ಟ್ಯಾಗ್: ರಾಷ್ಟ್ರ

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿ ಇಪ್ಪತ್ತು ವರ್ಷಗಳ ನಂತರ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಮೋದಿಯನ್ನು ರಕ್ಕಸನೆಂದು ಬಿಂಬಿಸಲು ಮಾಧ್ಯಮಗಳು, ರಾಜಕಾರಣಿಗಳು, ಅಧಿಕಾರಿಗಳು, ಕೆಲವು ಎನ್‌ಜಿಒಗಳು ಮಾಡಿದ ಪ್ರಯತ್ನ ಕೊನೆಗೂ ಮಣ್ಣುಗೂಡಿದೆ. ಪುಟವಿಟ್ಟ ಚಿನ್ನದಂತೆ ಮೋದಿ ಮತ್ತೊಮ್ಮೆ ಬೆಳಗಿದ್ದಾರೆ.

2002ರ ಫೆಬ್ರವರಿ 27. ಅಯೋಧ್ಯಾದಿಂದ ಬರುತ್ತಿದ್ದ ರೈಲೊಂದಕ್ಕೆ ಮುಸಲ್ಮಾನರು ಗುಜರಾತಿನ ಗೋದ್ರಾದಲ್ಲಿ ಬೆಂಕಿ ಹಚ್ಚಿದರು. ಇದು ಅಚಾನಕ್ಕಾಗಿ ನಡೆದ ದಾಳಿಯಲ್ಲ. ಎಂದಿನಂತೆ ಕೈಲಿ ಕಲ್ಲುಗಳನ್ನು ಹಿಡಿದು, ಪೆಟ್ರೋಲು ಬಾಂಬುಗಳನ್ನು ಹಿಡಿದು ಸಿದ್ಧವಾಗಿದ್ದ ಮುಸಲ್ಮಾನ ಪುಂಡರು ರೈಲು ನಿಂತೊಡನೆ ಏಕಾಕಿ ದಾಳಿ ಮಾಡಿದರು. ಕಲ್ಲೆಸೆದು ಜನರನ್ನು ರೈಲಿನಿಂದ ಹೊರಬರದಂತೆ ತಡೆದರು. ಪೆಟ್ರೋಲ್ ಬಾಂಬುಗಳನ್ನು ಎಸೆದು ಬೋಗಿಗಳು ಹೊತ್ತುರಿಯುವಂತೆ ಮಾಡಿದರು. ಬೇಗೆ ತಾಳಲಾರದೆ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಹೊರಗೆ ನಿಂತು ಕಲ್ಲಿನಲ್ಲಿ ಹೊಡೆಯಲಾಯ್ತು. ಇಡಿಯ ಬೋಗಿಗಳು ಸುಟ್ಟು ಕರಕಲಾದವಲ್ಲದೇ 59 ಜನ ಕರಸೇವಕರು ಬೆಂದುಹೋಗಿದ್ದರು. ಅವರ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಎಂಥವನ ರಕ್ತವೂ ಕುದಿಯುತ್ತಿತ್ತು. ಆದರೆ ಈ ದೇಶದ ಮಾಧ್ಯಮಗಳಲ್ಲಿದ್ದವರು ಅಂದೂ ಅದರ ಕುರಿತಂತೆ ತಲೆಕೆಡಿಸಿಕೊಳ್ಳಲಿಲ್ಲ, ಇಂದೂ ಕೂಡ! ಕಳೆದ ಮಾರ್ಚ್‌ನಲ್ಲಿ ಪ್ರೇಮ್ಶಂಕರ್ ಝಾ ಈ ಪ್ರಕರಣವನ್ನು ನೆನಪಿಸಿಕೊಳ್ಳುತ್ತಾ ವೈರ್ ಪತ್ರಿಕೆಗೆ ಬರೆದ ಲೇಖನದಲ್ಲಿ, 1100 ಜನ ಸಾಮಥ್ರ್ಯ ಹೊಂದಿದ್ದ ಆ ರೈಲು 2000ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದೇ ಮೊದಲ ತಪ್ಪು ಎಂಬುದನ್ನು ಬರೆದುಕೊಂಡಿದ್ದಾರೆ. ಎಸ್6 ಬೋಗಿ ಬೆಂಕಿ ಹೊತ್ತಿಸಿಕೊಂಡು ಉರಿದು ಕರಸೇವಕರು ಸಾಯಲು ಕಾರಣವಾಗಿದ್ದು ಅದು ಅಗತ್ಯಕ್ಕಿಂತ ಹೆಚ್ಚು ತುಂಬಿದ್ದುದರಿಂದ ಎಂದು ವಾದಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಹಚ್ಚಿದ ಮುಸಲ್ಮಾನರದ್ದು ಯಾವ ತಪ್ಪೂ ಇಲ್ಲ. ರೈಲಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳದ್ದೇ ತಪ್ಪು. ಅರುಂಧತಿ ರಾಯ್ ಅಂತೂ ಅಂದಿನ ದಿನಗಳಲ್ಲೇ ಬಾಬರಿ ಮಸೀದಿಯನ್ನು ಉರುಳಿಸಿ ಬರುತ್ತಿದ್ದ ಕರಸೇವಕರ ಮೇಲೆ ಮುಸಲ್ಮಾನರಿಗೆ ಆಕ್ರೋಶವಿತ್ತು, ಹೀಗಾಗಿ ಈ ರೀತಿ ಆಯ್ತು ಎಂದು ದಂಗೆಕೋರರಿಗೆ ಕವರಿಂಗ್ ಫೈರ್ ಕೊಡುವ ಪ್ರಯತ್ನ ಮಾಡಿದ್ದಳು! ಮಸೀದಿ ಉರುಳುವ ಮತ್ತು ಗೋದ್ರಾ ರೈಲಿಗೆ ಬೆಂಕಿ ಹಚ್ಚುವ ಘಟನೆಗಳ ನಡುವೆ ಹತ್ತು ವರ್ಷಗಳ ಅಂತರವಿತ್ತು ಎಂಬುದನ್ನು ಆಕೆ ಮರೆತೇ ಹೋಗಿದ್ದಳು. ಹತ್ತು ವರ್ಷಗಳ ಹಿಂದೆ ನಿರ್ಜೀವ ಕಟ್ಟಡವೊಂದನ್ನು ಉರುಳಿಸಿದ ಘಟನೆಗೆ ಮುಸಲ್ಮಾನರು 59 ಜನರ ಸಜೀವ ದಹನ ಮಾಡಿದ್ದು ಸಹಜ ಪ್ರತಿಕ್ರಿಯೆಯಾಗಬಹುದಾದರೆ, ಈ ರೈಲು ದಹನದ ನಂತರ ಹಿಂದೂಗಳು ಮುಸಲ್ಮಾನರ ವಿರುದ್ಧ ಆಕ್ರೋಶಗೊಂಡಿದ್ದು ಮಾತ್ರ ಅಸಹಜ ಹೇಗಾಯ್ತು? ಈ ಪ್ರಶ್ನೆಯನ್ನು ಆಗಲೂ ಯಾರೂ ಕೇಳಲಿಲ್ಲ, ಈಗಲೂ ಕೂಡ ವ್ಯವಸ್ಥಿತವಾಗಿ ಮರೆಯುತ್ತಾರೆ.

ಆದರೆ ಗೋದ್ರಾ ನಂತರದ ಘಟನೆಗಳನ್ನು, ಮೋದಿಯನ್ನು ಶಾಶ್ವತವಾಗಿ ಮುಗಿಸುವ ಪ್ರಯತ್ನಕ್ಕೆ ಎಲ್ಲರೂ ರಣಹದ್ದುಗಳಂತೆ ಬಳಸಿಕೊಂಡರು. ಮೋದಿ ಮುಖ್ಯಮಂತ್ರಿಯ ಪಟ್ಟಕ್ಕೆ ಬಂದು ಆಗಷ್ಟೇ ನಾಲ್ಕು ತಿಂಗಳು ಕಳೆದಿದ್ದವು. ಕಚ್‌ನ ಭೂಕಂಪವನ್ನು ಎದುರಿಸಿ ನಿಂತು ಅವರು ಜನರಲ್ಲಿ ಮೂಡಿಸಿದ ವಿಶ್ವಾಸ ಪ್ರತಿಪಕ್ಷಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಅವಕಾಶವನ್ನು ಎಲ್ಲರೂ ಬಳಸಿಕೊಂಡರು. ರಾಷ್ಟ್ರಮಟ್ಟದಲ್ಲಿ ಹಿಂದೂಗಳನ್ನು ಅವಮಾನಗೊಳಿಸಲು ದಂಗೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಲಾಯ್ತು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಮೋದಿ ದಂಗೆಗಳು ಕೈಮೀರುತ್ತವೆಂದು ಗೊತ್ತಾದೊಡನೆ ಪಕ್ಕದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್, ಮಹಾರಾಷ್ಟ್ರದ ವಿಲಾಸ್‌ರಾವ್ ದೇಶ್‌ಮುಖರಿಗೆ ಪತ್ರ ಬರೆದು ರಕ್ಷಣೆಯ ದೃಷ್ಟಿಯಿಂದ ಸಹಾಯ ಕೊಡುವಂತೆ ಕೇಳಿಕೊಂಡರು. ಕಾಂಗ್ರೆಸ್ಸಿಗೆ ಸೇರಿದ್ದ ಈ ಮೂರೂ ರಾಜ್ಯಗಳು ಅಂದು ಮೋದಿಯ ವಿನಂತಿಗೆ ಪ್ರತಿಕ್ರಿಯಿಸಲೇ ಇಲ್ಲ. ಇದಕ್ಕೆ ವಿಪರೀತವಾಗಿ ದಂಗೆ ನಿಯಂತ್ರಣ ಮಾಡುವಲ್ಲಿ ಮೋದಿ ಸೋತರೆಂದು ಅದೇ ಮುಖ್ಯಮಂತ್ರಿಗಳು ಆನಂತರ ಮಾತನಾಡಲಾರಂಭಿಸಿದರು. ಸುಳ್ಳು ಸುದ್ದಿ ಹಬ್ಬಿಸಿ ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವಲ್ಲಿ ನಿಸ್ಸೀಮರಾದ ಎಡಪಂಥೀಯರು ಕೌಸರ್ ಬಾನೊ ಎಂಬ ಗರ್ಭಿಣಿ ಮುಸ್ಲೀಂ ಹೆಣ್ಣುಮಗಳ ಸಾವನ್ನೂ ಕೂಡ ತಮಗೆ ತಕ್ಕಂತೆ ಬಳಸಿಕೊಂಡರು. ಹಿಂದೂ ಪಡೆ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ಹೊಟ್ಟೆಯನ್ನು ಸೀಳಿ, ಒಳಗಿದ್ದ ಮಗುವನ್ನು ಕತ್ತಿಯಿಂದ ಕತ್ತರಿಸಿದರು ಎಂದೆಲ್ಲ ಸುದ್ದಿ ಹಬ್ಬಿಸಿದರು. ಆ ಮೂಲಕ ಮುಸಲ್ಮಾನರನ್ನು ಮೋದಿ ಸರ್ಕಾರದಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಮತ್ತು ಹಿಂದೂಗಳು ಅದೆಷ್ಟು ಕ್ರೂರಿಗಳು ಎಂದು ಬಿಂಬಿಸುವ ಪ್ರಯತ್ನ ಅದಾಗಿತ್ತು. ಸಾಮಾಜಿಕ ಜಾಲತಾಣಗಳು ಈಗಿನಷ್ಟು ವ್ಯಾಪಕವಾಗಿಲ್ಲದ್ದಿದ್ದದ್ದರಿಂದ ಇದರ ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲೇ ಇಲ್ಲ. 2010ರಲ್ಲಿ ವಿಸ್ತಾರವಾದ ವರದಿ ಬಂದಾಗಲೇ ಇದೊಂದು ಸುಳ್ಳು ಪ್ರಕರಣ ಎಂಬುದು ಗೊತ್ತಾಗಿದ್ದು. ತೀರಿಕೊಂಡ ಗರ್ಭಿಣಿ ಹೆಣ್ಣುಮಗಳ ಮರಣೋತ್ತರ ಪರೀಕ್ಷೆ ನಡೆಸಿದ ಡಾಕ್ಟರ್ ಜೆ.ಎಸ್ ಕನೋರಿಯಾ ಮಗು ಹೊಟ್ಟೆಯೊಳಗೆ ಸುರಕ್ಷಿತವಾಗಿದ್ದುದನ್ನು, ಎರಡೂವರೆ ಕೆಜಿಯಷ್ಟು ತೂಕವಿದ್ದುದನ್ನು ದಾಖಲಿಸಿದ್ದರು. ಆದರೆ ಆ ವರದಿಯ ನಂತರವೂ ಕೌಸರ್ ಬಾನೊ ಕಥೆ ಮಾತ್ರ ಹಾಗೆಯೇ ಉಳಿಯಿತು!

ಈ ದಂಗೆಯ ಕ್ಷಣ-ಕ್ಷಣದ ಮಾಹಿತಿಗಳನ್ನು ಬಿತ್ತರಿಸುವ ಧಾವಂತಕ್ಕೆ ಬಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಎಂದು ಹೇಳುತ್ತಾ ಸುಳ್ಳು ಸುದ್ದಿಗಳನ್ನೇ ವ್ಯಾಪಕವಾಗಿ ಪ್ರಚಾರ ಮಾಡಿ ದಂಗೆಗಳಿಗೆ ಪ್ರೇರಣೆಕೊಟ್ಟರು. ಬರ್ಖಾದತ್ ಸೂರತ್ತಿನ ವಜ್ರದ ಮಾರುಕಟ್ಟೆಯಲ್ಲಿ ನಿಂತು ‘ಇಲ್ಲಿ ಒಬ್ಬ ಪೊಲೀಸರೂ ಇಲ್ಲ. ಇಲ್ಲಿ ದಂಗೆ ವಿಸ್ತರಿಸಿದರೆ ಏನು ಕಥೆ?’ ಎಂದೆಲ್ಲಾ ವರದಿ ಮಾಡುತ್ತಿದ್ದಳು. ಕಚ್ ಭಾಗದಲ್ಲಿ ಹನುಮಾನ್ ಮಂದಿರವೊಂದನ್ನು ದುಷ್ಕರ್ಮಿಗಳು ಉರುಳಿಸಿದ್ದಾರೆ ಎಂಬ ಸುದ್ದಿಯನ್ನು ಆಕೆ ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಳು. ಮುಖ್ಯಮಂತ್ರಿಯಾಗಿದ್ದ ಮೋದಿ ಆಕೆಗೆ ಕರೆಮಾಡಿ, ‘ವಜ್ರದ ಮಾರುಕಟ್ಟೆಯಲ್ಲಿ ಪೊಲೀಸರಿಲ್ಲ ಎಂದು ಹೇಳುವ ಮೂಲಕ ತಾವು ದಂಗೆಕೋರರನ್ನು ಆಹ್ವಾನಿಸುತ್ತಿದ್ದೀರಾ?’ ಎಂದು ಕೇಳಿದ್ದರಲ್ಲದೇ, ಕಚ್ ಭಾಗದಲ್ಲಿ ಆಕೆ ಹೇಳಿದ ಯಾವ ಮಂದಿರವೂ ಉರುಳಿರಲಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡರು. ಅದರರ್ಥ ಹಿಂದೂ-ಮುಸಲ್ಮಾನರ ನಡುವಿನ ಕಂದಕವನ್ನು ವಿಸ್ತಾರಗೊಳಿಸಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬುದೇ ಅವರೆಲ್ಲರ ಪ್ರಯತ್ನವಾಗಿತ್ತು. ಅವರ ಗುರಿ ಮೋದಿಯಷ್ಟೇ ಆಗಿರಲಿಲ್ಲ. ಏಕೆಂದರೆ ಬಿಜೆಪಿಯಲ್ಲೇ ಅನೇಕ ಗೊಂದಲಗಳುಂಟಾಗಿ ಮೋದಿ ಅನಿವಾರ್ಯಕ್ಕೆ ಅಧಿಕಾರಕ್ಕೆ ಬಂದಿದ್ದರು. ಜನಸಾಮಾನ್ಯರು ರೋಸಿಹೋಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಮತ ಚಲಾಯಿಸಿದರೂ ಅಚ್ಚರಿ ಪಡಬೇಕಿರಲಿಲ್ಲ! ಎಲ್ಲ ಇಂಗ್ಲೀಷ್ ಮಾಧ್ಯಮಗಳಿಗೆ ಕಣ್ಣಿದ್ದುದು ಹಿಂದೂಗಳ ಮೇಲೆ. ಹಿಂದೂಗಳು ಆತಂಕವಾದಿಗಳು, ಕ್ರೂರಿಗಳು ಎಂದು ಬಿಂಬಿಸುವ ಜರೂರತ್ತು ಅವರಿಗಿತ್ತು. ಅದಕ್ಕೆ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮೋದಿ ಅನಿವಾರ್ಯವಾಗಿ ಎನ್ಡಿಟಿವಿಯನ್ನು ಗುಜರಾತಿನಲ್ಲಿ ತಡೆಹಿಡಿಯಬೇಕಾಯ್ತು. ಅಚ್ಚರಿ ಎಂದರೆ ಅಂದು ಅದೇ ಚಾನೆಲ್‌ನಲ್ಲಿದ್ದು ಈ ಇಡೀ ಸುಳ್ಳು ಸುದ್ದಿಯನ್ನು ಹರಡಿಸುವಲ್ಲಿ ನೇತಾರನಾಗಿದ್ದ ರಾಜ್‌ದೀಪ್ 17 ವರ್ಷಗಳ ನಂತರ 2019ರಲ್ಲಿ ಪತ್ರಕರ್ತ ಮನು ಜೋಸೆಫ್ ಕೇಳಿದ ಪ್ರಶ್ನೆಗೆ ‘ಈ ದಂಗೆಗೆ ಮೋದಿ ಕಾರಣರಲ್ಲವೇ ಅಲ್ಲ’ ಎಂದು ಉತ್ತರಿಸಿದ್ದ. ಹಾಗಿದ್ದರೆ ಅವತ್ತು ಹೇಳಿದ ಸುಳ್ಳುಗಳಿಗೆ ಯಾರು ಹೊಣೆ? ಅದರಿಂದಾಗಿ ಮೋದಿ ಸುದೀರ್ಘಕಾಲ ನರಕಯಾತನೆ ಅನುಭವಿಸಬೇಕಾಯ್ತಲ್ಲ, ಅದರ ಜವಾಬ್ದಾರಿ ಯಾರದ್ದು? ಈ ಪ್ರಶ್ನೆಗೆಲ್ಲ ಉತ್ತರಿಸಬೇಕಾದ್ದು ಯಾರು?


ಪತ್ರಕರ್ತರಷ್ಟೇ ಅಲ್ಲ, ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದರು. ಐಪಿಎಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಮೋದಿಯ ವಿರುದ್ಧ ತನ್ನೆಲ್ಲ ಆಕ್ರೋಶವನ್ನೂ ಹಂತ-ಹಂತವಾಗಿ ಹೊರಹಾಕಿದ. 2011ರಲ್ಲಿ ಆತ ಸ್ಫೋಟಕವಾದ ಮಾಹಿತಿಯೊಂದನ್ನು ಸಮಾಜದ ಮುಂದಿಟ್ಟ. ಕರಸೇವಕರನ್ನು ಸುಟ್ಟ ಪ್ರಕರಣದ ನಂತರ ಮೋದಿ ತುರ್ತು ಸಭೆಯೊಂದನ್ನು ಕರೆದು ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಮಾಡಿಕೊಡಬೇಕೆಂದೂ, ಈ ಬಾರಿ ಈ ಆಕ್ರೋಶ ಹೊರಹಾಕುವ ಪ್ರಕ್ರಿಯೆ ಹೇಗಿರಬೇಕೆಂದರೆ ಇನ್ನೆಂದೂ ಮುಸಲ್ಮಾನರು ಇಂತಹ ಕೃತ್ಯಕ್ಕೆ ಕೈ ಹಾಕದಂತಾಗಬೇಕೆಂದು ಹೇಳಿದ್ದರಂತೆ. ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಭಾಗವಹಿಸಲು ತನಗೂ ಆಹ್ವಾನವಿದ್ದ ಫ್ಯಾಕ್ಸ್ ಪ್ರತಿಯೊಂದನ್ನು ಆತ ಸಮಾಜದ ಮುಂದಿರಿಸಿದ. ಈ ಸಭೆಯಲ್ಲಿ ಎಂಟು ಜನ ಪ್ರಮುಖ ಪೊಲೀಸರಿದ್ದು ಅವರೆಲ್ಲರೂ ಈ ದಂಗೆ ನಿಲ್ಲದಂತೆ ನೋಡಿಕೊಂಡರು ಎಂದಿದ್ದ. ನಾನಾವತಿ ಮೆಹ್ತಾ ಕಮಿಷನ್ ಈ ಎಲ್ಲ ಆರೋಪಗಳನ್ನೂ ಅಲ್ಲಗಳೆಯಿತಲ್ಲದೇ ಆತ ಈ ಸಭೆಯಲ್ಲಿ ಭಾಗವಹಿಸಿರುವುದೇ ಸುಳ್ಳು ಎಂದಿತು. ಆತ ಹೇಳಿರುವ ಅಷ್ಟೂ ಹೇಳಿಕೆಯನ್ನು ಈ ಕಮಿಷನ್ ಸಾರಾಸಗಟಾಗಿ ತಿರಸ್ಕರಿಸಿತು. ಆತ ಮುಂದಿಟ್ಟಿರುವ ಫ್ಯಾಕ್ಸ್ ಪ್ರತಿಯೂ ಕೂಡ ಆ ಸಭೆಯದ್ದಲ್ಲವೆಂಬುದು ಇವರುಗಳ ತನಿಖೆಯ ಮೂಲಕ ಹೊರಬಂತು. ಮುಂದೆ ಇದೇ ಸಂಜೀವ್ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು ಟ್ರೋಲ್ ಮಾಡುತ್ತಾ ಮೋದಿ ವಿರೋಧಿಗಳ ಪಾಲಿನ ಹೀರೋ ಆಗಿ ಉಳಿದ.

ಇವರೆಲ್ಲರೂ ಸೇರಿ ವಾತಾವರಣವನ್ನು ಹೇಗೆ ರೂಪಿಸಿಬಿಟ್ಟಿದ್ದರೆಂದರೆ 72 ಗಂಟೆಗಳ ಕಾಲ ಮೋದಿ ಹಿಂದೂಗಳಿಗೆ ಪೂರ್ಣ ಅವಕಾಶವನ್ನು ಕೊಟ್ಟಿದ್ದರೆಂದು, ಅಷ್ಟರೊಳಗೆ ಮಾಡಬೇಕಾದ್ದೆಲ್ಲವನ್ನೂ ಮಾಡಿ ಮುಗಿಸಲು ಮುಕ್ತ ಪರವಾನಗಿ ನೀಡಿದ್ದರೆಂದು ನಂಬಿಸಿಬಿಟ್ಟಿದ್ದರು. ಹೀಗಾಗಿಯೇ ಮೋದಿ ಸೈನ್ಯವನ್ನು ಕರೆಸಲಿಲ್ಲ ಎಂಬುದು ಅವರ ಮೇಲಿದ್ದ ಅಪವಾದ. ಆದರೆ ದಂಗೆಗಳು ಆರಂಭವಾಗಿವೆ ಎಂದು ಗೊತ್ತಾದೊಡನೆ ಸೈನ್ಯದ ಸಹಕಾರ ಬೇಕೆಂದು ಮೋದಿ ಕೇಂದ್ರಸರ್ಕಾರಕ್ಕೆ ಪತ್ರ ಬರೆದಿದ್ದುದು ನಿಚ್ಚಳವಾಗಿತ್ತು. ಆದರೆ ಸೇನೆ ಗಡಿಭಾಗದಿಂದ ರಕ್ಷಣೆಗೆಂದು ಬರಲು ಕೆಲವು ಗಂಟೆಗಳ ಸಮಯವಾದರೂ ಹಿಡಿಯುತ್ತದೆಂಬುದು ಎಂಥವನಿಗೂ ಗೊತ್ತಿರಬೇಕಾದ ಸಂಗತಿ. ಮೂರು ಸಾವಿರ ಸೈನಿಕರ ಪಡೆ ಘಟನೆಯಾದ ಎರಡು ದಿನಗಳ ನಂತರ ಮಾರ್ಚ್ ಒಂದಕ್ಕೆ ಅಹ್ಮದಾಬಾದಿಗೆ ಬಂದಿಳಿದಿತ್ತು. ಮೋದಿ ದಂಗೆಗಳು ಆರಂಭವಾದ ದಿನ ಸಂಜೆಯೇ ಸೈನ್ಯದ ಸಹಾಯಕ್ಕಾಗಿ ಕರೆಮಾಡಿದ್ದು ದಾಖಲಾಗಿತ್ತು. ಆನಂತರದ ದಿನಗಳಲ್ಲಿ ಅನೇಕ ಪತ್ರಿಕೆಗಳು ಇದನ್ನು ವರದಿ ಮಾಡಿದವು. ಅಷ್ಟರವೇಳೆಗೆ ಮೋದಿಯ ಕುರಿತಂತೆ ಹಬ್ಬಿಸಬೇಕಾದ ಸುಳ್ಳುಗಳನ್ನೆಲ್ಲಾ ಹೇಳಿಯಾಗಿತ್ತು. ಈ ಅಯೋಗ್ಯರ ಸಾಮಥ್ರ್ಯ ಎಂಥದ್ದಿತ್ತೆಂದರೆ ಇಡಿಯ ಜಗತ್ತು ದಂಗೆಯ ಹಿಂದಿನ ಕಾರಣ ಮೋದಿ ಎಂಬುದನ್ನು ನಂಬಿತ್ತೆನ್ನುವುದನ್ನು ಬಿಡಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಇದನ್ನು ಒಪ್ಪಿಕೊಂಡು ಮೋದಿಯವರನ್ನು ಬದಲಾಯಿಸಿಬಿಡುವ ತವಕದಲ್ಲಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಟಲ್ಜಿ ರಾಜ್ಯಧರ್ಮದ ಪಾಲನೆಯ ಕುರಿತಂತೆ ಮೋದಿಗೆ ಕಿವಿಮಾತು ಹೇಳಿದ್ದೇನೆ ಎಂಬುದಂತೂ ಮೋದಿಯವರ ಪಾಲಿಗೆ ಕಂಟಕಪ್ರಾಯವೇ ಆಗಿತ್ತು!

ಮುಂದಿನ ಕನಿಷ್ಠ 12 ವರ್ಷಗಳ ಕಾಲ ಮೋದಿಯ ಪಾಲಿಗೆ ಇದು ವನವಾಸವೇ. ಅವರು ವಿದೇಶಕ್ಕೆ ಹೋಗುವಾಗ ಅಲ್ಲಿನ ಪತ್ರಿಕೆಗಳಲ್ಲಿ ಗೋದ್ರಾ ದಂಗೆಯ ಕುರಿತಂತೆ ಬರೆಸಲಾಗುತ್ತಿತ್ತು. ಚುನಾವಣೆಗೆ ಹೋಗುವ ಮುನ್ನ ಗೋದ್ರಾ ದಂಗೆಗಳನ್ನು ನೆನಪಿಸಿಕೊಡಲಾಗುತ್ತಿತ್ತು. ಗುಜರಾತಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದರೆ ಮೋದಿಯನ್ನು ದಂಗೆಕೋರ ಎಂದು ಬಿಂಬಿಸಿ ಹೂಡಿಕೆದಾರರನ್ನು ಹಿಂದೆ ಸರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಈ ಮನುಷ್ಯ ಎಲ್ಲವನ್ನೂ ಎದುರಿಸಿದ. 12 ವರ್ಷಗಳ ಕಾಲ ತನಗಾದ ಅವಮಾನವನ್ನು ನುಂಗಿಕೊಂಡ, ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ. ಮತ್ತೆ-ಮತ್ತೆ ಚುನಾವಣೆಗಳನ್ನು ಗೆದ್ದು 2014ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಹುಮತ ಪಡೆದು ಪ್ರಧಾನಿಯೂ ಆದ. 2019ರಲ್ಲಿ ಮತ್ತೆ ಪ್ರಧಾನಿಯಾದ. ಈಗ ಅದೇ ನರೇಂದ್ರಮೋದಿ ಈ ಎಲ್ಲ ಆರೋಪಗಳಿಂದ ಮುಕ್ತರಾಗಿ ಬಂದಿದ್ದಾರೆ. ಒಮ್ಮೆ ಹಿಂದಿರುಗಿ ನೋಡಿದಾಗ ಎಲ್ಲ ಕಠಿಣ ಸಂದರ್ಭದಲ್ಲೂ ಜೊತೆಯಲ್ಲಿದ್ದ ನಿಜ ಭಾರತೀಯನನ್ನು ಕಂಡು ಸಂತೋಷ ಪಡಬಹುದು ಅಥವಾ ರಣಹದ್ದುಗಳಂತೆ ಹಿಂದೆ ಬಿದ್ದಿದ್ದವರನ್ನು ಕಂಡು ಅಸಹ್ಯವೆನಿಸಬಹುದು!

‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

ಅಸದ್ ಅಹ್ಮದ್ ಮತ್ತು ಗುಲಾಮ್ ಮೊಹಮ್ಮದ್ ಇವರಿಬ್ಬರ ಎನ್ಕೌಂಟರ್ ಉತ್ತರ ಪ್ರದೇಶದಲ್ಲಿ ಆಗುತ್ತಿದ್ದಂತೆ ದೇಶದೆಲ್ಲೆಡೆ ಸಂಚಲನ ಮೂಡಿತ್ತು. ಅದರ ಕುರಿತಂತೆ ಲೇಖನ ಬರೆಯಬೇಕು ಎನ್ನುವಷ್ಟರಲ್ಲಿ ಅವರಪ್ಪ ಆತಿಕ್ ಅಹಮ್ಮದ್‌ನ ಹೆಣ ಬಿದ್ದಿದೆ. ಮೇಲ್ನೋಟಕ್ಕೆ ಇದು ಬಾಡಿಗೆ ಹಂತಕರು ಮಾಡಿರುವ ಹತ್ಯೆ ಎಂಬುದು ಗೋಚರವಾಗುತ್ತದಾದರೂ ಅನೇಕ ಮಾಧ್ಯಮಮಂದಿ ಮತ್ತು ಭಯೋತ್ಪಾದಕರ ಕುರಿತಂತೆ ಅನುಕಂಪ ಹೊಂದಿರುವ ಮಂದಿ ಯೋಗಿ ಆದಿತ್ಯನಾಥರ ಕೈವಾಡವೆಂದು ಶಂಕಿಸುತ್ತಿದ್ದಾರೆ. ಆದರೆ ಒಂದಂತೂ ನಿಜ. ಆತಿಕ್‌ನ ಸಾವು ಬರಲಿರುವ ಘೋರ ವಿಪತ್ತಿನ ಸಣ್ಣ ಮುನ್ಸೂಚನೆ ಎಂದೆನಿಸುತ್ತದೆ. ಲೇಖನದುದ್ದಕ್ಕೂ ಅದು ಹೇಗೆಂದು ವಿವರಿಸಲು ಯತ್ನಿಸುವೆ. 

ಹಾಗೆ ನೋಡಿದರೆ ಆತಿಕ್ ಸಂತನೇನೂ ಅಲ್ಲ. ಪಾಲ್ಘರ್‌ನಲ್ಲಿ ಸಾಧುಗಳ ಹತ್ಯೆಯಾದಾಗ ಮಿಸುಕಾಡದ ಮಂದಿಯೆಲ್ಲ ಆತಿಕ್‌ನ ಹತ್ಯೆಯ ಕುರಿತಂತೆ ವ್ಯಕ್ತಪಡಿಸುತ್ತಿರುವ ಅನುಕಂಪದ ಪ್ರಮಾಣವನ್ನು ನೋಡಿದರೆ, ಅವರೆಲ್ಲರ ಪಾಲಿಗೆ ಆತ ಮಹಾತ್ಮಾ ಗಾಂಧೀಯೇನೊ ಎನಿಸುತ್ತಿದೆ. 43 ವರ್ಷಗಳಲ್ಲಿ ಆತಿಕ್‌ನ ಮೇಲೆ ನೂರಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಪಹರಣ, ಮಾನಭಂಗ, ದರೋಡೆಯಂಥವಲ್ಲದೇ ಕೊಲೆ ಪ್ರಕರಣಗಳೂ ಇವೆ. ಈ 43 ವರ್ಷಗಳಲ್ಲಿ ಅವನನ್ನು ಒಂದೇ ಒಂದು ಕೇಸಿನಲ್ಲಿ ಜೈಲಿಗೆ ತಳ್ಳುವುದು ಸಾಧ್ಯವಾಗಿರಲಿಲ್ಲ. ಆತನ ಕೇಸನ್ನು ಕೈಗೆತ್ತಿಕೊಳ್ಳುವುದಿಲ್ಲವೆಂದು ಅನೇಕ ಬಾರಿ ನ್ಯಾಯಾಧೀಶರುಗಳೇ ಕೈಚೆಲ್ಲಿ ಎದ್ದುಹೋದ ಉದಾಹರಣೆಯಿದೆ. ಯಾವುದಾದರೂ ಒಬ್ಬ ನ್ಯಾಯಾಧೀಶರು ಧೈರ್ಯ ಮಾಡಿ ವಿಚಾರಣೆಗೆ ನಿಂತರೆ ಅವನಿಗೆ ಜಾಮೀನು ಕೊಟ್ಟು ಮನೆಗೆ ಕಳಿಸುವುದಷ್ಟೇ ಅಲ್ಲದೇ ಬೇರೇನೂ ಮಾಡುತ್ತಿರಲಿಲ್ಲ. ನಿಮಗೆ ಅಚ್ಚರಿಯಾಗಬಹುದು. ಈ ಕೊಲೆಗಡುಕ ಐದು ಬಾರಿ ಶಾಸಕನಾಗಿದ್ದ! ಮೂರು ಬಾರಿ ಪಕ್ಷೇತರನಾಗಿ, ಒಮ್ಮೆ ಸಮಾಜವಾದಿ ಪಾರ್ಟಿಯಿಂದ, ಮತ್ತೊಮ್ಮೆ ಅಪ್ನಾದಲ್ ಪಾರ್ಟಿಯಿಂದ ಆಯ್ಕೆಯಾಗಿದ್ದ. 2004ರಲ್ಲಿ ಸಮಾಜವಾದಿ ಪಕ್ಷದಿಂದಲೇ ಸಂಸತ್ ಸದಸ್ಯನಾಗಿದ್ದ ಈತ ಪಾರ್ಟಿ ಹೊರಹಾಕಿದ ಮೇಲೆ 2009ರಲ್ಲಿ ಅಪ್ನಾದಲ್‌ನಿಂದ ಆಯ್ಕೆಯಾಗಿದ್ದ. 2012ರಲ್ಲಿ ಜೈಲಿನಿಂದಲೇ ಸ್ಪರ್ಧಿಸಿ 2005ರಲ್ಲಿ ತಾನೇ ಕೊಂದಿದ್ದ ರಾಜು ಪಾಲ್‌ ಪತ್ನಿಯ ಎದುರು ಸೋತಿದ್ದ. 2014ರಲ್ಲಿ ಸಮಾಜವಾದಿ ಪಕ್ಷ ಇಂತಹ ಕೊಲೆಗಡುಕ ಕ್ರಿಮಿನಲ್‌ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಸಂಸತ್ ಸದಸ್ಯನನ್ನಾಗಿಸುವ ಪ್ರಯತ್ನ ಮಾಡಿತ್ತು. ಮೋದಿ ಸುನಾಮಿಯಲ್ಲಿ ಅನೇಕ ಆತಿಕ್‌ಗಳು ಕೊಚ್ಚಿಹೋದರು. 

ಈಗ ಆತಿಕ್ ಸುದ್ದಿಯಾಗುತ್ತಿರುವುದೇಕೆಂದರೆ 2005ರಲ್ಲಿ ತನ್ನ ತಮ್ಮನ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದ ರಾಜುಪಾಲ್‌ನನ್ನು ಈತ ಶೂಟ್ಔಟ್‌ನಲ್ಲಿ ಕೊಂದಿದ್ದ. ಪ್ರತ್ಯಕ್ಷವಾಗಿ ಇದನ್ನು ನೋಡಿದ್ದ ಉಮೇಶ್ ಪಾಲ್ ಪೊಲೀಸರಿಗೆ ಎಲ್ಲ ವಿವರಗಳನ್ನೂ ಕೊಟ್ಟಮೇಲೆ, ಅಂದಿನ ಡಿಜಿಪಿ ಓಪಿಸಿಂಗ್ ಇವನ ಠಾಣ್ಯವನ್ನು ಹುಡುಕಿ ತನ್ನ ಪಡೆಯೊಂದಿಗೆ ಸುತ್ತುವರೆದು ನಿಂತಿದ್ದರು. ಕೆಲವೇ ನಿಮಿಷಗಳಲ್ಲಿ ಪೊಲೀಸರ ಸುತ್ತಲೂ ಆತಿಕ್ನ ಪಡೆ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ತೊಡೆ ತಟ್ಟಿಕೊಂಡು ನಿಂತುಬಿಟ್ಟಿತು. ಓಪಿಸಿಂಗ್ ನೇರವಾಗಿ ಆತಿಕ್‌ನನ್ನೇ ಹಿಡಿದು, ಪೊಲೀಸರ ಮೈಗೆ ಕೆರೆದ ಗಾಯವಾದರೂ ಇವನನ್ನು ಉಡಾಯಿಸಿಬಿಡುತ್ತೇನೆ ಎಂದಿದ್ದರು. ಎಲ್ಲವೂ ಥೇಟು ಸಿನಿಮಾದಂತೆಯೇ. ಆತನನ್ನು ಬಂಧಿಸಿ ಎಳೆದು ತರಬೇಕೆನ್ನುವಷ್ಟರಲ್ಲಿ ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಮಂದಿ ಒತ್ತಡ ತಂದು ಆತಿಕ್‌ನನ್ನು ಬಿಡಿಸಿಕೊಂಡರು! ಇತ್ತೀಚೆಗೆ ಓಪಿಸಿಂಗ್ ಇವೆಲ್ಲವನ್ನೂ ವಿವರವಾಗಿ ಹೇಳಿದ್ದಾರೆ. ತನ್ನ ವಿರುದ್ಧ ಇರಬಹುದಾಗಿದ್ದ ಸಾಕ್ಷಿ ಉಮೇಶ್ ಪಾಲ್‌ನನ್ನು ಮರುಕ್ಷಣವೇ ಅಪಹರಿಸಿ ತಂದ ಆತಿಕ್ ಹೊಡೆದು-ಬಡಿದು ಪೊಲೀಸರಿಗೆ ಆತ ಕೊಟ್ಟ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ಬರೆಸಿಕೊಂಡ. ಉಮೇಶ್ ಪಾಲ್ ಕೂಡ ಕಡಿಮೆ ಆಸಾಮಿಯಲ್ಲ. ಅವರಿಂದ ಬಿಡುಗಡೆಯಾಗಿ ಬಂದವನೇ ನೇರ ಪೊಲೀಸರ ಬಳಿಸಾರಿ ನಡೆದುದೆಲ್ಲವನ್ನೂ ಹೇಳಿ ಆತಿಕ್‌ನ ಕೊರಳಿಗೆ ಉರುಳನ್ನು ಗಟ್ಟಿಯಾಗಿಯೇ ಬಿಗಿದ. 

