ಟ್ಯಾಗ್: ವಿವೇಕಾನಂದ

ಜಗತ್ತು ಗೆಲ್ಲಲು ಪ್ರೇರಣೆ ಕೊಟ್ಟಿದ್ದು ಆ ಬಂಡೆ! 

ಜಗತ್ತು ಗೆಲ್ಲಲು ಪ್ರೇರಣೆ ಕೊಟ್ಟಿದ್ದು ಆ ಬಂಡೆ! 

ಡಿಸೆಂಬರ್ 25. ಅತ್ಯಂತ ಸಾಮಾನ್ಯ ಸಂತನೊಬ್ಬ ಈ ದೇಶ ಎದುರಿಸುತ್ತಿರುವ ಕಷ್ಟ-ನಷ್ಟಗಳನ್ನು ನೋಡಿ, ನೊಂದು, ಬಸವಳಿದು ತನ್ನ ತಾನು ರಾಷ್ಟ್ರದ ಒಳಿತಿಗೆ ಸಮರ್ಪಿಸಬೇಕೆಂದು ನಿಶ್ಚಯಿಸಿಕೊಂಡ. ಇಡಿಯ ರಾಷ್ಟ್ರವನ್ನು ಪರಿವ್ರಾಜಕನಾಗಿ ಸುತ್ತಾಡಿದ ಆತ ಕೊನೆಗೊಮ್ಮೆ ಕನ್ಯಾಕುಮಾರಿಯ ಬಂಡೆಯನ್ನು ನೋಡಿ ಸಮುದ್ರವನ್ನು ಸೀಳಿಕೊಂಡು ಬಂಡೆಯತ್ತ ಧಾವಿಸಿದ. ಸುತ್ತಲೂ ನಿಂತು ನೋಡುತ್ತಿದ್ದ ಮಂದಿಗೆ ಆತ ಹುಚ್ಚನೆನಿಸಿರಲಿಕ್ಕೆ ಸಾಕು. ಇನ್ನೂ ಕೆಲವರಿಗೆ ಆತನ ಸಾಹಸ ಮೆಚ್ಚುಗೆಯಾಗಿರಲೂ ಸಾಕು. ಸನ್ಯಾಸಿಗೆ ಮಾತ್ರ ಇವ್ಯಾವುದರ ಪರಿವೆಯೂ ಇರಲಿಲ್ಲ. ಆತನ ಹೃದಯವನ್ನೆಲ್ಲ ಆವರಿಸಿಕೊಂಡಿದ್ದು ತಾಯಿ ಭಾರತಿಯ ಕಷ್ಟಗಳು ಮಾತ್ರ. ಅದಕ್ಕೆ ಪರಿಹಾರವನ್ನು ಅರಸುವ ಧಾವಂತದಲ್ಲಿ ಆತ ತನ್ನದೆಲ್ಲವನ್ನೂ ಅರ್ಪಿಸಲು ಸಿದ್ಧವಾಗಿದ್ದಾನೆ. ತನ್ನ ಪ್ರಾಣ ಸಮರ್ಪಣೆಯಿಂದ ರಾಷ್ಟ್ರಕ್ಕೆ ಒಳಿತಾಗುವುದಾದರೆ ಅದಕ್ಕೂ ಕೂಡ. ಹೌದು, ನೀವು ಸರಿಯಾಗಿಯೇ ಗ್ರಹಿಸಿದಿರಿ. ಆ ಸನ್ಯಾಸಿ ಸ್ವಾಮಿ ವಿವೇಕಾನಂದರೇ.

ಅಂದು ಆ ಬಂಡೆಗಲ್ಲಿನ ಮೇಲೆ ಕುಳಿತು ಧ್ಯಾನಸ್ಥನಾದ ಆತ ತನಗರಿವಿಲ್ಲದಂತೆ ಕಣ್ಣೀರು ಸುರಿಸುತ್ತಲೇ ಹೋದ. ಭಾರತದ ಭವ್ಯ ಪರಂಪರೆಯನ್ನು ಕಣ್ಮುಂದೆ ತಂದುಕೊಂಡ. ಬ್ರಿಟೀಷರ ದಬ್ಬಾಳಿಕೆಯನ್ನು ನೆನೆಸಿಕೊಂಡ. ಒಂದು ಕಾಲದ ಶ್ರೇಷ್ಠ ಭಾರತ ಹೀಗೇಕಾಯ್ತು ಎಂದು ಯೋಚಿಸುತ್ತಾ ಮಮ್ಮಲ ಮರುಗಿದ. ಹಾಗೆ ಒಂದಲ್ಲ, ಎರಡಲ್ಲ, ಮೂರು ದಿನಗಳು ಕಳೆದೇ ಹೋದವು. ಕೊನೆಯ ದಿನ ಆತನಿಗೊಂದು ದರ್ಶನವಾಯ್ತು. ದರ್ಶನಗಳ ನಾಡಲ್ಲವೇ ಇದು. ಗಾಯತ್ರಿ ಮಂತ್ರದ ದರ್ಶನವನ್ನು ಪಡೆದುಕೊಂಡ ವಿಶ್ವಾಮಿತ್ರರಿಂದ ಹಿಡಿದು ನಮ್ಮ ಕಾಲದ ಋಷಿ ವಿವೇಕಾನಂದರವರೆಗೆ ಎಷ್ಟೊಂದು ಮಂದಿ ದರ್ಶನಕಾರರು! ಆದರೆ ಈ ಬಾರಿಯ ದರ್ಶನ ಹಿಂದಿನ ಎಲ್ಲವುಗಳಿಗಿಂತಲೂ ಭಿನ್ನ. ತಾಯಿ ಭಾರತಿ ವಿವೇಕಾನಂದರ ಮುಂದೆ ವೈಭವದಿಂದ ಕಂಗೊಳಿಸಿದಳು. ಕಾಶ್ಮೀರದ ರೂಪದಲ್ಲಿ ಆಕೆಯ ಕಿರೀಟ, ಎರಡು ವೈಭವದ ಬಾಹುಗಳು, ವಿಂಧ್ಯವೆಂಬ ಸೊಂಟ, ಕನ್ಯಾಕುಮಾರಿಯಲ್ಲಿ ಆಕೆಯ ಪಾದಯುಗ್ಮ ಮತ್ತು ಆಕೆಯ ಚರಣ ಪೂಜೆಗೆ ಸಿದ್ಧನಾಗಿ ಕುಳಿತಿರುವ ಈ ಸನ್ಯಾಸಿ. ಇವಿಷ್ಟೂ ಆ ದರ್ಶನದ ಸಾರಾಂಶ. ತನ್ನಿಂದ ಬೃಹತ್ತಾದ ಕೆಲಸವೊಂದಾಗಲಿಕ್ಕಿದೆ ಎಂದು ಅಂದೇ ಆತನಿಗೆ ಅರಿವಾಯ್ತು. ಗುರುದೇವ ರಾಮಕೃಷ್ಣರು ಸಮುದ್ರದ ಮೇಲೆ ನಡೆದುಕೊಂಡು ಬಂದು ಪಶ್ಚಿಮದಿಂದ ಕೈಬೀಸಿ ಕರೆಯುತ್ತಿರುವುದೂ ಕಂಡಿತು. ಮುಂದೇನು? ಅಂದುಕೊಂಡಿದ್ದು ಇನ್ನು ಮಾಡಬೇಕಷ್ಟೇ. ಈಜಿಕೊಂಡು ಹೋದ ಈ ಸನ್ಯಾಸಿಯನ್ನು ಕರೆತರಲೆಂದು ಊರಿನ ದೋಣಿ ಬಂತು. ಮೂರು ದಿನಗಳ ಕಾಲ ಮರಳಿ ಬರದಿದ್ದ ಈತನ ಯೋಗಕ್ಷೇಮ ವಿಚಾರಿಸಲು ಊರಿನ ಹಿರಿಯರು ಬಂದಿದ್ದರು. ತಮ್ಮೊಂದಿಗೆ ಮತ್ತೆ ಊರಿಗೆ ಕರೆದೊಯ್ದರು. ಆನಂತರವೇ ಸ್ವಾಮಿ ವಿವೇಕಾನಂದರು ಜಗತ್ತಿನ ವೇದಿಕೆಯ ಮೇಲೆ ದಿಗ್ವಿಜಯ ಸಾಧಿಸಲು ಸಾಧ್ಯವಾಗಿದ್ದು. ಇಂದಿಗೂ ಅದಕ್ಕೆ ಸಮನಾದ ಮತ್ತೊಂದು ಸಾಧನೆ ಇಲ್ಲ. ಗುಲಾಮೀ ರಾಷ್ಟ್ರವೊಂದರ ಪ್ರತಿನಿಧಿ ಜಗತ್ತಿನ ಪರಮ ಸ್ವಾತಂತ್ರ್ಯಪ್ರಿಯ ಅಮೇರಿಕಾದ ವೇದಿಕೆಯ ಮೇಲೆ ನಿಂತು ಹಿಂದೂಧರ್ಮವನ್ನು ಹೀಗಳೆಯುತ್ತಿದ್ದವರ ಮುಂದೆ ಎದೆಯೆತ್ತಿ ತನ್ನ ಧರ್ಮವನ್ನು ಸಮರ್ಥಿಸಿಕೊಳ್ಳುವ ಕಾರ್ಯ ಮಾಡಿದನಲ್ಲದೇ ಜಗತ್ತೆಲ್ಲ ಅದಕ್ಕೆ ತಲೆಬಾಗುವಂತೆ ಮಾಡಿದ್ದಿದೆಯಲ್ಲ ಅದು ಸಾಮಾನ್ಯವಾದ ಸಂಗತಿಯಲ್ಲ. ಗುಲಾಮೀ ಭಾವವನ್ನು ಆವಾಹಿಸಿಕೊಂಡಿದ್ದ ಭಾರತೀಯ ಸಮಾಜಕ್ಕೆ ಅದೊಂದು ಶಕ್ತಿಮದ್ದಾಯ್ತು. ಹೊಸದೊಂದು ರಾಷ್ಟ್ರೀಯತೆಯ ಉದಯವಾಯ್ತು. ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನದ ಬದಲಾವಣೆಯ ಮೊದಲ ಪರ್ವ ಆರಂಭವಾಗಿದ್ದು ಅಲ್ಲಿಂದಲೇ. ಆದರೆ ಇಷ್ಟೆಲ್ಲ ಸಾಹಸಕ್ಕೆ ಕಾರಣವಾಗಿ ವಿವೇಕಾನಂದರಿಗೆ ಶಕ್ತಿಯ ಗಣಿಯನ್ನೇ ಉಡುಗೊರೆಯಾಗಿ ಕೊಟ್ಟಿದ್ದು ಡಿಸೆಂಬರ್ 25ರ ಸಮುದ್ರವನ್ನು ಸೀಳಿದ ಆ ಸಾಹಸವೇ. ಹೀಗಾಗಿಯೇ ವಿವೇಕಾನಂದರ ಆರಾಧಕರ ಪಾಲಿಗೆಲ್ಲ ಈ ದಿನ ಬಲುವಿಶಿಷ್ಟವಾದ್ದು.

