ಟ್ಯಾಗ್: ಮೋದಿ

ಸೋಲಿನ ಭೀತಿಯಿಂದ ಪತರಗುಟ್ಟಿದೆ ಕಾಂಗ್ರೆಸ್ಸು!

ಸೋಲಿನ ಭೀತಿಯಿಂದ ಪತರಗುಟ್ಟಿದೆ ಕಾಂಗ್ರೆಸ್ಸು!

ಮೋದಿಯ ಹವಾ ಶುರುವಾಗುತ್ತಿದೆ ಎಂದು ಎಲ್ಲರೂ ಭಾವಿಸಿಕೊಂಡಿದ್ದರು. ಆದರೆ ತಮ್ಮ ವಿಸ್ತಾರವಾದ ರ್ಯಾಲಿಯ ಮೂಲಕ ಅವರು ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದ್ದಾರೆ! ಅಣ್ಣಾಮಲೈಯವರು ಹೇಳಿದ್ದು ನಿಜ, ಮೋದಿ ಆಗಮನಕ್ಕಿಂತಲೂ ಮುಂಚೆ ಕಾಂಗ್ರೆಸ್ಸಿನ ಗೆಲುವು ಹೆಚ್ಚು-ಕಡಿಮೆ ನಿಶ್ಚಿತವಾಗಿತ್ತು. ಅವರು ತಮ್ಮದ್ದೇ ಆದ ಭಿನ್ನ-ಭಿನ್ನ ವಿಧಾನಗಳ ಮೂಲಕ ಜನರನ್ನು ಒಪ್ಪಿಸಿಬಿಟ್ಟಿದ್ದರು. ಮೋದಿಯ ಪ್ರಚಾರದ ಅಬ್ಬರ ಶುರುವಾಯ್ತು ನೋಡಿ, ದಿನೇ ದಿನೇ ಕಾಂಗ್ರೆಸ್ಸಿನ ಸಂಖ್ಯೆ ಕುಸಿಯುತ್ತಾ ಬಂದು, ಪ್ರಚಾರದ ಆರಂಭಕ್ಕೂ ಮುನ್ನ ಕಾಂಗ್ರೆಸ್ಸು ಯಾವ ಸ್ಥಿತಿಯಲ್ಲಿತ್ತೋ ಬಿಜೆಪಿ ಆ ಸ್ಥಿತಿಗೆ ತಲುಪಿತು ಮತ್ತು ನರೇಂದ್ರಮೋದಿ ಆಗಮನಕ್ಕೂ ಮುನ್ನ ಬಿಜೆಪಿಗೆ ಯಾವ ದೈನೇಸಿ ಸ್ಥಿತಿಯಿತ್ತೋ ಆ ಹಂತಕ್ಕೆ ಕಾಂಗ್ರೆಸ್ಸು ಇಳಿಯಿತು. ಬೆಂಗಳೂರಿನ ರ್ಯಾಲಿಯಂತೂ ಬಹುಶಃ ಈ ದೇಶದ ರಾಜಕಾರಣದ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾದ್ದು ಮತ್ತು ಜಗತ್ತಿನ ರಾಜಕಾರಣವೇ ನೆನಪಿಟ್ಟುಕೊಳ್ಳುವಂಥದ್ದು. ನಾಡಿನಲ್ಲೆಲ್ಲ ಚರ್ಚೆ ರ್ಯಾಲಿಯದ್ದಷ್ಟೇ ಅಲ್ಲ, ಮೋದಿಗಿರುವ ಅಂತಃಶಕ್ತಿಯದ್ದೂ ಕೂಡ. ದಿನಕ್ಕೆ ಮೂರು ಕಾರ್ಯಕ್ರಮ, ರ್ಯಾಲಿಗಳು, ನಡು-ನಡುವೆ ಅತ್ಯಂತ ಪ್ರಮುಖವಾದ ಮೀಟಿಂಗುಗಳು, ರಾತ್ರಿ ಕಳೆದು ಬೆಳಿಗ್ಗೆ ಏಳುವಾಗ ಮತ್ತದೇ ಉತ್ಸಾಹ-ಉಲ್ಲಾಸ. ಈ ಮನುಷ್ಯ ದೇವಮಾನವನೇ ಸರಿ! ಕಾಂಗ್ರೆಸ್ಸು ಅನಿವಾರ್ಯವಾಗಿ ಸುಳ್ಳುಗಳನ್ನು ಹರಡಿಸುವ ಪರಿಸ್ಥಿತಿಗೆ ತಲುಪಿದೆ. ಬಿ.ಎಲ್ ಸಂತೋಷ್ ಅವರು ಲಿಂಗಾಯಿತರ ವಿರುದ್ಧ ಆಡಿದ್ದಾರೆ ಎನ್ನಲಾಗುವ ಮಾತಿನಿಂದ ಹಿಡಿದು ಮೋದಿಯ ಪರವಾಗಿ ಬ್ಯಾಟಿಂಗ್ ಮಾಡುವ ಭರದಲ್ಲಿ ನಾನು ಸಾಮಾನ್ಯ ನಾಗರೀಕರನ್ನು ಬೈದಿದ್ದೇನೆ ಎನ್ನುವವರೆಗೆ ಅವರು ಅತ್ಯಂತ ನೀಚಮಟ್ಟದ ಪ್ರಚಾರಕ್ಕೆ ಇಳಿದಿದ್ದಾರೆ. ಈ ಹತಾಶ ಮನೋಭಾವವೇ ಅವರ ಸೋಲಿಗೆ ಸಾಕ್ಷಿ ನೀಡುತ್ತಿದೆ. ಪ್ರತೀ ಹಂತದಲ್ಲೂ ಮೋದಿಗೆ ಮತ ಹಾಕುವುದೇ ಸರಿಯಾದ್ದು ಎಂದು ಜನರಲ್ಲಿ ವಿಶ್ವಾಸ ಮೂಡಿಸುತ್ತಿದೆ. 

ಆರಂಭದಿಂದಲೂ ಪ್ರಚಾರದ ವಿಚಾರದಲ್ಲಿ ಮೇಲುಗೈ ಇದ್ದದ್ದು ಕಾಂಗ್ರೆಸ್ಸಿನದ್ದೇ. ಭ್ರಷ್ಟಸರ್ಕಾರ ಎನ್ನುವ ವಿಚಾರವನ್ನು ಸಮಾಜದ ಮುಂದೆ ಯಾವ ಪುರಾವೆಯೂ ಇಲ್ಲದೇ ಒಪ್ಪಿಸಿಬಿಟ್ಟಿದ್ದರು. ಸರ್ಜಿಕಲ್ ಸ್ಟ್ರೈಕ್‌ಗೂ ಪ್ರೂಫ್ ಕೇಳುವ ಈ ಅಯೋಗ್ಯ ಕಾಂಗ್ರೆಸ್ಸಿಗರು ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವಾಗ ಪುರಾವೆ ಕೊಡಬೇಕೆಂಬ ಸಾಮಾನ್ಯಜ್ಞಾನವೂ ಇಟ್ಟುಕೊಳ್ಳದಿದ್ದುದು ಅಚ್ಚರಿಯೇ ಸರಿ. ಹೀಗಾಗಿ ಅವರ ಪ್ರಚಾರದ ಭರಾಟೆ ಜೋರಾಗಿದ್ದರೂ ಜನಕ್ಕೆ ಅದು ರುಚಿಸಲಿಲ್ಲ. ಆರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಹತಪ್ರಭರೆನಿಸಿದರೂ ಬರು-ಬರುತ್ತಾ ಅದನ್ನು ಮೀರಿ ಬೆಳೆಯಲು ಸಾಧ್ಯವಾಯ್ತು. ಇಷ್ಟಕ್ಕೂ ಭ್ರಷ್ಟಾಚಾರದ ಆರೋಪ ಮಾಡಿದ ಕಾಂಗ್ರೆಸ್ಸಿಗರು ಶುದ್ಧರಾಗಿದ್ದರೇನು? ಯುಪಿಎ-2 ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರಗಳು ಇನ್ನೂ ಕನಿಷ್ಠ ಎರಡು ಅವಧಿಯವರೆಗೂ ಮೋದಿಯವರಿಗೆ ಗೆಲುವು ತಂದುಕೊಡಬಲ್ಲಷ್ಟಿದೆ. ಹೀಗಿರುವಾಗ ಮೋದಿಯನ್ನು, ಅವರ ಸರ್ಕಾರವನ್ನು ಭ್ರಷ್ಟರೆನ್ನುವುದಕ್ಕೆ ಕಾಂಗ್ರೆಸ್ಸಿಗೆ ನೈತಿಕವಾದ ಯಾವ ಅರ್ಹತೆಯೂ ಇಲ್ಲ. ಅದೇ ಅವರಿಗಾದ ಬಲುದೊಡ್ಡ ಹಿನ್ನಡೆ. ಇಂದು ನೆಲಮಟ್ಟದಲ್ಲಿ ಬಿಜೆಪಿಯ ಭ್ರಷ್ಟಾಚಾರ ಚರ್ಚೆಯ ವಸ್ತುವೇ ಅಲ್ಲ, ಏಕೆಂದರೆ ಇಂಧನಖಾತೆ ಸಚಿವರಾಗಿ ಡಿ.ಕೆ ಶಿವಕುಮಾರ್ ನಡೆಸಿದ್ದ ಕಾರುಬಾರೇನೆಂಬುದು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ. ಈ ಕಾರಣದಿಂದಲೇ ಹಂತ-ಹಂತಕ್ಕೂ ಭಿನ್ನ ಭಿನ್ನ ಪ್ರಚಾರ ತಂತ್ರವನ್ನು ಬಳಸಿದ ಕಾಂಗ್ರೆಸ್ಸು ಕಾರ್ಯಕರ್ತರ ಸ್ಫೂರ್ತಿಗಾಗಿ ಭಾರತ್ ಜೊಡೊ ಯಾತ್ರೆಯಲ್ಲಿ ತನ್ನ ಸಂಪೂರ್ಣ ಶ್ರಮವನ್ನು ವ್ಯಯಿಸಿತು, ಹಣವನ್ನೂ ಕೂಡ. ಆಯಾ ಕ್ಷೇತ್ರಗಳಲ್ಲಿ ರಾಹುಲ್ ಬಾಬಾನನ್ನು ಸ್ವಾಗತಿಸುವ ಜವಾಬ್ದಾರಿಯನ್ನು ಟಿಕೆಟ್ ಆಕಾಂಕ್ಷಿಗಳಿಗೆ ನೀಡಲಾಯ್ತು. ಸಹಜವಾಗಿಯೇ ಟಿಕೆಟ್ ತಪ್ಪಿದ ನಂತರ ಕೈಸುಟ್ಟುಕೊಂಡಿದ್ದ ಇವರೆಲ್ಲ ತಿರುಗಿನಿಂತರು. ಇಷ್ಟಾದರೂ ಕಾಂಗ್ರೆಸ್ಸು ಜನರ ಮುಂದೆ ಒಗ್ಗಟ್ಟಿನ ಮಂತ್ರವನ್ನು ಪಠಿಸುವಲ್ಲಿ ಯಶಸ್ವಿಯಾಯ್ತು. ಒಳಗಿನ ಬೆಂಕಿ ಮಾತ್ರ ಆರಿರಲಿಲ್ಲ. ಇತ್ತೀಚೆಗೆ ಪತ್ರಕರ್ತೆಯೊಬ್ಬರು ಈ ಕಾದಾಟದ ಕುರಿತಂತಹ ಪ್ರತ್ಯಕ್ಷ ಅನುಭವವನ್ನು ಹೇಳಿಕೊಂಡಿದ್ದಾರೆ. ವೇದಿಕೆಯ ಮೇಲೆ ರಾಹುಲ್ ಸಿದ್ದರಾಮಯ್ಯ, ಡಿಕೆಶಿ ಕೈ-ಕೈ ಹಿಡಿದು ನಿಲ್ಲುವಂತೆ ಮಾಡಿದ ನಂತರ ಸಿದ್ದರಾಮಯ್ಯ ಜನಮೆಚ್ಚುವ ಭಾಷಣ ಮಾಡಿದರಂತೆ. ಒಳಗೊಳಗೇ ಕುದಿಯುತ್ತಿದ್ದ ಡಿಕೆಶಿ ಆ ಪತ್ರಕರ್ತೆ ಮಾತನಾಡಿಸತೊಡಗಿದಾಗ, ‘ಹೋದೆಡೆಯೆಲ್ಲಾ ಇದನ್ನೇ ಮಾತನಾಡುತ್ತಾನೆ, ಹೊಸತೇನಿದೆ?’ ಎಂದು ಮೂದಲಿಸಿದರಂತೆ. ಆಕೆ ‘ಜನರ ಮುಂದೆ ಕೈ-ಕೈ ಹಿಡಿದವರು ಹಿಂದೆ ಉರಕೊಂಡು ಹೇಗೆ ಕೈ-ಕೈ ಮಿಲಾಯಿಸುತ್ತಾರೆ ನೋಡಿ’ ಎಂದು ಕುಹಕವಾಡಿರುವುದು ಟ್ವಿಟರ್‌ನಲ್ಲಿ ಭಾರೀ ದೊಡ್ಡ ಸದ್ದು ಮಾಡಿತು. ಇಷ್ಟಾದರೂ ಬಿಜೆಪಿಯವರಿಗಿಂತ ಹೆಚ್ಚು ಬಲವಾದ ಏಕತೆಯನ್ನು ಪ್ರದರ್ಶಿಸಿದ್ದು ಕಾಂಗ್ರೆಸ್ಸೇ! ಆದರೆ ಅವರು ಎಡವಿದ್ದು ಎಲ್ಲಿ ಗೊತ್ತೇ? ಆರಂಭದ ಮೋದಿಯ ಹವಾ ಬಿರುಗಾಳಿಯಾಗಿ ಪರಿವರ್ತಿತಗೊಳ್ಳುತ್ತಿದೆ ಎಂದರಿವಾದಾಗ. 