ಕಳೆದ ಫೆಬ್ರವರಿ ತಿಂಗಳಲ್ಲಿ ಉಮೇಶ್ ಪಾಲ್‌ನ ಹೇಳಿಕೆಯಿಂದಾಗಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗಿರುವ ಆತಿಕ್‌ನ ಇಂದಿನ ಪರಿಸ್ಥಿತಿಗೆ ಪ್ರತೀಕಾರವಾಗಿ ಅವನ ಮಗ ಅಸದ್ ಉಮೇಶ್‌ನನ್ನು ಮುಗಿಸುವ ಸಂಚು ರೂಪಿಸಿದ. ಪೊಲೀಸರು ಆನಂತರ ಇವರೆಲ್ಲರನ್ನೂ ಬಂಧಿಸಿದಾಗ ಇವರ ಯೋಜನೆಯ ಒಟ್ಟಾರೆ ರೂಪುರೇಷೆಗಳು ಹೊರಬಂದಿದೆ. 12 ಐಫೋನ್‌ಗಳನ್ನು ಆತಿಕ್‌ನ ಹೆಂಡತಿ ಯೋಜನೆಯಲ್ಲಿ ಭಾಗಿಯಾದವರಿಗೆಲ್ಲ ಕೊಡಿಸಿದ್ದಳು. ಪ್ರತಿಯೊಬ್ಬರೂ ತಮಗೆ ಪ್ರತ್ಯೇಕ ಗುಪ್ತನಾಮ ಕೊಟ್ಟುಕೊಂಡಿದ್ದರು. ಸಲ್ಮಾನ್ ಖಾನನ ಆರಾಧಿಸುತ್ತಿದ್ದ ಅಸದ್ ತನ್ನ ಹೆಸರನ್ನು ರಾಧೆ ಎಂದಿಟ್ಟುಕೊಂಡಿದ್ದನಂತೆ. ಸಲ್ಮಾನನ ಇತ್ತೀಚಿನ ಸಿನಿಮಾದ ಹೆಸರು ಅದು. ಇವರೆಲ್ಲರೂ ಐ ಮೆಸೇಜ್‌ಗಳ ಮೂಲಕ ಮಾತ್ರ ಚರ್ಚೆ ನಡೆಸುತ್ತಿದ್ದರು. ಗುಂಡು ಹೊಡೆಯುವವ, ಬಾಂಬ್ ಎಸೆಯುವವ, ಚಲನ-ವಲನಗಳ ಮಾಹಿತಿ ನೀಡುವವ, ಹೀಗೆ ಎಲ್ಲರಿಗೂ ಪ್ರತ್ಯೇಕವಾದ ಜವಾಬ್ದಾರಿ ನೀಡಲಾಗಿತ್ತು. ಉಮೇಶ್‌ಪಾಲ್‌ನ ಮೇಲೆ ಇವರು ದಾಳಿ ಮಾಡುವಾಗ ಎಲ್ಲ ಎಚ್ಚರಿಕೆಯನ್ನೂ ಇಟ್ಟುಕೊಂಡಿದ್ದರಾದರೂ ಸಿಕ್ಕ ಸಿಸಿಟಿವಿ ಕಡತಗಳ ಆಧಾರದ ಮೇಲೆ ಪೊಲೀಸರು ಇವರ ವಿರುದ್ಧ ಬಲೆ ಬೀಸಿದರು. ಸದನದಲ್ಲಿ ಈ ಕುರಿತಂತೆ ಕೋಲಾಹಲವೆದ್ದಿತು. ಮಾಫಿಯಾ ಡಾನ್‌ಗಳನ್ನು ಸಾಕಿ ಸಲಹಿದ ಸಮಾಜವಾದಿ ಪಕ್ಷಕ್ಕೆ ಸರಿಯಾಗಿಯೇ ತಪರಾಕಿ ಕೊಟ್ಟ ಯೋಗಿ, ಪ್ರತಿಯೊಬ್ಬ ಗೂಂಡಾನನ್ನು ಹುಡುಹುಡುಕಿ ಕೊಲ್ಲಲಾಗುವುದು ಎಂದಿದ್ದರು. ಆದಷ್ಟು ಬೇಗ ಈ ಸಾವಿಗೆ ಕಾರಣರಾದ ಗೂಂಡಾಗಳನ್ನು ಹಿಡಿಯುವುದು, ಅಗತ್ಯವಿದ್ದರೆ ಮುಗಿಸಿಬಿಡುವುದು ಅತ್ಯವಶ್ಯಕವಾಗಿತ್ತು. ಪೊಲೀಸರು ಚುರುಕಾದರು. ಭಿನ್ನ-ಭಿನ್ನ ತಂಡಗಳನ್ನು ರಚಿಸಿಕೊಂಡು 40 ದಿನಗಳ ಕಾಲ ಈ ಗೂಂಡಾಗಳನ್ನು ಅಟ್ಟಿಸಿಕೊಂಡು ಹೋದರು. ಇತರರನ್ನು ಕೊಲ್ಲುವಾಗ ಮೆರೆದಾಡುತ್ತಿದ್ದ ಅಸದ್ ಮತ್ತವನ ಸಹಚರರು ಪೊಲೀಸರು ಅಟ್ಟಿಸಿಕೊಂಡು ಬಂದಾಗ ನೀರಲ್ಲದ್ದಿದ ಬೆಕ್ಕಿನಂತಾಗಿಬಿಟ್ಟಿದ್ದರು. ಈ ತಂಡದ ಸದಸ್ಯರನೇಕರ ಮನೆಗಳನ್ನು ಬುಲ್ಡೋಜ್ ಮಾಡಿದ ಬಾಬಾ ಗೂಂಡಾಗಳ ಎದೆಯಲ್ಲಿ ಭಯ ಅವತರಿಸುವಂತೆ ಮಾಡಿಬಿಟ್ಟರು. ಈ ವೇಳೆಗಾಗಲೇ ಆತಿಕ್‌ನ ಅನೇಕ ಸೋದರ ಸಂಬಂಧಿಗಳು ಜೈಲು ಸೇರಿಯಾಗಿತ್ತು. ಆತಿಕ್‌ನ ಹೆಂಡತಿ ಮತ್ತು ತಮ್ಮನ ಹೆಂಡತಿಯರು ಉಟ್ಟಬಟ್ಟೆಯಲ್ಲಿ ಊರುಬಿಟ್ಟು ಓಡಿ ಹೋಗಿದ್ದರು. ಒಂದು ಕಾಲದಲ್ಲಿ ಉತ್ತರಪ್ರದೇಶವೇ ತಮ್ಮದೆಂದು ಮೆರೆದಾಡುತ್ತಿದ್ದವರೆಲ್ಲ ಈಗ ಬದುಕಿದೆಯಾ ಬಡಜೀವವೇ ಎಂಬಂತಾಗಿದ್ದರು. ಇಂತಹ ಒಂದು ಹೊತ್ತಲ್ಲಿಯೇ ಪೊಲೀಸರ ಕೈಗೆ ಸಿಕ್ಕುಬಿದ್ದ ಅಸದ್ ಎರ್ರಾಬಿರ್ರಿ ಗುಂಡು ಹಾರಿಸತೊಡಗಿದ. ಪೊಲೀಸರು ಮುಲಾಜು ನೋಡದೇ ಅಸದ್ ಮತ್ತು ಗುಲಾಮ್ ಇಬ್ಬರನ್ನೂ ನಡುರಸ್ತೆಯಲ್ಲಿಯೇ ಹೆಣವಾಗಿಸಿಬಿಟ್ಟರು! ಇತ್ತ ಜೈಲಿನಲ್ಲಿದ್ದ ಆತಿಕ್, ‘ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸರನ್ನು ನಾನು ಬಿಡುವುದಿಲ್ಲ. ಒಮ್ಮೆ ಜೈಲಿನಿಂದ ಹೊರಬಂದಮೇಲೆ ಗದ್ದಿಜಾತಿಯ ತಾಕತ್ತನ್ನು ತೋರಿಸುತ್ತೇನೆ’ ಎಂದಿದ್ದ. ಗಮನಿಸಬೇಕಾದ ಸಂಗತಿ ಇದು. ಸ್ವತಃ ವೈರ್ನ ಸಂಪಾದಕಿ ಅರ್ಫಾ ಖನ್ನುಂ ಆತಿಕ್ ಅಹ್ಮದ್‌ನನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಸಲ್ಮಾನರಲ್ಲಿಯೇ ಹಿಂದುಳಿದ ಜಾತಿಯಾದ ಗದ್ದಿ ಜನಾಂಗದವರಿಗೆ ಮಾಡುತ್ತಿರುವ ಅವಮಾನ ಎಂದಿದ್ದಳು. ‘ನಾವೆಲ್ಲ ಒಂದೆ ಜಾತಿ, ಒಂದೆ ಕುಲ’ ಎನ್ನುವ ಮುಸಲ್ಮಾನರು ಇಂತಹ ಸಂದರ್ಭಗಳಲ್ಲಿ ಜಾತಿಯ ಕಾರ್ಡ್ ಬಳಸಲು ಹಿಂದೆ-ಮುಂದೆ ನೋಡುವುದಿಲ್ಲ. ಕೆಲವು ಪತ್ರಕರ್ತರು ಅದೆಷ್ಟು ಲಜ್ಜೆಗೆಟ್ಟವರೆಂದರೆ, ರಾಜ್‌ದೀಪ್ ಸರ್‌ದೇಸಾಯಿ ಲಲ್ಲನ್‌ಟಾಪ್‌ನ ಸಂದರ್ಶನವೊಂದರಲ್ಲಿ ಆತಿಕ್ ಮನೆಯಲ್ಲಿ ತಿಂದ ತಂದೂರಿ ಎಷ್ಟು ಚೆನ್ನಾಗಿತ್ತು ಎಂದು ವರ್ಣಿಸಿದ್ದ. ಮಾಫಿಯಾ ಡಾನ್‌ಗೂ ಒಂದೊಳ್ಳೆ ಮುಖವಿದೆ ಎಂದು ಹೇಳುವ ಪ್ರಯತ್ನ ಅದು. 

ಇಲ್ಲಿಯವರೆಗೂ ಎಲ್ಲವೂ ಸರಿಯೇ. ಆದರೆ ಆತಿಕ್‌ನ ಹತ್ಯೆಯಾದದ್ದು ಮಾತ್ರ ಗಾಬರಿ ಹುಟ್ಟಿಸುವಂಥದ್ದು. ಮಾಧ್ಯಮದ ಎದುರಿಗೆ, ಪೊಲೀಸರ ನಡುವೆಯೇ ಅತ್ಯಾಧುನಿಕ ಶಸ್ತ್ರ ಹಿಡಿದುಬಂದು ಆಕ್ರಮಣ ಮಾಡುತ್ತಾರೆಂದರೆ ಇದರ ಹಿಂದೆ ದೊಡ್ಡದೊಂದು ಪಿತೂರಿ ಇರಲೇಬೇಕು. ಇಷ್ಟಕ್ಕೂ ಭಾರತದಲ್ಲಿ ನಾಯಕತ್ವ ಬದಲಾವಣೆಗೆ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಪೂರ್ವಭಾವಿಯಾಗಿ ಅಮೇರಿಕಾ ಎರಿಕ್ ಗಾರ್ಸಿಟಿಯನ್ನು ರಾಯಭಾರಿಯಾಗಿ ಭಾರತಕ್ಕೆ ಕಳಿಸಿತು. ಆತನನ್ನು ಈ ಹುದ್ದೆನೀಡಿ ಕಳಿಸಬೇಕೆಂದು 2021ರ ಮಧ್ಯಭಾಗದಲ್ಲಿಯೇ ನಿಶ್ಚಯಿಸಲಾಗಿತ್ತು. ಆದರೆ ಅಮೇರಿಕಾದ ಸೆನೆಟ್‌ನಲ್ಲಿ ಬಹುಮತವಿರದಿದ್ದುದರಿಂದ ಬೈಡನ್ ತಡೆ ಹಿಡಿದಿದ್ದ. ಬಹುಮತ ಖಾತ್ರಿಯಾದೊಡನೆ ಭಾರತಕ್ಕೆ ಕಳಿಸುವ ನಿಶ್ಚಯ ಮಾಡಿದ. ಈ ಎರಿಕ್ ಲಾಸ್ ಏಂಜಲೀಸ್‌ನ ಮೇಯರ್ ಆಗಿದ್ದವ ಮತ್ತು ಅಲ್ಲಿನ ಬುದ್ಧಿಜೀವಿಗಳ ಕಣ್ಮಣಿ. ಆತನ ಪತ್ನಿಯೊಂದಿಗೆ ಸೇರಿ ಅನೇಕ ಪ್ರತಿಭಟನೆಗಳಲ್ಲಿ ಆತ ಪಾಲ್ಗೊಂಡಿದ್ದಾನೆ. ಸಿಎಎ ವಿರುದ್ಧ ಭಾರತದಲ್ಲಿ ಪ್ರತಿಭಟನೆ ನಡೆಯುವಾಗ ಗಂಡ-ಹೆಂಡತಿ ಇಬ್ಬರೂ ಪ್ರತ್ಯಕ್ಷ-ಪರೋಕ್ಷವಾಗಿ ಅದರಲ್ಲಿ ಭಾಗಿಯಾಗಿದ್ದರು. ಆತನನ್ನು ರಾಯಭಾರಿ ಎಂದು ಘೋಷಿಸಿದೊಡನೆ ಆತ ಹೇಳಿದ್ದೇನು ಗೊತ್ತೇ? ‘ನನ್ನ ಅತ್ಯಂತ ಪ್ರಮುಖವಾದ ಕೆಲಸವೇ ಸಿಎಎ ಬಗೆಯ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ಮಾನವ ಹಕ್ಕುಗಳ ಸ್ಥಾಪನೆ ಮಾಡುವುದು. ಯಾರು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೋ ಅಂಥವರೊಡನೆ ನೇರವಾಗಿ ಮಾತುಕತೆಯಲ್ಲಿ ತೊಡಗುವುದು’ ಎಂದಿದ್ದ. ಇದರರ್ಥ ನೇರವಾಗಿ ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ಮೋದಿ ವಿರೋಧಿಗಳನ್ನೆಲ್ಲ ತನ್ನ ದೂತಾವಾಸದ ಛತ್ರಛಾಯೆಯಲ್ಲಿ ಒಂದುಗೂಡಿಸುವುದು ಅಂತ! ಉಕ್ರೇನ್‌ನಲ್ಲಿ ಅಮೇರಿಕಾ ತನ್ನ ಪ್ರಭಾವ ಬಳಸಿ ಅಲ್ಲಿನ ರಾಷ್ಟ್ರೀಯವಾದಿ ಅಧ್ಯಕ್ಷನನ್ನು ಅಧಿಕಾರದಿಂದ ಕೆಳಗಿಳಿಸಿ ಕೈಗೊಂಬೆಯಾಗಿರುವ ಶತಮೂರ್ಖ ಜೆಲ್ಸೆಂಕಿಯನ್ನು ಕೂರಿಸಿತಲ್ಲ, ಭಾರತದಲ್ಲೂ ಹಾಗೆ ಮಾಡುವ ಯೋಜನೆ ಅದರದ್ದು. ಮೋದಿಯನ್ನು ಕೆಳಗಿಳಿಸಿದ ನಂತರ ಜೆಲ್ಸೆಂಕಿಯಷ್ಟೇ ಮೂರ್ಖನೂ ಮತ್ತು ಕೈಗೊಂಬೆಯೂ ಆಗಬಲ್ಲ ನಾಯಕ ಯಾರಿರಬಹುದು ಹೇಳಿ?

ಅಮೇರಿಕಾ ಭಾರತದಲ್ಲಿ ದೊಡ್ಡ ತಳಮಳವನ್ನು ಸೃಷ್ಟಿಸುವ ಧಾವಂತದಲ್ಲಿದೆ. ಸಿಎಎ ವಿರುದ್ಧದ ಹೋರಾಟ ಅದಕ್ಕೊಂದು ಅಸ್ತ್ರವಾಗಿ ದೊರಕಿತ್ತು. ಸರ್ಕಾರ ಅದನ್ನು ನಿಭಾಯಿಸಿದ ರೀತಿ ಮತ್ತು ಅದನ್ನು ಜಾರಿಗೆ ತರುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯಿಂದಾಗಿ ಅಮೇರಿಕಾ ಪತರಗುಟ್ಟಿದೆ. ಹೀಗಾಗಿಯೇ ಅನವಶ್ಯಕವಾಗಿ ರಾಮನವಮಿಯ ಮೆರವಣಿಗೆಯ ಮೇಲೆ ಕಲ್ಲೆಸೆದು ಹಿಂದೂಗಳನ್ನು ಭಡಕಾಯಿಸುವ ಯೋಜನೆ ರೂಪಿಸುತ್ತಿರೋದು. ಪಿಎಫ್ಐ ನಿಷೇಧದ ನಂತರ ಈ ಯೋಜನೆಗಳನ್ನೆಲ್ಲ ನೇರವಾಗಿ ಕಾರ್ಯರೂಪಕ್ಕೆ ತರುವ ಒಂದು ಸಂಸ್ಥೆ ಇಲ್ಲವಾಗಿ ಅಮೇರಿಕಾ ಚಡಪಡಿಸುತ್ತಿದೆ. ಹೀಗಾಗಿಯೇ ಮೂರ್ಖರಂತಿರುವ ಈ ಮಂದಿಯನ್ನು ಭಡಕಾಯಿಸಲು ಭಿನ್ನ-ಭಿನ್ನ ಪ್ರಯತ್ನಗಳನ್ನು ಮಾಡುತ್ತಿರೋದು. ಅದರ ಒಂದು ಭಾಗವೇ ಆತಿಕ್‌ನ ಹತ್ಯೆ! 

ಅದಾಗಲೇ ಓವೈಸಿ, ಸರ್ಕಾರ ಬೇಕಂತಲೇ ಈ ಕೆಲಸವನ್ನು ಮಾಡಿಸಿದೆ ಎಂದು ಹೇಳಿಕೆ ನೀಡಿಬಿಟ್ಟಿದ್ದಾನೆ. ಮುಸಲ್ಮಾನರ ಪರವಾಗಿ ಸದಾ ನಿಲ್ಲುತ್ತಿದ್ದ ಆತಿಕ್‌ನಂಥವನನ್ನು ಪರಿವಾರ ಸಮೇತವಾಗಿಯೇ ಮುಗಿಸುತ್ತಾರೆಂದರೆ ಇನ್ನು ಸಾಮಾನ್ಯ ಮುಸಲ್ಮಾನನ ಕಥೆಯೇನು? ಎಂಬ ಪ್ರಶ್ನೆಯನ್ನು ಹಿಂಸೆ ತುರುಕುವ ಮಸೀದಿಗಳಲ್ಲಿ ಕೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಈ ಕೋಮು ಶಾಂತಿಯಿಂದ ಕೂಡಿರಬಹುದೇನೊ. ಆದರೆ ಇತರೆ ರಾಜ್ಯಗಳಲ್ಲಿ ಇದು ತೀವ್ರಸ್ವರೂಪ ಪಡೆದುಕೊಳ್ಳುತ್ತದೆ, 2024ರ ವೇಳೆಗೆ ಸಾಕಪ್ಪ, ಸಾಕು ಎನಿಸುವಷ್ಟರಮಟ್ಟಿಗೆ. ಇದಕ್ಕೆ ಪೂರಕವಾಗಿ ನ್ಯಾಯ ವ್ಯವಸ್ಥೆಯನ್ನೂ ಕೂಡ ಇವರು ಬಳಸಿಕೊಳ್ಳುತ್ತಿದ್ದಾರೆ. ಅದಾನಿಯ ವಿರುದ್ಧ ಅನವಶ್ಯಕವಾಗಿ ಸುಪ್ರೀಂಕೋರ್ಟು ರೂಪಿಸಿರುವ ತಂಡವನ್ನು ನೋಡಿದರೆ ಗೊತ್ತಾಗುತ್ತದೆ. ಇತ್ತೀಚೆಗೆ ನ್ಯಾಯಾಧೀಶರೊಬ್ಬರು ಪ್ರಧಾನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಶಕ್ತಿ ನಮಗೆ ಬೇಕು ಎಂದು ಕೇಳಿಕೊಂಡಿದ್ದು ಗಮನಿಸಬೇಕಾದ್ದೇ. ಮುಖ್ಯ ನ್ಯಾಯಾಧೀಶರು ‘ಇನ್ನು ಮುಂದೆ ಯಾರಾದರೂ, ಯಾವ ಕ್ಷಣದಲ್ಲಾದರೂ ಮನೆ ಉರುಳಿಸುವ, ಸರ್ಕಾರ ತೊಂದರೆ ಕೊಡುವ ವಿಚಾರದ ಕುರಿತಂತೆ ನೇರವಾಗಿ ನಮ್ಮ ಬಾಗಿಲು ಬಡಿಯಬಹುದು’ ಎಂದು ಹೇಳಿಕೆ ಕೊಟ್ಟಿರುವುದು ಸ್ಪಷ್ಟವಾಗಿ ಈ ಪ್ರತ್ಯೇಕತಾವಾದಿಗಳಿಗೆ ಶಕ್ತಿ ತುಂಬುವ ಪ್ರಕ್ರಿಯೆಯೇ. ಮುಸಲ್ಮಾನರನ್ನೇ ಮುಂದಿಟ್ಟುಕೊಂಡರೆ ಹಿಂದೂಗಳು ಒಟ್ಟಾಗಿ ನರೇಂದ್ರಮೋದಿಗೆ ವೋಟು ಹಾಕುವ ಸಂಭವವಿರುವುದರಿಂದ ಖಾಲಿಸ್ತಾನಿಗಳಿಗೆ ವಿಶೇಷ ಬೆಂಬಲವನ್ನು ಕೊಟ್ಟಿದ್ದು ಅಮೇರಿಕಾ-ಯುರೋಪುಗಳು. ಆದರೆ ಸರ್ಕಾರ ಅದನ್ನು ಸಂಭಾಳಿಸಿದ ರೀತಿ ಮಾತ್ರ ಮೆಚ್ಚಬೇಕಾದ್ದು. ಓಡಿ ಹೋದ ಖಾಲಿಸ್ತಾನೀ ನಾಯಕ ಅಮೃತ್‌ಪಾಲ್‌ಸಿಂಗ್ ತನ್ನ ತಾನು ಜನರ ನಡುವಿನ ಶ್ರೇಷ್ಠ ನಾಯಕ ಎಂದು ಬೊಗಳೆ ಕೊಚ್ಚಿಕೊಳ್ಳುತ್ತಿದ್ದ. ಅವನು ಕಾಣೆಯಾಗಿ ಇಷ್ಟು ದಿನ ಕಳೆದರೂ ಪಂಜಾಬಿನಲ್ಲಿ ಆತನ ಕುರಿತಂತೆ ನಯಾಪೈಸೆ ಚರ್ಚೆಯಿಲ್ಲ ಎಂದಾಗಲೇ ಇವನ ಯೋಗ್ಯತೆ ಅರಿವಾಗಿರಬೇಕು. 

ಆತಿಕ್ ಅಹ್ಮದ್ ತನ್ನ ಬಳಿ ಆಯುಧಗಳಿಗೆ ಬರವಿಲ್ಲವೆಂದೂ ಪಾಕಿಸ್ತಾನ ಡ್ರೋಣ್ ಮೂಲಕ ಪಂಜಾಬ್ ಗಡಿಗೆ ಅದನ್ನು ತಲುಪಿಸುವುದೆಂದೂ, ಕಾಶ್ಮೀರಿಗಳು ಅದನ್ನೇ ಬಳಸುತ್ತಾರೆ ಎಂದೂ ಹೇಳಿಕೆ ಕೊಟ್ಟಿದ್ದ. ಶತಾಯ-ಗತಾಯ ಪಂಜಾಬಿನಲ್ಲಿ ಅಧಿಕಾರ ನಡೆಸಬೇಕೆಂದು ಕೇಜ್ರಿವಾಲ್ ಪಣತೊಟ್ಟಿದ್ದೇಕೆಂದು ಅರ್ಥವಾಯ್ತೇನು? ಇನ್ನು ಕರ್ನಾಟಕದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯಲು ಹಾತೊರೆಯುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಐದು ವರ್ಷದ ಸರ್ಕಾರದ ನಂತರ ಭಾಜಪ ಅಧಿಕಾರಕ್ಕೆ ಬರದೇ ಹೋಗಿದ್ದರೆ, ಸಿದ್ದರಾಮಯ್ಯನವರೇ ಮತ್ತೊಮ್ಮೆ ಕುರ್ಚಿಯ ಮೇಲೆ ಕುಳಿತಿದ್ದರೆ, ಪಿಎಫ್ಐ ಇಲ್ಲೂ ಕೆಲವು ಆತಿಕ್ ಅಹ್ಮದ್‌ರನ್ನು ಸೃಷ್ಟಿಸುತ್ತಿತ್ತು! 

ಮತದಾನ ಮಾಡುವ ಮುನ್ನ ಇಡೀ ರಾಷ್ಟ್ರವನ್ನು ಕಣ್ಮುಂದೆ ತಂದುಕೊಳ್ಳಿ.

ಬೇರೆಯವರಿಗೆ ಬೆಂಕಿ ಹಚ್ಚೋದು ತಪಸ್ಸು ಹೇಗೆ?!

ಬೇರೆಯವರಿಗೆ ಬೆಂಕಿ ಹಚ್ಚೋದು ತಪಸ್ಸು ಹೇಗೆ?!

ಇದು ರಂಜಾನ್ ತಿಂಗಳು. ಮುಸಲ್ಮಾನರ ಅತ್ಯಂತ ಪವಿತ್ರವಾದ ಹಬ್ಬ. ಕುರಾನ್ ಅವತೀರ್ಣಗೊಂಡಿದ್ದು ಇದೇ ತಿಂಗಳಲ್ಲಿ ಎಂದು ಮುಸಲ್ಮಾನರು ನಂಬುತ್ತಾರೆ. ಅವತೀರ್ಣಗೊಳ್ಳೋದು ಅಂದರೆ ಇದು ಯಾರೊ ಬರೆದಿಟ್ಟದ್ದಲ್ಲ. ಬದಲಿಗೆ, ಭಗವಂತನೇ ಪ್ರವಾದಿಯವರಿಗೆ ಈ ವಾಕ್ಯಗಳು ಗೋಚರಿಸುವಂತೆ ಮಾಡಿದ್ದು. ಈ ಕಾರಣಕ್ಕಾಗಿ ಕುರಾನ್ ಮೇಲೆ ವಿಶೇಷವಾದ ಶ್ರದ್ಧೆ ಮತ್ತು ಗೌರವ. ಈ ತಿಂಗಳಲ್ಲೇ ಇದು ಅವತೀರ್ಣಗೊಂಡಿದ್ದರಿಂದ ಮುಸಲ್ಮಾನರ ಪಾಲಿಗೆ ಇದು ಪವಿತ್ರ ಮಾಸ ಕೂಡ. ಈ ತಿಂಗಳಲ್ಲಿ ಅವರು ಉಪವಾಸ ಮಾಡುತ್ತಾ ದಾನ-ಧರ್ಮಗಳಲ್ಲಿ ತೊಡಗಿಕೊಂಡು, ಕುರಾನಿನ ಪಠನ ಮಾಡಿ, ಅದರ ಸಾರವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡಿ ಆನಂತರ ಅದನ್ನು ಇಫ್ತಾರ್‌ನ ಮೂಲಕ ಮುರಿಯುತ್ತಾರೆ. ವಾಸ್ತವವಾಗಿ ಅರಾಬಿಕ್ ಮೂಲದಿಂದ ಬಂದಿರುವ ಈ ಪದದ ಅರ್ಥವೇನು ಗೊತ್ತೇ? ಚೆನ್ನಾಗಿ ಬೇಯುವುದು, ಉರಿದು ಹೋಗುವುದು, ಹೊಳೆಯುವುದು ಅಂತೆಲ್ಲ. ಸ್ವಲ್ಪ ನಮ್ಮ ಭಾಷೆಗೆ ತರ್ಜುಮೆ ಮಾಡಿದರೆ ತಪಸ್ಸು ಎಂದಷ್ಟೇ. ಇಷ್ಟನ್ನೂ ಏಕೆ ಹೇಳಬೇಕಾಯ್ತೆಂದರೆ ಈ ರಂಜಾನ್ ಮಾಸವನ್ನು ನೆಪವನ್ನಾಗಿರಿಸಿಕೊಂಡು ಇತ್ತೀಚೆಗೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮುಸಲ್ಮಾನರ ವಿರುದ್ಧ ನಯವಾದ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ‘ರಂಜಾನ್ ತಿಂಗಳು ಅತ್ಯಂತ ಪವಿತ್ರವಾಗಿರುವುದರಿಂದ ಈ ತಿಂಗಳಲ್ಲಿ ಮುಸಲ್ಮಾನರು ಯಾವ ದುಷ್ಕೃತ್ಯದಲ್ಲೂ ತೊಡಗಿರುವುದಿಲ್ಲ’ ಎಂದಿದ್ದಾರೆ. ವಾಸ್ತವವಾಗಿ ಅದು ಪಶ್ಚಿಮ ಬಂಗಾಳದ ರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನರು ನಡೆಸಿದ ಕಲ್ಲೆಸೆತದ ಆಕ್ರಮಣದಿಂದ ಅವರನ್ನು ಉಳಿಸುವ ಹೇಳಿಕೆಯಾಗಿತ್ತು. ದುರದೃಷ್ಟವೆಂದರೆ ಆಕೆ ಮುಸಲ್ಮಾನರನ್ನು ಶಾಶ್ವತವಾಗಿ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟಿದ್ದಾರೆ. ಅಲ್ಲದೇ ಮತ್ತೇನು? ರಂಜಾನಿನ ಒಂದು ತಿಂಗಳು ಅವರು ದುಷ್ಕೃತ್ಯದಲ್ಲಿ ತೊಡಗುವುದಿಲ್ಲವೆಂದರೆ ಉಳಿದ ಹನ್ನೊಂದು ತಿಂಗಳು ಅದೇ ಕೆಲಸವೆಂದಾಯ್ತಲ್ಲ ಮತ್ತು ರಂಜಾನ್ ತಿಂಗಳಲ್ಲೂ ಅವರೇ ಈ ಕೃತ್ಯವನ್ನು ಮಾಡಿದ್ದೆಂದು ಸಾಬೀತುಪಡಿಸಿಬಿಟ್ಟರೆ ದುಷ್ಕೃತ್ಯವೆಸಗುವುದೇ ಮುಸಲ್ಮಾನರ ಕೆಲಸವೆಂದು ದೀದಿಯ ಮಾತುಗಳು ಎಂದಾಯ್ತಲ್ಲ!

ದೀದಿ ಈ ಹೇಳಿಕೆ ನೀಡುವ ವೇಳೆಗೆ ಸರಿಯಾಗಿ ದುಬೈನ ಮುಸಲ್ಮಾನ ಮಿತ್ರರೊಬ್ಬರು ಮೊಬೈಲ್ ಸಂದೇಶವೊಂದನ್ನು ಕಳಿಸಿದ್ದರು. ದ.ರಾ ಬೇಂದ್ರೆಯ ವಾಕ್ಯವೆಂದು ಅವರು ಹೇಳುವ ಆ ಸಂದೇಶ ‘ಹಚ್ಚೋದಾದರೆ ದೀಪವನ್ನೇ ಹಚ್ಚು, ಬೆಂಕಿಯನ್ನಲ್ಲ; ಆರಿಸೋದಾದ್ರೆ ನೋವನ್ನು ಆರಿಸು, ನಗುವನ್ನಲ್ಲ’ ಎಂದಿತ್ತು. ಮೊದಲಿನಿಂದಲೂ ಕೆಣಕುವ ಸಂದೇಶವನ್ನೇ ಕಳಿಸುವ ರೂಢಿಯ ಆತ ಇದನ್ನು ಸಹೃದಯತೆಯಿಂದ ಕಳಿಸಿರಲಾರೆ ಎಂಬುದು ಗೊತ್ತಿದ್ದುದರಿಂದಲೇ ನಾನು ನಯವಾಗಿಯೇ, ‘ವಾಹ್! ಜಗವೆಲ್ಲ ಇದನ್ನು ಅರಿತಿದ್ದರೆ ಭಾರತ ಇಂದು ಅಖಂಡವಾಗಿರುತ್ತಿತ್ತು’ ಎಂದು ಉತ್ತರಿಸಿದೆ. ಅತ್ತಲಿಂದ ಈ ಕುರಿತ ಚರ್ಚೆ ಮುಂದುವರೆಯಲಿಲ್ಲ. ಮುಸಲ್ಮಾನರು ಹಿಂದೂಗಳ ಸಹವಾಸದಲ್ಲಿ ಎಷ್ಟು ಹಾಯಾಗಿ ನೆಮ್ಮದಿಯಿಂದಿದ್ದಾರೋ, ಜಗತ್ತಿನಲ್ಲೆಲ್ಲೂ ಹಾಗಿಲ್ಲ. ಆದರೂ ನೋವಿನ ಸಂಗತಿ ಎಂದರೆ ಭಾರತದ ಮುಸಲ್ಮಾನರು ದಿನಗಳೆದಂತೆ ಹೆಚ್ಚು-ಹೆಚ್ಚು ಮತಿಭ್ರಮಿತರಾಗುತ್ತಿದ್ದಾರೆ. ಹಿಂದುಗಳನ್ನು ಅವಹೇಳನ ಮಾಡಲು, ಅವರ ಮಂದಿರಗಳನ್ನು ಧ್ವಂಸಮಾಡಲು, ಮೂರ್ತಿಗಳನ್ನು ಭಂಜಿಸಲು ಅವರಿಗೆ ಇಂತಹ ಮಾಸವೇ ಆಗಬೇಕೆಂದೇನೂ ಇಲ್ಲ. ರಂಜಾನ್ ಸೇರಿದಂತೆ ಎಲ್ಲಾ ತಿಂಗಳಲ್ಲೂ ಈ ಕೆಲಸದಲ್ಲೇ ತೊಡಗಿಕೊಳ್ಳುತ್ತಾರೆ. ರಂಜಾನ್ ಜೋರಾಗಿ ನಡೆಯುತ್ತಿರುವಾಗಲೇ ರಾಜಸ್ಥಾನದಿಂದ ಒಂದು ಸುದ್ದಿ ಬಂತು. ಸಾಂಚಿ ಬುಡಕಟ್ಟು ಜಾತಿಗೆ ಸೇರಿದ ರಾಜುರಾಂ ಎಂಬ ಕೂಲಿ ಕಾರ್ಮಿಕನ ಹೆಂಡತಿ ಝಮ್ಮಾದೇವಿ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಬಾಗಿಲು ತೆರೆದು ನುಗ್ಗಿದ ಶಕೂರ್‌ಖಾನ್ ಆಕೆಯನ್ನು ಬಲಾತ್ಕರಿಸಲು ಯತ್ನಿಸಿದ. ಆಕೆ ಅರಚಾಡುತ್ತಿರುವಾಗಲೇ ಆಕೆಯನ್ನು ವಿವಸ್ತ್ರಗೊಳಿಸಿ ಮುಗಿಬಿದ್ದ. ಆಕೆ ತೀವ್ರವಾಗಿ ಪ್ರತಿಭಟಿಸಿದಳೆಂಬ ಕಾರಣಕ್ಕೆ ಥಿನ್ನರ್ ಅನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚೇಬಿಟ್ಟ. ಆಕೆಯನ್ನು ಉಳಿಸಲೆಂದು ಬಂದ ಅಕ್ಕಪಕ್ಕದವರನ್ನು ಆತ ತಳ್ಳಿ ಓಡಿಸಿದ, ಸಿಕ್ಕು ಬೀಳುತ್ತೇನೆಂದು ಗೊತ್ತಾಗುವಾಗ ತಾನೇ ಕಾಣೆಯಾದ. ಮಟ ಮಟ ಮಧ್ಯಾಹ್ನ ನಡೆದ ಈ ಘಟನೆಯ ಸುದ್ದಿ ತಿಳಿದು ಗಾಬರಿಗೊಂಡ ರಾಜುರಾಂ ತನ್ನ ಹಳ್ಳಿಗೆ ಓಡಿಬಂದು ನೋಡಿದರೆ ಅರ್ಧದಷ್ಟು ಭಾಗ ಬೆಂದು ಹೋಗಿರುವ ಝಮ್ಮಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿರುವಾಗ ಪೊಲೀಸ್ ಠಾಣೆಗೆ ಹೋಗಿ ದೂರುನೀಡಲು ಯತ್ನಿಸಿದರೆ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿಬಿಟ್ಟರು. ಕೊನೆಗೆ ಹಿಂದೂ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ಸ್ಥಳಿಯ ಬಿಜೆಪಿ ಘಟಕ ವ್ಯಾಪಕ ಪ್ರತಿಭಟನೆ ನಡೆಸಿದ ನಂತರ ಆತನ ವಿರುದ್ಧ ಪ್ರಕರಣ ದಾಖಲಿಸಲಾಯ್ತು. ಕಾಂಗ್ರೆಸ್ಸಿಗೆ ಸರಣಿ ಸೋಲುಗಳ ನಂತರವೂ ಬುದ್ಧಿ ಬಂದಿಲ್ಲವೆನ್ನುವುದು ಇದಕ್ಕೇ. ನಿರಂತರವಾಗಿ ಹಿಂದೂಗಳನ್ನು ಅಪಮಾನಗೊಳಿಸುತ್ತಲೇ ಬಂದ ಕಾಂಗ್ರೆಸ್ಸು ಇಂದು ವಿರೋಧಪಕ್ಷದ ಗೌರವವನ್ನು ಕಳೆದುಕೊಂಡು ಟ್ರೋಲ್‌ಗಳಿಗಿಂತ ಕಡೆಯಾಗಿ ಬೀದಿಗೆ ಬಂದು ಕೂರುತ್ತಿದೆ. ಇಷ್ಟಾದಾಗ್ಯೂ ತನ್ನ ಹಿಂದೂ ವಿರೋಧಿ ನಡೆಯನ್ನು ಸರಿಪಡಿಸಿಕೊಳ್ಳದೇ ಹೋಗಿರುವುದು ಅಚ್ಚರಿ ಎನಿಸುತ್ತಿದೆ. ಹಾಗಂತ ಇದು ಕಾಂಗ್ರೆಸ್ಸಿನ ಕಥೆಯಷ್ಟೇ ಅಲ್ಲ. ರಂಜಾನ್‌ಗಿಂತ ಕೆಲವು ದಿನಗಳ ಮುಂಚೆ ಬಿಹಾರದಲ್ಲಿ ಅರ್ಚನಾ ಕುಶ್ವಾಹ ಎಂಬ ಹುಡುಗಿಯನ್ನು ದಾನಿಶ್ ಆಲಂ ಇದೇ ರೀತಿ ಬಲಾತ್ಕರಿಸಿ ಬೆಂಕಿ ಹಚ್ಚಿಬಿಟ್ಟಿದ್ದ. ಅಲ್ಲೆಲ್ಲಾ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿರುವುದು ದೃಗ್ಗೋಚರ.

ರಾಜಸ್ಥಾನದ್ದೇ ಆಳ್ವಾರ್‌ನಲ್ಲಿ ರಂಜಾನಿನ ನಟ್ಟ ನಡುವೆಯೇ ಸಬೀರ್ ನಾಸಿರ್ ಮತ್ತು ನಜೀರ್ ಎಂಬಿಬ್ಬರು 16 ವರ್ಷದ ಹುಡುಗಿಯನ್ನು ಎಳೆದೊಯ್ದು ಬಲಾತ್ಕರಿಸಿದರು. ಹುಡುಗಿಯ ತಾಯಿ ಈ ಕುರಿತಂತೆ ದೂರನ್ನೂ ಕೊಟ್ಟಿದ್ದರು. ಆದರೇನು? ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳದೇ ಆ ಹೆಣ್ಣುಮಗಳನ್ನೇ ಅಪಹಾಸ್ಯಗೊಳಿಸುವಂತಹ ಸ್ಥಿತಿ ನಿರ್ಮಾಣಗೊಂಡಾಗ ಮಾನವನ್ನು ಕಳಕೊಂಡು ನ್ಯಾಯಕ್ಕೂ ಪರಿತಪಿಸಬೇಕಾದ ಸ್ಥಿತಿಗೆ ನಲುಗಿದ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನೇ ಮಾಡಿಕೊಂಡಳು. ಪವಿತ್ರ ಮಾಸದಲ್ಲಿ ಎಂಥದ್ದೆಲ್ಲಾ ಪ್ರಕರಣಗಳು! 

