ಟ್ಯಾಗ್: ಭಯೋತ್ಪಾದನೆ

ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!

ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!

ಪಾಕಿಸ್ತಾನಕ್ಕೆ ಜೈಕಾರದ ಘೋಷಣೆಗಳು ರಾಜ್ಯದೆಲ್ಲೆಡೆ ಮೊಳಗುತ್ತಿವೆ. ಕಾಂಗ್ರೆಸ್ಸಿನ ಗೆಲುವಿನ ಹಿನ್ನೆಲೆಯಲ್ಲಿ ಈ ಘೋಷಣೆಗಳು ಎನ್ನುವುದು ನಿಜವಾದರೂ ಒಂದಷ್ಟು ಮುಸಲ್ಮಾನರ ಮಾನಸಿಕ ಸ್ಥಿತಿ ಬಹಳ ಕಾಲದಿಂದಲೂ ಹೀಗೆಯೇ ಇದೆ ಎನ್ನುವುದು ತಿಳಿಯದ ಸಂಗತಿ ಏನಲ್ಲ. ಎಡಪಂಥೀಯ ಬುದ್ಧಿಜೀವಿಗಳು, ಮುಸಲ್ಮಾನ ಪರ ಕೆಲವು ಹಿಂದೂ ಸಂಘಟನೆಗಳು ಮತ್ತು ಸ್ವತಃ ಮುಸಲ್ಮಾನರೊಂದಷ್ಟು ಜನ ಈ ಚಿಂತನೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಆದರೆ ಅವರಿಗೆ ಸದ್ಯದ ಪಾಕಿಸ್ತಾನದ ಪರಿಸ್ಥಿತಿ ಎಂಥದ್ದಿದೆ ಎಂಬುದರ ಅರಿವು ಇರಲಿಕ್ಕಿಲ್ಲ. ಅಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಜನ ಮತ್ತು ಸೇನೆಯ ನಡುವೆ ಕಾದಾಟ ಶುರುವಾಗಿದೆ. ಯಾವ ಸೇನೆಯ ವಿಶ್ವಾಸದಿಂದಲೇ ಭಾರತವನ್ನು ಎದುರಿಸುತ್ತೇವೆಂದು ಪಾಕಿಸ್ತಾನಿಗಳು ಹೇಳುತ್ತಿದ್ದರೋ ಇಂದು ಅದೇ ಸೇನೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಘರ್ಷಣೆ ಎಲ್ಲಿಗೆ ಹೋಗಿ ನಿಲ್ಲುವುದೋ ತಿಳಿದಿಲ್ಲ ನಿಜ. ಆದರೆ ಪಾಕಿಸ್ತಾನವೇ ಚೂರು-ಚೂರಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ. 1971ರಲ್ಲಿ ಪಾಕಿಸ್ತಾನವನ್ನು ಎರಡು ತುಂಡು ಮಾಡಿ ಬಿಸಾಡಿದ ಇಂದಿರಾಗೆ ಸಿಕ್ಕ ಗೌರವದ ನೂರ್ಪಟ್ಟು ಪಾಕಿಸ್ತಾನವನ್ನು ನಾಲ್ಕು ಚೂರು ಮಾಡುವ ಮೋದಿಗೆ ಸಿಕ್ಕರೂ ಸಿಗಬಹುದು. ಪಾಕಿಸ್ತಾನವೇ ಬಲೂಚಿಸ್ತಾನ, ಸಿಂಧ್, ಪಂಜಾಬು, ಕಾಶ್ಮೀರವೆಂದು ನಾಲ್ಕು ಭಾಗಗಳಾಗಿ ವಿಭಜನೆಗೊಂಡರೆ ಇವರು ಜೈಕಾರ ಹಾಕುವ ಪಾಕಿಸ್ತಾನಕ್ಕೆ ಅಸ್ತಿತ್ವವೇ ಇರುವುದಿಲ್ಲ. ಮುಸಲ್ಮಾನರನ್ನು ಈ ದಿಕ್ಕಿನಲ್ಲಿ ಭಡಕಾಯಿಸಿ ಅವರಿಂದ ಜೈಕಾರ ಹೇಳಿಸುವ ಮಂದಿ, ನಾಳೆಯ ದಿನ ಅಸ್ತಿತ್ವವೇ ಇಲ್ಲದ ಪಾಕಿಸ್ತಾನದ ಕಾರಣಕ್ಕೆ ಇವರೆಲ್ಲ ಅತಂತ್ರರಾಗುವುದನ್ನು ನೋಡಿ ನಗಲಿರುವುದಂತೂ ಸತ್ಯ.

ಪಾಕಿಸ್ತಾನದ ದುರಂತ ಪರ್ವ ಆರಂಭವಾಗಿದ್ದು ಮೋದಿಯ ಆಗಮನದ ನಂತರವೇ. ಅಲ್ಲಿಯವರೆಗೂ ಭಾರತದಲ್ಲಿ ಎಲ್ಲೆಂದರಲ್ಲಿ ಬಾಂಬ್ ಸ್ಫೋಟಗಳನ್ನು ಮಾಡಿಸುತ್ತಿದ್ದ ಪಾಕಿಸ್ತಾನ ಏಕಾಕಿ ದಿಗ್ಬಂಧನಕ್ಕೆ ಒಳಗಾಯ್ತು. ಭಾರತೀಯ ಬೇಹುಗಾರಿಕೆ ಎಷ್ಟು ಚುರುಕಾಯ್ತೆಂದರೆ ಕಾಶ್ಮೀರದಲ್ಲಿ ಕಂಡ-ಕಂಡಲ್ಲಿ ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಯ್ತು. ಭಯೋತ್ಪಾದನಾ ಕೃತ್ಯಕ್ಕೆ ತಮ್ಮ ತಾವು ಸಮರ್ಪಿಸಿಕೊಂಡ ಬುರ್ಹನ್ ವನಿಯಂಥವರನ್ನು ಹುಚ್ಚು ನಾಯಿಗಿಂತಲೂ ಕಡೆಯಾಗಿ ಕೊಲ್ಲಲಾಯ್ತು. ಅವನ ಶವವನ್ನು ಮನೆಯವರಿಗೆ ಕೊಟ್ಟು ಶವಯಾತ್ರೆಗೆಂದು ಬಂದಿದ್ದ ಮತ್ತಷ್ಟು ಭಯೋತ್ಪಾದಕ ನಾಯಕರನ್ನು ಹಿಂಬಾಲಿಸಿಕೊಂಡು ಹೋಗಿ ಕಾಶ್ಮೀರದ ಕೊಳ್ಳವನ್ನು ಇವರಿಂದ ಮುಕ್ತಗೊಳಿಸಲಾಯ್ತು. ಅತ್ತ ಬುರ್ಹನ್‌ವನಿಯ ಸಾವನ್ನು ಕಂಡು ಬೆದರಿದ ಹೊಸ ಪೀಳಿಗೆಯ ತರುಣರು ಭಯೋತ್ಪಾದನೆಯಿಂದ ದೂರ ಉಳಿಯಲು ನಿಶ್ಚಯಿಸಿದರು. ಪಾಕೀ ಸೇನೆಗೆ ಸಿಗಬಹುದಾಗಿದ್ದ ಕಚ್ಚಾ ವಸ್ತುಗಳೇ ಇಲ್ಲವಾಗಿ ಹೋದಮೇಲೆ ಸಂಕಟ ಎರಗಿದ್ದಂತೂ ನಿಜ. ನಿಧಾನವಾಗಿ ಕಾಶ್ಮೀರ ಶಾಂತವಾಯ್ತು, ದೇಶವೂ ಕೂಡ.

ಅತ್ತ ಪಾಕಿಸ್ತಾನದಲ್ಲಿ ನಿಧಾನವಾಗಿ ಅಸಹನೆ ಆರಂಭವಾಯ್ತು. ಭಾರತವನ್ನು ಅಶಾಂತವಾಗಿರಸಲೆಂದೇ ವಿದೇಶೀ ಹೂಡಿಕೆಯನ್ನು ಪಡೆಯುತ್ತಿದ್ದ ಪಾಕಿಸ್ತಾನಕ್ಕೆ ಈಗ ಬಲುದೊಡ್ಡ ಸಂಕಟ. ನೋಡ-ನೋಡುತ್ತಲೇ ಅವರ ವಿದೇಶೀ ವಿನಿಮಯ ಬರಿದಾಗುತ್ತಾ ಹೋಯ್ತು. ಮೋದಿ ಸರ್ಕಾರದ ನಿರಂತರ ಪ್ರಯಾಸದಿಂದಾಗಿ ಐಎಮ್ಎಫ್, ವಿಶ್ವಬ್ಯಾಂಕುಗಳು ಸಾಲ ಕೊಡುವುದನ್ನು ನಿಲ್ಲಿಸಿದವು. ಈ ಹೊತ್ತಿನಲ್ಲಿಯೇ ಭುಟ್ಟೋ ಮತ್ತು ಶರೀಫ್ ಕುಟುಂಬಗಳ ರಾಜಕಾರಣದಿಂದ ಬೇಸತ್ತಿದ್ದ ಸೇನೆಗೆ ಇವರಿಬ್ಬರನ್ನು ಬಿಟ್ಟು ಹೊಸಮುಖವೊಂದನ್ನು ಪಟ್ಟಕ್ಕೆ ಕೂರಿಸುವ ಆತುರವಿತ್ತು. ಆಗ ಕಣ್ಮುಂದೆ ಬಂದವನು ಇಮ್ರಾನ್ ಖಾನ್. ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್ ಪಕ್ಷವನ್ನು ಕಟ್ಟಿಕೊಂಡು ಓಡಾಟ ನಡೆಸುತ್ತಿದ್ದ ಆತ ಪರಿವಾರ ರಾಜಕಾರಣಕ್ಕೆ ಸಡ್ಡು ಹೊಡೆಯುವುದಾಗಿ ಸೇನೆಗೆ ಭರವಸೆ ಕೊಟ್ಟು ಮುನ್ನುಗ್ಗಿದ. 2018ರಲ್ಲಿ ಚುನಾವಣೆ ನಡೆದಾಗ ಇಮ್ರಾನ್ ಖಾನನಿಗೆ ಎಲ್ಲ ಬಗೆಯ ಸಹಕಾರವನ್ನು ಕೊಟ್ಟಿದ್ದು ಸೇನೆಯೇ. ಆತ ಚುನಾವಣೆಯನ್ನು ಗೆದ್ದು ಅಲ್ಪ ಬಹುಮತದೊಂದಿಗೆ ಪಾಕಿಸ್ತಾನದ ಚುಕ್ಕಾಣಿ ಹಿಡಿದುಬಿಟ್ಟ. ಆಗ ಸೇನೆಯ ಮುಖ್ಯಸ್ಥ ಕಾಶ್ಮೀರದ ವಿಚಾರದಲ್ಲಿ ವಿಶೇಷವಾದ ಪರಿಣಿತಿ ಹೊಂದಿದ್ದ ಜನರಲ್ ಕಮರ್ ಬಾಜ್ವಾ. ಇವರೀರ್ವರ ಸಂಬಂಧ ಎಷ್ಟು ಬಲವಾಗಿತ್ತೆಂದರೆ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಇಮ್ರಾನ್ ‘ನಾನು ಗೆಳೆತನವಿಟ್ಟುಕೊಂಡಿರೋದು ಪಾಕಿಸ್ತಾನೀ ಸೇನೆಯೊಂದಿಗೆ, ಶತ್ರು ಸೇನೆಯೊಂದಿಗಲ್ಲ. ನಾವು ಜೊತೆಗೂಡಿಯೇ ನಡೆಯುತ್ತೇವೆ’ ಎಂದಿದ್ದ. ಪಾಕಿಸ್ತಾನದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಬಾಜ್ವಾನೇ ಕಾರಣ ಎಂದು ಹೇಳುವುದಕ್ಕೆ ಆತ ಹಿಂಜರಿಯಲಿಲ್ಲ. ಅಧಿಕಾರ ಪಡೆದೊಡನೆ ಒಂದೇ ಪುಸ್ತಕದ ಒಂದೇ ಪುಟದಲ್ಲಿ ನಾವಿಬ್ಬರೂ ಇದ್ದೇವೆ ಎಂದೂ ತನ್ನ ಚಟುವಟಿಕೆಗಳನ್ನು ಸಮರ್ಥಿಸಿಕೊಂಡಿದ್ದ. 2020ರಲ್ಲಿ ಅಲ್‌ಜಝೀರಾದೊಂದಿಗೆ ಮಾತನಾಡುತ್ತಾ ಸೇನೆ ಮತ್ತು ಸರ್ಕಾರದ ಸಂಬಂಧಗಳು ಬಲು ಸೌಹಾರ್ದಯುತವಾಗಿದೆ ಎಂದಿದ್ದ. ಸೇನೆಯೂ ಈತನ ಕಾಲದಲ್ಲಿ ಎಲ್ಲ ಅಧಿಕಾರವನ್ನು ಮುಕ್ತವಾಗಿ ಅನುಭವಿಸಿತು. ಅನೇಕ ಸರ್ಕಾರಿ ನಿರ್ಣಯಗಳಲ್ಲೂ ಅವರು ಮೂಗು ತೂರಿಸುತ್ತಿದ್ದುದು ಸಾಮಾನ್ಯವಾಗಿತ್ತು. ಇದರ ಹಿಂದೆ ಬಿದ್ದ ಇಮ್ರಾನ್ ಆಡಳಿತವನ್ನು ಕಡೆಗಣಿಸಿದ. ಪರಿಣಾಮ ಕೊವಿಡ್‌ನ ಸಂದರ್ಭದಲ್ಲಿ ಜನ ಹಾಹಾಕರ ಪಡುವಂತಾಯ್ತು. ಪಾಕಿಸ್ತಾನದ ಆರ್ಥಿಕ ಸ್ಥಿತಿಯೂ ಹದಗೆಟ್ಟು ಅದನ್ನು ಹಳಿಗೆ ತರುವಲ್ಲಿ ಇಮ್ರಾನ್ ಸೋತುಹೋದ. ಜನರ ಅರಚಾಟ ಆರಂಭವಾಯ್ತು. ಇಮ್ರಾನನ ಮೇಲಿದ್ದ ಆಕ್ರೋಶವೆಲ್ಲ ಸ್ವಲ್ಪಮಟ್ಟಿಗೆ ಸೇನೆಯತ್ತಲೂ ತಿರುಗಿತು. ಪದವಿಯಲ್ಲಿ ಬೇರೆ-ಬೇರೆಯವರನ್ನು ತಾನೇ ಕೂರಿಸಿ ಹಿಂದಿನಿಂದ ಅಧಿಕಾರ ನಡೆಸುವ ಪಾಕೀ ಸೇನೆ ಎಂದೂ ಜನರ ಬೈಗುಳವನ್ನು ತಿಂದಿರಲಿಲ್ಲ. ಅದಕ್ಕೆ ಎದುರಿಗೆ ಅಧ್ಯಕ್ಷನೋ ಪ್ರಧಾನಿಯೋ ಇರುತ್ತಿದ್ದ. ಇಮ್ರಾನ್ ಥೇಟು ಕೇಜ್ರಿವಾಲನಂತೆ. ಎಷ್ಟು ಬೇಕಾದರೂ ನಾಟಕಗಳನ್ನು ಮಾಡಬಲ್ಲ, ಯಾರ ಮೇಲಾದರೂ ಗೂಬೆ ಕೂರಿಸಬಲ್ಲ, ಒಟ್ಟಿನಲ್ಲಿ ತಾನು ಗೆಲ್ಲಬೇಕಷ್ಟೇ! ಹೀಗಾಗಿಯೇ ಆತನ ಮೇಲಿದ್ದ ಆಕ್ರೋಶವೆಲ್ಲ ಸೇನೆಯ ವಿರುದ್ಧ ತಿರುಗಿತು. ತಡಮಾಡದೇ ಸೇನೆ ಇಮ್ರಾನನೊಂದಿಗಿದ್ದ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟು ಕುಂಡಿ ಝಾಡಿಸಿಕೊಂಡು ಎದ್ದುಬಿಟ್ಟಿತು. ಅಲ್ಲಿಗೆ ಇಮ್ರಾನ್ ಮತ್ತು ಸೇನೆ ಯುದ್ಧಕ್ಕೆ ನಿಂತರು. ಈ ವೇಳೆಗೆ ಜನರಲ್ ಬಾಜ್ವಾ ನಂತರ ಫೈಜ್ ಹಮೀದ್‌ನನ್ನು ಆ ಸ್ಥಾನಕ್ಕೆ ತರಬೇಕೆಂದು ಇಮ್ರಾನ್ ನಿಶ್ಚಯಿಸಿಕೊಂಡಿದ್ದ. ಅದಕ್ಕಾಗಿ ಆತನನ್ನು ಐಎಸ್ಐನ ನಿರ್ದೇಶಕನಾಗಿ ಮುಂದುವರೆಸಬೇಕೆಂದೂ ಆಗ್ರಹಿಸಿದ್ದ. ಆದರೆ ಬಾಜ್ವಾ ಹಮೀದ್‌ನನ್ನು ಪಕ್ಕಕ್ಕೆ ಸರಿಸಿ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಂನನ್ನು ಕೂರಿಸಿದ. ಇದು ಸೇನೆ ಮತ್ತು ಇಮ್ರಾನ್‌ನ ನಡುವಿನ ಕಾದಾಟವನ್ನು ತೀವ್ರಗೊಳಿಸಿತು. ಸಾಲದೆಂಬಂತೆ ರಷ್ಯಾ-ಉಕ್ರೇನ್ ಯುದ್ಧದ ಹೊತ್ತಲ್ಲಿ ಪಶ್ಚಿಮದ ಒತ್ತಡಕ್ಕೆ ಮಣಿದು ರಷ್ಯಾ ವಿರೋಧಿಸುವ ನಿರ್ಣಯ ಕೈಗೊಳ್ಳಲಾರೆನೆಂದು ಇಮ್ರಾನ್ ಹೇಳಿಕೆ ಕೊಟ್ಟರೆ, ಬಾಜ್ವಾ ಉಕ್ರೇನ್‌ನ ಪರವಾದ ಹೇಳಿಕೆಯನ್ನು ಕೊಟ್ಟು ಸರ್ಕಾರದ ವಿರುದ್ಧ ನಿಂತ. ಅಲ್ಲಿಗೆ ಇವರಿಬ್ಬರ ನಡುವಿನ ಕಂದಕ ಜಗಜ್ಜಾಹೀರಾಗುವಷ್ಟು ದೊಡ್ಡದಾಗಿತ್ತು.

ಪಾಕಿಸ್ತಾನದಲ್ಲಿ ಸೇನೆ ಮನಸ್ಸು ಮಾಡಿದರೆ ಏನು ಬೇಕಿದ್ದರೂ ಮಾಡಬಲ್ಲದು. 2022ರಲ್ಲಿ ಇಮ್ರಾನನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯ್ತು. ಈ ಗೊತ್ತುವಳಿ ಕಾನೂನು ಬಾಹಿರವಾಗಿದೆ ಎಂದು ಇಮ್ರಾನ್ ವಾದಿಸುವ ಪ್ರಯತ್ನ ಮಾಡಿದರೂ ಅದು ಅರಣ್ಯ ರೋದನವಾಯ್ತು. ಮೊದಲೇ ಹೇಳಿದಂತೆ ನಾಟಕ ಮಾಡುವುದರಲ್ಲಿ ನಿಸ್ಸೀಮನಾಗಿರುವ ಇಮ್ರಾನ್ ಅವಿಶ್ವಾಸ ಗೊತ್ತುವಳಿಯನ್ನು ಹೈಡ್ರಾಮಾ ಆಗುವಂತೆ ನೋಡಿಕೊಂಡ. ಈತನದ್ದೇ ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್ ಪಕ್ಷದ ಕೆಲವು ಸದಸ್ಯರು ಇವನ ವಿರುದ್ಧ ತಿರುಗಿಬಿದ್ದು ಈತ ಅಧಿಕಾರದಿಂದ ಕೆಳಗಿಳಿಯುವಂತಾಯ್ತು. ಆನಂತರ ಇಮ್ರಾನ್ ತನಗನಿಸಿದ್ದನ್ನು ನೇರವಾಗಿ ಹೇಳುವ ಚಾಳಿ ಬೆಳೆಸಿಕೊಂಡುಬಿಟ್ಟ. ದಿನ ಬೆಳಗಾದರೆ ಆತ ಸೇನೆಯನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದ. ಆತನ ಆರೋಪಗಳ ಕೇಂದ್ರಬಿಂದು ಸೇನಾಮುಖ್ಯಸ್ಥ ಬಾಜ್ವಾನೇ ಆಗಿರುತ್ತಿದ್ದ. ‘ಎಲ್ಲ ಬಗೆಯ ಕೆಟ್ಟ ಕೆಲಸಗಳನ್ನು ಮಾಡಿ ಅವನಿಗೆ ಅನುಭವವಿದೆ’, ‘ಸರ್ಕಾರದ ಹಿಂದೆನಿಂತು ಒತ್ತಡಹಾಕಿ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವವರು ಸೇನೆಯ ಮಂದಿ’ ಎಂದೆಲ್ಲ ಆರೋಪ ಮಾಡಿದ. ಈ ಹೊತ್ತಿಗೆ ಸರಿಯಾಗಿ ಪಾಕಿಸ್ತಾನದ ಪತ್ರಕರ್ತ ಅರ್ಷದ್ ಶರೀಫ್‌ನನ್ನು ಕೀನ್ಯಾದಲ್ಲಿ ಕೊಲೆ ಮಾಡಲಾಯ್ತು. ಆತ ಅವಿಶ್ವಾಸ ಗೊತ್ತುವಳಿಯ ಸಂದರ್ಭದಲ್ಲಿ ಸೇನೆಯ ವಿರುದ್ಧವಾಗಿ, ಇಮ್ರಾನನ ಪರವಾಗಿ ಸಾಕಷ್ಟು ವರದಿಗಳನ್ನು ಮಾಡಿದ್ದ. ಸೇನೆ ಅವನನ್ನು ಗುರಿಯಾಗಿಸಿಬಿಟ್ಟಿತ್ತು. ಬ್ರಿಗೇಡಿಯರ್ ಮೊಹಮ್ಮದ್ ಶಾಫಿಕ್, ಬ್ರಿಗೇಡಿಯರ್ ಫಹೀನ್ ರಜಾ ಮತ್ತು ಐಎಸ್ಐನ ಮೇಜರ್ ಜನರಲ್ ಫೈಜಲ್ ನಜೀರ್ ಇವರು ಆತನಿಗೆ ಬೆದರಿಕೆಯ ಕರೆ ಮಾಡಲಾರಂಭಿಸಿದರು. ಪತ್ರಕರ್ತ ಅರ್ಷದ್ ಶರೀಫ್ ಪಾಕಿಸ್ತಾನ ಬಿಟ್ಟು ಓಡಿದ. ಆತನ ಮಿತ್ರರೆಲ್ಲ ದುಬೈಯಲ್ಲೋ, ಲಂಡನ್ನಿನಲ್ಲೋ ಇದ್ದಾನೆ ಎಂದು ಭಾವಿಸಿಕೊಂಡಿದ್ದರೆ, ಕೀನ್ಯಾದಲ್ಲಿ ಹೆಣವಾಗಿದ್ದ. ನಿಸ್ಸಂಶಯವಾಗಿ ಇದು ಐಎಸ್ಐನ ಕೈವಾಡವೇ ಆಗಿತ್ತಲ್ಲದೇ ಫೈಜಲ್ ನಜೀರ್‌ನೇ ಇದರ ಹಿಂದಿದ್ದ ಎಂದು ಎಲ್ಲರೂ ನಂಬಿದರು. ಸ್ವತಃ ಶರೀಫ್ನ ತಾಯಿ ರಿಫಾತ್ ಅಲ್ವಿ ಪಾಕಿಸ್ತಾನದ ನ್ಯಾಯಾಧೀಶರಿಗೆ ಪತ್ರಬರೆದು ಅದರಲ್ಲಿ ಈ ವಿಚಾರವನ್ನು ಉಲ್ಲೇಖಿಸಿದರು. ಇಮ್ರಾನ್ ಇದನ್ನು ಬಲವಾಗಿ ಹಿಡಿದುಕೊಂಡ. ಆತ ಪದೇ-ಪದೇ ಡರ್ಟಿ ಹ್ಯಾರಿ ಎಂದು ಕರೆಯಲ್ಪಡುವ ಫೈಜಲ್ ನಜೀರ್‌ನ ವಿರುದ್ಧ ಮನಸೋ ಇಚ್ಛೆ ಮಾತನಾಡಲಾರಂಭಿಸಿದ. ಇದು ಐಎಸ್ಐಗೆ ಸರಿ ಕಾಣಲಿಲ್ಲ.