ಜಗತ್ತಿನ ಬಹುತೇಕ ಮತಗಳು ಅನ್ಯರಾಷ್ಟ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಾಕಷ್ಟು ಶ್ರಮಿಸಿವೆ. ಕತ್ತಿ-ಬಂದೂಕುಗಳನ್ನು ಹಿಡಿದು ಸಾವಿನ ಹೆದರಿಕೆ ತೋರಿ ತಮ್ಮ ಪುಸ್ತಕವನ್ನು ಒಪ್ಪಿಕೊಳ್ಳುವ ಒತ್ತಾಯ ಹೇರಿದ ಮಂದಿ ಇಂದು ಮೆರೆದಾಡುತ್ತಿದ್ದಾರೆ. ಆದರೆ ನಾವು ಮಾತ್ರ ಹಾಗಲ್ಲ. ಕೇವಲ ಜ್ಞಾನ ಪರಂಪರೆಯೊಂದರಿಂದಲೇ ಜಗತ್ತಿನ ಮೂಲೆ-ಮೂಲೆಯನ್ನೂ ತಮ್ಮ ತೆಕ್ಕೆಗೆ ಹಾಕಿಕೊಂಡವರು. ಕತ್ತಿ ಹಿಡಿದು ಯಾರ ಮೇಲೂ ಏರಿ ಹೋದವರಲ್ಲ. ಹೀಗಾಗಿ ಭಯ ತೋರಿಸಿ ನಮ್ಮ ಸಂಸ್ಕೃತಿಯನ್ನು ಹೇರುವ ಅಗತ್ಯವೂ ನಮಗಿರಲಿಲ್ಲ. ದಾರಾ ಶಿಕೊ ಔರಂಗಜೇಬನ ಸಹೋದರ. ಉಪನಿಷತ್ತುಗಳನ್ನು ಓದಿದ ಆತ ಭಾರತೀಯ ಸಂಸ್ಕೃತಿಗೆ ತನ್ನ ತಾನು ಸಮರ್ಪಿಸಿಕೊಂಡೇಬಿಟ್ಟ. ಅದಕ್ಕೆ ಪ್ರತಿಫಲವಾಗಿಯೇ ಔರಂಗಜೇಬನ ಕೈಲಿ ಸಾವನ್ನೂ ಕಂಡ. ಸಾಕ್ರಟಿಸ್, ಅರಿಸ್ಟಾಟಲ್‌ನಿಂದ ಹಿಡಿದು ಡೆವಿಡ್ ಫ್ರಾಲಿ, ಮಿಷೆಲ್ ಡ್ಯಾನಿನೊವರೆಗೆ ಅಸಂಖ್ಯ ಮಂದಿ ಭಾರತೀಯ ಪರಂಪರೆಯನ್ನು ಅರಿತು ಗೌರವ ಬೆಳೆಸಿಕೊಂಡಿರುವುದು ಇದರ ಜ್ಞಾನಮಾರ್ಗದ ಕಾರಣದಿಂದಾಗಿ. ನಾವು ದಾರಿಯೇ ತಪ್ಪಿಲ್ಲವೆಂದೇನೂ ಅಲ್ಲ. ಉಪನಿಷತ್ತುಗಳ ಸಂದೇಶದಿಂದ ಆಗಾಗ ದೂರ ಸರಿಯುತ್ತಿರುತ್ತೇವೆ. ಆದರೆ ಹೀಗೆ ಪಥವಿಮುಖರಾದಾಗಲೆಲ್ಲ ಮತ್ತೆ ನಮ್ಮನ್ನು ಸರಿದಾರಿಗೆ ತರುವ ಪ್ರಯತ್ನಕ್ಕೆಂದೇ ಅನೇಕ ಮಹಾನುಭಾವರು ಅವತರಿಸಿದ್ದಾರೆ. ರಾಮ, ಕೃಷ್ಣರಿರಲಿ, ಬುದ್ಧ, ಮಧ್ವ, ಶಂಕರ, ರಾಮಾನುಜರಿರಲಿ ಅಥವಾ ನಮ್ಮ ಕಾಲದ ರಾಮಕೃಷ್ಣರೇ ಇರಲಿ ಇವರೆಲ್ಲರೂ ಇಂತಹ ಹಂತಗಳಲ್ಲಿ ಬಂದು ಮತ್ತೆ ಭಾರತವೆಂಬ ಉಗಿಬಂಡಿಯನ್ನು ಹಳಿಗೆ ತಂದು ನಿಲ್ಲಿಸಿದವರು. ಇದರಿಂದಾಗಿಯೇ ಉಪನಿಷತ್ತುಗಳು ಅವತೀರ್ಣಗೊಂಡು ಸಹಸ್ರಾರು ವರ್ಷಗಳು ಕಳೆದರೂ ಭಾರತದ ಅಂತಃಸತ್ವ ಮಾತ್ರ ಬದಲಾಗಲೇ ಇಲ್ಲ. ಇಷ್ಟಕ್ಕೂ ಭಾರತದಲ್ಲಿ ಸಂತರಾಗೋದು, ಋಷಿಯಾಗೋದು ಸತ್ತಮೇಲೆ ಪವಾಡಗಳು ಎಷ್ಟು ಮಾಡಿದರು ಎಂಬ ಆಧಾರದ ಮೇಲಲ್ಲ. ಬದುಕಿರುವಾಗ ಅವರೆಷ್ಟು ತ್ಯಾಗ ಮಾಡಿದರು ಮತ್ತು ಎಷ್ಟು ಪ್ರೇಮವನ್ನು ಜಗತ್ತಿಗೆ ಹರಿಸಿದರು ಎಂಬ ಆಧಾರದ ಮೇಲೆ. ಆದ್ದರಿಂದ ಭಾರತದಲ್ಲಿ ಋಷಿತ್ವ ಎಂಬುವುದು ಹೃದಯ ನೀಡುವ ಗೌರವವೇ ಹೊರತು, ಇತರ ಮತಗಳಂತೆ ಆಡಳಿತದಲ್ಲಿ ಕುಳಿತವರು ಕೊಡುವಂಥದ್ದಲ್ಲ. ಸ್ವತಃ ವಿವೇಕಾನಂದರು ರಾಮಕೃಷ್ಣರ ಶಿಷ್ಯರಾಗಿ ಜಗತ್ತಿಗೆ ಉಪನಿಷತ್ತುಗಳ ಸಂದೇಶವನ್ನು ಮತ್ತೊಮ್ಮೆ ಒಯ್ಯುವಾಗಲೂ ಅವರು ತ್ಯಾಗ ಮತ್ತು ಪ್ರೇಮದ ಮೂರ್ತಿಯಾಗಿಯೇ ನಡೆದವರು. ತಮ್ಮ ಬದುಕಿಗೆ ಸಾಕಾಗುವಂತಹ ಎರಡು ಪ್ರಮುಖ ನಿರ್ದೇಶನಗಳನ್ನು ಅವರು ಗುರುಗಳಿಂದ ಪಡೆದರು. ಒಂದು ನೇರವಾಗಿ ಮತ್ತೊಂದು ಪರೋಕ್ಷವಾಗಿ. ಒಮ್ಮೆ ರಾಮಕೃಷ್ಣರ ಕೊಠಡಿಯಲ್ಲಿ ಧಾರ್ಮಿಕ ಕೃತಿಯೊಂದರ ಅಧ್ಯಯನ ನಡೆಯುತ್ತಿತ್ತು. ಅಲ್ಲಿ ಜೀವದಯೆ ಎನ್ನುವ ಉಲ್ಲೇಖ ಬಂತು. ತಕ್ಷಣವೇ ಶ್ರೀರಾಮಕೃಷ್ಣರು ಜೀವದಯೆ ಎನ್ನುವುದು ಸರಿಯಲ್ಲ. ದಯೆ ತೋರಿಸಲು ನಾವಾರು? ಭಗವಂತನೊಬ್ಬನೇ ದಯೆ ತೋರಿಸಬಲ್ಲ. ನಾವು ಜೀವಸೇವೆ ಮಾಡಲಷ್ಟೇ ಯೋಗ್ಯರು ಎಂದುಬಿಟ್ಟರು. ಆ ಹೊತ್ತಲ್ಲಿ ಕೊಠಡಿಯಲ್ಲಿ ಸಾಕಷ್ಟು ಜನರಿದ್ದರೂ ಈ ಸಂದೇಶವನ್ನು ಸ್ವೀಕಾರ ಮಾಡಿದ್ದು ಮಾತ್ರ ಸ್ವಾಮಿ ವಿವೇಕಾನಂದರೇ. ಅಲ್ಲಿಂದ ಹೊರ ಬಂದೊಡನೆ ವಿವೇಕಾನಂದರು ಉದ್ಗರಿಸಿದ್ದರು ‘ನನಗಿಂದು ಶ್ರೇಷ್ಠ ಮಾರ್ಗದರ್ಶನ ದೊರೆತಿದೆ. ಈ ಬದುಕನ್ನು ಜೀವಸೇವೆಯಲ್ಲಿ ಸವೆಸಿಬಿಡುತ್ತೇನೆ’ ಅಂತ. ಅವರಿಗೆ ಸಿಕ್ಕ ಪರೋಕ್ಷ ಸಂದೇಶವನ್ನು ಜೀವನದ ಉದ್ದೇಶವಾಗಿ ರೂಪಿಸಿಕೊಂಡುಬಿಟ್ಟಿದ್ದರು. ಇಂಥದ್ದೇ ಮತ್ತೊಂದು ಘಟನೆ ರಾಮಕೃಷ್ಣರ ಲೀಲಾಂತ್ಯದ ಕಾಲದಲ್ಲಿ ನಡೆಯಿತು. ಮರಣಶಯ್ಯೆಯಲ್ಲಿದ್ದ ರಾಮಕೃಷ್ಣರು ನರೇನ್‌ನನ್ನು ಬಳಿಕರೆದು ಎಲ್ಲರಿಗೂ ತಿಳಿಯುವಂತೆ ನರೇಂದ್ರ ಜಗತ್ತಿಗೆ ಶಿಕ್ಷಣ ಕೊಡುತ್ತಾನೆ ಎಂದು ಹೇಳಿದರಲ್ಲದೇ ಅದನ್ನು ಬರೆದರೂ ಕೂಡ. ಅಂದರೆ ಅವತಾರ ಪುರುಷನೊಬ್ಬ ನರೇಂದ್ರ ಮುಂದೇನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದ್ದಲ್ಲದೇ ಕಳೆದು ಹೋಗುತ್ತಿರುವ ಭಾರತದ ಭಾಗ್ಯವನ್ನು ಪುನರ್ ರೂಪಿಸುವ ಹೊಣೆಯನ್ನು ಹೆಗಲಿಗೇರಿಸಿದರು. ಸ್ವಾಮಿ ವಿವೇಕಾನಂದರು ಗುರುವಿನ ಈ ವಾಕ್ಯ ಸುಳ್ಳಾಗಲು ಬಿಡಲಿಲ್ಲ. ಗುರುಗಳು ಅದಕ್ಕೆ ಪೂರಕವಾಗಿಯೇ ಶಿಷ್ಯನ ಅಂತರಂಗದಲ್ಲಿ ಇಚ್ಛೆ ಜಾಗೃತಗೊಳಿಸಿದರು.

ವಿವೇಕಾನಂದರಂಥವರ ಇಚ್ಛಾಶಕ್ತಿ ಸುಖಾಸುಮ್ಮನೆ ಕಳೆದುಹೋಗುವಂಥದ್ದಲ್ಲ. ಒಂದೊಮ್ಮೆ ರಾಮಕೃಷ್ಣರೇ ಹೇಳಿದ್ದರು, ‘ನನ್ನೊಂದಿಗೆ ಬಂದಿದ್ದಾನೆ ಎಂಬ ಕಾರಣಕ್ಕಾಗಿಯೇ ನರೇಂದ್ರನ ಪ್ರಭೆ ಇಷ್ಟು ಮಸುಕಾಗಿದೆ. ಪ್ರತ್ಯೇಕವಾಗಿ ಬಂದಿದ್ದರೆ ಒಂದು ಮತವನ್ನೇ ಸ್ಥಾಪಿಸಿಬಿಡಬಲ್ಲಷ್ಟು ಸಾಮರ್ಥ್ಯ ಅವನದ್ದು’ ಎಂದು! ವಿವೇಕಾನಂದರ ಒಟ್ಟಾರೆ ಬದುಕು ಎಲ್ಲ ಮತಗಳ ಸಮನ್ವಯಕ್ಕೆ ಮೀಸಲಾಗಿದ್ದು. ಜಗತ್ತಿನ ವೇದಿಕೆಯ ಮೇಲೆ ಭಾರತವನ್ನು ಸಮರ್ಥಿಸಿಕೊಳ್ಳುವಾಗ ಅವರಿಗೆ ಎಷ್ಟು ಆನಂದವಿತ್ತೋ ಹಿಂದೂಧರ್ಮದ ಸಮಸ್ಯೆಗಳನ್ನು ಅವಲೋಕಿಸುವಾಗ ಅಷ್ಟೇ ದುಃಖವಾಗುತ್ತಿತ್ತು. ಬೆಂಗಳೂರಿನಲ್ಲಿ ಕೇರಳದ ಡಾ. ಪಲ್ಪು ಅವರನ್ನು ಭೇಟಿ ಮಾಡಿದಾಗ ಅವರು ‘ನೀವೆಲ್ಲ ಬ್ರಾಹ್ಮಣರ ಹಿಂದೆ ಅಂಗಲಾಚಿಕೊಂಡು ಹೋಗುವುದೇಕೆ? ನಿಮ್ಮಲ್ಲೇ ಉನ್ನತಮಟ್ಟದ ಯೋಗ್ಯವ್ಯಕ್ತಿಯೊಬ್ಬನನ್ನು ನಾಯಕನನ್ನಾಗಿ ಮಾಡಿಕೊಂಡು ಎಲ್ಲರೂ ಅನುಸರಿಸಿ. ಆಗ ನಿಮ್ಮ ಸಮಸ್ಯೆಗಳು ಪರಿಹಾರಗೊಳ್ಳುವುವು’ ಎಂದಿದ್ದರು. ಈ ಒಂದು ಮಾತು ಪಲ್ಪು ಅವರ ಬದುಕನ್ನಷ್ಟೇ ಅಲ್ಲ, ಅವರ ಇಡೀ ಸಮುದಾಯದ ಬದುಕಿಗೆ ದಿಕ್ಸೂಚಿಯಾಯ್ತು. ಸ್ವಾಮೀಜಿಯವರ ಮಾತುಗಳನ್ನು ತೀವ್ರವಾಗಿ ಮನಸ್ಸಿನ ಮೇಲೆ ಆವಾಹಿಸಿಕೊಂಡ ಡಾ. ಪಲ್ಪು ತಮ್ಮ ಸಮಾಜದ ಉನ್ನತ ವ್ಯಕ್ತಿಯ ಹುಡುಕಾಟಕ್ಕೆ ಸಜ್ಜಾದರು. ಆಗಲೇ ಅವರಿಗೆ ನಾರಾಯಣ ಗುರುಗಳ ಪರಿಚಯವಾಗಿದ್ದು. ಮುಂದೆ ಶ್ರೀ ನಾರಾಯಣ ಗುರುಗಳು ನಾಡಿಗೆ ಬೆಳಕಾಗಿ ನಿಂದ ರೀತಿ ಎಂಥದ್ದೆಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.

ಹಾಗಂತ ಅವರು ಬ್ರಾಹ್ಮಣ ವಿರೋಧಿ ಎಂದು ನೀವು ಭಾವಿಸಿಬಿಟ್ಟರೆ ನೀವು ಮೂರ್ಖರಾಗಿಬಿಡುವಿರಿ. ಚೆನ್ನೈನಲ್ಲಿ ಮಿಥ್ಯಾಚರಗಳನ್ನು ಬಿಟ್ಟಿದ್ದೇನೆ ಎಂದು ಹೇಳಿಕೊಂಡ ಬ್ರಾಹ್ಮಣನೊಬ್ಬನನ್ನು ಅವರು ಝಾಡಿಸಿದ ರೀತಿ ಕಂಡರೆ ನೀವು ಗಾಬರಿಯಾಗಿಬಿಡುತ್ತೀರಿ. ‘ಉಪನಿಷತ್ತುಗಳನ್ನೇ ಸೃಜಿಸಿದ ಋಷಿಗಳಿಗೆ ಈ ಆಚರಣೆಗಳಿಗೆಲ್ಲ ಸಮಯವಿತ್ತು. ನಿಮಗೆ ಇಲ್ಲ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ?’ ಎಂದು ಬಾಯ್ತುಂಬ ಉಗುಳಿದ್ದರು. ಆಗಲೇ ಹೇಳಲಿಲ್ಲವೇ? ಅಪಾರವಾದ ಗೌರವ ಇಟ್ಟುಕೊಂಡೇ ಅವರ ನ್ಯೂನತೆಗಳನ್ನು ತಿದ್ದಬಲ್ಲ ಸಾಮರ್ಥ್ಯ ಇದ್ದವರು ಸ್ವಾಮಿ ವಿವೇಕಾನಂದರು. 

