪಡೆಯಲು ಆತ ಕೈಗೊಳ್ಳಬೇಕಾಗಿದ್ದ ನಿರ್ಣಯಗಳು ಮಾತ್ರ ಕಠಿಣವಾಗಿದ್ದವು. ಅದಕ್ಕೂ ಒಪ್ಪಿಕೊಂಡು ಬಂದಿದ್ದ. ಈಗ ಆತನ ಸಕರ್ಾರ ಉರುಳಿ ಹೊಸ ಸಕರ್ಾರ ಬಂತಲ್ಲ. ಅದು ಈ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಬೇಕಾಯ್ತು. ಐಎಮ್ಎಫ್‌ನ ಸಾಲ ತರಲು ಇಮ್ರಾನ್ ಖಾನ್ ಘೋಷಿಸಿದ್ದ ಇಂಧನದ ಮೇಲಿನ ಸಬ್ಸಿಡಿಯನ್ನು ಕಡಿತ ಮಾಡಲೇಬೇಕಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಮೊನ್ನೆ ಪಾಕಿಸ್ತಾನದ ಪ್ರಧಾನಿ 30 ರೂಪಾಯಿಯಷ್ಟು ಇಂಧನ ಬೆಲೆ ಏರಿಸಿದ. ಇಮ್ರಾನ್ ಬೀದಿಯಲ್ಲಿ ನಿಂತು ಗೊಳೋ ಎಂದು ಅಳುವುದೊಂದಷ್ಟೇ ಬಾಕಿ. ತೈಲ ಬೆಲೆ ಏರಿಕೆಗೆ ತಾನೇ ಮಾಡಿಕೊಂಡಿದ್ದ ಒಪ್ಪಂದಗಳು ಕಾರಣವೆನ್ನುವುದನ್ನು ಆತ ಮರೆಮಾಚಿ ಜನರ ದುಃಖದ ಲಾಭವನ್ನು ಪಡೆದುಕೊಂಡು ಸಾವಿರಾರು ಮಂದಿಯನ್ನು ಬೀದಿಗಳಲ್ಲಿ ಸೇರಿಸಿ ಅವರನ್ನು ಭಡಕಾಯಿಸುವ ಕೆಲಸ ಮಾಡುತ್ತಿದ್ದಾನೆ! ಹೀಗಾಗಿಯೇ ಪಾಕಿಸ್ತಾನದ ಈಗಿನ ಪ್ರಧಾನಿ ಆಂತರಿಕ ದಂಗೆಯ ಮಾತಾಡುತ್ತಿರೋದು. ಇಮ್ರಾನ್ ಸ್ವಾತಂತ್ರ್ಯ ನಡಿಗೆಯನ್ನು ಇಸ್ಲಾಮಾಬಾದ್ಗೆ ಕೊಂಡೊಯ್ಯುವ ಮಾತನಾಡುತ್ತಿದ್ದಾನೆ. ಹೊಸ ಸರ್ಕಾರವನ್ನು ಆತನ ಬೆಂಬಲಿಗರು ನಂಬುತ್ತಿಲ್ಲ. ಅವರು ತೆಗೆದುಕೊಂಡ ಪ್ರತಿ ನಿರ್ಣಯವನ್ನೂ ವಿರೋಧಿಸುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಈಗಿನ ಪ್ರಧಾನಿ ಶೆಹ್ಬಾಜ್ ಷರೀಫ್ ನವಾಜ್ ಷರೀಫ್ನ ಸಹೋದರ. ಭ್ರಷ್ಟಾಚಾರದ ಪ್ರಕರಣಗಳ ಆರೋಪ ಹೊತ್ತಿರುವ ನವಾಜ್ ಈಗ ಪಾಕಿಸ್ತಾನದಲ್ಲಿಲ್ಲ, ಆದರೆ ಪಕ್ಷದ ಮೇಲೆ ಅವನ ಹಿಡಿತ ಈಗಲೂ ಬಲವಾಗಿದೆ. ಹೀಗಾಗಿಯೇ ಶೆಹ್ಬಾಜ್ ಅಧಿಕಾರದಲ್ಲಿ ಕುಳಿತಿದ್ದರೂ ಹಿಂದಿನಿಂದ ನಿಯಂತ್ರಣದಲ್ಲಿಟ್ಟುಕೊಂಡಿರೋದು ನವಾಜ್ರೇ. ಇಮ್ರಾನ್ ಖಾನನ ಮೇಲೆ ಈಗಿನ ಸರ್ಕಾರ ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿ ಒಳತಳ್ಳುವ ಯೋಜನೆಯನ್ನೇನೋ ಹಾಕಿಕೊಂಡಿದೆ. ಆದರೆ ನವಾಜ್ ಷರೀಫನ ಮೇಲಿನ ಆರೋಪಗಳಿಗೆ ಉತ್ತರ ಸಿಗುವವರೆಗೂ ಇಮ್ರಾನನನ್ನು ಮುಟ್ಟಿದರೆ ಜನ ಸಿಡಿದೇಳುವುದು ನಿಶ್ಚಿತ. ಈಗಾಗಲೇ ಇಮ್ರಾನಿನ ಬೆಂಬಲಿಗರು ಮಾಡಿರುವ ರಾದ್ಧಾಂತವನ್ನು ನಿಭಾಯಿಸುವಲ್ಲಿ ಈಗಿನ ಸಕರ್ಾರ ಸಂಪೂರ್ಣ ಸೋತುಹೋಗಿದೆ.

ಇತ್ತ ಪಾಕಿಸ್ತಾನದ ಸಾಲ ಏರುತ್ತಲೇ ಇದೆ. ಈಗಾಗಲೇ 90 ಬಿಲಿಯನ್ಗಳಷ್ಟು ಸಾಲ ಹೊಂದಿರುವ ಪಾಕಿಸ್ತಾನ ತನ್ನೆಲ್ಲ ಕನಸುಗಳನ್ನು ನುಚ್ಚುನೂರು ಮಾಡಿಕೊಂಡಿದೆ. ಪಾಕಿಸ್ತಾನದ ಜಿಡಿಪಿ 315 ಬಿಲಿಯನ್ ಡಾಲರ್ಗಳಿಂದ 292 ಬಿಲಿಯನ್ ಡಾಲರ್ಗಳಿಗೆ ಇಳಿದಿದೆ. ವಿದೇಶಿ ವಿನಿಮಯ ಉಳಿಕೆ 20 ಮಿಲಿಯನ್ ಡಾಲರ್ಗಳಷ್ಟಿದ್ದು ಇನ್ನು ಒಂದೂವರೆ ತಿಂಗಳಿಗಾಗುವಷ್ಟು ಆಮದನ್ನು ಮಾತ್ರ ಮಾಡಿಕೊಳ್ಳಬಹುದಾದ ಭಯಾನಕ ಸ್ಥಿತಿಯಲ್ಲಿ ಅವರಿದ್ದಾರೆ! ಇದನ್ನು ಗಮನಿಸಿಯೇ ತೈಲ ಉತ್ಪನ್ನಗಳಿಗಾಗಿ ವಿದೇಶಿ ಬ್ಯಾಂಕುಗಳು ಕೊಡುವ ಸಾಲದ ಗ್ಯಾರಂಟಿಯನ್ನು ರದ್ದು ಮಾಡಿಬಿಟ್ಟಿದೆ. ಪ್ರತಿರಾಷ್ಟ್ರದ ಬ್ಯಾಂಕುಗಳಿಗೂ ವಿದೇಶಿ ಬ್ಯಾಂಕುಗಳು ಸಾಲಕೊಟ್ಟು ಆಮದಿಗೆ ಅನುಕೂಲ ಮಾಡಿಕೊಡುತ್ತವೆ. ಅಕಸ್ಮಾತ್ ಆಯಾ ರಾಷ್ಟ್ರಗಳು ಹಣ ಪೂರೈಕೆ ಮಾಡುವಲ್ಲಿ ಸೋತರೆ ವಿದೇಶಿ ಬ್ಯಾಂಕುಗಳೇ ಎಲ್ಲ ಹೊಣೆಯನ್ನೂ ಹೊರಬೇಕು. ಇದನ್ನರಿತೇ ಈ ಬ್ಯಾಂಕುಗಳೆಲ್ಲ ಎಚ್ಚರಿಕೆಯ ಹೆಜ್ಜೆಯನ್ನಿರಿಸುತ್ತಿದೆ. ಸಾಲ ಮರಳಿ ಕೊಡುವ ತಾಕತ್ತು ಪಾಕಿಸ್ತಾನಕ್ಕೆ ಈಗ ಇಲ್ಲವೆಂಬುದು ಅವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಅದರರ್ಥ ಇನ್ನೆರಡು ತಿಂಗಳುಗಳ ನಂತರ ಪಾಕಿಸ್ತಾನದಲ್ಲಿ ಸುರಿದುಕೊಂಡು ಸಾಯಬೇಕೆಂದರೂ ಒಂದು ಹನಿ ಪೆಟ್ರೋಲು ಸಿಗಲಾರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪಾಕಿಸ್ತಾನ ವಿಷ ವರ್ತುಲದಲ್ಲಿ ಸಿಲುಕಿಕೊಂಡಿದೆ. ಆಂತರಿಕ ದಂಗೆಗಳ ಕಾರಣಕ್ಕೆ ಜಿಡಿಪಿ ಕಡಿಮೆಯಾಗುತ್ತಿದೆ, ಇದು ರಾಷ್ಟ್ರದ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುತ್ತಿದೆ. ಇದರಿಂದಾಗಿಯೇ ವಿದೇಶಗಳು ಸಾಲಕೊಡಲು ಮುಂದೆ ಬರುತ್ತಿಲ್ಲ. ಸಾಲವಿಲ್ಲದಿದ್ದುದರಿಂದ ಸರ್ಕಾರ ಧೈರ್ಯವಾಗಿ ಉತ್ಪಾದನೆಗೆ ಮುಂದಿಡಲಾಗುತ್ತಿಲ್ಲ. ಜಿಡಿಪಿ ಮತ್ತಷ್ಟು ಕುಸಿಯಲಿದೆ, ಸಾಲ ಮತ್ತಷ್ಟು ಹೆಚ್ಚಲಿದೆ. ಈ ವರ್ತುಲದಿಂದ ಸದ್ಯಕ್ಕೆ ಅವರು ಆಚೆಗೆ ಬರುವುದು ಕಷ್ಟವಿದೆ. ಅವರು ಮೊರೆ ಹೋಗಬೇಕಾಗಿರುವುದು ಸರ್ವಋತು ಮಿತ್ರ ಚೀನಾವನ್ನು ಮಾತ್ರ. ಆದರೆ, ಚೀನಾ ಪಾಕಿಸ್ತಾನವನ್ನು ಕ್ಯಾರೆ ಎನ್ನುತ್ತಿಲ್ಲ. ಪಾಕಿಸ್ತಾನ ತನ್ನ ಸಾಲವನ್ನು ಮರಳಿಸಬೇಕೆಂದು ಒತ್ತಡ ಹೇರುತ್ತಿದೆ ಕೂಡ. ಈ ಕಾರಣಕ್ಕಾಗಿಯೇ ಪಾಕಿಸ್ತಾನದ ಭರವಸೆಯ ಚೀನಾ ಪಾಕ್ ಎಕನಾಮಿಕ್ ಕಾರಿಡಾರ್ ಮೂಲೆಗುಂಪಾಗಿಹೋಗಿದೆ. ಪಾಕಿಸ್ತಾನ ಸುಮಾರು ಒಂದೂವರೆ ಬಿಲಿಯನ್ ಡಾಲರ್ಗಳಷ್ಟು ಹಣವನ್ನು ಚೀನೀ ಕಂಪೆನಿಗಳಿಗೆ ಕೊಡಬೇಕಾಗಿದೆ. ಹಣ ಕೊಡುವವರೆಗೆ ಪಾಕಿಸ್ತಾನಕ್ಕೆ ಸಹಕಾರ ನೀಡುವುದಿಲ್ಲ ಎಂದು ಚೀನಾ ಖಡಕ್ಕಾಗಿ ಹೇಳಿದೆ. ಅತ್ತ ಸೌದಿ ಅರೇಬಿಯಾ ಆಗಾಗ ತಾನು ಕೊಟ್ಟ ಸಾಲವನ್ನು ನೆನಪಿಸುತ್ತಾ ಮರಳಿ ಕೊಡುವಂತೆ ಒತ್ತಡ ಹೇರುತ್ತಿದೆ. ಈಗ ಐಎಮ್ಎಫ್ನಿಂದ ಸಾಲತಂದರೂ ಪಾಕಿಸ್ತಾನ ಈ ಸಾಲದ ಬಡ್ಡಿಯನ್ನು ತೀರಿಸಲು ಅದನ್ನು ಬಳಸಬಹುದೇ ವಿನಃ ಹೊಸ ಚಟುವಟಿಕೆಗಳಿಗಲ್ಲ. ಹಾಗೆಂದೇ ಅದೀಗ ಟರ್ಕಿಯತ್ತ ಮುಖಮಾಡಿ ನಿಂತಿದೆ. ಟರ್ಕಿಯೂ ಸಹಾಯ ಮಾಡಬಹುದಾದ ಬಲವಾದ ಸ್ಥಿತಿಯಲ್ಲಿದೆ ಎಂದೇನೂ ಭಾವಿಸಬೇಡಿ. ಮತ್ತು ಸಹಾಯ ಮಾಡುವ ಸಾಧ್ಯತೆ ಕಂಡುಬಂದರೆ ಭಾರತ ಅಡ್ಡಗಾಲು ಹಾಕಿ ನಿಲ್ಲುವುದು ನಿಶ್ಚಿತ. ಹೀಗಾಗಿಯೇ ಪಾಕಿಸ್ತಾನದ ಪರಿಸ್ಥಿತಿ ಬಲು ಭಯಾನಕವಾಗಿದೆ. ಇಲ್ಲಿ ಅನೇಕರು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುತ್ತಾರಲ್ಲ, ಅವರೆಲ್ಲ ಅಲ್ಲಿಗೆ ಹೊಗಿ ಪಾಕಿಸ್ತಾನದ ಶಕ್ತಿಯನ್ನು ವೃದ್ಧಿಸುವುದೊಳಿತು ಎಂದೆನಿಸುತ್ತದೆ.

ಅತ್ತ ಚೀನಾದ ಸ್ಥಿತಿಯೂ ಚೆನ್ನಾಗೇನೂ ಇಲ್ಲ. ಕ್ರಾಂತಿಯ ನಂತರ ಹುಟ್ಟಿಕೊಂಡ ಹೊಸ ಚೀನಾದಲ್ಲಿಯೇ ಮೊದಲ ಬಾರಿಗೆ ಆರ್ಥಿಕ ವೃದ್ಧಿಯ ದರವನ್ನು 5.5ರಷ್ಟು ಕನಿಷ್ಠ ಮಟ್ಟಕ್ಕೆ ನಿಗಧಿ ಪಡಿಸಲಾಗಿದೆ. ಅಧ್ಯಕ್ಷ ಷಿ ಮತ್ತು ಪ್ರಧಾನಿ ಲಿ ಕಿಕಿಯಾಂಗ್ ನಡುವಿನ ಜಗಳಗಳು ಈಗ ಎದ್ದೆದ್ದು ಕಾಣುತ್ತಿವೆ. ತನ್ನ ಶೂನ್ಯ ಕೊವಿಡ್ ಪಾಲಿಸಿಯನ್ನು ಹೆಮ್ಮೆಯಿಂದ ಕೊಂಡಾಡುತ್ತಿದ್ದ ಷಿ ಈಗ ಅದರ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದಾನೆ. ಇದರ ವಿರುದ್ಧ ಯಾರೂ ಮಾತನಾಡದಂತೆ ಆತ ನಿರ್ಬಂಧ ವಿಧಿಸಿದ್ದಾನೇನೋ ನಿಜ. ಸ್ವತಃ ಪ್ರಧಾನಿ ಲಿ ಪರೋಕ್ಷವಾಗಿ ಷಿಯನ್ನು ವಿರೋಧಿಸಲಾರಂಭಿಸಿದ್ದಾನೆ. ಕಂಪೆನಿಗಳು ಗುಳೆ ಹೋಗುತ್ತಿರುವ, ಜನರು ದಂಗೆಯೇಳುವ ಸ್ಥಿತಿ ನಿರ್ಮಾಣವಾಗಿರುವಂತಹ ಈ ಹೊತ್ತಲ್ಲಿ ಚೀನಾ ಎಚ್ಚರಿಕೆಯಿಂದ ಮುಂದಡಿಯಿಡುತ್ತಿದೆ. ಉಕ್ರೇನ್-ರಷ್ಯಾ ಯುದ್ಧದಲ್ಲಿ ರಷ್ಯಾದ ಬೆಂಬಲಕ್ಕೆ ಚೀನಾ ಪೂರ್ಣವಾಗಿ ನಿಂತಿರುವುದಂತೂ ಜಗತ್ತಿನ ಜನರ ಕಣ್ಣು ಕೆಂಪಗಾಗಿಸಿದೆ. ಇದರಿಂದಾಗಿಯೇ ಈ ಬಾರಿಯ ಕ್ವಾಡ್ ಸಭೆಯಲ್ಲಿ ಭಾರತಕ್ಕೆ ಬಲ ದೊರೆತದ್ದು. ಚೀನಾ ಯಾವ ಸೈನ್ಯದ ಮೇಲೆ ನಂಬಿಕೆ ಇರಿಸಿಕೊಂಡಿತ್ತೋ ಅದು ಕೂಡ ಕಾಗದದ ಹುಲಿ ಎಂದೇ ಜಗತ್ತು ಮಾತನಾಡಿಕೊಳ್ಳುವುದುನ್ನು ನೋಡಿದರೆ ಚೀನಾಕ್ಕೂ ಬಲವಾದ ಸಮಸ್ಯೆ ಇದೆ! 

ಶ್ರೀಲಂಕಾದ ಬಗ್ಗೆ ಮಾತನಾಡದಿರುವುದೇ ಒಳಿತು. ಚೀನಾದಿಂದ ಸಾಲ ತೆಗೆದುಕೊಂಡವರ ಕಥೆ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾಕ್ಕಿಂತ ಬಲವಾದ ಉದಾಹರಣೆ ಯಾರೂ ಬೇಕಾಗಿಲ್ಲ. ಶ್ರೀಲಂಕಾ ಉರಿದು ಹೋಗುವ ಹಂತದಲ್ಲಿದೆ. ಸಹಾಯ ಎಲ್ಲಿಂದ ಬರಬಹುದೆಂದು ಕಾತರದ ಕಂಗಳಿಂದ ಕಾಯುತ್ತಿದೆ. ಆದರೆ ಇಡಿಯ ಜಗತ್ತು ತೊಂದರೆಗೆ ಸಿಲುಕಿರುವಾಗ ಶ್ರೀಲಂಕಾದ ಉದ್ಧಾರಕ್ಕೆ ಸದ್ಯದಮಟಿಗೆ ಯಾರೂ ಬರಲಾರರು! ನೇಪಾಳವಾಗಲೀ ಮಯನ್ಮಾರ್ ಆಗಲಿ, ಮಲೇಷಿಯಾವಾಗಲಿ ಇಂಡೋನೇಷ್ಯಾವೇ ಆಗಲಿ, ಅತ್ತ ಅಮೇರಿಕಾ-ಯುರೋಪುಗಳೂ ಕೂಡ ಕರೋನ ನಂತರದ ಆರ್ಥಿಕ ದುಃಸ್ಥಿತಿಯತ್ತ ಹಂತ-ಹಂತವಾಗಿ ಹೆಜ್ಜೆ ಇಡುತ್ತಿವೆ. ಸ್ವಲ್ಪಮಟ್ಟಿಗೆ ಈ ಎಲ್ಲ ಹೊಡೆತಗಳಿಂದಲೂ ಪಾರಾಗಿರುವುದು ನಾವು ಮಾತ್ರ. 

ನರೇಂದ್ರಮೋದಿ ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದಾರೆ. ಜಗತ್ತಿನ ವೇದಿಕೆಯ ಮುಖ್ಯ ಭೂಮಿಕೆಯಲ್ಲಿ ಅವರನ್ನೀಗ ಎಲ್ಲರೂ ಗುರುತಿಸುತ್ತಿದ್ದಾರೆ. ರಷ್ಯಾ-ಉಕ್ರೇನುಗಳ ಯುದ್ಧವಿರಲಿ, ಶ್ರೀಲಂಕಾದ ಸಮಸ್ಯೆಯೇ ಇರಲಿ, ಜಾಗತಿಕ ವ್ಯಾಪಾರ-ವಹಿವಾಟುಗಳೇ ಇರಲಿ, ಅಥವಾ ಭಯೋತ್ಪಾದನೆ, ಪರಿಸರದ ವಿಚಾರಗಳೇ ಇರಲಿ ಮೋದಿಯ ಮಾತಿಗೆ ಜಗತ್ತು ತಲೆದೂಗುತ್ತಿದೆ. ನಾವು ನಿಜಕ್ಕೂ ಸಮರ್ಥ ಕೈಗಳಲ್ಲಿದ್ದೇವೆ. ಕರೋನಾ ನಮ್ಮನ್ನು ವಿಪರೀತವಾಗಿ ಬಾಧಿಸಲಿಲ್ಲ. ಕರೋನಾ ನಂತರ ಆರ್ಥಿಕ ಮುಗ್ಗಟ್ಟು ನಮ್ಮನ್ನು ಬಾಧಿಸಲಿಲ್ಲ, ಪಕ್ಕದ ಪಾಕಿಸ್ತಾನ ಪೆಟ್ರೋಲಿಗೆ 30 ರೂಪಾಯಿ ಹೆಚ್ಚು ಮಾಡಿದರೆ, ಭಾರತದಲ್ಲಿ 9 ರೂಪಾಯಿ ಕಡಿತಗೊಳಿಸಲಾಗಿತ್ತು. ಹಣದುಬ್ಬರವನ್ನು ಹಿಡಿತಕ್ಕೆ ತಂದುಕೊಳ್ಳಲು ಬಗೆಬಗೆಯ ಸಾಹಸ ಮಾಡುತ್ತಿದೆ ಭಾರತ. ಭಾರತೀಯರಿಗೆ ಕಷ್ಟಕಾಲದಲ್ಲಿ ತೊಂದರೆಯಾಗಬಾರದೆಂದು ಗೋಧಿ ಮತ್ತು ಸಕ್ಕರೆಯ ಮೇಲೆ ರಫ್ತು ನಿಷೇಧ ಹೇರಲಾಗಿದೆ. ಎಲ್ಲವೂ ಒಂದು ಹಂತಕ್ಕೆ ಬಂದು ನಿಲ್ಲುವಾಗ ಭಾರತ ಜಗತ್ತಿನ ಭೂಪಟದಲ್ಲಿ ಉಜ್ವಲವಾಗಿ ಬೆಳಗುತ್ತಿರುತ್ತದೆ. ಈ ವಿಶ್ವಾಸ ಪ್ರತಿ ಭಾರತೀಯನಿಗೂ ಇದೆ.

ನಾವೀಗ ತಟಸ್ಥರಲ್ಲ, ‘ರಾಷ್ಟ್ರ ಮೊದಲು’ ಎನ್ನುವವರು!

ನಾವೀಗ ತಟಸ್ಥರಲ್ಲ, ‘ರಾಷ್ಟ್ರ ಮೊದಲು’ ಎನ್ನುವವರು!

ಜಾಗತಿಕ ಮಾಧ್ಯಮಗಳು ಬಲು ವಿಚಿತ್ರವಾಗಿ ವರ್ತಿಸುತ್ತವೆ. ನ್ಯೂಸ್ ನೋಡಿದರೆ ಉಕ್ರೇನಿನಲ್ಲಿ ರಷ್ಯಾದ ಭೀಕರ ಬಾಂಬ್ ದಾಳಿಗೆ ನಲುಗಿರುವ ನಗರಗಳು ಕಂಡು ಬರುತ್ತವೆ. ಇಡಿಯ ದೇಶವೇ ಸ್ಮಶಾನವಾಗಿರುವಂತೆ ಭಾಸವಾಗುತ್ತದೆ. ಸಾವು-ನೋವುಗಳ ಭೀಭತ್ಸ ವರದಿಯನ್ನು ಪದೇ-ಪದೇ ಮುಂದಿಡುತ್ತಾರೆ. ಆದರೆ ಆನಂತರ ನಡೆಯುವ ವಿಶ್ಲೇಷಣೆಗಳಲ್ಲಿ ಮಾತ್ರ ರಷ್ಯಾ ಸೋಲುತ್ತಿದೆ ಮತ್ತು ಉಕ್ರೇನ್ ಒಂದಿಂಚೂ ಬಾಗುತ್ತಿಲ್ಲ ಎಂದು ತೋರಿಸಲಾಗುತ್ತದೆ. ಇದೇ ಸಂದರ್ಭಕ್ಕೆ ರಷ್ಯಾದ ಸುದ್ದಿ ಎಲ್ಲೂ ಪ್ರಕಟವಾಗದಂತೆ ಅದನ್ನು ತಡೆಹಿಡಿಯುವ ವ್ಯವಸ್ಥಿತ ಪ್ರಯತ್ನವನ್ನು ಮಾಡುತ್ತಾರೆ. ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎನ್ನುವುದು ಎಂಥವನಿಗೂ ಅರ್ಥವಾಗುವಂಥದ್ದು. ಸಾಮಾಜಿಕ ಮಾಧ್ಯಮಗಳು ಇಷ್ಟು ವ್ಯಾಪಕವಾಗಿ ಕೆಲಸ ಮಾಡುತ್ತಿವೆ ಎಂಬ ಧಿಮಾಕಿನ ನಡುವೆಯೂ ರಷ್ಯಾದ ಪರವಾದ ಸುದ್ದಿಗಳು ಒಂದೂ ಇಲ್ಲದಂತೆ ಮಾಧ್ಯಮಗಳನ್ನು ಕಾಪಾಡಿಕೊಂಡಿರುವುದು ಅಚ್ಚರಿಯ ಸಂಗತಿ ಅಷ್ಟೇ ಅಲ್ಲ; ಈ ಮಾಧ್ಯಮಗಳು ಜಾಗತಿಕ ಅಭಿಪ್ರಾಯವನ್ನು ತಮಗೆ ಬೇಕಾದಂತೆ ಹೇಗೆ ರೂಪಿಸಬಲ್ಲವು ಎಂಬುದಕ್ಕೆ ಉದಾಹರಣೆಯೂ ಆಗಿದೆ! ವಾಲ್ ಸ್ಟ್ರೀಟ್ ಜರ್ನಲ್ ಕಳೆದ ವಾರ ಒಂದು ಲೇಖನವನ್ನು ಪ್ರಕಟಿಸಿದೆ. ಅದು ಐದು ಸಾಧ್ಯತೆಗಳ ಕುರಿತಂತೆ ಗಮನ ಸೆಳೆದಿದೆ. ಅದರಲ್ಲಿ ಮೊದಲನೆಯದ್ದೇ ರಷ್ಯಾ ಸೋಲಬಹುದು ಎನ್ನುವ ಸಾಧ್ಯತೆ. ರಷ್ಯಾದ ಸೈನ್ಯದ ದೌರ್ಬಲ್ಯಗಳು ಈ ಯುದ್ಧದ ಮೂಲಕ ಹೊರಬಂದಿರುವುದಲ್ಲದೇ ಅದರ ಶಸ್ತ್ರಾಸ್ತ್ರಗಳು ಅಂದುಕೊಂಡಷ್ಟು ಸಾಮರ್ಥ್ಯವನ್ನು ಹೊಂದಿಲ್ಲವೆಂದು ಸಾಬೀತಾಗಿದೆ. ಆದ್ದರಿಂದಲೇ ಅದು ಸೋಲಬಹುದು. ಇನ್ನು ಎರಡನೆಯದು ಉಕ್ರೇನಿನ ಸೋಲಿನ ಸಾಧ್ಯತೆ. ಅದಾಗಲೇ ನಲವತ್ತು ಸಾವಿರ ಸೈನಿಕರು ತೀರಿಕೊಂಡಿದ್ದಾರೆ. ಮಾರಿಪೋಲ್ ಶರಣಾಗತವಾಗಿದೆ. ತಾನು ಸಾಕಷ್ಟು ಹೊಡೆತ ತಿಂದಿರುವುದರಿಂದ ಅದು ಸೋಲಬಹುದು. ಮೂರನೆಯದ್ದು ಎರಡೂ ಪಡೆಗಳು ಇದ್ದ ಸ್ಥಿತಿಯಲ್ಲೇ ಇದ್ದುಬಿಡುತ್ತದೆ. ಯಾವೊಂದು ಪಡೆಯೂ ಸೋಲನ್ನು ಒಪ್ಪಿಕೊಳ್ಳದೇ ಸುದೀರ್ಘಕಾಲ ಈ ಹೋರಾಟದಲ್ಲಿ ನಿರತವಾಗುತ್ತದೆ ಎನ್ನುವ ಪತ್ರಿಕೆ ಹೀಗಾಗಲು ರಷ್ಯಾಕ್ಕೆ ಕನಿಷ್ಠ ಪಕ್ಷ ಒಂದೂವರೆಯಿಂದ ಎರಡು ಲಕ್ಷದಷ್ಟು ಸೈನಿಕರು ಬೇಕಾಗಿದ್ದು ಅಷ್ಟು ಜನರನ್ನು ಸಮರ್ಥರಾಗಿ ನಿರ್ಮಿಸಲು ಕನಿಷ್ಠಪಕ್ಷ ಒಂದು ವರ್ಷವಾದರೂ ಬೇಕಾಗುವುದರಿಂದ ರಷ್ಯಾ ಸೋಲೊಪ್ಪಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದಿದೆ. ನಾಲ್ಕನೆಯದ್ದು ಉಕ್ರೇನ್ ತಾನೇ ರಷ್ಯಾಕ್ಕೆ ಚಳ್ಳೆಹಣ್ಣು ತಿನ್ನಿಸಿ ಮುನ್ನುಗ್ಗುವ ಸಾಧ್ಯತೆಗಳಿವೆಯಂತೆ. ಅದಕ್ಕೆ ಅಮೇರಿಕಾ ಕೊಟ್ಟ 90 ಟ್ಯಾಂಕುಗಳಲ್ಲಿ 74 ಟ್ಯಾಂಕುಗಳು ಆಕ್ರಮಣದ ಸ್ಥಿತಿಯಲ್ಲಿ ಮುನ್ನುಗ್ಗುತ್ತಿರುವುದನ್ನೇ ಲೇಖಕ ಕಾರಣ ನೀಡುತ್ತಾನೆ. ಇನ್ನು ಕೊನೆಯ ಸಾಧ್ಯತೆ ಯುದ್ಧ ವಿಭಿನ್ನ ಸ್ವರೂಪವನ್ನು ಪಡೆದುಕೊಂಡು ರಷ್ಯಾ ತನ್ನ ಬಳಿಯಿರುವ ಅಣುಶಕ್ತಿಯನ್ನು ಬಳಸಿ ಯುದ್ಧ ಮುಗಿಸುವ ಧಾವಂತಕ್ಕೆ ಬೀಳುತ್ತದೆ. ಈ ಎಲ್ಲ ಸಾಧ್ಯತೆಗಳನ್ನು ನೀವು ತಕ್ಕಡಿಯಲ್ಲಿಟ್ಟು ತೂಗಿದರೆ ಜಾಗತಿಕ ಮಾಧ್ಯಮಗಳಿಗೆ ರಷ್ಯಾ ಹಿನ್ನಡೆಯಲ್ಲಿದೆ ಎಂದು ತೋರಿಸುವ ತವಕ ಹೆಚ್ಚಾಗಿರುವಂತೆ ಕಾಣುತ್ತದೆ. ನಲವತ್ತು ಸಾವಿರ ಸೈನಿಕರನ್ನು ಕಳೆದುಕೊಂಡ ಉಕ್ರೇನ್ 74 ಟ್ಯಾಂಕುಗಳೊಂದಿಗೆ ರಷ್ಯಾದ ಮೇಲೆ ಆಕ್ರಮಣ ಮಾಡುವ ಸಾಮಥ್ರ್ಯವನ್ನು ತೋರಿಸುವುದು ಒಂದಕ್ಕೊಂದು ಹೊಂದಾಣಿಕೆಯಾಗದ ಸಂಗತಿ.

ಬಿಡಿ, ವಾಸ್ತವದ ಚರ್ಚೆ ರಷ್ಯಾದ ಆರ್ಥಿಕ ದೌರ್ಬಲ್ಯದ್ದು. ರಷ್ಯಾ ಈ ದಾಳಿಗೂ ಮುನ್ನ ಏನಂದುಕೊಂಡಿತ್ತೋ ಅದರಂತೆ ಏನೂ ನಡೆದಿಲ್ಲ. ಜಾಗತಿಕವಾಗಿ ನಿರಂತರ ಆರ್ಥಿಕ ದಿಗ್ಬಂಧನಗಳು ಹೇರಲ್ಪಡುತ್ತಿದ್ದಂತೆ ರಷ್ಯಾ ಆಂತರಿಕವಾಗಿ ಕುಸಿದುಹೋಗಿದೆ. ಅದೀಗ ತನ್ನ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಅನಿವಾರ್ಯವಾಗಿ ಚೀನಾದ ಮೊರೆ ಹೋಗಿದೆ. ಬರೀ ಆರ್ಥಿಕ ಸ್ಥಿತಿಯಷ್ಟೇ ಅಲ್ಲ, ತನ್ನ ಶಸ್ತ್ರಾಸ್ತ್ರಗಳ ಕೊರತೆಯನ್ನು ತುಂಬಿಕೊಳ್ಳಲೂ ಕೂಡ ಅದು ಚೀನಾವನ್ನೇ ಅವಲಂಬಿಸಿದೆ! ಈ ಯುದ್ಧ ಆರಂಭವಾಗುವ ಮುನ್ನ ‘ರಷ್ಯಾ ಕ್ಷಣಾರ್ಧದಲ್ಲಿ ಉಕ್ರೇನನ್ನು ಧ್ವಂಸ ಮಾಡಿಬಿಡಬಲ್ಲದು’ ಎಂದೆಲ್ಲ ಮಾತನಾಡುತ್ತಿದ್ದವರು ಗಾಬರಿಗೊಳಗಾಗಿಬಿಟ್ಟಿದ್ದಾರೆ. ಆದರೆ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಬಂದಿರುವುದು ಭಾರತಕ್ಕೆ ಎಂಬುದರಲ್ಲಿ ಅನುಮಾನವಿಲ್ಲ. ಈ ಯುದ್ಧಕ್ಕೂ ಮುನ್ನ ವಿದೇಶಾಂಗ ಮತ್ತು ರಕ್ಷಣಾ ಖಾತೆಯ 2+2 ಸಂಬಂಧವನ್ನು ಬಲಗೊಳಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದ ಭಾರತ ಅದನ್ನು ವೆಂಟಿಲೇಟರ್ನಲ್ಲಿರಿಸಿದೆ. ಮೇಲ್ನೋಟಕ್ಕೆ ಈ ಯುದ್ಧದ ವಿಚಾರದಲ್ಲಿ ತಟಸ್ಥವಾಗಿ ಭಾರತ ಕಂಡರೂ ಆಂತರಿಕವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿರುವುದನ್ನು ಇಡಿಯ ಜಗತ್ತು ಗಮನಿಸುತ್ತಿದೆ. ಭಾರತದ ವಿದೇಶಾಂಗ ನೀತಿ ಈ ಮೊದಲಿನಂತಿಲ್ಲ. ಸೋವಿಯತ್ ರಷ್ಯಾ ಅಫ್ಘಾನಿಸ್ತಾನದ ಮೇಲೆ ಏರಿಹೋದಾಗ ಇಂದಿರಾ ಮುಕ್ತವಾಗಿಯೇ ಅದರ ಬೆಂಬಲಕ್ಕೆ ನಿಂತಿದ್ದರು. ಆದರೆ ಆನಂತರ ಭಾರತದ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸುವಾಗ ರಷ್ಯಾ ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಅಮೇರಿಕಾದೆದುರು ಪಾಕಿಸ್ತಾನವನ್ನು ತನ್ನತ್ತ ಸೆಳೆಯುವ ಧಾವಂತದಲ್ಲಿ ಭಾರತವನ್ನು ಅಸಡ್ಡೆಯಿಂದ ಕಂಡಿತು. ಮೋದಿ ಇದನ್ನು ಅರಿತಿಲ್ಲದೇನಿಲ್ಲ. ನಮ್ಮ ಇಂದಿನ ವಿದೇಶಾಂಗ ನೀತಿ ‘ರಾಷ್ಟ್ರ ಮೊದಲು’ ಸೈದ್ಧಾಂತಿಕ ಅಡಿಪಾಯದ ಮೇಲೆ ನಿಂತಿದೆ. ಕಳೆದ ಎಂಟು ವರ್ಷಗಳಲ್ಲಿ ತಮ್ಮ ಅವಿರತ ಪ್ರಯತ್ನದಿಂದಾಗಿ ಮೋದಿ ಭಯೋತ್ಪಾದನೆಯನ್ನು ಜಗತ್ತಿನ ಚರ್ಚೆಯ ಕೇಂದ್ರಬಿಂದುವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತರೆ ರಾಷ್ಟ್ರಗಳಿಗೆ ಹೋದಾಗ ಅಲ್ಲಿನ ಶ್ರೇಷ್ಠ ಆಚರಣೆಗಳನ್ನು, ತಂತ್ರಜ್ಞಾನವನ್ನು ಭಾರತಕ್ಕೆ ತರುವಲ್ಲಿ ಮುಲಾಜಿಲ್ಲದೇ ಮುಂದಡಿಯಿಡುತ್ತಿದಾರೆ. ಅಷ್ಟೇ ಅಲ್ಲ, ತಮ್ಮೆಲ್ಲ ಪ್ರಭಾವವನ್ನು ಬಳಸಿ ಜಗತ್ತಿನ ಯಾವ ಮೂಲೆಯಲ್ಲಿ ಭಾರತೀಯ ತೊಂದರೆಗೊಳಗಾದರೂ ಅವನನ್ನು ಮರಳಿ ತರುವ ಸಾಮರ್ಥ್ಯ ಇಂದು ಭಾರತ ಬೆಳೆಸಿಕೊಂಡಿದೆ. ಹೀಗಾಗಿಯೇ ಉಕ್ರೇನ್ ಮತ್ತು ರಷ್ಯಾ ಯುದ್ಧ ಆರಂಭವಾದಾಗ ಅಲ್ಲಿ ಸಿಲುಕಿದ್ದ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತ ಮರಳಿ ತರಲು ಸಾಧ್ಯವಾಗಿತ್ತು. ನೆನಪಿರಲಿ, ಉಕ್ರೇನಿನ ವಿದೇಶಿ ವಿದ್ಯಾರ್ಥಿಗಳಲ್ಲಿ ಕಾಲುಭಾಗ ಭಾರತೀಯರೇ. ಮಾರ್ಚ್ ಏಳರಂದು ಮೋದಿ ಪುತಿನ್ ರೊಂದಿಗೆ ಮಾತನಾಡಿ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರತರಲು ಮಾನವೀಯ ಮಾರ್ಗ ರೂಪಿಸಿಕೊಡಬೇಕೆಂದು ಕೇಳಿಕೊಂಡಾಗ ಇಂದಿರಾಳನ್ನು ಅಸಡ್ಡೆ ಮಾಡಿದಂತೆ ಮೋದಿಯನ್ನು ಕಡೆಗಣಿಸುವುದು ಪುತಿನ್‌ಗೆ ಸಾಧ್ಯವಾಗಲೇ ಇಲ್ಲ. ಭಾರತ ಮೊದಲಿನಂತೆ ಗೋಣು ಬಗ್ಗಿಸಿ ರಷ್ಯಾ ಹೇಳಿದ್ದಕ್ಕೆಲ್ಲ ತಲೆಯಾಡಿಸುವ ಕುರಿಮರಿಯಲ್ಲವೆಂಬುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಅದಾದ ಕೆಲವು ದಿನಗಳಲ್ಲೇ ಆ ರೀತಿಯ ಮುಕ್ತ ಮಾರ್ಗ ರೂಪುಗೊಂಡು ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಯ್ತಲ್ಲ, ಅದಾದ ಮೇಲೆ ಮೋದಿ ಉಕ್ರೇನಿನ ಪ್ರಧಾನಿಗೆ ಮಾತನಾಡಿ ಧನ್ಯವಾದಗಳನ್ನರ್ಪಿಸಿದರು. ಪುತಿನ್‌ನೊಂದಿಗೆ ಮಾತನಾಡುವಾಗ ಗಡಿ ಬದಲಾಯಿಸುವ ಕುರಿತಂತೆ ಎಚ್ಚರಿಕೆಯ ಮಾತುಗಳನ್ನಾಡಿದ ಮೋದಿ ಜೆಲ್ಸೆಂಕಿಯೊಂದಿಗೆ ಮಾತನಾಡುವಾಗ ಪ್ರೀತಿಯಿಂದ ನುಡಿದಿದ್ದನ್ನು ಜಗತ್ತು ಗಮನಿಸದೇ ಇರಲಿಲ್ಲ. ಹೀಗಾಗಿಯೇ ಭಾರತ ಅಂತರ್ರಾಷ್ಟ್ರೀಯ ವೇದಿಕೆಯಲ್ಲಿ ತಟಸ್ಥ ನೀತಿಯನ್ನು ತನ್ನದಾಗಿಸಿಕೊಂಡರೂ ಜಗತ್ತಿನ ಯಾವ ರಾಷ್ಟ್ರಗಳೂ ಭಾರತವನ್ನು ವಿರೋಧಿಸಲಿಲ್ಲ. ರಷ್ಯಾ ಈ ಹೊತ್ತಿನಲ್ಲಿಯೇ ನಮಗೆ ಅತಿ ಕಡಿಮೆ ಬೆಲೆಗೆ ಇಂಧನ ಕೊಡುವ ಮಾತುಗಳನ್ನಾಡಿತು. ಭಾರತ ಅದನ್ನು ಸ್ವೀಕರಿಸಿ ಯುರೋಪಿನ ಪತ್ರಕರ್ತರು ಹಂಗಿಸುವಾಗ, ‘ಯುರೋಪು ಒಂದೊಪ್ಪತ್ತಿಗೆ ರಷ್ಯಾದಿಂದ ಆಮದು ಮಾಡಿಕೊಳ್ಳುವಷ್ಟು ಇಂಧನವನ್ನು ನಾವು ಇಡಿಯ ತಿಂಗಳಿಗೆ ಆಮದು ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿ ಕ್ಯಾಕರಿಸಿ ಉಗಿದಿತ್ತು.

ಇಷ್ಟಕ್ಕೂ ರಷ್ಯಾದೊಂದಿಗಿನ ನಮ್ಮ ಸಂಬಂಧ ಬಲು ಹಳೆಯದ್ದು ಮತ್ತು ಕೆಲವೊಮ್ಮೆ ಮೂರ್ಖತನದಿಂದ ಕೂಡಿದ್ದೂ ಕೂಡ. ಅಲಿಪ್ತ ನೀತಿ ಎನ್ನುವ ಮೂರ್ಖ ಕಲ್ಪನೆಯ ಅಡಿಯಲ್ಲಿ ಬೆಳೆದುಬಂದ ನಾವು ಪಾಕಿಸ್ತಾನ ಮತ್ತು ಚೀನಾದ ಆಕ್ರಮಣಗಳನ್ನೆದುರಿಸಲು ರಷ್ಯಾದ ಮಡಿಲು ಸೇರಿಕೊಂಡೆವು. ಅದು ಕಮ್ಯುನಿಸ್ಟ್ ವಿಚಾರಧಾರೆಯ ಪ್ರಭಾವವೂ ಕೂಡ. ಅಮೇರಿಕಾದ ಬಂಡವಾಳಶಾಹಿಗಳನ್ನು ಧಿಕ್ಕರಿಸಲೆಂದು ರಷ್ಯಾದ ಸರ್ವಋತು ಮಿತ್ರನಾಗಿ ನಾವು ಗುರುತಿಸಿಕೊಂಡಿದ್ದರ ಪರಿಣಾಮವಾಗಿ ಅತ್ತ ಅಮೇರಿಕಾ ನಮ್ಮ ಕೈಬಿಟ್ಟಿತು, ಇತ್ತ ರಷ್ಯಾ ಕೂಡ ನಮ್ಮನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಕಡಿಮೆ ಬೆಲೆಯ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಧಾವಂತದಲ್ಲಿ ನಮ್ಮ ಬಹುಪಾಲು ಶಸ್ತ್ರಾಸ್ತ್ರಗಳನ್ನು ಅಲ್ಲಿಂದಲೇ ತರಿಸಿಕೊಂಡೆವು. ಹೀಗೆ ಯುದ್ಧದ ಹೊತ್ತಲ್ಲಿ ಒಂದು ರಾಷ್ಟ್ರದ ಅಧೀನರಾಗುವುದು ಬಲು ಭಯಾನಕ. 2017ರಿಂದ 21ರ ನಡುವೆ ಭಾರತದ ಒಟ್ಟಾರೆ ಇಂಧನ ಆಮದು ರಷ್ಯಾದಿಂದಲೇ ಶೇಕಡಾ 46ರಷ್ಟಿತ್ತು. ರಷ್ಯಾದ ಒಟ್ಟಾರೆ ರಕ್ಷಣಾ ವಸ್ತುಗಳ ರಫ್ತು ಭಾರತಕ್ಕೆ ಶೇಕಡಾ 28ರಷ್ಟು. ಇದು ನರೇಂದ್ರಮೋದಿ ತಮ್ಮೆಲ್ಲ ಸಾಮಥ್ರ್ಯವನ್ನು ಬಳಸಿ, ಭಿನ್ನ ಭಿನ್ನ ಕಡೆಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡ ನಂತರ. ನಮಗೆ ವಿಮಾನಗಳನ್ನು ಮಾರಾಟ ಮಾಡುವಾಗಲೇ ರಷ್ಯಾ ನಮ್ಮ ಶತ್ರು ರಾಷ್ಟ್ರ ಚೀನಾಕ್ಕೂ ವಿಮಾನಗಳನ್ನು ಕೊಟ್ಟು ಅಚ್ಚರಿಗೆ ದೂಡಿತು. ಆಗಲೇ ಮೋದಿ ಅಮೇರಿಕಾದತ್ತ ವಾಲಿ ರಷ್ಯಾಕ್ಕೆ ದಂಗು ಬಡಿಸಿದ್ದರು. ಹಾಗಂತ ನಾವು ಪೂರ್ಣ ರಷ್ಯಾವನ್ನು ಬಿಟ್ಟುಬಿಡುವಂತಿಲ್ಲ. ಏಕೆಂದರೆ ನಮ್ಮ ಬಳಿಯಿರುವ ಬಹುತೇಕ ರಕ್ಷಣಾ ವಸ್ತುಗಳಲ್ಲಿ ರಷ್ಯಾದಿಂದ ತಂದವೇ ತುಂಬಿಕೊಂಡಿವೆ. ಅವುಗಳಿಗೆ ಬಿಡಿ ಭಾಗಗಳು ಬೇಕಾದಾಗ, ರಿಪೇರಿ ಮಾಡಬೇಕಾದಾಗ ರಷ್ಯಾದ ಸಹಕಾರ ನಮಗೆ ಬೇಕೇ ಬೇಕು. ಹೀಗಾಗಿಯೇ ಚೀನಾದ ಆಕ್ರಮಣಕಾರಿ ನಿಲುವಿನ ಹೊತ್ತಿನಲ್ಲಿ ಭಾರತ ರಷ್ಯಾವನ್ನು ವಿರೋಧ ಮಾಡಿಕೊಳ್ಳುವಂತಿಲ್ಲವೆಂಬುದು ಯುರೋಪಿಗೂ ಗೊತ್ತಿದೆ, ಅಮೇರಿಕಾಕ್ಕೂ ಗೊತ್ತಿದೆ.


ರಷ್ಯಾದ ಕುರಿತಂತೆ ನಮಗೊಂದು ಎಚ್ಚರಿಕೆ ಬೇಕೇ ಬೇಕು. 1962ರಲ್ಲಿ ಚೀನಾ ನಮ್ಮ ಮೇಲೆ ಏರಿ ಬಂದಾಗ ರಷ್ಯಾ ನಮ್ಮ ಸಹಕಾರಕ್ಕೇನೂ ಬಂದಿಲ್ಲ. ಆಗ ಚೀನಾವನ್ನು ಮೆಟ್ಟಿಹಾಕಲು ಅಮೇರಿಕಾವೇ ಗುಟುರು ಹಾಕಿದ್ದು ಎಂಬುದನ್ನು ಮರೆಯುವಂತಿಲ್ಲ. 1965ರಲ್ಲಿ ಪಾಕಿಸ್ತಾನ ಅಪ್ರಚೋದಿತವಾಗಿ ಯುದ್ಧ ಆರಂಭಿಸಿದಾಗ ರಷ್ಯಾ ನಮ್ಮ ಪರವಾಗಿ ಮಾತನಾಡುವುದಿರಲಿ, ತಟಸ್ಥ ನಿಲುವನ್ನು ತಾಳಿ ಸಂಧಾನ ಮಾಡುವುದಾಗಿ ತಾಷ್ಕೆಂಟಿಗೆ ಪ್ರಧಾನಿಯನ್ನು ಕರೆದೊಯ್ದಿತ್ತು. ಅಲ್ಲಿಂದ ಮರಳಿ ಬಂದಿದ್ದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಪಾರ್ಥಿವ ಶರೀರ ಎಂಬುದನ್ನು ನೆನಪಿಟ್ಟುಕೊಂಡಿದ್ದೇವೆ! 1971ರಲ್ಲಿ ಪಾಕಿಸ್ತಾನದೊಂದಿಗೆ ನಾವು ಯುದ್ಧ ಮಾಡದಿರುವಂತೆ ನಮ್ಮನ್ನು ಪುಸಲಾಯಿಸುವ ಯತ್ನ ಮಾಡಿದ್ದು ರಷ್ಯಾವೇ. ಈಗಲೂ ಚೀನಾ ಆಕ್ರಮಣಕಾರಿ ನೀತಿಯನ್ನು ತೋರಿಸಿ ಡೋಕ್ಲಾಂನಲ್ಲಿ ಮುನ್ನುಗ್ಗಿದಾಗ, ಲಡಾಕ್ನಲ್ಲಿ ಭಾರತೀಯ ಸೇನೆಯೆದುರು ನಿಂತಾಗ ರಷ್ಯಾ ನಮ್ಮ ಪರವಾಗಿ ಒಂದು ಮಾತನ್ನಾಡಿಲ್ಲ. ಹಾಗಂತ ನಾವು ಯಾರ ಪರವಾಗಿಯೂ ವಾಲಬೇಕಿಲ್ಲ. ನಾವು ವಾಲಬೇಕಾದ್ದು ಭಾರತದ ಪರವಾಗಿ ಮಾತ್ರ. ಇದನ್ನು ಮೋದಿ ಚೆನ್ನಾಗಿ ಅರಿತಿದ್ದಾರೆ. ಅದಕ್ಕೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿರುದ್ಧ ಗುಟುರು ಹಾಕಲು ಅಮೇರಿಕಾ, ಜಪಾನ್, ಆಸ್ಟ್ರೇಲಿಯಾಗಳೊಂದಿಗೆ ಸೇರಿ ಕ್ವಾಡ್ ನಿರ್ಮಿಸಿಕೊಂಡಿದ್ದಾರೆ. ಜಪಾನ್, ಆಸ್ಟ್ರೇಲಿಯಾಗಳೊಂದಿಗೆ ಮತ್ತು ಫ್ರಾನ್ಸ್, ಆಸ್ಟ್ರೇಲಿಯಾಗಳೊಂದಿಗೆ ಪ್ರತ್ಯೇಕವಾದ ತ್ರಿರಾಷ್ಟ್ರಗಳ ಜಾಲ ಹೆಣೆದುಕೊಂಡಿದ್ದಾರೆ. ಜಗತ್ತಿಗೂ ಮೋದಿ ರಾಷ್ಟ್ರದ ಹಿತವನ್ನು ಬಿಟ್ಟು ಬೇರೆ ಚಿಂತೆ ಮಾಡಲಾರರು ಎಂದು ಗೊತ್ತಿರುವುದರಿಂದಲೇ ಅದು ತಣ್ಣಗಾಗಿದೆ. ದುರಂತವೆಂದರೆ ಆಸ್ಟ್ರೇಲಿಯಾದಲ್ಲಿ ಬದಲಾವಣೆ ಕಂಡುಬಂದಿದೆ. ಅಲ್ಲೀಗ ಚೀನಾ ಪರವಾಗಿರುವ ಹೊಸ ಪ್ರಧಾನಿ ಅಧಿಕಾರಕ್ಕೇರಿದ್ದಾರೆ. ಇಷ್ಟೂ ವರ್ಷಗಳ ತಪಸ್ಸು ಕೈಕೊಟ್ಟುಬಿಡುವುದೇ ಎನ್ನುವ ಹೆದರಿಕೆ ಖಂಡಿತವಾಗಿಯೂ ಇದೆ!

ಈ ಆತಂಕದಲ್ಲಿ ನಾವಿರುವಾಗ ಅತ್ತ ರಾಹುಲ್ ಸಂದರ್ಶನವೊಂದರಲ್ಲಿ ಭಾರತದ ವಿದೇಶಾಂಗ ಅಧಿಕಾರಿಗಳು ಯಾರ ಆಜ್ಞೆ ಪಡೆಯುತ್ತಿದ್ದಾರೋ ಗೊತ್ತಿಲ್ಲ, ನಮ್ಮ ಮಾತುಗಳನ್ನು ಕೇಳುವುದೇ ಇಲ್ಲ ಎಂದು ಯುರೋಪಿನ ಅಧಿಕಾರಿಗಳು ತನ್ನೊಂದಿಗೆ ಅಳಲು ತೋಡಿಕೊಂಡರು ಎಂದಿದ್ದಾನೆ. ಮೋದಿ ಬರುವುದಕ್ಕೆ ಮುನ್ನ ಬಹುತೇಕ ರಾಜತಾಂತ್ರಿಕರು ಯುರೋಪಿನ ಅಧಿಕಾರಿಗಳ ಮಾತುಗಳನ್ನೇ ಕೇಳುತ್ತಿದ್ದರೆನಿಸುತ್ತದೆ! ಆದರೀಗ ಅವರು ಭಾರತದ ಮಾತುಗಳನ್ನು ಆಲಿಸುತ್ತಿದ್ದಾರೆ. ರಾಷ್ಟ್ರ ಮೊದಲು ಎಂದರೆ ಇದೇ ಅಲ್ಲವೇನು?

ಮತ್ತೊಮ್ಮೆ ಭಾರತ ಬಿಟ್ಟು ತೊಲಗಿ!

ಮತ್ತೊಮ್ಮೆ ಭಾರತ ಬಿಟ್ಟು ತೊಲಗಿ!


ಇಂದಿಗೆ 79 ವರ್ಷಗಳು ಕಳೆದೇಹೋದವು. ತುಂಡು ಪಂಚೆಯ ಮಹಾತ್ಮಾ ಗಾಂಧೀಜಿ ಆಗಸ್ಟ್ 7, 1942ರಂದು ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದ ವಿಶಾಲ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ‘ನಾನೊಂದು ಪುಟ್ಟ ಮಂತ್ರವನ್ನು ನಿಮಗೆ ಕೊಡಲಿದ್ದೇನೆ. ಅದನ್ನು ನಿಮ್ಮ ಹೃದಯದಲ್ಲಿ ಕೆತ್ತಿಟ್ಟುಕೊಳ್ಳಿ. ನಿಮ್ಮ ಪ್ರತಿ ಉಸಿರಿನಲ್ಲೂ ಅದು ವ್ಯಕ್ತವಾಗಲಿ. ಆ ಮಂತ್ರ, ಮಾಡು ಇಲ್ಲವೇ ಮಡಿ. ಒಂದೋ ನಾವು ಭಾರತವನ್ನು ಮುಕ್ತಗೊಳಿಸೋಣ, ಇಲ್ಲವೇ ಆ ಮಾರ್ಗದಲ್ಲಿ ಸಾವನ್ನಪ್ಪೋಣ. ನಾವು ಭಾರತದ ದಾಸ್ಯವನ್ನು ಶಾಶ್ವತಗೊಳಿಸುವ ಪ್ರಕ್ರಿಯೆಯನ್ನು ನೋಡುವುದು ಸಾಧ್ಯವಿಲ್ಲ’ ಎಂದಿದ್ದರು. ಮಾಡು ಇಲ್ಲವೇ ಮಡಿ ಎಂಬುದು ಅಲ್ಲಿಂದಾಚೆಗೆ ಪ್ರತಿಯೊಬ್ಬರ ಬಾಯಲ್ಲೂ ನುಲಿಯುವ ಮಂತ್ರವಾಗಿಬಿಟ್ಟಿತು. ಇದನ್ನು ಊಹಿಸದಿದ್ದ ಬ್ರಿಟೀಷರು ಜಾಗತಿಕ ಮಟ್ಟದಲ್ಲಿ ತಮ್ಮ ಗೌರವ ಕಾಪಾಡಿಕೊಳ್ಳಲು ಗಾಂಧಿಯೂ ಸೇರಿದಂತೆ ಎಲ್ಲ ಪ್ರಮುಖ ಕಾಂಗ್ರೆಸ್ ನಾಯಕರನ್ನು ದೇಶದಾದ್ಯಂತ ಬಂಧಿಸಿಬಿಟ್ಟರು. ಬ್ರಿಟೀಷರಿಗೆ ದಮನ ನೀತಿ ಹೊಸತಲ್ಲ. ಆದರೆ ಏಕಾಕಿ ಇಷ್ಟು ನಾಯಕರನ್ನು ಬಂಧಿಸಿದಾಗ ಅನುಯಾಯಿಗಳು ದಿಕ್ಕಿಲ್ಲದಂತಾದರಲ್ಲದೇ ಇಷ್ಟೂ ದಿನವೂ ಕಾಪಾಡಿಕೊಂಡು ಬಂದಿದ್ದ ಗಾಂಧೀಜಿಯವರ ಅಹಿಂಸಾ ನೀತಿ ಹಳ್ಳ ಹಿಡಿಯುವಂತಾಯ್ತು. ಆಂತರಿಕ ಸಭೆಯಲ್ಲಿ ಗಾಂಧೀಜಿ ಸಂಯಮ ಕಾಪಾಡಿಕೊಳ್ಳುವ ಮಾತನ್ನಾಡಿದ್ದರೇನೋ ನಿಜ. ಆದರೆ ಈ ಆಂದೋಲನ ಉಗ್ರಸ್ವರೂಪ ತಾಳದೇ ಹೋದರೆ ಬ್ರಿಟೀಷರಿಗೆ ಚುರುಕು ಮುಟ್ಟದು ಎಂಬುದು ಅವರಿಗೂ ಗೊತ್ತಿತ್ತು. ಅಹಿಂಸೆಗೆ ನಿಜವಾದ ರೂಪ ಬಂದಿದ್ದು ಆಗಲೇ. ಬಹಳ ಹಿಂದೆಯೇ ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಸೈಫುದ್ದೀನ್ ಕಿಚ್ಲು, ‘ಅಹಿಂಸೆ ಎನ್ನುವುದು ಹುಚ್ಚು-ಹುಚ್ಚಾಗಿ ಪಾಲಿಸಲ್ಪಡಬಾರದು’ ಎಂದು ಎಚ್ಚರಿಸಿದ್ದರು. ಕ್ರಾಂತಿಕಾರಿಗಳಂತೂ ದಿನಬೆಳಗಾದರೆ ಈ ಕುರಿತಂತೆ ಕಿತ್ತಾಟ ನಡೆಸುತ್ತಿದ್ದರು. ವೈಸ್ರಾಯ್ ಮೇಲೆ 1929ರಲ್ಲಿ ಕ್ರಾಂತಿಕಾರಿಗಳು ಬಾಂಬ್ ಎಸೆದಾಗ ಕಾಂಗ್ರೆಸ್ಸಿಗರು ಅದನ್ನು ಹೇಯಕೃತ್ಯವೆಂದು ಜರಿದಿದ್ದಲ್ಲದೇ ಈ ಕೃತ್ಯವೆಸಗಿದವರನ್ನು ಷಂಡರೆಂದು ಟೀಕೆ ಮಾಡಿದರು. ಗಾಂಧೀಜಿಯವರು ಕಾಂಗ್ರೆಸ್ಸು ಈ ಕೃತ್ಯವನ್ನು ಒಮ್ಮತದಿಂದ ಖಂಡಿಸಬೇಕೆಂದು ಪ್ರಾಥರ್ಿಸಿದುದರ ಪರಿಣಾಮವಾಗಿ ಭಾಗವಹಿಸಿದ 1239 ಪ್ರತಿನಿಧಿಗಳಲ್ಲಿ ಕೇವಲ 81 ಮಂದಿ ಹೂಂಗುಟ್ಟುವುದರೊಂದಿಗೆ ನಿರ್ಣಯ ಅಂಗೀಕೃತವಾಗಿತ್ತು! ಪಂಜಾಬ್ ಕಾಂಗ್ರೆಸ್ ಪ್ರತಿನಿಧಿಯಾಗಿದ್ದ ಸರಳಾದೇವಿ ಚೌಧುರಾಣಿಯವರು ಗಾಂಧೀಜಿ ಕೋಪಗೊಂಡುಬಿಟ್ಟಾರು ಎಂಬ ಕಾರಣಕ್ಕೆ ನಿರ್ಣಯದ ಪರವಾಗಿ ಮತಹಾಕಬೇಕಾಯ್ತು ಎಂದು ಅಂತರಂಗದ ಗುಟ್ಟನ್ನು ಬಾಯ್ಬಿಟ್ಟಿದ್ದರು. ಅಂದರೆ 1930ರ ವೇಳೆಗಾಗಲೇ ಸ್ವತಃ ಕಾಂಗ್ರೆಸ್ಸು ಅಹಿಂಸಾ ಚಳವಳಿಯಲ್ಲಿ ನಂಬಿಕೆ ಕಳೆದುಕೊಂಡುಬಿಟ್ಟಿತ್ತು. ಈ ನಿರ್ಣಯ ಅಂಗೀಕಾರಕ್ಕೆ ಗಾಂಧೀಜಿಯವರೆಣಿಸಿದಷ್ಟು ಬೆಂಬಲ ದೊರೆಯಲಿಲ್ಲವೆಂದು ಗೊತ್ತಾದಾಗ ಯಂಗ್ ಇಂಡಿಯಾದಲ್ಲಿ ಬಾಂಬಿನ ಪಂಥ ಎಂಬ ಹೆಸರಿನ ಲೇಖನವೊಂದನ್ನು ಬರೆದು ಕ್ರಾಂತಿಕಾರಿಗಳ ಮನೋಗತವನ್ನು, ಅವರ ಉಪಕರಣಗಳನ್ನು, ಅವರ ಉದ್ದೇಶಗಳನ್ನು ಅತ್ಯುಗ್ರವಾಗಿ ಖಂಡಿಸಿದರು. ಆ ವೇಳೆಗಾಗಲೇ ಅಹಿಂಸಾಮಾರ್ಗದ ನಿಧಾನಗತಿಯನ್ನು ವಿರೋಧಿಸಿ ಕ್ರಾಂತಿಕಾರಿಗಳ ಪಂಗಡ ಸೇರುತ್ತಿದ್ದ ತರುಣರು ಅದಕ್ಕೆ ಬಾಂಬಿನ ದರ್ಶನ ಎನ್ನುವ ಹೆಸರಿನ ಪ್ರತ್ಯುತ್ತರವನ್ನೂ ಕೊಟ್ಟಿದ್ದರು. ‘ಹಿಂಸೆಯ ಕೃತ್ಯಗಳನ್ನು ಪಾಪಕರ್ಮವೆಂದು ಟೀಕಾಕಾರರು ಹೇಳುತ್ತಾರೆ. ಆದರೆ ಪಶುಬಲದಿಂದ ತಪ್ಪು ಮಾಡುವುದು, ಅನ್ಯಾಯ ಮಾಡುವುದು ನಿಜವಾದ ಹಿಂಸೆ. ಆದರೆ ಈ ಕೆಲಸವನ್ನು ಕ್ರಾಂತಿಕಾರಿಗಳು ಮಾಡುತ್ತಿಲ್ಲ. ಈ ಅನ್ಯಾಯವನ್ನು ಹೋಗಲಾಡಿಸಲು ನಾವೂ ಬಯಸುತ್ತೇವೆ. ಘನ-ಗಂಭೀರವಾದ ಈ ಉದ್ದೇಶ ಸಾಧನೆಗಾಗಿ ಪ್ರಾಣಗಳನ್ನಪರ್ಿಸಲು ಸಿದ್ಧವಾಗಿದ್ದೇವೆ. ಹೀಗಿರುವಾಗ ಕ್ರಾಂತಿಕಾರಿಗಳನ್ನು ನಿಂದಿಸಿ, ಖಂಡಿಸುವುದು ಸಣ್ಣತನ’ ಎಂದು ಸುದೀರ್ಘವಾದ ಲೇಖನವನ್ನು ಬರೆದಿದ್ದರು. ಕ್ರಾಂತಿಕಾರ್ಯದ ಏಳುಬೀಳುಗಳು ನಡೆದೇ ಇದ್ದವು. ಆದರೆ ಸುಭಾಷರು ವಿದೇಶಕ್ಕೆ ಹೋಗಿ ಇಂಡಿಯನ್ ನ್ಯಾಷನಲ್ ಆಮರ್ಿ ಕಟ್ಟಿ ಜನಮಾನಸದಲ್ಲಿ ಉಂಟುಮಾಡಿದ ಭರವಸೆ ಇದೆಯಲ್ಲ, ಅದು ಬ್ರಿಟೀಷರಲ್ಲಂತೂ ನಡುಕ ಹುಟ್ಟಿಸಿತ್ತು. ಕಾಂಗ್ರೆಸ್ಸೂ ಸಣ್ಣಗೆ ಕಂಪಿಸಿತ್ತು.


ಎರಡನೇ ಮಹಾಯುದ್ಧ ಆರಂಭವಾಗುವ ಲಕ್ಷಣಗಳು ಗೋಚರಿಸಿದಾಗ ಇಂಗ್ಲೆಂಡು ಭಾರತವನ್ನು ಕೇಳದೆಯೇ ಈ ಯುದ್ಧದಲ್ಲಿ ನಮ್ಮನ್ನೂ ಒಂದು ಪಾಲುದಾರರನ್ನಾಗಿಸಿಬಿಟ್ಟಿತ್ತು. ಭಾರತವನ್ನು ಕೇಳಬೇಕಾದರೂ ಏಕೆ? ಎಂಬುದು ಅವರ ಧಾಷ್ಟ್ರ್ಯ. ಬೇರೆ ಸಂದರ್ಭದಲ್ಲಾಗಿದ್ದರೆ ಗಾಂಧೀಜಿ ಮರುಮಾತಿಲ್ಲದೇ ಯುದ್ಧಕ್ಕೆ ಬೆಂಬಲ ಕೊಡುವ ಠರಾವು ಮಂಡಿಸಿಬಿಡುತ್ತಿದ್ದರೇನೋ. ಆದರೆ ಸುಭಾಷರು ಜಾಗತಿಕ ಮಟ್ಟದಲ್ಲಿ ನಡೆಸಿದ ಓಡಾಟ ಮತ್ತು ಬ್ರಿಟನ್ನಿನ ಶತ್ರುಗಳೊಂದಿಗೆ ಗೆಳೆತನ ಸಾಧಿಸಿ ಭಾರತವನ್ನು ಮುಕ್ತಗೊಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ ಇಡಿಯ ಕಾಂಗ್ರೆಸ್ಸನ್ನು ಚುರುಕುಗೊಳಿಸಿಬಿಟ್ಟಿತ್ತು. ಯುದ್ಧದ ನಂತರ ಸ್ವಾತಂತ್ರ್ಯ ಘೋಷಣೆ ಮಾಡುವುದಿದ್ದರೆ ಮಾತ್ರ ನಮ್ಮ ಬೆಂಬಲ ಎಂದುಬಿಟ್ಟರು ಮಹಾತ್ಮಾ! ಪರಿಸ್ಥಿತಿಯನ್ನು ತಿಳಿಗೊಳಿಸಲು ಯುದ್ಧಕ್ಕೆ ಸಂಬಂಧಪಟ್ಟಂತೆಯೇ ಕ್ಯಾಬಿನೆಟ್ನ ಜವಾಬ್ದಾರಿ ಹೊತ್ತಿದ್ದ ಕ್ರಿಪ್ಸ್ ತನ್ನ ನಿಯೋಗದೊಂದಿಗೆ ಭಾರತಕ್ಕೆ ಬಂದ. ಒಂದರ್ಥದಲ್ಲಿ ಇದು ಕಾಂಗ್ರೆಸ್ಸಿನ ಗೆಲುವೇ. ಆದರೆ ಈ ಗೆಲುವು ಬಹಳಕಾಲ ಉಳಿಯಲಿಲ್ಲ. ಕ್ರಿಪ್ಸ್ ಭಾರತಕ್ಕೆ ಆಗಮಿಸುವಾಗಲೇ ವ್ಯವಸ್ಥಿತವಾಗಿ ಕಾಂಗ್ರೆಸ್ಸಿಗರನ್ನು ಮೂರ್ಖರನ್ನಾಗಿಸುವ ಯೋಜನೆಯೊಂದಿಗೆ ಬಂದಿದ್ದ. 1935ರ ಕಾನೂನಿನಲ್ಲಿ ಸಣ್ಣದೊಂದೆರಡು ತಿದ್ದುಪಡಿಗೆ ಆತ ಮನಸ್ಸು ಮಾಡಿದ. ಪೂರ್ಣಸ್ವಾತಂತ್ರ್ಯದ ಮಾತನ್ನೂ ಆಡದೇ ಸ್ವಾಯತ್ತ ರಾಷ್ಟ್ರದ ದಜರ್ೆಯನ್ನು ಕೊಡುವ ಭರವಸೆ ನೀಡಿದ. ಜೊತೆಗೆ ಮುಸಲ್ಮಾನರ ಪ್ರತ್ಯೇಕ ರಾಷ್ಟ್ರದ ಕಲ್ಪನೆಗೆ ನೀರೆರೆಯುವ ಎಲ್ಲ ಅಂಶಗಳನ್ನೂ ಚಚರ್ಿಸಿದ. ನಿಜಕ್ಕೂ ಗಾಂಧೀಜಿಗೆ ಭ್ರಮನಿರಸನವಾಗಿರಲಿಕ್ಕೆ ಸಾಕು. ಸತ್ಯ ಮತ್ತು ಅಹಿಂಸೆಯ ಅಸ್ತ್ರಗಳಿಗೆ ಬ್ರಿಟೀಷರ ಮನಸ್ಸು ಕರಗಿ ಅವರು ತಾವಾಗಿಯೇ ದೇಶವನ್ನು ಬಿಟ್ಟು ಹೋಗುತ್ತಾರೆ ಎಂಬ ಕನಸ್ಸು ಕಾಣುತ್ತಿದ್ದರು ಅವರು. ಜಗತ್ತೆಲ್ಲವನ್ನೂ ತಮ್ಮ ತಾಳಕ್ಕೆ ಕುಣಿಸುವ ಬ್ರಿಟೀಷರಿಗೆ ಒಂದೆರಡು ಪೀಳಿಗೆಯ ದೂರದೃಷ್ಟಿಯಲ್ಲ, ಸಾವಿರ ವರ್ಷಗಳ ನಂತರ ಬರುವ ಬ್ರಿಟೀಷ್ ಸಮುದಾಯ ಹೇಗಿರಬೇಕು ಎಂಬುದನ್ನು ಅವರು ಈಗ ಆಲೋಚಿಸುತ್ತಾರೆ. ಅಂಥದ್ದರಲ್ಲಿ ಭಾರತವನ್ನು ಸುಲಭವಾಗಿ ಬಿಟ್ಟುಹೋಗುವುದು ಸಾಧ್ಯವೇನು? ಅಷೇ ಅಲ್ಲ, ಈ ಬಾರಿ ಮಾತುಕತೆಯಲ್ಲಿ ಮುಸ್ಲೀಂ ಲೀಗ್ಗೆ ಅವರು ಕೊಟ್ಟ ಸ್ಥಾನ ಬಲುವಿಶೇಷವಾಗಿದ್ದರಿಂದ ಮಾತುಕತೆ ದೇಶ ವಿಭಜನೆಗೆ ಹೆಚ್ಚು ಶಕ್ತಿಯನ್ನೇ ತುಂಬಿತು. ಗಾಂಧೀಜಿ ಸತ್ಯಾಗ್ರಹಕ್ಕೆ ಕರೆಕೊಟ್ಟರು. ಅಷ್ಟೇ ಆಗಿದ್ದರೆ ವಿಶೇಷವೇನೂ ಇರಲಿಲ್ಲ. ‘ಮಾಡು ಇಲ್ಲವೇ ಮಡಿ’ ಎಂಬ ಅವರ ಉದ್ಘೋಷ, ಗಾಂಧೀಜಿ ಇನ್ನು ಸಹಿಸಲಾರೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿದಂತೆ ಕಾಣುತ್ತಿತ್ತು.


ಆಮೇಲೇನು? ಆಗಬಾರದ್ದು ನಡೆದೇ ಹೋಯ್ತು. ಮಾರ್ಗದರ್ಶನ ಮಾಡಲು ನಾಯಕರಿಲ್ಲದೇ ಇಡಿಯ ಆಂದೋಲನ ದಾರಿತಪ್ಪಿತು ಅಥವಾ ಸರಿಯಾದ ಸ್ವರೂಪದಲ್ಲಿ ಆಂದೋಲನ ಮುನ್ನುಗ್ಗಿತು. ಬೀದಿಗೆ ಬಂದ ದೊಡ್ಡ ಸಂಖ್ಯೆಯ ಜನ ರಸ್ತೆ ತಡೆ ನಡೆಸಿದರು, ರೈಲಿನ ಹಳಿಗಳನ್ನು ಕಿತ್ತೆಸೆದರು, ಪೊಲೀಸರಿಂದ ಶಸ್ತ್ರಗಳನ್ನು ಕಸಿದರು, ಅಲ್ಲಲ್ಲಿ ಬೆಂಕಿ ಹಚ್ಚಿದರು, ಇಡಿಯ ರಾಷ್ಟ್ರದಲ್ಲಿ ದೇಶಬಿಟ್ಟು ತೊಲಗಿ ಎನ್ನುವ ಈ ಘೋಷಣೆ ಗಲ್ಲಿ-ಗಲ್ಲಿಗಳಿಂದ ಮೊಳಗಲಾರಂಭಿಸಿತು. ಎಂಥವನೂ ಹೆದರಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಹೊತ್ತು ಅದು. ಬ್ರಿಟೀಷರು ಮುಲಾಜು ನೋಡಲಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನರ ಬಂಧನವಾಯ್ತು. ವೈಸ್ರಾಯ್ ಲಿನ್ಲಿತ್ಗೊಗೆ ಬರೆದ ಪತ್ರದಲ್ಲಿ ರಾಮ್ ಮನೋಹರ್ ಲೊಹಿಯಾ, ಸಕರ್ಾರ 50 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ. ಅದಕ್ಕೂ ಹೆಚ್ಚುಜನ ಗಾಯಾಳುಗಳಾಗಿದ್ದಾರೆ ಎಂದಿದ್ದರು. ಅಷ್ಟೇ ಅಲ್ಲ, ರಷ್ಯಾದ ಕ್ರಾಂತಿಯಲ್ಲಿ ಭಾಗವಹಿಸಿದ್ದು ಜನಸಂಖ್ಯೆಯ ಶೇಕಡಾ ಒಂದರಷ್ಟು ಮಾತ್ರ. ಆದರೆ ಈ ಆಂದೋಲನದಲ್ಲಿ ಜನಸಂಖ್ಯೆಯ ಶೇಕಡಾ 20ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎಂದಿದ್ದರು. ಬಹುಶಃ ಇಡಿಯ ಚಳವಳಿಯ ಕಲ್ಪನೆಯನ್ನು ಈ ಪತ್ರವೊಂದರಿಂದಲೇ ಕಟ್ಟಿಕೊಳ್ಳಬಹುದು. ಇಷ್ಟು ವ್ಯಾಪಕವಾಗಿ ಬೆಳೆದಿದ್ದ ಆಂದೋಲನ ನೋಡ-ನೋಡುತ್ತಲೇ ಹತ್ತಿಕ್ಕಲ್ಪಟ್ಟಿತು. ಮುಸ್ಲೀಂ ಲೀಗ್ ಭಾರತದ ಸಹಕಾರಕ್ಕೆ ಬರಲೇ ಇಲ್ಲ. ಗಾಂಧೀಜಿ ಕ್ರಿಪ್ಸ್ ಸಂಧಾನದ ವೇಳೆಗೆ ಮುಸಲ್ಮಾನರಿಗೆ ದೊರೆಯುವ ಪ್ರತ್ಯೇಕ ಸ್ಥಾನಮಾನವನ್ನೇ ವಿರೋಧಿಸಿದ್ದಾರೆ ಎಂಬುದು ಅವರ ವಾದ. ಕ್ರಿಪ್ಸ್ ಗೆದ್ದಿದ್ದ!


ಕ್ವಿಟ್ ಇಂಡಿಯಾ ನೆನಪಿಸಿಕೊಂಡಾಗಲೆಲ್ಲ ಅಯೋಗ್ಯ ಕಮ್ಯುನಿಸ್ಟರನ್ನು ನೆನಪಿಸಿಕೊಳ್ಳಲೇಬೇಕು. ಆರಂಭದಲ್ಲಿ ಅವರು ಮಹಾತ್ಮಾ ಗಾಂಧೀಜಿಯವರ ವಿರೋಧಕ್ಕೆ ನಿಂತು ಯುದ್ಧದ ಹೊತ್ತಿನಲ್ಲಿ ಅವಕಾಶವನ್ನು ಬಳಸಿಕೊಂಡು ಸ್ವಾತಂತ್ರ್ಯವನ್ನು ಗಳಿಸಿಕೊಂಡುಬಿಡಬೇಕು ಎನ್ನಲಾರಂಭಿಸಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ನುಗ್ಗುತ್ತಿರುವ ಸುಭಾಷ್ಚಂದ್ರ ಬೋಸರ ಬಗ್ಗೆ ಅಪಾರ ಸಹಾನುಭೂತಿಯೂ ಅವರಿಗಿತ್ತು. ಹಾಗಂತ ಅವರು ದೇಶಭಕ್ತರಾಗಿಬಿಟ್ಟರು ಎಂದೇನು ಭಾವಿಸಿಬಿಡಬೇಡಿ. ಚೀನಾದ ಕಮ್ಯುನಿಸ್ಟ್ ಪಾಟರ್ಿಯ ಶತವರ್ಷದ ಸಂಭ್ರಮಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗಿ ಕುಳಿತುಕೊಳ್ಳುವ ಅಯೋಗ್ಯ ಮಂದಿ ಈಗಲೂ ಇರುವಾಗ, ಅಂದು ದೇಶಭಕ್ತಿ ಇವರ ಹತ್ತಿರಕ್ಕಾದರೂ ಸುಳಿದಿತ್ತೇನು? ಸಾಧ್ಯವೇ ಇಲ್ಲ. ರಷ್ಯಾ ಜರ್ಮನಿಯ ಕುರಿತಂತೆ ಸಹಾನುಭೂತಿ ಹೊಂದಿದ್ದರಿಂದ ಇಲ್ಲಿನ ಕಮ್ಯುನಿಸ್ಟರಿಗೆ ಬ್ರಿಟೀಷರ ವಿರೋಧ. ಕಾಲಕಳೆದಂತೆ ಹಿಟ್ಲರ್ ರಷ್ಯಾದ ಮೇಲೂ ಏರಿ ಹೋದಾಗ ರಷ್ಯಾ ಬ್ರಿಟನ್ನಿನ ಪರವಾಗಿ ನಿಂತುಕೊಂಡಿತಲ್ಲ, ಆಗ ಕಮ್ಯುನಿಸ್ಟರು ಬ್ರಿಟನ್ನಿನ ಪರವಾಗಿ ಮಾತನಾಡಲಾರಂಭಿಸಿದರು. ಅವರಿಗೀಗ ಸುಭಾಷ್ಚಂದ್ರ ಬೋಸ್ ಜಪಾನಿನ ಅಧ್ಯಕ್ಷರ ನಾಯಿಯಂತೆ ಕಾಣಲಾರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಅವರ ರಾಷ್ಟ್ರನಿಷ್ಠೆ ಪ್ರಶ್ನಾರ್ಹವೇ!


ಈ ರೀತಿಯ ಇಬ್ಬಗೆಯ ನೀತಿಯುಳ್ಳ ಜನ ಬ್ರಿಟೀಷರಿಗೆ ವರದಾನವಾದರು. ದೊಡ್ಡ ಸಂಖ್ಯೆಯಲ್ಲಿ ಆಂದೋಲನ ನಡೆಯಿತಾದರೂ ದೀರ್ಘಕಾಲ ನಡೆಯದೇ ಸತ್ತುಹೋಯ್ತು. ಒಂದು ರೀತಿಯಲ್ಲಿ ಈ ಆಂದೋಲನ ಕಾಂಗ್ರೆಸ್ಸಿಗೆ ತಮ್ಮ ಸಾಮಥ್ರ್ಯದ ಅರಿವು ಮಾಡಿಸಿಕೊಟ್ಟಿತಲ್ಲದೇ ಬ್ರಿಟೀಷರಿಗೆ ಸಣ್ಣ ಆತಂಕವನ್ನು ಹುಟ್ಟುಹಾಕಿತು. ಗಾಂಧೀಜಿ ಶಾಂತಿಯ ಮಾತನ್ನಾಡಿದಾಗಲೇ ಈ ಪರಿಯ ಪ್ರತಿಭಟನೆ ಕಂಡುಬಂತು. ಇನ್ನು ಇಡಿಯ ದೇಶ ಶಸ್ತ್ರವನ್ನು ಕೈಗೆತ್ತಿಕೊಂಡರೆ ಕಥೆಯೇನು ಅನಿಸಿತ್ತು ಅವರಿಗೆ. ಯುದ್ಧ ಮುಗಿದಮೇಲೆ ಉಸಿರಾಡೋಣವೆಂದರೆ ಸುಭಾಷ್ಚಂದ್ರ ಬೋಸರ ಆಜಾದ್ ಹಿಂದ್ ಸೇನೆಯ ಸೈನಿಕರು ಭಾರತದಲ್ಲಿ ಉತ್ಪಾತವನ್ನೇ ಮಾಡಿಬಿಟ್ಟರು. ಸೈನಿಕರ ದಂಗೆಗಳನ್ನು ಊಹಿಸಿಕೊಂಡೇ ಬ್ರಿಟೀಷರ ಹೃದಯ ಬೆಚ್ಚಗಾಯ್ತು. ದೇಶಬಿಟ್ಟು ಹೊರಡಬೇಕು, ಆದರೆ ಜಾಗತಿಕ ಮಟ್ಟದಲ್ಲಿ ಅವಮಾನವಾಗದಂತೆ ನೋಡಿಕೊಳ್ಳಬೇಕು ಎಂಬ ನಿರ್ಣಯಕ್ಕೆ ಬಂದ ಅವರು ಅಂದುಕೊಂಡದ್ದಕ್ಕಿಂತ ಮುಂಚಿತವಾಗಿಯೇ ದೇಶಬಿಟ್ಟು ಹೊರಟರು.