ಮತ್ತೊಂದೆಡೆ ತಾನು ಅಧಿಕಾರ ಕಳೆದುಕೊಂಡೊಡನೆ ಲಾಂಗ್‌ಮಾರ್ಚ್ ಆರಂಭಿಸಿದ ಇಮ್ರಾನ್ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರನ್ನು ಸೆಳೆಯತೊಡಗಿದ. ತನ್ನ ನಾಟಕೀಯ ಭಾಷಣಗಳಿಂದ ಅವರನ್ನು ಆಕರ್ಷಿಸುತ್ತಾ ಸೇನೆಯ ವಿರುದ್ಧ ಎತ್ತಿಕಟ್ಟುವಲ್ಲಿ ಸಫಲನಾಗುತ್ತಿದ್ದ. ಇದರ ಪರಿಣಾಮವೇ ಪಂಜಾಬಿನಲ್ಲಿ ಉಪ ಚುನಾವಣೆಗಳು ನಡೆದಾಗ ಇಮ್ರಾನ್ ಖಾನನ ಪಕ್ಷ ಜಯಭೇರಿ ಬಾರಿಸಿತು. ಸಹಜವಾಗಿಯೇ ಇದು ಆತಂಕದ ವಿಚಾರವಾಗಿತ್ತು. ಸೇನೆ, ಇಮ್ರಾನ್ ತಮ್ಮಿಂದ ಅಧಿಕಾರವನ್ನು ಕಸಿಯುತ್ತಾನೆ ಎಂಬುದು ಖಾತ್ರಿಯಾಗುತ್ತಿದ್ದಂತೆ ಆತನ ಭ್ರಷ್ಟಾಚಾರದ ಪ್ರಕರಣಗಳನ್ನು ಮುಂದಿಟ್ಟು ನ್ಯಾಯಾಲಯದ ಮೂಲಕ ಆತ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಯಮಗಳನ್ನು ಹೇರಿಬಿಟ್ಟಿತು. ಆತನ ಲಾಂಗ್ ಮಾರ್ಚ್ ಮತ್ತೆ ಮುಂದುವರಿಯಿತು. ಜನ ಮೊದಲಿಗಿಂತ ಹೆಚ್ಚಾದರೇ ಹೊರತು ಕಡಿಮೆಯಾಗಲಿಲ್ಲ. ಆತ ರ್ಯಾಲಿಯಲ್ಲಿ ಭಾಗವಹಿಸಿರುವಾಗಲೇ ಆತನ ಮೇಲೆ ಗುಂಡು ಹಾರಿಸಲಾಯ್ತು. ಕಾಲಿಗೆ ಮೂರು ಗುಂಡು ಹೊಕ್ಕಿದವೆಂದು ಇಮ್ರಾನನ ಬೆಂಬಲಿಗರು ಹೇಳಿದರು. ಆದರೆ ನೋಡುಗರಿಗೆ ಚುನಾವಣೆಯ ಹೊತ್ತಲ್ಲಿ ಪಶ್ಚಿಮ ಬಂಗಾಳದಲ್ಲಿ ದೀದಿ ಕಾಲಿಗೆ ಬ್ಯಾಂಡೇಜು ಕಟ್ಟಿಕೊಂಡಂತೆ ಕಾಣುತ್ತಿತ್ತು. ತನ್ನ ಭಿನ್ನ-ಭಿನ್ನ ಸ್ವರೂಪದ ನಾಟಕಗಳಿಂದ ಆತ ಜನರನ್ನು ಸೆಳೆಯುತ್ತಲೇ ಹೋದ. ಇನ್ನು ಈತನನ್ನು ತಡೆಯಲಾಗದು ಎಂದೇ ಆತನನ್ನು ಏಕಾಕಿ ಬಂಧಿಸುವ ನಿರ್ದೇಶನವನ್ನು ಸೇನೆ ಅಲ್ಲಿನ ಅರೆ ಸೈನಿಕಪಡೆಗೆ ಆದೇಶಿಸಿತು. ಇಮ್ರಾನನ ವಿರುದ್ಧ ಭ್ರಷ್ಟಾಚಾರದ ಪ್ರಕರಣವೊಂದಿದೆ. ಆತ ವಿದೇಶಗಳಿಗೆ ಹೋದಾಗಲೆಲ್ಲ ಅಲ್ಲಿ ಸಿಗುತ್ತಿದ್ದ ಉಡುಗೊರೆಗಳನ್ನು ಸರ್ಕಾರದ ತೋಷ್ಖಾನಗಳಿಗೆ ಕೊಟ್ಟು ಅಲ್ಲಿಂದ ಕಡಿಮೆ ಬೆಲೆಗೆ ಖರೀದಿಸಿ ತಾನು ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರುತ್ತಿದ್ದ. ಪಾಕಿಸ್ತಾನದ ಪ್ರಧಾನಿ ಎಂದು ಸಾಬೀತುಪಡಿಸಬೇಕಲ್ಲ, ಮತ್ತೇನಿದೆ ಮಾರ್ಗ? ರಾಷ್ಟ್ರಪತಿ ಪ್ರತಿಭಾ ಪಾಟಿಲ್ ತಾನು ಮರಳಿ ಮನೆಗೆ ಹೋಗುವಾಗ ತನಗೆ ಬಂದಿದ್ದ ಉಡುಗೊರೆಗಳನ್ನೆಲ್ಲ ಗಂಟುಮೂಟೆ ಕಟ್ಟಿಕೊಂಡು ಒಯ್ದಿದ್ದಳಲ್ಲ, ಇದು ಅಂಥದ್ದೇ ಮತ್ತೊಂದು ಕಥೆ ಅಷ್ಟೇ.


ವಿಚಾರಣೆಗೆಂದು ಸಾಗುತ್ತಿರುವ ಇಮ್ರಾನ್ ಖಾನನ ಬಂಧನದೊಂದಿಗೆ ಪಾಕಿಸ್ತಾನದಲ್ಲಿ ಅಕ್ಷರಶಃ ಬೆಂಕಿ ಹೊತ್ತಿಕೊಂಡಿತು. ಜನ ಬೀದಿಗೆ ಬಂದರು. ಸೇನಾ ಮುಖ್ಯನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದರು. ಅಲ್ಲಿನ ರೇಡಿಯೊ ಕೇಂದ್ರ ಹೊತ್ತಿ ಉರಿಯಿತು. ಅನೇಕ ಸೇನಾ ನಾಯಕರ ಮನೆಗಳು ಲೂಟಿಯಾದವು. ಅದಕ್ಕೆ ಬೆಂಕಿ ಹಚ್ಚಿ ಜನ ಆನಂದಿಸಿದರು. ಲೂಟಿಗೈಯ್ಯುತ್ತಿರುವ ಜನರನ್ನು ಪ್ರಶ್ನಿಸಿದಾಗ,‌ ಇದು ನಮ್ಮದ್ದೇ ದುಡ್ಡು. ಅದಕ್ಕೇ ಒಯ್ಯುತ್ತಿದ್ದೇವೆ ಎಂದು ಹೇಳುವುದನ್ನು ಕಂಡಾಗ, ಅವರಲ್ಲಿದ್ದ ಆಕ್ರೋಶ ಎದ್ದು ಕಾಣುತ್ತಿತ್ತು. ಅಚ್ಚರಿ ಎಂದರೆ ಜನರ ಈ ಆಕ್ರೋಶವನ್ನು ತಡೆಯುವಲ್ಲಿ ಸೇನೆ ತೋರಿದ ದಿವ್ಯ ನಿರ್ಲಕ್ಷ್ಯ. ಕೆಲವು ಕಡೆಯಲ್ಲಂತೂ ನುಗ್ಗಿ ಬರುತ್ತಿರುವ ಜನರ ಮೇಲೆ ಗುಂಡು ಹಾರಿಸಲೆಂದು ಕೊಟ್ಟ ಆದೇಶವನ್ನೂ ಧಿಕ್ಕರಿಸಲಾಗಿತ್ತು. ಇದು ಸೇನೆಯೊಳಗಿನ ಕುರ್ಚಿಯ ಕಾರಣಕ್ಕಾಗಿ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಅಂದರೆ ಇಮ್ರಾನ್ ಹಚ್ಚಿದ ಬೆಂಕಿ ಸೇನೆಯನ್ನೂ ಸುಡುತ್ತಿದೆ. ಭಾರತವನ್ನು ನಾಶ ಮಾಡುತ್ತೇವೆಂದು ಬದುಕು ಆರಂಭಿಸಿದ ಪಾಕಿಸ್ತಾನ ಇಂದು ತನ್ನ ಅಂಗಡಿಯನ್ನು ಗಂಟು-ಮೂಟೆ ಕಟ್ಟಿಕೊಂಡು ಭಾರತದೆದುರು ಗೋಗರೆಯಬೇಕಾದ ಪರಿಸ್ಥಿತಿಗೆ ಬಂದಿದೆ. ಇವ್ಯಾವನ್ನೂ ಅರಿಯದ ಇಲ್ಲಿನ ಮುಸಲ್ಮಾನರು ಮಸೀದಿಯಲ್ಲಿ ಮೌಲ್ವಿಯ ಮಾತು ಕೇಳಿ, ಬೀದಿಗೆ ಬಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುತ್ತಾರಲ್ಲ, ಅಯ್ಯೋ ಪಾಪ ಎನಿಸುತ್ತದೆ!

ಒಂದಂತೂ ಸತ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಟ್ಟು, ಮೀಸಲಾತಿಯನ್ನೂ ವಿಸ್ತರಿಸಿ ಜಾತಿ-ಜಾತಿಗಳ ನಡುವಿನ ಕದನವನ್ನು ತೀವ್ರಗೊಳಿಸಿತೆಂದರೆ ಸುಭಿಕ್ಷವಾಗಿದ್ದ ಕರ್ನಾಟಕವೂ ಪಾಕಿಸ್ತಾನದಂತಾಗಲು ಐದು ವರ್ಷ ಸಾಕು! ಆಗ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವ ಅಗತ್ಯವಿಲ್ಲ. ಮುಸಲ್ಮಾನರು ಕರ್ನಾಟಕವೂ ಪಾಕಿಸ್ತಾನವೇ ಎಂದು ಹೆಮ್ಮೆ ಪಡಬಹುದು!

ಮೋದಿ ಬರೋವರ್ಗೂ ನಿಮ್ದೇ ಹವಾ!

ಮೋದಿ ಬರೋವರ್ಗೂ ನಿಮ್ದೇ ಹವಾ!

ಚುನಾವಣೆಗಳು ಎದುರಿಗಿವೆ. ಆದರೆ ಸದ್ದೇ ಇಲ್ಲ. ಇನ್ನು ಹದಿನೈದಿಪ್ಪತ್ತು ದಿನಗಳಲ್ಲಿ ಈ ರಾಜ್ಯದ ಐದು ವರ್ಷಗಳ ಭವಿಷ್ಯ ನಿರ್ಧಾರವಾಗಲಿದೆ ಎಂಬ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ. ಬಿಸಿಲ ಝಳ ಒಂದೆಡೆಯಾದರೆ, ಮತ್ತೊಂದೆಡೆ ಎಲ್ಲ ಪಕ್ಷಗಳ ನಾಯಕರಲ್ಲೂ ಮನೆಮಾಡಿರುವ ಆತಂಕ. ಎಲ್ಲಾ ಪಕ್ಷಗಳೂ ಬಹುಮತ ತಮಗೇ ಅಂತ ಮೇಲ್ನೋಟಕ್ಕೆ ಬೀಗುತ್ತಿವೆಯಾದರೂ ಮೈದಡವಿ ಮಾತನಾಡಿಸಿದಾಗ, ಸ್ವಲ್ಪ ಕಷ್ಟವಿದೆ ಎನ್ನುವುದನ್ನು ಒಪ್ಪುತ್ತಾರೆ. ಏಕೊ ಈ ಬಾರಿ ಜನ ಬೂತಿಗೆ ಬಂದು ವೋಟ್ ಮಾಡುವುದೇ ಅನುಮಾನ ಅನ್ನಿಸುತ್ತಿದೆ. ಉರಿಬಿಸಿಲು ಒಂದು ಕಾರಣವಾದರೆ, ಎಲ್ಲಾ ಪಕ್ಷಗಳು ಒಂದೇ ಎನ್ನುವ ತಾತ್ಸಾರ ಮನೋಭಾವ ಮತ್ತೊಂದು.

ಇಡೀ ಚುನಾವಣೆಯ ಪ್ರಮುಖ ಬೇಸರದ ಸಂಗತಿ ಏನು ಗೊತ್ತೇ? ಜಾತಿಯ ಕಾರ್ಡನ್ನು ಪಕ್ಷಗಳು ಬಳಸುತ್ತಿರುವಂತಹ ರೀತಿ. ಲಿಂಗಾಯತನೇ ಮುಖ್ಯಮಂತ್ರಿ ಎನ್ನುವ ಬಿಜೆಪಿ, ಗೌಡರನ್ನು ಮುಂದಿಟ್ಟುಕೊಂಡು ಕಾಳಗ ನಡೆಸುತ್ತಿರುವ ಕಾಂಗ್ರೆಸ್ಸು. ಜಾತಿ-ಜಾತಿಗಳನ್ನು ಇವರು ಸೆಳೆಯಲು ನಡೆಸುತ್ತಿರುವ ಕಸರತ್ತು, ಗಿರಾಕಿಯನ್ನು ಆಕರ್ಷಿಸುವ ಕೆಂಪುದೀಪ ಪ್ರದೇಶದ ಬೆಲೆವೆಣ್ಣುಗಳ ಸರ್ಕಸ್ಸಿನಂತಿದೆ. ಸ್ವಲ್ಪ ಕಟುವೆನಿಸಿದರೂ ಸತ್ಯವೇ. ತಾನು ಬ್ರಾಹ್ಮಣ ಪಕ್ಷವಲ್ಲವೆಂದು ಸಾಬೀತುಪಡಿಸಿಕೊಳ್ಳಲು ಬಿಜೆಪಿ ಜಾತಿವಾರು ಟಿಕೆಟ್ ಹಂಚಿಕೆ ಪಟ್ಟಿ ಪ್ರಕಟಿಸಿದರೆ, ಅತ್ತ ಕಾಂಗ್ರೆಸ್ಸು ಲಿಂಗಾಯತರನ್ನು ಸೆಳೆಯಲು ಒಡಕಿನ ಎಲ್ಲ ಪ್ರಯೋಗವನ್ನೂ ಮಾಡಿಯಾಗಿದೆ. ಅಲ್ಲದೇ ಮತ್ತೇನು? ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರೋದು ಸರಿ, ಆದರೆ ಅವರನ್ನು ತಮ್ಮತ್ತ ಸೆಳೆದ ಕಾಂಗ್ರೆಸ್ಸು ಲಿಂಗಾಯತರಿಗಾದ ಅವಮಾನವೆಂಬಂತೆ ಬಿಂಬಿಸಿತಲ್ಲ! ಶೆಟ್ಟರ್ ಕೂಡ ತಮ್ಮನ್ನು ಹೊರದಬ್ಬುವ ಪ್ರಕ್ರಿಯೆಯ ನಾಯಕರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ರನ್ನು ಬಿಂಬಿಸಿ, ಉರಿವ ಬೆಂಕಿಗೆ ತುಪ್ಪ ಸುರಿದರು. ಅವರದ್ದು ತಪ್ಪು ಎಂದು ಹೇಳಲಾಗದು. ರಾಜಕೀಯವಾಗಿ ತಾನು ಜೀವಂತವಾಗಿರಬೇಕೆಂದರೆ ಇಂಥದ್ದೊಂದು ಕಸರತ್ತು ಅವರಿಗೆ ಅಗತ್ಯವಿತ್ತು. ಅಚ್ಚರಿಯೇನು ಗೊತ್ತೇ? ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿ ಬಿಜೆಪಿ ಆಯ್ಕೆಮಾಡಿದ ಮತ್ತೊಬ್ಬ ವ್ಯಕ್ತಿಯೂ ಲಿಂಗಾಯತರೇ! ಹಾಗಿದ್ದಮೇಲೆ ಲಿಂಗಾಯತರಿಗೆ ಮೋಸವಾಗಿದ್ದೆಲ್ಲಿ? ಇನ್ನು ಎಲ್ಲಾ ಅನಿಷ್ಟಗಳಿಗೂ ಸಂತೋಷರನ್ನೇ ಕಾರಣವೆನ್ನುವ ಮಂದಿ ಮೋದಿ-ಅಮಿತ್‌ ಶಾರನ್ನು ಅಷ್ಟು ದಡ್ಡರೆಂದುಕೊಂಡಿದ್ದಾರೋ ಅಥವಾ ಟಿಕೆಟ್ ಹಂಚಿಕೆಯಲ್ಲಿ ಅವರ ಪಾತ್ರವೇ ಇಲ್ಲ ಎಂದು ಭಾವಿಸಿದ್ದಾರೋ, ನಾನಂತೂ ಅರಿಯೆ. ಸಮಿತಿಯೊಳಗೆ ಘಟಾನುಘಟಿಗಳ್ಯಾರ್ಯಾರಿಗೆ ಟಿಕೆಟ್ ನಿರಾಕರಿಸಬೇಕು ಎಂಬ ಚರ್ಚೆ ಮೇಲ್ಮಟ್ಟದಲ್ಲಿ ನಡೆದಮೇಲೆಯೇ ನಿರ್ಣಯವಾಗಿರುತ್ತಲ್ಲ. ಅಂದಮೇಲೆ ಒಬ್ಬರದ್ದೇ ಜವಾಬ್ದಾರಿ ಹೇಗೆ? ಹಾಗೆ ಒಬ್ಬರ ಹೆಗಲಿಗೇ ಎಲ್ಲವನ್ನೂ ವರ್ಗಾಯಿಸುವುದಾದರೆ, ಟಿಕೆಟ್ ಹಂಚಿಕೆಯಲ್ಲಿ ಹಿಂದೆಂದೂ ಕಾಣದಷ್ಟು ಹೊಸಮುಖಗಳನ್ನು ತಂದಿರುವ ಶ್ರೇಯವೂ ಸಂತೋಷ್ ಅವರಿಗೇ ಸಲ್ಲಬೇಕಲ್ಲ! ಬಿಜೆಪಿಯವರಿಗೆಲ್ಲ ನೆನಪಿರಬೇಕಾದ ಒಂದು ಸಂಗತಿ ಎಂದರೆ ಬಿಜೆಪಿ ಸಂಘದ ಅಂಗಸಂಸ್ಥೆಯಷ್ಟೆ. ಸಂಘ ಅದರ ಬಾಲವಲ್ಲ. ಹೀಗಾಗಿ ಭಾಜಪದೊಂದಿಗೆ ಎಷ್ಟಾದರೂ ಕಿತ್ತಾಡಿಕೊಳ್ಳಿ, ಸ್ವಯಂಸೇವಕರು ನಿಮ್ಮ ಮೇಲೆ ಪ್ರೀತಿ ಇಟ್ಟಿರುತ್ತಾರೆ. ಸಂಘದ ತಂಟೆಗೆ ಬಂದರೆ ನಿಮ್ಮನ್ನು ಸದ್ದಿಲ್ಲದೇ ಪಕ್ಕಕ್ಕೆ ಸರಿಸಿಬಿಡ್ತಾರೆ. ಶೆಟ್ಟರ್ ವಿಷಯದಲ್ಲಿ ಆದದ್ದೂ ಅದೇ. ಅವರು ಸ್ವಯಂ ಸೇವಕರ ಅನುಕಂಪವನ್ನು ಕಳಕೊಂಡರು. ಅತ್ತ ಕಾಂಗ್ರೆಸ್ಸಿಗರೂ ನಂಬಲಾಗದ ಸ್ಥಿತಿಯನ್ನು ತಲುಪಿಬಿಟ್ಟರು. ಅವರದ್ದೀಗ ಇಬ್ಬಂದಿ. ಹಾಗಂತ ಜಗದೀಶ್ ಶೆಟ್ಟರ್‌ರ ರಾಜಕೀಯ ಚಾಣಾಕ್ಷಮತಿಯನ್ನು ಅನುಮಾನಿಸಬೇಡಿ. ಅವರಿಗೆ ಗೆಲ್ಲುವ ತಂತ್ರಗಾರಿಕೆ ಗೊತ್ತಿದೆ. ಆದರೆ ಈ ಧಾವಂತದಲ್ಲಿ ಸೊರಗಿದ್ದು ಮಾತ್ರ ಲಿಂಗಾಯತ ಸಮುದಾಯ. ಬ್ರಾಹ್ಮಣ ಮತ್ತು ಲಿಂಗಾಯತರ ನಡುವಿನ ಕಂದಕವನ್ನು ಅವರು ಇನ್ನಷ್ಟು ದೊಡ್ಡದು ಮಾಡಿಬಿಟ್ಟರು. ಬಿಜೆಪಿಯಲ್ಲಿದ್ದಷ್ಟೂ ದಿನ ಎಲ್ಲರನ್ನೂ ಬೆಸೆಯುವ ಪ್ರಯತ್ನ ಮಾಡುತ್ತಿದ್ದವರು, ಕಾಂಗ್ರೆಸ್ಸಿಗೆ ಕಾಲಿಟ್ಟೊಡನೆ ಬೆಂಕಿಹಚ್ಚಲು ಸಿದ್ಧವಾಗಿಬಿಟ್ಟರು. ಬಹುಶಃ ಒಡಕು ತರೋದು ಕಾಂಗ್ರೆಸ್ಸಿನ ಹುಟ್ಟುಗುಣವೇನೋ! ಕಾಂಗ್ರೆಸ್ಸಿಗರು ಆತ್ಮೀಯತೆ ತೋರುತ್ತಿದ್ದಾರೆಂದರೆ ಏನೊ ಅವಘಡ ಕಾದಿದೆ ಎಂದೇ ಅರ್ಥ. ಮುಖದಲ್ಲಿ ನಗು, ಬಗಲಲ್ಲಿ ಚೂರಿ ಅನ್ನೋದು ಕಾಂಗ್ರೆಸ್ಸಿಗರನ್ನು ನೋಡಿಯೇ ಹುಟ್ಟಿರಬೇಕು! ಒಂದಂತೂ ಸತ್ಯ. ನಾಟಕ ಮಾಡಿದರೆ ಬಹಳ ಕಾಲ ಉಳಿಯುವುದಿಲ್ಲ. ಲಿಂಗಾಯತರ ಮೇಲೆ ವಿಶೇಷ ಪ್ರೀತಿ ತೋರಿದ ಸಿದ್ದರಾಮಯ್ಯ, ‘ಲಿಂಗಾಯತರೆಲ್ಲ ಭ್ರಷ್ಟರು. ಅವರನ್ನು ಮುಖ್ಯಮಂತ್ರಿ ಮಾಡಲಾರೆವು’ ಎಂದಿದ್ದು ಅಂತರಂಗದ ಮಾತನ್ನು ಹೊರಹಾಕಿದೆ. ಜಾತಿಯನ್ನೇ ನೆಚ್ಚಿಕೊಂಡು ಚುನಾವಣೆಗೆ ಹೋದರೆ ಅನುಭವಿಸಲೇಬೇಕಾದ್ದು ಇದು.

ಒಡಕು ಜಾತಿಯ ವಿಚಾರದಲ್ಲಷ್ಟೇ ಅಲ್ಲ. ಅಮೂಲ್, ನಂದಿನಿ ಗಲಾಟೆಯಲ್ಲೂ ಕೂಡ. ಗುಜರಾತಿನ ಅಮೂಲ್‌ಗೆ ಕರ್ನಾಟಕಕ್ಕೆ ಬರಲು ಅವಕಾಶ ಕೊಟ್ಟಿದ್ದೇ ಸಿದ್ದರಾಮಯ್ಯ. ಈಗ ಗಲಾಟೆ ಮಾಡುತ್ತಾ ಇರೋದೂ ಅವರೇ. ತಮ್ಮ ಮತಗಳಿಕೆಗಾಗಿ ರಾಜ್ಯ-ರಾಜ್ಯಗಳ ನಡುವೆ ಕದನ ಹಚ್ಚಿಸಲು ಯತ್ನಿಸುತ್ತಿರುವ ಈ ಮಂದಿ ವಿಕಾಸ ಮಾಡೋದು ಸಾಧ್ಯವೇನು? ಈ ರೀತಿಯಲ್ಲೇ ಈ ರಾಜಕಾರಣಿಗಳು ಕರ್ನಾಟಕ-ತಮಿಳುನಾಡುಗಳ ನಡುವೆ ವಿಷಬೀಜ ಬಿತ್ತಿದ್ದು. ಇವರು ಹಚ್ಚಿದ್ದ ಬೆಂಕಿ ಆರಿಸಲು ಯಡಿಯೂರಪ್ಪನವರೇ ಬರಬೇಕಾಯ್ತು. ಕಂಠಮಟ್ಟ ನಂದಿನಿಗಾಗಿ ಕಿತ್ತಾಡಿದ ಸಿದ್ದರಾಮಯ್ಯ ರಾಜ್‌ದೀಪ್ ಸರ್‌ದೇಸಾಯಿಗೆ ನೀಡಿದ ಸಂದರ್ಶನದಲ್ಲಿ, ತಾನೇ ಅಧಿಕಾರಕ್ಕೆ ಬಂದರೂ ಅಮೂಲ್ ನಿಷೇಧಿಸುವುದಿಲ್ಲ. ಆದರೆ ಜನರಿಗೆ ಅದನ್ನು ಕೊಂಡುಕೊಳ್ಳದಿರುವಂತೆ ಕೇಳಿಕೊಳ್ಳುವೆ ಎಂದಿರುವುದಂತೂ ಇಬ್ಬಂದಿತನದ ದ್ಯೋತಕವೇ. ಜಗತ್ತು ಆರ್ಥಿಕವಾಗಿ ಬೆಳವಣಿಗೆಗೆ ಎಲ್ಲ ಸಭ್ಯಮಾರ್ಗಗಳ ಮೊರೆ ಹೋಗುತ್ತಿರುವಾಗ ಒಂದು ರಾಜ್ಯದ ವಸ್ತು ಮಾರಲು ಬಿಡೆವು ಎಂದು ಇನ್ನೊಂದು ರಾಜ್ಯದಲ್ಲಿ ಹಠಹಿಡಿದು ಕುಳಿತ ಪಕ್ಷ ರಾಷ್ಟ್ರೀಯ ಪಕ್ಷವೆನಿಸಿಕೊಳ್ಳಲು ಯೋಗ್ಯವಲ್ಲ. ಅಲ್ಲವೇನು!?

ಇನ್ನು ಮುಸಲ್ಮಾನರ ಮೇಲಿನ ಕಾಂಗ್ರೆಸ್ ಪಕ್ಷದ ಹಿಡಿತ ಮೆಚ್ಚಬೇಕಾದ್ದೇ‌. ಕೆಮ್ಮಿದ್ದಕ್ಕೂ, ಕ್ಯಾಕರಿಸಿದ್ದಕ್ಕೂ ಬೀದಿಗೆ ಬಂದು ನಿಲ್ಲುವ ಮುಸಲ್ಮಾನರು, ಆತಿಕ್ ಮೊಹಮ್ಮದನ ಸಾವಿಗೆ ಪ್ರತಿಕ್ರಿಯೆಯನ್ನೇ ಕೊಡಲಿಲ್ಲ ನೋಡಿದಿರಾ? ದೇಶದ ಮೂಲೆ-ಮೂಲೆಯಲ್ಲಿ ಸದ್ದುಮಾಡಿದ ಈ ಮಂದಿ ಕರ್ನಾಟಕದಲ್ಲಿ ಇಷ್ಟು ಮುಗುಮ್ಮಾಗಿರೋದು ಏಕೆ? ತಮ್ಮ ಗಲಾಟೆಯಿಂದ ಹಿಂದೂಗಳು ಒಗ್ಗಟ್ಟಾಗಿಬಿಡುವರೇನೋ ಎನ್ನುವ ಭಯ. ಮುಸಲ್ಮಾನರಿಂದ ಅವೈಜ್ಞಾನಿಕವಾದ ಮೀಸಲಾತಿಯನ್ನು ಕಿತ್ತುಕೊಂಡು ಗೌಡರು, ಪಂಚಮಸಾಲಿಗಳಿಗೆ ಬಿಜೆಪಿ ಹಂಚಿದಾಗಲೂ ಅವರು ತುಟಿಪಿಟಿಕ್ ಎನ್ನಲಿಲ್ಲ. ಏಕಿರಬಹುದು? ಈಗ ಗಲಾಟೆ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರಣವಾಗುವ ಬದಲು ಸಂಯಮ ಕಾಯ್ದುಕೊಂಡು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದು, ಆನಂತರ ಬೇಕಾದ ಆಟ ಆಡಿದರಾಯ್ತು ಎಂಬ ಉದ್ದೇಶವೇ ತಾನೇ? ದೇಶದಾದ್ಯಂತ ಮುಸಲ್ಮಾನರನ್ನು ಈ ರೀತಿ ನಿಯಂತ್ರಣದಲ್ಲಿರಿಸಿಕೊಳ್ಳುವ ಸಾಮರ್ಥ್ಯ ಇರೋದು ಕಾಂಗ್ರೆಸ್ಸಿಗೆ ಮಾತ್ರ. ಅಂದರೆ ಮುಸಲ್ಮಾನರು ನಡೆಸುವ ಅನೇಕ ದಂಗೆಗಳ ಹಿಂದೆ ಕೈವಾಡ ಯಾರದ್ದಿರಬೇಕು ಹೇಳಿ? ಇಲ್ಲವಾದರೆ ಅಖಂಡ ಶ್ರೀನಿವಾಸರಿಗೆ ಟಿಕೆಟ್ ತಪ್ಪಿಸಿ, ‘ಮುಸಲ್ಮಾನ ಮುಖಂಡರ ವಿರೋಧ ಇದ್ದದ್ದರಿಂದ’ ಅಂತ ಡಿಕೆಶಿ ಏಕೆ ಹೇಳುತ್ತಿದ್ದರು? ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಕಾಂಗ್ರೆಸ್ಸಿಗೆ ವೋಟು ನೀಡುವುದು ಅಂದರೆ ಮತ್ತೊಮ್ಮೆ ಮುಸಲ್ಮಾನರು ಅಟ್ಟಹಾಸ ನಡೆಸಿ ಬೀದಿಗಿಳಿಯುವುದು ಎಂದರ್ಥ, ಟಿಪ್ಪು ಜಯಂತಿಯ ವೈಭವ ರಾಜ್ಯದ ಮೂಲೆ-ಮೂಲೆಯಲ್ಲೂ ಕಾಣುವುದು ಎಂದರ್ಥ, ಸಾಲು-ಸಾಲು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾಗುವುದು ಎಂದರ್ಥ.