ಇದು ವರದಿಯಾದ ಪ್ರಕರಣಗಳಷ್ಟೇ. ಇದನ್ನು ಬಿಟ್ಟು ಅವರೇ ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಯಾವ ರೀತಿಯ ದೌರ್ಜನ್ಯ ನಡೆಯುತ್ತದೆಂಬುದನ್ನು ಹೇಳಿ ಮುಗಿಸುವುದು ಸಾಧ್ಯವಿಲ್ಲ. ಮಸೀದಿಗಳಲ್ಲಿ ಕಲ್ಲನ್ನು ಶೇಖರಿಸಿಟ್ಟುಕೊಂಡು ಹಿಂದೂಗಳ ಮೆರವಣಿಗೆಯ ಮೇಲೆ ಗುರಿಯಿಟ್ಟು ಎಸೆಯುವ ದುಷ್ಟರಿಗೇನು ಅವರಲ್ಲಿ ಕೊರತೆಯಿಲ್ಲ! ತಪಸ್ಸಿಗಾಗಿ ರಂಜಾನ್ ಎಂಬ ಮಾತಿಗೂ, ಇವರು ನಡೆದುಕೊಳ್ಳುವ ರೀತಿಗೂ ಅಜಗಜಾಂತರವಲ್ಲವೇನು? ಇಷ್ಟಕ್ಕೂ ಮುಸಲ್ಮಾನರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸಲು ಕಾರಣ ಯಾರು ಗೊತ್ತೇ? ಸಹಜವಾಗಿಯೇ ಆಳುವ ಮಂದಿ. ಉತ್ತರ ಪ್ರದೇಶದಲ್ಲಿ, ಗುಜರಾತಿನಲ್ಲಿ ಬಾಲಬಿಚ್ಚದ ಈ ಜನ ರಾಜಸ್ಥಾನದಲ್ಲಿ ಮೆರೆದಾಡುತ್ತಾರಲ್ಲ, ಹೇಗೆ? ಸಿದ್ದರಾಮಯ್ಯನವರ ಕಾಲದಲ್ಲಿ ಸರಣಿ ಹಿಂದೂ ತರುಣರ ಹತ್ಯೆಯಾಗಿದ್ದು ನೆನಪಿದೆಯಲ್ಲ? ಅವರು ಅಧಿಕಾರಕ್ಕೆ ಬಂದೊಡನೆ ಈಗ ದೇಶದ್ರೋಹಿ ಕಾರ್ಯಗಳಿಗಾಗಿ ನಿಷೇಧಗೊಳ್ಳಲ್ಪಟ್ಟಿರುವ ಪಿಎಫ್ಐನ ನೂರಾರು ಕೇಸುಗಳನ್ನು ಹಿಂಪಡೆದರಲ್ಲ, ಒಮ್ಮೆಯಾದರೂ ಅವರು ಇವೆಲ್ಲಕ್ಕೂ ಎದುರಿಗೆ ಬಂದು ಉತ್ತರಿಸಿದ್ದಾರೇನು? ಹನುಮ ಜಯಂತಿಯಂದು ಮಾಂಸಾಹಾರ ಮುಟ್ಟುವುದಿಲ್ಲವೆಂದು ಹೇಳಿದ ತಮ್ಮದೇ ಕಾರ್ಯಕರ್ತನಿಗೆ ಹನುಮನ ಹುಟ್ಟಿದ ದಿನಾಂಕ ಗೊತ್ತೇನೊ ಎಂದು ಮೂದಲಿಸುವ ಇಂತಹ ನಾಯಕರೇ ಕಲ್ಲೆಸೆಯುವ ಮಂದಿಗೆ ನಿಜವಾದ ಪ್ರೇರಣೆ. ಇನ್ನು ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತ ವರ್ಗವಿದೆ. ಅವರು ಸದಾ ಪುಂಡಾಟಿಕೆ ನಡೆಸುವ, ಅಲ್ಪಸಂಖ್ಯಾತರಾಗಿರುವ ಮಂದಿಯನ್ನು ವಿರೋಧಿಸುವ ಧೈರ್ಯ ತೋರದೇ ಇರುವುದೇ ಕಲ್ಲೆಸೆಯುವವರಿಗೆ ಶಕ್ತಿ ತುಂಬುತ್ತದೆ. ಹಾಗಂತ ಯಾರೂ ವಿರೋಧಿಸುವವರಿರುವುದಿಲ್ಲವೆಂದೇನೂ ಇಲ್ಲ. ಶಾಂತವಾಗಿರುವ ಬಹುಸಂಖ್ಯಾತ ಮಂದಿಯಲ್ಲಿಯೇ ವಿಕಾಸದ ದೃಷ್ಟಿಯಿಂದ ಯೋಚಿಸುವ ಕೆಲವೇ ಮಂದಿ ಇದ್ದಾರೆ. ಅವರಿಗೆ ತಮ್ಮ ಸಮುದಾಯ ಈ ಮೂಢನಂಬಿಕೆಗಳಿಂದ ಆಚೆ ಬಂದು ಎಲ್ಲರಂತೆ ಮುಖ್ಯಭೂಮಿಕೆಯಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕೆಂಬ ಬಯಕೆಯಿದೆ. ಆದರೆ ಅವರ ಮಾತುಗಳಿಗೆ ಶಕ್ತಿ ತುಂಬಬಲ್ಲಂತಹ ನಾಯಕತ್ವವಿಲ್ಲದೇ ಅವರು ಸೊರಗಿ ಹೋಗುತ್ತಾರೆ. ಈ ವಿಕಾಸ ಪರವಾದ ಮಂದಿ ಮೋದಿಯನ್ನು, ಯೋಗಿಯವರನ್ನು ಇಷ್ಟಪಡುವುದು, ಅವರ ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಉದ್ದೇಶದ ಕಾರಣಕ್ಕಾಗಿಯೇ. 

ಸೌದಿ ಅರೇಬಿಯಾದ ಈಗಿನ ಯುವರಾಜರು ಇದೇ ರೀತಿ ವಿಕಾಸದ ಕಲ್ಪನೆಯಿಟ್ಟುಕೊಂಡವ. ಹೀಗಾಗಿಯೇ ಆತ ಈ ಬಾರಿ ರಂಜಾನ್ ಆರಂಭವಾಗುವುದಕ್ಕೂ ಮುನ್ನ ಹತ್ತು ನಿಯಮಗಳನ್ನು ಅಲ್ಲಿನ ಮುಸಲ್ಮಾನರ ಮೇಲೆ ಹೇರಿದ್ದಾನೆ. ಮೌಲ್ವಿಗಳು ಮಸೀದಿಯಲ್ಲಿ ಇರಲೇಬೇಕೆಂದು, ಅವರೇ ಪ್ರಾರ್ಥನೆಯನ್ನು ನಿರ್ವಹಿಸಬೇಕೆಂದು ಕಡ್ಡಾಯ ಮಾಡಿದ್ದಾನೆ. ಯಾವ ಕಾರಣಕ್ಕೂ ಪ್ರಾರ್ಥನೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲವೆಂದೂ, ಹೀಗೆ ನಡೆಯವ ಪ್ರಾರ್ಥನೆಯನ್ನು ರೆಕಾರ್ಡ್ ಮಾಡಿ ಹಂಚುವಂತಿಲ್ಲವೆಂದು ಎಚ್ಚರಿಸಿದ್ದಾನೆ. ಇನ್ನೂ ಅಚ್ಚರಿ ಎಂದರೆ ಪ್ರಾರ್ಥನೆಯನ್ನು ಚುಟುಕಾಗಿ ಮತ್ತು ಸರಳವಾಗಿ ಮಾಡಿ ಮುಗಿಸಬೇಕೆಂದು ಹೇಳಿರುವುದಲ್ಲದೇ ಸಂಜೆಯ ಪ್ರಾರ್ಥನೆ ಯಾರಿಗೂ ತೊಂದರೆಯಾಗದಂತೆ ಬೇಗ ಮುಗಿಸಬೇಕೆಂಬ ನಿಯಮವನ್ನೂ ಹೇರಿದ್ದಾನೆ. ಅನೇಕ ಭಾರತೀಯ ಮುಸಲ್ಮಾನರಿಗೆ ಜೀರ್ಣವಾಗದ ಈ ಸಂಗತಿಗಳ ಜೊತೆಗೆ ಮಸೀದಿಯ ಹೊರಗೆಲ್ಲೂ ಇಫ್ತಾರ್ ಮಾಡಬಾರದು ಎಂಬ ಕಟುವಾದ ನಿಯಮವನ್ನು ಜೋಡಿಸಿ, ಇಫ್ತಾರ್ ಮುಗಿದೊಡನೆ ಆ ಸ್ಥಳವನ್ನು ಸ್ವಚ್ಛಗೊಳಿಸಬೇಕೆಂದೂ ಆದೇಶಿಸಿಬಿಟ್ಟಿದ್ದಾನೆ. ನಡು ರಸ್ತೆಯಲ್ಲೇ ಟಾರ್ಪಾಲನ್ನು ಹಾಸಿಕೊಂಡು, ಅಲ್ಲಿಯೇ ತಾವು ತಂದ ಅಡುಗೆಯನ್ನು ತಿಂದು, ಇಡಿಯ ರಸ್ತೆಯನ್ನು ಹೊಲಸುಗೊಳಿಸುವ ಇಫ್ತಾರ್ ಮುರಿಯುವ, ಭಾರತದ ಮುಸಲ್ಮಾನರಿಗೆ ಸೌದಿ ರಾಜನ ಕರೆ ಕೇಳುತ್ತದೇನೋ ನೋಡಬೇಕಷ್ಟೇ! ನೆನಪಿಡಿ, ಇಸ್ಲಾಂನ ಮೂಲ ಇದೇ ಸೌದಿ. ಭಾರತದ ಮುಸಲ್ಮಾನರೇನಿದ್ದರೂ ಅಲ್ಲಿನ ಆದೇಶವನ್ನು ಅನುಸರಿಸಬೇಕಷ್ಟೇ. ಅವರು ಅದನ್ನು ಧಿಕ್ಕರಿಸಿದರೆ ಇವರದ್ದು ಇಸ್ಲಾಂ ಎನಿಸಿಕೊಳ್ಳದೇ ಬೇರೆಯೇ ರಿಲಿಜನ್ ಆಗುತ್ತದೆ. 

ಸೌದಿಯ ಕಥೆ ಹಾಗಾದರೆ ಇತ್ತ ಚೀನಾದಲ್ಲಿ ಉಯ್ಘುರ್ ಮುಸಲ್ಮಾನರು ರಂಜಾನ್ ಸಂದರ್ಭದಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅಲ್ಲಿನ ಶಿಂಜಿಯಾಂಗ್ ಪ್ರಾಂತ್ಯದ 1811 ಹಳ್ಳಿಗಳಲ್ಲಿ ಹಬ್ಬಿಕೊಂಡಿರುವ ಈ ಮುಸಲ್ಮಾನರ ಮೇಲೆ ರಂಜಾನ್ ತಿಂಗಳಲ್ಲಿ ದಿನದ 24 ತಾಸೂ ವಿಶೇಷ ಕಣ್ಗಾವಲಿರಿಸಲಾಗಿದೆ. ಕಾರಣವೇನು ಗೊತ್ತೇ? ಚೀನಾ ಸರ್ಕಾರ ಇವರ್ಯಾರೂ ಉಪವಾಸ ಮಾಡುವಂತಿಲ್ಲವೆಂದು ಆದೇಶಿಸಿದೆ. ಪೋಷಕರು ಉಪವಾಸ ಮಾಡಿದರೆ ಸುಳಿವು ನೀಡುವಂತೆ ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡಲಾಗುತ್ತಿದೆ. ಸುಮಾರು ಒಂದುಕಾಲು ಕೋಟಿಯಿರುವ ಈ ಮುಸಲ್ಮಾನರು ರಂಜಾನ್‌ನ ಅವಧಿಯಲ್ಲಿ ವಿಚಿತ್ರವಾದ ಸಂಕಟಕ್ಕೆ ಸಿಲುಕಿದ್ದಾರೆ ಎಂದು ಉಯ್ಘುರ್‌ಗಳ ಜಾಗತಿಕ ಸಂಘಟನೆ ಗಲಾಟೆ ಎಬ್ಬಿಸಿದೆ. ಭಾರತದ ಮುಸಲ್ಮಾನರ ಬೆಂಬಲಕ್ಕೆ ತಾನಿದ್ದೇನೆಂದು ಪದೇ ಪದೇ ಹೇಳಿಕೊಳ್ಳುವ ಭಿಕಾರಿ ಪಾಕಿಸ್ತಾನ ಈ ಮುಸಲ್ಮಾನರ ಬಗ್ಗೆ ಮಾತ್ರ ದನಿಯೇ ಎತ್ತುವುದಿಲ್ಲ. ಅಚ್ಚರಿಯಲ್ಲವೇನು? ಭಿಕಾರಿ ಪಾಕಿಸ್ತಾನವೆಂದದ್ದಕ್ಕೆ ಕೆಲವರಿಗೆ ಬೇಸರವಾಗಬಹುದೇನೋ! ರಂಜಾನ್ ತಿಂಗಳಲ್ಲಿ ಗೋಧಿಹಿಟ್ಟು ಹಂಚಲೆಂದು ಸರ್ಕಾರ ವ್ಯವಸ್ಥೆ ಮಾಡಿಕೊಂಡಿದ್ದಾಗ ಅದನ್ನು ಪಡೆಯಲು ಧಾವಿಸಿದ ಮಂದಿಯಲ್ಲಿ ಅನೇಕರು ನೂಕುನುಗ್ಗಲಿಗೆ ಒಳಗಾಗಿಯೇ ಪ್ರಾಣಬಿಟ್ಟರಂತೆ. ಅಲ್ಲಿನ ಸರ್ಕಾರ ಭಾರತ ಹಾಕಿದ ದಿಗ್ಬಂಧನಕ್ಕೆ ಹೇಗೆ ಪತರಗುಟ್ಟಿದೆ ಎಂದರೆ ನಮ್ಮ ಪ್ರಭಾವದಿಂದಾಗಿಯೇ ಗ್ರೀಸ್ ಸಬ್ಮೆರಿನ್‌ಗೆ ಬೇಕಾದ ಬ್ಯಾಟರಿಗಳನ್ನು ಕೊಡಲು ನಿರಾಕಿರಿಸಿದೆ. ಗಾಯಕ್ಕೆ ಉಪ್ಪು ಹಾಕುವಂತೆ ಭಾರತ ಪಾಕಿಸ್ತಾನಕ್ಕೆ ಹರಿಯುವು ನೀರಿನ ಕುರಿಂತಂತಹ 1960ರ ಒಪ್ಪಂದವನ್ನು ಪುನರ್ ನವೀಕರಿಸಲು ಕಳಿಸಿದ ಪತ್ರಕ್ಕೆ ವಿಶ್ವಬ್ಯಾಂಕಿನಿಂದಲೂ ಸಹಾಯ ಸಿಗದೇ ಹೋದಾಗ ಪಾಕಿಸ್ತಾನ ಬಾಯ್ಮುಚ್ಚಿಕೊಂಡು ಸಂಧಾನಕ್ಕೆ ಬರಲೊಪ್ಪಿದೆ. ಇದೂ ಕೂಡ ರಂಜಾನ್ ತಿಂಗಳಲ್ಲೇ ನಡೆದದ್ದು. 

ಕೆಲವೇ ಕೆಲವು ಪುಂಡ ಮುಸಲ್ಮಾನರು ರಾಜಕೀಯದ ಮಂದಿಯ ಆಮಿಷಕ್ಕೆ ಒಳಗಾಗಿ ಹಿಂದೂ-ಮುಸಲ್ಮಾನ್ ಬಾಂಧವ್ಯವನ್ನು ಕೆಡಿಸಲೆತ್ನಿಸಿದಾಗ ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತರು ಸದ್ದು ಮಾಡಬೇಕಾದ ಅಗತ್ಯವಿದೆ. ರಂಜಾನ್ ತಿಂಗಳಿನ ತಪಸ್ಸಿನ ವೇಳೆ ಅವರು ಈ ಸಂಕಲ್ಪ ಮಾಡದೇ ಹೋದರೆ ಭವಿಷ್ಯದ ದಿನಗಳಲ್ಲಿ ಇಸ್ಲಾಂ ಜಾಗತಿಕ ಅಧಃಪತನ ಕಾಣುವುದು ನಿಶ್ಚಿತ. ಬೇಂದ್ರೆಯವರೇ ಹೇಳಿದ್ದಾರಲ್ಲ, ‘ಹಚ್ಚೋದಾದ್ರೆ ದೀಪವನ್ನು ಹಚ್ಚು, ಬೆಂಕಿಯನ್ನಲ್ಲ’ ಅಂತ. ಬೆಂಕಿಯನ್ನು ಹಚ್ಚುವ ಮಂದಿ ದೀರ್ಘಕಾಲ ಉಳಿಯುವುದು ಸಾಧ್ಯವಿಲ್ಲ ಏಕೆಂದರೆ ನೆರಮನೆಯನ್ನು ಸುಡಲೆಂದು ಹಚ್ಚುವ ಬೆಂಕಿ ಆನಂತರ ತನ್ನನ್ನೇ ಸುಡುತ್ತದೆ. ಅಲ್ಲವೇನು?

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ನಿಮಗೆ ನೆನಪಿರಬೇಕಲ್ಲ, ತೈವಾನ್ ವಿಚಾರದಲ್ಲಿ ಅಮೇರಿಕಾ ಚೀನಾಕ್ಕೆ ಕಟುವಾದ ಸಂದೇಶ ನೀಡಿತ್ತು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ದರು. ಇವರೇ ಹುಟ್ಟುಹಾಕಿಕೊಂಡ ಸಂಘಟನೆಯೊಂದಿದೆ. ಇಂಡೋ-ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ ಎಂಬುದು ಅದರ ಹೆಸರು. ಚಿತ್ರಕಲಾ ಪರಿಷತ್ ನಲ್ಲಿ ಪ್ರತಿಭಟನೆಯ ನೆಪದಲ್ಲಿ ಈ ಕಾಂಗ್ರೆಸ್ಸಿಗರು ಚೀನಾದ ರಾಯಭಾರಿಯನ್ನೇ ಕರೆಸಿದ್ದರು. ಜೊತೆಗೆ ಒಂದು ಚಿತ್ರಪ್ರದರ್ಶನ. ಮುಖ್ಯ ಅತಿಥಿಯಾಗಿ ಭಾಗವಹಿಸಬೇಕೆಂದಿದ್ದವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯನವರು. ಸ್ವಲ್ಪ ಪ್ರತಿಭಟನೆಯಾದೊಡನೆ ‘ನಾನು ಬರುವುದಿಲ್ಲವೆಂದರೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಬಿಟ್ಟಿದ್ದಾರಲ್ಲ’ ಎಂದು ಮೊಸಳೆ ಕಣ್ಣೀರು ಸುರಿಸಿದ ಅವರು ಉಳಿದ ಕಾಂಗ್ರೆಸ್ಸಿಗರು ಈ ಪ್ರತಿಭಟನೆಗೆ ಹೋಗುವುದಿಲ್ಲವೆಂದೇನೂ ಹೇಳಲಿಲ್ಲ! ಪ್ರತಿಭಟನೆ ಆಯ್ತು ಕೂಡ. ಇಷ್ಟೆಲ್ಲಾ ಈಗೇಕೆಂದರೆ ಚೀನಾದ ಗಡಿಯ ಬರೋಬ್ಬರಿ ನೂರು ಕಿಲೋಮೀಟರ್ ದೂರದಲ್ಲಿ ಭಾರತ ಮತ್ತು ಅಮೇರಿಕಾಗಳು ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದಕ್ಕೆ ಚೀನಾ ಪ್ರತಿಭಟನೆ ವ್ಯಕ್ತಪಡಿಸಿ ಎಚ್ಚರಿಕೆ ಕೂಡ ಕೊಡುವ ಪ್ರಯತ್ನ ಮಾಡಿದೆ. ಭಾರತ ಎಂದಿನಂತೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಕೊಟ್ಟರೆ ಅಮೇರಿಕಾ ಕೂಡ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ದರ್ದು ನಿಮಗೆ ಬೇಕಿಲ್ಲ ಎಂದು ಹೇಳಿಬಿಟ್ಟಿದೆ. ಚೀನಾದ ವಿಚಾರದಲ್ಲಿ ಅಮೇರಿಕಾ ಆಂತರಿಕ ಹಸ್ತಕ್ಷೇಪ ಮಾಡಿದೆ ಎಂದು ಬಾಯಿಬಡಕೊಂಡಿದ್ದ ಕಾಂಗ್ರೆಸ್ಸಿಗರು ಈಗೇಕೋ ಶಾಂತರಾಗಿಬಿಟ್ಟಿದ್ದಾರೆ. ಪ್ರತಿಭಟನೆ ಇರಲಿ, ಚೀನಾದ ವಿರುದ್ಧ ಒಂದು ಹೇಳಿಕೆ ಕೊಡುವ ಸಾಹಸವನ್ನೂ ಮಾಡಲಿಲ್ಲ. ಚೀನಾದಲ್ಲಿ ಮಳೆ ಬಿದ್ದರೆ ಇವರಿಗೆ ಥಂಡಿಯಾಗುತ್ತದೆ. ಆದರೆ ಭಾರತದಲ್ಲಿ ಮಂಜೇ ಸುರಿದರೂ ಇವರಿಗೆ ಅದು ತೊಂದರೆ ಕೊಡುವುದಿಲ್ಲ. ದುರ್ದೈವವಲ್ಲವೇನು? 

ಇರಲಿ. ಇವರೆಲ್ಲ ಇಷ್ಟು ಆರಾಧಿಸುವ ಚೀನಾ ಕಳೆದ ಎಂಟ್ಹತ್ತು ದಿನಗಳಿಂದ ಪಡಬಾರದ ಪಾಡು ಪಡುತ್ತಿದೆ. ನವೆಂಬರ್ ತಿಂಗಳ ಕೊನೆಯ ಭಾಗದ ವೇಳೆಗೆ ಶಿಂಜಿಯಾಂಗ್ ಪ್ರಾಂತ್ಯದ ಉರುಕ್ಮಿಯಲ್ಲಿ ಹತ್ತಾರು ಮನೆಗಳುಳ್ಳ ಅಪಾರ್ಟ್ ಮೆಂಟ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಹತ್ತಕ್ಕೂ ಹೆಚ್ಚು ಮಂದಿ ತೀರಿಕೊಂಡರು. ಜನರ ಆಕ್ರೋಶಕ್ಕೆ ಕಾರಣವಾದ ಈ ಸಂಗತಿ ದಶಕಗಳಷ್ಟು ದೀರ್ಘಕಾಲದ ನಂತರ ಚೀನಿಯರನ್ನು ಪ್ರತಿಭಟನೆಯ ನೆಪದಲ್ಲಿ ಬೀದಿಗೆ ತಂತು. ಅಪಾರ್ಟ್‌ಮೆಂಟಿಗೆ ಬೆಂಕಿ ಹತ್ತಿಕೊಂಡರೆ ಪ್ರತಿಭಟನೆ ಮಾಡುವುದೇತಕ್ಕೆ ಎಂದು ಆಶ್ಚರ್ಯವಾಗಿರಬೇಕಲ್ಲವೇ? ಜೀರೊ ಕೋವಿಡ್‌ನ ಹುಚ್ಚಿಗೆ ಬಿದ್ದಿರುವ ಷಿ ಇಲ್ಲಿಂದ ಯಾರೊಬ್ಬರೂ ಆಚೆಗೆ ಬರದಿರುವಂತೆ ಹೊರಬಾಗಿಲಿಗೆ ಕಬ್ಬಿಣದ ರಾಡುಗಳಿಂದ ವೆಲ್ಡಿಂಗ್ ಮಾಡಿಸಿದ್ದರ ಪರಿಣಾಮ ಜನ ಅನಿವಾರ್ಯವಾಗಿ ಬೆಂಕಿಯಲ್ಲಿ ಬೇಯಬೇಕಾಗಿ ಬಂತು. ಜಗತ್ತಿನಾದ್ಯಂತ ಕೊವಿಡ್‌ನ ಸಂಕಟ ಇರಬಹುದೇನೋ ಎಂದೇ ಭಾವಿಸಿಕೊಂಡಿದ್ದ ಚೀನೀ ಮಂದಿಗೆ ಫುಟ್ಬಾಲ್ ವಿಶ್ವಕಪ್‌ನ ವೇಳೆಗೆ ಮುಖಕ್ಕೆ ಮಾಸ್ಕು ಕೂಡ ಧರಿಸದೇ ಓಡಾಡುತ್ತಿರುವ ಮಂದಿಯನ್ನು ಕಂಡು ಕಿರಿಕಿರಿ ಎನಿಸಿರಲು ಸಾಕು. ವರ್ಷ-ವರ್ಷಗಳೇ ಉರುಳಿದರೂ ಇನ್ನೂ ತಾವು ಕೋವಿಡ್‌ನ ಆತಂಕದಲ್ಲೇ ಬದುಕಬೇಕಾಯ್ತಲ್ಲ, ಮನೆಯಿಂದ ಹೊರಬರಲೂ ಸರ್ಕಾರದ ಅನುಮತಿ ಕೇಳಬೇಕಾಯ್ತಲ್ಲ ಎಂದವರಿಗೆ ಅನಿಸಿರಲು ಸಾಕು. ಕೊನೆಗೂ ಜನ ಬೀದಿಗೆ ಬಂದರು. ಲಾಕ್ಡೌನ್ ತೆಗೆಯಿರಿ ಎಂಬ ಘೋಷಣೆ ಕೂಗಲಾರಂಭಿಸಿದರು. ಪ್ರತಿಭಟನೆಯ ಕಾವು ಹಬ್ಬಲು ತುಂಬ ಸಮಯ ತೆಗೆದುಕೊಳ್ಳಲಿಲ್ಲ. ಶಾಂಘಾಯ್ ನವೆಂಬರ್ 26ಕ್ಕೆ ಬೀದಿಗೆ ಬಂತು. 2020ರಲ್ಲಿ ಹಾಂಗ್ ಕಾಂಗ್‌ನ ಮಂದಿ ಸರ್ಕಾರದ ದಮನ ನೀತಿಯ ವಿರುದ್ಧ ಪ್ರತಿಭಟನೆಗೆ ಖಾಲಿ ಕಾಗದ ಬಳಸಿದ್ದರಲ್ಲ ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಯ್ತು. ಸರ್ಕಾರದ ವಿರುದ್ಧ ಘೋಷಣೆ ಇದ್ದರೆ ತಾನೇ ಜೈಲಿಗೆ ತಳ್ಳುವುದು? ಖಾಲಿಯ ಹಾಳೆಯನ್ನು ಅವರು ಏನೆಂದು ಗುರುತಿಸುತ್ತಾರೆ? ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಮರುದಿನವೇ ಭಾಗವಹಿಸಿದವರನ್ನು ಬಂಧಿಸಲುದ್ಯುಕ್ತವಾಯ್ತು. ಇದನ್ನು ಪ್ರತಿಭಟಿಸಿ ಬೀಜಿಂಗ್‌ನಲ್ಲಿ ಜನ ಬೀದಿಗಿಳಿದರು. ಪೀಕಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದರು. ಈ ಬಾರಿ ಇದು ಬರಿ ಲಾಕ್ಡೌನ್ ತೆಗೆಯಿರಿ ಎಂಬುದಷ್ಟಕ್ಕೇ ಸೀಮಿತವಾಗದೇ ಷಿ ಜಿಂಪಿಂಗ್ ಅನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಲಾಯ್ತು ಕೂಡ. ಇದು ಅಧಿಕಾರಕ್ಕೆ ಬಂದಾಗಿನಿಂದಲೂ ಷಿಯ ಪಾಲಿಗೆ ಬಲುದೊಡ್ಡ ಹೊಡೆತ. ಲಾಂಗ್‌ಜೊವರೆಗೂ ಪ್ರತಿಭಟನೆಗಳು ಹಬ್ಬಿ ಮೊದಲ ಬಾರಿಗೆ ಚೀನಾದ ದಮನ ನೀತಿಯನ್ನು ಮೀರಿ ಸುದ್ದಿ ಜಗತ್ತಿನ ಮೂಲೆ-ಮೂಲೆಗೂ ತಲುಪಿತು. ಪ್ರತಿಭಟನೆಯ ವೇಳೆಯೇ ಇದರ ವರದಿ ಮಾಡುತ್ತಿದ್ದ ಬಿಬಿಸಿಯ ವರದಿಗಾರ ಎಡ್ವರ್ಡ್ ಲಾರೆನ್ಸ್ ನನ್ನು ಪೊಲೀಸರು ಮನಸೋ ಇಚ್ಛೆ ಬಡಿದರಲ್ಲದೇ ಆತನನ್ನು ಬಂಧಿಸಿ ಎಳೆದೊಯ್ದರೂ ಕೂಡ. ಹಾಂಗ್ ಕಾಂಗ್ ಶಾಂತವಾಗಿ ಚೀನಿಯರ ನೋವಿಗೆ ಬೆಂಬಲ ಸೂಚಿಸಿತು. ‘ನನಗೆ ಸ್ವಾತಂತ್ರ್ಯ ಕೊಡು, ಇಲ್ಲವೇ ಕೊಂದುಬಿಡು’ ಎನ್ನುವ ಮಾತು ಎಲ್ಲೆಡೆ ಕೇಳಿಬಂತು! 

ಚೀನಾದ ಜನ ಎಲ್ಲ ದಬ್ಬಾಳಿಕೆಯನ್ನೂ ಸಹಿಸಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಅವರನ್ನು ಸ್ವಲ್ಪ ಭಡಕಾಯಿಸಿದರೆ ಸಾಕು ಅವರಿಂದ ಬೇಕಾದ್ದನ್ನು ಮಾಡಿಸಿಕೊಳ್ಳಬಹುದು ಎಂಬ ಪರಿಸ್ಥಿತಿ ಇರುವಾಗ, ಅವರು ಬೀದಿಗೆ ಬಂದಿದ್ದಾದರೂ ಹೇಗೆ ಮತ್ತು ಏಕೆ ಎಂಬ ಪ್ರಶ್ನೆ ಸಹಜವೇ. ಇದಕ್ಕೆ ಕರೋನಾ ಎಂಬ ಮಹಾಮಾರಿಯೇ ಕಾರಣ ಎಂದರೆ ಅಚ್ಚರಿಯಲ್ಲ. ಕರೋನಾ ಆರಂಭವಾದಾಗ ಜಿರೊ ಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ ಷಿ ಕಠೋರ ಕ್ರಮಗಳ ಮೂಲಕ ಜನರನ್ನು ಸಾಯದೇ ಉಳಿಸಿಕೊಂಡ. ಆರಂಭದಲ್ಲಿ ಜನ ಪ್ರತಿಭಟಿಸಿದರಾದರೂ ಕಾಲಕ್ರಮದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಉಂಟಾದ ಸಾವು ನೋವುಗಳನ್ನು ಕಂಡು, ತಮ್ಮ ಅಧ್ಯಕ್ಷರಿಗಿರುವ ಜನರ ಆರೋಗ್ಯದ ಕುರಿತ ಕಾಳಜಿಯನ್ನು ಕಂಡು ಅವರು ಮನಸೋತರು. ಚೀನಾದಲ್ಲಿ ಕೊವಿಡ್ ಸಾವು ಹೆಚ್ಚು-ಕಡಿಮೆ ನಗಣ್ಯವೇ ಆಗಿತ್ತು. ಆದರೆ ಈ ತಂತ್ರ ಜನರ ಬದುಕನ್ನು ಸುದೀರ್ಘಕಾಲ ದುರ್ಭರಗೊಳಿಸಿದಾಗ ಅವರು ತಿರುಗಿ ಬೀಳುವ ಸಾಧ್ಯತೆ ಇತ್ತಲ್ಲ ಅದನ್ನು ಗಾಲ್ವಾನ್‌ನಲ್ಲಿ ಸಾಹಸ ಮಾಡುವ ಮೂಲಕ ಮುಚ್ಚಿಕೊಳ್ಳುವ ಯತ್ನ ಮಾಡಿತು ಚೀನಾ. ಅವರ ದುರದೃಷ್ಟಕ್ಕೆ 40ಕ್ಕೂ ಹೆಚ್ಚು ಸೈನಿಕರನ್ನು ಕಳಕೊಂಡು ಮುಖಭಂಗ ಅನುಭವಿಸಿತು. ಆದರೆ ತಮ್ಮ ಜನರ ಮುಂದೆ ಯಾವ ಸೈನಿಕರೂ ತೀರಿಕೊಂಡಿಲ್ಲ ಎಂದು ಹೇಳುವ ಮೂಲಕ ಮಾನವುಳಿಸಿಕೊಳ್ಳುವ ಯತ್ನ ಮಾಡಿತ್ತು. ಈ ವೇಳೆಗೆ ಎವರ್‌ಗ್ರ್ಯಾಂಡ್ ಎಂಬ ರಿಯಲ್ ಎಸ್ಟೇಟ್ ಕಂಪೆನಿಯೊಂದು ಬೀದಿಗೆ ಬಂದು ಚೀನಾದ ಮೇಲ್ಮಧ್ಯಮ ಮತ್ತು ಮಧ್ಯಮವರ್ಗದ ಮಂದಿ ಕಣ್ಣೀರಿಡುವಂತಾಯ್ತು. ಕರೋನಾಕ್ಕಿಂತ ಮುಂಚೆ ಜನರಿಂದ ಮತ್ತು ಅನೇಕ ಬ್ಯಾಂಕುಗಳಿಂದ ಸಾಕಷ್ಟು ಸಾಲಪಡೆದು ಅಗಾಧವಾಗಿ ಬೆಳೆದುನಿಂತ ಎವರ್ ಗ್ರ್ಯಾಂಡ್ 200 ನಗರಗಳಲ್ಲಿ ಆಸ್ತಿಯನ್ನು ಮಾಡಿತು. ತನ್ನ ಶೇರುದಾರರಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಟ್ಟು ಭರವಸೆ ಮೂಡಿಸಿತು. ಕರೋನಾ ಲಾಕ್ಡೌನಿನ ನಂತರ ಮನೆಗಳ ಮಾರಾಟ ತೀವ್ರ ಪ್ರಮಾಣದಲ್ಲಿ ಕಡಿಮೆಯಾಯ್ತಲ್ಲ ಕಂಪೆನಿ ಸಾಕಷ್ಟು ನಷ್ಟ ಅನುಭವಿಸಿತು. ಚೀನಾದ ಬ್ಯಾಂಕುಗಳಿಂದ ಸಾಲ ಪಡೆಯಬಹುದಾದ ಮಿತಿಯನ್ನು ದಾಟಿದ್ದರಿಂದ ಅದಕ್ಕೀಗ ಹಣಕಾಸಿನ ಮುಗ್ಗಟ್ಟು ಕಂಡುಬಂತು. ಹೂಡಿಕೆದಾರರಿಗೆ ಕೊಡಬೇಕಾಗಿದ್ದ ಹಣದ ಬದಲು ಅರೆನಿರ್ಮಿತ ಮನೆಗಳನ್ನು ನೀಡಲಾರಂಭಿಸಿತು. ಹಣವೇ ಬೇಕು ಎಂದವರ ಮುಂದೆ ಕೈಚೆಲ್ಲಿ ನಿಂತುಬಿಟ್ಟಿತು. ಶೆನ್‌ಜೆನ್‌ನಲ್ಲಿ ಮುಖ್ಯ ಕಛೇರಿಯ ಎದುರಿಗೆ ದೊಡ್ಡಮಟ್ಟದ ಜನ ಬೀದಿಗೆ ಬಂದುನಿಂತರು. ಈ ಕಂಪೆನಿಯ ಒಟ್ಟು ಸಾಲ ಎಷ್ಟಿತ್ತು ಗೊತ್ತೇನು? ಒಂದು ಅಂದಾಜಿನ ಪ್ರಕಾರ 88 ಬಿಲಿಯನ್ ಡಾಲರ್ಗಳಷ್ಟು! ಕಳೆದ ಜೂನ್ ತಿಂಗಳಿಗೆ ಕಟ್ಟಬೇಕಿದ್ದ ಬಡ್ಡಿಯೇ 80 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚಿತ್ತು. ಎವರ್ ಗ್ರ್ಯಾಂಡ್ ನ ಈ ಪರಿಸ್ಥಿತಿಯಿಂದಾಗಿ ಚೀನಾದಲ್ಲಿ ಒಟ್ಟಾರೆ ಮನೆಗಳ ಬೆಲೆಯೇ ಶೇಕಡಾ 20ರಷ್ಟು ಕುಸಿಯಿತು. ಎಲ್ಲ ರಿಯಲ್ ಎಸ್ಟೆಟ್ ಕಂಪೆನಿಗಳ ಶೇರು ಮೌಲ್ಯ ಪಾತಾಳಕ್ಕೆ ಹೋಯ್ತು. ಎಲ್ಲಕ್ಕಿಂತ ದೊಡ್ಡ ನಷ್ಟ ಅನುಭವಿಸಿದ್ದು ತಮ್ಮೆಲ್ಲ ಬದುಕಿನ ಹಣವನ್ನು ಈ ಕಂಪೆನಿಯೊಳಗೆ ಹೂಡಿದ್ದ ದೊಡ್ಡಮಟ್ಟದ ಮಧ್ಯಮವರ್ಗದ ಮಂದಿ!

ಚೀನಾದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಅದರ ಸಾಲ 8 ಟ್ರಿಲಿಯನ್ ಡಾಲರುಗಳಷ್ಟಾಗಿತ್ತು. ಒನ್ ಬೆಲ್ಟ್ ಒನ್ ರೋಡ್ ನೆಪದಲ್ಲಿ ಅದರ ಒಂದು ಟ್ರಿಲಿಯನ್ ಡಾಲರ್ ನಷ್ಟು ಹಣ ಸಿಕ್ಕುಹಾಕಿಕೊಂಡು ಕೂತಿತ್ತು. ಕರೋನಾ ನಂತರ ಪಶ್ಚಿಮದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದರಿಂದ ಮತ್ತಷ್ಟು ಹೊಡೆತ ಬಿದ್ದಿತ್ತು. ಇತ್ತ ಗಡಿಯಲ್ಲಿ ಭಾರತದೊಂದಿಗೆ ಖ್ಯಾತೆ ತೆಗೆದು ತನ್ನ ಸೈನಿಕರನ್ನು ಕರೆತಂದು ನಿಲ್ಲಿಸಿಕೊಂಡಿತ್ತಲ್ಲ, ಭಾರತವೂ ಈ ಬಾರಿ ಅಷ್ಟೇ ಗಟ್ಟಿಯಾಗಿ ತಳವೂರಿದ್ದರಿಂದ ಸೈನ್ಯದ ಖರ್ಚು-ವೆಚ್ಚವೂ ಊಹಿಸಲಾರದಷ್ಟಾಗಿತ್ತು. ಒಂದೆಡೆ ಕ್ಷಾಮ ಮತ್ತೊಂದೆಡೆ ಪ್ರವಾಹ, ಧಾನ್ಯ ದಾಸ್ತಾನನ್ನು ಶೇಕಡಾ 50ರಷ್ಟು ತಿಂದುಹಾಕಿತ್ತು. ಒಂದೆಡೆ ಕುಸಿಯುತ್ತಿರುವ ಕೈಗಾರಿಕೆ ಉತ್ಪನ್ನಗಳು, ಮತ್ತೊಂದೆಡೆ ಏರುತ್ತಿರುವ ನಿರುದ್ಯೋಗ ಚೀನಾವನ್ನು ಒಳಗಿಂದೊಳಗೇ ತಿನ್ನುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ತನ್ನ ಅವಧಿ ವಿಸ್ತಾರವನ್ನು ದೃಢಪಡಿಸಿಕೊಂಡ ಷಿ ಮತ್ತೆ ಜಿರೊಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ. ಮೊದಲ ಬಾರಿಗೆ ಈ ನೀತಿಯಿಂದಾಗಿ ಲಕ್ಷಾಂತರ ಮಂದಿಯ ಜೀವ ಉಳಿದಿರುವುದನ್ನು ಜನ ಮೆಚ್ಚಿದ್ದರು. ಆದರೆ ಈಗ ಜಗತ್ತೆಲ್ಲ ತಮ್ಮ ಚಟುವಟಿಕೆಗೆ ಮರಳಿರುವಾಗ ತಾವಿನ್ನು ಮನೆಗಳಲ್ಲಿ ತಮ್ಮ ತಾವು ಬಂಧಿಸಿಕೊಂಡು ಕುಳಿತಿರುವುದನ್ನು ಚೀನಿಯರಿಂದ ಸಹಿಸಲಾಗಲಿಲ್ಲ. ಶೂನ್ಯ ಕೋವಿಡ್ ಎಂಬುದೊಂದು ಕಟ್ಟುಕಥೆ ಎಂದು ಜಗತ್ತಿನ ವಿಜ್ಞಾನಿಗಳೆಲ್ಲ ಹೇಳುತ್ತಿರುವುದು ಈಗ ಅವರಿಗೆ ಸತ್ಯವೆನಿಸುತ್ತಿದೆ. ಡಾ. ಪಾಲ್ ಹಂಟರ್ ಚೀನಾದ ಕೊವಿಡ್ ಲಸಿಕೆ ಪ್ರಭಾವಿಯಾಗಿಲ್ಲ ಎಂದು ಹಿಂದೆಯೇ ಹೇಳಿದ್ದು ಈಗ ಸತ್ಯವೆನಿಸುತ್ತಿದೆ. ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪ್ರೊ. ದೇವಿಶ್ರೀಧರ್ ’80 ದಾಟಿರುವ ಚೀನಾದ ವೃದ್ಧರಲ್ಲಿ ಶೇಕಡಾ 40 ಮಂದಿಗೆ ಮಾತ್ರ ಬೂಸ್ಟರ್ ಲಸಿಕೆ ದೊರೆತಿರುವುದರಿಂದ ಭವಿಷ್ಯದ ದಿನಗಳು ಭಯಾನಕವಾಗಿದೆ’ ಎಂದಿದ್ದರಲ್ಲದೇ ಮಿಲಿಯನ್ಗಟ್ಟಲೆ ಮಂದಿ ಚೀನಾದಲ್ಲಿ ಇದುವರೆಗೂ ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎಂದೂ ಎಚ್ಚರಿಸಿದ್ದರು. ಲಾಕ್ಡೌನಿನಲ್ಲಿ ಇದ್ದಷ್ಟೂ ದಿನ ವೈರಸ್‌ಗೆ ಅವರು ತಮ್ಮತಾವು ತೆರೆದುಕೊಂಡಿರಲಿಲ್ಲ. ಈಗ ಮನೆಯಿಂದ ಹೊರಬರುತ್ತಿದ್ದಂತೆ ಮತ್ತೆ ವೈರಸ್ ಆಕ್ರಮಿಸಿಕೊಳ್ಳುತ್ತಿದೆ. ಆಹಾರ ದಾಸ್ತಾನು ಕಡಿಮೆ ಇರುವುದರಿಂದ ಈ ಬಾರಿಯ ನಿರ್ವಹಣೆ ಅಷ್ಟು ಸುಲಭವಾಗಿಲ್ಲ. ಮೊದಲ ಬಾರಿ ಕೊವಿಡ್ ಬಂದಾಗಲೇ ಪ್ರತಿಯೊಬ್ಬ ವ್ಯಕ್ತಿಯ ಹೆಸರಲ್ಲೂ ಕ್ಯುಆರ್ ಕೋಡ್ ಜನರೇಟ್ ಮಾಡಲಾಗಿತ್ತು. ಅದು ನಮ್ಮ ಆರೋಗ್ಯ ಸೇತು ಆ್ಯಪ್‌ಗಿಂತಲೂ ಭಿನ್ನವಾದ್ದು. ಮಾಲ್‌ಗೆ ಹೋಗಬೇಕಾಗಲೀ ಅಥವಾ ರೈಲು ಹತ್ತಿ ಪಕ್ಕದೂರಿಗಾದರೂ ಸರಿ ಎಲ್ಲೆಡೆ ಬಾಗಿಲು ತೆರೆದುಕೊಳ್ಳಬೇಕೆಂದರೆ ಕ್ಯುಆರ್ ಕೋಡ್ ಅನ್ನು ಯಂತ್ರಕ್ಕೆ ಹಿಡಿಯಲೇಬೇಕು. ಅಲ್ಲೇನಾದರೂ ಬಣ್ಣ ಕೆಂಪು ಬಂತೆಂದರೆ ಆ ಬಾಗಿಲು ನಿಮಗೆ ತೆರೆಯಲ್ಪಡುವುದೇ ಇಲ್ಲ. ಬದಲಿಗೆ ಅದು ಜೋರಾಗಿ ಸದ್ದು ಮಾಡಿ, ನಿಮ್ಮಿಂದ ಇತರರು ದೂರ ಓಡುವಂತೆ ಮಾಡುತ್ತದಲ್ಲದೇ ಕೊವಿಡ್ ಪೊಲೀಸರು ಬಂದು ನಿಮ್ಮನ್ನು ಬಂಧಿಸಲು ಅನುಕೂಲ ಮಾಡಿಕೊಡುತ್ತದೆ. ಒಮ್ಮೆ ಅವರು ಬಂಧಿಸಿದರೆಂದರೆ ನೀವು ಮುಂದಿನ ಒಂದು ತಿಂಗಳ ಕಾಲ ಅಥವಾ ಕ್ಯುಆರ್ ಕೋಡ್ ನಲ್ಲಿ ಬಣ್ಣ ಹಸಿರಿಗೆ ತಿರುಗುವವರೆಗೂ ನರಕ ಯಾತನೆ ಅನುಭವಿಸಲೇಬೇಕು. ಇನ್ನೂ ವಿಚಿತ್ರವೇನು ಗೊತ್ತೇ? ನಿಮಗೆ ಅರಿವಿಲ್ಲದೇ ಕ್ಯುಆರ್ ಕೋಡ್ ನಲ್ಲಿ ಕೆಂಪು ಬಣ್ಣ ಇದ್ದವನೊಂದಿಗೆ ನೀವು ಹತ್ತು ನಿಮಿಷ ಮಾತನಾಡಿದರೂ ನಿಮ್ಮ ಕ್ಯುಆರ್ ಕೋಡ್ ಕೆಂಪು ಬಣ್ಣಕ್ಕೆ ತಿರುಗಿಬಿಡುತ್ತದೆ. ಅಲ್ಲಿಗೆ ನೀವು ಸತ್ತಂತೆ. ಹೀಗಾಗಿಯೇ ಒಬ್ಬರ ಕ್ಯುಆರ್ ಕೋಡ್ ಕೆಂಪಾಗಿದೆ ಎಂಬ ಸದ್ದು ಬಂದೊಡನೆ ಉಳಿದ ಮಂದಿ ಅವನಿಂದ ದೂರವೋಡಲಾರಂಭಿಸುತ್ತಾರೆ. ಹೆಚ್ಐವಿ ಎನ್ನುವುದರ ಕುರಿತಂತೆ ತಪ್ಪು ಕಲ್ಪನೆಗಳಿದ್ದಾಗಲೂ ಭಾರತದಲ್ಲಿ ಮಂದಿ ಹೀಗೆ ನಡೆದುಕೊಂಡಿರಲಿಲ್ಲ. ಚೀನಾದಲ್ಲಿ ಜನರ ಆಕ್ರೋಶ ಈ ಕಾರಣಕ್ಕಾಗಿ ದಿನೇ ದಿನೇ ಹೆಚ್ಚುತ್ತಿದೆ!