ಸ್ವಾತಂತ್ರ್ಯ ಬಂದು 75 ವರ್ಷ ಕಳೆದಮೇಲೆಯೂ ಇದೇ ಗಾಂಧೀಜಿಯ ಅನುಯಾಯಿಗಳು ಇನ್ನೂ ಭಾರತವನ್ನು ಸ್ವರಾಜ್ಯವೆಂದು ಭಾವಿಸಿಯೇ ಇಲ್ಲ. ಈಗಲೂ ಭಾರತ್ ತೇರೆ ತುಕ್ಡೇ ಹೋಂಗೆ ಎಂದು ಘೋಷಣೆ ಕೂಗುವುದರಲ್ಲಿ ಹಿಂಜರಿಯುವುದಿಲ್ಲ. ದುರಂತವೆಂದರೆ ಜೆಎನ್ಯು ವಿದ್ಯಾಥರ್ಿಗಳು ಹೀಗೆ ಘೋಷಣೆ ಕೂಗಿದಾಗ ಅವರ ಬೆಂಬಲಕ್ಕೆ ಗಾಂಧಿ ಅನುಯಾಯಿಗಳ ದೊಡ್ಡ ಗಡಣವೇ ನಿಂತಿತ್ತು. 370ನೇ ವಿಧಿಯನ್ನು ಕೇಂದ್ರಸಕರ್ಾರ ಕಿತ್ತು ಬಿಸುಟಾಗ ಗಾಂಧಿ ಅನುಯಾಯಿಗಳು ಸಂಭ್ರಮಾಚರಣೆ ಮಾಡಬೇಕಿತ್ತು. 370ನ್ನು ಕ್ವಿಟ್ ಇಂಡಿಯಾ ಎನ್ನಬೇಕಿತ್ತು. ಊಹ್ಞೂಂ, ಹಾಗಾಗಲಿಲ್ಲ. ಸಂಸತ್ ಅಧಿವೇಶನದ ಹೊತ್ತಲ್ಲಿ ದಿನಬೆಳಗಾದರೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರಲ್ಲ ಗಾಂಧಿ ಅನುಯಾಯಿಗಳು ಕನ್ನಡಿಯಲ್ಲಿ ಒಮ್ಮೆ ಮುಖ ನೋಡಿಕೊಳ್ಳುವುದೊಳಿತು. ಗಾಂಧೀಜಿ ಮೂಲ ಶಿಕ್ಷಣದ ಕುರಿತಂತೆ ಮಾತನಾಡಿದರು. ಅದಕ್ಕೆ ಹತ್ತಿರವಿರುವ ಶಿಕ್ಷಣನೀತಿಯೊಂದನ್ನು ಪ್ರಸ್ತುತಪಡಿಸಿದರೆ ಗಾಂಧಿ ಅನುಯಾಯಿಗಳೇ ವಿರೋಧಿಸುತ್ತಾರಲ್ಲ, ಅಚ್ಚರಿ. ಸರಳತೆ ಗಾಂಧೀಜಿಯವರ ಮೂಲಮಂತ್ರವಾಗಿತ್ತು. ಮೈಮೇಲಿದ್ದ ಬಟ್ಟೆಯನ್ನು ಕಿತ್ತುಬಿಸುಟು ತುಂಡು ಪಂಚೆಗೆ ಬಂದಿದ್ದ ಪುಣ್ಯಾತ್ಮ. ಮಂತ್ರಿಗಳ, ಅಧಿಕಾರಗಳ ವಿಐಪಿ ಸಂಸ್ಕೃತಿಯನ್ನು ಹೊಡೆದಟ್ಟಿ ಅವರ ಗಾಡಿಗಳ ಕೆಂಪುದೀಪವನ್ನು ತೆಗೆಸಿದರೆ, ಗಾಂಧೀಜಿಯ ಹೆಸರು ಹೇಳುವವರು ಖುಷಿ ಪಡಬೇಕಲ್ಲವೇ? ಗೋಹತ್ಯೆ ನಿಷೇಧಕ್ಕೆ ಕಾನೂನು ಬಂದರೆ, ಸಂಭ್ರಮಿಸಬೇಕಾದ್ದು ಯಾರು ಹೇಳಿ? ಗಾಂಧಿಯ ಹೆಸರು ಹೇಳಿಕೊಂಡು ಬದುಕು ನಡೆಸುತ್ತಿರುವವರು ತಾನೆ? ಆದರೆ ಹಾಗೇಕೆ ಆಗುತ್ತಿಲ್ಲ. ಎಲ್ಲ ಬಿಡಿ, ರಾಮ್ಧುನ್ ಹೇಳುತ್ತಾ ರಾಮನ ಆದರ್ಶದ ಮೇಲೆಯೇ ಬದುಕುವ ಕಲ್ಪನೆ ಕಟ್ಟಿಕೊಡುತ್ತಿದ್ದ ಗಾಂಧಿಯ ನಾಡಿನಲ್ಲಿ ರಾಮ ಜನ್ಮಸ್ಥಾನ್ ಮಂದಿರ ಪುನರ್ನಿಮರ್ಾಣಗೊಳ್ಳುವಾಗ ಮುಂದೆ ನಿಂತು ಕಲ್ಲುಕಟ್ಟಬೇಕಾದವರು ಯಾರು ಹೇಳಿ? ಮತ್ತದೇ ಗಾಂಧಿಯ ಹೆಸರು ಎರವಲು ಪಡೆದವರು ತಾನೆ?
ಕ್ವಿಟ್ ಇಂಡಿಯಾ ಮತ್ತೊಮ್ಮೆ ಆಗಬೇಕಿದೆ. ಕ್ರೀಡಾಪಟುಗಳಿಗೆ ಪ್ರಶಸ್ತಿ ಕೊಡುವಾಗಲೂ ರಾಜಕಾರಣಿಗಳ ಹೆಸರು, ಆಸ್ಪತ್ರೆಗೆ ಹೆಸರಿಡುವಾಗಲೂ ರಾಜಕಾರಣಿಗಳದ್ದೇ. ಇವೆಲ್ಲವನ್ನೂ ಕಿತ್ತೆಸೆಯುವ ಕಾಲಬಂದಿದೆ. ಚುನಾವಣೆ ಬಂದೊಡನೆ ಜನಿವಾರ ಹಾಕಿಕೊಂಡು, ವಿಭೂತಿ ಬಳಿದುಕೊಂಡು, ಪಂಥಗಳ ರಾಜಕಾರಣ ಮಾಡಿ ಮತಸ್ವೀಕಾರ ಮಾಡುವ ಜನರಿಗೆ ಕ್ವಿಟ್ ಇಂಡಿಯಾ ಎನ್ನಬೇಕಿದೆ. ರೈತರಿಗೆ ನೇರವಾಗಿ ಲಾಭ ಸಂದಾಯವಾಗುವಾಗ ಅದನ್ನು ಬೇಕಂತಲೇ ವಿರೋಧಿಸುತ್ತಾ ರಸ್ತೆಯನ್ನು ಅಡ್ಡಗಟ್ಟಿ ಕೂರುತ್ತಾರಲ್ಲ, ಬಿರಿಯಾನಿ ತಿನ್ನುತ್ತಾ ಹೈವೇಗಳಲ್ಲಿ ಜನ ಸಂಚರಿಸದಂತೆ ಮಾಡುತ್ತಾರಲ್ಲ, ಅಂಥವರಿಗೆ ಎಚ್ಚರಿಕೆ ಕೊಡಬೇಕಿದೆ. ಹೊಸ ಭಾರತ ಹೀಗೆಯೇ ಮೈದಳೆಯಬೇಕಾಗಿರುವುದು. ನಾವು-ನೀವುಗಳೇ ಇದಕ್ಕೆ ಸತ್ಯಾಗ್ರಹಿಗಳು!

ಅಫ್ಘಾನಿಸ್ತಾನ: ಎದ್ದೆದ್ದು ಕುಣಿಯುತ್ತಿದೆ ಪಾಕಿಸ್ತಾನ!

ಅಫ್ಘಾನಿಸ್ತಾನ: ಎದ್ದೆದ್ದು ಕುಣಿಯುತ್ತಿದೆ ಪಾಕಿಸ್ತಾನ!


ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿ. ಡೊನಾಲ್ಡ್ ಟ್ರಂಪ್ ಅಫ್ಘಾನಿಸ್ತಾನದಲ್ಲಿರುವ ಅಮೇರಿಕಾದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮಾತನಾಡಿದಾಗಲೇ ಆತಂಕದ ಗೆರೆಗಳು ಮೂಡಿದ್ದವಾದರೂ ಟ್ರಂಪ್ ತಾಲಿಬಾನಿಗೆ ಹಾಕಿದ ನಿಯಮಗಳು ಸ್ವಲ್ಪ ಸಮಾಧಾನ ಕೊಡುವಂತಿದ್ದವು. ಆದರೀಗ ಹಾಗಿಲ್ಲ. ಹೊಸ ಅಧ್ಯಕ್ಷ ಬೈಡನ್ ಮುಲಾಜಿಲ್ಲದೇ ಅಮೇರಿಕಾ ಮತ್ತು ನ್ಯಾಟೊದ ಸೇನೆಯನ್ನು ಮರಳಿ ಕರೆಸಿಕೊಂಡಿದ್ದಾನೆ. ಸಪ್ಟೆಂಬರ್ 11ರ ವೇಳೆಗೆ ಅಮೇರಿಕಾದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂಬ ಅವನ ಹೇಳಿಕೆಯಿಂದ ಅನೇಕ ರಾಷ್ಟ್ರಗಳು ಕಂಗಾಲಾಗಿವೆ. ಭಾರತವೂ ಕೂಡ ಇದಕ್ಕೆ ಹೊರತಲ್ಲ!


ಅಮೇರಿಕಾದ ವಲ್ಡರ್್ ಟ್ರೇಡ್ ಸೆಂಟರ್ನ ಕಟ್ಟಡದ ಮೇಲೆ ಸಪ್ಟೆಂಬರ್ 2001ರಲ್ಲಿ ದಾಳಿಯಾದ ನಂತರ ಅಮೇರಿಕಾ ಅಫ್ಘಾನಿಸ್ತಾನವನ್ನು ನಿಯಂತ್ರಿಸುವ ನಿಶ್ಚಯ ಮಾಡಿತ್ತು. ಇವೆಲ್ಲವೂ ನೆಪವಷ್ಟೆ. ವಾಸ್ತವವಾಗಿ ಮಧ್ಯಪ್ರಾಚ್ಯ ಏಷ್ಯಾದ ಮೇಲೆ ತನ್ನ ಬಲವನ್ನು ಅಧಿಕೃತವಾಗಿ ಸ್ಥಾಪಿಸುವ ಬಯಕೆ ಅದಕ್ಕಿತ್ತು. ಹೀಗಾಗಿಯೇ ಎಲ್ಲ ನೆಪಗಳನ್ನು ಮುಂದೆಮಾಡಿ ಅಫ್ಘಾನಿಸ್ತಾನಕ್ಕೆ ಸೇನೆ ಕಳಿಸಲಾಯ್ತು. ಕಳೆದ ಸುಮಾರು 20 ವರ್ಷಗಳಲ್ಲಿ ಅಮೇರಿಕಾ ಈ ಸೇನೆಯನ್ನು ನಿರ್ವಹಿಸಲು ಮತ್ತು ಅಫ್ಘಾನಿಸ್ತಾನದ ಬೆಳವಣಿಗೆಯ ನೆಪವನ್ನು ಮುಂದೆ ಮಾಡಿ 144 ಬಿಲಿಯನ್ ಡಾಲರ್ಗಳನ್ನು ವ್ಯಯಿಸಿದೆ. ಸುಮಾರು ಎರಡೂವರೆ ಸಾವಿರದಷ್ಟು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. 22 ಸಾವಿರಕ್ಕೂ ಹೆಚ್ಚು ಸೈನಿಕರು ಏಟು ತಿಂದು ದೇಶಕ್ಕೆ ಮರಳಿದ್ದಾರೆ. ಆದರೆ ಇವಿಷ್ಟರೊಂದಿಗೆ ಏಷ್ಯಾದ ಬಹುಭಾಗದ ಮೇಲೆ ಅಮೇರಿಕಾ ಎರಡು ದಶಕಗಳಿಂದ ನಿವರ್ಿವಾದಿತವಾದ ಸಾರ್ವಭೌಮತ್ವವನ್ನು ಅನುಭವಿಸುತ್ತಾ ಬಂದಿದೆ. ತಾಲಿಬಾನಿಗಳನ್ನು ಮಟ್ಟಹಾಕುವ ನೆಪದಿಂದ ತನ್ನ ಆಶಯವನ್ನು ಈಡೇರಿಸಿಕೊಂಡ ಅಮೇರಿಕಾ ಒಂದು ಕಾಲದಲ್ಲಿ ಇದೇ ತಾಲಿಬಾನಿಗಳ ಬೆನ್ನಹಿಂದೆ ನಿಂತಿತ್ತು ಎಂಬುದನ್ನೂ ಮರೆಯುವಂತಿಲ್ಲ. ತನ್ನ ಶತ್ರುಗಳನ್ನು ಮಟ್ಟಹಾಕಲು ಹೊಸಬರನ್ನು ಹುಟ್ಟುಹಾಕಿ, ಕೊನೆಗೆ ಆತನನ್ನೂ ಮಟ್ಟಹಾಕುವ ಅಮೇರಿಕಾದ ಈ ಚಾಳಿ ಹೊಸತೇನೂ ಅಲ್ಲ. ಆದರೆ ಟ್ರಂಪ್ ಅಮೇರಿಕಾಕ್ಕಾಗುತ್ತಿರುವ ನಷ್ಟವನ್ನು ತಡೆಯಬೇಕೆಂದು ನಿಶ್ಚಯಿಸಿ ಸೈನ್ಯವನ್ನು ಹಿಂದಕ್ಕೆ ಕರೆದುಕೊಳ್ಳುವ ಆಲೋಚನೆಗೆ ಜೀವ ತುಂಬಿದ. ಈ ಹಿಂದೆ ಬರಾಕ್ ಒಬಾಮಾ ಕೂಡ ಇದೇ ರೀತಿ ಆಲೋಚಿಸಿದ್ದನಾದರೂ ಮುಂದಡಿಯಿಟ್ಟಿರಲಿಲ್ಲ. ಟ್ರಂಪ್, ಯಾವ ತಾಲಿಬಾನಿಗಳ ವಿರುದ್ಧ ಅಮೇರಿಕಾದ ಹೋರಾಟ ನಡೆದಿತ್ತೋ 2020ರ ಫೆಬ್ರವರಿಯಲ್ಲಿ ಅದೇ ತಾಲಿಬಾನಿಗಳನ್ನು ಮಾತುಕತೆಗೆ ಆಹ್ವಾನಿಸಿ ಒಪ್ಪಂದ ಮಾಡಿಕೊಂಡುಬಿಟ್ಟ. ಈ ಒಪ್ಪಂದದಲ್ಲಿ ಅಮೇರಿಕಾದ ಸ್ನೇಹಿತರ ವಿರುದ್ಧ ಭಯೋತ್ಪಾದನೆ ನಡೆಸಲು ಅಫ್ಘಾನಿಸ್ತಾನ ತನ್ನ ನೆಲ ಬಿಟ್ಟು ಕೊಡಬಾರದೆಂಬ ನಿಯಮ ಹಾಕಲು ಮರೆಯಲಿಲ್ಲ. ತಾಲಿಬಾನ್ ಒಪ್ಪಿಕೊಂಡಿತು. ಅಚ್ಚರಿ ಎಂದರೆ ಮಾತು ಪಡೆದವನಿಗೂ ಮಾತು ಕೊಟ್ಟವನಿಗೂ ಇದನ್ನು ಉಳಿಸಿಕೊಳ್ಳುವ ಭರವಸೆ ಇರಲಿಲ್ಲ. ಆದರೆ ಟ್ರಂಪ್ನ ಪ್ರಭಾವದಿಂದಾಗಿ ಅದೇ ವರ್ಷದ ಸಪ್ಟೆಂಬರ್ ತಿಂಗಳಲ್ಲಿ ಅಫ್ಘನ್ ಸಕರ್ಾರ ಮತ್ತು ತಾಲಿಬಾನಿಗಳ ಪ್ರಮುಖ ನಾಯಕರು ಕತಾರ್ನ ದೋಹಾದಲ್ಲಿ ಭೇಟಿಯಾಗಿ ‘ಇಂಟ್ರಾ ಅಫ್ಘನ್’ ಮಾತುಕತೆ ನಡೆಸಲಾಯ್ತು. ಈ ಸಂದರ್ಭದಲ್ಲಿ ತಾಲಿಬಾನಿ ನಾಯಕ ಮುಲ್ಲಾ ಅಬ್ದುಲ್ಗನಿ ಬರಾದಾರ್ ಮಾತನಾಡಿ ‘ಸ್ವತಂತ್ರ, ಸಾರ್ವಭೌಮ, ಸಂಘಟಿತ, ಅಭಿವೃದ್ಧಿ ಹೊಂದಿದ ಮತ್ತು ಇಸ್ಲಾಮಿನ ವ್ಯವಸ್ಥೆಗಳ ಅಡಿಯಲ್ಲಿರುವ ಮುಕ್ತ ಅಫ್ಘಾನಿಸ್ತಾನ ನಮಗೆ ಬೇಕು’ ಎಂದಿದ್ದ. ಇಲ್ಲಿ ಬೇರೆಲ್ಲವೂ ಒಪ್ಪಿಕೊಳ್ಳಬೇಕಾದ್ದೇ. ಆದರೆ ಇಸ್ಲಾಮಿನ ವ್ಯವಸ್ಥೆ ಎಂಬುದರ ವ್ಯಾಖ್ಯೆಯನ್ನು ಅರಿತುಕೊಳ್ಳುವುದು ಕಷ್ಟ ಅಷ್ಟೆ. ಯಾರು ಏನೇ ಹೇಳಿದರೂ ಅಮೇರಿಕನ್ ಸೇನೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ನಂತರ ಅಲ್ಲಿ ಚುನಾವಣೆ ನಡೆದು ಪ್ರಜಾಪ್ರಭುತ್ವ ಮಾದರಿಯ ಸಕರ್ಾರ ಅಧಿಕಾರಕ್ಕೆ ಬಂದಿತ್ತು. ಹೆಣ್ಣುಮಕ್ಕಳು ಶಾಲೆಗೆ ಹೋಗಲಾರಂಭಿಸಿದ್ದರು. ಅವರ ಬದುಕು ಮುಕ್ತವಾದ ವಾತಾವರಣದಲ್ಲಿ ಚೆನ್ನಾಗಿಯೇ ನಡೆದಿತ್ತು. ಒಂದು ರೀತಿ ಎರಡು ದಶಕಗಳ ಕಾಲ ಅಫ್ಘನ್ನಿನ ಸಾಮಾನ್ಯ ಜನ ಉಸಿರಾಡುತ್ತಿದ್ದರು. ಈ ಸಂದರ್ಭದಲ್ಲಿಯೇ ಭಾರತವೂ ಈ ಪ್ರದೇಶದ ಬೆಳವಣಿಗೆಗೆ ತನ್ನ ಸಹಕಾರ ಹಸ್ತವನ್ನು ಚಾಚಿತು. ಅಣೆಕಟ್ಟುಗಳ ನಿಮರ್ಾಣ ಮಾಡಿಕೊಟ್ಟು ನೀರಾವರಿ ವ್ಯವಸ್ಥೆಯತ್ತ ಗಮನಹರಿಸಿ, ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸುವಲ್ಲಿ ಭಾರತದ ಪಾತ್ರ ಬಲುದೊಡ್ಡದ್ದು. ಶಿಕ್ಷಣ ಕ್ಷೇತ್ರದಲ್ಲಿ ಸಹಕಾರಿಯಾಗಿ ನಿಂತ ಭಾರತ ಕಟ್ಟಿಕೊಟ್ಟ ಗ್ರಂಥಾಲಯಗಳ ಕುರಿತಂತೆ ಈಗಲೂ ಅಲ್ಲಿಯ ಜನ ಗೌರವದ ಮಾತುಗಳನ್ನಾಡುತ್ತಾರೆ. ಅಣೆಕಟ್ಟಿನ ಉದ್ಘಾಟನೆಗೆ ನರೇಂದ್ರಮೋದಿ ಅಫ್ಘಾನಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿನ ಜನ ತಿರಂಗಾ ಹಿಡಿದು ಗೌರವದಿಂದ ಸ್ವಾಗತಿಸಿದ್ದನ್ನು ಮರೆಯುವಂತಿಲ್ಲ. ನಮ್ಮ ಬಾಂಧವ್ಯ ಎಷ್ಟು ಬಲವಾಗಿತ್ತೆಂದರೆ ಕೊವಿಡ್ ಲಸಿಕೆಗಳನ್ನು ಭಾರತ ಮೊತ್ತಮೊದಲು ಕಳಿಸಿದ್ದು ಅಫ್ಘಾನಿಸ್ತಾನಕ್ಕೇ. ಇವಿಷ್ಟನ್ನೂ ಈಗ ಸ್ಮರಿಸಿಕೊಳ್ಳುತ್ತಿರುವುದೇಕೆಂದರೆ ಅಲ್ಲಿನ ಜನರ ಜೀವನ ಉನ್ನತ ಸ್ತರಕ್ಕೇರಲಾರಂಭಿಸಿತ್ತು. ತಾಲಿಬಾನಿಗಳ ಕಟ್ಟರ್ ಇಸ್ಲಾಮೀಯತೆಯ ಕಪಿಮುಷ್ಟಿಯಿಂದ ಹೊರಬಂದಿದ್ದ ಈ ಜನ ಈಗ ತಮ್ಮ ಬದುಕಿನ ಆನಂದವನ್ನು ಗುರುತಿಸಿಕೊಳ್ಳಲಾರಂಭಿಸಿದ್ದರು. ಟ್ರಂಪ್ ತನ್ನ ಸೇನೆಯನ್ನು ಮರಳಿ ಕರೆಸಿಕೊಳ್ಳುವ ಮಾತುಗಳನ್ನಾಡುತ್ತಿರುವಂತೆಯೇ ಅಫ್ಘಾನಿಸ್ತಾನಿಯರ ಕನಸುಗಳು ಚೂರುಚೂರಾಗಿಬಿಟ್ಟವು. ತಾಲಿಬಾನಿಯರ ದುಷ್ಟ ಆಡಳಿತದ ಕರಾಳ ಛಾಯೆ ಮತ್ತೊಮ್ಮೆ ವ್ಯಾಪಿಸಿಕೊಂಡಿತು!


ಟ್ರಂಪ್ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ಈ ವಿಚಾರ ಮೂಲೆಗುಂಪಾಯ್ತು ಎಂದುಕೊಂಡರೆ ಬೈಡನ್ ಟ್ರಂಪ್ಗಿಂತ ವೇಗವಾಗಿ ಅಮೇರಿಕನ್ ಸೇನೆಯನ್ನು ಮರಳಿ ಕರೆಸಿಕೊಳ್ಳುವ ಚಟುವಟಿಕೆ ಆರಂಭಿಸಿಬಿಟ್ಟ. ಈಗ ಈ ಪ್ರಕ್ರಿಯೆಯಿಂದ ಎದ್ದೆದ್ದು ಕುಣಿಯುತ್ತಿರುವ ರಾಷ್ಟ್ರಗಳು ಎರಡೇ. ಒಂದು ಪಾಕಿಸ್ತಾನ ಮತ್ತೊಂದು ಚೀನಾ. ಇಬ್ಬರ ಉದ್ದೇಶವೂ ಬಲು ಸರಳ. ದುರ್ಬಲವಾದ ಭಯೋತ್ಪಾದನೆಗೆ ಸೂಕ್ತವಾದ, ತಮ್ಮ ಮಜರ್ಿಯಲ್ಲೇ ಬಿದ್ದಿರುವ ಅಫ್ಘಾನಿಸ್ತಾನ ಭಾರತಕ್ಕೆ ತೊಂದರೆಯುಂಟುಮಾಡಬಲ್ಲದು. ಇದು ಭಾರತದ ಕನಸುಗಳನ್ನು, ಆಕಾಂಕ್ಷೆಗಳನ್ನು ಸರ್ವನಾಶ ಮಾಡಿಬಿಡಬಲ್ಲದೆಂಬುದು ಇವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಅವರಿಬ್ಬರ ಆನಂದಕ್ಕೆ ಪಾರವೇ ಇಲ್ಲ. ಸೇನೆಯನ್ನು ಮರಳಿ ಕರೆಸಿಕೊಳ್ಳುವ ಮುನ್ನ ಟ್ರಂಪ್ ವಿಧಿಸಿದ್ದ ಶರತ್ತನ್ನು ಬೈಡನ್ ಮುಂದಿಟ್ಟಿಲ್ಲ. ಅದರರ್ಥ ಭಾರತ ವಿರೋಧಿಯಾದ ಯಾವ ಚಟುವಟಿಕೆಗಾದರೂ ತನ್ನ ನೆಲವನ್ನು ಅಫ್ಘಾನಿಸ್ತಾನ ಬಳಸಿಕೊಳ್ಳಬಹುದು ಎಂಬುದೇ ಆಗಿದ್ದರೆ ಅದು ಮದಿರೆ ಕುಡಿದ ಹುಚ್ಚು ಮಂಗನಿಗೆ ಚೇಳು ಕಡಿದಂತೆಯೇ ಸರಿ.


ಪಾಕಿಸ್ತಾನ ಮತ್ತು ತಾಲಿಬಾನಿಗಳ ನಂಟು ಹೊಸತೇನು ಅಲ್ಲ. ಅಲ್ಲಿನ ಹಕ್ಕಾನಿ ಗುಂಪು ತಾಲಿಬಾನಿಗಳ ಮೇಲೆ ಸಾಕಷ್ಟು ಪ್ರಭಾವ ಹೊಂದಿದೆ. ಡೊನಾಲ್ಡ್ ಟ್ರಂಪ್ ತಾಲಿಬಾನಿಗಳ ಜೊತೆಗೆ ಮಾತುಕತೆ ನಡೆಸಬೇಕೆಂಬ ಪ್ರಯತ್ನ ಆರಂಭಿಸಿದಾಗ ಆತ ಮೊದಲು ಮಾತನಾಡಬೇಕಾದ ಅನಿವಾರ್ಯತೆ ಒದಗಿದ್ದು ಪಾಕಿಸ್ತಾನಿಯರೊಂದಿಗೆ ಎಂಬುದೇ ಅವರೀರ್ವರ ಸಂಬಂಧದ ವ್ಯಾಪ್ತಿಯನ್ನು ತಿಳಿಸಬಲ್ಲದು. ಭಾರತ ತನ್ನ ವ್ಯಾಪ್ತಿಯನ್ನು ಅಫ್ಘಾನಿಸ್ತಾನದಲ್ಲಿ ಇಂಚಿಂಚು ಹೆಚ್ಚಿಸಿಕೊಳ್ಳುತ್ತಿರುವಂತೆ ಪಾಕಿಸ್ತಾನದ ಎದೆ ಢವಗುಟ್ಟಲಾರಂಭಿಸಿತ್ತು. ಚೀನಾ ಶ್ರೀಲಂಕಾದಲ್ಲಿ ಬಂದರು ಅಭಿವೃದ್ಧಿಗೊಳಿಸಿ ತನ್ನ ನೌಕೆಯನ್ನು ನಿಲ್ಲಿಸುತ್ತದೆ ಎಂಬ ವಿಚಾರ ನಮಗೆಷ್ಟು ಗಾಬರಿ ಹುಟ್ಟಿಸುವಂಥದ್ದೋ, ಅಫ್ಘಾನಿಸ್ತಾನದೊಂದಿಗಿನ ನಮ್ಮ ಸ್ನೇಹ ಸಂಬಂಧ ಪಾಕಿಸ್ತಾನಕ್ಕೂ ಅಷ್ಟೇ ಗಾಬರಿ ಹುಟ್ಟಿಸುವಂಥದ್ದು. ಭಾರತ ಪಾಕಿಸ್ತಾನವನ್ನು ಸೈನ್ಯದ ಮೂಲಕ ಸುತ್ತುವರೆಯುವ ಕ್ರಮ ಇದು ಎಂದು ಅದು ಭಾವಿಸುತ್ತದೆ. ಆದರೆ ಭಾರತ ಎಂದಿಗೂ ಅಫ್ಘಾನಿಸ್ತಾನವನ್ನು ಈ ದಿಕ್ಕಿನಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಈಗ ಅಮೇರಿಕಾದ ಸೇನೆ ಕಾಲ್ಕೀಳುತ್ತಿರುವಂತೆ ಪಾಕಿಸ್ತಾನಕ್ಕೆ ಆನೆಬಲ ಬಂದಂತಾಗಿದೆ. ಅವರೆಷ್ಟು ದುಷ್ಟರೆಂದರೆ ಇತ್ತೀಚೆಗೆ ಪಾಕಿಸ್ತಾನೀಯನೊಬ್ಬ ಅಫ್ಘಾನಿಸ್ತಾನದಲ್ಲಿ ಭಾರತ ಕಟ್ಟುಕೊಟ್ಟಿರುವ ಅಣೆಕಟ್ಟನ್ನು ಹೊಡೆದುರುಳಿಸಲು ಪ್ರಯತ್ನಪಟ್ಟು ಸಿಕ್ಕುಬಿದ್ದಿದ್ದ. ಎಷ್ಟು ವಿಚಿತ್ರ ನೋಡಿ, ಮುಸಲ್ಮಾನರೇ ಇರುವ ರಾಷ್ಟ್ರವೊಂದಕ್ಕೆ ಹಿಂದುಗಳ ರಾಷ್ಟ್ರವೊಂದು ನೀರು ಕೊಟ್ಟರೆ, ಮತ್ತೊಂದು ಮುಸ್ಲೀಂ ರಾಷ್ಟ್ರ ಅದನ್ನು ಕಸಿಯುವ ಧಾವಂತದಲ್ಲಿದೆ. ಅಲ್ಲಾಹ್ ಯಾರನ್ನು ಮೆಚ್ಚುತ್ತಾನೆಂಬುದು ಈಗ ಬಲುದೊಡ್ಡ ಪ್ರಶ್ನೆ! ಅಮೇರಿಕಾದ ಸೇನೆ ಮರಳುವ ಪ್ರಕ್ರಿಯೆ ಆರಂಭವಾಗುವುದರೊಂದಿಗೆ ಪಾಕಿಸ್ತಾನದ ಶಕ್ತಿ ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಲೇ ಸಾಗಿದೆ. ಕನಿಷ್ಠಪಕ್ಷ 10 ಸಾವಿರ ಜನ ಪಾಕೀ ಸೈನಿಕರು ಅಲ್ಲೀಗ ತಾಲಿಬಾನಿಗಳ ಪರವಾಗಿ ದುಡಿಯುತ್ತಿದ್ದಾರೆ. ತನ್ನ ಗಡಿಗೆ ಹೊಂದಿಕೊಂಡಂತೆ ತಾಲಿಬಾನಿಗಳು ಅಡಗಿರುವ ಸ್ಥಳದಲ್ಲಿ ಅಫ್ಘಾನಿಸ್ತಾನ ವಾಯುದಾಳಿ ನಡೆಸಿದ್ದೇ ಆದರೆ ಅಫ್ಘನ್ ಸೇನೆಯ ವಿರುದ್ಧ ಪಾಕಿಸ್ತಾನ ದಾಳಿ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಇತ್ತೀಚೆಗೆ ಲಾಂಗ್ವಾರ್ ಜರ್ನಲ್ನ ಡಿಫೆನ್ಸ್ ಆಫ್ ಡೆಮಾಕ್ರಸೀಸ್ ನಡೆಸಿದ ಸಂಶೋಧನೆಯ ಪ್ರಕಾರ ಅಫ್ಘಾನಿಸ್ತಾನದ 325 ಜಿಲ್ಲೆಗಳಲ್ಲಿ ತಾಲಿಬಾನಿಗಳ ಹಿಡಿತ 76ರಲ್ಲಿದ್ದರೆ ಅಫ್ಘನ್ ಸಕರ್ಾರದ ತಾಕತ್ತು 127ರಲ್ಲಿದೆ. ಉಳಿದ 122 ಜಿಲ್ಲೆಗಳಲ್ಲಿ ಸಮಬಲವೆನಿಸಿದರೂ ಪಾಕಿಸ್ತಾನಿಗಳ ಸಹಕಾರ ಪಡೆದುಕೊಂಡ ತಾಲಿಬಾನಿಗಳು ಈ ಭಾಗದ ಮೇಲೆ ಹಿಡಿತವನ್ನು ಸಾಧಿಸುವುದು ಅಸಾಧ್ಯವಲ್ಲ. ಇವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಇರುವ ಅಫ್ಘಾನಿಸ್ತಾನ್ ನ್ಯಾಷನಲ್ ಡಿಫೆನ್ಸ್ ಅಂಡ್ ಸೆಕ್ಯುರಿಟಿ ಫೋರ್ಸಸ್ ಕೆಲವು ಲಕ್ಷ ಸೈನಿಕರನ್ನು ಹೊಂದಿರುವುದಾದರೂ ಸೈನ್ಯ ನಿರ್ವಹಣೆಗೆ ಮತ್ತೆ ಅಮೇರಿಕಾದಿಂದಲೇ ಹಣ ಬರಬೇಕು. ಇದಕ್ಕೆ ಪ್ರತಿಯಾಗಿ ಮತೀಯ ಆವೇಶದಿಂದ ಹುಚ್ಚಾಗಿರುವ ತಾಲಿಬಾನಿಗಳಿಗೆ ಚೀನಾದಂತಹ ರಾಷ್ಟ್ರಗಳು ಸಾಕಷ್ಟು ಹಣ ಸುರಿಯುತ್ತಿವೆ. ಸಹಜವಾಗಿಯೇ ಈ ಆವೇಶದಿಂದ ನುಗ್ಗುತ್ತಿರುವ ಈ ಮಂದಿ ಇಡಿಯ ಅಫ್ಘಾನಿಸ್ತಾನವನ್ನು ತೆಕ್ಕೆಗೆ ತೆಗೆದುಕೊಂಡುಬಿಡುತ್ತಾರೆ. ಮುಂದೆ ಲಷ್ಕರ್-ಎ-ತೈಯ್ಬಾ, ಜೈಶ್-ಎ-ಮೊಹಮ್ಮದ್ನಂತಹ ಉಗ್ರಗಾಮಿ ಸಂಘಟನೆಗಳಿಗೆ ಇದು ನಿಸ್ಸಂಶಯವಾಗಿ ಶಕ್ತಿ ಮತ್ತು ಪ್ರೇರಣೆಯಾಗಲಿದೆ. ನಾವು ಅದರ ಫಲವನ್ನು ಉಣ್ಣಬೇಕಾಗುವುದು ನಿಶ್ಚಿತ. ಹೀಗಾಗಿಯೇ ಭಾರತ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ. ಕಳೆದ ತಿಂಗಳು ಭಾರತ ತಾಲಿಬಾನಿನ ಪ್ರಮುಖರೊಂದಿಗೆ ಮಾತುಕತೆ ಆರಂಭಿಸಿ ತನಗೆ ಬೇಕಾದ್ದನ್ನು ಪಡೆದುಕೊಳ್ಳುವ ಆಲೋಚನೆಯನ್ನು ಮಾಡಿಬಿಟ್ಟಿದೆ. ತಾಲಿಬಾನಿ ಮುಖಂಡರು ಹಿಂದೆಂದಿಗಿಂತಲೂ ಎಚ್ಚರಿಕೆಯಿಂದ ಈಗ ವ್ಯವಹರಿಸುತ್ತಿದ್ದಾರೆ. ಇತ್ತ ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ ಪ್ರಕ್ರಿಯೆಯನ್ನು ಭಾರತದ ಆಂತರಿಕ ವಿಚಾರವೆಂದಿದ್ದಾರಲ್ಲದೇ ಉಯ್ಘುರ್ ಮುಸಲ್ಮಾನರ ತಗಾದೆಯನ್ನು ಚೀನಾದ ಆಂತರಿಕ ವಿಚಾರ ಎಂದು ಕರೆದಿದ್ದಾರೆ. ಇದು ಈ ಹೊತ್ತಿನಲ್ಲಿ ಅಫ್ಘಾನಿಸ್ತಾನಿ ಸಕರ್ಾರಕ್ಕೆ ಸಿಗಬಹುದಾದ ನಮ್ಮ ಸಹಕಾರವನ್ನು ತಡೆಯುವ ಉಪಾಯವಿದ್ದರೂ ಇರಬಹುದು. ಇದರ ಹಿಂದು-ಹಿಂದೆಯೇ ಅಫ್ಘನ್ ಸಕರ್ಾರದ ಮಂತ್ರಿಯೊಬ್ಬರು ತಾಲಿಬಾನಿಗಳನ್ನೆದುರಿಸುವಲ್ಲಿ ಭಾರತದ ಸಹಕಾರವನ್ನು ಕೋರಿರುವುದಲ್ಲದೇ ಭಾರತಕ್ಕೆ ಬಂದು ಈ ಕುರಿತಂತೆ ಮಾತುಕತೆ ನಡೆಸುವ ಉತ್ಸುಕತೆಯಲ್ಲೂ ಇದ್ದಾರೆ. ನಮ್ಮ ವಿದೇಶಾಂಗ ನೀತಿಗೆ ಈಗಿನದ್ದು ಬಲುದೊಡ್ಡ ಸವಾಲು. ಅಲ್ಲಿನ ಸಕರ್ಾರಕ್ಕೆ ಸಹಕಾರ ಮಾಡಿದರೆ ಭವಿಷ್ಯದುದ್ದಕ್ಕೂ ಭಯೋತ್ಪಾದನೆಯ ಭೀತಿ. ಸಹಕರಿಸದಿದ್ದರೆ ನ್ಯಾಯದ ಪರವಾಗಿ ನಿಂತಿಲ್ಲವೆಂಬ ಕೊರಗು. ಬಲು ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿರುವ ಮೋದಿ ಸಕರ್ಾರ ಈ ಅವಧಿಯಲ್ಲೇ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹುಡು-ಹುಡುಕಿ ಕೊಲ್ಲುತ್ತಿದೆ. ಕಳೆದ ಹದಿನೈದಿಪ್ಪತ್ತು ದಿನಗಳಲ್ಲಿಯಂತೂ ಕೆಲವು ಪ್ರಮುಖ ಭಯೋತ್ಪಾದಕ ನಾಯಕರೂ ಸೇರಿದಂತೆ ಅನೇಕರನ್ನು ಯಮಪುರಿಗಟ್ಟಿದೆ.


ಅಮೇರಿಕಾಕ್ಕೆ ಅಂದುಕೊಂಡಷ್ಟು ಸುಲಭವಿಲ್ಲ. ಮಧ್ಯಪ್ರಾಚ್ಯದಲ್ಲಿ ತನ್ನ ಮೂಗುತೂರಿಸುವಿಕೆಯನ್ನು ಕಡಿಮೆ ಮಾಡಿಕೊಂಡು ಅದೀಗ ಇಂಡೊ-ಪೆಸಿಫಿಕ್ ಪ್ರದೇಶಗಳತ್ತ ತಿರುಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಬೆಳೆಯುತ್ತಿರುವ ಪರಿಯನ್ನು ನಿಯಂತ್ರಿಸಬೇಕಾಗಿರುವುದು ಸದ್ಯಕ್ಕೆ ಅದರ ಅಗತ್ಯ. ಅದಾಗಲೇ ಚೀನಾ ತನ್ನ ನೌಕಾಸೈನ್ಯವನ್ನು ವಿಸ್ತರಿಸಿಕೊಂಡಿರುವ ರೀತಿಯಿಂದಾಗಿ ಅದೀಗ ಅಮೇರಿಕಾವನ್ನೇ ಹಿಂದಿಕ್ಕಿ ಜಗತ್ತಿನ ನಂಬರ್ ಒನ್ ಆಗಿ ಬೆಳೆದಿದೆ. ದಕ್ಷಿಣ ಚೀನಾ ಸಮುದ್ರದ ಮೂಲಕ ಅದು ನಡೆಸುತ್ತಿರುವ ವ್ಯಾಪಾರ-ವಹಿವಾಟು ಅಮೇರಿಕಾವನ್ನು ಆತಂಕಕ್ಕೆ ಬೀಳಿಸುವಷ್ಟು. ಭಾರತವನ್ನು ತುಳಿಯುವ ಪ್ರಯತ್ನದಲ್ಲಿ ಅಮೇರಿಕಾ ಮುಂದಡಿಯಿಡ ಹೋದರೆ ತನ್ನ ಕಾಲಮೇಲೆ ಕುಠಾರಾಘಾತ ಮಾಡಿಕೊಳ್ಳುವುದು ನಿಶ್ಚಿತ. ಹೀಗಾಗಿ ಸದ್ಯಕ್ಕೆ ತೀರಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲವಾದರೂ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪಾಕ್ ಆಕ್ರಮಿತ ಕಾಶ್ಮೀರವೆಂಬ ಸ್ವಾಯತ್ತ ರಾಷ್ಟ್ರವೊಂದು ನಿಮರ್ಾಣವಾಗುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಏನಾಗುವುದೆಂದು ಕಾದು ನೋಡೋಣ..

ಆಫ್ರಿಕಾದಲ್ಲಿ ಭಾರತೀಯರ ಲೂಟಿ; ನಮಗೇನು ಪಾಠ?

ಆಫ್ರಿಕಾದಲ್ಲಿ ಭಾರತೀಯರ ಲೂಟಿ; ನಮಗೇನು ಪಾಠ?


ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ಬಲುದೊಡ್ಡ ದಂಗೆಯೇ ನಡೆಯುತ್ತಿದೆ. ಕಳೆದೆರಡು ದಿನಗಳ ಹಿಂದಿನ ವರದಿಯ ಪ್ರಕಾರ ನೂರಕ್ಕೂ ಹೆಚ್ಚು ಭಾರತೀಯರು ಈ ದಂಗೆಕೋರರಿಗೆ ಆಹುತಿಯಾಗಿದ್ದಾರೆ. ಅಂಗಡಿಗಳು ಲೂಟಿಯಾಗಿವೆ. ಭಾರತೀಯರ ವಿರುದ್ಧದ ಜನಾಂಗೀಯ ದ್ವೇಷ ಹಿಂದೆಂದಿಗಿಂತಲೂ ಹೆಚ್ಚು ಅಲ್ಲೀಗ ಗೋಚರವಾಗುತ್ತಿದೆ. ಇದ್ದಕ್ಕಿದ್ದಂತೆ ಏನಾಯ್ತು? ಬ್ರಿಟೀಷರ ಕಾಲದಲ್ಲಿಯೇ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ದಕ್ಷಿಣ ಆಫ್ರಿಕಾಕ್ಕೆ ಹೋದವರು ಇಲ್ಲಿನ ಭಾರತೀಯರು. ಬಹುತೇಕರಿಗೆ ತಾವು ದಕ್ಷಿಣ ಆಫ್ರಿಕಾಕ್ಕೆ ಹೋಗುತ್ತಿದ್ದೇವೆ ಎಂಬುದೂ ಗೊತ್ತಿರಲಿಲ್ಲ. ಬಡತನದಿಂದ ಬೆಂದು ಬಸವಳಿದಿದ್ದ ಅವರು ಹೊಟ್ಟೆ ತುಂಬಿಸಿಕೊಳ್ಳಲೊಂದು ಉದ್ಯೋಗ ಸಿಗುವುದೆಂದು ಭಾವಿಸಿ ಹಡಗು ಹತ್ತಿದರು. ಹಡಗು ದಡ ಸೇರಿದ್ದು ದಕ್ಷಿಣ ಆಫ್ರಿಕಾದ್ದು. ಮರಳಿ ಭಾರತಕ್ಕೆ ಬರುವ ಭರವಸೆಯನ್ನೇ ಅವರು ಬಿಟ್ಟುಬಿಟ್ಟರು. ಗಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವಾಗ ಹೆದರಿಕೆಯಾಗುತ್ತಿತ್ತು. ಒಬ್ಬೊಬ್ಬರೇ ಕಣ್ಣೀರಿಡುತ್ತಿದ್ದರು. ಆದರೇನು? ಬದುಕಲೇಬೇಕಲ್ಲ. ಇಂಥವರ ರಕ್ಷಣೆಗೆ ಸದಾ ಆಂಜನೇಯ ಬರುತ್ತಾನೆ ಎಂಬುದು ಅವರ ಮನಸ್ಸಿನ ಭಾವನೆ. ಹೀಗಾಗಿಯೇ ಮಾರುತಿಯನ್ನು ಬಲವಾಗಿ ಹಿಡಿದುಕೊಂಡರು. ಎಲ್ಲವನ್ನೂ ಕಳೆದುಕೊಂಡ ನಂತರವೂ ಮಾರುತಿಯೊಬ್ಬ ಉಳಿದುಬಿಟ್ಟ. ಹೀಗಾಗಿಯೇ ಇಂದೂ ದಕ್ಷಿಣ ಆಫ್ರಿಕಾದಲ್ಲಿ ಆಂಜನೇಯನ ಎತ್ತರೆತ್ತರದ ವಿಗ್ರಹಗಳು ಮತ್ತು ಅಪಾರ ಭಕ್ತಸಮೂಹ ಕಾಣಸಿಗುತ್ತದೆ. ಭಾರತದಲ್ಲಿ ಹಿಂದೂಗಳಲ್ಲೇ ಕೆಲವರು ಧರ್ಮ ಕಳೆದುಕೊಂಡು ಚಚರ್ಿಗೆ ಶರಣಾಗತರಾಗಿರುವಾಗ ದಕ್ಷಿಣ ಆಫ್ರಿಕಾದಲ್ಲಿ ಹಿಂದೂಗಳಾಗಿ ಉಳಿದಿರುವುದು ಸಾಹಸವೇ ಸರಿ. ಹಾಗಂತ ಅವರು ಅಲ್ಲಿನ ನಿವಾಸಿಗಳಿಂದ ಪ್ರತ್ಯೇಕವಾಗಿ ಉಳಿಯಲಿಲ್ಲ. ಅಲ್ಲಿಯೇ ಮನೆ ಕಟ್ಟಿಕೊಂಡರು, ಪರಿವಾರ ನಿಮರ್ಾಣವಾಯ್ತು, ದಕ್ಷಿಣ ಆಫ್ರಿಕಾದೊಂದಿಗೆ ಏಕರಸವಾಗಿ ಬೆರೆತುಬಿಟ್ಟರೂ ಕೂಡ. ಇಂದು ಆಫ್ರಿಕಾದ ಬೆಳವಣಿಗೆಯಲ್ಲಿ ಸ್ಥಳೀಯ ಭಾರತೀಯರ ಪಾತ್ರ ಬಲುದೊಡ್ಡದಾಗಿದೆ. ಒಂದು ಹಂತದಲ್ಲಂತೂ ಬ್ರಿಟೀಷರು ನೀಡುತ್ತಿದ್ದ ಕಿರುಕುಳವನ್ನು ಸ್ಥಳೀಯರೊಂದಿಗೆ ಭಾರತೀಯರೂ ವಿರೋಧಿಸಲು ನಿಂತಿದ್ದರು. ಮೋಹನ್ದಾಸ್ ಕರಮಚಂದ್ ಗಾಂಧಿ ಸಾಮಾನ್ಯವಾದ ದಾವೆಯೊಂದನ್ನು ಹೂಡಲು ಹೋಗಿ ಅಲ್ಲಿನ ಜನಸಮೂಹದ ಪ್ರತಿನಿಧಿಯಾಗಿ ನಿಂತು ಹೋರಾಟ ಮಾಡಿದ್ದು ಈಗ ಇತಿಹಾಸ. ಹಾಗೆ ನೋಡಿದರೆ ಮೋಹನದಾಸ ಕರಮಚಂದ ಗಾಂಧಿ ಮಹಾತ್ಮಾ ಆಗುವುದರಲ್ಲಿ ದಕ್ಷಿಣ ಆಫ್ರಿಕಾದ ಪಾಲು ಬಲುದೊಡ್ಡದ್ದು. ಕರಿಯರ ಹೋರಾಟದ ನೇತೃತ್ವ ವಹಿಸಿದ್ದ ನೆಲ್ಸನ್ ಮಂಡೇಲಾಗೂ ಭಾರತದ ಸಹಕಾರವೇನೂ ಕಡಿಮೆಯಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಭಾರತೀಯರು ಎಂದಿಗೂ ಆಫ್ರಿಕಾಕ್ಕೆ ಹೊರಗಿನವರಾಗಲೇ ಇಲ್ಲ. ಅಚ್ಚರಿ ಎಂದರೆ ದಕ್ಷಿಣ ಆಫ್ರಿಕಾದಲ್ಲಿರುವ ಬಹುತೇಕ ಭಾರತೀಯರು ಭಾರತವನ್ನು ಆರಾಧಿಸುತ್ತಾರೆ ನಿಜ. ಆದರೆ ಈ ದೇಶವನ್ನು ನೋಡಿಯೇ ಇಲ್ಲ.


ಸಹಜವಾಗಿಯೇ ಹೊರ ದೇಶದಲ್ಲಿರುವ ಭಾರತೀಯರು ಮೈಮುರಿದು ದುಡಿಯುತ್ತಾರೆ. ಇತರರಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ ಹೀಗಾಗಿಯೇ ಅವರು ಸಾಕಷ್ಟು ಹಣಗಳಿಸಿ ಸ್ಥಿತಿವಂತರೂ ಆಗಿರುತ್ತಾರೆ. ಇಂಗ್ಲೆಂಡು ಅಮೇರಿಕಾ ಮತ್ತಿತರ ಪಶ್ಚಿಮ ದೇಶಗಳಲ್ಲಿ ಹೇಗೆ ಭಾರತೀಯರು ಸ್ಥಳೀಯರಿಗಿಂತ ಸಮೃದ್ಧರಾಗಿದ್ದಾರೋ ದಕ್ಷಿಣ ಆಫ್ರಿಕಾದಲ್ಲೂ ಭಾರತೀಯರ ಸಮೃದ್ಧಿ ಕಣ್ಣು ಕುಕ್ಕುವಂಥದ್ದೆ. ಡರ್ಬನ್, ಜೋಹಾನ್ಸ್ಬಗರ್್ಗಳಂತಹ ನಗರಗಳಲ್ಲಿ ಯಾವ ದೊಡ್ಡ ಅಂಗಡಿಯನ್ನು ಪ್ರವೇಶಿಸಿದರೂ ಅಲ್ಲಿ ಭಾರತೀಯರೇ ಕಂಡು ಬರುತ್ತಾರೆ. ಇದು ಸ್ಥಳೀಯರಿಗೆ ಸುದೀರ್ಘಕಾಲದ ಎದೆನೋವು. ಅದಕ್ಕೆ ಸರಿಯಾಗಿ 1993ರಲ್ಲಿ ಆಫ್ರಿಕಾಕ್ಕೆ ಸ್ಥಳಾಂತರವಾದ ಉತ್ತರ ಪ್ರದೇಶದ ಸಹರನ್ಪುರದ ಗುಪ್ತ ಸಹೋದರರು ಇಪ್ಪತ್ತೇ ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ಸಂಪತ್ತನ್ನು ಗಳಿಸಿ ಆಫ್ರಿಕನ್ನರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಜಯ್, ಅತುಲ್ ಮತ್ತು ರಾಜೇಶ್ ಎಂಬ ಈ ಗುಪ್ತ ಸಹೋದರರು ತಮ್ಮ ಬೇರೆ ಬೇರೆ ಪರಿವಾರದ ಪ್ರಮುಖರನ್ನು ಸೇರಿಕೊಂಡು, ಆಫ್ರಿಕಾದ ರಾಜಕಾರಣಿಗಳನ್ನು ಬುಟ್ಟಿಗೆ ಹಾಕಿಕೊಂಡು, ಸಂಪತ್ತು ಕ್ರೋಢೀಕರಿಸುವ ಕೆಲಸಕ್ಕೆ ಕೈ ಹಾಕಿದರು. ಸಹರಾ ಕಂಪ್ಯೂಟಸರ್್ನಿಂದ ಆರಂಭವಾದ ಅವರ ಪರಿವಾರ ವ್ಯಾಪಾರ ಮುಂದೆ ಗಣಿ, ಮಾಧ್ಯಮ ಮತ್ತಿತರ ಕ್ಷೇತ್ರಗಳಿಗೆ ವಿಸ್ತಾರಗೊಂಡಿತು. ಅವರ ಇಂದಿನ ಆಸ್ತಿ ಸರಿಸುಮಾರು 10 ಬಿಲಿಯನ್ ಡಾಲರ್ಗಳಷ್ಟು. ದಕ್ಷಿಣ ಆಫ್ರಿಕಾದ ಅಧ್ಯಕ್ಷನಾಗಿದ್ದ ಜ್ಯಾಕೋಬ್ ಜುಮಾ ಇವರೊಂದಿಗೆ ಬಲವಾಗಿ ನಿಂತಿದ್ದ. ಹೀಗಾಗಿಯೇ ವ್ಯಾಪಾರ-ವಹಿವಾಟಿನಲ್ಲಷ್ಟೇ ಅಲ್ಲದೇ ರಾಜಕೀಯ ನಿರ್ಣಯಗಳಲ್ಲೂ ಗುಪ್ತ ಸಹೋದರರ ಬಲುದೊಡ್ಡ ಪಾಲಿತ್ತು. ದಕ್ಷಿಣ ಆಫ್ರಿಕಾದಲ್ಲಿ ಮೊದಲೆಲ್ಲ ಭಾರತವೆಂದರೆ ಗಾಂಧೀಜಿ ಎನ್ನುತ್ತಿದ್ದರಲ್ಲ, ಕಳೆದ ಒಂದು ದಶಕದಿಂದೀಚೆಗೆ ಭಾರತವೆಂದರೆ ಗುಪ್ತ ಸಹೋದರರು ಎನ್ನಲಾಗುತ್ತಿತ್ತು. ಒಂದೇ ಬೇಸರದ ಸಂಗತಿ ಎಂದರೆ ಗಾಂಧೀಜಿಯವರ ಹೆಸರನ್ನು ಹೇಳುವಾಗ ಗೌರವದಿಂದ ಭಾರತದ ಕಡೆ ನೋಡುತ್ತಿದ್ದ ಜನ ಗುಪ್ತ ಎನ್ನುವ ಹೆಸರು ಬಂದಾಗ ಅಸಹ್ಯದಿಂದ ಕೆಕ್ಕರಿಸಿ ನೋಡುತ್ತಿದ್ದರು ಅಷ್ಟೇ!


ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದರೆ ಜ್ಯಾಕೋಬ್ ಜುಮಾನ ಈ ಭ್ರಷ್ಟಾಚಾರದ ಪ್ರಕರಣಗಳು ಕೋಟರ್ಿನ ಮೆಟ್ಟಿಲೇರಿದಾಗ ಆತ ವಿಚಾರಣೆಯಿಂದ ತಪ್ಪಿಸಿಕೊಂಡು ತಿರುಗಾಡಲಾರಂಭಿಸಿದ. ತನ್ನ ಪಕ್ಷವೇ ವಿರೋಧಿಸಿದಾಗ ಅನಿವಾರ್ಯವಾಗಿ ರಾಜಿನಾಮೆ ಕೊಟ್ಟನಾದರೂ ನ್ಯಾಯಾಲಯದ ಎದುರು ನಿಂತುಕೊಳ್ಳಲು ಒಪ್ಪಲಿಲ್ಲ. ದಕ್ಷಿಣ ಆಫ್ರಿಕಾದ ಜುಲು ಎಂಬ ಬಲುದೊಡ್ಡ ಪಂಗಡಕ್ಕೆ ಸೇರಿದ ಆತ ಸಹಜವಾಗಿಯೇ ಇದನ್ನು ಟ್ರಂಪ್ಕಾಡರ್್ ಆಗಿ ಬಳಸುತ್ತಿದ್ದ. ಹೇಗೆ ಭಾರತದಲ್ಲಿ ಜಾತಿ ಕೆಲಸ ಮಾಡುತ್ತದೋ, ಅದರ ಆಧಾರದ ಮೇಲೆ ಮನಸ್ಸಿಗೆ ಬಂದಿದ್ದೆಲ್ಲವನ್ನೂ ಮಾಡಬಹುದೋ, ಹಾಗೆಯೇ ದಕ್ಷಿಣ ಆಫ್ರಿಕಾದಲ್ಲಿ ಕೂಡ. ಕಳೆದ ಕೆಲವು ದಿನಗಳ ಹಿಂದೆ ಆತ ಪದೇ ಪದೇ ವಿಚಾರಣೆಗೆ ತಪ್ಪಿಸಿಕೊಂಡು ನ್ಯಾಯಾಲಯದ ಆಜ್ಞೆಯನ್ನು ಉಲ್ಲಂಘಿಸುತ್ತಿರುವುದರಿಂದ ನ್ಯಾಯಾಲಯ ಅವನಿಗೆ 18 ತಿಂಗಳ ಶಿಕ್ಷೆ ಘೋಷಿಸಿತು. ಈಗ ಆತನನ್ನು ಬಂಧಿಸಿ ಜೈಲಿಗೆ ತಳ್ಳಲೇಬೇಕಾಯ್ತು. ಮೊದಲೆಲ್ಲ ತನ್ನ ಬಂಧನಕ್ಕೆ ಯಾರಾದರೂ ಬಂದರೆ ದಕ್ಷಿಣ ಆಫ್ರಿಕಾ ಹೊತ್ತಿ ಉರಿಯುತ್ತದೆ ಎನ್ನುತ್ತಿದ್ದ ಆತ ಕೊನೆಗೂ ಪೊಲೀಸರಿಗೆ ಶರಣಾಗಬೇಕಾಗಿ ಬಂತು. ಆದರೆ ಆತ ಶರಣಾಗುವುದರೊಂದಿಗೆ ಇಡಿಯ ಜುಲು ಜನಾಂಗ ಬಲವಾಗಿ ಎದ್ದುನಿಂತಿತು. ಜುಮಾನ ಮಗ ತಂದೆ ಜೈಲಿಗೆ ಹೋದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಉಗ್ರ ಭಾಷೆಯಲ್ಲಿಯೇ ಟ್ವಿಟರ್ ಸಂದೇಶ ಹಂಚಿಕೊಂಡ. ಟ್ವಿಟರ್ ಅವನ ಖಾತೆಯನ್ನು ಪ್ರತಿಬಂಧಿಸಿತಾದರೂ ಸಂದೇಶ ಜನರಿಗೆ ಸಿಕ್ಕಾಗಿತ್ತು. ಜುಲು ಜನ ಬೀದಿಗಿಳಿದರು. ತಮ್ಮ ಹಳೆಯ ದ್ವೇಷವನ್ನೆಲ್ಲ ತೀರಿಸಿಕೊಳ್ಳಲು ಅವರಿಗೆ ಇದಕ್ಕಿಂತ ಒಳ್ಳೆಯ ಅವಕಾಶವಿರಲಿಲ್ಲ. ರಸ್ತೆಯಲ್ಲಿ ಓಡಾಡುತ್ತಿದ್ದ ದೊಡ್ಡ ದೊಡ್ಡ ಟ್ರಂಕುಗಳಿಗೆ ಬೆಂಕಿ ಹಚ್ಚಿದರು. ವಾಸ್ತವವಾಗಿ ಅವರಿಗೆ ಕೋಪವಿದ್ದುದ್ದು ಮಾಲ್ಡೀವ್ಸ್ನಿಂದ ಬರುವ ಲಾರಿ ಚಾಲಕರುಗಳ ಮೇಲೆ. ತಮ್ಮ ಅನ್ನ ಕಸಿಯುವ ಈ ಜನಕ್ಕೆ ಬುದ್ಧಿ ಕಲಿಸಬೇಕೆಂಬ ಅವರ ಹಠ ಆಕ್ರೋಶವಾಗಿ ಟ್ರಕ್ಕುಗಳ ಮೇಲೆ ಬೆಂಕಿಯಾಗಿ ಬಿದ್ದಿತ್ತು. ಸಹಜವಾಗಿಯೇ ಅವರ ದೃಷ್ಟಿ ತಿರುಗಿದ್ದು ಸಂಪದ್ಭರಿತ ಭಾರತೀಯರ ಮೇಲೆ. ದೊಡ್ಡ ದೊಡ್ಡ ಅಂಗಡಿಗಳ ಮೇಲೆ ದಾಳಿ ಮಾಡಿದ ಈ ಜನ ಒಂದೂ ವಸ್ತು ಉಳಿಸದಂತೆ ಅಂಗಡಿಗಳನ್ನು ಖಾಲಿ ಮಾಡಿದರು. ಶೋಕೇಸ್ಗಳನ್ನು ಒಡೆದು ಬಿಸಾಡಿದರು. ತೃಪ್ತರಾಗದೇ ಬೆಂಕಿಯನ್ನೂ ಹಚ್ಚಿದರು. ಟ್ವಿಟರ್ನಲ್ಲಿ ಇವರ ಯುದ್ಧವೇ ನಡೆದುಹೋಯ್ತು. ಭಾರತೀಯರು ತಮ್ಮ ಮೂಲಸ್ಥಾನಕ್ಕೆ ಮರಳಿದರೆ ಒಳಿತು ಎಂದು ಎಚ್ಚರಿಕೆ ಕೊಡುವ ಸಂದೇಶಗಳು ಗುಪ್ತ ಸಹೋದರರ ಚಿತ್ರಗಳೊಂದಿಗೆ ಹಂಚಿಕೊಳ್ಳಲ್ಪಟ್ಟವು. ಅನೇಕ ಕಡೆಗಳಲ್ಲಿ ದಂಗೆಕೋರರು ಪೊಲೀಸರಿಗಿಂತ ಬಲುದೊಡ್ಡ ಸಂಖ್ಯೆಯಲ್ಲಿದ್ದುದರಿಂದ ಪೊಲೀಸರು ಕೈಚೆಲ್ಲಿ ಕುಳಿತುಕೊಳ್ಳಬೇಕಾಯ್ತು. ಇನ್ನೂ ಕೆಲವು ಕಡೆಗಳಲ್ಲಿ ಈ ಅವಕಾಶವನ್ನು ಪೊಲೀಸರು ಬಳಸಿಕೊಂಡು ಲೂಟಿ ಮಾಡಿಬಿಟ್ಟರು. ಕೆಲವು ದಿನಗಳ ಕಾಲ ಈ ದೌರ್ಜನ್ಯದ ಅಟ್ಟಹಾಸವನ್ನು ಗಮನಿಸಿದ ಭಾರತೀಯರು ತಮ್ಮದ್ದೇ ಆದ ಪುಟ್ಟ ಸೇನೆಯೊಂದನ್ನು ಕಟ್ಟಿಕೊಂಡು ಪ್ರತಿಭಟನೆಗೆ ನಿಂತುಬಿಟ್ಟರು. ಶಸ್ತ್ರಗಳನ್ನು ಹಿಡಿದು ತಮ್ಮ ಅಂಗಡಿಗಳನ್ನೂ ಜನರನ್ನೂ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವುದಾಗಿ ಘೋಷಿಸಿದರು. ಆನಂತರವೇ ಸ್ವಲ್ಪ ದಂಗೆ ಹತೋಟಿಗೆ ಬಂದಿತೆನಿಸಿತು.


ಆದರೆ ಈಗಿರುವ ಪ್ರಶ್ನೆ ಅವರು ಭಾರತೀಯರನ್ನೇ ಗುರಿಯಾಗಿಸಿಕೊಳ್ಳಲು ಕಾರಣವೇನು? ನಿಮಗೆ ನೆನಪಿರುವುದಾದರೆ ಫಿಜಿ ದ್ವೀಪದಲ್ಲಿ ಕೆಲವು ವರ್ಷಗಳ ಹಿಂದೆ ಭಾರತೀಯರ ವಿರುದ್ಧ ಇದೇ ರೀತಿಯ ಘಟನೆಗಳು ನಡೆದಿದ್ದವು. ನರಹಂತಕ ಈದೀ ಅಮೀನ್ ಉಗಾಂಡದಿಂದ ಭಾರತೀಯರನ್ನು ಈ ರೀತಿಯೇ ಓಡಿಸಿದ್ದು ನಿಮಗೆ ನೆನಪಿರಬಹದು. ಈಗ ಈ ಘಟನೆ. ಹೀಗೇಕೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಬಲು ಕಷ್ಟವೇನೂ ಅಲ್ಲ. ಮೊದಲನೆಯದ್ದು, ಜನಾಂಗ ದ್ವೇಷ ದೊಡ್ಡ ಸಂಖ್ಯೆಯ ಜನರ ಸಂಘಟನೆಗೆ ಅವಕಾಶ ಮಾಡಿಕೊಡುತ್ತದೆ. ಅದರಲ್ಲೂ ದ್ವೇಷಿಸಬೇಕಾಗಿರುವವರ ಸಂಖ್ಯೆ ಚಿಕ್ಕದ್ದಾಗಿಬಿಟ್ಟಿದ್ದರಂತೂ ಗೆಲುವು ಬಲು ಸುಲಭ. ಇತ್ತೀಚೆಗೆ ಬ್ರಾಹ್ಮಣ್ಯದ ವಿಚಾರದಲ್ಲಿ ಜನರನ್ನು ಭಡಕಾಯಿಸುವ ಪ್ರಯತ್ನವಾಯ್ತಲ್ಲ, ಅದು ಇದಕ್ಕೆ ಸಣ್ಣ ಉದಾಹರಣೆಯಷ್ಟೇ. ಬ್ರಾಹ್ಮಣರ ಸಂಖ್ಯೆ ಚಿಕ್ಕದ್ದಿದೆ. ಅವರ ದ್ವೇಷಿಸುವ ಭರದಲ್ಲಿ ದೊಡ್ಡ ಸಮೂಹವೊಂದರ ನಿಮರ್ಾಣ ಮಾಡಿಕೊಳ್ಳಬಹುದು ಎಂಬ ಪ್ರಯತ್ನ ಅದು. ಜಗತ್ತಿನಾದ್ಯಂತ ಭಾರತೀಯರು ಸಣ್ಣ ಸಂಖ್ಯೆಯಲ್ಲಿದ್ದು ಸಹಜವಾಗಿಯೇ ಸುಲಭದ ತುತ್ತಾಗುವ ಅವಕಾಶವಿದೆ. ಎರಡನೆಯದಾಗಿ, ಈ ರೀತಿ ಆಯ್ಕೆ ಮಾಡಿಕೊಳ್ಳುವ ಜನಾಂಗ ಎಲ್ಲರಿಗೂ ಗೊತ್ತಿರುವಂಥದ್ದಾದರೆ ಸ್ವಲ್ಪ ಹೆಚ್ಚು ಶಕ್ತಿ ಬರುತ್ತದೆ. ಬಲಾಢ್ಯವಾಗಿರುವ ಫ್ರಾನ್ಸ್, ಜರ್ಮನಿಗಳಂತಹ ರಾಷ್ಟ್ರಗಳ ಜನರನ್ನು ಮುಟ್ಟುವುದು ಕಷ್ಟ. ತೀರಾ ಜನಕ್ಕೆ ಪರಿಚಯವೇ ಇಲ್ಲದ ಬಾಂಗ್ಲಾದೇಶದಂತಹ ಜನರನ್ನು ಬಡಿದರೆ ಉಪಯೋಗವಿಲ್ಲ. ಆದರೆ ಹೆಚ್ಚು-ಕಡಿಮೆ ಎಲ್ಲರಿಗೂ ಪರಿಚಯವಿರುವ, ಆದರೆ ಪೂರ್ಣಪ್ರಮಾಣದಲ್ಲಿ ಏನೂ ಗೊತ್ತಿಲ್ಲದಿರುವ ಭಾರತೀಯ ಜನಾಂಗವನ್ನು ಅಡ್ಡ ಹಾಕಿಕೊಂಡು ಬಡಿಯುವುದು ಎಲ್ಲರಿಗೂ ಸುಲಭವೇ. ಮೊದಲೆಲ್ಲ ಯಹೂದ್ಯರೊಂದಿಗೆ ಹೀಗೆ ನಡೆಯುತ್ತಿದ್ದುದು ನಿಮಗೆ ನೆನಪಿರಬೇಕು. ಇನ್ನು ಮೂರನೆಯದ್ದು ಜಗತ್ತಿನ ಪ್ರಬಲ ಶಕ್ತಿಗಳಿಗೆ ಭಾರತ ತಮ್ಮ ಸಮಸಮಕ್ಕೆ ನಿಲ್ಲುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಗತ್ತಿನ ಐದನೇ ದೊಡ್ಡ ಆಥರ್ಿಕ ಶಕ್ತಿಯಾಗಿ ಬೆಳೆದು ನಿಂತಮೇಲಂತೂ ಅನೇಕರು ಅಂಡು ಸುಟ್ಟ ಬೆಕ್ಕಿನಂತಾಗಿದ್ದಾರೆ! ಕರೋನಾದ ನೆಪದಲ್ಲಿ ವ್ಯಾಕ್ಸಿನ್ಗಳನ್ನು ಮಾರಾಟಮಾಡಿ ಲೂಟಿ ಮಾಡಬಹುದೆಂದು ಭಾವಿಸಿದ್ದ ಅನೇಕರಿಗೆ ಭಾರತವೇ ವ್ಯಾಕ್ಸಿನ್ ಉತ್ಪಾದಕ ರಾಷ್ಟ್ರವಾಗಿ ಜಗತ್ತಿಗೆ ಮಾರಾಟ ಮಾಡುತ್ತಿರುವುದನ್ನೂ ಸಹಿಸಿಕೊಳ್ಳಲಾಗುತ್ತಿಲ್ಲ. ಭಾರತ ಬಡ, ದರಿದ್ರ, ಕೃಪಣ ರಾಷ್ಟ್ರವಾಗಿ ತಮ್ಮ ಮುಂದೆ ಸದಾ ನಿಂತಿರಬೇಕೆಂದು ಅವರು ಸದಾ ಬಯಸುತ್ತಾರೆ. ಅವರ ಆಶಯಕ್ಕೆ ತಕ್ಕಂತಿಲ್ಲದೇ ಮೀರಿ ಬೆಳೆಯುತ್ತಿರುವ ಭಾರತವನ್ನು ಕಂಡ-ಕಂಡಲ್ಲಿ ಮಟ್ಟಹಾಕುವ ಯೋಚನೆ ಇದ್ದೇ ಇದೆ.


ಇದು ಆಫ್ರಿಕಾದ ಘಟನೆಗೆ ನಿಲ್ಲುವುದಿಲ್ಲ. ಜಗತ್ತಿನ ಬೇರೆ-ಬೇರೆ ಭಾಗಗಳಿಗೆ ನಿಸ್ಸಂಶಯವಾಗಿ ವಿಸ್ತಾರಗೊಳ್ಳಲಿದೆ. ಅದಕ್ಕೊಂದು ಸಣ್ಣ ಕಾರಣವೂ ಅವರಿಗೆ ಸಾಕು. ನಮ್ಮ ಸ್ವಸ್ತಿಕ್ ಗುರುತನ್ನು ಮುಂದಿಟ್ಟುಕೊಂಡು ನಾಜಿಗಳೊಂದಿಗೆ ಸಮೀಕರಿಸುವ ಪ್ರಯತ್ನ ಮಾಡಿದ್ದು ಇನ್ನೂ ಹಸಿಯಾಗಿದೆ. ಹಿಂದೂಗಳನ್ನು ಗೋಮೂತ್ರ ಕುಡಿಯುವವರೆಂದು ಹಂಗಿಸುತ್ತಾ ಒಂಟೆಮೂತ್ರ ಕುಡಿಯುವವರು ಅಪಹಾಸ್ಯ ಮಾಡುವುದನ್ನು ನಾವು ನೋಡಿದ್ದೇವೆ. ಇವೆಲ್ಲವೂ ತಯಾರಿ ಅಷ್ಟೇ. ಸಣ್ಣ-ಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಭಾರತೀಯರ ಅಂತಃಶಕ್ತಿಯನ್ನು ನಾಶಮಾಡುವ ಪ್ರಯತ್ನ ಖಂಡಿತವಾಗಿಯೂ ಹೆಚ್ಚಲಿದೆ.


ಈ ಕದನಗಳು ಭಾರತವನ್ನು ಬಿಡಲಾರವು. 2024ರ ಚುನಾವಣೆಗೆ ಮುನ್ನ ಅನೇಕ ದಂಗೆಗಳಿಗೆ ತಯಾರಿ ನಡೆಸಲಾಗುತ್ತದೆ. ರೈತರ ಕದನ ಒಂದು ಪ್ರಯೋಗವಷ್ಟೇ. ಇನ್ನು ಮುಂದೆ ಬ್ರಾಹ್ಮಣರ ವಿರುದ್ಧ ದಲಿತರನ್ನು ಎತ್ತಿಕಟ್ಟುವ, ಹಿಂದೂ-ಮುಸಲ್ಮಾನರನ್ನು ಬಡಿದಾಡಿಸುವ, ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಬೆಂಕಿ ಹಚ್ಚುವ, ದಕ್ಷಿಣದಲ್ಲಿಯೇ ಹಿಂದುತ್ವದ ವಿರೋಧಿ ಅಲೆಯನ್ನು ಸೃಷ್ಟಿಸುವ ದೊಡ್ಡ ದೊಡ್ಡ ಪ್ರಯತ್ನಗಳು ನಡೆಯಲಿವೆ. ಪ್ರತಿ ಬಾರಿಯೂ ದಂಗೆಕೋರರ ಮತ್ತು ಪೊಲೀಸರ ಕಾಳಗ ವರ್ಣರಂಜಿತವಾಗಿ ಬಿಂಬಿಸಲ್ಪಡಲಿದೆ. ಇದನ್ನೆದುರಿಸುವುದು ನಿಸ್ಸಂಶಯವಾಗಿ ಒಂದು ಸವಾಲೇ. ತಯಾರಿ ಜೋರಾಗಿಯೇ ಆಗಬೇಕಾಗಿದೆ!

ಪ್ರಧಾನಿಯ ಪ್ರತಿಯೊಂದು ನಡೆಯೂ ಸಮರ್ಥ ಪಾಠ!

ಪ್ರಧಾನಿಯ ಪ್ರತಿಯೊಂದು ನಡೆಯೂ ಸಮರ್ಥ ಪಾಠ!


ಚೀನಾದ ಕಮ್ಯುನಿಸ್ಟ್ ಪಾಟರ್ಿಗೆ ಇತ್ತೀಚೆಗೆ ನೂರು ವರ್ಷವಾಯ್ತು. ಸುದೀರ್ಘವಾದ ಭಾಷಣವೊಂದರಲ್ಲಿ ತನ್ನ ಮನದಿಂಗಿತವನ್ನು ಷಿ ಜಿನ್ಪಿಂಗ್ ವ್ಯಕ್ತಪಡಿಸಿದ. ಆದರೆ ಇದೇ ಸಂದರ್ಭದಲ್ಲಿ ಜಾಗತಿಕವಾದ ಚೀನಿಯರ ಕುರಿತಂತಹ ಭಾವನೆಗಳು ವಿಭಿನ್ನ ತಿರುವನ್ನು ಪಡೆದುಕೊಳ್ಳುತ್ತಿರುವುದು ಚೀನಾಕ್ಕೆ ಒಳ್ಳೆಯ ಸಂಗತಿಯೇನೂ ಅಲ್ಲ. ಕೆಲವು ಗುಪ್ತ ಮಾಹಿತಿಗಳಂತೂ ದಿನಗಳೆದಂತೆ ಹೆಚ್ಚು-ಹೆಚ್ಚು ಹೊರಬರುತ್ತಿವೆ. ಇತ್ತೀಚೆಗೆ ಅಮೇರಿಕಾದ ಸಕರ್ಾರೇತರ ಸಂಸ್ಥೆಯೊಂದು ನಡೆಸಿದ ಸಂಶೋಧನೆಯಿಂದ ಒಂದಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಕಳೆದ ಆರು ತಿಂಗಳಲ್ಲಿ ಚೀನಾ ಅಮೇರಿಕಾದ ಟೈಮ್ ಪತ್ರಿಕೆಗೆ ಏಳು ಲಕ್ಷ ಡಾಲರ್ಗಳನ್ನು, ಫೈನಾನ್ಷಿಯಲ್ ಟೈಮ್ಸ್ಗೆ ಸುಮಾರು ಮೂರುಮುಕ್ಕಾಲು ಲಕ್ಷ ಡಾಲರ್ಗಳನ್ನು, ಫಾರಿನ್ ಪಾಲಿಸಿ ಪತ್ರಿಕೆಗೆ ಮೂರು ಲಕ್ಷ ಡಾಲರ್ಗಳನ್ನು, ಲಾಸ್ ಏಂಜಲೀಸ್ ಟೈಮ್ಸ್ಗೆ ಎರಡುಮುಕ್ಕಾಲು ಲಕ್ಷ ಡಾಲರ್ಗಳನ್ನು, ಇದಲ್ಲದೇ ಇತರೆ ಕೆಲವು ಪತ್ರಿಕೆಗಳಿಗೆ ಸೇರಿ ಹತ್ತು ಲಕ್ಷ ಡಾಲರ್ಗಳನ್ನು ನೀಡಿದೆ. ಸದಾ ಭಾರತ ವಿರೋಧಿ ಸುದ್ದಿಗಳಿಂದಲೇ ಕುಖ್ಯಾತವಾಗಿರುವ ವಾಷಿಂಗ್ಟನ್ ಪೋಸ್ಟ್ ಕಳೆದ ನಾಲ್ಕೈದು ವರ್ಷಗಳಲ್ಲಿ ಚೀನಾದಿಂದ 45 ಲಕ್ಷ ಡಾಲರ್ಗಳನ್ನು ಜೇಬಿಗಿಳಿಸಿಕೊಂಡಿದೆ. ಇದೇ ಅವಧಿಯಲ್ಲಿ ವಾಲ್ಸ್ಟ್ರೀಟ್ ಜರ್ನಲ್ 60 ಲಕ್ಷ ಡಾಲರ್ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ವರದಿಯಲ್ಲಿ ಇನ್ನೂ ಅನೇಕ ಪತ್ರಿಕೆಗಳ ಹೆಸರಿವೆ. ಇವೆಲ್ಲವೂ ಕಳೆದ ಒಂದು ದಶಕದಿಂದೀಚೆಗೆ ಚೀನಾದ ಕುರಿತ ಸುದ್ದಿಗಳನ್ನು ತಮ್ಮ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಕಟಿಸಿಕೊಂಡೇ ಬಂದವು. ತನ್ನ ರಾಷ್ಟ್ರದಲ್ಲಿ ಚೀನಾ ಪತ್ರಿಕಾ ನಿರ್ಬಂಧಗಳನ್ನು ಹೇರಿದಾಗ್ಯೂ, ಜನಸಾಮಾನ್ಯರ ಸ್ವಾತಂತ್ರ್ಯವನ್ನು ಕಸಿದು ಮೆರೆಯುತ್ತಿದ್ದಾಗ್ಯೂ, ಉಯ್ಘುರ್ ಮುಸಲ್ಮಾನರನ್ನು ನಾಯಿಗಿಂತಲೂ ಕಡೆಯಾಗಿ ಕಾಣುತ್ತಿದ್ದಾಗ್ಯೂ ಚೀನಾವನ್ನು ಮುಕ್ತಕಂಠದಿಂದ ಹೊಗಳುತ್ತಿದ್ದ ಪತ್ರಿಕೆಗಳು ಇವು. ಚೀನಾದ ಕುರಿತ ಒಂದು ಭ್ರಮಾಲೋಕವನ್ನೇ ನಮಗೆ ಸೃಷ್ಟಿಸಿಕೊಟ್ಟು ಅದರ ವಿರುದ್ಧ ನಾವು ಮಾತನಾಡಲಾಗದ ಸ್ಥಿತಿಯನ್ನು ಸೃಷ್ಟಿಸಿದ್ದವರೂ ಇವರುಗಳೇ.


ಜಾಹಿರಾತು ಕೊಡುವುದರಿಂದ ಈ ರೀತಿಯ ಒಂದು ಭ್ರಮೆಯನ್ನು ಸೃಷ್ಟಿಸುವುದು ಸಾಧ್ಯವೇ ಎಂಬ ಪ್ರಶ್ನೆ ನಿಮಗೇನಾದರೂ ಬಂದರೆ ನೀವೊಮ್ಮೆ ದೆಹಲಿ ಸಕರ್ಾರ ಮತ್ತು ಕೇಜ್ರಿವಾಲ್ರನ್ನು ನೆನಪಿಸಿಕೊಳ್ಳಬೇಕು. ಕಳೆದ ಒಂದು ವರ್ಷದಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳಿಗೆ ಜಾಹಿರಾತಿಗೆಂದೇ ಕೋಟ್ಯಂತರ ರೂಪಾಯಿ ಹಣ ಸುರಿದ ಕೇಜ್ರಿವಾಲ ಕರೋನಾ ಸಂದರ್ಭದಲ್ಲಿ ಜನ ಸಾಮಾನ್ಯರ ಕುರಿತು ಕಾಳಜಿ ವಹಿಸಿದ್ದಕ್ಕಿಂತಲೂ ಪತ್ರಿಕೆಗಳಿಗೆ ಹಣ ಸುರಿದದ್ದೇ ಹೆಚ್ಚು. ಅದರ ಪ್ರತಿಫಲವಾಗಿ ಕೇಜ್ರಿವಾಲನ ಸಕರ್ಾರದ ಕುರಿತಂತೆ ಒಂದು ಭ್ರಮೆಯನ್ನು ನಮಗರಿವಿಲ್ಲದಂತೆ ಸೃಷ್ಟಿಸಲಾಗಿತ್ತು. ಕರೋನಾ ಕಾಲಕ್ಕೆ ದೆಹಲಿಯಲ್ಲಿ ಏರುಮುಖವಾಗಿದ್ದ ರೋಗಿಗಳಿಗೂ ಪತ್ರಿಕೆಗಳು ಪ್ರಶ್ನಿಸಿದ್ದು ಮೋದಿಯನ್ನೇ ಹೊರತು ಕೇಜ್ರಿವಾಲನನ್ನಲ್ಲ. ದಿನ ಬೆಳಗಾದರೆ ಆಕ್ಸಿಜೆನ್ನ ಕೊರತೆ ಎಂದು ಕೂಗಾಡುತ್ತಿದ್ದ ಕೇಜ್ರಿವಾಲನನ್ನು ಮತ್ತೆ ಮತ್ತೆ ಟಿವಿಯಲ್ಲಿ ತೋರಿಸುತ್ತಿದ್ದ ಪತ್ರಕರ್ತರು ಆತ ಅನವಶ್ಯಕವಾಗಿ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿ ಬೇಕೆಂತಲೇ ಆತಂಕ ಮೂಡಿಸಿದ್ದ ಎಂಬ ಸುದ್ದಿ ಹೊರಬಂದಾಗ ಎಲ್ಲ ಪತ್ರಿಕೆಗಳು ಮುಗುಮ್ಮಾಗಿ ಕುಳಿತುಬಿಟ್ಟಿದ್ದವು. ನಮ್ಮ ತೆರಿಗೆಯ ಹಣದ ಜಾಹಿರಾತು ಪತ್ರಿಕೆಗಳನ್ನು ಪ್ರಶ್ನೆ ಕೇಳದಂತೆ ಮಾಡಿಬಿಟ್ಟಿದ್ದವು. ಇದೇ ಪರಿಸ್ಥಿತಿ ಷಿಯದ್ದೂ ಕೂಡ. ಆತನ ಎಲ್ಲ ದುರಾಚಾರವನ್ನು ಜಾಗತಿಕ ಮಾಧ್ಯಮಗಳು ಪ್ರಶ್ನಿಸದೇ ಇರಲು ಕಾರಣವೇ ಆತ ಸುರಿಯುತ್ತಿದ್ದ ಹಣ. ಆದರೀಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕಮ್ಯುನಿಸ್ಟ್ ಪಕ್ಷ ನೂರನೇ ವಷರ್ಾಚರಣೆಯನ್ನು ಸಂಭ್ರಮಿಸುವ ವೇಳೆಗೆ ಅದರ ಹುಳುಕುಗಳು ಸಮಾಜದ ಮುಂದೆ ಬಟಾ ಬಯಲಾಗಿ ನಿಂತಿವೆ. ವಾಸ್ತವವಾಗಿ ಗ್ಯಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಬಳಿ ಏಟು ತಿಂದದ್ದೇ ಚೀನಾದ ದುದರ್ೆಶೆಯ ಪರ್ವ ಆರಂಭವಾದ ಸಂದರ್ಭ ಎನ್ನಬಹುದು. ಕಾಲ್ಕೆರೆದು ಜಗಳ ಆರಂಭಿಸಿದ ಚೀನಾ ಬಫರ್ ಜೋನ್ಗಳಿಗೂ ನುಗ್ಗಿ ಡೇರೆಯನ್ನು ಹಾಕಿಕೊಂಡಿದ್ದು ಭಾರತೀಯ ಸೇನೆಗೆ ಅಚ್ಚರಿಯೇ ಆಗಿತ್ತು. ಭಾರತದೊಳಗೆ ಜನ ಕರೋನಾ ವಿರುದ್ಧ ಹೋರಾಡುತ್ತಿರುವಾಗ ಈ ರೀತಿ ನಿರ್ದಯವಾಗಿ ನಡೆದುಕೊಂಡಿದ್ದು ನಿಸ್ಸಂಶಯವಾಗಿ ಮಾನವೀಯತೆಯ ಚೌಕಟ್ಟಿನಿಂದ ಹೊರಗಿತ್ತು. ಎಂದಿನಂತೆ ಷಿ ಹಾಕಿದ ಬಿಸ್ಕತ್ತುಗಳಿಂದ ದಷ್ಟಪುಷ್ಟವಾಗಿ ಬೆಳೆದಿದ್ದ ಜಾಗತಿಕ ಮಾಧ್ಯಮಗಳು ಈ ಸುದ್ದಿಗೆ ಹೆಚ್ಚಿನ ಮಹತ್ವವನ್ನೇ ಕೊಡಲಿಲ್ಲ. ಭಾರತ ಈ ಘಟನೆಯಲ್ಲಿ ಹಿನ್ನಡೆ ಅನುಭವಿಸಲಿದೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಭಾರತೀಯ ಸೇನೆ ತಿರುಗಿ ಬಿದ್ದ ರೀತಿ ಚೀನಾಕ್ಕೆ ಬಲುದೊಡ್ಡ ಮುಖಭಂಗ. ಕಳೆದ ಆಗಸ್ಟ್ನ ಕೊನೆಯ ದಿನಗಳಲ್ಲಿ ನಿರಾಶ್ರಿತ ಟಿಬೆಟ್ ಸೈನಿಕರಿಂದ ರಚಿಸಲ್ಪಟ್ಟ ಸ್ಪೆಷಲ್ ಫ್ರಾಂಟಿಯರ್ ಫೋಸರ್್ ಪ್ಯಾಂಗಾಂಗ್ಸೊನ ದಕ್ಷಿಣಕ್ಕಿರುವ ಕೈಲಾಶ್ ಶ್ರೇಣಿಯ ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಂಡಮೇಲಂತೂ ಚೀನಾದ ದೌರ್ಬಲ್ಯಗಳು ಬೆಳಕಿಗೆ ಬಂದಿದ್ದವು. ಅನಿವಾರ್ಯವಾಗಿ ಚೀನಾ ಭಾರತದೊಂದಿಗೆ ಮಾತುಕತೆಗೆ ಬರಬೇಕಾಯ್ತಲ್ಲದೇ ಪ್ಯಾಂಗಾಂಗ್ ಭಾಗವನ್ನು ಬಿಟ್ಟು ಹೊರಡುವುದಾಗಿ ಹೇಳಿಕೊಂಡಿತು!