ಈ ಬಾರಿ ಹಣ ಚುನಾವಣೆಯಲ್ಲಿ ಕಾವೇರಿ ನೀರಿಗಿಂತ ಜೋರಾಗಿ ಹರಿಯಲಿದೆ. ಚುನಾವಣೆಗೂ ಮುಂಚಿನ ಮೂರ್ನಾಲ್ಕು ದಿನ ಮತದಾರರಿಗೆ ಹಬ್ಬ. ನಾಯಕರಿಂದ ಹಂಚಲೆಂದು ಹಣ ಪಡೆದವರ ಕಥೆಯನ್ನು ಕೇಳಲೇಬೇಡಿ. ಕಾಂಗ್ರೆಸ್ಸು ದುಡ್ಡಿರುವವರನ್ನು ಹುಡು-ಹುಡುಕಿ ಆರಿಸಿಕೊಂಡಿದೆ. ಅವರು ಆಕಾಂಕ್ಷಿಗಳಿಂದಲೇ ಎರಡೆರಡು ಲಕ್ಷ ಪೀಕಿ ಹತ್ತಾರು ಕೋಟಿ ಮಾಡಿಕೊಂಡವರಲ್ಲವೇ! ಬಿಜೆಪಿ ಟಿಕೆಟ್ ಹಂಚುವಾಗ ಬಹುತೇಕ ಬ್ಯಾಂಕ್ ಬ್ಯಾಲೆನ್ಸ್ ನೋಡಲಿಲ್ಲವೆಂಬುದು ಸುವಿದಿತ. ಹೀಗಾಗಿ ಇಲ್ಲಿನ ಬಹುತೇಕ ಹೊರೆ ಬೊಮ್ಮಾಯಿಯವರೇ ಹೊರಬೇಕೇನೋ! ಪ್ರಜಾಪ್ರಭುತ್ವವಾದ್ದರಿಂದ ಚುನಾವಣೆಯ ನೆಪದಲ್ಲಿ ಪ್ರತಿಯೊಬ್ಬರೂ ಅಧಿಕಾರದಲ್ಲಿದ್ದಾಗ ಗಳಿಸಿದ್ದನ್ನು ಕಕ್ಕಲೇಬೇಕು. ಮೊದಲೆಲ್ಲ ಸ್ವಲ್ಪ ಕೊಟ್ಟರೆ ಸಾಕಿತ್ತು. ಈಗ ಇತರೆಲ್ಲ ಕ್ಷೇತ್ರಗಳಂತೆ ಇಲ್ಲೂ ಸಾಕಷ್ಟು ಸ್ಪರ್ಧೆ ಏರ್ಪಟ್ಟಿರುವುದರಿಂದ ಸಣ್ಣ-ಪುಟ್ಟ ಮೊತ್ತಕ್ಕೆ ಮತದಾರನೂ ಬಾಗಲಾರ. ಎಂತಹ ದುರಂತ ಅಲ್ಲವೇ! ಈ ಲೇಖನದ ಮುಕ್ಕಾಲುಭಾಗ ಜಾತಿ, ಹಣ, ಹೆಂಡಗಳೆಂಬ ಕೊಳಕು ಸಂಗತಿಯದ್ದೇ ಚರ್ಚೆಯಾಯ್ತು.

ವಾಸ್ತವವಾಗಿ, ಚುನಾವಣೆಯ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಗೆ ನಾವೂ ಸಿದ್ಧವಾಗಬೇಕು. ಯಾವ ವ್ಯಕ್ತಿಗೂ ಸತತ ಎರಡನೇ ಬಾರಿ ಗೆದ್ದನಂತರ, ಮೂರನೇ ಬಾರಿ ಟಿಕೆಟ್ ನೀಡಬಾರದು. ಹತ್ತು ವರ್ಷ ಶಾಸಕನಾಗಿಯೂ ಏನನ್ನೂ ಕಡಿದು ಗುಡ್ಡೆ ಹಾಕದವ, ಮುಂದಿನ ಹತ್ತು ವರ್ಷದಲ್ಲಿ ಅದೇನು ಮಹಾ ಸಾಧಿಸಬಲ್ಲ ಹೇಳಿ? ಸತತ ಐದು ಬಾರಿ ಶಾಸಕ ಎನ್ನುವುದು ಹೆಗ್ಗಳಿಕೆಯಲ್ಲ. ಐದಾರು ಬಾರಿ ಶಾಸಕನಾದರೂ ಕ್ಷೇತ್ರವಿನ್ನೂ ಹಾಗೆಯೇ ಇದೆಯಲ್ಲ ಎಂಬ ಕಾರಣಕ್ಕೆ ಆ ಪ್ರತಿನಿಧಿ ಆತ್ಮಹತ್ಯೆ ಮಾಡಿಕೊಳ್ಳಬೇಕು, ಅಲ್ಲವೇನು? ಜಾತಿಯ ಆಧಾರದ ಮೇಲೆ ಟಿಕೆಟ್ ಹಂಚುವುದಾದರೆ ಸಣ್ಣ-ಪುಟ್ಟ ಜಾತಿಗಳ ಪ್ರತಿಭಾವಂತರು ಎಂದೂ ರಾಜಕೀಯಕ್ಕೆ ಬರಲೇಬಾರದೇನು? ಅವರು ನೇತೃತ್ವವಹಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಡೆಸುವ ಕನಸು ಕಾಣಲೇಬಾರದೇನು? ಇದು ಮತದಾರರಾಗಿ ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಪ್ರತಿಭಾವಂತನಿಗೆದುರಾಗಿ ನನ್ನ ಜಾತಿಯ ದಡ್ಡನನ್ನೂ, ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದವನನ್ನೂ, ಪರಮಭ್ರಷ್ಟನನ್ನೂ ಆಯ್ದುಕೊಳ್ಳುತ್ತೇನೆಂದರೆ ಅದಕ್ಕಿಂತ ಹೇಸಿಗೆ ಯಾವುದಿದೆ! ದುರಂತ ಏನು ಗೊತ್ತೇ? ಹೀಗೆ ಜಾತಿಯವರನ್ನು ಆರಿಸಿಕೊಳ್ಳೋದು ಸಮಾಜದ ದಡ್ಡರೆಂದುಕೊಳ್ಳಬೇಡಿ, ಬುದ್ಧಿವಂತರೂ ಕೂಡ. ಎಲ್ಲವನ್ನೂ ತ್ಯಾಗ ಮಾಡಿ ಸನ್ಯಾಸ ಸ್ವೀಕರಿಸಿದ ಸ್ವಾಮಿಗಳೂ ತಮ್ಮ ಜಾತಿಗಾಗಿ ಲಾಬಿ ಮಾಡುವುದನ್ನು ನೋಡಿದಾಗ ತ್ಯಾಗವೆಂಬ ಪದ ಅದೆಷ್ಟು ಮೌಲ್ಯ ಕಳಕೊಂಡಿದೆ ಎಂದು ಅರಿವಾಗುತ್ತದೆ.

ಆದರೆ ಕಾರ್ಮೋಡದ ನಡುವೆಯೂ ಒಂದು ಬೆಳ್ಳಿರೇಖೆ ಯಾವುದು ಗೊತ್ತೇ? ಅದು ನರೇಂದ್ರಮೋದಿಯೇ‌. ಅವರು ಯಾವ ಜಾತಿಯವರೆಂದು ಅನೇಕರಿಗೆ ಗೊತ್ತಿಲ್ಲ. ಅವರು ತಮ್ಮ ಜಾತಿಯವರೆಂದು ಯಾರನ್ನೂ ಮಂತ್ರಿ ಮಾಡಿದ ಉದಾಹರಣೆ ಇಲ್ಲ. ಅವರೆಂದಿಗೂ ತಮ್ಮ ಜಾತಿಯ ಮಠಾಧೀಶನಿಗೆ ಮತ್ತೆ-ಮತ್ತೆ ಹೋಗಿ ಅಡ್ಡಬಿದ್ದುದನ್ನು ಕಂಡವರಿಲ್ಲ. ತಥಾಕಥಿತ ಮೇಲ್ವರ್ಗದ ಮಠಾಧೀಶರಿರಲಿ, ಕೆಳವರ್ಗದವರೇ ಇರಲಿ ಮೋದಿ ಎದುರು ನಿಂತಾಗ ಗೌರವದಿಂದ ನಮಿಸುತ್ತಾರೆ. ಜನರೂ ಅಷ್ಟೇ, ಮೋದಿಯ ಭಾವಚಿತ್ರ ಕೊಳಕಾಗಿದ್ದರೆ ತಮ್ಮ ಬಟ್ಟೆಯಿಂದಲೇ ಅದನ್ನು ಒರೆಸಿ, ‘ದೇವರಪ್ಪಾ’ ಅಂತಾರೆ. ಅವರು ಜಾತಿಯ ವಿಷಯ ತೆಗೆಯಲಿಲ್ಲ, ಹಣದ ಮಾತೆತ್ತಲಿಲ್ಲ. ಭಾರತದ ಮೌಲ್ಯಗಳಿಗೆ ತಕ್ಕಂತೆ ಬದುಕಿದರು. ಭೂಮಿಗೆ ಹತ್ತಿರವಾಗಿ ಬದುಕಿದರು. ಹೀಗಾಗಿಯೇ ಅವರು ಪ್ರಧಾನಿಯಾಗಿರುವುದನ್ನು ಎಲ್ಲ ಜಾತಿಯ, ಎಲ್ಲ ವರ್ಗದ ಮತ್ತು ಎಲ್ಲ ಪಕ್ಷದ ಜನ ಸಂಭ್ರಮಿಸುತ್ತಾರೆ. ಜಾತಿಯ ಕಾರಣಕ್ಕೆ ಮುಖ್ಯಮಂತ್ರಿಯ ಪಟ್ಟದಲ್ಲಿ ಕುಳಿತುಕೊಳ್ಳಬೇಕು ಎನ್ನುವವರಿಗೆ ಇವೆಲ್ಲ ಅರ್ಥವಾಗೋದು ಬಹಳ ಕಷ್ಟ.

ಮೋದಿ ಕರ್ನಾಟಕಕ್ಕೆ ಬರಲಿದ್ದಾರೆ. ಇನ್ನು ಕೆಲವು ದಿನ ಮತ್ತೆ ಮತ್ತೆ ಬರಲಿದ್ದಾರೆ. ಅವರು ಬರುವವರೆಗೆ ಅಷ್ಟೇ ಉಳಿದವರ ಹವಾ. ಅವರು ಬಂದಮೇಲೆ ಅವರದ್ದೇ ಹವಾ. ಆ ತಣ್ಣನೆ ಗಾಳಿ ಜೋರಾಗಿ ಬೀಸಲಿ, ಬಿಸಿಲ ಬೇಗೆಯನ್ನು ಕಡಿಮೆ ಮಾಡಿ ರಾಜ್ಯಕ್ಕೆ ತಂಪು ತರುವವರನ್ನು ಅಧಿಕಾರಕ್ಕೆ ಕೂಡಿಸಲಿ. ಏನಂತೀರಿ?

‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

ಅಸದ್ ಅಹ್ಮದ್ ಮತ್ತು ಗುಲಾಮ್ ಮೊಹಮ್ಮದ್ ಇವರಿಬ್ಬರ ಎನ್ಕೌಂಟರ್ ಉತ್ತರ ಪ್ರದೇಶದಲ್ಲಿ ಆಗುತ್ತಿದ್ದಂತೆ ದೇಶದೆಲ್ಲೆಡೆ ಸಂಚಲನ ಮೂಡಿತ್ತು. ಅದರ ಕುರಿತಂತೆ ಲೇಖನ ಬರೆಯಬೇಕು ಎನ್ನುವಷ್ಟರಲ್ಲಿ ಅವರಪ್ಪ ಆತಿಕ್ ಅಹಮ್ಮದ್‌ನ ಹೆಣ ಬಿದ್ದಿದೆ. ಮೇಲ್ನೋಟಕ್ಕೆ ಇದು ಬಾಡಿಗೆ ಹಂತಕರು ಮಾಡಿರುವ ಹತ್ಯೆ ಎಂಬುದು ಗೋಚರವಾಗುತ್ತದಾದರೂ ಅನೇಕ ಮಾಧ್ಯಮಮಂದಿ ಮತ್ತು ಭಯೋತ್ಪಾದಕರ ಕುರಿತಂತೆ ಅನುಕಂಪ ಹೊಂದಿರುವ ಮಂದಿ ಯೋಗಿ ಆದಿತ್ಯನಾಥರ ಕೈವಾಡವೆಂದು ಶಂಕಿಸುತ್ತಿದ್ದಾರೆ. ಆದರೆ ಒಂದಂತೂ ನಿಜ. ಆತಿಕ್‌ನ ಸಾವು ಬರಲಿರುವ ಘೋರ ವಿಪತ್ತಿನ ಸಣ್ಣ ಮುನ್ಸೂಚನೆ ಎಂದೆನಿಸುತ್ತದೆ. ಲೇಖನದುದ್ದಕ್ಕೂ ಅದು ಹೇಗೆಂದು ವಿವರಿಸಲು ಯತ್ನಿಸುವೆ. 

ಹಾಗೆ ನೋಡಿದರೆ ಆತಿಕ್ ಸಂತನೇನೂ ಅಲ್ಲ. ಪಾಲ್ಘರ್‌ನಲ್ಲಿ ಸಾಧುಗಳ ಹತ್ಯೆಯಾದಾಗ ಮಿಸುಕಾಡದ ಮಂದಿಯೆಲ್ಲ ಆತಿಕ್‌ನ ಹತ್ಯೆಯ ಕುರಿತಂತೆ ವ್ಯಕ್ತಪಡಿಸುತ್ತಿರುವ ಅನುಕಂಪದ ಪ್ರಮಾಣವನ್ನು ನೋಡಿದರೆ, ಅವರೆಲ್ಲರ ಪಾಲಿಗೆ ಆತ ಮಹಾತ್ಮಾ ಗಾಂಧೀಯೇನೊ ಎನಿಸುತ್ತಿದೆ. 43 ವರ್ಷಗಳಲ್ಲಿ ಆತಿಕ್‌ನ ಮೇಲೆ ನೂರಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಪಹರಣ, ಮಾನಭಂಗ, ದರೋಡೆಯಂಥವಲ್ಲದೇ ಕೊಲೆ ಪ್ರಕರಣಗಳೂ ಇವೆ. ಈ 43 ವರ್ಷಗಳಲ್ಲಿ ಅವನನ್ನು ಒಂದೇ ಒಂದು ಕೇಸಿನಲ್ಲಿ ಜೈಲಿಗೆ ತಳ್ಳುವುದು ಸಾಧ್ಯವಾಗಿರಲಿಲ್ಲ. ಆತನ ಕೇಸನ್ನು ಕೈಗೆತ್ತಿಕೊಳ್ಳುವುದಿಲ್ಲವೆಂದು ಅನೇಕ ಬಾರಿ ನ್ಯಾಯಾಧೀಶರುಗಳೇ ಕೈಚೆಲ್ಲಿ ಎದ್ದುಹೋದ ಉದಾಹರಣೆಯಿದೆ. ಯಾವುದಾದರೂ ಒಬ್ಬ ನ್ಯಾಯಾಧೀಶರು ಧೈರ್ಯ ಮಾಡಿ ವಿಚಾರಣೆಗೆ ನಿಂತರೆ ಅವನಿಗೆ ಜಾಮೀನು ಕೊಟ್ಟು ಮನೆಗೆ ಕಳಿಸುವುದಷ್ಟೇ ಅಲ್ಲದೇ ಬೇರೇನೂ ಮಾಡುತ್ತಿರಲಿಲ್ಲ. ನಿಮಗೆ ಅಚ್ಚರಿಯಾಗಬಹುದು. ಈ ಕೊಲೆಗಡುಕ ಐದು ಬಾರಿ ಶಾಸಕನಾಗಿದ್ದ! ಮೂರು ಬಾರಿ ಪಕ್ಷೇತರನಾಗಿ, ಒಮ್ಮೆ ಸಮಾಜವಾದಿ ಪಾರ್ಟಿಯಿಂದ, ಮತ್ತೊಮ್ಮೆ ಅಪ್ನಾದಲ್ ಪಾರ್ಟಿಯಿಂದ ಆಯ್ಕೆಯಾಗಿದ್ದ. 2004ರಲ್ಲಿ ಸಮಾಜವಾದಿ ಪಕ್ಷದಿಂದಲೇ ಸಂಸತ್ ಸದಸ್ಯನಾಗಿದ್ದ ಈತ ಪಾರ್ಟಿ ಹೊರಹಾಕಿದ ಮೇಲೆ 2009ರಲ್ಲಿ ಅಪ್ನಾದಲ್‌ನಿಂದ ಆಯ್ಕೆಯಾಗಿದ್ದ. 2012ರಲ್ಲಿ ಜೈಲಿನಿಂದಲೇ ಸ್ಪರ್ಧಿಸಿ 2005ರಲ್ಲಿ ತಾನೇ ಕೊಂದಿದ್ದ ರಾಜು ಪಾಲ್‌ ಪತ್ನಿಯ ಎದುರು ಸೋತಿದ್ದ. 2014ರಲ್ಲಿ ಸಮಾಜವಾದಿ ಪಕ್ಷ ಇಂತಹ ಕೊಲೆಗಡುಕ ಕ್ರಿಮಿನಲ್‌ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಸಂಸತ್ ಸದಸ್ಯನನ್ನಾಗಿಸುವ ಪ್ರಯತ್ನ ಮಾಡಿತ್ತು. ಮೋದಿ ಸುನಾಮಿಯಲ್ಲಿ ಅನೇಕ ಆತಿಕ್‌ಗಳು ಕೊಚ್ಚಿಹೋದರು. 

ಈಗ ಆತಿಕ್ ಸುದ್ದಿಯಾಗುತ್ತಿರುವುದೇಕೆಂದರೆ 2005ರಲ್ಲಿ ತನ್ನ ತಮ್ಮನ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದ ರಾಜುಪಾಲ್‌ನನ್ನು ಈತ ಶೂಟ್ಔಟ್‌ನಲ್ಲಿ ಕೊಂದಿದ್ದ. ಪ್ರತ್ಯಕ್ಷವಾಗಿ ಇದನ್ನು ನೋಡಿದ್ದ ಉಮೇಶ್ ಪಾಲ್ ಪೊಲೀಸರಿಗೆ ಎಲ್ಲ ವಿವರಗಳನ್ನೂ ಕೊಟ್ಟಮೇಲೆ, ಅಂದಿನ ಡಿಜಿಪಿ ಓಪಿಸಿಂಗ್ ಇವನ ಠಾಣ್ಯವನ್ನು ಹುಡುಕಿ ತನ್ನ ಪಡೆಯೊಂದಿಗೆ ಸುತ್ತುವರೆದು ನಿಂತಿದ್ದರು. ಕೆಲವೇ ನಿಮಿಷಗಳಲ್ಲಿ ಪೊಲೀಸರ ಸುತ್ತಲೂ ಆತಿಕ್ನ ಪಡೆ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ತೊಡೆ ತಟ್ಟಿಕೊಂಡು ನಿಂತುಬಿಟ್ಟಿತು. ಓಪಿಸಿಂಗ್ ನೇರವಾಗಿ ಆತಿಕ್‌ನನ್ನೇ ಹಿಡಿದು, ಪೊಲೀಸರ ಮೈಗೆ ಕೆರೆದ ಗಾಯವಾದರೂ ಇವನನ್ನು ಉಡಾಯಿಸಿಬಿಡುತ್ತೇನೆ ಎಂದಿದ್ದರು. ಎಲ್ಲವೂ ಥೇಟು ಸಿನಿಮಾದಂತೆಯೇ. ಆತನನ್ನು ಬಂಧಿಸಿ ಎಳೆದು ತರಬೇಕೆನ್ನುವಷ್ಟರಲ್ಲಿ ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಮಂದಿ ಒತ್ತಡ ತಂದು ಆತಿಕ್‌ನನ್ನು ಬಿಡಿಸಿಕೊಂಡರು! ಇತ್ತೀಚೆಗೆ ಓಪಿಸಿಂಗ್ ಇವೆಲ್ಲವನ್ನೂ ವಿವರವಾಗಿ ಹೇಳಿದ್ದಾರೆ. ತನ್ನ ವಿರುದ್ಧ ಇರಬಹುದಾಗಿದ್ದ ಸಾಕ್ಷಿ ಉಮೇಶ್ ಪಾಲ್‌ನನ್ನು ಮರುಕ್ಷಣವೇ ಅಪಹರಿಸಿ ತಂದ ಆತಿಕ್ ಹೊಡೆದು-ಬಡಿದು ಪೊಲೀಸರಿಗೆ ಆತ ಕೊಟ್ಟ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ಬರೆಸಿಕೊಂಡ. ಉಮೇಶ್ ಪಾಲ್ ಕೂಡ ಕಡಿಮೆ ಆಸಾಮಿಯಲ್ಲ. ಅವರಿಂದ ಬಿಡುಗಡೆಯಾಗಿ ಬಂದವನೇ ನೇರ ಪೊಲೀಸರ ಬಳಿಸಾರಿ ನಡೆದುದೆಲ್ಲವನ್ನೂ ಹೇಳಿ ಆತಿಕ್‌ನ ಕೊರಳಿಗೆ ಉರುಳನ್ನು ಗಟ್ಟಿಯಾಗಿಯೇ ಬಿಗಿದ. 

ಕಳೆದ ಫೆಬ್ರವರಿ ತಿಂಗಳಲ್ಲಿ ಉಮೇಶ್ ಪಾಲ್‌ನ ಹೇಳಿಕೆಯಿಂದಾಗಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗಿರುವ ಆತಿಕ್‌ನ ಇಂದಿನ ಪರಿಸ್ಥಿತಿಗೆ ಪ್ರತೀಕಾರವಾಗಿ ಅವನ ಮಗ ಅಸದ್ ಉಮೇಶ್‌ನನ್ನು ಮುಗಿಸುವ ಸಂಚು ರೂಪಿಸಿದ. ಪೊಲೀಸರು ಆನಂತರ ಇವರೆಲ್ಲರನ್ನೂ ಬಂಧಿಸಿದಾಗ ಇವರ ಯೋಜನೆಯ ಒಟ್ಟಾರೆ ರೂಪುರೇಷೆಗಳು ಹೊರಬಂದಿದೆ. 12 ಐಫೋನ್‌ಗಳನ್ನು ಆತಿಕ್‌ನ ಹೆಂಡತಿ ಯೋಜನೆಯಲ್ಲಿ ಭಾಗಿಯಾದವರಿಗೆಲ್ಲ ಕೊಡಿಸಿದ್ದಳು. ಪ್ರತಿಯೊಬ್ಬರೂ ತಮಗೆ ಪ್ರತ್ಯೇಕ ಗುಪ್ತನಾಮ ಕೊಟ್ಟುಕೊಂಡಿದ್ದರು. ಸಲ್ಮಾನ್ ಖಾನನ ಆರಾಧಿಸುತ್ತಿದ್ದ ಅಸದ್ ತನ್ನ ಹೆಸರನ್ನು ರಾಧೆ ಎಂದಿಟ್ಟುಕೊಂಡಿದ್ದನಂತೆ. ಸಲ್ಮಾನನ ಇತ್ತೀಚಿನ ಸಿನಿಮಾದ ಹೆಸರು ಅದು. ಇವರೆಲ್ಲರೂ ಐ ಮೆಸೇಜ್‌ಗಳ ಮೂಲಕ ಮಾತ್ರ ಚರ್ಚೆ ನಡೆಸುತ್ತಿದ್ದರು. ಗುಂಡು ಹೊಡೆಯುವವ, ಬಾಂಬ್ ಎಸೆಯುವವ, ಚಲನ-ವಲನಗಳ ಮಾಹಿತಿ ನೀಡುವವ, ಹೀಗೆ ಎಲ್ಲರಿಗೂ ಪ್ರತ್ಯೇಕವಾದ ಜವಾಬ್ದಾರಿ ನೀಡಲಾಗಿತ್ತು. ಉಮೇಶ್‌ಪಾಲ್‌ನ ಮೇಲೆ ಇವರು ದಾಳಿ ಮಾಡುವಾಗ ಎಲ್ಲ ಎಚ್ಚರಿಕೆಯನ್ನೂ ಇಟ್ಟುಕೊಂಡಿದ್ದರಾದರೂ ಸಿಕ್ಕ ಸಿಸಿಟಿವಿ ಕಡತಗಳ ಆಧಾರದ ಮೇಲೆ ಪೊಲೀಸರು ಇವರ ವಿರುದ್ಧ ಬಲೆ ಬೀಸಿದರು. ಸದನದಲ್ಲಿ ಈ ಕುರಿತಂತೆ ಕೋಲಾಹಲವೆದ್ದಿತು. ಮಾಫಿಯಾ ಡಾನ್‌ಗಳನ್ನು ಸಾಕಿ ಸಲಹಿದ ಸಮಾಜವಾದಿ ಪಕ್ಷಕ್ಕೆ ಸರಿಯಾಗಿಯೇ ತಪರಾಕಿ ಕೊಟ್ಟ ಯೋಗಿ, ಪ್ರತಿಯೊಬ್ಬ ಗೂಂಡಾನನ್ನು ಹುಡುಹುಡುಕಿ ಕೊಲ್ಲಲಾಗುವುದು ಎಂದಿದ್ದರು. ಆದಷ್ಟು ಬೇಗ ಈ ಸಾವಿಗೆ ಕಾರಣರಾದ ಗೂಂಡಾಗಳನ್ನು ಹಿಡಿಯುವುದು, ಅಗತ್ಯವಿದ್ದರೆ ಮುಗಿಸಿಬಿಡುವುದು ಅತ್ಯವಶ್ಯಕವಾಗಿತ್ತು. ಪೊಲೀಸರು ಚುರುಕಾದರು. ಭಿನ್ನ-ಭಿನ್ನ ತಂಡಗಳನ್ನು ರಚಿಸಿಕೊಂಡು 40 ದಿನಗಳ ಕಾಲ ಈ ಗೂಂಡಾಗಳನ್ನು ಅಟ್ಟಿಸಿಕೊಂಡು ಹೋದರು. ಇತರರನ್ನು ಕೊಲ್ಲುವಾಗ ಮೆರೆದಾಡುತ್ತಿದ್ದ ಅಸದ್ ಮತ್ತವನ ಸಹಚರರು ಪೊಲೀಸರು ಅಟ್ಟಿಸಿಕೊಂಡು ಬಂದಾಗ ನೀರಲ್ಲದ್ದಿದ ಬೆಕ್ಕಿನಂತಾಗಿಬಿಟ್ಟಿದ್ದರು. ಈ ತಂಡದ ಸದಸ್ಯರನೇಕರ ಮನೆಗಳನ್ನು ಬುಲ್ಡೋಜ್ ಮಾಡಿದ ಬಾಬಾ ಗೂಂಡಾಗಳ ಎದೆಯಲ್ಲಿ ಭಯ ಅವತರಿಸುವಂತೆ ಮಾಡಿಬಿಟ್ಟರು. ಈ ವೇಳೆಗಾಗಲೇ ಆತಿಕ್‌ನ ಅನೇಕ ಸೋದರ ಸಂಬಂಧಿಗಳು ಜೈಲು ಸೇರಿಯಾಗಿತ್ತು. ಆತಿಕ್‌ನ ಹೆಂಡತಿ ಮತ್ತು ತಮ್ಮನ ಹೆಂಡತಿಯರು ಉಟ್ಟಬಟ್ಟೆಯಲ್ಲಿ ಊರುಬಿಟ್ಟು ಓಡಿ ಹೋಗಿದ್ದರು. ಒಂದು ಕಾಲದಲ್ಲಿ ಉತ್ತರಪ್ರದೇಶವೇ ತಮ್ಮದೆಂದು ಮೆರೆದಾಡುತ್ತಿದ್ದವರೆಲ್ಲ ಈಗ ಬದುಕಿದೆಯಾ ಬಡಜೀವವೇ ಎಂಬಂತಾಗಿದ್ದರು. ಇಂತಹ ಒಂದು ಹೊತ್ತಲ್ಲಿಯೇ ಪೊಲೀಸರ ಕೈಗೆ ಸಿಕ್ಕುಬಿದ್ದ ಅಸದ್ ಎರ್ರಾಬಿರ್ರಿ ಗುಂಡು ಹಾರಿಸತೊಡಗಿದ. ಪೊಲೀಸರು ಮುಲಾಜು ನೋಡದೇ ಅಸದ್ ಮತ್ತು ಗುಲಾಮ್ ಇಬ್ಬರನ್ನೂ ನಡುರಸ್ತೆಯಲ್ಲಿಯೇ ಹೆಣವಾಗಿಸಿಬಿಟ್ಟರು! ಇತ್ತ ಜೈಲಿನಲ್ಲಿದ್ದ ಆತಿಕ್, ‘ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸರನ್ನು ನಾನು ಬಿಡುವುದಿಲ್ಲ. ಒಮ್ಮೆ ಜೈಲಿನಿಂದ ಹೊರಬಂದಮೇಲೆ ಗದ್ದಿಜಾತಿಯ ತಾಕತ್ತನ್ನು ತೋರಿಸುತ್ತೇನೆ’ ಎಂದಿದ್ದ. ಗಮನಿಸಬೇಕಾದ ಸಂಗತಿ ಇದು. ಸ್ವತಃ ವೈರ್ನ ಸಂಪಾದಕಿ ಅರ್ಫಾ ಖನ್ನುಂ ಆತಿಕ್ ಅಹ್ಮದ್‌ನನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಸಲ್ಮಾನರಲ್ಲಿಯೇ ಹಿಂದುಳಿದ ಜಾತಿಯಾದ ಗದ್ದಿ ಜನಾಂಗದವರಿಗೆ ಮಾಡುತ್ತಿರುವ ಅವಮಾನ ಎಂದಿದ್ದಳು. ‘ನಾವೆಲ್ಲ ಒಂದೆ ಜಾತಿ, ಒಂದೆ ಕುಲ’ ಎನ್ನುವ ಮುಸಲ್ಮಾನರು ಇಂತಹ ಸಂದರ್ಭಗಳಲ್ಲಿ ಜಾತಿಯ ಕಾರ್ಡ್ ಬಳಸಲು ಹಿಂದೆ-ಮುಂದೆ ನೋಡುವುದಿಲ್ಲ. ಕೆಲವು ಪತ್ರಕರ್ತರು ಅದೆಷ್ಟು ಲಜ್ಜೆಗೆಟ್ಟವರೆಂದರೆ, ರಾಜ್‌ದೀಪ್ ಸರ್‌ದೇಸಾಯಿ ಲಲ್ಲನ್‌ಟಾಪ್‌ನ ಸಂದರ್ಶನವೊಂದರಲ್ಲಿ ಆತಿಕ್ ಮನೆಯಲ್ಲಿ ತಿಂದ ತಂದೂರಿ ಎಷ್ಟು ಚೆನ್ನಾಗಿತ್ತು ಎಂದು ವರ್ಣಿಸಿದ್ದ. ಮಾಫಿಯಾ ಡಾನ್‌ಗೂ ಒಂದೊಳ್ಳೆ ಮುಖವಿದೆ ಎಂದು ಹೇಳುವ ಪ್ರಯತ್ನ ಅದು. 