ಹಾಗಂತ ಅವರ ಈ ತೀವ್ರ ವಿಚಾರಧಾರೆ ಸಾಮಾನ್ಯ ಜನರಿಗಾಗಿ ಮಾತ್ರ ಎಂದೇನೂ ಅಲ್ಲ. ಅನೇಕ ದಿವಾನರುಗಳು, ಮಹಾರಾಜರುಗಳು ಇವರ ಪ್ರಭಾವಲಯದ ಭಾಗವಾಗಿದ್ದರು. ಮೈಸೂರಿನ ಮಹಾರಾಜರಂತೂ ವಿವೇಕಾನಂದರ ಮಾತುಗಳಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ ‘ನಿಮಗಾಗಿ ಏನು ಮಾಡಲಿ?’ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಸುದೀರ್ಘ ಉತ್ತರ ನೀಡುತ್ತಾ, ‘ನಮ್ಮ ಭರತಭೂಮಿಯು ಅನಾದಿಯಿಂದ ಪಡೆದುಕೊಂಡು ಬಂದ ಆಸ್ತಿ ಎಂದರೆ ಉನ್ನತ ತಾತ್ವಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಮಾತ್ರ. ಈಗ ಅದಕ್ಕೆ ಆಧುನಿಕ ವಿಜ್ಞಾನದ ಜೋಡಣೆಯಾಗಬೇಕು. ಈಗ ಭಾರತದಲ್ಲಿ ಅಡಿಯಿಂದ ಮುಡಿಯವರೆಗೆ ರಚನಾತ್ಮಕ ಬದಲಾವಣೆ ತರಬೇಕಾಗಿದೆ’ ಎಂದರು. ವಿಕಾಸದ ಹಾದಿಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಮಹಾರಾಜರಿಗೆ ಈ ಮಾತು ವೇದವಾಕ್ಯವೇ ಆಯ್ತು. ಬಹುಶಃ ಕರ್ನಾಟಕದ ವಿಕಾಸಕ್ಕೆ ಮೂಲಪ್ರೇರಣೆ ಅಲ್ಲಿಂದಲೇ ದೊರೆತದ್ದು ಎನಿಸುತ್ತದೆ. ವಿಜ್ಞಾನದ ಮೇಲಿನ ಮಹಾರಾಜರ ಆಸಕ್ತಿ ಅಲ್ಲಿಂದಾಚೆಗೆ ನೂರ್ಮಡಿಯಾಗಿರಲು ಸಾಕು. ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಜಾಗ ಹುಡುಕುವಾಗ ಜಮ್ಶೆಡ್‌‌ಜಿ ಟಾಟಾ ಇಲ್ಲವೆನ್ನಲಾಗದಷ್ಟು ಜಾಗವನ್ನು, ಸಹಕಾರವನ್ನು ಮಹಾರಾಜರು ಕೊಡುವುದರ ಹಿಂದೆ ಈ ಪ್ರೇರಣೆ ನಿಸ್ಸಂಶಯವಾಗಿಯೂ ಇದೆ! 

ಇವಿಷ್ಟನ್ನೂ ಮತ್ತೆ ಏಕೆ ನೆನಪಿಸಿಕೊಳ್ಳಬೇಕಾಯ್ತೆಂದರೆ ಹತಾಷವಾಗುತ್ತಿದ್ದೇವೆ ಎನಿಸಿದಾಗಲೆಲ್ಲ, ಯುದ್ಧವನ್ನು ಕಳೆದುಕೊಂಡೇಬಿಡುತ್ತೇವೆ ಎಂದೆನಿಸಿದಾಗಲೆಲ್ಲ ಒಮ್ಮೆ ವಿವೇಕಾನಂದರಿಗೆ ನಮ್ಮ ನಾವು ತೆರೆದುಕೊಳ್ಳಬೇಕು. ಮೇಲ್ನೋಟಕ್ಕೆ ಅವರು ಹತ್ತೊಂಭತ್ತನೇ ಶತಮಾನದ ಕೊನೆಯ ಭಾಗದಲ್ಲಿ ಜೀವಿಸಿದ್ದ ಒಬ್ಬ ವ್ಯಕ್ತಿ ಮಾತ್ರ. ಆದರೆ ಅವರ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಾತುಗಳನ್ನು ಆಲಿಸಿದರೆ ಮುಂದಿನ ಹತ್ತೊಂಭತ್ತು ಶತಮಾನಗಳವರೆಗೆ ಅವರು ಜೀವಿಸಿಯೇ ಇರುತ್ತಾರೆ. ಡಿಸೆಂಬರ್ 25 ಬಂದಾಗಲೆಲ್ಲ ಒಮ್ಮೆ ಅವರ ಸಂಕಲ್ಪಶಕ್ತಿಯ ಸಾಮರ್ಥ್ಯ ಕಣ್ಮುಂದೆ ಹಾದುಹೋಗಿಬಿಡುತ್ತದೆ. ಅವರ ಮಾರ್ಗದಲ್ಲಿ ಹೆಜ್ಜೆ ಹಾಕುವ ತರುಣರು ಹೆಚ್ಚಾದಷ್ಟು ನಮ್ಮ ಶಕ್ತಿ ವೃದ್ಧಿಯಾಗುತ್ತದೆ. 

ಭಾರತವ ಜೋಡಿಸಿದವಗೆ ಅಖಂಡ ಭಾರತದ ಕೊಡುಗೆ

ಭಾರತವ ಜೋಡಿಸಿದವಗೆ ಅಖಂಡ ಭಾರತದ ಕೊಡುಗೆ

ಇದನ್ನೇ ವಿಪರ್ಯಾಸ ಅನ್ನೋದು. ಭಾರತ್ ಜೊಡೊ ಎಂದು ಪಾದಯಾತ್ರೆ ಮಾಡಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸುವ ಪ್ರಯತ್ನ ಮಾಡಿದ ಕಾಂಗ್ರೆಸ್ಸಿಗರು ಎಂದೂ ಹೆಮ್ಮೆಯಿಂದ ಸರದಾರ್ ಪಟೇಲರನ್ನು ಸ್ಮರಿಸಿಕೊಳ್ಳಲೇ ಇಲ್ಲ. ಅತ್ತ ಪಟೇಲರು ಕಾಂಗ್ರೆಸ್ಸಿನ ನಾಯಕರಾದರೂ ಅವರು ಈಗಿನ ಭಾರತ ನಿರ್ಮಿಸಿಕೊಟ್ಟ ಸಂಭ್ರಮ ಇರೋದು ಬಿಜೆಪಿಗರಿಗೆ. ನರೇಂದ್ರಮೋದಿ ಬರುವವರೆಗೂ ಪಟೇಲರ ಸ್ಮರಣೆ ವ್ಯಾಪಕವಾಗಿ ಭಾರತದಲ್ಲಿ ನಡೆಯಲೇ ಇಲ್ಲ. ಈಗ ಕಾಂಗ್ರೆಸ್ಸಿಗರು ಭಾರತವನ್ನು ಜೋಡಿಸಲು ಪಾದಯಾತ್ರೆ ನಡೆಸಿದ್ದರೆ ಮೋದಿ ಪಟೇಲರ ಗೌರವಕ್ಕೆಂದು ಎಲ್ಲೆಡೆ ಏಕತಾ ಓಟವನ್ನೇ ನಡೆಸುವಂತೆ ಪ್ರೇರೇಪಿಸಿರುವುದು ಅವರ ಆಲೋಚನೆಗಳು ಇವರಿಗಿಂತ ಎಷ್ಟೊಂದು ಮುಂದಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಕಾಂಗ್ರೆಸ್ಸಿಗರ ದೈನೇಸಿ ಸ್ಥಿತಿ ಎಂಥದ್ದೆಂದರೆ ಅವರು ತಮ್ಮ ಪಕ್ಷದವರೇ ಆಗಿದ್ದ ಪಟೇಲರನ್ನು ಹೆಮ್ಮೆಯಿಂದ ಸಂಭ್ರಮಿಸಲೂ ಆಗದಂತಾಗಿದ್ದಾರೆ. 

ಇರಲಿ, ದೇಶವನ್ನು ಒಗ್ಗೂಡಿಸುವ ಪಟೇಲರ ಸಾಹಸ ಸಾಮಾನ್ಯವಾದ್ದಾಗಿರಲಿಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ದೇಶ ವಿಭಜನೆಯ ನೆಹರೂ-ಜಿನ್ನಾ ಆಲೋಚನೆಗೆ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಸಂದಿಗ್ಧ ಬಂದಿತ್ತು. ಆದಷ್ಟೂ ಅದನ್ನು ಮುಂದೆ ತಳ್ಳುವ ಪ್ರಯತ್ನವನ್ನು ಪಟೇಲರು ಮಾಡಿದರಾದರೂ ಕೊನೆಗೂ ಬಾಗಬೇಕಾಯ್ತು. ಉಳಿದವರೆಲ್ಲ ಸ್ವತಂತ್ರ ಭಾರತದ ಪ್ರಮುಖ ಹುದ್ದೆಯನ್ನಲಂಕರಿಸುವ ಕನಸು ಕಾಣುತ್ತಿದ್ದರೆ, ಪಟೇಲರು ಭಾರತ ಭೂಪಟವನ್ನು ನಿರ್ಮಿಸುವ ಧಾವಂತದಲ್ಲಿದ್ದರು. ಖಂಡಿತ ಹೌದು. ಭಾರತ ಬ್ರಿಟೀಷರ ಆಗಮನದ ನಂತರವೇ ರಾಷ್ಟ್ರವಾಯ್ತು ಎಂದು ಕೆಲವರು ಮೂರ್ಖರು ಹೇಳಿಕೊಳ್ಳುವುದಿದೆ. ಮೌರ್ಯರ, ಗುಪ್ತರ, ಮರಾಠರ ಕಾಲದ ಸಾಮ್ರಾಜ್ಯಗಳೆಲ್ಲ ಇಡಿಯ ಭಾರತವನ್ನು ಒಂದುಗೂಡಿಸಿತ್ತು. ಬ್ರಿಟೀಷರು ಬರದೇ ಹೋಗಿದ್ದರೆ ಮೊಘಲ್ ಶಾಹಿಯನ್ನು ಮೆಟ್ಟಿನಿಂತು ಭಾರತದ ಪುನರ್ ನಿರ್ಮಾಣ ಮಾಡಿದ ಕೀರ್ತಿ ಮರಾಠರ ತೆಕ್ಕೆಗೆ ಹೋಗಿರುತ್ತಿತ್ತು. ಪ್ರತೀ ಬಾರಿ ದೇಶ ಸಂಕಟಕ್ಕೆ ಸಿಲುಕಿದಾಗಲೆಲ್ಲ ಅದರೊಳಗಿಂದಲೇ ಶಕ್ತಿಯೊಂದು ಜಾಗೃತವಾಗಿ ಬಂದು, ಅದನ್ನು ಪುನರ್ ರೂಪಿಸುವ ಘಟನೆಗಳು ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಆದರೆ ಎಡಪಂಥೀಯರ ವಾದವೇನೆಂದರೆ ಬ್ರಿಟೀಷರ ಆಗಮನದ ಮುನ್ನ ಭಾರತ ರಾಜ್ಯಗಳಾಗಿ ಹಂಚಿಹೋಗಿದ್ದು ಸಮಗ್ರ ಭಾರತದ ಕಲ್ಪನೆ ಯಾರಿಗೂ ಇರಲಿಲ್ಲ ಅಂತ. ಅಚ್ಚರಿಯೇನು ಗೊತ್ತೇ? ಬ್ರಿಟೀಷರು ಭಾರತವನ್ನು ಬಿಡುವಾಗಲೂ ಈ ದೇಶದಲ್ಲಿ ರಾಜ-ರಜವಾಡೆಗಳಿಗೆ ಕೊರತೆಯಿರಲಿಲ್ಲ. ಹೀಗಾಗಿಯೇ ಸ್ವಾತಂತ್ರ್ಯ ಬಂದೊಡನೆ ಪಟೇಲರಿಗಿದ್ದ ಸವಾಲೇನೆಂದರೆ 565ರಷ್ಟು ರಾಜ ಮನೆತನಗಳನ್ನು ಮತ್ತು ಅವರ ಪಾಲಿನ ಸಾಮ್ರಾಜ್ಯವನ್ನು ಭಾರತದೆಡೆಗೆ ಸೆಳೆದುಕೊಳ್ಳುವುದಾಗಿತ್ತು. ಮೌಂಟ್ ಬ್ಯಾಟನ್ನಿನೊಂದಿಗೆ ನೆಹರೂಗೆ ಮತ್ತು ಪಟೇಲರಿಗಿದ್ದ ಸಂಬಂಧಗಳು ಬೇರೆ-ಬೇರೆಯೇ. ಪಟೇಲರು ಮುತ್ಸದ್ದಿಯಂತೆಯೇ ಅವನೊಂದಿಗೆ ವ್ಯವಹರಿಸುತ್ತಿದ್ದರು. ಹೀಗಾಗಿ ಸ್ಪಷ್ಟ ಮಾತುಗಳಲ್ಲಿ ಸ್ವಾತಂತ್ರ್ಯ ಎಂಬ ಹಣ್ಣಿನ ಬುಟ್ಟಿಯನ್ನು ನನಗೆ ಕೊಡುವಾಗ 565ಕ್ಕಿಂತ ಒಂದೇ ಸೇಬುಹಣ್ಣು ಕಡಿಮೆಯಿದ್ದರೂ ಸ್ವೀಕರಿಸಲಾರೆ ಎಂದುಬಿಟ್ಟಿದ್ದರು. ಹಾಗಂತ ಅವನ ಮೇಲೆ ಭಾರ ಹೊರೆಸಿ ಸುಮ್ಮನಾಗಲಿಲ್ಲ. ತಾವೇ ಭಿನ್ನ-ಭಿನ್ನ ಸ್ವರೂಪದಲ್ಲಿ ಇವರನ್ನು ಒಲಿಸಿಕೊಳ್ಳುವ ಕಾರ್ಯಕ್ಕೆ ಮುಂದೆ ನಿಂತರು. ಸಮಸ್ಯೆಗಳೇನು ಕಡಿಮೆಯಿರಲಿಲ್ಲ. ಭೋಪಾಲದ ನವಾಬ ಮೊದಲಿಗೆ ಬಂಡಾಯ ಬಾವುಟ ಬೀಸಿ ಸ್ವತಂತ್ರವಾಗಿರುತ್ತೇನೆಂದರೆ, ತಿರುವಾಂಕುರಿನ ದಿವಾನ ಒಂದು ಹೆಜ್ಜೆ ಮುಂದೆಹೋಗಿ ಪಾಕಿಸ್ತಾನದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿ ಮಾಡಲು ಅಧಿಕಾರಿಯನ್ನು ನೇಮಿಸುವ ಮಾತನಾಡಿದ. ಬಿಕಾನೇರ್, ಪಟಿಯಾಲ, ಜೈಪುರ, ಜೋಧ್‌ಪುರಗಳ ಅರಸರು ಭಾರತದೊಂದಿಗೆ ಇರಬಯಸಿದರು. ಮೌಂಟ್ ಬ್ಯಾಟನ್ ಒಳಗೊಳಗೇ ಸಂಭ್ರಮಿಸಿರಲು ಸಾಕು. ತಾವು ಬಿಟ್ಟುಹೋದಾಗ ಭಾರತ ಛಿದ್ರ ಛಿದ್ರವಾಗುವುದನ್ನು ನೋಡಿ ಆನಂದಿಸಬೇಕಿತ್ತು; ಭಾರತೀಯರಿಗೆ ಆಳುವ ಸಾಮರ್ಥ್ಯವಿಲ್ಲ, ಆಳಿಸಿಕೊಳ್ಳುವ ಯೋಗ್ಯತೆಯಷ್ಟೆ ಎಂಬುದನ್ನು ಸಾಬೀತುಪಡಿಸಬೇಕಿತ್ತು. ಸರದಾರರು ಅವನ ಆಕಾಂಕ್ಷೆಗಳಿಗೆ ತಣ್ಣೀರೆರೆಚಿಬಿಟ್ಟರು! 