ಇಡಿಯ ಮಾಧ್ಯಮವನ್ನು ಮೋದಿಯಿಂದ ಬೇರೆಡೆಗೆ ಸೆಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್ಸು ಬಜರಂಗದಳವನ್ನು ಬಳಸಿಕೊಂಡಿತು. ಅದಾಗಲೇ ಬಜರಂಗದಳದ ಕಾರ್ಯಕರ್ತರು ಅನೇಕ ಕಡೆಗಳಲ್ಲಿ ಬಿಜೆಪಿಯ ವಿರುದ್ಧ ಕೂಗಾಡಿದ್ದರಲ್ಲದೇ ಬಂಡಾಯದ ಬಾವುಟ ಬೀಸಿದ್ದರು. ಹಳೆಯ ಕಾರ್ಯಕರ್ತರು ತಟಸ್ಥವಾಗಿ ಚುನಾವಣೆಯೇ ಬೇಡವೆಂದು ಬದಿಗೆ ಸರಿದುಬಿಟ್ಟಿದ್ದರು. ಹೀಗಾಗಿ ಈ ಹೊತ್ತಿನಲ್ಲಿ ಬಜರಂಗದಳದ ಕುರಿತು ಮಾತನಾಡಿದರೆ ಆ ಕಾರ್ಯಕರ್ತರೇನು ಮುಂದೆ ಬರುವುದಿಲ್ಲ, ಬದಲಿಗೆ ಮಾಧ್ಯಮದ ಚರ್ಚೆಯೆಲ್ಲಾ ಹಿಂದುತ್ವದ ಕುಕೃತ್ಯದ ಕಡೆಗೆ ತಿರುಗುತ್ತದೆ. ಮೋದಿ ಅದಕ್ಕೆ ಉತ್ತರಿಸುವಲ್ಲಿ ಹೈರಾಣಾಗುತ್ತಾರೆ ಎಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರವಾಗಿತ್ತು. ಒಂದು ವೇಳೆ ಬಜರಂಗಿಗಳು ಪ್ರತಿಭಟನೆಗೆಂದು ಬಂದರೂ ಕಾಂಗ್ರೆಸ್ ನಾಯಕರ ಘೇರಾವ್ ಮಾಡುವುದು, ಗಾಡಿಗಳ ಮೇಲೆ ಕಲ್ಲೆಸೆಯುವುದು ಮಾಡಿ ಕಾಂಗ್ರೆಸ್ಸಿಗರನ್ನು ಮಾಧ್ಯಮಗಳ ಮುಂದೆ ಅಳುವುದಕ್ಕೆ ಪ್ರೇರೇಪಿಸುತ್ತದೆ. ಮೋದಿಯವರ ಬಿರುಗಾಳಿಗೆ ಇದು ಪ್ರತಿದಾಳವೆಂಬುದು ಅವರ ಲೆಕ್ಕಾಚಾರವಾಗಿತ್ತು. ಸದಾ ಉಗ್ರವಾಗಿರುವ ಚಿಂತನೆ ಹೊಂದಿರುವ ಬಜರಂಗದಳದ ಕಾರ್ಯಕರ್ತರು ಈ ಬಾರಿ ಶಾಂತ ಪ್ರತಿಭಟನೆಗೆ ಮುಂದಾದದ್ದು ಕಾಂಗ್ರೆಸ್ಸಿನ ಪಾಲಿಗೆ ಔಟ್ ಆಫ್ ಸಿಲಬಸ್ಸು. ಮಂದಿರ ಮಂದಿರಗಳಲ್ಲಿ ಹನಮಾನ್ ಚಾಲಿಸಾ ಪಠಣ ಬಜರಂಗಿಯನ್ನು, ಬಜರಂಗದಳವನ್ನು ಸಮೀಕರಿಸಿಬಿಟ್ಟಿತು. ಪಿಎಫ್ಐನೊಂದಿಗೆ ಬಜರಂಗದಳವನ್ನು ಸಮೀಕರಿಸಿದ ಕಾಂಗ್ರೆಸ್ಸು ನಾಳೆ ಮಂದಿರಕ್ಕೆ ಹೋಗುವ ಸಾಮಾನ್ಯ ಕಾರ್ಯಕರ್ತರನ್ನು ಭಯೋತ್ಪಾದಕರೆನ್ನಲು ಹಿಂಜರಿಯುವುದಿಲ್ಲ ಎಂದೆನಿಸಿಬಿಟ್ಟಿತ್ತು ಜನರಿಗೆ. ಹೀಗಾಗಿ ಮನೆ-ಮನೆಯಲ್ಲೂ ಜನ ಆಕ್ರೋಶದಿಂದ ಕುದಿಯಲಾರಂಭಿಸಿದರು. ತನ್ನ ದಾಳ ತನಗೇ ತಿರುಮಂತ್ರವಾಗಿದ್ದು ಕಂಡು ಬೆಚ್ಚಿದ ಡಿಕೆಶಿ ಆಂಜನೇಯನ ಪಾದಗಳಿಗೆ ಹಣೆಹಚ್ಚಿ ‘ನಾನೂ ಹನುಮ ಭಕ್ತನೇ’ ಎಂದಿದ್ದು ಅವರ ಮೊದಲ ಸೋಲು. ಕಾಂಗ್ರೆಸ್ಸು ಎಂದಾದರು ಹಿಂದೂಗಳ ಪರವಾಗಿ ನಿಂತಿದ್ದು ನೆನಪಿದೆಯೇನು? ರಾಮ ಹುಟ್ಟಿದ್ದೇ ಸುಳ್ಳು ಎಂದು ಅವನ ಅಸ್ತಿತ್ವ ಪ್ರಶ್ನಿಸಿದವರು ಇವರು, ನ್ಯಾಯಾಲಯಕ್ಕೆ ಹಾಗೊಂದು ಅಫಿಡವಿಟ್ ಸಲ್ಲಿಸಿದರೂ ಕೂಡ. ರಾಮಸೇತು ಉಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂಬುದು ಅವರ ಭಾವನೆಯಾಗಿತ್ತು. ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನ ಡಿಗ್ರಿ ಪಡೆದಿದ್ದಾನೆ ಎಂದು ಕುಹಕವಾಡಿದ್ದರು ಇವರೆಲ್ಲ. ರಾಮಮಂದಿರದ ನಿರ್ಮಾಣಕ್ಕೆಂದು ಮುಂದಡಿಯಿಟ್ಟಿದ್ದ ಕರಸೇವಕರ ಮೇಲೆ ಗೋಲಿಬಾರ್ ಮಾಡಿಸಿದವರು ಇವರು. ಗೋದ್ರಾದಲ್ಲಿ ಕರಸೇವೆ ಮುಗಿಸಿ ಮರಳಿ ಬರುತ್ತಿದ್ದ ರಾಮಭಕ್ತರನ್ನು ಮುಸಲ್ಮಾನರು ರೈಲಿನಲ್ಲಿ ಜೀವಂತ ದಹಿಸಿದಾಗ ಅವರ ಬೆಂಬಲಕ್ಕೆ ನಿಂತಿದ್ದು ಇದೇ ಮಂದಿ. ರಾಮನ ಕುರಿತಂತೆ ಅವಹೇಳನಕಾರಿ ಮಾತುಗಳನ್ನು ಟಿವಿ ಡಿಬೆಟ್‌ಗಳಲ್ಲಿ ಆಡುತ್ತಾ ಹಿಂದೂಗಳನ್ನು ಮತ್ತೆ-ಮತ್ತೆ ನೋಯಿಸಿದರು. ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುವುದಕ್ಕೆ ಅಡ್ಡಗಾಲು ಹಾಕಿ, ಅದನ್ನು ವಿವಾದಿತ ಪ್ರದೇಶವಾಗಿ ಉಳಿಸಿದ್ದಲ್ಲದೇ 67 ಎಕರೆ ಜಮೀನಿಗೆ ಮತ್ತೊಬ್ಬ ಫಲಾನುಭವಿಯನ್ನು ಸೃಷ್ಟಿಸುವ ಪ್ರಯತ್ನ ಮಾಡಿದ್ದೂ ಅವರೇ. ಹಿಂದೂಗಳಲ್ಲಿ ಒಡಕು ತಂದು ಮುಸಲ್ಮಾನರಿಗೆ ಲಾಭ ಮಾಡಿಕೊಡುವ ಅವರ ಪ್ರಯತ್ನ ಒಂದೆರಡೇನು? ರಾಮಮಂದಿರಕ್ಕೇ ಇಷ್ಟೆಲ್ಲ ವಿರೋಧ ಮಾಡಿದ್ದ ಈ ಮಂದಿ ಆಂಜನೇಯನ ಪಾದಗಳಿಗೆ ಹಣೆ ಹಚ್ಚಿದ್ದಾರೆಂದರೆ ಅದು ನರೇಂದ್ರಮೋದಿಯವರ ಬಜರಂಗಬಲಿ ಘೋಷಣೆಗಲ್ಲದೇ ಮತ್ಯಾವುದಕ್ಕೆ ಹೇಳಿ? ನಾವೆಲ್ಲ ಹನುಮ ನಾಡಿನವರು ನಿಜ. ಆದರೆ ಕಾಂಗ್ರೆಸ್ಸಿಗರ ಬಾಯಲ್ಲೂ ಹನುಮನ ನಾಮ ಬರುವಂತೆ ಮಾಡಿದ ಮೋದಿ ನಿಜಕ್ಕೂ ಶ್ರೇಷ್ಠ ಹನುಮ ಸೇವಕ. ಹೀಗಾಗಿಯೇ ಜನ ಊರೂರಲ್ಲೂ ಅವರನ್ನು ಅಪ್ಪಿಕೊಳ್ಳಲು ಸಿದ್ಧವಾಗಿಬಿಟ್ಟಿದ್ದಾರೆ. 

ತಾವು ಎಸೆದ ದಾಳ ಉಲ್ಟಾ ಹೊಡೆಯುತ್ತಿದೆ ಎಂದು ಗೊತ್ತಾದೊಡನೆ ಆಂಜನೇಯನಿಗೆ ಮಂದಿರ ಕಟ್ಟಿಕೊಡುವ, ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಹಿಂದೂಗಳ ಓಲೈಕೆಯ ಮಂತ್ರವನ್ನು ಕಾಂಗ್ರೆಸ್ಸು ಪಠಿಸುತ್ತಿದ್ದಂತೆ ಮುಸಲ್ಮಾನರಿಗೆ ಅಸಮಾಧಾನವೂ ಅನುಮಾನವೂ ಶುರುವಾಯ್ತು. ಅವರೀಗ ಪೂರಾ ಗೊಂದಲದಲ್ಲಿದ್ದಾರೆ. ಅದಾಗಲೇ ಸತ್ತಿದ್ದ ಪಿಎಫ್ಐ ಅನ್ನು ಬ್ಯಾನ್ ಮಾಡುತ್ತೇನೆ ಎನ್ನುವುದು ಎಷ್ಟು ಮೂರ್ಖ ಸಂಗತಿಯಾಗಿತ್ತೋ, ಬಜರಂಗದಳ ಬ್ಯಾನ್ ಮಾಡುವುದು ಸ್ಥಳೀಯ ಸರ್ಕಾರಕ್ಕೆ ಅಸಾಧ್ಯವಾದ ಸಂಗತಿ ಎನ್ನುವುದು ಮುಸಲ್ಮಾನರಿಗೆ ತಿಳಿಯದುದೇನಾಗಿರಲಿಲ್ಲ. ಹೀಗಾಗಿ ಅವರೊಳಗೆ ಆಕ್ರೋಶದ ಬೀಜವಂತೂ ಬಿತ್ತಿದೆ. ಇತ್ತ ಹಿಂದೂ ಕಾರ್ಯಕರ್ತರು ಹಠಹಿಡಿದು ಅಖಾಡಕ್ಕೆ ಧುಮುಕಿದರೆ ಅತ್ತ ಮುಸಲ್ಮಾನರು ಕಾಂಗ್ರೆಸ್ಸಿನ ಪಲಾಯನವಾದಿ ರಾಜಕಾರಣ ಕಂಡು ಇವರಿಂದ ಒಂದು ಹೆಜ್ಜೆ ಹಿಂದೆ ಸರಿದಿರುವುದಂತೂ ಸ್ಪಷ್ಟ. ಈಗ ಕಾಂಗ್ರೆಸ್ಸಿಗೆ ಉಳಿದಿರುವುದು ಒಂದೇ ಮಾರ್ಗ. ಹಿಂದೂಗಳನ್ನು ಜಾತಿ-ಜಾತಿಗಳಲ್ಲಿ ಒಡೆದು ಬಿಸಾಡುವುದು ಮಾತ್ರ. ಹೀಗಾಗಿಯೇ ಬ್ರಾಹ್ಮಣ ಮತ್ತು ಲಿಂಗಾಯಿತರನ್ನು ಎತ್ತಿಕಟ್ಟುವ ಪ್ರಯತ್ನ ಆರಂಭಿಸಿದರು. ಬಿ.ಎಲ್ ಸಂತೋಷರನ್ನು ಇದಕ್ಕೆ ದಾಳವಾಗಿ ಉಪಯೋಗಿಸಬೇಕೆಂದು ಫೇಕ್ ಸುದ್ದಿಯನ್ನು ಸೃಷ್ಟಿಸಿದರು. ಇದ್ಯಾವುದಕ್ಕೂ ಎಂದಿಗೂ ತಲೆಕೆಡಿಸಿಕೊಳ್ಳದ ಅವರು ಈ ಬಾರಿ ಮಾತ್ರ ಹಠಕ್ಕೆ ಬಿದ್ದು ಸುದ್ದಿ ಹರಿದಾಡಿಸಿದವನ ವಿರುದ್ಧ ಕ್ರಮ ಕೈಗೊಂಡಿದ್ದಿದೆಯಲ್ಲ, ಇದು ಲಿಂಗಾಯಿತರ ಕಣ್ತೆರೆಸುವಂಥದ್ದು. ಹಾಗೆ ನೋಡಿದರೆ ವೀರಶೈವರನ್ನೂ ಲಿಂಗಾಯಿತರನ್ನೂ ಒಡೆದು ಮತಗಳನ್ನು ಬಾಚಿಕೊಳ್ಳಲು ಯತ್ನಿಸಿದ್ದು ಸಿದ್ದರಾಮಯ್ಯ ಮತ್ತವರ ತಂಡವೇ ಅಲ್ಲವೇನು? ಚುನಾವಣೆಯವರೆಗೂ ಹೋರಾಟಕ್ಕೆ ಕಾವು ತಂದುಕೊಡುವಲ್ಲಿ ದುಡಿದ ಈ ನಾಯಕರು ಆನಂತರ ಲಿಂಗಾಯಿತರ ಬಳಿಯೂ ಸುಳಿಯಲಿಲ್ಲವೆಂಬುದು ಸತ್ಯವಲ್ಲವೇನು? ಮೊದಲಾದರೆ ಜನ ಮರೆತುಬಿಡುತ್ತಿದ್ದರು. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಮತ್ತೆ ಮತ್ತೆ ನೆನಪಿಸುವ ವ್ಯವಸ್ಥೆ ಇರುವುದರಿಂದ ಕಾಂಗ್ರೆಸ್ಸು ಕಂಗಾಲಾಗಿರುವುದು ಕಾಣುತ್ತದೆ. ಜಾತಿ-ಜಾತಿಗಳು ಮೋದಿ ರ್ಯಾಲಿಯ ನಂತರ ಜಾತಿಯನ್ನೇ ಮರೆತು ಮೋದಿಯ ಮಾತಿಗೆ ಮತಹಾಕುವ ಹಂತಕ್ಕೆ ಬಂದಿರುವುದು ಕಾಂಗ್ರೆಸ್ಸಿಗರಿಗೆ ಸಹಿಸಲಾಗದ ಸುದ್ದಿ. 