ಇಲ್ಲಿಯವರೆಗೂ ಎಲ್ಲವೂ ಸರಿಯೇ. ಆದರೆ ಆತಿಕ್‌ನ ಹತ್ಯೆಯಾದದ್ದು ಮಾತ್ರ ಗಾಬರಿ ಹುಟ್ಟಿಸುವಂಥದ್ದು. ಮಾಧ್ಯಮದ ಎದುರಿಗೆ, ಪೊಲೀಸರ ನಡುವೆಯೇ ಅತ್ಯಾಧುನಿಕ ಶಸ್ತ್ರ ಹಿಡಿದುಬಂದು ಆಕ್ರಮಣ ಮಾಡುತ್ತಾರೆಂದರೆ ಇದರ ಹಿಂದೆ ದೊಡ್ಡದೊಂದು ಪಿತೂರಿ ಇರಲೇಬೇಕು. ಇಷ್ಟಕ್ಕೂ ಭಾರತದಲ್ಲಿ ನಾಯಕತ್ವ ಬದಲಾವಣೆಗೆ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಪೂರ್ವಭಾವಿಯಾಗಿ ಅಮೇರಿಕಾ ಎರಿಕ್ ಗಾರ್ಸಿಟಿಯನ್ನು ರಾಯಭಾರಿಯಾಗಿ ಭಾರತಕ್ಕೆ ಕಳಿಸಿತು. ಆತನನ್ನು ಈ ಹುದ್ದೆನೀಡಿ ಕಳಿಸಬೇಕೆಂದು 2021ರ ಮಧ್ಯಭಾಗದಲ್ಲಿಯೇ ನಿಶ್ಚಯಿಸಲಾಗಿತ್ತು. ಆದರೆ ಅಮೇರಿಕಾದ ಸೆನೆಟ್‌ನಲ್ಲಿ ಬಹುಮತವಿರದಿದ್ದುದರಿಂದ ಬೈಡನ್ ತಡೆ ಹಿಡಿದಿದ್ದ. ಬಹುಮತ ಖಾತ್ರಿಯಾದೊಡನೆ ಭಾರತಕ್ಕೆ ಕಳಿಸುವ ನಿಶ್ಚಯ ಮಾಡಿದ. ಈ ಎರಿಕ್ ಲಾಸ್ ಏಂಜಲೀಸ್‌ನ ಮೇಯರ್ ಆಗಿದ್ದವ ಮತ್ತು ಅಲ್ಲಿನ ಬುದ್ಧಿಜೀವಿಗಳ ಕಣ್ಮಣಿ. ಆತನ ಪತ್ನಿಯೊಂದಿಗೆ ಸೇರಿ ಅನೇಕ ಪ್ರತಿಭಟನೆಗಳಲ್ಲಿ ಆತ ಪಾಲ್ಗೊಂಡಿದ್ದಾನೆ. ಸಿಎಎ ವಿರುದ್ಧ ಭಾರತದಲ್ಲಿ ಪ್ರತಿಭಟನೆ ನಡೆಯುವಾಗ ಗಂಡ-ಹೆಂಡತಿ ಇಬ್ಬರೂ ಪ್ರತ್ಯಕ್ಷ-ಪರೋಕ್ಷವಾಗಿ ಅದರಲ್ಲಿ ಭಾಗಿಯಾಗಿದ್ದರು. ಆತನನ್ನು ರಾಯಭಾರಿ ಎಂದು ಘೋಷಿಸಿದೊಡನೆ ಆತ ಹೇಳಿದ್ದೇನು ಗೊತ್ತೇ? ‘ನನ್ನ ಅತ್ಯಂತ ಪ್ರಮುಖವಾದ ಕೆಲಸವೇ ಸಿಎಎ ಬಗೆಯ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ಮಾನವ ಹಕ್ಕುಗಳ ಸ್ಥಾಪನೆ ಮಾಡುವುದು. ಯಾರು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೋ ಅಂಥವರೊಡನೆ ನೇರವಾಗಿ ಮಾತುಕತೆಯಲ್ಲಿ ತೊಡಗುವುದು’ ಎಂದಿದ್ದ. ಇದರರ್ಥ ನೇರವಾಗಿ ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ಮೋದಿ ವಿರೋಧಿಗಳನ್ನೆಲ್ಲ ತನ್ನ ದೂತಾವಾಸದ ಛತ್ರಛಾಯೆಯಲ್ಲಿ ಒಂದುಗೂಡಿಸುವುದು ಅಂತ! ಉಕ್ರೇನ್‌ನಲ್ಲಿ ಅಮೇರಿಕಾ ತನ್ನ ಪ್ರಭಾವ ಬಳಸಿ ಅಲ್ಲಿನ ರಾಷ್ಟ್ರೀಯವಾದಿ ಅಧ್ಯಕ್ಷನನ್ನು ಅಧಿಕಾರದಿಂದ ಕೆಳಗಿಳಿಸಿ ಕೈಗೊಂಬೆಯಾಗಿರುವ ಶತಮೂರ್ಖ ಜೆಲ್ಸೆಂಕಿಯನ್ನು ಕೂರಿಸಿತಲ್ಲ, ಭಾರತದಲ್ಲೂ ಹಾಗೆ ಮಾಡುವ ಯೋಜನೆ ಅದರದ್ದು. ಮೋದಿಯನ್ನು ಕೆಳಗಿಳಿಸಿದ ನಂತರ ಜೆಲ್ಸೆಂಕಿಯಷ್ಟೇ ಮೂರ್ಖನೂ ಮತ್ತು ಕೈಗೊಂಬೆಯೂ ಆಗಬಲ್ಲ ನಾಯಕ ಯಾರಿರಬಹುದು ಹೇಳಿ?

ಅಮೇರಿಕಾ ಭಾರತದಲ್ಲಿ ದೊಡ್ಡ ತಳಮಳವನ್ನು ಸೃಷ್ಟಿಸುವ ಧಾವಂತದಲ್ಲಿದೆ. ಸಿಎಎ ವಿರುದ್ಧದ ಹೋರಾಟ ಅದಕ್ಕೊಂದು ಅಸ್ತ್ರವಾಗಿ ದೊರಕಿತ್ತು. ಸರ್ಕಾರ ಅದನ್ನು ನಿಭಾಯಿಸಿದ ರೀತಿ ಮತ್ತು ಅದನ್ನು ಜಾರಿಗೆ ತರುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯಿಂದಾಗಿ ಅಮೇರಿಕಾ ಪತರಗುಟ್ಟಿದೆ. ಹೀಗಾಗಿಯೇ ಅನವಶ್ಯಕವಾಗಿ ರಾಮನವಮಿಯ ಮೆರವಣಿಗೆಯ ಮೇಲೆ ಕಲ್ಲೆಸೆದು ಹಿಂದೂಗಳನ್ನು ಭಡಕಾಯಿಸುವ ಯೋಜನೆ ರೂಪಿಸುತ್ತಿರೋದು. ಪಿಎಫ್ಐ ನಿಷೇಧದ ನಂತರ ಈ ಯೋಜನೆಗಳನ್ನೆಲ್ಲ ನೇರವಾಗಿ ಕಾರ್ಯರೂಪಕ್ಕೆ ತರುವ ಒಂದು ಸಂಸ್ಥೆ ಇಲ್ಲವಾಗಿ ಅಮೇರಿಕಾ ಚಡಪಡಿಸುತ್ತಿದೆ. ಹೀಗಾಗಿಯೇ ಮೂರ್ಖರಂತಿರುವ ಈ ಮಂದಿಯನ್ನು ಭಡಕಾಯಿಸಲು ಭಿನ್ನ-ಭಿನ್ನ ಪ್ರಯತ್ನಗಳನ್ನು ಮಾಡುತ್ತಿರೋದು. ಅದರ ಒಂದು ಭಾಗವೇ ಆತಿಕ್‌ನ ಹತ್ಯೆ! 

ಅದಾಗಲೇ ಓವೈಸಿ, ಸರ್ಕಾರ ಬೇಕಂತಲೇ ಈ ಕೆಲಸವನ್ನು ಮಾಡಿಸಿದೆ ಎಂದು ಹೇಳಿಕೆ ನೀಡಿಬಿಟ್ಟಿದ್ದಾನೆ. ಮುಸಲ್ಮಾನರ ಪರವಾಗಿ ಸದಾ ನಿಲ್ಲುತ್ತಿದ್ದ ಆತಿಕ್‌ನಂಥವನನ್ನು ಪರಿವಾರ ಸಮೇತವಾಗಿಯೇ ಮುಗಿಸುತ್ತಾರೆಂದರೆ ಇನ್ನು ಸಾಮಾನ್ಯ ಮುಸಲ್ಮಾನನ ಕಥೆಯೇನು? ಎಂಬ ಪ್ರಶ್ನೆಯನ್ನು ಹಿಂಸೆ ತುರುಕುವ ಮಸೀದಿಗಳಲ್ಲಿ ಕೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಈ ಕೋಮು ಶಾಂತಿಯಿಂದ ಕೂಡಿರಬಹುದೇನೊ. ಆದರೆ ಇತರೆ ರಾಜ್ಯಗಳಲ್ಲಿ ಇದು ತೀವ್ರಸ್ವರೂಪ ಪಡೆದುಕೊಳ್ಳುತ್ತದೆ, 2024ರ ವೇಳೆಗೆ ಸಾಕಪ್ಪ, ಸಾಕು ಎನಿಸುವಷ್ಟರಮಟ್ಟಿಗೆ. ಇದಕ್ಕೆ ಪೂರಕವಾಗಿ ನ್ಯಾಯ ವ್ಯವಸ್ಥೆಯನ್ನೂ ಕೂಡ ಇವರು ಬಳಸಿಕೊಳ್ಳುತ್ತಿದ್ದಾರೆ. ಅದಾನಿಯ ವಿರುದ್ಧ ಅನವಶ್ಯಕವಾಗಿ ಸುಪ್ರೀಂಕೋರ್ಟು ರೂಪಿಸಿರುವ ತಂಡವನ್ನು ನೋಡಿದರೆ ಗೊತ್ತಾಗುತ್ತದೆ. ಇತ್ತೀಚೆಗೆ ನ್ಯಾಯಾಧೀಶರೊಬ್ಬರು ಪ್ರಧಾನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಶಕ್ತಿ ನಮಗೆ ಬೇಕು ಎಂದು ಕೇಳಿಕೊಂಡಿದ್ದು ಗಮನಿಸಬೇಕಾದ್ದೇ. ಮುಖ್ಯ ನ್ಯಾಯಾಧೀಶರು ‘ಇನ್ನು ಮುಂದೆ ಯಾರಾದರೂ, ಯಾವ ಕ್ಷಣದಲ್ಲಾದರೂ ಮನೆ ಉರುಳಿಸುವ, ಸರ್ಕಾರ ತೊಂದರೆ ಕೊಡುವ ವಿಚಾರದ ಕುರಿತಂತೆ ನೇರವಾಗಿ ನಮ್ಮ ಬಾಗಿಲು ಬಡಿಯಬಹುದು’ ಎಂದು ಹೇಳಿಕೆ ಕೊಟ್ಟಿರುವುದು ಸ್ಪಷ್ಟವಾಗಿ ಈ ಪ್ರತ್ಯೇಕತಾವಾದಿಗಳಿಗೆ ಶಕ್ತಿ ತುಂಬುವ ಪ್ರಕ್ರಿಯೆಯೇ. ಮುಸಲ್ಮಾನರನ್ನೇ ಮುಂದಿಟ್ಟುಕೊಂಡರೆ ಹಿಂದೂಗಳು ಒಟ್ಟಾಗಿ ನರೇಂದ್ರಮೋದಿಗೆ ವೋಟು ಹಾಕುವ ಸಂಭವವಿರುವುದರಿಂದ ಖಾಲಿಸ್ತಾನಿಗಳಿಗೆ ವಿಶೇಷ ಬೆಂಬಲವನ್ನು ಕೊಟ್ಟಿದ್ದು ಅಮೇರಿಕಾ-ಯುರೋಪುಗಳು. ಆದರೆ ಸರ್ಕಾರ ಅದನ್ನು ಸಂಭಾಳಿಸಿದ ರೀತಿ ಮಾತ್ರ ಮೆಚ್ಚಬೇಕಾದ್ದು. ಓಡಿ ಹೋದ ಖಾಲಿಸ್ತಾನೀ ನಾಯಕ ಅಮೃತ್‌ಪಾಲ್‌ಸಿಂಗ್ ತನ್ನ ತಾನು ಜನರ ನಡುವಿನ ಶ್ರೇಷ್ಠ ನಾಯಕ ಎಂದು ಬೊಗಳೆ ಕೊಚ್ಚಿಕೊಳ್ಳುತ್ತಿದ್ದ. ಅವನು ಕಾಣೆಯಾಗಿ ಇಷ್ಟು ದಿನ ಕಳೆದರೂ ಪಂಜಾಬಿನಲ್ಲಿ ಆತನ ಕುರಿತಂತೆ ನಯಾಪೈಸೆ ಚರ್ಚೆಯಿಲ್ಲ ಎಂದಾಗಲೇ ಇವನ ಯೋಗ್ಯತೆ ಅರಿವಾಗಿರಬೇಕು. 

ಆತಿಕ್ ಅಹ್ಮದ್ ತನ್ನ ಬಳಿ ಆಯುಧಗಳಿಗೆ ಬರವಿಲ್ಲವೆಂದೂ ಪಾಕಿಸ್ತಾನ ಡ್ರೋಣ್ ಮೂಲಕ ಪಂಜಾಬ್ ಗಡಿಗೆ ಅದನ್ನು ತಲುಪಿಸುವುದೆಂದೂ, ಕಾಶ್ಮೀರಿಗಳು ಅದನ್ನೇ ಬಳಸುತ್ತಾರೆ ಎಂದೂ ಹೇಳಿಕೆ ಕೊಟ್ಟಿದ್ದ. ಶತಾಯ-ಗತಾಯ ಪಂಜಾಬಿನಲ್ಲಿ ಅಧಿಕಾರ ನಡೆಸಬೇಕೆಂದು ಕೇಜ್ರಿವಾಲ್ ಪಣತೊಟ್ಟಿದ್ದೇಕೆಂದು ಅರ್ಥವಾಯ್ತೇನು? ಇನ್ನು ಕರ್ನಾಟಕದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯಲು ಹಾತೊರೆಯುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಐದು ವರ್ಷದ ಸರ್ಕಾರದ ನಂತರ ಭಾಜಪ ಅಧಿಕಾರಕ್ಕೆ ಬರದೇ ಹೋಗಿದ್ದರೆ, ಸಿದ್ದರಾಮಯ್ಯನವರೇ ಮತ್ತೊಮ್ಮೆ ಕುರ್ಚಿಯ ಮೇಲೆ ಕುಳಿತಿದ್ದರೆ, ಪಿಎಫ್ಐ ಇಲ್ಲೂ ಕೆಲವು ಆತಿಕ್ ಅಹ್ಮದ್‌ರನ್ನು ಸೃಷ್ಟಿಸುತ್ತಿತ್ತು! 

ಮತದಾನ ಮಾಡುವ ಮುನ್ನ ಇಡೀ ರಾಷ್ಟ್ರವನ್ನು ಕಣ್ಮುಂದೆ ತಂದುಕೊಳ್ಳಿ.

ಬೇರೆಯವರಿಗೆ ಬೆಂಕಿ ಹಚ್ಚೋದು ತಪಸ್ಸು ಹೇಗೆ?!

ಬೇರೆಯವರಿಗೆ ಬೆಂಕಿ ಹಚ್ಚೋದು ತಪಸ್ಸು ಹೇಗೆ?!

ಇದು ರಂಜಾನ್ ತಿಂಗಳು. ಮುಸಲ್ಮಾನರ ಅತ್ಯಂತ ಪವಿತ್ರವಾದ ಹಬ್ಬ. ಕುರಾನ್ ಅವತೀರ್ಣಗೊಂಡಿದ್ದು ಇದೇ ತಿಂಗಳಲ್ಲಿ ಎಂದು ಮುಸಲ್ಮಾನರು ನಂಬುತ್ತಾರೆ. ಅವತೀರ್ಣಗೊಳ್ಳೋದು ಅಂದರೆ ಇದು ಯಾರೊ ಬರೆದಿಟ್ಟದ್ದಲ್ಲ. ಬದಲಿಗೆ, ಭಗವಂತನೇ ಪ್ರವಾದಿಯವರಿಗೆ ಈ ವಾಕ್ಯಗಳು ಗೋಚರಿಸುವಂತೆ ಮಾಡಿದ್ದು. ಈ ಕಾರಣಕ್ಕಾಗಿ ಕುರಾನ್ ಮೇಲೆ ವಿಶೇಷವಾದ ಶ್ರದ್ಧೆ ಮತ್ತು ಗೌರವ. ಈ ತಿಂಗಳಲ್ಲೇ ಇದು ಅವತೀರ್ಣಗೊಂಡಿದ್ದರಿಂದ ಮುಸಲ್ಮಾನರ ಪಾಲಿಗೆ ಇದು ಪವಿತ್ರ ಮಾಸ ಕೂಡ. ಈ ತಿಂಗಳಲ್ಲಿ ಅವರು ಉಪವಾಸ ಮಾಡುತ್ತಾ ದಾನ-ಧರ್ಮಗಳಲ್ಲಿ ತೊಡಗಿಕೊಂಡು, ಕುರಾನಿನ ಪಠನ ಮಾಡಿ, ಅದರ ಸಾರವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡಿ ಆನಂತರ ಅದನ್ನು ಇಫ್ತಾರ್‌ನ ಮೂಲಕ ಮುರಿಯುತ್ತಾರೆ. ವಾಸ್ತವವಾಗಿ ಅರಾಬಿಕ್ ಮೂಲದಿಂದ ಬಂದಿರುವ ಈ ಪದದ ಅರ್ಥವೇನು ಗೊತ್ತೇ? ಚೆನ್ನಾಗಿ ಬೇಯುವುದು, ಉರಿದು ಹೋಗುವುದು, ಹೊಳೆಯುವುದು ಅಂತೆಲ್ಲ. ಸ್ವಲ್ಪ ನಮ್ಮ ಭಾಷೆಗೆ ತರ್ಜುಮೆ ಮಾಡಿದರೆ ತಪಸ್ಸು ಎಂದಷ್ಟೇ. ಇಷ್ಟನ್ನೂ ಏಕೆ ಹೇಳಬೇಕಾಯ್ತೆಂದರೆ ಈ ರಂಜಾನ್ ಮಾಸವನ್ನು ನೆಪವನ್ನಾಗಿರಿಸಿಕೊಂಡು ಇತ್ತೀಚೆಗೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮುಸಲ್ಮಾನರ ವಿರುದ್ಧ ನಯವಾದ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ‘ರಂಜಾನ್ ತಿಂಗಳು ಅತ್ಯಂತ ಪವಿತ್ರವಾಗಿರುವುದರಿಂದ ಈ ತಿಂಗಳಲ್ಲಿ ಮುಸಲ್ಮಾನರು ಯಾವ ದುಷ್ಕೃತ್ಯದಲ್ಲೂ ತೊಡಗಿರುವುದಿಲ್ಲ’ ಎಂದಿದ್ದಾರೆ. ವಾಸ್ತವವಾಗಿ ಅದು ಪಶ್ಚಿಮ ಬಂಗಾಳದ ರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನರು ನಡೆಸಿದ ಕಲ್ಲೆಸೆತದ ಆಕ್ರಮಣದಿಂದ ಅವರನ್ನು ಉಳಿಸುವ ಹೇಳಿಕೆಯಾಗಿತ್ತು. ದುರದೃಷ್ಟವೆಂದರೆ ಆಕೆ ಮುಸಲ್ಮಾನರನ್ನು ಶಾಶ್ವತವಾಗಿ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟಿದ್ದಾರೆ. ಅಲ್ಲದೇ ಮತ್ತೇನು? ರಂಜಾನಿನ ಒಂದು ತಿಂಗಳು ಅವರು ದುಷ್ಕೃತ್ಯದಲ್ಲಿ ತೊಡಗುವುದಿಲ್ಲವೆಂದರೆ ಉಳಿದ ಹನ್ನೊಂದು ತಿಂಗಳು ಅದೇ ಕೆಲಸವೆಂದಾಯ್ತಲ್ಲ ಮತ್ತು ರಂಜಾನ್ ತಿಂಗಳಲ್ಲೂ ಅವರೇ ಈ ಕೃತ್ಯವನ್ನು ಮಾಡಿದ್ದೆಂದು ಸಾಬೀತುಪಡಿಸಿಬಿಟ್ಟರೆ ದುಷ್ಕೃತ್ಯವೆಸಗುವುದೇ ಮುಸಲ್ಮಾನರ ಕೆಲಸವೆಂದು ದೀದಿಯ ಮಾತುಗಳು ಎಂದಾಯ್ತಲ್ಲ!