ಜನ ಬೀದಿಗೆ ಬರಲು ಕಾರಣ ಇದೇ. ಇನ್ನೂ ಅಚ್ಚರಿಯ ಸಂಗತಿ ಏನು ಗೊತ್ತೇ? ಸರ್ಕಾರ ತನ್ನ ಬಳಿಯಿರುವ ಡಾಟಾ ಬಳಸಿ ತನ್ನ ವಿರೋಧಿಯ ಕ್ಯುಆರ್ ಕೋಡ್ ಕೆಂಪಾಗುವಂತೆ ಸಲೀಸಾಗಿ ಮಾಡಿಬಿಡಬಲ್ಲದು. ಅಲ್ಲಿಗೆ ನಿಮ್ಮನ್ನು ಕೊಲ್ಲಬೇಕೆಂದು ಷಿ ನಿಶ್ಚಯಿಸಿದರೆ ಆತನ ಪಾಲಿಗೆ ಅದು ಕಂಪ್ಯೂಟರ್ನಲ್ಲಿ ಒಂದು ಕ್ಲಿಕ್ ಮಾತ್ರ! 

ಯಾವುದಕ್ಕೂ ಮಣಿಯದ ಚೀನೀ ಆಡಳಿತ ಪಡೆ ಮೊದಲ ಬಾರಿಗೆ ಕೊವಿಡ್ ನಿಯಮಗಳನ್ನು ಸಡಿಲಗೊಳಿಸುವ ಮಾತನಾಡುತ್ತಿದೆ. ಹಾಗೇನಾದರೂ ಆತ ಪೂರ್ಣ ಸಡಿಲಿಸಿದ್ದೇ ಆದರೆ ಕನಿಷ್ಠ ಪಕ್ಷ ಎರಡು ಮಿಲಿಯನ್ ಮಂದಿ ಅದಕ್ಕೆ ಆಹುತಿಯಾಗಲಿದ್ದಾರೆ ಎಂಬ ಆತಂಕವನ್ನು ಜಗತ್ತು ವ್ಯಕ್ತಪಡಿಸುತ್ತಿದೆ. ಏನಾಗುವುದೆಂದು ಕಾದು ನೋಡಬೇಕಷ್ಟೇ! ಜನರ ಗಮನವನ್ನು ಆತನಿಗೆ ಬೇರೆಡೆ ಸೆಳೆಯಲು ಇರುವುದೊಂದೇ ಮಾರ್ಗ. ಯಾರೊಂದಿಗಾದರೂ ಕಾಲು ಕೆರಕೊಂಡು ಜಗಳಕ್ಕೆ ಹೋಗಬೇಕು. ಚೀನೀ ಜನರ ಭಾವನೆಯನ್ನು ಕೆರೆಯಬೇಕು. ಅದಾಗಲೇ ಗಾಲ್ವಾನಿನಲ್ಲಿ ಭಾರತ ಸರಿಯಾದ ತಪರಾಕಿ ಕೊಟ್ಟಿದೆ. ಜಪಾನ್ ರಕ್ಷಣಾ ಬಜೆಟ್ ಅನ್ನು ದುಪ್ಪಟ್ಟುಗೊಳಿಸಿದೆ. ಇನ್ನು ಅದಕ್ಕಿರುವುದು ತೈವಾನ್ ಒಂದೇ. ಮುಂದಿನ ದಿನಗಳಲ್ಲಿ ನಾವು ತೈವಾನ್ನತ್ತ ಏರಿಹೋಗುವ ಅಥವಾ ಆಂತರಿಕವಾಗಿ ಕುಸಿದುಹೋಗುವ ಚೀನಾ ನೋಡಬಹುದೆನಿಸುತ್ತದೆ! 

ಅಂದಹಾಗೆ, ಇವೆಲ್ಲದರ ನಡುವೆ ಕಾಣೆಯಾಗಿರುವುದು ಮಾತ್ರ ಸಿದ್ದರಾಮಯ್ಯನವರು..

ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಎರಡು ರಾಜ್ಯಗಳ ಚುನಾವಣೆ ಮತ್ತು ದೆಹಲಿಯ ಮುನ್ಸಿಪಾಲಿಟಿ ಚುನಾವಣೆಯ ಫಲಿತಾಂಶ ಅಚ್ಚರಿಗೆ ನೂಕಿದೆಯಷ್ಟೇ ಅಲ್ಲದೇ ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದೆ. ಈ ಗೆಲುವಿನ ಧಾವಂತದಲ್ಲಿ ನಾವೆಲ್ಲರೂ ಟಿವಿ ಚಾನೆಲ್ಲುಗಳಲ್ಲಿ ಗಂಟೆಗಟ್ಟಲೆ ಕೊರೆದ ಎಕ್ಸಿಟ್ ಪೋಲ್ಗಳನ್ನು ಮರೆತೇಬಿಟ್ಟಿದ್ದೇವೆ. ಎಲ್ಲರಿಗಿಂತಲೂ ಸ್ಪಷ್ಟ ಮತ್ತು ನಿಖರ ತಾವೆಂದೇ ಹೇಳಿಕೊಳ್ಳುವ ಚಾನೆಲ್ಲುಗಳೆಲ್ಲ ಫಲಿತಾಂಶ ಬಂದಾಗ ಗೆದ್ದವರನ್ನು ಹೊಗಳುತ್ತಲೇ ತಮ್ಮ ಮೂರ್ಖತನವನ್ನು ಮರೆಮಾಚಿಬಿಡುತ್ತಾರೆ. ಈ ಬಾರಿಯಂತೂ ಯಾವ ಚಾನೆಲ್ಲೂ ಮೂರೂ ಚುನವಾವಣೆಯನ್ನು ಸಮರ್ಥವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ. ದೆಹಲಿಯಲ್ಲಿ ಬಿಜೆಪಿಗೆ ಹೀನಾಯ ಸೋಲು ಎಂದವರು, ಬಿಜೆಪಿಯ ಮತ ಗಳಿಕೆಯ ಪ್ರಮಾಣ ವೃದ್ಧಿಯಾಗಿರುವುದನ್ನು ಕಂಡು ಹಣೆಬಡಿದುಕೊಂಡರು. ಇತ್ತ ಗುಜರಾತ್ ನಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಾರ್ಟಿ ಸವಾಲಾಗಬಹುದೆಂದು ಭಾವಿಸಿದ ಎಲ್ಲರೂ ಅದು ಹೆಚ್ಚು ಸ್ಥಾನಗಳನ್ನು ಗಳಿಸುವುದಿಲ್ಲವಾದರೂ ಬಿಜೆಪಿಯ ಮತಗಳಿಕೆಗೆ ಕೊಳ್ಳಿ ಇಡುತ್ತದೆ ಎಂದೇ ಭಾವಿಸಿದ್ದರು. ಅದೂ ಉಲ್ಟಾ ಹೊಡೆಯಿತು. ಕಾಂಗ್ರೆಸ್ಸು ಊಹಿಸಲಾಗದಷ್ಟು ಪಾತಾಳಕ್ಕಿಳಿದು ಬಿಜೆಪಿಯ ಗೆಲುವನ್ನು ಸಲೀಸು ಮಾಡಿಬಿಟ್ಟಿತು. ಹಿಮಾಚಲ ಪ್ರದೇಶದಲ್ಲಿ ಇಷ್ಟೊಂದು ಹೊಡೆತವನ್ನು ಬಿಜೆಪಿ ಊಹಿಸಲೂ ಸಾಧ್ಯವಿರಲಿಲ್ಲ. ಯಾವುದನ್ನು ದೆಹಲಿಯ ಚುನಾವಣೆಯಲ್ಲಿ ಕಾಣಬೇಕಿತ್ತೋ ಅದನ್ನು ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಕಂಡಿತು. ಅಚ್ಚರಿ ಎಂದರೆ ಯಾವೊಂದು ಚುನಾವಣೋತ್ತರ ಸಮೀಕ್ಷೆಯೂ ಈ ಮೂರನ್ನು ನಿಖರವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ! ವೈಜ್ಞಾನಿಕವಾಗಿ ತಾವು ಲೆಕ್ಕ ಹಾಕುತ್ತೇವೆ ಎಂದು ಇವರು ಬಿಡುವುದು ಬೊಗಳೆಯಷ್ಟೇ ಎಂಬುದು ಎಂಥವನಿಗೂ ಈಗ ಅರಿವಾಗಿದೆ. ಗುಜರಾತಿನಲ್ಲಿ ಬಿಜೆಪಿ 115 ರಿಂದ 150 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಊಹಿಸುವ ಪುಣ್ಯಾತ್ಮನನ್ನು ಯಾವ ಲೆಕ್ಕಕ್ಕೆ ಪಂಡಿತನೆನ್ನಬೇಕೋ ಗೊತ್ತಾಗುವುದಿಲ್ಲ. ಪ್ರಧಾನಮಂತ್ರಿಯಿಂದ ಹಿಡಿದು ಸ್ಥಳೀಯ ಬಿಜೆಪಿ ಕಾರ್ಯಕರ್ತನವರೆಗೆ ಎಲ್ಲರೂ ಸೇರಿ ಏಕರಸವಾದ ಹೋರಾಟ ಮಾಡಿದ್ದನ್ನು ನೋಡಿದರೆ ಬಿಜೆಪಿಯ ಗೆಲುವು ನಿಶ್ಚಯವೆಂದು ಎಂಥವನೂ ಹೇಳಬಹುದಾಗಿತ್ತು. ಆದರೆ ಈ ಗೆಲುವಿನ ಅಂತರ ಸುಮಾರು 115 ರಿಂದ 150 ಸೀಟುಗಳವರೆಗೆ ಇರಬಹುದು ಎಂಬ 35 ಸೀಟುಗಳ ವ್ಯತ್ಯಾಸವನ್ನು ಕೊಡುವುದಿದೆಯಲ್ಲ, ಅದು ನಮ್ಮೂರಿನ ಅರಳಿಕಟ್ಟೆಯ ಮೇಲೆ ಕುಳಿತವನೂ ಮಾಡಬಲ್ಲ. ದುರಂತವೆಂದರೆ, ಈ ಮಾಧ್ಯಮಗಳು ಇದಕ್ಕೋಸ್ಕರ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತವಲ್ಲದೇ ಜನರ ಭಾವನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತವೆ. ಇಷ್ಟಕ್ಕೂ ಇವರೆಲ್ಲ ಸೋತಿರುವುದೆಲ್ಲಿ ಗೊತ್ತೇ? ಎಲೆಕ್ಷನ್ ರ್ಯಾಲಿಗಳನ್ನು ನೋಡಿ ಅದರ ಆಧಾರದ ಮೇಲೆ ಜನ ವೋಟು ಹಾಕುತ್ತಾರೆ ಎಂದು ನಿರ್ಧರಿಸಿರುವುದರಲ್ಲಿ. ಐದು ವರ್ಷಗಳ ನಂತರ ಬೂತಿಗೆ ಹೋಗಿ ವೋಟು ಹಾಕುವ ಮನುಷ್ಯ ತನ್ನದ್ದೇ ಆದ ಆಲೋಚನೆ ಹೊಂದಿರುತ್ತಾನೆ. ಆತ ಬಚ್ಚಿಟ್ಟುಕೊಂಡಿರುವ ಈ ವಿಚಾರವನ್ನು ಮಾಧ್ಯಮದವರ ಮುಂದೆ ಬಿಚ್ಚಿಡಬೇಕೆಂದೇನೂ ಇಲ್ಲ. ಬೃಹತ್ ರ್ಯಾಲಿಗಳು ಗೆಲ್ಲುವ ಅಂತರವನ್ನು ಹೆಚ್ಚಿಸಬಹುದಷ್ಟೆ. ಆದರೆ ಯಾರಿಗೆ ಮತ ಹಾಕಬೇಕೆಂಬುದು ಪೂರ್ವ ನಿರ್ಧರಿತವೇ. ಗುಜರಾತಿನಲ್ಲಿ ಇರುವ 182 ಸೀಟುಗಳಲ್ಲಿ ಮೋದಿ ಪಕ್ಷ ಗೆದ್ದಿರುವುದು 156. ಸುಮಾರು 86 ಪ್ರತಿಶತದಷ್ಟು ಸೀಟುಗಳನ್ನು ಬಿಜೆಪಿಯೊಂದೇ ಬಾಚಿಕೊಂಡಿದೆ. ಅತ್ಯಂತ ಪುರಾತನ ಪಕ್ಷವೆಂದು ತಮ್ಮನ್ನು ತಾವು ಕರೆದುಕೊಳ್ಳುವ ಕಾಂಗ್ರೆಸ್ಸಿಗೆ ಪ್ರತಿಪಕ್ಷ ಸ್ಥಾನ ಗಳಿಸಿಕೊಳ್ಳಲೂ ಒಂದು ಸೀಟಿನ ಕೊರತೆಯಿದೆ. ಅವರೀಗ ಸರ್ಕಾರ ಮಾಡಲಿಕ್ಕಲ್ಲ, ಪ್ರತಿಪಕ್ಷ ಸ್ಥಾನ ಪಡೆಯಲೂ ಪಕ್ಷೇತರರಿಗೆ ಕೈ ಮುಗಿಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರೆ ಈ ಪರಿಯ ಉತ್ಪಾಟನೆಯನ್ನು ಊಹಿಸಲು ಸಾಧ್ಯವಿತ್ತೇನು? ಕಳೆದ ಬಾರಿ ಕಾಂಗ್ರೆಸ್ಸಿಗೆ 77 ಸೀಟುಗಳು ದೊರೆತಿದ್ದವು. ಎರಡೂವರೆ ದಶಕದಿಂದ ಅಧಿಕಾರದಲ್ಲಿದ್ದ ಭಾಜಪದ ವಿರುದ್ಧ ಅದು ಎಡವಿದ್ದಾದರೂ ಎಲ್ಲಿ ಎಂಬ ಆಂತರಿಕ ಚರ್ಚೆ ನಡೆಯುವುದು ಬೇಡವೇನು? 

ಸ್ವಾತಂತ್ರ್ಯ ಬಂದ ಲಾಗಾಯ್ತು ಸ್ವಾತಂತ್ರ್ಯ ಕೊಡಿಸಿದವರು ತಾವೇ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಿ ಅದರ ಲಾಭವನ್ನೇ ಉಣ್ಣುತ್ತಾ ಬಂದಿತ್ತು ಕಾಂಗ್ರೆಸ್ಸು. ಹೀಗಾಗಿಯೇ ಮನೆಯಲ್ಲಿ ವೃದ್ಧರೆಂಬುವವರು ಇದ್ದರೆ ಅವರು ಮತ ಹಾಕೋದು ಕೈಗೇ. ಅದು ಸ್ವಾತಂತ್ರ್ಯದ ಭ್ರಮೆ ತಲೆ ಹೊಕ್ಕಿರುವ ಪರಿಣಾಮ. ಈ ಅಡಗೂಲಜ್ಜಿಯ ಕಥೆಯನ್ನು ಕೇಳಲು ಇಂದಿನ ತರುಣ ತಯಾರಿಲ್ಲ. ಅವನು ಕಾಂಗ್ರೆಸ್ಸಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾನೆ. ಸರದಾರ್ ಪಟೇಲರಿಗೆ ಪ್ರಧಾನಿ ಪಟ್ಟ ಸಿಗಲಿಲ್ಲವೇಕೆ? ಬಾಬಾಸಾಬೇಹ್ ಅಂಬೇಡ್ಕರರಿಗೆ ಭಾರತರತ್ನ ನೀಡಲು 1990ರವರೆಗೆ ಕಾಯಬೇಕಾಗಿತ್ತು ಏಕೆ? ಸೋಮನಾಥ ಮಂದಿರ ಪುನರ್ನಿರ್ಮಿಸಲು ನೆಹರೂ ವಿರೋಧ ವ್ಯಕ್ತಪಡಿಸಿದ್ದು ಏಕೆ? ರಾಮಮಂದಿರವನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲೇ ಮರಳಿ ಪಡೆಯಬಹುದಾಗಿದ್ದರೂ ಅದನ್ನು ಸುದೀರ್ಘಕಾಲ ತಳ್ಳಿಕೊಂಡು ಬಂದದ್ದು ಏಕೆ? ಕಾಶ್ಮೀರವನ್ನು ಭಾರತದೊಂದಿಗೆ ಏಕರಸಗೊಳಿಸುವುದು ಬಲು ಸುಲಭವಿದ್ದಾಗ್ಯೂ ಯಾರ ತೆವಲಿಗಾಗಿ ಅದನ್ನು ಪ್ರತ್ಯೇಕವಾಗಿ ಉಳಿಸಲಾಯ್ತು? ಯಾರ ಕಾರಣದಿಂದಾಗಿ ದಕ್ಷಿಣ ಮತ್ತು ಉತ್ತರಗಳು ಇಂದಿಗೂ ಒಂದಾಗದೇ ಉಳಿದಿವೆ? ಅನೇಕ ಪ್ರಶ್ನೆಗಳು ತರುಣರ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಲೇ ಇವೆ. ಕಾಂಗ್ರೆಸ್ಸು ಇವುಗಳಿಗೆ ಸುಲಭಕ್ಕೆ ಉತ್ತರ ಕೊಡಲಾರದು. ಅದರಲ್ಲೂ ಜಾತಿ-ಮತ-ಪಂಥಗಳನ್ನು ಮೀರಿ ರಾಷ್ಟ್ರೀಯವಾದದ ಆಲೋಚನೆ ಮಾಡುವ ತರುಣರನ್ನೆದುರಿಸುವುದಂತೂ ಕಾಂಗ್ರೆಸ್ಸಿಗೆ ಸಾಧ್ಯವಾಗದ ಮಾತು. ಹೀಗಾಗಿಯೇ ಗುಜರಾತ್ ಕದನ ಶುರುವಾಗುವ ಮುನ್ನವೇ ಕಾಂಗ್ರೆಸ್ಸು ನಿಂತನೆಲ ಬಿಟ್ಟೋಡಿತು. ಇಲ್ಲವಾದಲ್ಲಿ ಭಾರತ್ ಜೊಡೊ ಯಾತ್ರೆ ಗುಜರಾತಿನ ಚುನಾವಣೆಯ ವೇಳೆ ಕರ್ನಾಟಕದಲ್ಲೇಕೆ ನಡೆಯಬೇಕಿತ್ತು? ಆದರೆ ಒಂದಂತೂ ಸತ್ಯ. ರಾಹುಲ್ ಚುನಾವಣಾ ಪ್ರಚಾರಕ್ಕೆ ಗುಜರಾತಿಗೆ ಹೋಗದೇ ಈ ಹೀನಾಯ ಸೋಲಿನ ಕಿರೀಟವನ್ನು ತಮ್ಮ ತಲೆಯಿಂದ ಕೊಡವಿಕೊಂಡುಬಿಟ್ಟರು. ಪಾಪ, ಖರ್ಗೆಯವರು ಹರಕೆಯ ಕುರಿಯಾಗಿಬಿಟ್ಟರು! 

ದೂರದಿಂದ ನೋಡಿದರೆ ಹೀಗೆ ಕಾಂಗ್ರೆಸ್ಸಿಗೆ ಪ್ರಶ್ನೆ ಕೇಳುವ ಮಂದಿಯನ್ನು ಹೊಸತನದಿಂದ ಸಂಭಾಳಿಸಬಲ್ಲ ಸಾಮರ್ಥ್ಯ ಅರವಿಂದ್ ಕೇಜ್ರಿವಾಲರಿಗಿದೆ ಎಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರವಾಗಿತ್ತೆನಿಸುತ್ತದೆ. ಅದಕ್ಕೆ ಚುನಾವಣೆಯ ಅಷ್ಟೂ ಹೋರಾಟದ ಹೊಣೆಯನ್ನು ಆಮ್ಆದ್ಮಿ ಪಾರ್ಟಿಯ ಹೆಗಲಿಗೇರಿಸಿ ಕಾಂಗ್ರೆಸ್ಸು ಜಾರಿಕೊಂಡಿತು. ದೆಹಲಿಯಲ್ಲಿ ಮಾಡಿದಂತೆ ಇಲ್ಲಿಯೂ ಮತಗಳ ವಿಭಜನೆಯಾಗದಂತೆ ನೋಡಿಕೊಂಡು ಬಿಜೆಪಿಗೆ ಹೊಡೆತ ಕೊಡಬೇಕೆಂಬುದು ಅವರ ಗುಪ್ತ ಲೆಕ್ಕಾಚಾರ. ಆದರೆ ಗುಜರಾತಿನ ಮತದಾರ ಪಕ್ಕಾ ವ್ಯಾಪಾರಿ. ಆತ ಅರವಿಂದ್ ಕೇಜ್ರಿವಾಲರ ಸುಳ್ಳುಗಳನ್ನು ಕೇಳಿ-ಕೇಳಿ ಬೇಸತ್ತು ಹೋಗಿದ್ದ. ಉಚಿತ ಕೊಡುಗೆಯ ನೆಪದಲ್ಲಿ ಗುಜರಾತನ್ನು ಸಂಕಟಕ್ಕೆ ತಳ್ಳಲು ಆತ ಸಿದ್ಧನಿಲ್ಲ. ಹೀಗೆಂದೇ ಆತ ಕೇಜ್ರಿವಾಲರ ಪೊರಕೆಯನ್ನೇ ತೆಗೆದುಕೊಂಡು ಆತನ ಪಾರ್ಟಿಯನ್ನೇ ಗುಡಿಸಿಬಿಟ್ಟ!

 

ಚುನಾವಣೆ ಎನ್ನುವುದು ಭಾವನೆಗಳ ಸಮ್ಮಿಲನ. ಸುಮಾರು ಐದು ವರ್ಷಗಳ ಕಾಲ ಆತ ತನಗಾದ ನೋವುಗಳನ್ನು ಜತನದಿಂದ ಕಾಪಾಡಿಟ್ಟುಕೊಂಡು ಬರುತ್ತಾನೆ. ಸಂತೋಷವನ್ನು ಮರೆತುಬಿಡಬಹುದೇನೋ. ಆದರೆ ನೋವನ್ನು ಎಂದಿಗೂ ಮರೆಯಲಾರ. ಹೀಗಾಗಿಯೇ ಸಿದ್ದರಾಮಯ್ಯನವರು ಹೋದೆಡೆಯಲ್ಲೆಲ್ಲ ಅವರ ಅಧಿಕಾರಾವಧಿಯಲ್ಲಿ ತೀರಿಕೊಂಡ ಹಿಂದೂಗಳ ಶವಗಳು ಕಣ್ಮುಂದೆ ಬರುತ್ತವೆ. ಅವರ ಸುತ್ತ ಮುಸಲ್ಮಾನರು ತಿರುಗಾಡುವಾಗ ಮತ್ತೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದುಬಿಟ್ಟರೆ ಮತ್ತಷ್ಟು ಹೆಣಗಳು ಬೀಳುತ್ತವೇನೋ ಎಂಬ ಹೆದರಿಕೆ ಶುರುವಾಗುತ್ತದೆ. ಈ ಗಾಬರಿ ಅವರನ್ನೂ ಬಿಟ್ಟಿಲ್ಲ. ಹೀಗಾಗಿಯೇ ಮುಖ್ಯಮಂತ್ರಿಯಾಗಿದ್ದೂ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ಅವರು ಇಡಿಯ ರಾಜ್ಯದಲ್ಲಿ ತಮಗೊಂದು ಸೂಕ್ತ ಕ್ಷೇತ್ರ ಹುಡುಕಲು ಹರಸಾಹಸ ಮಾಡುತ್ತಿರುವುದು. ಹಾಗಂತ ಇದಕ್ಕೆ ಈಗಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಹೊರತಲ್ಲ. ಮುಸಲ್ಮಾನರ ವಿರುದ್ಧ ಎಂದೂ ಮಾತನಾಡದೇ ಅವರ ಮತಗಳನ್ನು ಪಡೆಯುತ್ತಾ ಗೆದ್ದು ಬರುತ್ತಿದ್ದ ಅವರಿಗೆ ಹಿಜಾಬ್, ಹಲಾಲ್, ಮೊದಲಾದ ಗಲಾಟೆಗಳ ನಂತರ ಕ್ಷೇತ್ರ ಅಷ್ಟು ಸಲೀಸಿಲ್ಲ. ಹಾಗಂತ ಬೇರೆ ಕ್ಷೇತ್ರ ಆರಿಸಿಕೊಳ್ಳಲು ಹೇಳಿ, ಬಿಜೆಪಿಯ ಭದ್ರಕೋಟೆ ಎಂದು ಕರೆಯಲ್ಪಡುವ ಕರಾವಳಿಯಲ್ಲೂ ಅವರು ಗೆಲ್ಲುವುದು ಸುಲಭವಿಲ್ಲ. ಪ್ರವೀಣ್ ನೆಟ್ಟಾರುವಿನ ಸಾವು ಅಷ್ಟು ಆಳಕ್ಕೆ ಹೊಕ್ಕಿದೆ. ಎಲ್ಲಾ ಕಾಂಗ್ರೆಸ್ಸಿಗರೂ ಜಾತಿಯ ಲೆಕ್ಕಾಚಾರದಲ್ಲಿ ಗೆದ್ದುಬಿಡುತ್ತೇವೆಂಬ ಭ್ರಮೆಯಲ್ಲಿದ್ದರೆ, ಬಿಜೆಪಿಗರು ಮೋದಿ ರ್ಯಾಲಿ ಮಾಡಿದರೆ ಜನ ಕಣ್ಮುಚ್ಚಿಕೊಂಡು ಮತ ನೀಡಿಬಿಡುತ್ತಾರೆ ಎಂದು ನಂಬಿಕೊಂಡು ಕೂತಿದ್ದಾರೆ. ಆದರೆ ವಾಸ್ತವ ನೆಲೆಕಟ್ಟಿನಲ್ಲಿ ನೋಡಿದರೆ ಜಾತಿ ಸಮೀಕರಣಗಳು ಈಗ ಸಾಕಷ್ಟು ಬದಲಾಗಿವೆ. ದೆಹಲಿಯಲ್ಲಿ ಆಮ್ಆದ್ಮಿ ಪಾರ್ಟಿಗೆ ಮುಸಲ್ಮಾನರ ಮತಗಳು ಶೇಕಡಾ 20ರಷ್ಟು ಕಡಿಮೆಯಾಗಿವೆ. ದಲಿತರ ಮತಗಳು ಭಾಜಪದ ಕಡೆಗೆ ತಿರುಗಿ ಸಾಕಷ್ಟು ಕಾಲವೇ ಆಗಿದೆ. ಕಾಂಗ್ರೆಸ್ಸು ಇದನ್ನು ಸೂಕ್ಷ್ಮವಾಗಿ ಗಮನಿಸದೇ ಇರಲಾರದು. ಇತ್ತ ರಾಜ್ಯಗಳ ಮತಕದನದಲ್ಲಿ ಮೋದಿ ತುಂಬಾ ಯಶಸ್ಸನ್ನು ಕಂಡಿದ್ದಾರೆ ಎಂದೇನೂ ಹೇಳಲಾಗದು. ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬು, ಬಂಗಾಳ, ಬಿಹಾರ, ಇತ್ತೀಚೆಗೆ ಹಿಮಾಚಲ ಪ್ರದೇಶ ಇಲ್ಲೆಲ್ಲವೂ ಸೋಲುಗಳನ್ನೇ ಉಂಡಿದ್ದಾರೆ. ರಾಜ್ಯಗಳು ಮೋದಿಯನ್ನು ಪ್ರಧಾನಿಯಾಗಿ ಬಯಸುತ್ತವೆ ನಿಜ. ಅವರನ್ನು ತಮ್ಮ ರಾಜ್ಯದವರೆಂದು ಭಾವಿಸುವುದಿಲ್ಲ ಅಷ್ಟೇ. ಹೀಗಾಗಿ ಮೋದಿಯ ಖ್ಯಾತಿ ಉತ್ತುಂಗದಲ್ಲಿರುವಾಗಲೇ ಬಿಹಾರದಲ್ಲಿ ಅವರನ್ನು ‘ಬಾಹರಿ’ ಎಂದು ಕರೆಯಲಾಗಿತ್ತು. ರಾಜಸ್ಥಾನದಲ್ಲಿ ಮಂದಿ ಮೋದಿಯನ್ನು ಇಷ್ಟಪಡುತ್ತಾರೆ ನಿಜ, ಆದರೆ ವಸುಂಧರಾ ರಾಜೆಗೆ ಮತ ಹಾಕಲು ಸಜ್ಜಾಗುವುದಿಲ್ಲ. ಶಿವಸೇನೆ ನೆಟ್ಟಗಿದ್ದಿದ್ದರೆ ಮಹಾರಾಷ್ಟ್ರದಲ್ಲಿ ಮೋದಿ ಪಾಳಯವೇ ಅಧಿಕಾರದಲ್ಲಿರುತ್ತಿತ್ತು. ಏಕೆಂದರೆ ಅಲ್ಲಿ ದೇವೇಂದ್ರ ಫಡ್ನವೀಸ್ ಜನಮಾನಸದಲ್ಲಿ ತಮ್ಮ ವಿಭಿನ್ನ ಕಾರ್ಯಗಳಿಂದ ಬಲವಾಗಿ ನೆಲೆಯೂರಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಬಿಜೆಪಿಯ ಗೆಲುವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಅದರರ್ಥ ಸ್ಥಳೀಯ ಸಮರ್ಥ ನಾಯಕರಿದ್ದರೆ ಅಂಥವರ ಮೇಲೆ ಮೋದಿ ಬೆಟ್ ಕಟ್ಟಿ ಓಡಿಸಬಹುದು. ಇಲ್ಲವಾದರೆ ಮೋದಿಯವರಿಗೆ ಬರಿ ಕಂಠಶೋಷಣೆಯಷ್ಟೆ. ಸೂಕ್ಷ್ಮವಾಗಿ ನೀವೇ ಗಮನಿಸಿದರೆ, ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗೆ ಮೋದಿ ಕೊಡುತ್ತಿರುವ ಮನ್ನಣೆ, ಗೌರವ ಎಂಥದ್ದೆಂಬುದು ಅರಿವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಹಿಡಿದೇ ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಪ್ರಯತ್ನ ಮಾಡುವುದು ಕಠಿಣವಾಗಲಾರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಧಿಕಾರ ಹತ್ತಿರಕ್ಕೆ ಬರುವಷ್ಟು ಗೆಲ್ಲುವ ಸಾಮರ್ಥ್ಯವಿರುವ ನಾಯಕನಿದ್ದರೆ, ಮೋದಿ ಅದನ್ನು ಖಾತ್ರಿಯಾಗಿ ಗೆಲುವಾಗಿ ಪರಿವರ್ತಿಸಬಲ್ಲರು. ಗೆಲುವಿನ ಅಂತರವನ್ನು ಹಿಗ್ಗಿಸಿಕೊಡಬಲ್ಲರು. ಪೂರ್ಣ ಸಕರ್ಾರವೇ ಅವರ ಹೆಸರಿನಲ್ಲಿ ಬರುವುದು ಸುಲಭ ಸಾಧ್ಯವಾದ ಮಾತಲ್ಲ! ಹೀಗಾಗಿಯೇ ಕರ್ನಾಟಕದಲ್ಲಿ ಭಾಜಪ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಗುಜರಾತಿನಲ್ಲಿ ಮಾಡಿದಂತೆ ಹಳೆಯ ಮುಖಗಳನ್ನು ಬದಲಿಸಿ ಸಮರ್ಥರಾಗಿರುವ ಹೊಸಬರನ್ನು ಆರಿಸಬೇಕಿದೆ. ಕನ್ನಡದ ಜನರು ತಮಿಳಿಗರಂತೆ ಸಂಕುಚಿತವಾಗಿ ಯೋಚಿಸದೇ, ರಾಷ್ಟ್ರೀಯ ಭಾವನೆಯಿಂದ ಕೂಡಿದವರೇ ಆಗಿರುವುದರಿಂದ ಗುಜರಾತಿನ ಫಾರ್ಮುಲಾ ಕೆಲಸಕ್ಕೆ ಬರಬಹುದು. ಸಿದ್ದರಾಮಯ್ಯನವರ ಟಿಪ್ಪು ಜಯಂತಿ ಕೊಡಗಿನಲ್ಲಿ ಇಂದಿಗೂ ಆಕ್ರೋಶದ ಜ್ವಾಲಾಮುಖಿಯನ್ನು ಉಳಿಸಿದೆ. ಕರಾವಳಿ ಭಾಗದ ಜನ ಆ ಕಾಲದ ಹಿಂದೂ ಮಾರಣಹೋಮವನ್ನು ಇಂದಿಗೂ ಮರೆಯಲಾರರು. ಸತೀಶ್ ಜಾರಕಿಹೊಳಿಯವರು ಹಿಂದೂವನ್ನು ಅಶ್ಲೀಲವೆಂದದ್ದು ತರುಣರ ಎದೆಯ ಗೂಡಿನಲ್ಲಿ ಬೆಚ್ಚಗಾಗಿದೆ. ದೇಶದಾದ್ಯಂತ ಬೆಳಕಿಗೆ ಬರುತ್ತಿರುವ ಲವ್ಜಿಹಾದ್ ಪ್ರಕರಣಗಳು, ಕರಾವಳಿಯಲ್ಲಿ ಕಂಡುಬಂದ ಕುಕ್ಕರ್ಬಾಂಬ್ ಘಟನೆಗಳು ಜನರನ್ನು ಇಂದಿಗೂ ಕೇಸರಿ ಪಡೆಗಳ ಪರವಾಗಿ ನಿಲ್ಲುವಂತೆ ಮಾಡಿವೆ. ಆದರೆ ಅದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುವ ನಾಯಕರಿಲ್ಲದಾಗ ಮಾತ್ರ ಅವರು ಪರ್ಯಾಯವನ್ನು ಹುಡುಕುವ ಸಾಧ್ಯತೆ ಇರುತ್ತದೆ. ಕರ್ನಾಟಕದ ಭಾಜಪದ ನೇತೃತ್ವ ಈ ನಿಟ್ಟಿನಲ್ಲಿ ಗುಜರಾತಿನ ನಾಯಕರಷ್ಟು ಅಗ್ರಣಿಯಾಗಿಲ್ಲದಿರುವುದು ಆತಂಕಕ್ಕೆ ಕಾರಣವೇ ನಿಜ. ಹೀಗಾಗಿಯೇ ಕರ್ನಾಟಕದ ಚುನಾವಣೆಯೂ ಯಾರು ಅಂದುಕೊಂಡಷ್ಟೂ ಸಲೀಸಾಗಿಲ್ಲ. ಕಾಂಗ್ರೆಸ್ಸಿನ ಪಾಲಿಗೆ ಇದು ಹಿಮಾಚಲದಂತಾಗಬಹುದು, ಬಿಜೆಪಿಯ ಪಾಲಿಗೆ ಗೋವೆಯಂತಾಗಬಹುದು. ಕಾದು ನೋಡಬೇಕಷ್ಟೇ..

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ಪ್ರಿಯ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಪ್ರೀತಿಯ ನಮಸ್ಕಾರ.

ಸೈದ್ಧಾಂತಿಕವಾಗಿ ನಾವು ಕಿತ್ತಾಡಬಹುದು. ವೈಚಾರಿಕ ಮತ ಭೇದ ಖಂಡಿತ ಇದ್ದಿರಬಹುದು. ಕೆಲವೊಮ್ಮೆ ಹದ ಮೀರಿ ಕಾಲೆಳೆದಿರಬಹುದು, ಅಪಹಾಸ್ಯವನ್ನೂ ಮಾಡಿರಬಹುದು. ಆದರೆ ದೇಶದ ವಿಚಾರ ಬಂದಾಗ ಮಾತ್ರ ನಮ್ಮಲ್ಲಿ ಮತ ಭೇದ ಇರುವಂತಿಲ್ಲ. ರಾಷ್ಟ್ರ ನನಗಿಂತಲೂ, ಒಂದು ಪರಿವಾರಕ್ಕಿಂತಲೂ, ಒಂದು ಊರಿಗಿಂತಲೂ ಬಲು ದೊಡ್ಡದ್ದು. ಹೀಗಾಗಿಯೇ ಬಲುಮುಖ್ಯವಾದ ಕೆಲವು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲೆಂದು ಈ ಪತ್ರ. 