ನರೇಂದ್ರಮೋದಿ ಈ ಬಾರಿ ಬಹುಮತದ ಸರ್ಕಾರ ಕೇಳಿಕೊಂಡಿದ್ದಾರೆ. 104ಕ್ಕೆ ಪ್ರತೀಬಾರಿ ನಿಲ್ಲಿಸುತ್ತೇವಲ್ಲ, ಅದು ಬಿಜೆಪಿಯನ್ನು ಅನಿವಾರ್ಯವಾಗಿ ಕೆಡುಕಿನತ್ತ ದೂಡುತ್ತದೆ. ಆಪರೇಶನ್ ಕಮಲಕ್ಕೆ ಪ್ರೇರೇಪಿಸುತ್ತದೆ. ಒಮ್ಮೆ ಪೂರ್ಣ ಬಹುಮತ ಕೊಟ್ಟರೆ ಉತ್ತರ ಪ್ರದೇಶದಲ್ಲಿ ನೀಡಿದಂತಹ ಸಮರ್ಥ ಆಡಳಿತವನ್ನು ಕರ್ನಾಟಕಕ್ಕೂ ನೀಡಬಹುದೆಂದು ಅವರ ಬಯಕೆ. ಹೀಗಿರುವಾಗ ಜವಾಬ್ದಾರಿಯುತವಾಗಿ ಮತ ಸಲ್ಲಿಸುವುದು ನಮ್ಮ ಹೊಣೆ. ಅಷ್ಟೇ ಅಲ್ಲ, ಬಿಜೆಪಿ ಈ ಬಾರಿ 70ಕ್ಕೂ ಹೆಚ್ಚು ಹೊಸಮುಖಗಳನ್ನು ಪರಿಚಯಿಸಿದೆ. ಇವರಲ್ಲಿ ಬಹುತೇಕರು ಸಾಮಾನ್ಯ ಕಾರ್ಯಕರ್ತರು, ಕೆರೆದರೂ ಅಕೌಂಟಿನಲ್ಲಿ ನಾಲ್ಕಾರು ಲಕ್ಷ ಸಿಗದವರು. ಈ ಬಾರಿ ಬಿಜೆಪಿಯ ಈ ಪ್ರಯೋಗಕ್ಕೆ ಸೋಲಾದರೆ ಇನ್ನೆಂದೂ ಯಾರೂ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ಯತ್ನ ಮಾಡಲಾರರು. ಟಿಕೆಟ್ ಕೊಡುವ ಮುನ್ನ ಅಪ್ಪ ಶಾಸಕನಾಗಿದ್ದಾನಾ ಎಂದು ಗುರುತಿಸಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ. ಅಲ್ಲಿಗೆ ಕಾರ್ಯಕರ್ತನ ಸಮಾಧಿ. ಕಾಂಗ್ರೆಸ್ಸಿನ ಕಾರ್ಯಕರ್ತರೂ ಈ ಕುರಿತಂತೆ ಗಂಭೀರವಾಗಿ ಯೋಚಿಸಬೇಕಿದೆ. ಸಾಯುವ ಕೊನೆ ಕ್ಷಣದಲ್ಲೂ ಕುರ್ಚಿಯ ಮೇಲಿರಬೇಕೆಂದು ಬಯಸುವ ಮಂದಿಯ ಜೀತ ಮಾಡಬಾರದೆಂದರೆ ಈ ಬಾರಿ ಅವರೂ ಬಿಜೆಪಿಗೆ ಮತಹಾಕಿ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ಈ ವಿಚಾರಧಾರೆಯನ್ನು ಗೆಲ್ಲಿಸಬೇಕಿದೆ. ಆಗಮಾತ್ರ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಾದರೂ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇಲ್ಲವಾದರೆ ಅಪ್ಪ, ಮಗ, ಮೊಮ್ಮಗ, ಮರಿಮಕ್ಕಳ ಪರಂಪರೆ ವರುಣಾದಲ್ಲಿ ಮುಂದುವರೆದಂತೆ ನಾಡಿನೆಲ್ಲೆಡೆಗೂ ಹಬ್ಬಲಿದೆ. 

ಈ ಕಾರಣಕ್ಕೇ ಮೇ 10 ಅತ್ಯಂತ ಪ್ರಮುಖವಾದ ದಿವಸ. ಮತ ಹಾಕಬೇಕೋ ಬೇಡವೋ ಎಂದು ಆಲೋಚಿಸುತ್ತಿರುವವರು ಮನೆಯಿಂದ ಹೊರಬನ್ನಿ. ಮೋದಿಯವರು ಕೇಳಿಕೊಂಡಂತೆ ಒಮ್ಮೆ ಅವರಿಗೆ ಬಹುಮತ ಕೊಡೋಣ. ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಮೋದಿಗೆ ಬಲಗೈಯ್ಯಾಗಿ ಮುನ್ನುಗ್ಗಲೆಂದು ಪ್ರಾರ್ಥಿಸೋಣ ಮತ್ತು 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸಲು ಈಗ ಅವರ ಗೆಲುವು ಮುಖ್ಯ ಎನ್ನುವುದನ್ನು ಮರೆಯದಿರೋಣ. ಹೌದಲ್ಲವೇ?

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿ ಇಪ್ಪತ್ತು ವರ್ಷಗಳ ನಂತರ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಮೋದಿಯನ್ನು ರಕ್ಕಸನೆಂದು ಬಿಂಬಿಸಲು ಮಾಧ್ಯಮಗಳು, ರಾಜಕಾರಣಿಗಳು, ಅಧಿಕಾರಿಗಳು, ಕೆಲವು ಎನ್‌ಜಿಒಗಳು ಮಾಡಿದ ಪ್ರಯತ್ನ ಕೊನೆಗೂ ಮಣ್ಣುಗೂಡಿದೆ. ಪುಟವಿಟ್ಟ ಚಿನ್ನದಂತೆ ಮೋದಿ ಮತ್ತೊಮ್ಮೆ ಬೆಳಗಿದ್ದಾರೆ.

2002ರ ಫೆಬ್ರವರಿ 27. ಅಯೋಧ್ಯಾದಿಂದ ಬರುತ್ತಿದ್ದ ರೈಲೊಂದಕ್ಕೆ ಮುಸಲ್ಮಾನರು ಗುಜರಾತಿನ ಗೋದ್ರಾದಲ್ಲಿ ಬೆಂಕಿ ಹಚ್ಚಿದರು. ಇದು ಅಚಾನಕ್ಕಾಗಿ ನಡೆದ ದಾಳಿಯಲ್ಲ. ಎಂದಿನಂತೆ ಕೈಲಿ ಕಲ್ಲುಗಳನ್ನು ಹಿಡಿದು, ಪೆಟ್ರೋಲು ಬಾಂಬುಗಳನ್ನು ಹಿಡಿದು ಸಿದ್ಧವಾಗಿದ್ದ ಮುಸಲ್ಮಾನ ಪುಂಡರು ರೈಲು ನಿಂತೊಡನೆ ಏಕಾಕಿ ದಾಳಿ ಮಾಡಿದರು. ಕಲ್ಲೆಸೆದು ಜನರನ್ನು ರೈಲಿನಿಂದ ಹೊರಬರದಂತೆ ತಡೆದರು. ಪೆಟ್ರೋಲ್ ಬಾಂಬುಗಳನ್ನು ಎಸೆದು ಬೋಗಿಗಳು ಹೊತ್ತುರಿಯುವಂತೆ ಮಾಡಿದರು. ಬೇಗೆ ತಾಳಲಾರದೆ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಹೊರಗೆ ನಿಂತು ಕಲ್ಲಿನಲ್ಲಿ ಹೊಡೆಯಲಾಯ್ತು. ಇಡಿಯ ಬೋಗಿಗಳು ಸುಟ್ಟು ಕರಕಲಾದವಲ್ಲದೇ 59 ಜನ ಕರಸೇವಕರು ಬೆಂದುಹೋಗಿದ್ದರು. ಅವರ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಎಂಥವನ ರಕ್ತವೂ ಕುದಿಯುತ್ತಿತ್ತು. ಆದರೆ ಈ ದೇಶದ ಮಾಧ್ಯಮಗಳಲ್ಲಿದ್ದವರು ಅಂದೂ ಅದರ ಕುರಿತಂತೆ ತಲೆಕೆಡಿಸಿಕೊಳ್ಳಲಿಲ್ಲ, ಇಂದೂ ಕೂಡ! ಕಳೆದ ಮಾರ್ಚ್‌ನಲ್ಲಿ ಪ್ರೇಮ್ಶಂಕರ್ ಝಾ ಈ ಪ್ರಕರಣವನ್ನು ನೆನಪಿಸಿಕೊಳ್ಳುತ್ತಾ ವೈರ್ ಪತ್ರಿಕೆಗೆ ಬರೆದ ಲೇಖನದಲ್ಲಿ, 1100 ಜನ ಸಾಮಥ್ರ್ಯ ಹೊಂದಿದ್ದ ಆ ರೈಲು 2000ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದೇ ಮೊದಲ ತಪ್ಪು ಎಂಬುದನ್ನು ಬರೆದುಕೊಂಡಿದ್ದಾರೆ. ಎಸ್6 ಬೋಗಿ ಬೆಂಕಿ ಹೊತ್ತಿಸಿಕೊಂಡು ಉರಿದು ಕರಸೇವಕರು ಸಾಯಲು ಕಾರಣವಾಗಿದ್ದು ಅದು ಅಗತ್ಯಕ್ಕಿಂತ ಹೆಚ್ಚು ತುಂಬಿದ್ದುದರಿಂದ ಎಂದು ವಾದಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಹಚ್ಚಿದ ಮುಸಲ್ಮಾನರದ್ದು ಯಾವ ತಪ್ಪೂ ಇಲ್ಲ. ರೈಲಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳದ್ದೇ ತಪ್ಪು. ಅರುಂಧತಿ ರಾಯ್ ಅಂತೂ ಅಂದಿನ ದಿನಗಳಲ್ಲೇ ಬಾಬರಿ ಮಸೀದಿಯನ್ನು ಉರುಳಿಸಿ ಬರುತ್ತಿದ್ದ ಕರಸೇವಕರ ಮೇಲೆ ಮುಸಲ್ಮಾನರಿಗೆ ಆಕ್ರೋಶವಿತ್ತು, ಹೀಗಾಗಿ ಈ ರೀತಿ ಆಯ್ತು ಎಂದು ದಂಗೆಕೋರರಿಗೆ ಕವರಿಂಗ್ ಫೈರ್ ಕೊಡುವ ಪ್ರಯತ್ನ ಮಾಡಿದ್ದಳು! ಮಸೀದಿ ಉರುಳುವ ಮತ್ತು ಗೋದ್ರಾ ರೈಲಿಗೆ ಬೆಂಕಿ ಹಚ್ಚುವ ಘಟನೆಗಳ ನಡುವೆ ಹತ್ತು ವರ್ಷಗಳ ಅಂತರವಿತ್ತು ಎಂಬುದನ್ನು ಆಕೆ ಮರೆತೇ ಹೋಗಿದ್ದಳು. ಹತ್ತು ವರ್ಷಗಳ ಹಿಂದೆ ನಿರ್ಜೀವ ಕಟ್ಟಡವೊಂದನ್ನು ಉರುಳಿಸಿದ ಘಟನೆಗೆ ಮುಸಲ್ಮಾನರು 59 ಜನರ ಸಜೀವ ದಹನ ಮಾಡಿದ್ದು ಸಹಜ ಪ್ರತಿಕ್ರಿಯೆಯಾಗಬಹುದಾದರೆ, ಈ ರೈಲು ದಹನದ ನಂತರ ಹಿಂದೂಗಳು ಮುಸಲ್ಮಾನರ ವಿರುದ್ಧ ಆಕ್ರೋಶಗೊಂಡಿದ್ದು ಮಾತ್ರ ಅಸಹಜ ಹೇಗಾಯ್ತು? ಈ ಪ್ರಶ್ನೆಯನ್ನು ಆಗಲೂ ಯಾರೂ ಕೇಳಲಿಲ್ಲ, ಈಗಲೂ ಕೂಡ ವ್ಯವಸ್ಥಿತವಾಗಿ ಮರೆಯುತ್ತಾರೆ.

ಆದರೆ ಗೋದ್ರಾ ನಂತರದ ಘಟನೆಗಳನ್ನು, ಮೋದಿಯನ್ನು ಶಾಶ್ವತವಾಗಿ ಮುಗಿಸುವ ಪ್ರಯತ್ನಕ್ಕೆ ಎಲ್ಲರೂ ರಣಹದ್ದುಗಳಂತೆ ಬಳಸಿಕೊಂಡರು. ಮೋದಿ ಮುಖ್ಯಮಂತ್ರಿಯ ಪಟ್ಟಕ್ಕೆ ಬಂದು ಆಗಷ್ಟೇ ನಾಲ್ಕು ತಿಂಗಳು ಕಳೆದಿದ್ದವು. ಕಚ್‌ನ ಭೂಕಂಪವನ್ನು ಎದುರಿಸಿ ನಿಂತು ಅವರು ಜನರಲ್ಲಿ ಮೂಡಿಸಿದ ವಿಶ್ವಾಸ ಪ್ರತಿಪಕ್ಷಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಅವಕಾಶವನ್ನು ಎಲ್ಲರೂ ಬಳಸಿಕೊಂಡರು. ರಾಷ್ಟ್ರಮಟ್ಟದಲ್ಲಿ ಹಿಂದೂಗಳನ್ನು ಅವಮಾನಗೊಳಿಸಲು ದಂಗೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಲಾಯ್ತು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಮೋದಿ ದಂಗೆಗಳು ಕೈಮೀರುತ್ತವೆಂದು ಗೊತ್ತಾದೊಡನೆ ಪಕ್ಕದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್, ಮಹಾರಾಷ್ಟ್ರದ ವಿಲಾಸ್‌ರಾವ್ ದೇಶ್‌ಮುಖರಿಗೆ ಪತ್ರ ಬರೆದು ರಕ್ಷಣೆಯ ದೃಷ್ಟಿಯಿಂದ ಸಹಾಯ ಕೊಡುವಂತೆ ಕೇಳಿಕೊಂಡರು. ಕಾಂಗ್ರೆಸ್ಸಿಗೆ ಸೇರಿದ್ದ ಈ ಮೂರೂ ರಾಜ್ಯಗಳು ಅಂದು ಮೋದಿಯ ವಿನಂತಿಗೆ ಪ್ರತಿಕ್ರಿಯಿಸಲೇ ಇಲ್ಲ. ಇದಕ್ಕೆ ವಿಪರೀತವಾಗಿ ದಂಗೆ ನಿಯಂತ್ರಣ ಮಾಡುವಲ್ಲಿ ಮೋದಿ ಸೋತರೆಂದು ಅದೇ ಮುಖ್ಯಮಂತ್ರಿಗಳು ಆನಂತರ ಮಾತನಾಡಲಾರಂಭಿಸಿದರು. ಸುಳ್ಳು ಸುದ್ದಿ ಹಬ್ಬಿಸಿ ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವಲ್ಲಿ ನಿಸ್ಸೀಮರಾದ ಎಡಪಂಥೀಯರು ಕೌಸರ್ ಬಾನೊ ಎಂಬ ಗರ್ಭಿಣಿ ಮುಸ್ಲೀಂ ಹೆಣ್ಣುಮಗಳ ಸಾವನ್ನೂ ಕೂಡ ತಮಗೆ ತಕ್ಕಂತೆ ಬಳಸಿಕೊಂಡರು. ಹಿಂದೂ ಪಡೆ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ಹೊಟ್ಟೆಯನ್ನು ಸೀಳಿ, ಒಳಗಿದ್ದ ಮಗುವನ್ನು ಕತ್ತಿಯಿಂದ ಕತ್ತರಿಸಿದರು ಎಂದೆಲ್ಲ ಸುದ್ದಿ ಹಬ್ಬಿಸಿದರು. ಆ ಮೂಲಕ ಮುಸಲ್ಮಾನರನ್ನು ಮೋದಿ ಸರ್ಕಾರದಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಮತ್ತು ಹಿಂದೂಗಳು ಅದೆಷ್ಟು ಕ್ರೂರಿಗಳು ಎಂದು ಬಿಂಬಿಸುವ ಪ್ರಯತ್ನ ಅದಾಗಿತ್ತು. ಸಾಮಾಜಿಕ ಜಾಲತಾಣಗಳು ಈಗಿನಷ್ಟು ವ್ಯಾಪಕವಾಗಿಲ್ಲದ್ದಿದ್ದದ್ದರಿಂದ ಇದರ ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲೇ ಇಲ್ಲ. 2010ರಲ್ಲಿ ವಿಸ್ತಾರವಾದ ವರದಿ ಬಂದಾಗಲೇ ಇದೊಂದು ಸುಳ್ಳು ಪ್ರಕರಣ ಎಂಬುದು ಗೊತ್ತಾಗಿದ್ದು. ತೀರಿಕೊಂಡ ಗರ್ಭಿಣಿ ಹೆಣ್ಣುಮಗಳ ಮರಣೋತ್ತರ ಪರೀಕ್ಷೆ ನಡೆಸಿದ ಡಾಕ್ಟರ್ ಜೆ.ಎಸ್ ಕನೋರಿಯಾ ಮಗು ಹೊಟ್ಟೆಯೊಳಗೆ ಸುರಕ್ಷಿತವಾಗಿದ್ದುದನ್ನು, ಎರಡೂವರೆ ಕೆಜಿಯಷ್ಟು ತೂಕವಿದ್ದುದನ್ನು ದಾಖಲಿಸಿದ್ದರು. ಆದರೆ ಆ ವರದಿಯ ನಂತರವೂ ಕೌಸರ್ ಬಾನೊ ಕಥೆ ಮಾತ್ರ ಹಾಗೆಯೇ ಉಳಿಯಿತು!