ದೀದಿ ಈ ಹೇಳಿಕೆ ನೀಡುವ ವೇಳೆಗೆ ಸರಿಯಾಗಿ ದುಬೈನ ಮುಸಲ್ಮಾನ ಮಿತ್ರರೊಬ್ಬರು ಮೊಬೈಲ್ ಸಂದೇಶವೊಂದನ್ನು ಕಳಿಸಿದ್ದರು. ದ.ರಾ ಬೇಂದ್ರೆಯ ವಾಕ್ಯವೆಂದು ಅವರು ಹೇಳುವ ಆ ಸಂದೇಶ ‘ಹಚ್ಚೋದಾದರೆ ದೀಪವನ್ನೇ ಹಚ್ಚು, ಬೆಂಕಿಯನ್ನಲ್ಲ; ಆರಿಸೋದಾದ್ರೆ ನೋವನ್ನು ಆರಿಸು, ನಗುವನ್ನಲ್ಲ’ ಎಂದಿತ್ತು. ಮೊದಲಿನಿಂದಲೂ ಕೆಣಕುವ ಸಂದೇಶವನ್ನೇ ಕಳಿಸುವ ರೂಢಿಯ ಆತ ಇದನ್ನು ಸಹೃದಯತೆಯಿಂದ ಕಳಿಸಿರಲಾರೆ ಎಂಬುದು ಗೊತ್ತಿದ್ದುದರಿಂದಲೇ ನಾನು ನಯವಾಗಿಯೇ, ‘ವಾಹ್! ಜಗವೆಲ್ಲ ಇದನ್ನು ಅರಿತಿದ್ದರೆ ಭಾರತ ಇಂದು ಅಖಂಡವಾಗಿರುತ್ತಿತ್ತು’ ಎಂದು ಉತ್ತರಿಸಿದೆ. ಅತ್ತಲಿಂದ ಈ ಕುರಿತ ಚರ್ಚೆ ಮುಂದುವರೆಯಲಿಲ್ಲ. ಮುಸಲ್ಮಾನರು ಹಿಂದೂಗಳ ಸಹವಾಸದಲ್ಲಿ ಎಷ್ಟು ಹಾಯಾಗಿ ನೆಮ್ಮದಿಯಿಂದಿದ್ದಾರೋ, ಜಗತ್ತಿನಲ್ಲೆಲ್ಲೂ ಹಾಗಿಲ್ಲ. ಆದರೂ ನೋವಿನ ಸಂಗತಿ ಎಂದರೆ ಭಾರತದ ಮುಸಲ್ಮಾನರು ದಿನಗಳೆದಂತೆ ಹೆಚ್ಚು-ಹೆಚ್ಚು ಮತಿಭ್ರಮಿತರಾಗುತ್ತಿದ್ದಾರೆ. ಹಿಂದುಗಳನ್ನು ಅವಹೇಳನ ಮಾಡಲು, ಅವರ ಮಂದಿರಗಳನ್ನು ಧ್ವಂಸಮಾಡಲು, ಮೂರ್ತಿಗಳನ್ನು ಭಂಜಿಸಲು ಅವರಿಗೆ ಇಂತಹ ಮಾಸವೇ ಆಗಬೇಕೆಂದೇನೂ ಇಲ್ಲ. ರಂಜಾನ್ ಸೇರಿದಂತೆ ಎಲ್ಲಾ ತಿಂಗಳಲ್ಲೂ ಈ ಕೆಲಸದಲ್ಲೇ ತೊಡಗಿಕೊಳ್ಳುತ್ತಾರೆ. ರಂಜಾನ್ ಜೋರಾಗಿ ನಡೆಯುತ್ತಿರುವಾಗಲೇ ರಾಜಸ್ಥಾನದಿಂದ ಒಂದು ಸುದ್ದಿ ಬಂತು. ಸಾಂಚಿ ಬುಡಕಟ್ಟು ಜಾತಿಗೆ ಸೇರಿದ ರಾಜುರಾಂ ಎಂಬ ಕೂಲಿ ಕಾರ್ಮಿಕನ ಹೆಂಡತಿ ಝಮ್ಮಾದೇವಿ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಬಾಗಿಲು ತೆರೆದು ನುಗ್ಗಿದ ಶಕೂರ್‌ಖಾನ್ ಆಕೆಯನ್ನು ಬಲಾತ್ಕರಿಸಲು ಯತ್ನಿಸಿದ. ಆಕೆ ಅರಚಾಡುತ್ತಿರುವಾಗಲೇ ಆಕೆಯನ್ನು ವಿವಸ್ತ್ರಗೊಳಿಸಿ ಮುಗಿಬಿದ್ದ. ಆಕೆ ತೀವ್ರವಾಗಿ ಪ್ರತಿಭಟಿಸಿದಳೆಂಬ ಕಾರಣಕ್ಕೆ ಥಿನ್ನರ್ ಅನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚೇಬಿಟ್ಟ. ಆಕೆಯನ್ನು ಉಳಿಸಲೆಂದು ಬಂದ ಅಕ್ಕಪಕ್ಕದವರನ್ನು ಆತ ತಳ್ಳಿ ಓಡಿಸಿದ, ಸಿಕ್ಕು ಬೀಳುತ್ತೇನೆಂದು ಗೊತ್ತಾಗುವಾಗ ತಾನೇ ಕಾಣೆಯಾದ. ಮಟ ಮಟ ಮಧ್ಯಾಹ್ನ ನಡೆದ ಈ ಘಟನೆಯ ಸುದ್ದಿ ತಿಳಿದು ಗಾಬರಿಗೊಂಡ ರಾಜುರಾಂ ತನ್ನ ಹಳ್ಳಿಗೆ ಓಡಿಬಂದು ನೋಡಿದರೆ ಅರ್ಧದಷ್ಟು ಭಾಗ ಬೆಂದು ಹೋಗಿರುವ ಝಮ್ಮಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿರುವಾಗ ಪೊಲೀಸ್ ಠಾಣೆಗೆ ಹೋಗಿ ದೂರುನೀಡಲು ಯತ್ನಿಸಿದರೆ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿಬಿಟ್ಟರು. ಕೊನೆಗೆ ಹಿಂದೂ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ಸ್ಥಳಿಯ ಬಿಜೆಪಿ ಘಟಕ ವ್ಯಾಪಕ ಪ್ರತಿಭಟನೆ ನಡೆಸಿದ ನಂತರ ಆತನ ವಿರುದ್ಧ ಪ್ರಕರಣ ದಾಖಲಿಸಲಾಯ್ತು. ಕಾಂಗ್ರೆಸ್ಸಿಗೆ ಸರಣಿ ಸೋಲುಗಳ ನಂತರವೂ ಬುದ್ಧಿ ಬಂದಿಲ್ಲವೆನ್ನುವುದು ಇದಕ್ಕೇ. ನಿರಂತರವಾಗಿ ಹಿಂದೂಗಳನ್ನು ಅಪಮಾನಗೊಳಿಸುತ್ತಲೇ ಬಂದ ಕಾಂಗ್ರೆಸ್ಸು ಇಂದು ವಿರೋಧಪಕ್ಷದ ಗೌರವವನ್ನು ಕಳೆದುಕೊಂಡು ಟ್ರೋಲ್‌ಗಳಿಗಿಂತ ಕಡೆಯಾಗಿ ಬೀದಿಗೆ ಬಂದು ಕೂರುತ್ತಿದೆ. ಇಷ್ಟಾದಾಗ್ಯೂ ತನ್ನ ಹಿಂದೂ ವಿರೋಧಿ ನಡೆಯನ್ನು ಸರಿಪಡಿಸಿಕೊಳ್ಳದೇ ಹೋಗಿರುವುದು ಅಚ್ಚರಿ ಎನಿಸುತ್ತಿದೆ. ಹಾಗಂತ ಇದು ಕಾಂಗ್ರೆಸ್ಸಿನ ಕಥೆಯಷ್ಟೇ ಅಲ್ಲ. ರಂಜಾನ್‌ಗಿಂತ ಕೆಲವು ದಿನಗಳ ಮುಂಚೆ ಬಿಹಾರದಲ್ಲಿ ಅರ್ಚನಾ ಕುಶ್ವಾಹ ಎಂಬ ಹುಡುಗಿಯನ್ನು ದಾನಿಶ್ ಆಲಂ ಇದೇ ರೀತಿ ಬಲಾತ್ಕರಿಸಿ ಬೆಂಕಿ ಹಚ್ಚಿಬಿಟ್ಟಿದ್ದ. ಅಲ್ಲೆಲ್ಲಾ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿರುವುದು ದೃಗ್ಗೋಚರ.

ರಾಜಸ್ಥಾನದ್ದೇ ಆಳ್ವಾರ್‌ನಲ್ಲಿ ರಂಜಾನಿನ ನಟ್ಟ ನಡುವೆಯೇ ಸಬೀರ್ ನಾಸಿರ್ ಮತ್ತು ನಜೀರ್ ಎಂಬಿಬ್ಬರು 16 ವರ್ಷದ ಹುಡುಗಿಯನ್ನು ಎಳೆದೊಯ್ದು ಬಲಾತ್ಕರಿಸಿದರು. ಹುಡುಗಿಯ ತಾಯಿ ಈ ಕುರಿತಂತೆ ದೂರನ್ನೂ ಕೊಟ್ಟಿದ್ದರು. ಆದರೇನು? ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳದೇ ಆ ಹೆಣ್ಣುಮಗಳನ್ನೇ ಅಪಹಾಸ್ಯಗೊಳಿಸುವಂತಹ ಸ್ಥಿತಿ ನಿರ್ಮಾಣಗೊಂಡಾಗ ಮಾನವನ್ನು ಕಳಕೊಂಡು ನ್ಯಾಯಕ್ಕೂ ಪರಿತಪಿಸಬೇಕಾದ ಸ್ಥಿತಿಗೆ ನಲುಗಿದ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನೇ ಮಾಡಿಕೊಂಡಳು. ಪವಿತ್ರ ಮಾಸದಲ್ಲಿ ಎಂಥದ್ದೆಲ್ಲಾ ಪ್ರಕರಣಗಳು! 

ಇದು ವರದಿಯಾದ ಪ್ರಕರಣಗಳಷ್ಟೇ. ಇದನ್ನು ಬಿಟ್ಟು ಅವರೇ ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಯಾವ ರೀತಿಯ ದೌರ್ಜನ್ಯ ನಡೆಯುತ್ತದೆಂಬುದನ್ನು ಹೇಳಿ ಮುಗಿಸುವುದು ಸಾಧ್ಯವಿಲ್ಲ. ಮಸೀದಿಗಳಲ್ಲಿ ಕಲ್ಲನ್ನು ಶೇಖರಿಸಿಟ್ಟುಕೊಂಡು ಹಿಂದೂಗಳ ಮೆರವಣಿಗೆಯ ಮೇಲೆ ಗುರಿಯಿಟ್ಟು ಎಸೆಯುವ ದುಷ್ಟರಿಗೇನು ಅವರಲ್ಲಿ ಕೊರತೆಯಿಲ್ಲ! ತಪಸ್ಸಿಗಾಗಿ ರಂಜಾನ್ ಎಂಬ ಮಾತಿಗೂ, ಇವರು ನಡೆದುಕೊಳ್ಳುವ ರೀತಿಗೂ ಅಜಗಜಾಂತರವಲ್ಲವೇನು? ಇಷ್ಟಕ್ಕೂ ಮುಸಲ್ಮಾನರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸಲು ಕಾರಣ ಯಾರು ಗೊತ್ತೇ? ಸಹಜವಾಗಿಯೇ ಆಳುವ ಮಂದಿ. ಉತ್ತರ ಪ್ರದೇಶದಲ್ಲಿ, ಗುಜರಾತಿನಲ್ಲಿ ಬಾಲಬಿಚ್ಚದ ಈ ಜನ ರಾಜಸ್ಥಾನದಲ್ಲಿ ಮೆರೆದಾಡುತ್ತಾರಲ್ಲ, ಹೇಗೆ? ಸಿದ್ದರಾಮಯ್ಯನವರ ಕಾಲದಲ್ಲಿ ಸರಣಿ ಹಿಂದೂ ತರುಣರ ಹತ್ಯೆಯಾಗಿದ್ದು ನೆನಪಿದೆಯಲ್ಲ? ಅವರು ಅಧಿಕಾರಕ್ಕೆ ಬಂದೊಡನೆ ಈಗ ದೇಶದ್ರೋಹಿ ಕಾರ್ಯಗಳಿಗಾಗಿ ನಿಷೇಧಗೊಳ್ಳಲ್ಪಟ್ಟಿರುವ ಪಿಎಫ್ಐನ ನೂರಾರು ಕೇಸುಗಳನ್ನು ಹಿಂಪಡೆದರಲ್ಲ, ಒಮ್ಮೆಯಾದರೂ ಅವರು ಇವೆಲ್ಲಕ್ಕೂ ಎದುರಿಗೆ ಬಂದು ಉತ್ತರಿಸಿದ್ದಾರೇನು? ಹನುಮ ಜಯಂತಿಯಂದು ಮಾಂಸಾಹಾರ ಮುಟ್ಟುವುದಿಲ್ಲವೆಂದು ಹೇಳಿದ ತಮ್ಮದೇ ಕಾರ್ಯಕರ್ತನಿಗೆ ಹನುಮನ ಹುಟ್ಟಿದ ದಿನಾಂಕ ಗೊತ್ತೇನೊ ಎಂದು ಮೂದಲಿಸುವ ಇಂತಹ ನಾಯಕರೇ ಕಲ್ಲೆಸೆಯುವ ಮಂದಿಗೆ ನಿಜವಾದ ಪ್ರೇರಣೆ. ಇನ್ನು ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತ ವರ್ಗವಿದೆ. ಅವರು ಸದಾ ಪುಂಡಾಟಿಕೆ ನಡೆಸುವ, ಅಲ್ಪಸಂಖ್ಯಾತರಾಗಿರುವ ಮಂದಿಯನ್ನು ವಿರೋಧಿಸುವ ಧೈರ್ಯ ತೋರದೇ ಇರುವುದೇ ಕಲ್ಲೆಸೆಯುವವರಿಗೆ ಶಕ್ತಿ ತುಂಬುತ್ತದೆ. ಹಾಗಂತ ಯಾರೂ ವಿರೋಧಿಸುವವರಿರುವುದಿಲ್ಲವೆಂದೇನೂ ಇಲ್ಲ. ಶಾಂತವಾಗಿರುವ ಬಹುಸಂಖ್ಯಾತ ಮಂದಿಯಲ್ಲಿಯೇ ವಿಕಾಸದ ದೃಷ್ಟಿಯಿಂದ ಯೋಚಿಸುವ ಕೆಲವೇ ಮಂದಿ ಇದ್ದಾರೆ. ಅವರಿಗೆ ತಮ್ಮ ಸಮುದಾಯ ಈ ಮೂಢನಂಬಿಕೆಗಳಿಂದ ಆಚೆ ಬಂದು ಎಲ್ಲರಂತೆ ಮುಖ್ಯಭೂಮಿಕೆಯಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕೆಂಬ ಬಯಕೆಯಿದೆ. ಆದರೆ ಅವರ ಮಾತುಗಳಿಗೆ ಶಕ್ತಿ ತುಂಬಬಲ್ಲಂತಹ ನಾಯಕತ್ವವಿಲ್ಲದೇ ಅವರು ಸೊರಗಿ ಹೋಗುತ್ತಾರೆ. ಈ ವಿಕಾಸ ಪರವಾದ ಮಂದಿ ಮೋದಿಯನ್ನು, ಯೋಗಿಯವರನ್ನು ಇಷ್ಟಪಡುವುದು, ಅವರ ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಉದ್ದೇಶದ ಕಾರಣಕ್ಕಾಗಿಯೇ. 

ಸೌದಿ ಅರೇಬಿಯಾದ ಈಗಿನ ಯುವರಾಜರು ಇದೇ ರೀತಿ ವಿಕಾಸದ ಕಲ್ಪನೆಯಿಟ್ಟುಕೊಂಡವ. ಹೀಗಾಗಿಯೇ ಆತ ಈ ಬಾರಿ ರಂಜಾನ್ ಆರಂಭವಾಗುವುದಕ್ಕೂ ಮುನ್ನ ಹತ್ತು ನಿಯಮಗಳನ್ನು ಅಲ್ಲಿನ ಮುಸಲ್ಮಾನರ ಮೇಲೆ ಹೇರಿದ್ದಾನೆ. ಮೌಲ್ವಿಗಳು ಮಸೀದಿಯಲ್ಲಿ ಇರಲೇಬೇಕೆಂದು, ಅವರೇ ಪ್ರಾರ್ಥನೆಯನ್ನು ನಿರ್ವಹಿಸಬೇಕೆಂದು ಕಡ್ಡಾಯ ಮಾಡಿದ್ದಾನೆ. ಯಾವ ಕಾರಣಕ್ಕೂ ಪ್ರಾರ್ಥನೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲವೆಂದೂ, ಹೀಗೆ ನಡೆಯವ ಪ್ರಾರ್ಥನೆಯನ್ನು ರೆಕಾರ್ಡ್ ಮಾಡಿ ಹಂಚುವಂತಿಲ್ಲವೆಂದು ಎಚ್ಚರಿಸಿದ್ದಾನೆ. ಇನ್ನೂ ಅಚ್ಚರಿ ಎಂದರೆ ಪ್ರಾರ್ಥನೆಯನ್ನು ಚುಟುಕಾಗಿ ಮತ್ತು ಸರಳವಾಗಿ ಮಾಡಿ ಮುಗಿಸಬೇಕೆಂದು ಹೇಳಿರುವುದಲ್ಲದೇ ಸಂಜೆಯ ಪ್ರಾರ್ಥನೆ ಯಾರಿಗೂ ತೊಂದರೆಯಾಗದಂತೆ ಬೇಗ ಮುಗಿಸಬೇಕೆಂಬ ನಿಯಮವನ್ನೂ ಹೇರಿದ್ದಾನೆ. ಅನೇಕ ಭಾರತೀಯ ಮುಸಲ್ಮಾನರಿಗೆ ಜೀರ್ಣವಾಗದ ಈ ಸಂಗತಿಗಳ ಜೊತೆಗೆ ಮಸೀದಿಯ ಹೊರಗೆಲ್ಲೂ ಇಫ್ತಾರ್ ಮಾಡಬಾರದು ಎಂಬ ಕಟುವಾದ ನಿಯಮವನ್ನು ಜೋಡಿಸಿ, ಇಫ್ತಾರ್ ಮುಗಿದೊಡನೆ ಆ ಸ್ಥಳವನ್ನು ಸ್ವಚ್ಛಗೊಳಿಸಬೇಕೆಂದೂ ಆದೇಶಿಸಿಬಿಟ್ಟಿದ್ದಾನೆ. ನಡು ರಸ್ತೆಯಲ್ಲೇ ಟಾರ್ಪಾಲನ್ನು ಹಾಸಿಕೊಂಡು, ಅಲ್ಲಿಯೇ ತಾವು ತಂದ ಅಡುಗೆಯನ್ನು ತಿಂದು, ಇಡಿಯ ರಸ್ತೆಯನ್ನು ಹೊಲಸುಗೊಳಿಸುವ ಇಫ್ತಾರ್ ಮುರಿಯುವ, ಭಾರತದ ಮುಸಲ್ಮಾನರಿಗೆ ಸೌದಿ ರಾಜನ ಕರೆ ಕೇಳುತ್ತದೇನೋ ನೋಡಬೇಕಷ್ಟೇ! ನೆನಪಿಡಿ, ಇಸ್ಲಾಂನ ಮೂಲ ಇದೇ ಸೌದಿ. ಭಾರತದ ಮುಸಲ್ಮಾನರೇನಿದ್ದರೂ ಅಲ್ಲಿನ ಆದೇಶವನ್ನು ಅನುಸರಿಸಬೇಕಷ್ಟೇ. ಅವರು ಅದನ್ನು ಧಿಕ್ಕರಿಸಿದರೆ ಇವರದ್ದು ಇಸ್ಲಾಂ ಎನಿಸಿಕೊಳ್ಳದೇ ಬೇರೆಯೇ ರಿಲಿಜನ್ ಆಗುತ್ತದೆ. 

ಸೌದಿಯ ಕಥೆ ಹಾಗಾದರೆ ಇತ್ತ ಚೀನಾದಲ್ಲಿ ಉಯ್ಘುರ್ ಮುಸಲ್ಮಾನರು ರಂಜಾನ್ ಸಂದರ್ಭದಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅಲ್ಲಿನ ಶಿಂಜಿಯಾಂಗ್ ಪ್ರಾಂತ್ಯದ 1811 ಹಳ್ಳಿಗಳಲ್ಲಿ ಹಬ್ಬಿಕೊಂಡಿರುವ ಈ ಮುಸಲ್ಮಾನರ ಮೇಲೆ ರಂಜಾನ್ ತಿಂಗಳಲ್ಲಿ ದಿನದ 24 ತಾಸೂ ವಿಶೇಷ ಕಣ್ಗಾವಲಿರಿಸಲಾಗಿದೆ. ಕಾರಣವೇನು ಗೊತ್ತೇ? ಚೀನಾ ಸರ್ಕಾರ ಇವರ್ಯಾರೂ ಉಪವಾಸ ಮಾಡುವಂತಿಲ್ಲವೆಂದು ಆದೇಶಿಸಿದೆ. ಪೋಷಕರು ಉಪವಾಸ ಮಾಡಿದರೆ ಸುಳಿವು ನೀಡುವಂತೆ ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡಲಾಗುತ್ತಿದೆ. ಸುಮಾರು ಒಂದುಕಾಲು ಕೋಟಿಯಿರುವ ಈ ಮುಸಲ್ಮಾನರು ರಂಜಾನ್‌ನ ಅವಧಿಯಲ್ಲಿ ವಿಚಿತ್ರವಾದ ಸಂಕಟಕ್ಕೆ ಸಿಲುಕಿದ್ದಾರೆ ಎಂದು ಉಯ್ಘುರ್‌ಗಳ ಜಾಗತಿಕ ಸಂಘಟನೆ ಗಲಾಟೆ ಎಬ್ಬಿಸಿದೆ. ಭಾರತದ ಮುಸಲ್ಮಾನರ ಬೆಂಬಲಕ್ಕೆ ತಾನಿದ್ದೇನೆಂದು ಪದೇ ಪದೇ ಹೇಳಿಕೊಳ್ಳುವ ಭಿಕಾರಿ ಪಾಕಿಸ್ತಾನ ಈ ಮುಸಲ್ಮಾನರ ಬಗ್ಗೆ ಮಾತ್ರ ದನಿಯೇ ಎತ್ತುವುದಿಲ್ಲ. ಅಚ್ಚರಿಯಲ್ಲವೇನು? ಭಿಕಾರಿ ಪಾಕಿಸ್ತಾನವೆಂದದ್ದಕ್ಕೆ ಕೆಲವರಿಗೆ ಬೇಸರವಾಗಬಹುದೇನೋ! ರಂಜಾನ್ ತಿಂಗಳಲ್ಲಿ ಗೋಧಿಹಿಟ್ಟು ಹಂಚಲೆಂದು ಸರ್ಕಾರ ವ್ಯವಸ್ಥೆ ಮಾಡಿಕೊಂಡಿದ್ದಾಗ ಅದನ್ನು ಪಡೆಯಲು ಧಾವಿಸಿದ ಮಂದಿಯಲ್ಲಿ ಅನೇಕರು ನೂಕುನುಗ್ಗಲಿಗೆ ಒಳಗಾಗಿಯೇ ಪ್ರಾಣಬಿಟ್ಟರಂತೆ. ಅಲ್ಲಿನ ಸರ್ಕಾರ ಭಾರತ ಹಾಕಿದ ದಿಗ್ಬಂಧನಕ್ಕೆ ಹೇಗೆ ಪತರಗುಟ್ಟಿದೆ ಎಂದರೆ ನಮ್ಮ ಪ್ರಭಾವದಿಂದಾಗಿಯೇ ಗ್ರೀಸ್ ಸಬ್ಮೆರಿನ್‌ಗೆ ಬೇಕಾದ ಬ್ಯಾಟರಿಗಳನ್ನು ಕೊಡಲು ನಿರಾಕಿರಿಸಿದೆ. ಗಾಯಕ್ಕೆ ಉಪ್ಪು ಹಾಕುವಂತೆ ಭಾರತ ಪಾಕಿಸ್ತಾನಕ್ಕೆ ಹರಿಯುವು ನೀರಿನ ಕುರಿಂತಂತಹ 1960ರ ಒಪ್ಪಂದವನ್ನು ಪುನರ್ ನವೀಕರಿಸಲು ಕಳಿಸಿದ ಪತ್ರಕ್ಕೆ ವಿಶ್ವಬ್ಯಾಂಕಿನಿಂದಲೂ ಸಹಾಯ ಸಿಗದೇ ಹೋದಾಗ ಪಾಕಿಸ್ತಾನ ಬಾಯ್ಮುಚ್ಚಿಕೊಂಡು ಸಂಧಾನಕ್ಕೆ ಬರಲೊಪ್ಪಿದೆ. ಇದೂ ಕೂಡ ರಂಜಾನ್ ತಿಂಗಳಲ್ಲೇ ನಡೆದದ್ದು. 

ಕೆಲವೇ ಕೆಲವು ಪುಂಡ ಮುಸಲ್ಮಾನರು ರಾಜಕೀಯದ ಮಂದಿಯ ಆಮಿಷಕ್ಕೆ ಒಳಗಾಗಿ ಹಿಂದೂ-ಮುಸಲ್ಮಾನ್ ಬಾಂಧವ್ಯವನ್ನು ಕೆಡಿಸಲೆತ್ನಿಸಿದಾಗ ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತರು ಸದ್ದು ಮಾಡಬೇಕಾದ ಅಗತ್ಯವಿದೆ. ರಂಜಾನ್ ತಿಂಗಳಿನ ತಪಸ್ಸಿನ ವೇಳೆ ಅವರು ಈ ಸಂಕಲ್ಪ ಮಾಡದೇ ಹೋದರೆ ಭವಿಷ್ಯದ ದಿನಗಳಲ್ಲಿ ಇಸ್ಲಾಂ ಜಾಗತಿಕ ಅಧಃಪತನ ಕಾಣುವುದು ನಿಶ್ಚಿತ. ಬೇಂದ್ರೆಯವರೇ ಹೇಳಿದ್ದಾರಲ್ಲ, ‘ಹಚ್ಚೋದಾದ್ರೆ ದೀಪವನ್ನು ಹಚ್ಚು, ಬೆಂಕಿಯನ್ನಲ್ಲ’ ಅಂತ. ಬೆಂಕಿಯನ್ನು ಹಚ್ಚುವ ಮಂದಿ ದೀರ್ಘಕಾಲ ಉಳಿಯುವುದು ಸಾಧ್ಯವಿಲ್ಲ ಏಕೆಂದರೆ ನೆರಮನೆಯನ್ನು ಸುಡಲೆಂದು ಹಚ್ಚುವ ಬೆಂಕಿ ಆನಂತರ ತನ್ನನ್ನೇ ಸುಡುತ್ತದೆ. ಅಲ್ಲವೇನು?

ಆಂತರಿಕ ದಂಗೆಯ ಹೊಸ್ತಿಲಲ್ಲಿ ಕಾಶ್ಮೀರದ ಕನಸು!

ಆಂತರಿಕ ದಂಗೆಯ ಹೊಸ್ತಿಲಲ್ಲಿ ಕಾಶ್ಮೀರದ ಕನಸು!