ಅನೇಕ ಸಂಗತಿಗಳ ಕುರಿತಂತೆ ನಾವು ನಿಮ್ಮನ್ನು ವಿರೋಧಿಸುವುದಿದೆ. ಸರದಾರ್ ಪಟೇಲರಿಂದ ಅಧಿಕಾರವನ್ನು ಕಸಿದುಕೊಂಡ ಜವಾಹರ್‌ಲಾಲ್ ನೆಹರೂ ಬಗ್ಗೆ ಬೇಸರವಿದೆ. ಆದರೆ ನಾವದನ್ನು ಮರೆತಿದ್ದೇವೆ. ಇಂದಿರಾ ಬಾಬಾಸಾಹೇಬ್ ಅಂಬೇಡ್ಕರ್‌ರ ಸಂವಿಧಾನವನ್ನು ಗಾಳಿಗೆ ತೂರಿ ಎಲ್ಲ ಸ್ವಾತಂತ್ರ್ಯವನ್ನು ಕಸಿಯುವ ತುರ್ತು ಪರಿಸ್ಥಿತಿಯನ್ನು ಹೇರಿ ಭಾರತದ ಇತಿಹಾಸದಲ್ಲೊಂದು ಆರದ ಗಾಯವನ್ನು ಮಾಡಿಬಿಟ್ಟರಲ್ಲ, ನಾವದನ್ನು ನೆನಪಿಸಿಕೊಳ್ಳುವುದಿಲ್ಲ. ಇಂದಿರಾ ತೀರಿಕೊಂಡಾಗ ಸಿಖ್ಖರ ಹತ್ಯೆಯನ್ನು ನೀವೆಲ್ಲ ಸೇರಿ ಮಾಡಿದ್ದಿರಲ್ಲ, ಆ ಕುರಿತು ಸಿಖ್ಖರ ಕಣ್ಣೀರೇ ಇಂಗಿಹೋಗಿಬಿಟ್ಟಿದೆ, ಇನ್ನು ನಮ್ಮದೇನು ಲೆಕ್ಕ! ವಿಷಯ ಬಂತೆಂದೆ ನೆನಪಿಸಿಬಿಡುತ್ತೇನೆ. ಗೋಡ್ಸೆ ಗಾಂಧಿಯವರ ಹತ್ಯೆ ಮಾಡಿದ ಎಂಬ ಕಾರಣಕ್ಕೆ ಚಿತ್ಪಾವನ ಬ್ರಾಹ್ಮಣರನ್ನು ಅಟ್ಟಾಡಿಸಿ ಕೊಂದಿರಲ್ಲ, ಪಾಪ ಆ ಮಂದಿಯೂ ಅದನ್ನು ಮರೆತು ನೀವು ಅಪ್ಪಿ-ತಪ್ಪಿ ‘ಭಾರತ್ ಮಾತಾ ಕಿ’ ಎಂದರೆ ‘ಜೈ’ ಎಂದು ದನಿಗೂಡಿಸುತ್ತಾರೆ. ಬಿಡಿ, ಈ ದೇಶದವರೇ ಅಲ್ಲದ ಸೋನಿಯಾ ಪ್ರಧಾನಿಯಾಗಲೆಂದು ನೀವೆಲ್ಲ ಹಠ ಹಿಡಿದು ಕುಳಿತಿರಿ. ಆಕೆಯ ಮಗ ರಾಹುಲ್ ಇತ್ತೀಚೆಗೆ ಭಾರತ್ ಜೊಡೊ ಯಾತ್ರೆಯಲ್ಲಿ ಭಾರತವನ್ನು ತುಂಡರಿಸುವ ಸಂಕಲ್ಪಗೈದವರನ್ನೆಲ್ಲ ಜೊತೆಗೂಡಿಸಿಕೊಂಡು ನಡೆದ. ‘ಪಾಂಡವರಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡುತ್ತಿದ್ದರೇನು?’ ಎಂದಾತ ಪ್ರಶ್ನಿಸುವಾಗ ಯಾವುದೋ ಹಳ್ಳಿಯ ಮೂರನೇ ತರಗತಿಯ ಮಗುವನ್ನು ಮಾತನಾಡಿಸುತ್ತಿದ್ದೇವೇನೋ ಎನಿಸಿಬಿಡುತ್ತದೆ. ಆತನನ್ನೇ ಪ್ರಧಾನಿ ಮಾಡೋಣ ಎಂದು ನೀವಂದಾಗ ಪ್ರಜಾಪ್ರಭುತ್ವದ ಮರ್ಯಾದೆ ಕಾಪಾಡಲು ನಾವು ನಕ್ಕು ಸುಮ್ಮನಾಗಿಬಿಡುತ್ತೇವೆ. ಇನ್ನು ಈ ಪರಿವಾರದ ಅಳಿಯ ಎಂಬ ಒಂದೇ ಕಾರಣಕ್ಕೆ ರಾಬರ್ಟ್ ವಾದ್ರಾ ಪಡೆದ ಸವಲತ್ತು, ತೋರುವ ಧಿಮಾಕು ನೀವು ನೋಡಿದ್ದೀರಲ್ಲ, ಅದನ್ನೂ ನಾವು ಮನಸ್ಸಿನಲ್ಲಿಟ್ಟುಕೊಂಡಿಲ್ಲ ಏಕೆಂದರೆ ಇವರೆಲ್ಲರೂ ನಾಳೆ ತಮ್ಮದ್ದೇ ಒಂದು ದೇಶಕ್ಕೆ ಮರಳಿಬಿಡಬಲ್ಲರು. ನಾನು, ನೀವು ಇಲ್ಲಿಯೇ ಇರಬೇಕು. ಇದು ನಮ್ಮ ಪೂರ್ವಜರು ಜತನದಿಂದ ಕಟ್ಟಿದ ದೇಶ. ಇದು ಬೆಳೆದಷ್ಟೂ ಲಾಭವುಣ್ಣುವವರು ನಾವಷ್ಟೇ ಅಲ್ಲ, ಇಡಿಯ ಜಗತ್ತು. 

ಈಗೇಕೆ ಧಾವಂತದಿಂದ ಈ ಪತ್ರವೆಂದರೆ ಜಾರ್ಜ್ ಸೊರೊಸ್ ಇತ್ತೀಚೆಗಷ್ಟೇ ಮ್ಯುನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ನಲ್ಲಿ ಭಾರತದ ವಿರುದ್ಧ ಗುಟುರು ಹಾಕಿದ್ದಾನೆ, ‘ಮೋದಿ ಮತ್ತು ಅದಾನಿ ಇಬ್ಬರೂ ಆತ್ಮೀಯರು. ಅದಾನಿಯ ಕಂಪನಿ ಸ್ಟಾಕ್ ಮಾರುಕಟ್ಟೆಯಿಂದ ಹಣ ಕ್ರೋಢೀಕರಿಸಲು ಹೋಗಿ ಸೋತಿದೆ. ಆತ ಸ್ಟಾಕ್ಗಳ ಏರುಪೇರಿಗೆ ಕಾರಣನಾದವ. ಈ ವಿಷಯದಲ್ಲಿ ಮೋದಿ ಸುಮ್ಮನಿದ್ದಾರೆ. ಅವರು ವಿದೇಶದ ಹೂಡಿಕೆದಾರರಿಗೆ ಮತ್ತು ತಮ್ಮ ಸಂಸತ್ತಿಗೆ ಉತ್ತರ ಕೊಡಬೇಕಿದೆ’ ಎಂದಿದ್ದಾನಲ್ಲದೇ ಪ್ರಜಾಪ್ರಭುತ್ವವನ್ನು ಉಳಿಸಲಿಕ್ಕಾಗಿ ಭಾರತದಲ್ಲಿ ಸರ್ಕಾರವನ್ನು ಬೇಕಿದ್ದರೂ ಬದಲಾಯಿಸಬಲ್ಲೆ ಎಂಬ ಹೇಳಿಕೆ ಕೊಟ್ಟಿದ್ದಾನೆ. ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಕೂಡ ರಾಷ್ಟ್ರೀಯವಾದಿ ನಾಯಕರನ್ನು ಕಿತ್ತುಬಿಸುಟಲು ತಾನು ಹಣ ಹೂಡುವುದಾಗಿ ದರ್ಪದಿಂದಲೇ ಹೇಳಿದ್ದ. ಆತನ ದೃಷ್ಟಿ ನರೇಂದ್ರಮೋದಿಯವರತ್ತಲೇ ನೆಟ್ಟಿತೆಂಬುದು ಎಂಥವನಿಗೂ ಅರಿವಾಗುವಂತಿತ್ತು. 

ಅದರಲ್ಲೇನು ಮಹಾ? ಅನೇಕರು ರಾಷ್ಟ್ರದ ಪ್ರಮುಖರನ್ನು ಬದಿಗೆ ಸರಿಸಿ ಮತ್ತೊಬ್ಬರನ್ನು ಕೂರಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ಭಾರತದಲ್ಲಿ 28 ಪಕ್ಷಗಳು ಒಟ್ಟಾಗಿ ಮೋದಿಯನ್ನು ಕೆಳಗಿಳಿಸಿ ತಾವುಗಳೇ ಪ್ರಧಾನಿಯಾಗಲು ಹಾತೊರೆಯುತ್ತಿದ್ದಾರೆ. ಜಾರ್ಜ್ ಸೊರೊಸ್‌ದೇನು ವಿಶೇಷ? ಗಮನಿಸಬೇಕಾಗಿರುವ ಸಂಗತಿ ಇರುವುದೇ ಇಲ್ಲಿ. ಹಂಗೇರಿಯಲ್ಲಿ ಹುಟ್ಟಿದ ಸೊರೊಸ್ ಮೂಲತಃ ಯಹೂದಿ ಕುಟುಂಬಕ್ಕೆ ಸೇರಿದವ. ಆದರೆ ನಾಜಿಗಳ ಒತ್ತಡ ತೀವ್ರವಾದಾಗ ತನ್ನ ತಾನು ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡು ನಾಜಿಗಳೊಂದಿಗೆ ಕಪಟವಾಡಿಕೊಂಡು ಇದ್ದುಬಿಟ್ಟ. ಓರಗೆಯ ಅನೇಕ ಯಹೂದಿಗಳನ್ನು ನಾಜಿಗಳಿಗೆ ಗುರುತಿಸಲು ಸಹಾಯ ಮಾಡಿದವ ಈತನೇ ಎಂದು ಆರೋಪಿಸಲಾಗುತ್ತದೆ. ತಾನು ನೀಡಿದ ಸಂದರ್ಶನವೊಂದರಲ್ಲಿ ಆತ ಇದನ್ನು ಪರಿಪೂರ್ಣವಾಗಿ ಏನೂ ಅಲ್ಲಗಳೆದಿಲ್ಲ. ಯಹೂದಿಗಳ ಮೇಲಿನ ಅಂದಿನ ಆಕ್ರೋಶ ಅವನಿಗೆ ಇಂದೂ ತೀರಿದಂತೆ ಕಾಣುವುದಿಲ್ಲ. ಹೀಗಾಗಿ ಇಸ್ರೇಲ್ ರಾಷ್ಟ್ರವಾಗಬೇಕು ಎಂದು ಬಯಸುತ್ತಾನಾದರೂ ಅಲ್ಲಿಯೂ ರಾಷ್ಟ್ರವಾದ ಉಳಿಯಬಾರದು ಎಂದು ತನ್ನದ್ದೇ ವಾದ ಮಂಡಿಸುತ್ತಾನೆ. 1956ರಲ್ಲಿ ಉದ್ಯೋಗವರಸಿಕೊಂಡು ನ್ಯೂಯಾರ್ಕಿಗೆ ಬಂದ ಸೊರೊಸ್ ಕಡು ಕಷ್ಟದಿಂದಲೇ ಮೇಲೇರಿದವ. ತನ್ನ ವ್ಯಾಪಾರಿ ಚಾಕಚಕ್ಯತೆಯನ್ನು ಬಳಸಿಕೊಂಡು ಶೇರು ಮಾರುಕಟ್ಟೆಯಲ್ಲಿ ಹಣಹೂಡುವ ಧಂಧೆ ಆರಂಭಿಸಿದ. ಡಬಲ್ ಈಗಲ್, ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ ಕಂಪನಿಗಳು ಅವನದ್ದೇ. ಆತ ಅಮೇರಿಕಾದ ಇತಿಹಾಸದಲ್ಲೇ ಒಬ್ಬ ಯಶಸ್ವೀ ಹೂಡಿಕೆದಾರ ಎಂಬ ಹೆಸರು ಮಾಡಿದ್ದಾನೆ. ನೂರು ಹರ್ಷದ್ ಮೆಹ್ತಾಗಳನ್ನು ಹಾಕಿದರೆ ಒಬ್ಬ ಸೊರೊಸ್ ಹುಟ್ಟಬಹುದೇನೋ! ಸೊರೊಸ್ ಎಷ್ಟು ಸವಾಲುಗಳನ್ನು ಮೈಮೇಲೆಳೆದುಕೊಂಡನೆಂದರೆ ಅಷ್ಟೇ ವೇಗವಾಗಿ ತನ್ನ ಕಂಪನಿಯ ಮೌಲ್ಯವನ್ನೂ ವರ್ಧಿಸುತ್ತಾ ಹೋದ. ಅನೇಕ ರಾಷ್ಟ್ರಗಳು ಆತನನ್ನು ಕ್ರಿಮಿನಲ್ನಂತೆ ಕಾಣುತ್ತವೆ. 1992ರಲ್ಲಿ ಆತ ಬ್ರಿಟೀಷ್ ಸ್ಟಾಕ್ ಮಾರುಕಟ್ಟೆಯಲ್ಲಿ ತಾನು ಹೂಡಿದ್ದ 10 ಬಿಲಿಯನ್ ಡಾಲರ್‌ಗಳನ್ನು ಏಕಾಕಿ ತೆಗೆದು ಇಡಿಯ ಮಾರುಕಟ್ಟೆ ಕುಸಿಯುವಂತೆ ಮಾಡಿಬಿಟ್ಟಿದ್ದ. ಅಲ್ಲಿನ ಬ್ಯಾಂಕುಗಳು ಪತರಗುಟ್ಟಿಹೋಗಿದ್ದವು. ಬ್ರಿಟೀಷ್ ಪೌಂಡು ನೋಡನೋಡುತ್ತಲೇ ಕುಸಿದುಹೋಯ್ತು. ಕುಳಿತಲ್ಲೇ ಸೊರೊಸ್ ಒಂದು ಶತಕೋಟಿ ಅಮೇರಿಕನ್ ಡಾಲರ್ಗಳನ್ನು ಸಂಪಾದಿಸಿಬಿಟ್ಟ. ಇಂಗ್ಲೆಂಡಿನ ಬ್ಯಾಂಕು ಮುರಿದವ ಎಂದೇ ಆತನಿಗೆ ಹೆಸರು. 

1997ರಲ್ಲಿ ಏಷ್ಯಾದಲ್ಲಿ ಆರ್ಥಿಕ ಸಮಸ್ಯೆ ಎದುರಾಯ್ತಲ್ಲ, ಅದರ ಹಿಂದೆ ಇದ್ದ ದೊಡ್ಡ ಕೈ ಸೊರೊಸ್‌ನದ್ದೇ. ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾಗಳಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಮಂದಿ ಈ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾದರು. ಅಷ್ಟೂ ಜನರ ರಕ್ತ ಮೆತ್ತಿಕೊಂಡಿರುವುದು ಸೊರೊಸ್ನ ಕೈಗೇ! ಮಲೇಷಿಯಾದ ಪ್ರಧಾನಮಂತ್ರಿ ಮಹತಿರ್ ಮೊಹಮ್ಮದ್ ಆ ರಾಷ್ಟ್ರದ ಕರೆನ್ಸಿ ಕುಸಿಯಲು ಕಾರಣ ಸೊರೊಸ್ ಎಂದೇ ಆರೋಪಿಸುತ್ತಾರೆ. 1988ರಲ್ಲಿ ಫ್ರಾನ್ಸ್ ನಲ್ಲಿ ಸ್ಟಾಕ್ ಮಾರುಕಟ್ಟೆ ಏರುಪೇರಾಗಲು ಸೊರೊಸ್ ಕಾರಣನಾಗಿದ್ದ ಎಂಬುದಕ್ಕೆ ಅಲ್ಲಿನ ನ್ಯಾಯಾಲಯ 2002ರ ಡಿಸೆಂಬರ್ನಲ್ಲಿ ಆತನಿಗೆ 29 ಲಕ್ಷ ಡಾಲರ್ಗಳ ದಂಡ ವಿಧಿಸಿತ್ತು. ಕಾಲಕ್ರಮದಲ್ಲಿ ಆತನ ಕಂಪನಿ ಇತರರಿಂದ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಿತು. ಈ ವೇಳೆಗಾಗಲೆ ಅನೇಕ ರಾಷ್ಟ್ರಗಳೊಂದಿಗೆ ಆಟವಾಡಿದ ಸೊರೊಸ್ ತಾನೇ ಬಿಲಿಯನೇರ್ ಆಗಿಬಿಟ್ಟಿದ್ದ. ತಾನು ಮಾಡಿದ ಯಾವ ಕೆಲಸಕ್ಕೂ ಪಶ್ಚಾತ್ತಾಪ ಪಡಬೇಕಿಲ್ಲ ಎಂಬುದೇ ಆತನ ವಾದವಾಗಿತ್ತು. ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ರಷ್ಯಾ ಇಲ್ಲಿನ ಆರ್ಥಿಕತೆ ಕುಸಿಯಲು ಕಾರಣವಾಗಿದ್ದಕ್ಕೆ ನಿಮಗೆ ಬೇಸರವಿದೆಯೇ? ಎಂದು ಪತ್ರಕರ್ತ ಕೇಳಿದರೆ, ‘ನಾನು ಲಾಭ ಗಳಿಸಲೆಂದೇ ವ್ಯಾಪಾರ ಮಾಡುತ್ತೇನೆ. ಈ ವಿಚಾರ ಬಂದಾಗ ಅದನ್ನು ಬಿಟ್ಟು ಬೇರೆ ಯೋಚಿಸುವುದಿಲ್ಲ. ಈ ಹಂತದಲ್ಲಿ ನಡೆಯುವ ಯಾವುದೇ ಸಾಮಾಜಿಕ ಅವಘಡಗಳಿಗೂ ನಾನು ಜವಾಬ್ದಾರನಲ್ಲ. ಆದರೆ ಮಾನವೀಯತೆ ವಿಚಾರ ಬಂದಾಗ ನಾನು ಬೇರೆ ರೀತಿ ಯೋಚಿಸುತ್ತೇನಷ್ಟೆ’ ಎನ್ನುತ್ತಾನೆ. ಒಂದೆಡೆ ಸಾವಿರಾರು ಮಂದಿಯ ಸಾವಿಗೆ ಕಾರಣನಾಗಿ ಮತ್ತೊಂದೆಡೆ ಈ ಲಾಭದ ಒಂದಷ್ಟು ಹಣವನ್ನು ಸತ್ತವರ ಮಕ್ಕಳ ಅಧ್ಯಯನಕ್ಕೆಂದು ಮೀಸಲಾಗಿಟ್ಟುಬಿಟ್ಟರೆ ಆದೀತೇನು? 

ಸೊರೊಸ್ ಕೆಲಸ ಮಾಡುವ ಸ್ವರೂಪ ಹೇಗೆ ಗೊತ್ತೇ? ಆತ 1984ರಲ್ಲಿ ಓಪನ್ ಸೊಸೈಟಿ ಫೌಂಡೇಶನ್ ಎಂಬ ದತ್ತಿ ಸಂಸ್ಥೆಯನ್ನು ಆರಂಭಿಸಿದ. ಆತನ ವೆಬ್ಸೈಟನ್ನು ನಂಬುವುದಾದರೆ ಇದುವರೆಗೂ 32 ಬಿಲಿಯನ್ ಡಾಲರ್‌ಗಳಷ್ಟು ಸ್ವಂತ ಹಣವನ್ನು ಅದಕ್ಕಾಗಿ ನೀಡಿದ್ದಾನೆ. ಈ ಫೌಂಡೇಶನ್ ಜಗತ್ತಿನಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ದಾನ ನೀಡುತ್ತದೆ. ಆ ಮೂಲಕ ಆಯಾ ರಾಷ್ಟ್ರಗಳಲ್ಲಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಈ ಸ್ವಯಂ ಸೇವಾ ಸಂಸ್ಥೆಗಳು ಬಹುಪಾಲು ಎಡಪಂಥೀಯ ಚಿಂತಕರದ್ದೇ ಆಗಿದ್ದು ದೇಶ ವಿಭಜಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವಂಥವು. ಸ್ವತಃ ಪ್ರಧಾನಮಂತ್ರಿ ಮನಮಹೋನ್ ಸಿಂಗರ ಮಗಳು ಅಮೃತಾ ಸಿಂಗ್ ಈ ಸಂಸ್ಥೆಯ ನಿರ್ದೇಶಕಿಯಾಗಿ ದುಡಿದಿದ್ದವಳು. ಪ್ರಧಾನಮಂತ್ರಿಯೊಬ್ಬರ ಮಗಳು ಇಂತಹ ಸಂಸ್ಥೆಯೊಂದರಲ್ಲಿ ಇದ್ದಾಳೆ ಎಂದರೆ ಸರ್ಕಾರದ ಮೇಲೆ ಸೊರೊಸ್ ಹೊಂದಿದ್ದ ಪ್ರಭಾವ ಎಂಥದ್ದಿರಬಹುದು ಎಂದು ಯೋಚಿಸಿ! ಇಷ್ಟೇ ಅಲ್ಲ, ಸೋನಿಯಾ ಆಪ್ತನಾಗಿದ್ದ ಹರ್ಷ್ ಮಂದಾರ್ ಕೂಡ ಈತನೊಡನೆ ಕೆಲಸ ಮಾಡುತ್ತಿರುವವನೇ. ಹರ್ಷ್ ಮಂದಾರ್ ಸಾಮಾನ್ಯವಾದ ವ್ಯಕ್ತಿಯಲ್ಲ. ಆತ ಐಎಎಸ್ ಅಧಿಕಾರಿಯಾಗಿದ್ದು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ, 2002ರಲ್ಲಿ ನಡೆದ ಗುಜರಾತ್ ದಂಗೆಯ ನೆಪಹೇಳಿ ರಾಜಿನಾಮೆ ಕೊಟ್ಟು, ತನ್ನದ್ದೇ ಆದ ಸಾಮಾಜಿಕ ಸೇವಾ ಸಂಘಟನೆಗಳ ಮೂಲಕ ಆರಾಮದಾಯಕ ಬದುಕನ್ನು ಅನುಭವಿಸುತ್ತಿದ್ದಾನೆ. ಈತನ ಸರ್ಕಾರೇತರ ಸಂಸ್ಥೆಗಳಿಗೆ ಸೊರೊಸ್ ಉದಾರವಾಗಿ ಹಣ ನೀಡುತ್ತಾನೆ. ನಿಮಗೆ ಗಾಬರಿಯಾಗುವ ಸಂಗತಿ ಹೇಳಲೇ? ಆತ ಸೊನಿಯಾ ಯುಪಿಎ ಸರ್ಕಾರದ ಸಂದರ್ಭದಲ್ಲಿ ರೂಪಿಸಿಕೊಂಡಿದ್ದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯನೂ ಆಗಿದ್ದ. ಆ ಹೊತ್ತಿನಲ್ಲೇ ಬಂದ ಹಿಂದೂವಿರೋಧಿ ಕಮ್ಯುನಲ್ ವೈಯಲೆನ್ಸ್ ಬಿಲ್ ಈತನೇ ತಯಾರಿಸಿದ್ದು. ಆ್ಯಕ್ಷನ್ ಏಡ್ ಇಂಡಿಯಾ ಎಂಬ ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥನಾಗಿರುವ ಈತ ತನ್ನ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್‌ಗೆ ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಗಳಿಂದ ಪಡೆದುಕೊಂಡಿದ್ದಾನೆ. ಎನ್ಕೌಂಟರ್‌ಗೆ ಒಳಗಾದ ಇಶ್ರತ್ ಜಹಾನ್‌ಳಿರಲಿ, ಮುಂಬೈ ದಾಳಿಗೆ ಕಾರಣನಾದ ಯಾಕುಬ್ ಮೆಮನ್ ಇರಲಿ, ಕೊನೆಗೆ ಅಜ್ಮಲ್ ಕಸಬ್, ಅಫ್ಜಲ್ ಗುರುಗಳಾದರೂ ಸರಿ ಅವರೆಲ್ಲರ ಪರವಾಗಿ ದನಿ ಎತ್ತುವವರಲ್ಲಿ ಹರ್ಷ್ ಇದ್ದೇ ಇರುತ್ತಾನೆ. ಅಯೋಧ್ಯೆಯಲ್ಲಿ ರಾಮಮಂದಿರವಾಗಬೇಕೆಂಬ ಆದೇಶ ಬಂದಾಗ ಅದನ್ನು ಪರಿಶೀಲಿಸಬೇಕೆಂದು ನ್ಯಾಯಾಲಯಕ್ಕೆ ಹೋದ 40 ಮಂದಿಯಲ್ಲಿ ಈತನೂ ಇದ್ದ. ಸಿಎಎ ವಿರುದ್ಧ ದೆಹಲಿಯ ಶಾಹಿನ್‌ಬಾಗ್‌ನಲ್ಲಿ ಪ್ರತಿಭಟನೆಗೆ ಕೂತಿದ್ದರಲ್ಲ, ಆಗ ತನ್ನ ಕಾರ್ವಾನ್-ಎ-ಮೊಹಬ್ಬತ್ ಎಂಬ ಸಂಘಟನೆಯ ಮೂಲಕ ಪ್ರತಿಭಟನೆಯ ಸೂತ್ರದಾರ ಶರ್ಜಿಲ್ ಇಮಾಮ್‌ನಿಗೆ ಬೆಂಬಲ ಸೂಚಿಸಿದ್ದಲ್ಲದೇ ‘ಈಗ ನಿರ್ಣಯ ಸಂಸತ್ತಿನಲ್ಲೋ, ನ್ಯಾಯಾಲಯದಲ್ಲೋ ಆಗದು. ಅಯೋಧ್ಯೆ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಜಾತ್ಯತೀತತೆಯನ್ನು ರಕ್ಷಿಸಲಿಲ್ಲ. ಹೀಗಾಗಿಯೇ ಕದನ ಬೀದಿಯಲ್ಲೇ ನಡೆದುಬಿಡಲಿ’ ಎಂದಿದ್ದ. 

ಇಷ್ಟಕ್ಕೇ ಮುಗಿಯಲಿಲ್ಲ ಕರ್ನಾಟಕದ ಹರ್ತಿಕೋಟೆಯ ಸಲಿಲ್ ಶೆಟ್ಟಿ ಭಾರತ್ ಜೊಡೊ ಯಾತ್ರೆಯಲ್ಲಿ ರಾಹುಲ್ ಕೈ ಕೈ ಹಿಡಿದು ನಡೆದಿದ್ದ. ಆತ ಸೊರೊಸ್‌ನ ಓಪನ್ ಸೊಸೈಟಿ ಫೌಂಡೇಶನ್ ಜಾಗತಿಕ ಉಪಾಧ್ಯಕ್ಷ. ಆತನೇ ಈ ಹಿಂದೆ ಆಮ್ನೆಸ್ಟಿ ಇಂಟರ್ನ್ಯಾಷನಲ್‌ನ ಕಾರ್ಯದರ್ಶಿಯೂ ಆಗಿದ್ದ. ಅಂದಹಾಗೆ ಇದೇ ಸಂಸ್ಥೆ ಭಾರತ ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆಯಾಗಿ ವರ್ತಿಸುತ್ತಿದೆ ಎಂಬ ವರದಿ ಕೊಟ್ಟಿತ್ತು. ಈಗ ಆ ವರದಿಯ ಮಹತ್ವ ಅರಿವಾಗುತ್ತಿದ್ದಿರಬಹುದಲ್ಲವೇ? 

ಸೊರೊಸ್ ತನ್ನ ತಂಡದ ಮೂಲಕ ಅನೇಕ ಮಾಧ್ಯಮಗಳಿಗೂ ಹಣ ನೀಡುತ್ತಾನೆ. ಆ ಮೂಲಕ ಅಭಿಪ್ರಾಯವನ್ನೇ ಕೊಂಡುಕೊಳ್ಳುತ್ತಾನೆ. ಅನೇಕ ರಾಷ್ಟ್ರಗಳಲ್ಲಿ ತನಗೆ ಬೇಕಾದ, ತಾನು ಹೇಳಿದಂತೆ ಕೇಳುವ ಪಕ್ಷಗಳನ್ನು ಅಧಿಕಾರಕ್ಕೆ ತರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾನೆ. ಹಂಗೇರಿಯಂತಹ ಅನೇಕ ರಾಷ್ಟ್ರಗಳು ಆತನ ಹೂಡಿಕೆಯನ್ನು ವಿರೋಧಿಸುವುದು ಈ ಕಾರಣಕ್ಕಾಗಿಯೇ. 

ಈಗ ಎಲ್ಲವನ್ನೂ ಮತ್ತೊಮ್ಮೆ ಅವಲೋಕಿಸಿ ನೋಡಿ. ಸ್ವತಃ ಕ್ರಿಮಿನಲ್‌ಗಳ ಸಾಲಿಗೆ ಸೇರುವ ಸೊರೊಸ್ ಭಾರತದಲ್ಲಿ ಅನೇಕ ಸೇವಾ ಸಂಸ್ಥೆಗಳ ಮೂಲಕ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಾನೆ. ಮಾಧ್ಯಮಗಳನ್ನು ಹಿಡಿತದಲ್ಲಿರಿಸಿಕೊಳ್ಳುವ ಮೂಲಕ ಜನಾಭಿಪ್ರಾಯ ರೂಪಿಸುತ್ತಾನೆ. ಜಾಗತಿಕ ವರದಿಗಳು ಭಾರತದ ವಿರುದ್ಧ ಇರುವಂತೆ ನೋಡಿಕೊಳ್ಳುತ್ತಾನೆ. ಅಜೀಂ ಪ್ರೇಮ್‌ಜಿ ಥರದವರ ಮೂಲಕ ಇಲ್ಲಿ ಜನಮೆಚ್ಚುಗೆಯ ಕಾರ್ಯ ನಡೆಸುವಂತೆ ಮಾಡಿ ಪಿತೂರಿ ಮಾಡುತ್ತಾನೆ. ಕೊನೆಗೆ ಇವೆಲ್ಲದರ ಲಾಭ ಪಡೆಯಲು ಕಾಂಗ್ರೆಸ್ ನಾಯಕರ ಯಾತ್ರೆಗಳಿಗೆ ಹಣ ಕೊಡುತ್ತಾನೆ, ತನ್ನವರನ್ನೂ ಕಳಿಸುತ್ತಾನೆ. ವಿದೇಶದಲ್ಲಿ ಕೂತು ಭಾರತವನ್ನು ಚೂರು ಮಾಡುವ ಈ ಕಲ್ಪನೆ ಬ್ರಿಟೀಷರು ಭಾರತವನ್ನಾಳಿದಂತಲ್ಲವೇನು? 

ಆಕ್ರಮಣಕಾರಿಗಳನ್ನು ತುಂಡು ಬಟ್ಟೆ ಧರಿಸಿ ಮಹಾತ್ಮ ಓಡಿಸಿದರೆ, ಆತನ ಹೆಸರಿಟ್ಟುಕೊಂಡು ಬೇರೊಂದು ರೂಪದಲ್ಲಿ ಅವರನ್ನೇ ಕರೆತರಲು ಯತ್ನಿಸುವುದು ಎಷ್ಟು ಸರಿ?  ಮೊದಿಯನ್ನು ವಿರೋಧಿಸಿ ಅಭ್ಯಂತರವಿಲ್ಲ. ಆದರೆ ಆ ಧಾವಂತದಲ್ಲಿ ಭಾರತವನ್ನೇ ಪ್ರಪಾತಕ್ಕೆ ತಳ್ಳಬೇಡಿ. 

ಇದು ನನ್ನ ಕಳಕಳಿಯ ಕೋರಿಕೆ ಅಷ್ಟೆ!

ಪ್ರತೀ ಬಾಲಿಗೂ ಸಿಕ್ಸು, ಯಾಕೀ ಹುಚ್ಚು?!!

ಪ್ರತೀ ಬಾಲಿಗೂ ಸಿಕ್ಸು, ಯಾಕೀ ಹುಚ್ಚು?!!

ಹೀರಾ ಬೆನ್. 

ಕಳೆದ ವಾರವಿಡೀ ನೂರು ವರ್ಷ ಕಂಡ ತಾಯಿ ಹೀರಾಬೆನ್‌ರದ್ದೇ ಸುದ್ದಿ. ನರೇಂದ್ರಮೋದಿಯವರ ತಾಯಿಯಾಗಿ ಆಕೆ ಇಡೀ ರಾಷ್ಟ್ರದ ಗೌರವವನ್ನು ತನ್ನದಾಗಿಸಿಕೊಂಡಿದ್ದರು. ಮೋದಿ ದೇಶದ 14ನೇ ಪ್ರಧಾನಿಯಾಗಿ ಜನಮಾನಸದಲ್ಲಿ ಬಲವಾಗಿ ಬೇರೂರಿದ್ದಾರೆ. ಆದರೆ ಇದಕ್ಕೂ ಮೊದಲಿನ ಯಾವ ಪ್ರಧಾನಿಯ ತಾಯಿಯೂ ಜನಮಾನಸವನ್ನು ಇಷ್ಟು ಆವರಿಸಿಕೊಂಡದ್ದು ನನಗಂತೂ ನೆನಪಿಲ್ಲ. ಮೋದಿಯವರನ್ನು ರಾಷ್ಟ್ರದ ಆಸ್ತಿ ಎಂದು ಜನ ಕೊಂಡಾಡುವಾಗಲೆಲ್ಲ ಅವರನ್ನು ಕೊಡುಗೆಯಾಗಿ ಕೊಟ್ಟ ಆ ತಾಯಿಯನ್ನು ಶ್ರದ್ಧೆಯಿಂದ ನೆನಪಿಸಿಕೊಂಡಿದ್ದಾರೆ. ಗಮನಿಸಬೇಕಾದ ಒಂದು ಸಂಗತಿ ಎಂದರೆ ಆಕೆ ಮಾತ್ರ ಎಂದಿಗೂ ತನ್ನ ಮಗ ಪ್ರಧಾನಿ ಎಂಬಂತೆ ಮಾತಾಡಿದ್ದನ್ನು, ಅಹಂಕಾರವನ್ನೇ ಹೊದ್ದುಕೊಂಡು ನಡೆದಾಡಿದ್ದನ್ನು ಯಾರು ನೋಡಿಯೇ ಇಲ್ಲ. ಆಸ್ಪತ್ರೆಗೆ ಹೋಗುವಾಗ, ವೋಟು ಹಾಕಲು ಹೋಗುವಾಗಲೂ ಸಾಮಾನ್ಯರಂತೆ ಆಟೊದಲ್ಲಿ ಕುಳಿತುಕೊಂಡು ಹೋದ ಆಕೆ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗಿ ದೊಡ್ಡವರ ಮನೆಯವರು ಹೇಗಿರಬೇಕು ಎಂಬುದಕ್ಕೆ ಆದರ್ಶವಾಗಿಬಿಟ್ಟರು. ಮಗ ತನ್ನ ತಾಯಿಯನ್ನು ಶ್ರೇಷ್ಠರೆಂದು ಭಾವಿಸಿ ಹೊಗಳುವುದು ಸಹಜವೇ ಮತ್ತು ಕರ್ತವ್ಯವೂ ಕೂಡ. ಆದರೆ ತಾಯಿ ಮಾತ್ರ ಅದನ್ನು ಎಂದಿಗೂ ತಲೆಗೇರಿಸಿಕೊಳ್ಳಬಾರದು ಅಷ್ಟೆ. ಇಲ್ಲವಾದರೆ ಮಗನ ಕಾರ್ಯಕ್ಷೇತ್ರದಲ್ಲಿ ಪದೇ ಪದೇ ಹಸ್ತಕ್ಷೇಪ ನಡೆಸಿ ಆತನ ಬದುಕನ್ನೇ ದುಸ್ತರಗೊಳಿಸುವ ಸಾಧ್ಯತೆಗಳು ಬಹಳ ಇವೆ. ಅದು ಸರಿಯೂ ಹೌದು. ಹೀರಾಬೆನ್‌ರ ಐದು ಜನ ಗಂಡು ಮಕ್ಕಳಲ್ಲಿ ಮೋದಿ ಒಬ್ಬರು. ಇತರ ನಾಲ್ಕು ಜನರೇನೋ ಪ್ರಧಾನಿಯಾಗಲಿಲ್ಲ. ಈತ ತನಗೆ ಸಿಕ್ಕ ಸಂಸ್ಕಾರವನ್ನು, ತನ್ನ ವೈಯಕ್ತಿಕ ಸಾಮರ್ಥ್ಯವನ್ನು ಬಳಸಿಕೊಂಡು ಆ ಹಂತಕ್ಕೇರಿದ. ಹೀಗಿರುವಾಗ ಆಕೆ ಅದರ ಶ್ರೇಯವನ್ನು ತಾನು ಪಡೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅದೇ ವೇಳೆಗೆ ತನ್ನೆಲ್ಲ ಸಾಧನೆಗಳಿಗೂ ಕಾರಣವಾದ ತಾಯಿಗೆ ಈ ಶ್ರೇಯವನ್ನು ಕೊಡದೇ ಹೋದರೆ ಮಗ ಕೃತಘ್ನನಾದಂತೆ. ಈ ನೈತಿಕ ಚೌಕಟ್ಟನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಲೇಬೇಕು. ಇತ್ತೀಚೆಗೆ ಖ್ಯಾತ ಲೇಖಕ ರೋಹಿತ್ ಚಕ್ರತೀರ್ಥರ ಸನ್ಮಾನ ಸಮಾರಂಭ ಮುಗಿದಾಗ ಅವರ ತಂದೆ ಸಿಕ್ಕರು. ಅಚ್ಚರಿ ವ್ಯಕ್ತಪಡಿಸಿ ನೀವೇಕೆ ವೇದಿಕೆಯ ಮೇಲೆ ಬರಲಿಲ್ಲವೆಂದು ಕೇಳಿದ್ದಕ್ಕೆ ‘ಅವೆಲ್ಲವನ್ನೂ ರೋಹಿತ್‌ನೇ ಗಳಿಸಿದ್ದು. ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ’ ಎಂದು ಬಲು ಸಹಜವಾಗಿ ಹೇಳಿದರು. ಮನಮುಟ್ಟಿದ ಮಾತು ಅದು. 