ಅಲ್ಲಿಯವರೆಗೂ ಚೀನಾದ ಮನ ನೋಯಿಸದಂತೆ ಅಂತಾರಾಷ್ಟ್ರೀಯ ಮಟ್ಟದ ಸಂಬಂಧಗಳನ್ನು ರೂಪಿಸಿಕೊಂಡು ಬರುತ್ತಿದ್ದ ಭಾರತ ಆನಂತರ ಪೂರ್ಣ ಬದಲಾಯ್ತು. ನಿಮಗೆ ನೆನಪಿರಬೇಕು. ಟಿಬೆಟ್ ಸಕರ್ಾರದ ಅಧ್ಯಕ್ಷರನ್ನು 2014ರಲ್ಲಿ ಮೋದಿ ಆಹ್ವಾನಿಸಿದ್ದರು. 2016ರಲ್ಲಿ ದಲೈ ಲಾಮಾ ಅವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಲಾಗಿತ್ತು. 2017ರಲ್ಲಿ ತವಾಂಗ್ ಭೇಟಿಗೆ ಅವರಿಗೆ ಅವಕಾಶವನ್ನೂ ಮಾಡಿಕೊಡಲಾಗಿತ್ತು. ಹೊಸ ಪ್ರಧಾನಿಗಳ ಬದಲಾಗಿರುವ ಆದ್ಯತೆಗಳ ಸೂಚನೆ ಚೀನಾಕ್ಕೆ ಕೊಡಲೇಬೇಕಾದ ಅನಿವಾರ್ಯತೆ ಮೋದಿಗಿತ್ತು. ಚೀನಾದೊಂದಿಗೆ ತಗ್ಗಿ-ಬಗ್ಗಿ ನಡೆಯುವ ಕಮ್ಯುನಿಸ್ಟ್ ಪಾಟರ್ಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವ ಕಾಂಗ್ರೆಸ್ಗಿಂತ ತಾನು ಭಿನ್ನ ಎಂದು ತೋರಿಸಲೇಬೇಕಾದ ಅನಿವಾರ್ಯತೆ ಮೋದಿಗಿತ್ತು. ಅದು ಲಾಭವೂ ಆಯ್ತು. ಷಿ ಜಿನ್ಪಿಂಗ್ ತಾನೇ ಭಾರತ ಭೇಟಿಗೆ ಬಂದ. ಮೋದಿಯವರನ್ನು ಮಾತನಾಡಿಸಿದ. ಹಾಗಂತ ಚೀನಾ ಬದಲಾಯಿತು ಎಂದೇನೂ ಇಲ್ಲ. ಅದೇ ಹೊತ್ತಲ್ಲಿ ಡೋಕ್ಲಾಂನಲ್ಲಿ ಚೀನೀ ಮತ್ತು ಭಾರತೀಯ ಸೈನಿಕರ ನಡುವೆ ಯುದ್ಧೋತ್ಸಾಹ ಏರ್ಪಟ್ಟುಬಿಟ್ಟಿತ್ತು. ಅದು ಭಾರತಕ್ಕೆ ಚೀನಾ ಕೊಟ್ಟ ಎಚ್ಚರಿಕೆ. ಆನಂತರ ಭಾರತ ಚೀನಾದ ವಿಚಾರದಲ್ಲಿ ಸ್ವಲ್ಪ ಮೆದು ಧೋರಣೆಯನ್ನೇ ಅನುಸರಿಸುತ್ತಿತ್ತು. ದಲೈಲಾಮಾ ಮತ್ತು ಮೋದಿ ಬಾಂಧವ್ಯ ಮೇಲ್ನೋಟಕ್ಕೆ ಸ್ವಲ್ಪ ಕಡಿಮೆಯೇ ಆಯ್ತು ಎನ್ನಬೇಕು. ಆದರೆ ಈಗ ಮತ್ತೆ ಅದು ಹಳಿಗೆ ಬಂದಿದೆ. ಮೊನ್ನೆಯಷ್ಟೇ ಮೋದಿ ದಲೈಲಾಮಾ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಇದು ಸಾಮಾನ್ಯವಾದ್ದೇನೂ ಅಲ್ಲ. ಕಮ್ಯುನಿಸ್ಟ್ ಪಾಟರ್ಿ ದಲೈಲಾಮಾರ ಆಧ್ಯಾತ್ಮಿಕ ಉತ್ತರಾಧಿಕಾರಿಯನ್ನು ತಾನೇ ನೇಮಿಸಬೇಕೆಂಬ ಧಾವಂತದಲ್ಲಿದೆ. ಈ ಹೊತ್ತಿನಲ್ಲಿ ದಲೈಲಾಮಾ ತವಾಂಗಿನಲ್ಲಿ ತಮ್ಮ ಉತ್ತರಾಧಿಕಾರಿಯನ್ನು ಹುಡುಕಿಕೊಂಡುಬಿಟ್ಟರೆ ಟಿಬೆಟ್ ಜನರ ಹೋರಾಟ ಮತ್ತೆ ಮುಂದುವರಿಯುತ್ತದೆ. ಹೀಗಾಗಿಯೇ ಚೀನಾಕ್ಕೆ ಭಾರತದ ಈ ನಡೆ ನಿಸ್ಸಂಶಯವಾಗಿ ಕಿರಿಕಿರಿ. ಕೈಲಾಶ್ ಶ್ರೇಣಿಗಳನ್ನು ಟಿಬೆಟಿಯನ್ ಸೈನಿಕರೇ ವಶಪಡಿಸಿಕೊಂಡಿರುವ ಸುದ್ದಿಯಂತೂ ಚೀನಾಕ್ಕೆ ನುಂಗಲಾರದ ತುತ್ತು. ಹೀಗಾಗಿಯೇ ಈಗ ಭಾರತೀಯ ಪಡೆಗಳೊಂದಿಗೆ ಕಾದಾಡಲು ಟಿಬೆಟಿಯನ್ ಸೈನಿಕರದ್ದೇ ಒಂದು ತುಕಡಿಯನ್ನು ಅದು ಸಿದ್ಧಗೊಳಿಸುತ್ತಿದೆ. ಚೀನಾದ ಮುಖ್ಯಭೂಮಿಯ ಸೈನಿಕರು ಭಾರತೀಯ ಪಡೆಗಳಿಂದ ಮುಖಭಂಗ ಅನುಭವಿಸಿದ್ದನ್ನು ಅದಕ್ಕೆ ಮರೆಯಲು ಆಗುತ್ತಲೇ ಇಲ್ಲ. ಈ ಎತ್ತರದಲ್ಲಿ ಪ್ರಬಲ ಭಾರತೀಯ ಸೈನಿಕರೊಂದಿಗೆ ಕಾದಾಡಲು ಟಿಬೆಟಿಯನ್ನರೇ ಸರಿ ಎಂದು ಅದು ನಿಶ್ಚಯಿಸಿಬಿಟ್ಟಿದೆ. ಹೀಗಾಗಿಯೇ ಈ ಸಾಹಸ. ಈ ಹೊತ್ತಿನಲ್ಲಿ ದಲೈಲಾಮಾಗೆ ಭಾರತ ಕೊಡುತ್ತಿರುವ ಗೌರವ ಚೀನಾದಲ್ಲಿ ತರಬೇತು ಪಡೆಯುತ್ತಿರುವ ಟಿಬೆಟ್ ಸೈನಿಕರ ಮನೋಸ್ಥೈರ್ಯವನ್ನು ಕುಸಿಯುವಂತೆ ಮಾಡುವುದಂತೂ ಅಕ್ಷರಶಃ ಸತ್ಯ.
ನಿಧಾನವಾಗಿ ಜಗತ್ತಿಗೆ ಚೀನಾದ ಉದ್ದೇಶಗಳು ಸ್ಪಷ್ಟವಾಗಿ ಅರ್ಥವಾಗುತ್ತಿವೆ. ಅದಾಗಲೇ ಶ್ರೀಲಂಕಾ ಚೀನಾ ಹೇರಿದ ಸಾಲದ ಸುಳಿಯಲ್ಲಿ ಸಿಕ್ಕು ಹಾಕಿಕೊಂಡು ಕಣ್ಣೀರಿಡುತ್ತಿದೆ. ತೆಗೆದುಕೊಂಡಿರುವ ಸಾಲವನ್ನು ತೀರಿಸಲು ಮತ್ತಷ್ಟು ಸಾಲವನ್ನು ಪಡೆದುಕೊಳ್ಳುತ್ತಿದೆ. ಭಾರತ, ಜಪಾನ್ಗಳಂತಹ ರಾಷ್ಟ್ರ ಬಿಡಿ ಬಾಂಗ್ಲಾದೇಶದಿಂದಲೂ ಶ್ರೀಲಂಕಾ ಸಾಲ ಪಡೆದುಕೊಂಡಿದೆ. ಈಗ ಐಎಮ್ಎಫ್ನತ್ತ ಮುಖಮಾಡಿ ಕುಳಿತಿದೆ. ಚೀನಾ ಒಂದರಿಂದಲೇ ಅದು ತೆಗೆದುಕೊಂಡಿರುವ ಸಾಲ ಐದು ಬಿಲಿಯನ್ ಡಾಲರ್ಗಳಿಗಿಂತಲೂ ಹೆಚ್ಚು. ಭಾರತ ಶ್ರೀಲಂಕಾದ ಕರೆನ್ಸಿಯಲ್ಲೇ ತಾನು ಕೊಟ್ಟ ಸಾಲವನ್ನು ಮರಳಿ ಪಡೆಯುವುದಾಗಿ ಶ್ರೀಲಂಕಾಕ್ಕೆ ಮಾತುಕೊಟ್ಟಿದೆ. ಭಾರತದ ಸಾಲ ಮತ್ತು ಅಭಿವೃದ್ಧಿ ಯೋಜನೆಗಳು ಚೀನಾ ನೀಡುವ ಸಾಲದಂತೆ ನಿಯಮಗಳನ್ನು ಹೊತ್ತು ಬರುವುದಿಲ್ಲ ಎಂಬುದು ಅವರಿಗೆಲ್ಲ ಈಗ ಅರ್ಥವಾಗುತ್ತಿದೆ. ಬಾಂಗ್ಲಾದೇಶ ಇದನ್ನು ಮೊದಲೇ ಕಂಡುಕೊಂಡಿತ್ತು. ಆಫ್ರಿಕನ್ ರಾಷ್ಟ್ರಗಳು ಅರಿಯಲಾರಂಭಿಸಿವೆ. ಏಷ್ಯಾ ಮತ್ತು ಜಗತ್ತಿನ ಇತರೆ ಭಾಗಗಳಲ್ಲಿ ಭಾರತ 60ಕ್ಕೂ ಹೆಚ್ಚು ವಿಭಿನ್ನ ಯೋಜನೆಗಳನ್ನು ಕೈಗೆತ್ತಿಕೊಂಡು ವಿಶ್ವಾಸ ಗಳಿಸಿಕೊಳ್ಳುತ್ತಿದೆ.


ಹಾಗಂತ ಪ್ರಬಲ ರಾಷ್ಟ್ರಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ವಿದೇಶಾಂಗ ನೀತಿಯೂ ನಮ್ಮದಲ್ಲ. ಕಳೆದ ಏಪ್ರಿಲ್ನಲ್ಲಿ ರಷ್ಯಾದ ವಿದೇಶಾಂಗ ಸಚಿವ ಸಗರ್ೆ ಲ್ಯಾವ್ರೊವ್ ಭಾರತಕ್ಕೆ ಭೇಟಿಕೊಟ್ಟು ಇಲ್ಲಿಂದ ನೇರವಾಗಿ ಶತ್ರು ರಾಷ್ಟ್ರವಾದ ಪಾಕಿಸ್ತಾನಕ್ಕೆ ಹೋಗಿದ್ದರು. ಪ್ರಬಲ ಅಮೇರಿಕಾವನ್ನು ಎದುರಿಸಿಕೊಂಡು ರಷ್ಯಾದ ಪರವಾಗಿ ವಾದಿಸುವ ನಮಗೆ ಇದು ನಿಜಕ್ಕೂ ಅಸಹನೀಯವಾಗಿತ್ತು. ಆಗ ಭಾರತ ತುಟಿಯನ್ನು ಎರಡು ಮಾಡಲಿಲ್ಲ. ಹಾಗಂತ ಪ್ರತೀಕಾರ ತೆಗೆದುಕೊಳ್ಳದೇ ಸುಮ್ಮನಿದ್ದರೆ ಅದು ನಮ್ಮ ಅಸಹಾಯಕತೆಯ ಪ್ರಶ್ನೆಯಾಗಿಬಿಡುತ್ತದೆ. ಹಾಗೆಂದೇ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಕಳೆದ ಶನಿವಾರ ರಷ್ಯಾದ ಭೇಟಿಯ ನಂತರ ಅದರೊಂದಿಗೆ ನಿರಂತರ ವಿರೋಧವನ್ನು ಕಾಯ್ದುಕೊಂಡು ಬಂದಿರುವ ಜಾಜರ್ಿಯಾಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ್ದಲ್ಲದೇ ಗೋವಾದಲ್ಲಿ ಮಡಿದ ಅಲ್ಲಿನ ರಾಣಿಯೋರ್ವಳ ಅಸ್ತಿಯನ್ನು ಹಸ್ತಾಂತರಿಸಿ ಸಮರ್ಥ ಸಂದೇಶವನ್ನೇ ಕೊಟ್ಟಿದ್ದಾರೆ. ಅಂದರೆ ಭಾರತ ಮನಮೋಹನ ಸಿಂಗರ ಕಾಲದ್ದಲ್ಲ. ತನಗಾದ ಅವಮಾನವನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಈ ರಾಷ್ಟ್ರ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಈ ಶಕ್ತಿಯೇ ಜಗತ್ತಿನ ಗೌರವಕ್ಕೆ ಪಾತ್ರವಾಗಿರೋದು ಮತ್ತು ಭಾರತ ಹೀಗೆ ಪ್ರಬಲವಾಗಿದೆ ಎನ್ನುವುದೇ ಹೂಡಿಕೆದಾರರಿಗೂ ವಿಶ್ವಾಸ ತುಂಬಿಸುವಂಥದ್ದು. ಈ ನಡುವೆ ಚೀನಾದೊಂದಿಗೆ ಸುಮಧುರ ಬಾಂಧವ್ಯವನ್ನು ಹೊಂದಿದ್ದ ಅಮೇರಿಕಾ ನಿಧಾನವಾಗಿ ತನ್ನ ಹಳೆಯ ಬಣ್ಣವನ್ನು ತೋರಲಾರಂಭಿಸಿದೆ. ಹಿಟ್ಲರ್ ಜರ್ಮನಿಯನ್ನು ಆಳುತ್ತಿರುವಾಗ ಅಮೇರಿಕಾದಲ್ಲಿ ರೂಸ್ವೆಲ್ಟ್ನ ಆಳ್ವಿಕೆ ಇತ್ತು. ಜರ್ಮನಿಯೊಂದಿಗೆ ವ್ಯಾಪಾರ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಂಡಿದ್ದ ಅಮೇರಿಕಾ ಹಿಟ್ಲರ್ನನ್ನು ವಿರೋಧಿಸುವ ಗೋಜಿಗೇ ಹೋಗಿರಲಿಲ್ಲ. 1936ರಲ್ಲಿ ಜರ್ಮನಿ ರೀನ್ಲ್ಯಾಂಡನ್ನು ಆಕ್ರಮಿಸಿಕೊಂಡಾಗ, ಆಸ್ಟ್ರಿಯಾಕ್ಕೆ ನುಗ್ಗಿದಾಗ, ಜೆಕೊಸ್ಲೊವಾಕಿಯಾವನ್ನು ನುಂಗಿದಾಗ ಅಮೇರಿಕಾ ಮುಗುಮ್ಮಾಗಿಯೇ ಇತ್ತು. ನಾಜಿಗಳು ಬೆಳೆದು ಯಹೂದ್ಯರ ಹತ್ಯೆ ಮಾಡಿದಾಗಲೂ ರೂಸ್ವೆಲ್ಟ್ ತುಟಿ ಬಿಚ್ಚಲಿಲ್ಲ. ಹಿಟ್ಲರ್ನ ಭಾಷಣ ಕೇಳಿದ್ದೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ರೂಸ್ವೆಲ್ಟ್, ‘ಅಷ್ಟು ಸುದೀರ್ಘ ಭಾಷಣವನ್ನು ಯಾರು ಕೇಳುತ್ತಾರೆ’ ಎಂದು ಮೂದಲಿಸಿ ನುಡಿದಿದ್ದ. ಆದರೆ ಯಾವಾಗ ಜರ್ಮನಿಗೆ ವ್ಯಾಪಾರ ಮಾಡುವುದಷ್ಟೇ ಉದ್ದೇಶ ಅಲ್ಲ, ಅಮೇರಿಕಾವನ್ನು ಮೀರಿ ಬೆಳೆಯುವುದು ಎಂದು ಅರಿವಾಯ್ತೋ ಆಗ ತಿರುಗಿ ಬಿದ್ದ. ಅಮೇರಿಕಾ ಜರ್ಮನಿಯನ್ನು ಮುಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಚೀನಾದ ವಿಚಾರದಲ್ಲಿಯೂ ಹಾಗೆಯೇ ಆಗುತ್ತಿದೆ. ನಿಧಾನವಾಗಿ ಜಗತ್ತೆಲ್ಲ ಒಂದಾಗಿ ಚೀನಿಯರ ವಿರುದ್ಧದ ದನಿ ರೂಪುಗೊಳ್ಳುತ್ತಿದೆ. ಭಾರತ ಇದರ ನೇತೃತ್ವ ವಹಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿದೆ. ಆದರೆ ಬರಿಯ ಯುದ್ಧಕಲೆ, ರಾಜತಾಂತ್ರಿಕತೆಯಷ್ಟೇ ಚೀನಿಯರನ್ನು ಮಣಿಸಲು ಸಾಕಾಗದು. ವೈಜ್ಞಾನಿಕವಾಗಿ ತಾಂತ್ರಿಕವಾಗಿಯೂ ಕೂಡ ನಾವು ಅಗ್ರಣಿಯಾಗಬೇಕಾದ ಅಗತ್ಯವಿದೆ.


ಮೊನ್ನೆ ಕೇಂದ್ರ ಕ್ಯಾಬಿನೆಟ್ ವಿಸ್ತಾರಗೊಂಡಾಗ ಪ್ರಧಾನಮಂತ್ರಿಯೇ ವಿಜ್ಞಾನ-ತಂತ್ರಜ್ಞಾನ ವಿಭಾಗವನ್ನು ತನ್ನ ಬಳಿ ಇಟ್ಟುಕೊಂಡರಲ್ಲ ಅದು ಈ ಹಿನ್ನೆಲೆಯಲ್ಲಿ ಬಲುದೊಡ್ಡ ಸಂದೇಶ. ಔಷಧಿ ಕ್ಷೇತ್ರದ ಸಂಶೋಧನೆಯಲ್ಲಿ ನಾವೀಗ ಜಗತ್ತಿನ ಕಣ್ಣುಕುಕ್ಕುವಷ್ಟು ಬೆಳೆದಿದ್ದೇವೆ. ಇನ್ನು ಇತರೆ ಕ್ಷೇತ್ರಗಳಲ್ಲೂ ಬಲವಾದ ಹೆಜ್ಜೆ ಇಡಬೇಕಿದೆ. ಇದು ಒಬ್ಬಿಬ್ಬರ ಕೆಲಸವಲ್ಲ; ಹೊಸ ಭಾರತ ನಿಮರ್ಾಣಕ್ಕೆ ರಾಷ್ಟ್ರದ ಪ್ರತಿಯೊಬ್ಬರೂ ಜೊತೆಯಾಗಿ ಮಾಡಬೇಕಾಗಿರುವ ಮಹಾಯಜ್ಞ!

ಕೊವಿಡ್ ಕಾಲದಲ್ಲಿ ಮನಮೋಹನ ಸಿಂಗರಿದ್ದಿದ್ದರೆ!

ಕೊವಿಡ್ ಕಾಲದಲ್ಲಿ ಮನಮೋಹನ ಸಿಂಗರಿದ್ದಿದ್ದರೆ!


ಕರೋನಾ ಎರಡನೇ ಅಲೆ ಅನೇಕರ ಬದುಕನ್ನು ಕಸಿದಿದೆ. ಅನೇಕರ ಆಪ್ತರನ್ನು ಸೆಳೆದೊಯ್ದಿದೆ. ಮನೆಗಳು ಬರಡಾಗಿವೆ. ನಿಜ, ಆದರೆ ಇವೆಲ್ಲದರ ನಡುವೆ ಎರಡನೆ ಅಲೆಯ ವೇಳೆಗೆ ಮೋದಿಯ ಸ್ಥಾನದಲ್ಲಿ ಮನಮೋಹನ ಸಿಂಗರೇ ಇದ್ದಿದ್ದರೆ ಪರಿಸ್ಥತಿ ಹೇಗಿರಬಹುದಿತ್ತೆಂದು ಊಹಿಸಿ ನೋಡಿದ್ದೀರಾ? ಸ್ವಂತ ನಿಧರ್ಾರ ತೆಗೆದುಕೊಳ್ಳಲಾಗದೇ ಅವರವರ ಹೆಗಲ ಮೇಲೆಯೇ ಜವಾಬ್ದಾರಿಯನ್ನು ಹೊರಿಸಿ, ಎಲ್ಲದಕ್ಕೂ ಮುಗುಮ್ಮಾಗಿ ಇದ್ದುಬಿಡುವ ಮನಮೋಹನ ಸಿಂಗರು ಈ ಎರಡನೇ ಅಲೆಯನ್ನು ಹೇಗೆ ನಿರ್ವಹಿಸಿರುತ್ತಿದ್ದರು ಎಂದು ಊಹಿಸಿದರೂ ಹೆದರಿಕೆಯಾಗುತ್ತದೆ! ಬಿಡಿ, ಈ ಸಂಕಟದ ನಡುವೆಯೂ ಸಮಾಧಾನದ ಅಂಶ ಮೋದಿ ಈ ಹೊತ್ತಲ್ಲಿ ಪ್ರಧಾನಿಯಾಗಿದ್ದಾರಲ್ಲ ಎಂಬುದಷ್ಟೇ. ಹೀಗಾಗಿಯೇ ಎಬಿಪಿ ಸಿ ವೋಟರ್ ನಡೆಸಿದ ಸವರ್ೇಯ ಪ್ರಕಾರ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸುಮಾರು ಶೇಕಡಾ 65ರಷ್ಟು ಜನ ಮೋದಿ ಮಾತ್ರ ಇಷ್ಟು ಸಮರ್ಥವಾಗಿ ಇದನ್ನು ನಿರ್ವಹಿಸಬಲ್ಲರು ಎಂದಿದ್ದಾರೆ. ಸಹಜವೂ ಹೌದು. ಮನಮೋಹನ ಸಿಂಗರಿಗೆ ಯಾವುದೆಲ್ಲ ದೌರ್ಬಲ್ಯಗಳೆನಿಸಿಕೊಂಡಿದ್ದವೋ ಮೋದಿಗೆ ಅವುಗಳೇ ಶಕ್ತಿ. ಯಾವುದು ರಾಹುಲ್ನಲ್ಲಿ ಇಲ್ಲವೇ ಇಲ್ಲವೋ ಮೋದಿಯೊಳಗೆ ಅವೆಲ್ಲವೂ ಇದೆ. ಹೀಗಾಗಿಯೇ ಈತ ಮಾತ್ರ ಅದನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಿದ್ದು. ಒಂದೊಂದೇ ಅಂಶಗಳನ್ನು ಗಮನಿಸಿ ನೋಡಿ.


ಮೋದಿಯ ಶಕ್ತಿ ಸಂವಹನ ಕಲೆ. ಹೇಳಬೇಕಾದ್ದನ್ನು ಸಮರ್ಥವಾಗಿ, ಮನಮುಟ್ಟುವಂತೆ ಹೇಳಬಲ್ಲ ಅವರ ಶಕ್ತಿ ಅಪರೂಪದ್ದು. ರಾತ್ರಿ 8 ಗಂಟೆಗೆ ಟಿವಿಯ ನೇರಪ್ರಸಾರದ ಮೂಲಕ ನಾಳೆಯಿಂದ ಜನತಾ ಕಫ್ಯರ್ೂ ಎಂದು ಮನಮೋಹನ ಸಿಂಗರು ಹೇಳುವುದನ್ನು ಒಮ್ಮೆ ಊಹಿಸಿಕೊಂಡು ನೋಡಿ. ಸಾಮಾನ್ಯ ಜನರಿರಲಿ ಕಾಂಗ್ರೆಸ್ಸಿನ ನಾಯಕರೂ ಅದನ್ನು ಅನುಸರಿಸುತ್ತಿರಲಿಲ್ಲ. ಮೋದಿ ಕಫ್ಯರ್ೂಗೆ ಬೆಂಬಲ ಕೊಡಿಸುವುದೇನು, ದೀಪ ಹಚ್ಚಿ ಎಂದಾಗಲೂ, ವೈದ್ಯರಿಗೆ ಗೌರವ ಸೂಚಿಸಲು ಚಪ್ಪಾಳೆ ತಟ್ಟಿ ಎಂದಾಗಲೂ ಜನ ಚಾಚೂ ತಪ್ಪದೇ ಅನುಸರಿಸಿದ್ದು ಅಚ್ಚರಿಯೇ. ಮೊದಲನೇ ಅಲೆಯ ವೇಳೆಗೆ ವೈಜ್ಞಾನಿಕ ಸಲಹೆಗಾರರ ಮೂಲಕ ಕೊವಿಡ್ ನಿರ್ವಹಿಸಬೇಕಾದ ರೀತಿಯನ್ನು ಅರಿತು ಸಂಪೂರ್ಣ ಲಾಕ್ಡೌನ್ಗೆ ಶರಣಾದ ಮೋದಿ ಎರಡನೇ ಅಲೆ ವ್ಯಾಪಕವಾಗಿ ಆವರಿಸಿಕೊಳ್ಳುವ ಮುನ್ನ ಚುನಾವಣಾ ರ್ಯಾಲಿಗಳಲ್ಲಿದ್ದರು. ಒಮ್ಮೆ ಎರಡನೇ ಅಲೆ ಬಾಧಿಸುತ್ತಿದೆ ಎಂದು ಗೊತ್ತಾದೊಡನೆ ರ್ಯಾಲಿಗಳನ್ನು ರದ್ದುಗೊಳಿಸಿ ಎಂದಿನಂತೆ ತಾವೇ ಮುಂಚೂಣಿಯಲ್ಲಿ ನಿಂತು ಎಲ್ಲರೊಡನೆ ಮಾತುಕತೆ ಆರಂಭಿಸಿಬಿಟ್ಟರು. ಯಾರನ್ನೂ ಅವರು ಬಿಡಲಿಲ್ಲ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಐದು ಸೂತ್ರಗಳನ್ನು ಮುಂದಿಟ್ಟರು. ಕೊವಿಡ್ ಪರೀಕ್ಷೆಗಳನ್ನು ಹೆಚ್ಚಿಸಿ ಪಾಸಿಟಿವ್ ಆದವರನ್ನು ಪ್ರತ್ಯೇಕಗೊಳಿಸುವ ಕೆಲಸವನ್ನು ಚುರುಕುಗೊಳಿಸುವಂತೆ ಕೇಳಿಕೊಂಡರು. ಲಸಿಕೆ ಉತ್ಸವವನ್ನು ವ್ಯಾಪಕವಾಗಿ ಜರುಗಿಸಲು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು. ರಾತ್ರಿ ಕಫ್ಯರ್ೂಗಳನ್ನು ಜಾರಿಗೊಳಿಸಿ ಅದನ್ನು ಕರೋನಾ ಕಫ್ಯರ್ೂ ಎಂದು ಕರೆಯುವಂತೆ ಸಲಹೆ ಕೊಟ್ಟರು. ಇದರಿಂದ ಲಾಭ ಹೆಚ್ಚೇನೂ ಆಗುತ್ತಿರಲಿಲ್ಲ. ಆದರೆ ಕರೋನಾ ಕಫ್ಯರ್ೂ ಎನ್ನುವ ಪದವೇ ಜನ ತೀಕ್ಷ್ಣವಾಗಿ ಆಲೋಚನೆ ಮಾಡಲು ಪ್ರೇರೇಪಿಸುತ್ತಿತ್ತು. ಇಷ್ಟನ್ನೂ ಹೇಳಿದ ಮೋದಿ ಯಾವ ಕಾರಣಕ್ಕೂ ಪೂರ್ಣ ಲಾಕ್ಡೌನ್ಗೆ ಶರಣಾಗಬೇಡಿ ಎಂದು ಕೇಳಿಕೊಳ್ಳುವುದನ್ನು ಮರೆಯಲಿಲ್ಲ. ಅನಿವಾರ್ಯವಾದಲ್ಲಿ ಮಾತ್ರ ಅಂತಹ ಕ್ರಮ ಕೈಗೊಳ್ಳಬೇಕೆಂದು ಸಲಹೆ ಕೊಟ್ಟರು. ಅದಾಗಲೇ ತಿಂಗಳುಗಟ್ಟಲೆ ವ್ಯಾಪಾರ ವಂಚಿತರಾದ ಉದ್ಯಮಿಗಳ ಕಾಳಜಿ ಅವರಿಗೆ ಇದ್ದೇ ಇತ್ತು. ದುರದೃಷ್ಟವೇನು ಗೊತ್ತೇ? ಯೋಗಿ ಆದಿತ್ಯನಾಥರನ್ನು ಬಿಟ್ಟು ಉಳಿದ ಯಾವ ಮುಖ್ಯಮಂತ್ರಿಗಳೂ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿಯೇ ಎಲ್ಲೆಡೆ ಕಾಲಕ್ರಮದಲ್ಲಿ ಹಾಹಾಕಾರವೆದ್ದಿತು. ಎರಡನೇ ಅಲೆಯನ್ನು ಸದ್ದಿಲ್ಲದೇ ಗೆದ್ದಿದ್ದು ಉತ್ತರ ಪ್ರದೇಶ ಮಾತ್ರ. ಹಾಗಂತ ಮೋದಿ ಮುಖ್ಯಮಂತ್ರಿಗಳೊಂದಿಗಷ್ಟೇ ಅಲ್ಲ. ನಿರಂತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಉಳಿದರು. ಜಿಲ್ಲಾಧಿಕಾರಿಗಳು, ಆರೋಗ್ಯದ ಪ್ರಮುಖ ಜವಾಬ್ದಾರಿ ಉಳ್ಳವರು, ಕೆಲವೊಮ್ಮೆ ಖಾಸಗಿ ವಲಯದವರು ಎಲ್ಲರೊಂದಿಗೆ ನಿರಂತರ ಚಚರ್ೆ ನಡೆದೇ ಇತ್ತು. ನಡು-ನಡುವೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತಂತೆಯೂ ಎಚ್ಚರಿಕೆ ನೀಡುತ್ತಲೇ ಇದ್ದರು. ಮನೆಯ ಹಿರಿಯರೊಬ್ಬರು ಮಕ್ಕಳಿಗೆ ತೊಂದರೆಯಾಗಬಹುದಾದ ಸಂದರ್ಭ ಬಂದಾಗ ಎಷ್ಟು ಕಾಳಜಿ ವಹಿಸಬಹುದೋ ಮೋದಿ ಅಷ್ಟೇ ಪ್ರೀತಿಯಿಂದ ವ್ಯವಹರಿಸಿದರು.


ಇನ್ನು ಲಸಿಕೆಗಳ ವಿಚಾರಕ್ಕೆ ಬರುವುದಾದರೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಸಮಸಮಕ್ಕೆ ನಿಂತು ಎರಡೆರಡು ವ್ಯಾಕ್ಸಿನ್ಗಳನ್ನು ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು. ಸಾಧನೆ ವಿಜ್ಞಾನಿಗಳದ್ದೇ ಹೌದು, ಆದರೆ ಅದರ ಹಿಂದೆ ಸಮರ್ಥ ವ್ಯಕ್ತಿಯೊಬ್ಬ ನಿಲ್ಲುವುದು ಅನಿವಾರ್ಯ. ಹೀಗೆಂದೊಡನೆ ಕಾಂಗ್ರೆಸ್ಸಿಗರು ಎದ್ದೆದ್ದು ಕುಣಿದಾಡಬಹುದೇನೋ. ಆದರೆ 2008ರಲ್ಲಿ ಯುಪಿಎ ಸಕರ್ಾರ ಚೆನ್ನೈನ ಬಿಸಿಜಿ ವ್ಯಾಕ್ಸಿನ್ ಲ್ಯಾಬೊರೇಟರಿ, ಕಣ್ಣೂರಿನ ಪ್ಯಾಸ್ಟ್ಯೂರ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಕಸೌಲಿಯ ಸೆಂಟ್ರಲ್ ರಿಸಚರ್್ ಇನ್ಸ್ಟಿಟ್ಯೂಟ್ಗಳನ್ನು ಏಕಾಏಕಿ ಮುಚ್ಚಿಬಿಟ್ಟಿತು. ಹೀಗೇಕೆ ಮಾಡಿತೆಂಬುದನ್ನು ಯಾರೂ ಬಾಯಿ ಬಿಡಲಿಲ್ಲ. ಆದರೆ ನಿಸ್ಸಂಶಯವಾಗಿ ಜಗತ್ತಿನ ಲಸಿಕೆ ಉತ್ಪಾದಕರ ಲಾಬಿಗೆ ಕಾಂಗ್ರೆಸ್ಸು ಮಣಿದಿತ್ತು ಎನ್ನುವುದು ಗೋಚರವಾಗುತ್ತಿತ್ತು. 2012ರಲ್ಲಿ ಸವರ್ೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿ ಅದನ್ನು ಮತ್ತೆ ತೆರೆಸಿತು. ಮೋದಿ ಈ ಬಾರಿ ಜಗತ್ತಿನ ಒತ್ತಡಕ್ಕೆ ಮಣಿಯುವುದಿರಲಿ, ಜಗತ್ತಿಗೇ ಒತ್ತಡ ಹೇರುವ ಸನ್ನಾಹದಲ್ಲಿದ್ದರು. ಲಸಿಕೆ ಉತ್ಪಾದನೆಯಾಗುವ ಕೆಲವು ದಿನಗಳ ಮುನ್ನ ಎರಡೂ ಸಂಸ್ಥೆಗಳಿಗೆ ಭೇಟಿಕೊಟ್ಟು ಲಸಿಕೆಯೊಂದಿಗೆ ಸಿದ್ಧವಾಗುತ್ತಿರುವ ಸಂದೇಶವನ್ನು ಜಗತ್ತಿಗೆ ಮುಟ್ಟಿಸಿದರು. ಈ ಸಂಸ್ಥೆಗಳಿಗೆ ಬೇಕಾದ ಹಣಕಾಸಿನ ನೆರವು ಒದಗಿಸಲಾಯ್ತು. ಲಸಿಕೆ ಸಿದ್ಧವಾದೊಡನೆ ಮುಂಚೂಣಿಯ ಕಾರ್ಯಕರ್ತರಿಗೆ ಅದನ್ನು ಕೊಡಲಾಯ್ತು. ಮುಂದೆ ಜನರಲ್ಲಿ ವಿಶ್ವಾಸ ತುಂಬಲು ತಾನೇ ಲಸಿಕೆ ಹಾಕಿಸಿಕೊಂಡರು ಮೋದಿ. ಆ ವೇಳೆಗೆ ಕಾಂಗ್ರೆಸ್ಸು ಲಸಿಕೆಗಳ ಸಾಮಥ್ರ್ಯವನ್ನು ಪ್ರಶ್ನಿಸುತ್ತಿತ್ತು. ಬಿಜೆಪಿ ವ್ಯಾಕ್ಸಿನ್ ಎಂದು ಮೂದಲಿಸಿದರು ಕೆಲವರು. ಇತ್ತೀಚೆಗಂತೂ ಕಾಂಗ್ರೆಸ್ಸಿನ ಒಬ್ಬ ನಾಯಕ ಈ ಲಸಿಕೆಗಳಲ್ಲಿ ಗೋವಿನ ರಕ್ತಸಾರವಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದ. ಆದರೆ ಮೋದಿ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದರು. ಲಸಿಕಾ ಉತ್ಸವಗಳನ್ನು ವ್ಯಾಪಕವಾಗಿ ನಡೆಸುತ್ತಾ ಜನ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಿದರು. ಊಹ್ಞೂಂ, ಅಂದುಕೊಂಡಷ್ಟು ವೇಗವನ್ನು ಅದು ಪಡೆಯಲಿಲ್ಲ. ಹಾಗಂತ ನಾಯಕ ಸುಮ್ಮನಿರುವಂತಿಲ್ಲವಲ್ಲ. ಜಗತ್ತಿನ ಅನೇಕ ರಾಷ್ಟ್ರಗಳಿಗೆ ಈ ಲಸಿಕೆಯನ್ನು ತಲುಪಿಸುತ್ತಾ, ವ್ಯಾಕ್ಸಿನ್ ಮೈತ್ರಿಗೆ ಭಾಷ್ಯ ಬರೆದರು. ಎರಡನೇ ಅಲೆಯ ನಟ್ಟನಡುವೆ ಕಾಂಗ್ರೆಸ್ಸು ‘ನಮ್ಮ ಮಕ್ಕಳ ವ್ಯಾಕ್ಸಿನ್ ಅನ್ನು ವಿದೇಶಕ್ಕೆ ಏಕೆ ಕಳಿಸಿದಿರಿ ಮೋದಿ?’ ಎಂದು ಪ್ರಚಾರ ಮಾಡಿದರಲ್ಲ; ಅದೇ ಲಸಿಕೆಗಳನ್ನು ತೆಗೆದುಕೊಳ್ಳಬಾರದೆಂದು ಇದೇ ಜನ ಹಿಂದೆಲ್ಲಾ ಹೇಳಿದ್ದನ್ನು ಮರೆತೇಬಿಟ್ಟಿದ್ದರಲ್ಲ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಾವು ಹಿಂದೇಟು ತೋರಿದ್ದು ಖಂಡಿತವಾಗಿಯೂ ಮುಳುವಾಯ್ತು. ಎರಡನೇ ಅಲೆ ನಮ್ಮನ್ನು ಬಲವಾಗಿ ಹಿಡಿದುಕೊಂಡಾಗ ವ್ಯಾಕ್ಸಿನ್ ಹಾಕಿಸಿಕೊಳ್ಳದ ನಾವು ವೈರಸ್ನ ಮುಂದೆ ಬಟಾ ಬಯಲಾಗಿ ನಿಂತುಬಿಟ್ಟಿದ್ದೆವು.


ಎರಡನೇ ಅಲೆ ಅಮರಿಕೊಂಡಾಗ ಆಕ್ಸಿಜನ್ ಕೊರತೆಯಾಗಬಹುದೆಂದು ಯಾವ ಪುಣ್ಯಾತ್ಮನೂ ಊಹಿಸಿರಲಿಲ್ಲ. ಮತ್ತು ಯಾವ ದೇಶದಲ್ಲೂ ಕೂಡ ಈ ರೀತಿಯ ಸ್ಥಿತಿ ನಿಮರ್ಾಣವಾಗಿದ್ದನ್ನು ಕಂಡಿರಲಿಲ್ಲ. ಏಕಾಕಿ ಆಸ್ಪತ್ರೆಗಳಲ್ಲ್ಲಿ ಆಮ್ಲಜನಕದ ಕೊರತೆಯಾಗುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಕರೋನಾ ಎಂದು ಗೊತ್ತಾದವರೆಲ್ಲ ಆಕ್ಸಿಜನ್ಗಾಗಿ ತಡಕಾಡುವಂತೆ ಮಾಧ್ಯಮಗಳು ಮಾಡಿಬಿಟ್ಟವು. ದೆಹಲಿಯಲ್ಲಂತೂ ಸ್ವತಃ ಮುಖ್ಯಮಂತ್ರಿಯೇ ಅಗತ್ಯಕ್ಕಿಂತ ನಾಲ್ಕುಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿ ಸಕರ್ಾರ ತಡಬಡಾಯಿಸುವಂತೆ ನೋಡಿಕೊಂಡರು. ಮೋದಿ ಸುಮ್ಮನಿರಲಿಲ್ಲ. ನಿರಂತರ ಸಭೆಗಳನ್ನು ನಡೆಸುತ್ತಾ ಉದ್ಯಮಿಗಳು ಕಾಖರ್ಾನೆಗಳಿಗೆ ಬಳಸುವ ಆಮ್ಲಜನಕವನ್ನು ರೋಗಿಗಳ ಬಳಕೆಗೆ ಬಳಸುವಂತೆ ಮಾಡಬಲ್ಲ ವ್ಯವಸ್ಥೆಯನ್ನು ರೂಪಿಸಿದರು. ಸರಕು ಸಾಗಣೆಯ ರೈಲು ಆಕ್ಸಿಜನ್ ಎಕ್ಸ್ಪ್ರೆಸ್ ಆಗಿ ನಿಮರ್ಾಣಗೊಂಡಿತು. ನಮ್ಮಿಂದ ವ್ಯಾಕ್ಸಿನ್ ಪಡಕೊಂಡಿದ್ದ ರಾಷ್ಟ್ರಗಳೆಲ್ಲ ಸಹಾಯಕ್ಕೆ ಧಾವಿಸಿದವು. ಎಲ್ಲೆಲ್ಲಿಂದ ಎಷ್ಟೆಷ್ಟು ಆಮ್ಲಜನಕದ ವ್ಯವಸ್ಥೆಯಾಯ್ತು ಎಂದು ಹೇಳಿದರೆ ಅದೇ ಒಂದು ಲೇಖನವಾದೀತು! ಆಮ್ಲಜನಕವನ್ನು ಪೂರೈಸಲಾಗದ ಆಫ್ರಿಕಾದ ಪುಟ್ಟ ರಾಷ್ಟ್ರಗಳು ಧಾನ್ಯವನ್ನು ಕೊಟ್ಟು ಕೃತಜ್ಞತೆ ಸಮಪರ್ಿಸಿದ್ದವು. ಇಡೀ ರಾಷ್ಟ್ರಕ್ಕೇ ಬೇಕಾದಷ್ಟು ಆಮ್ಲಜನಕ ಸಿಗುವುದು ಸಾಧ್ಯವೇ ಇಲ್ಲ ಎಂಬ ವಾತಾವರಣವನ್ನು ಪೂರ್ಣ ಬದಲಾಯಿಸಿ ದೇಶದ ಮೂಲೆ-ಮೂಲೆಯಲ್ಲೂ ಆಮ್ಲಜನಕ ದೊರೆಯುವಂತೆ ಮಾಡಿದ್ದು ಪ್ರಧಾನಿಯವರ ಸಾಧನೆಯೇ.


ಇವೆಲ್ಲವೂ ನಡೆಯುವಾಗ ಒಂದು ವಿಚಾರವನ್ನು ಗಮನಿಸಿದ್ದೀರಾ. ಈ ಸಂದರ್ಭಗಳಲ್ಲಿ ಡಾ. ಹರ್ಷವರ್ಧನ್ ಆರೋಗ್ಯ ಸಚಿವ ಎಂಬುದು ಅನೇಕರಿಗೆ ಗೊತ್ತಾಗಲೇ ಇಲ್ಲ. ಅವರು ಆಗೀಗ ಪತ್ರಿಕಾಗೋಷ್ಠಿಗಳನ್ನು ನಿರ್ವಹಿಸುತ್ತಿದ್ದರು ಅಷ್ಟೇ. ಉಳಿದೆಲ್ಲ ಕೆಲಸದ ನೇತೃತ್ವ ನರೇಂದ್ರಮೋದಿಯದ್ದೇ. ಗೆದ್ದಾಗಲಷ್ಟೇ ಈ ಮನುಷ್ಯ ಮುಂದೆ ನಿಲ್ಲುವುದಲ್ಲ, ಜನರಿಂದ ಬೈಗುಳಗಳನ್ನು ಸ್ವೀಕರಿಸಲು ಅವರೇ ಮುಂದೆ ನಿಂತಿದ್ದರು. ಕಾಂಗ್ರೆಸ್ ಕೆಲಸಕ್ಕೆ ಸೇರಿಸಿಕೊಂಡಿದ್ದ ಐದು ಲಕ್ಷ ಕೀಬೋಡರ್್ ಕುಟ್ಟಕರು ಎಲ್ಲ ಪ್ರಯತ್ನಗಳನ್ನು ಮಾಡಿದ ನಂತರವೂ ಮೋದಿ ಕಂಗೆಡಲಿಲ್ಲ. ಯೂಥ್ ಕಾಂಗ್ರೆಸ್ ವಿದೇಶದ ಎಂಬೆಸಿಯೊಂದಕ್ಕೆ ತಾನೇ ಆಕ್ಸಿಜನ್ ತಲುಪಿಸುವ ಪ್ರಯತ್ನ ಮಾಡಿ ಜಾಗತಿಕ ಮಟ್ಟದಲ್ಲಿ ಮೋದಿಯ ಮಾನ ಕಳೆಯಲು ಪ್ರಯತ್ನಿಸಿತು. ಸವರ್ೋಚ್ಚ ನ್ಯಾಯಾಲಯದಲ್ಲಿ ಪದೇಪದೇ ದಾವೆಗಳನ್ನು ಹೂಡಿ ಕಾಲೆಳೆಯುವ ಪ್ರಯತ್ನ ಮಾಡಲಾಯ್ತು, ದಿನ ಬೆಳಗಾದರೆ ನಿಂದನೆಯ ತುತ್ತೂರಿಗಳು ಮೊಳಗುತ್ತಲೇ ಇದ್ದವು, ಈ ಮನುಷ್ಯ ಮಾತ್ರ ಜಗ್ಗಲೇ ಇಲ್ಲ. ರೆಮ್ಡೆಸಿವಿರ್ ಇಂಜೆಕ್ಷನ್ಗಳ ಕೊರತೆಯಾಗಬಹುದು ಎಂದು ಗೊತ್ತಾದೊಡನೆ ಅದನ್ನು ಪಡೆದು ತಲುಪಿಸಲು ಹಠ ತೊಟ್ಟು ನಿಂತರು. ಈ ನಡುವೆ ಜನರಿಗೆ ಧಾನ್ಯದ ಕೊರತೆಯಾಗದಿರಲೆಂದು ಎಮ್ಎಸ್ಪಿ ಕೊಟ್ಟು ರೈತರಿಂದ ಸಾಕಷ್ಟು ಧಾನ್ಯ ಖರೀದಿ ಮಾಡಲಾಯ್ತು. ಕರೋನಾ ಕಾಲದಲ್ಲಿ ಏರಿದ ಆಹಾರತೈಲದ ಬೆಲೆಯನ್ನು ಬಲುಬೇಗ ನಿಯಂತ್ರಣಕ್ಕೆ ತಂದರು. ಪ್ಯಾಕೇಜುಗಳನ್ನು ಘೋಷಿಸಿ ತೊಂದರೆಗೊಳಗಾದ ಉದ್ಯಮವನ್ನು ಕೈ ಹಿಡಿದು ನಿಲ್ಲಿಸುವ ಯತ್ನ ಮಾಡಿದರು. ಹಾಗಂತ ಶಕ್ತಿ, ಸಾಮಥ್ರ್ಯವನ್ನು ಕಳೆದುಕೊಳ್ಳಲಿಲ್ಲ. ಚೀನಾದ ಗಡಿಯಲ್ಲಿ ಐವತ್ತು ಸಾವಿರ ಹೆಚ್ಚುವರಿ ಸೈನಿಕರನ್ನು ನಿಲ್ಲಿಸಿ ತಂಟೆಗೆ ಬರಬೇಡಿ ಎಂದರು. ಅಮೇರಿಕಾ ಸಹಕಾರ ಕೊಡುವುದಿರಲಿ, ಲಸಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ಕೊಡುವುದಿಲ್ಲವೆಂದಾಗ ಗುಟುರು ಹಾಕಿದರು. ಜಾಗತಿಕ ಒತ್ತಡ ಅಮೇರಿಕಾದ ಮೇಲೆ ಹೇಗೆ ನಿಮರ್ಾಣವಾಯ್ತೆಂದರೆ ಸ್ವತಃ ಬೈಡನ್ ನೆಟ್ಟಗಾಗಬೇಕಾಯ್ತು. ಇವೆಲ್ಲವುಗಳ ನಡುವೆಯೂ ಪಾಕಿಸ್ತಾನ ಎಫ್ಎಟಿಎಫ್ನ ಕಂದುಪಟ್ಟಿಯಿಂದ ಹೊರಬರದಂತೆ ನೋಡಿಕೊಂಡರು. ಬಂಗಾಳದಲ್ಲಿ ದೀದಿ ಕಾರ್ಯಕರ್ತರು ರಾಕ್ಷಸರಂತೆ ವತರ್ಿಸುತ್ತಾ ತನ್ನ ಪಕ್ಷದ ಕಾರ್ಯಕರ್ತರ ರುಂಡ ಚೆಂಡಾಡುತ್ತಿದ್ದಾಗ ಅದರ ವಿಚಾರಣೆಗೂ ಮುಂದಡಿಯಿಟ್ಟರು. ಒಂದೇ ಎರಡೇ ಹಗಲು-ರಾತ್ರಿ ಒಂದು ಮಾಡಿ ಅವರು ದುಡಿಯುತ್ತಾರೆ. ನಾವು ಅಂಗೈ ಅಗಲದ ಮೊಬೈಲನ್ನು ಕೈಲಿ ಹಿಡಿದು ಮನಸ್ಸಿಗೆ ಬಂದಂತೆ ಬೈದು ಸುಮ್ಮನಾಗಿಬಿಡುತ್ತೇವೆ. ಈಗ ಮತ್ತೊಮ್ಮೆ ಮೋದಿಯ ಜಾಗದಲ್ಲಿ ಮನಮೋಹನರಿದ್ದಿದ್ದರೆ ಏನಾಗಬಹುದಿತ್ತು ಎಂದು ಊಹಿಸಿ, ನಿಮ್ಮ ಎದೆಯೊಳಗೆ ಸ್ವಲ್ಪವಾದರೂ ಸಾಹಸ ಇದ್ದರೆ ಮೋದಿ ಬದಲಿಗೆ ರಾಹುಲ್ನನ್ನು ಊಹಿಸಿಕೊಂಡು ನೋಡಿ! ಎರಡನೇ ಅಲೆಯ ವೇಳೆಗೆ ದೇವರು ನಮ್ಮ ಮೇಲೆ ಎಷ್ಟು ಕೃಪೆ ಮಾಡಿದ್ದಾನೆ ಎಂದು ಅರ್ಥವಾದೀತು..


ನರೇಂದ್ರಮೋದಿಯವರಿಗೆ ಭಗವಂತ ಇನ್ನೂ ಹೆಚ್ಚಿನ ಶಕ್ತೊ ಕೊಡಲಿ.

ಚೀನಾದ ವೇಗವೇ ಅದನ್ನು ಕೊಲ್ಲಲಿದೆ!

ಚೀನಾದ ವೇಗವೇ ಅದನ್ನು ಕೊಲ್ಲಲಿದೆ!


ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂದು ಓದಿದ್ದೆವಲ್ಲ, ಅದೀಗ ಚೀನಾದ ವಿಷಯದಲ್ಲಿ ಸಾಬೀತಾಗೋದು ಕಂಡು ಬರುತ್ತಿದೆ. ನಿಸ್ಸಂಶಯವಾಗಿ ಕಳೆದ ಆರೇಳು ದಶಕದಲ್ಲಿ ಚೀನಾ ಬೆಳೆದಿರುವ ರೀತಿ ಅಮೋಘವಾದ್ದು. ನಿಶ್ಚಿತಮತಿಯಾಗಿ ಗುರಿಯನ್ನು ಸಾಧಿಸುವ ಛಲವಿದ್ದರೆ ಏನು ಮಾಡಬಹುದೆಂಬುದಕ್ಕೆ ಚೀನಾ ಸ್ಪಷ್ಟ ಉದಾಹರಣೆ. ಆದರೆ ಹೀಗೆ ಬೆಳೆಯುವಾಗ ಅನ್ಯರ ನಾಶದ ಕಲ್ಪನೆ ಇಟ್ಟುಕೊಂಡು ಮೇಲೇರುತ್ತಾರಲ್ಲ ಅವರು ಅಷ್ಟೇ ಬೇಗನೇ ನಾಶವೂ ಆಗಿಬಿಡುತ್ತಾರೆ. ಜಗತ್ತಿನ ಶ್ರೇಷ್ಠ ಸಂಸ್ಕೃತಿಗಳ ಸಾಲಿನಲ್ಲಿ ಗಣಿಸಲ್ಪಡುವ ಚೀನಾ ಮುಂದೆ ಯಾವ ಹಂತಕ್ಕೆ ಹೋಗಬಲ್ಲುದೋ ಎಂಬುದು ಸದ್ಯಕ್ಕಂತೂ ಪ್ರಶ್ನಾರ್ಥಕ ಚಿಹ್ನೆ!


ಷಿ ಅಧಿಕಾರಕ್ಕೆ ಬಂದಾಗಿನಿಂದಲೂ ಆತನ ಕಲ್ಪನೆಗಳು ಬಲುದೊಡ್ಡವೇ. ಚೀನಾದ ಕಮ್ಯುನಿಸ್ಟ್ ಪಾಟರ್ಿಯನ್ನು ಆತ ಬಲಗೊಳಿಸಿದ ಮತ್ತು ವಿಶ್ವವ್ಯಾಪಿಯಾಗಿಸಿದ ರೀತಿ ಯಾರೂ ಊಹಿಸಲೂ ಸಾಧ್ಯವಾಗದೇ ಇದ್ದಂಥದ್ದು. ಅಮೇರಿಕಾ ರಾಷ್ಟ್ರ-ರಾಷ್ಟ್ರಗಳನ್ನು ಕದನಕ್ಕೆ ಹಚ್ಚಿ ತಾನು ಹಿರಿಯಣ್ಣನಂತೆ ಸಂಧಾನಕ್ಕೆ ಹೋಗುವ ಮೂಲಕ ದೊಡ್ಡತನವನ್ನು ಮೆರೆಯುವ ಪ್ರಯತ್ನ ಮಾಡುತ್ತಿದ್ದರೆ, ಷಿ ಬೇರೊಂದು ದಾರಿಯನ್ನೇ ಹಾಕಿಕೊಟ್ಟ. ನೂರಾರು ಕಂಪೆನಿಗಳ ಮೂಲಕ ಜಗತ್ತಿಗೆ ಲಗ್ಗೆಯಿಟ್ಟ. ಚೀನಾವನ್ನು ಬಿಟ್ಟು ಬದುಕುವುದು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣವನ್ನು ಸೃಷ್ಟಿಸಿಬಿಟ್ಟ. ಈ ಕಂಪೆನಿಗಳು ಸಾಧಾರಣವಾದವುಗಳಾಗಿರಲಿಲ್ಲ. ಚೀನಾದ ಸೈನ್ಯದ ಕನಸುಗಳನ್ನು ಸಾಕಾರ ಮಾಡುವ ಕಮ್ಯಾಂಡರ್ ಇನ್ ಚೀಫ್ಗಳಾಗಿದ್ದವು. ಚೀನಾದ ದೊಡ್ಡ-ದೊಡ್ಡ ಕಂಪೆನಿಗಳು ನಿಮರ್ಾಣವಾಗಿರುವ ಕಥೆ ರೋಚಕವಾದ್ದು. ಯಾವುದೂ ಸಹಜವಾಗಿ ಬೆಳೆದು ನಿಂತವಲ್ಲ, ಎಲ್ಲದರ ಹಿಂದೆಯೂ ಚೀನಾದ ಕಮ್ಯುನಿಸ್ಟ್ ಪಾಟರ್ಿಯದ್ದೇ ಕೈ! ಮೊದಲಿಗೆ ಕಮ್ಯುನಿಸ್ಟ್ ಪಕ್ಷ ಅಥವಾ ಸ್ವತಃ ಸಕರ್ಾರ ಈ ಕಂಪೆನಿಗಳಿಗೆ ಆರಂಭದಲ್ಲಿ ಸಕರ್ಾರಿ ಗುತ್ತಿಗೆಗಳನ್ನು ಕೊಡುತ್ತದೆ. ಆನಂತರ ಈ ಕಂಪೆನಿಗಳಿಗಿರಬಹುದಾದ ವಿದೇಶೀ ಸ್ಪಧರ್ೆಯನ್ನು ಆ ಕಂಪೆನಿಗಳನ್ನೇ ತನ್ನ ದೇಶದಲ್ಲಿ ಕಾಲಿಡದಂತೆ ಮಾಡುವ ಮೂಲಕ ನಿವಾರಿಸುತ್ತದೆ. ತನ್ನ ದೇಶದ ಕಂಪೆನಿಯನ್ನು ಚೀನಾದೊಳಗೆ ಏಕಮಾತ್ರ ಕಂಪೆನಿಯಾಗಿ ಬೆಳೆಸಿ ಸಮರ್ಥವಾದ ಮೇಲೆ ಜಗತ್ತಿಗೆ ವಿಸ್ತರಿಸಲು ಅನುಕೂಲ ಮಾಡಿಕೊಡುತ್ತದೆ. ಈ ಕಂಪೆನಿಗಳಿಗೆ ಬೇಕಾದ ಆರಂಭಿಕ ಹಣ, ಕೈತುಂಬ ಕೆಲಸ, ವಿಸ್ತಾರಗೊಳ್ಳಲು ಬೇಕಾಗಿರುವಂತಹ ವ್ಯವಸ್ಥೆ ಎಲ್ಲವನ್ನೂ ಸಕರ್ಾರವೇ ಒದಗಿಸಿಕೊಡುತ್ತದೆ. ಮುಂದಿನದ್ದೇ ಬಲು ಮಹತ್ವದ್ದು. ಈ ಕಂಪೆನಿಗಳನ್ನು ಮುಂದೆ ಮಿಲಿಟರಿ ಆಕಾಂಕ್ಷೆಗಳನ್ನು ಪೂರೈಸಲಿಕ್ಕಾಗಿ ಬೆಸೆಯಲಾಗುತ್ತದೆ. ಇದು ಷಿ ಜಿನ್ಪಿಂಗ್ನ ಮಿಲಿಟರಿ ಸಿವಿಲ್ ಫ್ಯೂಷನ್ ಎಂಬ ಕಲ್ಪನೆಯ ಕೂಸು. ಜಾಗತಿಕ ತಂತ್ರಜ್ಞಾನವನ್ನು ಈ ಕಂಪೆನಿಗಳ ಮೂಲಕ ತಮ್ಮದಾಗಿಸಿಕೊಂಡು 2050ರ ವೇಳೆಗೆ ಚೀನೀ ಮಿಲಿಟರಿಯನ್ನು ಜಗತ್ತಿನ ಅತ್ಯಂತ ಪ್ರಬಲ ಶಕ್ತಿಯಾಗಿ ಬೆಳೆಸುವ ಇರಾದೆ ಆತನದ್ದು. ಅದಕ್ಕಾಗಿ ನ್ಯಾಯಯುತವಾದ ಅನ್ಯಾಯಯುತವಾದ ಯಾವ ಮಾರ್ಗಗಳನ್ನಾದರೂ ಮುಲಾಜಿಲ್ಲದೇ ಬಳಸಲು ಈ ಕಂಪೆನಿಗಳಿಗೆ ಪರವಾನಗಿ ಇದೆ. ಮತ್ತು ಈ ಕಂಪೆನಿಗಳು ಸದಾ ಸಕರ್ಾರದ ಮಜರ್ಿಯಲ್ಲೇ ಇರುವುದರಿಂದ ಅವರು ಸಕರ್ಾರದ ವಿರುದ್ಧ ದನಿ ಎತ್ತುವುದಿರಲಿ ಮಿಸುಕಾಡುವಂತೆಯೂ ಇಲ್ಲ. ಅಲಿಬಾಬಾದ ಮುಖ್ಯಸ್ಥ ಜಾಕ್ಮಾ ಷಿ ವಿರುದ್ಧ ಮಾತನಾಡಿ ಕಾಣೆಯಾಗಿ ಹೋಗಿದ್ದು, ಆ ಕುರಿತಂತೆ ಚೀನಾದ ಜನ ಮಾತೂ ಆಡದೇ ಇರುವುದು ಈ ಕಾರಣಕ್ಕಾಗಿಯೇ ಅಚ್ಚರಿಯ ಸಂಗತಿಯೇನಲ್ಲ. ಬೆಳೆದು ನಿಂತ ಪ್ರತಿಯೊಂದು ಕಂಪೆನಿಯೂ ಚೀನಾದ ಸೈನ್ಯಕ್ಕೆ ಪ್ರತ್ಯುಪಕಾರ ಮಾಡಲೇಬೇಕು. ಹುವೈ ಕಂಪೆನಿ ಹಾಡರ್್ವೇರ್ ತಂತ್ರಜ್ಞಾನದಲ್ಲಿ ಜಗತ್ತಿನ ಮಟ್ಟಿಗೆ ಅನಿವಾರ್ಯವೆಂಬಂತೆ ಬೆಳೆದು ನಿಂತುಬಿಟ್ಟಿದೆ. ಚೀನಾದಲ್ಲಿ ಅವರು ರೂಪಿಸಿರುವ ತಂತ್ರಜ್ಞಾನ ಫೇಸ್ ಡಿಟೆಕ್ಷನ್ನಲ್ಲಿ ಅಗ್ರಣಿ. ಉಯ್ಘುರ್ ಮುಸಲ್ಮಾನರು ತಮ್ಮ ಪ್ರಾಂತ್ಯ ಬಿಟ್ಟು ಬೇರೆಲ್ಲೇ ಕಂಡುಬಂದರೂ ಅಳವಡಿಸಿರುವ ಕ್ಯಾಮೆರಾಗಳು ಸೈರನ್ ಮೊಳಗಿಸುವಂತೆ ಈ ಕಂಪೆನಿ ತಂತ್ರಜ್ಞಾನ ರೂಪಿಸಿದೆ. ಹಾಗಂತ ಅವರ ರಾಷ್ಟ್ರದೊಳಗೆ ಎಂದಷ್ಟೇ ತಿಳಿದುಕೊಳ್ಳಬೇಡಿ. ಆಫ್ರಿಕಾದ ರಾಷ್ಟ್ರಗಳಲ್ಲಿ ಇದೇ ಕಂಪೆನಿ ಅಲ್ಲಿನ ಡಾಟಾಗಳನ್ನು ಈ ರೀತಿಯಲ್ಲಿ ಕದ್ದು ತಲುಪಿಸುತ್ತಿದ್ದುದು ಜಗತ್ತಿಗೇ ಗೊತ್ತಿರುವ ವಿಚಾರ! ಹಾಗೆಂದೇ ಅಮೇರಿಕಾ, ಆಸ್ಟ್ರೇಲಿಯಾ, ಯುರೋಪಿಯನ್ ಯುನಿಯನ್ಗಳಲ್ಲದೇ ಭಾರತವೂ ಕೂಡ ಈ ಕಂಪೆನಿಯನ್ನು ಬಹುಷ್ಕರಿಸಿಬಿಟ್ಟಿದೆ. ಟೆನ್ಸೆಂಟ್ ಎಂಬ ಕಂಪೆನಿಯ ವಿ-ಚ್ಯಾಟ್ ಅಪ್ಲಿಕೇಶನ್ ಕೂಡ ಇದೇ ಆರೋಪವನ್ನು ಹೊಂದಿದೆ. ಕೆನಡಾದಲ್ಲಿ ಈ ಕುರಿತಂತೆ ಇತ್ತೀಚೆಗೆ ಸಾಕಷ್ಟು ಗದ್ದಲಗಳಾದ ಸುದ್ದಿ ಬಂದಿತ್ತು. ಎಲ್ಲಕ್ಕಿಂತಲೂ ಭಯಾನಕವಾದ ಸುದ್ದಿ ಏನೆಂದರೆ ಅಪ್ಲಿಕೇಶನ್ಗಳಲ್ಲದೇ ನಾವು ಬಳಸುವ ಹಾಡರ್್ವೇರ್ನಲ್ಲೇ ತನಗೆ ಬೇಕಾದ ಬದಲಾವಣೆ ಮಾಡಿಕೊಂಡು ಯಾರನ್ನು ಯಾವಾಗ ಎಲ್ಲಿಂದ ಬೇಕಿದ್ದರೂ ಪರಿವೀಕ್ಷಣೆ ನಡೆಸುವ ಸಾಮಥ್ರ್ಯ ಚೀನಾ ಪಡಕೊಂಡಿದೆ. ಅಮೇರಿಕಾದ ಸ್ಯಾನ್ಹೊಸೆಯಲ್ಲಿ ಸೂಪರ್ ಮೈಕ್ರೊ ಕಂಪ್ಯೂಟರ್ಸ್ ಎಂಬ ಕಂಪೆನಿ ಇದೆ. ಇದು ಸರ್ವರ್ಗಳ ಮದರ್ಬೋರ್ಡನ್ನು ಅಸೆಂಬಲ್ ಮಾಡುವ ಕೆಲಸ ಮಾಡುತ್ತದೆ. ಇದಕ್ಕೆ ಬೇಕಾಗಿರುವ ಬಿಡಿ ಭಾಗಗಳನ್ನು ಚೀನಾದ ಬೇರೆ-ಬೇರೆ ಕಂಪೆನಿಯಿಂದ ಅದು ತರಿಸಿಕೊಳ್ಳುತ್ತದೆ. ಇತ್ತೀಚೆಗೆ ಈ ಮದರ್ಬೋಡರ್್ ಸರ್ವರ್ಗಳನ್ನು ಪರೀಕ್ಷಿಸುತ್ತಿರುವಾಗ ಚೀನಾದ ಕಂಪೆನಿಗಳು ಇದರೊಳಗೆ ಪೆನ್ಸಿಲ್ನ ಮೊನೆಯಷ್ಟು ಚಿಕ್ಕದಾದ ಮೈಕ್ರೊ ಚಿಪ್ಗಳನ್ನು ಇಟ್ಟು ಕಳಿಸಿರುವುದು ಕಂಡು ಬಂತು. ಆ ಮೂಲಕ ಈ ಸರ್ವರ್ಗಳನ್ನು ಬಳಸುತ್ತಿರುವ ಅಮೇಜಾನ್, ಆ್ಯಪಲ್ನಂತಹ ಕಂಪೆನಿಗಳ ದತ್ತಾಂಶಗಳನ್ನೇ ಕದಿಯುವ ಅದರ ಕಾರ್ಯ ಬೆಳಕಿಗೆ ಬಂದಿತ್ತು. ಭಾರತವೂ ಇದಕ್ಕೆ ಹೊರತಲ್ಲ. ಅಲಿಬಾಬಾದ ಕ್ಲೌಡ್ ಸರ್ವರ್ಗಳು ಭಾರತದ ದತ್ತಾಂಶವನ್ನು ನೇರವಾಗಿ ಚೀನಾಕ್ಕೆ ಕಳಿಸುತ್ತಿದ್ದವು. ಚೀನಾದ ಹಾಡರ್್ವೇರ್ಗಳು ಭಾರತದ ಹತ್ತುಸಾವಿರ ಪ್ರಮುಖರ ನಿತ್ಯದ ಆಗು-ಹೋಗುಗಳನ್ನು ಗಮನಿಸುತ್ತಿದೆ ಎಂಬ ಸಂಗತಿಯೂ ಹೊಸತೇನೂ ಅಲ್ಲ. ಚೀನಾದ ಹ್ಯಾಕರ್ಗಳು ಭಾರತ್ ಬಯೋಟೆಕ್ನ ಸರ್ವರ್ಗೆ ಕಳ್ಳತನದಿಂದ ನುಗ್ಗಿ ವ್ಯಾಕ್ಸಿನ್ನ ದತ್ತಾಂಶವನ್ನು ಕದಿಯುವ ಪ್ರಯತ್ನ ಮಾಡಿದ್ದು ಬೆಳಕಿಗೆ ಬರುತ್ತಿದೆ. ಆತ್ಮನಿರ್ಭರತೆಯ ನೆಪದಲ್ಲಿ ಚೀನಾದ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ್ದು ಇದೇ ಕಾರಣಕ್ಕೆ. ಮುಂದೆ ಹುವೈ 5ಜಿ ತಂತ್ರಜ್ಞಾನದೊಂದಿಗೆ ಭಾರತಕ್ಕೆ ಬರದಂತೆ ತಡೆಯುವ ಕೆಲಸವೂ ಆಗಿದೆ. ಅದಕ್ಕೆ ಪೂರಕವಾಗಿಯೇ ರಿಲಯನ್ಸ್ ಮಾತ್ರವಲ್ಲದೇ, ಏರ್ಟೆಲ್, ಟಾಟಾಗಳೂ ಶತ ಪ್ರತಿಶತ ಭಾರತೀಯವಾದ ತಂತ್ರಜ್ಞಾನವನ್ನು ರೂಪಿಸುತ್ತಿವೆ.


ಚೀನಾ ಇಲ್ಲಿಗೇ ನಿಂತಿಲ್ಲ. ಭಾರತದ ಸ್ಟಾಟರ್್ ಅಪ್ಗಳಲ್ಲಿ ಸುಮಾರು ನಾಲ್ಕು ಬಿಲಿಯನ್ ಡಾಲರ್ಗಳಷ್ಟು ಹಣ ಹೂಡಿಕೆ ಮಾಡುವ ಮೂಲಕ ಇಲ್ಲಿನ ಕಂಪೆನಿಗಳನ್ನೇ ತನಗೆ ಬೇಕಾದಂತೆ ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪೇಟಿಎಮ್ನಲ್ಲಿ ಚೀನಾದ ಹಣ ಹೂಡಿಕೆಯಾಗಿದೆ ಎಂಬ ಗದ್ದಲ ಕೇಳಿಬಂದಿದ್ದು ನೀವು ಮರೆತಿರಲಿಕ್ಕಿಲ್ಲ. ನಮ್ಮೆಲ್ಲರ ದತ್ತಾಂಶ ಪೇಟಿಎಮ್ನ ಮೂಲಕ ಚೀನಾದ ಲ್ಯಾಪ್ಟಾಪ್ನಲ್ಲಿ ತೆರೆದುಕೊಳ್ಳುವಂತಿದ್ದರೆ ಕಥೆ ಏನು ಹೇಳಿ! ಭಾರತ ಎಚ್ಚರಗೊಂಡು ಇದರ ಮೇಲೊಂದು ಅಂಕುಶವನ್ನು ಹಾಕುವ ಪ್ರಯತ್ನ ಮಾಡಿದ ನಂತರ ಈಗ ನಮ್ಮೊಂದಿಗೆ ಸೌಹಾರ್ದತೆಯಿಂದ ಇರುವ ಅನೇಕ ರಾಷ್ಟ್ರಗಳು ಹಣ ಹೂಡುತ್ತಿವೆ. ಆದರೆ ಈ ಸಮಸ್ಯೆ ಭಾರತಕ್ಕೆ ಮಾತ್ರವಲ್ಲ. ಜಗತ್ತಿನ ಅನೇಕ ರಾಷ್ಟ್ರಗಳು ಇದನ್ನು ಅನುಭವಿಸಿವೆ. ಕರೋನಾದ ನಂತರ ಚೀನಾದ ಬೆಳವಣಿಗೆಯ ವೇಗ ಹೀಗೇ ನಡೆದರೆ ಜಗತ್ತು ಚೀನಾಕ್ಕೆ ದಾಸವಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಿಮರ್ಾಣವಾಗಿದೆ ಎಂಬ ಅರಿವು ಎಲ್ಲರಿಗೂ ಬಂದಿದೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗಿನ ಅನೇಕ ರಾಷ್ಟ್ರಗಳ ಬಾಂಧವ್ಯ ಹಳಸುತ್ತಿರುವುದು ಗೋಚರವಾಗುತ್ತಿದೆ. ನಾಲ್ಕೇ ಪ್ರಕರಣಗಳನ್ನು ಗಮನಿಸಿ ನೋಡಿ. ಮೊದಲನೆಯದ್ದು ಇತ್ತೀಚೆಗೆ ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರಗಳ ಕಾರ್ಯದಶರ್ಿ ಫ್ರಾನ್ಸಸ್ ಅಡಾಮ್ಸನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಗಂಭೀರವಾದ ಮಾತೊಂದನ್ನು ಹೇಳಿದ್ದಾರೆ, ‘ಚೀನಾ ತನಗಿಲ್ಲದ ಶಕ್ತಿಯನ್ನು ತೋರ್ಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ’ ಎಂದಿದ್ದಾರೆ. ಇದರ ಹಿಂದು-ಹಿಂದೆಯೇ ಭಾರತದ ಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ರಾವತ್ ‘ಗಲ್ವಾನ್ನಲ್ಲಿ ಭಾರತೀಯ ಸೈನಿಕರ ಬಳಿ ಏಟು ತಿಂದಮೇಲೆ ಚೀನಾಕ್ಕೆ ತನ್ನ ತಯಾರಿ ಸಾಲದು ಎನಿಸುತ್ತಿದೆ. ಹೀಗಾಗಿ ಸೈನಿಕರಿಗೆ ವಿಶೇಷ ತರಬೇತಿ ನೀಡಲು ಅದು ಪ್ರಯತ್ನಿಸುತ್ತಿದೆ’ ಎಂದಿದ್ದಾರೆ. ಎರಡೂ ಶಕ್ತ ರಾಷ್ಟ್ರಗಳೇ ಬಿಡಿ. ಮತ್ತು ಕಳೆದ ಎರಡು ವರ್ಷಗಳಿಂದ ಚೀನಾದ ವಿರುದ್ಧ ಗುಟುರು ಹಾಕುತ್ತಲೇ ಬಂದಿರುವ ರಾಷ್ಟ್ರಗಳು. ಆದರೆ ಅಚ್ಚರಿಯೇನು ಗೊತ್ತೇ? ಭಾರತ, ಆಸ್ಟ್ರೇಲಿಯಾ, ಅಮೇರಿಕಾ ಮತ್ತು ಜಪಾನ್ಗಳು ಸೇರಿ ರಚಿಸಿಕೊಂಡಿರುವ ಕ್ವಾಡ್ ಒಕ್ಕೂಟಕ್ಕೆ ಬಾಂಗ್ಲಾದೇಶವನ್ನು ಆಹ್ವಾನಿಸಿದಾಗ ಚೀನಾ ಕುಪಿತಗೊಂಡು ಪ್ರತಿಕ್ರಿಯೆ ಕೊಟ್ಟಿತ್ತು. ಈ ಒಕ್ಕೂಟದೊಂದಿಗೆ ಸೇರಿಕೊಂಡರೆ ತಾನು ಸಹಿಸಲಾರೆ ಎಂದು ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಿತ್ತು. ಆಮೇಲೇನು ಗೊತ್ತೇ? ಬಾಂಗ್ಲಾ ಬಾಗುವುದು ಬಿಡಿ, ‘ಇದು ನಮ್ಮ ರಾಷ್ಟ್ರದ ಆಂತರಿಕ ಪ್ರಶ್ನೆ. ನೀನು ತಲೆಹಾಕುವುದು ಬೇಕಿಲ್ಲ’ ಎಂದು ಧಮಕಿಯನ್ನೇ ಹಾಕಿತ್ತು. ಇದರ ಹಿಂದು-ಹಿಂದೆಯೇ ಚೀನಾದ ವ್ಯಾಕ್ಸಿನ್ ಅನ್ನು ತನ್ನ ದೇಶದ ಜನರಿಗೆ ಕೊಟ್ಟಿದ್ದ ಯುಎಇ ಮತ್ತು ಬಹರೈನ್ಗಳು ಈ ವ್ಯಾಕ್ಸಿನ್ನಿಂದ ಕರೋನಾ ಪೀಡಿತರನ್ನು ರಕ್ಷಿಸುವುದು ಸಾಧ್ಯವಿಲ್ಲ ಎಂದು ಹೇಳಿ ಬೂಸ್ಟರ್ ಡೋಸ್ ಕೊಡುವ ಮಾತುಗಳನ್ನೂ ಆಡಿಬಿಟ್ಟವು. ಈಗಂತೂ ಆಫ್ರಿಕಾವೂ ಕೂಡ ಚೀನಾದ ವಿರುದ್ಧ ತಿರುಗಿ ಬೀಳುತ್ತಿದೆ. ಕಳೆದ ವಾರ ಭಾರತದ ವಿದೇಶಾಂಗ ಸಚಿವರಾದ ಜೈಶಂಕರ್ ಆಫ್ರಿಕಾದ ವಿದೇಶಾಂಗ ಸಚಿವೆ ರೇಷಲ್ ಒಮಾಮೊ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಆಫ್ರಿಕಾದಲ್ಲಿ ಚೀನಾದ ಸ್ಥಾನವನ್ನು ಭಾರತ ಆಕ್ರಮಿಸಲು ಇದು ಸದವಕಾಶ. ಚೀನಾ ಆಫ್ರಿಕಾದಲ್ಲಿ ಉದ್ಯಮಗಳನ್ನು ಹೆಚ್ಚಿಸುತ್ತೇನೆ ಎಂದು ಹೇಳುವ ಮೂಲಕ ಅಲ್ಲಿನ ಪ್ರಾಕೃತಿಕ ಸಂಪತ್ತನ್ನು ಲೂಟಿಮಾಡಿಬಿಟ್ಟಿದೆ. ಸ್ಥಳೀಯರಿಗೆ ಕೆಲಸವನ್ನೂ ಕೊಡದೇ ಚೀನಿಯರನ್ನೇ ಕೆಲಸಕ್ಕಿಟ್ಟು ತನ್ನ ಇಚ್ಛೆ ಪೂರೈಸಿಕೊಳ್ಳುತ್ತಿದೆ. ಭಾರತ ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನಗಳಲ್ಲಿ ಕೆಲಸ ಮಾಡುತ್ತಾ ಸ್ಥಳೀಯರಿಗೆ ಹೆಚ್ಚು-ಹೆಚ್ಚು ಉದ್ಯೋಗ ಕೊಡುವ ಕೆಲಸ ಮಾಡುತ್ತಿದೆ. ಆಫ್ರಿಕಾದಲ್ಲಿರುವ 30 ಲಕ್ಷಕ್ಕೂ ಹೆಚ್ಚು ಭಾರತೀಯರು ಈ ದೃಷ್ಟಿಯಿಂದ ಭಾರತದ ಪಾಲಿಗೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಆಫ್ರಿಕಾ ನಮಗೆ ಬಲು ಅಗತ್ಯ ಮಿತ್ರನೂ ಆಗಿರುವುದರಿಂದ ಇದು ಚೀನಾಕ್ಕೆ ಎಚ್ಚರಿಕೆಯ ಗಂಟೆಯೇ.


ಕಳೆದ ಒಂದು ದಶಕದಿಂದ ಚೀನಾ ಮುನ್ನುಗ್ಗುವ ಪ್ರವೃತ್ತಿಯ ರಾಜತಂತ್ರಿಕತೆಯನ್ನು ಬಳಸಿಕೊಂಡಿದೆ. ರಾಷ್ಟ್ರಗಳಿಗೆ ಅಭಿವೃದ್ಧಿಯ ನೆಪದಲ್ಲಿ ಸಾಲ ಕೊಡುವುದು, ಅವುಗಳನ್ನು ತೀರಿಸಲಿಕ್ಕೆ ಸಾಧ್ಯವಾಗದಾದಾಗ ತನ್ನ ಕಪಿಮುಷ್ಠಿಗೆ ತೆಗೆದುಕೊಂಡು ಜೋರು, ಜಬರ್ದಸ್ತಿನಿಂದಲೇ ಕೆಲಸ ಮಾಡಿಸಿಕೊಳ್ಳುವುದು. ಹಾಗೆ ನಡೆದಿತ್ತು ಅದರ ಓಟ. ಕರೋನಾ ನಂತರ ಎಲ್ಲವೂ ಬದಲಾದಂತೆ ಕಾಣುತ್ತಿದೆ. ಟ್ರಂಪ್ ಈ ವಿಚಾರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದ. ಈಗ ಅದು ವ್ಯಾಪಕಗೊಳ್ಳುತ್ತಿದೆ ಅಷ್ಟೇ. ಬೈಡನ್ಗೆ ಟ್ರಂಪ್ನ ಈ ನೀತಿಯನ್ನು ಮುಂದುವರೆಸುವ ಅನಿವಾರ್ಯತೆ ಗೋಚರಿಸುತ್ತಿದೆ. ಹೀಗಾಗಿಯೇ ಆತ ಅಧಿಕಾರಕ್ಕೆ ಬಂದಮೇಲೆ ಚೀನಾದ ಮತ್ತೈದು ಕಂಪೆನಿಗಳೊಂದಿಗೆ ವ್ಯಾಪಾರ ನಿರ್ಬಂಧಿಸಿದ್ದಾನೆ. ಇತ್ತೀಚೆಗೆ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ ಮತ್ತು ಯುಎಸ್ಗಳ ಜಿ7 ಸಭೆ ನಡೆದಿತ್ತಲ್ಲ, ಅದರಲ್ಲಿ ಭಾರತ, ಆಸ್ಟ್ರೇಲಿಯಾ, ಕೊರಿಯಾ ಮತ್ತು ದಕ್ಷಿಣ ಆಫ್ರಿಕಾಗಳಿಗೂ ಅತಿಥಿಯಾಗಿ ಆಹ್ವಾನವಿತ್ತು. ಹಾಗೇ ಮೇಲ್ನೋಟಕ್ಕೆ ಗಮನಿಸಿ ನೋಡಿದರೂ ಗೋಚರವಾಗುವ ಸಂಗತಿ ಎಂದರೆ ಚೀನಾ ವಿರೋಧಿಗಳೆಲ್ಲ ಒಂದಾಗುತ್ತಿದ್ದಾರೆ ಎನ್ನೋದು. ಚೀನಾಕ್ಕೆ ಇದು ಗೊತ್ತಾಗದ ಸಂಗತಿಯೇನಲ್ಲ. ಅದಕ್ಕೆ ಷಿ ಜಿನ್ಪಿಂಗ್ ಇಡಿಯ ರಾಜತಾಂತ್ರಿಕ ರಣನೀತಿಯನ್ನು ಬದಲಾಯಿಸಿಕೊಳ್ಳುವ ಯೋಚನೆ ಮಾಡುತ್ತಿದ್ದಾನೆ. ಹಷರ್್ಪಂತ್ ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್ನಲ್ಲಿ ಬರೆದಿರುವ ಲೇಖನದಲ್ಲಿ ಈ ರಾಜತಾಂತ್ರಿಕ ಬದಲಾವಣೆಯ ಕುರಿತಂತೆ ಗಮನ ಸೆಳೆದಿದ್ದಾರೆ. ‘ಎಲ್ಲರೂ ನಂಬಬಹುದಾದ, ಪ್ರೀತಿಸಬಹುದಾದ, ಗೌರವಿಸಬಹುದಾದ ರಾಷ್ಟ್ರ ಚೀನಾ’ ಎಂಬಂತೆ ತಮ್ಮ ನಡೆಯನ್ನು ಪುನರ್ ರೂಪಿಸಿಕೊಳ್ಳಲು ಯೋಜಿಸುತ್ತಿರುವ ಸಂಗತಿಯನ್ನು ಅವರು ಉಲ್ಲೇಖಿಸಿದ್ದಾರೆ. ಆದರೆ ಇದು ಅಷ್ಟು ಸುಲಭವೇನು? ಭಯಾನಕ ಕೊವಿಡ್ ಮಹಾಮಾರಿಯನ್ನು ಜಗತ್ತಿಗೆ ಹಂಚಿ ಆನಂದಿಸುತ್ತಿರುವ ರಾಷ್ಟ್ರವೊಂದನ್ನು ಸದ್ಯದಮಟ್ಟಿಗಂತೂ ಮತ್ತೆ ಒಪ್ಪಿಕೊಳ್ಳುವುದು ಬಲುಕಷ್ಟ. ಈ ಬಾರಿ ಚೀನಾಕ್ಕೆ ಅಪಘಾತವಾದರೆ ಬೇರೆ ಯಾರೂ ಕಾರಣರಲ್ಲ, ಅದರ ಅವಸರವೇ ಕಾರಣ!