‘ಅನೇಕ ಶಕಸ್ಥಾನ, ಹೂಣಸ್ಥಾನಗಳನ್ನು ನುಂಗಿರುವ ಹಿಂದೂಸ್ಥಾನಕ್ಕೆ ಪಾಕಿಸ್ತಾನ ಯಾವ ಲೆಕ್ಕ? ಕೆಲವು ಕಾಲ ಅಸಹ್ಯಕರ ಬದುಕು ನಡೆಸಿ ಕೊನೆಗೊಮ್ಮೆ ಅದು ಹಿಂದೂಸ್ಥಾನದೊಂದಿಗೆ ವಿಲೀನಗೊಳ್ಳುತ್ತದೆ’ ಎಂದಿದ್ದರು ಸಾವರ್ಕರ್. ಅವರು 50 ವರ್ಷಗಳ ಕಾಲಮಿತಿಯನ್ನು ವಿಧಿಸಿದ್ದರು. ಹೆಚ್ಚೇನೂ ಆಗಿಲ್ಲ. 75 ವರ್ಷವಾಗಿದೆ ಅಷ್ಟೇ. ಭಾರತ ನಾಶವಾಗುವುದೇ? ಎಂಬ ಪ್ರಶ್ನೆಯನ್ನು ಕೇಳಿಕೊಂಡು ಸ್ವಾಮಿ ವಿವೇಕಾನಂದರು, ‘ಅದು ಸಾಧ್ಯವೇ ಇಲ್ಲ. ಹಾಗಾದಲ್ಲಿ ಜಗತ್ತೇ ನಾಶವಾಗುವುದು’ ಎಂದಿದ್ದರು. ಅದರರ್ಥ ಎಲ್ಲಿಯವರೆಗೆ ಭಾರತದೊಂದಿಗೆ ಸಾರ್ಥಕ ಸಂಬಂಧವಿದೆಯೋ ಅಲ್ಲಿಯವರೆಗೆ ಆಯಾ ರಾಷ್ಟ್ರಗಳು ಶ್ರೇಷ್ಠ ಬದುಕನ್ನೇ ನಡೆಸುತ್ತವೆ. ಭಾರತದಿಂದ ದೂರವಾದರೆ ಆ ರಾಷ್ಟ್ರಗಳು ತಮ್ಮನ್ನೇ ತಾವು ಕಳೆದುಕೊಂಡುಬಿಡುತ್ತವೆ. ವಿವೇಕಾನಂದರ ಭಾವ ಅದೇ ಆಗಿರಲು ಸಾಕು. ಏಕೆಂದರೆ ಭಾರತದ್ದೇ ಅಂಗವಾಗಿದ್ದ ಗಾಂಧಾರ ದೂರವಾಗಿ ಅಫ್ಘಾನಿಸ್ತಾನವಾದ ಮೇಲೆ ಇಂದಿನ ಅದರ ಪರಿಸ್ಥಿತಿ ನೋಡಿ! 1947ರವರೆಗೂ ನಮ್ಮದ್ದೇ ಭಾಗವಾಗಿದ್ದ ಪಾಕಿಸ್ತಾನ, ಬಾಂಗ್ಲಾಗಳು ಇಂದು ಹೇಗಾಗಿವೆ ನೊಡಿ. ಶ್ರೀಲಂಕಾ ಸ್ವಲ್ಪ ಚೀನಾದತ್ತ ವಾಲಿತಷ್ಟೇ, ದಿವಾಳಿಯೇ ಆಗಿ ಬೀದಿಗೆ ಬಂದಿತು. ನೇಪಾಳ ಅದೇ ಸರತಿಯಲ್ಲಿದೆ. ಹೀಗೆಲ್ಲ ಏಕೆಂದರೆ ಭಾರತವೆಂಬುದು ಬರಿಯ ರಾಷ್ಟ್ರವಲ್ಲ. ಅದೊಂದು ಆದರ್ಶಗಳ ಮುದ್ದೆ. ಸತ್ಯವನ್ನು ಅರಸುವ, ಬೆಳಕಿನತ್ತಲೇ ಮುಖಮಾಡಿ ನಿಲ್ಲುವ ಆದರ್ಶವನ್ನು ಪ್ರತಿಯೊಬ್ಬರಿಗೂ ಹಂಚುತ್ತಾ ಸಾಗಿರುವ ನಾಡು. ಆಕ್ರಮಣಕ್ಕೊಳಗಾಗಿ ಎಷ್ಟೋ ರಾಷ್ಟ್ರಗಳು ತಮ್ಮ ಮೂಲ ನೆಲೆಯನ್ನೇ ಕಳಕೊಂಡವು. ಭಾರತ ಇಂದಿಗೂ ಬಲವಾಗಿ ಉಳಿದಿದೆ. ಅದಕ್ಕೆ ಕಾರಣ ಇದನ್ನು ರಕ್ಷಿಸುವ ಮನಸ್ಥಿತಿಯುಳ್ಳ ಜನರಷ್ಟೇ ಅಲ್ಲದೇ, ಭಾರತದ ಅಂತಃಶಕ್ತಿಯ ಪ್ರವಾಹವೂ ಕೂಡ ಹೌದು. 

ಇಷ್ಟೆಲ್ಲ ಪೀಠಿಕೆ ಏಕೆಂದರೆ ಪಾಕಿಸ್ತಾನದ ಇಂದಿನ ಸ್ಥಿತಿ ಬಲು ಗಂಭೀರವಾಗಿದೆ. ತನ್ನ ಪ್ರತಿಯೊಂದು ದುಃಖದ ಪರಿಸ್ಥಿತಿಗಳಿಗೂ ಭಾರತವನ್ನೇ ಹೊಣೆಯಾಗಿಸುವ ಪಾಕಿಸ್ತಾನ ಈಗಲೂ ಕೂಡ ಪಾಕಿಸ್ತಾನವನ್ನು ತುಂಡರಿಸುವ ಯೋಜನೆಯನ್ನು ಭಾರತ ರೂಪಿಸುತ್ತಿದೆ ಎಂದೇ ಅರಚುತ್ತಿದೆ. ಇಷ್ಟಕ್ಕೂ ಇಮ್ರಾನ್ ಖಾನನ ಮೇಲೆ ಮೊನ್ನೆ ನಡೆದ ದಾಳಿ ಅಚಾನಕ್ಕು ನಡೆದದ್ದೇನೂ ಅಲ್ಲ. ಕಳೆದ ನಾಲ್ಕಾರು ವರ್ಷಗಳಿಂದಲೂ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅದು ಆಂತರಿಕವಾಗಿ ಕುಸಿಯುವ ಎಲ್ಲ ಲಕ್ಷಣಗಳನ್ನೂ ತೋರಿದ್ದವು. ನಿಮಗೆ ನೆನಪಿರಬೇಕು. ಪ್ರಧಾನಮಂತ್ರಿ ನವಾಜ್ ಶರೀಫರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿ ಇಮ್ರಾನ್‌ಖಾನ್ ಬೀದಿ ಬೀದಿಯಲ್ಲಿ ಜನರನ್ನು ಒಗ್ಗೂಡಿಸಿದನಲ್ಲ, ಅವನ ಹಿಂದೆ ನಿಂತು, ಅವನಿಗೆ ಬೇಕಾದ ಎಲ್ಲ ಸೌಕರ್ಯಗಳನ್ನೂ ಒದಗಿಸಿಕೊಟ್ಟಿದ್ದು ಸ್ವತಃ ಪಾಕಿಸ್ತಾನೀ ಸೇನೆಯೇ. ಆಗಿನ ಸೇನಾ ಮುಖ್ಯಸ್ಥ ಕಮರ್ ಬಾಜ್ವಾ ಮತ್ತು ಐಎಸ್ಐನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಇಬ್ಬರೂ ಶತಾಯ-ಗತಾಯ ಇಮ್ರಾನ್‌ಖಾನ್‌ನನ್ನು ಗೆಲ್ಲಿಸಬೇಕೆಂದು ಪಣಕ್ಕೆ ಬಿದ್ದಿದ್ದರು. ಇಷ್ಟಕ್ಕೂ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವೆಂಬುದು ಹಾಸ್ಯಾಸ್ಪದವಷ್ಟೇ. ಸೇನೆ ಏನನ್ನು ನಿರ್ಣಯಿಸುತ್ತದೆಯೋ ಅಲ್ಲಿ ನಡೆಯೋದು ಅದೇ. ಅವರು ಬೇಕೆಂದಾಗ ಪ್ರಧಾನಮಂತ್ರಿಯನ್ನು ಕೂರಿಸುತ್ತಾರೆ, ಬೇಡವೆಂದಾಗ ಎಬ್ಬಿಸಿ ಮನೆಗೆ ದಬ್ಬುತ್ತಾರೆ. ಈ ನಡುವೆ ಚುನಾವಣೆಗಳ ತೊಗಲು ಬೊಂಬೆಯಾಟ ಬೇರೆ. ಇಮ್ರಾನ್ ಖಾನನು ಸೂತ್ರದ ಬೊಂಬೆಯಾಗಿಯೇ ಅಧಿಕಾರದ ಚುಕ್ಕಾಣಿ ಹಿಡಿದವ. ಗೆದ್ದು ಬಂದ ಆರಂಭದ ದಿನಗಳಲ್ಲಿಯೇ ಸೇನೆಯೊಂದಿಗೆ ಸೇರಿಯೇ ತಾನು ಪಾಕಿಸ್ತಾನದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸುತ್ತೇನೆ ಎಂದಿದ್ದ. ಆದರೆ ಆನಂತರದ ದಿನಗಳಲ್ಲಿ ಅವನ ಆಲೋಚನೆಗಳಿಗೂ ಸೇನೆಯ ಕಲ್ಪನೆಗಳಿಗೂ ಹೊಂದಾಣಿಕೆಯಾಗಲಿಲ್ಲ. ಸೇನೆ ಅವನಿಂದ ಕೈತೊಳಕೊಂಡರೆ ಸಾಕೆಂದು ಯೋಚಿಸಲಾರಂಭಿಸಿತ್ತು. ಇಷ್ಟೆಲ್ಲಾ ಕಿರಿಕಿರಿ ಇರುವಾಗ ಸೇನೆಯೇ ಅಧಿಕಾರ ಏಕೆ ನಡೆಸಬಾರದು? ಎಂಬ ಪ್ರಶ್ನೆ ಸಹಜವೇ. ಸೇನಾ ಮುಖ್ಯಸ್ಥರು ರಾಷ್ಟ್ರ ನಡೆಸಲು ಕುಳಿತರೆ ಜಾಗತಿಕ ಸಹಕಾರ ದೊರೆಯದು ಎಂಬ ಆತಂಕವೇ ಸೇನೆಯನ್ನು ಹಿಂಬಾಗಿಲಿನಿಂದ ಅಧಿಕಾರ ನಡೆಸುವಂತೆ ಮಾಡಿಬಿಡುತ್ತದೆ. ಮುಂದೆ ಕಾಣಿಸುವ ಪ್ರಧಾನಮಂತ್ರಿ ಸೇನೆ ಹೇಳಿದಂತೆ ಕುಣಿಯುವ ನರ್ತಕಿಯಷ್ಟೇ. ಇದು ಇಡಿಯ ಜಗತ್ತಿಗೇ ಗೊತ್ತಿದೆ. ಇಮ್ರಾನ್ ಜನರಿಗೆ ಧಾವಂತದಲ್ಲಿ ಅತಿಹೆಚ್ಚಿನ ಭರವಸೆ ಕೊಟ್ಟುಬಿಟ್ಟಿದ್ದ, ಥೇಟು ಕೇಜ್ರಿವಾಲನಂತೆ. ದೆಹಲಿಯಲ್ಲಿ ಉಚಿತ ನೀರು, ವಿದ್ಯುತ್ ಕೊಡುವುದು ಸುಲಭ. ಏಕೆಂದರೆ ಅಲ್ಲಿ ಆತನಿಗೆ ಮಾಡಲು ಇರುವ ಕೆಲಸಗಳೇ ಕಡಿಮೆ. ಆದರೆ ಪಂಜಾಬ್ ನಲ್ಲಿ ಭರವಸೆ ಕೊಟ್ಟು ಆತನ ನೀರಿಳಿಯುತ್ತಿದೆ. ಪ್ರಶ್ನೆ ಮಾಡುವ ಮಂದಿ ಈಗ ಹೆಚ್ಚುತ್ತಿದ್ದಾರೆ. ಇಮ್ರಾನನ ಕಥೆಯೂ ಅಂಥದ್ದೇ. ಧಾವಂತಕ್ಕೆ ಬಿದ್ದು ತೈಲ ಬೆಲೆಯನ್ನು ಕಡಿತಗೊಳಿಸಿದ. ಜನಕ್ಕೆ ಆರಂಭಿಕ ಆನಂದವೇನೋ ನಿಜ, ಆದರೆ ಆ ಹೊರೆಯನ್ನು ಬೊಕ್ಕಸ ತಡೆದುಕೊಳ್ಳಲಿಲ್ಲ. ಬೊಕ್ಕಸ ತುಂಬಿಸಲು ಭಿಕ್ಷಾ ಪಾತ್ರೆ ಹಿಡಿದು ಜಗತ್ತಿನ ಸಿರಿವಂತ ರಾಷ್ಟ್ರಗಳ ಮುಂದೆ ಅಲೆದಾಡಿದ. ವಿದೇಶದಲ್ಲಿ ಆತನನ್ನು ಅಕ್ಷರಶಃ ಭಿಕ್ಷುಕನಂತೆ ನೋಡಲಾಯ್ತು. ತಾವು ಇಂಗ್ಲೆಂಡಿನ ಮಂದಿಗೆ ಎಂದೂ ಸಮನಾಗಲು ಸಾಧ್ಯವಿಲ್ಲ. ‘ಕತ್ತೆಯ ಮೇಲಷ್ಟು ಗೆರೆಗಳನ್ನು ಬರೆದರೆ ಅದು ಜೀಬ್ರಾ ಆಗುವುದೇನು?’ ಎಂದು ತನ್ನ ಯೋಗ್ಯತೆಯನ್ನು ತಾನೇ ಜಗಜ್ಜಾಹೀರುಗೊಳಿಸಿಕೊಂಡ. ಸಾಲದ ಮೊತ್ತ ಏರುತ್ತಲೇ ಇತ್ತು. ಭಾರತ ಫೈನಾನ್ಶಿಯಲ್ ಅಸಿಸ್ಟೆನ್ಸ್ ಟಾಸ್ಕ್ ಫೋರ್ಸ್‌‌ನಿಂದ ಪಾಕಿಸ್ತಾನ ಹೊರಬರದಂತೆ ಅದನ್ನು ಕಂದುಪಟ್ಟಿಯಲ್ಲಿರಿಸಲು ಬೇಕಾದ ಎಲ್ಲ ಕಸರತ್ತನ್ನು ಮಾಡುತ್ತಿದ್ದುದರಿಂದ ಏರಿನಿಂತ 15 ಬಿಲಿಯನ್ ಡಾಲರ್ಗಳಷ್ಟು ಸಾಲ ತೀರಿಸಲಾಗದೇ ಹೆಣಗಾಡಿದ. ಎಲ್ಲರ ಕಣ್ಣು ಬಾಜ್ವಾನತ್ತ ತಿರುಗಿತು. ವಿದೇಶಾಂಗ ನೀತಿಯನ್ನು ಇಮ್ರಾನ್ ಖಾನ್ ಹೇಗೆ ಚಿಂದಿಯಾಗಿಸಿದನೆಂದರೆ ಸ್ವತಃ ಅಮೇರಿಕಾ ಕಿರಿಕಿರಿ ಅನುಭವಿಸಿತು. ಸೇನಾ ಮುಖ್ಯಸ್ಥ ಬಾಜ್ವಾ ಇಮ್ರಾನ್ ನನ್ನು ಅಧಿಕಾರಕ್ಕೆ ತಂದು ತಾನೇ ಕೈ-ಕೈ ಹಿಸುಕಿಕೊಂಡ. ಸಾಲದೆಂಬಂತೆ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ನನ್ನು ಐಎಸ್ಐ ನಿರ್ದೇಶಕ ಹುದ್ದೆಯಿಂದ ತೆಗೆದು ಜನರಲ್ ನದೀಂ ಅಂಜುಂನನ್ನು ತರಬೇಕೆಂಬುದು ಬಾಜ್ವಾನ ಇಚ್ಛೆಯಾಗಿತ್ತು. ಚುನಾವಣೆಯವರೆಗೂ ಫೈಜ್ ಇದ್ದರೆ ತನಗೆ ಅನುಕೂಲವೆಂಬುದು ಗೊತ್ತಿದ್ದುದರಿಂದ ಇಮ್ರಾನ್ ಬಾಜ್ವಾನಿಗೆ ಸೊಪ್ಪು ಹಾಕಲಿಲ್ಲ. ಗಲಾಟೆ ಎಷ್ಟು ತಾರಕಕ್ಕೇರಿತೆಂದರೆ ಬಿಬಿಸಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಬಾಜ್ವಾ ಮುಖ್ಯಸ್ಥ ನಾನಾಗಿರುವುದರಿಂದ ನನ್ನ ನಿರ್ಣಯವೇ ಅಂತಿಮ ಎಂದು ಅಂಜುಂನನ್ನು ಆಯ್ಕೆ ಮಾಡಿಯೂಬಿಟ್ಟ. ಆತನ ನೇಮಕಾತಿಯ ಘೋಷಣೆ ಮಾಡಬೇಕಿದ್ದ ಇಮ್ರಾನ್ ಇಡಿಯ ಕಡತವನ್ನು ಮೂಲೆಗೆಸೆದು ಕುಳಿತುಬಿಟ್ಟ. ಆಗ ನಡೆದದ್ದು ಅವಿಶ್ವಾಸ ಗೊತ್ತುವಳಿಯ ಮಹಾ ಪ್ರಹಸನ. ಪಾಕಿಸ್ತಾನದಲ್ಲಿ ಮೂರು ಪ್ರಮುಖ ಪಕ್ಷಗಳಿವೆ. ಇಮ್ರಾನನ ತೆಹರೀಕ್-ಎ-ಇನ್ಸಾಫ್, ನವಾಜ್ ಶರೀಫರ ಮುಸ್ಲೀಂ ಲೀಗ್ ಮತ್ತು ಭುಟ್ಟೋಳ ಪೀಪಲ್ಸ್ ಪಾರ್ಟಿ. ಇಮ್ರಾನ್ ಅತಿ ಕಡಿಮೆ ಬಹುಮತದಿಂದ ಅಧಿಕಾರ ಪಡೆದಿದ್ದವ. ಈಗ ಸೇನೆಯೂ ಆತನ ವಿರುದ್ಧವಿದ್ದುದರಿಂದ ಸಹಜವಾಗಿಯೇ ಪ್ರತಿಪಕ್ಷಗಳು ಚುರುಕಾಗಿಬಿಟ್ಟವು. ಆತನ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿಯೇಬಿಟ್ಟವು. ಇಮ್ರಾನನೇನು ಕಡಿಮೆಯಲ್ಲ. ಅಮೇರಿಕಾ ತಾನು ಅಧಿಕಾರದಲ್ಲಿರುವುದನ್ನು ವಿರೋಧಿಸುತ್ತಿದೆಯಾದ್ದರಿಂದ ಈ ಅವಿಶ್ವಾಸ ಗೊತ್ತುವಳಿಯಲ್ಲಿ ವಿದೇಶಿ ಹಸ್ತಕ್ಷೇಪವಿದೆ ಎನ್ನುವುದು ಸಾಬೀತಾಗಿದೆ ಎಂದ. ಅದೇ ಆಧಾರದ ಮೇಲೆ ಸಭಾಪತಿಗಳ ಮೂಲಕ ಇಡಿಯ ಗೊತ್ತುವಳಿಯನ್ನು ಕಾನೂನು ಬಾಹಿರ ಎಂದು ಘೋಷಿಸಿಬಿಟ್ಟ. ಅದು ಕಾನೂನಿನ ಮುಂದೆ ನಿಲ್ಲಲಿಲ್ಲವೆಂದು ಗೊತ್ತಾದಾಗ ಸರ್ಕಾರವನ್ನೇ ವಿಸರ್ಜಿಸಿ ಚುನಾವಣೆಗೆ ಹೋಗುವುದೆಂದು ನಿರ್ಧರಿಸಿದ. ಸರ್ವೋಚ್ಚ ನ್ಯಾಯಾಲಯ ಆತನ ನಿರ್ಣಯವನ್ನು ಮೂಲೆಗೆ ತಳ್ಳಿ ಅವಿಶ್ವಾಸ ಗೊತ್ತುವಳಿಗೆ ಅವಕಾಶ ಮಾಡಿಕೊಟ್ಟಿತು. ಇಮ್ರಾನ್ ಸೋತು ನವಾಜ್ ಶರೀಫನ ಕಿರಿಯ ತಮ್ಮ ಶಾಬಾಸ್ ಶರೀಫ್ ಅಧಿಕಾರಕ್ಕೆ ಬಂದ. ಪಂಜಾಬಿನ ಜವಾಬ್ದಾರಿ ಹೊತ್ತಾಗಿನಿಂದಲೂ ವೇಗಕ್ಕೆ ಹೆಸರುವಾಸಿಯಾದ ಶಾಬಾಸ್ ಬಂದೊಡನೆ ಇಡಿಯ ಸರ್ಕಾರಕ್ಕೆ ಚುರುಕು ತರುವ ಪ್ರಯತ್ನ ಮಾಡಿದ. ಇಮ್ರಾನ್ ಹೇಳುತ್ತಿದ್ದ ಸುಳ್ಳುಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವೂ ಆರಂಭವಾಯ್ತು. ಆದರೆ ನಾಟಕದಲ್ಲಿ ಕೇಜ್ರಿವಾಲನ ಒಂದು ಕೈ ಮೀರಿಸುವ ಇಮ್ರಾನ್ ಜನರ ನಡುವೆ ದಿನಕ್ಕೊಂದು ಪ್ರಕರಣವನ್ನೋಯ್ದು ಗಲಾಟೆ ಮಾಡಲಾರಂಭಿಸಿದ. ಪತ್ರಕರ್ತ ಅರ್ಷದ್ ಶರೀಫ್‌ನ ಕೊಲೆ ಆತನಿಗೆ ವರದಾನವಾಗಿ ಲಭಿಸಿತು. ತನಗಾಗದವರನ್ನು ಸರ್ಕಾರ ಮತ್ತು ಸೇನೆ ಸದ್ದಿಲ್ಲದೇ ಮುಗಿಸುತ್ತಿದೆ ಎಂದು ಪುಕಾರು ಹಬ್ಬಿಸಿ ತನ್ನನ್ನೂ ಕೂಡ ಸೇನೆ ಹೀಗೆಯೇ ಮುಗಿಸಿಬಿಡುತ್ತದೆ ಎಂದು ಜನರ ಅನುಕಂಪವನ್ನು ಗಿಟ್ಟಿಸಿದ. ಇದರ ಆಧಾರದ ಮೇಲೆಯೇ ಸರ್ಕಾರವನ್ನು ಕೆಳಗಿಳಿಸಿ ತುರ್ತು ಚುನಾವಣೆಗೆ ಹೋಗುವ ಬೇಡಿಕೆಯನ್ನಿಟ್ಟುಕೊಂಡು ಲಾಹೋರಿನಿಂದ ಇಸ್ಲಾಮಾಬಾದಿನವರೆಗೆ ಹಕೀಕಿ ಆಜಾದಿ ಎಂಬ ಮಹಾ ಮೆರವಣಿಗೆಯನ್ನು ಸಂಘಟಿಸಿದ. ಮೆರವಣಿಗೆಯುದ್ದಕ್ಕೂ ಮಾಡಿದ ಭಾಷಣಗಳಲ್ಲಿ ತನ್ನ ಕೊಲೆಗೆ ಯತ್ನಿಸುತ್ತಿದ್ದಾರೆ ಎಂಬ ಸಂಗತಿಯನ್ನು ಮತ್ತೆ ಮತ್ತೆ ಹೇಳುತ್ತಾ ನಡೆದ. 

ಈ ನಡುವೆ ಸೇನೆಯ ಮುಖ್ಯಸ್ಥ ಬಾಜ್ವಾ ತನಗೆ ನಿಷ್ಠರಾಗಿದ್ದ 12 ಮೇಜರ್ ಜನರಲ್ಗಳನ್ನು ಬಡ್ತಿ ಕೊಟ್ಟು ಮುಂದಿನ ಹಂತಕ್ಕೆ ಏರಿಸಿದ. 30 ಬ್ರಿಗೇಡಿಯರ್ ಗಳನ್ನು ಮೇಜರ್ ಜನರಲ್‌ಗಳಾಗಿಸಿದ. ಹೀಗೆ ಬಡ್ತಿಯನ್ನು ಪಡೆದ ವ್ಯಕ್ತಿಯಲ್ಲಿ ಒಬ್ಬ ಮೇಜರ್ ಜನರಲ್ ಫೈಜಲ್ ನಾಜ್ರೀನ್. ಅವಕಾಶ ಸಿಕ್ಕಾಗಲೆಲ್ಲ ಇಮ್ರಾನನ ಮೇಲೆ ಬೆಂಕಿಯುಗುಳುತ್ತಿದ್ದ ಈತ ಈಗ ಪ್ರಮುಖ ಸ್ಥಾನದಲ್ಲಿದ್ದಾನಲ್ಲದೇ ಮುಂದೊಮ್ಮೆ ಚುನಾವಣೆ ನಡೆದು ಇಮ್ರಾನನೇ ಅಧಿಕಾರಕ್ಕೆ ಬಂದರೂ ಸೇನೆಯಲ್ಲಿ ಆತನ ಮಾತು ನಡೆಯದಂತೆ ಮಾಡುವ ಎಲ್ಲ ವ್ಯವಸ್ಥೆಯನ್ನೂ ಅವರು ರೂಪಿಸಿಕೊಂಡುಬಿಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಕೆಲವು ದಿನಗಳ ಹಿಂದೆಯಷ್ಟೇ ಐಎಸ್ಐನ ಮುಖ್ಯ ನಿರ್ದೇಶಕ ಅಂಜುಂ ನದೀಂ ಮತ್ತು ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಇವರಿಬ್ಬರೂ ಪತ್ರಿಕಾಗೋಷ್ಠಿ ನಡೆಸಿ ದಿನಬೆಳಗಾದರೆ ಸುಳ್ಳು ಹೇಳುವ ಇಮ್ರಾನ್ ದೇಶಕ್ಕೆ ಕಂಟಕವಾದವನು ಎಂದೆಲ್ಲ ಹೇಳಿಬಿಟ್ಟರು. ಹೀಗೆ ಐಎಸ್ಐ ಮತ್ತು ಸೇನೆಯ ಮುಖ್ಯಸ್ಥರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿದ್ದು ಪಾಕಿಸ್ತಾನದ ಇತಿಹಾಸದಲ್ಲಿ ಇರಲಾರದು. ಇವೆಲ್ಲವೂ ಒಂದು ವಿಷಯವನ್ನಂತೂ ಸಾಬೀತುಪಡಿಸುತ್ತಿದ್ದವು. ಜನರ ಮನಸ್ಸಿನಲ್ಲಿ ಇಮ್ರಾನ್ ಬಲಗೊಳ್ಳುತ್ತಿದ್ದಾನೆ ಎಂಬುದು ಮತ್ತು ಸೇನೆಯಲ್ಲಿಯೂ ಅತೃಪ್ತ ಆತ್ಮಗಳು ಇಮ್ರಾನಿನ ಪರವಾಗಿ ನಿಂತು ಶಾಂತವಾಗಿ ಬದಲಾವಣೆಗೆ ಪ್ರಯತ್ನಿಸುತ್ತಿದೆ ಎನ್ನುವುದು. 