ಈ ದಂಗೆಯ ಕ್ಷಣ-ಕ್ಷಣದ ಮಾಹಿತಿಗಳನ್ನು ಬಿತ್ತರಿಸುವ ಧಾವಂತಕ್ಕೆ ಬಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಎಂದು ಹೇಳುತ್ತಾ ಸುಳ್ಳು ಸುದ್ದಿಗಳನ್ನೇ ವ್ಯಾಪಕವಾಗಿ ಪ್ರಚಾರ ಮಾಡಿ ದಂಗೆಗಳಿಗೆ ಪ್ರೇರಣೆಕೊಟ್ಟರು. ಬರ್ಖಾದತ್ ಸೂರತ್ತಿನ ವಜ್ರದ ಮಾರುಕಟ್ಟೆಯಲ್ಲಿ ನಿಂತು ‘ಇಲ್ಲಿ ಒಬ್ಬ ಪೊಲೀಸರೂ ಇಲ್ಲ. ಇಲ್ಲಿ ದಂಗೆ ವಿಸ್ತರಿಸಿದರೆ ಏನು ಕಥೆ?’ ಎಂದೆಲ್ಲಾ ವರದಿ ಮಾಡುತ್ತಿದ್ದಳು. ಕಚ್ ಭಾಗದಲ್ಲಿ ಹನುಮಾನ್ ಮಂದಿರವೊಂದನ್ನು ದುಷ್ಕರ್ಮಿಗಳು ಉರುಳಿಸಿದ್ದಾರೆ ಎಂಬ ಸುದ್ದಿಯನ್ನು ಆಕೆ ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಳು. ಮುಖ್ಯಮಂತ್ರಿಯಾಗಿದ್ದ ಮೋದಿ ಆಕೆಗೆ ಕರೆಮಾಡಿ, ‘ವಜ್ರದ ಮಾರುಕಟ್ಟೆಯಲ್ಲಿ ಪೊಲೀಸರಿಲ್ಲ ಎಂದು ಹೇಳುವ ಮೂಲಕ ತಾವು ದಂಗೆಕೋರರನ್ನು ಆಹ್ವಾನಿಸುತ್ತಿದ್ದೀರಾ?’ ಎಂದು ಕೇಳಿದ್ದರಲ್ಲದೇ, ಕಚ್ ಭಾಗದಲ್ಲಿ ಆಕೆ ಹೇಳಿದ ಯಾವ ಮಂದಿರವೂ ಉರುಳಿರಲಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡರು. ಅದರರ್ಥ ಹಿಂದೂ-ಮುಸಲ್ಮಾನರ ನಡುವಿನ ಕಂದಕವನ್ನು ವಿಸ್ತಾರಗೊಳಿಸಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬುದೇ ಅವರೆಲ್ಲರ ಪ್ರಯತ್ನವಾಗಿತ್ತು. ಅವರ ಗುರಿ ಮೋದಿಯಷ್ಟೇ ಆಗಿರಲಿಲ್ಲ. ಏಕೆಂದರೆ ಬಿಜೆಪಿಯಲ್ಲೇ ಅನೇಕ ಗೊಂದಲಗಳುಂಟಾಗಿ ಮೋದಿ ಅನಿವಾರ್ಯಕ್ಕೆ ಅಧಿಕಾರಕ್ಕೆ ಬಂದಿದ್ದರು. ಜನಸಾಮಾನ್ಯರು ರೋಸಿಹೋಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಮತ ಚಲಾಯಿಸಿದರೂ ಅಚ್ಚರಿ ಪಡಬೇಕಿರಲಿಲ್ಲ! ಎಲ್ಲ ಇಂಗ್ಲೀಷ್ ಮಾಧ್ಯಮಗಳಿಗೆ ಕಣ್ಣಿದ್ದುದು ಹಿಂದೂಗಳ ಮೇಲೆ. ಹಿಂದೂಗಳು ಆತಂಕವಾದಿಗಳು, ಕ್ರೂರಿಗಳು ಎಂದು ಬಿಂಬಿಸುವ ಜರೂರತ್ತು ಅವರಿಗಿತ್ತು. ಅದಕ್ಕೆ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮೋದಿ ಅನಿವಾರ್ಯವಾಗಿ ಎನ್ಡಿಟಿವಿಯನ್ನು ಗುಜರಾತಿನಲ್ಲಿ ತಡೆಹಿಡಿಯಬೇಕಾಯ್ತು. ಅಚ್ಚರಿ ಎಂದರೆ ಅಂದು ಅದೇ ಚಾನೆಲ್‌ನಲ್ಲಿದ್ದು ಈ ಇಡೀ ಸುಳ್ಳು ಸುದ್ದಿಯನ್ನು ಹರಡಿಸುವಲ್ಲಿ ನೇತಾರನಾಗಿದ್ದ ರಾಜ್‌ದೀಪ್ 17 ವರ್ಷಗಳ ನಂತರ 2019ರಲ್ಲಿ ಪತ್ರಕರ್ತ ಮನು ಜೋಸೆಫ್ ಕೇಳಿದ ಪ್ರಶ್ನೆಗೆ ‘ಈ ದಂಗೆಗೆ ಮೋದಿ ಕಾರಣರಲ್ಲವೇ ಅಲ್ಲ’ ಎಂದು ಉತ್ತರಿಸಿದ್ದ. ಹಾಗಿದ್ದರೆ ಅವತ್ತು ಹೇಳಿದ ಸುಳ್ಳುಗಳಿಗೆ ಯಾರು ಹೊಣೆ? ಅದರಿಂದಾಗಿ ಮೋದಿ ಸುದೀರ್ಘಕಾಲ ನರಕಯಾತನೆ ಅನುಭವಿಸಬೇಕಾಯ್ತಲ್ಲ, ಅದರ ಜವಾಬ್ದಾರಿ ಯಾರದ್ದು? ಈ ಪ್ರಶ್ನೆಗೆಲ್ಲ ಉತ್ತರಿಸಬೇಕಾದ್ದು ಯಾರು?


ಪತ್ರಕರ್ತರಷ್ಟೇ ಅಲ್ಲ, ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದರು. ಐಪಿಎಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಮೋದಿಯ ವಿರುದ್ಧ ತನ್ನೆಲ್ಲ ಆಕ್ರೋಶವನ್ನೂ ಹಂತ-ಹಂತವಾಗಿ ಹೊರಹಾಕಿದ. 2011ರಲ್ಲಿ ಆತ ಸ್ಫೋಟಕವಾದ ಮಾಹಿತಿಯೊಂದನ್ನು ಸಮಾಜದ ಮುಂದಿಟ್ಟ. ಕರಸೇವಕರನ್ನು ಸುಟ್ಟ ಪ್ರಕರಣದ ನಂತರ ಮೋದಿ ತುರ್ತು ಸಭೆಯೊಂದನ್ನು ಕರೆದು ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಮಾಡಿಕೊಡಬೇಕೆಂದೂ, ಈ ಬಾರಿ ಈ ಆಕ್ರೋಶ ಹೊರಹಾಕುವ ಪ್ರಕ್ರಿಯೆ ಹೇಗಿರಬೇಕೆಂದರೆ ಇನ್ನೆಂದೂ ಮುಸಲ್ಮಾನರು ಇಂತಹ ಕೃತ್ಯಕ್ಕೆ ಕೈ ಹಾಕದಂತಾಗಬೇಕೆಂದು ಹೇಳಿದ್ದರಂತೆ. ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಭಾಗವಹಿಸಲು ತನಗೂ ಆಹ್ವಾನವಿದ್ದ ಫ್ಯಾಕ್ಸ್ ಪ್ರತಿಯೊಂದನ್ನು ಆತ ಸಮಾಜದ ಮುಂದಿರಿಸಿದ. ಈ ಸಭೆಯಲ್ಲಿ ಎಂಟು ಜನ ಪ್ರಮುಖ ಪೊಲೀಸರಿದ್ದು ಅವರೆಲ್ಲರೂ ಈ ದಂಗೆ ನಿಲ್ಲದಂತೆ ನೋಡಿಕೊಂಡರು ಎಂದಿದ್ದ. ನಾನಾವತಿ ಮೆಹ್ತಾ ಕಮಿಷನ್ ಈ ಎಲ್ಲ ಆರೋಪಗಳನ್ನೂ ಅಲ್ಲಗಳೆಯಿತಲ್ಲದೇ ಆತ ಈ ಸಭೆಯಲ್ಲಿ ಭಾಗವಹಿಸಿರುವುದೇ ಸುಳ್ಳು ಎಂದಿತು. ಆತ ಹೇಳಿರುವ ಅಷ್ಟೂ ಹೇಳಿಕೆಯನ್ನು ಈ ಕಮಿಷನ್ ಸಾರಾಸಗಟಾಗಿ ತಿರಸ್ಕರಿಸಿತು. ಆತ ಮುಂದಿಟ್ಟಿರುವ ಫ್ಯಾಕ್ಸ್ ಪ್ರತಿಯೂ ಕೂಡ ಆ ಸಭೆಯದ್ದಲ್ಲವೆಂಬುದು ಇವರುಗಳ ತನಿಖೆಯ ಮೂಲಕ ಹೊರಬಂತು. ಮುಂದೆ ಇದೇ ಸಂಜೀವ್ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು ಟ್ರೋಲ್ ಮಾಡುತ್ತಾ ಮೋದಿ ವಿರೋಧಿಗಳ ಪಾಲಿನ ಹೀರೋ ಆಗಿ ಉಳಿದ.

ಇವರೆಲ್ಲರೂ ಸೇರಿ ವಾತಾವರಣವನ್ನು ಹೇಗೆ ರೂಪಿಸಿಬಿಟ್ಟಿದ್ದರೆಂದರೆ 72 ಗಂಟೆಗಳ ಕಾಲ ಮೋದಿ ಹಿಂದೂಗಳಿಗೆ ಪೂರ್ಣ ಅವಕಾಶವನ್ನು ಕೊಟ್ಟಿದ್ದರೆಂದು, ಅಷ್ಟರೊಳಗೆ ಮಾಡಬೇಕಾದ್ದೆಲ್ಲವನ್ನೂ ಮಾಡಿ ಮುಗಿಸಲು ಮುಕ್ತ ಪರವಾನಗಿ ನೀಡಿದ್ದರೆಂದು ನಂಬಿಸಿಬಿಟ್ಟಿದ್ದರು. ಹೀಗಾಗಿಯೇ ಮೋದಿ ಸೈನ್ಯವನ್ನು ಕರೆಸಲಿಲ್ಲ ಎಂಬುದು ಅವರ ಮೇಲಿದ್ದ ಅಪವಾದ. ಆದರೆ ದಂಗೆಗಳು ಆರಂಭವಾಗಿವೆ ಎಂದು ಗೊತ್ತಾದೊಡನೆ ಸೈನ್ಯದ ಸಹಕಾರ ಬೇಕೆಂದು ಮೋದಿ ಕೇಂದ್ರಸರ್ಕಾರಕ್ಕೆ ಪತ್ರ ಬರೆದಿದ್ದುದು ನಿಚ್ಚಳವಾಗಿತ್ತು. ಆದರೆ ಸೇನೆ ಗಡಿಭಾಗದಿಂದ ರಕ್ಷಣೆಗೆಂದು ಬರಲು ಕೆಲವು ಗಂಟೆಗಳ ಸಮಯವಾದರೂ ಹಿಡಿಯುತ್ತದೆಂಬುದು ಎಂಥವನಿಗೂ ಗೊತ್ತಿರಬೇಕಾದ ಸಂಗತಿ. ಮೂರು ಸಾವಿರ ಸೈನಿಕರ ಪಡೆ ಘಟನೆಯಾದ ಎರಡು ದಿನಗಳ ನಂತರ ಮಾರ್ಚ್ ಒಂದಕ್ಕೆ ಅಹ್ಮದಾಬಾದಿಗೆ ಬಂದಿಳಿದಿತ್ತು. ಮೋದಿ ದಂಗೆಗಳು ಆರಂಭವಾದ ದಿನ ಸಂಜೆಯೇ ಸೈನ್ಯದ ಸಹಾಯಕ್ಕಾಗಿ ಕರೆಮಾಡಿದ್ದು ದಾಖಲಾಗಿತ್ತು. ಆನಂತರದ ದಿನಗಳಲ್ಲಿ ಅನೇಕ ಪತ್ರಿಕೆಗಳು ಇದನ್ನು ವರದಿ ಮಾಡಿದವು. ಅಷ್ಟರವೇಳೆಗೆ ಮೋದಿಯ ಕುರಿತಂತೆ ಹಬ್ಬಿಸಬೇಕಾದ ಸುಳ್ಳುಗಳನ್ನೆಲ್ಲಾ ಹೇಳಿಯಾಗಿತ್ತು. ಈ ಅಯೋಗ್ಯರ ಸಾಮಥ್ರ್ಯ ಎಂಥದ್ದಿತ್ತೆಂದರೆ ಇಡಿಯ ಜಗತ್ತು ದಂಗೆಯ ಹಿಂದಿನ ಕಾರಣ ಮೋದಿ ಎಂಬುದನ್ನು ನಂಬಿತ್ತೆನ್ನುವುದನ್ನು ಬಿಡಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಇದನ್ನು ಒಪ್ಪಿಕೊಂಡು ಮೋದಿಯವರನ್ನು ಬದಲಾಯಿಸಿಬಿಡುವ ತವಕದಲ್ಲಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಟಲ್ಜಿ ರಾಜ್ಯಧರ್ಮದ ಪಾಲನೆಯ ಕುರಿತಂತೆ ಮೋದಿಗೆ ಕಿವಿಮಾತು ಹೇಳಿದ್ದೇನೆ ಎಂಬುದಂತೂ ಮೋದಿಯವರ ಪಾಲಿಗೆ ಕಂಟಕಪ್ರಾಯವೇ ಆಗಿತ್ತು!

ಮುಂದಿನ ಕನಿಷ್ಠ 12 ವರ್ಷಗಳ ಕಾಲ ಮೋದಿಯ ಪಾಲಿಗೆ ಇದು ವನವಾಸವೇ. ಅವರು ವಿದೇಶಕ್ಕೆ ಹೋಗುವಾಗ ಅಲ್ಲಿನ ಪತ್ರಿಕೆಗಳಲ್ಲಿ ಗೋದ್ರಾ ದಂಗೆಯ ಕುರಿತಂತೆ ಬರೆಸಲಾಗುತ್ತಿತ್ತು. ಚುನಾವಣೆಗೆ ಹೋಗುವ ಮುನ್ನ ಗೋದ್ರಾ ದಂಗೆಗಳನ್ನು ನೆನಪಿಸಿಕೊಡಲಾಗುತ್ತಿತ್ತು. ಗುಜರಾತಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದರೆ ಮೋದಿಯನ್ನು ದಂಗೆಕೋರ ಎಂದು ಬಿಂಬಿಸಿ ಹೂಡಿಕೆದಾರರನ್ನು ಹಿಂದೆ ಸರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಈ ಮನುಷ್ಯ ಎಲ್ಲವನ್ನೂ ಎದುರಿಸಿದ. 12 ವರ್ಷಗಳ ಕಾಲ ತನಗಾದ ಅವಮಾನವನ್ನು ನುಂಗಿಕೊಂಡ, ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ. ಮತ್ತೆ-ಮತ್ತೆ ಚುನಾವಣೆಗಳನ್ನು ಗೆದ್ದು 2014ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಹುಮತ ಪಡೆದು ಪ್ರಧಾನಿಯೂ ಆದ. 2019ರಲ್ಲಿ ಮತ್ತೆ ಪ್ರಧಾನಿಯಾದ. ಈಗ ಅದೇ ನರೇಂದ್ರಮೋದಿ ಈ ಎಲ್ಲ ಆರೋಪಗಳಿಂದ ಮುಕ್ತರಾಗಿ ಬಂದಿದ್ದಾರೆ. ಒಮ್ಮೆ ಹಿಂದಿರುಗಿ ನೋಡಿದಾಗ ಎಲ್ಲ ಕಠಿಣ ಸಂದರ್ಭದಲ್ಲೂ ಜೊತೆಯಲ್ಲಿದ್ದ ನಿಜ ಭಾರತೀಯನನ್ನು ಕಂಡು ಸಂತೋಷ ಪಡಬಹುದು ಅಥವಾ ರಣಹದ್ದುಗಳಂತೆ ಹಿಂದೆ ಬಿದ್ದಿದ್ದವರನ್ನು ಕಂಡು ಅಸಹ್ಯವೆನಿಸಬಹುದು!

ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ರಾಮಾಯಣದಲ್ಲಿ ಎಲ್ಲೋ ಹೊರಗಿಂದ ನುಸುಳಿದ ಕಥೆಯಿದು. ಚೌಡೇಶ್ವರಿ ದೇವಿಯ ಬಳಿ ಭಾರತದ ಭವಿಷ್ಯದ ಕುರಿತಂತೆ ಕೆಲವಾರು ವರ್ಷಗಳ ಹಿಂದೆ ರಾಮಕೃಷ್ಣಾಶ್ರಮದ ಮಿತ್ರರೊಬ್ಬರು ಕೇಳಿದಾಗ ದೇವಿ ಹೇಳಿದ್ದಂತೆ, ‘ಇಂದ್ರಜಿತ್ ಸಾಯುವ ಮುನ್ನ ರಾಮನನ್ನು ಬಲು ದೈನ್ಯದಿಂದ ಕೇಳಿದನಂತೆ. ತಂದೆ ರಾವಣನಾದರೋ ತಪ್ಪಿತಸ್ಥ, ನಿಜ. ಆತ ಶಿವಭಕ್ತನಾದರೂ ರಾಕ್ಷಸನಂತೆ ವರ್ತಿಸಿದ್ದಾನೆ. ಸೀತೆಯನ್ನು ಅಪಹರಿಸಿಕೊಂಡು ಬಂದು ತಪ್ಪೆಸಗಿದ್ದಾನೆ. ಅವನಿಗೆ ಶಿಕ್ಷೆ ಕೊಡುವ ಭರದಲ್ಲಿ ಯಾವ ತಪ್ಪನ್ನೂ ಮಾಡದ ನನಗೇಕೆ ಈ ಶಿಕ್ಷೆ? ದೇವರ ದೇವ ನೀನೆನ್ನುತ್ತಾರೆ. ನಾನು ಒಂದು ದಿನವಾದರೂ ಲಂಕೆಯನ್ನು ಆಳದೇ ಪ್ರಾಣ ಬಿಡುತ್ತಿದ್ದೇನಲ್ಲ, ಇದು ನ್ಯಾಯವೇ? ಎಂದನಂತೆ. ರಾಮನ ಮನ ಕರಗಿತು. ಆತ ಮೈದಡವಿ ಕಲಿಯುಗದಲ್ಲಿ ನೂರು ವರ್ಷಗಳ ಕಾಲ ನೀನು ಮತ್ತು ನಿನ್ನ ಪರಿವಾರ ಭಾರತವನ್ನೇ ಆಳುವಂತಾಗಲಿ’ ಎಂದುಬಿಟ್ಟನಂತೆ. ಈ ಕಥೆಯನ್ನು ಕೇಳಿದೊಡನೆ ನಾನು ಅಚ್ಚರಿಯಿಂದ ಅತ್ತ ತಿರುಗಿ, ಹಾಗಾಯಿತೇನು? ಎಂದಾಗ, ಕಾಂಗ್ರೆಸ್ಸಿನ ಆಳ್ವಿಕೆಯ ಒಂದು ಕುಟುಂಬದ ಅಧಿಕಾರಕ್ಕೆ ನೂರು ವರ್ಷ ಕಳೆಯುತ್ತಾ ಬಂತಲ್ಲ, ಎಂದರು. ತಲೆಕೆರೆದುಕೊಂಡು ನೋಡಿದರೆ ಮೋತಿಲಾಲ್ ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾದದ್ದು 1919ರಲ್ಲಿ. ಮತ್ತೀಗ ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸ್ಪಷ್ಟತೆ ಬಂದಿದ್ದು 2019ರಲ್ಲಿ. ಬರೋಬ್ಬರಿ ನೂರು ವರ್ಷ! ಹೇಳಿದ ಪುಣ್ಯಾತ್ಮನ ಕಪೋಲಕಲ್ಪಿತ ಕಥೆಯೋ ಅಥವಾ ನಿಜವಾಗಿಯೂ ದೇವಿಯೇ ಹೇಳಿದ್ದಳೋ ನನಗಂತೂ ಗೊತ್ತಿಲ್ಲ. ಆದರೆ ಅಕ್ಷರಶಃ ಹೊಂದಾಣಿಕೆಯಂತೂ ಆಗುತ್ತಿದೆ. ಬೀದಿ-ಬೀದಿಗಳಲ್ಲಿ ರಾಹುಲ್ ಪಾದಯಾತ್ರೆ ಮಾಡುತ್ತಾ ಭಾರತವನ್ನು ಜೋಡಿಸುತ್ತೇನೆ ಎನ್ನುವಾಗ ಕಾಂಗ್ರೆಸ್ಸಿಗರ ಉತ್ಸಾಹ ಮುಗಿಲು ಮುಟ್ಟಿತ್ತು. ಕಾರ್ಯಕರ್ತರ ಗಡಣ ಬೀದಿಗಿಳಿದು ಅರಚಾಡುವಾಗ ಮುಂದಿನ ಐದ್ಹತ್ತು ವರ್ಷ ಇವರನ್ನು ಅಲುಗಾಡಿಸಲು ಸಾಧ್ಯವೇ ಇಲ್ಲವೇನೋ ಎನಿಸುತ್ತಿತ್ತು. ಮೋದಿ ಬೀದರ್‌ಗೆ ಕಾಲಿಟ್ಟರು ನೋಡಿ, ಎಲ್ಲರೂ ಚಡಪಡಿಸಲಾರಂಭಿಸಿದ್ದಾರೆ. ರಾಹುಲ್‌ನ ಯಾತ್ರೆಗೆ ಜನರನ್ನು ಕಷ್ಟಪಟ್ಟು ಕರೆತರುವುದಕ್ಕೂ, ಮೋದಿಯ ರ್ಯಾಲಿಗೆ ಜನ ಇಷ್ಟಪಟ್ಟು ಬರುವುದಕ್ಕೂ ಅಜಗಜಾಂತರವಿದೆ. ನಿಸ್ಸಂಶಯವಾಗಿ ಮೋದಿ ಭಾರತದ ಜನರ ಪಾಲಿನ ಸೂಪರ್ ಸ್ಟಾರ್. ಬಹುಶಃ ಅಟಲ್ ಬಿಹಾರಿ ವಾಜಪೇಯಿಯ ನಂತರ ಇಷ್ಟು ಜನಾನುರಾಗಕ್ಕೆ ಪಾತ್ರರಾದ ಮತ್ತೊಬ್ಬ ವ್ಯಕ್ತಿ ಬಂದಿರಲಿಕ್ಕಿಲ್ಲ. ವಾಜಪೇಯಿ ತಮ್ಮ ಖ್ಯಾತಿಯನ್ನು ಮತವಾಗಿ ಪರಿವರ್ತಿಸಿಕೊಳ್ಳುವಲ್ಲಿ ಸೋತರು. ಮೋದಿಯ ಹೆಗ್ಗಳಿಕೆಯೇನು ಗೊತ್ತೇ? ಅವರು ರ್ಯಾಲಿಗೆ ಬಂದ ಪ್ರತಿಯೊಬ್ಬ ವ್ಯಕ್ತಿಯನ್ನೂ ರಾಷ್ಟ್ರಭಕ್ತನಾಗಿಬಿಡುವಂತೆ ಮಾಡಿಬಿಡುವರು, ಅಲ್ಲಿಗೆ ಬಿಜೆಪಿಗೆ ಮತ ಖಾತ್ರಿ.

ನೀವು ಯೋಜನೆಗಳನ್ನು ರೂಪಿಸಿ, ಒಂದಷ್ಟು ಉಚಿತಗಳ ಘೋಷಣೆಮಾಡಿ, ಒಮ್ಮೆಯೋ ಎರಡು ಬಾರಿಯೋ ಮತಗಳಿಸಿಬಿಡಬಹುದು. ಆದರೆ ನಿಮ್ಮ ಸಾನಿಧ್ಯ ಮಾತ್ರದಿಂದಲೇ ಜನರ ಒಲವನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂದರೆ ಅದಕ್ಕೆ ದೈವೀಶಕ್ತಿಯೂ ಬೇಕು. ಕಾಂಗ್ರೆಸ್ಸು ಕೋಟಿಗಟ್ಟಲೆ ರೂಪಾಯಿ ಸುರಿದು ರಣನೀತಿ ರೂಪಿಸಲು ಜನರನ್ನು ಇಟ್ಟುಕೊಂಡಿದೆ. ಮೋದಿ ಸುಮ್ಮನೆ ನಾಲ್ಕು ಸುತ್ತು ತಿರುಗಾಡುತ್ತಾರೆ, ಜನ ಪ್ರೀತಿಯಿಂದ ಬಂದು ಮತಹಾಕಿ ಹೋಗುತ್ತಾರೆ. ಎಷ್ಟು ವಿಚಿತ್ರ ಅಲ್ಲವೇ?

ಮೋದಿಗಿರುವ ಶಕ್ತಿಯೇ ಅದು. ಅವರು ಜನರ ಹೃದಯದೊಂದಿಗೆ ನೇರವಾಗಿ ಮಾತನಾಡಬಲ್ಲರು. ಅವರು ಏನೇ ಮಾಡಿದರೂ ಅದು ನಾಟಕವೆನಿಸುವುದಿಲ್ಲ. ರಾಹುಲ್ ಅಪರೂಪಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಅದು ಸತ್ಯವೆನಿಸುವುದಿಲ್ಲ. ಮೋದಿಯನ್ನು ಶಾಲೆಗೇ ಹೋಗದವರೆಂದು ಇವರೆಲ್ಲ ಜರಿದರೂ ಮೋದಿ ಬುದ್ಧಿವಂತರೆಂಬುದನ್ನು ಇಡಿಯ ಜಗತ್ತು ಒಪ್ಪುತ್ತದೆ. ರಾಹುಲ್ ಕೇಂಬ್ರಿಡ್ಜ್ ನಿಂದಲೇ ಬಂದಿದ್ದಾರೆ ಎಂದು ಇವರೆಲ್ಲ ಬಡಾಯಿ ಕೊಚ್ಚಿಕೊಂಡರೂ ಆತ ಏನೂ ಅರಿಯದ ಮುಗ್ದನೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ, ಸ್ವತಃ ಕಾಂಗ್ರೆಸ್ಸಿಗರಿಗೂ! ಮೋದಿ ಈ ದೇಶದ ಜನರ ಮೇಲಿನ ತಮ್ಮ ನಿಷ್ಕಳಂಕ ಪ್ರೀತಿಯಿಂದಲೇ ಗೆಲುವು ಸಾಧಿಸಿಬಿಟ್ಟರು. ಬಡತನವನ್ನು ಅನುಭವಿಸಿಯೇ ಮೇಲಕ್ಕೆ ಬಂದ ಆ ಪುಣ್ಯಾತ್ಮ ಅವರ ಬದುಕನ್ನು ಸುಂದರಗೊಳಿಸಲೆಂದೇ ಯೋಜನೆಗಳನ್ನು ರೂಪಿಸಿದರು. ಅದನ್ನು ಜಾರಿಗೆ ತರಲು ಹಗಲು-ರಾತ್ರಿ ಶ್ರಮಿಸಿದರು. ಹೀಗಾಗಿ ಪ್ರತೀ ಊರಿನ, ಪ್ರತಿ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಮೋದಿ ಯೋಜನೆಯಿಂದ ಉಪಕೃತನಾದವನೇ. ಬೇರೆಲ್ಲವನ್ನು ಬದಿಗಿಟ್ಟು ಕರೋನಾ ಕಾಲದ ಮೋದಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಗಡ್ಡ ಬಿಟ್ಟು, ಋಷಿಯಂತಾಗಿಬಿಟ್ಟಿದ್ದರು ಅವರು. ಅನೇಕ ರಾತ್ರಿಗಳನ್ನು ನಿದ್ದೆಮಾಡದೇ ಕಳೆಯುತ್ತಿದ್ದ ಅವರು ಸಭೆಗಳಿಗೆಂದು ಬಂದಾಗ ಕಣ್ಣು ಸೊರಗಿ ಹೋಗಿರುತ್ತಿತ್ತು. ತನ್ನವರನ್ನು ಕಳೆದುಕೊಳ್ಳುವ ಆತಂಕ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸದಾಕಾಲ ಉತ್ಸಾಹದ ಚಿಲುಮೆಯಂತಿರುತ್ತಿದ್ದ ಮೋದಿ ಆ ಸಂದರ್ಭದಲ್ಲಿ ಮಾತ್ರ ಸೋತು ಸುಣ್ಣವಾದವರಂತೆ ಕಾಣುತ್ತಿದ್ದರು. ದೀರ್ಘಕಾಲದಿಂದ ಕಾಡುತ್ತಿದ್ದ ಯಾವುದೋ ರೋಗ ಉಲ್ಬಣವಾದರೆ ನಮ್ಮ ಸ್ಥಿತಿ ಹೇಗಿರುತ್ತದೆಯೋ ಹಾಗೆ. ಆದರೆ ಮೋದಿ ಎಲ್ಲ ಭಾರವನ್ನೂ ತಾನೇ ಹೊತ್ತರು, ತನ್ನ ಶಿಲುಬೆಯನ್ನು ತಾನೇ ಹೊತ್ತ ಏಸುವಿಗಿಂತ ಕೆಟ್ಟದ್ದಾಗಿ. ಕಾಂಗ್ರೆಸ್ಸಿಗರಾದಿಯಾಗಿ ಬುದ್ಧಿಜೀವಿಗಳೂ ಸೇರಿದಂತೆ ಕೆಲವು ಮುಂಚೂಣಿಯ ನಾಯಕರು ವಿದೇಶೀ ವ್ಯಾಕ್ಸಿನ್‌ಗಳನ್ನು ಕೊಂಡುಕೊಳ್ಳುವುದೊಳಿತು ಎಂದು ಮುಗಿಬಿದ್ದಾಗ ಮೋದಿ ಎಲ್ಲ ನೋವನ್ನೂ ಸಹಿಸಿಕೊಂಡರು. ಎಲ್ಲವನ್ನೂ ಮೈಮೇಲೆಳೆದುಕೊಂಡು ಸಂಕಟ ಜನಸಾಮಾನ್ಯರಿಗೆ ತಲುಪದಂತೆ ತಾವೇ ನುಂಗಿದರು, ವಿಷಕಂಠನಂತೆ. ಅವರ ಈ ಸಾಹಸದ ಪ್ರತಿಫಲವಾಗಿಯೇ ಭಾರತದಲ್ಲಿ ವ್ಯಾಕ್ಸಿನ್‌ಗಳು ತಯಾರಾಗಿದ್ದು. ನಿಮಗೆ ನೆನಪಿರಬೇಕು, ಈ ವ್ಯಾಕ್ಸಿನ್ ಮೇಲೆ ವಿಶ್ವಾಸವಿಲ್ಲ ಎಂದಿದ್ದರು ಕಾಂಗ್ರೆಸ್ಸಿಗರು. ನಂಬಿಕಸ್ಥ ಅಮೇರಿಕನ್ ವ್ಯಾಕ್ಸಿನ್ ಬಳಸುವುದು ದೇಸೀ ವ್ಯಾಕ್ಸಿನ್ ಬಳಕೆಗಿಂತ ಉತ್ತಮ ಎಂದಿದ್ದರೂ ಕೂಡ. ಮೋದಿ ತಲೆಕೆಡಿಸಿಕೊಳ್ಳಲಿಲ್ಲ. ಈ ನಾಡಿನ ವಿಜ್ಞಾನಿಗಳ ಮೇಲೆ ಅಪಾರವಾದ ಭರವಸೆಯನ್ನಿಟ್ಟು ವ್ಯಾಕ್ಸಿನ್ ಅನ್ನು ಮಾರುಕಟ್ಟೆಗೆ ತರಲು ಶ್ರಮಿಸಿದರು. ಅತ್ತ ಅಮೇರಿಕಾದ ವ್ಯಾಕ್ಸಿನ್ಗಳು ಈಗ ಜನರ ಮೇಲೆ ವಿಪರೀತ ಪರಿಣಾಮವನ್ನು ಉಂಟುಮಾಡುತ್ತಿದ್ದರೆ ಭಾರತದ ವ್ಯಾಕ್ಸಿನ್‌ಗಳು ಕರೋನಾಕ್ಕೆ ಇತಿಶ್ರೀ ಹಾಡಿ, ಜಗತ್ತಿನ ಹುಬ್ಬೇರುವಂತೆ ಮಾಡಿವೆ. ಹಾಗೆ ಸುಮ್ಮನೆ ಕರೋನಾ ಕಾಲದಲ್ಲಿ ಮೋದಿಯ ಜಾಗದಲ್ಲಿ ರಾಹುಲ್ ಇದ್ದಿದ್ದರೆ ಏನಾಗುತ್ತಿತ್ತೆಂಬುದನ್ನು ಊಹಿಸಿ ನೋಡಿ, ಗಾಬರಿಯಾಯ್ತಲ್ಲವೇ? ಮೋದಿ ಅಂಥದ್ದೊಂದು ಬಲವಾದ ಛಾಪನ್ನು ಭಾರತೀಯರ ಹೃದಯದೊಳಗೆ ಒತ್ತಿಬಿಟ್ಟಿದ್ದಾರೆ.