ಸನ್ಯಾಸತ್ವವನ್ನು ಪಡೆದ ವ್ಯಕ್ತಿ ಮತ್ಯಾರಿಗೂ ಪ್ರಣಾಮ ಮಾಡಬೇಕಿಲ್ಲವಂತೆ, ತಾಯಿಗೆ ಮಾತ್ರ. ಮಗ ಸನ್ಯಾಸಿಯಾದನೆಂದರೆ ಆ ತಾಯಿಯ ವ್ಯಕ್ತಿತ್ವವೂ ಕೂಡ ಭಿನ್ನವೇ ಆಗಿಬಿಡುತ್ತದೆ. ಆಕೆ ಆತನಿಂದ ಏನನ್ನೂ ಬಯಸಲಾರಳು. ಸಾಧ್ಯವಾದರೆ ಪಥವಿಮುಖನಾಗದಂತೆ ಆತನನ್ನು ನಿರಂತರವಾಗಿ ಪ್ರೇರೇಪಿಸುವ ಜವಾಬ್ದಾರಿ ಅವಳದ್ದು. ನೇಣಿಗೇರಬೇಕಿದ್ದ ರಾಮ್ ಪ್ರಸಾದ್ ಬಿಸ್ಮಿಲ್‌ನನ್ನು ನೋಡಹೊರಟಿದ್ದ ತಾಯಿ ಕಣ್ಣೀರ್ಗರೆದ ಮಗನನ್ನು ಕಂಡು ಕೆಂಡವಾದಳಂತೆ. ‘ಬ್ರಿಟೀಷರ ವಿರುದ್ಧ ಕಾದಾಡಿ ನೇಣಿಗೇರುವ ಮಗನ ದರ್ಶನ ಪಡೆಯಲು ಹೆಮ್ಮೆಯಿಂದ ಬಂದರೆ ಸಾವಿಗೆ ಹೆದರಿ ಕಣ್ಣೀರ್ಗರೆಯುವ ನಿನ್ನ ನೋಡಬೇಕಾಯ್ತಲ್ಲ. ಇಷ್ಟು ಹೇಡಿ ಎಂದು ಗೊತ್ತಿದ್ದರೆ ಹುಟ್ಟಿದೊಡನೆ ಕೊಂದುಬಿಡುತ್ತಿದ್ದೆ’ ಎಂದಳಂತೆ. ಕಣ್ಣೀರಲ್ಲೇ ಆಕೆಯ ಪಾದ ತೊಳೆದ ಬಿಸ್ಮಿಲ್ ‘ಹೇಡಿತನದ ಕಣ್ಣೀರಲ್ಲ, ದುಃಖದ ಕಣ್ಣೀರು’ ಎಂದು, ‘ನಿನ್ನಂತಹ ತಾಯಂದಿರೇ ಎಲ್ಲರೂ ಆಗಿಬಿಟ್ಟಿದ್ದರೆ, ನನ್ನಂಥ ಸಂತಾನವೇ ಹುಟ್ಟುತ್ತಿತ್ತು. ಬ್ರಿಟೀಷರು ಆಗ ಭಾರತದೊಳಕ್ಕೆ ಕಾಲಿಡುವ ಸಾಹಸ ಮಾಡುತ್ತಿರಲಿಲ್ಲ’ ಎಂದನಂತೆ. ಮೋದಿ ಅನೇಕ ಬಾರಿ ತಮ್ಮ ತಾಯಿಯವರ ಕುರಿತಂತೆ ಹೇಳುತ್ತಾ ಗದ್ಗದಿತರಾದದ್ದಿದೆ. ಆಕೆಯ ಗುಣಗಾನ ಮಾಡುವ ಸಂದರ್ಭವನ್ನು ಅವರೆಂದಿಗೂ ಬಿಟ್ಟುಕೊಟ್ಟಿಲ್ಲ. ಅಧಿಕಾರವನ್ನು ಹಿಡಿಯುವಾಗ ಎಂದೂ ಲಂಚಕ್ಕೆ ಕೈ ಒಡ್ಡಬೇಡ ಎಂದು ತಾಯಿ ಹೇಳಿದ್ದನ್ನು ಅವರು ಅನೇಕ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ವಿದೇಶದ ಸಂದರ್ಶನವೊಂದರಲ್ಲಂತೂ ತನ್ನ ತಾಯಿಯ ಕುರಿತಂತೆ ಹೇಳುತ್ತಾ ಉಮ್ಮಳಿಸಿಬರುವ ದುಃಖವನ್ನು ತಡೆಯಲು ಅವರು ಮಾಡಿದ ಪ್ರಯತ್ನವನ್ನು ಇಂದಿಗೂ ಯೂಟ್ಯೂಬ್‌ಗಳಲ್ಲಿ ನೋಡಬಹುದು. ಹೀಗಾಗಿಯೇ ಅವರನ್ನು ಕಳಕೊಂಡ ದುಃಖ ಮೋದಿಯವರಿಗೆ ಶಾಶ್ವತವಾದ್ದು. ಆದರೆ ಅದನ್ನು ಅವರು ಸ್ವೀಕರಿಸಿದ ರೀತಿ ಇತ್ತಲ್ಲ ಅದು ಮಾತ್ರ ಮಾರ್ಗದರ್ಶಿ. ವಿಚಾರ ತಿಳಿದ ಕೆಲವು ಗಂಟೆಗಳಲ್ಲೇ ಅಂತ್ಯಸಂಸ್ಕಾರವನ್ನೂ ಮಾಡಿಮುಗಿಸಿ, ದೇಶಕ್ಕೊಂದು ಸಮರ್ಥ ಸಂದೇಶ ಕಳಿಸಿದರು. ಯಾವ ಗೌಜು-ಗದ್ದಲವಿರಲಿಲ್ಲ, ಆಡಂಬರವೂ ಇರಲಿಲ್ಲ. ತನ್ನ ತಾಯಿಯ ಶವಯಾತ್ರೆಗೆ ಬಂದು, ತನ್ನನ್ನು ಪ್ರಭಾವಗೊಳಿಸುವ ಯಾವ ಅವಕಾಶವನ್ನೂ ರಾಜಕಾರಣದ ಬಕೆಟ್ಟುಗಳಿಗೆ ಅವರು ಕೊಡಲೇ ಇಲ್ಲ. ಅನೇಕರ ಟ್ವೀಟುಗಳಲ್ಲಿ ಮೋದಿಯವರನ್ನು ಹೊಗಳಿದ್ದಾರಲ್ಲ, ಅದರೊಡನೆ ಅವರೆದುರಿಗೆ ನಿಲ್ಲುವ ಅವಕಾಶವೊಂದು ತಪ್ಪಿಹೋಯ್ತಲ್ಲ ಎಂಬ ಚಿಂತೆಯೂ ಇದ್ದಂತಿತ್ತು! ಹಾಗೆಯೇ ಸುಮ್ಮನೆ ಊಹಿಸಿ ನೋಡಿ, ಹೀರಾಬೆನ್‌ಳ ಅಂತಿಮ ದರ್ಶನಕ್ಕೆ ಅವಕಾಶವಿದ್ದಿದ್ದರೆ ಯಾರ್ಯಾರು ಅಲ್ಲಿ ಹಾಜರಿರುತ್ತಿದ್ದರು ಅಂತ. ನಿಸ್ಸಂಶಯವಾಗಿ ಭಾಜಪದ ರಾಷ್ಟ್ರ, ರಾಜ್ಯ ನಾಯಕರುಗಳಲ್ಲದೇ ಕೊನೆಗೆ ಈ ಬಾರಿಯ ವಿಧಾನಸಭೆಯ ಟಿಕೆಟ್ ಆಕಾಂಕ್ಷಿಯೂ ನಿಂತಿರುತ್ತಿದ್ದ. ಮತ್ತು ಆ ಮಹಾತಾಯಿಯ ಶವದೊಂದಿಗೆ ತನ್ನದೊಂದು ಸೆಲ್ಫಿ ಹಾಕಿಕೊಂಡು ಸಾಧ್ಯವಾದರೆ ಎಂಟ್ಹತ್ತು ಚಿತ್ರಗಳ ಒಂದು ಫೈಲ್ ಮಾಡಿಕೊಂಡು ಸಂಘ ಕಾರ್ಯಾಲಯದೆದುರು ನಿಂತುಬಿಡುತ್ತಿದ್ದ. ಈ ಕಾರಣಕ್ಕಾದರೂ ಟಿಕೆಟು ಕೊಡಲಿ ಅಂತ. ಈ ಹೊಲಸಿಗೆ ಆ ಪುಣ್ಯಾತ್ಮ ಅವಕಾಶವೇ ಕೊಡಲಿಲ್ಲ! 

ಅನೇಕರು ಮೋದಿಯವರ ಸರಳತೆಗೆ ಹೆಮ್ಮೆ ಪಟ್ಟು ಟ್ವೀಟ್ ಮಾಡಿದ್ದನ್ನು ನಾನು ನೋಡಿದೆ. ಅದ್ಯಾವ ಧೈರ್ಯದಿಂದ ಇವರೆಲ್ಲರೂ ಟ್ವೀಟ್ ಮಾಡುತ್ತಾರೋ ದೇವರೇ ಬಲ್ಲ. ಅನೇಕರು ತಮ್ಮ ಮಕ್ಕಳ ಮದುವೆಯನ್ನು ಇಂದ್ರನ ದರ್ಬಾರಿನಂತೆ ಸಿಂಗರಿಸಿದ್ದು ನಮ್ಮ ಕಣ್ಣೆದುರಿಗಿದೆ. ಸ್ವತಃ ಮಕ್ಕಳೇ ತೀರಿಕೊಂಡಾಗ ಇಡಿ ರಾಜ್ಯಕ್ಕೆ ಮುಕ್ತ ಆಹ್ವಾನ ಕೊಟ್ಟಂತೆ ಶವಯಾತ್ರೆ ನಡೆಸಿದ ಉದಾಹರಣೆ ಇದೆ. ಎಕರೆಗಟ್ಟಲೆ ಸರ್ಕಾರಿ ಜಾಗವನ್ನು ಶವಸಂಸ್ಕಾರಕ್ಕಾಗಿ ಮೀಸಲಿಟ್ಟ ಉದಾಹರಣೆಗಳಿವೆ. ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದಾಗ ಮಗಳು ರಕ್ಷಿತಾಳಿಗಾಗಿ ಬೆಂಗಳೂರಿನಲ್ಲಿ ನಡೆಸಿದ ಅದ್ದೂರಿ ವಿವಾಹವನ್ನು ಮರೆಯುವುದುಂಟೇನು? ಜನಾರ್ಧನ ರೆಡ್ಡಿಯವರಂತೂ ವಿವಾಹ ಪಕ್ಕಕ್ಕಿಡಿ ಅದಕ್ಕಾಗಿ ಅವರು ರೂಪಿಸಿದ ಆಹ್ವಾನ ಪತ್ರಿಕೆಯೇ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆಗೆಲ್ಲ ಮೋದಿ ನೋಟು ಅಮಾನ್ಯೀಕರಣ ಮಾಡಿ ಜನಸಾಮಾನ್ಯರ ವೈಭವಕ್ಕೆ ತಾತ್ಕಾಲಿಕವಾಗಿ ಬ್ರೇಕು ಹಾಕಿದ್ದರು. ಕೃಷಿಸಚಿವ ಬಿ.ಸಿ ಪಾಟಿಲ್‌‌ರು, ವಿಜಯನಗರದ ಶಾಸಕ ಆನಂದ್ ಸಿಂಗ್ ಇವರೆಲ್ಲರೂ ತಮ್ಮ ಮಕ್ಕಳ ಮದುವೆ ಮಾಡಿದ ವೈಭವವನ್ನು ನೀವು ಕಲ್ಪನೆ ಕಟ್ಟಿಕೊಂಡೂ ಮುಗಿಸಲಾರಿರಿ. ಪ್ರಹ್ಲಾದ್ ಜೋಷಿಯವರ ಮಗಳ ಮದುವೆಯ ಸಂದರ್ಭದಲ್ಲಂತೂ ಹುಬ್ಬಳ್ಳಿಯ ರಸ್ತೆಗಳು ಸುದೀರ್ಘಕಾಲದ ನಂತರ ರಿಪೇರಿಗೊಂಡವೆಂದು ಜನ ಆಡಿಕೊಳ್ಳುತ್ತಿದ್ದರು. ಅದೆಷ್ಟರಮಟ್ಟಿಗೆ ತಾತ್ಕಾಲಿಕ ರಸ್ತೆಯಾಗಿತ್ತೆಂದರೆ ಮದುವೆಯ ಹೋಮಾಗ್ನಿ ನಂದುವುದರೊಳಗೆ ಅನೇಕ ಕಡೆ ರಸ್ತೆಗಳು ಕಿತ್ತುಹೋಗಿದ್ದವಂತೆ! ಬಿಜೆಪಿಯವರು ಮಾತ್ರವಲ್ಲ, ನಿಖಿಲ್ ಕುಮಾರಸ್ವಾಮಿಯವರ ಮದುವೆಗೆ ಬೆಂಗಳೂರು-ಮೈಸೂರು ರಸ್ತೆಯ 54 ಎಕರೆ ಜಾಗವನ್ನು ಸಮತಟ್ಟುಗೊಳಿಸಲಾಗಿತ್ತಂತೆ. ಉದಾಹರಣೆ ನೀಡುತ್ತಾ ಹೋದರೆ ಪ್ರತಿಯೊಬ್ಬರದ್ದೂ ಒಂದೊಂದು ದೊಡ್ಡ ಕಥೆಯೇ. ಉನ್ನತ ಸ್ಥಾನವನ್ನಲಂಕರಿಸಿ ಸಹಜವಾಗಿಯೇ ಇವೆಲ್ಲವನ್ನೂ ಸ್ವೀಕರಿಸಿದ ಮಂದಿ ಬಲು ವಿರಳ. 

ಹಾಗಂತ ಸಾವಿನಲ್ಲೂ ಈ ರೀತಿಯ ಸಮಾಜ ಪ್ರಜ್ಞೆ ಮೆರೆದವರು ಮೋದಿಯೊಬ್ಬರೇ ಅಲ್ಲ. ಕೇಂದ್ರ ವೈದ್ಯಕೀಯ ಸಚಿವರಾಗಿದ್ದ ಡಾ.ಹರ್ಷವರ್ಧನ್ ಅವರ ತಾಯಿ ಏಕಾಕಿ ಕುಸಿದುಬಿದ್ದು ತೀರಿಕೊಂಡಿದ್ದರು. ಆಕೆಯನ್ನು ಆಸ್ಪತ್ರೆಗೊಯ್ದು ಚಿಕಿತ್ಸೆ ಕೊಡಿಸುವ ಪ್ರಯತ್ನಮಾಡಿದ ನಂತರವೂ ಆಕೆಯ ದೇಹತ್ಯಾಗವಾಯ್ತು. ಆಗ ಆಕೆಯ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿದ ಹೆಗ್ಗಳಿಕೆ ಅವರದ್ದು. ಅವರೇನು ಅದನ್ನು ಸುದ್ದಿಯಾಗಿಸಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಅಪರೂಪದ ಜೀವವಲ್ಲವೇನು? 

ಮೋದಿ ಯಾರು ಮಾಡದ್ದೇನೂ ಮಾಡಲಿಲ್ಲ. ಭಾರತದಲ್ಲಿ ರಾಜನ ಕರ್ತವ್ಯ ಪ್ರಜೆಗಳ ಆನಂದಕ್ಕೆ ಭಂಗ ಬರದಂತೆ ನೋಡಿಕೊಳ್ಳುವುದಷ್ಟೆ. ಆತ ಮೂರು ಜನರಿಗೆ ಮಾತ್ರ ತಲೆಬಾಗಲೇಬೇಕು. ಗುರುವಿಗೆ, ತಾಯಿಗೆ ಮತ್ತು ತನ್ನ ಸರ್ವಸ್ವವೂ ಆಗಿರುವ ಪ್ರಜೆಗಳಿಗೆ. ಚಂದ್ರಗುಪ್ತ ಇಡಿಯ ಭಾರತವನ್ನು ಆಳುವಾಗಲೂ ಚಾಣಕ್ಯನ ಪರಮಶಿಷ್ಯನೇ ಆಗಿದ್ದ. ಗುರುಗಳು ಹಾಕಿದ ಗೆರೆಯನ್ನು ಆತ ಎಂದಿಗೂ ದಾಟಿದ್ದೇ ಇಲ್ಲ. ಸನ್ಯಾಸಿಯಾಗಿ ಇಡೀ ದೇಶದಲ್ಲೇ ಅದ್ವೈತದ ಡಿಂಡಿಮ ಬಾರಿಸುತ್ತಾ ಹೊಸ ಪಂಥವನ್ನೇ ಹುಟ್ಟುಹಾಕಿದ ಶಂಕರರು ಅಂತ್ಯಕಾಲದಲ್ಲಿ ತಾಯಿ ನೆನಪಿಸಿಕೊಂಡಳೆಂಬ ಏಕೈಕ ಕಾರಣಕ್ಕೆ ಧಾವಿಸಿ ಬಂದರಲ್ಲದೇ ಎಲ್ಲರನ್ನೂ ಎದುರು ಹಾಕಿಕೊಂಡು ಆಕೆಯ ಅಂತ್ಯಸಂಸ್ಕಾರಕ್ಕೆ ನಿಂತರು. ಸ್ವತಃ ಅಮೋಘವರ್ಷ ನೃಪತುಂಗ ಪ್ರಜೆಗಳ ಹಿತಕ್ಕೆ ಮಾರಕನಾಗಬಹುದಾಗಿದ್ದ ತನ್ನ ಮಗನಿಗೆ ಮರಣದಂಡನೆಯ ಶಿಕ್ಷೆ ಕೊಡಲು ಸಜ್ಜಾಗಿದ್ದ. ಮೋದಿ ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅವರು ಅನವಶ್ಯಕವಾಗಿ ಯಾರೆದುರೂ ತಲೆ ಬಾಗಲಿಲ್ಲ. ಮೇಲ್ನೋಟಕ್ಕೆ ನೋಡಿದರೆ ಅವರೊಬ್ಬ ಅಹಂಕಾರಿಯಂತೆ ಕಾಣಬಹುದೇನೋ, ಆದರೆ ಆಂತರ್ಯದಲ್ಲಿ ಪ್ರಜೆಗಳ ಹಿತಕ್ಕಾಗಿ ತನ್ನ ತಾನು ಸವೆದುಕೊಳ್ಳುತ್ತಿರುವ ಈ ದೇಶದ ಶ್ರೇಷ್ಠ ರಾಜರುಗಳ ಇಂದಿನ ಪರಂಪರೆಯವರಾಗಿ ನಿಂತಿದ್ದಾರಷ್ಟೆ. ಇಂತಹ ಪರಂಪರೆಗೆ ಭಂಗ ಬರುವಂತೆ ಆಗಿದ್ದು ಬ್ರಿಟೀಷರ ಆಗಮನದ ನಂತರವೇ. ಬ್ರಿಟೀಷರ ಆಡಳಿತವನ್ನು ಇಲ್ಲಿ ಸದೃಢಗೊಳಿಸಿದ ರಾಬರ್ಟ್ ಕ್ಲೈವ್ ಮೊದಲ ಬಾರಿಗೆ ತನ್ನ ದೇಶಕ್ಕೆ ಮರಳುವಾಗ ಸುಮಾರು ಎರಡೂವರೆ ಲಕ್ಷ ಪೌಂಡುಗಳಷ್ಟು ಹಣವನ್ನು ಲೂಟಿಗೈದು ಒಯ್ದಿದ್ದನಂತೆ. ಎರಡನೇ ಬಾರಿಗೆ ಬಂದು ಎರಡೇ ವರ್ಷದಲ್ಲಿ ನಾಲ್ಕು ಲಕ್ಷ ಪೌಂಡುಗಳ ಲೂಟಿಗೈದಿದ್ದ. ಸ್ವತಃ ಮೆಕಾಲೆ ಈ ಎಲ್ಲ ಬ್ರಿಟೀಷ್ ಅಧಿಕಾರಿಗಳ ವೈಭವದ ಬದುಕನ್ನು ನೋಡಿ ಇವರನ್ನು ಬಿಳಿ ನವಾಬರು ಎಂದು ಸಂಬೋಧಿಸುತ್ತಿದ್ದ. ರಾಬರ್ಟ್ ಕ್ಲೈವ್ 1764ರಲ್ಲಿ ನವಾಬರನ್ನು ಮುಂದಿಟ್ಟುಕೊಂಡು ನಾವು ಲೂಟಿ ಮಾಡಬೇಕು. ಆತನೇ ನಮ್ಮ ಮತ್ತು ಇತರೆ ಯುರೋಪಿಯನ್ನರ ನಡುವೆ ಕಾವಲಾಗಿರುತ್ತಾನೆ ಎಂದು ಹೇಳಿದ್ದ. ಅಂದರೆ ನವಾಬರ ಮುಖವಾಡ ತೊಟ್ಟುಕೊಂಡು ಶಾಂತವಾಗಿ ಲೂಟಿಮಾಡುವ ಪರಿ ಇದಷ್ಟೆ. ಇಂದು ಅನೇಕ ನಾಯಕರು ಮೋದಿಯವರನ್ನು ಮುಖವಾಡ ಮಾಡಿಕೊಂಡು ತಾವು ಮಾಡಬಹುದಾದ ಕೆಲಸವನ್ನು ತೆರೆಯ ಹಿಂದೆ ಮಾಡುತ್ತಲೇ ಇದ್ದಾರೆ. ಸರಳತೆ ಇವರ ಪಾಲಿಗೆ ಹೊಗಳಲಿಕ್ಕಷ್ಟೆ, ಆಚರಿಸಲಿಕ್ಕಲ್ಲ. ಬೆಂಗಳೂರಿನ ಲುಲುಮಾಲ್‌ಗೆ ಪ್ರತ್ಯೇಕವಾದ ಅಂಡರ್ಪಾಸ್ ಮಾಡಲಾಗಿದೆ. ಈ ಮಾಲ್ ಯಾರಿಗೆ ಸೇರಿದ್ದು? ಯಾರ ಹಣದಲ್ಲಿ ಇದಕ್ಕೆ ಪ್ರತ್ಯೇಕವಾದ ರಸ್ತೆ ಮಾಡಲಾಯ್ತು? ಈ ಸಂದರ್ಭದಲ್ಲಿ ಜನ ಓಡಾಟಕ್ಕಾಗಿ ಪಟ್ಟ ಹಿಂಸೆಗಳೆಷ್ಟು? ಇವೆಲ್ಲವನ್ನೂ ಆ ರಾಜಕಾರಣಿ ಉತ್ತರಿಸಬಲ್ಲರೇನು? ಅಥವಾ ಬಿಳಿಯ ನವಾಬರಂತೆ ಇವರು ಕರಿಚರ್ಮದ ನವಾಬರಾಗಿಬಿಟ್ಟಿದ್ದಾರೆ! 

ಕರ್ಜನ್ ವೈಸ್ ರಾಯ್ ಆಗಿದ್ದಾಗ ದೆಹಲಿಯಲ್ಲಿ ಆತ ಒಂದು ಭರ್ಜರಿ ದರ್ಬಾರನ್ನು ನಡೆಸಿದ್ದ. ಅಂದಿನ ಇತಿಹಾಸಕಾರರು ಇದರ ಕುರಿತಂತೆ ವಿವರಿಸುತ್ತಾ ಆನೆಗಳು, ಭೇರಿ-ನಗಾರಿಗಳು, ಆಭರಣಗಳನ್ನು ಧರಿಸಿದ ರಾಜರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರೆಂದು ಹೇಳುತ್ತಾರೆ. ಇದರ ಚಿತ್ರೀಕರಣವನ್ನು ಮಾಡಿಕೊಂಡಿದ್ದ ಕರ್ಜನ್ ಭಾರತೀಯರ ದುಡ್ಡಿನಲ್ಲಿ ಚೆನ್ನಾಗಿ ಮೆರೆದುಬಿಟ್ಟ. ಹಾಗೆ ನೋಡಿದರೆ ಆ ಕರ್ಜನ್‌ಗಳು ಇಂದಿಗೂ ನಮ್ಮ ನಡುವೆಯೇ ಇದ್ದಾರೆ. ಅವರ ವೈಭವದ ಮೆರವಣಿಗೆಗಳೆಲ್ಲ ದೇಶದ ಪ್ರಜೆಗಳನ್ನು ಲೂಟಿಮಾಡಿದ ಹಣವೇ. ನಮ್ಮ ರಸ್ತೆಗಳನ್ನು, ಶಾಲಾ-ಕಾಲೇಜುಗಳನ್ನು, ವೈದ್ಯಕೀಯ ವ್ಯವಸ್ಥೆಗಳನ್ನು ನುಂಗಿ ನೀರ್ಗುಡಿದು ಸಂಭ್ರಮಿಸುವ ಮಂದಿ ಮೋದಿಯ ಸರಳತೆಯ ಗುಣಗಾನ ಮಾಡುವಾಗ ಯಾಕೊ ಹೊಟ್ಟೆ ಕಿವುಚಿದಂತಾಗುತ್ತದೆ. 

ಎಲ್ಲಕ್ಕಿಂತಲೂ ಮನಸ್ಸಿಗೆ ಬೇಸರವಾದ ಸಂಗತಿ ಯಾವುದು ಗೊತ್ತೇನು? ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ಅನ್ನ, ಆಹಾರ ಸೇವಿಸದೇ ಮಲಗಿಕೊಂಡಿದ್ದಾರೆ. ಅವರನ್ನು ಭೇಟಿ ಮಾಡಲು ಹೋಗುವ ಮಂದಿ ಫೋಟೊ ತೆಗೆದುಕೊಂಡು, ವಿಡಿಯೊ ಚಿತ್ರೀಕರಣ ಮಾಡಿಕೊಂಡು ಹಂಚಿಕೊಳ್ಳುವುದು. ಅದರಲ್ಲೂ ಸ್ವತಃ ಸಿದ್ದೇಶ್ವರ ಸ್ವಾಮಿಯವರಿಗೆ ಮೋದಿಯವರಿಂದ ಕರೆಮಾಡಿಸಿ ಮಾತನಾಡಿಸುವ ಪ್ರಯಾಸ ಮಾಡುವುದಿದೆಯಲ್ಲ ನಿಜಕ್ಕೂ ಘಾಸಿ ಉಂಟುಮಾಡುವಂಥದ್ದು. ಸ್ವತಃ ಮೋದಿಯವರು ಆಶ್ರಮದ ಪ್ರಮುಖರಿಗೆ ಕರೆಮಾಡಿ ಆರೋಗ್ಯ ವಿಚಾರಿಸಿಬಿಟ್ಟಿದ್ದರೆ ಅದು ಹೃದಯ ಮುಟ್ಟುವಂತಿರುತ್ತಿತ್ತು. ಅನ್ನ-ಆಹಾರ ಸೇವಿಸದೇ ಹರಿದು ಬರುತ್ತಿರುವ ಭಕ್ತಸಾಗರದ ಕಡೆಗೆ ಕಡೆಗಣ್ಣಿನಿಂದಲೂ ಈಕ್ಷಿಸಲಾಗದ ಸ್ಥಿತಿಯಲ್ಲಿರುವ ಪೂಜ್ಯರಿಗೆ ಕರೆಮಾಡಿಸಿ, ಅದನ್ನು ವಿಡಿಯೊ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಈ ಪುಣ್ಯಾತ್ಮರಿಗೆ ಏನೆನ್ನಬೇಕು ಹೇಳಿ? ಪ್ರತಿಯೊಂದು ಚೆಂಡಿಗೂ ಸಿಕ್ಸ್ ಹೊಡೆಯಬೇಕೆನ್ನುವ ಕುತ್ಸಿತ ಚಿಂತನೆ ರಾಜಕಾರಣಕ್ಕೆ ಹಬ್ಬಿರುವುದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಮೋದಿಯವರ ಪುಣ್ಯದ ಫಲವನ್ನು ಚೆನ್ನಾಗಿ ಮೇಯುವ ಈ ಮಂದಿ, ತಮ್ಮ ಪಾಪದ ಫಲವನ್ನು ಮೋದಿಗೆ ಮೆತ್ತಿ ಮೆರೆದರೆ ಅಚ್ಚರಿ ಪಡಬೇಡಿ!

ಇದು ಕೊನೆಯ ಬೌದ್ಧಿಕ ಯುದ್ಧ, ಸಿದ್ಧರಾಗಿ!

ಇದು ಕೊನೆಯ ಬೌದ್ಧಿಕ ಯುದ್ಧ, ಸಿದ್ಧರಾಗಿ!


ನರೇಂದ್ರಮೋದಿಯ ಮೊದಲ ಐದು ವರ್ಷ ಇಡೀ ದೇಶ ಶಾಂತಸ್ಥಿತಿಯಲ್ಲಿತ್ತು. ಬಹುಶಃ ಪ್ರತಿಭಟನಾಕಾರರು ಅವರು ಮತ್ತೆ ಅಧಿಕಾರವನ್ನು ಪಡೆಯಬಲ್ಲರು ಎಂದು ಊಹಿಸಿರಲಿಲ್ಲವೆನಿಸುತ್ತದೆ. ಮೋದಿ ಮೊದಲಿಗಿಂತಲೂ ಹೆಚ್ಚು ಸೀಟುಗಳೊಂದಿಗೆ ಅಧಿಕಾರಕ್ಕೆ ಬಂದನಂತರ ಇವರಿಗೆಲ್ಲ ಮಾಡು-ಮಡಿ ಪರಿಸ್ಥಿತಿ ಎದುರಾಗಿಬಿಟ್ಟಿತು. ಆಗ ಶುರುವಾದ ಪ್ರತಿಭಟನೆಯ ಸರಮಾಲೆಗಳು ಈಗಲೂ ನಿಂತಿಲ್ಲ. ಸಿಎಎ ಪ್ರತಿಭಟನೆಯ ರಸ್ತೆ ತಡೆಯಿಂದ ಹಿಡಿದು ರೈತರ ಪ್ರತಿಭಟನೆಯವರೆಗೂ ಅದು ವಿಸ್ತಾರವಾದ ರೀತಿ, ಟ್ರಂಪ್ ಬಂದಾಗಿನ ದೆಹಲಿ ದಂಗೆಯಿಂದ ಹಿಡಿದು ಪ್ರತಿ ಶುಕ್ರವಾರ ನಮಾಜು ಮುಗಿಸಿ ಬೀದಿಗಿಳಿವವರೆಗೆ ಇದು ನಡೆಯುತ್ತಲೇ ಬಂದಿದೆ. ಇತ್ತೀಚಿಗಿನ ಹೊಸ ಸೇರ್ಪಡೆ ಅಗ್ನಿಪಥ್ಗೆ ಸಂಬಂಧಪಟ್ಟಂತೆ. ಗ್ಲೋಬಲ್ ಪೀಸ್ ಇಂಡೆಕ್ಸ್ ವರದಿಯ ಪ್ರಕಾರ ಈ ರೀತಿಯ ಪ್ರತಿಭಟನೆಗಳಿಂದಾಗಿಯೇ ಜಗತ್ತಿನಲ್ಲಿ ಹದಿನಾರುವರೆ ಟ್ರಿಲಿಯನ್ ಡಾಲರ್ಗಳಷ್ಟು ನಷ್ಟವುಂಟಾಗಿದೆ. ಭಾರತ 72ನೇ ಸ್ಥಾನದಲ್ಲಿದ್ದು 646 ಬಿಲಿಯನ್ ಡಾಲರ್ಗಳಷ್ಟು ನಷ್ಟವನ್ನು ಕಂಡಿದೆ. ಸಿರಿಯಾ, ದಕ್ಷಿಣ ಸುಡಾನ್ ಮತ್ತು ಮಧ್ಯ ಆಫ್ರಿಕಾದ ರಾಷ್ಟ್ರಗಳು ಪ್ರತಿಭಟನೆಗಳಿಗೆ ಹೆಚ್ಚು ನಲುಗಿದ ರಾಷ್ಟ್ರವೆಂದಾದರೆ ಅದರ ನಂತರದ ಸ್ಥಾನ ದಕ್ಷಿಣ ಏಷ್ಯಾದ್ದೇ. 2020ರಲ್ಲಿ ಭಾರತ ವ್ಯಕ್ತಿಯೊಬ್ಬನ ಮೇಲೆ 841 ಡಾಲರ್ಗಳಷ್ಟು ಹಣವನ್ನು ಪ್ರತಿಭಟನೆಗಳಲ್ಲಿ ಕಳೆದುಕೊಂಡಿದ್ದರೆ, ಚೀನಾ ಹೆಚ್ಚು-ಕಡಿಮೆ ನಮ್ಮ ಎರಡರಷ್ಟು ನಷ್ಟ ಮಾಡಿಕೊಂಡಿದೆ. ಪಾಕಿಸ್ತಾನವೇನು ಕಡಿಮೆ ಇಲ್ಲ. ಅಲ್ಲಿನ ತಲಾ ನಷ್ಟ ಸುಮಾರು 700 ಡಾಲರ್ಗಳಷ್ಟು. ಬಹುಶಃ ಕಳೆದುಕೊಳ್ಳಲು ಬೇಕಾದಷ್ಟು ಸಂಪತ್ತು ಇದ್ದಿದ್ದರೆ ಪಾಕಿಸ್ತಾನ ಎಲ್ಲರನ್ನೂ ಮೀರಿಸಿರುತ್ತಿತ್ತೇನೋ! ಹಿಂಸೆ ಎಷ್ಟು ವೇಗವಾಗಿ ಹಬ್ಬುತ್ತಿದೆ ಎಂದರೆ 2021ರಲ್ಲಿ ಇದು ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿಬಿಟ್ಟಿತು. ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಅಗ್ರಣಿಯಾಗಿರುವ ಹತ್ತು ರಾಷ್ಟ್ರಗಳ ಒಟ್ಟೂ ನಷ್ಟ ಜಾಗತಿಕ ಜಿಡಿಪಿಯ ಮೂರನೇ ಒಂದು ಭಾಗದಷ್ಟು. ಕಳೆದ ವರ್ಷ ಅತಿ ಹೆಚ್ಚು ಹಿಂಸಾತ್ಮಕ ಪ್ರತಿಭಟನೆಗಳನ್ನು ಕಾಣುವ ರಾಷ್ಟ್ರಗಳ ಸಂಖ್ಯೆ 29ರಿಂದ 38ಕ್ಕೇರಿದೆ. ಆದರೆ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಅದರರ್ಥ ಪ್ರತಿಭಟನಾಕಾರರು ವ್ಯಕ್ತಿಗಳನ್ನು ಕೊಲ್ಲುವುದಕ್ಕಿಂತ ರಾಷ್ಟ್ರಕ್ಕೆ ಆಥರ್ಿಕ ನಷ್ಟ ಉಂಟು ಮಾಡುವುದರಲ್ಲಿ ಹೆಚ್ಚು ಲಾಭವನ್ನು ಕಾಣುತ್ತಿದ್ದಾರೆ ಎಂದಾಯ್ತು. ಅಚ್ಚರಿ ಎಂದರೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಈ ರೀತಿ ಏಕಾಕಿ ಮಗ್ಗುಲನ್ನು ಬದಲಾಯಿಸುವುದಾದರೂ ಏಕೆ? ಅಮೇರಿಕಾದ ಪ್ರತಿಭಟನೆಯಲ್ಲಿ ಆಸ್ತಿ-ಪಾಸ್ತಿಗಳ ನಾಶವಾಗುತ್ತದೆ. ಆಫ್ರಿಕಾದಲ್ಲಿ ಲೂಟಿಕೋರರು ಅಂಗಡಿಗಳನ್ನು ಲೂಟಿ ಮಾಡುತ್ತಾರೆ. ಭಾರತದಲ್ಲೂ ಜನ ಕಲ್ಲೆಸೆದು ಅಂಗಡಿ ಮುಂಗಟ್ಟುಗಳ ಧ್ವಂಸ ಮಾಡುತ್ತಾರೆ, ಕೊನೆಗೆ ಹುಡು-ಹುಡುಕಿ ರೈಲು ಇಂಜಿನ್ನುಗಳಿಗೆ, ಬೋಗಿಗಳಿಗೆ ಬೆಂಕಿ ಇಡುತ್ತಾರೆ. ಅದರರ್ಥ ಸಕರ್ಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಹೊರೆಯಾಗುವಂತೆ ನೋಡಿಕೊಳ್ಳಬೇಕು ಎಂಬುದೇ ಅಲ್ಲವೇನು? ಈ ಎಲ್ಲ ಪ್ರತಿಭಟನೆಗಳ ಹಿಂದೆ ಅದನ್ನು ನಿಯಂತ್ರಿಸುವ ಕಾಣದ ಕೈಯ್ಯೊಂದಿದೆ ಎಂದೆನಿಸುವುದಿಲ್ಲವೇ?


ಅಮೇರಿಕಾ ಯೂರೋಪ್ಗಳು ತಮ್ಮ ಜಾಗತಿಕ ಪ್ರಭಾವವನ್ನು ಹೇಗೆ ಉಳಿಸಿಕೊಂಡಿವೆಯೆಂದರೆ ಜಗತ್ತಿನ ಯಾವ ರಾಷ್ಟ್ರದಲ್ಲಿ ತಮಗೆ ಬೇಕಾದ ಯಾವ ನಾಯಕನನ್ನು ಪ್ರತಿಷ್ಠಾಪಿಸಲೂ ಅವರು ಸಮರ್ಥರಾಗಿದ್ದಾರೆ. ಇದು ಅಲ್ಲಿನ ಸಕರ್ಾರದ ಕೆಲಸವಲ್ಲ, ಬದಲಿಗೆ ಒಂದಷ್ಟು ಉದ್ಯಮಿಗಳು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲೋಸುಗ ಮಾಡುವ ವ್ಯವಸ್ಥಿತವಾದ ಪ್ರಯತ್ನ. ಟ್ರಂಪ್ ತಮ್ಮ ಹಿಡಿತಕ್ಕೆ ಸಿಕ್ಕುತ್ತಿಲ್ಲ, ತಮ್ಮ ತಾಳಕ್ಕೆ ನತರ್ಿಸುತ್ತಿಲ್ಲ ಎಂದರಿವಾದೊಡನೆ ಆತನನ್ನು ತೆಗೆದೊಗೆಯುವ ಪ್ರಯತ್ನ ಆರಂಭಿಸಲಾಯ್ತು. ಬ್ಲಾಕ್ ಲೈವ್ಸ್ ಮ್ಯಾಟರ್ ಎಂಬ ಪ್ರತಿಭಟನೆಗೆ ರೆಕ್ಕೆ-ಪುಕ್ಕಗಳು ಬಂದುಬಿಟ್ಟವು. ಈ ಇಡೀ ಹೋರಾಟವನ್ನು ಸಂಘಟಿಸಿ ಅದಕ್ಕೆ ಬೇಕಾದ ವೇದಿಕೆಯನ್ನು ರೂಪಿಸಿಕೊಟ್ಟ ಸಕರ್ಾರೇತರ ಸಂಸ್ಥೆಗಳಲ್ಲಿ ಬಹುತೇಕ ಜಾಜರ್್ ಸೊರೋಸ್ನಿಂದ ಹಣ ಪಡೆದಂಥವು. ದಂಗೆಗಳನ್ನು ಇವರೆಲ್ಲ ಸೇರಿ ಯಾವ ಮಟ್ಟಕ್ಕೇರಿಸಿದರೆಂದರೆ ಟ್ರಂಪ್ನನ್ನು ಸೋಲಿಸಿಯೇ ನೆಮ್ಮದಿಯ ನಿದ್ದೆ ಅವರು ಮಾಡಿದ್ದು. ಈ ಸೋಲಿಗೆ ಅವರು ಬೀದಿಗಿಳಿಯುವ ಮಾರ್ಗದಿಂದ ಹಿಡಿದು ಚುನಾವಣೆಯ ಫಲಿತಾಂಶವನ್ನೇ ತಿರುಗು-ಮುರುಗಾಗಿಸುವವರೆಗೂ ಎಲ್ಲ ಪ್ರಯತ್ನವನ್ನೂ ಮಾಡಿದರು. ಕೊನೆಗೆ ಟ್ರಂಪ್ ಇದರ ಆಳಕ್ಕೆ ಹೋಗಿಬಿಡುತ್ತಾನೆಂದು ಭಾವಿಸಿ ಅವರ ಸಂಸತ್ತಿನ ಮೇಲೆ ದಾಳಿಯನ್ನೂ ನಡೆಸಿ ಟ್ರಂಪ್ನ ಮಾನ-ಮಯರ್ಾದೆ ಹರಾಜು ಹಾಕಿ ಓಡಿಸಿಯೂಬಿಟ್ಟರು. ಈ ಪ್ರಯತ್ನವನ್ನು ಅವರೀಗ ಭಾರತದಲ್ಲಿ ಹ್ಯೂಮನ್ ರೈಟ್ಸ್ ಲಾ ನೆಟ್ವಕರ್್ ಮೂಲಕ ಮಾಡುತ್ತಿದ್ದಾರೆ. ಇದು ನೇರವಾಗಿ ಅಥವಾ ಪರೋಕ್ಷವಾಗಿ ಸೊರೋಸ್ನ ಕೃಪಾಪೋಷಿತವೇ. ಅಚ್ಚರಿ ಎಂದರೆ ಇದರ ಲೀಗಲ್ ಅಡ್ವೈಸರ್ ಆಗಿರುವ ಕವಲ್ಪ್ರೀತ್ ಕೌರ್ ಎಡಪಂಥೀಯರ ವಿದ್ಯಾಥರ್ಿ ಸಂಘಟನೆಯಾದ ಆಲ್ ಇಂಡಿಯಾ ಸ್ಟೂಟೆಂಡ್ಸ್ ಅಸೋಸಿಯೇಷನ್ನ ಉಪಾಧ್ಯಕ್ಷೆಯೂ ಹೌದು. ಎಡಪಂಥೀಯರ ಮುಖವಾಣಿಯಾದ ಕ್ಯಾರ್ವಾನ್ ಪತ್ರಿಕೆಯ ಸಂಪಾದಕರೂ ಮತ್ತು ಈಕೆ ಭಿನ್ನ-ಭಿನ್ನ ಎಡಪಂಥೀಯ ಚಿಂತಕರೊಂದಿಗೆ ಸೇರಿ ಅನೇಕ ವಿಷಯಗಳ ಮೇಲೆ ಸೆಮಿನಾರ್ ನಡೆಸುವುದು ಗುಟ್ಟಾದ ಸಂಗತಿಯಲ್ಲ. ಅಂದರೆ ನೇರವಾಗಿ ಈ ಎಡಪಂಥೀಯ ಸಂಘಟನೆಗಳು ಸೊರೋಸ್ನಿಂದ ಕೃಪೆಗೊಳಗಾಗಿವೆ. ಇದೇ ಕ್ಯಾರ್ವಾನ್ ಪತ್ರಿಕೆ ಅಗ್ನಿಪಥ್ನ ಚಿಂತನೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದಾಗ ಈ ಒಂದು ಯೋಜನೆ ಜಾರಿಗೆ ತಂದರೆ ಎಲ್ಲೆಡೆ ದಂಗೆಗಳಾಗುವ ಸಾಧ್ಯತೆ ಇದೆ ಎಂದು ಏಪ್ರಿಲ್ ಕೊನೆಯ ವಾರದಲ್ಲೇ ಹೇಳಿತ್ತು. ಆಗಿನ್ನೂ ಇದಕ್ಕೆ ಅಗ್ನಿಪಥ್ ಎಂಬ ನಾಮಕರಣವೂ ಆಗಿರಲಿಲ್ಲ. ಮೊನ್ನೆ 14ಕ್ಕೆ ರಾಜ್ನಾಥ್ ಸಿಂಗರು ಅಗ್ನಿಪಥ್ ಯೋಜನೆಯನ್ನು ಪ್ರಸ್ತುತಪಡಿಸುತ್ತಿದ್ದಂತೆ ಇವರೆಲ್ಲರ ಚಟುವಟಿಕೆಗಳೂ ಗರಿಗೆದರಿದವು. ಮರುದಿನವೇ ಬಿಹಾರದಲ್ಲಿ ಪ್ರತಿಭಟನೆ ಆರಂಭವಾಯ್ತು. ಅಷ್ಟೇ ಅಲ್ಲ, ಪ್ರತಿಭಟನೆಯ ಹೊತ್ತಲ್ಲಿ ತಮ್ಮ ಗುರುತು ಸಿಗದಂತೆ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ರೈತರ ಪ್ರತಿಭಟನೆಯ ಕಾಲಕ್ಕೆ ಹೊರಡಿಸಿದ್ದ ಸೂಚನೆಗಳನ್ನು ಎಡಪಂಥೀಯ ಸಂಘಟನೆಗಳು ಪ್ರತಿಭಟನಾಕಾರರೊಂದಿಗೆ ಹಂಚಿಕೊಂಡವು. ಮುಖವನ್ನು, ಮೈಮೇಲಿನ ಟ್ಯಾಟುಗಳನ್ನು ಕಾಣದಂತೆ ಬಟ್ಟೆಯಿಂದ ಮುಚ್ಚಿಕೊಳ್ಳಿ, ಕಣ್ಣು-ಮುಖ, ಮೂಗು ಇವುಗಳನ್ನು ಪೆಪ್ಪರ್ ಸ್ಪ್ರೇ ಮತ್ತು ಟಿಯರ್ ಗ್ಯಾಸ್ನಿಂದ ರಕ್ಷಣೆ ಪಡೆದುಕೊಳ್ಳಲು ಮುಚ್ಚಿಕೊಳ್ಳಿ. ಆದಷ್ಟೂ ಸುಲಭಕ್ಕೆ ಗುರುತಿಸಲಾಗದ ಕಪ್ಪು ಪ್ಯಾಂಟು, ಕಪ್ಪು ಟೊಪ್ಪಿಗೆ ಇರುವ ಟೀ-ಶಟರ್್ಗಳನ್ನು ಹಾಕಿಕೊಳ್ಳಿ ಎಂಬೆಲ್ಲ ಸಂದೇಶ ಹರಡಿಸಲಾಯ್ತು. ಆನ್ಲೈನ್ನಲ್ಲಿ ಹೋರಾಟ ಮಾಡುವುದಾದರೆ ತಮ್ಮ ಗುರುತು ಕಾಣದಂತೆ ಮುಚ್ಚಿಟ್ಟುಕೊಳ್ಳುವುದು ಹೇಗೆ ಎಂಬುದಕ್ಕೂ ವಿವರಣೆ ಕೊಡಲಾಯ್ತು.
ಉದ್ದಕ್ಕೂ ಪ್ರತಿಭಟನಾಕಾರರು ಇದೇ ಮಾರ್ಗವನ್ನು ಅನುಸರಿಸಿದ್ದಾರೆ. ಗೂಂಡಾಗಳಂತೆ ಬೆಳೆದು ನಿಂತಿರುವ ಪ್ರತಿಭಟನಾಕಮರ್ಿಗಳು ತಮ್ಮ ಗುರುತು ಸಿಗದಷ್ಟು ಮುಖ ಮುಚ್ಚಿಕೊಂಡು ಬಂದು ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ. ಎರಡು ದಿನಗಳಲ್ಲಿ ನಡೆದ ಪ್ರತಿಭಟನೆಗೆ ರೈಲ್ವೆ ಇಲಾಖೆಗೆ 200 ಕೋಟಿ ರೂಪಾಯಿ ನಷ್ಟವಾಗಿದೆ.