ಇಷ್ಟೆಲ್ಲದರ ಮುಂದುವರೆದ ಭಾಗವಾಗಿ ಮೊನ್ನೆಯಷ್ಟೇ ಇಮ್ರಾನನ ಲಾಂಗ್ ಮಾರ್ಚ್ ನಡುವೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯೂ ಎಷ್ಟು ನಿಗೂಢವೆಂದರೆ ಸದ್ದು ಕೇಳುವುದು ಎರಡೇ ಗುಂಡಿನದ್ದಾದರೂ ಇಮ್ರಾನನಿಗೆ ಹೊಕ್ಕಿದ್ದು ಮಾತ್ರ ಮೂರು ಗುಂಡು ಎನ್ನಲಾಯ್ತು. ತೀರಾ ಇತ್ತೀಚೆಗೆ ತನಗೆ ಹೊಕ್ಕಿದ್ದು ನಾಲ್ಕು ಗುಂಡು ಎಂದು ಆತನೇ ಹೇಳಿಕೊಂಡಿದ್ದಾನೆ. ಲಾರಿಯ ಮೇಲೆ ನಿಂತವನಿಗೆ ನೆಲದ ಮೇಲೆ ನಿಂತವ ಗುಂಡು ಹೊಡೆದರೆ ಅದು ತಲೆಗೋ ಎದೆಗೋ ಬಡಿಯಬೇಕು. ಎಲ್ಲ ಬಿಟ್ಟು ಕಾಲಿಗೆ ಬಡಿಯುವುದೆಂದರೆ ಏನರ್ಥ? ಇನ್ನೂ ಸಾಕಷ್ಟು ವಿವರಗಳು ಹೊರಬರಬೇಕಿವೆ. ಇಮ್ರಾನ್ ಈ ಮಟ್ಟದ ನೌಟಂಕಿ ಮಾಡಿರುವ ಸಾಧ್ಯತೆ ಇದೆಯೇ? ಗೊತ್ತಿಲ್ಲ. ಆದರೆ ಒಂದಂತೂ ಹೌದು, ಭಾರತ ಬಲು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಮೇರಿಕಾ ಪಾಕಿಸ್ತಾನಕ್ಕೆ ಏಕಾಕಿ ಬೆಂಬಲ ಕೊಡುತ್ತಿರುವ ರೀತಿ ನೋಡಿದರೆ ಅದು ಚಿಗಿತುಕೊಳ್ಳಬಹುದಾಗಿದ್ದ ಎಲ್ಲ ಅವಕಾಶಗಳೂ ಈಗ ಕಮರಿದಂತೆ ಕಾಣುತ್ತಿದೆ. ಈ ಎಲ್ಲ ಘಟನೆಗೂ ಎರಡು ದಿನಗಳ ಮುನ್ನವಷ್ಟೇ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುತ್ತೇವೆ ಎಂದಿದ್ದರಲ್ಲದೇ ಅದು ನಮ್ಮ ಅವಿಭಾಜ್ಯ ಅಂಗ ಎಂದು ದೃಢವಾಗಿ ಹೇಳಿದ್ದರು. ಸೇನೆಯೂ ಪ್ರತಿಕ್ರಿಯಿಸಿ ಆದೇಶ ಸಿಕ್ಕರೆ ಅದನ್ನು ಮರಳಿ ತರುವುದು ದೊಡ್ಡ ಕೆಲಸವಲ್ಲ ಎಂದುಬಿಟ್ಟಿತು. ಅದರ ಮುಂದುವರೆದ ಭಾಗವಾಗಿ ಇಮ್ರಾನ್ ಹೇಳಿಕೆಯೊಂದನ್ನು ಕೊಟ್ಟು ಪಾಕಿಸ್ತಾನ ಸರ್ಕಾರ ಮಾಡುತ್ತಿರುವ ಅನ್ಯಾಯ 70ರ ದಶಕದಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಶೋಷಣೆಯ ಮಾದರಿಯಲ್ಲಿದೆ. ಹೀಗಾಗಿ ಏನು ಬೇಕಿದ್ದರೂ ಆಗಬಹುದು ಎಂದಿದ್ದಾನೆ. 

ಹೌದು, ಏನು ಬೇಕಿದ್ದರೂ ಆಗಬಹುದು. ಯಾವುದನ್ನೂ ಹೇಳಿ ಮಾಡದ ಮೋದಿ, ಈ ಬಾರಿ ಪಿಒಕೆಯನ್ನು ಮರಳಿ ಪಡೆಯುತ್ತೇವೆ ಎಂದು ಹೇಳಿಸಿರುವುದನ್ನು ನೋಡಿದರೆ, ಭವಿಷ್ಯದ ಗರ್ಭದಲ್ಲಿ ಮಹತ್ವವಾದುದೇನೋ ಅಡಗಿರುವುದು ನಿಚ್ಚಳವಾಗಿ ಕಾಣುತ್ತಿದೆ. ಕಾಶ್ಮೀರ ಬೇಕೆಂದು ಬಂಬಡ ಬಜಾಯಿಸುತ್ತಿದ್ದ ಪಾಕಿಸ್ತಾನ ತನ್ನನ್ನು ತಾನು ಉಳಿಸಿಕೊಂಡರೆ ಸಾಕಾಗಿದೆ!

ಪಾಕಿಸ್ತಾನಕ್ಕೆ ಸಹಾಯ ಬೇಕಿದೆ, ಜಿಂದಾಬಾದ್ ಎನ್ನುವವರು ಹೋಗಬಹುದು!

ಪಾಕಿಸ್ತಾನಕ್ಕೆ ಸಹಾಯ ಬೇಕಿದೆ, ಜಿಂದಾಬಾದ್ ಎನ್ನುವವರು ಹೋಗಬಹುದು!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರಕ್ಕೆ ಕಠೋರವಾದ ಎಚ್ಚರಿಕೆ ಕೊಟ್ಟಿದ್ದಾನೆ. ಆರು ದಿನಗಳೊಳಗೆ ಚುನಾವಣೆಯನ್ನು ಘೋಷಿಸದಿದ್ದರೆ ತನ್ನ ಜೊತೆಗಾರರೊಂದಿಗೆ ಬೀದಿಗಿಳಿಯುತ್ತೇನೆ ಎಂದಿದ್ದಾನೆ. ಈ ಬಾರಿ ಬೀದಿಗಿಳಿದರೆ ಇದು ಹಿಂಸಾತ್ಮಕವಾಗಿರುವ ಹೋರಾಟವಾಗಬಹುದು ಎಂಬ ಹೆದರಿಕೆಯೂ ಎಲ್ಲರಲ್ಲಿದೆ. ಇತ್ತ ಪಾಕಿಸ್ತಾನದ ಈಗಿನ ಪ್ರಧಾನಿ ಶೆಹ್ಬಾಜ್ ಷರೀಫ್ ಪಾಕಿಸ್ತಾನದ ಇಂದಿನ ಪರಿಸ್ಥಿತಿಗಳಿಗೆಲ್ಲ ಇಮ್ರಾನ್ಖಾನನ ಸರ್ಕಾರವೇ ಕಾರಣ ಎಂದು ಒಪ್ಪಿಸುವ ಹಠಕ್ಕೆ ಬಿದ್ದಿದ್ದಾರೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿ ಲಾಹೋರಿನಲ್ಲಿ ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಂನಲ್ಲಿ ಹಣ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ! 

ಪಾಕಿಸ್ತಾನದ ಸ್ಥಿತಿ ಸದ್ಯದಲ್ಲೇ ಶ್ರೀಲಂಕಾದಂತೆ ಆದರೆ ಯಾರೂ ಅಚ್ಚರಿ ಪಡಬೇಕಿಲ್ಲ. ಅನೇಕರು ಇದರ ಮೂಲವನ್ನು ಭಾರತದ ನೋಟು ರದ್ದತಿಯಲ್ಲಿ ಹುಡುಕುತ್ತಾರೆ. ಅಲ್ಲಿಯವರೆಗೂ ನಕಲಿ ನೋಟುಗಳ ಮುದ್ರಣದಿಂದ ಸಾಕಷ್ಟು ಸಂಪಾದನೆ ಮಾಡುತ್ತಿದ್ದ ಪಾಕಿಸ್ತಾನ ಏಕಾಕಿ ಪ್ರಪಾತಕ್ಕೆ ಬಿತ್ತು ಎನ್ನುವುದು ಅಭಿಪ್ರಾಯ. ಅದು ಸತ್ಯವೂ ಇರಬಹುದು. ಏಕೆಂದರೆ ಅಲ್ಲಿಯವರೆಗೂ ಮೆರೆದಾಡುತ್ತಿದ್ದ ಪಾಕಿಸ್ತಾನ ಆನಂತರ ಏಕಾಕಿ ತುಮುಲಕ್ಕೆ ಬಿತ್ತು. ಮುಂದೆ ಬೀದಿಗಿಳಿದು ಹೋರಾಟ ಮಾಡುತ್ತಲೇ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಈ ಪರಿಸ್ಥಿತಿಯನ್ನು ಹಾಳುಗೆಡವಿದ. ವಾಸ್ತವವಾಗಿ ಆತ ಅಧಿಕಾರಕ್ಕೆ ಬಂದದ್ದೇ ಸೈನ್ಯದ ಸಹಕಾರದೊಂದಿಗೆ. ಪಾಕಿಸ್ತಾನದ ವಿಚಾರದಲ್ಲಿ ಇದೇನು ಹೊಸ ಸಂಗತಿಯಲ್ಲ ಬಿಡಿ. ಸೈನ್ಯದ ಅನುಮತಿಯಿಲ್ಲದೇ ಅಲ್ಲಿ ಯಾವ ರಾಜಕೀಯ ಚಟುವಟಿಕೆಗಳೂ ನಡೆಯುವುದಿಲ್ಲ. ಆದರೆ ತನಗೆ ಬೇಕಾದ ಅಧಿಕಾರಿಯೊಬ್ಬನನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿಕೊಳ್ಳಲು ಸೈನ್ಯ ಅನುಮತಿ ನಿರಾಕರಿಸಿದಾಗ ಎಲ್ಲ ಗೊಂದಲವೂ ಆರಂಭವಾದವು. ಐಎಸ್ಐನ ಡೈರೆಕ್ಟರ್ ಜನರಲ್ನನ್ನು ವರ್ಗಾವಣೆ ಮಾಡುವಂತೆ ಸೈನ್ಯ ಆದೇಶಿಸಿತ್ತು. ತನಗೆ ನಿಷ್ಠನಾಗಿರುವ ಆತನನ್ನು ಚುನಾವಣೆಯವರೆಗೂ ಉಳಿಸಿಕೊಳ್ಳಬೇಕಿತ್ತಲ್ಲದೇ ಅಗತ್ಯಬಿದ್ದರೆ ಸೈನ್ಯದ ಮುಖ್ಯಸ್ಥನನ್ನಾಗಿ ಮಾಡಬೇಕೆಂಬುದು ಇಮ್ರಾನನ ಬಯಕೆಯಾಗಿತ್ತು. ಯಾವಾಗ ಆತ ಸೈನ್ಯದ ಮಾತನ್ನು ಕೇಳುವುದನ್ನು ವಿರೋಧಿಸಿದನೋ ಅಂದೇ ಆತನ ಮೇಲಿದ್ದ ಅಭಯಹಸ್ತ ಹೊರಟುಹೋಯ್ತು. ಆತನ ಬಹುಮತಕ್ಕೆ ಕಾರಣವಾಗಿದ್ದ ಎರಡು ಚಿಕ್ಕ ಪಕ್ಷಗಳು ದಳ ಬದಲಾಯಿಸಿ ಕಾನೂನಾತ್ಮಕವಾಗಿಯೇ ಸರ್ಕಾರವನ್ನು ಉರುಳಿಸಿದರು. ಇಮ್ರಾನ್ ಸುಮ್ಮನಿರಲಿಲ್ಲ. ಸರ್ಕಾರವನ್ನೇ ಬರ್ಖಾಸ್ತು ಮಾಡುವ ಪ್ರಯತ್ನವನ್ನೂ ಮಾಡಿದ್ದ. ಆದರದು ನ್ಯಾಯಾಲಯದಲ್ಲಿ ಬಿದ್ದುಹೋಯ್ತು. ಹೀಗಾಗಿ ಆತ ಅನಿವಾರ್ಯವಾಗಿ ಅಧಿಕಾರದಿಂದ ಇಳಿಯಬೇಕಾಯ್ತು. ಈ ರೀತಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧಿಕಾರ ಕಳೆದುಕೊಂಡ ಪಾಕಿಸ್ತಾನದ ಮೊದಲ ಪ್ರಧಾನಿಯಾದ ಆತ! ಹಾಗಂತ ಅವಧಿ ಪೂರೈಸದೇ ಹೋದ ಮೊದಲನೆಯವನೇನೂ ಅಲ್ಲ. ಬಹುತೇಕ ಪಾಕಿಸ್ತಾನದ ಎಲ್ಲ ಪ್ರಧಾನಿಗಳೂ ಅವಧಿಗೆ ಮುನ್ನವೇ ಕೆಳಗಿಳಿಯುತ್ತಾರೆ ಏಕೆಂದರೆ ಅವರೆಲ್ಲರೂ ಸೈನ್ಯದ ಕೈಗೊಂಬೆಗಳೇ ಆಗಿರುತ್ತಾರೆ. 

ಆದರೆ ಇಮ್ರಾನ್‌ಖಾನನಿಗೆ ಜನಬೆಂಬಲ ಜೋರಾಗಿಯೇ ಇತ್ತು. ಒಮ್ಮೊಮ್ಮೆ ಆತ ಪಾಕಿಸ್ತಾನದ ಕೇಜ್ರಿವಾಲನಂತೆ ಕಾಣುತ್ತಾನೆ. ಅಗತ್ಯ ಬಿದ್ದಾಗ ಮಾತನ್ನು ಹೊರಳಿಸುತ್ತಾ, ಜನರನ್ನು ನಂಬಿಸುವುದರಲ್ಲಿ ನಿಸ್ಸೀಮ. ಐಎಮ್ಎಫ್ನ ಸಾಲಕ್ಕೆ ಸಹಿ ಹಾಕಿ ಬಂದವನು ಅವನೇ. ಆದರೆ ಈ ಸಾಲ ಪಡೆಯಲು ಆತ ಕೈಗೊಳ್ಳಬೇಕಾಗಿದ್ದ ನಿರ್ಣಯಗಳು ಮಾತ್ರ ಕಠಿಣವಾಗಿದ್ದವು. ಅದಕ್ಕೂ ಒಪ್ಪಿಕೊಂಡು ಬಂದಿದ್ದ. ಈಗ ಆತನ ಸಕರ್ಾರ ಉರುಳಿ ಹೊಸ ಸಕರ್ಾರ ಬಂತಲ್ಲ. ಅದು ಈ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಬೇಕಾಯ್ತು. ಐಎಮ್ಎಫ್‌ನ ಸಾಲ ತರಲು ಇಮ್ರಾನ್ ಖಾನ್ ಘೋಷಿಸಿದ್ದ ಇಂಧನದ ಮೇಲಿನ ಸಬ್ಸಿಡಿಯನ್ನು ಕಡಿತ ಮಾಡಲೇಬೇಕಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಮೊನ್ನೆ ಪಾಕಿಸ್ತಾನದ ಪ್ರಧಾನಿ 30 ರೂಪಾಯಿಯಷ್ಟು ಇಂಧನ ಬೆಲೆ ಏರಿಸಿದ. ಇಮ್ರಾನ್ ಬೀದಿಯಲ್ಲಿ ನಿಂತು ಗೊಳೋ ಎಂದು ಅಳುವುದೊಂದಷ್ಟೇ ಬಾಕಿ. ತೈಲ ಬೆಲೆ ಏರಿಕೆಗೆ ತಾನೇ ಮಾಡಿಕೊಂಡಿದ್ದ ಒಪ್ಪಂದಗಳು ಕಾರಣವೆನ್ನುವುದನ್ನು ಆತ ಮರೆಮಾಚಿ ಜನರ ದುಃಖದ ಲಾಭವನ್ನು ಪಡೆದುಕೊಂಡು ಸಾವಿರಾರು ಮಂದಿಯನ್ನು ಬೀದಿಗಳಲ್ಲಿ ಸೇರಿಸಿ ಅವರನ್ನು ಭಡಕಾಯಿಸುವ ಕೆಲಸ ಮಾಡುತ್ತಿದ್ದಾನೆ! ಹೀಗಾಗಿಯೇ ಪಾಕಿಸ್ತಾನದ ಈಗಿನ ಪ್ರಧಾನಿ ಆಂತರಿಕ ದಂಗೆಯ ಮಾತಾಡುತ್ತಿರೋದು. ಇಮ್ರಾನ್ ಸ್ವಾತಂತ್ರ್ಯ ನಡಿಗೆಯನ್ನು ಇಸ್ಲಾಮಾಬಾದ್ಗೆ ಕೊಂಡೊಯ್ಯುವ ಮಾತನಾಡುತ್ತಿದ್ದಾನೆ. ಹೊಸ ಸರ್ಕಾರವನ್ನು ಆತನ ಬೆಂಬಲಿಗರು ನಂಬುತ್ತಿಲ್ಲ. ಅವರು ತೆಗೆದುಕೊಂಡ ಪ್ರತಿ ನಿರ್ಣಯವನ್ನೂ ವಿರೋಧಿಸುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಈಗಿನ ಪ್ರಧಾನಿ ಶೆಹ್ಬಾಜ್ ಷರೀಫ್ ನವಾಜ್ ಷರೀಫ್ನ ಸಹೋದರ. ಭ್ರಷ್ಟಾಚಾರದ ಪ್ರಕರಣಗಳ ಆರೋಪ ಹೊತ್ತಿರುವ ನವಾಜ್ ಈಗ ಪಾಕಿಸ್ತಾನದಲ್ಲಿಲ್ಲ, ಆದರೆ ಪಕ್ಷದ ಮೇಲೆ ಅವನ ಹಿಡಿತ ಈಗಲೂ ಬಲವಾಗಿದೆ. ಹೀಗಾಗಿಯೇ ಶೆಹ್ಬಾಜ್ ಅಧಿಕಾರದಲ್ಲಿ ಕುಳಿತಿದ್ದರೂ ಹಿಂದಿನಿಂದ ನಿಯಂತ್ರಣದಲ್ಲಿಟ್ಟುಕೊಂಡಿರೋದು ನವಾಜ್ರೇ. ಇಮ್ರಾನ್ ಖಾನನ ಮೇಲೆ ಈಗಿನ ಸರ್ಕಾರ ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿ ಒಳತಳ್ಳುವ ಯೋಜನೆಯನ್ನೇನೋ ಹಾಕಿಕೊಂಡಿದೆ. ಆದರೆ ನವಾಜ್ ಷರೀಫನ ಮೇಲಿನ ಆರೋಪಗಳಿಗೆ ಉತ್ತರ ಸಿಗುವವರೆಗೂ ಇಮ್ರಾನನನ್ನು ಮುಟ್ಟಿದರೆ ಜನ ಸಿಡಿದೇಳುವುದು ನಿಶ್ಚಿತ. ಈಗಾಗಲೇ ಇಮ್ರಾನಿನ ಬೆಂಬಲಿಗರು ಮಾಡಿರುವ ರಾದ್ಧಾಂತವನ್ನು ನಿಭಾಯಿಸುವಲ್ಲಿ ಈಗಿನ ಸಕರ್ಾರ ಸಂಪೂರ್ಣ ಸೋತುಹೋಗಿದೆ.

ಇತ್ತ ಪಾಕಿಸ್ತಾನದ ಸಾಲ ಏರುತ್ತಲೇ ಇದೆ. ಈಗಾಗಲೇ 90 ಬಿಲಿಯನ್ಗಳಷ್ಟು ಸಾಲ ಹೊಂದಿರುವ ಪಾಕಿಸ್ತಾನ ತನ್ನೆಲ್ಲ ಕನಸುಗಳನ್ನು ನುಚ್ಚುನೂರು ಮಾಡಿಕೊಂಡಿದೆ. ಪಾಕಿಸ್ತಾನದ ಜಿಡಿಪಿ 315 ಬಿಲಿಯನ್ ಡಾಲರ್ಗಳಿಂದ 292 ಬಿಲಿಯನ್ ಡಾಲರ್ಗಳಿಗೆ ಇಳಿದಿದೆ. ವಿದೇಶಿ ವಿನಿಮಯ ಉಳಿಕೆ 20 ಮಿಲಿಯನ್ ಡಾಲರ್ಗಳಷ್ಟಿದ್ದು ಇನ್ನು ಒಂದೂವರೆ ತಿಂಗಳಿಗಾಗುವಷ್ಟು ಆಮದನ್ನು ಮಾತ್ರ ಮಾಡಿಕೊಳ್ಳಬಹುದಾದ ಭಯಾನಕ ಸ್ಥಿತಿಯಲ್ಲಿ ಅವರಿದ್ದಾರೆ! ಇದನ್ನು ಗಮನಿಸಿಯೇ ತೈಲ ಉತ್ಪನ್ನಗಳಿಗಾಗಿ ವಿದೇಶಿ ಬ್ಯಾಂಕುಗಳು ಕೊಡುವ ಸಾಲದ ಗ್ಯಾರಂಟಿಯನ್ನು ರದ್ದು ಮಾಡಿಬಿಟ್ಟಿದೆ. ಪ್ರತಿರಾಷ್ಟ್ರದ ಬ್ಯಾಂಕುಗಳಿಗೂ ವಿದೇಶಿ ಬ್ಯಾಂಕುಗಳು ಸಾಲಕೊಟ್ಟು ಆಮದಿಗೆ ಅನುಕೂಲ ಮಾಡಿಕೊಡುತ್ತವೆ. ಅಕಸ್ಮಾತ್ ಆಯಾ ರಾಷ್ಟ್ರಗಳು ಹಣ ಪೂರೈಕೆ ಮಾಡುವಲ್ಲಿ ಸೋತರೆ ವಿದೇಶಿ ಬ್ಯಾಂಕುಗಳೇ ಎಲ್ಲ ಹೊಣೆಯನ್ನೂ ಹೊರಬೇಕು. ಇದನ್ನರಿತೇ ಈ ಬ್ಯಾಂಕುಗಳೆಲ್ಲ ಎಚ್ಚರಿಕೆಯ ಹೆಜ್ಜೆಯನ್ನಿರಿಸುತ್ತಿದೆ. ಸಾಲ ಮರಳಿ ಕೊಡುವ ತಾಕತ್ತು ಪಾಕಿಸ್ತಾನಕ್ಕೆ ಈಗ ಇಲ್ಲವೆಂಬುದು ಅವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಅದರರ್ಥ ಇನ್ನೆರಡು ತಿಂಗಳುಗಳ ನಂತರ ಪಾಕಿಸ್ತಾನದಲ್ಲಿ ಸುರಿದುಕೊಂಡು ಸಾಯಬೇಕೆಂದರೂ ಒಂದು ಹನಿ ಪೆಟ್ರೋಲು ಸಿಗಲಾರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪಾಕಿಸ್ತಾನ ವಿಷ ವರ್ತುಲದಲ್ಲಿ ಸಿಲುಕಿಕೊಂಡಿದೆ. ಆಂತರಿಕ ದಂಗೆಗಳ ಕಾರಣಕ್ಕೆ ಜಿಡಿಪಿ ಕಡಿಮೆಯಾಗುತ್ತಿದೆ, ಇದು ರಾಷ್ಟ್ರದ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುತ್ತಿದೆ. ಇದರಿಂದಾಗಿಯೇ ವಿದೇಶಗಳು ಸಾಲಕೊಡಲು ಮುಂದೆ ಬರುತ್ತಿಲ್ಲ. ಸಾಲವಿಲ್ಲದಿದ್ದುದರಿಂದ ಸರ್ಕಾರ ಧೈರ್ಯವಾಗಿ ಉತ್ಪಾದನೆಗೆ ಮುಂದಿಡಲಾಗುತ್ತಿಲ್ಲ. ಜಿಡಿಪಿ ಮತ್ತಷ್ಟು ಕುಸಿಯಲಿದೆ, ಸಾಲ ಮತ್ತಷ್ಟು ಹೆಚ್ಚಲಿದೆ. ಈ ವರ್ತುಲದಿಂದ ಸದ್ಯಕ್ಕೆ ಅವರು ಆಚೆಗೆ ಬರುವುದು ಕಷ್ಟವಿದೆ. ಅವರು ಮೊರೆ ಹೋಗಬೇಕಾಗಿರುವುದು ಸರ್ವಋತು ಮಿತ್ರ ಚೀನಾವನ್ನು ಮಾತ್ರ. ಆದರೆ, ಚೀನಾ ಪಾಕಿಸ್ತಾನವನ್ನು ಕ್ಯಾರೆ ಎನ್ನುತ್ತಿಲ್ಲ. ಪಾಕಿಸ್ತಾನ ತನ್ನ ಸಾಲವನ್ನು ಮರಳಿಸಬೇಕೆಂದು ಒತ್ತಡ ಹೇರುತ್ತಿದೆ ಕೂಡ. ಈ ಕಾರಣಕ್ಕಾಗಿಯೇ ಪಾಕಿಸ್ತಾನದ ಭರವಸೆಯ ಚೀನಾ ಪಾಕ್ ಎಕನಾಮಿಕ್ ಕಾರಿಡಾರ್ ಮೂಲೆಗುಂಪಾಗಿಹೋಗಿದೆ. ಪಾಕಿಸ್ತಾನ ಸುಮಾರು ಒಂದೂವರೆ ಬಿಲಿಯನ್ ಡಾಲರ್ಗಳಷ್ಟು ಹಣವನ್ನು ಚೀನೀ ಕಂಪೆನಿಗಳಿಗೆ ಕೊಡಬೇಕಾಗಿದೆ. ಹಣ ಕೊಡುವವರೆಗೆ ಪಾಕಿಸ್ತಾನಕ್ಕೆ ಸಹಕಾರ ನೀಡುವುದಿಲ್ಲ ಎಂದು ಚೀನಾ ಖಡಕ್ಕಾಗಿ ಹೇಳಿದೆ. ಅತ್ತ ಸೌದಿ ಅರೇಬಿಯಾ ಆಗಾಗ ತಾನು ಕೊಟ್ಟ ಸಾಲವನ್ನು ನೆನಪಿಸುತ್ತಾ ಮರಳಿ ಕೊಡುವಂತೆ ಒತ್ತಡ ಹೇರುತ್ತಿದೆ. ಈಗ ಐಎಮ್ಎಫ್ನಿಂದ ಸಾಲತಂದರೂ ಪಾಕಿಸ್ತಾನ ಈ ಸಾಲದ ಬಡ್ಡಿಯನ್ನು ತೀರಿಸಲು ಅದನ್ನು ಬಳಸಬಹುದೇ ವಿನಃ ಹೊಸ ಚಟುವಟಿಕೆಗಳಿಗಲ್ಲ. ಹಾಗೆಂದೇ ಅದೀಗ ಟರ್ಕಿಯತ್ತ ಮುಖಮಾಡಿ ನಿಂತಿದೆ. ಟರ್ಕಿಯೂ ಸಹಾಯ ಮಾಡಬಹುದಾದ ಬಲವಾದ ಸ್ಥಿತಿಯಲ್ಲಿದೆ ಎಂದೇನೂ ಭಾವಿಸಬೇಡಿ. ಮತ್ತು ಸಹಾಯ ಮಾಡುವ ಸಾಧ್ಯತೆ ಕಂಡುಬಂದರೆ ಭಾರತ ಅಡ್ಡಗಾಲು ಹಾಕಿ ನಿಲ್ಲುವುದು ನಿಶ್ಚಿತ. ಹೀಗಾಗಿಯೇ ಪಾಕಿಸ್ತಾನದ ಪರಿಸ್ಥಿತಿ ಬಲು ಭಯಾನಕವಾಗಿದೆ. ಇಲ್ಲಿ ಅನೇಕರು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುತ್ತಾರಲ್ಲ, ಅವರೆಲ್ಲ ಅಲ್ಲಿಗೆ ಹೊಗಿ ಪಾಕಿಸ್ತಾನದ ಶಕ್ತಿಯನ್ನು ವೃದ್ಧಿಸುವುದೊಳಿತು ಎಂದೆನಿಸುತ್ತದೆ.