ಅವರ ಶೈಲಿ ಗಾಂಧಿಯದ್ದೋ, ನೆಹರೂವಿನದ್ದೋ ಅಥವಾ ಈಗಿನ ಮನಮೋಹನ್, ಅರವಿಂದ್ ಕೇಜ್ರಿವಾಲ್‌ಗಳದ್ದೋ ಅಲ್ಲ. ಪಾಕಿಸ್ತಾನ ಏನು ಕೊಡುವೆನೆನ್ನುತ್ತದೆಯೋ ಅದಕ್ಕಿಂತ ಹೆಚ್ಚಿನದ್ದನ್ನು ಈ ರಾಜರುಗಳಿಗೆ ನೀಡುವೆನೆನ್ನುತ್ತಾ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವ ತುಷ್ಟೀಕರಣದ ನೀತಿಯಲ್ಲ. ರಾಜರುಗಳ ಆತ್ಮಗೌರವಕ್ಕೆ ಬೆಲೆಕೊಟ್ಟು, ಪ್ರೀತಿಯಿಂದ ಕೇಳುತ್ತಾ ಅಗತ್ಯಬಿದ್ದರೆ ಅವರನ್ನು ಬೆದರಿಸಿಯೂ ಬಗ್ಗಿಸುವ ಅಕ್ಷರಶಃ ಭಾರತೀಯ ವಿಚಾರಧಾರೆ, ಥೇಟು ನರೇಂದ್ರಮೋದಿಯಂತೆ. ಆಗಸ್ಟ್ 15ಕ್ಕೆ ಭಾರತ ಸ್ವತಂತ್ರಗೊಳ್ಳಬೇಕು. ಪಟೇಲರು ಮೇ ತಿಂಗಳಲ್ಲೇ ಜೋಧ್‌ಪುರದ, ನವನಗರದ, ಪಟಿಯಾಲದ, ಕಾಥಿಯಾವಾಡದ ರಾಜರುಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಅವರು ಬಂದಿದ್ದಾರೆಂದು ಗೊತ್ತಾದಾಗ ತಾವೇ ಬಾಗಿಲ ಬಳಿ ಬಂದು ಗೌರವದಿಂದ ಸ್ವಾಗತಿಸಿ, ಪ್ರೀತಿಯಿಂದ ಮಾತನಾಡಿಸುತ್ತಾ ಭಾರತದೊಂದಿಗೆ ವಿಲೀನಗೊಳಿಸುವ ಮಾತುಕತೆಯಾಡುತ್ತಿದ್ದರು. ಅವರ ಮಾತಿನ ಪ್ರಭಾವ ಹೇಗಿತ್ತೆಂದರೆ ಭಾರತದೊಂದಿಗೆ ಸೇರಿಕೊಳ್ಳುವ ಮೊದಲ ಸುದ್ದಿಯನ್ನು ಯಾರು ನೀಡಬೇಕೆಂಬ ಆತುರ. ಗ್ವಾಲಿಯರ್‌ನ ರಾಜ ಪತ್ರಕ್ಕೆ ಸಹಿ ಮಾಡಿದ ಮೊದಲ ರಾಜನೆನಿಸಿಕೊಂಡ. ಆ ವಿಚಾರವನ್ನು ಮುಂದಿಟ್ಟುಕೊಂಡು ಪಟೇಲರು ಒಂದಾದಮೇಲೊಂದರಂತೆ ಎಲ್ಲ ರಾಜರುಗಳನ್ನೂ ಸೆಳೆದುಕೊಳ್ಳಲಾರಂಭಿಸಿದರು. ‘ಇಂಡಿಯಾ ಇಂಡಿಪೆಂಡೆನ್ಸ್ ಆ್ಯಕ್ಟ್‌ನ ಪ್ರಕಾರ ಆಗಸ್ಟ್ 15ಕ್ಕೆ ಎಲ್ಲ ರಾಜ್ಯಗಳೂ ಮುಕ್ತಗೊಳ್ಳುತ್ತವೆ. ತಾಂತ್ರಿಕವಾಗಿ, ಕಾನೂನುಬದ್ಧವಾಗಿ ಅವು ಸ್ವತಂತ್ರವಾಗಿಬಿಡುತ್ತವೆ. ಬ್ರಿಟೀಷರು ಹೊರಟೊಡನೆ ಉಂಟಾಗಬಹುದಾದ ಉತ್ಪಾತ ಮೊದಲು ಬಲಿ ತೆಗೆದುಕೊಳ್ಳುವುದು ರಾಜ್ಯಗಳನ್ನೇ. ಭೌಗೋಳಿಕ ಇತಿ-ಮಿತಿಗಳನ್ನು ಗಮನದಲ್ಲಿರಿಸಿಕೊಂಡು ಅವರು ಸೂಕ್ತ ನಿರ್ಣಯ ಕೈಗೊಳ್ಳುವುದೊಳಿತು ಮತ್ತು ಆಗಸ್ಟ್ 15ರೊಳಗೆ ವಿಲೀನಗೊಂಡರೆ ಸರಿಯಾದೀತು’ ಎಂದೂ ಹೇಳಿದ್ದರು. ಈ ಮಾತುಗಳನ್ನು ಎಚ್ಚರಿಕೆ ಎನ್ನುವಿರೋ, ತಿಳಿವಳಿಕೆ ಎನ್ನುವಿರೋ ಅಥವಾ ಪುಸಲಾಯಿಸುವ ರೀತಿ ಎನ್ನುವಿರೋ, ಪಟೇಲರು ಎಲ್ಲವನ್ನೂ ಮಾಡಿದರು. ಆಗಸ್ಟ್ 15ರ ವೇಳೆಗೆ ಈ ಮನುಷ್ಯನ ಪ್ರಭಾವಕ್ಕೆ ಒಳಗಾಗಿ ಹೈದರಾಬಾದು, ಕಾಶ್ಮೀರದಂತಹ ಎರಡು ಸೇಬು ಮತ್ತು ಜುನಾಗಢದಂತಹ ಪೀಚುಕಾಯಿಯೊಂದನ್ನು ಬಿಟ್ಟರೆ ಉಳಿದೆಲ್ಲವೂ ಭಾರತದ ತೆಕ್ಕೆಯಲ್ಲೇ ಇತ್ತು. ನಿಜಕ್ಕೂ ಭಾರತ್ ಜೊಡೊ ಪಟೇಲರು ಅಂದೇ ಮಾಡಿಬಿಟ್ಟಿದ್ದರು. 

ಹಾಗಂತ ಕಾಂಗ್ರೆಸ್ಸಿಗರು ಬಡಾಯಿ ಕೊಚ್ಚಿಕೊಳ್ಳುವಂತಯೇ ಇಲ್ಲ. ರಾಹುಲನ ಮುತ್ತಜ್ಜ ನೆಹರೂಗೆ ಈ ಜವಾಬ್ದಾರಿಯನ್ನು ವಹಿಸಿದ್ದಿದ್ದರೆ ಇಂದು ಪಾಕಿಸ್ತಾನದಷ್ಟು ಪುಟ್ಟ ಭಾರತವಿರುತ್ತಿತ್ತು ಮತ್ತು ಭಾರತದಷ್ಟು ಅಗಾಧವಾದ ಪಾಕಿಸ್ತಾನವಿರುತ್ತಿತ್ತು. ಪುರಾವೆಯಿಲ್ಲದೇ ಈ ಮಾತನ್ನು ಹೇಳುತ್ತಿಲ್ಲ. 562 ರಾಜ್ಯಗಳನ್ನು ಭಾರತದೊಂದಿಗೆ ತಮ್ಮ ಮಾತುಗಳಿಂದಲೇ ವಿಲೀನಗೊಳ್ಳುವಂತೆ ಮಾಡಿದ ಸರದಾರ್ ಪಟೇಲರಿಂದ ನೆಹರೂ ಕಾಶ್ಮೀರವೊಂದನ್ನು ಕಸಿದರು. ಅದನ್ನು ವಿಲೀನಗೊಳಿಸುವ ಹೊಣೆಗಾರಿಕೆ ತನ್ನದ್ದು ಎಂದರು. ಆಗಲೂ ಏಕಾಕಿ ಪಾಕಿಸ್ತಾನದ ಕಡೆಯಿಂದ ದಾಳಿಯಾದಾಗ ರಾಜ ಹರಿಸಿಂಗನಿಂದ ವಿಲೀನಪತ್ರ ಬರದೇ ಭಾರತ ಸಹಾಯ ಮಾಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕಳಿಸಿದ್ದು ಸರದಾರ್ ಪಟೇಲರೇ. ಬಹುಸಂಖ್ಯಾತ ಹಿಂದೂಗಳಿರುವ ಜುನಾಗಢಕ್ಕೆ ಜಿನ್ನಾ ಕೈ ಹಾಕಿದ್ದಕ್ಕೆ ಪಟೇಲರ ಪ್ರತೀಕಾರದ ಕ್ರಮವಾಗಿತ್ತು ಅದು. ಪೂರ್ಣ ಸರದಾರರ ಕೈಯ್ಯಲ್ಲೇ ಇದ್ದಿದ್ದರೆ ಇಂದು ಕಾಶ್ಮೀರದ ಕಿರಿಕಿರಿಯೇ ಇರುತ್ತಿರಲಿಲ್ಲ. ಯುದ್ಧದ ನಟ್ಟನಡುವೆ ನಾವು ಗೆಲುವಿನ ಹೊಸ್ತಿಲಲ್ಲಿದ್ದಾಗಲೇ ನೆಹರೂ ಮಧ್ಯ ಪ್ರವೇಶಿಸಿದರು. ಇಡಿಯ ಪ್ರಕರಣವನ್ನು ವಿಶ್ವಸಂಸ್ಥೆಗೊಯ್ದು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡರು. ಅದು ಪಾಕಿಸ್ತಾನಕ್ಕೆ ವರದಾನವೇ ಆಯ್ತು. ಕಾಶ್ಮೀರವನ್ನು ಮುಂದಿಟ್ಟುಕೊಂಡು ಭಾರತವನ್ನು ಹಳಿಯುವ ಮತ್ತು ಕಾಶ್ಮೀರದ ಮೂಲಕ ಭಾರತದಲ್ಲಿ ನಿರಂತರವಾಗಿ ಭಯೋತ್ಪಾದನೆಯನ್ನು ರಫ್ತು ಮಾಡುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಇಂದು ಭಾರತ ಇಸ್ಲಾಂ ಮತಾಂಧತೆಗೆ ಒಳಗಾಗಿ ನರಳುತ್ತಿದೆಯಲ್ಲ, ಬಹುಪಾಲು ಕೊಡುಗೆ ನೆಹರೂರವರದ್ದೇ. ಹೀಗಾಗಿಯೇ ಭಾರತ್ ಜೊಡೊ ಸಂದರ್ಭದಲ್ಲಿ ಎಲ್ಲಿಯಾದರೂ ಕಾಂಗ್ರೆಸ್ಸಿಗರು ಈ ಕಥೆಯನ್ನು ಹೇಳಬಹುದೇ ಎಂದು ಕಾಯುತ್ತ ಕುಳಿತಿದ್ದೆ. ಕೊನೆಯ ಪಕ್ಷ ಭಾಜಪದವರಾದರೂ ಈ ಪ್ರಶ್ನೆಯನ್ನು ಎತ್ತುತ್ತಾರೇನೊ ಎಂದುಕೊಂಡರೆ ಅದೂ ಆಗಲಿಲ್ಲ. ಅಚ್ಚರಿಯೇನು ಗೊತ್ತೇ? ಪಟೇಲರೇನಾದರೂ ಹೈದರಾಬಾದಿನ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯನ್ನು ನೆಹರೂಗೆ ಕೊಟ್ಟುಬಿಟ್ಟಿದ್ದರೆ ಇಂದು ಕರ್ನಾಟಕದ ಪಕ್ಕದಲ್ಲೂ ಒಂದು ಪಾಕಿಸ್ತಾನವಿರುತ್ತಿತ್ತು! 