ಹಾಗಂತ ಇದು ಇಲ್ಲಿಗೇ ನಿಲ್ಲಲಿಲ್ಲ. ಇವೆಲ್ಲವುಗಳ ಹಿಂದೆ ಆಂಟಿಫಾ ಎನ್ನುವ ಸಂಸ್ಥೆಯೊಂದು ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆಂಟಿಫಾ, ಆ್ಯಂಟಿ ಫ್ಯಾಸಿಸ್ಟ್ ಎಂಬುದರ ಹ್ರಸ್ವ ರೂಪ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಮೇಲೆ ಅಮೇರಿಕಾದಲ್ಲಿ ಚುರುಕುಗೊಂಡ ಸಂಸ್ಥೆ ಇದು. ಇದರ ಒಳ-ಹೊರಗನ್ನು ಅರಿತಿದ್ದ ಟ್ರಂಪ್ ಇವರ ಹಿಂಸಾತ್ಮಕ ಮಾರ್ಗವನ್ನು ಖಂಡಿಸಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ನಿರ್ಣಯ ಮಾಡಿದ್ದ. ಟ್ರಂಪ್ನನ್ನು ಉರುಳಿಸುವುದು ತಮ್ಮ ಧ್ಯೇಯವೆಂದು ಅವರು ಸ್ಪಷ್ಟವಾಗಿ ಹೇಳಿಕೊಂಡಿದ್ದರು. ಈಗ ಇದೇ ಆಂಟಿಫಾದ ಭಾರತದಲ್ಲಿರುವಂತಹ ಅಂಗಸಂಸ್ಥೆ ವ್ಯಾಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. 2020ರಲ್ಲಿಯೇ ಟ್ರಂಪನ್ನು ಉರುಳಿಸುತ್ತಿರುವ ಚಿತ್ರ ಹಾಕಿಕೊಂಡು ಮುಂದೆ ಯಾರೆಂದು ಗೊತ್ತಲ್ಲ, ಎಂದು ತನ್ನ ಅಧಿಕೃತ ಟ್ವಿಟರ್ ಪೋಸ್ಟ್ನಲ್ಲಿ ಹಾಕಿಕೊಂಡಿತ್ತು. ನಿಸ್ಸಂಶಯವಾಗಿ ಅದು ಮೋದಿಯೇ ಎಂದು ಪ್ರತ್ಯೇಕವಾಗಿ ಹೇಳಬೇಕಿರಲಿಲ್ಲ. ಬ್ಲಾಕ್ ಲೈವ್ಸ್ ಮ್ಯಾಟರ್ ಅನ್ನು ಸಮಥರ್ಿಸಿದವರೆಲ್ಲ ಭಾರತದಲ್ಲಿ ನಡೆಯುತ್ತಿರುವ ನಕ್ಸಲರ ಹೋರಾಟವನ್ನು ಸಮಥರ್ಿಸಬೇಕು ಎಂದು ಅವರು ಫಮರ್ಾನು ಹೊರಡಿಸಿದ್ದರು. ಅಲ್ಲಿಗೆ ಎಡಪಂಥೀಯರೊಂದಿಗಿನ ತನ್ನ ಸಂಬಂಧವನ್ನು ಆಂಟಿಫಾ ಬಲವಾಗಿ ತೋರ್ಪಡಿಸಿಕೊಂಡಿತ್ತು. ಈ ಎಲ್ಲ ದಂಗೆಗಳ ಹಿಂದೆ ಇವರೆಲ್ಲರ ಪಾತ್ರವಿದೆ.


ಹಿಂದೊಮ್ಮೆ ಇದೇ ಅಂಕಣದಲ್ಲಿ ಜಿಹಾದಿಗಳು, ಇವ್ಯಾಂಜಲಿಸ್ಟ್ಗಳು, ಕಮ್ಯುನಿಸ್ಟರು ಜಗತ್ತಿನಲ್ಲೆಲ್ಲ ಬಡಿದಾಡಿದರೂ ಭಾರತದಲ್ಲಿ ಮಾತ್ರ ಒಂದಾಗಿದ್ದಾರೆ ಎಂದು ಹೇಳಿದ್ದು ನೆನಪಿದೆ. ಇದು ಈಗ ಇನ್ನೂ ಹೆಚ್ಚು ನಿಚ್ಚಳವಾಗಿ ಬೆಳಕಿಗೆ ಬರುತ್ತಿದೆ. ಇಲ್ಲಿ ನಡೆಯುವ ಎಲ್ಲ ದಂಗೆಗಳ ಕುರಿತಂತೆಯೂ ಈ ಮೂವರೂ ಹತ್ತಿರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ನೂಪುರ್ ಶಮರ್ಾಳ ಕಾರಣಕ್ಕಾಗಿ ಬೀದಿಗೆ ಬಂದು ಕಲ್ಲೆಸೆದಿದ್ದ ಮುಸಲ್ಮಾನರು ಅಗ್ನಿಪಥ್ನ ಕಾರಣಕ್ಕೆ ಗಲಾಟೆಯಾಗುವ ಒಂದು ದಿನ ಮುನ್ನ ಈ ಶುಕ್ರವಾರ ಯಾರೂ ಬೀದಿಗೆ ಬರಬಾರದೆಂದು ಮೌಲ್ವಿಗಳು ಎಚ್ಚರಿಕೆಯ ಫತ್ವಾ ಹೊರಡಿಸಿದ್ದರು. ಏಕೆಂದರೆ ಮರುದಿನ ಗಲಾಟೆ ನಡೆಸುವ ಹೊಣೆ ಬೇರೆಯವರದ್ದಿದೆ ಎಂಬುದು ಅವರಿಗೆ ಗೊತ್ತಿತ್ತು. ಅದು ಹಾಗೆಯೇ ಆಯ್ತು. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಲ್ಲಿ ನಡೆದ ಈ ದಂಗೆಗಳಲ್ಲಿ ಪ್ರತಿಪಕ್ಷದವರ ಕೈವಾಡವಂತೂ ಇದ್ದೇ ಇತ್ತು. ಜೊತೆಗೆ ಈ ಸಂಘಟನೆಗಳದ್ದೂ ಕೂಡ. ಎಲ್ಲ ಗೊತ್ತಿದ್ದರೂ ಇವುಗಳ ವಿರುದ್ಧ ಏನೂ ಮಾಡಲಾಗದ ಸ್ಥಿತಿ ಇದೆ ಏಕೆಂದರೆ ಈ ಸಂಘಟನೆಗಳಿಗೆ ಅಂತರ್ರಾಷ್ಟ್ರೀಯ ಬೆಂಬಲವಿದೆ. ಮುಸಲ್ಮಾನರ ಹಿತ ರಕ್ಷಣೆಗೆ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳಿವೆ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ನರೇಂದ್ರಮೊದಿ ಮತ್ತವರ ತಂಡಕ್ಕಿದೆ.


ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಪಾಕಿಸ್ತಾನದಲ್ಲಿ ಚೀನಾದ ಹೂಡಿಕೆ ಶೇಕಡಾ 50ರಷ್ಟು ಕಡಿಮೆಯಾದರೆ ಅಮೇರಿಕಾದ ಹೂಡಿಕೆ ಅಷ್ಟೇ ಹೆಚ್ಚಾಗಿದೆ. ಪಾಕಿಸ್ತಾನದ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಪ್ರಯತ್ನವಿದಿರಬಹುದೇ? ಹೇಳಲಾಗದು! ಪಾಕಿಸ್ತಾನವನ್ನು ಐಎಮ್ಎಫ್ನ ಕಂದುಪಟ್ಟಿಯಿಂದ ಹೊರತೆಗೆಯುವಲ್ಲಿ ಅಮೇರಿಕಾ ಪಡುತ್ತಿರುವ ಪ್ರಯಾಸ ನೋಡಿದರೆ ಈ ಕುರಿತಂತೆ ಅನುಮಾನವೂ ಹುಟ್ಟುವುದಿಲ್ಲ. ಇಷ್ಟಕ್ಕೂ ಅಗ್ನಿಪಥ್ ಮೋದಿಯ ಯೋಜನೆಯೇ ಅಲ್ಲ. ಇದರ ಕನಸು ಕಂಡವರು ಜನರಲ್ ಬಿಪಿನ್ ರಾವತ್. ಮೂರೂ ಸೇನೆಯ ಪ್ರಮುಖರು ಕುಳಿತು ಈ ಯೋಜನೆಯನ್ನು ರೂಪಿಸಿದ್ದಾರೆ ಮತ್ತು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಏಕೆಂದರೆ ಈ ಯೋಜನೆ ಭಾರತದಲ್ಲಿ ಮಾತ್ರವಲ್ಲ, ಚೀನಾ, ರಷ್ಯಾ, ಫ್ರಾನ್ಸ್, ಅಮೇರಿಕಾಗಳಲ್ಲೂ ಇದೆ. ಐಎಎಸ್ ಆಗಬೇಕೆಂದರೆ ಭಿನ್ನ-ಭಿನ್ನ ಸ್ತರಗಳನ್ನು ದಾಟಿ ಹೋಗಬೇಕೆಂಬ ನಿಯಮವಿದ್ದರೆ, ಸೈನ್ಯಕ್ಕೆ ಸೇರುವಾಗಲೂ ಈ ರೀತಿಯ ಸ್ತರಗಳು ಏಕಿರಬಾರದು? ಈ ಯೋಜನೆ ಒಳಹೊಕ್ಕ ವ್ಯಕ್ತಿ ಆರಂಭದಲ್ಲೇ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿಯಷ್ಟು ಸಂಬಳ ಪಡೆಯುತ್ತಾನೆ. ಆತ ಉಳಿಸಿರುವ ಮತ್ತು ಸಕರ್ಾರ ಅದಕ್ಕೆ ಸೇರಿಸಿರುವ ಹಣವನ್ನು ನಾಲ್ಕು ವರ್ಷಗಳ ನಂತರ ಪಡೆಯುವಾಗ ಅದು ಹೆಚ್ಚು-ಕಡಿಮೆ 10 ಲಕ್ಷ ದಾಟಿರುತ್ತದೆ. ಹೀಗೆ ಆಯ್ಕೆ ಆದವರಲ್ಲಿ ಕಾಲುಭಾಗದಷ್ಟು ಜನರನ್ನು ಸೈನ್ಯ ತನ್ನ ಅಂಗವನ್ನಾಗಿಸಿಕೊಳ್ಳುತ್ತದೆ. ಉಳಿದ ಜನ ಸಮರ್ಥ ತರಬೇತಿ ಪಡೆದ ಶಿಸ್ತುಬದ್ಧ ಯುವಕರಾಗಿ ಸಮಾಜಕ್ಕೆ ಆಸ್ತಿಯಾಗಿ ದಕ್ಕುತ್ತಾರೆ. ಪ್ರತಿವರ್ಷ 20ರಿಂದ 30 ಸಾವಿರ ಮಂದಿ ಸಮರ್ಥ ತರಬೇತಿ ಪಡೆದ ದೇಶಭಕ್ತ ತರುಣರು ಸಮಾಜಕ್ಕೆ ಆಸರೆಯಾಗಿ ನಿಲ್ಲುತ್ತಾರೆಂದರೆ ಬೇಡವೆಂದೇಕೆ ಹೇಳಬೇಕು ಹೇಳಿ? ಎಂಟ್ಹತ್ತು ವರ್ಷಗಳ ಕಾಲ ವ್ಯಯಿಸಿ, ಆಡಳಿತಾತ್ಮಕ ಸೇವೆಯ ಪರೀಕ್ಷೆಗಳನ್ನು ಪಾಸು ಮಾಡಿಕೊಳ್ಳಲು ಹೆಣಗಾಡುವ ಮಂದಿ, ಪಾಸಾಗಿ ಅಧಿಕಾರಿಗಳಾದರೆ ಅನೇಕ ಬಾರಿ ದೇಶಕಂಟಕರಾಗುತ್ತಾರೆ; ನಪಾಸಾದರೆ ತಮಗೆ ತಾವೇ ಕಂಟಕವಾಗುತ್ತಾರೆ. ಆದರೆ ಇಲ್ಲಿ ಹಾಗಲ್ಲ, ಸೈನ್ಯ ಹೊಕ್ಕರೆ ಮುಂದಿನ ಹದಿನೈದಿಪ್ಪತ್ತು ವರ್ಷಗಳ ಕಾಲ ತನ್ನ ಸಾಮಥ್ರ್ಯದಿಂದ ದೇಶ ರಕ್ಷಣೆ ಮಾಡುತ್ತಾನೆ, ನಾಲ್ಕು ವರ್ಷಗಳಲ್ಲೇ ಮರಳಿ ಬಂದರೆ ಈ ಅವಧಿಯಲ್ಲಿ ಪಡೆದಿರುವ ಡಿಗ್ರಿಯ ಆಧಾರದ ಮೇಲೆ ಭಿನ್ನ-ಭಿನ್ನ ಕೆಲಸಗಳಿಗೆ ಪ್ರಮುಖ ಅರ್ಹತೆ ಪಡೆಯುತ್ತಾನೆ. ಮತ್ತೆ ಇವರೆಲ್ಲ ಗಲಾಟೆ ಮಾಡುತ್ತಿರುವುದಾದರೂ ಏಕೆ? ಮೋದಿಯ ಯೋಜನೆಗಳನ್ನೆಲ್ಲ ವಿರೋಧಿಸಬೇಕು ಎಂಬ ಒಂದೇ ಕಾರಣಕ್ಕೆ.


ಇದು ಇಲ್ಲಿಗೇ ನಿಲ್ಲುವುದಿಲ್ಲ ಇನ್ನು ಎರಡು ವರ್ಷಗಳಲ್ಲಿ ಈ ಬಗೆಯ ಅನೇಕ ದಂಗೆಗಳನ್ನು ನಾವು ನೋಡಲಿದ್ದೇವೆ. ಒಮ್ಮೆ ಮೋದಿ ತಪ್ಪು ಮಾಡಬೇಕೆಂದು ಅವರೆಲ್ಲರೂ ಕಾಯುತ್ತಿದ್ದಾರೆ. ಬಿಜೆಪಿ ಸಕರ್ಾರಗಳಿರುವ ಪೊಲೀಸರ ಕೈಲಿ ಗೊಲಿಬಾರು ಮಾಡಿಸಿ, ಕೆಲವು ರೈತರನ್ನೋ ಸೈನಿಕರನ್ನೋ ಮಹಿಳೆಯರನ್ನೋ ದಲಿತರನ್ನೋ ಆದಿವಾಸಿಗಳನ್ನೋ ಕೊಲ್ಲಿಸಿಬಿಟ್ಟರೆ ಇಡೀ ದೇಶಕ್ಕೆ ಬೆಂಕಿ ಹಚ್ಚುವುದು ಸುಲಭವೆಂಬುದು ಅವರಿಗೆ ಗೊತ್ತಿದೆ. ಟ್ರಂಪನ್ನು ಹೇಗೆ ಹೊರದಬ್ಬಿದರೋ ಹಾಗೆಯೇ ಮೋದಿಗೂ ಮಾಡಬೇಕೆಂಬ ಅವರ ಇರಾದೆ ಜೋರಾಗಿದೆ. ಈ ಸವಾಲು ಮೋದಿಗಲ್ಲ, ನನಗೆ-ನಿಮಗೆ. ದೇಶ ಉಳಿಯಬೇಕೆಂದರೆ ಇದೊಂದು ಕೊನೆಯ ಬೌದ್ಧಿಕ ಯುದ್ಧ ನಡೆಯಲೇಬೇಕು. ಸಿದ್ಧರಾಗಿ!

ಅಫ್ಘಾನಿಸ್ತಾನ: ಎದ್ದೆದ್ದು ಕುಣಿಯುತ್ತಿದೆ ಪಾಕಿಸ್ತಾನ!

ಅಫ್ಘಾನಿಸ್ತಾನ: ಎದ್ದೆದ್ದು ಕುಣಿಯುತ್ತಿದೆ ಪಾಕಿಸ್ತಾನ!


ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿ. ಡೊನಾಲ್ಡ್ ಟ್ರಂಪ್ ಅಫ್ಘಾನಿಸ್ತಾನದಲ್ಲಿರುವ ಅಮೇರಿಕಾದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮಾತನಾಡಿದಾಗಲೇ ಆತಂಕದ ಗೆರೆಗಳು ಮೂಡಿದ್ದವಾದರೂ ಟ್ರಂಪ್ ತಾಲಿಬಾನಿಗೆ ಹಾಕಿದ ನಿಯಮಗಳು ಸ್ವಲ್ಪ ಸಮಾಧಾನ ಕೊಡುವಂತಿದ್ದವು. ಆದರೀಗ ಹಾಗಿಲ್ಲ. ಹೊಸ ಅಧ್ಯಕ್ಷ ಬೈಡನ್ ಮುಲಾಜಿಲ್ಲದೇ ಅಮೇರಿಕಾ ಮತ್ತು ನ್ಯಾಟೊದ ಸೇನೆಯನ್ನು ಮರಳಿ ಕರೆಸಿಕೊಂಡಿದ್ದಾನೆ. ಸಪ್ಟೆಂಬರ್ 11ರ ವೇಳೆಗೆ ಅಮೇರಿಕಾದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂಬ ಅವನ ಹೇಳಿಕೆಯಿಂದ ಅನೇಕ ರಾಷ್ಟ್ರಗಳು ಕಂಗಾಲಾಗಿವೆ. ಭಾರತವೂ ಕೂಡ ಇದಕ್ಕೆ ಹೊರತಲ್ಲ!


ಅಮೇರಿಕಾದ ವಲ್ಡರ್್ ಟ್ರೇಡ್ ಸೆಂಟರ್ನ ಕಟ್ಟಡದ ಮೇಲೆ ಸಪ್ಟೆಂಬರ್ 2001ರಲ್ಲಿ ದಾಳಿಯಾದ ನಂತರ ಅಮೇರಿಕಾ ಅಫ್ಘಾನಿಸ್ತಾನವನ್ನು ನಿಯಂತ್ರಿಸುವ ನಿಶ್ಚಯ ಮಾಡಿತ್ತು. ಇವೆಲ್ಲವೂ ನೆಪವಷ್ಟೆ. ವಾಸ್ತವವಾಗಿ ಮಧ್ಯಪ್ರಾಚ್ಯ ಏಷ್ಯಾದ ಮೇಲೆ ತನ್ನ ಬಲವನ್ನು ಅಧಿಕೃತವಾಗಿ ಸ್ಥಾಪಿಸುವ ಬಯಕೆ ಅದಕ್ಕಿತ್ತು. ಹೀಗಾಗಿಯೇ ಎಲ್ಲ ನೆಪಗಳನ್ನು ಮುಂದೆಮಾಡಿ ಅಫ್ಘಾನಿಸ್ತಾನಕ್ಕೆ ಸೇನೆ ಕಳಿಸಲಾಯ್ತು. ಕಳೆದ ಸುಮಾರು 20 ವರ್ಷಗಳಲ್ಲಿ ಅಮೇರಿಕಾ ಈ ಸೇನೆಯನ್ನು ನಿರ್ವಹಿಸಲು ಮತ್ತು ಅಫ್ಘಾನಿಸ್ತಾನದ ಬೆಳವಣಿಗೆಯ ನೆಪವನ್ನು ಮುಂದೆ ಮಾಡಿ 144 ಬಿಲಿಯನ್ ಡಾಲರ್ಗಳನ್ನು ವ್ಯಯಿಸಿದೆ. ಸುಮಾರು ಎರಡೂವರೆ ಸಾವಿರದಷ್ಟು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. 22 ಸಾವಿರಕ್ಕೂ ಹೆಚ್ಚು ಸೈನಿಕರು ಏಟು ತಿಂದು ದೇಶಕ್ಕೆ ಮರಳಿದ್ದಾರೆ. ಆದರೆ ಇವಿಷ್ಟರೊಂದಿಗೆ ಏಷ್ಯಾದ ಬಹುಭಾಗದ ಮೇಲೆ ಅಮೇರಿಕಾ ಎರಡು ದಶಕಗಳಿಂದ ನಿವರ್ಿವಾದಿತವಾದ ಸಾರ್ವಭೌಮತ್ವವನ್ನು ಅನುಭವಿಸುತ್ತಾ ಬಂದಿದೆ. ತಾಲಿಬಾನಿಗಳನ್ನು ಮಟ್ಟಹಾಕುವ ನೆಪದಿಂದ ತನ್ನ ಆಶಯವನ್ನು ಈಡೇರಿಸಿಕೊಂಡ ಅಮೇರಿಕಾ ಒಂದು ಕಾಲದಲ್ಲಿ ಇದೇ ತಾಲಿಬಾನಿಗಳ ಬೆನ್ನಹಿಂದೆ ನಿಂತಿತ್ತು ಎಂಬುದನ್ನೂ ಮರೆಯುವಂತಿಲ್ಲ. ತನ್ನ ಶತ್ರುಗಳನ್ನು ಮಟ್ಟಹಾಕಲು ಹೊಸಬರನ್ನು ಹುಟ್ಟುಹಾಕಿ, ಕೊನೆಗೆ ಆತನನ್ನೂ ಮಟ್ಟಹಾಕುವ ಅಮೇರಿಕಾದ ಈ ಚಾಳಿ ಹೊಸತೇನೂ ಅಲ್ಲ. ಆದರೆ ಟ್ರಂಪ್ ಅಮೇರಿಕಾಕ್ಕಾಗುತ್ತಿರುವ ನಷ್ಟವನ್ನು ತಡೆಯಬೇಕೆಂದು ನಿಶ್ಚಯಿಸಿ ಸೈನ್ಯವನ್ನು ಹಿಂದಕ್ಕೆ ಕರೆದುಕೊಳ್ಳುವ ಆಲೋಚನೆಗೆ ಜೀವ ತುಂಬಿದ. ಈ ಹಿಂದೆ ಬರಾಕ್ ಒಬಾಮಾ ಕೂಡ ಇದೇ ರೀತಿ ಆಲೋಚಿಸಿದ್ದನಾದರೂ ಮುಂದಡಿಯಿಟ್ಟಿರಲಿಲ್ಲ. ಟ್ರಂಪ್, ಯಾವ ತಾಲಿಬಾನಿಗಳ ವಿರುದ್ಧ ಅಮೇರಿಕಾದ ಹೋರಾಟ ನಡೆದಿತ್ತೋ 2020ರ ಫೆಬ್ರವರಿಯಲ್ಲಿ ಅದೇ ತಾಲಿಬಾನಿಗಳನ್ನು ಮಾತುಕತೆಗೆ ಆಹ್ವಾನಿಸಿ ಒಪ್ಪಂದ ಮಾಡಿಕೊಂಡುಬಿಟ್ಟ. ಈ ಒಪ್ಪಂದದಲ್ಲಿ ಅಮೇರಿಕಾದ ಸ್ನೇಹಿತರ ವಿರುದ್ಧ ಭಯೋತ್ಪಾದನೆ ನಡೆಸಲು ಅಫ್ಘಾನಿಸ್ತಾನ ತನ್ನ ನೆಲ ಬಿಟ್ಟು ಕೊಡಬಾರದೆಂಬ ನಿಯಮ ಹಾಕಲು ಮರೆಯಲಿಲ್ಲ. ತಾಲಿಬಾನ್ ಒಪ್ಪಿಕೊಂಡಿತು. ಅಚ್ಚರಿ ಎಂದರೆ ಮಾತು ಪಡೆದವನಿಗೂ ಮಾತು ಕೊಟ್ಟವನಿಗೂ ಇದನ್ನು ಉಳಿಸಿಕೊಳ್ಳುವ ಭರವಸೆ ಇರಲಿಲ್ಲ. ಆದರೆ ಟ್ರಂಪ್ನ ಪ್ರಭಾವದಿಂದಾಗಿ ಅದೇ ವರ್ಷದ ಸಪ್ಟೆಂಬರ್ ತಿಂಗಳಲ್ಲಿ ಅಫ್ಘನ್ ಸಕರ್ಾರ ಮತ್ತು ತಾಲಿಬಾನಿಗಳ ಪ್ರಮುಖ ನಾಯಕರು ಕತಾರ್ನ ದೋಹಾದಲ್ಲಿ ಭೇಟಿಯಾಗಿ ‘ಇಂಟ್ರಾ ಅಫ್ಘನ್’ ಮಾತುಕತೆ ನಡೆಸಲಾಯ್ತು. ಈ ಸಂದರ್ಭದಲ್ಲಿ ತಾಲಿಬಾನಿ ನಾಯಕ ಮುಲ್ಲಾ ಅಬ್ದುಲ್ಗನಿ ಬರಾದಾರ್ ಮಾತನಾಡಿ ‘ಸ್ವತಂತ್ರ, ಸಾರ್ವಭೌಮ, ಸಂಘಟಿತ, ಅಭಿವೃದ್ಧಿ ಹೊಂದಿದ ಮತ್ತು ಇಸ್ಲಾಮಿನ ವ್ಯವಸ್ಥೆಗಳ ಅಡಿಯಲ್ಲಿರುವ ಮುಕ್ತ ಅಫ್ಘಾನಿಸ್ತಾನ ನಮಗೆ ಬೇಕು’ ಎಂದಿದ್ದ. ಇಲ್ಲಿ ಬೇರೆಲ್ಲವೂ ಒಪ್ಪಿಕೊಳ್ಳಬೇಕಾದ್ದೇ. ಆದರೆ ಇಸ್ಲಾಮಿನ ವ್ಯವಸ್ಥೆ ಎಂಬುದರ ವ್ಯಾಖ್ಯೆಯನ್ನು ಅರಿತುಕೊಳ್ಳುವುದು ಕಷ್ಟ ಅಷ್ಟೆ. ಯಾರು ಏನೇ ಹೇಳಿದರೂ ಅಮೇರಿಕನ್ ಸೇನೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ನಂತರ ಅಲ್ಲಿ ಚುನಾವಣೆ ನಡೆದು ಪ್ರಜಾಪ್ರಭುತ್ವ ಮಾದರಿಯ ಸಕರ್ಾರ ಅಧಿಕಾರಕ್ಕೆ ಬಂದಿತ್ತು. ಹೆಣ್ಣುಮಕ್ಕಳು ಶಾಲೆಗೆ ಹೋಗಲಾರಂಭಿಸಿದ್ದರು. ಅವರ ಬದುಕು ಮುಕ್ತವಾದ ವಾತಾವರಣದಲ್ಲಿ ಚೆನ್ನಾಗಿಯೇ ನಡೆದಿತ್ತು. ಒಂದು ರೀತಿ ಎರಡು ದಶಕಗಳ ಕಾಲ ಅಫ್ಘನ್ನಿನ ಸಾಮಾನ್ಯ ಜನ ಉಸಿರಾಡುತ್ತಿದ್ದರು. ಈ ಸಂದರ್ಭದಲ್ಲಿಯೇ ಭಾರತವೂ ಈ ಪ್ರದೇಶದ ಬೆಳವಣಿಗೆಗೆ ತನ್ನ ಸಹಕಾರ ಹಸ್ತವನ್ನು ಚಾಚಿತು. ಅಣೆಕಟ್ಟುಗಳ ನಿಮರ್ಾಣ ಮಾಡಿಕೊಟ್ಟು ನೀರಾವರಿ ವ್ಯವಸ್ಥೆಯತ್ತ ಗಮನಹರಿಸಿ, ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸುವಲ್ಲಿ ಭಾರತದ ಪಾತ್ರ ಬಲುದೊಡ್ಡದ್ದು. ಶಿಕ್ಷಣ ಕ್ಷೇತ್ರದಲ್ಲಿ ಸಹಕಾರಿಯಾಗಿ ನಿಂತ ಭಾರತ ಕಟ್ಟಿಕೊಟ್ಟ ಗ್ರಂಥಾಲಯಗಳ ಕುರಿತಂತೆ ಈಗಲೂ ಅಲ್ಲಿಯ ಜನ ಗೌರವದ ಮಾತುಗಳನ್ನಾಡುತ್ತಾರೆ. ಅಣೆಕಟ್ಟಿನ ಉದ್ಘಾಟನೆಗೆ ನರೇಂದ್ರಮೋದಿ ಅಫ್ಘಾನಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿನ ಜನ ತಿರಂಗಾ ಹಿಡಿದು ಗೌರವದಿಂದ ಸ್ವಾಗತಿಸಿದ್ದನ್ನು ಮರೆಯುವಂತಿಲ್ಲ. ನಮ್ಮ ಬಾಂಧವ್ಯ ಎಷ್ಟು ಬಲವಾಗಿತ್ತೆಂದರೆ ಕೊವಿಡ್ ಲಸಿಕೆಗಳನ್ನು ಭಾರತ ಮೊತ್ತಮೊದಲು ಕಳಿಸಿದ್ದು ಅಫ್ಘಾನಿಸ್ತಾನಕ್ಕೇ. ಇವಿಷ್ಟನ್ನೂ ಈಗ ಸ್ಮರಿಸಿಕೊಳ್ಳುತ್ತಿರುವುದೇಕೆಂದರೆ ಅಲ್ಲಿನ ಜನರ ಜೀವನ ಉನ್ನತ ಸ್ತರಕ್ಕೇರಲಾರಂಭಿಸಿತ್ತು. ತಾಲಿಬಾನಿಗಳ ಕಟ್ಟರ್ ಇಸ್ಲಾಮೀಯತೆಯ ಕಪಿಮುಷ್ಟಿಯಿಂದ ಹೊರಬಂದಿದ್ದ ಈ ಜನ ಈಗ ತಮ್ಮ ಬದುಕಿನ ಆನಂದವನ್ನು ಗುರುತಿಸಿಕೊಳ್ಳಲಾರಂಭಿಸಿದ್ದರು. ಟ್ರಂಪ್ ತನ್ನ ಸೇನೆಯನ್ನು ಮರಳಿ ಕರೆಸಿಕೊಳ್ಳುವ ಮಾತುಗಳನ್ನಾಡುತ್ತಿರುವಂತೆಯೇ ಅಫ್ಘಾನಿಸ್ತಾನಿಯರ ಕನಸುಗಳು ಚೂರುಚೂರಾಗಿಬಿಟ್ಟವು. ತಾಲಿಬಾನಿಯರ ದುಷ್ಟ ಆಡಳಿತದ ಕರಾಳ ಛಾಯೆ ಮತ್ತೊಮ್ಮೆ ವ್ಯಾಪಿಸಿಕೊಂಡಿತು!


ಟ್ರಂಪ್ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ಈ ವಿಚಾರ ಮೂಲೆಗುಂಪಾಯ್ತು ಎಂದುಕೊಂಡರೆ ಬೈಡನ್ ಟ್ರಂಪ್ಗಿಂತ ವೇಗವಾಗಿ ಅಮೇರಿಕನ್ ಸೇನೆಯನ್ನು ಮರಳಿ ಕರೆಸಿಕೊಳ್ಳುವ ಚಟುವಟಿಕೆ ಆರಂಭಿಸಿಬಿಟ್ಟ. ಈಗ ಈ ಪ್ರಕ್ರಿಯೆಯಿಂದ ಎದ್ದೆದ್ದು ಕುಣಿಯುತ್ತಿರುವ ರಾಷ್ಟ್ರಗಳು ಎರಡೇ. ಒಂದು ಪಾಕಿಸ್ತಾನ ಮತ್ತೊಂದು ಚೀನಾ. ಇಬ್ಬರ ಉದ್ದೇಶವೂ ಬಲು ಸರಳ. ದುರ್ಬಲವಾದ ಭಯೋತ್ಪಾದನೆಗೆ ಸೂಕ್ತವಾದ, ತಮ್ಮ ಮಜರ್ಿಯಲ್ಲೇ ಬಿದ್ದಿರುವ ಅಫ್ಘಾನಿಸ್ತಾನ ಭಾರತಕ್ಕೆ ತೊಂದರೆಯುಂಟುಮಾಡಬಲ್ಲದು. ಇದು ಭಾರತದ ಕನಸುಗಳನ್ನು, ಆಕಾಂಕ್ಷೆಗಳನ್ನು ಸರ್ವನಾಶ ಮಾಡಿಬಿಡಬಲ್ಲದೆಂಬುದು ಇವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಅವರಿಬ್ಬರ ಆನಂದಕ್ಕೆ ಪಾರವೇ ಇಲ್ಲ. ಸೇನೆಯನ್ನು ಮರಳಿ ಕರೆಸಿಕೊಳ್ಳುವ ಮುನ್ನ ಟ್ರಂಪ್ ವಿಧಿಸಿದ್ದ ಶರತ್ತನ್ನು ಬೈಡನ್ ಮುಂದಿಟ್ಟಿಲ್ಲ. ಅದರರ್ಥ ಭಾರತ ವಿರೋಧಿಯಾದ ಯಾವ ಚಟುವಟಿಕೆಗಾದರೂ ತನ್ನ ನೆಲವನ್ನು ಅಫ್ಘಾನಿಸ್ತಾನ ಬಳಸಿಕೊಳ್ಳಬಹುದು ಎಂಬುದೇ ಆಗಿದ್ದರೆ ಅದು ಮದಿರೆ ಕುಡಿದ ಹುಚ್ಚು ಮಂಗನಿಗೆ ಚೇಳು ಕಡಿದಂತೆಯೇ ಸರಿ.