ಕಾಂಗ್ರೆಸ್ಸಿಗೆ ಬಡವರ ಕುರಿತಂತೆ ಮಾತನಾಡುವುದೆಂದರೆ ಆನಂದವೋ ಆನಂದ. ದೇಶದಲ್ಲಿ ಹೆಚ್ಚು-ಹೆಚ್ಚು ಬಡವರಿದ್ದಷ್ಟೂ ಅವರ ಮತಗಳಿಗೆ ಹೆಚ್ಚುತ್ತದೆ. ಬಡತನ ಎನ್ನುವುದು ಸಂಪತ್ತಿನ ಕೊರತೆಯಿಂದ ಉಂಟಾಗುವಂಥದ್ದಲ್ಲ. ಅದೊಂದು ಅತೃಪ್ತ ಮಾನಸಿಕತೆ. ದಿನಕ್ಕೆ ಒಂದು ಹೊತ್ತು ಊಟ ಮಾಡುವವನು ತನ್ನ ತಾನು ಸುಖಿ ಎಂದು ಭಾವಿಸಿ ಆನಂದದಿಂದ ಕಾಲ ಕಳೆದುಬಿಡುತ್ತಾನೆ. ಅದೇ ವೇಳೆಗೆ ತಿಂಗಳಿಗೆ ಎರಡು ಲಕ್ಷ ಸಂಪಾದಿಸುವ ವ್ಯಕ್ತಿಯೂ ತನಗೆ ಸಾಕಾದಷ್ಟು ಸಿಗುತ್ತಿಲ್ಲವೆಂದು ಗೋಳಾಡುತ್ತಲೇ ಇರುತ್ತಾನೆ. ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಡುವ ನೆಪದಲ್ಲಿ ಹೀಗೆ ಗೋಳಾಡುವವರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಬಡವರು ಹೆಚ್ಚಾದಷ್ಟು ಅವರ ಬೇಳೆ ಚೆನ್ನಾಗಿ ಬೇಯುತ್ತದೆ. ಮುಸಲ್ಮಾನರು ಹೆಚ್ಚಾದಷ್ಟು ಏಕತ್ರಗೊಂಡ ಹಿಂದೂಗಳ ಭೀತಿಯನ್ನು ಅವರ ಹೃದಯದೊಳಗೆ ತುಂಬಿ ಮತ ಪಡೆಯಲು ಅವರಿಗೆ ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಸಮಾಜ ಮೇಲು-ಕೀಳು, ಬಡವ-ಸಿರಿವಂತ, ಹಿಂದೂ-ಮುಸ್ಲೀಂ ಎಂದು ಒಡೆದಂತೆಲ್ಲ ಆನಂದವಾಗೋದು ಕಾಂಗ್ರೆಸ್ಸಿಗೇ. ಆದರೆ ಮೋದಿ ಇದನ್ನು ಪೂರ್ಣ ಬದಲಾಯಿಸಿದರು. ಅವರು ಬಡವರೆನಿಸಿಕೊಂಡವರ ಆತ್ಮಗೌರವವನ್ನು ಯಾವ ಮಟ್ಟಕ್ಕೊಯ್ದರೆಂದರೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ. ಜನವರಿ 26ಕ್ಕೆ ವಿಶ್ವವಿಖ್ಯಾತ ಪರೇಡ್ ನಡೆಯುತ್ತಲ್ಲ, ಪ್ರತಿವರ್ಷ ಅದನ್ನು ನೋಡಲು ವಿಐಪಿಗಳೆಲ್ಲ ಮುಂದಿನ ಸಾಲಿನಲ್ಲಿ ಕುಳಿತಿರುತ್ತಾರೆ. ಈ ವರ್ಷ ಮೋದಿ ಅಲ್ಲಿ ಕೂರಲು ಜಾಗಮಾಡಿಕೊಟ್ಟದ್ದು ಯಾರಿಗೆ ಗೊತ್ತೇನು? ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಕೆಲಸ ಮಾಡಿದ, ಕಾಶಿ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ ಕಾರಕೂನರ ಕುಟುಂಬಗಳಿಗೆ. ಇಂದು ಕಾರ್ಮಿಕರ ದಿನ ಬೇರೆ. ವರ್ಷಗಟ್ಟಲೆ ಕಾರ್ಮಿಕರ ಹೆಸರು ಹೇಳುತ್ತಾ ಪ್ರತಿಭಟನೆಗೆ ಬೀದಿಗೆ ಬಂದು ನಿಲ್ಲುವ ಕಮ್ಯುನಿಸ್ಟ್ ಮಂದಿಯೂ ಅಧಿಕಾರದಲ್ಲಿದ್ದಾಗ ಇಂಥದ್ದೊಂದು ಆಲೋಚನೆ ಮಾಡಿರಲಿಲ್ಲ. ಕೈಯ್ಯಲ್ಲಿ ಕರಣಿ ಹಿಡಿದ ಪ್ರತಿಯೊಬ್ಬ ಕಾರ್ಮಿಕನಿಗೂ ತಾನು ಈ ಕೆಲಸ ಮಾಡುತ್ತಿರುವುದಕ್ಕೆ ಈಗ ಬೇಸರವೂ ಇಲ್ಲ, ಅವಮಾನ ಎನಿಸುವುದೂ ಇಲ್ಲ. ಏಕೆಂದರೆ ತಮ್ಮದ್ದೇ ಸಂಕುಲದ ಮಂದಿ ವಿಐಪಿಗಳಂತೆ ಗಣರಾಜ್ಯೋತ್ಸವದ ಪರೇಡ್ ನೋಡಲು ಕುಳಿತಿದ್ದಾರಲ್ಲ. ಇಂದು ಯಾರನ್ನು ಕಾರಕೂನರೆಂದು ಕರೆಯುತ್ತೇವಲ್ಲ, ಅವರು ಕಡಿಮೆ ದುಡಿಯುತ್ತಿಲ್ಲ. ನೀವು ಕೊಡುವ ಉಚಿತ ಕೊಡುಗೆ ಅವರಿಗೆ ಬೇಕೇ ಇಲ್ಲ. ಅವರ ವೃತ್ತಿಯನ್ನು ಜನ ಆಯ್ದುಕೊಳ್ಳದಿರುವುದಕ್ಕೆ ಆತ್ಮಗೌರವದ ಕೊರತೆಯ ಕಾರಣವಿದೆಯಲ್ಲ, ಅದನ್ನು ಸರಿಪಡಿಸಬೇಕಷ್ಟೇ. ಮೋದಿ ಅದನ್ನು ಮಾಡುತ್ತಿರುವುದರಿಂದಲೇ ಅವರೆಲ್ಲರಿಗೂ ಮೋದಿಯನ್ನು ಕಂಡಾಗ ದೇವರನ್ನು ಕಂಡಂತೆ ಆಗೋದು!

ಕಾಂಗ್ರೆಸ್ಸಿಗರ ಪಾಲಿಗೆ ಬಡವರು ಎಂದರೆ ದಡ್ಡರು ಎಂದರ್ಥ. ಹೀಗಾಗಿಯೇ ನೋಟ್‌ಬ್ಯಾನ್ ಮಾಡಿ ಜನರ ಕೈಗೆ ಡಿಜಿಟಲ್ ಮನಿ ಕೊಡುತ್ತೇವೆ ಎಂದು ಮೋದಿ ಹೇಳಿದಾಗ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕುಹಕ ಮಾಡಿದ್ದರು. ಈ ದೇಶದ ಹಳ್ಳಿಗನಿಗೆ ಮೊಬೈಲ್ ಬಳಸಲು ಬರುವುದಿಲ್ಲ, ಆಧುನಿಕ ತಂತ್ರಜ್ಞಾನದ ಅರಿವಿಲ್ಲ, ಅಂಥವನಿಂದ ಏನನ್ನು ನಿರೀಕ್ಷಿಸುತ್ತೀರಿ ಎಂದಿದ್ದರು. ಮೋದಿ ಅಂದಿನ ದಿನ ಏನೂ ಮಾತನಾಡಲಿಲ್ಲ. ಆದರೆ ಇಂದು ಜಗತ್ತಿನ ಹೆಚ್ಚು ಡಿಜಿಟಲ್ ವಹಿವಾಟನ್ನು ಭಾರತವೇ ನಡೆಸುತ್ತಿದೆ ಎಂಬುದು ಅರಿವಾದಾಗ ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿದೆ. ಯಾವ ಹಳ್ಳಿಯ ಜನರನ್ನು ದಡ್ಡರೆಂದು ಕರೆದು ಸುಮಾರು 65 ವರ್ಷಗಳ ಕಾಲ ಇವರು ಆಳ್ವಿಕೆ ನಡೆಸಿದ್ದರೋ ಅದೇ ಹಳ್ಳಿಗರು ಇಂದು ಭಾರತದ ಆರ್ಥಿಕತೆ ಸದೃಢಗೊಳ್ಳಲು ಬಲವಾದ ಬೆನ್ನೆಲುಬಾಗಿಬಿಟ್ಟಿದ್ದಾರೆ. ಮೋದಿ ಇಟ್ಟ ಈ ವಿಶ್ವಾಸವನ್ನು ಹಳ್ಳಿಯಲ್ಲಿರುವ ಆ ಬಡಮಂದಿ ಮರೆಯುವುದಾದರೂ ಹೇಗೆ? ಅದಕ್ಕೆ ಮೋದಿ ತಮ್ಮೂರಿನ ಬಳಿ ಬರುತ್ತಿದ್ದಾರೆಂದರೆ ಆ ಜನ ಯಾವ ಪ್ರಶ್ನೆಯನ್ನೂ ಕೇಳದೇ ಧಾವಿಸಿಬರುತ್ತಾರೆ. ಅವರಿಗೆ ಕಾರ್ಯಕ್ರಮಕ್ಕೆ ಬರಲು ದುಡ್ಡು ಬೇಕಾಗುವುದಿಲ್ಲ, ಏಕೆಂದರೆ ತಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿದ ತಮ್ಮ ಪಾಲಿನ ದೇವರನ್ನು ಅವರಲ್ಲಿ ನೋಡುತ್ತಾರೆ.

ಕಾಂಗ್ರೆಸ್ಸು ಇಷ್ಟಕ್ಕೇ ನಿಲ್ಲಲಿಲ್ಲ. ಬಡವರು ಸದಾ ತಮ್ಮ ದಾಸರಾಗಿರಬೇಕೆಂದು ಅವರು ಆಲೋಚಿಸಿದರು. ಹೀಗಾಗಿಯೇ ಒಬ್ಬ ಒಮ್ಮೆ ಅಧಿಕಾರಕ್ಕೆ ಬಂದನೆಂದರೆ ಅವನ ಮಕ್ಕಳು, ಮೊಮ್ಮಕ್ಕಳೇ ಅಲ್ಲಿ ಕುಳಿತುಕೊಂಡು ಉಳಿದವರನ್ನೆಲ್ಲ ಕಾಲಡಿ ಕಸದಂತೆ ಕಂಡರು. ಸ್ವಲ್ಪ ಎಡವಟ್ಟಾಗಿದ್ದರೆ ಬಿಜೆಪಿ ಅದೇ ದಿಕ್ಕಿಗೆ ಹೋಗಿರುತ್ತಿತ್ತು. ನರೇಂದ್ರಮೋದಿ ಸಾಧ್ಯವಾದಷ್ಟು ಬದಲಾವಣೆಗೆ ಕೈಹಾಕಿದರು. ಅನೇಕ ಕಡೆಗಳಲ್ಲಿ ಯಾರೂ ಊಹಿಸದಿದ್ದ ಕಾರ್ಯಕರ್ತರಿಗೆ ಅವಕಾಶಕೊಟ್ಟರು. ಆರೇಳು ಬಾರಿ ಗೆದ್ದು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದವರನ್ನು, ಪಕ್ಷಕ್ಕೆ ತೊಂದರೆ ಉಂಟುಮಾಡಬಹುದೆಂದು ಗೊತ್ತಿದ್ದರೂ ಮುಲಾಜಿಲ್ಲದೇ ಮನೆಗೆ ಕಳಿಸಿದರು. ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತನಾಗಿರುವುದೆಂದರೆ ಜೀವನಪರ್ಯಂತ ಪರಿವಾರದ ಗುಲಾಮನಾಗಿರುವುದೆಂದರ್ಥ. ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ದುಡಿಯುವುದೆಂದರೆ ಒಂದಲ್ಲ ಒಂದು ದಿನ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವುದೆಂದರ್ಥ. ಕಾಂಗ್ರೆಸ್ಸು ತನ್ನ ಅವಧಿಯುದ್ದಕ್ಕೂ ಹೆಚ್ಚು ‘ದೊಡ್ಡ ಮನುಷ್ಯ’ರನ್ನು ಸೃಷ್ಟಿಸಿದೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ಮಾಡಿಕೊಂಡ ದೊಡ್ಡವರು. ಇವರನ್ನು ಹತಾಶೆಯ ಕಂಗಳಿಂದ ನೋಡುತ್ತಾ ನಿಂತ ಆ ಬಡ-ಮಧ್ಯಮ ವರ್ಗದವರು ಈ ದೇಶದ ಕಥೆಯಿಷ್ಟೇ ಎಂದುಕೊಳ್ಳುತ್ತಾ ತಮ್ಮ ವ್ಯಾಪ್ತಿಯಲ್ಲಿ ಒಂದಷ್ಟು ಹಣ ಮಾಡಿಟ್ಟುಕೊಂಡು ಸುಮ್ಮನಾಗಿಬಿಡುತ್ತಿದ್ದರು. ಮೋದಿ ಮುಲಾಜಿಲ್ಲದೇ ಈ ದೊಡ್ಡವರ ಬಾಲ ಕತ್ತರಿಸಿಬಿಟ್ಟರು. ಅನೇಕರನ್ನು ಜೈಲಿಗೂ ತಳ್ಳಿದರು. ಮೊದಲೆಲ್ಲ ವಿಮಾನದಲ್ಲಿ ಈ ದೊಡ್ಡ ಮನುಷ್ಯರು ಮಾತ್ರ ತಿರುಗಾಡುತ್ತಿದ್ದರು. ಮೋದಿ ಹವಾಯಿ ಚಪ್ಪಲಿಯವರನ್ನೂ ವಿಮಾನ ಹತ್ತಿಸಿದರು. ಬಡವರ ಓಟಾಟದ ರೈಲುಗಳೆಂದರೆ ಕೊಳಕು, ಸಮಯ ಮೀರಿದ್ದು, ರೈಲ್ವೇ ನಿಲ್ದಾಣಗಳಂತೂ ಕೇಳಲೇಬೇಡಿ. ಮೋದಿ ಬಡವರು ಹೆಚ್ಚಾಗಿ ಬಳಸುವ ಈ ವ್ಯವಸ್ಥೆಯನ್ನು ಅತ್ಯುತ್ಕೃಷ್ಟ ಮಟ್ಟಕ್ಕೇರಿಸಲು ಪ್ರಯತ್ನ ಹಾಕಿದರು. ಇಂದು ಅನೇಕ ರೈಲ್ವೆ ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ರೂಪಿಸಲ್ಪಟ್ಟಿವೆ. ಅಂದರೆ ಉಚಿತವಾಗಿ ಏನೂ ಕೊಡಬೇಕಾಗಿಲ್ಲ, ಅವನ ಬದುಕಿನ ಮಟ್ಟವನ್ನು ಏರಿಸಲು ಏನು ಬೇಕೋ ಅದನ್ನು ಮಾಡಿದರಾಯ್ತು ಎಂಬುದು ಮೋದಿಯವರ ಸಿದ್ಧಾಂತ.