ಪಟೇಲರೇನೋ ಭಾರತವನ್ನು ಈ ರೂಪಕ್ಕೆ ತಂದುಕೊಟ್ಟರು. ನಾವೀಗ ಅಖಂಡ ಭಾರತವನ್ನು ನಿರ್ಮಾಣ ಮಾಡಿ ಪಟೇಲರಿಗೆ ಗೌರವ ಸಲ್ಲಿಸಬೇಕಿದೆ. ಅಖಂಡ ಭಾರತದ ಕನಸು ವ್ಯಾಪಕವಾಗಿ ಕಾಣುವುದಕ್ಕೆ ಒಂದು ಕಾರಣವೂ ಇದೆ. ನಮಗೆಲ್ಲರಿಗೂ ಕಲ್ಪನಾ ದಾರಿದ್ರ್ಯವಿದೆ. 75 ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂದಿಬಿಟ್ಟರೆ ಉಳಿದವರು ಅಖಂಡ ಭಾರತವನ್ನು ತಮ್ಮ ಕನಸೆಂದು ಪರಿಗಣಿಸಲೇ ಇಲ್ಲ. ಅದನ್ನು ಮರೆತುಹೋದ ಇತಿಹಾಸವಾಗಿಸಿಬಿಟ್ಟರು. ಪಾಕಿಸ್ತಾನ-ಬಾಂಗ್ಲಾಗಳು ಖಡ್ಗ ಹಿಡಿದು ಕತ್ತರಿಸಿದ ಭಾರತಮಾತೆಯ ಕೈಗಳು ಎಂದು ಮರೆಯುವುದಾರೂ ಹೇಗೆ? ಆ ದುಃಖಮಯ ಕ್ಷಣಗಳನ್ನು ನೋಡಿದ ಅನೇಕ ಮಂದಿ ಇಂದಿಗೂ ಜೀವಂತವಾಗಿದ್ದಾರಲ್ಲ! ಗಾಂಧಾರವೆಂದು ಕರೆಯಲ್ಪಡುತ್ತಿದ್ದ ಈಗಿನ ಅಫ್ಘಾನಿಸ್ತಾನ ನಮ್ಮಿಂದ ಬೇರೆಯಾದ್ದನ್ನು ನೋಡಿದವರು ಇಂದು ಉಳಿದಿಲ್ಲ ಒಪ್ಪಿಕೊಳ್ಳುವೆ. ಆದರೆ ಪಾಕಿಸ್ತಾನದ ಕಥೆ ಹಾಗಲ್ಲ. ನಮ್ಮ ಭೂಮಿಯನ್ನು ಮತದ ಹೆಸರಲ್ಲಿ ತುಂಡರಿಸಿ ತಮ್ಮದಾಗಿಸಿಕೊಂಡಿದ್ದನ್ನು ಒಪ್ಪಿಕೊಳ್ಳುವುದು ಹೇಗೆ? ಹೀಗಾಗಿಯೇ ಪೀಳಿಗೆಯಿಂದ ಪೀಳಿಗೆಗೆ ಖಡ್ಗ ಹಿಡಿದು ಮತಾಂತರ ಮಾಡಿ, ಅವರನ್ನು ಹಿಂದೂಗಳ ವಿರುದ್ಧವೇ ಎತ್ತಿಕಟ್ಟಿ, ತಮಗಾಗಿ ಪ್ರತ್ಯೇಕ ರಾಷ್ಟ್ರವನ್ನೇ ನಿರ್ಮಿಸಿಕೊಂಡ ಮಂದಿ ಇವರು ಎಂದು ನೆನಪಿಸುತ್ತಿರಬೇಕಲ್ಲ. ಇಲ್ಲವಾದರೆ ಅಫ್ಘಾನಿಸ್ತಾನವೂ ನಮ್ಮದಾಗಿತ್ತು ಎನ್ನುವುದನ್ನೇ ಹೇಗೆ ಮರೆತೇ ಹೋಗಿದ್ದೇವೋ ಅದೇ ರೀತಿ ಪಾಕಿಸ್ತಾನವೂ ಒಂದು ಕಾಲದಲ್ಲಿ ನಮ್ಮ ಭಾಗವಾಗಿತ್ತು ಎಂಬುದನ್ನು ಮುಂದಿನ ಪೀಳಿಗೆಗೆಳು ಮರೆತುಬಿಡುತ್ತವೆ. ಕಳೆದ 75 ವರ್ಷಗಳಿಂದ ಏರುತ್ತಿರುವ ಮುಸಲ್ಮಾನರ ಜನಸಂಖ್ಯೆ, ಹೊರಗಡೆಯಿಂದ ನಿರಾಶ್ರಿತರನ್ನು ಒಳಸೇರಿಸಿಕೊಂಡು ಜನಸಂಖ್ಯಾಂಕಿಯನ್ನು ಬದಲಿಸಲು ಅವರು ಮಾಡುತ್ತಿರುವ ಯತ್ನ, ಇವೆಲ್ಲದರ ಕುರಿತಂತೆ ಮಾತನಾಡುತ್ತಾ ನಾವು ಈಗಿರುವ ಭಾರತವನ್ನು ಉಳಿಸಿಕೊಂಡರೆ ಸಾಕು ಎಂಬ ಹೀನಸ್ಥಿತಿಗೆ ತಲುಪಿಬಿಟ್ಟಿದ್ದೇವೆ. ಅದರರ್ಥ ಪಾಕಿಸ್ತಾನವನ್ನು ಇನ್ನೆಂದಿಗೂ ಕೇಳುವುದಿಲ್ಲ ಎಂದೇ. ಎಲ್ಲಿಯವರೆಗೂ ರಕ್ಷಣಾತ್ಮಕ ನಿಲುವಿನಲ್ಲಿರುತ್ತೇವೆಯೋ ಅಲ್ಲಿಯವರೆಗೂ ನಾವು ನಮ್ಮನ್ನುಳಿಸಿಕೊಳ್ಳಲು ಹೆಣಗಾಡುತ್ತಲೇ ಇರುತ್ತೇವೆ. ಸ್ವಲ್ಪ ಆಕ್ರಮಕವಾಗಿ ಮುನ್ನುಗ್ಗಬೇಕಿದೆ. ಈ ಬಾರಿಯ ಆಕ್ರಮಣ ಭಿನ್ನ ಭಿನ್ನ ಸ್ವರೂಪಗಳಲ್ಲಿ. ಮೊದಲನೆಯದ್ದು ಮಾನಸಿಕವಾಗಿ ಸಮಾಜವನ್ನು ಈ ದಿಕ್ಕಿಗೆ ತಯಾರು ಮಾಡಬೇಕಿದೆ. ಭಾವನಾತ್ಮಕವಾಗಿ ಭಿನ್ನ ಭಿನ್ನ ಕಾರ್ಯಕ್ರಮಗಳ ಮೂಲಕ ಜೋಡಿಸಿ, ಭಾರತದ ವಿಸ್ತಾರವನ್ನು ಮತ್ತೆ ನೆನಪಿಸಬೇಕಿದೆ. ಎರಡನೆಯದ್ದು, ಬೌದ್ಧಿಕವಾಗಿ ಇದಕ್ಕೆ ಬೇಕಾಗಿರುವ ಸರಕು ನಿರ್ಮಾಣ ಮಾಡಿ ಭಾರತದ ಮರುನಿರ್ಮಾಣದ ಅಗತ್ಯವನ್ನು ಒತ್ತಿ ಹೇಳಬೇಕಿದೆ. ಮೂರನೆಯದ್ದು, ಅಳಿದುಳಿದಿರುವ ಭಾರತವನ್ನು ಉಳಿಸಿಕೊಂಡರೆ ಸಾಕು ಎಂಬ ದೈನ್ಯ ಮನೋಭಾವವನ್ನು ಕೊಡವಿಕೊಂಡು ಭಾರತದಲ್ಲಿ ಧರ್ಮವನ್ನು ಬಿಟ್ಟುಹೋಗಿರುವವರನ್ನು ಮರಳಿ ತರುವೆವಲ್ಲದೇ ಪಾಕಿಸ್ತಾನದಲ್ಲಿರುವ ಮಂದಿಯನ್ನೂ ಮೂಲಧರ್ಮಕ್ಕೆ ಕರೆದುಕೊಂಡು ಬರುತ್ತೇವೆಂಬ ಆಕ್ರಮಕ ಆಲೋಚನೆಯನ್ನು ಮಾಡಬೇಕಿದೆ. ಜಿಡಿಪಿಯ ದೃಷ್ಟಿಯಿಂದಲೂ ಸಂಪತ್ತಿನ ದೃಷ್ಟಿಯಿಂದಲೂ ಸಾಮರ್ಥ್ಯದ ದೃಷ್ಟಿಯಿಂದಲೂ ಭಾರತದ ಎದುರಿಗೆ ಅರೆಕ್ಷಣ ನಿಲ್ಲದ ತಾಕತ್ತಿಲ್ಲದ ಪಾಕಿಸ್ತಾನ ಇಡೀ ಭಾರತವನ್ನೇ ಆಪೋಷನ ತೆಗೆದುಕೊಳ್ಳುವ ಕನಸು ಕಾಣುತ್ತಿದ್ದರೆ, ಭಾರತೀಯರಾಗಿ ನಾವು ಕೈಕಟ್ಟಿ ಕುಳಿತುಕೊಳ್ಳುವುದೇನು? ಕಲಾಂರು ಹೇಳುತ್ತಾರಲ್ಲ, ಚಂದ್ರನನ್ನೇ ಗುರಿಯಾಗಿಸಿಕೊಂಡರೆ ಮನೆಯ ತಾರಸಿಗಾದರೂ ತಲುಪಬಹುದು. ತಾರಸಿಯನ್ನೇ ಗುರಿಯಾಗಿಸಿಕೊಂಡರೆ ನೆಲದಿಂದ ಮೇಲೇಳಲೂ ಸಾಧ್ಯವಾಗದು! ನಾವೀಗ ನಮ್ಮ ಗುರಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕಿದೆ. ಭಾರತ್ ಜೊಡೊ ಪಟೇಲರು ಮಾಡಿಯಾಗಿದೆ. ನಾವೀಗ ಅಖಂಡ ಭಾರತ ಜೊಡೊದ ಸಂಕಲ್ಪ ಮಾಡಬೇಕಿದೆ..

ಆಲೋಚನಗೆ ಅವಕಾಶವಿರುವುದು ಹಿಂದೂಧರ್ಮದಲ್ಲಿ ಮಾತ್ರ!

ಆಲೋಚನಗೆ ಅವಕಾಶವಿರುವುದು ಹಿಂದೂಧರ್ಮದಲ್ಲಿ ಮಾತ್ರ!

‘ವ್ಯಕ್ತಿಯೊಬ್ಬ ಪಶ್ಚಿಮದ ಮಾದರಿಯ ವಿದ್ಯೆಯನ್ನು ಸಾಕಷ್ಟು ಪಡೆದಿರಬಹುದು. ಆದರೆ ಅವನಿಗೆ ಧರ್ಮದ ಎ ಬಿ ಸಿಯೂ ಗೊತ್ತಿರಬೇಕೆಂದಿಲ್ಲ. ಅವನನ್ನು, ನಿನಗೆ ಆತ್ಮವನ್ನು ಊಹಿಸಿಕೊಳ್ಳಲು ಸಾಧ್ಯವೇ? ಆತ್ಮವಿಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವಿಯಾ? ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿದೆಯೇ? ಎಂದೆಲ್ಲಾ ಕೇಳಿ ನೋಡಿ. ಉತ್ತರ ಇಲ್ಲವೆಂದಾದಲ್ಲಿ ಆತನ ಪಾಲಿನ ಧರ್ಮ ಬರಿ ಮಾತು, ಪುಸ್ತಕ ಮತ್ತು ವೈಭವದ ಬದುಕು ಅಷ್ಟೇ’. ಹಾಗೆಂದು ಸ್ವಾಮಿ ವಿವೇಕಾನಂದರು ಪಶ್ಚಿಮದ ಜನರೆದುರು ಉದ್ಘೋಷಿಸಿದ್ದರು. ಹೀಗೆ ಹೇಳುವುದು ಅಂದಿನ ದಿನಗಳಲ್ಲಿ ಸುಲಭವಾಗಿತ್ತೆಂದು ಭಾವಿಸಬೇಡಿ. ತನ್ನ ಪ್ರಾಪಂಚಿಕ ಗೆಲುವುಗಳಿಂದ, ವೈಜ್ಞಾನಿಕ ಸಾಧನೆಗಳಿಂದ ಮೆರೆಯುತ್ತಿದ್ದ ಪಶ್ಚಿಮಕ್ಕೆ ತನ್ನನ್ನು ಮೀರಿಸುವ ಶಕ್ತಿ ಮತ್ತೊಂದಿಲ್ಲ ಎಂಬ ದುರಹಂಕಾರ ತುಂಬಿಕೊಂಡುಬಿಟ್ಟಿತ್ತು. ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ಕ್ರಿಶ್ಚಿಯನ್ನರು ಕ್ರಿಸ್ತನ ಮತದ ಕಾರಣದಿಂದಾಗಿಯೇ ಈ ವೈಭವ ಎಂದು ನಂಬಿಬಿಟ್ಟಿದ್ದರಲ್ಲದೇ ಅದನ್ನೇ ಪದೇ-ಪದೇ ಹೇಳುತ್ತಾ ಇತರರನ್ನೂ ನಂಬಿಸುವ ಧಾವಂತದಲ್ಲಿದ್ದರು. ಹಾಗೆಂದೇ ನಡೆದದ್ದು ಸರ್ವಧರ್ಮ ಸಮ್ಮೇಳನ! ಪಶ್ಚಿಮದ ಭೌತಿಕ ಸಾಧನೆಗಳ ನಡುವೆ ಧರ್ಮವನ್ನು ಪ್ರತಿಬಿಂಬಿಸುವ ಪ್ರಯತ್ನಕ್ಕಾಗಿಯೇ ವಿಶ್ವಧರ್ಮ ಸಮ್ಮೇಳನ ನಡೆದಿದ್ದು. ಮೇಲ್ನೋಟಕ್ಕೆ ವಿಶ್ವಭ್ರಾತೃತ್ವದ ಚಿಂತನೆ ಇದ್ದಂತೆ ಕಾಣುತ್ತಿದ್ದರೂ ನಿಸ್ಸಂಶಯವಾಗಿ ಕ್ರಿಶ್ಚಿಯನ್ ಮತದ ಸಾರ್ವಭೌಮತೆಯನ್ನು ಜಗತ್ತಿಗೆ ಸಾಬೀತುಪಡಿಸುವುದು ಸಮ್ಮೇಳನದ ಅಂತರಂಗದ ಉದ್ದೇಶವಾಗಿತ್ತು. ಅನೇಕ ಚಚರ್ುಗಳು ಈ ಸಮ್ಮೇಳನದಲ್ಲಿ ಕ್ರಿಶ್ಚಿಯನ್ ಮತಕ್ಕೆ ಯೋಗ್ಯವಲ್ಲದ ಇತರರೊಂದಿಗೆ ಸಮಾನ ವೇದಿಕೆ ಹಂಚಿಕೊಳ್ಳುವ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿ ಸಮ್ಮೇಳನವನ್ನೇ ಧಿಕ್ಕರಿಸಿಬಿಟ್ಟಿದ್ದವು. ಸಮ್ಮೇಳನದ ಆಯೋಜನೆಯ ಮುಖ್ಯಸ್ಥರಲ್ಲೊಬ್ಬರು ಆ ಎಲ್ಲ ಮತಗಳನ್ನೂ ಕೂರಿಸಿಕೊಂಡು ತಮ್ಮ ಮತದ ಶ್ರೇಷ್ಠತೆಯನ್ನು ಸಾಬೀತುಪಡಿಸಲು ಇದಕ್ಕಿಂತ ಒಳ್ಳೆಯ ಅವಕಾಶ ದೊರೆಯದೆಂದು ಸೂಕ್ಷ್ಮವಾಗಿ ಹೇಳಿದ್ದರೂ ಕೂಡ. ತಾನೊಂದು ಬಗೆದರೆ, ದೈವವೊಂದು ಬಗೆಯಿತು ಎನ್ನುತ್ತಾರಲ್ಲಾ, ಕೊನೆಗೆ ಆದದ್ದು ಅದೇ. ಹಿಂದೂಧರ್ಮದ ಪ್ರತಿನಿಧಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಾಮಿ ವಿವವೇಕಾನಂದರು ಹಿಂದೂಧರ್ಮವನ್ನಂತೂ ಪ್ರಭಾವಿಯಾಗಿಯೇ ಜಗತ್ತಿನ ಮುಂದೆ ಮಂಡಿಸಿದರು ನಿಜ. ಅದರೊಟ್ಟಿಗೆ ಕ್ರಿಶ್ಚಿಯನ್ನರ ಮುಖಕ್ಕೆ ಕನ್ನಡಿ ಹಿಡಿದು ಅವರ ಯೋಗ್ಯತೆಯನ್ನೂ ಪರಿಚಯಿಸಿಕೊಟ್ಟರು! ಈ ಹಿನ್ನೆಲೆಯಲ್ಲಿಯೇ ಆರಂಭದಲ್ಲಿ ಉಲ್ಲೇಖಿಸಿದ ಸ್ವಾಮೀಜಿಯವರ ಮಾತುಗಳು ಮನನಯೋಗ್ಯ.