ಪಾಕಿಸ್ತಾನ ಮತ್ತು ತಾಲಿಬಾನಿಗಳ ನಂಟು ಹೊಸತೇನು ಅಲ್ಲ. ಅಲ್ಲಿನ ಹಕ್ಕಾನಿ ಗುಂಪು ತಾಲಿಬಾನಿಗಳ ಮೇಲೆ ಸಾಕಷ್ಟು ಪ್ರಭಾವ ಹೊಂದಿದೆ. ಡೊನಾಲ್ಡ್ ಟ್ರಂಪ್ ತಾಲಿಬಾನಿಗಳ ಜೊತೆಗೆ ಮಾತುಕತೆ ನಡೆಸಬೇಕೆಂಬ ಪ್ರಯತ್ನ ಆರಂಭಿಸಿದಾಗ ಆತ ಮೊದಲು ಮಾತನಾಡಬೇಕಾದ ಅನಿವಾರ್ಯತೆ ಒದಗಿದ್ದು ಪಾಕಿಸ್ತಾನಿಯರೊಂದಿಗೆ ಎಂಬುದೇ ಅವರೀರ್ವರ ಸಂಬಂಧದ ವ್ಯಾಪ್ತಿಯನ್ನು ತಿಳಿಸಬಲ್ಲದು. ಭಾರತ ತನ್ನ ವ್ಯಾಪ್ತಿಯನ್ನು ಅಫ್ಘಾನಿಸ್ತಾನದಲ್ಲಿ ಇಂಚಿಂಚು ಹೆಚ್ಚಿಸಿಕೊಳ್ಳುತ್ತಿರುವಂತೆ ಪಾಕಿಸ್ತಾನದ ಎದೆ ಢವಗುಟ್ಟಲಾರಂಭಿಸಿತ್ತು. ಚೀನಾ ಶ್ರೀಲಂಕಾದಲ್ಲಿ ಬಂದರು ಅಭಿವೃದ್ಧಿಗೊಳಿಸಿ ತನ್ನ ನೌಕೆಯನ್ನು ನಿಲ್ಲಿಸುತ್ತದೆ ಎಂಬ ವಿಚಾರ ನಮಗೆಷ್ಟು ಗಾಬರಿ ಹುಟ್ಟಿಸುವಂಥದ್ದೋ, ಅಫ್ಘಾನಿಸ್ತಾನದೊಂದಿಗಿನ ನಮ್ಮ ಸ್ನೇಹ ಸಂಬಂಧ ಪಾಕಿಸ್ತಾನಕ್ಕೂ ಅಷ್ಟೇ ಗಾಬರಿ ಹುಟ್ಟಿಸುವಂಥದ್ದು. ಭಾರತ ಪಾಕಿಸ್ತಾನವನ್ನು ಸೈನ್ಯದ ಮೂಲಕ ಸುತ್ತುವರೆಯುವ ಕ್ರಮ ಇದು ಎಂದು ಅದು ಭಾವಿಸುತ್ತದೆ. ಆದರೆ ಭಾರತ ಎಂದಿಗೂ ಅಫ್ಘಾನಿಸ್ತಾನವನ್ನು ಈ ದಿಕ್ಕಿನಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಈಗ ಅಮೇರಿಕಾದ ಸೇನೆ ಕಾಲ್ಕೀಳುತ್ತಿರುವಂತೆ ಪಾಕಿಸ್ತಾನಕ್ಕೆ ಆನೆಬಲ ಬಂದಂತಾಗಿದೆ. ಅವರೆಷ್ಟು ದುಷ್ಟರೆಂದರೆ ಇತ್ತೀಚೆಗೆ ಪಾಕಿಸ್ತಾನೀಯನೊಬ್ಬ ಅಫ್ಘಾನಿಸ್ತಾನದಲ್ಲಿ ಭಾರತ ಕಟ್ಟುಕೊಟ್ಟಿರುವ ಅಣೆಕಟ್ಟನ್ನು ಹೊಡೆದುರುಳಿಸಲು ಪ್ರಯತ್ನಪಟ್ಟು ಸಿಕ್ಕುಬಿದ್ದಿದ್ದ. ಎಷ್ಟು ವಿಚಿತ್ರ ನೋಡಿ, ಮುಸಲ್ಮಾನರೇ ಇರುವ ರಾಷ್ಟ್ರವೊಂದಕ್ಕೆ ಹಿಂದುಗಳ ರಾಷ್ಟ್ರವೊಂದು ನೀರು ಕೊಟ್ಟರೆ, ಮತ್ತೊಂದು ಮುಸ್ಲೀಂ ರಾಷ್ಟ್ರ ಅದನ್ನು ಕಸಿಯುವ ಧಾವಂತದಲ್ಲಿದೆ. ಅಲ್ಲಾಹ್ ಯಾರನ್ನು ಮೆಚ್ಚುತ್ತಾನೆಂಬುದು ಈಗ ಬಲುದೊಡ್ಡ ಪ್ರಶ್ನೆ! ಅಮೇರಿಕಾದ ಸೇನೆ ಮರಳುವ ಪ್ರಕ್ರಿಯೆ ಆರಂಭವಾಗುವುದರೊಂದಿಗೆ ಪಾಕಿಸ್ತಾನದ ಶಕ್ತಿ ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಲೇ ಸಾಗಿದೆ. ಕನಿಷ್ಠಪಕ್ಷ 10 ಸಾವಿರ ಜನ ಪಾಕೀ ಸೈನಿಕರು ಅಲ್ಲೀಗ ತಾಲಿಬಾನಿಗಳ ಪರವಾಗಿ ದುಡಿಯುತ್ತಿದ್ದಾರೆ. ತನ್ನ ಗಡಿಗೆ ಹೊಂದಿಕೊಂಡಂತೆ ತಾಲಿಬಾನಿಗಳು ಅಡಗಿರುವ ಸ್ಥಳದಲ್ಲಿ ಅಫ್ಘಾನಿಸ್ತಾನ ವಾಯುದಾಳಿ ನಡೆಸಿದ್ದೇ ಆದರೆ ಅಫ್ಘನ್ ಸೇನೆಯ ವಿರುದ್ಧ ಪಾಕಿಸ್ತಾನ ದಾಳಿ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಇತ್ತೀಚೆಗೆ ಲಾಂಗ್ವಾರ್ ಜರ್ನಲ್ನ ಡಿಫೆನ್ಸ್ ಆಫ್ ಡೆಮಾಕ್ರಸೀಸ್ ನಡೆಸಿದ ಸಂಶೋಧನೆಯ ಪ್ರಕಾರ ಅಫ್ಘಾನಿಸ್ತಾನದ 325 ಜಿಲ್ಲೆಗಳಲ್ಲಿ ತಾಲಿಬಾನಿಗಳ ಹಿಡಿತ 76ರಲ್ಲಿದ್ದರೆ ಅಫ್ಘನ್ ಸಕರ್ಾರದ ತಾಕತ್ತು 127ರಲ್ಲಿದೆ. ಉಳಿದ 122 ಜಿಲ್ಲೆಗಳಲ್ಲಿ ಸಮಬಲವೆನಿಸಿದರೂ ಪಾಕಿಸ್ತಾನಿಗಳ ಸಹಕಾರ ಪಡೆದುಕೊಂಡ ತಾಲಿಬಾನಿಗಳು ಈ ಭಾಗದ ಮೇಲೆ ಹಿಡಿತವನ್ನು ಸಾಧಿಸುವುದು ಅಸಾಧ್ಯವಲ್ಲ. ಇವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಇರುವ ಅಫ್ಘಾನಿಸ್ತಾನ್ ನ್ಯಾಷನಲ್ ಡಿಫೆನ್ಸ್ ಅಂಡ್ ಸೆಕ್ಯುರಿಟಿ ಫೋರ್ಸಸ್ ಕೆಲವು ಲಕ್ಷ ಸೈನಿಕರನ್ನು ಹೊಂದಿರುವುದಾದರೂ ಸೈನ್ಯ ನಿರ್ವಹಣೆಗೆ ಮತ್ತೆ ಅಮೇರಿಕಾದಿಂದಲೇ ಹಣ ಬರಬೇಕು. ಇದಕ್ಕೆ ಪ್ರತಿಯಾಗಿ ಮತೀಯ ಆವೇಶದಿಂದ ಹುಚ್ಚಾಗಿರುವ ತಾಲಿಬಾನಿಗಳಿಗೆ ಚೀನಾದಂತಹ ರಾಷ್ಟ್ರಗಳು ಸಾಕಷ್ಟು ಹಣ ಸುರಿಯುತ್ತಿವೆ. ಸಹಜವಾಗಿಯೇ ಈ ಆವೇಶದಿಂದ ನುಗ್ಗುತ್ತಿರುವ ಈ ಮಂದಿ ಇಡಿಯ ಅಫ್ಘಾನಿಸ್ತಾನವನ್ನು ತೆಕ್ಕೆಗೆ ತೆಗೆದುಕೊಂಡುಬಿಡುತ್ತಾರೆ. ಮುಂದೆ ಲಷ್ಕರ್-ಎ-ತೈಯ್ಬಾ, ಜೈಶ್-ಎ-ಮೊಹಮ್ಮದ್ನಂತಹ ಉಗ್ರಗಾಮಿ ಸಂಘಟನೆಗಳಿಗೆ ಇದು ನಿಸ್ಸಂಶಯವಾಗಿ ಶಕ್ತಿ ಮತ್ತು ಪ್ರೇರಣೆಯಾಗಲಿದೆ. ನಾವು ಅದರ ಫಲವನ್ನು ಉಣ್ಣಬೇಕಾಗುವುದು ನಿಶ್ಚಿತ. ಹೀಗಾಗಿಯೇ ಭಾರತ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ. ಕಳೆದ ತಿಂಗಳು ಭಾರತ ತಾಲಿಬಾನಿನ ಪ್ರಮುಖರೊಂದಿಗೆ ಮಾತುಕತೆ ಆರಂಭಿಸಿ ತನಗೆ ಬೇಕಾದ್ದನ್ನು ಪಡೆದುಕೊಳ್ಳುವ ಆಲೋಚನೆಯನ್ನು ಮಾಡಿಬಿಟ್ಟಿದೆ. ತಾಲಿಬಾನಿ ಮುಖಂಡರು ಹಿಂದೆಂದಿಗಿಂತಲೂ ಎಚ್ಚರಿಕೆಯಿಂದ ಈಗ ವ್ಯವಹರಿಸುತ್ತಿದ್ದಾರೆ. ಇತ್ತ ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ ಪ್ರಕ್ರಿಯೆಯನ್ನು ಭಾರತದ ಆಂತರಿಕ ವಿಚಾರವೆಂದಿದ್ದಾರಲ್ಲದೇ ಉಯ್ಘುರ್ ಮುಸಲ್ಮಾನರ ತಗಾದೆಯನ್ನು ಚೀನಾದ ಆಂತರಿಕ ವಿಚಾರ ಎಂದು ಕರೆದಿದ್ದಾರೆ. ಇದು ಈ ಹೊತ್ತಿನಲ್ಲಿ ಅಫ್ಘಾನಿಸ್ತಾನಿ ಸಕರ್ಾರಕ್ಕೆ ಸಿಗಬಹುದಾದ ನಮ್ಮ ಸಹಕಾರವನ್ನು ತಡೆಯುವ ಉಪಾಯವಿದ್ದರೂ ಇರಬಹುದು. ಇದರ ಹಿಂದು-ಹಿಂದೆಯೇ ಅಫ್ಘನ್ ಸಕರ್ಾರದ ಮಂತ್ರಿಯೊಬ್ಬರು ತಾಲಿಬಾನಿಗಳನ್ನೆದುರಿಸುವಲ್ಲಿ ಭಾರತದ ಸಹಕಾರವನ್ನು ಕೋರಿರುವುದಲ್ಲದೇ ಭಾರತಕ್ಕೆ ಬಂದು ಈ ಕುರಿತಂತೆ ಮಾತುಕತೆ ನಡೆಸುವ ಉತ್ಸುಕತೆಯಲ್ಲೂ ಇದ್ದಾರೆ. ನಮ್ಮ ವಿದೇಶಾಂಗ ನೀತಿಗೆ ಈಗಿನದ್ದು ಬಲುದೊಡ್ಡ ಸವಾಲು. ಅಲ್ಲಿನ ಸಕರ್ಾರಕ್ಕೆ ಸಹಕಾರ ಮಾಡಿದರೆ ಭವಿಷ್ಯದುದ್ದಕ್ಕೂ ಭಯೋತ್ಪಾದನೆಯ ಭೀತಿ. ಸಹಕರಿಸದಿದ್ದರೆ ನ್ಯಾಯದ ಪರವಾಗಿ ನಿಂತಿಲ್ಲವೆಂಬ ಕೊರಗು. ಬಲು ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿರುವ ಮೋದಿ ಸಕರ್ಾರ ಈ ಅವಧಿಯಲ್ಲೇ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹುಡು-ಹುಡುಕಿ ಕೊಲ್ಲುತ್ತಿದೆ. ಕಳೆದ ಹದಿನೈದಿಪ್ಪತ್ತು ದಿನಗಳಲ್ಲಿಯಂತೂ ಕೆಲವು ಪ್ರಮುಖ ಭಯೋತ್ಪಾದಕ ನಾಯಕರೂ ಸೇರಿದಂತೆ ಅನೇಕರನ್ನು ಯಮಪುರಿಗಟ್ಟಿದೆ.


ಅಮೇರಿಕಾಕ್ಕೆ ಅಂದುಕೊಂಡಷ್ಟು ಸುಲಭವಿಲ್ಲ. ಮಧ್ಯಪ್ರಾಚ್ಯದಲ್ಲಿ ತನ್ನ ಮೂಗುತೂರಿಸುವಿಕೆಯನ್ನು ಕಡಿಮೆ ಮಾಡಿಕೊಂಡು ಅದೀಗ ಇಂಡೊ-ಪೆಸಿಫಿಕ್ ಪ್ರದೇಶಗಳತ್ತ ತಿರುಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಬೆಳೆಯುತ್ತಿರುವ ಪರಿಯನ್ನು ನಿಯಂತ್ರಿಸಬೇಕಾಗಿರುವುದು ಸದ್ಯಕ್ಕೆ ಅದರ ಅಗತ್ಯ. ಅದಾಗಲೇ ಚೀನಾ ತನ್ನ ನೌಕಾಸೈನ್ಯವನ್ನು ವಿಸ್ತರಿಸಿಕೊಂಡಿರುವ ರೀತಿಯಿಂದಾಗಿ ಅದೀಗ ಅಮೇರಿಕಾವನ್ನೇ ಹಿಂದಿಕ್ಕಿ ಜಗತ್ತಿನ ನಂಬರ್ ಒನ್ ಆಗಿ ಬೆಳೆದಿದೆ. ದಕ್ಷಿಣ ಚೀನಾ ಸಮುದ್ರದ ಮೂಲಕ ಅದು ನಡೆಸುತ್ತಿರುವ ವ್ಯಾಪಾರ-ವಹಿವಾಟು ಅಮೇರಿಕಾವನ್ನು ಆತಂಕಕ್ಕೆ ಬೀಳಿಸುವಷ್ಟು. ಭಾರತವನ್ನು ತುಳಿಯುವ ಪ್ರಯತ್ನದಲ್ಲಿ ಅಮೇರಿಕಾ ಮುಂದಡಿಯಿಡ ಹೋದರೆ ತನ್ನ ಕಾಲಮೇಲೆ ಕುಠಾರಾಘಾತ ಮಾಡಿಕೊಳ್ಳುವುದು ನಿಶ್ಚಿತ. ಹೀಗಾಗಿ ಸದ್ಯಕ್ಕೆ ತೀರಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲವಾದರೂ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪಾಕ್ ಆಕ್ರಮಿತ ಕಾಶ್ಮೀರವೆಂಬ ಸ್ವಾಯತ್ತ ರಾಷ್ಟ್ರವೊಂದು ನಿಮರ್ಾಣವಾಗುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಏನಾಗುವುದೆಂದು ಕಾದು ನೋಡೋಣ..

ಕೊವಿಡ್ ಕಾಲದಲ್ಲಿ ಮನಮೋಹನ ಸಿಂಗರಿದ್ದಿದ್ದರೆ!

ಕೊವಿಡ್ ಕಾಲದಲ್ಲಿ ಮನಮೋಹನ ಸಿಂಗರಿದ್ದಿದ್ದರೆ!


ಕರೋನಾ ಎರಡನೇ ಅಲೆ ಅನೇಕರ ಬದುಕನ್ನು ಕಸಿದಿದೆ. ಅನೇಕರ ಆಪ್ತರನ್ನು ಸೆಳೆದೊಯ್ದಿದೆ. ಮನೆಗಳು ಬರಡಾಗಿವೆ. ನಿಜ, ಆದರೆ ಇವೆಲ್ಲದರ ನಡುವೆ ಎರಡನೆ ಅಲೆಯ ವೇಳೆಗೆ ಮೋದಿಯ ಸ್ಥಾನದಲ್ಲಿ ಮನಮೋಹನ ಸಿಂಗರೇ ಇದ್ದಿದ್ದರೆ ಪರಿಸ್ಥತಿ ಹೇಗಿರಬಹುದಿತ್ತೆಂದು ಊಹಿಸಿ ನೋಡಿದ್ದೀರಾ? ಸ್ವಂತ ನಿಧರ್ಾರ ತೆಗೆದುಕೊಳ್ಳಲಾಗದೇ ಅವರವರ ಹೆಗಲ ಮೇಲೆಯೇ ಜವಾಬ್ದಾರಿಯನ್ನು ಹೊರಿಸಿ, ಎಲ್ಲದಕ್ಕೂ ಮುಗುಮ್ಮಾಗಿ ಇದ್ದುಬಿಡುವ ಮನಮೋಹನ ಸಿಂಗರು ಈ ಎರಡನೇ ಅಲೆಯನ್ನು ಹೇಗೆ ನಿರ್ವಹಿಸಿರುತ್ತಿದ್ದರು ಎಂದು ಊಹಿಸಿದರೂ ಹೆದರಿಕೆಯಾಗುತ್ತದೆ! ಬಿಡಿ, ಈ ಸಂಕಟದ ನಡುವೆಯೂ ಸಮಾಧಾನದ ಅಂಶ ಮೋದಿ ಈ ಹೊತ್ತಲ್ಲಿ ಪ್ರಧಾನಿಯಾಗಿದ್ದಾರಲ್ಲ ಎಂಬುದಷ್ಟೇ. ಹೀಗಾಗಿಯೇ ಎಬಿಪಿ ಸಿ ವೋಟರ್ ನಡೆಸಿದ ಸವರ್ೇಯ ಪ್ರಕಾರ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸುಮಾರು ಶೇಕಡಾ 65ರಷ್ಟು ಜನ ಮೋದಿ ಮಾತ್ರ ಇಷ್ಟು ಸಮರ್ಥವಾಗಿ ಇದನ್ನು ನಿರ್ವಹಿಸಬಲ್ಲರು ಎಂದಿದ್ದಾರೆ. ಸಹಜವೂ ಹೌದು. ಮನಮೋಹನ ಸಿಂಗರಿಗೆ ಯಾವುದೆಲ್ಲ ದೌರ್ಬಲ್ಯಗಳೆನಿಸಿಕೊಂಡಿದ್ದವೋ ಮೋದಿಗೆ ಅವುಗಳೇ ಶಕ್ತಿ. ಯಾವುದು ರಾಹುಲ್ನಲ್ಲಿ ಇಲ್ಲವೇ ಇಲ್ಲವೋ ಮೋದಿಯೊಳಗೆ ಅವೆಲ್ಲವೂ ಇದೆ. ಹೀಗಾಗಿಯೇ ಈತ ಮಾತ್ರ ಅದನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಿದ್ದು. ಒಂದೊಂದೇ ಅಂಶಗಳನ್ನು ಗಮನಿಸಿ ನೋಡಿ.


ಮೋದಿಯ ಶಕ್ತಿ ಸಂವಹನ ಕಲೆ. ಹೇಳಬೇಕಾದ್ದನ್ನು ಸಮರ್ಥವಾಗಿ, ಮನಮುಟ್ಟುವಂತೆ ಹೇಳಬಲ್ಲ ಅವರ ಶಕ್ತಿ ಅಪರೂಪದ್ದು. ರಾತ್ರಿ 8 ಗಂಟೆಗೆ ಟಿವಿಯ ನೇರಪ್ರಸಾರದ ಮೂಲಕ ನಾಳೆಯಿಂದ ಜನತಾ ಕಫ್ಯರ್ೂ ಎಂದು ಮನಮೋಹನ ಸಿಂಗರು ಹೇಳುವುದನ್ನು ಒಮ್ಮೆ ಊಹಿಸಿಕೊಂಡು ನೋಡಿ. ಸಾಮಾನ್ಯ ಜನರಿರಲಿ ಕಾಂಗ್ರೆಸ್ಸಿನ ನಾಯಕರೂ ಅದನ್ನು ಅನುಸರಿಸುತ್ತಿರಲಿಲ್ಲ. ಮೋದಿ ಕಫ್ಯರ್ೂಗೆ ಬೆಂಬಲ ಕೊಡಿಸುವುದೇನು, ದೀಪ ಹಚ್ಚಿ ಎಂದಾಗಲೂ, ವೈದ್ಯರಿಗೆ ಗೌರವ ಸೂಚಿಸಲು ಚಪ್ಪಾಳೆ ತಟ್ಟಿ ಎಂದಾಗಲೂ ಜನ ಚಾಚೂ ತಪ್ಪದೇ ಅನುಸರಿಸಿದ್ದು ಅಚ್ಚರಿಯೇ. ಮೊದಲನೇ ಅಲೆಯ ವೇಳೆಗೆ ವೈಜ್ಞಾನಿಕ ಸಲಹೆಗಾರರ ಮೂಲಕ ಕೊವಿಡ್ ನಿರ್ವಹಿಸಬೇಕಾದ ರೀತಿಯನ್ನು ಅರಿತು ಸಂಪೂರ್ಣ ಲಾಕ್ಡೌನ್ಗೆ ಶರಣಾದ ಮೋದಿ ಎರಡನೇ ಅಲೆ ವ್ಯಾಪಕವಾಗಿ ಆವರಿಸಿಕೊಳ್ಳುವ ಮುನ್ನ ಚುನಾವಣಾ ರ್ಯಾಲಿಗಳಲ್ಲಿದ್ದರು. ಒಮ್ಮೆ ಎರಡನೇ ಅಲೆ ಬಾಧಿಸುತ್ತಿದೆ ಎಂದು ಗೊತ್ತಾದೊಡನೆ ರ್ಯಾಲಿಗಳನ್ನು ರದ್ದುಗೊಳಿಸಿ ಎಂದಿನಂತೆ ತಾವೇ ಮುಂಚೂಣಿಯಲ್ಲಿ ನಿಂತು ಎಲ್ಲರೊಡನೆ ಮಾತುಕತೆ ಆರಂಭಿಸಿಬಿಟ್ಟರು. ಯಾರನ್ನೂ ಅವರು ಬಿಡಲಿಲ್ಲ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಐದು ಸೂತ್ರಗಳನ್ನು ಮುಂದಿಟ್ಟರು. ಕೊವಿಡ್ ಪರೀಕ್ಷೆಗಳನ್ನು ಹೆಚ್ಚಿಸಿ ಪಾಸಿಟಿವ್ ಆದವರನ್ನು ಪ್ರತ್ಯೇಕಗೊಳಿಸುವ ಕೆಲಸವನ್ನು ಚುರುಕುಗೊಳಿಸುವಂತೆ ಕೇಳಿಕೊಂಡರು. ಲಸಿಕೆ ಉತ್ಸವವನ್ನು ವ್ಯಾಪಕವಾಗಿ ಜರುಗಿಸಲು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು. ರಾತ್ರಿ ಕಫ್ಯರ್ೂಗಳನ್ನು ಜಾರಿಗೊಳಿಸಿ ಅದನ್ನು ಕರೋನಾ ಕಫ್ಯರ್ೂ ಎಂದು ಕರೆಯುವಂತೆ ಸಲಹೆ ಕೊಟ್ಟರು. ಇದರಿಂದ ಲಾಭ ಹೆಚ್ಚೇನೂ ಆಗುತ್ತಿರಲಿಲ್ಲ. ಆದರೆ ಕರೋನಾ ಕಫ್ಯರ್ೂ ಎನ್ನುವ ಪದವೇ ಜನ ತೀಕ್ಷ್ಣವಾಗಿ ಆಲೋಚನೆ ಮಾಡಲು ಪ್ರೇರೇಪಿಸುತ್ತಿತ್ತು. ಇಷ್ಟನ್ನೂ ಹೇಳಿದ ಮೋದಿ ಯಾವ ಕಾರಣಕ್ಕೂ ಪೂರ್ಣ ಲಾಕ್ಡೌನ್ಗೆ ಶರಣಾಗಬೇಡಿ ಎಂದು ಕೇಳಿಕೊಳ್ಳುವುದನ್ನು ಮರೆಯಲಿಲ್ಲ. ಅನಿವಾರ್ಯವಾದಲ್ಲಿ ಮಾತ್ರ ಅಂತಹ ಕ್ರಮ ಕೈಗೊಳ್ಳಬೇಕೆಂದು ಸಲಹೆ ಕೊಟ್ಟರು. ಅದಾಗಲೇ ತಿಂಗಳುಗಟ್ಟಲೆ ವ್ಯಾಪಾರ ವಂಚಿತರಾದ ಉದ್ಯಮಿಗಳ ಕಾಳಜಿ ಅವರಿಗೆ ಇದ್ದೇ ಇತ್ತು. ದುರದೃಷ್ಟವೇನು ಗೊತ್ತೇ? ಯೋಗಿ ಆದಿತ್ಯನಾಥರನ್ನು ಬಿಟ್ಟು ಉಳಿದ ಯಾವ ಮುಖ್ಯಮಂತ್ರಿಗಳೂ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿಯೇ ಎಲ್ಲೆಡೆ ಕಾಲಕ್ರಮದಲ್ಲಿ ಹಾಹಾಕಾರವೆದ್ದಿತು. ಎರಡನೇ ಅಲೆಯನ್ನು ಸದ್ದಿಲ್ಲದೇ ಗೆದ್ದಿದ್ದು ಉತ್ತರ ಪ್ರದೇಶ ಮಾತ್ರ. ಹಾಗಂತ ಮೋದಿ ಮುಖ್ಯಮಂತ್ರಿಗಳೊಂದಿಗಷ್ಟೇ ಅಲ್ಲ. ನಿರಂತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಉಳಿದರು. ಜಿಲ್ಲಾಧಿಕಾರಿಗಳು, ಆರೋಗ್ಯದ ಪ್ರಮುಖ ಜವಾಬ್ದಾರಿ ಉಳ್ಳವರು, ಕೆಲವೊಮ್ಮೆ ಖಾಸಗಿ ವಲಯದವರು ಎಲ್ಲರೊಂದಿಗೆ ನಿರಂತರ ಚಚರ್ೆ ನಡೆದೇ ಇತ್ತು. ನಡು-ನಡುವೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತಂತೆಯೂ ಎಚ್ಚರಿಕೆ ನೀಡುತ್ತಲೇ ಇದ್ದರು. ಮನೆಯ ಹಿರಿಯರೊಬ್ಬರು ಮಕ್ಕಳಿಗೆ ತೊಂದರೆಯಾಗಬಹುದಾದ ಸಂದರ್ಭ ಬಂದಾಗ ಎಷ್ಟು ಕಾಳಜಿ ವಹಿಸಬಹುದೋ ಮೋದಿ ಅಷ್ಟೇ ಪ್ರೀತಿಯಿಂದ ವ್ಯವಹರಿಸಿದರು.


ಇನ್ನು ಲಸಿಕೆಗಳ ವಿಚಾರಕ್ಕೆ ಬರುವುದಾದರೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಸಮಸಮಕ್ಕೆ ನಿಂತು ಎರಡೆರಡು ವ್ಯಾಕ್ಸಿನ್ಗಳನ್ನು ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು. ಸಾಧನೆ ವಿಜ್ಞಾನಿಗಳದ್ದೇ ಹೌದು, ಆದರೆ ಅದರ ಹಿಂದೆ ಸಮರ್ಥ ವ್ಯಕ್ತಿಯೊಬ್ಬ ನಿಲ್ಲುವುದು ಅನಿವಾರ್ಯ. ಹೀಗೆಂದೊಡನೆ ಕಾಂಗ್ರೆಸ್ಸಿಗರು ಎದ್ದೆದ್ದು ಕುಣಿದಾಡಬಹುದೇನೋ. ಆದರೆ 2008ರಲ್ಲಿ ಯುಪಿಎ ಸಕರ್ಾರ ಚೆನ್ನೈನ ಬಿಸಿಜಿ ವ್ಯಾಕ್ಸಿನ್ ಲ್ಯಾಬೊರೇಟರಿ, ಕಣ್ಣೂರಿನ ಪ್ಯಾಸ್ಟ್ಯೂರ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಕಸೌಲಿಯ ಸೆಂಟ್ರಲ್ ರಿಸಚರ್್ ಇನ್ಸ್ಟಿಟ್ಯೂಟ್ಗಳನ್ನು ಏಕಾಏಕಿ ಮುಚ್ಚಿಬಿಟ್ಟಿತು. ಹೀಗೇಕೆ ಮಾಡಿತೆಂಬುದನ್ನು ಯಾರೂ ಬಾಯಿ ಬಿಡಲಿಲ್ಲ. ಆದರೆ ನಿಸ್ಸಂಶಯವಾಗಿ ಜಗತ್ತಿನ ಲಸಿಕೆ ಉತ್ಪಾದಕರ ಲಾಬಿಗೆ ಕಾಂಗ್ರೆಸ್ಸು ಮಣಿದಿತ್ತು ಎನ್ನುವುದು ಗೋಚರವಾಗುತ್ತಿತ್ತು. 2012ರಲ್ಲಿ ಸವರ್ೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿ ಅದನ್ನು ಮತ್ತೆ ತೆರೆಸಿತು. ಮೋದಿ ಈ ಬಾರಿ ಜಗತ್ತಿನ ಒತ್ತಡಕ್ಕೆ ಮಣಿಯುವುದಿರಲಿ, ಜಗತ್ತಿಗೇ ಒತ್ತಡ ಹೇರುವ ಸನ್ನಾಹದಲ್ಲಿದ್ದರು. ಲಸಿಕೆ ಉತ್ಪಾದನೆಯಾಗುವ ಕೆಲವು ದಿನಗಳ ಮುನ್ನ ಎರಡೂ ಸಂಸ್ಥೆಗಳಿಗೆ ಭೇಟಿಕೊಟ್ಟು ಲಸಿಕೆಯೊಂದಿಗೆ ಸಿದ್ಧವಾಗುತ್ತಿರುವ ಸಂದೇಶವನ್ನು ಜಗತ್ತಿಗೆ ಮುಟ್ಟಿಸಿದರು. ಈ ಸಂಸ್ಥೆಗಳಿಗೆ ಬೇಕಾದ ಹಣಕಾಸಿನ ನೆರವು ಒದಗಿಸಲಾಯ್ತು. ಲಸಿಕೆ ಸಿದ್ಧವಾದೊಡನೆ ಮುಂಚೂಣಿಯ ಕಾರ್ಯಕರ್ತರಿಗೆ ಅದನ್ನು ಕೊಡಲಾಯ್ತು. ಮುಂದೆ ಜನರಲ್ಲಿ ವಿಶ್ವಾಸ ತುಂಬಲು ತಾನೇ ಲಸಿಕೆ ಹಾಕಿಸಿಕೊಂಡರು ಮೋದಿ. ಆ ವೇಳೆಗೆ ಕಾಂಗ್ರೆಸ್ಸು ಲಸಿಕೆಗಳ ಸಾಮಥ್ರ್ಯವನ್ನು ಪ್ರಶ್ನಿಸುತ್ತಿತ್ತು. ಬಿಜೆಪಿ ವ್ಯಾಕ್ಸಿನ್ ಎಂದು ಮೂದಲಿಸಿದರು ಕೆಲವರು. ಇತ್ತೀಚೆಗಂತೂ ಕಾಂಗ್ರೆಸ್ಸಿನ ಒಬ್ಬ ನಾಯಕ ಈ ಲಸಿಕೆಗಳಲ್ಲಿ ಗೋವಿನ ರಕ್ತಸಾರವಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದ. ಆದರೆ ಮೋದಿ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದರು. ಲಸಿಕಾ ಉತ್ಸವಗಳನ್ನು ವ್ಯಾಪಕವಾಗಿ ನಡೆಸುತ್ತಾ ಜನ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಿದರು. ಊಹ್ಞೂಂ, ಅಂದುಕೊಂಡಷ್ಟು ವೇಗವನ್ನು ಅದು ಪಡೆಯಲಿಲ್ಲ. ಹಾಗಂತ ನಾಯಕ ಸುಮ್ಮನಿರುವಂತಿಲ್ಲವಲ್ಲ. ಜಗತ್ತಿನ ಅನೇಕ ರಾಷ್ಟ್ರಗಳಿಗೆ ಈ ಲಸಿಕೆಯನ್ನು ತಲುಪಿಸುತ್ತಾ, ವ್ಯಾಕ್ಸಿನ್ ಮೈತ್ರಿಗೆ ಭಾಷ್ಯ ಬರೆದರು. ಎರಡನೇ ಅಲೆಯ ನಟ್ಟನಡುವೆ ಕಾಂಗ್ರೆಸ್ಸು ‘ನಮ್ಮ ಮಕ್ಕಳ ವ್ಯಾಕ್ಸಿನ್ ಅನ್ನು ವಿದೇಶಕ್ಕೆ ಏಕೆ ಕಳಿಸಿದಿರಿ ಮೋದಿ?’ ಎಂದು ಪ್ರಚಾರ ಮಾಡಿದರಲ್ಲ; ಅದೇ ಲಸಿಕೆಗಳನ್ನು ತೆಗೆದುಕೊಳ್ಳಬಾರದೆಂದು ಇದೇ ಜನ ಹಿಂದೆಲ್ಲಾ ಹೇಳಿದ್ದನ್ನು ಮರೆತೇಬಿಟ್ಟಿದ್ದರಲ್ಲ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಾವು ಹಿಂದೇಟು ತೋರಿದ್ದು ಖಂಡಿತವಾಗಿಯೂ ಮುಳುವಾಯ್ತು. ಎರಡನೇ ಅಲೆ ನಮ್ಮನ್ನು ಬಲವಾಗಿ ಹಿಡಿದುಕೊಂಡಾಗ ವ್ಯಾಕ್ಸಿನ್ ಹಾಕಿಸಿಕೊಳ್ಳದ ನಾವು ವೈರಸ್ನ ಮುಂದೆ ಬಟಾ ಬಯಲಾಗಿ ನಿಂತುಬಿಟ್ಟಿದ್ದೆವು.


ಎರಡನೇ ಅಲೆ ಅಮರಿಕೊಂಡಾಗ ಆಕ್ಸಿಜನ್ ಕೊರತೆಯಾಗಬಹುದೆಂದು ಯಾವ ಪುಣ್ಯಾತ್ಮನೂ ಊಹಿಸಿರಲಿಲ್ಲ. ಮತ್ತು ಯಾವ ದೇಶದಲ್ಲೂ ಕೂಡ ಈ ರೀತಿಯ ಸ್ಥಿತಿ ನಿಮರ್ಾಣವಾಗಿದ್ದನ್ನು ಕಂಡಿರಲಿಲ್ಲ. ಏಕಾಕಿ ಆಸ್ಪತ್ರೆಗಳಲ್ಲ್ಲಿ ಆಮ್ಲಜನಕದ ಕೊರತೆಯಾಗುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಕರೋನಾ ಎಂದು ಗೊತ್ತಾದವರೆಲ್ಲ ಆಕ್ಸಿಜನ್ಗಾಗಿ ತಡಕಾಡುವಂತೆ ಮಾಧ್ಯಮಗಳು ಮಾಡಿಬಿಟ್ಟವು. ದೆಹಲಿಯಲ್ಲಂತೂ ಸ್ವತಃ ಮುಖ್ಯಮಂತ್ರಿಯೇ ಅಗತ್ಯಕ್ಕಿಂತ ನಾಲ್ಕುಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿ ಸಕರ್ಾರ ತಡಬಡಾಯಿಸುವಂತೆ ನೋಡಿಕೊಂಡರು. ಮೋದಿ ಸುಮ್ಮನಿರಲಿಲ್ಲ. ನಿರಂತರ ಸಭೆಗಳನ್ನು ನಡೆಸುತ್ತಾ ಉದ್ಯಮಿಗಳು ಕಾಖರ್ಾನೆಗಳಿಗೆ ಬಳಸುವ ಆಮ್ಲಜನಕವನ್ನು ರೋಗಿಗಳ ಬಳಕೆಗೆ ಬಳಸುವಂತೆ ಮಾಡಬಲ್ಲ ವ್ಯವಸ್ಥೆಯನ್ನು ರೂಪಿಸಿದರು. ಸರಕು ಸಾಗಣೆಯ ರೈಲು ಆಕ್ಸಿಜನ್ ಎಕ್ಸ್ಪ್ರೆಸ್ ಆಗಿ ನಿಮರ್ಾಣಗೊಂಡಿತು. ನಮ್ಮಿಂದ ವ್ಯಾಕ್ಸಿನ್ ಪಡಕೊಂಡಿದ್ದ ರಾಷ್ಟ್ರಗಳೆಲ್ಲ ಸಹಾಯಕ್ಕೆ ಧಾವಿಸಿದವು. ಎಲ್ಲೆಲ್ಲಿಂದ ಎಷ್ಟೆಷ್ಟು ಆಮ್ಲಜನಕದ ವ್ಯವಸ್ಥೆಯಾಯ್ತು ಎಂದು ಹೇಳಿದರೆ ಅದೇ ಒಂದು ಲೇಖನವಾದೀತು! ಆಮ್ಲಜನಕವನ್ನು ಪೂರೈಸಲಾಗದ ಆಫ್ರಿಕಾದ ಪುಟ್ಟ ರಾಷ್ಟ್ರಗಳು ಧಾನ್ಯವನ್ನು ಕೊಟ್ಟು ಕೃತಜ್ಞತೆ ಸಮಪರ್ಿಸಿದ್ದವು. ಇಡೀ ರಾಷ್ಟ್ರಕ್ಕೇ ಬೇಕಾದಷ್ಟು ಆಮ್ಲಜನಕ ಸಿಗುವುದು ಸಾಧ್ಯವೇ ಇಲ್ಲ ಎಂಬ ವಾತಾವರಣವನ್ನು ಪೂರ್ಣ ಬದಲಾಯಿಸಿ ದೇಶದ ಮೂಲೆ-ಮೂಲೆಯಲ್ಲೂ ಆಮ್ಲಜನಕ ದೊರೆಯುವಂತೆ ಮಾಡಿದ್ದು ಪ್ರಧಾನಿಯವರ ಸಾಧನೆಯೇ.


ಇವೆಲ್ಲವೂ ನಡೆಯುವಾಗ ಒಂದು ವಿಚಾರವನ್ನು ಗಮನಿಸಿದ್ದೀರಾ. ಈ ಸಂದರ್ಭಗಳಲ್ಲಿ ಡಾ. ಹರ್ಷವರ್ಧನ್ ಆರೋಗ್ಯ ಸಚಿವ ಎಂಬುದು ಅನೇಕರಿಗೆ ಗೊತ್ತಾಗಲೇ ಇಲ್ಲ. ಅವರು ಆಗೀಗ ಪತ್ರಿಕಾಗೋಷ್ಠಿಗಳನ್ನು ನಿರ್ವಹಿಸುತ್ತಿದ್ದರು ಅಷ್ಟೇ. ಉಳಿದೆಲ್ಲ ಕೆಲಸದ ನೇತೃತ್ವ ನರೇಂದ್ರಮೋದಿಯದ್ದೇ. ಗೆದ್ದಾಗಲಷ್ಟೇ ಈ ಮನುಷ್ಯ ಮುಂದೆ ನಿಲ್ಲುವುದಲ್ಲ, ಜನರಿಂದ ಬೈಗುಳಗಳನ್ನು ಸ್ವೀಕರಿಸಲು ಅವರೇ ಮುಂದೆ ನಿಂತಿದ್ದರು. ಕಾಂಗ್ರೆಸ್ ಕೆಲಸಕ್ಕೆ ಸೇರಿಸಿಕೊಂಡಿದ್ದ ಐದು ಲಕ್ಷ ಕೀಬೋಡರ್್ ಕುಟ್ಟಕರು ಎಲ್ಲ ಪ್ರಯತ್ನಗಳನ್ನು ಮಾಡಿದ ನಂತರವೂ ಮೋದಿ ಕಂಗೆಡಲಿಲ್ಲ. ಯೂಥ್ ಕಾಂಗ್ರೆಸ್ ವಿದೇಶದ ಎಂಬೆಸಿಯೊಂದಕ್ಕೆ ತಾನೇ ಆಕ್ಸಿಜನ್ ತಲುಪಿಸುವ ಪ್ರಯತ್ನ ಮಾಡಿ ಜಾಗತಿಕ ಮಟ್ಟದಲ್ಲಿ ಮೋದಿಯ ಮಾನ ಕಳೆಯಲು ಪ್ರಯತ್ನಿಸಿತು. ಸವರ್ೋಚ್ಚ ನ್ಯಾಯಾಲಯದಲ್ಲಿ ಪದೇಪದೇ ದಾವೆಗಳನ್ನು ಹೂಡಿ ಕಾಲೆಳೆಯುವ ಪ್ರಯತ್ನ ಮಾಡಲಾಯ್ತು, ದಿನ ಬೆಳಗಾದರೆ ನಿಂದನೆಯ ತುತ್ತೂರಿಗಳು ಮೊಳಗುತ್ತಲೇ ಇದ್ದವು, ಈ ಮನುಷ್ಯ ಮಾತ್ರ ಜಗ್ಗಲೇ ಇಲ್ಲ. ರೆಮ್ಡೆಸಿವಿರ್ ಇಂಜೆಕ್ಷನ್ಗಳ ಕೊರತೆಯಾಗಬಹುದು ಎಂದು ಗೊತ್ತಾದೊಡನೆ ಅದನ್ನು ಪಡೆದು ತಲುಪಿಸಲು ಹಠ ತೊಟ್ಟು ನಿಂತರು. ಈ ನಡುವೆ ಜನರಿಗೆ ಧಾನ್ಯದ ಕೊರತೆಯಾಗದಿರಲೆಂದು ಎಮ್ಎಸ್ಪಿ ಕೊಟ್ಟು ರೈತರಿಂದ ಸಾಕಷ್ಟು ಧಾನ್ಯ ಖರೀದಿ ಮಾಡಲಾಯ್ತು. ಕರೋನಾ ಕಾಲದಲ್ಲಿ ಏರಿದ ಆಹಾರತೈಲದ ಬೆಲೆಯನ್ನು ಬಲುಬೇಗ ನಿಯಂತ್ರಣಕ್ಕೆ ತಂದರು. ಪ್ಯಾಕೇಜುಗಳನ್ನು ಘೋಷಿಸಿ ತೊಂದರೆಗೊಳಗಾದ ಉದ್ಯಮವನ್ನು ಕೈ ಹಿಡಿದು ನಿಲ್ಲಿಸುವ ಯತ್ನ ಮಾಡಿದರು. ಹಾಗಂತ ಶಕ್ತಿ, ಸಾಮಥ್ರ್ಯವನ್ನು ಕಳೆದುಕೊಳ್ಳಲಿಲ್ಲ. ಚೀನಾದ ಗಡಿಯಲ್ಲಿ ಐವತ್ತು ಸಾವಿರ ಹೆಚ್ಚುವರಿ ಸೈನಿಕರನ್ನು ನಿಲ್ಲಿಸಿ ತಂಟೆಗೆ ಬರಬೇಡಿ ಎಂದರು. ಅಮೇರಿಕಾ ಸಹಕಾರ ಕೊಡುವುದಿರಲಿ, ಲಸಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ಕೊಡುವುದಿಲ್ಲವೆಂದಾಗ ಗುಟುರು ಹಾಕಿದರು. ಜಾಗತಿಕ ಒತ್ತಡ ಅಮೇರಿಕಾದ ಮೇಲೆ ಹೇಗೆ ನಿಮರ್ಾಣವಾಯ್ತೆಂದರೆ ಸ್ವತಃ ಬೈಡನ್ ನೆಟ್ಟಗಾಗಬೇಕಾಯ್ತು. ಇವೆಲ್ಲವುಗಳ ನಡುವೆಯೂ ಪಾಕಿಸ್ತಾನ ಎಫ್ಎಟಿಎಫ್ನ ಕಂದುಪಟ್ಟಿಯಿಂದ ಹೊರಬರದಂತೆ ನೋಡಿಕೊಂಡರು. ಬಂಗಾಳದಲ್ಲಿ ದೀದಿ ಕಾರ್ಯಕರ್ತರು ರಾಕ್ಷಸರಂತೆ ವತರ್ಿಸುತ್ತಾ ತನ್ನ ಪಕ್ಷದ ಕಾರ್ಯಕರ್ತರ ರುಂಡ ಚೆಂಡಾಡುತ್ತಿದ್ದಾಗ ಅದರ ವಿಚಾರಣೆಗೂ ಮುಂದಡಿಯಿಟ್ಟರು. ಒಂದೇ ಎರಡೇ ಹಗಲು-ರಾತ್ರಿ ಒಂದು ಮಾಡಿ ಅವರು ದುಡಿಯುತ್ತಾರೆ. ನಾವು ಅಂಗೈ ಅಗಲದ ಮೊಬೈಲನ್ನು ಕೈಲಿ ಹಿಡಿದು ಮನಸ್ಸಿಗೆ ಬಂದಂತೆ ಬೈದು ಸುಮ್ಮನಾಗಿಬಿಡುತ್ತೇವೆ. ಈಗ ಮತ್ತೊಮ್ಮೆ ಮೋದಿಯ ಜಾಗದಲ್ಲಿ ಮನಮೋಹನರಿದ್ದಿದ್ದರೆ ಏನಾಗಬಹುದಿತ್ತು ಎಂದು ಊಹಿಸಿ, ನಿಮ್ಮ ಎದೆಯೊಳಗೆ ಸ್ವಲ್ಪವಾದರೂ ಸಾಹಸ ಇದ್ದರೆ ಮೋದಿ ಬದಲಿಗೆ ರಾಹುಲ್ನನ್ನು ಊಹಿಸಿಕೊಂಡು ನೋಡಿ! ಎರಡನೇ ಅಲೆಯ ವೇಳೆಗೆ ದೇವರು ನಮ್ಮ ಮೇಲೆ ಎಷ್ಟು ಕೃಪೆ ಮಾಡಿದ್ದಾನೆ ಎಂದು ಅರ್ಥವಾದೀತು..


ನರೇಂದ್ರಮೋದಿಯವರಿಗೆ ಭಗವಂತ ಇನ್ನೂ ಹೆಚ್ಚಿನ ಶಕ್ತೊ ಕೊಡಲಿ.