ಇಷ್ಟಾದರೂ ನಮಗೆ ನಮ್ಮ ಬದುಕಿನ ಮಟ್ಟ ಏರುವುದು ಬೇಕಾಗಿಲ್ಲ, ತುತ್ತು ಕೂಳಿಗೆ ಕೈಚಾಚಿಕೊಂಡು ಬದುಕುವುದೇ ಬೇಸೆನಿಸಿದರೆ ಕಾಂಗ್ರೆಸ್ಸಿಗೇ ಮತ ಹಾಕಬೇಕಷ್ಟೇ. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಸ್ವಾಭಿಮಾನಿ ಕನ್ನಡಿಗ ಎಂದೆನಿಸಿದರೆ ನಿಸ್ಸಂಶಯವಾಗಿ ಮೋದಿಯ ಹಿಂದೆ ನಿಲ್ಲಬೇಕು. ಈ ಬಾರಿ ಮೋದಿಗೆ ಬಹುಮತ ಕೊಟ್ಟುಬಿಡೋಣ. ಪ್ರತೀಬಾರಿ ನಮ್ಮ ಜಾತಿಯ ಮಂತ್ರಿ-ಮುಖ್ಯಮಂತ್ರಿ ಎಂದೆಲ್ಲ ಬಡಿದಾಡುತ್ತೇವಲ್ಲ, ಈ ಒಂದು ಬಾರಿ ನಾಡುಕಟ್ಟಿದ ಮೈಸೂರಿನ ಮಹಾರಾಜರಂತಹ ದೂರದೃಷ್ಟಿಯ ನಾಯಕನೊಬ್ಬ ಅಧಿಕಾರಕ್ಕೇರಲೆಂದು ಪ್ರಾರ್ಥಿಸೋಣ. ಒಮ್ಮೆ ಮೋದಿಯನ್ನು ನಂಬೋಣ, ರಾಜ್ಯದಲ್ಲಿ ಅವರು ಕೇಳಿಕೊಂಡಂತೆ ಬಹುಮತದ ಸರ್ಕಾರ ತರೋಣ. ಏನಂತೀರಿ?

ಬಿಜೆಪಿಯ ರಾಜ್ಯಾಧ್ಯಕ್ಷರಿಗೊಂದು ಪ್ರೀತಿಯ ಪತ್ರ!!

ಬಿಜೆಪಿಯ ರಾಜ್ಯಾಧ್ಯಕ್ಷರಿಗೊಂದು ಪ್ರೀತಿಯ ಪತ್ರ!!

ಪರಿವಾರವಾದದಿಂದ ಸ್ವಲ್ಪ ದೂರವಿರಿ, ರಾಜ್ಯದ ಜನತೆ ನಿಮ್ಮ ಪರಿವಾರವಾಗಲಿ. ಸಂತರ ಆಶೀವರ್ಾದ ಬೇಕೆ ಬೇಕು, ಹಾಗಂತ ಒಂದು ಜಾತಿಗೆ ಸೀಮಿತರಾಗಿಬಿಡಬೇಡಿ. ನಿಷ್ಠಾವಂತರ ಪಡೆ ಕಟ್ಟಿಕೊಳ್ಳಬೇಕು, ಅವರದ್ದೇ ಗುಂಪುಗಾರಿಕೆಯಾಗಿಬಿಡಬಾರದಷ್ಟೇ! ಹಿರಿಯರಿಗೆ ಗೌರವ ಕೊಡಬೇಕೆನ್ನುವ ಭರದಲ್ಲಿ ರಾಜ್ಯಕ್ಕಿಂತ ಹೆಚ್ಚಿನ ನಿಷ್ಠೆ ಅವರಿಗೆ ತೋರದಿದ್ದರಾಯ್ತು. ಮೈಮೂಳೆ ಸವೆಯುವಷ್ಟು ಓಡಾಡಿ, ಆರೋಗ್ಯದ ಕಡೆಗೆ ಗಮನಕೊಡಿ. ಪ್ರಪಂಚದ ಯಾವ ಸುಖ-ಸಂತೋಷ ಬೇಕಾದರೂ ಅನುಭವಿಸಿ ಆದರೆ ಹಿನ್ನೆಲೆಯಲ್ಲಿ ಆಧ್ಯಾತ್ಮದ ಘಮವನ್ನು ತೊರೆಯದಿರಿ. ಪ್ರಿಯವಾದ ಮಾತುಗಳನ್ನಾಡುವವರು ಬಹಳ ಆದರೆ ಕಟುವಾದರೂ ಸತ್ಯ ಹೇಳುವ ಕೆಲವರನ್ನಾದರೂ ಜೊತೆಯಲ್ಲಿರಿಸಿಕೊಳ್ಳಿ. ಹೊಗಳಿಕೆಗೆ ಉಬ್ಬಿಬಿಡಬೇಡಿ, ತೆಗಳಿದವರ ಗುರಿಯಿಟ್ಟು ಮುಗಿಸಿಬಿಡಬೇಡಿ!