ಗುದ್ದಾಡಿ ಮಂತ್ರಿಯಾಗುವುದಕ್ಕಿಂತ ಕನಸು ಕಟ್ಟಿ ಹೃದಯ ಆಳುವುದು ಲೇಸು!

ಗುದ್ದಾಡಿ ಮಂತ್ರಿಯಾಗುವುದಕ್ಕಿಂತ ಕನಸು ಕಟ್ಟಿ ಹೃದಯ ಆಳುವುದು ಲೇಸು!


ರಾಜಕೀಯದ ಕಲಸುಮೇಲೋಗರದಲ್ಲಿ ನಾವೊಂದು ಸುದ್ದಿಯನ್ನು ಗುರುತಿಸದೇ ಅವಗಣನೆ ಮಾಡಿಬಿಟ್ಟಿದ್ದೇವೆ. ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಶೋಧಕರ ದೃಷ್ಟಿಯಿಂದ ಜಗತ್ತಿನ ನಂಬರ್ ಒನ್ ಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ. ಶೈಕ್ಷಣಿಕ ಖ್ಯಾತಿ, ಸಂಸ್ಥೆಯ ಆಧಾರಸ್ತಂಭಗಳು, ಅಧ್ಯಾಪಕರು-ವಿದ್ಯಾಥರ್ಿಯ ಅನುಪಾತ, ಅಂತರ್ರಾಷ್ಟ್ರೀಯ ಅಧ್ಯಾಪಕ-ವಿದ್ಯಾಥರ್ಿಗಳ ಅನುಪಾತ, ಪ್ರತಿ ಅಧ್ಯಾಪಕರ ಸಂಶೋಧನಾ ಲೇಖನಗಳ ಉದ್ಧರಣೆಯ ಅನುಪಾತ ಇವುಗಳ ಆಧಾರದ ಮೇಲೆ ಕ್ವಾಕರಲಿ ಸೈಮಂಡ್ಸ್ ಸಂಸ್ಥೆ ಈ ರ್ಯಾಂಕಿಂಗ್ ಅನ್ನು ಪ್ರಕಟಿಸುತ್ತದೆ. ಐಐಎಸ್ಸಿಯಲ್ಲಿರುವ ಪ್ರಾಧ್ಯಾಪಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತ ಪಡಿಸಿರುವ ಪ್ರಬಂಧಗಳ ಉದ್ಧರಣೆ ಜಾಗತಿಕ ಮಟ್ಟದಲ್ಲಿ ಆಗಿರುವ ಲೆಕ್ಕಾಚಾರದ ಆಧಾರದ ಮೇಲೆ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದು ನಿಜಕ್ಕೂ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿಯೇ. ಈ ಸಂಸ್ಥೆಗೆ ಆಧಾರಭೂತವಾಗಿರುವ ಕನರ್ಾಟಕಕ್ಕೆ ಇನ್ನೂ ಹೆಚ್ಚಿನ ಹೆಮ್ಮೆ. ಕರೋನಾದ ನಡುವೆಯೂ ನಾವು ಬಲುವಾಗಿ ಸಂಭ್ರಮಿಸಬೇಕಾಗಿದ್ದ ಸಂಗತಿಯಾಗಿತ್ತು ಇದು. ಆದರೆ ಸಿನಿಮಾ, ಕ್ರಿಕೆಟು, ರಾಜಕೀಯಗಳಿಗೆ ಕೊಡುವಷ್ಟು ಸ್ಥಳ ನಾವು ವೈಜ್ಞಾನಿಕ ಸಂಸ್ಥೆಗಳಿಗೆ ಕೊಡುವುದಿಲ್ಲವಾದ್ದರಿಂದ ಈ ವಿಚಾರ ಮೂಲೆಗುಂಪಾಯ್ತು ಅಷ್ಟೇ.


ಇಷ್ಟಕ್ಕೂ ಐಐಎಸ್ಸಿಯ ಕಥೆ ಬಲುರೋಚಕವಾದ್ದು. 1893ರ ಮೇ 31. ಯೊಕೊಹಮಾದಿಂದ ವ್ಯಾಂಕೊವರ್ ಸಾಗುತ್ತಿದ್ದ ಹಡಗೊಂದರಲ್ಲಿ ಭಾರತದ ಇಬ್ಬರು ದಿಗ್ಗಜರು ಕುಳಿತಿದ್ದರು. ಮೇಲ್ನೋಟಕ್ಕೆ ಇಬ್ಬರದ್ದೂ ಭಿನ್ನ ಮಾರ್ಗವೇ. ಒಬ್ಬರು ಉದ್ದಿಮೆದಾರರಾಗಿ ಹೊರ ಪ್ರಪಂಚದಲ್ಲಿ ತಮ್ಮ ಸಾಮಥ್ರ್ಯವನ್ನು ಬೆಳೆಸಿಕೊಳ್ಳುತ್ತಾ ನಡೆದಿದ್ದರೆ, ಮತ್ತೊಬ್ಬರು ಆಧ್ಯಾತ್ಮಿಕ ಸಾಧಕರಾಗಿ ಅಂತರಂಗದ ಶಕ್ತಿಯನ್ನು ಅನಾವರಣಗೊಳಿಸುತ್ತಾ ನಡೆದಿದ್ದವರು. ಇಬ್ಬರಲ್ಲೂ ಇದ್ದ ಸಾಮಾನ್ಯ ಸಂಗತಿ ಉತ್ಕಟ ಭಾರತಪ್ರೇಮವೊಂದೇ. ಹೀಗಾಗಿಯೇ ಇಬ್ಬರಲ್ಲೂ ಸ್ನೇಹ ಹುಟ್ಟಿತು, ಸುದೀರ್ಘ ಮಾತುಕತೆಯೂ ನಡೆಯಿತು. ಹಾಗೆ ಭೇಟಿಯಾಗಿ ಐತಿಹಾಸಿಕ ದಾಖಲೆಗೆ ಕಾರಣವಾದ ಆ ಇಬ್ಬರು ಯಾರು ಗೊತ್ತೇ? ಒಬ್ಬರು ಜಮ್ಶೆಡ್ಜಿ ಟಾಟಾ, ಮತ್ತೊಬ್ಬರು ಸ್ವಾಮಿ ವಿವೇಕಾನಂದ! ಈ ಇಬ್ಬರೂ ಈ ಹಿಂದೆಯೂ ಭೇಟಿಯಾಗಿದ್ದಿರಬಹುದಾದ ಸಾಧ್ಯತೆಗಳಿದ್ದವಾದರೂ ಇಷ್ಟು ಸುದೀರ್ಘವಾಗಿ ಮಾತನಾಡಲು ಅವಕಾಶ ಹಿಂದೆಂದೂ ಸಿಕ್ಕಿರಲಿಲ್ಲ. ಜಮ್ಶೆಡ್ಜಿ ಭಾರತದಲ್ಲಿ ಕಾಖರ್ಾನೆಯೊಂದನ್ನು ತೆರೆಯಲು ವಿದೇಶದಿಂದ ಯಂತ್ರಗಳನ್ನು ಆಮದು ಮಾಡಿಕೊಳ್ಳುವ ಉತ್ಸುಕತೆಯಲ್ಲಿದ್ದರು. ವಿಶೇಷವಾಗಿ, ಜಪಾನಿನ ಬೆಳವಣಿಗೆ ಅವರನ್ನು ಆಕಷರ್ಿಸಿತ್ತು. ಭಾರತವನ್ನು ಔದ್ಯಮಿಕ ರಾಷ್ಟ್ರವನ್ನಾಗಿ ರೂಪಿಸಬೇಕೆಂಬ ಜಮ್ಶೆಡ್ಜಿಯವರ ಕನಸು ವಿವೇಕಾನಂದರಿಗೆ ಸಂತಸ ಕೊಟ್ಟಿತಾದರೂ ತೃಪ್ತಿಯಾಗಲಿಲ್ಲ. ವಿದೇಶದಿಂದ ಯಂತ್ರಗಳನ್ನು ಆಮದು ಮಾಡುವ ಬದಲು ಅದನ್ನು ಭಾರತದಲ್ಲೇ ನಿಮರ್ಿಸುವ ಸಂಶೋಧನಾ ಸಂಸ್ಥೆಗಳನ್ನು ಹುಟ್ಟುಹಾಕಬೇಕೆಂದು ಪ್ರೇರಣೆ ಕೊಟ್ಟರು.


ಮುಂದೆ ಸ್ವಾಮಿ ವಿವೇಕಾನಂದರು ಜಗದ್ವಿಖ್ಯಾತರಾಗಿ ಸುಮಾರು ಐದು ವರ್ಷಗಳ ನಂತರ ಭಾರತಕ್ಕೆ ಮರಳಿದರು. ಅವರು ಜಮ್ಶೆಡ್ಜಿಯವರ ಹೃದಯದೊಳಗೆ ಬಿತ್ತಿದ ಬೀಜ ಈಗ ಹೆಮ್ಮರವಾಗಿತ್ತು. ಭಾರತದಲ್ಲೇ ಸಂಶೋಧನಾ ಸಂಸ್ಥೆಯೊಂದನ್ನು ತೆರೆಯಬೇಕೆಂಬ ಅವರ ಉತ್ಕಟ ಇಚ್ಛೆಗೆ ರೂಪವೂ ಸಿಕ್ಕಿತ್ತು. ಮುಂದೇನು ಗೊತ್ತೇ? 1898ರ ನವೆಂಬರ್ ತಿಂಗಳಲ್ಲಿ ವಿವೇಕಾನಂದರಿಗೆ ಪತ್ರ ಬರೆದ ಜಮ್ಶೆಡ್ಜಿ ಈ ವೈಜ್ಞಾನಿಕ ಸಂಸ್ಥೆಯ ನೇತೃತ್ವವನ್ನು ಅವರೇ ವಹಿಸಬೇಕೆಂದು ಕೇಳಿಕೊಂಡೂಬಿಟ್ಟರು. ಆಧ್ಯಾತ್ಮದ ಹಾದಿಯಲ್ಲಿ ಹೇಗೆ ಸನ್ಯಾಸಿಗಳು ಕಠೋರವಾಗಿ ಮುಂದುವರೆಯುತ್ತಾರೋ ಅದೇ ದೃಷ್ಟಿಕೋನದಿಂದ ವಿಜ್ಞಾನ ಮಾರ್ಗದಲ್ಲೂ ಮುಂದುವರೆಯುವ ಸಮರ್ಥ ತರುಣರ ಪಡೆಯನ್ನು ಅವರೇ ಕಟ್ಟಬೇಕೆಂಬ ಬಯಕೆ ಆ ಪತ್ರದಲ್ಲಿತ್ತು. ಈ ಒಟ್ಟಾರೆ ಕಾರ್ಯವನ್ನು ಆರಂಭಿಸಲು ಜನಜಾಗೃತಿ ಮೂಡಿಸಬಲ್ಲ ಒಂದು ಕರಪತ್ರವನ್ನು ರಚಿಸಿಕೊಡಬೇಕೆಂಬ ಬಯಕೆ ವ್ಯಕ್ತಪಡಿಸಿದ ಜಮ್ಶೆಡ್ಜಿ ಅದನ್ನು ಮುದ್ರಿಸುವ ಜವಾಬ್ದಾರಿ ಹೊರುವ ಭರವಸೆ ಕೊಟ್ಟಿದ್ದರು. ಈ ಪತ್ರಕ್ಕೆ ವಿವೇಕಾನಂದರು ನೇರವಾಗಿ ಉತ್ತರಿಸಿದಂತೆ ಕಂಡುಬರುವುದಿಲ್ಲವಾದರೂ ಈ ಅವಕಾಶವನ್ನು ಅವರು ಒಪ್ಪಿಕೊಳ್ಳಲಿಲ್ಲ ಎನ್ನುವುದಂತೂ ಖಾತ್ರಿ. ಆದರೆ ತಮ್ಮ ಮಾನಸಪುತ್ರಿಯಾಗಿದ್ದ ನಿವೇದಿತಾಳನ್ನು ಈ ಕಾರ್ಯ ಸಫಲಗೊಳ್ಳುವುದಕ್ಕೆ ಸಹಕರಿಸುವಂತೆ ಬಿಟ್ಟುಕೊಟ್ಟರು. ಇತ್ತ ಜಮ್ಶೆಡ್ಜಿ ವೈಸ್ರಾಯ್ ಕರ್ಜನ್ನನ್ನು ಭೇಟಿ ಮಾಡಿ ಈ ಸಂಸ್ಥೆಗೆ ಅನುಮತಿ ಕೇಳಿದರು. ಭಾರತೀಯರನ್ನು ಕಾಲಕಸದಂತೆ ಕಾಣುತ್ತಿದ್ದ ಬಿಳಿಯರು ಈ ಬಗೆಯ ವೈಜ್ಞಾನಿಕ ಮನೋಭಾವ ಭಾರತೀಯರಿಗಿರುವುದು ಸಾಧ್ಯವೇ ಇಲ್ಲ ಎಂದು ನಂಬಿಬಿಟ್ಟಿದ್ದರು. ಇದನ್ನರಿತ ನಿವೇದಿತಾ ಅನೇಕ ಇಂಗ್ಲೀಷ್ ಪತ್ರಿಕೆಗಳಲ್ಲಿ ಈ ಕುರಿತಂತೆ ಲೇಖನಗಳನ್ನು ಬರೆಯುತ್ತಾ, ಜಮ್ಶೆಡ್ಜಿಯವರ ಸಾಹಸದ ಪ್ರಯತ್ನವನ್ನು ಕೊಂಡಾಡಿದಳು. ಅದರ ಪ್ರಯತ್ನವಾಗಿಯೇ ಸಕರ್ಾರ ಸರ್ ವಿಲಿಯಮ್ ರಾಮ್ಸೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವರದಿ ಕೊಡುವಂತೆ ಕೇಳಿಕೊಂಡಿತು. ಆತ ಕೂಡ ಬಲು ಧನಾತ್ಮಕವಾಗಿಯೇನೂ ಪ್ರತಿಕ್ರಿಯಿಸಲಿಲ್ಲ. ಪರಿಣಾಮ ಸ್ವರೂಪವಾಗಿ ಸಕರ್ಾರ ಇದಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ತನಗೆ ಒಪ್ಪಿಸಿ ಸುಮ್ಮನಾಗುವಂತೆ ಟಾಟಾ ಅವರಿಗೆ ತಾಕೀತು ಮಾಡಿತು. ಮರುವರ್ಷ ನಿವೇದಿತಾ ಈ ವಿಚಾರವನ್ನು ಲಂಡನ್ನಲ್ಲಿ ಎತ್ತಿ ಅನೇಕ ಪ್ರಮುಖ ಶಿಕ್ಷಣತಜ್ಞರನ್ನೂ ಭೇಟಿ ಮಾಡಿದಳು. ಆದರೆ ಅಧಿಕಾರ ವರ್ಗದಲ್ಲಿದ್ದವರ ಪ್ರತಿಕ್ರಿಯೆ ಆಕೆಯನ್ನು ಕೆರಳಿಸಿಬಿಟ್ಟಿತ್ತು. ಜನಸಾಮಾನ್ಯರ ಜಾಗೃತಿ ಇದಕ್ಕೆ ಪರಿಹಾರವಾಗಬಲ್ಲದೆಂದು ಭಾವಿಸಿ ತನಗೆ ಪರಿಚಯವಿದ್ದ ಖ್ಯಾತನಾಮ ತಜ್ಞರನ್ನೆಲ್ಲ ಮಾತನಾಡಿಸಿ ಜನಾಭಿಪ್ರಾಯ ರೂಪಿಸುವ ಪ್ರಯತ್ನವನ್ನೂ ಮಾಡಿದಳು. ಈ ವೇಳೆಗೆ ವಿವೇಕಾನಂದರ ದೇಹತ್ಯಾಗವಾಯ್ತು. ಅದಾದ ಎರಡು ವರ್ಷಗಳಲ್ಲೇ ಜಮ್ಶೆಡ್ಜಿಯವರೂ ದೇಹಬಿಟ್ಟರು. ಅವರೀರ್ವರ ಕನಸುಗಳು ನಿವೇದಿತೆಯ ಒಳಗೆ ಹೆಮ್ಮರವಾಗಿ ಬೆಳೆದುಬಿಟ್ಟಿದ್ದವಲ್ಲ, ಆಕೆಯ ಹಠ ಕೊನೆಗೂ ಗೆದ್ದಿತು. 1909ರಲ್ಲಿ ಕರ್ಜನ್ ಸ್ಥಾನಕ್ಕೆ ಮಿಂಟೊ ಬಂದೊಡನೆ ಈ ಯೋಜನೆಗೆ ಮತ್ತೆ ಜೀವಬಂತು. ಟಾಟಾ ಅವರಿಗೆ ಈ ಸಂಸ್ಥೆ ಮುಂಬೈನಲ್ಲಿರಬೇಕೆಂಬ ಬಯಕೆ ಇತ್ತಾದರೂ ವಿಜ್ಞಾನದ ಬೆಳವಣಿಗೆಗಳನ್ನು ಆಸ್ಥೆಯಿಂದ ಗೌರವಿಸುತ್ತಿದ್ದ ಮೈಸೂರಿನ ಮಹಾರಾಜರು 370 ಎಕರೆ ಭೂಮಿಯನ್ನು ಸಂಸ್ಥೆಗಾಗಿ ಕೊಡುತ್ತೇನೆಂದಾಗ ಇಲ್ಲವೆನ್ನಲಾಗಲಿಲ್ಲ. ಇಷ್ಟಕ್ಕೂ ಮೈಸೂರಿಗೂ ಮತ್ತು ವಿವೇಕಾನಂದರಿಗೂ ಅವಿನಾಭಾವ ನಂಟಿತ್ತಲ್ಲ ಅದನ್ನು ಈ ನೆಪದಲ್ಲಿ ಮುಂದುವರಿಸಲಾಗಿತ್ತು ಅಷ್ಟೇ. ಅಲ್ಲಿಂದಾಚೆಗೆ ಹಂತ-ಹಂತವಾಗಿ ಈ ಸಂಸ್ಥೆ ಬೆಳೆಯುತ್ತಾ ಹೋಯ್ತು. ಇಂಗ್ಲೆಂಡಿನ ರಸಾಯನ ತಜ್ಞ ಮೊರಿಸ್ ಟ್ರಾವಸರ್್ ಆರಂಭದಲ್ಲಿ ಇದರ ನೇತೃತ್ವವನ್ನು ವಹಿಸಿದರೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್.ಸಿ.ವಿ ರಾಮನ್ ಇದರ ಮೊದಲ ಭಾರತೀಯ ನಿದರ್ೇಶಕರಾದರು. ಇಸ್ರೊದ ಮುಖ್ಯಸ್ಥರಾದ ಶಿವನ್, ಭಾರತ ಸಕರ್ಾರಕ್ಕೆ ವೈಜ್ಞಾನಿಕ ಸಲಹೆಗಾರರಾಗಿದ್ದ ಚಿದಂಬರಂ, ಖ್ಯಾತ ಭೌತಶಾಸ್ತ್ರಜ್ಞ ರಾಮಚಂದ್ರನ್, ಇನ್ಫೋಸಿಸ್ ಫೌಂಡೇಶನ್ನ ಸುಧಾಮೂತರ್ಿ ಇಂಥವರೆಲ್ಲ ಈ ಸಂಸ್ಥೆಯ ಹಳೆಯ ವಿದ್ಯಾಥರ್ಿಗಳು. ಈ ಸಂಸ್ಥೆಯಲ್ಲಿ ನಿದರ್ೇಶಕರಾಗಿದ್ದ ಸಿ.ವಿ ರಾಮನ್ ಮತ್ತು ಸಿ.ಎನ್.ಆರ್. ರಾವ್ ಅವರು ರಾಷ್ಟ್ರದ ಅತ್ಯುನ್ನತ ಗೌರವ ಭಾರತರತ್ನದಿಂದ ಪುರಸ್ಕೃತರು. ಇಲ್ಲಿನ ಕೆಲವು ಪ್ರಾಧ್ಯಾಪಕರು ರಾಯಲ್ ಸೊಸೈಟಿಯ ಸದಸ್ಯರಾಗಿದ್ದರೆ ನೂರಾರು ಮಂದಿ ಶಾಂತಿಸ್ವರೂಪ್ ಭಟ್ನಾಕರ್ ಪ್ರಶಸ್ತಿ ಪಡೆದವರಾಗಿದ್ದಾರೆ. ಭಾರತದ ಹೆಮ್ಮೆ ಇದು. ನಮ್ಮ ಪಾಲಿಗೆ ಕಿರೀಟದ ಗರಿ!


ಇಷ್ಟನ್ನೂ ವಿಷದವಾಗಿ ಹೇಳುತ್ತಿರುವುದೇಕೆಂದರೆ ಕನರ್ಾಟಕಕ್ಕೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅನೇಕ ಕಾರಣಗಳಿವೆ. ಐಟಿ-ಬಿಟಿ ಕ್ಷೇತ್ರದಲ್ಲಿ ನಾವು ಇಡಿಯ ರಾಷ್ಟ್ರದಲ್ಲಿ ಅಗ್ರಣಿಗಳು, ಜಾಗತಿಕ ಮಟ್ಟದಲ್ಲೂ ಬೆಂಗಳೂರಿಗೆ ಅಪಾರವಾದ ಗೌರವ ಇದೆ, ಸಂಶೋಧನಾ ಕ್ಷೇತ್ರವಿರಲಿ ಅಥವಾ ಸಂಶೋಧನೆಯನ್ನು ಉತ್ಪಾದನೆಯನ್ನಾಗಿ ಪರಿವತರ್ಿಸುವ ವಿಚಾರವಿರಲಿ ರಾಷ್ಟ್ರ ನಮ್ಮೆಡೆಗೆ ತಿರುಗಿ ನೋಡಲೇಬೇಕು. ಚಂದ್ರಯಾನ ಮಾಡಿದರೂ ಅದರಲ್ಲಿ ಬೆಂಗಳೂರಿನ ಪಾತ್ರವಿದೆ. ಉಪಗ್ರಹವೊಂದು ಕಕ್ಷೆಗೆ ಹಾರಿ ಬೆರಗುಗೊಳಿಸಿದರೂ ಅಲ್ಲಿ ನಮ್ಮ ಶ್ರಮವಿದೆ. ಭಾರತದಲ್ಲೇ ನಿಮರ್ಿಸಿದ ಯುದ್ಧವಿಮಾನ ಗಡಿಯಲ್ಲಿ ಹಾರಾಡಿದರೆ ಅಲ್ಲಿ ಕನರ್ಾಟಕದ ಸುಗಂಧವಿದೆ ಮತ್ತು ದೇಶದ ಯಾವ ಮೂಲೆಯಲ್ಲಿ ಬಳಸುವ ಸಾಫ್ಟ್ವೇರ್ ಆಧಾರಿತ ತಂತ್ರಜ್ಞಾನದಲ್ಲೂ ನಮ್ಮ ಸ್ಪರ್ಶವಿದೆ. ಹೀಗಾಗಿಯೇ ಜಾಗತಿಕ ಮಟ್ಟದಲ್ಲಿ ಯಾವ ಹೊಸ ಅನ್ವೇಷಣೆಗಳು ನಡೆದರೂ ಭಾರತದಲ್ಲಿ ಎಲ್ಲರಿಗಿಂತಲೂ ಹೆಚ್ಚು ಸತರ್ಕವಾಗಿರಬೇಕಾದದ್ದು ನಾವೇ. ಕಳೆದ ಕೆಲವಾರು ದಶಕಗಳಿಂದ ಆಡಳಿತದ ಮಗ್ಗುಲಿಂದ ನೋಡಿದರೆ ಈ ವಿಚಾರದಲ್ಲಿ ಸೋತುಹೋಗಿದ್ದೇವೆ! ಬಹುಶಃ ಕನರ್ಾಟಕದಲ್ಲಿ ಎಲ್ಲಕ್ಕಿಂತ ಹೆಚ್ಚು ಅವಜ್ಞೆಗೆ ಒಳಗಾಗಿರುವ ಕ್ಷೇತ್ರವೇ ವಿಜ್ಞಾನ ಮತ್ತು ತಂತ್ರಜ್ಞಾನ. ಹಾಗೇ ಸುಮ್ಮನೆ ಆಲೋಚಿಸಿ ನೋಡಿ. ಕರೋನಾ ಇಡಿಯ ದೇಶವನ್ನು ಆಕ್ರಮಿಸಿಕೊಂಡಿದ್ದಾಗ ಎಲ್ಲೆಡೆ ಶಾಲೆಗಳು ಮುಚ್ಚಲ್ಪಟ್ಟವು. ಮಕ್ಕಳಿಗೆ ಮನೆಯಲ್ಲೇ ಪಾಠ ಕಲಿಸಿಕೊಡಬಲ್ಲ ತಂತ್ರಜ್ಞಾನ ಆಧಾರಿತ ಹೊಸ ಆಲೋಚನೆಯನ್ನು ರೂಪಿಸಬೇಕಾದ ಹೊಣೆಗಾರಿಕೆ ನಮ್ಮದ್ದೇ ಆಗಿತ್ತು. ನಾವು ಸೋತುಹೋದೆವು. ಹೋಗಲಿ, ಸ್ವತಃ ಪ್ರಧಾನಮಂತ್ರಿಯವರೇ ಈ ಬಾರಿಯ ಪರೀಕ್ಷೆಗಳನ್ನು ರದ್ದುಗೊಳಿಸುವ ಅನಿವಾರ್ಯದ ನಿರ್ಣಯವನ್ನು ಪ್ರಕಟಿಸಿದರಲ್ಲ, ಆಗಲಾದರೂ ತಂತ್ರಜ್ಞಾನದ ನಾಡು ಬೆಂಗಳೂರು ಪರೀಕ್ಷೆಗಳನ್ನು ನಡೆಸುವ ಹೊಸ ಮಾರ್ಗಗಳನ್ನು ರಾಷ್ಟ್ರಕ್ಕೆ ಪರಿಚಯಿಸಿತೇ? ಶಿಕ್ಷಣ ಕ್ಷೇತ್ರಕ್ಕೊಬ್ಬರು ಸಚಿವರಿದ್ದಾರೆ, ಉನ್ನತ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನಗಳಿಗೂ ಸಚಿವರಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈ ದೃಷ್ಟಿಯಿಂದ ಇವರುಗಳು ನಡೆಸಿರುವ ಪ್ರಯತ್ನವಾದರೂ ಏನು? ನಿಜ ಕರೋನಾ ಎಲ್ಲವನ್ನೂ ನುಂಗಿಬಿಟ್ಟಿತು. ಆದರೆ ಇದೇ ಕರೋನಾ ನಮಗೆ ರಾಷ್ಟ್ರಕ್ಕೆ ಮಾರ್ಗದರ್ಶಕವಾಗಿ ನಿಲ್ಲುವಂತಹ ಅವಕಾಶವನ್ನು ಒದಗಿಸಿಕೊಟ್ಟಿತ್ತಲ್ಲ, ಕೈಚೆಲ್ಲಿಬಿಟ್ಟೆವಲ್ಲ. ನಮ್ಮ ಶಿಕ್ಷಣ ಇಲಾಖೆಗಳು ಎಷ್ಟು ಹಿಂದುಳಿದಿವೆ ಎಂದರೆ ಖಾಸಗಿ ಶಿಕ್ಷಕರ ಪಟ್ಟಿಯಾಗಲೀ ಅವರ ಅಕೌಂಟು ವಿವರಗಳಾಗಲೀ ಸಕರ್ಾರದ ಬಳಿಯಿಲ್ಲ. ಮುಖ್ಯಮಂತ್ರಿಗಳು ಖಾಸಗಿ ಶಿಕ್ಷಕರುಗಳಿಗೆ 5000 ರೂಪಾಯಿ ಘೋಷಣೆ ಮಾಡಿದಾಗ ಆಟೋ ಚಾಲಕರು ಪರಿಹಾರಕ್ಕಾಗಿ ಅಜರ್ಿ ಸಲ್ಲಿಸುವಂತೆ ಶಿಕ್ಷಕರುಗಳೂ ಸಲ್ಲಿಸಬೇಕಾದ ಪರಿಸ್ಥಿತಿ ನಿಮರ್ಾಣಮಾಡಿಕೊಂಡಿದೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಮುಂದುವರೆದಿದ್ದೇವೆಂದು ಬಡಾಯಿ ಕೊಚ್ಚಿಕೊಳ್ಳುವ ನಮಗಿದು ಅವಮಾನಕರವಲ್ಲವೇನು?


ಇಷ್ಟೇ ಅಲ್ಲ, ಜಗತ್ತೆಲ್ಲಾ ಈಗ ಕೃತಕ ಬುದ್ಧಿಮತ್ತೆ- ಆಟರ್ಿಫೀಶಿಯಲ್ ಇಂಟೆಲಿಜೆನ್ಸ್-ನ ಹಿಂದೆ ಓಡುತ್ತಿದೆ. ನಾವು ಇನ್ನೂ ತೆವಳುವುದಕ್ಕೂ ಆರಂಭಿಸಿಲ್ಲ. 2030ರ ವೇಳೆಗೆ ಈ ಕ್ಷೇತ್ರದಲ್ಲಿ ಉತ್ಪಾದನೆಯಾಗುವ ಬಹುಪಾಲು ಸಂಪತ್ತಿನ ಮೇಲೆ ಚೀನಾದ್ದೇ ಒಡೆತನ ಇರಲಿದೆ. ಪ್ರೈಸ್ ವಾಟರ್ಹೌಸ್ ಕೂಪಸರ್್ನ ಅಧ್ಯಯನದ ಪ್ರಕಾರ ಆ ವೇಳೆಗೆ ಈ ಕ್ಷೇತ್ರದಲ್ಲಿ ಚೀನಾದ ಜಿಡಿಪಿ ಏಳು ಟ್ರಿಲಿಯನ್ ಡಾಲರ್ಗಳಷ್ಟಾಗಲಿದೆ. ಆಫ್ರಿಕಾ, ದಕ್ಷಿಣ ಏಷ್ಯಾ, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳೊಂದಿಗೆ ಸೇರಿ ನಾವು 1.2 ಟ್ರಿಲಿಯನ್ ಡಾಲರ್ಗಳಷ್ಟು ಜಿಡಿಪಿಯನ್ನು ಹಂಚಿಕೊಳ್ಳಲಿದ್ದೇವೆ. ಎಐ ಕ್ಷೇತ್ರದಲ್ಲಿ ಚೀನಾ, ಅಮೇರಿಕಾ ಮತ್ತು ಜಪಾನ್ಗಳು ಶೇಕಡಾ 78% ರಷ್ಟು ಪೇಟೆಂಟ್ಗಳನ್ನು ದಾಖಲಿಸಿವೆ. ಚೀನಾ ಈ ಕ್ಷೇತ್ರಕ್ಕಾಗಿ ಜಗತ್ತಿನ ಅರ್ಧದಷ್ಟನ್ನು ತಾನೇ ವ್ಯಯಿಸುತ್ತಿದೆ. ಕಳೆದ ಒಂದು ದಶಕದಲ್ಲಿ ನಮ್ಮ ಕಣ್ಣೆದುರಿಗೆ ಚೀನಾ ಬೆಳೆಯುತ್ತಿರುವ ವೇಗವಿದೆಯಲ್ಲ, ಅದು ಅನೂಹ್ಯವಾದ್ದು. ನಾವಿನ್ನೂ ಮುಖ್ಯಮಂತ್ರಿ ಪಟ್ಟ ತನಗೇಕೆ ಸಿಗಲಿಲ್ಲ ಎಂಬ ಕದನ-ಕಾದಾಟಗಳಲ್ಲೇ ಮುಳುಗಿಹೋಗಿಬಿಟ್ಟಿದ್ದೇವೆ!


ಕರೋನಾ ಎರಡನೇ ಅಲೆ ಮುಗಿದುಹೋಗಿದೆ. ಇನ್ನೇನಿದ್ದರೂ ಮೂರನೇ ಅಲೆಯ ತಯಾರಿಯಷ್ಟೇ. ಅದು ಬರುವುದು ಖಾತ್ರಿ. ಹೀಗಿರುವಾಗ ನಾವು ಅದಕ್ಕಾಗಿಯೇ ಅಳುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮ ದೌರ್ಬಲ್ಯದ ಕುರಿತಂತೆ ಚಿಂತಿಸುತ್ತಾ ಕುಳಿತರೆ ನಾಡು ಕಟ್ಟಲಾಗುವುದಿಲ್ಲ. ನಮ್ಮ ಶಕ್ತಿ ಇರುವುದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ. ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವ ನಮ್ಮ ಚಾಣಾಕ್ಷತೆಯಲ್ಲಿ. ಎಲ್ಲಕ್ಕೂ ಹೆಚ್ಚು ಎಂಥದ್ದನ್ನೂ ಸಾಧಿಸಿಬಿಡಬಲ್ಲ ಸ್ವಾಭಿಮಾನೀ ಮನೋಭಾವ ಕನ್ನಡಿಗರ ಸಹಜ ಗುಣ. ಈ ಸಾಮಥ್ರ್ಯವನ್ನು ಬಳಸಿಕೊಂಡು ಹೊಸ ನಾಡಿಗೆ ಭದ್ರ ಬುನಾದಿ ಹಾಕಬೇಕಿದೆ. ಕಾದಾಡಿ ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿಬಿಡಬಹುದೇನೋ, ಆದರೆ ಪ್ರಾಮಾಣಿಕವಾಗಿ ಶುದ್ಧ ಮನಸ್ಸಿನಿಂದ ನಾಡು ಕಟ್ಟಲು ದುಡಿದರೆ ಮುಂದಿನ ಐವತ್ತು ವರ್ಷಗಳ ಕಾಲ ಜನ-ಮನದಲ್ಲಿ ರಾಜರಂತೆ ಮಿಂಚಬಹುದು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಣಿಯಾಗಿರುವುದು ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದಕ್ಕೆ ನಮಗೆ ಮಾರ್ಗಸೂಚಿ ಮಾತ್ರ. ನಾವಿನ್ನೂ ಹೆಜ್ಜೆ ಇಡಬೇಕಾಗಿದೆ ಅಷ್ಟೇ!

ಜನ ದಡ್ಡರಲ್ಲ; ಎಲ್ಲವನ್ನೂ ಗಮನಿಸುತ್ತಿದ್ದಾರೆ!

ಜನ ದಡ್ಡರಲ್ಲ; ಎಲ್ಲವನ್ನೂ ಗಮನಿಸುತ್ತಿದ್ದಾರೆ!


ಕೊವಿಡ್ ಜಗತ್ತನ್ನು ಆವರಿಸಿಕೊಳ್ಳುವಾಗ ಅಮೇರಿಕಾದಲ್ಲಿ ಚುನಾವಣೆ ಬಲು ಹತ್ತಿರದಲ್ಲಿತ್ತು. ಇದು ತೀವ್ರವಾಗಿ ಹಬ್ಬುವ ರೋಗವಾದರೂ ಈ ಹಿಂದೆ ಬಂದಂತಹ ಅನೇಕ ಸಾಂಕ್ರಾಮಿಕಗಳಿಗಿಂತ ಭಯಾನಕವಾದುದೇನೂ ಆಗಿರಲಿಲ್ಲ. ಈ ಸತ್ಯ ಟ್ರಂಪ್ಗೆ ಗೊತ್ತಿತ್ತು. ಹೀಗಾಗಿಯೇ ಆತ ಆರಂಭದಿಂದಲೂ ಕರೋನಾ ಕುರಿತಂತೆ ಅಸಡ್ಡೆಯಿಂದಲೇ ವತರ್ಿಸಿದ. ಅಲ್ಲಿನ ಪ್ರತಿಪಕ್ಷವೂ ಅದನ್ನೇ ಕಾಯುತ್ತಿತ್ತು. ಮಾಧ್ಯಮಗಳೂ ಜೊತೆಗೂಡಿದವು. ಆಮೇಲೇನು? ಅಮೇರಿಕಾ ಕರೋನಾ ಎದುರಿಸುವಲ್ಲಿ ಸೋತೇಹೋಯ್ತು ಎಂಬಂತೆ ಬಿಂಬಿಸಲಾಯ್ತು. ಇಟಲಿಯಲ್ಲಾದ ಸಾವುಗಳನ್ನು ಮುಂದಿಟ್ಟುಕೊಂಡು ಜನರನ್ನು ಹೆದರಿಸಲಾಯ್ತು. ಅಮೇರಿಕಾ ಹಿಂದೆಂದೂ ಕಾಣದಂತಹ ಆತಂಕಕ್ಕೆ ದೂಡಲ್ಪಟ್ಟಿತು. ದಿನಸಿ ಪದಾರ್ಥಗಳನ್ನು ಬಿಡಿ, ಪಾಯಿಖಾನೆಗೆ ಬೇಕಾದ ಟಾಯ್ಲೆಟ್ ಪೇಪರ್ಗಳನ್ನು ಜನ ಮನೆಯಲ್ಲಿ ಕೂಡಿಟ್ಟುಕೊಳ್ಳಲಾರಂಭಿಸಿದರು. ಒಂದೆರಡು ವರ್ಷವಾದರೂ ರಸ್ತೆಯಲ್ಲಿ ಅಡ್ಡಾಡುವುದು ಸಾಧ್ಯವಾಗುವುದಿಲ್ಲವೇನೋ ಎಂಬಂತಿತ್ತು ಅವರ ನಡವಳಿಕೆ. ಟ್ರಂಪ್ನ ಹೃದಯದ ಬೇಗುದಿ ಹೆಚ್ಚುತ್ತಲೇ ಹೋಯ್ತು. ಅದನ್ನು ಮುಚ್ಚಿಕೊಳ್ಳಲೆಂದು ಆತ ತನ್ನ ತಾನು ಗಟ್ಟಿಗನೆಂದೇ ತೋರಿಸಿಕೊಳ್ಳುತ್ತಾ ನಡೆದ. ಮೊದಲೊಂದಷ್ಟು ದಿನ ಮಾಸ್ಕ್ ಹಾಕಲಿಲ್ಲ. ಆನಂತರ ಮಾಸ್ಕ್ ಹಾಕಲಾರಂಭಿಸಿದ. ಚುನಾವಣಾ ರ್ಯಾಲಿಗಳಲ್ಲಿ ಜನರ ನಡುವೆ ತಿರುಗಾಡಲಾರಂಭಿಸಿದ. ಇದು ಜನರಿಗೆ ಧೈರ್ಯ ತುಂಬುವ ಕೆಲಸವಾಗಿದ್ದರೂ ನೆಲಮಟ್ಟದಲ್ಲಿ ಆತಂಕಕ್ಕೊಳಗಾಗಿ ಸಾಯುತ್ತಿದ್ದವರ ವರದಿ ಜೋರಾಗಿಯೇ ಬರುತ್ತಿದ್ದುದರಿಂದ ಎಷ್ಟು ವಿರೋಧ ಆತನ ವಿರುದ್ಧ ಒಗ್ಗೂಡಬೇಕಿತ್ತೋ ಅಷ್ಟೂ ಒಂದಾಗಿತ್ತು. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಎಂಬ ಆಂದೋಲನ ಇದ್ದಕ್ಕಿದ್ದಂತೆ ಎಲ್ಲಿಂದ ಹೇಗೆ ರೂಪುಗೊಂಡಿತೆಂಬುದನ್ನು ಯಾರೂ ಅರಿಯಲಾಗಲಿಲ್ಲ. ರಾಷ್ಟ್ರೀಯತೆಯ ವಿರುದ್ಧವಿದ್ದ, ಸ್ಪಷ್ಟವಾಗಿ ಹೇಳಬೇಕೆಂದರೆ ದೇಶವಿರೋಧಿ ಶಕ್ತಿಗಳೆಲ್ಲ ಒಂದಾಗಿ ಟ್ರಂಪ್ನ ವಿರುದ್ಧ ಕೆಲಸ ಮಾಡಲಾರಂಭಿಸಿದವು. ಇದು ರಾಷ್ಟ್ರೀಯವಾದಿಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಟ್ರಂಪ್ ಪರವಾಗಿ ನಿಲ್ಲುವಂತೆ ಮಾಡಿದ್ದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿಯೇ ಆತ ಚುನಾವಣೆಗೆ ಹೋದಾಗ ಹಿಂದೆಂದೂ ಊಹಿಸದಿದ್ದಷ್ಟು ಬೆಂಬಲ ಹರಿದುಬಂತು. ಎಲ್ಲೆಡೆ ಮುನ್ನಡೆ ಕಾಯ್ದುಕೊಂಡಿದ್ದ ಟ್ರಂಪ್ ರಾತ್ರಿ ಬೆಳಗಾಗುವುದರೊಳಗೆ ಸೋತೇ ಹೋದ. ಅಷ್ಟಾದರೂ ಆತನ ಧಾಷ್ಟ್ರ್ಯ ಎಷ್ಟಿತ್ತೆಂದರೆ ತಾನು ಅಧಿಕಾರವನ್ನು ಬಿಡಲೊಲ್ಲೆ ಎಂದೇ ಆತ ಹೇಳಿದ್ದ. ತನ್ನ ಅಧಿಕಾರವನ್ನು ಪುನರ್ ಸ್ಥಾಪಿಸಲು ಅವನಿಗೆ ಸಮಯವೂ ಇತ್ತು. ಆದರೆ ಆತನೇ ಮಾಡಿಕೊಂಡ ಎಡವಟ್ಟನ್ನು ಬಳಸಿಕೊಂಡ ವಿರೋಧಿ ಪಾಳಯ ಅಲ್ಲಿನ ಸಂಸತ್ ಭವನದ ಮೇಲೆ ದಾಳಿಯಾಗುವಂತೆ ನೋಡಿಕೊಂಡಿತು. ಒಂದು ರೀತಿಯಲ್ಲಿ ಅಮೇರಿಕಾದ ಮಾನ ಜಾಗತಿಕಮಟ್ಟದಲ್ಲಿ ಹರಾಜಾಗಿ ಹೋಗಿತ್ತು. ವ್ಯಕ್ತಿಯನ್ನು ವಿರೋಧಿಸುವ ಭರದಲ್ಲಿ ರಾಷ್ಟ್ರವನ್ನೇ ವಿರೋಧಿಸುವುದೆಂದರೆ ಹೀಗೆಯೇ. ಟ್ರಂಪ್ ಅನಿವಾರ್ಯವಾಗಿ ಅಧಿಕಾರ ಹಸ್ತಾಂತರಿಸಿ ಮರಳಬೇಕಾಯ್ತು. ಅವನ ವಿರುದ್ಧ ಮೊದಲು ಪತ್ರಿಕೆಯವರನ್ನು ಎತ್ತಿಕಟ್ಟಲಾಯ್ತು. ಬುದ್ಧಿಜೀವಿಗಳ ವಲಯವನ್ನು ಪ್ರಭಾವಿಸಲಾಯ್ತು, ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳು ಟ್ರಂಪ್ನನ್ನು ಸುಳ್ಳುಗಾರ ಎಂದೇ ಬಿಂಬಿಸುತ್ತಾ ನಡೆದವು. ಆತನನ್ನು ಸೋಲಿಸುವ ಧಾವಂತದಲ್ಲಿ ಕರಿಯರು, ಬಿಳಿಯರ ನಡುವೆ ಕಂದಕವನ್ನು ದೊಡ್ಡದ್ದು ಮಾಡಲಾಯ್ತು. ಕೊನೆಗೆ ಆತನನ್ನು ಕೆಳಗಿಳಿಸಬೇಕೆನ್ನುವ ತವಕದಲ್ಲಿ ಅಮೇರಿಕಾದ ಮಾನವನ್ನೂ ಹರಾಜು ಹಾಕಲಾಯ್ತು.


ಇಸ್ರೇಲ್ನ ಪ್ರಧಾನಿ ನೆತನ್ಯಾಹುದೂ ಇದೇ ಕಥೆ. ಇಸ್ರೇಲಿನ ಸೈನ್ಯದಲ್ಲಿ ಕಮ್ಯಾಂಡೊ ಕ್ಯಾಪ್ಟನ್ ಆಗಿ ಕೆಲಸ ಮಾಡಿದ ಆತ ಎಂಟೆಬೆಯಂತಹ ಅತ್ಯಪೂರ್ವ ಕಾಯರ್ಾಚರಣೆಯಲ್ಲಿ ಭಾಗವಹಿಸಿದ್ದ ಜೊನಾಥನ್ ನೆತನ್ಯಾಹುನ ಸಹೋದರ. ಹಂತ-ಹಂತವಾಗಿಯೇ ಬದುಕಿನಲ್ಲಿ ಮೇಲೇರುತ್ತಾ 1996ರಲ್ಲಿ ಪ್ರಧಾನಿ ಪದವಿಗೇರಿದವ. ಚುನಾವಣೆ ಸೋತನಂತರ ಮತ್ತೆ ಹೋರಾಡಿಯೇ ಅಧಿಕಾರವನ್ನು ಪಡೆದುಕೊಂಡವ. ಪ್ಯಾಲೆಸ್ತೇನಿನ ವಿರುದ್ಧ ಆತನ ಕಠಿಣ ನಿಲುವು ಅನೇಕ ಎಡಪಂಥೀಯರಿಗೆ ಸರಿ ಬರಲಿಲ್ಲ. ನೆತನ್ಯಾಹುವಿನ ರಾಷ್ಟ್ರವಾದಿತನ ಇವರೆಲ್ಲರಿಗೂ ಸಾಕಷ್ಟು ಕಿರಿಕಿರಿ ಉಂಟು ಮಾಡಿತ್ತು. ಆತನನ್ನು ಅಧಿಕಾರದಿಂದ ಕಿತ್ತೊಗೆಯುವ ಹಾದಿ ಹುಡುಕುತ್ತಿದ್ದರು. ಚುನಾವಣೆಗಳ ಮೇಲೆ ಚುನಾವಣೆಗಳನ್ನೆದುರಿಸಿ ಅಗತ್ಯವಿದ್ದ ಸಂಖ್ಯೆಗಿಂತ ಸ್ವಲ್ಪ ಕಡಿಮೆ ಪಡೆದುಕೊಂಡಿದ್ದ ನೆತನ್ಯಾಹುವನ್ನು ಹೇಗಾದರೂ ಸರಿಯೇ ಹೊರದಬ್ಬಬೇಕೆಂಬುದು ಅವರ ಬಯಕೆಯಾಗಿತ್ತು. ಮೊನ್ನೆ ಪ್ಯಾಲೆಸ್ತೇನಿನ ಮೇಲೆ ಇಸ್ರೇಲ್ ದಾಳಿಮಾಡಿದ ಮೇಲಂತೂ ವಿರೋಧಿಗಳೆಲ್ಲ ಒಟ್ಟಾಗಿಬಿಟ್ಟರು. ಎಷ್ಟರಮಟ್ಟಿಗೆ ಗೊತ್ತೇನು? ಅಲ್ಲಿನ ವಿರೋಧಪಕ್ಷದ ನಾಯಕ ಏರ್ ಲ್ಯಾಪಿಡ್ ಉಳಿದೆಲ್ಲ ಪಕ್ಷಗಳನ್ನು ಒಂದು ಮಾಡಿಕೊಂಡು ಈತನನ್ನು ಇಳಿಸಬೇಕೆಂದು ಪಣತೊಟ್ಟು ನಿಂತುಬಿಟ್ಟಿದ್ದಾನೆ. ನೆತನ್ಯಾಹು ವಿರುದ್ಧ ಇವರು ಕಟ್ಟಿಕೊಂಡಿರುವ ಗುಂಪಿನಲ್ಲಿ ಅರಬ್, ಇಸ್ಲಾಮಿಸ್ಟ್ ಪಕ್ಷವೂ ಸೇರಿರುವುದೇ ಇದಕ್ಕೆ ದೊಡ್ಡ ಉದಾಹರಣೆ. ಅದಾಗಲೇ ನೆತನ್ಯಾಹುವನ್ನು ಈ ರೀತಿ ಮೋಸದಿಂದ ಇಳಿಸಿದರೆ ಸ್ಥಳೀಯವಾಗಿ ದಂಗೆಗಳಾಗುವ ಸಾಧ್ಯತೆ ಇದೆ ಎಂದು ನ್ಯೂಸ್ ಏಜೆನ್ಸಿಗಳು ಎಚ್ಚರಿಸಿವೆ. ಸೋಷಿಯಲ್ ಮಿಡಿಯಾಗಳು ಈ ಬಾರಿ ನೆತನ್ಯಾಹು ವಿರುದ್ಧವಾಗಿ ತೊಡತಟ್ಟಿ ನಿಂತಿರುವುದೂ ಕಂಡು ಬರುತ್ತಿದೆ. ಸ್ವತಃ ನೆತನ್ಯಾಹುವೇ ಈ ಗುಂಪು ಅಧಿಕಾರಕ್ಕೆ ಬಂದರೆ ಇದೊಂದು ಭಯಾನಕವಾದ ಎಡಪಂಥೀಯ ಸಕರ್ಾರವಾಗಲಿದೆ ಎಂದುಬಿಟ್ಟಿದ್ದಾರೆ. ಏನೇ ಆದರೂ ಆತ ಇಳಿಯುವುದು ಖಾತ್ರಿಯೇ.


ಇಷ್ಟಕ್ಕೇ ಮುಗಿಯಲಿಲ್ಲ. ರಷ್ಯಾದ ಪುತಿನ್ನ ಮೇಲೂ ತೂಗುಕತ್ತಿ ಇದ್ದೇ ಇದೆ. ಟ್ರಂಪ್ ಮತ್ತು ಪುತಿನ್ ಘನಿಷ್ಠ ಬಾಂಧವ್ಯ ಹೊಂದಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ಟ್ರಂಪ್ ಗೆಲುವಿನಲ್ಲಿ ರಷ್ಯಾದ ಕೈವಾಡವಿದೆ ಎಂದು ಹೇಳಲಾಗುತ್ತಿತ್ತು. ಇದು ಬೈಡನ್ ಮತ್ತು ಮಿತ್ರ ಪಾಳಯದ ಗುರುತರವಾದ ಆರೋಪ ಕೂಡ. ರಷ್ಯಾ ಕಳೆದ ನಾಲ್ಕೂ ವರ್ಷಗಳಿಂದ ಇದನ್ನು ನಿರಾಕರಿಸಿಕೊಂಡೇ ಬಂದಿದೆಯಾದರೂ ತಾನು ಮುಗುಮ್ಮಾಗಿಯೇ ಉಳಿಯಿತು. ಈ ಬಾರಿ ಚುನಾವಣೆಯಲ್ಲಿ ಅಂತೂ ಇಂತು ಗೆಲುವು ಸಾಧಿಸಿದ ನಂತರ ಬೈಡನ್ ರಷ್ಯಾ ಮಾಡಿದ ತಪ್ಪಿಗೆ ಶಿಕ್ಷೆ ನೀಡಲು ಕಾತರದಿಂದಿದ್ದಾನೆನಿಸುತ್ತಿದೆ. ತೀರಾ ಇತ್ತೀಚೆಗೆ ರಷ್ಯಾದಲ್ಲಿ ಪುತಿನ್ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿರುವುದರ ವಿರುದ್ಧ ಜಿನೇವಾದಲ್ಲಿ ದನಿ ಎತ್ತುವುದಾಗಿ ಆತ ಕೊಟ್ಟಿರುವ ಹೇಳಿಕೆ ಸಂಚಲನ ಉಂಟುಮಾಡಿದೆ. ಪುತಿನ್ ಇನ್ನೂ ಸಾಕಷ್ಟು ವರ್ಷಗಳ ಕಾಲ ರಷ್ಯಾದ ಅಧ್ಯಕ್ಷನಾಗಿರುವ ನಿರ್ಣಯವನ್ನು ಅನುಮೋದಿಸಿಕೊಂಡುಬಿಟ್ಟಿದ್ದಾನೆ. ಆದರೆ ಇದು ಬದುಕಿರುವವರೆಗೂ ಅಧ್ಯಕ್ಷನೇ ಆಗಿರುವ ಶಿಜಿನ್ಪಿಂಗಿನ ಸವರ್ಾಧಿಕಾರಕ್ಕಿಂತಲೂ ವಾಸಿ. ಪುತಿನ್ ರಾಷ್ಟ್ರೀಯವಾದಿಯಾಗಿದ್ದು ರಷ್ಯಾದ ಹಿತಾಸಕ್ತಿಗಾಗಿ ಯಾವ ಹಂತಕ್ಕೆ ಹೋಗಲೂ ಸಿದ್ಧವಿರುವುದು ಎಲ್ಲರಿಗೂ ತಿಳಿದಿರುವಂಥದ್ದೇ. ಟ್ರಂಪ್ ಮತ್ತು ನೆತನ್ಯಾಹು ಇವರಿಬ್ಬರ ಹಾದಿಯಲ್ಲಿಯೇ ಪುತಿನ್ನನ್ನು ತಳ್ಳಬೇಕೆಂಬುದು ಅಂತರ್ರಾಷ್ಟ್ರೀಯ ಮಾಫಿಯಾಕೋರರ ಚಿಂತನೆ. ಹಾಗಂತ ಬೈಡನ್ನ ಹೇಳಿಕೆಯನ್ನು ರಷ್ಯಾ ಸುಮ್ಮನೆ ಸ್ವೀಕರಿಸಿದೆ ಎಂದು ಭಾವಿಸಬೇಡಿ. ‘ಈಗಾಗಲೇ ಸಾಕಷ್ಟು ಅನಪೇಕ್ಷಣೀಯ ಸಂದೇಶಗಳನ್ನು ರಷ್ಯಾದಿಂದ ಪಡೆದಿರುವ ಅಮೇರಿಕಾ ಇನ್ನು ಮುಂದೆಯೂ ಅಂಥದ್ದನ್ನು ಪಡೆಯಲಿದೆ. ನಮ್ಮ ತಂಟೆಗೆ ಬರುವಾಗ ಎಚ್ಚರದಿಂದಿರುವುದು ಒಳ್ಳೆಯದು’ ಎಂದು ಜೋರಾದ ದನಿಯಲ್ಲಿಯೇ ಹೇಳಿದೆ.


ಈ ಮೂವರ ಉದಾಹರಣೆ ಈಗೇಕೆ ಎನಿಸುತ್ತಿದೆಯೇನು? ಈ ರಾಷ್ಟ್ರೀಯವಾದಿಗಳ ಸಾಲಿನಲ್ಲೇ ಭಾರತದ ಪ್ರಧಾನಿ ನರೇಂದ್ರಮೋದಿಯೂ ಇರೋದು. ಟ್ರಂಪ್, ನೆತನ್ಯಾಹು ಮತ್ತು ಪುತಿನ್ಗೆ ಮಾಡಿದ ಎಲ್ಲ ಪ್ರಯತ್ನಗಳನ್ನು ಇವರು ಮೋದಿಗೂ ಮಾಡುತ್ತಿದ್ದಾರೆ, ಮಾಡುವವರಿದ್ದಾರೆ. ಹಾಗೆ ಸುಮ್ಮನೆ ಈ ಹಿಂದಿನ ಘಟನಾವಳಿಗಳನ್ನು ಗಮನಿಸಿ. ಅಮೇರಿಕಾದ ಸಂಸತ್ತಿನ ಮೇಲಾದ ದಾಳಿಯಂತೆಯೇ ಭಾರತದಲ್ಲೂ ರೈತ ಹೋರಾಟವನ್ನು ಸಂಘಟಿಸಿ ಕೆಂಪುಕೋಟೆಯನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಯ್ತು. ಪೊಲೀಸರು ಸ್ವಲ್ಪವಾದರೂ ಸಂಯಮ ಕಳೆದುಕೊಂಡುಬಿಟ್ಟಿದ್ದರೆ ನಾವು-ನೀವು ಊಹಿಸಲಿಕ್ಕೇ ಆಗದ ಚಿತ್ರವೊಂದು ಕಣ್ಮುಂದೆ ನಿಂತಿರುತ್ತಿತ್ತು. ಶಾಹೀನ್ಬಾಗ್ನ ಪ್ರಕರಣ ಒಂದು ರೀತಿಯಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ನಂಥದ್ದೇ. ಸಿಎಎ ಜಾರಿಗೊಳ್ಳುವುದರಿಂದ ಇಲ್ಲಿನ ಮುಸಲ್ಮಾನರಿಗೆ ಯಾವ ಸಮಸ್ಯೆ ಇಲ್ಲದೇ ಹೋದರೂ ಅವರನ್ನು ಎತ್ತಿಕಟ್ಟಿ ಪ್ರತಿಭಟನೆಗೆ ಕೂರಿಸಲಾಯ್ತು. ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಮುಸಲ್ಮಾನರ ವಿರುದ್ಧ ಶೋಷಣೆ ನಡೆಯುತ್ತಿದೆ ಎಂದು ಹೇಳಿಸುವ ಪ್ರಯತ್ನ ಅದು. ಅಮೇರಿಕಾದಲ್ಲಿ ಕರಿಯರ ಮೇಲೆ ಬಿಳಿಯರ ಶೋಷಣೆ ನಡೆಯುತ್ತಿದೆ ಎಂದು ಬಿಂಬಿಸಿದಂತೆಯೇ. ಮೋದಿಯವರ ಕಾದುನೋಡುವ ಮತ್ತು ಲೋಹ ಕಾದಾಗ ಬಡಿಯುವ ತಂತ್ರವೇ ಅವರನ್ನು ಎರಡೂ ಪ್ರಕರಣದಲ್ಲಿ ಉಳಿಸಿದ್ದು. ಸಿಎಎ ವಿಚಾರದಲ್ಲಿ ಇಡಿಯ ಭಾರತೀಯರ ಆಕ್ರೋಶ ಮುಸಲ್ಮಾನರ ವಿರುದ್ಧ ತಿರುಗಿದ್ದಲ್ಲದೇ ಸುಶಿಕ್ಷಿತ ಮುಸಲ್ಮಾನರು ತಮ್ಮದ್ದೇ ಜನರನ್ನು ವಿರೋಧಿಸಬೇಕಾದ ಅನಿವಾರ್ಯತೆ ತಂದೊಡ್ಡಿತು. ರೈತರ ಹೋರಾಟ ಒಂದು ಹಂತದಲ್ಲಿ ದೇಶವನ್ನೇ ಉರಿಸಿಬಿಡಬಲ್ಲದು ಎಂಬ ವಾತಾವರಣ ರೂಪಿಸಿದರೆ ಕೆಂಪುಕೋಟೆಯ ಪ್ರಕರಣ ಪ್ರತಿಭಟನಾಕಾರರು ರೈತರೇ ಅಲ್ಲ; ಸಾಕ್ಷಾತ್ತು ಗೂಂಡಾಗಳು ಎಂಬುದನ್ನು ಸಾಬೀತು ಪಡಿಸಿತು. ಈಗಂತೂ ಮತ್ತೊಮ್ಮೆ ಸಕರ್ಾರ ತಮ್ಮನ್ನು ಮಾತುಕತೆಗೆ ಕರೆದರೆ ಸಾಕು ಎಂದು ಈ ರೈತ ವೇಷದ ಗೂಂಡಾಗಳು ಕಾಯುತ್ತ ಕುಳಿತಿದ್ದಾರೆ. ಅತ್ತ ಈ ಕಾನೂನಿನ ಲಾಭ ಪಡೆದ ರೈತರು ಮೋದಿಯನ್ನು ಹೊಗಳಲಾರಂಭಿಸಿದ್ದಾರೆ. ಖಲಿಸ್ತಾನಿಗಳ ಬೆಂಬಲವೂ ಕಾಲಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಗೆಲುವಿನ ನಗೆ ಮೋದಿಯದ್ದೇ. ಈ ನಡುವೆಯೇ ಕಾಂಗ್ರೆಸ್ಸು ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಜಾಗತಿಕ ಮಟ್ಟದಲ್ಲಿ ಮೋದಿಯ ಹೆಸರು ಕೆಡಿಸಲು ಐದು ಲಕ್ಷಕ್ಕೂ ಹೆಚ್ಚು ಕೀಬೋಡರ್್ ವಾರಿಯರ್ಗಳನ್ನು ಗುರುತಿಸಿಕೊಂಡಿದೆ. ಅವರ ಕೆಲಸವೇನು ಗೊತ್ತೇ? ಮೋದಿ ಪರವಾಗಿ ಮಾತನಾಡುವವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ಭಾರತದಲ್ಲಿ ನಡೆಯುವ ಪ್ರತಿಯೊಂದು ವಿಚಾರವನ್ನೂ ಎಷ್ಟು ಸಾಧ್ಯವೋ ಅಷ್ಟು ಕೆಟ್ಟದ್ದಾಗಿ ಜಗತ್ತಿನ ಮುಂದೆ ಪ್ರಸ್ತುತ ಪಡಿಸುವುದು. ಅವರ ಉದ್ದೇಶವಾದರೂ ಏನು? ಆಂತರಿಕವಾಗಿ ಮೋದಿಯ ಪರವಾಗಿ ಮಾತನಾಡುವವರನ್ನೆಲ್ಲ ಹೆದರಿಸಿ ಕೂರಿಸುವುದು ಆ ಮೂಲಕ ಮೋದಿ ವಿರೋಧಿ ಅಲೆಯನ್ನು ಹಂತ-ಹಂತವಾಗಿ ಸೃಷ್ಟಿಸುವುದು. ಪ್ರಪಂಚದಲ್ಲಿ ಮೋದಿಯ ಹವಾ ಕಡಿಮೆಯಾಗುವಂತೆ ನೋಡಿಕೊಂಡು ಅವರನ್ನು ಅಧಿಕಾರದಿಂದ ಕೆಳಗಿಳಿಸಿದಾಗ ಯಾರೊಬ್ಬರೂ ಸೊಲ್ಲೆತ್ತದಂತೆ ಮಾಡುವುದು. ಸ್ಪಷ್ಟವಾಗಿ ಹೇಳಬೇಕೆಂದರೆ ಅಮೇರಿಕಾ ಮತ್ತು ಇಸ್ರೇಲ್ ಮಾದರಿಯ ಅಧಿಕಾರ ಕಸಿಯುವ ಯತ್ನ ಅದು. ಕರೋನಾ ಕಾಲಘಟ್ಟದಲ್ಲಿ ಕಾಂಗ್ರೆಸ್ಸು ಇಲ್ಲಿ ವತರ್ಿಸಿದ ರೀತಿಯನ್ನು ನೋಡಿದರೆ ಎಂಥವನಿಗೂ ಇದನ್ನು ಅಲ್ಲಗಳೆಯಲಾಗದು. ಕರೋನಾ ನಿರ್ವಹಣೆಯಲ್ಲಿ ಮೋದಿ ಸೋತರು ಎಂಬುದನ್ನು ಜನರಿಗೆ ಬಿಂಬಿಸಲು ಕಾಂಗ್ರೆಸ್ ಹೆಣಗಾಡಿದ ರೀತಿ ಹಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಮತ್ತು ಅವರ ಪರವಾಗಿರುವವರ ವಿರುದ್ಧ ಬೈಗುಳಗಳ ಸುರಿಮಳೆಯೇ ನಡೆದಿತ್ತು. ಅದರ ಹಿಂದು-ಹಿಂದೆಯೇ ಆಕ್ಸಿಜೆನ್, ವ್ಯಾಕ್ಸಿನ್ಗಳ ವಿಚಾರದಲ್ಲಿ ಮೋದಿ ಸಂಪೂರ್ಣ ಸೋತಿದ್ದಾರೆ ಎಂದು ಬಿಂಬಿಸುವ ಪ್ರಯತ್ನವನ್ನೂ ಮಾಡಲಾಯ್ತು. ಆದರೆ ಒಂದಂತೂ ಸತ್ಯ. ಈ ದೇಶಕ್ಕೆ ನರೇಂದ್ರಮೋದಿಯವರ ಮೇಲೆ ಅದೆಂತಹ ವಿಶ್ವಾಸವಿದೆಯೆಂದರೆ ಐದು ಲಕ್ಷ ಜನ ಬಾಡಿಗೆ ಬಂಟರು ಹಗಲು-ರಾತ್ರಿ ದೂಷಿಸುತ್ತಿದ್ದರೂ ಜನಸಾಮಾನ್ಯರು ಮೋದಿಯ ವಿರುದ್ಧ ಬೀದಿಗೆ ಬರಲಿಲ್ಲ. ಉಲ್ಟಾ ಮೋದಿ ಅಧಿಕಾರದಲ್ಲಿರುವುದರಿಂದಲೇ ತಾವು ಇಷ್ಟರಮಟ್ಟಿಗಾದರೂ ಉಳಿದುಕೊಂಡೆವು ಎಂದೇ ಮಾತನಾಡಿಕೊಂಡರು. ಕರೋನಾ ನಿರ್ವಹಣೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂದವರು ಹೇಳುತ್ತಾರಾದರೂ ಅದು ಮುಂದೆ ನಡೆಯುವ ಚುನಾವಣೆಯಲ್ಲಿ ಮೋದಿಯ ವಿರುದ್ಧ ಮತ ಹಾಕಲಂತೂ ಸಾಕಾಗಲಾರದು.


ಇಷ್ಟೆಲ್ಲಾ ನಡೆಯುತ್ತಿರೋದು ಏಕೆ ಗೊತ್ತಾ? ಜಗತ್ತಿನ ಬಲುದೊಡ್ಡ ಸಿರಿವಂತರಲ್ಲಿ ಒಬ್ಬನಾಗಿರುವ ಜಾಜರ್್ ಸೊರೋಸ್ ದಾವೋಸ್ನಲ್ಲಿ ಆಥರ್ಿಕ ಶೃಂಗ ನಡೆದಾಗಲೇ ಹೇಳಿದ್ದ, ‘ಮೋದಿ ರಾಷ್ಟ್ರೀಯವಾದಿಯಾಗಿದ್ದು ಆತ ಜಗತ್ತಿನ ಹಿತಾಸಕ್ತಿಗಳಿಗೆ ವಿರೋಧಿಯಾಗಿದ್ದಾನೆ’ ಅಂತ. ಇಂತಹ ರಾಷ್ಟ್ರೀಯವಾದಿಗಳನ್ನೆಲ್ಲಾ ಹೇಗಾದರೂ ಇಳಿಸಬೇಕೆಂಬುದೇ ಆತನ ಮಾತಿನ ಮಥಿತಾರ್ಥವಾಗಿತ್ತು. ದೇಶವಿರೋಧಿಯಾಗಿರುವ ಅನೇಕ ಭಾರತೀಯ ಎನ್ಜಿಒಗಳಿಗೆ, ಮಾಧ್ಯಮಗಳಿಗೆ ಆತ ಹಣ ಸುರಿದಿದ್ದಾನೆ. ಸತ್ತಂತಿದ್ದ ಕಾಂಗ್ರೆಸ್ಸು ಇದ್ದಕ್ಕಿದ್ದಂತೆ ಚಿಗಿತು ನಿಲ್ಲಲು ಆತನೇ ಕಾರಣ. ಆದರೆ ದುರದೃಷ್ಟವೇನು ಗೊತ್ತೇ? ಮೋದಿಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ಸು ಆಕ್ಸಿಜೆನ್ ಜನರಿಗೆ ಸಿಗದಂತೆ ದಾಸ್ತಾನು ಮಾಡಿಕೊಂಡಿತು. ವ್ಯಾಕ್ಸಿನ್ಗಳನ್ನು ಜನರಿಗೆ ನೀಡದೇ ಕಸದಬುಟ್ಟಿಗೆಸೆಯಿತು. ಆಸ್ಪತ್ರೆಗಳಲ್ಲಿ ಬೆಡ್ಗಳನ್ನು ಬ್ಲಾಕ್ ಮಾಡಿಕೊಂಡು ಜನ ಸಾಯುವಂತೆ ನೋಡಿಕೊಂಡಿತು. ಕೊನೆಗೆ ಅಮಾಯಕರ ಸಾವನ್ನು ವೈಭವೀಕರಿಸಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿತು. ರಾಷ್ಟ್ರೀಯ ಪಕ್ಷವೊಂದು ನಾಲ್ಕು ಕಾಸಿಗೆ ಈ ಹಂತಕ್ಕೆ ಇಳಿಯಬಹುದೆಂದು ಯಾರೂ ಊಹಿಸಿರಲಿಲ್ಲ. ಆದರೆ ಎಲ್ಲವೂ ಈಗ ಸಮಸ್ಥಿತಿಗೆ ಬರುತ್ತಿದೆ. ಮಾಡಿದ್ದೆಲ್ಲವೂ ಕಾಂಗ್ರೆಸ್ಸಿನ ಮುಖಕ್ಕೆ ಮರಳಿ ಬಡಿಯಲಾರಂಭಿಸಿದೆ. ಜನ ದಡ್ಡರಲ್ಲ; ಎಲ್ಲವನ್ನೂ ಗಮನಿಸುತ್ತಿದ್ದಾರೆ.

ಕರೋನಾಗೊಂದು ಕಾಲ; ವಿಕಾಸಕ್ಕೊಂದು ಕಾಲ!

ಕರೋನಾಗೊಂದು ಕಾಲ; ವಿಕಾಸಕ್ಕೊಂದು ಕಾಲ!


ಎಷ್ಟು ವೇಗವಾಗಿ ಏರಿತ್ತೋ ಅಷ್ಟೇ ವೇಗವಾಗಿ ಕರೋನಾ ಇಳಿದಿದೆ. ಮೊದಲ ಅಲೆ ಗರಿಷ್ಠ ಗುರಿಯನ್ನು ಮುಟ್ಟಿ ಇಳಿಯುವ ಸಮಯಕ್ಕೆ ಹೋಲಿಸಿದರೆ ಅದಕ್ಕಿಂತಲೂ ವೇಗವಾಗಿಯೇ ಈ ಇಳಿಮುಖ ಕಂಡುಬಂದಿದೆ. ಮೂರೇ ವಾರಗಳಲ್ಲಿ ತುದಿಮುಟ್ಟಿದ ಅರ್ಧಕ್ಕೆ ಕರೋನಾ ಇಳಿದಿರುವುದನ್ನು ದತ್ತಾಂಶ ಸಂಶೋಧಕರು ದಾಖಲಿಸಿದ್ದಾರೆ. ಒಳ್ಳೆಯ ಸುದ್ದಿಯೇ. ಆದರೆ ಸಾವಿನ ಸಂಖ್ಯೆಯಲ್ಲಿ ಶೇಕಡಾವಾರು ಇಳಿಕೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಇನ್ನೂ ಆತಂಕದ ಅಂಶವೇ. ಈ ನಡುವೆ ಚೀನಾ ಹಬ್ಬಿಸಿದ ಈ ವೈರಸ್ಸಿಗೆ ಜಗತ್ತಿನ 220 ರಾಷ್ಟ್ರ ಅಥವಾ ಪ್ರದೇಶಗಳಲ್ಲಿ 17 ಕೋಟಿ ಜನ ತುತ್ತಾಗಿದ್ದಾರೆ. ಸುಮಾರು 15 ಕೋಟಿಯಷ್ಟು ಮಂದಿ ಗುಣಮುಖರಾಗಿದ್ದರೆ, 35ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಓಟ ಇನ್ನೂ ನಿಂತಿಲ್ಲ. ಭಾರತ ಎರಡನೇ ಅಲೆಯನ್ನು ಮಾತ್ರ ಕಂಡಿದೆ. ಅನೇಕ ರಾಷ್ಟ್ರಗಳು ಅದಾಗಲೇ ಮೂರು, ನಾಲ್ಕನ್ನು ದಾಟಿ, ಐದನ್ನು ಎದುರಿಸುತ್ತಿವೆ. ಇದೇ ಲೆಕ್ಕಾಚಾರ ಮುಂದುವರೆದರೆ ನಾವು ಸಾಕಷ್ಟು ನೋಡುವುದು ಬಾಕಿ ಇದೆ. ಖುಷಿಯ ಸಂಗತಿ ಎಂದರೆ ಲಸಿಕೆ ಹಾಕಿಸುವ ಗತಿಯೂ ವೇಗವಾಗಿಯೇ ಸಾಗಿದೆ. ಕಳೆದ ಒಂದು ವಾರದಲ್ಲಿ ನಾಲ್ಕಕ್ಕೂ ಹೆಚ್ಚು ದಿನ, ಪ್ರತಿದಿನ 20 ಲಕ್ಷದಷ್ಟು ಜನ ಲಸಿಕೆ ಹಾಕಿಸಿಕೊಂಡಿದ್ದರೆ ಎರಡು ದಿನವಂತೂ ಈ ಸಂಖ್ಯೆ 30 ಲಕ್ಷವನ್ನು ದಾಟಿತ್ತು. ಒಟ್ಟು ಲಸಿಕೆ ಹಾಕಿಸಿಕೊಂಡವರ ಸಂಖ್ಯೆ 21 ಕೋಟಿ ದಾಟಿದ್ದು ಜಗತ್ತಿನ ಕಣ್ಣು ಕುಕ್ಕುವಂಥದ್ದು. ದೇಶದ ಜನಸಂಖ್ಯೆಯಲ್ಲಿ ನೂರು ಕೋಟಿಯಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಅಂದಾಜಿಸಿದರೂ ಅದಾಗಲೇ ಐವರಲ್ಲಿ ಒಬ್ಬರಿಗೆ ಲಸಿಕೆ ಹಾಕಿಸಿದಂತಾಗಿದೆ. ಅಂಕಿ-ಅಂಶಗಳನ್ನೇ ಒಪ್ಪುವುದಾದರೆ ಈ ತಿಂಗಳಲ್ಲಿ ಎಂಟು ಕೋಟಿಯಷ್ಟು ಲಸಿಕೆ ಜನರಿಗೆ ದೊರೆತಿದೆ. ಜೂನ್ ತಿಂಗಳಲ್ಲಿ 11 ಕೋಟಿಯಷ್ಟು ಲಸಿಕೆ ದೇಶದಲ್ಲಿ ಲಭ್ಯವಿರಲಿದೆ. ಅಂದರೆ ದಿನಕ್ಕೆ 38 ಲಕ್ಷದಷ್ಟು ಜನರಿಗೆ ಲಸಿಕೆ ಕೊಡುವಂತಾಗುತ್ತದೆ. ಇದು ನಿಜಕ್ಕೂ ಅಪ್ರತಿಮವಾದ್ದೇ. ಪೊಲಿಯೊ ಲಸಿಕೆಯನ್ನು ದಶಕಗಳಗಟ್ಟಲೆ ಸಕರ್ಾರಗಳು ಕೊಡುತ್ತಲೇ ಇದ್ದವು. ಆದರೆ ಈ ಲಸಿಕೆಯನ್ನು ಕೆಲವೇ ತಿಂಗಳುಗಳಲ್ಲಿ ಜನರಿಗೆ ಕೊಡಿಸುವ ಪ್ರಯತ್ನ ಮಾಡುತ್ತಿರುವುದು ಅಚ್ಚರಿಯಷ್ಟೇ ಅಲ್ಲ, ಕಷ್ಟಸಾಧ್ಯವೂ ಆಗಿತ್ತು. ಈಗಿನ ವೇಗ ನೋಡಿದರೆ ಗುರಿ ಸದ್ಯದಲ್ಲೇ ಇದೆ ಎನಿಸುತ್ತಿದೆ. ಈ ನಡುವೆಯೇ ದೇಶದ ವಿಚಾರದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು.


ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ನಾಮವಿಟ್ಟು ಪರಾರಿಯಾಗಿದ್ದ ಮೆಹೂಲ್ ಚೋಕ್ಸಿ ಆಂಟಿಗ್ವಾದಲ್ಲಿ ತಲೆಮರೆಸಿಕೊಂಡಿದ್ದ. ಭಾರತೀಯ ತನಿಖಾದಳದ ಪ್ರಯತ್ನದಿಂದಾಗಿ ಆತನನ್ನು ಡೊಮಿನಿಕಾ ಪೊಲೀಸರು ಬಂಧಿಸಿ ಕೋಟರ್ಿಗೆ ಹಾಜರು ಪಡಿಸಿದ್ದಾರೆ. ಸಕರ್ಾರ ಕಳಿಸಿದ ಖಾಸಗಿ ಹೆಲಿಕಾಪ್ಟರ್ ಆತನನ್ನು ಹೊತ್ತುಕೊಂಡು ಬರಲು ಸಿದ್ಧವಾಗಿಬಿಟ್ಟಿದೆ. ಅಚ್ಚರಿ ಎಂದರೆ ಇಂತಹ ಸುದ್ದಿಯನ್ನು ಯಾವ ಕಾಂಗ್ರೆಸ್ಸಿನ ಹ್ಯಾಂಡಲ್ಗಳೂ ಟ್ವೀಟ್ ಮಾಡುತ್ತಿಲ್ಲ. ಮಾಡಿದ ಕೆಲವರು ಟ್ವೀಟ್ಗಳನ್ನು ಅಳಿಸಿ ಹಾಕಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಷ್ಟು ದೊಡ್ಡಮೊತ್ತದ ಹಣವನ್ನು ಚೋಕ್ಸಿಗೆ ಕೊಡುವಲ್ಲಿ ಯಾವ ಪಕ್ಷ, ಯಾವ ರಾಜಕಾರಣಿಗಳು ಪಾತ್ರವಹಿಸಿದ್ದಾರೆಂಬುದು ಬೇಗ ಗೊತ್ತಾದಷ್ಟೂ ಒಳಿತೇ. ಹೀಗಾಗಿಯೇ ಅನೇಕ ಪಕ್ಷಗಳ ಪ್ಯಾಂಟು ಒದ್ದೆಯಾಗಿದೆ.


ಕಾಂಗ್ರೆಸ್ಸು ಕೊವಿಡ್ ಅನ್ನು ಚೀನಾ ವೈರಸ್ಸು ಎಂದು ಎಂದಿಗೂ ಕರೆದಿಲ್ಲ. ಆದರೆ ಟೂಲ್ಕಿಟ್ನ ಪ್ರಕಾರ ಭಾರತದಲ್ಲಿ ಹಬ್ಬಿದ ಕೊವಿಡ್ ಎಳೆಯನ್ನು ಇಂಡಿಯನ್ ವೇರಿಯೆಂಟ್ ಎಂದು ಕರೆಯುವ ಧಾವಂತ ಅವರಿಗಿತ್ತು. ಆ ಮೂಲಕ ಭಾರತಕ್ಕೆ ಅವಮಾನ ಮಾಡುವ ಪ್ರಯತ್ನ. ಕಾಂಗ್ರೆಸ್ ತನ್ನ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಪತ್ರಿಕೆಯೂ ಸೇರಿದಂತೆ ಜಗತ್ತಿನ ಕೆಲವು ಪ್ರಮುಖ ಪತ್ರಿಕೆಗಳು ಪಾಕಿಸ್ತಾನಕ್ಕೆ ಭಾರತದ ಕರೋನಾ ಎಳೆ ಹಬ್ಬಿದೆ ಎಂದೇ ವರದಿ ಮಾಡಿವೆ. ಅಲ್ಲಿಗೆ ಚೀನಾಕ್ಕೆ ಕವರಿಂಗ್ ಫೈರ್ ಕೊಟ್ಟು ಭಾರತವನ್ನೇ ಬೆತ್ತಲು ಮಾಡಬೇಕೆನ್ನುವ ರಾಹುಲ್ನ ಆಸೆ ಈಡೇರಿದಂತಾಯ್ತು.
ಹಾಗಂತ ಭಾರತದ ವಿದೇಶಾಂಗ ಮಂತ್ರಿ ಜೈಶಂಕರ್ ಸುಮ್ಮನಿಲ್ಲ. ಅಮೇರಿಕಾದ ನ್ಯೂಯಾಕರ್್ ಟೈಮ್ಸ್ ಭಾರತದ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವ ವರದಿಗಳನ್ನು ಪ್ರಕಟಿಸುತ್ತಿದ್ದಾಗ ಅದಕ್ಕೆ ಉತ್ತರವಾಗಿ ‘ಭಾರತ 80 ಕೋಟಿ ಜನಕ್ಕೆ ಉಚಿತ ಊಟ ಕೊಡುತ್ತಿದೆ. 40 ಕೋಟಿ ಜನರ ಖಾತೆಗೆ ನೇರವಾಗಿ ಹಣ ಮುಟ್ಟುವಂತೆ ಮಾಡುತ್ತಿದೆ. ನಮ್ಮ ಮೇಲೆ ಬೆರಳು ತೋರಿಸುತ್ತಿರುವ ಅಮೇರಿಕಾದ ಜನಸಂಖ್ಯೆ 35 ಕೋಟಿಯೂ ಇಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ’ ಎಂದು ಅಮೇರಿಕಾದಲ್ಲಿಯೇ ಚಾಟಿಯೇಟು ಬೀಸಿದ್ದಾರೆ.


ಈ ಮಧ್ಯೆಯೇ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನಗಳಲ್ಲಿ ಇರುವ ಅಲ್ಪಸಂಖ್ಯಾತರು ಭಾರತದ ನಾಗರೀಕತೆಗಾಗಿ ಅಜರ್ಿ ಸಲ್ಲಿಸಬಹುದು ಎಂದು ಭಾರತ ಸಕರ್ಾರ ಕರೆಕೊಟ್ಟಿದೆ. ಈ ಹಿಂದೆಯೇ ಹೀಗೊಂದು ಕಾನೂನು ತಂದು ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಮುಸಲ್ಮಾನರ ಹಿಂಸೆಗೆ ನೊಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಈಸಾಯಿ, ಪಾಸರ್ಿಗಳ ಜನರಿಗೆ ಭಾರತದ ನಾಗರೀಕತೆ ಕೊಡುವ ಪ್ರಯತ್ನವನ್ನು ಸಕರ್ಾರ ಮಾಡಿತ್ತಲ್ಲ, ಇದು ಅದರ ಮುಂದುವರಿದ ಭಾಗವಾಗಿದೆ. ಅಂದರೆ ಕರೋನಾ ಸಂಕಟದ ಕಾಲದಲ್ಲಿ ಕೇಂದ್ರವನ್ನು ಹೆದರಿಸಿ, ಬೆದರಿಸಿ ಈ ಪ್ರಯತ್ನಗಳಾಗದಂತೆ ನೋಡಿಕೊಳ್ಳಬೇಕೆಂಬ ಕಾಂಗ್ರೆಸ್ಸಿನ ಎಲ್ಲ ಆಶಾಭಾವನೆಗೂ ತಣ್ಣೀರೆರಚಿದಂತಾಗಿದೆ. ಕರೋನಾ ಗೆದ್ದು ಭಾರತ ಮೊದಲಿಗಿಂತ ಹೆಚ್ಚು ಸಶಕ್ತವಾಗುವ ಲಕ್ಷಣಗಳನ್ನು ತೋರುತ್ತಿದೆ.