ಹಿಂದೂಗಳನ್ನು ಮೂತರ್ಿಪೂಜಕರೆಂದು ನಿಂದಿಸುತ್ತಿದ್ದ ಕ್ರಿಶ್ಚಿಯನ್ನರಿಗೆ ವಿವೇಕಾನಂದರು ಹಿಂದೂಗಳ ಪರಿಚಯ ಮಾಡಿಕೊಟ್ಟ ರೀತಿ ಅನನ್ಯವಾಗಿತ್ತು. ‘ಬ್ಯಾಬಿಲೋನಿನ, ರೋಮನ್ನಿನ ಮೂತರ್ಿ ಪೂಜನೆಯಂತೆ ಹಿಂದೂಗಳದ್ದಲ್ಲ. ವಿಗ್ರಹದ ಮುಂದೆ ಕುಳಿತಿರುವ ಹಿಂದೂ ಕಣ್ಮುಚ್ಚಿ ಹೀಗೆ ಆಲೋಚಿಸಲು ಯತ್ನಿಸುತ್ತಾನೆ, ನಾನೇ ಅವನು. ನನಗೆ ಸಾವೂ ಇಲ್ಲ, ಹುಟ್ಟೂ ಇಲ್ಲ. ನಾನು ಅನಂತ ಅಸ್ತಿತ್ವ, ಅನಂತ ಆನಂದ ಮತ್ತು ಅನಂತ ಜ್ಞಾನ. ನಾನು ಪುಸ್ತಕದ ಚೌಕಟ್ಟಿಗೆ ಒಳಪಟ್ಟಿಲ್ಲ. ತೀರ್ಥಕ್ಷೇತ್ರಗಳ ಚೌಕಟ್ಟಿಗೂ ಒಳಪಟ್ಟಿಲ್ಲ. ನಾನೇ ಸಚ್ಚಿದಾನಂದ, ಈ ಮಾತುಗಳನ್ನು ಆತ ಪದೇ ಪದೇ ಹೇಳಿಕೊಳ್ಳುತ್ತಾನೆ. ಹೇ ಭಗವಂತ, ನಾನು ಹುಲುಮಾನವ. ನಿನ್ನನ್ನು ಕಲ್ಪಿಸಿಕೊಳ್ಳುವ ಸಾಮಥ್ರ್ಯವೂ ನನ್ನಲ್ಲಿಲ್ಲ ಎಂದು ಮತ್ತೆ ಮತ್ತೆ ಭಾವಿಸುತ್ತಾನೆ. ಆನಂತರ ತನ್ನ ಕಣ್ನನ್ನು ತೆರೆದು ಎದುರಿಗಿರುವ ಮೂತರ್ಿಯನ್ನು ಕಂಡು ಸಾಷ್ಟಾಂಗ ಪ್ರಣಾಮ ಮಾಡುತ್ತಾನೆ. ಎಲ್ಲ ಮುಗಿದಮೇಲೆ, ಹೇ ಭಗವನ್, ಈ ರೀತಿಯ ಅಪರಿಪೂರ್ಣ ಪೂಜೆ ಮಾಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿಬಿಡು ಎಂದು ಕೇಳಿಕೊಳ್ಳುತ್ತಾನೆ.’ ಹೀಗೆಂದು ಹೇಳುವ ಸ್ವಾಮೀಜಿ ಕ್ರಿಶ್ಚಿಯನ್ನರ ದೂಷಣೆಯ ಮನೋಭಾವವನ್ನು ಟೀಕಿಸುತ್ತಾರೆ. ಭಾರತೀಯರನ್ನು ಮನಸೋ ಇಚ್ಛೆ ದೂಷಿಸುವ ಈ ಕ್ರಿಶ್ಚಿಯನ್ ಮಿಷನರಿಗಳು, ಮೂತರ್ಿಪೂಜಕರು ನರಕಕ್ಕೆ ಹೋಗುತ್ತಾರೆ ಎನ್ನಲೂ ಹೇಸುವುದಿಲ್ಲ ಎನ್ನುವುದನ್ನು ನೆನಪಿಸಿಕೊಡುತ್ತಾರಲ್ಲದೇ, ಮುಸಲ್ಮಾನರೆದುರಿಗೆ ಇಂಥದ್ದನ್ನು ಹೇಳುವ ತಾಕತ್ತು ಅವರಿಗಿಲ್ಲ ಏಕೆಂದರೆ ಅವರ ಕತ್ತಿಗಳು ಆಗಿಂದಾಗ್ಯೆ ಝಳಪಿಸಲ್ಪಡುತ್ತವೆ ಎಂಬ ಅರಿವಿದೆ ಎಂಬುದಾಗಿ ಲೇವಡಿಯನ್ನೂ ಮಾಡುತ್ತಾರೆ. ಇಷ್ಟೆಲ್ಲಾ ಆದಾಗ ‘ಹಿಂದುವಾದವನು, ಮೂರ್ಖರು ಮಾತನಾಡಿಕೊಳ್ಳಲಿ ಎಂದು ಹೇಳುತ್ತಾ ನಕ್ಕು ಮುನ್ನಡೆದುಬಿಡುತ್ತಾನೆ’ ಎನ್ನುತ್ತಾರೆ. ಕ್ರಿಶ್ಚಿಯನ್ ಮಿಷನರಿಗಳೆದುರಿಗೆ ನಿಂತು ಸ್ವಾಮೀಜಿ, ‘ನೀವು ನಿಂದಿಸಲು ಮತ್ತು ಟೀಕಿಸಲೆಂದೇ ಜನರನ್ನು ತರಬೇತುಗೊಳಿಸುತ್ತೀರಿ. ಪ್ರತಿಯಾಗಿ ನಾನೇನಾದರೂ ಒಳಿತಿನ ಉದ್ದೇಶದಿಂದ ನಿಮ್ಮನ್ನು ಸ್ವಲ್ಪವಾದರೂ ನಿಂದಿಸಿಬಿಟ್ಟರೆ ನೀವು ಕುದ್ದು ಹೋಗುತ್ತೀರಿ. ನಾವು ಅಮೇರಿಕನ್ನರು. ನಾವು ಜಗತ್ತಿನ ಯಾರನ್ನು ಬೇಕಿದ್ದರೂ ಟೀಕಿಸುತ್ತೇವೆ, ನಿಂದಿಸುತ್ತೇವೆ, ಶಾಪವನ್ನೂ ಹಾಕುತ್ತೇವೆ. ಆದರೆ ನಮ್ಮನ್ನು ಮಾತ್ರ ಮುಟ್ಟಬೇಡಿ, ಎನ್ನುತ್ತೀರಿ’ ಎಂದು ಹಂಗಿಸುತ್ತಾರೆ!

ಸ್ವಾಮೀಜಿ ಇಷ್ಟಕ್ಕೇ ನಿಲ್ಲುವುದಿಲ್ಲ. ಮತ-ಪಂಥಗಳ ಜಾತಕವನ್ನೇ ಜಾಲಾಡಿಬಿಡುತ್ತಾರೆ ‘ನಿಮ್ಮ ಪೂರ್ವಜರು ಹೇಗೆ ಮತಾಂತರಗೊಂಡರೆಂಬುದು ನನಗೆ ಗೊತ್ತಿದೆ. ಅವರು ಮತಪರಿವರ್ತನೆ ಮಾಡಿಕೊಳ್ಳಲೇಬೇಕಿತ್ತು, ಇಲ್ಲವೇ ಸಾಯಬೇಕಿತ್ತು ಅಷ್ಟೆ. ಮುಸಲ್ಮಾನರಿಗಿಂತ ನೀವು ಹೆಚ್ಚಿನದ್ದೇನು ಮಾಡಬಲ್ಲಿರಿ ಹೇಳಿ? ನಾವೆಲ್ಲರೂ ಒಂದೇ ಎನ್ನುವಿರಿ ಏಕೆಂದರೆ, ನಾವು ಇತರರನ್ನು ಕೊಲ್ಲಬಹುದು ಎನ್ನುವುದಷ್ಟೇ ನಿಮ್ಮ ದೃಷ್ಟಿ. ಅರಬ್ಬರೂ ಅದನ್ನೇ ಹೇಳಿದರು. ಅದನ್ನೇ ಕೊಚ್ಚಿಕೊಂಡರು. ಆದರೆ ಈಗವರು ಎಲ್ಲಿದ್ದಾರೆ? ಹೀಗೆ ಮೆರೆದ ರೋಮನ್ನರು ಈಗೆಲ್ಲಿ? ಯಾರು ಶಾಂತಿಗಾಗಿ ಬದುಕಿದರೋ ಅವರು ಭುವಿಯನ್ನು ಆನಂದಿಸುತ್ತಾರೆ. ಉಳಿದವೆಲ್ಲಾ ಮರಳ ಮನೆಯಂತೆ. ದೀರ್ಘಕಾಲ ಉಳಿಯಲಾರದು’ ಹಾಗೆಂದು ಸ್ವಾಮೀಜಿ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಮುಂದುವರೆದು ಸ್ವಾಮೀಜಿ ‘ಇಸ್ಲಾಂ ತನ್ನ ಅನುಯಾಯಿಗಳಿಗೆ ತನ್ನ ಮತವೊಪ್ಪದವರನ್ನು ಕೊಲ್ಲಲು ಅನುಮತಿಸುತ್ತದೆ. ಕುರಾನಿನಲ್ಲಿ, ಇಸ್ಲಾಮಿನಲ್ಲಿ ನಂಬಿಕೆ ಇರಿಸದವನನ್ನು ಮತ್ತು ಈ ಮತವನ್ನು ಸ್ವೀಕರಿಸದವನನ್ನು ಕೊಲ್ಲಿರಿ ಎಂದು ಸ್ಪಷ್ಟವಾಗಿ ಹೇಳಿದೆ. ಅವರನ್ನು ಬೆಂಕಿಗೆಸೆಯಬೇಕು, ಕತ್ತಿಯಿಂದ ತುಂಡರಿಸಬೇಕು ಎಂದೂ ಹೇಳಲಾಗುತ್ತದೆ. ಈಗ ನಾವೇನಾದರೂ ಮುಸಲ್ಮಾನನಿಗೆ ಇದು ತಪ್ಪೆಂದು ಹೇಳಿದರೆ ಆತ ಸಹಜವಾಗಿಯೇ ನಮ್ಮನ್ನು ಪ್ರಶ್ನಿಸುತ್ತಾನೆ. ನನ್ನ ಪುಸ್ತಕ ಇದನ್ನು ಹೇಳಿದೆ ಎಂದೂ ಹೇಳುತ್ತಾನೆ. ಕ್ರಿಶ್ಚಿಯನ್ನರು ಮಧ್ಯೆ ಬಂದು, ನನ್ನ ಪುಸ್ತಕ ನಿನ್ನ ಪುಸ್ತಕಕ್ಕಿಂತ ಹಳೆಯದು ಎಂದರೆ, ಬುದ್ಧನ ಅನುಯಾಯಿಗಳು ನಡುವೆ ನುಸುಳಿ, ನಮ್ಮ ಪುಸ್ತಕ ನಿಮ್ಮದ್ದಕ್ಕಿಂತಲೂ ಪ್ರಾಚೀನ ಎಂದು ಕ್ರಿಶ್ಚಿಯನ್ನರಿಗೆ ಹೇಳುತ್ತಾರೆ. ಹಿಂದೂವೇನು ಕಡಿಮೆಯೇ? ಆತ ಎಲ್ಲರಿಗಿಂತಲೂ ಪ್ರಾಚೀನವಾದ್ದು ನನ್ನ ಪುಸ್ತಕ ಎನ್ನುತ್ತಾನೆ. ಆದ್ದರಿಂದಲೇ ಪುಸ್ತಕವನ್ನು ಮುಂದಿಟ್ಟುಕೊಳ್ಳುವುದು ಒಳಿತಲ್ಲ. ಕ್ರಿಸ್ತನ ಅನುಯಾಯಿಗಳು ಸರ್ಮನ್ ಆನ್ ದ ಮೌಂಟ್- ಇದನ್ನು ಶ್ರೇಷ್ಠವೆಂದರೆ, ಮುಸಲ್ಮಾನರು ಕುರಾನಿನ ನೀತಿಗಳೇ ಶ್ರೇಷ್ಠವೆನ್ನುತ್ತಾರೆ. ಇವರಿಬ್ಬರ ನಡುವೆ ನಿಣರ್ಾಯಕ ಪಾತ್ರ ಯಾರು ವಹಿಸಬೇಕು? ತೃತೀಯ ವ್ಯಕ್ತಿಯೇ ಆಗಬೇಕಲ್ಲವೇ? ಮತ್ತು ಅದು ಇನ್ನೊಂದು ಇಂಥದ್ದೇ ಪುಸ್ತಕ ಆಗಲು ಸಾಧ್ಯವೇ ಇಲ್ಲ. ಅದು ವೈಶ್ವಿಕವಾಗಿರಬೇಕು. ಪ್ರಜ್ಞೆಗಿಂತಲೂ ವಿಶ್ವವ್ಯಾಪಿಯಾಗಿರುವುದು ಮತ್ಯಾವುದಿರಲು ಸಾಧ್ಯ? ಆದರೆ ವ್ಯಕ್ತಿಯ ಈ ಆಲೋಚನೆಗಳನ್ನೊಪ್ಪದ ಕ್ರಿಶ್ಚಿಯನ್ನರು, ಪಾದ್ರಿಗಳ ಒಕ್ಕೂಟವೇ ನಿರ್ಣಯಿಸಬಲ್ಲದು ಎಂದು ವಾದಿಸುತ್ತಾರೆ. ವ್ಯಕ್ತಿಯೊಬ್ಬನ ವಿಚಾರ ದುರ್ಬಲವೆನ್ನುವುದಾದರೆ ಗುಂಪುಗೂಡಿರುವ ವ್ಯಕ್ತಿಗಳ ವಿಚಾರ ಅದಕ್ಕಿಂತಲೂ ದುರ್ಬಲವೆನ್ನುವುದನ್ನು ಮರೆಯುವಂತಿಲ್ಲ. ಮನುಕುಲ ತನ್ನ ಪ್ರಜ್ಞೆಯನ್ನು ಅನುಸರಿಸಿ ನಾಸ್ತಿಕವಾದಿಯಾಗುವುದು, ಯಾವುದೋ ಗುಂಪಿನ ಆದೇಶವನ್ನು ಸುಖಾಸುಮ್ಮನೆ ಸ್ವೀಕರಿಸಿ ಆಸ್ತಿಕನಾಗಿ ಲಕ್ಷಾಂತರ ದೇವರುಗಳನ್ನು ನಂಬುವುದಕ್ಕಿಂತಲೂ ಮೇಲು’ ಹೀಗೆನ್ನುವ ಸ್ವಾಮೀಜಿ ಆತ್ಮಸಾಕ್ಷಾತ್ಕಾರಕ್ಕಿಂತ ಮಿಗಿಲಾದ್ದು ಯಾವುದೂ ಇಲ್ಲ ಎಂಬುದನ್ನು ಅವರೆದುರು ಸಾಬೀತುಪಡಿಸುತ್ತಾರೆ. ತಮ್ಮ ಇನ್ನೊಂದು ಭಾಷಣದಲ್ಲಿ ಧರ್ಮವೊಂದರ ಮೂರು ಮುಖ್ಯ ಸಂಗತಿಗಳೆಡೆಗೆ ಎಲ್ಲರ ಗಮನ ಸೆಳೆಯುತ್ತಾರೆ. ಮೊದಲನೆಯದ್ದು ತತ್ವ, ಎರಡನೆಯದ್ದು ತತ್ವಕ್ಕೆ ಪೂರಕವಾದ ಪುರಾಣ ಮತ್ತು ಮೂರನೆಯದ್ದು ಆಚರಣೆ. ಯಾವ ಮತ-ಪಂಥಗಳೆಡೆಗೆ ಗಮನ ಹರಿಸಿದರೂ ಈ ಮೂರೂ ಇದ್ದೇ ಇರುತ್ತದೆ. ಸ್ವಾಮೀಜಿಯ ಅಭಿಪ್ರಾಯದ ಪ್ರಕಾರ ಹೊರ ಆವರಣವಾದ ಆಚರಣೆಯಲ್ಲಿಯೇ ಬಹುತೇಕರು ಮಗ್ನರಾಗುವುದಲ್ಲದೇ ಅದಕ್ಕಾಗಿ ಕಚ್ಚಾಡುತ್ತಿರುತ್ತಾರೆ. ಇತರರನ್ನು ಮತಾಂತರಗೊಳಿಸುವ ಧಾವಂತವಿರುವ ಪ್ರತಿಯೊಬ್ಬರೂ, ತಮ್ಮ ಆಚರಣೆಯನ್ನು ಹೇರಬಯಸುವ ಸಾಮಾನ್ಯ ಜನರು ಮಾತ್ರ. ತಮ್ಮ ಪುರಾಣ ಕಥೆಗಳನ್ನೇ ಅನಾಮತ್ತು ಒಪ್ಪಿಕೊಳ್ಳಬೇಕೆನ್ನುವ ಧಾಷ್ಟ್ರ್ಯ ಅವರಿಗಿದೆ. ಆಚರಣೆ ಮತ್ತು ಈ ದಂತಕಥೆಗಳ ಹಿಂದೆ ಬಿದ್ದಷ್ಟೂ ಧರ್ಮದ ತತ್ವ ಚಿಂತನೆಯಿಂದ ದೂರವಾಗಿಬಿಡುತ್ತೇವೆ. ಸಿದ್ಧಾಂತದ ಹತ್ತಿರಕ್ಕೆ ಹೋದಷ್ಟೂ ಬಾಹ್ಯಾಚರಣೆಗಳೆಲ್ಲ ಕುಸಿದುಬೀಳುತ್ತವೆ ಎಂದೆಲ್ಲಾ ಹೇಳುವ ಸ್ವಾಮೀಜಿ ಪಶ್ಚಿಮದ ಜನರನ್ನು ಮೂಲಸತ್ವದತ್ತ ಸೆಳೆದು, ‘ಕ್ರಿಸ್ತನ ವಿಚಾರಗಳಿಗೆ ಮರಳಿ, ಅಲ್ಲಿಯೇ ನಿಮ್ಮ ಸಾಕ್ಷಾತ್ಕಾರ ಅಡಗಿದೆ’ ಎನ್ನುವುದನ್ನು ನೆನಪಿಸಿಕೊಡಲು ಮರೆಯುವುದಿಲ್ಲ!