bs-yeddyurappa

ಆದರಣೀಯ ಯಡಿಯೂರಪ್ಪನವರಿಗೆ,
ನಮಸ್ಕಾರಗಳು. ರಾಜ್ಯ ಬಿಜೆಪಿಯ ಚುಕ್ಕಾಣಿ ನಿಮ್ಮ ತೆಕ್ಕೆಗೆ ಬಂದಿರೋದು ಅನೇಕರಿಗೆ ಖುಷಿ ತಂದಿದೆ. ಸಹಜವೇ ಬಿಡಿ. ರಾಜ್ಯ ಸಕರ್ಾರ ತಪ್ಪುಗಳ ಮೇಲೆ ತಪ್ಪು ಮಾಡುವಾಗಲೂ ವಿರೋಧ ಪಕ್ಷ ಸತ್ತಂತೆ ಬಿದ್ದುಕೊಂಡಿತ್ತು. ದನಿಯೇರಿಸಬಲ್ಲ ಕಂಠಗಳೇ ಅಲ್ಲಿರಲಿಲ್ಲ. ಕರೆಂಟಿನ ಸಮಸ್ಯೆ, ಶಿಕ್ಷಣ ಇಲಾಖೆಯಲ್ಲಿನ ರಾದ್ಧಾಂತಗಳು, ವಾಚು-ಕಾರುಗಳ ಹಗರಣಗಳು, ಮುಖ್ಯಮಂತ್ರಿಗಳ ಪುತ್ರವ್ಯಾಮೋಹ, ಮಂತ್ರಿ ಪತ್ನಿಯ ಲಂಚ ಪ್ರಕರಣ, ಕಂಡ ಕಂಡಲ್ಲಿ ಹಿಂದೂಗಳ ಚೂರಿ ಇರಿದು ಕೊಂದ ಕೇರಳದ ಗೂಂಡಾಗಳು ಜೊತೆಗೆ ಲೋಕಾಯುಕ್ತವನ್ನೇ ನುಂಗಿಬಿಟ್ಟ ಸಕರ್ಾರ. ಯಾವ ಹೊತ್ತಲ್ಲೂ ವಿರೋಧ ಪಕ್ಷ ವಿರೋಧಿಸಲೇ ಇಲ್ಲ. ಸಿದ್ಧರಾಮಯ್ಯನ ವಿರೋಧಿಸ ಹೊರಟರೆ ಪಾಪಗಳೆಲ್ಲ ತಮ್ಮ ಕಾಲಿಗೆ ಸುತ್ತಿಕೊಳ್ಳುತ್ತವೆಂದು ಕೆಲವರು ಹೆದರಿಕೊಂಡಂತಿತ್ತು. ಇನ್ನು ಕೆಲವರು ರಾಜ್ಯಾಧ್ಯಕ್ಷರ ನೇಮಕವಾದ ಮೇಲೆ ವಿರೋಧಿಸಿದರಾಯ್ತೆಂಬಂತಿತ್ತು. ಬಹುಪಾಲು ಜನ ಸಿದ್ಧರಾಮಯ್ಯನ ತಪ್ಪುಗಳಿಂದಲೇ ನಾವು ಚುನಾವಣೆ ಗೆದ್ದು ಗದ್ದುಗೆ ಹಿಡಿಯಬಹುದೆಂಬ ಕನಸು ಕಾಣುತ್ತಿದ್ದರು. ಇದೊಂಥರಾ ಪಟ್ಟದರಸಿ ಸತ್ತರೆ ತಾನೇ ಒಡತಿ ಎಂದು ಕನಸು ಕಾಣುವ ಬೆಲೆವೆಣ್ಣಿನಂತೆ!
ಸಾಮಾನ್ಯ ಜನರೇ ಬೀದಿಗಿಳಿದು ಹೋರಾಟ ಆರಂಭಿಸಿಬಿಟ್ಟಿದ್ದರು. 108ರ ವಾಹನ ಸಿಬ್ಬಂದಿವರ್ಗ ತಿಂಗಳುಗಟ್ಟಲೆ ಪ್ರತಿಭಟನೆ ಕೂತರು; ಉಪನ್ಯಾಸಕರು ಬೇಡಿಕೆ ಈಡೇರಿಕೆ ಆಗ್ರಹಿಸಿ ಬೀದಿಗೆ ಬಂದರು. ಊಹೂಂ. ವಿರೋಧ ಪಕ್ಷ ನೇತೃತ್ವ ವಹಿಸಲೇ ಇಲ್ಲ. ಎಲ್ಲರೂ ಮುಂದಿನ ಮುಖ್ಯಮಂತ್ರಿ ಗಾದಿಗೆ ಕಣ್ಣಿಟ್ಟು ಕುಳಿತರೆ ಹೊರತು ಸದ್ಯದ ಜನರ ನೋವುಗಳಿಗೆ ಸ್ಪಂದಿಸಲೇ ಇಲ್ಲ.
ಆಗಲೇ ನಿಮ್ಮ ಮೇಲಿನ ಒಲವು ಜನತೆಗೆ ತೀವ್ರವಾಗಿದ್ದು. ನೀವು ಮುಂದೆ ನಿಂತಿದ್ದರೆ ಈ ಗತಿ ಜನತೆಗೆ ಬರುತ್ತಿರಲಿಲ್ಲವೆಂದು ಊರೂರಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದರು. ಹುಬ್ಬಳ್ಳಿಗೆ ಸೀಮಿತರಾಗುವ ಸಾಮಥ್ರ್ಯ ಇರಬಹುದಾದವರು ರಾಜ್ಯದ ಚುಕ್ಕಾಣಿ ಬಿಟ್ಟರೆ ಸಾಕಿತ್ತು; ಕೇಂದ್ರ ಬಿಜೆಪಿ ನಿಮ್ಮನ್ನು ಹೆಸರಿಸಿತು. ವಾವ್! ಇದು ನಿಮಗೆ ಸಿಕ್ಕ ಗೌರವವೇ ಸರಿ. ಇಲ್ಲಿನ ಯಾರೊಬ್ಬರನ್ನೂ ಮಾತನಾಡಿಸದೇ, ಸಂಘದ ಮಜರ್ಿ-ಮುಲಾಜಿಗೆ ಒಳಗಾಗದೇ ಮೋದಿ-ಅಮಿತ್ ಷಾಹ್ ಜೋಡಿ ನಿಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿಸಿದ್ದು ಸಾಮಾನ್ಯ ಸಂಗತಿಯಲ್ಲ. ಅದು ಹೆಮ್ಮೆ ಪಡಬೇಕಾದ ಸಂಗತಿಯೇ. ಅದರೊಟ್ಟಿಗೆ ವಿಶ್ವಾಸದ ಜವಾಬ್ದಾರಿಗಳು ನಿಮ್ಮ ಹೆಗಲೇರಿವೆ ಎಂಬುದನ್ನು ಮರೆಯದಿರಿ.
ನಿಮ್ಮ ಬೆನ್ನಿಗೆ ಮೆತ್ತಿಕೊಂಡ ಹಳೆಯ ಮಸಿಗಳು ಒಂದಷ್ಟಿವೆ. ನೀವೆಷ್ಟೇ ಅಲ್ಲಗಳೆದರೂ ಅದನ್ನು ಸಲೀಸಾಗಿ ತೊಳೆಯುವುದು ಬಲು ಕಷ್ಟ. ಹಳೆಯದನ್ನು ಸರಿಪಡಿಸಿಕೊಳ್ಳುವ ಮಾರ್ಗವೆಂದರೆ ಮುಂದಿನ ದಾರಿಯನ್ನು ಎಚ್ಚರಿಕೆಯಿಂದ ಇಡೋದು. ನನಗೆ ಗೊತ್ತು. ರಾಜ್ಯಾಧ್ಯಕ್ಷರಾದೊಡನೆ ನಿಮ್ಮ ಸುತ್ತಮುತ್ತ ಅದೇ ಹಳೆಯ ಮುಖಗಳು ಬಂದು ಸೇರಿಕೊಂಡಿವೆ. ಅವರು ನಿಮ್ಮನ್ನು ಹೊಗಳುವ ಮತ್ತು ಎದುರಾಳಿಗಳನ್ನು ತೆಗಳುವ ತಮ್ಮ ಹಳೆಯ ಚಾಳಿ ಮುಂದುವರಿಸಿಯೇ ಇರುತ್ತಾರೆ. ಈ ಬಾರಿ ಏನಾದರೂ ನೀವು ಈ ಮಾತುಗಳಿಗೆ ಕಿವಿ ತೆರೆದಿಟ್ಟುಕೊಂಡು ದಾರಿ ತಪ್ಪಿದಿರೋ ಕತೆ ಮುಗಿದಂತೆಯೇ. ಅದಾಗಲೇ ನಿಮ್ಮ ರಾಜ್ಯಾಧ್ಯಕ್ಷ ಪಟ್ಟಕ್ಕೆ ಅಭಿನಂದನೆ ಕೋರಿ ಊರತುಂಬಾ ಹಾಕಿರುವ ಬ್ಯಾನರುಗಳಲ್ಲಿನ ಮುಖಗಳನ್ನು ನೋಡಿ ಹಾಗೆ ಹೇಳಬೇಕೆನ್ನಿಸಿತು ಅಷ್ಟೇ.
ನಿಮ್ಮ ಶಕ್ತಿ ಇರುವುದು ನಿಮ್ಮ ಕೆಲಸದ ಶೈಲಿಯಲ್ಲಿ, ನಿಮ್ಮ ಹೋರಾಟದ ಮನೋಭಾವದಲ್ಲಿ. ಬಹುಶಃ ಈ ವಿಚಾರಗಳಲ್ಲಿ ನಿಮಗೆ ಸರಿಸಾಟಿಯಾಗಬಲ್ಲ ಮತ್ತೊಬ್ಬ ನಾಯಕರು ರಾಜ್ಯ ಬಿಜೆಪಿಯಲ್ಲಿಲ್ಲ. ಆದರೆ ಇದೇ ವೇಳೆಗೆ ನಿಮ್ಮ ಶಕ್ತಿ ಕಳೆದು ಹೋಗುವುದು ಅನವಶ್ಯಕ ಮಾತುಗಳಲ್ಲಿ. ಕಳೆದ ಬಾರಿ ನಿಮ್ಮ ಸಕರ್ಾರ ಉರುಳಲು ಮುಖ್ಯ ಕಾರಣವೇ ಈ ಅನವಶ್ಯಕ ಮಾತುಗಳ ಜಟಾಪಟಿ. ಅದರಲ್ಲೂ ಸ್ವಂತ ಪಾಟರ್ಿಯವರ ಮೇಲೆಯೇ ನೀವು-ನಿಮ್ಮ ತಂಡ ಆಡಿದ ಮಾತುಗಳು ಅದಕ್ಕೆ ಪ್ರತಿಯಾಗಿ ಅವರು ಕೊಟ್ಟ ಉತ್ತರ ಜನರಿಗೆ ಮೊದಮೊದಲು ಮನರಂಜನೆಯಾಯ್ತು; ಆಮೇಲೆ ಕಿರಿಕಿರಿಯಾಯ್ತು, ಅಸಹ್ಯವಾಯ್ತು! ಸ್ವಲ್ಪ ಅತ್ತ ಗಮನ ಇಡಿ. ಆಡುವ ಒಂದು ಮಾತು ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಎಂತಹ ರಾದ್ಧಾಂತ ಬೇಕಿದ್ದರೂ ಸೃಷ್ಟಿಸಬಹುದು. ಎಚ್ಚರವಿರಲಿ.
ಕಾಂಗ್ರೆಸ್ಸು ಸಾಮಾನ್ಯ ಪಕ್ಷವಲ್ಲ. ಅದು ಸ್ವಾತಂತ್ರ್ಯ ಬಂದಾಗಿನಿಂದಲೂ ಈ ದೇಶದ ಜನರನ್ನು ಕಂಡಿದೆ. ಅವರನ್ನು ಬೆರಳ ತುದಿಯಲ್ಲಿ ಆಡಿಸುವುದು ಗೊತ್ತು ಅದಕ್ಕೆ. ಅಂತಹ ಕಾಂಗ್ರೆಸ್ಸನ್ನು ತನ್ನಿಚ್ಛೆಗೆ ತಕ್ಕಂತೆ ಆಡಿಸುತ್ತಿರುವ ಈಗಿನ ಮುಖ್ಯಮಂತ್ರಿಯೂ ಸಾಮಾನ್ಯರಲ್ಲ. ಅವರ ತಂತ್ರ ಶಕ್ತಿಗೆ ನಿಮ್ಮ ಇಚ್ಛಾಶಕ್ತಿಯೊಂದೇ ಪ್ರಬಲ ಗೋಡೆಯಾಗಿ ನಿಲ್ಲಬಲ್ಲದೆಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ. ಅದಕ್ಕೇ ನಿಮಗೆ ಪಟ್ಟ ಕಟ್ಟಿದೊಡನೆ ಕಾಂಗ್ರೆಸ್ಸಿನ ಪಾಳಯದಲ್ಲಿ ಉತ್ಪಾತವೇ ಆಗಿದೆ. ಆಳುವ ಸಕರ್ಾರ ಈ ಬರಗಾಲದ ಹೊತ್ತಲ್ಲಿ ರಾಜ್ಯವನ್ನು ಮರೆತು ದೆಹಲಿಯ ಮಟ್ಟದ ರಾಜಕಾರಣದಲ್ಲಿ ಕಾಲ ತಳ್ಳುತ್ತಿದೆ. ಇಲ್ಲಿಯೇ ಇದ್ದ ಪ್ರತ್ಯೇಕತಾವಾದಿಗಳಿಗೆ ನೀವು ಸಾಕಷ್ಟು ಬಲ ತಂದುಕೊಟ್ಟಿದ್ದೀರಿ. ಕೇಂದ್ರದಲ್ಲಿ ತಮ್ಮ ಸಕರ್ಾರ ಇಲ್ಲದಿರುವುದರಿಂದ ಹಳೆಯ ಆರೋಪಗಳಿಗೆ ನಿಮ್ಮನ್ನು ಸಿಕ್ಕಿಸಿ ಹಾಕುವುದೂ ಅವರಿಗೀಗ ಕಷ್ಟ. ಹಾಗಂತ ಸುಮ್ಮನೆ ಬಿಟ್ಟರೆ ನೀವು ತಿರುಗಾಡುತ್ತಿರುವ ವೇಗಕ್ಕೇ ಸಕರ್ಾರ ಉರುಳಿಬಿಡುತ್ತದೆ. ಅಷ್ಟರೊಳಗೆ ಮತ್ತೊಬ್ಬ ಮುಖ್ಯಮಂತ್ರಿಯನ್ನು ತರುವ ಸಾಧ್ಯತೆ ಇದೆಯಾ? ಕಾಂಗ್ರೆಸ್ಸು ಅಂತಹ ಮೂರ್ಖ ಕೆಲಸ ಮಾಡಲಾರದು. ಹಾಗಂತ ಸುಮ್ಮನೆ ಕೂರುವುದೂ ಇಲ್ಲ. ನಿಮ್ಮ ನಡೆಯನ್ನು ನಿರ್ಬಂಧಿಸುವ ಸಾಹಸವನ್ನು ಮಾಡೀತು. ಇತ್ತ ಅದಕ್ಕೆ ಬೆಂಬಲ ಕೊಡಲು ನಿಮ್ಮದೇ ಸುತ್ತಮುತ್ತ ನಿಮ್ಮದೇ ಒಂದಷ್ಟು ಜನ ಕಾಯುತ್ತ ಕುಳಿತಿದ್ದಾರೆ. ಪ್ರತಿ ಹೆಜ್ಜೆ ಎಚ್ಚರದಿಂದಿಡಿ.
ಏಕೆ ಗೊತ್ತಾ? ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಇಷ್ಟು ಬೇಗ ನಿಮ್ಮನ್ನು ಈ ಗಾದಿಗೆ ಕೂರಿಸಿರುವುದರಲ್ಲಿ ಎಷ್ಟು ಲಾಭವಿದೆಯೋ, ಸ್ವಲ್ಪ ಎಡವಟ್ಟಾದರೇ ಅಷ್ಟೇ ನಷ್ಟವೂ ಸಂಭವಿಸುವ ಸಾಧ್ಯತೆ ಇದೆ. ಕೇರಂ ಬೋಡರ್ಿನಲ್ಲಿ ರಾಣಿಯನ್ನು ಮೊದಲೇ ಕಳಕೊಂಡರೆ ಆಮೇಲಿನ ಆಟ ಎಷ್ಟು ನೀರಸವೋ ಹಾಗಾಗುವ ಸಾಧ್ಯತೆಗಳೂ ಇಲ್ಲದಿಲ್ಲ.

yeddyurappa - PTI_0
ದೇಶದ ಪ್ರಧಾನ ಮಂತ್ರಿ ಹಠಕ್ಕೆ ಬಿದ್ದವರಂತೆ ರಾಷ್ಟ್ರ ನಿಮರ್ಾಣದ ಕೈಂಕರ್ಯ ಮಾಡುತ್ತಿದ್ದಾರೆ. ದಿನದ ಹದಿನೆಂಟು ತಾಸು ಕೆಲಸ ಮಾಡುತ್ತ ಒಳಗಿನ ಎದುರಾಳಿಗಳನ್ನು ಸಂಭಾಳಿಸುತ್ತಾ, ಹೊರಗಿನ ಎದುರಳಿಗಳನ್ನು ಆಟ ಆಡಿಸುತ್ತಾ ಸಾಹಸದ ನಡೆ ನಡೆಯುತ್ತಿರುವ ಪರಿ ಇದೆಯಲ್ಲಾ ರೋಮಾಂಚನಕಾರಿಯಾದುದು. ಅವರು ಪ್ರಧಾನಿಯಾಗಿ ಸಂಸತ್ತು ಪ್ರವೇಶಿಸಿದ ದಿನ ನೀವು ಭಾವುಕರಾಗಿ ‘ನನಗೆ ಯಾವ ಪದವಿಯೂ ಬೇಡ, ರಾಷ್ಟ್ರದ ಸೇವೆಗೈಯ್ಯುವ ಅವಕಾಶವಷ್ಟೇ ಸಾಕು’ ಎಂಬರ್ಥದ ಪತ್ರ ಬರೆದಿದ್ದು ಇನ್ನೂ ಹಸಿರಾಗಿಯೇ ಇದೆ. ಆ ಮಾತುಗಳನ್ನು ಸ್ಮೃತಿಯಿಂದ ಆರಲು ಬಿಡಬೇಡಿ. ದೇಶಕ್ಕೆ ಸಮರ್ಥ ನಾಯಕ ಸಿಕ್ಕಂತೆ ರಾಜ್ಯಕ್ಕೂ ಒಳ್ಳೆಯ ನಾಯಕನೊಬ್ಬನ ನಿರೀಕ್ಷೆ ಎಲ್ಲರಿಗೂ ಇದ್ದೇ ಇದೆ. ನೀವೀಗ ಅದನ್ನೇ ಗುರಿಯಾಗಿಸಿಕೊಂಡು ಹೆಜ್ಜೆ ಇಡಬೇಕು.
ಪರಿವಾರವಾದದಿಂದ ಸ್ವಲ್ಪ ದೂರವಿರಿ, ರಾಜ್ಯದ ಜನತೆ ನಿಮ್ಮ ಪರಿವಾರವಾಗಲಿ. ಸಂತರ ಆಶೀವರ್ಾದ ಬೇಕೆ ಬೇಕು, ಹಾಗಂತ ಒಂದು ಜಾತಿಗೆ ಸೀಮಿತರಾಗಿಬಿಡಬೇಡಿ. ನಿಷ್ಠಾವಂತರ ಪಡೆ ಕಟ್ಟಿಕೊಳ್ಳಬೇಕು, ಅವರದ್ದೇ ಗುಂಪುಗಾರಿಕೆಯಾಗಿಬಿಡಬಾರದಷ್ಟೇ! ಹಿರಿಯರಿಗೆ ಗೌರವ ಕೊಡಬೇಕೆನ್ನುವ ಭರದಲ್ಲಿ ರಾಜ್ಯಕ್ಕಿಂತ ಹೆಚ್ಚಿನ ನಿಷ್ಠೆ ಅವರಿಗೆ ತೋರದಿದ್ದರಾಯ್ತು. ಮೈಮೂಳೆ ಸವೆಯುವಷ್ಟು ಓಡಾಡಿ, ಆರೋಗ್ಯದ ಕಡೆಗೆ ಗಮನಕೊಡಿ. ಪ್ರಪಂಚದ ಯಾವ ಸುಖ-ಸಂತೋಷ ಬೇಕಾದರೂ ಅನುಭವಿಸಿ ಆದರೆ ಹಿನ್ನೆಲೆಯಲ್ಲಿ ಆಧ್ಯಾತ್ಮದ ಘಮವನ್ನು ತೊರೆಯದಿರಿ. ಪ್ರಿಯವಾದ ಮಾತುಗಳನ್ನಾಡುವವರು ಬಹಳ ಆದರೆ ಕಟುವಾದರೂ ಸತ್ಯ ಹೇಳುವ ಕೆಲವರನ್ನಾದರೂ ಜೊತೆಯಲ್ಲಿರಿಸಿಕೊಳ್ಳಿ. ಹೊಗಳಿಕೆಗೆ ಉಬ್ಬಿಬಿಡಬೇಡಿ, ತೆಗಳಿದವರ ಗುರಿಯಿಟ್ಟು ಮುಗಿಸಿಬಿಡಬೇಡಿ!
ಸಂಪಾದಿಸಬೇಕಾದಷ್ಟೂ ನಿಮ್ಮ ಪದತಲದಲ್ಲಿದೆ. ಇನ್ನೇನಿದ್ದರೂ ಕೀತರ್ಿವಂತರಾಗುವತ್ತ ದಾಪುಗಾಲಿಡಿ. ಬಹಳ ಕಷ್ಟವೆನಿಸಿದರೂ ರಾಜಕಾರಣದಲ್ಲಿ ಮೋದಿಯವರ ಹೆಜ್ಜೆಯನ್ನು ತುಳಿಯಲೆತ್ನಿಸಿ.
ನಾನು ತುಂಬಾ ಚಿಕ್ಕವನು. ರಾಜಕೀಯದ ಎಬಿಸಿಡಿ ನನಗೆ ಗೊತ್ತಿಲ್ಲ; ಗೊತ್ತಾಗಿಸಿಕೊಳ್ಳುವ ಬಯಕೆಯೂ ಇಲ್ಲ. ಆದರೆ ನಿಮ್ಮ ಹತ್ತಿರದವರ್ಯಾರೂ ನಿಮ್ಮೊಂದಿಗೆ ಹೀಗೆ ಮಾತನಾಡಲು ನಿರಾಕರಿಸಿದರೆಂದೇ ಈ ಪತ್ರ ನಿಮಗೆ ಬರೆಯುತ್ತಿರೋದು ನಿಮ್ಮಿಂದ ರಾಜ್ಯಕ್ಕೆ, ದೇಶಕ್ಕೆ ಮಹತ್ವವಾದ ಕೊಡುಗೆ ದಕ್ಕಬೇಕಿದೆ. ಆ ಆಸೆಯಿಂದಲೇ ಈ ಮಾತುಗಳನ್ನು ಹೇಳುತ್ತಿರೋದು.
ನಿಮ್ಮ ಸುಂದರ ಭವಿಷ್ಯದಲ್ಲಿ ರಾಜ್ಯದ ನೆಮ್ಮದಿಯೂ ಅಡಗಿದೆ ಎಂದು ಭಾವಿಸಿ ಶುಭ ಹಾರೈಸುತ್ತೇನೆ.
ಶುಭಾಕಾಂಕ್ಷೆಗಳು!