ರಾಮ್ದೇವ್ ಬಾಬಾ ಆಲೋಪತಿ ವೈದ್ಯರುಗಳನ್ನು ಟೀಕಿಸಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು. ಸ್ವತಃ ರಾಷ್ಟ್ರದ ಆರೋಗ್ಯ ಸಚಿವರು ರಾಮ್ದೇವ್ ಬಾಬಾರವರಿಗೆ ಪತ್ರ ಬರೆದು ಕರೋನಾ ಹೋರಾಟದಲ್ಲಿ ಈ ವೈದ್ಯರ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಸಮಾಧಾನ ಮಾಡಿದ್ದರು. ರಾಮ್ದೇವ್ ಬಾಬಾ ಆರಂಭದಲ್ಲಿ ಆಲೋಪತಿ ವೈದ್ಯರುಗಳ ಕ್ಷಮೆ ಯಾಚಿಸಿದ್ದರಾದರೂ ಆನಂತರ ತಿರುಗಿ ಬಿದ್ದರು. ಆದರೆ ಕಾಲಕ್ರಮದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ಅಧ್ಯಕ್ಷ ಡಾ. ಜೈಲಾಲ್ ರಾಮ್ದೇವ್ ಬಾಬಾ ವಿರುದ್ಧ ತಿರುಗಿಬಿದ್ದು ದೊಡ್ಡ ಸದ್ದು ಮಾಡಿದರು. ಆಗಲೇ ಐಎಮ್ಎ ಸಕರ್ಾರೀ ಸಂಸ್ಥೆಯಲ್ಲವೆಂದು, ಅದಕ್ಕೆ ಆರೋಗ್ಯಕ್ಕೆ ಸಂಬಂಧಪಟ್ಟ ಯಾವ ನಿರ್ಣಯವನ್ನು ಕೈಗೊಳ್ಳುವ ಅಧಿಕಾರವಿಲ್ಲವೆಂದೂ ತಿಳಿದುಬಂತು. ಭಾರತದಲ್ಲಿ ಅಧಿಕೃತವಾಗಿ ಇದಕ್ಕಾಗಿ ಇರುವ ಸಂಸ್ಥೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ. ಐಎಮ್ಎ ಬ್ರಿಟೀಷರ ಕಾಲದ ಸಂಸ್ಥೆಯಾಗಿದ್ದು ಇದರ ಈಗಿನ ಅಧ್ಯಕ್ಷ ಕ್ರಿಶ್ಚಿಯನ್ ಮಿಷನರಿಗಳೊಂದಿಗೆ ನಿಕಟವಾದ ಸಂಪರ್ಕ ಹೊಂದಿರುವುದಲ್ಲದೇ ಮಿಷನರಿಗಳ ಪತ್ರಿಕೆಯೊಂದಕ್ಕೆ ಭಾರತದಲ್ಲಿ ವೈದ್ಯರಾಗಲು ಬಯಸುವ ಪ್ರತಿಯೊಬ್ಬರನ್ನೂ ಕ್ರಿಶ್ಚಿಯನ್ನರಾಗಿಸಬೇಕೆಂಬುದೇ ತನ್ನ ಮುಖ್ಯ ಉದ್ದೇಶ ಎಂದು ಹೇಳಿಕೊಂಡು ಸಿಕ್ಕುಬಿದ್ದಿದ್ದಾರೆ. ದ್ವಾರಕಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತಂತೆ ವಿಚಾರಣೆಯನ್ನೂ ಎದುರಿಸುತ್ತಿದ್ದಾರೆ. ರಾಮ್ದೇವ್ ಬಾಬಾ ವಿರುದ್ಧ ದೊಡ್ಡ ಸದ್ದು ಮಾಡಲು ಯತ್ನಿಸಿ ಆಸ್ಟಿನ್ ಜೈಲಾಲ್ ತಾವೇ ಹಳ್ಳಕ್ಕೆ ಬಿದ್ದಿದ್ದಾರೆ. ರಾಮ್ದೇವ್ ಬಾಬಾ ಆಲೋಪತಿ ವೈದ್ಯರುಗಳಿಗೆ ಒಂದಷ್ಟು ಸವಾಲುಗಳನ್ನೆಸೆಯುವ ಮೂಲಕ ಅವರನ್ನು ಕಟ್ಟಿಹಾಕಿಬಿಟ್ಟಿದ್ದಾರೆ.


ಚೀನೀ ವೈರಸ್ಸಿನ ಈ ತಾಂಡವನೃತ್ಯದ ನಡುವೆಯೇ ಸಂತಸದ ಸುದ್ದಿ ಕಂಡುಬಂದಿದೆ. ಏಪ್ರಿಲ್ ತಿಂಗಳೊಂದರಲ್ಲೇ 12500ರಷ್ಟು ಕಂಪೆನಿಗಳು ನೊಂದಾಯಿಸಿಕೊಳ್ಳಲ್ಪಟ್ಟಿವೆ. ಇದರಲ್ಲಿ ಸುಮಾರು 850 ಏಕವ್ಯಕ್ತಿ ಕಂಪೆನಿಗಳಾಗಿದ್ದು ಒಟ್ಟಾರೆ ಒಂದೂವರೆ ಸಾವಿರಕೋಟಿ ರೂಪಾಯಿಯ ಬಂಡವಾಳ ಹೂಡಿಕೆಯಾಗಿದೆ. ನೆನಪಿರಲಿ, ಏಪ್ರಿಲ್ ತಿಂಗಳಲ್ಲಿ ಕರೋನಾ ತೀವ್ರಗತಿಯಲ್ಲಿ ಏರುತ್ತಿತ್ತು. ಈ ಹೊತ್ತಿನಲ್ಲಿಯೇ ಲಡಾಕ್ನ ಹಳ್ಳಿ-ಹಳ್ಳಿಗರಿಗೆ ವಿದ್ಯುತ್ ತಂತಿಯನ್ನು ಎಳೆಯುವ 1300 ಕೋಟಿಗೂ ಹೆಚ್ಚು ಮೊತ್ತದ ಯೋಜನೆಯನ್ನು ಕೇಂದ್ರಸಕರ್ಾರ ಅನುಮೋದಿಸಿದೆ. ಕರೋನಾದ ನಡುವೆಯೂ ಭಾರತ ಪ್ರಗತಿಯ ಓಟದಲ್ಲಿ ಮುಲಾಜಿಲ್ಲದೇ ಹೆಜ್ಜೆ ಹಾಕುತ್ತಿರುವುದೇ ಜಗತ್ತಿನ ಅಚ್ಚರಿಗೆ ಕಾರಣವಾಗಿರುವುದಲ್ಲದೇ ಭಾರತದ ಅಭಿವೃದ್ಧಿ ನಿಸ್ಸಂಶಯವಾಗಿ ಆಗಲಿದೆ ಎಂಬ ವಿಶ್ವಾಸದಿಂದ ಅವರು ಹೂಡಿಕೆಯನ್ನೂ ಹೆಚ್ಚು ಮಾಡುತ್ತಿರುವುದು. ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಮತ್ತು ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟ್ಮೆಂಟ್ಗಳು ತೀವ್ರಗತಿಯಲ್ಲಿ ಏರಿರುವುದೇ ಇದಕ್ಕೆ ಸಾಕ್ಷಿ.


ಚೀನಾಕ್ಕೆ ಇದೇ ಕಿರಿಕಿರಿ. ನರೇಂದ್ರಮೋದಿ ಸಕರ್ಾರ ಆಂತರಿಕವಾಗಿ ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ್ಯೂ ಗಡಿಯಲ್ಲಿ ಸೇನೆ ಒಂದಿನಿತೂ ಅಲುಗಾಡುತ್ತಿಲ್ಲ. ತನ್ನೆಡೆಯಲ್ಲಿ ಸಾಕಷ್ಟು ಸೈನ್ಯ ಜಮಾವಣೆ ಮಾಡುತ್ತಾ ಗ್ಯಾಲ್ವಾನ್ನಲ್ಲಾದ ಅವಮಾನವನ್ನು ತೀರಿಸಿಕೊಳ್ಳಲು ಚೀನಾ ಹವಣಿಸುತ್ತಿದ್ದರೆ ಭಾರತ ಮೈಯೆಲ್ಲಾ ಕಣ್ಣಾಗಿ ಕಾವಲು ಕಾಯುತ್ತಿದೆ. ಚೀನಿಯರನ್ನು ನಂಬಲು ಸಾಧ್ಯವಿಲ್ಲ. ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಬೆಳೆಸಿದ್ದ ಕಾಂಗ್ರೆಸ್ ಪಾಟರ್ಿಯನ್ನೇ ತನ್ನ ತೆಕ್ಕೆಗೆ ಸೆಳೆದುಕೊಂಡ ಚೀನಾಕ್ಕೆ ಭಾರತದಲ್ಲಿ ಯಾವ ಸಾಧನೆ ಮಾಡುವುದೂ ಕಷ್ಟವೇನಲ್ಲ. ಆದರೆ ಭಾರತೀಯ ಸೈನಿಕರ ಸಾಮಥ್ರ್ಯ ಮತ್ತು ಅವರಿಗೆ ಕೇಂದ್ರಸಕರ್ಾರದಿಂದ ಸಿಕ್ಕಿರುವ ಸ್ವಾತಂತ್ರ್ಯ ಇವೆರಡೂ ಭೀತಿ ಹುಟ್ಟಿಸಿರುವುದಂತೂ ನಿಜ. ಹೀಗಾಗಿಯೇ ಈ ಬಾರಿ ಹೊಡೆದು ಓಡಿಬಿಡುವ ತಯಾರಿಯಲ್ಲಿ ಅವರಿದ್ದಾರೆ ಎಂದೇ ಹೇಳಲಾಗುತ್ತಿದೆ. ಭಾರತದ ಸೈನಿಕ ಮುಖ್ಯಸ್ಥರು ಪದೇ ಪದೇ ಗಡಿಗೆ ಭೇಟಿ ಕೊಡುತ್ತಿರುವುದು ಚೀನಿಯರಲ್ಲಿ ಭೀತಿಯನ್ನಂತೂ ಹುಟ್ಟಿಸಿದೆ.


ಟ್ವಿಟರ್ ವಾರ್ ಕೂಡ ಈ ಹೊತ್ತಿನಲ್ಲಿಯೇ ಸಾಕಷ್ಟು ನಡೆದಿದೆ. ಒಂದಷ್ಟು ಫ್ಯಾಕ್ಟ್ ಚೆಕರ್ಗಳ ಮಾಹಿತಿಯ ಆಧಾರದ ಮೇಲೆ ಟ್ವಿಟರ್ ಕಾಂಗ್ರೆಸ್ಸಿನ ಪರವಾಗಿ ನಡೆಸುತ್ತಿದ್ದ ಅಜೆಂಡಾಗಳನ್ನು ಆಳುವ ಪಕ್ಷ ಬಯಲಿಗೆ ತಂದನಂತರ ಟ್ವಿಟರ್ ಪತರಗುಟ್ಟಿರುವುದಂತೂ ನಿಜ. ಅಭಿವ್ಯಕ್ತಿ ಸ್ವಾತಂತ್ರ್ಯ ನೆಪದಲ್ಲಿ ಯಃಕಶ್ಚಿತ್ ಕಂಪೆನಿಯೊಂದು ಪ್ರಜಾಪ್ರಭುತ್ವವುಳ್ಳ ರಾಷ್ಟ್ರವೊಂದಕ್ಕೆ ನೀತಿ-ನಿಯಮಗಳನ್ನು ಬೋಧಿಸುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಸಕರ್ಾರ ಈ ಹಿನ್ನೆಲೆಯಲ್ಲಿಯೇ ಸಾಮಾಜಿಕ ಜಾಲತಾಣಗಳ ಮೇಲೆ ಚೌಕಟ್ಟನ್ನು ಹಾಕಲು ನಿರ್ಧರಿಸಿತು. ಕಾಂಗ್ರೆಸ್ಸು ಈ ಇಡಿಯ ಪ್ರಕರಣವನ್ನು ತನಗೆ ಬೇಕಾದಂತೆ ಬಳಸಿಕೊಳ್ಳಲು ದೆಹಲಿಯ ಪೊಲೀಸರಿಗೆ ದೂರುಕೊಟ್ಟು ಸಿಕ್ಕುಹಾಕಿಕೊಂಡುಬಿಟ್ಟಿತು. ಏಕೆಂದರೆ ದೆಹಲಿಯ ಪೊಲೀಸರು ಕೇಂದ್ರಸಕರ್ಾರದ ಅಡಿಯಲ್ಲಿ ಬರುತ್ತಾರೆಂಬ ಸಾಮಾನ್ಯ ಕಲ್ಪನೆಯೂ ಅವರಿಗಿರಲಿಲ್ಲ. ಆನಂತರ ಛತ್ತೀಸ್ಘಡದಲ್ಲಿ ದೂರು ದಾಖಲಿಸಿ ಭಾಜಪದವರನ್ನು ವಿಚಾರಣೆ ನಡೆಸಬೇಕೆಂಬ ಪ್ರಯತ್ನ ಮಾಡಿತಾದರೂ ಅಷ್ಟರೊಳಗೆ ಈ ಅವಕಾಶವನ್ನು ಬಳಸಿಕೊಂಡು ದೆಹಲಿಯ ಪೊಲೀಸರು ಟ್ವಿಟರ್ ಕಾಯರ್ಾಲಯಕ್ಕೆ ನೊಟೀಸು ಜಾರಿ ಮಾಡಿದ್ದಲ್ಲದೇ ನ್ಯಾಯಾಲಯಕ್ಕೂ ಎಳೆತಂದರು. ಇನ್ನೊಂದು ಅಚ್ಚರಿಯೇನು ಗೊತ್ತೇ? ದೇಶಕ್ಕೆ ಅನ್ಯಾಯ ಮಾಡಿದ ದರೋಡೆಕೋರರಿರಲಿ, ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿರುವವರಿರಲಿ ಅಥವಾ ದೇಶವಿರೋಧಿಯಾದ ಇಂತಹ ಸಂಸ್ಥೆಯೇ ಇರಲಿ ನ್ಯಾಯಾಲಯದಲ್ಲಿ ಅವರನ್ನು ಸಮಥರ್ಿಸಿಕೊಳ್ಳಲು ಧಾವಿಸಿ ಬರುವುದೇ ಕಾಂಗ್ರೆಸ್ಸಿನ ಕೆಲವು ವಕೀಲ ನಾಯಕರು. ಇವರ ಹಳೆಯ ಸಂಬಂಧಗಳನ್ನೊಮ್ಮೆ ದೆಹಲಿ ಪೊಲೀಸರೇ ಕೆದಕಿ ತೆಗೆಯುವುದೊಳಿತು. ಸಕರ್ಾರ ಟ್ವಿಟರ್ಗೆ ಬರೆದ ಎಚ್ಚರಿಕೆಯ ಪತ್ರ ಅನೇಕರಿಂದ ಪ್ರಶಂಸೆಗೊಳಗಾಯ್ತು. ಅವರೊಂದು ಸಾಮಾನ್ಯ ಕಂಪೆನಿ ಎನ್ನುವುದನ್ನು ನೆನಪಿಸಿಕೊಟ್ಟಿತಲ್ಲದೇ ನ್ಯಾಯಾಲಯದ ಕಟಕಟೆಯಲ್ಲಿ ಅವರನ್ನು ಸಮರ್ಥವಾಗಿ ಎದುರಿಸುವ ಕೆಲಸಕ್ಕೂ ಸಜ್ಜಾಯ್ತು. ಸರಿಸುಮಾರು ಇದೇ ವೇಳೆಗೆ ರಷ್ಯಾದಲ್ಲಿ ಟ್ವಿಟರ್ಗೆ ದೊಡ್ಡಮೊತ್ತದ ದಂಡವನ್ನು ಹಾಕಲಾಯ್ತು. ಪಶ್ಚಿಮದ ಕೆಲವು ರಾಷ್ಟ್ರಗಳು ಟ್ವಿಟರ್ನ ಏಕಚಕ್ರಾಧಿಪತ್ಯದ ಬಯಕೆಯ ವಿರುದ್ಧ ಸಟೆದು ನಿಂತಿತು.


ಅದು ಹಾಗೆಯೇ. ಹುವೈನ ವಿರುದ್ಧ ಭಾರತ ತಿರುಗಿ ಬಿದ್ದೊಡನೆ ಜಗತ್ತಿನ ಅನೇಕ ರಾಷ್ಟ್ರಗಳು ಅನುಸರಿಸಿದವು. ಚೀನಾದ ಕಂಪೆನಿಗಳನ್ನು ಭಾರತ ಬಹಿಷ್ಕರಿಸಿದ ನಂತರ ಅನೇಕ ರಾಷ್ಟ್ರಗಳಿಗೆ ಧೈರ್ಯ ಬಂತು. ಮತ್ತೀಗ ಟ್ವಿಟರ್ನ ಸರದಿ. ಅದರ ಸ್ಥಾನವನ್ನು, ಯೋಗ್ಯತೆಯನ್ನು ಸೂಕ್ತವಾಗಿ ತಿಳಿಸಿಕೊಡುವ ಹೊಣೆಗಾರಿಕೆ ನಮ್ಮದ್ದಿದೆ.


ಎಲ್ಲಕ್ಕಿಂತಲೂ ಕೆಟ್ಟ ಸುದ್ದಿ ಎಂದರೆ ಪಿಎಮ್ ಕೇರ್ಸ್ನ ಕುರಿತಂತೆ ಗುರುತರ ಆರೋಪಗಳನ್ನು ಮಾಡಿದ್ದ ರಾಣಾ ಅಯೂಬ್ ಕರೋನಾ ಹೊತ್ತಲ್ಲಿ ಸೇವೆ ಮಾಡುತ್ತೇನೆಂಬ ಪೋಸುಕೊಟ್ಟು ಬೇರೆ-ಬೇರೆ ರಾಷ್ಟ್ರಗಳಿಂದ ಲಕ್ಷಾಂತರ ರೂಪಾಯಿ ನಿಧಿ ಸಂಗ್ರಹಿಸಿದ್ದಳು. ಆದರೆ ಕಾನೂನು ತೊಡಕುಗಳಿವೆ ಎನ್ನುವ ಕಾರಣಕ್ಕೆ ಆಕೆ ಆ ಹಣವನ್ನು ಮರಳಿಸಬೇಕಾಗಿ ಬಂತು. ಈ ಹಿಂದೆಯೂ ಈಕೆಯಂಥ ಅನೇಕರು ಬೇರೆ-ಬೇರೆ ಸಂದರ್ಭಗಳಲ್ಲಿ ನಿಧಿ ಸಂಗ್ರಹಿಸಿ ತಮ್ಮ ವೈಯಕ್ತಿಕ ಖಚರ್ುಗಳಿಗೆ ಬಳಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕರೋನಾ ಹೊತ್ತಲ್ಲೂ ಇವರುಗಳ ಈ ವರ್ತನೆ ನಿಜಕ್ಕೂ ಅಸಹ್ಯ ಹುಟ್ಟಿಸುವಂಥದ್ದು.
ಪ್ರಧಾನಮಂತ್ರಿ ನರೇಂದ್ರಮೋದಿಯವರು ಪಿಎಮ್ ಕೇರ್ಸ್ ನಿಧಿಗೆ ಬಂದ ಹಣವನ್ನು ಕರೋನಾದಲ್ಲಿ ತಂದೆ-ತಾಯಿಯರನ್ನು ಕಳಕೊಂಡ ಮಕ್ಕಳ ಆರೈಕೆಗೆ, ಅಧ್ಯಯನಕ್ಕೆ ಬಳಸಬೇಕು ಎಂದು ಹೇಳಿ ರಾಷ್ಟ್ರದ ಮನ ಗೆದ್ದುಬಿಟ್ಟಿದ್ದಾರೆ. ಒಂದೆಡೆ ಕರೋನಾ ಇಳಿಮುಖವಾಗುತ್ತಿದ್ದರೆ ಮತ್ತೊಂದೆಡೆ ರಾಷ್ಟ್ರವನ್ನು ಕಟ್ಟುವ ಕಾಯಕ ಹಿಂದೆಂದಿಗಿಂತಲೂ ಜೋರಾಗಿ ಆರಂಭವಾಗಿಬಿಟ್ಟಿದೆ. ನಿಜಕ್ಕೂ ಮುಂದಿನ ಹೋರಾಟ ಬಲುದೊಡ್ಡದ್ದು. ನಾವು ಬಲವಾಗಬೇಕಾಗಿದೆ, ರಾಷ್ಟ್ರವನ್ನು ಕಟ್ಟಬೇಕಿದೆ.

ವಿರೋಧಿಸುವುದು ಸರಿ; ಚರ್ಚೆಗೂ ಹೆದರಿದರೆ?

ವಿರೋಧಿಸುವುದು ಸರಿ; ಚರ್ಚೆಗೂ ಹೆದರಿದರೆ?

ಒಂದು ದೇಶಕ್ಕೆ ಒಂದು ಚುನಾವಣೆಯ ಬಗ್ಗೆ ದೇಶದಾದ್ಯಂತ ಚಚರ್ೆ ನಡೆಯುತ್ತಿದೆ. ಅದು ಹೊಸತಲ್ಲವಾದರೂ ನರೇಂದ್ರಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಅದಕ್ಕೆ ಸಾಕಷ್ಟು ಬಲವನ್ನು ತುಂಬಿದ್ದಾರೆ. ತಮ್ಮ ಅಧಿಕಾರಾವಧಿಯ ಮೊದಲ ಹಂತದಲ್ಲಿಯೇ ಈ ಕುರಿತು ಸಾಕಷ್ಟು ಮಾತನಾಡಿದ್ದ ಅವರು ಈಗ ಮತ್ತೆ ವೇಗ ತುಂಬುತ್ತಿದ್ದಾರೆ. ಸಂವಿಧಾನ ದಿವಸದಂದು ಮಾಡಿದ ಭಾಷಣದಲ್ಲೂ ಮೋದಿಯವರು ಈ ಕುರಿತ ಚಚರ್ೆಯನ್ನು ಮಾಡುವಂತೆ ಎಲ್ಲರನ್ನೂ ಕೇಳಿಕೊಂಡಿದ್ದರು. ಜೊತೆಗೆ ಎಲ್ಲಾ ರಾಜ್ಯಗಳ ಸಭಾಪತಿಗಳೂ ಸದನವನ್ನು ಒಂದು ದಿನಕ್ಕಾಗಿಯಾದರೂ ಇದಕ್ಕೆ ಮೀಸಲಿಟ್ಟು ಚಚರ್ೆ ನಡೆಸಿ ಎಲ್ಲರೂ ಈ ವಿಚಾರದಲ್ಲಿ ಸಮಭಾಗಿಗಳಾಗುವಂತೆ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು. ದುರಂತವೇನು ಗೊತ್ತೇ? ಕನರ್ಾಟದಲ್ಲಿ ಈ ಪ್ರಯತ್ನ ಮಾಡಲು ಹೊರಟಾಗ ಪ್ರತಿಪಕ್ಷಗಳು ಚಚರ್ೆಗೇ ನಿರಾಕರಿಸಿ ಅಪರೂಪದ ಸಂದೇಶವನ್ನು ದೇಶಕ್ಕೆ ರವಾನಿಸಿದರು. ವಿರೋಧಿಸುವುದು ಬೇರೆ; ಚಚರ್ೆಯೇ ಮಾಡುವುದಿಲ್ಲವೆಂದರೇನರ್ಥ? ಬಲು ಆಸ್ಥೆಯಿಂದ ಈ ಪ್ರಯತ್ನಕ್ಕೆ ಮುಂದಾಗಿದ್ದ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ವಿಚಾರವನ್ನು ಕೈಚೆಲ್ಲಬೇಕಾಗಿ ಬಂತು ಅಷ್ಟೇ. ಕಳೆದ 75 ವರ್ಷಗಳಿಂದಲೂ ಕಾಂಗ್ರೆಸ್ನದ್ದು ಇದೇ ಸಮಸ್ಯೆ. ಅಭಿವೃದ್ಧಿ ಮುಂದಿನ ಹತ್ತು ವರ್ಷಕ್ಕೆ. ಆದರೆ, ದೇಶದ ಲಾಭ-ನಷ್ಟ ನೂರಾರು ವರ್ಷಗಳಿಗೆ ವಿಸ್ತರಿಸಬಲ್ಲಂಥವು ಎಂಬ ಸಾಮಾನ್ಯಜ್ಞಾನವೂ ಅವರಿಗಿಲ್ಲ. ಅಂಬೇಡ್ಕರರೊಂದಿಗೆ ತಮಗಿದ್ದ ಕಿತ್ತಾಟವನ್ನು ಬದಿಗಿಟ್ಟು, ಮಹಾತ್ಮಾಗಾಂಧೀಜಿ ಅವರನ್ನು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬೇಕೆಂದು ನೆಹರೂಗೆ ತಾಕೀತು ಮಾಡಿದ್ದರ ಫಲವನ್ನು ಇಂದು ನಾವು ಉಣ್ಣುತ್ತಿದ್ದೇವೆ. ಈ ದೇಶ ಸ್ವಂತ ಕಾಲಮೇಲೆ ನಿಂತು ಇಂಥದ್ದೊಂದು ಸಂವಿಧಾನ ರಚನೆ ಮಾಡಲು ಸಾಧ್ಯವಾಗಿದ್ದು ಆನಂತರವೇ. ನೆಹರೂ ಮಾತು ಕೇಳಿ ಪಶ್ಚಿಮದ ಜೆನಿಂಗ್ನನ್ನೇ ಅಧ್ಯಕ್ಷನನ್ನಾಗಿ ಮಾಡಿಕೊಂಡಿದ್ದರೆ ಅದರ ಅವಮಾನವನ್ನು ಇಂದಿಗೂ ಉಣ್ಣುತ್ತಿರುತ್ತಿದ್ದೆವು. ದೇಶ ನನಗಿಂತ, ನನ್ನ ಪರಿವಾರಕ್ಕಿಂತ, ನನ್ನ ಊರಿಗಿಂತ, ನನ್ನ ಜಾತಿ-ಮತಗಳಿಗಿಂತ, ನಮ್ಮ ಪಕ್ಷ-ಸಂಘಟನೆಗಳಿಗಿಂತ ಬಲುದೊಡ್ಡದ್ದು. ಅದರ ಹಿತಾಸಕ್ತಿಯ ವಿಚಾರ ಬಂದಾಗ ಎರಡನೆಯ ಮಾತೇ ಇರುವಂತಿಲ್ಲ. ಆದರೆ, ಸ್ವಾರ್ಥದಿಂದ ತುಂಬಿರುವ ಈ ಯುಗದಲ್ಲಿ ಈ ಪಾಠವನ್ನು ಹೇಳೋದು ಯಾರಿಗೆ?

ಇಷ್ಟಕ್ಕೂ ಕಾಂಗ್ರೆಸ್ಸಿಗೆ ಇರಬಹುದಾದ ಎಲ್ಲ ಆಕ್ಷೇಪಗಳನ್ನು ಅದಾಗಲೇ ಪಾಲರ್ಿಮೆಂಟರಿ ಸ್ಟಾಂಡಿಂಗ್ ಕಮಿಟಿಯಲ್ಲಿ ಚಚರ್ಿಸಿ ನೀತಿ ಆಯೋಗ ಬಯಲಿಗಿಟ್ಟಿದೆ. ಅವರಿಗೆಲ್ಲರಿಗೂ ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಇರುವ ತೊಂದರೆಗಳೇ ಬಲುದೊಡ್ಡ ಸಮಸ್ಯೆಯಾಗಿ ಕಾಣುತ್ತಿರುವುದು. ತಪ್ಪೇನಿಲ್ಲ. ಸಹಜವೂ ಕೂಡ. ಒಂದೊಂದು ರಾಜ್ಯಗಳೂ ಒಂದೊಂದು ಸಂದರ್ಭದಲ್ಲಿ ಅಧಿಕಾರ ಹೊಂದಿವೆ. ಒಂದೇ ಕಾಲಕ್ಕೆ ಎಲ್ಲರನ್ನೂ ಚುನಾವಣೆಗೆ ಅಣಿಗೊಳಿಸಬೇಕೆಂದರೆ ಒಂದಷ್ಟು ರಾಜ್ಯಗಳನ್ನು ಅವಧಿಗೆ ಪೂರ್ವ ವಿಸಜರ್ಿಸಬೇಕಾಗುತ್ತದೆ. ಮತ್ತಷ್ಟು ರಾಜ್ಯಗಳಿಗೆ ಹೆಚ್ಚು ಅವಧಿ ನೀಡಬೇಕಾಗುತ್ತದೆ. ಸಂವಿಧಾನದ ವ್ಯಾಪ್ತಿಯಲ್ಲೇ ಬರುವಷ್ಟು ಅವಧಿಯಾದರೆ ಚಿಂತೆಯಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚಿನ ಅವಧಿ ನೀಡಬೇಕಾದರೆ ಅದು ಕಷ್ಟವಾಗುತ್ತದಲ್ಲ. ಮಾಡುವುದು ಹೇಗೆ? ನೀತಿ ಆಯೋಗ ತಾನು ಪ್ರಕಟಿಸಿರುವ ವಿಸ್ತಾರವಾದ ಪ್ರಬಂಧದಲ್ಲಿ ಇದನ್ನು ಕೂಲಂಕಷವಾಗಿ ಚಚರ್ಿಸಿ ಲೋಕಸಭಾ ಚುನಾವಣೆಯೊಂದಿಗೆ ಅರ್ಧದಷ್ಟು ರಾಜ್ಯಗಳ ಮತ್ತು ಎರಡೂವರೆ ವರ್ಷಗಳ ನಂತರ ಉಳಿದ ಅರ್ಧದಷ್ಟು ರಾಜ್ಯಗಳ ಚುನಾವಣೆ ನಡೆಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಇದರಲ್ಲಿ ಸದಭಿಪ್ರಾಯ-ಭಿನ್ನಾಭಿಪ್ರಾಯ ಯಾವುದಿದ್ದರೂ ಸರಿ ಅದನ್ನು ಚಚರ್ಿಸಬೇಕಲ್ಲ. ಚಚರ್ೆಗೇ ಸಿದ್ಧರಿಲ್ಲವೆಂದರೆ ತಮ್ಮ ವಾದದಲ್ಲಿ ಹುರುಳಿಲ್ಲವೆಂತಲೂ, ಚಚರ್ಿಸಿಬಿಟ್ಟರೆ ಒಪ್ಪಿಕೊಳ್ಳಬೇಕಾಗುತ್ತದೆಂತಲೂ ಗೊತ್ತಿದೆ ಎಂದಾಯ್ತು. ಕಾಂಗ್ರೆಸ್ಸಿಗೆ ಇರೋದು ಇದೇ ಸಮಸ್ಯೆ. ತಮ್ಮ ಇಡಿಯ ಸೌಧವನ್ನು ಅವರು ಕಟ್ಟಿರುವುದು ಸುಳ್ಳುಗಳ ಆಧಾರದ ಮೇಲೆಯೇ. ಚುನಾವಣೆಯ ಹೊತ್ತಲ್ಲಿ ರಫೇಲ್ನ ವಿಚಾರದಲ್ಲಿ ಎಷ್ಟೊಂದು ಸುಳ್ಳುಗಳನ್ನು ಹೇಳಿದರು. ಅನೇಕ ಬಾರಿ ತಕ್ಷಣಕ್ಕೆ ಈ ಸುಳ್ಳುಗಳನ್ನು ಜನ ನಂಬಿಯೂಬಿಡುತ್ತಾರೆ. ಅವರಿಗೆ ಬೇಕಾಗಿರುವುದು ಆ ತಾತ್ಕಾಲಿಕ ಲಾಭವೇ. ಆದರೆ ಸುಪ್ರೀಂಕೋಟರ್ಿನ ಮುಂದೆ ರಫೇಲ್ನ ವಿಚಾರದಲ್ಲಿ ಅದೇ ಕಾಂಗ್ರೆಸ್ಸು ಬೆತ್ತಲಾಗಿ ನಿಂತಾಗ ಅವರು ನಾಚಿ ತಲೆತಗ್ಗಿಸಿಯೂ ಇಲ್ಲ. ಪತ್ರಿಕೆಗಳೂ ಅಷ್ಟೇ ಆರೋಪವನ್ನು ಬಲುಜೋರಾಗಿ ಪ್ರಕಟಿಸಿದವಲ್ಲ, ಅದು ಸುಳ್ಳೆಂದು ಸಾಬೀತಾದಾಗ ಅದು ಸಾಮಾನ್ಯ ವರದಿಯಾಗಿ ಜಾರಿಕೊಂಡುಬಿಟ್ಟಿತ್ತು. ಆರೋಪಗಳ ಹೊತ್ತಲ್ಲಿ ಕಾಂಗ್ರೆಸ್ಸನ್ನು ನಂಬಿದ ಅನೇಕರಿಗೆ ಅದು ಸುಳ್ಳೆಂದು ಗೊತ್ತಾಗಲೇ ಇಲ್ಲ. ನೆನಪಿಡಿ, ಒಂದು ದೇಶ ಒಂದು ಚುನಾವಣೆ ಭಾರತಕ್ಕೆ ಹೊಸತಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಕೇಂದ್ರದ ಮತ್ತು ರಾಜ್ಯಗಳ ಚುನಾವಣೆಗಳೆಲ್ಲ ಜೊತೆಗೇ ನಡೆಯುತ್ತಿದ್ದವು. 1951, 1957 ಮತ್ತು 1962ರಲ್ಲಿ ನಡೆದ ಈ ಸಾರ್ವತ್ರಿಕ ಚುನಾವಣೆಗಳಲ್ಲಿ ಜನ ಎರಡೂ ಸಕರ್ಾರಗಳನ್ನು ಆಯ್ಕೆ ಮಾಡಿದರಲ್ಲ ಅವರಿಗೆ ಯಾವುದೂ ಸಮಸ್ಯೆ ಎನಿಸಿರಲಿಲ್ಲ ಮತ್ತು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ಸಿಗೆ ಈ ಪ್ರಕ್ರಿಯೆಯನ್ನು ನಡೆಸುವಲ್ಲಿ ಯಾವ ತೊಂದರೆಯೂ ಕಂಡಿರಲಿಲ್ಲ. ಈಗ ಅವರಿಗೆ ಸಮಸ್ಯೆ ಎನಿಸುತ್ತಿದೆ. ಇಷ್ಟಕ್ಕೂ ಈ ರೀತಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಚುನಾವಣೆಗಳನ್ನು ಭಿನ್ನ-ಭಿನ್ನ ಕಾರಣಗಳಿಗಾಗಿ ಉಧ್ವಸ್ಥಗೊಳಿಸಿದ್ದು ಇವರೇ. ಆಟರ್ಿಕಲ್ 356ನ್ನು ಮನಸೋ ಇಚ್ಛೆ ಬಳಸಿಕೊಂಡು ಎಷ್ಟು ರಾಜ್ಯ ಸಕರ್ಾರಗಳನ್ನು ಇವರು ಉರುಳಿಸಿ ಬಿಸಾಡಿಲ್ಲ ಹೇಳಿ? ಬೊಮ್ಮಾಯಿ ರಾಜ್ಯ ಮುಖ್ಯಮಂತ್ರಿಯಾಗಿದ್ದಾಗ ಆ ಸಕರ್ಾರವನ್ನು ಉರುಳಿಸಲು ಹೋಗಿ ಸುಪ್ರೀಂಕೋಟರ್ಿನಲ್ಲಿ ಕೈಸುಟ್ಟುಕೊಂಡ ಘಟನೆ ಇಂದಿಗೂ ಚಚರ್ೆಯಾಗುತ್ತದೆ. ಇವರು ಮಾಡಿದ ಈ ತಪ್ಪುಗಳ ಪ್ರಭಾವದಿಂದಾಗಿಯೇ ಅನೇಕ ರಾಜ್ಯ ಸಕರ್ಾರಗಳು ಪ್ರಗತಿಯ ಧಾವಂತವನ್ನು ಬಿಟ್ಟು ಅಧಿಕಾರ ಉಳಿಸಿಕೊಳ್ಳುವತ್ತ ಗಮನ ಹರಿಸುವಂತಾಯ್ತು. ಅದರಿಂದಾಗಿಯೇ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ. ಪ್ರತೀವರ್ಷ ದೇಶದಾದ್ಯಂತ ಲೋಕಸಭಾ ಚುನಾವಣೆಯನ್ನು ನಡೆಸಲು ಸಾವಿರಾರು ಕೋಟಿ ರೂಪಾಯಿ ಖಚರ್ಾಗುತ್ತದೆ. 2014ರಲ್ಲಿ ಸಾವಿರ ಕೋಟಿಯನ್ನು ದಾಟಿದ್ದ ಈ ವೆಚ್ಚ, 2019ರಲ್ಲಿ ನಾಲ್ಕು ಸಾವಿರಕೋಟಿಗೆ ಹತ್ತಿರ ಬಂದು ನಿಂತಿತ್ತು. ರಾಜ್ಯಗಳ ಚುನಾವಣೆಯನ್ನೂ ಇದಕ್ಕೆ ಜೋಡಿಸಿದರೆ ಒಟ್ಟಾರೆ 10,000 ಕೋಟಿ ರೂಪಾಯಿಯನ್ನು ಚುನಾವಣೆಗಳಿಗೆಂದೇ ಸಕರ್ಾರಗಳು ವ್ಯಯಿಸುತ್ತವೆ. ಕೇಂದ್ರಸಕರ್ಾರ ಲೋಕಸಭಾ ಚುನಾವಣೆಯ ಖರ್ಚನ್ನು ಭರಿಸುವುದಾದರೂ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆ ರಾಜ್ಯಸಕರ್ಾರಗಳದ್ದೇ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಪ್ರತ್ಯೇಕವಾಗಿ ನಡೆದಷ್ಟೂ ರಾಜ್ಯ ಸಕರ್ಾರಗಳ ವೆಚ್ಚ ಹೆಚ್ಚುತ್ತಲೇ ಹೋಗುತ್ತದೆ. ಚುನಾವಣಾ ಆಯೋಗ ಎಲ್ಲ ಚುನಾವಣೆಗಳನ್ನೂ ಒಟ್ಟಿಗೇ ನಡೆಸಿದರೆ ಈ ವೆಚ್ಚವನ್ನು ನಾಲ್ಕೂವರೆ ಸಾವಿರ ಕೋಟಿಗೆ ಇಳಿಸಬಹುದೆಂಬ ವರದಿ ನೀಡಿದೆ. ಅದರರ್ಥ ಈಗಿನ ವೆಚ್ಚಕ್ಕೆ ಅರ್ಧದರಷ್ಟರಲ್ಲಿ ನಾವು ಇಡಿಯ ಚುನಾವಣಾ ಪ್ರಕ್ರಿಯೆಗಳನ್ನೇ ಮುಗಿಸಿಬಿಡಬಹುದು. ಇಷ್ಟ ಆಗುವುದೋ ಬಿಡುವುದೋ ಚಚರ್ೆ ನಡೆಸಿದರೆ ಗಂಟೇನು ಹೋಗುತ್ತದೆ? ದೇಶದ ಬೊಕ್ಕಸಕ್ಕೆ ಹತ್ತಾರು ಸಾವಿರ ಕೋಟಿ ರೂಪಾಯಿ ಉಳಿತಾಯವಲ್ಲವೇನು? ಅದೂ ಬಡವರ ಅಭಿವೃದ್ಧಿಯ ಯೋಜನೆಗಳಿಗೆ ಬಳಕೆಯಾಗುವುದಾದರೆ ದೇಶದ ಒಳಿತಲ್ಲವೇನು?

ಆದರೆ, ಪ್ರತಿಪಕ್ಷಗಳಿಗೆ ಒಂದು ಭಯವಿದೆ. ಅದೇನೆಂದರೆ ಎರಡೂ ಚುನಾವಣೆಗಳೂ ಜೊತೆಗೇ ನಡೆದರೆ ಮತದಾನದ ರೀತಿ ವಿಶಿಷ್ಟವಾಗಿರುತ್ತದೆ. ಜನರ ಒಲವು ಹೆಚ್ಚು ರಾಷ್ಟ್ರಸಂಬಂಧಿ ವಿಚಾರಗಳತ್ತ ವಾಲಿರುತ್ತದೆ ಅಂತ. ಸಹಜವೂ ಹೌದು. ಭಾರತೀಯ ಸೈನಿಕರು ಪಾಕಿಸ್ತಾನದ ಭಯೋತ್ಪಾದಕರ ದಾಳಿಗೆ ಸಜರ್ಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟಾಗ ಕಾಂಗ್ರೆಸ್ಸು ಅದನ್ನು ಪ್ರಶ್ನಿಸಿದರೆ, ಅನುಮಾನ ವ್ಯಕ್ತಪಡಿಸಿದರೆ ರೊಚ್ಚಿಗೇಳದಿರುತ್ತಾರೇನು? ರಾಜ್ಯದ ಚುನಾವಣೆಯಲ್ಲೂ ಅದರ ಫಲವನ್ನು ಅವರು ಉಣ್ಣಲೇಬೇಕು. ಹಾಗೆಂದೇ ಅವರು ಈ ಆಲೋಚನೆಗೆ ಬೆಚ್ಚಿ ಅದರುತ್ತಿದ್ದಾರೆ. ಆದರೆ ವಾಸ್ತವವೇನು ಗೊತ್ತೇ? ಮತದಾರರು ದಡ್ಡರಲ್ಲ ಅನ್ನೋದು. ಇದೇ ಕಳೆದ ಲೋಕಸಭಾ ಚುನಾವಣೆಯ ವೇಳೆಗೆ ಒರಿಸ್ಸಾದಲ್ಲಿ ವಿಧಾನಸಭಾ ಚುನಾವಣೆಯೂ ನಡೆದಿತ್ತು. ಮೋದಿ ಅಲೆ ಇಡೀ ದೇಶವನ್ನೇ ಕೊಚ್ಚಿಕೊಂಡು ಹೋಗಿದ್ದ ಕಾಲವದು. ಫಲಿತಾಂಶ ಬಂದಾಗ ಒರಿಸ್ಸಾದಲ್ಲಿ ಬಿಜೆಪಿಗೆ ಅತಿಹೆಚ್ಚು ಲೋಕಸಭಾ ಸ್ಥಾನಗಳು ಬಂದಿದ್ದರೆ, ಒರಿಸ್ಸಾ ವಿಧಾನಸಭೆ ಬಿಜು ಜನತಾದಳದ ಪಾಲಾಗಿತ್ತು. ಮೋದಿಯ ಅಲೆ ವಿಧಾನಸಭೆಯನ್ನು ಪೂತರ್ಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸೋತಿತ್ತು. ದೆಹಲಿಯ ಕಥೆಯೂ ಹಾಗೇ ಅಲ್ಲವೇನು? ಏಳರಲ್ಲಿ ಏಳೂ ಲೋಕಸಭಾ ಸ್ಥಾನಗಳೂ ಮೋದಿಯ ತೆಕ್ಕೆ ಸೇರಿದರೆ, ವಿಧಾನಸಭೆಯ ಬಹುಪಾಲು ಸ್ಥಾನಗಳು ಅವರ ಕೈಯಿಂದ ಜಾರಿಹೋಯ್ತು. ಅಂದರೆ ಜನರನ್ನು ದಡ್ಡರೆಂದು ಭಾವಿಸುವುದೇ ತಪ್ಪು ಎಂದಾಯ್ತು. ಕಳೆದ ಏಳೂ ದಶಕಗಳಿಂದ ಕಾಂಗ್ರೆಸ್ಸು ಭಾರತೀಯರನ್ನು ದಡ್ಡರೆಂದೇ ಬಿಂಬಿಸಿಕೊಂಡು ಬಂದಿದೆ. ಇವರು ಹಳ್ಳಿಗರು, ಅನಕ್ಷರಸ್ಥರು, ಅಜ್ಞಾನಿಗಳು, ಬರದಿದ್ದೆಲ್ಲವನ್ನೂ ಬರೆಸಿಕೊಳ್ಳುವ ಬಿಳಿಯ ಹಾಳೆಗಳು ಎಂದೆಲ್ಲಾ ಹೇಳಿದ್ದು ಅಪ್ಪಟ ಸುಳ್ಳೇ. ನೆನಪು ಮಾಡಿಕೊಳ್ಳಿ, ನೋಟು ಅಮಾನ್ಯೀಕರಣದ ವೇಳೆಗೆ ಭಾರತ ಡಿಜಿಟಲ್ ವಹಿವಾಟಿನ ಕುರಿತಂತೆ ಪ್ರಚಾರ ನಡೆಸುತ್ತಿತ್ತು. ಆಗ ಬಹುತೇಕ ಹಳ್ಳಿಗರೇ ತುಂಬಿಕೊಂಡಿರುವ ಭಾರತದಲ್ಲಿ ಇದು ನಡೆಯಲಾರದು. ಮೊಬೈಲ್ ಬಳಸುವ ಅರಿವಿಲ್ಲದ ಬಡ ಭಾರತೀಯರು ತೊಂದರೆಗೀಡಾಗುತ್ತಾರೆ ಎಂದೆಲ್ಲಾ ಪ್ರಚಾರ ಮಾಡಿತ್ತು ಕಾಂಗ್ರೆಸ್ಸು. ಈಗ ಆಗುತ್ತಿರುವುದೇನು ಗೊತ್ತೇ? ಡಿಜಿಟಲ್ ವಹಿವಾಟು ಎಷ್ಟು ವೇಗವಾಗಿ ಬೆಳೆದಿದೆ ಎಂದರೆ ತರಕಾರಿ ಮಾರುವವ ಕೂಡ ಫೋನ್ಪೇ ಮಾಡಿ ಎನ್ನುತ್ತಾನೆ. ಮೋದಿ ಬರದೇ ಹೋಗಿದ್ದರೆ ಭಾರತೀಯರ ದಡ್ಡತನದ ಕುರಿತಂತೆ ಬಹುಶಃ ನಾವು ನಂಬಿಕೊಂಡೇ ನಡೆದುಬಿಡುತ್ತಿದ್ದೆವೇನೋ. ಅಷ್ಟು ಚಾಣಾಕ್ಷ ಈ ಕಾಂಗ್ರೆಸ್ಸು! ಹೀಗಾಗಿಯೇ ಜನ ರಾಷ್ಟ್ರೀಯಮಟ್ಟದ ಪಾಟರ್ಿಗಳೆದುರಿಗೆ ಸ್ಥಳೀಯ ಸಮಸ್ಯೆಗಳನ್ನು ಬಲಿಕೊಟ್ಟುಬಿಡುತ್ತಾರೆ ಎಂಬುದರಲ್ಲಿ ಯಾವ ಅರ್ಥವೂ ಇಲ್ಲ. ಅಂದರೆ ನಮ್ಮ ರಾಜ್ಯಗಳ ಫೆಡರಲ್ ಸ್ಟ್ರಕ್ಚರ್ ಅಬಾಧಿತವಾಗಿಯೇ ಉಳಿಯಲಿದೆ. ಇಷ್ಟಕ್ಕೂ ಎಮಜರ್ೆನ್ಸಿಯನ್ನು ತಮ್ಮ ಮೂಗಿನ ನೇರಕ್ಕೆ ಹೇರಿದ ಕಾಂಗ್ರೆಸ್ಸು ಇಂದು ಈ ವಿಚಾರಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವೇ ಸರಿ. ತನ್ನ ಮನಸ್ಸಿಗೆ ಬಂದಂತೆ ನಡೆದುಕೊಂಡ ಹಿಟ್ಲರ್ನನ್ನು ಜರ್ಮನಿಯೇ ಬದಿಗೆ ಸರಿಸಿತು. ಆದರೆ ಎಮಜರ್ೆನ್ಸಿ ಹೇರಿದ ಇಂದಿರಾ ಇಂದಿಗೂ ಕಾಂಗ್ರೆಸ್ಸಿಗರಿಗೆ ಆರಾಧ್ಯದೈವ! ಸುಮ್ಮನೆ ನೆನಪಿಗಿರಲಿ ಅಂತ ಹೇಳಿದೆ ಅಷ್ಟೇ. ಮರೆತಿದ್ದೆ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಮೂರು ಚುನಾವಣೆಗಳು ಏಕಕಾಲಕ್ಕೇ ನಡೆದವಲ್ಲ, ಆಗ ರಾಜ್ಯಗಳ ಫೆಡರಲ್ ಸ್ಟ್ರಕ್ಚರ್ಗೆ ಧಕ್ಕೆ ಬಂದಿರಲಿಲ್ಲ ಮತ್ತು ಜನರ ಮನಸ್ಥಿತಿ ರಾಷ್ಟ್ರೀಯ ಪಕ್ಷಗಳಿಗೆ ಮತ ಹಾಕುವಂತದ್ದಾಗಿರುತ್ತದೆ ಎಂಬ ತೊಂದರೆ ಇವರಿಗಿರಲಿಲ್ಲ. ತಾವು ಅಧಿಕಾರದಲ್ಲಿದ್ದರೆ ಯಾವುದಾದರೂ ಸರಿ. ತಾವು ಅಧಿಕಾರ ವಂಚಿತರಾಗಿ ಕುಳಿತರೆ ಎಲ್ಲವೂ ತಪ್ಪೇ.


ಹಾಸ್ಯಾಸ್ಪದವಾದ ಸಂಗತಿ ಏನು ಗೊತ್ತೇ? ಒಂದಷ್ಟು ಸಂಸದರು ಚುನಾವಣೆಯಿಂದಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುತ್ತಿದ್ದಾರೆ. ಜನರನ್ನು ಶಾಶ್ವತವಾಗಿ ತಮ್ಮ ಅಡಿಯಲ್ಲಿರಿಸಿಕೊಳ್ಳುವ ಧಾಷ್ಟ್ರ್ಯದ ಮಾತುಗಳಿವು. ಸಕರ್ಾರದ ಬೊಕ್ಕಸಗಳಿಗೆ ನೇರ ಹತ್ತುಸಾವಿರ ಕೋಟಿ, ಪರೋಕ್ಷ ಐವತ್ತು ಸಾವಿರ ಕೋಟಿಯಷ್ಟಾದರೂ ಕಪ್ಪುಹಣದ ಚಲಾವಣೆ ಮಾಡಿಸಿ ಕೆಲವು ದಿನಗಳ ಕಾಲ ಉದ್ಯೋಗ ಸೃಷ್ಟಿಸುವ ಈ ಪ್ರಕ್ರಿಯೆಯನ್ನು ಹೇಗೆ ಸಮಥರ್ಿಸಿಕೊಳ್ಳುತ್ತಾರೋ ದೇವರೇ ಬಲ್ಲ!

ಆದರೆ ಒಂದಂತೂ ಸತ್ಯ. ಪ್ರಧಾನಿ ನರೇಂದ್ರಮೋದಿ ‘ಸಣ್ಣ ಪ್ರಮಾಣದ ಬದಲಾವಣೆಯತ್ತ ನನ್ನ ಮನಸ್ಸಿಲ್ಲ; ಕಣ್ಣಿಗೆ ರಾಚುವ ವಿಕಾಸದ ಕ್ರಾಂತಿಯಾಗಬೇಕಾಗಿದೆ’ ಎಂದೇ ಎಲ್ಲೆಡೆ ಹೇಳುತ್ತಿದ್ದಾರೆ. ಹೀಗಾಗಿ ಈ ವಿಕಾಸದ ಹಾದಿ ನಿಶ್ಚಿತ. ನಾವೆಲ್ಲರೂ ಸಿದ್ಧರಾಗಬೇಕಿದೆ ಅಷ್ಟೇ!

26ರ ತಾಳ್ಮೆಗೆ ಭಾರತ ಕಟ್ಟುವ ಶಕ್ತಿ!

26ರ ತಾಳ್ಮೆಗೆ ಭಾರತ ಕಟ್ಟುವ ಶಕ್ತಿ!

ಮೊನ್ನೆಯ ಜನವರಿ 26 ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿವಸವೇ ಸರಿ. ಈ ಎಡಪಂಥೀಯರು, ಜಿಹಾದಿಗಳು ಈ ದೇಶದಲ್ಲಿ ನಡೆಸುವ ಕುಕೃತ್ಯಗಳನ್ನು ತಕ್ಷಣಕ್ಕೆ ಮರೆತುಬಿಡುವ ವಿಶಾಲ ಹೃದಯ ನಮ್ಮದಾಗಿರುವುದರಿಂದ ಮತ್ತೊಮ್ಮೆ ನೆನಪಿಸಿಕೊಡುತ್ತಿದ್ದೇನೆ ಅಷ್ಟೇ. ಅಂದಿನ ಪರೇಡ್ಗೆ ನುಗ್ಗುತ್ತೇವೆಂದು ಟ್ರಾಕ್ಟರ್ಗಳೊಂದಿಗೆ ಬಂದ ಒಂದಷ್ಟು ಸಿಖ್ಖರ ವೇಷದಲ್ಲಿದ್ದ ಜಿಹಾದಿಗಳು ದೊಡ್ಡದ್ದನ್ನೇ ನಿರೀಕ್ಷಿಸುತ್ತಾ ಕುಳಿತಿದ್ದರು. ಕೊಟ್ಟ ಸಮಯಕ್ಕಿಂತ ಮುಂಚಿತವಾಗಿ ರ್ಯಾಲಿ ಶುರುಮಾಡಿದರು, ನಿಗದಿತ ಮಾರ್ಗವನ್ನು ಬಿಟ್ಟು ತಮ್ಮದ್ದೇ ಬೇರೊಂದು ಮಾರ್ಗವನ್ನು ಆರಿಸಿಕೊಂಡರು, ಕೆಂಪುಕೋಟೆಯನ್ನು ಏರಿಹೋಗುವ ಅಮೇರಿಕಾ ಮಾದರಿಯ ಹೋರಾಟದ ರೂಪು-ರೇಷೆಯನ್ನು ತಮ್ಮದಾಗಿಸಿಕೊಂಡರು. ಎಲ್ಲವೂ ಅವರಂದುಕೊಂಡಂತೆ ನಡೆದಿತು. ಒಂದೇ ಒಂದು ಬದಲಾವಣೆ ಎಂದರೆ ದೆಹಲಿಯ ಪೊಲೀಸರು ತಲ್ವಾರ್ಗಳಿಗೆದುರಾಗಿ ಬಂದೂಕು ಬಳಸದೇ ಲಾಠಿಯನ್ನು ಉಪಯೋಗಿಸಿದರು. ತಾವು ಏಟು ತಿಂದರು, ಆದರೆ ಪ್ರತಿಭಟನಾಕಾರರಿಗೆ ತಮ್ಮಿಂದ ಒಂದು ಗೆರೆಯೂ ಬೀಳದಂತೆ ನೋಡಿಕೊಂಡರು. ಬಹುಶಃ ಉದ್ರಿಕ್ತ ಗುಂಪಿನ ಮುಂದೆ ಯಾವ ರಕ್ಷಣೆಯೂ ಇಲ್ಲದೇ ತಮ್ಮನ್ನು ತಾವು ಕಾಯ್ದುಕೊಳ್ಳುವ ಸಾಹಸವಿದೆಯಲ್ಲ, ಅದು ಸಾಮಾನ್ಯವಾದ್ದಲ್ಲ. ಎಡಪಂಥೀಯ ವಿಚಾರಗಳ ಮಂದಿಯ ಮೇಲೆ ಈ ತಾಳ್ಮೆ ಪ್ರಹಾರವಾಗಿ ಬಿತ್ತು. ಬಹುಶಃ ಅವರ ಜಾಗದಲ್ಲಿ ಬಲಪಂಥೀಯರಿದ್ದಿದ್ದರೆ, ಕೈಚೆಲ್ಲಿ ಕುಳಿತುಬಿಡುತ್ತಿದ್ದರೇನೋ! ತಮ್ಮವರನ್ನೇ ವಿರೋಧಿಸುತ್ತಾ, ಮುಂದಿನ ನಾಲ್ಕೈದು ವರ್ಷಗಳ ಕಾಲ ಈ ರೀತಿಯ ಘಟನೆಗಳೇ ನಡೆಯದಂತೆ ಮಾಡಿಬಿಡುತ್ತಿದ್ದರೇನೋ. ಅವರುಗಳು ಹಾಗಲ್ಲ. ತಮಗಾದ ಹಿನ್ನಡೆಯಿಂದ ಮೈಕೊಡವಿಕೊಂಡೆದ್ದು ತಮ್ಮ ಹಿಂದಿನ ಯೋಜನೆಗಳಂತೆ ಕೆಲಸ ಮುಂದುವರೆಸಿದರು. ಈ ಇಡಿಯ ಹೋರಾಟದಲ್ಲಿ ಆದ ಅವಮಾನವನ್ನು ಸರಿದೂಗಿಸಿಕೊಳ್ಳಲೆಂದು ಭಾರತದ ಬಹುತೇಕರಿಗೆ ಗೊತ್ತೇ ಇರದಿದ್ದ, ಅಮೇರಿಕಾದ ಸೆಲೆಬ್ರಿಟಿಯೊಬ್ಬಳಿಂದ ಟ್ವೀಟ್ ಮಾಡಿಸಿಬಿಟ್ಟರು. ನಿಜಕ್ಕೂ ಇದು ಉಲ್ಕಾಪಾತವೇ. ಈ ಟ್ವೀಟ್ ಮಾಡಿದ ರಿಹಾನಾ ಟ್ವಿಟರ್ನಲ್ಲಿ ಒಂದು ಕೋಟಿ ಅನುಯಾಯಿಗಳನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಜಗತ್ತಿನ ಮೂಲೆ-ಮೂಲೆಗೂ ಸಂದೇಶವನ್ನು ತಲುಪಿಸಬಲ್ಲ ಸಾಮಥ್ರ್ಯವನ್ನು ಪಡೆದಿದ್ದಾಳೆ. ಭಾರತದ ರೈತರ, ಇಲ್ಲಿನ ಬೆಳೆಗಳ, ಇಲ್ಲಿನ ಪರಿಸ್ಥಿತಿಯ ಕಿಂಚಿತ್ತೂ ಅರಿವಿರದಿದ್ದ ಆಕೆ ರೈತ ಹೋರಾಟದ ಕುರಿತಂತೆ ನಾವ್ಯಾಕೆ ಮಾತನಾಡುತ್ತಿಲ್ಲ? ಎಂದು ಕೇಳುವ ಮೂಲಕ ಹಳ್ಳ ಹಿಡಿದಿದ್ದ ಹೋರಾಟಕ್ಕೆ ಜೀವ ತುಂಬಿಬಿಟ್ಟಳು. ಅದರ ಹಿಂದು-ಹಿಂದೆಯೇ ಬಾಲ್ಯಾವಸ್ಥೆಯಲ್ಲಿಯೇ ತನ್ನ ಪರಿಸರ ಕಾಳಜಿಯ ಕಣ್ಣೀರಿನ ಮೂಲಕ ಜಗತ್ತಿನ ಗಮನ ಸೆಳೆದ ಸ್ವಿಡನ್ನಿನ ಗ್ರೆಟಾ ಥನ್ಬಗರ್್ ಕೂಡ ಈ ಕುರಿತಂತೆ ಟ್ವೀಟ್ ಮಾಡಿ, ಜಗತ್ತು ಭಾರತದ ಈ ರೈತ ಹೋರಾಟದ ಕುರಿತಂತೆ ಮಾತನಾಡುವ ಅನಿವಾರ್ಯತೆಯನ್ನು ಸೃಷ್ಟಿಸಿಬಿಟ್ಟಳು. ಅಲ್ಲಿಗೆ ಗಣರಾಜ್ಯೋತ್ಸವ ದಿನದಂದು ರೈತರ ಹೆಸರಿನಲ್ಲಿ ಖಲಿಸ್ತಾನಿ-ಜಿಹಾದಿಗಳು-ನಕ್ಸಲರು ತಿರಂಗಾಕ್ಕೆ ಮಾಡಿದ ಅಪಮಾನವೆಲ್ಲ ತೊಳೆದುಹೋಗಿಬಿಟ್ಟಿತು. ಇಲ್ಲಿಂದ ಇನ್ನು ಪಾರಾಗುವುದು ಕಷ್ಟವೆಂದೇ ಭಾವಿಸಲಾಗಿತ್ತು. ಇನ್ನು ನಿಧಾನವಾಗಿ ಕೆಲವು ರಾಷ್ಟ್ರದ ಪ್ರಮುಖರು ಮಾತನಾಡುತ್ತಾರೆ. ಜಾಗತಿಕ ಸೆಲೆಬ್ರಿಟಿಗಳು ಬಾಯ್ಬಿಡುತ್ತಾರೆ. ಅದನ್ನನುಸರಿಸಿ ಇಲ್ಲಿನ ಸಿನಿಮಾ ನಟರು, ಕ್ರಿಕೆಟ್ ಸ್ಟಾರುಗಳು ರೈತ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ. ಸಹಜವಾಗಿಯೇ ದೇಶದ ಮೂಲೆ-ಮೂಲೆಗಳಲ್ಲಿ ಇವರುಗಳ ಅಭಿಮಾನಿಗಳು ಬೀದಿಗೆ ಬಂದು ರೈತ ಕಾಯ್ದೆ ಸರಿಯೋ-ತಪ್ಪೋ ಗೊಡವೆಗೆ ಹೋಗದೇ ಗಲಾಟೆ ಆರಂಭಿಸಿಬಿಡುತ್ತಾರೆ. ಎಂಬೆಲ್ಲಾ ಚಿತ್ರಗಳು ಒಮ್ಮೆ ಕಣ್ಮುಂದೆ ಹಾದುಹೋದವು. ದೇಶದ ಮೂಲೆ-ಮೂಲೆಗಳಲ್ಲೂ ಅಶಾಂತಿ ತಾಂಡವವಾಡುವುದನ್ನು ಒಂದು ಕ್ಷಣ ಎಲ್ಲರೂ ಊಹಿಸಿಕೊಂಡಿರಲು ಸಾಕು. ನರೇಂದ್ರಮೋದಿಯವರ ಜೀವನದ ಕೆಟ್ಟ ಅಧ್ಯಾಯವಾಗಿ ಈ ಘಟನೆ ಗುರುತಿಸಲ್ಪಡುತ್ತದೆಯಲ್ಲದೇ ಇದು ಅವರ ಪತನದ ಮುನ್ಸೂಚನೆಯೂ ಆಗಿರುತ್ತಿತ್ತು!

ಏನೇ ಹೇಳಿ, ಮೋದಿಯವರಿಗೆ ಭಗವತ್ಕೃಪೆ ಅಸಾಧಾರಣವಾಗಿಯೇ ಇದೆ. ಇನ್ನೇನು ಅವರು ತಮ್ಮ ನಿಂತ ನೆಲವನ್ನೇ ಕಳೆದುಕೊಳ್ಳಲಿದ್ದಾರೆ ಎಂದೆನಿಸುವಾಗಲೇ ಭಗವಂತನೇ ಅವರ ಹೊತ್ತು ನಿಂತುಬಿಡುತ್ತಾನೆ. ಇಲ್ಲೂ ಹಾಗೇ ಆಯ್ತು. 18ರ ಗ್ರೆಟಾ ಥನ್ಬಗರ್್ ರೈತ ಹೋರಾಟದ ಪರವಾಗಿ ಮಾತನಾಡಿ ಸುಮ್ಮನಾಗಿದ್ದರೆ ಸಾಕಿತ್ತು. ಸ್ವಲ್ಪ ಬುದ್ಧಿವಂತಿಕೆ ತೋರಿಸಲು ಹೋಗಿ ತಾವೆಲ್ಲರೂ ಹೇಗೆ ಸಹಕರಿಸಬಹುದು ಎನ್ನುವ ವಿಚಾರವಾಗಿ ತಾವೇ ತಯಾರಿಸಿಕೊಂಡ ಟೂಲ್ಕಿಟ್ (ಸಲಕರಣಾ ಜೋಳಿಗೆ)ಯನ್ನು ಹಂಚಿಕೊಂಡುಬಿಟ್ಟಳು. ಇದು ಎಷ್ಟು ಭಯಾನಕವಾಗಿತ್ತೆಂದರೆ ಜನವರಿ 26ರ ಆಕ್ರಮಣದ ಮುನ್ಸೂಚನೆಯನ್ನು ಜನವರಿ 3ಕ್ಕೂ ಮುನ್ನ ದಾಖಲಿಸಲಾಗಿತ್ತು. ಜನವರಿ 3ರಂದು ಏನು ಮಾಡಬೇಕು ಎಂಬುದರಿಂದ ಆರಂಭವಾಗುವ ಈ ಟೂಲ್ಕಿಟ್ ಫೆಬ್ರವರಿ 6ರ ಚಕ್ಕಾ ಜಾಮ್ ಹೇಗೆ ನಡೆಯಬೇಕೆಂಬುದರ ಕುರಿತಂತೆಯೂ ಸೂಕ್ಷ್ಮವಾಗಿ ಉಲ್ಲೇಖಿಸಿತ್ತು. ಇದರಲ್ಲಿನ ಒಂದಷ್ಟು ಅಂಶಗಳಂತೂ ಭಾರತವನ್ನು ಆಂತರಿಕವಾಗಿ ಒಡೆಯಲು ಬೇಕಾದ ಸಿದ್ಧತೆಗಳ ಕುರಿತಂತೆಯೇ ಇತ್ತು. ತಮ್ಮ ಉದ್ದೇಶಗಳು ಏನೆಂಬುದನ್ನು ಇದರಲ್ಲಿ ಸ್ಪಷ್ಟವಾಗಿ ಹೇಳಿಕೊಳ್ಳಲಾಗಿದೆ. ಮೊದಲನೆಯದ್ದು ಕೃಷಿಕಾಯ್ದೆಯನ್ನು ಹಿಂದೆಗೆಸುವುದು. ಎರಡನೆಯದು ಯಾವುದಾದರೂ ವಿಚಾರವನ್ನು ಒಪ್ಪಿಕೊಳ್ಳದವರ ಮೇಲೆ ಫ್ಯಾಸಿಸ್ಟ್ ಶಕ್ತಿಗಳು ಹೇಗೆ ಆಕ್ರಮಣ ಮಾಡುತ್ತವೆ ಎಂದು ತೋರಿಸುವುದು. ಮೂರನೆಯದ್ದು ಭಾರತದ ದೊಡ್ಡ ವ್ಯಾಪಾರೋದ್ಯಮಿಗಳ ಮತ್ತು ಮಾಧ್ಯಮದ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು. ನಾಲ್ಕನೆಯದು ಭಾರತ ಗಳಿಸಿರುವ ಯೋಗ ಮತ್ತು ಚಾಯ್ ಗೌರವವನ್ನು ನಾಶಮಾಡುವುದು. ಐದನೆಯದ್ದು ಪಂಜಾಬಿನ ದಕ್ಷಿಣ ಏಷ್ಯಾದ ಜನಾಂಗಗಳಿಗೆ ಈ ವಿಚಾರದ ಕುರಿತಂತೆ ಹೆಚ್ಚು-ಹೆಚ್ಚು ಅರಿವು ಮೂಡಿಸುವುದು ಮತ್ತು ಕೊನೆಯದಾಗಿ ಜನವರಿ 26ಕ್ಕೆ ಜಾಗತಿಕ ಮಟ್ಟದಲ್ಲಿ ಎಲ್ಲೆಡೆಯೂ ಭಾರತದ ವಿರುದ್ಧ ಆಂದೋಲನ ಮಾಡುವುದು.

ಉದ್ದೇಶದ ಒಂದೊಂದು ಅಂಶಗಳೂ ಬಲು ಭಯಾನಕವೇ. ಕೃಷಿಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡುವುದೇಕೆ ಎಂಬ ಪ್ರಶ್ನೆಗೆ ಈವರೆಗೂ ಯಾರಲ್ಲೂ ಉತ್ತರವಿಲ್ಲ. ಕೃಷಿಕಾಯ್ದೆಯಿಂದ ಒಳಿತಾಗುತ್ತದೆ ಎಂದು ಹೇಳಿದವರುಗಳೇ, ಈ ನಿಧರ್ಾರವನ್ನು ಕೇಂದ್ರಸಕರ್ಾರ ತೆಗೆದುಕೊಂಡಾಗ ವಿರೋಧಕ್ಕೆ ನಿಂತಿದ್ದು ಸಂಶಯವನ್ನೇ ಹುಟ್ಟಿಸುವಂಥದ್ದು. ಸಿಎಎ ಪ್ರತಿಭಟನೆಗೆ, ಆಟರ್ಿಕಲ್ 370 ಕುರಿತ ಪ್ರತಿಭಟನೆಗಳಿಗೆ, ಟ್ರಿಪಲ್ ತಲಾಕ್ ಕದನಗಳಿಗೆಲ್ಲ ಜಗ್ಗದ ಕೇಂದ್ರಸಕರ್ಾರ ಕೃಷಿಕರ ವಿಚಾರ ಬಂದಾಗ ಸಾಕಷ್ಟು ಬಗ್ಗಿತ್ತು. ಒಂದೂವರೆ ವರ್ಷಗಳ ಕಾಲ ಈ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂಬ ಭರವಸೆಯನ್ನೂ ನೀಡಿತ್ತು. ಅಷ್ಟಕ್ಕೇ ತೃಪ್ತಿಯಾಗಿ ರೈತರು ಮರಳಿದ್ದರೆ ಹೆಚ್ಚು-ಕಡಿಮೆ ಗೆದ್ದಂತೆಯೇ ಆಗಿರುತ್ತಿತ್ತು. ಆದರೆ ಇವರಿಗೆ ಹಣ ಪೂರೈಸುತ್ತಿದ್ದ ಮಂದಿಗೆ ಚಚರ್ೆಯಾಗಬೇಕಾಗಿದ್ದ ವಿಚಾರ, ಕೃಷಿಕಾಯ್ದೆ ಅಲ್ಲವೇ ಅಲ್ಲ. ಇವರು ಭಾರತದ ನಾಶವನ್ನು ನೋಡಬೇಕೆಂದು ಬಯಸುವವರಾಗಿದ್ದರಲ್ಲ; ಸಮಸ್ಯೆಯಿರೋದು ಅಲ್ಲಿ. ಆ ಕಾರಣಕ್ಕಾಗಿಯೇ ಪ್ರತಿಭಟನೆಗೆ ಮೋದಿಯಂತಹ ಶಕ್ತಿಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಜಗತ್ತಿಗೆ ತೋರ್ಪಡಿಸಲೆಂದೇ 26ರ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದೆಂದು ಎರಡನೇ ಉದ್ದೇಶ ಸ್ಪಷ್ಟಪಡಿಸುತ್ತದೆ. ಮೋದಿಯ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಅಂದು ಪೊಲೀಸರ ಪ್ರತಿಕ್ರಿಯೆ ಹಾಗಿರುತ್ತಿರಲಿಲ್ಲ. ಒಂದಿಬ್ಬರಿಗಾದರೂ ಗುಂಡು ಬಿದ್ದಿರುತ್ತಿತ್ತು. ಅದ್ಯಾವ ಪರಿಯ ತಾಳ್ಮೆ ಸಕರ್ಾರವನ್ನು ಹೊಕ್ಕಿತ್ತೋ ದೇವರೇ ಬಲ್ಲ. ಈ ರೀತಿಯ ಕೆರಳಿಸಬಲ್ಲ ಆಂದೋಲನಕಾರಿಗಳನ್ನು ರೈತರೆಂಬ ಒಂದೇ ಕಾರಣಕ್ಕೆ ಸಕರ್ಾರ ಸಹಿಸಿಕೊಂಡಿತು. ಇಲ್ಲವಾದರೆ ಮಂಗಳೂರಿನಲ್ಲಿ ಗೊಲಿಬಾರ್ನ ಮೂಲಕ ಪುಂಡರಿಗೆ ಉತ್ತರ ಕೊಟ್ಟಿದ್ದರಲ್ಲ, ಅದೇ ರೀತಿ ಆಗಿರುತ್ತಿತ್ತು. ಈ ಒಟ್ಟಾರೆ ಆಂದೋಲನವನ್ನು ರೂಪಿಸಿದವರು ಮೋದಿಯೊಂದಿಗೆ ಯೋಗಿಜೀಯ ಹೆಸರನ್ನೂ ಕೆಡಿಸಬೇಕೆಂದು ನಿಶ್ಚಯ ಮಾಡಿದ್ದರೆನಿಸುತ್ತದೆ. ಹೀಗಾಗಿಯೇ ಯೋಗ ಮತ್ತು ಚಾಯ್ ಕುರಿತ ಗೌರವವನ್ನು ಧ್ವಂಸ ಮಾಡಬೇಕೆಂದು ಅವರು ಸ್ಪಷ್ಟವಾದ ದನಿಯಲ್ಲಿ ಹೇಳಿದ್ದರು. ಜಾಗತಿಕ ಮಟ್ಟದಲ್ಲಿ ಭಾರತದ ಯೋಗಕ್ಕೆ ಅಪಾರವಾದ ಮೌಲ್ಯ ಬಂದಿದೆ. ಮತ್ತದು ನರೇಂದ್ರಮೋದಿಯವರ ಮಹತ್ವದ ಸಾಧನೆಯೇ. ಹಾಗೆಂದು ಮೇಲ್ನೋಟಕ್ಕೆ ಅನಿಸಿದರೂ ಯೋಗ ಮತ್ತು ಚಾಯ್ಗಳ ಗೂಢಾರ್ಥ ಯೋಗಿ ಮತ್ತು ಮೋದಿ ಎಂದೇ ಆಗಿರಬೇಕು ಅನಿಸುತ್ತದೆ. ಮೋದಿ ಟೀ ಮಾರಾಟ ಮಾಡುತ್ತಿದ್ದ ಒಬ್ಬ ಸಾಮಾನ್ಯ ಬಾಲಕನಾಗಿ ಬೆಳೆದವರು. ಭಾರತೀಯ ಪ್ರಜಾಪ್ರಭುತ್ವದ ವೈಶಿಷ್ಟ್ಯವೆಂದರೆ ಅಂತಹ ಸಾಮಾನ್ಯ ವ್ಯಕ್ತಿಯೂ ಶ್ರೇಷ್ಠ ಜಾಗತಿಕ ನಾಯಕನಾಗಿ ಬೆಳೆಯಬಲ್ಲ ವಾತಾವರಣವಿದೆ. ಇದಕ್ಕಿಂತ ಒಳ್ಳೆಯ ಪ್ರಜಾಪ್ರಭುತ್ವವನ್ನು ಜಗತ್ತಿನಲ್ಲಿ ಕಾಣುವುದು ಸಾಧ್ಯವೇ ಇಲ್ಲ. ಈಗ ಇದೇ ವ್ಯಕ್ತಿಯಿಂದಾಗಿ ಭಾರತದ ಶ್ರೇಷ್ಠ ಪ್ರಜಾಪ್ರಭುತ್ವ ಉಧ್ವಸ್ಥಗೊಳ್ಳುತ್ತಿದೆ ಎಂದು ಸಾಬೀತುಪಡಿಸಬೇಕಿತ್ತು. ಜೊತೆಗೆ ಮೋದಿಯ ಕನಸುಗಳಿಗೆ ಬೆಂಬಲವಾಗಿ ನಿಂತು ಚೀನಾದ ಕಣ್ಣಲ್ಲಿ ನೀರು ಹಾಕಿಸುತ್ತಿರುವ ರಿಲಯನ್ಸ್ನ ಅಂಬಾನಿಗೂ, ಅದಾನಿಗೂ ಪಾಠ ಕಲಿಸಬೇಕೆಂದು ಈ ಮಂದಿ ನಿಶ್ಚಯಿಸಿಬಿಟ್ಟಿದ್ದರು. ಅವರ ಉದ್ದೇಶಗಳ ಮೂರನೇ ಅಂಶ ಅದನ್ನೇ ಹೇಳುತ್ತದೆ. ಇವರಿಗೆದುರಾಗಿ ನಿಂತಿರುವ ಅರ್ನಬ್ ಗೋಸ್ವಾಮಿ ಮೇಲೂ ಇವರ ಕಣ್ಣಿರಲು ಸಾಕು. ಆತನನ್ನು ಮಹಾರಾಷ್ಟ್ರ ಸಕರ್ಾರ ಜೈಲಿಗೆ ಕಳಿಸಿದ್ದು ಇದೇ ಷಡ್ಯಂತ್ರದ ಭಾಗವಿರಬೇಕೆಂದು ಈಗ ಅನಿಸುತ್ತಿದೆ. ಇವೆಲ್ಲಕ್ಕಿಂತಲೂ ಕೆಟ್ಟ ಸಂಗತಿ ಎಂದರೆ ಈ ಆಂದೋಲನಾಕಾರಿಗಳು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಕೆಡಿಸಿ ಕರೋನಾ ನಂತರ ಭಾರತಕ್ಕೆ ಗುಳೆ ಹೊರಡುತ್ತಿರುವ ಕಂಪೆನಿಗಳನ್ನು ಹೋಗದಂತೆ ತಡೆಯುವ ಪ್ರಯತ್ನವನ್ನೂ ಮಾಡಿದ್ದರು. ಆದರೆ ಯಾವುದೂ ಅಂದುಕೊಂಡಂತಾಗಲಿಲ್ಲ ಅಷ್ಟೇ.

ನೀವು ನಂಬಲಾರಿರಿ. ಗ್ರೆಟಾ ಹಂಚಿಕೊಂಡಿರುವ ಮಾಹಿತಿಗಳಲ್ಲಿ ರಿಹಾನಾ ಎಂದು, ಯಾವ ಟ್ವೀಟನ್ನು ಮಾಡಬೇಕೆಂಬ ಉಲ್ಲೇಖವೂ ಇತ್ತು. ಆಕೆಯೂ ಅಚ್ಚುಕಟ್ಟಾಗಿ ಇವರು ಹೇಳಿರುವುದನ್ನೇ ಟ್ವೀಟ್ ಮಾಡುವ ಮೂಲಕ ತಾನು ಹಣ ಪಡೆದೇ ಈ ಕೆಲಸ ಮಾಡಿದ್ದೇನೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾಳೆ. ಈ ಟ್ವೀಟಿಗಾಗಿ ಆಕೆ 18 ಕೋಟಿರೂಪಾಯಿ ಪಡೆದಿದ್ದಾಳೆ! ಈ ಇಡಿಯ ಷಡ್ಯಂತ್ರದ ಹಿಂದಿರುವ ಪೊಯೆಟಿಕ್ ಜಸ್ಟಿಸ್ ಎಂಬ ಸಂಸ್ಥೆ ಖಲಿಸ್ತಾನಿಗಳ ದನಿಯಾಗಿರುವಂಥದ್ದು. ಇಡಿಯ ಆಂದೋಲನಕ್ಕೆ ಬೇಕಾದ ಹಣ, ವ್ಯವಸ್ಥೆ, ದೇಶದ ಹೊರಗೆ ನಿಂತು ಅವರೇ ಮಾಡುತ್ತಿದ್ದಾರೆ. ಇದು ಇವರಿಂದ ಸಂಚಾಲಿತವಾದ್ದರಿಂದಲೇ ಪಂಜಾಬ್, ಹರಿಯಾಣಗಳಿಂದ ಆಚೆ ಹಬ್ಬಲೇ ಇಲ್ಲ. ಇದು ಮೊನ್ನೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಅಡ್ಡಗಟ್ಟುವ ಆಂದೋಲನ, ಚಕ್ಕಾಜಾಮ್ ಅಪಯಶಸ್ಸು ಕಂಡಾಗಲೇ ಸಾಬೀತಾಗಿಹೋಯ್ತು. ಸ್ವತಃ ಪಂಜಾಬ್ನಲ್ಲೇ ಈ ಆಂದೋಲನಕ್ಕೆ ಬೆಂಬಲವಿಲ್ಲದಿದ್ದುದ್ದು ಎದ್ದು ಕಾಣುತ್ತಿತ್ತು. ಅನೇಕ ಕಡೆಗಳಲ್ಲಿ ಕಾಂಗ್ರೆಸ್ಸಿನ, ಕಮ್ಯುನಿಸ್ಟರ ಎಂಟ್ಹತ್ತು ಕಾರ್ಯಕರ್ತರು ರಸ್ತೆಗೆ ಬಂದು ನಿಂತು ಒಂದೆರಡು ಘೋಷಣೆಗಳನ್ನು ಕೂಗಿ ಹೊರಟಿದ್ದು ಬಿಟ್ಟರೆ ಮತ್ತೇನೂ ನಡೆಯಲೇ ಇಲ್ಲ. ಖಲಿಸ್ತಾನಿಗಳ ದೇಶವಿರೋಧಿ ಕೃತ್ಯಕ್ಕೆ ಸಮಾಧಿಯಾಗಿ ಹೋಯ್ತು. ದುರಂತವೇನು ಗೊತ್ತೇ? ಇಷ್ಟೆಲ್ಲಾ ಬಗೆಯಲ್ಲಿ ಇವರು ನಗ್ನವಾಗಿ ತೆರಕೊಂಡರೂ ಅವರ ಬೆಂಬಲಿಗರ ಅರಚಾಟ ಮಾತ್ರ ನಿಂತೇ ಇಲ್ಲ. ಪತ್ರಕರ್ತರು, ಲೇಖಕರು, ಒಂದಷ್ಟು ಸಿನಿಮಾ-ಕ್ರಿಕೆಟ್ ಸ್ಟಾರುಗಳು ಇಂದಿಗೂ ಅರಚಾಡುತ್ತಲೇ ಇದ್ದಾರೆ. ಸೋತ ನಂತರವೇ ಇಷ್ಟು ಮೆರೆಯುವ ಈ ಮಂದಿ, ಇನ್ನು ಗ್ರೆಟಾ ಈ ಟೂಲ್ಕಿಟ್ ಅನ್ನು ಹಂಚಿಕೊಳ್ಳದೇ ಹೋಗಿದ್ದಿದ್ದರೆ ಏನು ಮಾಡಿಬಿಡುತ್ತಿದ್ದರೋ ದೇವರೇ ಬಲ್ಲ.

ವಿದೇಶಾಂಗ ಸಚಿವರಾದ ಜಯ್ಶಂಕರ್ರವರ ಆಕ್ರಮಣಕಾರಿ ಮನೋವೃತ್ತಿಯನ್ನು ಈ ಹೊತ್ತಲ್ಲಿ ಅಭಿನಂದಿಸಲೇಬೇಕು. ವಿದೇಶಿಗರು ಭಾರತದ ವಿರುದ್ಧವಾಗಿ ಮಾತನಾಡಿ ಒಂದು ವಾತಾವರಣವನ್ನು ಸೃಷ್ಟಿಸುವ ಮುನ್ನವೇ ಭಾರತದಲ್ಲಿರುವ, ಜಗತ್ತನ್ನು ಪ್ರಭಾವಿಸಬಲ್ಲ, ಸೆಲೆಬ್ರಿಟಿಗಳ ಮೂಲಕ ಭಾರತ ಪರವಾದ ಟ್ವೀಟ್ಗಳನ್ನು ಮಾಡಿಸುವ ಮೂಲಕ, ಅವರ ಉದ್ದೇಶವನ್ನು ನುಚ್ಚುನೂರುಗೊಳಿಸಿದರು. ಅದರ ಪರಿಣಾಮವಾಗಿ ಸ್ವಿಡನ್ ಗ್ರೆಟಾ ಮಾತಿಗೂ ತನಗೂ ಸಂಬಂಧವಿಲ್ಲವೆಂದಿತು. ಈ ಎಲ್ಲದರ ಹಿಂದೆ ಕಾಣದ ಕೈಯಂತೆ ಇದ್ದ ಅಮೇರಿಕಾದ ಹೊಸ ಅಧ್ಯಕ್ಷರ ಬಳಗವೂ ಬಾಯ್ಮುಚ್ಚಿಕೊಂಡೇ ಕೇಂದ್ರಸಕರ್ಾರದ ನೀತಿಗಳನ್ನು ಸಮಥರ್ಿಸಬೇಕಾಯ್ತು. ಕೆನಡಾ ಅಧ್ಯಕ್ಷ ಟ್ರುಡೋನ ಮಾತೇ ಹೊರಡಲಿಲ್ಲ. ಸ್ವತಃ ಇಂಗ್ಲೆಂಡು ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದುಬಿಟ್ಟಿತು. ಭಾರತದ ವಿರುದ್ಧ ಒಟ್ಟಾಗಿದ್ದ ಎಲ್ಲರ ಕೆನ್ನೆಗಳು ಈಗ ಊದಿಕೊಂಡುಬಿಟ್ಟಿವೆ. ಕಪಾಳಕ್ಕೆ ಬಿದ್ದ ಈ ಏಟಿನಿಂದ ಸುಧಾರಿಸಿಕೊಳ್ಳಲು ಇನ್ನೂ ಒಂದು ವರ್ಷವೇ ಬೇಕಾಗಬಹುದೇನೋ. ಆದರೆ ಹಣದ ಹರಿವಂತೂ ಜೋರಾಗಿಯೇ ಆಗುತ್ತಿದೆ. ಅತ್ತ ಮೋದಿ ಸಕರ್ಾರವೂ ಸುಮ್ಮನೇ ಕುಳಿತಿಲ್ಲ. ವಿದೇಶದಿಂದ ಯಾರ್ಯಾರ ಖಾತೆಗೆ ಹಣ ಬಂದು ಬೀಳುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅಂಥವರನ್ನು ಚೆನ್ನಾಗಿಯೇ ರುಬ್ಬುತ್ತಿದೆ. 26ರಂದು ಮೆರೆದ ಅನೇಕರು ಈಗ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಶಶಿತರೂರ್, ರಾಜ್ದೀಪ್ ಸರ್ದೇಸಾಯಿಯ ಮೇಲೂ ಎಫ್ಐಆರ್ನ ತೂಗುಕತ್ತಿಯಿದೆ. ಹೀಗಾಗಿಯೇ ಅನೇಕರು ಬಾಲ ಮುದುರಿಕೊಂಡು ಬಿದ್ದಿದ್ದಾರೆ. ಇವೆಲಾ ಸಾಧ್ಯವಾಗಿದ್ದು ಏಕೆ ಗೊತ್ತೇ? ಗಣರಾಜ್ಯೋತ್ಸವದಂದು ದೆಹಲಿಯ ಪೊಲೀಸರು ಕೆಲವು ಗಂಟೆಗಳ ಕಾಲ ತಾಳ್ಮೆ ಕಾಯ್ದುಕೊಂಡಿದ್ದರಿಂದ! ಎಲ್ಲ ದೇಶದ್ರೋಹಿಗಳು ಈಗ ಒಂದೇ ಕಡೆ ಸಿಕ್ಕಿಬಿದ್ದಿದ್ದಾರೆ. ಇನ್ನು ಆಟ ಸಲೀಸು.

ಬಿಜೆಪಿಗರು ಏಳುವುದು ಯಾವಾಗ?!

ಬಿಜೆಪಿಗರು ಏಳುವುದು ಯಾವಾಗ?!