ಸರ್ವಧರ್ಮ ಸಮ್ಮೇಳನದ ಆರಂಭದಲ್ಲಿ ಸ್ವಾಮಿ ವಿವೇಕಾನಂದರನ್ನು ಪ್ರೀತಿಯಿಂದಲೇ ಸ್ವೀಕರಿಸಿದ ಕ್ರಿಶ್ಚಿಯನ್ನರು ಬರಬರುತ್ತಾ ಎದುರು ನಿಲ್ಲಲಾರಂಭಿಸಿದರು. ಸಂಘಟಕರಲ್ಲಿ ಪ್ರಮುಖನಾದ ಬೊರೊಸ್ ವಿವೇಕಾನಂದರಿಗೆ ಸಿಕ್ಕ ಅಭೂತಪೂರ್ವ ಗೌರವವನ್ನು ಬಲು ಪ್ರೀತಿಯಿಂದಲೇ ಬಣ್ಣಿಸಿದ್ದು ನಿಜವಾದರೂ ಆನಂತರದ ದಿನಗಳಲ್ಲಿ ಮದ್ರಾಸಿಗೆ ಬಂದು ವಿವೇಕಾನಂದರ ಕುರಿತಂತೆ ಸಾಕಷ್ಟು ಸುಳ್ಳುಗಳ ಪ್ರಚಾರವನ್ನು ಮಾಡಿದ. ಇದು ಪಶ್ಚಿಮದಲ್ಲಿ ವಿವೇಕಾನಂದರು ಕ್ರಿಸ್ತಮತದ ಮೇಲೆ ಉಂಟುಮಾಡಿದ ಆಘಾತದ ಅಡ್ಡಪರಿಣಾಮವಾಗಿತ್ತು ಅಷ್ಟೆ! ಅಂದಿನ ಪತ್ರಿಕೆಯೊಂದು ವಿವೇಕಾನಂದರ ಭಾಷಣದ ಪ್ರಭಾವವನ್ನು ಬಣ್ಣಿಸುತ್ತಾ ಅವರ ಮಾತುಗಳನ್ನು ಕೇಳಲು ಜನ ಧಾವಿಸುತ್ತಿದ್ದ ಪರಿಯನ್ನು ವಿವರಿಸುತ್ತದೆ. ಅದರ ಮುಕ್ಕಾಲುಪಾಲು ಅಮೆರಿಕನ್ ಸ್ತ್ರೀಯರೇ ಇದ್ದುದನ್ನು ಗುರುತಿಸುತ್ತದೆ ಕೂಡ. ಸ್ವಾಮೀಜಿ ಭವಿಷ್ಯದ ಪೀಳಿಗೆಯನ್ನು ವೈಚಾರಿಕವಾಗಿಸಲು ಮಾಡಿದ ಪ್ರಯಾಸ ಎಂಥದ್ದೆಂಬುದು ಅರಿವಾಗುವುದು ಆಗಲೇ. ಹಾಗಂತ ಅವರು ಭಾವನಾತ್ಮಕವಾದ ಮಾತುಗಳಿಂದ ಅಷ್ಟೇ ತಮ್ಮ ವಿಚಾರವನ್ನು ಮುಟ್ಟಿಸುವ ಪ್ರಯತ್ನ ಮಾಡಲಿಲ್ಲ. ವಿಜ್ಞಾನದ ಸಹಕಾರ ಪಡೆದು ಧಾಮರ್ಿಕ ಸಂಗತಿಗಳನ್ನು ಮನಮುಟ್ಟುವಂತೆ ವಿವರಿಸಿದರು. ಎಲ್ಲರನ್ನೂ ಒಂದೇ ಮತಕ್ಕೆ ಸೇರಿಸಿಬಿಡುವ, ಒಂದೇ ರೀತಿ ಕಾಣುವಂತೆ ಮಾಡಿಬಿಡುವ, ಒಂದೇ ಪುಸ್ತಕವನ್ನು, ಒಬ್ಬನೇ ವ್ಯಕ್ತಿಯನ್ನು ಅನುಸರಿಸುವ ಏಕರೂಪತೆ ತರುವ ಕ್ರಿಶ್ಚಿಯನ್ನರ, ಮುಸಲ್ಮಾನರ ವಾದವನ್ನು ಅವರು ಸಮರ್ಥವಾಗಿ ಖಂಡಿಸಿದರು. ಈ ರೀತಿಯ ಏಕರೂಪತೆ ಅಸಾಧ್ಯವೆಂದುದಲ್ಲದೇ ಭಿನ್ನತೆ ಇರುವುದರಿಂದಲೇ ಸೃಷ್ಟಿ ಇದೆ ಎಂಬುದನ್ನು ಒಪ್ಪಿಸಿದರು. ಕೋಣೆಯೊಂದರಲ್ಲಿ ಶಾಖವಿದೆ ಎಂದಿಟ್ಟುಕೊಳ್ಳಿ. ಅದು ಶಾಖವಿಲ್ಲದೆಡೆಗೆ ಹರಿಯುವ ಪ್ರಯತ್ನ ಮಾಡಿಯೇ ಮಾಡುತ್ತದೆ. ಒಂದು ವೇಳೆ ಹಾಗೆ ಶಾಖ ಹರಿಯುವುದು ನಿಂತಿತೆಂದರೆ ಆ ಕೋಣೆಯಲ್ಲಿ ಇನ್ನು ಶಾಖದ ಅನುಭೂತಿಯಾಗುವುದಿಲ್ಲವೆಂದೇ ಅರ್ಥ. ಹಾಗೆಯೇ ಭಿನ್ನತೆ ಇರುವುದರಿಂದಲೇ ನಮಗೆ ಎಲ್ಲ ಸಂಗತಿಗಳು ಅರಿವಿಗೆ ಬರುತ್ತವೆ. ಏಕರೂಪತೆ ತಾಳಿದೊಡನೆ ಅನುಭವ ಕಳೆದುಹೋಗಿಬಿಡುತ್ತದೆ, ಎನ್ನುವ ಮೂಲಕ ಎಲ್ಲರೂ ಕ್ರಿಸ್ತನನ್ನು ಅನಸರಿಸಿಬಿಡಬೇಕೆಂಬ ಕ್ರಿಶ್ಚಿಯನ್ನರ ಧಾವಂತಕ್ಕೆ ಸ್ವಾಮೀಜಿ ಬ್ರೇಕ್ ಹಾಕಿದ್ದರು. ಒಂದು ಹಂತದಲ್ಲಂತೂ ಸ್ವಾಮೀಜಿ ಹೆಚ್ಚು-ಹೆಚ್ಚು ಮತ-ಪಂಥಗಳಾದಷ್ಟೂ ಸಮಾಜಕ್ಕೆ ಒಳಿತೇ ಎಂಬುದನ್ನು ಮುಲಾಜಿಲ್ಲದೇ ಸಾರಿದ್ದರು. ಅವರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತಾನೇ ಒಂದು ಮತವಾದರೆ ಅದು ನಾಶಕ್ಕೆ ಕಾರಣವಾಗುವುದಿಲ್ಲ, ಬದಲಿಗೆ ಎಲ್ಲವೂ ಒಟ್ಟಾಗಿ ಏಕತೆಗೆ ಕಾರಣವಾಗುತ್ತದೆ ಎಂಬುದನ್ನು ಘಂಟಾಘೋಷವಾಗಿ ಸಾರಿದ್ದರು.

ಈ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಪೂಜಿಸುವ 33 ಕೋಟಿ ದೇವರುಗಳನ್ನು, ನಮ್ಮ ವಿಭಿನ್ನ ಆಲೋಚನೆಯ ಪ್ರಕ್ರಿಯೆಗಳನ್ನು ಒಮ್ಮೆ ಯೋಚಿಸಿ ನೋಡಿ. ಹಿಂದೂಧರ್ಮ ನಮಗೆ ಕೊಟ್ಟಿರುವ ಸ್ವಾತಂತ್ರ್ಯ ಮತ್ತು ಭಗವಂತನ ಹತ್ತಿರಕ್ಕೆ ಹೋಗಲು ನಮಗಿರುವ ದಿವ್ಯ ಮಾರ್ಗ ಎಂಥದ್ದೆಂಬುದರ ಅರಿವಾಗುತ್ತದೆ. ಸ್ವಾಮೀಜಿ ಬಲುಸೂಕ್ಷ್ಮವಾಗಿಯೇ ಹಿಂದೂಧರ್ಮ ಇತರೆಲ್ಲ ಮತಗಳಿಗಿಂತಲೂ ಎಷ್ಟು ವೈಚಾರಿಕವಾದ್ದು ಮತ್ತು ಪರಿಪೂರ್ಣವಾದ್ದು ಎನ್ನುವುದನ್ನು ಪಶ್ಚಿಮದ ಸಮಾಜದ ಮುಂದಿಟ್ಟರಲ್ಲ, ಅದು ನಿಜಕ್ಕೂ ಆಕರ್ಷಣೀಯವಾದ್ದು. ಹಾಗೆ ನೋಡಿದರೆ, ಅಲ್ಲಿನವರೇ ಅದನ್ನು ಬಲುಬೇಗ ಅಥರ್ೈಸಿಕೊಂಡು ಜೀಣರ್ಿಸಿಕೊಂಡರು. ನಾವಿನ್ನೂ ಹೆಣಗಾಡುತ್ತಲೇ ಇದ್ದೇವೆ!

ಯುವ ದಿನದ ಶುಭಾಶಯಗಳು

ಜನವರಿ ೧೨, ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನ. ವಿವೇಕಾನಂದರ ಚಿಂತನೆಗಳು ಅತ್ಯಂತ ವಿಶಾಲ ಮತ್ತು ಸಾರ್ವಕಾಲಿಕ. ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ.

swami_vivekananda-1893-09-signed

ನಿಮಗೆ-ನಮಗೆಲ್ಲರಿಗೂ ಯುವದಿನದ ಶುಭಾಶಯ.

ಸ್ವಾಮಿ ವಿವೇಕಾನಂದರು ತೋರಿದ ಹಾದಿಯಲ್ಲಿ ನಾಲ್ಕು ಹೆಜ್ಜೆ ಒಟ್ಟಾಗಿ ನಡೆಯೋಣ ಬನ್ನಿ…

ವಿವೇಕಾನಂದನೆಂಬ ವೀರ ಸಂನ್ಯಾಸಿ

ಸೆಪ್ಟೆಂಬರ್ ಹನ್ನೊಂದು ಅಂತಾದರೂ ಕರೆಯಿರಿ, ೯/೧೧ ಅಂತಾದರೂ ಹೇಳಿ. ಮನಸ್ಸು ಅಮೆರಿಕಾದತ್ತ ಧಾವಿಸಿಬಿಡುತ್ತದೆ. ವಿಶ್ವ ವ್ಯಾಪರ ಕೇಂದ್ರದ ಎರಡು ಕಟ್ಟಡಗಳನ್ನು ಭಯೋತ್ಪಾದಕರು ಉರುಳಿಸಿದ್ದು ಕಣ್ಮುಂದೆ ಅಲೆಅಲೆಯಾಗಿ ತೇಲಿ ಹೋಗುತ್ತದೆ. ಅಲ್ಲದೆ ಮತ್ತೇನು? ಉರುಳುವ ಕಟ್ಟಡಗಳನ್ನು ಟಿವಿಯ ಮುಂದೆ ಕುಳಿತು ನೇರ ಪ್ರಸಾರದಲ್ಲಿ ನೋಡಿದವರಲ್ಲವೆ ನಾವು!?

ಆದರೆ ಈ ಅಮೆರಿಕಾ ಸೆಪ್ಟೆಂಬರ್ ಹನ್ನೊಂದರಂದೇ ಇನ್ನೊಂದು ಸಾತ್ತ್ವಿಕ ಸುನಾಮಿಗೆ ಸಿಲುಕಿ ಅಲುಗಾಡಿದ್ದು ಬಹುತೆಕರಿಗೆ ಮರೆತೇಹೋಗಿದೆ. ಅವತ್ತು ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ ನಿಮಿಷಗಳಲ್ಲಿ ಸಾಕ್ಷಾತ್ ಅಮೆರಿಕೆಯನ್ನೇ ಧರೆಗೆ ಕೆಡವಿದ್ದರು.

ಸ್ವಲ್ಪ ವಿಚಾರ ಮಾಡಿ. ಎರಡರಲ್ಲೂ ಅದೆಷ್ಟು ಅಂತರ! ರಾಕ್ಷಸೀ ವೃತ್ತಿಯಿಂದ, ಧರ್ಮಾಂಧತೆಯ ಮೂರ್ತ ರೂಪವಾಗಿದ್ದ ಲ್ಯಾಡೆನ್ ಕೆಡವಿದ್ದು ಅಮೆರಿಕೆಯ ಹೊರರೂಪದ ಎರಡು ಕಟ್ಟಡಗಳನ್ನು ಮಾತ್ರ. ಬಂದೂಕು, ಮದ್ದು ಗುಂಡುಗಳನೆಲ್ಲ ಬಳಸಿ ಲ್ಯಾಡೆನ್ ಮತ್ತವನ ಸಹಚರರು ಕಟ್ಟಡಗಳಿಗೆ ಧಕ್ಕೆ ನೀಡಿದರು, ಒಂದಷ್ಟು ಜೀವ ತೆಗೆದರು.
ಆದರೆ ಸ್ವಾಮಿ ವಿವೇಕಾನಂದರು ವೇದಿಕೆಯ ಮೇಲೆ ನಿಂತು ಬರೀ ಮಾತಿನ ತುಪಾಕಿಯಿಂದ ಅಮೆರಿಕನ್ನರ ಅಂತಃಸತ್ತ್ವವನ್ನೇ ಅಲುಗಾಡಿಸಿಬಿಟ್ಟರು. ಅಲ್ಲಿನ ಜ್ಞಾನಿಗಳು, ಪಂಡಿತರು, ಅಲ್ಲಿ ನೆರೆದಿದ್ದ ಅನ್ಯ ಧರ್ಮೀಯರೆಲ್ಲರೂ ತಲೆದೂಗುವಂತೆ ಮಾಡಿಬಿಟ್ಟರು. ಆಧ್ಯಾತ್ಮಿಕತೆಯ ಗಂಧ ಗಾಳಿಯಿಲ್ಲದ ಭೋಗ ಭೂಮಿಯ ಜನತೆಗೆ ಮಾತಿನ ಅಮೃತ ಸಿಂಚನ ಹರಿಸಿ ಜೀವದಾನ ಮಾಡಿದರು.

ಈ ಎರಡೂ ಘಟನೆಗಳ ಪರಿಣಾಮವೂ ಸ್ವಾರಸ್ಯಕರ. ಒಂದು ಘಟನೆಯ ನಂತರ ಅಮೆರಿಕಾ ಆಫ್ಘಾನಿಸ್ತಾನಕ್ಕೆ ನುಗ್ಗಿ, ಲ್ಯಾಡೆನ್ನನ ದೇಶವನ್ನು ಸಂಪೂರ್ಣ ನಾಶಗೈದರೆ, ವಿವೇಕಾನಂದರ ಮಾತಿಗೆ ಮರುಳಾದ ಪಾಶ್ಚಾತ್ಯರನೇಕರು ಭಾರತದ ಸೇವೆಗೆ ಸಿದ್ಧರಾಗಿ ನಿಂತರು!

ಸ್ವಾಮಿ ವಿವೇಕಾನಂದರ ಈ ಜೈತ್ರಯಾತ್ರೆ ನಿಜಕ್ಕೂ ಅದ್ಭುತ ಪವಾಡವೇ ಸರಿ. ಪರದೇಶಗಳ ಪರಿಚಯವೇ ಇಲ್ಲದ, ಹೊಟ್ಟೆ- ಬಟ್ಟೆಗಳ ಪರಿವೆ ಇಲ್ಲದ, ಎಲ್ಲಿಗೆ ಹೇಗುವುದು, ಏನು ಮಾತನಾಡುವುದೆಂಬುದರ ಅರಿವಿಲ್ಲದ, ಕೊನೆಗೆ- ತಾನಾರೆಂಬ ಪರಿಚಯ ಪತ್ರವೂ ಇಲ್ಲದ ವ್ಯಕ್ತಿಯೊಬ್ಬ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತನಾಗಿದ್ದು ಪವಾಡವಲ್ಲದೆ ಮತ್ತೇನು?

“ನ ರತ್ನಂ ಅನ್ವಿಷ್ಯತಿ ಮೃಗ್ಯಾತೇ ಹಿ ತತ್’ (ರತ್ನ ತಾನೇ ಯಾರನ್ನೂ ಅರಸುತ್ತ ಹೋಗುವುದಿಲ್ಲ, ಅದು ಹುಡುಕಲ್ಪಡುತ್ತದೆ) ಎನ್ನುವಂತೆ ವಿವೇಕಾನಂದರ ಪ್ರಭೆ ತಾನೇತಾನಾಗಿ ಹರಡಿತು. ಇವರ ಪ್ರಭಾವಕ್ಕೆ ಸಿಕ್ಕು ಮನೆಗೆ ಆಹ್ವಾನಿಸಿದ ಹಾರ್ವರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ರೈಟ್ ಎರಡು ದಿನ ಇವರೊಡನೆ ಮಾತು ಕತೆಯಾಡಿ ಉದ್ಗರಿಸಿದ್ದರು- “ಅಮೆರಿಕದ ನೆಲದ ಮೇಲೆ ಕಳೆದ ನಾಲ್ಕುನೂರು ವರ್ಷಗಳಲ್ಲಿ ಇಂತಹ ಜ್ಞಾನಿ ತಿರುಗಾಡಿದ ಉಲ್ಲೇಖಗಳೇ ಇಲ್ಲ!” ಎಂದು. ಸ್ವಾಮೀಜಿ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮ ಬಳಿ ಪರಿಚಯ ಪತ್ರವಿಲ್ಲ ಎಂದಾಗ ಆತ ನಕ್ಕುಬಿಟ್ಟಿದ್ದರು. “ನೀವು ಯಾರೆಂದು ಕೇಳುವುದೂ, ಸೂರ್ಯನಿಗೆ ಹೊಳೆಯಲು ಏನಧಿಕಾರ ಎಂದು ಕೇಳುವುದೂ ಒಂದೇ!!” ಎಂದಿದ್ದರು.

ಚಿಕಾಗೋ ವೇದಿಕೆಯ ಮೇಲಿಂದ ಭುವಿ ಬಿರಿಯುವಂತೆ ಮೊಳಗಿದ ವಿವೇಕಾನಂದನ ಪಾದ ಚುಂಬಿಸಲು ಅಮೆರಿಕವೇ ಸಿದ್ಧವಾಗಿ ನಿಂತಿತ್ತು. (ಕ್ರಿಶ್ಚಿಯನ್ ಪಾದ್ರಿಗಳನ್ನು ಬಿಟ್ಟು. ಏಕೆಂದರೆ, ಅವರ ಉದ್ಯೋಗಕ್ಕೇ ಈತ ಸಂಚಕಾರ ತಂದುಬಿಟ್ಟಿದ್ದ!). ವಿವೇಕಾನಂದ ಎಗ್ಗಿಲ್ಲದೆ ನುಡಿದ. ಕ್ರಿಶ್ಚಿಯನ್ನರ ನಾಡಿನಲ್ಲಿ ನಿಂತು, ನಮ್ಮ ನಾಡಿಗೆ ಬೇಕಾಗಿದ್ದುದು ಅನ್ನವೇ ಹೊರತು ಧರ್ಮವಲ್ಲವೆಂದ. ಸಾಧ್ಯವಿದ್ದರೆ ಅನ್ನ ಕೊಡಿ, ಇಲ್ಲವಾದರೆ ತೆಪ್ಪಗಿರಿ ಎಂದುಬಿಟ್ಟ. ತನ್ನ ರಾಷ್ಟ್ರದ ಬಗ್ಗೆ, ಧರ್ಮದ ಶ್ರೇಷ್ಠತೆಯ ಬಗ್ಗೆ ಆತನಿಗೆ ಹೆಮ್ಮೆಯಿತ್ತು. ಅವನು ಮಾತಾಡಿದ್ದು ಸಂಗೀತವಾಯ್ತು. ನುಡಿದಿದ್ದೆಲ್ಲ ತುಪಾಕಿಯ ಗುಂಡಾಯ್ತು. ಶ್ರೀಮತಿ ಅನಿಬೆಸೆಂತರು ಹೇಳಿದರು; “ಆತ ಸಂನ್ಯಾಸಿಯಲ್ಲ, ತಾಯಿ ಭಾರತಿಯ ಅಂತರಾಳದ ಮಾತುಗಳನ್ನಾಡುವ ಯೋಧ”. ಅಮೆರಿಕದ ಪತ್ರಿಕೆ ಬರೆಯಿತು;“ಇವನಂತಹ ಬುದ್ಧಿವಂತರಿರುವ ನಾಡಿಗೆ ಮಿಷನರಿಗಳನ್ನು ಕಳಿಸುವುದೇ ಮೂರ್ಖತನ. ಭರತದಿಂದ ಇವನಂತಹ ಮಿಷನರಿಗಳನ್ನು ನಾವು ಕರೆಸಿಕೊಳ್ಳಬೇಕಷ್ಟೆ!”

ಗುಲಾಮರ ನಾಡಿನಿಂದ ಹೊರಟಿದ್ದವ ಚಕ್ರವರ್ತಿಯಾಗಿಬಿಟ್ಟಿದ್ದ. ತನ್ನ ಹೃದಯ ತುಂಬಿದ್ದ ಪ್ರೇಮದ ಸುಧೆಯಿಂದ ಎಲ್ಲರನ್ನೂ ತೋಯಿಸಿಬಿಟ್ಟಿದ್ದ. ಜರ್ಮನಿಯ ಥಾಮಸ್ ಕುಕ್ ಹೇಳಿದ್ದರು; “ಅದೊಮ್ಮೆ ಅವರ ಕೈಕುಲುಕಿ ಮೂರು ದಿನ ಕೈ ತೊಳೆದುಕೊಂಡಿರಲಿಲ್ಲ. ಆವರ ಪ್ರೇಮದ ಸ್ಪರ್ಷ ಆರದಿರಲೆಂದು!”

ರಕ್ ಫೆಲ್ಲರನಂತಹ ಸಿರಿವಂತರು ಅವನಡಿಗೆ ಬಿದ್ದರು. ಪಾದಗಳಿಗೆ ಅರ್ಪಿತವಾದ ಕುಸುಮವಾದರು. ವಿವೇಕಾನಂದರು ಗರ್ವದಿಂದ ಬೀಗಲಿಲ್ಲ. ಬದಲಿಗೆ ತಾಯಿ ಭಾರತಿಯೆಡೆಗೆ ಮತ್ತಷ್ಟು ಬಾಗಿದ. ನಿಮ್ಮ ಸೇವೆ ಮಾಡಬೇಕೆಂಬ ಮನಸಿದೆ. ಏನು ಮಾಡಲಿ?” ಎಂದು ಕೇಳಿದವರಿಗೆ, “ನನ್ನ ಸೇವೆ ಮಾಡಬೇಕೆಂದರೆ ಭಾರತವನ್ನು ಪ್ರೀತಿಸಿ” ಎಂದ. ಸಿದ್ಧರಾದವರನ್ನು ಕರೆತಂದ. ಹಗಲಿರುಳು ಭಾರತದ ಏಳ್ಗೆಯ ಕುರಿತು ಚಿಂತಿಸಿದ. ಅಮೆರಿಕದ ಬೀದಿಬೀದಿಗಳಲ್ಲಿ ತನ್ನ ಆಳೆತ್ತರದ ಕಟೌಟು ರಾರಾಜಿಸುತ್ತಿದ್ದರೂ ತಾನು ಸರಳವಾಗೇ ಉಳಿದ. ಭಾರತಕ್ಕೆ ಮರಳಿದ. ಭಾರತದ ಜಪ ಮಾಡುತ್ತಲೇ ದೇಹ ತ್ಯಾಗ ಮಾಡಿದ.
ಹಾಗೆ ದೇಹ ಬಿಟ್ಟ ವಿವೇಕಾನಂದರಿಗೆ ಕೇವಲ ಮೂವತ್ತೊಂಭತ್ತು ವರ್ಷ.

ಸ್ವಾಮೀ ವಿವೇಕಾನಂದರು ಚಿಕಾಗೋ ಭಾಷಣ ಮಾಡಿ ಸೆಪ್ಟೆಂಬರ್ ಹನ್ನೊಂದಕ್ಕೆ ನೂರಾ ಹದಿನೈದು ವರ್ಷಗಳಾದವು. ಅದಕ್ಕೇ ಇವೆಲ್ಲ ನೆನಪಾಯ್ತು. ಅಷ್ಟೇ.