ಏನೇ ಹೇಳಿ, ಮೋದಿ ಅಧಿಕಾರಕ್ಕೆ ಬಂದಮೇಲೆ ರೈತರಿಗಂತೂ ಭಾಗ್ಯ ಖುಲಾಯಿಸಿದೆ. ಮೊನ್ನೆ ಮೊನ್ನೆಯವರೆಗೂ ರೈತರೆಂದರೆ ಬಡವರು, ಆತ್ಮಹತ್ಯೆ ಮಾಡಿಕೊಳ್ಳುವವರು ಎಂಬೆಲ್ಲಾ ಕಲ್ಪನೆ ಇತ್ತು. ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳೇ ರೈತರ ಕುರಿತ ಹಾಡೊಂದಕ್ಕೆ ಚಿತ್ರಗಳನ್ನು ಬಳಸುವಾಗ ಆಕಾಶದತ್ತ ಮುಖಮಾಡಿ, ಬಡಕಲು-ಬಡಕಲಾಗಿದ್ದ ರೈತನನ್ನೇ ಉಪಯೋಗಿಸಿದ್ದರು. ಆದರೆ, ಸಿಂಘು ಗಡಿಯತ್ತ ಧಾವಿಸಿ ಬರುತ್ತಿರುವ ರೈತರು ಈಗ ಫಾಚರ್ುನರ್ಗಳನ್ನು, ಇನ್ನೊವಾಗಳನ್ನು, ಅತ್ಯಾಧುನಿಕವಾದ ಐಷಾರಾಮಿ ಕಾರುಗಳನ್ನು ಬಳಸಿ ಬರುತ್ತಿದ್ದಾರೆ. ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿಯೇ. ರೈತನೊಬ್ಬ ಇಷ್ಟು ಶ್ರೀಮಂತನಾಗುವುದನ್ನು ಕಣ್ಣಿಂದ ಕಾಣುವ ಭಾಗ್ಯ ದೊರಕಿತಲ್ಲ ಎಂದು ಎಷ್ಟು ಬಾರಿ ಭಗವಂತನಿಗೆ ಕೃತಜ್ಞತೆ ಸಮಪರ್ಿಸಿದರೂ ಅದು ಕಡಿಮೆಯೇ. ರೈತ ಈಗ ಮೊದಲಿಗಿಂತ ಹೆಚ್ಚು ಸ್ವಾವಲಂಬಿ. ಅವನು ಬೆಂಬಲ ಬೆಲೆ ಖಾತ್ರಿ ಪಡಿಸಿಕೊಳ್ಳಲೆಂದು ನಡೆಯುತ್ತಿರುವ ಹೋರಾಟಕ್ಕೆ ಯಾರ ಬೆಂಬಲವನ್ನೂ ಬಯಸುತ್ತಿಲ್ಲ. ತಾನೇ ಬಂದ ರೈತರಿಗೆ ಪಿಜ್ಜಾಗಳನ್ನು ಒದಗಿಸುತ್ತಿದ್ದಾನೆ, ಬಂದವರಿಗೆ ಹಣ ಕೊಡುತ್ತಿದ್ದಾನೆ, ರಾತ್ರಿ ಮದ್ಯ ಸರಬರಾಜು ಮಾಡುತ್ತಿದ್ದಾನೆ, ಲಕ್ಷಾಂತರ ಟ್ರ್ಯಾಕ್ಟರ್ಗಳು ಬೀದಿಗೆ ಬರುವಂತೆ ಮಾಡುತ್ತಿದ್ದಾನೆ ಮತ್ತು ತನ್ನ ಆಗ್ರಹವನ್ನು ಒಪ್ಪಿಕೊಳ್ಳುವಂತೆ ಮಾಡಲು ತಲ್ವಾರ್ಗಳನ್ನು ಬಳಸಿ ಕಾದಾಡುತ್ತಿದ್ದಾನೆ. ಜೊತೆಗೆ ಪಂಜಾಬಿನ ಮುಖ್ಯಮಂತ್ರಿಯೇ ಹೇಳಿರುವಂತೆ ಪಕ್ಕದ ರಾಷ್ಟ್ರಗಳಿಂದ ಡ್ರೋನ್ಗಳಲ್ಲೇ ಶಸ್ತ್ರಗಳನ್ನು ಆಮದು ಮಾಡಿಕೊಳ್ಳುವಷ್ಟು ಮುಂದುವರೆದಿದ್ದಾನೆ. ಹತ್ತು ವರ್ಷಗಳ ಹಿಂದೆ ರೈತನೊಬ್ಬ ಇಷ್ಟು ಬುದ್ಧಿವಂತನಾಗಿರುವುದನ್ನು, ಸಮರ್ಥನಾಗಿರುವುದನ್ನು, ಆಕ್ರಮಣಕಾರಿಯಾಗಿರುವುದನ್ನು ಮತ್ತು ಸಿರಿವಂತನಾಗಿರುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಎಂಥ ಅಚ್ಛೆ ದಿನಗಳು ಬಂದವು!


ಹೀಗೆಲ್ಲಾ ಹೇಳಿದೊಡನೆ ಅನೇಕರು ಉರಿದು ಬೀಳುತ್ತಾರೆ. ರೈತರು ಗೂಂಡಾಗಳೇನು? ಎಂದು ಪ್ರಶ್ನಿಸುತ್ತಾರೆ. ಮೋದಿ ಭಕ್ತರು ಮಾತ್ರ ಹೀಗೆಲ್ಲಾ ಮಾತನಾಡಲು ಸಾಧ್ಯ ಎಂದು ಮೂದಲಿಸುತ್ತಾರೆ. ಕೃಷಿಭೂಮಿಯಲ್ಲಿ ಮೈ ಮುರಿಯುವಷ್ಟು ಕೆಲಸವಿದ್ದಾಗ, ಮನೆಯ ಮಕ್ಕಳು ಮತ್ತು ಇಡಿಯ ಪರಿವಾರ ಸೇರಿ ದುಡಿದರೂ ಕೃಷಿ ಉತ್ಪನ್ನ ಸಾಲದೆನ್ನುವ ಸಂಕಟದಲ್ಲಿ ಆತನಿರುವಾಗ 65 ದಿನಗಳ ಕಾಲ ಹೋರಾಟ ಮಾಡುವಷ್ಟು ತ್ರಾಣ ಬಂದಿದ್ದಾದರೂ ಎಲ್ಲಿಂದ? ಒಂದೋ ಬಂದವನು ಕೃಷಿಕನೇ ಅಲ್ಲದಿರಬೇಕು ಅಥವಾ ಆತನಿಗೆ ಅಲ್ಲಿಯವರೆಗೂ ಆಗಮಿಸಲು ವ್ಯವಸ್ಥಿತವಾದ ಬೆಂಬಲ ದೊರೆತಿರಬೇಕು. ಹಾಗೆ ಒಮ್ಮೆ ಕಣ್ಣಾಡಿಸಿ ನೋಡಿ. ಕರೋನಾ ಭಾರತವನ್ನು ನುಂಗಿ ಹಾಕಿಬಿಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಭಯಾನಕ ರೋಗದ ಕೇಂದ್ರವಾಗಿರುವ ಚೀನಾದ ಒಂದಿಡೀ ನಗರವನ್ನೇ ಕರೋನಾ ನುಂಗಿ ತೇಗಿಬಿಟ್ಟಿತು. ಆದರೆ ಭಾರತ ಮಾತ್ರ ಒಂದು ವರ್ಷದಿಂದ ನಿರಂತರವಾಗಿ ಅದನ್ನು ಎದುರಿಸುತ್ತಾ, ಅದರಿಂದ ಒದಗಬಹುದಾದ ತೀವ್ರತರದ ಆಘಾತಗಳನ್ನು ನುಂಗಿಕೊಳ್ಳುತ್ತಾ ಬಲಾಢ್ಯವಾಗಿ ನಿಂತಿತಲ್ಲದೇ ಆನಂತರದ ದಿನಗಳಲ್ಲಿ ಇನ್ನೂ ಹೆಚ್ಚು ಸಶಕ್ತವಾಗಿರುವ ಲಕ್ಷಣಗಳನ್ನು ತೋರಲಾರಂಭಿಸಿತು. ಭಾರತದ ಜಿಡಿಪಿ ಎಷ್ಟು ಕುಸಿಯಬಹುದೆಂದು ಅಂದಾಜಿಸಲಾಗಿತ್ತೋ ಅಷ್ಟು ಪಾತಾಳಕ್ಕಂತೂ ಇಳಿಯಲಿಲ್ಲ. ಅಷ್ಟೇ ಅಲ್ಲ, ಇತ್ತೀಚಿನ ಐಎಮ್ಎಫ್ ವರದಿಯ ಪ್ರಕಾರ ಭಾರತ ದಾಖಲೆಯ ವೃದ್ಧಿದರವನ್ನು ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ಈ ವಿಶ್ವಾಸದ ಮೇಲೆಯೇ ಈ ಬಾರಿಯ ಬಜೆಟ್ ಮಂಡಿಸಲು ಹೊರಟಿದ್ದಾರೆ ನಿರ್ಮಲಾ ಸೀತಾರಾಮನ್. ಇದು ಅನೇಕರಿಗೆ ಸಹಿಸಲಸಾಧ್ಯವಾದ ಉರಿ. ಮೋದಿಯ ಕಾಲಘಟ್ಟದಲ್ಲಿ ಆಥರ್ಿಕ ಸ್ಥಿತಿ ಹಳ್ಳ ಹಿಡಿಯಿತು ಎಂದು ಹೇಳುವ ತವಕ ಹೊಂದಿದ್ದವರೆಲ್ಲ ಈಗ ಕಂಗಾಲಾಗಿಬಿಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಭಾರತದ ವಿಜ್ಞಾನಿಗಳು ಕರೋನಾಕ್ಕೆ ಔಷಧಿಯನ್ನು ಕಂಡುಹಿಡಿದು ಜಗತ್ತಿನ ಭೂಪಟದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿಯಂತೂ ವ್ಯಾಕ್ಸಿನ್ ರಾಜನೀತಿಯನ್ನು ಸಮರ್ಥವಾಗಿಯೇ ಮಾಡುತ್ತಿದ್ದಾರೆ. ಜಗತ್ತಿನ ಅನೇಕ ರಾಷ್ಟ್ರಗಳಿಗೆ ಔಷಧಿಯನ್ನು ಕಳಿಸುತ್ತಿರುವುದಲ್ಲದೇ ಅಕ್ಕಪಕ್ಕದ ರಾಷ್ಟ್ರಗಳಿಗೆ ಮೊದಲ ಹಂತದ ಡೋಸ್ಗಳನ್ನು ಉಚಿತವಾಗಿಯೇ ನೀಡುತ್ತಿದ್ದಾರೆ. ಇದು ನಿಸ್ಸಂಶಯವಾಗಿ ಚೀನಾದ ಬಲವನ್ನು ಜಾಗತಿಕ ಮಟ್ಟದಲ್ಲಿ ಕುಸಿಯುವಂತೆ ಮಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಭಾರತದ ವ್ಯಾಕ್ಸಿನ್ ಉತ್ಪಾದನಾ ಸಾಮಥ್ರ್ಯವನ್ನು ಹೊಗಳಿ ಭಾರತ ಜಗತ್ತಿನ ಆಸ್ತಿ ಎಂದು ಹೇಳಿರುವುದಂತೂ ಅನೇಕ ಸಂದೇಶವನ್ನು ಕೊಡುವಂತಿದೆ. ಇದರ ಜೊತೆ-ಜೊತೆಗೆ ಕರೋನಾ ಕಾಲಘಟ್ಟದಲ್ಲಿ ಚೀನಾದ ಮೇಲಿನ ಆಕ್ರೋಶ ಅಲ್ಲಿರುವ ಕಂಪೆನಿಗಳನ್ನು ಒಕ್ಕಲೆಬ್ಬಿಸುವ ಮೂಲಕ ವ್ಯಕ್ತಗೊಳ್ಳುತ್ತಿದೆ. ಅದಾಗಲೇ ಅನೇಕ ರಾಷ್ಟ್ರಗಳಿಗೆ ಕಂಪೆನಿಗಳು ವಲಸೆ ಹೋಗಿವೆಯಲ್ಲದೇ ಭಾರತ ಅವರೆಲ್ಲರ ಆಕರ್ಷಣೆಯ ಕೇಂದ್ರವಾಗಿದೆ. 80ರ ದಶಕದಲ್ಲಿ ಲಂಗು ಲಗಾಮಿಲ್ಲದೇ ರೆಡ್ ಟೇಪಿಸಂಗೆ ಆಹುತಿಯಾಗಿದ್ದ ಭಾರತ ನರೇಂದ್ರಮೋದಿಯವರ ಆಗಮನದ ನಂತರ ಅನುಶಾಸನದ ಚೌಕಟ್ಟಿಗೆ ಒಳಪಟ್ಟಿದೆ. ಇಲ್ಲಿ ಕಂಡು ಬರುತ್ತಿರುವ ಆಥರ್ಿಕ ಶಿಸ್ತು, ಹೊಸ ಆಲೋಚನೆಗಳಿಗೆ ಸಿಗುತ್ತಿರುವ ವೇದಿಕೆ, ಅಧಿಕಾರಿಗಳ ಬಂಧನದಿಂದ ಮುಕ್ತವಾಗಿರುವ ವ್ಯಾಪಾರೋದ್ದಿಮೆಗಳು ಜಗತ್ತಿನ ಕಣ್ಣು ಕುಕ್ಕುತ್ತಿವೆ. ಯಾವ ದೃಷ್ಟಿಯಿಂದ ನೋಡಿದರೂ ಅವರೆಲ್ಲರಿಗೂ ಭಾರತ ಅತ್ಯುತ್ತಮ ಸ್ಥಾನವೇ. ಹೀಗಾಗಿ ಚೀನಾ ಆತಂಕಕ್ಕೊಳಗಾಗಿದೆ. ಹೇಗಾದರೂ ಸರಿ ಭಾರತಕ್ಕೆ ದಕ್ಕಿರುವ ಈ ಗೌರವವನ್ನು ಕಡಿಮೆ ಮಾಡಿ ತನ್ನ ತಾನು ಅನಿವಾರ್ಯವಾಗಿಸಿಕೊಳ್ಳುವ ಧಾವಂತ ಅದಕ್ಕಿದೆ.


ಕಾರಣವೂ ಇಲ್ಲದಿಲ್ಲ. ಚೀನಾ ಇಷ್ಟು ದಿನ ಗಳಿಸಿದ ನಂಬಿಕೆಯನ್ನು ಈಗ ಪೂತರ್ಿ ಕಳಕೊಂಡಿದೆ. ಜಗತ್ತೆಲ್ಲಾ ಕರೋನಾ ಕಾಲಘಟ್ಟದಲ್ಲಿ ಆಥರ್ಿಕ ದುಃಸ್ಥಿತಿಯಿಂದ ನರಳುತ್ತಿದ್ದರೆ ಚೀನಾ 20 ಸಾವಿರಕೋಟಿ ಮಾಸ್ಕ್ಗಳನ್ನು, 200 ಕೋಟಿ ಪಿಪಿಇ ಕಿಟ್ಗಳನ್ನು, 100 ಕೋಟಿ ಟೆಸ್ಟ್ಕಿಟ್ಗಳನ್ನು ಜಗತ್ತಿಗೆ ರಫ್ತು ಮಾಡುವ ಮೂಲಕ ತನ್ನ ಉತ್ಪಾದನಾ ದರವನ್ನು ಕಾಯ್ದುಕೊಂಡೇ ಬಂತು. ಅದು ಅಲ್ಪಕಾಲದ ಮೆರವಣಿಗೆ ಅಷ್ಟೇ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜಗತ್ತು ಚೀನಾದ ವಿರುದ್ಧ ಆಕ್ರೋಶಗೊಂಡಿರುವುದಂತೂ ಸತ್ಯ. ಜ್ಯಾಕ್ಮಾ ಕಾಣೆಯಾದದ್ದು ಮತ್ತು ಆನಂತರ ಜಗತ್ತಿನ ಮುಂದೆ ಕಾಣಿಸಿಕೊಂಡಿದ್ದು ತಾತ್ಕಾಲಿಕವಾಗಿ ಚೀನಾದ ಮೇಲಾಗಬಹುದಾಗಿದ್ದ ಪ್ರಹಾರವನ್ನು ಕಡಿಮೆ ಮಾಡಿತಾದರೂ ಜ್ಯಾಕ್ಮಾ ತೊಂದರೆಯಿಲ್ಲದಂತೆ ಬದುಕುತ್ತಿದ್ದಾರೆ ಎಂಬುದರ ಕುರಿತಂತೆ ಯಾರಿಗೂ ನಂಬಿಕೆಯೇ ಉಳಿದಿಲ್ಲ. ಆತನ ಖ್ಯಾತಿ ಜಿನ್ಪಿಂಗ್ನ ಎದೆ ನಡುಗಿಸುತ್ತಿದೆ. ಸ್ವತಃ ಕಮ್ಯುನಿಸ್ಟ್ ಪಾಟರ್ಿಯಲ್ಲಿ ಜ್ಯಾಕ್ಮಾಗಿರುವ ಬೆಂಬಲ ಜಿನ್ಪಿಂಗ್ನನ್ನು ಅವ್ಯಕ್ತವಾಗಿ ಕಾಡುತ್ತಿರಬಹುದು. ಈತ ಅಧ್ಯಕ್ಷನಾಗುವ ಮುನ್ನವೂ ಹೀಗೆ ಕೆಲವು ದಿನಗಳ ಕಾಲ ಕಾಣೆಯಾಗಿದ್ದ ಎಂಬುದನ್ನು ತಾಳೆ ಹಾಕಿ ನೋಡಿದರೆ ನಿಸ್ಸಂಶಯವಾಗಿ ಚೀನಾದಲ್ಲಿ ಬದಲಾವಣೆಯ ಪರ್ವ ಆರಂಭವಾಗಬಹುದು. ಜಗತ್ತು ಇವ್ಯಾವುದನ್ನೂ ನಂಬಲು ಸಿದ್ಧವಿಲ್ಲ. ಹೀಗಾಗಿಯೇ ಭಾರತದ ಬೆಳವಣಿಗೆ ಚೀನಾದ ಅಂತ್ಯವೇ ಸರಿ!


ಎಲ್ಲವೂ ಸರಿಯಾಗಿಯೇ ನಡೆದಿದ್ದರೆ ಇಂದಿನ ಕಥೆ ಬೇರೆಯೇ ಇರುತ್ತಿತ್ತು. ಆದರೆ ಅಮೇರಿಕಾದಲ್ಲಿ ಟ್ರಂಪ್ ಸೋಲುವುದರೊಂದಿಗೆ ಭಾರತದ ವೇಗದ ಓಟಕ್ಕೆ ಬ್ರೇಕ್ ಬಿದ್ದಿದ್ದಂತೂ ಸತ್ಯ. ಬೈಡನ್ನ ಹೊಸ ತಂಡ ಮೊದಲಿನಿಂದಲೂ ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಪ್ರತ್ಯಕ್ಷ ಸಹಕಾರಿಗಳೇ. ಖಾಲಿಸ್ತಾನಿ ಉಗ್ರರಿಗೆ ಪರೋಕ್ಷ ಬೆಂಬಲ ನೀಡುವವರೇ. ಜೊತೆಗೆ ಭಾರತದಲ್ಲಿರುವ ಎಡಪಂಥೀಯರ ಚಿಂತನೆಗಳೊಂದಿಗೆ ಅವರ ವಿಚಾರಗಳು ಸಮೀಕರಣಗೊಳ್ಳುತ್ತವೆ. ಆದ್ದರಿಂದಲೇ ಮೋದಿ ಸಕರ್ಾರ ಈ ಹಿಂದೆ ಅನುಭವಿಸುತ್ತಿದ್ದ ಅಮೇರಿಕಾ ಪ್ರೇರಿತ ಜಾಗತಿಕ ಗೌರವವನ್ನು ಇನ್ನು ಮುಂದೆ ಅನುಭವಿಸುವುದು ಕಷ್ಟವಾಗಬಹುದು. ಜೊತೆಗೆ ಅದಾಗಲೇ ಜಾಜರ್್ ಸೊರೋಸ್ ದೊಡ್ಡಮೊತ್ತದ ಹಣವನ್ನು ಚೆಲ್ಲುವ ಮೂಲಕ ಭಾರತವನ್ನು ಅಸ್ಥಿರಗೊಳಿಸುತ್ತಿದ್ದಾನೆ ಎಂಬ ವರದಿಗಳು ಬಂದಿರುವುದರಿಂದ ಮುಂದಿನ ದಿನಗಳು ಬಲುಕಠಿಣವೇ. ಅತ್ತ ಬೊರಿಸ್ ಜಾನ್ಸನ್ ಇಂಗ್ಲೆಂಡಿನ ಪ್ರಧಾನಿಯಾದ ಮೇಲೆ ನಾವೆಲ್ಲರೂ ಸಂಭ್ರಮಿಸಿದ್ದೆವಲ್ಲಾ ಆತನೂ ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಾ ಅಲ್ಲಿರುವ ಭಾರತೀಯರ ಸಹಕಾರವನ್ನು ಬಲುಪ್ರೀತಿಯಿಂದಲೇ ಆದರಿಸಿದ್ದ. ಆದರೀಗ ಎಲ್ಲಾ ತಿರುಗು-ಮುರುಗಾಗುವ ಲಕ್ಷಣಗಳು ಕಾಣುತ್ತಿವೆ. ಇಂಗ್ಲೆಂಡಿನಲ್ಲೊಂದು ಚಾತಮ್ ಹೌಸ್ ಅಂತಿದೆ. ಅಲ್ಲಿ ಇಂಗ್ಲೆಂಡಿನ ಪಾಲಿಸಿಗಳ ಮೇಲೆ ಪ್ರಭಾವ ಬೀರಬಲ್ಲಂತಹ ತಜ್ಞರ ತಂಡವಿದೆ. ಅಲ್ಲಿದ್ದವರಲ್ಲೇ ಬಹುತೇಕರು ಈ ಹಿಂದೆ ಪ್ರಧಾನಮಂತ್ರಿಗಳೂ ಆಗಿದ್ದು ಈ ತಂಡದ ವಿಚಾರಗಳಿಗೆ ಅಲ್ಲಿ ಅಪಾರವಾದ ಬೆಲೆ ಇದೆ. ಇತ್ತೀಚೆಗೆ ನಡೆದ ಇಲ್ಲಿನ ಚಚರ್ೆಯೊಂದನ್ನು ಭಾರತದ ಈ ಹಿಂದಿನ ವಿದೇಶಾಂಗ ಕಾರ್ಯದಶರ್ಿ ಅಕ್ಬರುದ್ದೀನ್ ಬಲುಸೂಕ್ಷ್ಮವಾಗಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಬ್ರೆಕ್ಸಿಟ್ನ ನಂತರ ಇಂಗ್ಲೆಂಡ್ ಒಂದು ಮಹಾಶಕ್ತಿಯ ನೆರಳಾಗಿ ಬದುಕುವುದಕ್ಕಿಂತ ಜಾಗತಿಕ ಶಕ್ತಿಯಾಗಿ, ಜಾಗತಿಕ ಸಂಧಾನಕಾರನಾಗಿ ಬೆಳೆಯಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ, ಇಂಗ್ಲೆಂಡು ಆರು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆಯಬೇಕೆಂಬ ನೀಲಿನಕಾಶೆ ತಯಾರಿಸಿಕೊಟ್ಟಿದೆ. ಉದಾರವಾದಿಗಳ ಶಕ್ತಿ ಹೆಚ್ಚಿಸುವ, ಅಂತರ್ರಾಷ್ಟ್ರೀಯ ಶಾಂತಿ ಮತ್ತು ರಕ್ಷಣೆಯ ನೇತಾರನಾಗುವ, ಹವಾಮಾನ ಬದಲಾವಣೆಯ ನೇತೃತ್ವ ವಹಿಸುವ, ಜಗತ್ತಿನ ಆರೋಗ್ಯದ ಕೇಂದ್ರವಾಗುವ, ತೆರಿಗೆ ಪ್ರಾಮಾಣಿಕತೆಯ ಮತ್ತು ಆಥರ್ಿಕ ಅಭಿವೃದ್ಧಿಯ ಮುಖ್ಯಸ್ಥನಾಗುವ, ಸೈಬರ್ ಸ್ಪೇಸ್ಗಳ ರಕ್ಷಕನಾಗುವ ಒಟ್ಟಾರೆ ಮಾರ್ಗವನ್ನು ಅದು ಯೋಜಿಸಿದೆ. ಅಚ್ಚರಿಯೆಂದರೆ, ಮೋದಿ ಪ್ರಧಾನಿಯಾಗಿ ಬಂದಮೇಲೆ ಭಾರತ ಇವೆಲ್ಲವುಗಳಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಇದೇ ಅವರಿಗಿರುವ ಉರಿ. ಹೀಗಾಗಿಯೇ ಈ ತಂಡ ಭಾರತವನ್ನು ಮಿತ್ರನಂತೆ ಕಾಣುತ್ತಿಲ್ಲ ಬದಲಿಗೆ, ರಷ್ಯಾ, ಟಕರ್ಿ, ಸೌದಿಗಳ ಜೊತೆ ಸೇರಿಸಿ ಶತ್ರುವಿನ ರೂಪದಲ್ಲೇ ಕಾಣುತ್ತಿದೆ. ಬೊರಿಸ್ ಜಾನ್ಸನ್ ಭಾರತವನ್ನು ಜಿ7 ಗುಂಪಿಗೆ ಸೇರಿಸಿಕೊಳ್ಳಲು ಆಹ್ವಾನ ಕೊಡುತ್ತೇನೆಂದಿದ್ದನ್ನು ಈ ಸಮಿತಿ ಕಟಕಿಯಾಡಿದೆಯಲ್ಲದೇ ಇದು ಇಂಗ್ಲೆಂಡಿನ ಬೆಳವಣಿಗೆಯನ್ನು ತಡೆಯಲಿದೆ ಎಂದು ಎಚ್ಚರಿಸಿದೆ. ಅದರರ್ಥ ಪಶ್ಚಿಮದ ದಿಕ್ಕಿನಿಂದ ಇದುವರೆಗೂ ಭಾರತಕ್ಕೆ ಸಿಗುತ್ತಿದ್ದ ಸ್ವಲ್ಪಮಟ್ಟದ ಸವಲತ್ತುಗಳೂ ಸಿಗುವುದಿಲ್ಲವೆಂದಾಯ್ತು. ಹೀಗಾಗಿಯೇ ಕಾಶ್ಮೀರದ ವಿಷಯವಿರಲಿ, ರೈತರ ಪ್ರತಿಭಟನೆಯಿರಲಿ, ಇವೆಲ್ಲವೂ ಇಂಗ್ಲೆಂಡಿನ ಸಂಸತ್ತಿನಲ್ಲೂ ಜೋರಾಗಿಯೇ ಚಚರ್ೆಗೆ ಬರುತ್ತಿದೆ. ಕಳದೊಂದು ಐದಾರು ವರ್ಷಗಳಿಂದ ಜಗತ್ತು ರಾಷ್ಟ್ರೀಯವಾದಿಗಳ ಕೈಲಿತ್ತಲ್ಲ, ಹೇಗಾದರೂ ಮಾಡಿ ಅದನ್ನು ಕಸಿಯಬೇಕೆಂಬ ಜಿದ್ದಿಗೆ ಇವರೆಲ್ಲ ಬಿದ್ದಿದ್ದಾರೆ. ರೈತರ ಪ್ರತಿಭಟನೆಗೆ ಈಗ ಪೂರ್ಣಪ್ರಮಾಣದ ಸಹಕಾರ ಒದಗುತ್ತಿರುವುದು ಈ ದಿಕ್ಕುಗಳಿಂದಲೇ!


ಇವೆಲ್ಲವೂ ಯಾರಿಗೂ ಗೊತ್ತಿರಲಿಲ್ಲವೆಂದೇನೂ ಅಲ್ಲ. ಗುಪ್ತಚರ ಇಲಾಖೆ ಇವೆಲ್ಲವುಗಳ ಮಾಹಿತಿಯ ಮೇಲೆ ಕುಳಿತಿರುತ್ತದೆ. ರೈತರ ಕುರಿತ ಕಾನೂನುಗಳು ಆರಂಭದಲ್ಲಿ ಶಾಂತವಾಗಿ ಸ್ವೀಕರಿಸಲ್ಪಟ್ಟು ನಂತರ ಏಕಾಕಿ ಭುಗಿಲೆದ್ದಾಗಲೇ ಇವೆಲ್ಲವನ್ನೂ ಊಹಿಸಬೇಕಿತ್ತು. ಅಂಡು ಸುಟ್ಟ ಬೆಕ್ಕಿನಂತಾಗಿರುವ ಚೀನಾ, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಪಾಕಿಸ್ತಾನ, ಅಮೇರಿಕಾದಲ್ಲಿ ಬದಲಾಗಿರುವ ರಾಜಕೀಯ ಸಮೀಕರಣ, ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಚಚರ್ೆಗಳು ಎಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಕೊನೆಯ ಯುದ್ಧಕ್ಕೆ ಸಜ್ಜಾಗಿರುವ ಕಾಂಗ್ರೆಸ್ಸು ಮತ್ತು ಎಡಪಂಥೀಯರು ಇವುಗಳ ಲಾಭವನ್ನು ಪಡೆದೇ ತೀರುತ್ತಾರೆ ಎಂಬುದರ ಕಲ್ಪನೆ ಇರಲೇಬೇಕಿತ್ತು. ಸ್ವಲ್ಪಮಟ್ಟಿಗೆ ಎಡವಿದೆವು ಎನಿಸುತ್ತಿದೆ. ಆದರೆ ಎಡವಿದ್ದೆಲ್ಲಿ ಗೊತ್ತೇ? ಎಲ್ಲವನ್ನೂ ಮೋದಿಯ ಜೋಳಿಗೆಗೆ ಹಾಕಿ ಕೈತೊಳೆದು ಕುಳಿತುಕೊಳ್ಳುವ ಎರಡು ಮತ್ತು ಮೂರನೇ ಹಂತದ ನಾಯಕರುಗಳ ಮಟ್ಟದಲ್ಲಿ. ದೇಶದ ಯಾವ ಭಾಗಗಳಲ್ಲಿಯೂ ಈ ಮಸೂದೆಯ ಪರವಾಗಿರುವ ರೈತರನ್ನು ಒಟ್ಟುಗೂಡಿಸುವ ಪ್ರಯತ್ನಗಳು ನಡೆದೇ ಇಲ್ಲ. ಕೊಬ್ಬಿ ಬೆಳೆದಿರುವ ನಾಯಕರುಗಳಿಗೆ ಮೋದಿಯ ಹೆಸರು ಹೇಳಿ ಚುನಾವಣೆ ಗೆಲ್ಲುವ ಕಲೆ ಗೊತ್ತಿದೆ ಮತ್ತು ಗೆದ್ದ ನಂತರ ಏರಿದ ಏಣಿಯನ್ನು ಒದೆಯುವ ಕಲೆಯೂ ಸಿದ್ಧಿಯಾಗಿದೆ. ಹೀಗಾಗಿಯೇ ಆಂದೋಲನ ನಿಧಾನವಾಗಿ ಹಬ್ಬುತ್ತಿರೋದು. ಕನರ್ಾಟಕದಲ್ಲೂ ಗ್ರಾಮವಾಸ್ತವ್ಯ, ರೈತ ಸಮಾವೇಶಗಳು ಎಂಬ ಘೋಷಣೆಯಾದವೇ ಹೊರತು ರೈತರನ್ನು ಮುಟ್ಟುವ ಪ್ರಯತ್ನಗಳಾಗಲಿಲ್ಲ. ಕನರ್ಾಟಕದಲ್ಲಿ ರೈತ ಪ್ರತಿಭಟನೆಗಳಿಲ್ಲ ಎಂದು ಮೂಗು ಮುರಿಯಬೇಡಿ. ಜನವರಿ 26ರ ಕೆಟ್ಟ ಘಟನೆಯ ನಂತರ ಮತ್ತೆ ಬಲುದೊಡ್ಡ ಸಂಖ್ಯೆಯಲ್ಲಿ ಜನರನ್ನು ಸಂಘಟಿಸುವ ತಾಕತ್ತು ಅವರಿಗಿದೆ ಎಂದಾದರೆ ಈ ವಿಷವನ್ನು ದೇಶಕ್ಕೆಲ್ಲಾ ಹಬ್ಬಿಸುವ ಸಾಮಥ್ರ್ಯವೂ ಇದೆ ಎಂದರ್ಥ. ಸಕರ್ಾರಗಳಲ್ಲಿ ಅಧಿಕಾರ ಅನುಭವಿಸುತ್ತಾ, ಲಾಟುಗಟ್ಟಲೆ ದುಡ್ಡು ಮಾಡಿಕೊಂಡು, ಬಾರು-ಪಬ್ಬುಗಳಲ್ಲಿ ಕಾಲಕಳೆದು ಮೈಮರೆತಿರುವವರಿಗೆ ದೆವ್ವ ಮನೆ ಎದುರು ಬಂದಾಗಲೇ ಎಚ್ಚರವಾಗೋದು. ಯಾರು ಬೇರೆಯ ಪಕ್ಷಗಳಿಂದ ಬಂದಿದ್ದಾರೋ ಅವರು ಮತ್ತೊಂದು ಕಾರಣವನ್ನು ಕೊಟ್ಟು ಈ ಪಕ್ಷವನ್ನೂ ಸಲೀಸಾಗಿ ಬಿಟ್ಟುಹೋಗಬಲ್ಲರು. ಆದರೆ ದಶಕಗಳಿಂದ ಕಷ್ಟಪಟ್ಟು ಕಟ್ಟಿ ಬೆಳೆಸಿದರಲ್ಲ, ಅವರು ಬಿಟ್ಟು ಹೋಗುವುದು ಸಾಧ್ಯವೇ ಇಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ ಇದು ಎಂತಹ ವಿಷಮ ಪರಿಸ್ಥಿತಿ ಎಂದರೆ ಕೊಬ್ಬಿ ನುಗ್ಗುತ್ತಿರುವ ಈ ಗೂಳಿಯ ಕೊಂಬುಗಳನ್ನು ಹಿಡಿದು ಈಗಲೇ ಪಳಗಿಸಲಿಲ್ಲವೆಂದರೆ ಇದು ಕಳೆದ ಏಳು ವರ್ಷಗಳ ಸಾಧನೆಯನ್ನು ನುಂಗಿ ನೀರು ಕುಡಿದುಬಿಡಲಿದೆ. ರೈತರ ಹೆಸರಿನಲ್ಲಿ ನಡೆದ ಚಳುವಳಿಗಳು ಅಧಿಕಾರಸ್ಥರನ್ನು ನುಂಗಿಯೇ ಅಂತಿಮ ಗುರಿ ತಲುಪಿರೋದು. ಈ ಚಳುವಳಿಯ ಒಂದೇ ಒಂದು ಸಮಾಧಾನಕರ ಅಂಶವೆಂದರೆ ಇಲ್ಲಿ ರೈತರಿಗಿಂತಲೂ ಹೆಚ್ಚು ಉದ್ಯಮಿಗಳಿದ್ದಾರೆ ಮತ್ತು ರಾಜಕಾರಣಿಗಳಿದ್ದಾರೆ.


ಸವಾಲಿನ ದಿನಗಳು ಈಗ ಬಂದಿವೆ. ಜಗ್ನೇಷ್. ಹಾದರ್ಿಕ್, ರೋಹಿತ್, ಕೊರೆಗಾಂವ್ ಇವೆಲ್ಲವನ್ನೂ ಮುಂದಿಟ್ಟುಕೊಂಡು ನಡೆಸಿದ ಹೋರಾಟಗಳೆಲ್ಲ ಹಳ್ಳ ಹಿಡಿದವು. ಇದು ಅಷ್ಟು ಸುಲಭಕ್ಕೆ ಜಾರುವಂಥದ್ದಲ್ಲ. ರಾಷ್ಟ್ರವನ್ನುಳಿಸಲು ಪ್ರತಿಯೊಬ್ಬರೂ ಭಾಗವಹಿಸಬೇಕಾದ ಹೊತ್ತು..

ಬೋಸರನ್ನು ವಿರೋಧಿಸುವವರೂ ಇದ್ದರು, ಎಂದರೆ ನಂಬುತ್ತೀರಾ?!

ಬೋಸರನ್ನು ವಿರೋಧಿಸುವವರೂ ಇದ್ದರು, ಎಂದರೆ ನಂಬುತ್ತೀರಾ?!

ಸುಭಾಷ್ಚಂದ್ರ ಬೋಸರ 125ನೇ ಜಯಂತಿ. ಕೊನೆಗೂ ಆ ಪುಣ್ಯಾತ್ಮನಿಗೆ ಸಿಗಬೇಕಾದ ಗೌರವ ಈಗ ಸಿಗುತ್ತಿದೆ. ಅವರು ತೀರಿಕೊಂಡರು ಎನ್ನುವುದನ್ನು ನಂಬುವುದೇ ಆದರೆ ಹಾಗೆ ತೀರಿಕೊಳ್ಳುವ ಮುನ್ನ ಬೆಂಕಿಯಿಂದ ಆವರಿಸಿಕೊಂಡಿದ್ದ ಅವರು ತಮ್ಮ ಜೊತೆಗಾರ ಕರ್ನಲ್ ಹಬಿಬುರ್ ರೆಹಮಾನ್ರಿಗೆ ‘ನಾನು ಕೊನೆ ಉಸಿರಿನವರೆಗೂ ನನ್ನ ದೇಶಕ್ಕಾಗಿ ಕಾದಾಡಿದೆ ಎಂಬುದನ್ನು ದೇಶವಾಸಿಗಳಿಗೆ ತಿಳಿಸಿಬಿಡು’ ಎಂದಿದ್ದರಂತೆ. ಅದೇ ಅವರ ಕೊನೆಯ ಮಾತೂ ಕೂಡ. ಇಷ್ಟಕ್ಕೂ ನೇತಾಜಿ ದೇಶಕ್ಕಾಗಿಯೇ ತಮ್ಮನ್ನು ಸಮಪರ್ಿಸಿಕೊಂಡಿದ್ದವರು ಎಂಬುದು ದೇಶವಾಸಿಗಳಿಗೆ ಗೊತ್ತಿರಲಿಲ್ಲವೇ? ಅಥವಾ ಯಾರಾದರೂ ಅವರ ಕುರಿತಂತೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಾ ಜನರ ತಲೆಕೆಡಿಸಿದ್ದರೆ? ಕೇಳಿಕೊಳ್ಳಲೇಬೇಕಾದ ಪ್ರಶ್ನೆ ಅಲ್ಲವೇನು?


ಸ್ವಾತಂತ್ರ್ಯದ ಮುಂಚೂಣಿಯ ಹೋರಾಟ ತನ್ನದ್ದೇ ಎಂದು ನಿರ್ಧರಿಸಿಬಿಟ್ಟಿದ್ದ ಕಾಂಗ್ರೆಸ್ಸಿಗೆ ಆ ಹೋರಾಟವನ್ನು ಮತ್ತೊಬ್ಬ ನಾಯಕ ಮುಂದುವರೆಸುವುದು ಸುತರಾಂ ಇಷ್ಟವಿರಲಿಲ್ಲ. ಸಹಜವಾಗಿಯೇ ಗಾಂಧಿ-ನೆಹರೂ ಆದಿಯಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ಸನ್ನು ಬಿಟ್ಟು ಬೆಳೆಯುತ್ತಿರುವ ಸುಭಾಷರ ಕುರಿತಂತೆ ಅಸಮಾಧಾನ ಹೊಂದಿಯೇ ಇದ್ದರು. ಸ್ವತಃ ಸುಭಾಷರೇ ಹೇಳುತ್ತಾರಲ್ಲ, ‘ಒಂದು ಹಂತದ ನಂತರ ಕಾಂಗ್ರೆಸ್ಸು ತನ್ನ ಬುದ್ಧಿಯನ್ನೇ ಗಾಂಧೀಜಿಯವರ ಬಳಿ ಗಿರವಿ ಇಟ್ಟುಬಿಟ್ಟಿದೆ’ ಅಂತ. ಹಾಗೆಯೇ ಆಗಿತ್ತು ಕೂಡ. ಈಗ ಗಾಂಧಿಯ ಪಾಳಯದಲ್ಲಿರದಿದ್ದ ಸುಭಾಷರನ್ನು ಕಂಡರೆ ಇಡಿಯ ಕಾಂಗ್ರೆಸ್ಸಿಗೆ ಸಹಿಸಲಾಗದ ಆಕ್ರೋಶ. ಹಾಗೆಂದೇ ಅವರು ಜನರ ನಡುವೆ ಸುಭಾಷರನ್ನು ಸಾಕಷ್ಟು ಹಿಯಾಳಿಸುತ್ತಿದ್ದರು. ಒಂದು ಹಂತದಲ್ಲಿ ಭಾರತದ ಶತ್ರು ರಾಷ್ಟ್ರಗಳೊಂದಿಗೆ ಕೈ ಜೋಡಿಸಿರುವ ದೇಶದ್ರೋಹಿ ಎಂದೂ ಹೇಳಿಬಿಟ್ಟಿದ್ದರು. ಬೇರೆಲ್ಲ ಬಿಡಿ, ಸ್ವತಃ ನೆಹರೂ ಸುಭಾಷರು ಇಂಡಿಯನ್ ನ್ಯಾಷನಲ್ ಆಮರ್ಿಯೊಂದಿಗೆ ಭಾರತದ ಮೇಲೆ ಆಕ್ರಮಣ ಮಾಡಿದರೆ ಅವರನ್ನು ತಲ್ವಾರ್ನಿಂದಲೇ ಎದುರಿಸುವುದಾಗಿ ಘೋಷಿಸಿದ್ದರೂ ಕೂಡ. ಈ ಕಾರಣದಿಂದಾಗಿಯೇ ಸುಭಾಷರ ಕುರಿತಂತೆ ಜನಮಾನಸದಲ್ಲಿ ಅಸಮಾಧಾನ ಇದ್ದೇ ಇತ್ತು. ಕೊಹಿಮಾ, ಇಂಫಾಲ್ಗಳಲ್ಲಿ ದಾಳಿ ಮಾಡುತ್ತಾ ಬಂದ ಇಂಡಿಯನ್ ನ್ಯಾಷನಲ್ ಆಮರ್ಿಯ ಸೈನಿಕರುಗಳಿಗೆ ಭಾರತೀಯ ಸೈನಿಕರು ಬೆಂಬಲ ಕೊಡಲಿಲ್ಲ. ಭಾರತದ ಜನ ಜೊತೆ ನಿಲ್ಲಲಿಲ್ಲ. ನಾಯಕರ ಕಥೆಯಂತೂ ತಟಸ್ಥವೇ ಅಲ್ಲದ, ವಿರೋಧಿ ಪಾಳಯವನ್ನು ಬೆಂಬಲಿಸುವ ಮಾನಸಿಕತೆ. ಸುಭಾಷರ ಬದುಕಿನ ಘೋರ ದುರಂತಗಳಲ್ಲಿ ಅದು ಒಂದು. ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಪ್ರಾಣಾರ್ಪಣೆಗೆ ಸಿದ್ಧರಾಗಿದ್ದರೋ ಆ ದೇಶದ ಜನರೇ ಅದನ್ನು ಧಿಕ್ಕರಿಸಿಬಿಟ್ಟಿದ್ದರು! ಕಮ್ಯುನಿಸ್ಟರದ್ದಂತೂ ಬೇರೆಯೇ ಮಾರ್ಗ. ಒಂದು ಮಾತಿದೆಯಲ್ಲ, ವಿಷಸರ್ಪ ಮತ್ತು ಕಮ್ಯುನಿಸ್ಟರು ಇವೆರಡೂ ಎದುರಿಗೆ ಬಂದರೆ ಮೊದಲು ಕಮ್ಯುನಿಸ್ಟರನ್ನು ಬಡಿಯಿರಿ, ವಿಷಸರ್ಪವನ್ನು ಬಿಟ್ಟರೂ ಪರವಾಗಿಲ್ಲ ಅಂತ. ಹಾಗೆಯೇ ಇವರೂ ಕೂಡ. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಮತ್ತು ರಷ್ಯಾಗಳು ಒಂದೇ ಪಾಳಯದಲ್ಲಿದ್ದಾಗ ಈ ಕಮ್ಯುನಿಸ್ಟರು ಕಾಂಗ್ರೆಸ್ಸನ್ನು ವಿರೋಧಿಸಿ ನೇತಾಜಿಯವರ ಬೆಂಬಲಕ್ಕೆ ನಿಂತಿದ್ದರು. ಆದರೆ ಯಾವಾಗ ಜರ್ಮನಿ ರಷ್ಯಾದ ಮೇಲೆಯೇ ಏರಿಹೋಯ್ತೋ ಆಗ ಅವರಿಗೆ ಸಹಿಸಲಾಗಲಿಲ್ಲ. ರಷ್ಯಾ ತಮ್ಮ ಮಾತೃಭೂಮಿಯೇನೋ ಎನ್ನುವಂತೆ ವತರ್ಿಸಿದ ಆ ಮಂದಿ ಸುಭಾಷರನ್ನು ಅವಹೇಳನಗೊಳಿಸುವ ವ್ಯಂಗ್ಯಚಿತ್ರವನ್ನು ಬರೆದು ಜನಮಾನಸವನ್ನು ಮುಟ್ಟಿದರು. ಜಪಾನಿನ ಪ್ರಧಾನಿಯ ಕೈಲಿ ಸುಭಾಷ್ಚಂದ್ರ ಬೋಸರನ್ನು ಸಾಕುಪ್ರಾಣಿಯಂತೆ ಚಿತ್ರಿಸಿದ್ದು ಇವರೇ. ಇದು ಕಾಂಗ್ರೆಸ್ಸಿನ ದಾಳಿಗಿಂತ ಭಯಾನಕವಾದ್ದು. ಈ ಕಳ್ಳರನ್ನೆಲ್ಲಾ ಜನರ ಮುಂದೆ ಬೆಳಕಿಗೆ ತರಲು ಸುಭಾಷರಿಗಿದ್ದಿದ್ದು ರೆಡಿಯೊಗಳ ಬಳಕೆ ಮಾತ್ರ. ತಮ್ಮ ಆಜಾದ್ ಹಿಂದ್ ರೆಡಿಯೊ ಮೂಲಕ ಅವರು ಭಾರತೀಯರನ್ನು ಮುಟ್ಟುವ ಪ್ರಯತ್ನ ಮಾಡುತ್ತಿದ್ದರಾದರೂ ಅದು ಸಾಕಾಗುತ್ತಿರಲಿಲ್ಲ. ಅಂತರ್ರಾಷ್ಟ್ರೀಯ ಸಂಬಂಧಗಳ ಕುರಿತಂತೆ ಆಲೋಚಿಸುತ್ತಾ, ಸೇನೆಗೆ ಬೇಕಾದ ಸೈನಿಕರು ಮತ್ತು ಹಣವನ್ನು ಹೊಂದಿಸುವುದರಲ್ಲಿ ನಿರಂತರ ಪ್ರವಾಸ ಮಾಡುತ್ತಾ ಸುಭಾಷರು ಜರ್ಝರಿತವಾಗಿ ಹೋಗಿದ್ದರು. ಅದರ ನಡುವೆ ತಮ್ಮದ್ದೇ ದೇಶವಾಸಿಗಳಲ್ಲಿ ತಾನು ಮಾಡುತ್ತಿರುವ ಕೆಲಸಗಳ ಕುರಿತಂತೆ ಜಾಗೃತಿ ಮೂಡಿಸಬೇಕಾಗಿತ್ತು. ಒಟ್ಟಾರೆ ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಸೋಲುವುದರೊಂದಿಗೆ ಸುಭಾಷರ ಪರಾಕ್ರಮದ ಯಾತ್ರೆಯೇನೋ ಮುಗಿಯಿತು. ಆದರೆ ಸ್ವಾತಂತ್ರ್ಯದ ಇಚ್ಛೆ, ಉತ್ಸಾಹಗಳು ಮಾತ್ರ ಕಡಿಮೆಯಾಗಿರಲಿಲ್ಲ. ಸುಭಾಷರು ಜಪಾನನ್ನು ಬಿಟ್ಟು ರಷ್ಯಾದ ಸಹಕಾರ ಕೇಳಲು ಧಾವಿಸಿದರು. ಆ ಹೊತ್ತಲ್ಲೇ ವಿಮಾನದ ಅಪಘಾತವಾಗಿದ್ದು, ಅಲ್ಲಿಯೇ ಅವರು ತೀರಿಕೊಂಡರೂ ಎಂದೂ ಹೇಳಲಾಗಿದ್ದು. ಆದರೆ ಸುಭಾಷರ ನಿಜವಾದ ಪರಾಕ್ರಮ ಜನರಿಗೆ ಅರಿವಾದದ್ದು ಅವರ ಈ ತಥಾಕಥಿತ ಸಾವಿನ ನಂತರವೇ. ಯುದ್ಧದಲ್ಲಿ ಖೈದಿಗಳಾಗಿ ಸಿಕ್ಕ ಐಎನ್ಎ ಸೈನಿಕರ ವಿಚಾರಣೆಯನ್ನು ಬ್ರಿಟಿಷ್ ಸಕರ್ಾರ ಆರಂಭಿಸಿತು. ಈ ಸೈನಿಕರಿಗೆ ಕಠಿಣ ಶಿಕ್ಷೆ ಕೊಡುವ ಮೂಲಕ ಇನ್ಯಾವ ಭಾರತೀಯ ಸೈನಿಕನೂ ಬ್ರಿಟೀಷರ ವಿರುದ್ಧ ಮಾತೂ ಆಡದಂತೆ ಮಾಡಬೇಕೆಂಬ ಪ್ರಯತ್ನ ಅವರದ್ದಾಗಿತ್ತು. ಅದೇ ಅವರು ಮಾಡಿಕೊಂಡ ಎಡವಟ್ಟು. ಐಎನ್ಎ ಪ್ರತಿನಿಧಿಸಿ ವಿಚಾರಣೆ ಎದುರಿಸುತ್ತಿದ್ದ ಶಾನವಾಜ್, ದಿಲ್ಲೊನ್ ಮತ್ತು ಸೆಹಗಲ್ರು ಎದೆಯುಬ್ಬಿಸಿ ನಿಂತರು. ಅವರ ಮೂಲಕ ಬೋಸರ ಕಥೆಗಳು ಮಾಧ್ಯಮ ಪ್ರವೇಶಿಸಿದವು. ಅಲ್ಲಿಂದ ಜನರ ಹೃದಯಕ್ಕೆ. ಅಲ್ಲಿಯವರೆಗೂ ಬೋಸರ ಬಗೆಗಿದ್ದ ದುಷ್ಟ ಭಾವನೆಗಳೆಲ್ಲ ಮಾಯವಾಗಿಬಿಟ್ಟವು. ಸುಭಾಷಷ್ಚಂದ್ರ ಬೋಸ್ ಒಬ್ಬ ಅಪ್ರತಿಮ ಸೇನಾನಿ ಎಂದು ಇಡೀ ದೇಶ ಗೌರವಿಸಲಾರಂಭಿಸಿತು. ಅಷ್ಟೇ ಅಲ್ಲ, ಐಎನ್ಎ ಸೈನಿಕರ ವಿಚಾರಣೆ ನಡೆಸುವುದನ್ನು ವಿರೋಧಿಸಿ ಯುದ್ಧ ಖೈದಿಗಳೊಂದಿಗೆ ನಡೆದುಕೊಳ್ಳುವ ರೀತಿ ಇದಲ್ಲವೆಂದು ಸೇನೆ ಆಕ್ಷೇಪಿಸಿತು. ಮುಂದೇನು? ಸೈನಿಕ ಬಂಡಾಯಕ್ಕೆ ಎಲ್ಲ ಸಿದ್ಧತೆ ನಡೆದು ಬ್ರಿಟಿಷರ ವಿರುದ್ಧ ದೊಡ್ಡದೊಂದು ಹೋರಾಟವೇ ಆರಂಭವಾಯ್ತು. ನೌಕಾಸೇನೆಯಲ್ಲಿ ಅಂದಿನ ದಿನಗಳಲ್ಲಿ ಸುಭಾಷ್ಚಂದ್ರ ಬೋಸರ ಚಿತ್ರ ಸವರ್ೇ ಸಾಮಾನ್ಯವಾಗಿತ್ತು. ಆ ಫೋಟೊಗಳನ್ನೆಲ್ಲ ಕಿತ್ತು ಬಿಸಾಡಬೇಕೆಂದು ತಾಕೀತು ಮಾಡಿದ್ದರು ನೆಹರೂ. ಸುಭಾಷರ ಪಟ ಇಲ್ಲವಾಗಿಸಬಹುದು. ಆದರೆ ಹೃದಯದೊಳಗೆ ಇರುವ ಸುಭಾಷರನ್ನು ತೆಗೆಯುವುದಾದರೂ ಹೇಗೆ? ಸುಭಾಷರು ಮತ್ತೆ ಜನಮಾನಸವನ್ನು ಆವರಿಸಿಕೊಂಡರು. ನೌಕಾಬಂಡಾಯ ಬ್ರಿಟೀಷರನ್ನು ನಡುಗಿಸಿಬಿಟ್ಟಿತ್ತು. ಅವರು ಅನಿವಾರ್ಯವಾಗಿ ಭಾರತವನ್ನು ಬಿಟ್ಟು ಹೋಗಲೇಬೇಕಾದ ಸ್ಥಿತಿ ಬಂತು.

1942ರಲ್ಲಿ ಏಕಾಕಿ ಶಾಂತಿ ಮತ್ತು ಅಹಿಂಸೆಯ ಮಾರ್ಗವನ್ನು ಬದಿಗಿಟ್ಟು ಭಾರತಬಿಟ್ಟು ತೊಲಗಿ ಎಂದು ಮಹಾತ್ಮಾಗಾಂಧೀಜಿ ಘೋಷಣೆ ಕೊಟ್ಟಿದ್ದರಲ್ಲ, ಇಷ್ಟು ಧಾವಂತವೇಕೆ? ಎಂಬ ಪ್ರಶ್ನೆ ಕೇಳಿದ್ದಕ್ಕೆ, ಬೋಸರನ್ನೇ ಕೇಳಿಕೊಳ್ಳಿ ಎಂದು ಗಾಂಧೀಜಿ ಉತ್ತರ ನೀಡಿದ್ದರು. ಬೋಸ್ ಭಾರತದ ಸ್ವಾತಂತ್ರ್ಯ ಹೋರಾಟದ ಕಲ್ಪನೆಯನ್ನು ಪೂರ್ಣ ಬದಲಾಯಿಸಿದ್ದರು ಮತ್ತು ಯಶಸ್ವಿಯಾಗಿದ್ದರೂ ಕೂಡ. ಮಹಾತ್ಮಾಗಾಂಧಿಜಿಯವರ ಸಾಮ-ದಾನೋಪಾಯಗಳು ಒಂದೆಡೆಯಾದರೆ, ಸುಭಾಷ್ಚಂದ್ರ ಬೋಸರ ಭೇದ ಮತ್ತು ದಂಡೋಪಾಯಗಳು ಮತ್ತೊಂದೆಡೆ ಯಶಸ್ಸು ಗಳಿಸಿದ್ದವು. ಈಗ ಈ ಪುಣ್ಯಾತ್ಮನ ಈ ಸಾಧನೆಯನ್ನೆಲ್ಲಾ ದೇಶ ನೆನಪಿಸಿಕೊಳ್ಳುತ್ತಿದೆ. ಇದು ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿ.

ಬಂಗಾಳದಲ್ಲಿ ಶ್ರೀರಾಮನೂ ಕೋಮುವಾದಿ!

ಬಂಗಾಳದಲ್ಲಿ ಶ್ರೀರಾಮನೂ ಕೋಮುವಾದಿ!

ಸುಭಾಷ್ಚಂದ್ರ ಬೋಸರ ಜಯಂತಿಯ ಆಚರಣೆ ಕಲ್ಕತ್ತಾದಲ್ಲಿ ಬಲು ವಿಶಿಷ್ಟವಾಗಿ ನಡೆಯುತ್ತಿತ್ತು. ಕೇಂದ್ರಸಕರ್ಾರ ಅದಕ್ಕೆ ಪರಾಕ್ರಮ ದಿವಸ ಎಂಬ ನಾಮಕರಣವನ್ನೂ ಮಾಡಿತು. ಅಲ್ಲದೇ ಮತ್ತೇನು? ದಾಸ್ಯದಲ್ಲಿದ್ದ ಭಾರತದಿಂದ ತಪ್ಪಿಸಿಕೊಂಡು ಹೋಗಿ ದಾಸ್ಯದಲ್ಲಿಟ್ಟಿರುವವರ ಶತ್ರುಗಳನ್ನು ಭೇಟಿಮಾಡಿ ಅವರ ಸಹಕಾರ ಪಡೆದು, ಸೇನೆಕಟ್ಟಿ ಆಕ್ರಮಣ ಮಾಡಿ, ಆಳುವವರ ಎದೆ ನಡುಗಿಸಿದ ಆ ವ್ಯಕ್ತಿಯದ್ದು ಪರಾಕ್ರಮವಲ್ಲದೇ ಮತ್ತೇನು? ಹೆಸರು ಸುಭಾಷರಿಗೆ ಅನ್ವಯವಾಗುವಂಥದ್ದೇ. ಪ್ರತಿಯೊಂದರಲ್ಲೂ ರಾಜಕೀಯವನ್ನು ನೋಡುವ ಮಮತಾ ಬ್ಯಾನಜರ್ಿ ಸಹಜವಾಗಿಯೇ ಉರಿದುಬಿದ್ದರು. ಕೇಂದ್ರಸಕರ್ಾರ ಬಂಗಾಳದ ಚುನಾವಣೆಗೆ ಪೂರ್ವಭಾವಿಯಾಗಿಯೇ ಹೀಗೆ ಮಾಡುತ್ತಿದೆ ಎಂಬುದು ಆಕೆಯ ಆಕ್ರೋಶಕ್ಕೆ ಕಾರಣ. ಸುಭಾಷ್ಚಂದ್ರ ಬೋಸರ 125ನೇ ಜಯಂತಿಯ ಹಿನ್ನೆಲೆಯಲ್ಲಿ ಈ ನಿಧರ್ಾರ ತೆಗೆದುಕೊಳ್ಳಲಾಗಿದೆ ಎಂಬ ಸಾಮಾನ್ಯ ಅಂಶವೂ ಆಕೆಗೆ ಹೊಳೆಯಲಿಲ್ಲ ಅಥವಾ 1897ರಲ್ಲಿ ಸುಭಾಷ್ಚಂದ್ರ ಬೋಸರು ಹುಟ್ಟಿದ್ದೇ ತಪ್ಪಾಯಿತೆಂದು ಆಕೆ ಭಾವಿಸಿರಲು ಸಾಕು. ಆಕೆ ಅದಕ್ಕೆ ಬೇರೊಂದು ಸ್ವರೂಪವನ್ನು ಕೊಟ್ಟು ಪರಾಕ್ರಮ ಎಂಬ ನಾಮಕರಣವೇ ಸರಿಯಿಲ್ಲವೆಂದು ರೇಗಾಡಿದ್ದೂ ಆಯ್ತು. ಇವೆಲ್ಲಕ್ಕಿಂತಲೂ ವಿಷಮ ಪರಿಸ್ಥಿತಿ ಎದುರಾಗಿದ್ದು ಸ್ವತಃ ಮೋದಿ ಕಲ್ಕತ್ತಾದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ. ಅದೂ ರಾಜಕೀಯವಾಗಿರಬೇಕೆಂದೇನೂ ಇಲ್ಲ. ಪಶ್ಚಿಮ ಬಂಗಾಳ ಸುಭಾಷ್ಚಂದ್ರ ಬೋಸರ ಕರ್ಮಕ್ಷೇತ್ರವಾಗಿತ್ತು ಮತ್ತು ಈಗಲೂ ಆ ರಾಜ್ಯ ಬೋಸರನ್ನು ರಾಷ್ಟ್ರಕ್ಕೆ ತಮ್ಮ ಕೊಡುಗೆ ಎಂದೇ ಭಾವಿಸುತ್ತದೆ. 125ನೇ ಜಯಂತಿಯನ್ನು ಅಲ್ಲಿಯೇ ಆಚರಿಸುವುದರಲ್ಲಿ ವಿಶೇಷ ಅರ್ಥವೂ ಇತ್ತು. ಎಡವಟ್ಟಾಗಿದ್ದು ಮಮತಾ ಬ್ಯಾನಜರ್ಿ ಮಾತನಾಡಲು ನಿಂತಾಗಲೇ. ಜನ ಆಕೆ ನಿಂತೊಡನೆ ಜೈಶ್ರೀರಾಮ್ ಘೋಷಣೆಗಳನ್ನು ಮೊಳಗಿಸಲಾರಂಭಿಸಿದರು. ಆಕೆ ಆ ಘೋಷಣೆಗಳನ್ನು ಕೇಳಿದಾಗ ಉರಿದು ಬೀಳುತ್ತಾಳೆಂಬುದು ಗೊತ್ತಿದ್ದುದರಿಂದಲೇ ಜನ ಹಾಗೆ ಮಾಡಿದರೆಂಬುದು ನಿವರ್ಿವಾದ. ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ ಸಿದ್ಧರಾಮಯ್ಯನವರು ಚುನಾವಣೆಯ ಹೊತ್ತಲ್ಲಿ ಮೋದಿ ಹೆಸರನ್ನು ಕೇಳಿದಾಗಲೆಲ್ಲ ಉರಿದು ಬೀಳುತ್ತಿದ್ದರಲ್ಲ, ಅವರಿಗೆ ಪ್ರತೀ ಕಾರ್ಯಕ್ರಮದಲ್ಲೂ ಜನ ಮೋದಿ-ಮೋದಿ ಎನ್ನುತ್ತಲೇ ಸ್ವಾಗತಿಸುತ್ತಿದ್ದುದು ನಿಮಗೂ ನೆನಪಿರಬೇಕು. ಒಂದು ಕಾರ್ಯಕ್ರಮದಲ್ಲಂತೂ ಸ್ವತಃ ಮೋದಿಯೇ ಹಾಗೆ ಮಾಡಬೇಡಿರೆಂದು ಕೇಳಿಕೊಳ್ಳಬೇಕಾಗಿ ಬಂದಿತು. ಇಲ್ಲಿ ಜನ ಘೋಷಣೆ ಕೂಗುತ್ತಿದ್ದುದು ಮೋದಿಯ ಹೆಸರಿನದ್ದಲ್ಲ. ಬದಲಿಗೆ ಭಾರತದ ಅಸ್ತಿತ್ವದ ಸ್ವರೂಪವಾಗಿರುವ ಶ್ರೀರಾಮನ ಹೆಸರಿನದ್ದು. ದೀದಿಗೆ ಅಷ್ಟೇ ಸಾಕಾಯಿತು. ಮಾತನಾಡಲು ಮೈಕಿನ ಬಳಿ ಬಂದು ಜನರನ್ನು ಎರ್ರಾಬಿರ್ರಿಯಾಗಿ ತರಾಟೆಗೆ ತೆಗೆದುಕೊಂಡರು. ಇಷ್ಟಕ್ಕೂ ನೆರೆದಿದ್ದ ಜನರು ಉತ್ತರ ಪ್ರದೇಶ, ಬಿಹಾರಗಳಿಂದ ಬಂದವರಾಗಿರಲಿಲ್ಲ ಅಥವಾ ಹಣಕೊಟ್ಟು ಆಫ್ರಿಕಾ, ಆಸ್ಟ್ರೇಲಿಯಾದಿಂದ ಕರೆಸಿಕೊಂಡವರಾಗಿರಲಿಲ್ಲ. ಅವರು ದೀದಿಯ ಬಂಗಾಳದ್ದೇ ಜನ. ಅಕ್ಷರಶಃ ರಾಮನ ನಾಡಿನ ಭಾರತೀಯರೇ. ಅವರು ಶ್ರೀರಾಮನಿಗೆ ಜಯಕಾರ ಹೇಳದೇ ಒಸಾಮಾ ಬಿನ್ಲಾಡೆನ್ಗೆ ಹೇಳುವುದು ಸಾಧ್ಯವೇನು? ಆದರೆ ದೀದಿಯ ಆಕ್ರೋಶ ಹೊಸತೇನೂ ಅಲ್ಲ. ಈ ಹಿಂದೆಯೂ ಈ ಘೋಷಣೆಗಳಿಂದ ಆಕೆ ಉರಿದುಬಿದ್ದಿದ್ದು ದಾಖಲಿದೆ. ಎರಡು ವರ್ಷಗಳ ಹಿಂದೆ ರಾಮನವಮಿಯ ಮೆರವಣಿಗೆಗಳಲ್ಲಿ ಬಿಲ್ಲು-ಬಾಣಗಳನ್ನು ಪ್ರದಶರ್ಿಸುವುದನ್ನು ಆಕೆ ನಿಷೇಧಿಸಿ ಕುಖ್ಯಾತಿಗೆ ಒಳಗಾಗಿದ್ದಳು. ದುಗರ್ಾಪೂಜೆಯ ಮೆರವಣಿಗೆಯ ಹೊತ್ತಲ್ಲೇ ಮುಸಲ್ಮಾನರ ಹಬ್ಬವೂ ಬಂದಿರುವುದರಿಂದ ಈ ಬಾರಿ ಮೆರವಣಿಗೆಯೇ ಬೇಡವೆನ್ನುತ್ತಾ ಮೂಲೆ-ಮೂಲೆಗಳಲ್ಲೂ ಹಬ್ಬಿಕೊಂಡಿರುವ ದುಗರ್ಾಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಳು. ಪ್ರತಿಪಕ್ಷಗಳು ರಾಮನನ್ನು ಕಾಡಿದಾಗಲೆಲ್ಲ ಬಿಜೆಪಿಯ ಬೇರು ಗಟ್ಟಿಯಾಗುತ್ತಲೇ ಹೋಗುತ್ತದೆ ಎಂಬ ಹಿತೈಷಿಗಳ ಮಾತು ಆಕೆಯನ್ನು ಕಾಡಿರಲು ಸಾಕು. ಕೊನೆಗೂ ಆಕೆ ತನಗರಿವಿಲ್ಲದಂತೆಯೇ ರಾಮನನ್ನು ಬಿಜೆಪಿಯ ಪರವಿರುವವನು ಎಂದು ನಿರ್ಧರಿಸಿ ಆತನ ಹೆಸರು ಬಂದಾಗಲೆಲ್ಲ ಹೆಚ್ಚು-ಹೆಚ್ಚು ಗರಂ ಆಗತೊಡಗಿದಳು. ಹೆಚ್ಚು-ಹೆಚ್ಚು ತಪ್ಪುಗಳನ್ನೂ ಮಾಡಲಾರಂಭಿಸಿದಳು. ಅನೇಕ ಕಡೆಗಳಲ್ಲಿ ಜೈ ಶ್ರೀರಾಮ್ ಎಂಬುದು ಆತಂಕವಾದಿಗಳ ಘೋಷಣೆ ಎಂದು ಕಟ್ಟರ್ ಮುಸಲ್ಮಾನರಂತೆ ಆಕೆ ಹೇಳಿಯೂಬಿಟ್ಟಳು! ಸಹಜವಾಗಿಯೇ ಬಂಗಾಳದ ಮಾನಸಿಕತೆಗೆ ಇದು ಬಲುದೊಡ್ಡ ಆಘಾತ. ಅನೇಕ ವರ್ಷಗಳ ಕಾಲ ಮುಸಲ್ಮಾನರ ಆಳ್ವಿಕೆಯಿಂದ ನಲುಗಿದ, ಆನಂತರ ಕಾಂಗ್ರೆಸ್, ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿ ಉಸಿರುಗಟ್ಟಿದಂತಿದ್ದ ಬಂಗಾಳದ ಜನತೆಯ ಒಳಗೆ ಸುಪ್ತವಾಗಿ ಹರಿಯುತ್ತಿದ್ದ ಹಿಂದೂ ಪ್ರವಾಹ ಹೆದ್ದೆರೆಯಾಗಲು ಸಿದ್ಧತೆ ನಡೆಸಿತು. ದೀದಿ ರಾಮನನ್ನು ತೆಗಳಿದಷ್ಟೂ ರಾಮಕಾರ್ಯಕ್ಕೆ ಅಲ್ಲಿನ ಜನರ ಉತ್ಸಾಹ ಹೆಚ್ಚುತ್ತಾ ನಡೆಯಿತು. ಏಳು ದಶಕಗಳ ಕಾಲ ಕಂಡ-ಕಂಡಲ್ಲಿ ಮೂಗು ತೂರಿಸಿ ಹಿಂದೂಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅವಹೇಳನ ಮಾಡಿ, ಮೂಲೋತ್ಪಾಟನೆಗೊಳಿಸುವ ಪ್ರಯತ್ನವನ್ನು ಎಡಪಂಥೀಯರು ಮಾಡುತ್ತಲೇ ಬಂದಿದ್ದರಲ್ಲದೇ ಒಂದು ಹಂತಕ್ಕೆ ಯಶಸ್ವಿಯೂ ಆಗಿಬಿಟ್ಟಿದ್ದರು. ದೀದಿ ಕೆಲವೇ ತಿಂಗಳಲ್ಲಿ ಅದನ್ನೆಲ್ಲಾ ಬುಡಮೇಲುಗೊಳಿಸಿ ಹಿಂದುಗಳನ್ನು ಏಕತ್ರಗೊಳಿಸಿದಳಲ್ಲದೇ ಬಂಗಾಳದ ಹಿಂದುಗಳು ರಾಷ್ಟ್ರ ಪುನರ್ನಿಮರ್ಾಣಕ್ಕೆ ಕೈಜೋಡಿಸುವಂತೆ ಮಾಡಿಬಿಟ್ಟಳು. ಈ ಹಿನ್ನೆಲೆಯಲ್ಲಿ ಆಕೆಗೆ ಪ್ರತಿಯೊಬ್ಬನೂ ಕೃತಜ್ಞತೆ ಸಲ್ಲಿಸಲೇಬೇಕು.

ಆದರೆ ಈ ಘಟನೆಯ ಅವಲೋಕನ ಮಾಡುತ್ತಾ ಒಂದಷ್ಟು ವಿಚಾರಗಳನ್ನು ನಾವು ಚಚರ್ಿಸಲೇಬೇಕಿದೆ. ಜೈಶ್ರೀರಾಮ್ ಘೋಷಣೆಯನ್ನು ಆಕೆ ಕೋಮುವಾದಿ ಎನ್ನುವುದಕ್ಕೂ, ಅದನ್ನು ಈ ರೀತಿಯ ಸಭೆಗಳಲ್ಲಿ ಉಚ್ಚರಿಸಬಾರದು ಎಂದು ಹೇಳಿದ್ದಕ್ಕೂ, ಆಕೆಯ ಮಾತುಗಳನ್ನು ಸಮಥರ್ಿಸಿಕೊಳ್ಳುವ ಬುದ್ಧಿಜೀವಿ ಪತ್ರಕರ್ತ ವರ್ಗಕ್ಕೆ ಒಂದಷ್ಟು ಪ್ರಶ್ನೆಗಳನ್ನು ಕೇಳಲೇಬೇಕಲ್ಲ. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ನಾಯಕರಿಗೆ ಹಿಂದೂ-ಮುಸ್ಲೀಂ ಏಕತೆಯ ಭೂತವೊಂದು ಸವಾರಿಯಾಗಿಬಿಟ್ಟಿತ್ತು. ಹಿಂದೂ ತಲೆಬಾಗಿಯಾದರೂ ಮುಸಲ್ಮಾನನ ಗೆಳೆತನ ಬಯಸಬೇಕೆಂಬುದು ನಾಯಕರುಗಳ ವಾದ. ಅದಕ್ಕೆ ಕಾಂಗ್ರೆಸ್ ಅಧಿವೇಶನದಲ್ಲಿ ಯಾವ ಮುಸಲ್ಮಾನ ಅಭಿಪ್ರಾಯ ಮಂಡಿಸಲೆಂದು ನಿಂತರೂ ಉಳಿದೆಲ್ಲ ಸದಸ್ಯರು ಉಘೇ ಉಘೇ ಎನ್ನುತ್ತಾ ಆತನಿಗೆ ಜೈಕಾರ ಹಾಕಬೇಕಿತ್ತು. ಕೆಲವೊಮ್ಮೆಯಂತೂ ಆತ ನಿಂತೊಡನೆ ಅಲ್ಲಾ ಹೊ ಅಕ್ಬರ್ ಎಂಬ ಘೋಷಣೆಯನ್ನೂ ಮೊಳಗಿಸಬೇಕಾಗುತ್ತಿತ್ತು. ಆದರೆ ಅಂದು ಅದು ಕೋಮುವಾದಿ ಎನಿಸಿರಲಿಲ್ಲ. ರಾಜಕೀಯ ಸಭೆಯೊಂದರಲ್ಲಿ ಒಂದು ಮತವನ್ನು ಉನ್ನತೀಕರಿಸುವ ಈ ಘೋಷಣೆಗಳು ಕೂಡದು ಎಂದು ಯಾರೂ ಹೇಳಿರಲಿಲ್ಲ. ಮುಸಲ್ಮಾನರಿಗೆ ಮಾತನಾಡಲು ಹೆದರಿಕೆಯಾಗುತ್ತದೆ, ಹೀಗಾಗಿ ಈ ಘೋಷಣೆಗಳ ಮೂಲಕ ಅವರಲ್ಲಿ ಧೈರ್ಯ ತುಂಬಬೇಕು ಎಂಬುದು ಅಂದಿನ ಕಾಂಗ್ರೆಸ್ ನಾಯಕರುಗಳ ವಾದ. ಹಿಂದುಗಳ ಮನೆಗಳನ್ನು ಲೂಟಿಗೈಯ್ಯುವಾಗ ಅವರಿಗೆ ಹೆದರಿಕೆ ಆಗುವುದಿಲ್ಲ! ಹಿಂದುವಾಗಿರುವುದಕ್ಕಾಗಿಯೇ ತೆರಿಗೆ ಕಟ್ಟಬೇಕಾದ ಸ್ಥಿತಿ ನಿಮರ್ಾಣ ಮಾಡಿದ್ದರಲ್ಲ, ಅಂದು ಜೊತೆಗಾರ ಹಿಂದುಗಳ ತಲೆಗಂದಾಯದಲ್ಲಿ ತಾನು ಊಟ ಮಾಡುತ್ತಿದ್ದೇನೆ ಎಂಬ ನೋವೂ ಅವರಿಗಿರಲಿಲ್ಲ. ಯಾರ ಬರ್ಬರ ಆಕ್ರಮಣದ ಕಾರಣಕ್ಕಾಗಿ ಈ ದೇಶದಲ್ಲಿ ಅನಿವಾರ್ಯ ಬಾಲ್ಯವಿವಾಹಗಳು ಆರಂಭವಾದವೋ, ಯಾರ ದಾಳಿಯನ್ನು ಊಹಿಸಿಕೊಂಡೇ ಅಸಂಖ್ಯ ಹೆಣ್ಣುಮಕ್ಕಳು ಜೀವಹರಣ ಮಾಡಿಕೊಳ್ಳಲು ಬೆಂಕಿಗೆ ಧುಮುಕಿದರೋ, ಯಾರ ಕ್ರೌರ್ಯದ ಕಲ್ಪನೆ ಮಾತ್ರದಿಂದಲೇ ಗಂಡನ ಚಿತೆಯೊಂದಿಗೆ ಹೆಣ್ಣುಮಕ್ಕಳು ಜೀವ ಅಂತ್ಯಗೊಳಿಸಿಕೊಂಡರೋ, ಯಾರ ದುಷ್ಟತನದಿಂದಾಗಿ ದೇವಾಲಯಗಳು ಧ್ವಂಸಗೊಂಡು, ದೇವರ ಮೂತರ್ಿಗಳು ಬರಿಯ ಕಲ್ಲುಗಳಾಗಿ ರಾಜರ ಅರಮನೆಯ ಮೆಟ್ಟಿಲುಗಳಾದವೋ, ಯಾರು ಪಕ್ಕದ ಮನೆಯವರು ತಮಗೆ ಸಹಕಾರಿಗಳಾಗಿದ್ದರು ಎಂಬುದನ್ನು ಮರೆತು ದಂಗೆಯ ಸಂದರ್ಭದಲ್ಲಿ ಬರ್ಬರವಾಗಿ ನಡಕೊಂಡರೋ ಅವರಿಗೆ ನಾವು ಧೈರ್ಯ ತುಂಬಬೇಕಿತ್ತಂತೆ, ಶಭಾಷ್!


ಹೋಗಲಿ, ನಾವೆಲ್ಲರೂ ಪ್ರತಿನಿತ್ಯ ಭಜಿಸುವ ರಾಮ್ಧುನ್ ರಘುಪತಿ ರಾಘವ ರಾಜಾರಾಂ ಅನ್ನು ಬದಲಾಯಿಸಿ ಈಶ್ವರ್ ಅಲ್ಲಾಹ್ ತೇರೇನಾಮ್ ಎಂಬ ಸಾಲನ್ನು ಸೇರಿಸಲಾಯ್ತಲ್ಲ, ಅದು ಸರಿಯೋ ತಪ್ಪೋ ಎಂಬುದರ ಬಗ್ಗೆ ಇಂದಿಗೂ ಚಚರ್ೆ ನಡೆಯುವುದಿಲ್ಲವಲ್ಲ. ಹೀಗೆ ಸಾಲುಗಳಲ್ಲಿ ಮುಸಲ್ಮಾನರ ಅಲ್ಲಾಹ್ನನ್ನು ತಂದಿದ್ದರಿಂದ ಎಂದಾದರೂ ಅವರು ಈ ಭಜನೆಯನ್ನು ಪ್ರೀತಿಯಿಂದ ಹಾಡಿದ್ದು ಕೇಳಿರುವಿರಾ? ಯಾರಿಗಾಗಿ ರಾಮ್ಧುನ್ ಅನ್ನೇ ಬದಲಾಯಿಸಲಾಯ್ತೋ ಅವರು ಅದನ್ನು ಎಂದಿಗೂ ಹಾಡಲೇ ಇಲ್ಲ, ಬದಲಿಗೆ ಯಾರಿಗೆ ಈ ಎಲ್ಲಾ ವಿಚಾರಗಳ ಸಮಸ್ಯೆಯೇ ಇರಲಿಲ್ಲವೋ ಅವರು ಮಾತ್ರ ಇಂದಿಗೂ ಅದನ್ನೇ ಮೂಲ ರಾಮ್ಧುನ್ ಎಂಬಂತೆ ಹಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದ ಮೇಲಾದರೂ ಅದನ್ನು ಮೂಲಸ್ಥಿತಿಗೆ ತರಬೇಕೆಂದು ನಮಗೆ ಅನ್ನಿಸಲೇ ಇಲ್ಲವಲ್ಲ. ಈಗೇನು ರಘುಪತಿ ರಾಘವ ರಾಜಾರಾಂ ಹಾಡಿದರೆ ನಾವು ವೇದಿಕೆಯಿಂದ ನಿರ್ಗಮಿಸಬೇಕೇನು?

ಮಮತಾ ಬ್ಯಾನಜರ್ಿ ಎತ್ತಿದ ಪ್ರಶ್ನೆಗಳಿಗೆ ಅನೇಕರು ಉತ್ತರಿಸಲು ತಡಕಾಡುತ್ತಿದ್ದಾರೆ. ರಾಜಕೀಯವನ್ನು ಸಕರ್ಾರಿ ಸಭೆ-ಸಮಾರಂಭಗಳಲ್ಲಿ ತರಬಾರದು ಎಂದು ಆಕೆ ಹೇಳುವ ಮೂಲಕ ಜೇನಿನಗೂಡಿಗೇ ಕೈಹಾಕಿಬಿಟ್ಟಿದ್ದಾರೆ. ಪ್ರಾಮಾಣಿಕವಾಗಿ ಹೇಳಿ, ಎಷ್ಟು ಸಕರ್ಾರಿ ಶಾಲೆಗಳಲ್ಲಿ ನೆಹರೂ, ಇಂದಿರಾ, ರಾಜೀವ್ರ ಫೋಟೊ ರಾರಾಜಿಸುತ್ತಿದೆ ಅಂತ. ಮಹಾತ್ಮಾ ಗಾಂಧೀಜಿಯವರ ಚಿತ್ರ ಶಾಲೆಯಲ್ಲಿರುವುದನ್ನು ಒಪ್ಪಿಕೊಳ್ಳಬಹುದು. ಪಕ್ಕಾ ರಾಜಕಾರಣಿಯೇ ಆಗಿದ್ದ ನೆಹರೂ ಏಕೆ? ವಿವೇಕಾನಂದರ ಜಯಂತಿಯ ಆಚರಣೆ ಶಾಲೆಗಳಲ್ಲಿ ನಡೆಯುವುದನ್ನು ಒಪ್ಪಿಕೊಳ್ಳಬಹುದು, ನೆಹರೂ ಹುಟ್ಟಿದಹಬ್ಬ ಏಕೆ? ಅದು ರಾಜಕಾರಣವಲ್ಲವೇನು? ಕಾಂಗ್ರೆಸ್ಸಿಗೆ ಭವಿಷ್ಯದ ಪೀಳಿಗೆಯ ಮನಸ್ಸಿನೊಳಗೆ ನೇರಸ್ಥಾನ ಮಾಡಿಕೊಟ್ಟು ಮತ ಹಾಕಿಸುವ ಹುನ್ನಾರವಲ್ಲವೇನು ಅದು. ಇಂದಿರಾಗಾಂಧಿಯ ಯಾವ ಕೊಡುಗೆಗಾಗಿ ಆಕೆಯ ಚಿತ್ರ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಇರಬೇಕು? ಪುಣ್ಯ ಆಕೆಯ ಹುಟ್ಟಿದಹಬ್ಬವನ್ನು ಶಾಲೆಗಳಲ್ಲಿ ಹೆಣ್ಣುಮಕ್ಕಳ ದಿನವನ್ನಾಗಿ ಆಚರಿಸುವುದಿಲ್ಲ. ಇಲ್ಲವಾದರೆ ವರ್ಷಕ್ಕೊಮ್ಮೆ ಅದನ್ನೂ ನೋಡಬೇಕಾಗುತ್ತಿತ್ತು. ಅನೇಕ ಶಾಲೆಗಳಲ್ಲಿ ಇಂದಿಗೂ ರಾಜೀವ್ಗಾಂಧಿಯವರ ಚಿತ್ರಪಟವನ್ನು ನೋಡುವಾಗಲಂತೂ ಪಿಚ್ಚೆನಿಸುತ್ತದೆ. ಅಕ್ಷರಶಃ ಶಾಲೆಗಳಲ್ಲಿ ಮಕ್ಕಳ ಬುದ್ಧಿಗೆ ಮಸಿ ಬಳಿಯುವ ಪ್ರಯತ್ನಗಳೇ ಇವು. ಮೋದಿಯವರ ಜಾಗದಲ್ಲಿ ಅಕಸ್ಮಾತ್ ರಾಹುಲ್ ಪ್ರಧಾನಿಯಾಗಿಬಿಟ್ಟಿದ್ದರೆ ನಮ್ಮ ಶಾಲಾ-ಕಾಲೇಜುಗಳು ಆತನ ಚಿತ್ರವನ್ನು ಹಾಕಿ ಸಂಭ್ರಮಿಸಿಬಿಡುತ್ತಿದ್ದವು. ಆತನ ಹುಟ್ಟಿದಹಬ್ಬವನ್ನೂ ಶಾಲೆಗಳಲ್ಲಿ ಆಚರಿಸಬೇಕಾದ ಸ್ಥಿತಿಯನ್ನು ಊಹಿಸಿಕೊಳ್ಳಿ! ಅಷ್ಟರಿಂದಂತೂ ಬಚಾವಾಗಿದ್ದೇವೆ. ರಾಜಕೀಯವನ್ನು ಎಲ್ಲ ಕ್ಷೇತ್ರಗಳಲ್ಲಿ ಬೆರೆಸುವುದನ್ನು ರೂಢಿ ಮಾಡಿದ್ದೇ ಕಾಂಗ್ರೆಸ್ಸು. ಅದಕ್ಕೇ ಮಹಾತ್ಮಗಾಂಧೀಜಿ ಆರಂಭದಲ್ಲೇ ಹೇಳಿದ್ದು ಕಾಂಗ್ರೆಸ್ಸನ್ನು ವಿಸಜರ್ಿಸಿ, ಸ್ವಾತಂತ್ರ್ಯದ ಹೊತ್ತಲ್ಲಿ ಹೊಸದೊಂದು ಪಾಟರ್ಿಯ ರಚನೆ ಮಾಡಿ ಅಧಿಕಾರವನ್ನು ಪಡೆಯಬೇಕು ಅಂತ. ಆದರೆ ಅಷ್ಟು ಧೈರ್ಯ, ಸಾಹಸಗಳು ನೆಹರೂ ಪಾಳಯದಲ್ಲಿರಲಿಲ್ಲ. ಅವರು ಎ.ಒ.ಹ್ಯೂಮ್ ಕಟ್ಟಿದ, ತಿಲಕರೆಲ್ಲ ಬೆಳೆಸಿದ, ಗಾಂಧೀಜಿ ಸುಂದರ ರೂಪಕೊಟ್ಟ ಅದೇ ಕಾಂಗ್ರೆಸ್ಸಿಗೆ ಜೋತುಬಿದ್ದರು. ಅಧಿಕಾರವನ್ನು ಪಡೆದುಕೊಂಡರು ಮತ್ತು ಅಸಹ್ಯವಾಗಿ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಪಕ್ಷ ನಮ್ಮದು ಎಂದು ಹೇಳಿಕೊಳ್ಳುತ್ತಲೇ ನಡೆದರು. ಇಂದಿಗೂ ಹೇಳುತ್ತಿದ್ದಾರೆ. ನೂರಾರು ವರ್ಷಗಳ ಹಿಂದಿನ ಹೋರಾಟವನ್ನು ತಮ್ಮ ಖಾತೆಗೆ ತುಂಬಿಕೊಳ್ಳುವ ಅವರು ನೆಹರೂ ತಪ್ಪುಗಳನ್ನು ಮಾತ್ರ ಸಮಾಜ ಮರೆತುಬಿಡಬೇಕು ಎನ್ನುತ್ತಾರೆ. ಅಷ್ಟೇ ಅಲ್ಲ, ಈ ಸ್ವಾತಂತ್ರ್ಯ ಹೋರಾಟದ ಕಥನಗಳನ್ನಿರಿಸಿಕೊಂಡೇ ಪಠ್ಯಪುಸ್ತಕದಲ್ಲಿ ಸ್ಥಾನವನ್ನೂ ಪಡೆದು ಕಾಂಗ್ರೆಸ್ಸಿನ ಪರವಾಗಿ ಪರೋಕ್ಷ ಪ್ರಚಾರ ಮಾಡುತ್ತಾರೆ. ಇವರ ರಾಜಕೀಯದ ಕುರಿತಂತೆ ಎಷ್ಟು ಮಾತನಾಡಿದರೂ ಕಡಿಮೆಯೇ. ಅಧಿಕಾರದಲ್ಲಿರುವಾಗಲೇ ಕಾಂಗ್ರೆಸ್ಸು ತಮ್ಮ ನಾಯಕರುಗಳ ಹೆಸರಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರಸಕರ್ಾರವೇ ನೆಹರೂ, ಇಂದಿರಾ, ರಾಜೀವ್ರ ಹೆಸರಲ್ಲಿ 12 ಯೋಜನೆಗಳನ್ನು ತಂದಿದೆ. ಅದರಲ್ಲಿ ಇಂದಿರಾ ಆವಾಸ್ ಯೋಜನೆ ಮತ್ತು ವಿಕಾಸ ಪತ್ರಗಳು ಬಡ ಮತ್ತು ಮಧ್ಯಮವರ್ಗವನ್ನು ಮುಟ್ಟುವಂತವು ಮತ್ತು ಸದಾ ಅವರ ಕೊಡುಗೆಯನ್ನು ನೆನಪಿಸುವಂಥವು. ಜನರಿಗೆ ಉದ್ಯೋಗ ಕೊಡುವ ರೋಜ್ಗಾರ್ ಯೋಜನೆಗೆ ಅವರು ಕೊಟ್ಟಿರುವುದು ನೆಹರೂ ಹೆಸರು. ಇದನ್ನುಳಿದು ರಾಜ್ಯಗಳ ವಿಚಾರಕ್ಕೆ ಬರುವುದಾದರೆ 50ಕ್ಕೂ ಹೆಚ್ಚು ರಾಜ್ಯ ಸಕರ್ಾರದ ಯೋಜನೆಗಳು ಈ ಪರಿವಾರದ ಹೆಸರಿನಲ್ಲೇ ಇದೆ. ಹಳ್ಳಿಗಳಿಗೆ, ಸ್ತ್ರೀಯರಿಗೆ, ತರುಣರಿಗೆ, ವಿಭಿನ್ನ ಕ್ಷೇತ್ರಗಳಲ್ಲಿ ಇವರ ಹೆಸರಿನ ಯೋಜನೆಗಳು ಚಾಲ್ತಿಯಲ್ಲಿವೆ. ಅಚ್ಚರಿಯೇನು ಗೊತ್ತೇ? ಒಂದಾದರೂ ಆಟದಲ್ಲಿ ಪ್ರಾವೀಣ್ಯತೆ ತೋರದಿದ್ದ ಈ ಪರಿವಾರದವರ ಹೆಸರಿನಲ್ಲಿ 28 ಕ್ರೀಡಾಕೂಟಗಳು, ಟ್ರೋಫಿಗಳು ಇವೆ. ರಾಜೀವ್ಗಾಂಧಿಯ ಹೆಸರಿನಲ್ಲಿ ಖೇಲ್ರತ್ನ ಏಕಿದೆ ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ! ಏಪರ್ೋಟರ್್ಗಳು, ಯುನಿವಸರ್ಿಟಿಗಳು ಎಲ್ಲದಕ್ಕೂ ಈ ಪರಿವಾರದವರ ಹೆಸರುಗಳೇ, ಇದು ರಾಜಕೀಯವಲ್ಲವೇನು? ಹಣ ಸಕರ್ಾರದ್ದು, ಜಾರಿಗೊಳಿಸಲು ಕೆಲಸ ಮಾಡುವವರು ಸಕರ್ಾರದ ಕಾರಕೂನರು, ಆದರೆ ಲಾಭವನ್ನುಣ್ಣುವುದು ಮಾತ್ರ ಒಂದೇ ಪರಿವಾರ!


ಕಾಂಗ್ರೆಸ್ಸಿಗರ ತಾಳ್ಮೆಯನ್ನು ಮೆಚ್ಚಬೇಕಾದ್ದೇ. ಇಷ್ಟು ವರ್ಷಗಳ ಕಾಲ ಒಂದೇ ಪರಿವಾರ ಹೇಳಿದಂತೆ ಕೇಳುತ್ತಾ, ಮೇರಾ ನಂಬರ್ ಕಬ್ ಆಯೇಗಾ ಎಂದು ಕಾಯುತ್ತಲೇ ಕುಳಿತಿದ್ದಾರಲ್ಲ, ಅವರ ಮಾನಸಿಕ ಸ್ಥಿರತೆಗೆ ಉಘೇ ಎನ್ನಲೇಬೇಕು. ಆದರೆ ಪ್ರಶ್ನೆ ಇರೋದು ಮತ್ತೆ ಮಮತಾ ಬ್ಯಾನಜರ್ಿಯ ಮಾನಸಿಕ ಗೊಂದಲಗಳದ್ದೇ. ಸಾಮಾನ್ಯ ಜನ ಶ್ರೀರಾಮನಿಗೆ ಜೈಕಾರ ಹೇಳಿದ್ದನ್ನೇ ರಾಜಕೀಯ ಎನ್ನುವ ಆಕೆ ಸಕರ್ಾರಗಳು ಒಂದು ಪರಿವಾರಕ್ಕೆ ನಿರಂತರವಾಗಿ ಜೈಕಾರ ಹಾಕುತ್ತಾ ಬಂದವಲ್ಲ, ಅದರ ಬಗ್ಗೆ ಮುಗುಮ್ಮಾಗಿದ್ದಾರಲ್ಲ. ಬಂಗಾಳದ ಚುನಾವಣೆಗಳಲ್ಲಿ ಉತ್ತರ ದೊರಕಬಹುದೇನೋ!

ಜಾಗೃತ ಹಿಂದೂ, ಭವಿಷ್ಯದ ಭಾರತ!

ಜಾಗೃತ ಹಿಂದೂ, ಭವಿಷ್ಯದ ಭಾರತ!


ಹಿಂದೂ ಹಿಂದೆಂದಿಗಿಂತಲೂ ಹೆಚ್ಚು ಜಾಗೃತವಾಗಿರುವ ಹೊತ್ತು ಇದು. ಒಂದು ದಶಕದ ಹಿಂದೆ ಹಿಂದುವನ್ನು, ಹಿಂದೂ ದೇವತೆಗಳನ್ನು ತೆಗಳಿ ಅವಮಾನಿತಗೊಳಿಸಿ ಬದುಕುವುದು ಸುಲಭವಿತ್ತು. ಆದರೆ ಇಂದು ಹಾಗಿಲ್ಲ. ಈ ರೀತಿಯ ಘಟನೆಗಳು ಎಲ್ಲಾದರೂ ನಡೆದಲ್ಲಿ ಆತ ತಿರುಗಿ ಬೀಳುತ್ತಿದ್ದಾನೆ. ಮುಸಲ್ಮಾನರಂತೆ ತಾನೇ ಕಾನೂನನ್ನು ಕೈಗೆತ್ತಿಕೊಳ್ಳದೇ ಶುದ್ಧ ಭಾರತೀಯನಾಗಿ ಕಾನೂನನ್ನು ಬಳಸಿಕೊಂಡೇ ಧರ್ಮವನ್ನು ಅವಹೇಳನ ಮಾಡುವವರ ಕೊರಳಿಗೆ ಉರುಳಾಗುತ್ತಿದ್ದಾನೆ. ಒಂದು ರೀತಿ ಒಳ್ಳೆಯದೇ. ಸ್ವಾಮಿ ವಿವೇಕಾನಂದರೂ ನಮ್ಮನ್ನು ಟೀಕಿಸಿದ್ದಾರೆ. ಬರೀ ಟೀಕಿಸುವುದೇನು, ನಮ್ಮ ಆಚಾರ-ವಿಚಾರಗಳನ್ನು ನಡೆ-ನುಡಿಗಳನ್ನು ಮನಸೋ ಇಚ್ಛೆ ತೆಗಳಿದ್ದಾರೆ. ಆದರೆ ಅದ್ಯಾವುವೂ ಕುಹಕದ ದೃಷ್ಟಿಯಿಂದಲ್ಲ. ಅದು ನಮ್ಮನ್ನು ತಿದ್ದುವ, ನಮ್ಮನ್ನು ಹೊಸಕಾಲಕ್ಕೆ ತಕ್ಕಂತೆ ರೂಪಿಸುವ ಶುದ್ಧ ಹೃದಯದ ಪ್ರಯತ್ನ. ಆದರೆ ಈ ಅಯೋಗ್ಯರು ಮಾಡುತ್ತಾರಲ್ಲ, ಇದು ಹಾಗಲ್ಲ. ಇದು ನಮ್ಮನ್ನು ಅವಹೇಳನ ಮಾಡುವ, ತಮ್ಮನ್ನು ಸಂಭಾವಿತರೆಂದು ಬಿಂಬಿಸಿಕೊಳ್ಳುವ ಪ್ರಯತ್ನ. ಇವರುಗಳು ಎಷ್ಟು ನೀಚರಿದ್ದಾರೆಂದರೆ ಹಿಂದೂಧರ್ಮ ಮಾತ್ರ ಇವರ ಗುರಿ. ಉಳಿದ್ಯಾರನ್ನೂ ಮುಟ್ಟುವ ತಾಕತ್ತು, ಸಾಮಥ್ರ್ಯ ಅವರಿಗಿಲ್ಲ. ಸ್ವಾಮೀಜಿ ಹಾಗಿರಲಿಲ್ಲ. ಸಮಾನವಾಗಿ ಸತ್ಯವನ್ನು ಹೇಳುವ ತಾಕತ್ತನ್ನುಳಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಅಂಬೇಡ್ಕರರನ್ನು ಹಿಂದೂಗಳು ಮುಲಾಜಿಲ್ಲದೇ ಸ್ವೀಕರಿಸೋದು. ಅವರ ಬೈಗುಳಗಳು ಬದಲಾವಣೆಗೆ ಪ್ರೇರಣೆಯೇ ಹೊರತು ಧರ್ಮದ ನಾಶಕ್ಕಲ್ಲ.


ಆದರೆ, ಮೊಘಲ್ ಸಂತಾನಗಳು ಹಿಂದೂಧರ್ಮವನ್ನು ನಾಶ ಮಾಡಬೇಕೆಂಬ ದೃಷ್ಟಿಯಿಂದಲೇ ತಮ್ಮ ಚಟುವಟಿಕೆ ಮಾಡುತ್ತವೆ. ನಿರಂತರ ಕಾಂಗ್ರೆಸ್ಸಿನ ಆಳ್ವಿಕೆ ಮತ್ತು ಅವರ ತುಷ್ಟೀಕರಣ ನೀತಿಯನ್ನು ಗಮನಿಸಿಕೊಂಡೇ ಬಂದಿದ್ದ ಹಿಂದೂ ಶಾಂತನಾಗಿಬಿಟ್ಟಿದ್ದ. ಯಾರಾದರೂ ಪ್ರತಿಭಟಿಸಿದರೆ ಅವನನ್ನು ಕೋಮುವಾದಿ ಎಂದು ಕರೆಯುವುದು ಎಡಪಂಥೀಯ ಬುದ್ಧಿಜೀವಿಗಳಿಗೆ ರೂಢಿಯಾಗಿಬಿಟ್ಟಿತ್ತು. ಅಮೀರ್ಖಾನ್ ಪಿಕೆಯಂತಹ ಸಿನಿಮಾ ಮಾಡಿದಾಗ ಅದನ್ನು ಸಮಥರ್ಿಸಿಕೊಂಡು ಹೆಮ್ಮೆಯಿಂದ ಮಾತನಾಡಿದವರು ಹಿಂದೂಗಳೇ ಆಗಿದ್ದರು. ಆದರೆ ಈಗ ಹಾಗಿಲ್ಲ. ಮುನವ್ವರ್ ಫಾರುಖಿ ಒಬ್ಬ ಹಾಸ್ಯ ಕಲಾವಿದ. ಪಕ್ಕಾ ಮುಸಲ್ಮಾನ. ತನ್ನದ್ದನ್ನು ಹೊಗಳಿಕೊಳ್ಳುವ ಇತರರದ್ದನ್ನು ಅವಹೇಳನ ಮಾಡುವ ಕೆಟ್ಟ ಗುಣ ಅವನ ರಕ್ತದೊಳಗೇ ಇದೆ. ಕಳೆದ ಅನೇಕ ವರ್ಷಗಳಿಂದ ಹಿಂದೂ ಸಂತರನ್ನು, ಆಚಾರ-ವಿಚಾರಗಳನ್ನು ಆಡಿಕೊಂಡು ನಗುವ ಪ್ರಯತ್ನ ಆತ ಮಾಡುತ್ತಲೇ ಬಂದಿದ್ದಾನೆ. ಹಾಗಂತ ತನ್ನದ್ದೇ ಮುಸಲ್ಮಾನ ಪಂಥವನ್ನು ಅವನು ಆಡಿಕೊಳ್ಳುವುದೇ ಇಲ್ಲ. ಅಕಸ್ಮಾತ್ ಅಪ್ಪಿ-ತಪ್ಪಿ ಏನಾದರೂ ಮಾತನಾಡಿದರೂ ಅದು ತೀರಾ ದುಃಖದಾಯಕವಾಗಿರುವುದಿಲ್ಲ. ಹಿಂದೂಧರ್ಮದ ವಿಚಾರವಾಗಿ ಮಾತ್ರ ಆತ ಹೃದಯವನ್ನು ಇರಿಯುವ ಮಾತುಗಳನ್ನು ಆಡುತ್ತಾನೆ. ಮೇಲ್ನೋಟಕ್ಕೆ ತಮಾಷೆ ಎನಿಸಿದರೂ ಅಂತರಂಗದಲ್ಲಿ ಅದು ಶ್ರದ್ಧಾವಂತರ ಮನಕಲುಕುವ ಸಂಗತಿಗಳೇ ಆಗಿರುತ್ತವೆ. ಈ ಹಿಂದೆ ಆತನಿಗೆ ಒಮ್ಮೆ ಎಚ್ಚರಿಕೆ ಕೊಟ್ಟು ಬಿಡಲಾಗಿತ್ತು. ಆದರೆ ಈ ಮತಾಂಧರ ಮತ್ತು ಅವನಷ್ಟೇ ಕೆಡುಕರಾಗಿರುವ ಬುದ್ಧಿಜೀವಿಗಳ ದುರಹಂಕಾರ ಎಲ್ಲಿ ಸಾಯುತ್ತದೆ ಹೇಳಿ? ಆತ ಮತ್ತೊಂದು ಕಾರ್ಯಕ್ರಮದಲ್ಲಿ ಹೀಗೇ ಅವಹೇಳನ ಮಾಡಿದೊಡನೆ ಜಾಗೃತ ಹಿಂದೂಗಳು ಆಕ್ರೋಶವನ್ನು ಹೊರಹಾಕಿದರು. ಆತನ ಮೇಲೆ ದೂರು ದಾಖಲಾಯ್ತು. ಈ ಬಾರಿ ಪೊಲೀಸರು ತಡಮಾಡಲಿಲ್ಲ. ಆತನನ್ನು ಎಳೆದೊಯ್ದು ಸಾಮಾನ್ಯ ಖೈದಿಗಳಂತೆ ಕೂರಿಸಿಕೊಳ್ಳಲಾಯ್ತು. ಸ್ವತಃ ನ್ಯಾಯಾಲಯವೂ ಆತನ ಹಾಸ್ಯದ ಪರಿಧಿಯನ್ನು ಕಂಡು ಗಾಬರಿಯಾಗಿ ಜಾಮೀನು ನಿರಾಕರಿಸಿತು. ಈಗ ಉತ್ತರ ಪ್ರದೇಶ ಸಕರ್ಾರ ಆತನ ಮೇಲೆ ತಮ್ಮಲ್ಲೂ ದೂರುಗಳು ದಾಖಲಾಗಿರುವುದರಿಂದ ಆತನನ್ನು ಹಸ್ತಾಂತರಿಸಬೇಕೆಂದು ವಿನಂತಿ ಮಂಡಿಸಿದೆ. ಕಾರುಗಳಲ್ಲಿ ಉತ್ತರ ಪ್ರದೇಶದ ಪೊಲೀಸರು ಖೈದಿಗಳನ್ನು ಕರೆದೊಯ್ದರೆ ಏನಾಗುವುದೆಂಬುದು ಇಡಿಯ ರಾಷ್ಟ್ರಕ್ಕೆ ಗೊತ್ತಿರುವುದರಿಂದ ಮುನವ್ವರ್ ಫಾರುಖಿ ಹಾಸ್ಯವೆಂಬುದನ್ನೇ ಮರೆತುಬಿಟ್ಟಿರುವಂತೆ ಕಾಣುತ್ತದೆ! ಒಳ್ಳೆಯದೇ ಆಯ್ತು ಬಿಡಿ. ಇವರಿಗೆಲ್ಲಾ ಸರಿಯಾದ ಪಾಠ ಕಲಿಸದಿದ್ದರೆ ಹಿಂದೂಸ್ತಾನದಲ್ಲಿ ಹಿಂದೂಗಳೇ ಪರಕೀಯರಾಗುವ ಸಾಧ್ಯತೆಯಿದೆ.


ಇದರೊಟ್ಟಿಗೆ ಇನ್ನೊಂದು ಸುದ್ದಿ ಬರುತ್ತಿದೆ. ಜನವರಿ 15ಕ್ಕೆ ಅಮೇಜಾನ್ ಪ್ರೈಮ್ನಲ್ಲಿ ತಾಂಡವ್ ಎನ್ನುವ ವೆಬ್ಸಿರೀಸ್ ಆರಂಭವಾಗಿದೆ. ಇದು ಅಲಿ ಅಬ್ಬಾಜ್ ಜಫರ್ ನಿಮರ್ಾಣದ್ದು. ಸತತವಾಗಿ ಆತ ಹಿಂದೂಗಳ ವಿರುದ್ಧ ಮತ್ತು ಭಾರತೀಯತೆಯ ವಿರುದ್ಧ ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದ್ದಾನೆ. ಈಗಂತೂ ತನ್ನ ಈ ಮಾಲಿಕೆಯ ಆರಂಭದಲ್ಲೇ ಶಿವನನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದಾನೆ. ತನ್ನ ಮಗನಿಗೆ ಹಿಂದೂಗಳ ಹತ್ಯೆ ಮಾಡಿರುವ ತೈಮೂರ್ನ ಹೆಸರಿಟ್ಟಿರುವ ಸೈಫ್ಅಲಿಖಾನ್ ಇದಕ್ಕೆ ನಾಯಕ ಬೇರೆ! ಜೆಎನ್ಯುನ ಆಜಾದಿ ಘೋಷಣೆಗಳನ್ನು ಪುಷ್ಕಳವಾಗಿ ಮಾಲಿಕೆಯಲ್ಲಿ ಬಳಸಿಕೊಳ್ಳಲಾಗಿದೆಯಂತೆ. ಆ ಮೂಲಕ ಹಿಂದುಗಳನ್ನು ಅವಹೇಳನ ಮಾಡುವ ಮತ್ತು ದೇಶವಿರೋಧಿ ಶಕ್ತಿಗಳನ್ನು ಪರಿಪೂರ್ಣವಾಗಿ ಬೆಂಬಲಿಸುವ ಆತನ ಉದ್ದೇಶಕ್ಕೆ ಇಡಿಯ ವೆಬ್ಮಾಲಿಕೆಯನ್ನು ಸೂಕ್ತವಾಗಿ ಬಳಸಿಕೊಂಡಂತಾಯ್ತು. ಮೊದಲೆಲ್ಲಾ ಆಗಿದ್ದರೆ ಹಿಂದೂಗಳು ಸುಮ್ಮನಿರುತ್ತಿದ್ದರೇನೋ. ಈಗ ಹಾಗಿಲ್ಲ. ಅವರು ತಿರುಗಿ ಬಿದ್ದಿದ್ದಾರೆ. ಬಿಜೆಪಿಯ ರಾಮ್ಕದಮ್ ಈ ಕುರಿತಂತೆ ದೂರು ದಾಖಲಿಸಿದ್ದಲ್ಲದೇ ಅದರ ಹಿಂದು-ಹಿಂದೆಯೇ ಕಪಿಲ್ಮಿಶ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವರಿಗೆ ನೇರ ಅಹವಾಲು ಮಂಡಿಸಿದ್ದಾರೆ. ಪರಿಣಾಮ ಇಡಿಯ ತಂಡದ ಮೇಲೆ ದೂರು ದಾಖಲಾಗಿದ್ದು ಪೊಲೀಸರು ಸಮನ್ಸ್ ನೀಡಿದ್ದಾರೆ. ಸೆಕ್ಷನ್ 295ಎ ಮತ್ತು ಐಟಿ ಆಕ್ಟ್ನ 67ಎ ಅಡಿಯಲ್ಲಿ ಈ ಮಾಲಿಕೆಗೆ ಸಂಬಂಧಪಟ್ಟ ಎಲ್ಲರ ಮೇಲೂ ದೂರು ದಾಖಲಾಗಿದೆ. ಯಾವ ಕ್ಷಣದಲ್ಲಿ ಬೇಕಿದ್ದರೂ ಇವರನ್ನು ಬಂಧಿಸಬಹುದು. ಅಚ್ಚರಿ ಏನು ಗೊತ್ತೇ? ಇತ್ತ ಈ ಗಲಾಟೆ ನಡೆಯುತ್ತಿದ್ದಂತೆ ಅತ್ತ ಯೋಗಿ ಆದಿತ್ಯನಾಥರು ಇವರೆಲ್ಲರನ್ನೂ ತಮ್ಮ ವಶಕ್ಕೆ ಒಪ್ಪಿಸುವಂತೆ ಕೇಳಿಕೊಂಡಿದ್ದಾರೆ. ಅಲ್ಲಿಗೆ ವೆಬ್ಸೀರೀಸ್ ಮಾಡುವಾಗ ಇದ್ದ ಉತ್ಸಾಹವೆಲ್ಲ ಸರ್ರ್ ಎಂದು ಇಳಿದೇ ಹೋದಂತಿದೆ. ದೇಶದ ಯಾವ ಮೂಲೆಯಲ್ಲಿ ಹಿಂದೂಗಳ ವಿರುದ್ಧ ಅಹಿತಕಾರಿ ಘಟನೆಗಳು ನಡೆದರೂ ಯೋಗಿ ಆದಿತ್ಯನಾಥರು ಸಿದ್ಧರಾಗಿಯೇ ಕುಳಿತಿರುತ್ತಾರೆ. ಅದಕ್ಕೇ ಹಿಂದೂಗಳಿಗೆ ಅವರ ಮೇಲೆ ಒಂದು ಮುಷ್ಟಿ ಹೆಚ್ಚು ವಿಶ್ವಾಸ. ಆದರೆ ಈಗ ಬಂದಿರುವ ಈ ವಿಶ್ವಾಸ ಯಾವ ಕಾಲಕ್ಕೂ ಕಡಿಮೆಯಾಗುವಂತಿಲ್ಲ. ಕಳೆದ ಒಂದು ಸಾವಿರ ವರ್ಷಗಳಿಂದ ಮುಸಲ್ಮಾನರ ಮತ್ತು ಕ್ರಿಶ್ಚಿಯನ್ನರ ನಿರಂತರ ಆಕ್ರಮಣವನ್ನು ಎದುರಿಸಿ ಹೀನ, ದೀನ, ಕೃಪಣರಾಗಿದ್ದ ಹಿಂದೂಗಳು ಈಗ ಜಾಗೃತರಾಗಿ ನಿಲ್ಲಬೇಕಿದೆ. ಅಗತ್ಯಬಿದ್ದಾಗ ಸಿಡಿದೇಳಬೇಕಿದೆ. ಧರ್ಮವನ್ನು ಮುಟ್ಟಲು ಬಂದವರಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕಿದೆ.


ಈಗಿನ ಸ್ಥಿತಿಗತಿಗಳನ್ನು ನೋಡಿದರೆ ಅವೆಲ್ಲವೂ ನಿಚ್ಚಳವಾಗಿ ಕಾಣುತ್ತಿದೆ. ಒಳ್ಳೆಯ ದಿನಗಳು ಅಂದ್ರೆ ಇದೇ ಇರಬೇಕೇನೋ!

ತರುಣರೇಕೆ ಇಸ್ಲಾಂ ಬಿಡುತ್ತಿದ್ದಾರೆ!?

ತರುಣರೇಕೆ ಇಸ್ಲಾಂ ಬಿಡುತ್ತಿದ್ದಾರೆ!?

ಹಸನ್ ಸುರೂರ್ ಬರೆದಿರುವ ‘ಹು ಕಿಲ್ಡ್ ಲಿಬರಲ್ ಇಸ್ಲಾಂ’ ಎಂಬ ಪುಸ್ತಕದ ಆಯ್ದ ಭಾಗವನ್ನು ಟೆಲಿಗ್ರಾಫ್ ಪತ್ರಿಕೆ ಕಳೆದ ವರ್ಷ ಪ್ರಕಟಿಸಿತ್ತು. ತರುಣ ಮುಸಲ್ಮಾನರು ಇಸ್ಲಾಮನ್ನು ತೊರೆಯುತ್ತಿರುವುದೇಕೆ ಎಂಬ ಪ್ರಶ್ನೆ ಅಲ್ಲಿತ್ತು. ಸಾಕಷ್ಟು ದಾಖಲೆಗಳ ಸಮೇತ ಇಸ್ಲಾಂ ತೊರೆಯುತ್ತಿರುವವರ ಕುರಿತಂತೆ ವಿವರವಾದ ಮಾಹಿತಿ ಆ ಲೇಖನದಲ್ಲಿತ್ತು. ಅಂಕಿ-ಅಂಶಿಗಳು ನಿಜವೇ ಆಗಿದ್ದರೆ, ತರುಣರು ಇಸ್ಲಾಂ ತೊರೆಯುತ್ತಿರುವ ಕಾರಣ ಲೇಖನದಲ್ಲಿ ಹೇಳಿರುವ ಅಂಶಗಳೇ ಆಗಿದ್ದರೆ ಈಗಂತೂ ಜಗತ್ತಿನ ಬಹುಪಾಲು ಜನ ಮುಸಲ್ಮಾನರೇ ಆಗಿಲ್ಲವೆನಿಸುತ್ತದೆ. ಅಮೇರಿಕಾದ ದ ನ್ಯೂ ರಿಪಬ್ಲಿಕ್ ಪತ್ರಿಕೆ ಕೆಲವು ವರ್ಷಗಳ ಹಿಂದೆ ಈ ಕುರಿತಂತೆ ವರದಿ ಪ್ರಕಟಿಸಿದಾಗ ಸೌದಿ ಅರೇಬಿಯಾವೂ ಸೇರಿದಂತೆ ಮುಸಲ್ಮಾನ ರಾಷ್ಟ್ರಗಳೆಲ್ಲಾ ಒಮ್ಮೆ ಅವಾಕ್ಕಾಗಿಬಿಟ್ಟಿದ್ದವು. ಫ್ರೀ ಅರಬ್ಸ್ ಎಂಬ ಪತ್ರಿಕೆಯ ಸಂಪಾದಕ ಈ ಕುರಿತಂತೆ ಬರೆಯುತ್ತಾ ನಾಸ್ತಿಕವಾದದ ಕುರಿತಂತೆ ಫೇಸ್ಬುಕ್ಕಿನಲ್ಲಿ ಹುಡುಕಾಡುವಾಗ ಭಿನ್ನ ಭಿನ್ನ ಅರಬ್ ರಾಷ್ಟ್ರಗಳ ಪೇಜುಗಳು ಕಂಡುಬಂದವೆಂದು ಹೇಳಿದ್ದರು. ಇವುಗಳನ್ನು ಅನುಸರಿಸುವವರ ಸಂಖ್ಯೆ ಕೆಲವು ನೂರುಗಳಿಂದ ಹಿಡಿದು ಹತ್ತು ಸಾವಿರವನ್ನು ಮೀರಿತ್ತು ಎಂಬುದನ್ನು ಅವರು ಗುರುತಿಸಲು ಮರೆಯಲಿಲ್ಲ. ಅಮೇರಿಕಾದಂತಹ ರಾಷ್ಟ್ರದಲ್ಲೋ ಅಥವಾ ಭಾರತದಲ್ಲೋ ಈ ರೀತಿಯ ಪೇಜುಗಳಿದ್ದರೆ ಲಕ್ಷಾಂತರ ಅನುಯಾಯಿಗಳಿದ್ದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಇಲ್ಲಿ ವಾಕ್ ಸ್ವಾತಂತ್ರ್ಯ ಇದೆ, ಆಲೋಚನೆಗೆ ಚೌಕಟ್ಟುಗಳಿಲ್ಲ. ಆದರೆ ಅರಬ್ ರಾಷ್ಟ್ರಗಳಲ್ಲಿ ಹಾಗಲ್ಲವೇ ಅಲ್ಲ. ನಾಲ್ಕು ಎಂದರೆ ಹೆಚ್ಚು ಮೂರು ಎಂದರೆ ಕಡಿಮೆ. ಷರಿಯಾ ಕಾನೂನುಗಳು ಯಾರನ್ನು ಯಾವಾಗ ತರಿದು ಬಿಸಾಡುವುದೋ ದೇವರೇ ಬಲ್ಲ. ಅಂಥದ್ದರಲ್ಲೂ ಈ ರೀತಿಯ ಅಲೋಚನೆಗಳು ಟಿಸಿಲೊಡೆಯುತ್ತಿವೆ ಎಂದರೆ ಕ್ರೌರ್ಯದಿಂದ ಕಟ್ಟಿದ ಸೌಧವೊಂದು ಕುಸಿದು ಬೀಳುವ ಕಾಲ ಸನ್ನಿಹಿತವಾಗಿದೆ ಎಂದೇ ಅರ್ಥ!

ಟ್ವಿಟರ್ನಲ್ಲೋ ಫೇಸ್ಬುಕ್ಕಿನಲ್ಲೋ ಎಕ್ಸ್ ಮುಸ್ಲೀಂ ಎಂದು ಕೊಟ್ಟು ನೋಡಿ. ಅನೇಕರು ಅದರಡಿಯಲ್ಲಿ ತಾವು ಇಸ್ಲಾಮನ್ನು ಬಿಟ್ಟಿರುವುದೇಕೆಂತಲೋ ನಾಸ್ತಿಕವಾದಿಗಳಾಗಿರುವುದು ಎಷ್ಟು ಸುಖವೆಂತಲೋ ಬಣ್ಣಿಸಿರುತ್ತಾರೆ. 2012ರಲ್ಲಿ ಗ್ಯಾಲಪ್ ಇಂಟರ್ನ್ಯಾಷನಲ್ ನಡೆಸಿದ ಸವರ್ೇಯೊಂದರಲ್ಲಿ ಸೌದಿಯ, ಹ್ಞಾಂ! ಸೌದಿಯ ಶೇಕಡಾ 5ರಷ್ಟು ಜನ ತಮ್ಮನ್ನು ತಾವು ಶ್ರದ್ಧೆಯಿಂದಲೇ ನಾಸ್ತಿಕವಾದಿಗಳಾದವರು ಎಂದು ಹೇಳಿಕೊಂಡಿದ್ದರು. ಸುಮಾರು 19 ಪ್ರತಿಶತದಷ್ಟು ಜನ ತಮ್ಮನ್ನು ತಾವು ತೀರಾ ಧಾಮರ್ಿಕವಲ್ಲ ಎಂದು ಪರಿಚಯಿಸಿಕೊಂಡಿದ್ದರು. ಈ ಸಂಖ್ಯೆ ಅಮೇರಿಕಾ, ಇಟಲಿ ಮೊದಲಾದ ರಾಷ್ಟ್ರಗಳಲ್ಲಿ ಇನ್ನೂ ಹೆಚ್ಚಾಗಿದೆ ಎಂಬುದನ್ನು ಮರೆಯುವಂತಿಲ್ಲ. ಮಧ್ಯ ಏಷ್ಯಾದಲ್ಲಿ ಅತ್ಯಂತ ಹೆಚ್ಚು ಡೌನ್ಲೋಡ್ ಆಗಿರುವ ಕೃತಿ ರಿಚಡರ್್ ಡಾಕಿನ್ನ ಗಾಡ್ ಡೆಲ್ಯೂಷನ್ ಎಂಬ ಪುಸ್ತಕ ಎನ್ನುವುದು ಗಮನಿಸಲೇಬೇಕಾದ ಸಂಗತಿ ಏಕೆಂದರೆ ಈ ಕೃತಿಯ ಲೇಖಕ ತನ್ನನ್ನು ತಾನು ನಾಸ್ತಿಕವಾದಿ ವಿಜ್ಞಾನಿ ಎಂದೇ ಕರೆದುಕೊಳ್ಳುತ್ತಾನೆ. ಮನೆಯ ಮಕ್ಕಳು ನಾಸ್ತಿಕವಾದದ ಸೆಳೆತಕ್ಕೆ ಒಳಪಡುತ್ತಿರುವುದನ್ನು ಕಂಡು ಗಾಬರಿಗೊಂಡ ಶ್ರದ್ಧಾವಂತ ಮುಸಲ್ಮಾನರು ಒಂದೆಡೆ ತಮ್ಮ ಮಕ್ಕಳನ್ನು ಮರಳಿ ತರುವಲ್ಲಿ ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ಈ ಸುದ್ದಿ ಹೊರಗೆ ಗೊತ್ತಾಗದಂತೆ ಮುಚ್ಚಿಡುವಲ್ಲಿ ಹರಸಾಹಸ ಮಾಡುತ್ತಿದ್ದಾರೆ. ಅದರಲ್ಲೂ ಧಾಮರ್ಿಕ ನಂಬಿಕೆಗಳ ವಿರುದ್ಧ ಮಾತನಾಡಿದವರನ್ನು ಕೊಂದೇಬಿಡುವ ಅರಬ್ ರಾಷ್ಟ್ರಗಳಲ್ಲಿ ಸುದ್ದಿಯನ್ನು ಮುಚ್ಚಿಟ್ಟು ಕಾಯುವುದು ಅತ್ಯಗತ್ಯವೇ ಸರಿ. ಅಮೇರಿಕಾದಲ್ಲಿ ವಾಸಿಸುತ್ತಿದ್ದ ಸೊಮಾಲಿಯಾದ ಮಹಾಡ್ ಓಲಾಡ್ನ ಕಥೆಯನ್ನು ದಿ ಎಕನಾಮಿಸ್ಟ್ 2018ರಲ್ಲಿ ಪ್ರಕಟಿಸಿತ್ತು. ಮಗ ಇಸ್ಲಾಮಿನ ಮೇಲೆ ಭರವಸೆ ಕಳೆದುಕೊಳ್ಳುತ್ತಿದ್ದಾನೆಂದು ಗೊತ್ತಾದಾಗ ಕೀನ್ಯಾ ಪ್ರವಾಸಕ್ಕೆ ಕರೆದೊಯ್ಯುತ್ತೇವೆಂದು ತಂದೆ-ತಾಯಿಯರು ಅವನನ್ನು ಪುಸಲಾಯಿಸಿದ್ದರು. ಅಲ್ಲಿ ಅವನನ್ನು ಮುಸ್ಲೀಂ ಮದರಸಾಕ್ಕೆ ಸೇರಿಸಿ ಮತ್ತೆ ಧರ್ಮದ ಕುರಿತಂತೆ ಆಸಕ್ತಿ ಮೂಡಿಸುವ ಪ್ರಯತ್ನ ಅವರದ್ದು. ವಿಮಾನದಲ್ಲಿರುವಾಗಲೇ ಈ ಕುರಿತ ಅನುಮಾನದಿಂದ ಎಚ್ಚರಗೊಂಡ ಮಹಾಡ್ ಇಳಿದೊಡನೆ ತಾಯಿಯ ಕೈಚೀಲದಿಂದ ಪಾಸ್ಪೋರ್ಟನ್ನು ಕಸಿದುಕೊಂಡು ಎಂಬೆಸ್ಸಿಗೆ ಹೋಗಿ ಅವರ ಸಹಕಾರದಿಂದ ಅಮೇರಿಕಾ ಮುಟ್ಟಿಕೊಂಡಿದ್ದ. ಇದು ಆತನೊಬ್ಬನ ಕಥೆಯಲ್ಲ. ಅರಬ್ ರಾಷ್ಟ್ರಗಳಿಂದ ತನ್ನನ್ನು ಉಳಿಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಹೆಣ್ಣುಮಕ್ಕಳು ಇಂದಿಗೂ ಕೇಳಿಕೊಳ್ಳುತ್ತಾರೆ!

ಹೀಗೆ ಇಸ್ಲಾಂ ಬಿಡುವುದೇಕೆನ್ನುವುದರ ಕುರಿತಂತೆ ಅನೇಕ ಚಚರ್ೆಗಳಾಗಿವೆ. ಆ ಮತದ ಆಕ್ರಮಣಕಾರಿ ನೀತಿಗಳು, ಇತರರನ್ನು ಭಯೋತ್ಪಾದನೆಯ ಮೂಲಕ ಕೊಲ್ಲುವುದಕ್ಕೆ ಅಲ್ಲಿಂದ ಪಡೆಯುವ ಪ್ರೇರಣೆ ಇವತ್ತಿನ ತರುಣರನ್ನು ಆ ಮತದಿಂದ ವಿಮುಖಗೊಳಿಸುತ್ತಿದೆ ಎಂಬುದು ಕೆಲವರ ವಾದವಾದರೆ ಬ್ರಿಯಾನ್ ವಿಟೇಕರ್ ತನ್ನ ಕೃತಿಯ ಸಂಶೋಧನೆಗೆ ತೊಡಗಿದ್ದಾಗ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ಅವನ್ನೆಲ್ಲಾ ಸುಳ್ಳೆಂದು ಸಾಬೀತುಪಡಿಸಿದ್ದಾರೆ. ಆತ ಹೇಳುವಂತೆ ಇಸ್ಲಾಮನ್ನು ತೊರೆದು ಬಂದಿರುವ ಬಹುತೇಕರು ಅದಕ್ಕೆ ಕಾರಣವಾಗಿ ಭಯೋತ್ಪಾದನೆಯನ್ನೋ ಮತಾಂಧತೆಯನ್ನೋ ಮುಂದಿಡುವುದಿಲ್ಲ. ಮತಗ್ರಂಥದಲ್ಲೇ ಇರುವ ಕೆಲವು ಅಸಂಬದ್ಧತೆಗಳ ಕುರಿತಂತೆ ಪ್ರಶ್ನೆಗೆ ಉತ್ತರ ಸಿಗದಾದಾಗ ಹೊರಹೋಗುತ್ತಿದ್ದಾರೆ ಅಂತ. ಮುಸಲ್ಮಾನರಲ್ಲದೇ ಒಳ್ಳೆಯ ವ್ಯಕ್ತಿತ್ವ ಹೊಂದಿರುವವರು ನರಕಕ್ಕೆ ಹೋಗುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅಲ್ಲಾಹ್ನಿಗೆ ಹಿಂದಿನದ್ದು, ಮುಂದಿನದ್ದು ಎಲ್ಲಾ ಗೊತ್ತಿರುವಾಗ ಕೆಲವರನ್ನು ಮಾತ್ರ ಕೆಟ್ಟ ಪಥದಲ್ಲಿ ನಡೆಸಿ ಆ ಕಾರಣಕ್ಕೆ ಅವರನ್ನೇ ಶಿಕ್ಷಿಸುವುದು ಯಾವ ನ್ಯಾಯ? ಭೂಮಿಯ ಮೇಲೆ ಹೆಂಡ ಕುಡಿಯುವುದನ್ನು ನಿಷೇಧಿಸಿ ಸ್ವರ್ಗದಲ್ಲಿ ಹೆಂಡದ ಹೊಳೆ ಹರಿಸುವುದೇಕೆ? ಎಂಬ ಅನೇಕ ಪ್ರಶ್ನೆಗಳನ್ನು ಅವರು ಕೇಳುತ್ತಾರೆ ಎಂದು ವಿಟೇಕರ್ ವಾದಿಸುತ್ತಾರೆ. ಹಾಗಂತ ಇಸ್ಲಾಂ ತೊರೆಯುವ ಮುನ್ನ ಸಾಕಷ್ಟು ಪರಿತಪಿಸಿ ಮೂಲಗ್ರಂಥಗಳನ್ನೆಲ್ಲ ಅಧ್ಯಯನ ಮಾಡಿ ತಾವು ಓದಿರುವ ಗ್ರಂಥವೂ ಕೂಡ ಅದರಂತೆಯೇ ಇದೆ ಎಂದು ಖಾತ್ರಿ ಪಡಿಸಿಕೊಂಡೇ ಬಿಟ್ಟುಹೋಗುತ್ತಾರೆ!

ಇವೆಲ್ಲದರೊಟ್ಟಿಗೆ ಜಗತ್ತಿನಾದ್ಯಂತ ಮುಸಲ್ಮಾನರು ನಡೆಸುತ್ತಿರುವ ದೊಂಬಿ-ಗಲಾಟೆಗಳು ಸಭ್ಯ, ಬುದ್ಧಿವಂತ, ಸಹನೆಯ ವ್ಯಕ್ತಿತ್ವವುಳ್ಳ ಯಾವ ಮುಸಲ್ಮಾನನನ್ನೂ ಸಂಪ್ರೀತಿಗೊಳಿಸಲಾರದು. ಇಂದಿನ ದಿನದ ಭಾವನೆ ಹೇಗಿದೆ ಎಂದರೆ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಿದ್ದಂತೆ ಇತರರು ಬದುಕುವುದೇ ಸಾಧ್ಯವಿಲ್ಲ ಎಂಬಷ್ಟರಮಟ್ಟಿಗೆ. ಇದು ಅವರಲ್ಲಿ ಜಾಗೃತಿ ಮೂಡಿಸಬೇಕಾಗಿರುವ ಸಂಗತಿಗಳು. ಅಚ್ಚರಿ ಎಂದರೆ ಈ ಲೇಖನದಲ್ಲಿ ಅರಬ್ ರಾಷ್ಟ್ರಗಳಷ್ಟೇ ಅಲ್ಲದೇ, ಪಾಕಿಸ್ತಾನ, ಭಾರತಗಳಲ್ಲೂ ಕೂಡ ತರುಣ ಮುಸಲ್ಮಾನರು ತಮ್ಮ ಮತ ಬಿಟ್ಟು ತೆರಳುತ್ತಿರುವುದರ ಕುರಿತಂತೆ ಉಲ್ಲೇಖಿಸಲಾಗಿದೆ. ಆದರೆ ಹೀಗೆ ಮತ ತೊರೆದವರು ಯಾರಿಗೂ ಹೇಳದೇ ಅದನ್ನು ಬಚ್ಚಿಟ್ಟುಕೊಳ್ಳುವುದರಿಂದ ಅದು ಹೊರಬರುವುದಿಲ್ಲ ಎಂದೂ ಅಭಿಪ್ರಾಯ ಪಡುತ್ತಾರೆ.

ಏನೇ ಆಗಲಿ, ಸೌಹಾರ್ದಯುತವಾಗಿ ಬದುಕಲು ಎಲ್ಲರೂ ಪ್ರಯತ್ನಿಸಬೇಕಾಗಿರುವ ಹೊತ್ತು ಇದು. ನಾವು ನಾಲ್ಕೋ ಆರನೆಯದ್ದೋ ಶತಮಾನದಲ್ಲಿಲ್ಲ. 21ನೇ ಶತಮಾನದಲ್ಲಿದ್ದೇವೆ. ಆಧುನಿಕ ವಿಜ್ಞಾನದೊಂದಿಗೆ ಎಲ್ಲವನ್ನೂ ಒರೆಗೆ ಹಚ್ಚಿ ಸತ್ಯವನ್ನು ಅನುಸರಿಸಬೇಕಾದ ಸಾಮಥ್ರ್ಯ ಪಡೆದಿದ್ದೇವೆ. ಜಾಗೃತರಾಗುವ ಹೊತ್ತು ಬಂದಿದೆ!

ಎಡಪಂಥೀಯರ ಬಂಡವಾಳ ಬಯಲಾದಷ್ಟೂ ರಾಷ್ಟ್ರಕ್ಕೆ ಒಳ್ಳೆಯದೇ!

ಎಡಪಂಥೀಯರ ಬಂಡವಾಳ ಬಯಲಾದಷ್ಟೂ ರಾಷ್ಟ್ರಕ್ಕೆ ಒಳ್ಳೆಯದೇ!

ಎಡಪಂಥೀಯರದ್ದು ವಿಚಿತ್ರವಾದ ಸಿದ್ಧಾಂತ. ತಮ್ಮವರು ಏನು ಮಾಡಿದರೂ ಸರಿಯೇ. ತಮ್ಮನ್ನೊಪ್ಪದವರು ಏನು ಮಾಡಿದರೂ ತಪ್ಪೇ. ಇದು ಇಂದಿನ ಚಿಂತನೆಯಲ್ಲ ಅವರದ್ದು. ಹುಟ್ಟಿದಾಗಿನಿಂದಲೂ ಹಾಗೆಯೇ. ಚೀನಾವನ್ನೇ ನೋಡಿ. ವೈರಸ್ಸನ್ನು ಜಗತ್ತಿಗೆ ಹಬ್ಬಿಸಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ, ಕೋಟ್ಯಂತರ ಜನರ ಬದುಕನ್ನು ಧ್ವಂಸಗೊಳಿಸಿದ್ದು ಸರಿಯಾದ ಕ್ರಮ. ಆದರೆ ಅಕ್ಕಪಕ್ಕದ ರಾಷ್ಟ್ರಗಳು ತಮ್ಮ-ತಮ್ಮ ಗಡಿಯ ರಕ್ಷಣೆ ಮಾಡಿಕೊಳ್ಳುತ್ತಾ ಇತರ ರಾಷ್ಟ್ರಗಳೊಂದಿಗೆ ಸಹಕಾರ ವೃದ್ಧಿಸಿಕೊಳ್ಳುವುದನ್ನು ಅದು ತಪ್ಪೆನ್ನುತ್ತದೆ. ತಾನು ಟಿಬೆಟ್ ನುಂಗಿದ್ದು ತಪ್ಪಲ್ಲ. ಆದರೆ ಭಾರತ ತನ್ನದ್ದೇ ಅಂಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುತ್ತೇನೆಂದರೆ ತಪ್ಪು. ತನ್ನ ದೇಶದಲ್ಲಿ ಮುಸಲ್ಮಾನರ ಬದುಕನ್ನು ನರಕಕ್ಕಿಂತಲೂ ಕಡೆಯಾಗಿಸಿದ ಚೀನಾ ಭಾರತೀಯರು 370ನೇ ವಿಧಿಯನ್ನು ಕಿತ್ತೊಗೆದು ಕಾಶ್ಮೀರದ ಮುಸಲ್ಮಾನರನ್ನು ಪ್ರತ್ಯೇಕತಾವಾದಿಗಳ ಕಬಂಧ ಬಾಹುವಿನಿಂದ ಬಿಡಿಸಿ ತಂದಿದ್ದು ಅಕ್ಷಮ್ಯವಂತೆ. ಇದೇ ಚಾಳಿ ಈ ದೇಶದ ಕಮ್ಯುನಿಸ್ಟರಿಗೂ ಇದೆ. ಒಂದಷ್ಟು ಘಟನೆಗಳನ್ನು ಈ ಹಿನ್ನೆಲೆಯಲ್ಲೇ ನಿಮ್ಮ ಮುಂದಿಡುವ ಪ್ರಯತ್ನ. ಇತ್ತೀಚೆಗೆ ಸುಷಾಂತ್ಸಿಂಗ್ ಸುದ್ದಿಯಲ್ಲಿರುವ ಚಿತ್ರನಟ. ಆತ ನಿಗೂಢವಾಗಿ ಸಾವನ್ನಪ್ಪಿದ್ದು ಮುಂಬೈ ಪೊಲೀಸರ ಪಾಲಿಗೆ ಸಹಜ ಸಾವು ಎನಿಸಿಕೊಂಡಿತ್ತು. ಆದರೆ ಮಾಧ್ಯಮಗಳು ಹಿಂದೆ ಬಿದ್ದು ಆ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲೇಬೇಕೆಂಬ ಆಗ್ರಹ ಮಂಡಿಸಿದವು. ಈ ಪ್ರಕರಣದಲ್ಲಿ ಶಿವಸೇನಾ ಮುಖ್ಯಸ್ಥನೊಬ್ಬ ಭಾಗಿಯಾಗಿರುವ ಅನುಮಾನವಿದ್ದುದರಿಂದ ಹೇಗಾದರೂ ಮಾಡಿ ಸುಷಾಂತ್ ಸಾವಿಗೆ ನ್ಯಾಯ ದೊರಕಬೇಕೆಂದರೆ ಪ್ರಕರಣ ಮುಂಬೈ ಪೊಲೀಸರಿಂದ ದಾಟಲ್ಪಡಲೇಬೇಕಿತ್ತು. ಇಡಿಯ ದೇಶ ಈ ಪರವಾಗಿ ದನಿ ಎತ್ತಿತು. ಪರಿಣಾಮ ಕೋಟರ್ಿನ ಮೂಲಕ ಪ್ರಕರಣ ಕಡ್ಡಾಯವಾಗಿ ಸಿಬಿಐಗೆ ವಗರ್ಾವಣೆಯಾಯ್ತು. ಅಷ್ಟರೊಳಗೆ ಪ್ರಕರಣದ ಸಾಕ್ಷ್ಯವನ್ನು ಮುಚ್ಚಿಹಾಕಲು, ಪ್ರಕರಣದ ವಿಚಾರಣೆ ನಡೆಸಲೆತ್ನಿಸಿದ ಬಿಹಾರ್ ಪೊಲೀಸರ ಉತ್ಸಾಹ ತಗ್ಗಿಸಲು ಮುಂಬೈ ಪೊಲೀಸರು ಮಾಡಿದ ಸಾಹಸ ಅಂತಿಂಥದ್ದಲ್ಲ. ಬಿಹಾರ್ ಪೊಲೀಸರು ವಿಚಾರಣೆಗೆಂದು ಬಂದೊಡನೆ ಬೇಕಂತಲೇ 14 ದಿನಗಳ ಕಾಲ ಅವರನ್ನು ಕ್ವಾರೆಂಟೈನ್ಗೆ ತಳ್ಳಲಾಯ್ತು. ಪ್ರಕರಣದ ವಿಚಾರಣೆಯಲ್ಲಿ ಯಾವ ದೋಷವೂ ಆಗಿಲ್ಲವೆಂದು ತೋರ್ಪಡಿಸಲು ಹರಸಾಹಸ ಮಾಡಲಾಯ್ತು. ಆಗ ಮಾಧ್ಯಮಗಳು ತಾವೇ ತನಿಖೆಯನ್ನು ಕೈಗೆತ್ತಿಕೊಂಡು ಅನೇಕ ಸೂಕ್ಷ್ಮ ಸಂಗತಿಗಳನ್ನು ಹೊರಗೆಡವುತ್ತಿದ್ದಂತೆ ಮುಂಬೈ ಪೊಲೀಸರು ಕಕ್ಕಾಬಿಕ್ಕಿಯಾದರು. ಮುಂದೇನು ಮಾಡಬೇಕೆಂದು ತೋಚದೇ ಇರುವಾಗಲೇ ಸಿಬಿಐ ಮುಂಬೈಗೆ ಧಾವಿಸಿತು. ಮಾಧ್ಯಮಗಳೂ ಕೂಡ ಒಂದು ಹೆಜ್ಜೆ ಹಿಂದೆ ಬರದೇ ಪ್ರಕರಣದಲ್ಲಿರುವ ಅನೇಕ ಸೂಕ್ಷ್ಮ ಸಂಗತಿಗಳನ್ನು ಬಯಲಿಗೆಳೆಯಲಾರಂಭಿಸಿದವು. ಆಗಲೇ ಇಡೀ ದೇಶಕ್ಕೆ ಕಂಟಕವಾದ ಡ್ರಗ್ ಮಾಫಿಯಾ ಹೊರಬಂದದ್ದು. ಈ ಮಾಫಿಯಾದಲ್ಲಿ ಬಲುದೊಡ್ಡ ಪಾತ್ರ ವಹಿಸಿರುವುದು ಬಾಲಿವುಡ್ನ ನಟನಟಿಯರೇ ಎಂಬುದು ಈ ಹಂತದಲ್ಲೇ ಬೆಳಕಿಗೆ ಬಂತು. ಇವರದ್ದೇ ಪ್ರಭಾವದಿಂದಾಗಿ ಕನ್ನಡದ ನಟನಟಿಯರೂ ಈ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಈಗ ಬೆಳಕಿಗೆ ಬಂದಿದೆ. ಇಷ್ಟೆಲ್ಲಾ ಇರುವಾಗ್ಯೂ ರಾಜ್ದೀಪ್ ಸರದೇಸಾಯಿಯಂತಹ ಎಡಪಂಥೀಯ ಪತ್ರಕರ್ತರು ಮಾಧ್ಯಮಗಳ ಈ ಹೋರಾಟದ ಕುರಿತಂತೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಾವೇ ವಿಚಾರಣೆ ನಡೆಸುವ ಮಾಧ್ಯಮಗಳ ಈ ಧಾವಂತಿಕೆಯನ್ನು ಅವರು ವಿರೋಧಿಸುತ್ತಾರೆ. ಅಚ್ಚರಿಯೆಂದರೆ ಇವರುಗಳೇ ಜಸ್ಟೀಸ್ ಲೋಯಾ ಸಾವಿಗೆ ಹತ್ಯೆಯ ರಂಗು ಕೊಟ್ಟಿದ್ದು. ಸ್ವತಃ ಲೋಯಾ ಕುಟುಂಬದವರೇ ಇದು ಕೊಲೆಯಲ್ಲ. ಆತ್ಮಹತ್ಯೆ ಎಂದು ಒತ್ತಿ-ಒತ್ತಿ ಹೇಳುವಾಗಲೂ ಎಡಪಂಥೀಯ ಪತ್ರಕರ್ತರೂ ಮಾತ್ರ ಬಿಟ್ಟೂ ಬಿಡದೇ ಅದನ್ನು ಕೊಲೆ ಎಂದು ಸಾಬೀತುಪಡಿಸುವ ಹಠಕ್ಕೆ ಬಿದ್ದಿದ್ದರು. ಅದೃಷ್ಟವಶಾತ್ ನ್ಯಾಯಾಲಯ ಕೊನೆಯಲ್ಲಿ ಜಸ್ಟೀಸ್ ಲೋಯಾ ಸಾವಿನಲ್ಲಿ ಮೋದಿಯಾಗಲೀ ಅಮಿತ್ಶಾ ಆಗಲೀ ಯಾವ ಪಾತ್ರ ವಹಿಸಿಲ್ಲವೆಂದು, ಅದು ಸಹಜ ಸಾವೆಂದು ತೀಪರ್ು ಕೊಟ್ಟಿತು. ಅಷ್ಟಾದರೂ ಅವರುಗಳಿಗೆ ಸಮಾಧಾನವಿಲ್ಲ. ಈಗಲೂ ಅದೇ ವಿಚಾರವನ್ನು ಕೆದಕುತ್ತಾ ಸ್ವತಃ ಪ್ರಧಾನಮಂತ್ರಿಯೇ ಈ ಹತ್ಯೆಯ ಸಂಚಿನಲ್ಲಿದ್ದಾರೆ ಎಂದು ಹೇಳಲೂ ಹಿಂಜರಿಯುವುದಿಲ್ಲ. ಆಗೆಲ್ಲಾ ಇದು ಮೀಡಿಯಾಗಳೇ ನಡೆಸುತ್ತಿರುವ ವಿಚಾರಣೆ ಎಂದು ಎಡಪಂಥೀಯರಿಗೆ ಅನ್ನಿಸಲೇ ಇಲ್ಲ. ಬಿಹಾರದ ಚುನಾವಣೆಗೆ ಸುಷಾಂತ್ನ ಹತ್ಯೆಯ ವಿಚಾರವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸುವ ಎಡಪಂಥೀಯ ಪತ್ರಕರ್ತರು ಮಹಾರಾಷ್ಟ್ರ ಚುನಾವಣೆಯಲ್ಲಿ ಜಸ್ಟೀಸ್ ಲೋಯಾ ಬಳಕೆಯಾಗಿದ್ದನ್ನು ಮತ್ತು ಮೋದಿ ಕಳೆಗುಂದಿಸುವಲ್ಲಿ ಅದನ್ನು ತಾವೂ ಬಳಸಿದ್ದರ ಕುರಿತಂತೆ ಚಕಾರವೆತ್ತಲಿಲ್ಲ.

ಕಂಗನಾ ವಿಷಯದಲ್ಲೂ ಹಾಗೆಯೇ ಆಯ್ತು. ಶಿವಸೇನೆಯ ಸಂಜಯ್ ರೌತ್ ಆಕೆಯನ್ನು ಮುಂಬೈಯಲ್ಲಿ ಇರುವಂತಿಲ್ಲ ಎಂದು ತಾಕೀತು ಮಾಡಿದ. ಕಂಗನಾಳ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಶಿವಸೈನಿಕರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕಿತ್ತೇನೋ. ಆಕೆ ತಲೆಕೆಡಿಸಿಕೊಳ್ಳಲಿಲ್ಲ. ಝಾನ್ಸಿ ರಾಣಿಯ ಮೇಲಿನ ತನ್ನ ಸಿನಿಮಾ ಹೊರಬರುವಾಗ ರಾಜಸ್ತಾನದ ಕಣರ್ಿ ಸೇನಾ ಪುಂಡಾಟಿಕೆ ಮಾಡಹೊರಟಿತ್ತಲ್ಲ ಆಗ ಕಚ್ಚೆ ಕಟ್ಟಿ ನಿಂತ ಈ ಹೆಣ್ಣುಮಗಳು, ‘ನಾನೂ ರಜಪೂತಳೇ. ತಾಕತ್ತಿದ್ದರೆ ಸಿನಿಮಾ ನಿಲ್ಲಿಸಿ, ನೋಡಿಬಿಡುತ್ತೇನೆ’ ಎಂದಿದ್ದಳು. ಕಣರ್ಿ ಸೇನಾ ಮಾತೂ ಆಡದೇ ತೆಪ್ಪಗಾಯ್ತು. ಈ ಬಾರಿಯೂ ಹಾಗೆಯೇ. ಮುಂಬೈ ಯಾರಪ್ಪನದೂ ಅಲ್ಲ. ಹೀಗಾಗಿ ತನ್ನನ್ನು ಓಡಿಸುವ ತಾಕತ್ತು ಯಾರಿಗೂ ಇಲ್ಲ ಎಂಬ ಹೇಳಿಕೆಯನ್ನು ಆಕೆ ಮುಲಾಜಿಲ್ಲದೇ ಕೊಟ್ಟಳು. ‘ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ’ ಎಂಬ ಹೇಳಿಕೆ ಕೊಟ್ಟು ಉದ್ಧವ್ ಠಾಕ್ರೆಯ ಸಕರ್ಾರಕ್ಕೆ ಕೈಗನ್ನಡಿ ಹಿಡಿದಳು ಆಕೆ. ಮೈಯ್ಯಲ್ಲಾ ಪರಚಿಕೊಂಡ ಸಂಜಯ್ ರೌತ್ ಕಂಗನಾ ಪಾಕಿಸ್ತಾನಕ್ಕೆ ಹೋಗುವುದಿದ್ದರೆ ನಾನೇ ಹಣಕೊಟ್ಟು ಕಳಿಸಿಕೊಡುವೆ ಎಂದು ಹೇಳಿ ಮತ್ತಷ್ಟು ವಿವಾದವನ್ನು ಮೈಮೇಲೆಳೆದುಕೊಂಡ. ಏಕೆಂದರೆ ಪಿಒಕೆ ಭಾರತದ ಅಂಗ ಎಂದು ಹೇಳುತ್ತಿದ್ದ ಹಿಂದೂಪರ ಪಕ್ಷಗಳಲ್ಲಿ ಶಿವಸೇನೆಯೇ ಮುಖ್ಯಭೂಮಿಕೆಯಲ್ಲಿತ್ತು. ಈ ಹೇಳಿಕೆಗೆ ಪ್ರತಿಕ್ರಿಯಿಸುವ ಭರದಲ್ಲಿ ಆತ ಅದನ್ನು ಪಾಕಿಸ್ತಾನಕ್ಕೆ ಬರೆದುಕೊಟ್ಟುಬಿಟ್ಟಿದ್ದ. ಜನರ ಬೈಗುಳಗಳನ್ನು ತಡೆಯಲಾಗದೇ ಮತ್ತೊಂದು ತಪ್ಪು ಹೆಜ್ಜೆಯನ್ನಿಟ್ಟು ಮಾಧ್ಯಮಗಳ ಮುಂದೆ ಕಂಗನಾಳನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸಿಬಿಟ್ಟ. ಮಾತೆತ್ತಿದರೆ ಸ್ತ್ರೀವಾದದ ಕುರಿತಂತೆ ಅರಚಾಡುತ್ತಾ ಹಿಂದೂಧರ್ಮದ ವಿರುದ್ಧ ಬೊಟ್ಟು ಮಾಡಿ ತೋರಿಸುವ ಎಡಪಂಥೀಯರು ಈಗೇಕೋ ಬಾಯಿಮುಚ್ಚಿ ಕುಳಿತಿದ್ದರು. ಈ ಹಿಂದೆ ಸುಷಾಂತ್ನ ಪ್ರಕರಣದ ಹಿನ್ನೆಲೆಯಲ್ಲಿ ಬಿಹಾರ್ ಪೊಲೀಸರನ್ನು, ಅಲ್ಲಿನ ಮುಖ್ಯಮಂತ್ರಿಯನ್ನು ನಿಂದಿಸಿದ್ದ ರಿಯಾ ಚಕ್ರವತರ್ಿಯನ್ನು ಬಿಹಾರ್ ಪೊಲೀಸ್ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡಾಗ ಇದೇ ಎಡಪಂಥೀಯ ಪಟಾಲಂ ಉರಿದುಬಿದ್ದಿತ್ತು. ಬಿಹಾರದ ಪೊಲೀಸರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿತ್ತು. ಈಗ ರಾಜಕೀಯ ನಾಯಕನೊಬ್ಬ ಕಂಗನಾಳ ವಿರುದ್ಧ ನಿಂದನೆಯ ಪದಗಳನ್ನು ಬಳಸಿದಾಗಲೂ ಅವರು ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ.

ಕನರ್ಾಟಕದಲ್ಲೂ ಇಂಥವರಿಗೆ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಮಾತುಗಳನ್ನು ಬದಲಾಯಿಸುವ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಮಂದಿ ಬೇಕಾದಷ್ಟಿದ್ದಾರೆ. ಗೌರಿ ಹತ್ಯೆಯ ಕುರಿತಂತೆ ಅಷ್ಟೆಲ್ಲಾ ಅರಚಾಡಿದವರು ಒಂದಾದ ಮೇಲೊಂದು ಹಿಂದೂಗಳ ಹತ್ಯೆಯಾಯಿತಲ್ಲ, ಆಗ ಮಾತನಾಡಲೇ ಇಲ್ಲ. ಡಿ.ಜೆ ಹಳ್ಳಿಯ ಪ್ರಕರಣದಲ್ಲಂತೂ ಹಿಂದೂಗಳ ಮನೆಯನ್ನೇ ಹುಡು-ಹುಡುಕಿ ಧ್ವಂಸಗೊಳಿಸಲಾಯ್ತು. ಆ ಮೂಲಕ ಆ ಭಾಗದ ಹಿಂದೂಗಳಲ್ಲಿ ಭಯದ ವಾತಾವರಣವನ್ನು ಹುಟ್ಟಿಸಿ ಅವರೆಲ್ಲರೂ ಆ ಪ್ರದೇಶವನ್ನೇ ಬಿಟ್ಟು ಮುಸಲ್ಮಾನರಿಗೆ ಕಾಣಿಕೆಯಾಗಿ ಕೊಟ್ಟು ಹೋಗಬೇಕೆಂಬ ರೀತಿಯಲ್ಲೆ ದಂಗೆಗಳನ್ನು ನಡೆಸಲಾಯ್ತು. ಸ್ವತಃ ಶಾಸಕರನ್ನೆ ಬಿಡದ ಜನ ಇನ್ನು ಸಾಮಾನ್ಯರ ಕುರಿತಂತೆ ತಲೆಕೆಡಿಸಿಕೊಳ್ಳುವರೇನು? ಒಟ್ಟಾರೆ ಭಯದ ವಾತಾವರಣವನ್ನು ಸೃಷ್ಟಿಮಾಡಿ ಮುಸಲ್ಮಾನರ ವಿರುದ್ಧ ಯಾರೂ ಮಾತನಾಡದಂತೆ ಮಾಡಿಬಿಟ್ಟರಲ್ಲಾ, ಧರಣಿಕೋರರಲ್ಲಿ ಒಬ್ಬರಾದರೂ ಟೌನ್ಹಾಲ್ ಮುಂದೆ ಕಾಣಿಸಿಕೊಂಡರಾ? ದೂರದ ಬಿಹಾರದಲ್ಲಿ, ಉತ್ತರ ಪ್ರದೇಶದಲ್ಲಿ ಒಂದಿಬ್ಬರು ಮುಸಲ್ಮಾನರ ಹತ್ಯೆಯಾದಾಗ ಇಲ್ಲಿ ಅಸಹಿಷ್ಣುತೆಯ ಕೂಗೆಬ್ಬಿಸಿ ಅರಚಾಡಿದವರ್ಯಾರೂ ಈ ಹೊತ್ತಿನಲ್ಲಿ ಮಾತೇ ಆಡಲಿಲ್ಲವಲ್ಲಾ. ಈಗ ಅವರಿಗೆ ಅಸಹಿಷ್ಣುತೆಯ ಭೂತ ಕಾಣಲೇ ಇಲ್ಲವೇ? ಅದರಲ್ಲೂ ದಲಿತ ಶಾಸಕನ ಮೇಲಿನ ಮುಸಲ್ಮಾನರ ಈ ಅತ್ಯಾಚಾರ ಎಡಪಂಥೀಯರ ಕಣ್ ತಪ್ಪಿದ್ದಾದರೂ ಹೇಗೆ? ಪ್ರಶ್ನೆ ಕೇಳಬೇಕಲ್ಲ.

ಇವರ ದ್ವಂದ್ವ ನೀತಿ ಇಲ್ಲಿಗೇ ಮುಗಿಯುವುದಿಲ್ಲ. ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಸಾಧುಗಳಿಬ್ಬರನ್ನು ಬರ್ಬರವಾಗಿ ಕೊಲ್ಲಲಾಯ್ತು. ಪೊಲೀಸರ ರಕ್ಷಣೆಯಲ್ಲಿದ್ದ ಸಾಧುಗಳು ತಮ್ಮನ್ನು ತಾವು ಸುರಕ್ಷಿತರೆಂದೇ ಭಾವಿಸಿದ್ದರು. ದುರಂತವೆಂದರೆ ಅದೇ ಪೊಲೀಸರು ಆ ಸಾಧುಗಳನ್ನು ದಂಗೆಕೋರರಿಗೆ ಒಪ್ಪಿಸಿದ್ದರು. ಇಡಿಯ ಪ್ರಕರಣದ ಹಿಂದೆ ಎಡಪಂಥೀಯರ ಪಡೆಯೊಂದಿತ್ತು ಎಂಬುದನ್ನು ಈಗ ಸತ್ಯಶೋಧಕ ಸಮಿತಿ ಹೊರಹಾಕಿದೆ. ಯಾವೊಬ್ಬನೂ ತುಟಿಪಿಟಿಕ್ ಎನ್ನುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳುವ ಹೋರಾಟವಿದ್ದಾಗ ಮಾತ್ರ ಬಾಯಿ ಬಿಡುತ್ತಾ ಅದಕ್ಕೆ ದಲಿತ ಸಂವೇದನೆಯ, ಸ್ತ್ರೀ ಸಂವೇದನೆಯ ಬಣ್ಣ ಬಳಿಯುತ್ತಾ ಕೂರುವ ಈ ಮಂದಿ ನಿಜವಾಗಿಯೂ ದಲಿತರಿಗೆ ಆಘಾತವಾದಾಗ, ಹೆಣ್ಣುಮಕ್ಕಳಿಗೆ ತೊಂದರೆಯಾದಾಗ ಬಾಯಿ ಬಿಡುವುದೇ ಇಲ್ಲ. ಇವರಿಗೆಲ್ಲ ಈಗಿರುವ ಒಂದೇ ಸಮಸ್ಯೆ ಎಂದರೆ ಅವರು ಆಶಾಭಾವನೆಯಿಂದ ನೋಡುತ್ತಿದ್ದ, ಮುಂದೊಂದು ದಿನ ತಮ್ಮೆಲ್ಲರ ಚಟುವಟಿಕೆಯ ಕೇಂದ್ರವಾಗಿ ನಿಲ್ಲುತ್ತದೆಂದು ಕನಸು ಕಾಣುತ್ತಿದ್ದ ಚೀನಾ ಕುಸಿದು ಬೀಳುತ್ತಿದೆ. ಅದಾಗಲೇ ಭಾರತ ಗಡಿಯಲ್ಲಿ ಪ್ರತಾಪ ತೋರಿರುವುದಲ್ಲದೇ 1962ರಲ್ಲಿ ಕಳೆದುಕೊಂಡಿದ್ದ ಕೆಲವು ಭೂಭಾಗಗಳನ್ನು ವಶಪಡಿಸಿಕೊಂಡಿರುವ ಸುದ್ದಿಯೂ ಬಂದಿದೆ. ರಷ್ಯಾದಲ್ಲಿ ಭಾರತದ ರಕ್ಷಣಾ ಸಚಿವರನ್ನು ಕಾಡಿ ಭೇಟಿ ಮಾಡಿದ ಚೀನಾದ ರಕ್ಷಣಾ ಸಚಿವರು ‘ಭಾರತ ನಮ್ಮ ಗಡಿ ಭಾಗದೊಳಕ್ಕೆ ನುಸುಳಲು ನಾವು ಬಿಡುವುದೇ ಇಲ್ಲ’ ಎಂಬ ಹೇಳಿಕೆ ಕೊಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಈ ಮಾತನ್ನು ನಾವು ಹೇಳುತ್ತಿದ್ದೆವು. ಭಾರತೀಯ ಸೇನಾನಿನಗಳ ಮನೋಬಲ ಬಲು ಎತ್ತರದಲ್ಲಿದೆ. ಚೀನಾ ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ತನ್ನ ಪ್ರತಾಪವನ್ನು ತೋರಿಸಲು ಸಾಧ್ಯವಾಗದಂತೆ ಭಾರತವೇ ಚೀನಾವನ್ನು ಗಡಿಯಲ್ಲಿ ಕಟ್ಟಿ ಹಾಕಿದೆ. ಅದೇ ವೇಳೆಗೆ ಮುಸಲ್ಮಾನ ರಾಷ್ಟ್ರಗಳೊಂದಿಗೂ ಸೇರಿ ಜಗತ್ತಿನ ಅನೇಕ ರಾಷ್ಟ್ರಗಳೊಂದಿಗೆ ತನ್ನ ಬಾಂಧವ್ಯವನ್ನು ಭಾರತ ಬಲಗೊಳಿಸಿಕೊಳ್ಳುತ್ತಲೇ ನಡೆದಿದೆ. ಆಂತರಿಕವಾಗಿಯೂ ಚೀನಾ ಕುಸಿಯುವ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿಯೇ ಚಡಪಡಿಸುತ್ತಿರುವ ಚೀನಾ ಭಾರತದೊಳಕ್ಕೆ ದಂಗೆಯನ್ನು ಹಬ್ಬಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಸಹಜವಾಗಿಯೇ ಅವರ ಮುಂದಿರುವ ಆಶಾಕಿರಣ ಕಾಂಗ್ರೆಸ್ಸು ಮತ್ತು ಎಡಪಂಥೀಯರು ಮಾತ್ರ. ಜೊತೆಗೆ ಜಿಹಾದಿಗಳು. ಇತ್ತೀಚೆಗೆ ತಾನೇ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ರಾಹುಲ್ ನೇತೃತ್ವದ ಕಾಂಗ್ರೆಸ್ಸು ಗಡಿ ವಿಚಾರವನ್ನು ಮುಂದಿಟ್ಟುಕೊಂಡು ನರೇಂದ್ರಮೋದಿಯ ವಿರುದ್ಧ ಆಂದೋಲನ ನಡೆಸಲು ಸಿದ್ಧತೆ ಮಾಡಿಕೊಂಡಿದೆ ಎಂಬರ್ಥದ ಟ್ವೀಟ್ ಮಾಡಿತ್ತು. ಇಷ್ಟು ದಿನ ಪಾಕಿಸ್ತಾನದ ಪತ್ರಿಕೆಗಳು ರಾಹುಲ್ನನ್ನು ಸಂಭ್ರಮಿಸುತ್ತಿದ್ದವು. ಈಗ ಚೀನಾದ ಪತ್ರಿಕೆಗಳೂ ಕೂಡ. ಎಲ್ಲ ಚುಕ್ಕಿಗಳೂ ಸೇರಿದರೆ ಭಾರತವನ್ನು ಚೂರುಗೊಳಿಸಬೇಕೆಂಬ ಇವರುಗಳ ವಿದ್ರೋಹದ ಚಿಂತನೆ ಕಣ್ಣಿಗೆ ರಾಚುವಂತಿದೆ. ಆದರೆ ಭಾರತೀಯರು ಹಿಂದೆಂದಿಗಿಂತಲೂ ಹೆಚ್ಚು ಜಾಗೃತವಾಗಿರುವುದರಿಂದ ಈಗೀಗ ಇವರ ಮನೋಗತಗಳೆಲ್ಲಾ ಬಯಲಿಗೆ ಬರುತ್ತಿವೆ. ಇದು ಭಾರತದ ಪುನರ್ ನಿಮರ್ಾಣದ ಪರ್ವಕಾಲ. ದೇಶವಿರೋಧಿ ಚಿಂತನೆ ನಡೆಸುವ ಇವರುಗಳ ಬಂಡವಾಳ ಹೆಚ್ಚು ಬಯಲಿಗೆ ಬಂದಷ್ಟೂ ಭಾರತ ಬಲುಬೇಗ ನಿಮರ್ಾಣಗೊಳ್ಳುತ್ತದೆ.

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿ ಇಪ್ಪತ್ತು ವರ್ಷಗಳ ನಂತರ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಮೋದಿಯನ್ನು ರಕ್ಕಸನೆಂದು ಬಿಂಬಿಸಲು ಮಾಧ್ಯಮಗಳು, ರಾಜಕಾರಣಿಗಳು, ಅಧಿಕಾರಿಗಳು, ಕೆಲವು ಎನ್‌ಜಿಒಗಳು ಮಾಡಿದ ಪ್ರಯತ್ನ ಕೊನೆಗೂ ಮಣ್ಣುಗೂಡಿದೆ. ಪುಟವಿಟ್ಟ ಚಿನ್ನದಂತೆ ಮೋದಿ ಮತ್ತೊಮ್ಮೆ ಬೆಳಗಿದ್ದಾರೆ.

2002ರ ಫೆಬ್ರವರಿ 27. ಅಯೋಧ್ಯಾದಿಂದ ಬರುತ್ತಿದ್ದ ರೈಲೊಂದಕ್ಕೆ ಮುಸಲ್ಮಾನರು ಗುಜರಾತಿನ ಗೋದ್ರಾದಲ್ಲಿ ಬೆಂಕಿ ಹಚ್ಚಿದರು. ಇದು ಅಚಾನಕ್ಕಾಗಿ ನಡೆದ ದಾಳಿಯಲ್ಲ. ಎಂದಿನಂತೆ ಕೈಲಿ ಕಲ್ಲುಗಳನ್ನು ಹಿಡಿದು, ಪೆಟ್ರೋಲು ಬಾಂಬುಗಳನ್ನು ಹಿಡಿದು ಸಿದ್ಧವಾಗಿದ್ದ ಮುಸಲ್ಮಾನ ಪುಂಡರು ರೈಲು ನಿಂತೊಡನೆ ಏಕಾಕಿ ದಾಳಿ ಮಾಡಿದರು. ಕಲ್ಲೆಸೆದು ಜನರನ್ನು ರೈಲಿನಿಂದ ಹೊರಬರದಂತೆ ತಡೆದರು. ಪೆಟ್ರೋಲ್ ಬಾಂಬುಗಳನ್ನು ಎಸೆದು ಬೋಗಿಗಳು ಹೊತ್ತುರಿಯುವಂತೆ ಮಾಡಿದರು. ಬೇಗೆ ತಾಳಲಾರದೆ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಹೊರಗೆ ನಿಂತು ಕಲ್ಲಿನಲ್ಲಿ ಹೊಡೆಯಲಾಯ್ತು. ಇಡಿಯ ಬೋಗಿಗಳು ಸುಟ್ಟು ಕರಕಲಾದವಲ್ಲದೇ 59 ಜನ ಕರಸೇವಕರು ಬೆಂದುಹೋಗಿದ್ದರು. ಅವರ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಎಂಥವನ ರಕ್ತವೂ ಕುದಿಯುತ್ತಿತ್ತು. ಆದರೆ ಈ ದೇಶದ ಮಾಧ್ಯಮಗಳಲ್ಲಿದ್ದವರು ಅಂದೂ ಅದರ ಕುರಿತಂತೆ ತಲೆಕೆಡಿಸಿಕೊಳ್ಳಲಿಲ್ಲ, ಇಂದೂ ಕೂಡ! ಕಳೆದ ಮಾರ್ಚ್‌ನಲ್ಲಿ ಪ್ರೇಮ್ಶಂಕರ್ ಝಾ ಈ ಪ್ರಕರಣವನ್ನು ನೆನಪಿಸಿಕೊಳ್ಳುತ್ತಾ ವೈರ್ ಪತ್ರಿಕೆಗೆ ಬರೆದ ಲೇಖನದಲ್ಲಿ, 1100 ಜನ ಸಾಮಥ್ರ್ಯ ಹೊಂದಿದ್ದ ಆ ರೈಲು 2000ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದೇ ಮೊದಲ ತಪ್ಪು ಎಂಬುದನ್ನು ಬರೆದುಕೊಂಡಿದ್ದಾರೆ. ಎಸ್6 ಬೋಗಿ ಬೆಂಕಿ ಹೊತ್ತಿಸಿಕೊಂಡು ಉರಿದು ಕರಸೇವಕರು ಸಾಯಲು ಕಾರಣವಾಗಿದ್ದು ಅದು ಅಗತ್ಯಕ್ಕಿಂತ ಹೆಚ್ಚು ತುಂಬಿದ್ದುದರಿಂದ ಎಂದು ವಾದಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಹಚ್ಚಿದ ಮುಸಲ್ಮಾನರದ್ದು ಯಾವ ತಪ್ಪೂ ಇಲ್ಲ. ರೈಲಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳದ್ದೇ ತಪ್ಪು. ಅರುಂಧತಿ ರಾಯ್ ಅಂತೂ ಅಂದಿನ ದಿನಗಳಲ್ಲೇ ಬಾಬರಿ ಮಸೀದಿಯನ್ನು ಉರುಳಿಸಿ ಬರುತ್ತಿದ್ದ ಕರಸೇವಕರ ಮೇಲೆ ಮುಸಲ್ಮಾನರಿಗೆ ಆಕ್ರೋಶವಿತ್ತು, ಹೀಗಾಗಿ ಈ ರೀತಿ ಆಯ್ತು ಎಂದು ದಂಗೆಕೋರರಿಗೆ ಕವರಿಂಗ್ ಫೈರ್ ಕೊಡುವ ಪ್ರಯತ್ನ ಮಾಡಿದ್ದಳು! ಮಸೀದಿ ಉರುಳುವ ಮತ್ತು ಗೋದ್ರಾ ರೈಲಿಗೆ ಬೆಂಕಿ ಹಚ್ಚುವ ಘಟನೆಗಳ ನಡುವೆ ಹತ್ತು ವರ್ಷಗಳ ಅಂತರವಿತ್ತು ಎಂಬುದನ್ನು ಆಕೆ ಮರೆತೇ ಹೋಗಿದ್ದಳು. ಹತ್ತು ವರ್ಷಗಳ ಹಿಂದೆ ನಿರ್ಜೀವ ಕಟ್ಟಡವೊಂದನ್ನು ಉರುಳಿಸಿದ ಘಟನೆಗೆ ಮುಸಲ್ಮಾನರು 59 ಜನರ ಸಜೀವ ದಹನ ಮಾಡಿದ್ದು ಸಹಜ ಪ್ರತಿಕ್ರಿಯೆಯಾಗಬಹುದಾದರೆ, ಈ ರೈಲು ದಹನದ ನಂತರ ಹಿಂದೂಗಳು ಮುಸಲ್ಮಾನರ ವಿರುದ್ಧ ಆಕ್ರೋಶಗೊಂಡಿದ್ದು ಮಾತ್ರ ಅಸಹಜ ಹೇಗಾಯ್ತು? ಈ ಪ್ರಶ್ನೆಯನ್ನು ಆಗಲೂ ಯಾರೂ ಕೇಳಲಿಲ್ಲ, ಈಗಲೂ ಕೂಡ ವ್ಯವಸ್ಥಿತವಾಗಿ ಮರೆಯುತ್ತಾರೆ.

ಆದರೆ ಗೋದ್ರಾ ನಂತರದ ಘಟನೆಗಳನ್ನು, ಮೋದಿಯನ್ನು ಶಾಶ್ವತವಾಗಿ ಮುಗಿಸುವ ಪ್ರಯತ್ನಕ್ಕೆ ಎಲ್ಲರೂ ರಣಹದ್ದುಗಳಂತೆ ಬಳಸಿಕೊಂಡರು. ಮೋದಿ ಮುಖ್ಯಮಂತ್ರಿಯ ಪಟ್ಟಕ್ಕೆ ಬಂದು ಆಗಷ್ಟೇ ನಾಲ್ಕು ತಿಂಗಳು ಕಳೆದಿದ್ದವು. ಕಚ್‌ನ ಭೂಕಂಪವನ್ನು ಎದುರಿಸಿ ನಿಂತು ಅವರು ಜನರಲ್ಲಿ ಮೂಡಿಸಿದ ವಿಶ್ವಾಸ ಪ್ರತಿಪಕ್ಷಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಅವಕಾಶವನ್ನು ಎಲ್ಲರೂ ಬಳಸಿಕೊಂಡರು. ರಾಷ್ಟ್ರಮಟ್ಟದಲ್ಲಿ ಹಿಂದೂಗಳನ್ನು ಅವಮಾನಗೊಳಿಸಲು ದಂಗೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಲಾಯ್ತು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಮೋದಿ ದಂಗೆಗಳು ಕೈಮೀರುತ್ತವೆಂದು ಗೊತ್ತಾದೊಡನೆ ಪಕ್ಕದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್, ಮಹಾರಾಷ್ಟ್ರದ ವಿಲಾಸ್‌ರಾವ್ ದೇಶ್‌ಮುಖರಿಗೆ ಪತ್ರ ಬರೆದು ರಕ್ಷಣೆಯ ದೃಷ್ಟಿಯಿಂದ ಸಹಾಯ ಕೊಡುವಂತೆ ಕೇಳಿಕೊಂಡರು. ಕಾಂಗ್ರೆಸ್ಸಿಗೆ ಸೇರಿದ್ದ ಈ ಮೂರೂ ರಾಜ್ಯಗಳು ಅಂದು ಮೋದಿಯ ವಿನಂತಿಗೆ ಪ್ರತಿಕ್ರಿಯಿಸಲೇ ಇಲ್ಲ. ಇದಕ್ಕೆ ವಿಪರೀತವಾಗಿ ದಂಗೆ ನಿಯಂತ್ರಣ ಮಾಡುವಲ್ಲಿ ಮೋದಿ ಸೋತರೆಂದು ಅದೇ ಮುಖ್ಯಮಂತ್ರಿಗಳು ಆನಂತರ ಮಾತನಾಡಲಾರಂಭಿಸಿದರು. ಸುಳ್ಳು ಸುದ್ದಿ ಹಬ್ಬಿಸಿ ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವಲ್ಲಿ ನಿಸ್ಸೀಮರಾದ ಎಡಪಂಥೀಯರು ಕೌಸರ್ ಬಾನೊ ಎಂಬ ಗರ್ಭಿಣಿ ಮುಸ್ಲೀಂ ಹೆಣ್ಣುಮಗಳ ಸಾವನ್ನೂ ಕೂಡ ತಮಗೆ ತಕ್ಕಂತೆ ಬಳಸಿಕೊಂಡರು. ಹಿಂದೂ ಪಡೆ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ಹೊಟ್ಟೆಯನ್ನು ಸೀಳಿ, ಒಳಗಿದ್ದ ಮಗುವನ್ನು ಕತ್ತಿಯಿಂದ ಕತ್ತರಿಸಿದರು ಎಂದೆಲ್ಲ ಸುದ್ದಿ ಹಬ್ಬಿಸಿದರು. ಆ ಮೂಲಕ ಮುಸಲ್ಮಾನರನ್ನು ಮೋದಿ ಸರ್ಕಾರದಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಮತ್ತು ಹಿಂದೂಗಳು ಅದೆಷ್ಟು ಕ್ರೂರಿಗಳು ಎಂದು ಬಿಂಬಿಸುವ ಪ್ರಯತ್ನ ಅದಾಗಿತ್ತು. ಸಾಮಾಜಿಕ ಜಾಲತಾಣಗಳು ಈಗಿನಷ್ಟು ವ್ಯಾಪಕವಾಗಿಲ್ಲದ್ದಿದ್ದದ್ದರಿಂದ ಇದರ ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲೇ ಇಲ್ಲ. 2010ರಲ್ಲಿ ವಿಸ್ತಾರವಾದ ವರದಿ ಬಂದಾಗಲೇ ಇದೊಂದು ಸುಳ್ಳು ಪ್ರಕರಣ ಎಂಬುದು ಗೊತ್ತಾಗಿದ್ದು. ತೀರಿಕೊಂಡ ಗರ್ಭಿಣಿ ಹೆಣ್ಣುಮಗಳ ಮರಣೋತ್ತರ ಪರೀಕ್ಷೆ ನಡೆಸಿದ ಡಾಕ್ಟರ್ ಜೆ.ಎಸ್ ಕನೋರಿಯಾ ಮಗು ಹೊಟ್ಟೆಯೊಳಗೆ ಸುರಕ್ಷಿತವಾಗಿದ್ದುದನ್ನು, ಎರಡೂವರೆ ಕೆಜಿಯಷ್ಟು ತೂಕವಿದ್ದುದನ್ನು ದಾಖಲಿಸಿದ್ದರು. ಆದರೆ ಆ ವರದಿಯ ನಂತರವೂ ಕೌಸರ್ ಬಾನೊ ಕಥೆ ಮಾತ್ರ ಹಾಗೆಯೇ ಉಳಿಯಿತು!

ಈ ದಂಗೆಯ ಕ್ಷಣ-ಕ್ಷಣದ ಮಾಹಿತಿಗಳನ್ನು ಬಿತ್ತರಿಸುವ ಧಾವಂತಕ್ಕೆ ಬಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಎಂದು ಹೇಳುತ್ತಾ ಸುಳ್ಳು ಸುದ್ದಿಗಳನ್ನೇ ವ್ಯಾಪಕವಾಗಿ ಪ್ರಚಾರ ಮಾಡಿ ದಂಗೆಗಳಿಗೆ ಪ್ರೇರಣೆಕೊಟ್ಟರು. ಬರ್ಖಾದತ್ ಸೂರತ್ತಿನ ವಜ್ರದ ಮಾರುಕಟ್ಟೆಯಲ್ಲಿ ನಿಂತು ‘ಇಲ್ಲಿ ಒಬ್ಬ ಪೊಲೀಸರೂ ಇಲ್ಲ. ಇಲ್ಲಿ ದಂಗೆ ವಿಸ್ತರಿಸಿದರೆ ಏನು ಕಥೆ?’ ಎಂದೆಲ್ಲಾ ವರದಿ ಮಾಡುತ್ತಿದ್ದಳು. ಕಚ್ ಭಾಗದಲ್ಲಿ ಹನುಮಾನ್ ಮಂದಿರವೊಂದನ್ನು ದುಷ್ಕರ್ಮಿಗಳು ಉರುಳಿಸಿದ್ದಾರೆ ಎಂಬ ಸುದ್ದಿಯನ್ನು ಆಕೆ ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಳು. ಮುಖ್ಯಮಂತ್ರಿಯಾಗಿದ್ದ ಮೋದಿ ಆಕೆಗೆ ಕರೆಮಾಡಿ, ‘ವಜ್ರದ ಮಾರುಕಟ್ಟೆಯಲ್ಲಿ ಪೊಲೀಸರಿಲ್ಲ ಎಂದು ಹೇಳುವ ಮೂಲಕ ತಾವು ದಂಗೆಕೋರರನ್ನು ಆಹ್ವಾನಿಸುತ್ತಿದ್ದೀರಾ?’ ಎಂದು ಕೇಳಿದ್ದರಲ್ಲದೇ, ಕಚ್ ಭಾಗದಲ್ಲಿ ಆಕೆ ಹೇಳಿದ ಯಾವ ಮಂದಿರವೂ ಉರುಳಿರಲಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡರು. ಅದರರ್ಥ ಹಿಂದೂ-ಮುಸಲ್ಮಾನರ ನಡುವಿನ ಕಂದಕವನ್ನು ವಿಸ್ತಾರಗೊಳಿಸಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬುದೇ ಅವರೆಲ್ಲರ ಪ್ರಯತ್ನವಾಗಿತ್ತು. ಅವರ ಗುರಿ ಮೋದಿಯಷ್ಟೇ ಆಗಿರಲಿಲ್ಲ. ಏಕೆಂದರೆ ಬಿಜೆಪಿಯಲ್ಲೇ ಅನೇಕ ಗೊಂದಲಗಳುಂಟಾಗಿ ಮೋದಿ ಅನಿವಾರ್ಯಕ್ಕೆ ಅಧಿಕಾರಕ್ಕೆ ಬಂದಿದ್ದರು. ಜನಸಾಮಾನ್ಯರು ರೋಸಿಹೋಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಮತ ಚಲಾಯಿಸಿದರೂ ಅಚ್ಚರಿ ಪಡಬೇಕಿರಲಿಲ್ಲ! ಎಲ್ಲ ಇಂಗ್ಲೀಷ್ ಮಾಧ್ಯಮಗಳಿಗೆ ಕಣ್ಣಿದ್ದುದು ಹಿಂದೂಗಳ ಮೇಲೆ. ಹಿಂದೂಗಳು ಆತಂಕವಾದಿಗಳು, ಕ್ರೂರಿಗಳು ಎಂದು ಬಿಂಬಿಸುವ ಜರೂರತ್ತು ಅವರಿಗಿತ್ತು. ಅದಕ್ಕೆ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮೋದಿ ಅನಿವಾರ್ಯವಾಗಿ ಎನ್ಡಿಟಿವಿಯನ್ನು ಗುಜರಾತಿನಲ್ಲಿ ತಡೆಹಿಡಿಯಬೇಕಾಯ್ತು. ಅಚ್ಚರಿ ಎಂದರೆ ಅಂದು ಅದೇ ಚಾನೆಲ್‌ನಲ್ಲಿದ್ದು ಈ ಇಡೀ ಸುಳ್ಳು ಸುದ್ದಿಯನ್ನು ಹರಡಿಸುವಲ್ಲಿ ನೇತಾರನಾಗಿದ್ದ ರಾಜ್‌ದೀಪ್ 17 ವರ್ಷಗಳ ನಂತರ 2019ರಲ್ಲಿ ಪತ್ರಕರ್ತ ಮನು ಜೋಸೆಫ್ ಕೇಳಿದ ಪ್ರಶ್ನೆಗೆ ‘ಈ ದಂಗೆಗೆ ಮೋದಿ ಕಾರಣರಲ್ಲವೇ ಅಲ್ಲ’ ಎಂದು ಉತ್ತರಿಸಿದ್ದ. ಹಾಗಿದ್ದರೆ ಅವತ್ತು ಹೇಳಿದ ಸುಳ್ಳುಗಳಿಗೆ ಯಾರು ಹೊಣೆ? ಅದರಿಂದಾಗಿ ಮೋದಿ ಸುದೀರ್ಘಕಾಲ ನರಕಯಾತನೆ ಅನುಭವಿಸಬೇಕಾಯ್ತಲ್ಲ, ಅದರ ಜವಾಬ್ದಾರಿ ಯಾರದ್ದು? ಈ ಪ್ರಶ್ನೆಗೆಲ್ಲ ಉತ್ತರಿಸಬೇಕಾದ್ದು ಯಾರು?


ಪತ್ರಕರ್ತರಷ್ಟೇ ಅಲ್ಲ, ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದರು. ಐಪಿಎಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಮೋದಿಯ ವಿರುದ್ಧ ತನ್ನೆಲ್ಲ ಆಕ್ರೋಶವನ್ನೂ ಹಂತ-ಹಂತವಾಗಿ ಹೊರಹಾಕಿದ. 2011ರಲ್ಲಿ ಆತ ಸ್ಫೋಟಕವಾದ ಮಾಹಿತಿಯೊಂದನ್ನು ಸಮಾಜದ ಮುಂದಿಟ್ಟ. ಕರಸೇವಕರನ್ನು ಸುಟ್ಟ ಪ್ರಕರಣದ ನಂತರ ಮೋದಿ ತುರ್ತು ಸಭೆಯೊಂದನ್ನು ಕರೆದು ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಮಾಡಿಕೊಡಬೇಕೆಂದೂ, ಈ ಬಾರಿ ಈ ಆಕ್ರೋಶ ಹೊರಹಾಕುವ ಪ್ರಕ್ರಿಯೆ ಹೇಗಿರಬೇಕೆಂದರೆ ಇನ್ನೆಂದೂ ಮುಸಲ್ಮಾನರು ಇಂತಹ ಕೃತ್ಯಕ್ಕೆ ಕೈ ಹಾಕದಂತಾಗಬೇಕೆಂದು ಹೇಳಿದ್ದರಂತೆ. ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಭಾಗವಹಿಸಲು ತನಗೂ ಆಹ್ವಾನವಿದ್ದ ಫ್ಯಾಕ್ಸ್ ಪ್ರತಿಯೊಂದನ್ನು ಆತ ಸಮಾಜದ ಮುಂದಿರಿಸಿದ. ಈ ಸಭೆಯಲ್ಲಿ ಎಂಟು ಜನ ಪ್ರಮುಖ ಪೊಲೀಸರಿದ್ದು ಅವರೆಲ್ಲರೂ ಈ ದಂಗೆ ನಿಲ್ಲದಂತೆ ನೋಡಿಕೊಂಡರು ಎಂದಿದ್ದ. ನಾನಾವತಿ ಮೆಹ್ತಾ ಕಮಿಷನ್ ಈ ಎಲ್ಲ ಆರೋಪಗಳನ್ನೂ ಅಲ್ಲಗಳೆಯಿತಲ್ಲದೇ ಆತ ಈ ಸಭೆಯಲ್ಲಿ ಭಾಗವಹಿಸಿರುವುದೇ ಸುಳ್ಳು ಎಂದಿತು. ಆತ ಹೇಳಿರುವ ಅಷ್ಟೂ ಹೇಳಿಕೆಯನ್ನು ಈ ಕಮಿಷನ್ ಸಾರಾಸಗಟಾಗಿ ತಿರಸ್ಕರಿಸಿತು. ಆತ ಮುಂದಿಟ್ಟಿರುವ ಫ್ಯಾಕ್ಸ್ ಪ್ರತಿಯೂ ಕೂಡ ಆ ಸಭೆಯದ್ದಲ್ಲವೆಂಬುದು ಇವರುಗಳ ತನಿಖೆಯ ಮೂಲಕ ಹೊರಬಂತು. ಮುಂದೆ ಇದೇ ಸಂಜೀವ್ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು ಟ್ರೋಲ್ ಮಾಡುತ್ತಾ ಮೋದಿ ವಿರೋಧಿಗಳ ಪಾಲಿನ ಹೀರೋ ಆಗಿ ಉಳಿದ.

ಇವರೆಲ್ಲರೂ ಸೇರಿ ವಾತಾವರಣವನ್ನು ಹೇಗೆ ರೂಪಿಸಿಬಿಟ್ಟಿದ್ದರೆಂದರೆ 72 ಗಂಟೆಗಳ ಕಾಲ ಮೋದಿ ಹಿಂದೂಗಳಿಗೆ ಪೂರ್ಣ ಅವಕಾಶವನ್ನು ಕೊಟ್ಟಿದ್ದರೆಂದು, ಅಷ್ಟರೊಳಗೆ ಮಾಡಬೇಕಾದ್ದೆಲ್ಲವನ್ನೂ ಮಾಡಿ ಮುಗಿಸಲು ಮುಕ್ತ ಪರವಾನಗಿ ನೀಡಿದ್ದರೆಂದು ನಂಬಿಸಿಬಿಟ್ಟಿದ್ದರು. ಹೀಗಾಗಿಯೇ ಮೋದಿ ಸೈನ್ಯವನ್ನು ಕರೆಸಲಿಲ್ಲ ಎಂಬುದು ಅವರ ಮೇಲಿದ್ದ ಅಪವಾದ. ಆದರೆ ದಂಗೆಗಳು ಆರಂಭವಾಗಿವೆ ಎಂದು ಗೊತ್ತಾದೊಡನೆ ಸೈನ್ಯದ ಸಹಕಾರ ಬೇಕೆಂದು ಮೋದಿ ಕೇಂದ್ರಸರ್ಕಾರಕ್ಕೆ ಪತ್ರ ಬರೆದಿದ್ದುದು ನಿಚ್ಚಳವಾಗಿತ್ತು. ಆದರೆ ಸೇನೆ ಗಡಿಭಾಗದಿಂದ ರಕ್ಷಣೆಗೆಂದು ಬರಲು ಕೆಲವು ಗಂಟೆಗಳ ಸಮಯವಾದರೂ ಹಿಡಿಯುತ್ತದೆಂಬುದು ಎಂಥವನಿಗೂ ಗೊತ್ತಿರಬೇಕಾದ ಸಂಗತಿ. ಮೂರು ಸಾವಿರ ಸೈನಿಕರ ಪಡೆ ಘಟನೆಯಾದ ಎರಡು ದಿನಗಳ ನಂತರ ಮಾರ್ಚ್ ಒಂದಕ್ಕೆ ಅಹ್ಮದಾಬಾದಿಗೆ ಬಂದಿಳಿದಿತ್ತು. ಮೋದಿ ದಂಗೆಗಳು ಆರಂಭವಾದ ದಿನ ಸಂಜೆಯೇ ಸೈನ್ಯದ ಸಹಾಯಕ್ಕಾಗಿ ಕರೆಮಾಡಿದ್ದು ದಾಖಲಾಗಿತ್ತು. ಆನಂತರದ ದಿನಗಳಲ್ಲಿ ಅನೇಕ ಪತ್ರಿಕೆಗಳು ಇದನ್ನು ವರದಿ ಮಾಡಿದವು. ಅಷ್ಟರವೇಳೆಗೆ ಮೋದಿಯ ಕುರಿತಂತೆ ಹಬ್ಬಿಸಬೇಕಾದ ಸುಳ್ಳುಗಳನ್ನೆಲ್ಲಾ ಹೇಳಿಯಾಗಿತ್ತು. ಈ ಅಯೋಗ್ಯರ ಸಾಮಥ್ರ್ಯ ಎಂಥದ್ದಿತ್ತೆಂದರೆ ಇಡಿಯ ಜಗತ್ತು ದಂಗೆಯ ಹಿಂದಿನ ಕಾರಣ ಮೋದಿ ಎಂಬುದನ್ನು ನಂಬಿತ್ತೆನ್ನುವುದನ್ನು ಬಿಡಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಇದನ್ನು ಒಪ್ಪಿಕೊಂಡು ಮೋದಿಯವರನ್ನು ಬದಲಾಯಿಸಿಬಿಡುವ ತವಕದಲ್ಲಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಟಲ್ಜಿ ರಾಜ್ಯಧರ್ಮದ ಪಾಲನೆಯ ಕುರಿತಂತೆ ಮೋದಿಗೆ ಕಿವಿಮಾತು ಹೇಳಿದ್ದೇನೆ ಎಂಬುದಂತೂ ಮೋದಿಯವರ ಪಾಲಿಗೆ ಕಂಟಕಪ್ರಾಯವೇ ಆಗಿತ್ತು!

ಮುಂದಿನ ಕನಿಷ್ಠ 12 ವರ್ಷಗಳ ಕಾಲ ಮೋದಿಯ ಪಾಲಿಗೆ ಇದು ವನವಾಸವೇ. ಅವರು ವಿದೇಶಕ್ಕೆ ಹೋಗುವಾಗ ಅಲ್ಲಿನ ಪತ್ರಿಕೆಗಳಲ್ಲಿ ಗೋದ್ರಾ ದಂಗೆಯ ಕುರಿತಂತೆ ಬರೆಸಲಾಗುತ್ತಿತ್ತು. ಚುನಾವಣೆಗೆ ಹೋಗುವ ಮುನ್ನ ಗೋದ್ರಾ ದಂಗೆಗಳನ್ನು ನೆನಪಿಸಿಕೊಡಲಾಗುತ್ತಿತ್ತು. ಗುಜರಾತಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದರೆ ಮೋದಿಯನ್ನು ದಂಗೆಕೋರ ಎಂದು ಬಿಂಬಿಸಿ ಹೂಡಿಕೆದಾರರನ್ನು ಹಿಂದೆ ಸರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಈ ಮನುಷ್ಯ ಎಲ್ಲವನ್ನೂ ಎದುರಿಸಿದ. 12 ವರ್ಷಗಳ ಕಾಲ ತನಗಾದ ಅವಮಾನವನ್ನು ನುಂಗಿಕೊಂಡ, ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ. ಮತ್ತೆ-ಮತ್ತೆ ಚುನಾವಣೆಗಳನ್ನು ಗೆದ್ದು 2014ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಹುಮತ ಪಡೆದು ಪ್ರಧಾನಿಯೂ ಆದ. 2019ರಲ್ಲಿ ಮತ್ತೆ ಪ್ರಧಾನಿಯಾದ. ಈಗ ಅದೇ ನರೇಂದ್ರಮೋದಿ ಈ ಎಲ್ಲ ಆರೋಪಗಳಿಂದ ಮುಕ್ತರಾಗಿ ಬಂದಿದ್ದಾರೆ. ಒಮ್ಮೆ ಹಿಂದಿರುಗಿ ನೋಡಿದಾಗ ಎಲ್ಲ ಕಠಿಣ ಸಂದರ್ಭದಲ್ಲೂ ಜೊತೆಯಲ್ಲಿದ್ದ ನಿಜ ಭಾರತೀಯನನ್ನು ಕಂಡು ಸಂತೋಷ ಪಡಬಹುದು ಅಥವಾ ರಣಹದ್ದುಗಳಂತೆ ಹಿಂದೆ ಬಿದ್ದಿದ್ದವರನ್ನು ಕಂಡು ಅಸಹ್ಯವೆನಿಸಬಹುದು!

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ನಿಮಗೆ ನೆನಪಿರಬೇಕಲ್ಲ, ತೈವಾನ್ ವಿಚಾರದಲ್ಲಿ ಅಮೇರಿಕಾ ಚೀನಾಕ್ಕೆ ಕಟುವಾದ ಸಂದೇಶ ನೀಡಿತ್ತು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ದರು. ಇವರೇ ಹುಟ್ಟುಹಾಕಿಕೊಂಡ ಸಂಘಟನೆಯೊಂದಿದೆ. ಇಂಡೋ-ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ ಎಂಬುದು ಅದರ ಹೆಸರು. ಚಿತ್ರಕಲಾ ಪರಿಷತ್ ನಲ್ಲಿ ಪ್ರತಿಭಟನೆಯ ನೆಪದಲ್ಲಿ ಈ ಕಾಂಗ್ರೆಸ್ಸಿಗರು ಚೀನಾದ ರಾಯಭಾರಿಯನ್ನೇ ಕರೆಸಿದ್ದರು. ಜೊತೆಗೆ ಒಂದು ಚಿತ್ರಪ್ರದರ್ಶನ. ಮುಖ್ಯ ಅತಿಥಿಯಾಗಿ ಭಾಗವಹಿಸಬೇಕೆಂದಿದ್ದವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯನವರು. ಸ್ವಲ್ಪ ಪ್ರತಿಭಟನೆಯಾದೊಡನೆ ‘ನಾನು ಬರುವುದಿಲ್ಲವೆಂದರೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಬಿಟ್ಟಿದ್ದಾರಲ್ಲ’ ಎಂದು ಮೊಸಳೆ ಕಣ್ಣೀರು ಸುರಿಸಿದ ಅವರು ಉಳಿದ ಕಾಂಗ್ರೆಸ್ಸಿಗರು ಈ ಪ್ರತಿಭಟನೆಗೆ ಹೋಗುವುದಿಲ್ಲವೆಂದೇನೂ ಹೇಳಲಿಲ್ಲ! ಪ್ರತಿಭಟನೆ ಆಯ್ತು ಕೂಡ. ಇಷ್ಟೆಲ್ಲಾ ಈಗೇಕೆಂದರೆ ಚೀನಾದ ಗಡಿಯ ಬರೋಬ್ಬರಿ ನೂರು ಕಿಲೋಮೀಟರ್ ದೂರದಲ್ಲಿ ಭಾರತ ಮತ್ತು ಅಮೇರಿಕಾಗಳು ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದಕ್ಕೆ ಚೀನಾ ಪ್ರತಿಭಟನೆ ವ್ಯಕ್ತಪಡಿಸಿ ಎಚ್ಚರಿಕೆ ಕೂಡ ಕೊಡುವ ಪ್ರಯತ್ನ ಮಾಡಿದೆ. ಭಾರತ ಎಂದಿನಂತೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಕೊಟ್ಟರೆ ಅಮೇರಿಕಾ ಕೂಡ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ದರ್ದು ನಿಮಗೆ ಬೇಕಿಲ್ಲ ಎಂದು ಹೇಳಿಬಿಟ್ಟಿದೆ. ಚೀನಾದ ವಿಚಾರದಲ್ಲಿ ಅಮೇರಿಕಾ ಆಂತರಿಕ ಹಸ್ತಕ್ಷೇಪ ಮಾಡಿದೆ ಎಂದು ಬಾಯಿಬಡಕೊಂಡಿದ್ದ ಕಾಂಗ್ರೆಸ್ಸಿಗರು ಈಗೇಕೋ ಶಾಂತರಾಗಿಬಿಟ್ಟಿದ್ದಾರೆ. ಪ್ರತಿಭಟನೆ ಇರಲಿ, ಚೀನಾದ ವಿರುದ್ಧ ಒಂದು ಹೇಳಿಕೆ ಕೊಡುವ ಸಾಹಸವನ್ನೂ ಮಾಡಲಿಲ್ಲ. ಚೀನಾದಲ್ಲಿ ಮಳೆ ಬಿದ್ದರೆ ಇವರಿಗೆ ಥಂಡಿಯಾಗುತ್ತದೆ. ಆದರೆ ಭಾರತದಲ್ಲಿ ಮಂಜೇ ಸುರಿದರೂ ಇವರಿಗೆ ಅದು ತೊಂದರೆ ಕೊಡುವುದಿಲ್ಲ. ದುರ್ದೈವವಲ್ಲವೇನು? 

ಇರಲಿ. ಇವರೆಲ್ಲ ಇಷ್ಟು ಆರಾಧಿಸುವ ಚೀನಾ ಕಳೆದ ಎಂಟ್ಹತ್ತು ದಿನಗಳಿಂದ ಪಡಬಾರದ ಪಾಡು ಪಡುತ್ತಿದೆ. ನವೆಂಬರ್ ತಿಂಗಳ ಕೊನೆಯ ಭಾಗದ ವೇಳೆಗೆ ಶಿಂಜಿಯಾಂಗ್ ಪ್ರಾಂತ್ಯದ ಉರುಕ್ಮಿಯಲ್ಲಿ ಹತ್ತಾರು ಮನೆಗಳುಳ್ಳ ಅಪಾರ್ಟ್ ಮೆಂಟ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಹತ್ತಕ್ಕೂ ಹೆಚ್ಚು ಮಂದಿ ತೀರಿಕೊಂಡರು. ಜನರ ಆಕ್ರೋಶಕ್ಕೆ ಕಾರಣವಾದ ಈ ಸಂಗತಿ ದಶಕಗಳಷ್ಟು ದೀರ್ಘಕಾಲದ ನಂತರ ಚೀನಿಯರನ್ನು ಪ್ರತಿಭಟನೆಯ ನೆಪದಲ್ಲಿ ಬೀದಿಗೆ ತಂತು. ಅಪಾರ್ಟ್‌ಮೆಂಟಿಗೆ ಬೆಂಕಿ ಹತ್ತಿಕೊಂಡರೆ ಪ್ರತಿಭಟನೆ ಮಾಡುವುದೇತಕ್ಕೆ ಎಂದು ಆಶ್ಚರ್ಯವಾಗಿರಬೇಕಲ್ಲವೇ? ಜೀರೊ ಕೋವಿಡ್‌ನ ಹುಚ್ಚಿಗೆ ಬಿದ್ದಿರುವ ಷಿ ಇಲ್ಲಿಂದ ಯಾರೊಬ್ಬರೂ ಆಚೆಗೆ ಬರದಿರುವಂತೆ ಹೊರಬಾಗಿಲಿಗೆ ಕಬ್ಬಿಣದ ರಾಡುಗಳಿಂದ ವೆಲ್ಡಿಂಗ್ ಮಾಡಿಸಿದ್ದರ ಪರಿಣಾಮ ಜನ ಅನಿವಾರ್ಯವಾಗಿ ಬೆಂಕಿಯಲ್ಲಿ ಬೇಯಬೇಕಾಗಿ ಬಂತು. ಜಗತ್ತಿನಾದ್ಯಂತ ಕೊವಿಡ್‌ನ ಸಂಕಟ ಇರಬಹುದೇನೋ ಎಂದೇ ಭಾವಿಸಿಕೊಂಡಿದ್ದ ಚೀನೀ ಮಂದಿಗೆ ಫುಟ್ಬಾಲ್ ವಿಶ್ವಕಪ್‌ನ ವೇಳೆಗೆ ಮುಖಕ್ಕೆ ಮಾಸ್ಕು ಕೂಡ ಧರಿಸದೇ ಓಡಾಡುತ್ತಿರುವ ಮಂದಿಯನ್ನು ಕಂಡು ಕಿರಿಕಿರಿ ಎನಿಸಿರಲು ಸಾಕು. ವರ್ಷ-ವರ್ಷಗಳೇ ಉರುಳಿದರೂ ಇನ್ನೂ ತಾವು ಕೋವಿಡ್‌ನ ಆತಂಕದಲ್ಲೇ ಬದುಕಬೇಕಾಯ್ತಲ್ಲ, ಮನೆಯಿಂದ ಹೊರಬರಲೂ ಸರ್ಕಾರದ ಅನುಮತಿ ಕೇಳಬೇಕಾಯ್ತಲ್ಲ ಎಂದವರಿಗೆ ಅನಿಸಿರಲು ಸಾಕು. ಕೊನೆಗೂ ಜನ ಬೀದಿಗೆ ಬಂದರು. ಲಾಕ್ಡೌನ್ ತೆಗೆಯಿರಿ ಎಂಬ ಘೋಷಣೆ ಕೂಗಲಾರಂಭಿಸಿದರು. ಪ್ರತಿಭಟನೆಯ ಕಾವು ಹಬ್ಬಲು ತುಂಬ ಸಮಯ ತೆಗೆದುಕೊಳ್ಳಲಿಲ್ಲ. ಶಾಂಘಾಯ್ ನವೆಂಬರ್ 26ಕ್ಕೆ ಬೀದಿಗೆ ಬಂತು. 2020ರಲ್ಲಿ ಹಾಂಗ್ ಕಾಂಗ್‌ನ ಮಂದಿ ಸರ್ಕಾರದ ದಮನ ನೀತಿಯ ವಿರುದ್ಧ ಪ್ರತಿಭಟನೆಗೆ ಖಾಲಿ ಕಾಗದ ಬಳಸಿದ್ದರಲ್ಲ ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಯ್ತು. ಸರ್ಕಾರದ ವಿರುದ್ಧ ಘೋಷಣೆ ಇದ್ದರೆ ತಾನೇ ಜೈಲಿಗೆ ತಳ್ಳುವುದು? ಖಾಲಿಯ ಹಾಳೆಯನ್ನು ಅವರು ಏನೆಂದು ಗುರುತಿಸುತ್ತಾರೆ? ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಮರುದಿನವೇ ಭಾಗವಹಿಸಿದವರನ್ನು ಬಂಧಿಸಲುದ್ಯುಕ್ತವಾಯ್ತು. ಇದನ್ನು ಪ್ರತಿಭಟಿಸಿ ಬೀಜಿಂಗ್‌ನಲ್ಲಿ ಜನ ಬೀದಿಗಿಳಿದರು. ಪೀಕಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದರು. ಈ ಬಾರಿ ಇದು ಬರಿ ಲಾಕ್ಡೌನ್ ತೆಗೆಯಿರಿ ಎಂಬುದಷ್ಟಕ್ಕೇ ಸೀಮಿತವಾಗದೇ ಷಿ ಜಿಂಪಿಂಗ್ ಅನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಲಾಯ್ತು ಕೂಡ. ಇದು ಅಧಿಕಾರಕ್ಕೆ ಬಂದಾಗಿನಿಂದಲೂ ಷಿಯ ಪಾಲಿಗೆ ಬಲುದೊಡ್ಡ ಹೊಡೆತ. ಲಾಂಗ್‌ಜೊವರೆಗೂ ಪ್ರತಿಭಟನೆಗಳು ಹಬ್ಬಿ ಮೊದಲ ಬಾರಿಗೆ ಚೀನಾದ ದಮನ ನೀತಿಯನ್ನು ಮೀರಿ ಸುದ್ದಿ ಜಗತ್ತಿನ ಮೂಲೆ-ಮೂಲೆಗೂ ತಲುಪಿತು. ಪ್ರತಿಭಟನೆಯ ವೇಳೆಯೇ ಇದರ ವರದಿ ಮಾಡುತ್ತಿದ್ದ ಬಿಬಿಸಿಯ ವರದಿಗಾರ ಎಡ್ವರ್ಡ್ ಲಾರೆನ್ಸ್ ನನ್ನು ಪೊಲೀಸರು ಮನಸೋ ಇಚ್ಛೆ ಬಡಿದರಲ್ಲದೇ ಆತನನ್ನು ಬಂಧಿಸಿ ಎಳೆದೊಯ್ದರೂ ಕೂಡ. ಹಾಂಗ್ ಕಾಂಗ್ ಶಾಂತವಾಗಿ ಚೀನಿಯರ ನೋವಿಗೆ ಬೆಂಬಲ ಸೂಚಿಸಿತು. ‘ನನಗೆ ಸ್ವಾತಂತ್ರ್ಯ ಕೊಡು, ಇಲ್ಲವೇ ಕೊಂದುಬಿಡು’ ಎನ್ನುವ ಮಾತು ಎಲ್ಲೆಡೆ ಕೇಳಿಬಂತು! 

ಚೀನಾದ ಜನ ಎಲ್ಲ ದಬ್ಬಾಳಿಕೆಯನ್ನೂ ಸಹಿಸಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಅವರನ್ನು ಸ್ವಲ್ಪ ಭಡಕಾಯಿಸಿದರೆ ಸಾಕು ಅವರಿಂದ ಬೇಕಾದ್ದನ್ನು ಮಾಡಿಸಿಕೊಳ್ಳಬಹುದು ಎಂಬ ಪರಿಸ್ಥಿತಿ ಇರುವಾಗ, ಅವರು ಬೀದಿಗೆ ಬಂದಿದ್ದಾದರೂ ಹೇಗೆ ಮತ್ತು ಏಕೆ ಎಂಬ ಪ್ರಶ್ನೆ ಸಹಜವೇ. ಇದಕ್ಕೆ ಕರೋನಾ ಎಂಬ ಮಹಾಮಾರಿಯೇ ಕಾರಣ ಎಂದರೆ ಅಚ್ಚರಿಯಲ್ಲ. ಕರೋನಾ ಆರಂಭವಾದಾಗ ಜಿರೊ ಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ ಷಿ ಕಠೋರ ಕ್ರಮಗಳ ಮೂಲಕ ಜನರನ್ನು ಸಾಯದೇ ಉಳಿಸಿಕೊಂಡ. ಆರಂಭದಲ್ಲಿ ಜನ ಪ್ರತಿಭಟಿಸಿದರಾದರೂ ಕಾಲಕ್ರಮದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಉಂಟಾದ ಸಾವು ನೋವುಗಳನ್ನು ಕಂಡು, ತಮ್ಮ ಅಧ್ಯಕ್ಷರಿಗಿರುವ ಜನರ ಆರೋಗ್ಯದ ಕುರಿತ ಕಾಳಜಿಯನ್ನು ಕಂಡು ಅವರು ಮನಸೋತರು. ಚೀನಾದಲ್ಲಿ ಕೊವಿಡ್ ಸಾವು ಹೆಚ್ಚು-ಕಡಿಮೆ ನಗಣ್ಯವೇ ಆಗಿತ್ತು. ಆದರೆ ಈ ತಂತ್ರ ಜನರ ಬದುಕನ್ನು ಸುದೀರ್ಘಕಾಲ ದುರ್ಭರಗೊಳಿಸಿದಾಗ ಅವರು ತಿರುಗಿ ಬೀಳುವ ಸಾಧ್ಯತೆ ಇತ್ತಲ್ಲ ಅದನ್ನು ಗಾಲ್ವಾನ್‌ನಲ್ಲಿ ಸಾಹಸ ಮಾಡುವ ಮೂಲಕ ಮುಚ್ಚಿಕೊಳ್ಳುವ ಯತ್ನ ಮಾಡಿತು ಚೀನಾ. ಅವರ ದುರದೃಷ್ಟಕ್ಕೆ 40ಕ್ಕೂ ಹೆಚ್ಚು ಸೈನಿಕರನ್ನು ಕಳಕೊಂಡು ಮುಖಭಂಗ ಅನುಭವಿಸಿತು. ಆದರೆ ತಮ್ಮ ಜನರ ಮುಂದೆ ಯಾವ ಸೈನಿಕರೂ ತೀರಿಕೊಂಡಿಲ್ಲ ಎಂದು ಹೇಳುವ ಮೂಲಕ ಮಾನವುಳಿಸಿಕೊಳ್ಳುವ ಯತ್ನ ಮಾಡಿತ್ತು. ಈ ವೇಳೆಗೆ ಎವರ್‌ಗ್ರ್ಯಾಂಡ್ ಎಂಬ ರಿಯಲ್ ಎಸ್ಟೇಟ್ ಕಂಪೆನಿಯೊಂದು ಬೀದಿಗೆ ಬಂದು ಚೀನಾದ ಮೇಲ್ಮಧ್ಯಮ ಮತ್ತು ಮಧ್ಯಮವರ್ಗದ ಮಂದಿ ಕಣ್ಣೀರಿಡುವಂತಾಯ್ತು. ಕರೋನಾಕ್ಕಿಂತ ಮುಂಚೆ ಜನರಿಂದ ಮತ್ತು ಅನೇಕ ಬ್ಯಾಂಕುಗಳಿಂದ ಸಾಕಷ್ಟು ಸಾಲಪಡೆದು ಅಗಾಧವಾಗಿ ಬೆಳೆದುನಿಂತ ಎವರ್ ಗ್ರ್ಯಾಂಡ್ 200 ನಗರಗಳಲ್ಲಿ ಆಸ್ತಿಯನ್ನು ಮಾಡಿತು. ತನ್ನ ಶೇರುದಾರರಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಟ್ಟು ಭರವಸೆ ಮೂಡಿಸಿತು. ಕರೋನಾ ಲಾಕ್ಡೌನಿನ ನಂತರ ಮನೆಗಳ ಮಾರಾಟ ತೀವ್ರ ಪ್ರಮಾಣದಲ್ಲಿ ಕಡಿಮೆಯಾಯ್ತಲ್ಲ ಕಂಪೆನಿ ಸಾಕಷ್ಟು ನಷ್ಟ ಅನುಭವಿಸಿತು. ಚೀನಾದ ಬ್ಯಾಂಕುಗಳಿಂದ ಸಾಲ ಪಡೆಯಬಹುದಾದ ಮಿತಿಯನ್ನು ದಾಟಿದ್ದರಿಂದ ಅದಕ್ಕೀಗ ಹಣಕಾಸಿನ ಮುಗ್ಗಟ್ಟು ಕಂಡುಬಂತು. ಹೂಡಿಕೆದಾರರಿಗೆ ಕೊಡಬೇಕಾಗಿದ್ದ ಹಣದ ಬದಲು ಅರೆನಿರ್ಮಿತ ಮನೆಗಳನ್ನು ನೀಡಲಾರಂಭಿಸಿತು. ಹಣವೇ ಬೇಕು ಎಂದವರ ಮುಂದೆ ಕೈಚೆಲ್ಲಿ ನಿಂತುಬಿಟ್ಟಿತು. ಶೆನ್‌ಜೆನ್‌ನಲ್ಲಿ ಮುಖ್ಯ ಕಛೇರಿಯ ಎದುರಿಗೆ ದೊಡ್ಡಮಟ್ಟದ ಜನ ಬೀದಿಗೆ ಬಂದುನಿಂತರು. ಈ ಕಂಪೆನಿಯ ಒಟ್ಟು ಸಾಲ ಎಷ್ಟಿತ್ತು ಗೊತ್ತೇನು? ಒಂದು ಅಂದಾಜಿನ ಪ್ರಕಾರ 88 ಬಿಲಿಯನ್ ಡಾಲರ್ಗಳಷ್ಟು! ಕಳೆದ ಜೂನ್ ತಿಂಗಳಿಗೆ ಕಟ್ಟಬೇಕಿದ್ದ ಬಡ್ಡಿಯೇ 80 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚಿತ್ತು. ಎವರ್ ಗ್ರ್ಯಾಂಡ್ ನ ಈ ಪರಿಸ್ಥಿತಿಯಿಂದಾಗಿ ಚೀನಾದಲ್ಲಿ ಒಟ್ಟಾರೆ ಮನೆಗಳ ಬೆಲೆಯೇ ಶೇಕಡಾ 20ರಷ್ಟು ಕುಸಿಯಿತು. ಎಲ್ಲ ರಿಯಲ್ ಎಸ್ಟೆಟ್ ಕಂಪೆನಿಗಳ ಶೇರು ಮೌಲ್ಯ ಪಾತಾಳಕ್ಕೆ ಹೋಯ್ತು. ಎಲ್ಲಕ್ಕಿಂತ ದೊಡ್ಡ ನಷ್ಟ ಅನುಭವಿಸಿದ್ದು ತಮ್ಮೆಲ್ಲ ಬದುಕಿನ ಹಣವನ್ನು ಈ ಕಂಪೆನಿಯೊಳಗೆ ಹೂಡಿದ್ದ ದೊಡ್ಡಮಟ್ಟದ ಮಧ್ಯಮವರ್ಗದ ಮಂದಿ!

ಚೀನಾದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಅದರ ಸಾಲ 8 ಟ್ರಿಲಿಯನ್ ಡಾಲರುಗಳಷ್ಟಾಗಿತ್ತು. ಒನ್ ಬೆಲ್ಟ್ ಒನ್ ರೋಡ್ ನೆಪದಲ್ಲಿ ಅದರ ಒಂದು ಟ್ರಿಲಿಯನ್ ಡಾಲರ್ ನಷ್ಟು ಹಣ ಸಿಕ್ಕುಹಾಕಿಕೊಂಡು ಕೂತಿತ್ತು. ಕರೋನಾ ನಂತರ ಪಶ್ಚಿಮದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದರಿಂದ ಮತ್ತಷ್ಟು ಹೊಡೆತ ಬಿದ್ದಿತ್ತು. ಇತ್ತ ಗಡಿಯಲ್ಲಿ ಭಾರತದೊಂದಿಗೆ ಖ್ಯಾತೆ ತೆಗೆದು ತನ್ನ ಸೈನಿಕರನ್ನು ಕರೆತಂದು ನಿಲ್ಲಿಸಿಕೊಂಡಿತ್ತಲ್ಲ, ಭಾರತವೂ ಈ ಬಾರಿ ಅಷ್ಟೇ ಗಟ್ಟಿಯಾಗಿ ತಳವೂರಿದ್ದರಿಂದ ಸೈನ್ಯದ ಖರ್ಚು-ವೆಚ್ಚವೂ ಊಹಿಸಲಾರದಷ್ಟಾಗಿತ್ತು. ಒಂದೆಡೆ ಕ್ಷಾಮ ಮತ್ತೊಂದೆಡೆ ಪ್ರವಾಹ, ಧಾನ್ಯ ದಾಸ್ತಾನನ್ನು ಶೇಕಡಾ 50ರಷ್ಟು ತಿಂದುಹಾಕಿತ್ತು. ಒಂದೆಡೆ ಕುಸಿಯುತ್ತಿರುವ ಕೈಗಾರಿಕೆ ಉತ್ಪನ್ನಗಳು, ಮತ್ತೊಂದೆಡೆ ಏರುತ್ತಿರುವ ನಿರುದ್ಯೋಗ ಚೀನಾವನ್ನು ಒಳಗಿಂದೊಳಗೇ ತಿನ್ನುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ತನ್ನ ಅವಧಿ ವಿಸ್ತಾರವನ್ನು ದೃಢಪಡಿಸಿಕೊಂಡ ಷಿ ಮತ್ತೆ ಜಿರೊಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ. ಮೊದಲ ಬಾರಿಗೆ ಈ ನೀತಿಯಿಂದಾಗಿ ಲಕ್ಷಾಂತರ ಮಂದಿಯ ಜೀವ ಉಳಿದಿರುವುದನ್ನು ಜನ ಮೆಚ್ಚಿದ್ದರು. ಆದರೆ ಈಗ ಜಗತ್ತೆಲ್ಲ ತಮ್ಮ ಚಟುವಟಿಕೆಗೆ ಮರಳಿರುವಾಗ ತಾವಿನ್ನು ಮನೆಗಳಲ್ಲಿ ತಮ್ಮ ತಾವು ಬಂಧಿಸಿಕೊಂಡು ಕುಳಿತಿರುವುದನ್ನು ಚೀನಿಯರಿಂದ ಸಹಿಸಲಾಗಲಿಲ್ಲ. ಶೂನ್ಯ ಕೋವಿಡ್ ಎಂಬುದೊಂದು ಕಟ್ಟುಕಥೆ ಎಂದು ಜಗತ್ತಿನ ವಿಜ್ಞಾನಿಗಳೆಲ್ಲ ಹೇಳುತ್ತಿರುವುದು ಈಗ ಅವರಿಗೆ ಸತ್ಯವೆನಿಸುತ್ತಿದೆ. ಡಾ. ಪಾಲ್ ಹಂಟರ್ ಚೀನಾದ ಕೊವಿಡ್ ಲಸಿಕೆ ಪ್ರಭಾವಿಯಾಗಿಲ್ಲ ಎಂದು ಹಿಂದೆಯೇ ಹೇಳಿದ್ದು ಈಗ ಸತ್ಯವೆನಿಸುತ್ತಿದೆ. ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪ್ರೊ. ದೇವಿಶ್ರೀಧರ್ ’80 ದಾಟಿರುವ ಚೀನಾದ ವೃದ್ಧರಲ್ಲಿ ಶೇಕಡಾ 40 ಮಂದಿಗೆ ಮಾತ್ರ ಬೂಸ್ಟರ್ ಲಸಿಕೆ ದೊರೆತಿರುವುದರಿಂದ ಭವಿಷ್ಯದ ದಿನಗಳು ಭಯಾನಕವಾಗಿದೆ’ ಎಂದಿದ್ದರಲ್ಲದೇ ಮಿಲಿಯನ್ಗಟ್ಟಲೆ ಮಂದಿ ಚೀನಾದಲ್ಲಿ ಇದುವರೆಗೂ ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎಂದೂ ಎಚ್ಚರಿಸಿದ್ದರು. ಲಾಕ್ಡೌನಿನಲ್ಲಿ ಇದ್ದಷ್ಟೂ ದಿನ ವೈರಸ್‌ಗೆ ಅವರು ತಮ್ಮತಾವು ತೆರೆದುಕೊಂಡಿರಲಿಲ್ಲ. ಈಗ ಮನೆಯಿಂದ ಹೊರಬರುತ್ತಿದ್ದಂತೆ ಮತ್ತೆ ವೈರಸ್ ಆಕ್ರಮಿಸಿಕೊಳ್ಳುತ್ತಿದೆ. ಆಹಾರ ದಾಸ್ತಾನು ಕಡಿಮೆ ಇರುವುದರಿಂದ ಈ ಬಾರಿಯ ನಿರ್ವಹಣೆ ಅಷ್ಟು ಸುಲಭವಾಗಿಲ್ಲ. ಮೊದಲ ಬಾರಿ ಕೊವಿಡ್ ಬಂದಾಗಲೇ ಪ್ರತಿಯೊಬ್ಬ ವ್ಯಕ್ತಿಯ ಹೆಸರಲ್ಲೂ ಕ್ಯುಆರ್ ಕೋಡ್ ಜನರೇಟ್ ಮಾಡಲಾಗಿತ್ತು. ಅದು ನಮ್ಮ ಆರೋಗ್ಯ ಸೇತು ಆ್ಯಪ್‌ಗಿಂತಲೂ ಭಿನ್ನವಾದ್ದು. ಮಾಲ್‌ಗೆ ಹೋಗಬೇಕಾಗಲೀ ಅಥವಾ ರೈಲು ಹತ್ತಿ ಪಕ್ಕದೂರಿಗಾದರೂ ಸರಿ ಎಲ್ಲೆಡೆ ಬಾಗಿಲು ತೆರೆದುಕೊಳ್ಳಬೇಕೆಂದರೆ ಕ್ಯುಆರ್ ಕೋಡ್ ಅನ್ನು ಯಂತ್ರಕ್ಕೆ ಹಿಡಿಯಲೇಬೇಕು. ಅಲ್ಲೇನಾದರೂ ಬಣ್ಣ ಕೆಂಪು ಬಂತೆಂದರೆ ಆ ಬಾಗಿಲು ನಿಮಗೆ ತೆರೆಯಲ್ಪಡುವುದೇ ಇಲ್ಲ. ಬದಲಿಗೆ ಅದು ಜೋರಾಗಿ ಸದ್ದು ಮಾಡಿ, ನಿಮ್ಮಿಂದ ಇತರರು ದೂರ ಓಡುವಂತೆ ಮಾಡುತ್ತದಲ್ಲದೇ ಕೊವಿಡ್ ಪೊಲೀಸರು ಬಂದು ನಿಮ್ಮನ್ನು ಬಂಧಿಸಲು ಅನುಕೂಲ ಮಾಡಿಕೊಡುತ್ತದೆ. ಒಮ್ಮೆ ಅವರು ಬಂಧಿಸಿದರೆಂದರೆ ನೀವು ಮುಂದಿನ ಒಂದು ತಿಂಗಳ ಕಾಲ ಅಥವಾ ಕ್ಯುಆರ್ ಕೋಡ್ ನಲ್ಲಿ ಬಣ್ಣ ಹಸಿರಿಗೆ ತಿರುಗುವವರೆಗೂ ನರಕ ಯಾತನೆ ಅನುಭವಿಸಲೇಬೇಕು. ಇನ್ನೂ ವಿಚಿತ್ರವೇನು ಗೊತ್ತೇ? ನಿಮಗೆ ಅರಿವಿಲ್ಲದೇ ಕ್ಯುಆರ್ ಕೋಡ್ ನಲ್ಲಿ ಕೆಂಪು ಬಣ್ಣ ಇದ್ದವನೊಂದಿಗೆ ನೀವು ಹತ್ತು ನಿಮಿಷ ಮಾತನಾಡಿದರೂ ನಿಮ್ಮ ಕ್ಯುಆರ್ ಕೋಡ್ ಕೆಂಪು ಬಣ್ಣಕ್ಕೆ ತಿರುಗಿಬಿಡುತ್ತದೆ. ಅಲ್ಲಿಗೆ ನೀವು ಸತ್ತಂತೆ. ಹೀಗಾಗಿಯೇ ಒಬ್ಬರ ಕ್ಯುಆರ್ ಕೋಡ್ ಕೆಂಪಾಗಿದೆ ಎಂಬ ಸದ್ದು ಬಂದೊಡನೆ ಉಳಿದ ಮಂದಿ ಅವನಿಂದ ದೂರವೋಡಲಾರಂಭಿಸುತ್ತಾರೆ. ಹೆಚ್ಐವಿ ಎನ್ನುವುದರ ಕುರಿತಂತೆ ತಪ್ಪು ಕಲ್ಪನೆಗಳಿದ್ದಾಗಲೂ ಭಾರತದಲ್ಲಿ ಮಂದಿ ಹೀಗೆ ನಡೆದುಕೊಂಡಿರಲಿಲ್ಲ. ಚೀನಾದಲ್ಲಿ ಜನರ ಆಕ್ರೋಶ ಈ ಕಾರಣಕ್ಕಾಗಿ ದಿನೇ ದಿನೇ ಹೆಚ್ಚುತ್ತಿದೆ!

ಜನ ಬೀದಿಗೆ ಬರಲು ಕಾರಣ ಇದೇ. ಇನ್ನೂ ಅಚ್ಚರಿಯ ಸಂಗತಿ ಏನು ಗೊತ್ತೇ? ಸರ್ಕಾರ ತನ್ನ ಬಳಿಯಿರುವ ಡಾಟಾ ಬಳಸಿ ತನ್ನ ವಿರೋಧಿಯ ಕ್ಯುಆರ್ ಕೋಡ್ ಕೆಂಪಾಗುವಂತೆ ಸಲೀಸಾಗಿ ಮಾಡಿಬಿಡಬಲ್ಲದು. ಅಲ್ಲಿಗೆ ನಿಮ್ಮನ್ನು ಕೊಲ್ಲಬೇಕೆಂದು ಷಿ ನಿಶ್ಚಯಿಸಿದರೆ ಆತನ ಪಾಲಿಗೆ ಅದು ಕಂಪ್ಯೂಟರ್ನಲ್ಲಿ ಒಂದು ಕ್ಲಿಕ್ ಮಾತ್ರ! 

ಯಾವುದಕ್ಕೂ ಮಣಿಯದ ಚೀನೀ ಆಡಳಿತ ಪಡೆ ಮೊದಲ ಬಾರಿಗೆ ಕೊವಿಡ್ ನಿಯಮಗಳನ್ನು ಸಡಿಲಗೊಳಿಸುವ ಮಾತನಾಡುತ್ತಿದೆ. ಹಾಗೇನಾದರೂ ಆತ ಪೂರ್ಣ ಸಡಿಲಿಸಿದ್ದೇ ಆದರೆ ಕನಿಷ್ಠ ಪಕ್ಷ ಎರಡು ಮಿಲಿಯನ್ ಮಂದಿ ಅದಕ್ಕೆ ಆಹುತಿಯಾಗಲಿದ್ದಾರೆ ಎಂಬ ಆತಂಕವನ್ನು ಜಗತ್ತು ವ್ಯಕ್ತಪಡಿಸುತ್ತಿದೆ. ಏನಾಗುವುದೆಂದು ಕಾದು ನೋಡಬೇಕಷ್ಟೇ! ಜನರ ಗಮನವನ್ನು ಆತನಿಗೆ ಬೇರೆಡೆ ಸೆಳೆಯಲು ಇರುವುದೊಂದೇ ಮಾರ್ಗ. ಯಾರೊಂದಿಗಾದರೂ ಕಾಲು ಕೆರಕೊಂಡು ಜಗಳಕ್ಕೆ ಹೋಗಬೇಕು. ಚೀನೀ ಜನರ ಭಾವನೆಯನ್ನು ಕೆರೆಯಬೇಕು. ಅದಾಗಲೇ ಗಾಲ್ವಾನಿನಲ್ಲಿ ಭಾರತ ಸರಿಯಾದ ತಪರಾಕಿ ಕೊಟ್ಟಿದೆ. ಜಪಾನ್ ರಕ್ಷಣಾ ಬಜೆಟ್ ಅನ್ನು ದುಪ್ಪಟ್ಟುಗೊಳಿಸಿದೆ. ಇನ್ನು ಅದಕ್ಕಿರುವುದು ತೈವಾನ್ ಒಂದೇ. ಮುಂದಿನ ದಿನಗಳಲ್ಲಿ ನಾವು ತೈವಾನ್ನತ್ತ ಏರಿಹೋಗುವ ಅಥವಾ ಆಂತರಿಕವಾಗಿ ಕುಸಿದುಹೋಗುವ ಚೀನಾ ನೋಡಬಹುದೆನಿಸುತ್ತದೆ! 

ಅಂದಹಾಗೆ, ಇವೆಲ್ಲದರ ನಡುವೆ ಕಾಣೆಯಾಗಿರುವುದು ಮಾತ್ರ ಸಿದ್ದರಾಮಯ್ಯನವರು..

ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಎರಡು ರಾಜ್ಯಗಳ ಚುನಾವಣೆ ಮತ್ತು ದೆಹಲಿಯ ಮುನ್ಸಿಪಾಲಿಟಿ ಚುನಾವಣೆಯ ಫಲಿತಾಂಶ ಅಚ್ಚರಿಗೆ ನೂಕಿದೆಯಷ್ಟೇ ಅಲ್ಲದೇ ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದೆ. ಈ ಗೆಲುವಿನ ಧಾವಂತದಲ್ಲಿ ನಾವೆಲ್ಲರೂ ಟಿವಿ ಚಾನೆಲ್ಲುಗಳಲ್ಲಿ ಗಂಟೆಗಟ್ಟಲೆ ಕೊರೆದ ಎಕ್ಸಿಟ್ ಪೋಲ್ಗಳನ್ನು ಮರೆತೇಬಿಟ್ಟಿದ್ದೇವೆ. ಎಲ್ಲರಿಗಿಂತಲೂ ಸ್ಪಷ್ಟ ಮತ್ತು ನಿಖರ ತಾವೆಂದೇ ಹೇಳಿಕೊಳ್ಳುವ ಚಾನೆಲ್ಲುಗಳೆಲ್ಲ ಫಲಿತಾಂಶ ಬಂದಾಗ ಗೆದ್ದವರನ್ನು ಹೊಗಳುತ್ತಲೇ ತಮ್ಮ ಮೂರ್ಖತನವನ್ನು ಮರೆಮಾಚಿಬಿಡುತ್ತಾರೆ. ಈ ಬಾರಿಯಂತೂ ಯಾವ ಚಾನೆಲ್ಲೂ ಮೂರೂ ಚುನವಾವಣೆಯನ್ನು ಸಮರ್ಥವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ. ದೆಹಲಿಯಲ್ಲಿ ಬಿಜೆಪಿಗೆ ಹೀನಾಯ ಸೋಲು ಎಂದವರು, ಬಿಜೆಪಿಯ ಮತ ಗಳಿಕೆಯ ಪ್ರಮಾಣ ವೃದ್ಧಿಯಾಗಿರುವುದನ್ನು ಕಂಡು ಹಣೆಬಡಿದುಕೊಂಡರು. ಇತ್ತ ಗುಜರಾತ್ ನಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಾರ್ಟಿ ಸವಾಲಾಗಬಹುದೆಂದು ಭಾವಿಸಿದ ಎಲ್ಲರೂ ಅದು ಹೆಚ್ಚು ಸ್ಥಾನಗಳನ್ನು ಗಳಿಸುವುದಿಲ್ಲವಾದರೂ ಬಿಜೆಪಿಯ ಮತಗಳಿಕೆಗೆ ಕೊಳ್ಳಿ ಇಡುತ್ತದೆ ಎಂದೇ ಭಾವಿಸಿದ್ದರು. ಅದೂ ಉಲ್ಟಾ ಹೊಡೆಯಿತು. ಕಾಂಗ್ರೆಸ್ಸು ಊಹಿಸಲಾಗದಷ್ಟು ಪಾತಾಳಕ್ಕಿಳಿದು ಬಿಜೆಪಿಯ ಗೆಲುವನ್ನು ಸಲೀಸು ಮಾಡಿಬಿಟ್ಟಿತು. ಹಿಮಾಚಲ ಪ್ರದೇಶದಲ್ಲಿ ಇಷ್ಟೊಂದು ಹೊಡೆತವನ್ನು ಬಿಜೆಪಿ ಊಹಿಸಲೂ ಸಾಧ್ಯವಿರಲಿಲ್ಲ. ಯಾವುದನ್ನು ದೆಹಲಿಯ ಚುನಾವಣೆಯಲ್ಲಿ ಕಾಣಬೇಕಿತ್ತೋ ಅದನ್ನು ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಕಂಡಿತು. ಅಚ್ಚರಿ ಎಂದರೆ ಯಾವೊಂದು ಚುನಾವಣೋತ್ತರ ಸಮೀಕ್ಷೆಯೂ ಈ ಮೂರನ್ನು ನಿಖರವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ! ವೈಜ್ಞಾನಿಕವಾಗಿ ತಾವು ಲೆಕ್ಕ ಹಾಕುತ್ತೇವೆ ಎಂದು ಇವರು ಬಿಡುವುದು ಬೊಗಳೆಯಷ್ಟೇ ಎಂಬುದು ಎಂಥವನಿಗೂ ಈಗ ಅರಿವಾಗಿದೆ. ಗುಜರಾತಿನಲ್ಲಿ ಬಿಜೆಪಿ 115 ರಿಂದ 150 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಊಹಿಸುವ ಪುಣ್ಯಾತ್ಮನನ್ನು ಯಾವ ಲೆಕ್ಕಕ್ಕೆ ಪಂಡಿತನೆನ್ನಬೇಕೋ ಗೊತ್ತಾಗುವುದಿಲ್ಲ. ಪ್ರಧಾನಮಂತ್ರಿಯಿಂದ ಹಿಡಿದು ಸ್ಥಳೀಯ ಬಿಜೆಪಿ ಕಾರ್ಯಕರ್ತನವರೆಗೆ ಎಲ್ಲರೂ ಸೇರಿ ಏಕರಸವಾದ ಹೋರಾಟ ಮಾಡಿದ್ದನ್ನು ನೋಡಿದರೆ ಬಿಜೆಪಿಯ ಗೆಲುವು ನಿಶ್ಚಯವೆಂದು ಎಂಥವನೂ ಹೇಳಬಹುದಾಗಿತ್ತು. ಆದರೆ ಈ ಗೆಲುವಿನ ಅಂತರ ಸುಮಾರು 115 ರಿಂದ 150 ಸೀಟುಗಳವರೆಗೆ ಇರಬಹುದು ಎಂಬ 35 ಸೀಟುಗಳ ವ್ಯತ್ಯಾಸವನ್ನು ಕೊಡುವುದಿದೆಯಲ್ಲ, ಅದು ನಮ್ಮೂರಿನ ಅರಳಿಕಟ್ಟೆಯ ಮೇಲೆ ಕುಳಿತವನೂ ಮಾಡಬಲ್ಲ. ದುರಂತವೆಂದರೆ, ಈ ಮಾಧ್ಯಮಗಳು ಇದಕ್ಕೋಸ್ಕರ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತವಲ್ಲದೇ ಜನರ ಭಾವನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತವೆ. ಇಷ್ಟಕ್ಕೂ ಇವರೆಲ್ಲ ಸೋತಿರುವುದೆಲ್ಲಿ ಗೊತ್ತೇ? ಎಲೆಕ್ಷನ್ ರ್ಯಾಲಿಗಳನ್ನು ನೋಡಿ ಅದರ ಆಧಾರದ ಮೇಲೆ ಜನ ವೋಟು ಹಾಕುತ್ತಾರೆ ಎಂದು ನಿರ್ಧರಿಸಿರುವುದರಲ್ಲಿ. ಐದು ವರ್ಷಗಳ ನಂತರ ಬೂತಿಗೆ ಹೋಗಿ ವೋಟು ಹಾಕುವ ಮನುಷ್ಯ ತನ್ನದ್ದೇ ಆದ ಆಲೋಚನೆ ಹೊಂದಿರುತ್ತಾನೆ. ಆತ ಬಚ್ಚಿಟ್ಟುಕೊಂಡಿರುವ ಈ ವಿಚಾರವನ್ನು ಮಾಧ್ಯಮದವರ ಮುಂದೆ ಬಿಚ್ಚಿಡಬೇಕೆಂದೇನೂ ಇಲ್ಲ. ಬೃಹತ್ ರ್ಯಾಲಿಗಳು ಗೆಲ್ಲುವ ಅಂತರವನ್ನು ಹೆಚ್ಚಿಸಬಹುದಷ್ಟೆ. ಆದರೆ ಯಾರಿಗೆ ಮತ ಹಾಕಬೇಕೆಂಬುದು ಪೂರ್ವ ನಿರ್ಧರಿತವೇ. ಗುಜರಾತಿನಲ್ಲಿ ಇರುವ 182 ಸೀಟುಗಳಲ್ಲಿ ಮೋದಿ ಪಕ್ಷ ಗೆದ್ದಿರುವುದು 156. ಸುಮಾರು 86 ಪ್ರತಿಶತದಷ್ಟು ಸೀಟುಗಳನ್ನು ಬಿಜೆಪಿಯೊಂದೇ ಬಾಚಿಕೊಂಡಿದೆ. ಅತ್ಯಂತ ಪುರಾತನ ಪಕ್ಷವೆಂದು ತಮ್ಮನ್ನು ತಾವು ಕರೆದುಕೊಳ್ಳುವ ಕಾಂಗ್ರೆಸ್ಸಿಗೆ ಪ್ರತಿಪಕ್ಷ ಸ್ಥಾನ ಗಳಿಸಿಕೊಳ್ಳಲೂ ಒಂದು ಸೀಟಿನ ಕೊರತೆಯಿದೆ. ಅವರೀಗ ಸರ್ಕಾರ ಮಾಡಲಿಕ್ಕಲ್ಲ, ಪ್ರತಿಪಕ್ಷ ಸ್ಥಾನ ಪಡೆಯಲೂ ಪಕ್ಷೇತರರಿಗೆ ಕೈ ಮುಗಿಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರೆ ಈ ಪರಿಯ ಉತ್ಪಾಟನೆಯನ್ನು ಊಹಿಸಲು ಸಾಧ್ಯವಿತ್ತೇನು? ಕಳೆದ ಬಾರಿ ಕಾಂಗ್ರೆಸ್ಸಿಗೆ 77 ಸೀಟುಗಳು ದೊರೆತಿದ್ದವು. ಎರಡೂವರೆ ದಶಕದಿಂದ ಅಧಿಕಾರದಲ್ಲಿದ್ದ ಭಾಜಪದ ವಿರುದ್ಧ ಅದು ಎಡವಿದ್ದಾದರೂ ಎಲ್ಲಿ ಎಂಬ ಆಂತರಿಕ ಚರ್ಚೆ ನಡೆಯುವುದು ಬೇಡವೇನು? 

ಸ್ವಾತಂತ್ರ್ಯ ಬಂದ ಲಾಗಾಯ್ತು ಸ್ವಾತಂತ್ರ್ಯ ಕೊಡಿಸಿದವರು ತಾವೇ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಿ ಅದರ ಲಾಭವನ್ನೇ ಉಣ್ಣುತ್ತಾ ಬಂದಿತ್ತು ಕಾಂಗ್ರೆಸ್ಸು. ಹೀಗಾಗಿಯೇ ಮನೆಯಲ್ಲಿ ವೃದ್ಧರೆಂಬುವವರು ಇದ್ದರೆ ಅವರು ಮತ ಹಾಕೋದು ಕೈಗೇ. ಅದು ಸ್ವಾತಂತ್ರ್ಯದ ಭ್ರಮೆ ತಲೆ ಹೊಕ್ಕಿರುವ ಪರಿಣಾಮ. ಈ ಅಡಗೂಲಜ್ಜಿಯ ಕಥೆಯನ್ನು ಕೇಳಲು ಇಂದಿನ ತರುಣ ತಯಾರಿಲ್ಲ. ಅವನು ಕಾಂಗ್ರೆಸ್ಸಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾನೆ. ಸರದಾರ್ ಪಟೇಲರಿಗೆ ಪ್ರಧಾನಿ ಪಟ್ಟ ಸಿಗಲಿಲ್ಲವೇಕೆ? ಬಾಬಾಸಾಬೇಹ್ ಅಂಬೇಡ್ಕರರಿಗೆ ಭಾರತರತ್ನ ನೀಡಲು 1990ರವರೆಗೆ ಕಾಯಬೇಕಾಗಿತ್ತು ಏಕೆ? ಸೋಮನಾಥ ಮಂದಿರ ಪುನರ್ನಿರ್ಮಿಸಲು ನೆಹರೂ ವಿರೋಧ ವ್ಯಕ್ತಪಡಿಸಿದ್ದು ಏಕೆ? ರಾಮಮಂದಿರವನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲೇ ಮರಳಿ ಪಡೆಯಬಹುದಾಗಿದ್ದರೂ ಅದನ್ನು ಸುದೀರ್ಘಕಾಲ ತಳ್ಳಿಕೊಂಡು ಬಂದದ್ದು ಏಕೆ? ಕಾಶ್ಮೀರವನ್ನು ಭಾರತದೊಂದಿಗೆ ಏಕರಸಗೊಳಿಸುವುದು ಬಲು ಸುಲಭವಿದ್ದಾಗ್ಯೂ ಯಾರ ತೆವಲಿಗಾಗಿ ಅದನ್ನು ಪ್ರತ್ಯೇಕವಾಗಿ ಉಳಿಸಲಾಯ್ತು? ಯಾರ ಕಾರಣದಿಂದಾಗಿ ದಕ್ಷಿಣ ಮತ್ತು ಉತ್ತರಗಳು ಇಂದಿಗೂ ಒಂದಾಗದೇ ಉಳಿದಿವೆ? ಅನೇಕ ಪ್ರಶ್ನೆಗಳು ತರುಣರ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಲೇ ಇವೆ. ಕಾಂಗ್ರೆಸ್ಸು ಇವುಗಳಿಗೆ ಸುಲಭಕ್ಕೆ ಉತ್ತರ ಕೊಡಲಾರದು. ಅದರಲ್ಲೂ ಜಾತಿ-ಮತ-ಪಂಥಗಳನ್ನು ಮೀರಿ ರಾಷ್ಟ್ರೀಯವಾದದ ಆಲೋಚನೆ ಮಾಡುವ ತರುಣರನ್ನೆದುರಿಸುವುದಂತೂ ಕಾಂಗ್ರೆಸ್ಸಿಗೆ ಸಾಧ್ಯವಾಗದ ಮಾತು. ಹೀಗಾಗಿಯೇ ಗುಜರಾತ್ ಕದನ ಶುರುವಾಗುವ ಮುನ್ನವೇ ಕಾಂಗ್ರೆಸ್ಸು ನಿಂತನೆಲ ಬಿಟ್ಟೋಡಿತು. ಇಲ್ಲವಾದಲ್ಲಿ ಭಾರತ್ ಜೊಡೊ ಯಾತ್ರೆ ಗುಜರಾತಿನ ಚುನಾವಣೆಯ ವೇಳೆ ಕರ್ನಾಟಕದಲ್ಲೇಕೆ ನಡೆಯಬೇಕಿತ್ತು? ಆದರೆ ಒಂದಂತೂ ಸತ್ಯ. ರಾಹುಲ್ ಚುನಾವಣಾ ಪ್ರಚಾರಕ್ಕೆ ಗುಜರಾತಿಗೆ ಹೋಗದೇ ಈ ಹೀನಾಯ ಸೋಲಿನ ಕಿರೀಟವನ್ನು ತಮ್ಮ ತಲೆಯಿಂದ ಕೊಡವಿಕೊಂಡುಬಿಟ್ಟರು. ಪಾಪ, ಖರ್ಗೆಯವರು ಹರಕೆಯ ಕುರಿಯಾಗಿಬಿಟ್ಟರು! 

ದೂರದಿಂದ ನೋಡಿದರೆ ಹೀಗೆ ಕಾಂಗ್ರೆಸ್ಸಿಗೆ ಪ್ರಶ್ನೆ ಕೇಳುವ ಮಂದಿಯನ್ನು ಹೊಸತನದಿಂದ ಸಂಭಾಳಿಸಬಲ್ಲ ಸಾಮರ್ಥ್ಯ ಅರವಿಂದ್ ಕೇಜ್ರಿವಾಲರಿಗಿದೆ ಎಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರವಾಗಿತ್ತೆನಿಸುತ್ತದೆ. ಅದಕ್ಕೆ ಚುನಾವಣೆಯ ಅಷ್ಟೂ ಹೋರಾಟದ ಹೊಣೆಯನ್ನು ಆಮ್ಆದ್ಮಿ ಪಾರ್ಟಿಯ ಹೆಗಲಿಗೇರಿಸಿ ಕಾಂಗ್ರೆಸ್ಸು ಜಾರಿಕೊಂಡಿತು. ದೆಹಲಿಯಲ್ಲಿ ಮಾಡಿದಂತೆ ಇಲ್ಲಿಯೂ ಮತಗಳ ವಿಭಜನೆಯಾಗದಂತೆ ನೋಡಿಕೊಂಡು ಬಿಜೆಪಿಗೆ ಹೊಡೆತ ಕೊಡಬೇಕೆಂಬುದು ಅವರ ಗುಪ್ತ ಲೆಕ್ಕಾಚಾರ. ಆದರೆ ಗುಜರಾತಿನ ಮತದಾರ ಪಕ್ಕಾ ವ್ಯಾಪಾರಿ. ಆತ ಅರವಿಂದ್ ಕೇಜ್ರಿವಾಲರ ಸುಳ್ಳುಗಳನ್ನು ಕೇಳಿ-ಕೇಳಿ ಬೇಸತ್ತು ಹೋಗಿದ್ದ. ಉಚಿತ ಕೊಡುಗೆಯ ನೆಪದಲ್ಲಿ ಗುಜರಾತನ್ನು ಸಂಕಟಕ್ಕೆ ತಳ್ಳಲು ಆತ ಸಿದ್ಧನಿಲ್ಲ. ಹೀಗೆಂದೇ ಆತ ಕೇಜ್ರಿವಾಲರ ಪೊರಕೆಯನ್ನೇ ತೆಗೆದುಕೊಂಡು ಆತನ ಪಾರ್ಟಿಯನ್ನೇ ಗುಡಿಸಿಬಿಟ್ಟ!

 

ಚುನಾವಣೆ ಎನ್ನುವುದು ಭಾವನೆಗಳ ಸಮ್ಮಿಲನ. ಸುಮಾರು ಐದು ವರ್ಷಗಳ ಕಾಲ ಆತ ತನಗಾದ ನೋವುಗಳನ್ನು ಜತನದಿಂದ ಕಾಪಾಡಿಟ್ಟುಕೊಂಡು ಬರುತ್ತಾನೆ. ಸಂತೋಷವನ್ನು ಮರೆತುಬಿಡಬಹುದೇನೋ. ಆದರೆ ನೋವನ್ನು ಎಂದಿಗೂ ಮರೆಯಲಾರ. ಹೀಗಾಗಿಯೇ ಸಿದ್ದರಾಮಯ್ಯನವರು ಹೋದೆಡೆಯಲ್ಲೆಲ್ಲ ಅವರ ಅಧಿಕಾರಾವಧಿಯಲ್ಲಿ ತೀರಿಕೊಂಡ ಹಿಂದೂಗಳ ಶವಗಳು ಕಣ್ಮುಂದೆ ಬರುತ್ತವೆ. ಅವರ ಸುತ್ತ ಮುಸಲ್ಮಾನರು ತಿರುಗಾಡುವಾಗ ಮತ್ತೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದುಬಿಟ್ಟರೆ ಮತ್ತಷ್ಟು ಹೆಣಗಳು ಬೀಳುತ್ತವೇನೋ ಎಂಬ ಹೆದರಿಕೆ ಶುರುವಾಗುತ್ತದೆ. ಈ ಗಾಬರಿ ಅವರನ್ನೂ ಬಿಟ್ಟಿಲ್ಲ. ಹೀಗಾಗಿಯೇ ಮುಖ್ಯಮಂತ್ರಿಯಾಗಿದ್ದೂ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ಅವರು ಇಡಿಯ ರಾಜ್ಯದಲ್ಲಿ ತಮಗೊಂದು ಸೂಕ್ತ ಕ್ಷೇತ್ರ ಹುಡುಕಲು ಹರಸಾಹಸ ಮಾಡುತ್ತಿರುವುದು. ಹಾಗಂತ ಇದಕ್ಕೆ ಈಗಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಹೊರತಲ್ಲ. ಮುಸಲ್ಮಾನರ ವಿರುದ್ಧ ಎಂದೂ ಮಾತನಾಡದೇ ಅವರ ಮತಗಳನ್ನು ಪಡೆಯುತ್ತಾ ಗೆದ್ದು ಬರುತ್ತಿದ್ದ ಅವರಿಗೆ ಹಿಜಾಬ್, ಹಲಾಲ್, ಮೊದಲಾದ ಗಲಾಟೆಗಳ ನಂತರ ಕ್ಷೇತ್ರ ಅಷ್ಟು ಸಲೀಸಿಲ್ಲ. ಹಾಗಂತ ಬೇರೆ ಕ್ಷೇತ್ರ ಆರಿಸಿಕೊಳ್ಳಲು ಹೇಳಿ, ಬಿಜೆಪಿಯ ಭದ್ರಕೋಟೆ ಎಂದು ಕರೆಯಲ್ಪಡುವ ಕರಾವಳಿಯಲ್ಲೂ ಅವರು ಗೆಲ್ಲುವುದು ಸುಲಭವಿಲ್ಲ. ಪ್ರವೀಣ್ ನೆಟ್ಟಾರುವಿನ ಸಾವು ಅಷ್ಟು ಆಳಕ್ಕೆ ಹೊಕ್ಕಿದೆ. ಎಲ್ಲಾ ಕಾಂಗ್ರೆಸ್ಸಿಗರೂ ಜಾತಿಯ ಲೆಕ್ಕಾಚಾರದಲ್ಲಿ ಗೆದ್ದುಬಿಡುತ್ತೇವೆಂಬ ಭ್ರಮೆಯಲ್ಲಿದ್ದರೆ, ಬಿಜೆಪಿಗರು ಮೋದಿ ರ್ಯಾಲಿ ಮಾಡಿದರೆ ಜನ ಕಣ್ಮುಚ್ಚಿಕೊಂಡು ಮತ ನೀಡಿಬಿಡುತ್ತಾರೆ ಎಂದು ನಂಬಿಕೊಂಡು ಕೂತಿದ್ದಾರೆ. ಆದರೆ ವಾಸ್ತವ ನೆಲೆಕಟ್ಟಿನಲ್ಲಿ ನೋಡಿದರೆ ಜಾತಿ ಸಮೀಕರಣಗಳು ಈಗ ಸಾಕಷ್ಟು ಬದಲಾಗಿವೆ. ದೆಹಲಿಯಲ್ಲಿ ಆಮ್ಆದ್ಮಿ ಪಾರ್ಟಿಗೆ ಮುಸಲ್ಮಾನರ ಮತಗಳು ಶೇಕಡಾ 20ರಷ್ಟು ಕಡಿಮೆಯಾಗಿವೆ. ದಲಿತರ ಮತಗಳು ಭಾಜಪದ ಕಡೆಗೆ ತಿರುಗಿ ಸಾಕಷ್ಟು ಕಾಲವೇ ಆಗಿದೆ. ಕಾಂಗ್ರೆಸ್ಸು ಇದನ್ನು ಸೂಕ್ಷ್ಮವಾಗಿ ಗಮನಿಸದೇ ಇರಲಾರದು. ಇತ್ತ ರಾಜ್ಯಗಳ ಮತಕದನದಲ್ಲಿ ಮೋದಿ ತುಂಬಾ ಯಶಸ್ಸನ್ನು ಕಂಡಿದ್ದಾರೆ ಎಂದೇನೂ ಹೇಳಲಾಗದು. ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬು, ಬಂಗಾಳ, ಬಿಹಾರ, ಇತ್ತೀಚೆಗೆ ಹಿಮಾಚಲ ಪ್ರದೇಶ ಇಲ್ಲೆಲ್ಲವೂ ಸೋಲುಗಳನ್ನೇ ಉಂಡಿದ್ದಾರೆ. ರಾಜ್ಯಗಳು ಮೋದಿಯನ್ನು ಪ್ರಧಾನಿಯಾಗಿ ಬಯಸುತ್ತವೆ ನಿಜ. ಅವರನ್ನು ತಮ್ಮ ರಾಜ್ಯದವರೆಂದು ಭಾವಿಸುವುದಿಲ್ಲ ಅಷ್ಟೇ. ಹೀಗಾಗಿ ಮೋದಿಯ ಖ್ಯಾತಿ ಉತ್ತುಂಗದಲ್ಲಿರುವಾಗಲೇ ಬಿಹಾರದಲ್ಲಿ ಅವರನ್ನು ‘ಬಾಹರಿ’ ಎಂದು ಕರೆಯಲಾಗಿತ್ತು. ರಾಜಸ್ಥಾನದಲ್ಲಿ ಮಂದಿ ಮೋದಿಯನ್ನು ಇಷ್ಟಪಡುತ್ತಾರೆ ನಿಜ, ಆದರೆ ವಸುಂಧರಾ ರಾಜೆಗೆ ಮತ ಹಾಕಲು ಸಜ್ಜಾಗುವುದಿಲ್ಲ. ಶಿವಸೇನೆ ನೆಟ್ಟಗಿದ್ದಿದ್ದರೆ ಮಹಾರಾಷ್ಟ್ರದಲ್ಲಿ ಮೋದಿ ಪಾಳಯವೇ ಅಧಿಕಾರದಲ್ಲಿರುತ್ತಿತ್ತು. ಏಕೆಂದರೆ ಅಲ್ಲಿ ದೇವೇಂದ್ರ ಫಡ್ನವೀಸ್ ಜನಮಾನಸದಲ್ಲಿ ತಮ್ಮ ವಿಭಿನ್ನ ಕಾರ್ಯಗಳಿಂದ ಬಲವಾಗಿ ನೆಲೆಯೂರಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಬಿಜೆಪಿಯ ಗೆಲುವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಅದರರ್ಥ ಸ್ಥಳೀಯ ಸಮರ್ಥ ನಾಯಕರಿದ್ದರೆ ಅಂಥವರ ಮೇಲೆ ಮೋದಿ ಬೆಟ್ ಕಟ್ಟಿ ಓಡಿಸಬಹುದು. ಇಲ್ಲವಾದರೆ ಮೋದಿಯವರಿಗೆ ಬರಿ ಕಂಠಶೋಷಣೆಯಷ್ಟೆ. ಸೂಕ್ಷ್ಮವಾಗಿ ನೀವೇ ಗಮನಿಸಿದರೆ, ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗೆ ಮೋದಿ ಕೊಡುತ್ತಿರುವ ಮನ್ನಣೆ, ಗೌರವ ಎಂಥದ್ದೆಂಬುದು ಅರಿವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಹಿಡಿದೇ ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಪ್ರಯತ್ನ ಮಾಡುವುದು ಕಠಿಣವಾಗಲಾರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಧಿಕಾರ ಹತ್ತಿರಕ್ಕೆ ಬರುವಷ್ಟು ಗೆಲ್ಲುವ ಸಾಮರ್ಥ್ಯವಿರುವ ನಾಯಕನಿದ್ದರೆ, ಮೋದಿ ಅದನ್ನು ಖಾತ್ರಿಯಾಗಿ ಗೆಲುವಾಗಿ ಪರಿವರ್ತಿಸಬಲ್ಲರು. ಗೆಲುವಿನ ಅಂತರವನ್ನು ಹಿಗ್ಗಿಸಿಕೊಡಬಲ್ಲರು. ಪೂರ್ಣ ಸಕರ್ಾರವೇ ಅವರ ಹೆಸರಿನಲ್ಲಿ ಬರುವುದು ಸುಲಭ ಸಾಧ್ಯವಾದ ಮಾತಲ್ಲ! ಹೀಗಾಗಿಯೇ ಕರ್ನಾಟಕದಲ್ಲಿ ಭಾಜಪ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಗುಜರಾತಿನಲ್ಲಿ ಮಾಡಿದಂತೆ ಹಳೆಯ ಮುಖಗಳನ್ನು ಬದಲಿಸಿ ಸಮರ್ಥರಾಗಿರುವ ಹೊಸಬರನ್ನು ಆರಿಸಬೇಕಿದೆ. ಕನ್ನಡದ ಜನರು ತಮಿಳಿಗರಂತೆ ಸಂಕುಚಿತವಾಗಿ ಯೋಚಿಸದೇ, ರಾಷ್ಟ್ರೀಯ ಭಾವನೆಯಿಂದ ಕೂಡಿದವರೇ ಆಗಿರುವುದರಿಂದ ಗುಜರಾತಿನ ಫಾರ್ಮುಲಾ ಕೆಲಸಕ್ಕೆ ಬರಬಹುದು. ಸಿದ್ದರಾಮಯ್ಯನವರ ಟಿಪ್ಪು ಜಯಂತಿ ಕೊಡಗಿನಲ್ಲಿ ಇಂದಿಗೂ ಆಕ್ರೋಶದ ಜ್ವಾಲಾಮುಖಿಯನ್ನು ಉಳಿಸಿದೆ. ಕರಾವಳಿ ಭಾಗದ ಜನ ಆ ಕಾಲದ ಹಿಂದೂ ಮಾರಣಹೋಮವನ್ನು ಇಂದಿಗೂ ಮರೆಯಲಾರರು. ಸತೀಶ್ ಜಾರಕಿಹೊಳಿಯವರು ಹಿಂದೂವನ್ನು ಅಶ್ಲೀಲವೆಂದದ್ದು ತರುಣರ ಎದೆಯ ಗೂಡಿನಲ್ಲಿ ಬೆಚ್ಚಗಾಗಿದೆ. ದೇಶದಾದ್ಯಂತ ಬೆಳಕಿಗೆ ಬರುತ್ತಿರುವ ಲವ್ಜಿಹಾದ್ ಪ್ರಕರಣಗಳು, ಕರಾವಳಿಯಲ್ಲಿ ಕಂಡುಬಂದ ಕುಕ್ಕರ್ಬಾಂಬ್ ಘಟನೆಗಳು ಜನರನ್ನು ಇಂದಿಗೂ ಕೇಸರಿ ಪಡೆಗಳ ಪರವಾಗಿ ನಿಲ್ಲುವಂತೆ ಮಾಡಿವೆ. ಆದರೆ ಅದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುವ ನಾಯಕರಿಲ್ಲದಾಗ ಮಾತ್ರ ಅವರು ಪರ್ಯಾಯವನ್ನು ಹುಡುಕುವ ಸಾಧ್ಯತೆ ಇರುತ್ತದೆ. ಕರ್ನಾಟಕದ ಭಾಜಪದ ನೇತೃತ್ವ ಈ ನಿಟ್ಟಿನಲ್ಲಿ ಗುಜರಾತಿನ ನಾಯಕರಷ್ಟು ಅಗ್ರಣಿಯಾಗಿಲ್ಲದಿರುವುದು ಆತಂಕಕ್ಕೆ ಕಾರಣವೇ ನಿಜ. ಹೀಗಾಗಿಯೇ ಕರ್ನಾಟಕದ ಚುನಾವಣೆಯೂ ಯಾರು ಅಂದುಕೊಂಡಷ್ಟೂ ಸಲೀಸಾಗಿಲ್ಲ. ಕಾಂಗ್ರೆಸ್ಸಿನ ಪಾಲಿಗೆ ಇದು ಹಿಮಾಚಲದಂತಾಗಬಹುದು, ಬಿಜೆಪಿಯ ಪಾಲಿಗೆ ಗೋವೆಯಂತಾಗಬಹುದು. ಕಾದು ನೋಡಬೇಕಷ್ಟೇ..