ಅತ್ತ ಚೀನಾದ ಸ್ಥಿತಿಯೂ ಚೆನ್ನಾಗೇನೂ ಇಲ್ಲ. ಕ್ರಾಂತಿಯ ನಂತರ ಹುಟ್ಟಿಕೊಂಡ ಹೊಸ ಚೀನಾದಲ್ಲಿಯೇ ಮೊದಲ ಬಾರಿಗೆ ಆರ್ಥಿಕ ವೃದ್ಧಿಯ ದರವನ್ನು 5.5ರಷ್ಟು ಕನಿಷ್ಠ ಮಟ್ಟಕ್ಕೆ ನಿಗಧಿ ಪಡಿಸಲಾಗಿದೆ. ಅಧ್ಯಕ್ಷ ಷಿ ಮತ್ತು ಪ್ರಧಾನಿ ಲಿ ಕಿಕಿಯಾಂಗ್ ನಡುವಿನ ಜಗಳಗಳು ಈಗ ಎದ್ದೆದ್ದು ಕಾಣುತ್ತಿವೆ. ತನ್ನ ಶೂನ್ಯ ಕೊವಿಡ್ ಪಾಲಿಸಿಯನ್ನು ಹೆಮ್ಮೆಯಿಂದ ಕೊಂಡಾಡುತ್ತಿದ್ದ ಷಿ ಈಗ ಅದರ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದಾನೆ. ಇದರ ವಿರುದ್ಧ ಯಾರೂ ಮಾತನಾಡದಂತೆ ಆತ ನಿರ್ಬಂಧ ವಿಧಿಸಿದ್ದಾನೇನೋ ನಿಜ. ಸ್ವತಃ ಪ್ರಧಾನಿ ಲಿ ಪರೋಕ್ಷವಾಗಿ ಷಿಯನ್ನು ವಿರೋಧಿಸಲಾರಂಭಿಸಿದ್ದಾನೆ. ಕಂಪೆನಿಗಳು ಗುಳೆ ಹೋಗುತ್ತಿರುವ, ಜನರು ದಂಗೆಯೇಳುವ ಸ್ಥಿತಿ ನಿರ್ಮಾಣವಾಗಿರುವಂತಹ ಈ ಹೊತ್ತಲ್ಲಿ ಚೀನಾ ಎಚ್ಚರಿಕೆಯಿಂದ ಮುಂದಡಿಯಿಡುತ್ತಿದೆ. ಉಕ್ರೇನ್-ರಷ್ಯಾ ಯುದ್ಧದಲ್ಲಿ ರಷ್ಯಾದ ಬೆಂಬಲಕ್ಕೆ ಚೀನಾ ಪೂರ್ಣವಾಗಿ ನಿಂತಿರುವುದಂತೂ ಜಗತ್ತಿನ ಜನರ ಕಣ್ಣು ಕೆಂಪಗಾಗಿಸಿದೆ. ಇದರಿಂದಾಗಿಯೇ ಈ ಬಾರಿಯ ಕ್ವಾಡ್ ಸಭೆಯಲ್ಲಿ ಭಾರತಕ್ಕೆ ಬಲ ದೊರೆತದ್ದು. ಚೀನಾ ಯಾವ ಸೈನ್ಯದ ಮೇಲೆ ನಂಬಿಕೆ ಇರಿಸಿಕೊಂಡಿತ್ತೋ ಅದು ಕೂಡ ಕಾಗದದ ಹುಲಿ ಎಂದೇ ಜಗತ್ತು ಮಾತನಾಡಿಕೊಳ್ಳುವುದುನ್ನು ನೋಡಿದರೆ ಚೀನಾಕ್ಕೂ ಬಲವಾದ ಸಮಸ್ಯೆ ಇದೆ! 

ಶ್ರೀಲಂಕಾದ ಬಗ್ಗೆ ಮಾತನಾಡದಿರುವುದೇ ಒಳಿತು. ಚೀನಾದಿಂದ ಸಾಲ ತೆಗೆದುಕೊಂಡವರ ಕಥೆ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾಕ್ಕಿಂತ ಬಲವಾದ ಉದಾಹರಣೆ ಯಾರೂ ಬೇಕಾಗಿಲ್ಲ. ಶ್ರೀಲಂಕಾ ಉರಿದು ಹೋಗುವ ಹಂತದಲ್ಲಿದೆ. ಸಹಾಯ ಎಲ್ಲಿಂದ ಬರಬಹುದೆಂದು ಕಾತರದ ಕಂಗಳಿಂದ ಕಾಯುತ್ತಿದೆ. ಆದರೆ ಇಡಿಯ ಜಗತ್ತು ತೊಂದರೆಗೆ ಸಿಲುಕಿರುವಾಗ ಶ್ರೀಲಂಕಾದ ಉದ್ಧಾರಕ್ಕೆ ಸದ್ಯದಮಟಿಗೆ ಯಾರೂ ಬರಲಾರರು! ನೇಪಾಳವಾಗಲೀ ಮಯನ್ಮಾರ್ ಆಗಲಿ, ಮಲೇಷಿಯಾವಾಗಲಿ ಇಂಡೋನೇಷ್ಯಾವೇ ಆಗಲಿ, ಅತ್ತ ಅಮೇರಿಕಾ-ಯುರೋಪುಗಳೂ ಕೂಡ ಕರೋನ ನಂತರದ ಆರ್ಥಿಕ ದುಃಸ್ಥಿತಿಯತ್ತ ಹಂತ-ಹಂತವಾಗಿ ಹೆಜ್ಜೆ ಇಡುತ್ತಿವೆ. ಸ್ವಲ್ಪಮಟ್ಟಿಗೆ ಈ ಎಲ್ಲ ಹೊಡೆತಗಳಿಂದಲೂ ಪಾರಾಗಿರುವುದು ನಾವು ಮಾತ್ರ. 

ನರೇಂದ್ರಮೋದಿ ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದಾರೆ. ಜಗತ್ತಿನ ವೇದಿಕೆಯ ಮುಖ್ಯ ಭೂಮಿಕೆಯಲ್ಲಿ ಅವರನ್ನೀಗ ಎಲ್ಲರೂ ಗುರುತಿಸುತ್ತಿದ್ದಾರೆ. ರಷ್ಯಾ-ಉಕ್ರೇನುಗಳ ಯುದ್ಧವಿರಲಿ, ಶ್ರೀಲಂಕಾದ ಸಮಸ್ಯೆಯೇ ಇರಲಿ, ಜಾಗತಿಕ ವ್ಯಾಪಾರ-ವಹಿವಾಟುಗಳೇ ಇರಲಿ, ಅಥವಾ ಭಯೋತ್ಪಾದನೆ, ಪರಿಸರದ ವಿಚಾರಗಳೇ ಇರಲಿ ಮೋದಿಯ ಮಾತಿಗೆ ಜಗತ್ತು ತಲೆದೂಗುತ್ತಿದೆ. ನಾವು ನಿಜಕ್ಕೂ ಸಮರ್ಥ ಕೈಗಳಲ್ಲಿದ್ದೇವೆ. ಕರೋನಾ ನಮ್ಮನ್ನು ವಿಪರೀತವಾಗಿ ಬಾಧಿಸಲಿಲ್ಲ. ಕರೋನಾ ನಂತರ ಆರ್ಥಿಕ ಮುಗ್ಗಟ್ಟು ನಮ್ಮನ್ನು ಬಾಧಿಸಲಿಲ್ಲ, ಪಕ್ಕದ ಪಾಕಿಸ್ತಾನ ಪೆಟ್ರೋಲಿಗೆ 30 ರೂಪಾಯಿ ಹೆಚ್ಚು ಮಾಡಿದರೆ, ಭಾರತದಲ್ಲಿ 9 ರೂಪಾಯಿ ಕಡಿತಗೊಳಿಸಲಾಗಿತ್ತು. ಹಣದುಬ್ಬರವನ್ನು ಹಿಡಿತಕ್ಕೆ ತಂದುಕೊಳ್ಳಲು ಬಗೆಬಗೆಯ ಸಾಹಸ ಮಾಡುತ್ತಿದೆ ಭಾರತ. ಭಾರತೀಯರಿಗೆ ಕಷ್ಟಕಾಲದಲ್ಲಿ ತೊಂದರೆಯಾಗಬಾರದೆಂದು ಗೋಧಿ ಮತ್ತು ಸಕ್ಕರೆಯ ಮೇಲೆ ರಫ್ತು ನಿಷೇಧ ಹೇರಲಾಗಿದೆ. ಎಲ್ಲವೂ ಒಂದು ಹಂತಕ್ಕೆ ಬಂದು ನಿಲ್ಲುವಾಗ ಭಾರತ ಜಗತ್ತಿನ ಭೂಪಟದಲ್ಲಿ ಉಜ್ವಲವಾಗಿ ಬೆಳಗುತ್ತಿರುತ್ತದೆ. ಈ ವಿಶ್ವಾಸ ಪ್ರತಿ ಭಾರತೀಯನಿಗೂ ಇದೆ.

ಅಫ್ಘಾನಿಸ್ತಾನ: ಎದ್ದೆದ್ದು ಕುಣಿಯುತ್ತಿದೆ ಪಾಕಿಸ್ತಾನ!

ಅಫ್ಘಾನಿಸ್ತಾನ: ಎದ್ದೆದ್ದು ಕುಣಿಯುತ್ತಿದೆ ಪಾಕಿಸ್ತಾನ!


ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿ. ಡೊನಾಲ್ಡ್ ಟ್ರಂಪ್ ಅಫ್ಘಾನಿಸ್ತಾನದಲ್ಲಿರುವ ಅಮೇರಿಕಾದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮಾತನಾಡಿದಾಗಲೇ ಆತಂಕದ ಗೆರೆಗಳು ಮೂಡಿದ್ದವಾದರೂ ಟ್ರಂಪ್ ತಾಲಿಬಾನಿಗೆ ಹಾಕಿದ ನಿಯಮಗಳು ಸ್ವಲ್ಪ ಸಮಾಧಾನ ಕೊಡುವಂತಿದ್ದವು. ಆದರೀಗ ಹಾಗಿಲ್ಲ. ಹೊಸ ಅಧ್ಯಕ್ಷ ಬೈಡನ್ ಮುಲಾಜಿಲ್ಲದೇ ಅಮೇರಿಕಾ ಮತ್ತು ನ್ಯಾಟೊದ ಸೇನೆಯನ್ನು ಮರಳಿ ಕರೆಸಿಕೊಂಡಿದ್ದಾನೆ. ಸಪ್ಟೆಂಬರ್ 11ರ ವೇಳೆಗೆ ಅಮೇರಿಕಾದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂಬ ಅವನ ಹೇಳಿಕೆಯಿಂದ ಅನೇಕ ರಾಷ್ಟ್ರಗಳು ಕಂಗಾಲಾಗಿವೆ. ಭಾರತವೂ ಕೂಡ ಇದಕ್ಕೆ ಹೊರತಲ್ಲ!


ಅಮೇರಿಕಾದ ವಲ್ಡರ್್ ಟ್ರೇಡ್ ಸೆಂಟರ್ನ ಕಟ್ಟಡದ ಮೇಲೆ ಸಪ್ಟೆಂಬರ್ 2001ರಲ್ಲಿ ದಾಳಿಯಾದ ನಂತರ ಅಮೇರಿಕಾ ಅಫ್ಘಾನಿಸ್ತಾನವನ್ನು ನಿಯಂತ್ರಿಸುವ ನಿಶ್ಚಯ ಮಾಡಿತ್ತು. ಇವೆಲ್ಲವೂ ನೆಪವಷ್ಟೆ. ವಾಸ್ತವವಾಗಿ ಮಧ್ಯಪ್ರಾಚ್ಯ ಏಷ್ಯಾದ ಮೇಲೆ ತನ್ನ ಬಲವನ್ನು ಅಧಿಕೃತವಾಗಿ ಸ್ಥಾಪಿಸುವ ಬಯಕೆ ಅದಕ್ಕಿತ್ತು. ಹೀಗಾಗಿಯೇ ಎಲ್ಲ ನೆಪಗಳನ್ನು ಮುಂದೆಮಾಡಿ ಅಫ್ಘಾನಿಸ್ತಾನಕ್ಕೆ ಸೇನೆ ಕಳಿಸಲಾಯ್ತು. ಕಳೆದ ಸುಮಾರು 20 ವರ್ಷಗಳಲ್ಲಿ ಅಮೇರಿಕಾ ಈ ಸೇನೆಯನ್ನು ನಿರ್ವಹಿಸಲು ಮತ್ತು ಅಫ್ಘಾನಿಸ್ತಾನದ ಬೆಳವಣಿಗೆಯ ನೆಪವನ್ನು ಮುಂದೆ ಮಾಡಿ 144 ಬಿಲಿಯನ್ ಡಾಲರ್ಗಳನ್ನು ವ್ಯಯಿಸಿದೆ. ಸುಮಾರು ಎರಡೂವರೆ ಸಾವಿರದಷ್ಟು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. 22 ಸಾವಿರಕ್ಕೂ ಹೆಚ್ಚು ಸೈನಿಕರು ಏಟು ತಿಂದು ದೇಶಕ್ಕೆ ಮರಳಿದ್ದಾರೆ. ಆದರೆ ಇವಿಷ್ಟರೊಂದಿಗೆ ಏಷ್ಯಾದ ಬಹುಭಾಗದ ಮೇಲೆ ಅಮೇರಿಕಾ ಎರಡು ದಶಕಗಳಿಂದ ನಿವರ್ಿವಾದಿತವಾದ ಸಾರ್ವಭೌಮತ್ವವನ್ನು ಅನುಭವಿಸುತ್ತಾ ಬಂದಿದೆ. ತಾಲಿಬಾನಿಗಳನ್ನು ಮಟ್ಟಹಾಕುವ ನೆಪದಿಂದ ತನ್ನ ಆಶಯವನ್ನು ಈಡೇರಿಸಿಕೊಂಡ ಅಮೇರಿಕಾ ಒಂದು ಕಾಲದಲ್ಲಿ ಇದೇ ತಾಲಿಬಾನಿಗಳ ಬೆನ್ನಹಿಂದೆ ನಿಂತಿತ್ತು ಎಂಬುದನ್ನೂ ಮರೆಯುವಂತಿಲ್ಲ. ತನ್ನ ಶತ್ರುಗಳನ್ನು ಮಟ್ಟಹಾಕಲು ಹೊಸಬರನ್ನು ಹುಟ್ಟುಹಾಕಿ, ಕೊನೆಗೆ ಆತನನ್ನೂ ಮಟ್ಟಹಾಕುವ ಅಮೇರಿಕಾದ ಈ ಚಾಳಿ ಹೊಸತೇನೂ ಅಲ್ಲ. ಆದರೆ ಟ್ರಂಪ್ ಅಮೇರಿಕಾಕ್ಕಾಗುತ್ತಿರುವ ನಷ್ಟವನ್ನು ತಡೆಯಬೇಕೆಂದು ನಿಶ್ಚಯಿಸಿ ಸೈನ್ಯವನ್ನು ಹಿಂದಕ್ಕೆ ಕರೆದುಕೊಳ್ಳುವ ಆಲೋಚನೆಗೆ ಜೀವ ತುಂಬಿದ. ಈ ಹಿಂದೆ ಬರಾಕ್ ಒಬಾಮಾ ಕೂಡ ಇದೇ ರೀತಿ ಆಲೋಚಿಸಿದ್ದನಾದರೂ ಮುಂದಡಿಯಿಟ್ಟಿರಲಿಲ್ಲ. ಟ್ರಂಪ್, ಯಾವ ತಾಲಿಬಾನಿಗಳ ವಿರುದ್ಧ ಅಮೇರಿಕಾದ ಹೋರಾಟ ನಡೆದಿತ್ತೋ 2020ರ ಫೆಬ್ರವರಿಯಲ್ಲಿ ಅದೇ ತಾಲಿಬಾನಿಗಳನ್ನು ಮಾತುಕತೆಗೆ ಆಹ್ವಾನಿಸಿ ಒಪ್ಪಂದ ಮಾಡಿಕೊಂಡುಬಿಟ್ಟ. ಈ ಒಪ್ಪಂದದಲ್ಲಿ ಅಮೇರಿಕಾದ ಸ್ನೇಹಿತರ ವಿರುದ್ಧ ಭಯೋತ್ಪಾದನೆ ನಡೆಸಲು ಅಫ್ಘಾನಿಸ್ತಾನ ತನ್ನ ನೆಲ ಬಿಟ್ಟು ಕೊಡಬಾರದೆಂಬ ನಿಯಮ ಹಾಕಲು ಮರೆಯಲಿಲ್ಲ. ತಾಲಿಬಾನ್ ಒಪ್ಪಿಕೊಂಡಿತು. ಅಚ್ಚರಿ ಎಂದರೆ ಮಾತು ಪಡೆದವನಿಗೂ ಮಾತು ಕೊಟ್ಟವನಿಗೂ ಇದನ್ನು ಉಳಿಸಿಕೊಳ್ಳುವ ಭರವಸೆ ಇರಲಿಲ್ಲ. ಆದರೆ ಟ್ರಂಪ್ನ ಪ್ರಭಾವದಿಂದಾಗಿ ಅದೇ ವರ್ಷದ ಸಪ್ಟೆಂಬರ್ ತಿಂಗಳಲ್ಲಿ ಅಫ್ಘನ್ ಸಕರ್ಾರ ಮತ್ತು ತಾಲಿಬಾನಿಗಳ ಪ್ರಮುಖ ನಾಯಕರು ಕತಾರ್ನ ದೋಹಾದಲ್ಲಿ ಭೇಟಿಯಾಗಿ ‘ಇಂಟ್ರಾ ಅಫ್ಘನ್’ ಮಾತುಕತೆ ನಡೆಸಲಾಯ್ತು. ಈ ಸಂದರ್ಭದಲ್ಲಿ ತಾಲಿಬಾನಿ ನಾಯಕ ಮುಲ್ಲಾ ಅಬ್ದುಲ್ಗನಿ ಬರಾದಾರ್ ಮಾತನಾಡಿ ‘ಸ್ವತಂತ್ರ, ಸಾರ್ವಭೌಮ, ಸಂಘಟಿತ, ಅಭಿವೃದ್ಧಿ ಹೊಂದಿದ ಮತ್ತು ಇಸ್ಲಾಮಿನ ವ್ಯವಸ್ಥೆಗಳ ಅಡಿಯಲ್ಲಿರುವ ಮುಕ್ತ ಅಫ್ಘಾನಿಸ್ತಾನ ನಮಗೆ ಬೇಕು’ ಎಂದಿದ್ದ. ಇಲ್ಲಿ ಬೇರೆಲ್ಲವೂ ಒಪ್ಪಿಕೊಳ್ಳಬೇಕಾದ್ದೇ. ಆದರೆ ಇಸ್ಲಾಮಿನ ವ್ಯವಸ್ಥೆ ಎಂಬುದರ ವ್ಯಾಖ್ಯೆಯನ್ನು ಅರಿತುಕೊಳ್ಳುವುದು ಕಷ್ಟ ಅಷ್ಟೆ. ಯಾರು ಏನೇ ಹೇಳಿದರೂ ಅಮೇರಿಕನ್ ಸೇನೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ನಂತರ ಅಲ್ಲಿ ಚುನಾವಣೆ ನಡೆದು ಪ್ರಜಾಪ್ರಭುತ್ವ ಮಾದರಿಯ ಸಕರ್ಾರ ಅಧಿಕಾರಕ್ಕೆ ಬಂದಿತ್ತು. ಹೆಣ್ಣುಮಕ್ಕಳು ಶಾಲೆಗೆ ಹೋಗಲಾರಂಭಿಸಿದ್ದರು. ಅವರ ಬದುಕು ಮುಕ್ತವಾದ ವಾತಾವರಣದಲ್ಲಿ ಚೆನ್ನಾಗಿಯೇ ನಡೆದಿತ್ತು. ಒಂದು ರೀತಿ ಎರಡು ದಶಕಗಳ ಕಾಲ ಅಫ್ಘನ್ನಿನ ಸಾಮಾನ್ಯ ಜನ ಉಸಿರಾಡುತ್ತಿದ್ದರು. ಈ ಸಂದರ್ಭದಲ್ಲಿಯೇ ಭಾರತವೂ ಈ ಪ್ರದೇಶದ ಬೆಳವಣಿಗೆಗೆ ತನ್ನ ಸಹಕಾರ ಹಸ್ತವನ್ನು ಚಾಚಿತು. ಅಣೆಕಟ್ಟುಗಳ ನಿಮರ್ಾಣ ಮಾಡಿಕೊಟ್ಟು ನೀರಾವರಿ ವ್ಯವಸ್ಥೆಯತ್ತ ಗಮನಹರಿಸಿ, ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸುವಲ್ಲಿ ಭಾರತದ ಪಾತ್ರ ಬಲುದೊಡ್ಡದ್ದು. ಶಿಕ್ಷಣ ಕ್ಷೇತ್ರದಲ್ಲಿ ಸಹಕಾರಿಯಾಗಿ ನಿಂತ ಭಾರತ ಕಟ್ಟಿಕೊಟ್ಟ ಗ್ರಂಥಾಲಯಗಳ ಕುರಿತಂತೆ ಈಗಲೂ ಅಲ್ಲಿಯ ಜನ ಗೌರವದ ಮಾತುಗಳನ್ನಾಡುತ್ತಾರೆ. ಅಣೆಕಟ್ಟಿನ ಉದ್ಘಾಟನೆಗೆ ನರೇಂದ್ರಮೋದಿ ಅಫ್ಘಾನಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿನ ಜನ ತಿರಂಗಾ ಹಿಡಿದು ಗೌರವದಿಂದ ಸ್ವಾಗತಿಸಿದ್ದನ್ನು ಮರೆಯುವಂತಿಲ್ಲ. ನಮ್ಮ ಬಾಂಧವ್ಯ ಎಷ್ಟು ಬಲವಾಗಿತ್ತೆಂದರೆ ಕೊವಿಡ್ ಲಸಿಕೆಗಳನ್ನು ಭಾರತ ಮೊತ್ತಮೊದಲು ಕಳಿಸಿದ್ದು ಅಫ್ಘಾನಿಸ್ತಾನಕ್ಕೇ. ಇವಿಷ್ಟನ್ನೂ ಈಗ ಸ್ಮರಿಸಿಕೊಳ್ಳುತ್ತಿರುವುದೇಕೆಂದರೆ ಅಲ್ಲಿನ ಜನರ ಜೀವನ ಉನ್ನತ ಸ್ತರಕ್ಕೇರಲಾರಂಭಿಸಿತ್ತು. ತಾಲಿಬಾನಿಗಳ ಕಟ್ಟರ್ ಇಸ್ಲಾಮೀಯತೆಯ ಕಪಿಮುಷ್ಟಿಯಿಂದ ಹೊರಬಂದಿದ್ದ ಈ ಜನ ಈಗ ತಮ್ಮ ಬದುಕಿನ ಆನಂದವನ್ನು ಗುರುತಿಸಿಕೊಳ್ಳಲಾರಂಭಿಸಿದ್ದರು. ಟ್ರಂಪ್ ತನ್ನ ಸೇನೆಯನ್ನು ಮರಳಿ ಕರೆಸಿಕೊಳ್ಳುವ ಮಾತುಗಳನ್ನಾಡುತ್ತಿರುವಂತೆಯೇ ಅಫ್ಘಾನಿಸ್ತಾನಿಯರ ಕನಸುಗಳು ಚೂರುಚೂರಾಗಿಬಿಟ್ಟವು. ತಾಲಿಬಾನಿಯರ ದುಷ್ಟ ಆಡಳಿತದ ಕರಾಳ ಛಾಯೆ ಮತ್ತೊಮ್ಮೆ ವ್ಯಾಪಿಸಿಕೊಂಡಿತು!


ಟ್ರಂಪ್ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ಈ ವಿಚಾರ ಮೂಲೆಗುಂಪಾಯ್ತು ಎಂದುಕೊಂಡರೆ ಬೈಡನ್ ಟ್ರಂಪ್ಗಿಂತ ವೇಗವಾಗಿ ಅಮೇರಿಕನ್ ಸೇನೆಯನ್ನು ಮರಳಿ ಕರೆಸಿಕೊಳ್ಳುವ ಚಟುವಟಿಕೆ ಆರಂಭಿಸಿಬಿಟ್ಟ. ಈಗ ಈ ಪ್ರಕ್ರಿಯೆಯಿಂದ ಎದ್ದೆದ್ದು ಕುಣಿಯುತ್ತಿರುವ ರಾಷ್ಟ್ರಗಳು ಎರಡೇ. ಒಂದು ಪಾಕಿಸ್ತಾನ ಮತ್ತೊಂದು ಚೀನಾ. ಇಬ್ಬರ ಉದ್ದೇಶವೂ ಬಲು ಸರಳ. ದುರ್ಬಲವಾದ ಭಯೋತ್ಪಾದನೆಗೆ ಸೂಕ್ತವಾದ, ತಮ್ಮ ಮಜರ್ಿಯಲ್ಲೇ ಬಿದ್ದಿರುವ ಅಫ್ಘಾನಿಸ್ತಾನ ಭಾರತಕ್ಕೆ ತೊಂದರೆಯುಂಟುಮಾಡಬಲ್ಲದು. ಇದು ಭಾರತದ ಕನಸುಗಳನ್ನು, ಆಕಾಂಕ್ಷೆಗಳನ್ನು ಸರ್ವನಾಶ ಮಾಡಿಬಿಡಬಲ್ಲದೆಂಬುದು ಇವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಅವರಿಬ್ಬರ ಆನಂದಕ್ಕೆ ಪಾರವೇ ಇಲ್ಲ. ಸೇನೆಯನ್ನು ಮರಳಿ ಕರೆಸಿಕೊಳ್ಳುವ ಮುನ್ನ ಟ್ರಂಪ್ ವಿಧಿಸಿದ್ದ ಶರತ್ತನ್ನು ಬೈಡನ್ ಮುಂದಿಟ್ಟಿಲ್ಲ. ಅದರರ್ಥ ಭಾರತ ವಿರೋಧಿಯಾದ ಯಾವ ಚಟುವಟಿಕೆಗಾದರೂ ತನ್ನ ನೆಲವನ್ನು ಅಫ್ಘಾನಿಸ್ತಾನ ಬಳಸಿಕೊಳ್ಳಬಹುದು ಎಂಬುದೇ ಆಗಿದ್ದರೆ ಅದು ಮದಿರೆ ಕುಡಿದ ಹುಚ್ಚು ಮಂಗನಿಗೆ ಚೇಳು ಕಡಿದಂತೆಯೇ ಸರಿ.


ಪಾಕಿಸ್ತಾನ ಮತ್ತು ತಾಲಿಬಾನಿಗಳ ನಂಟು ಹೊಸತೇನು ಅಲ್ಲ. ಅಲ್ಲಿನ ಹಕ್ಕಾನಿ ಗುಂಪು ತಾಲಿಬಾನಿಗಳ ಮೇಲೆ ಸಾಕಷ್ಟು ಪ್ರಭಾವ ಹೊಂದಿದೆ. ಡೊನಾಲ್ಡ್ ಟ್ರಂಪ್ ತಾಲಿಬಾನಿಗಳ ಜೊತೆಗೆ ಮಾತುಕತೆ ನಡೆಸಬೇಕೆಂಬ ಪ್ರಯತ್ನ ಆರಂಭಿಸಿದಾಗ ಆತ ಮೊದಲು ಮಾತನಾಡಬೇಕಾದ ಅನಿವಾರ್ಯತೆ ಒದಗಿದ್ದು ಪಾಕಿಸ್ತಾನಿಯರೊಂದಿಗೆ ಎಂಬುದೇ ಅವರೀರ್ವರ ಸಂಬಂಧದ ವ್ಯಾಪ್ತಿಯನ್ನು ತಿಳಿಸಬಲ್ಲದು. ಭಾರತ ತನ್ನ ವ್ಯಾಪ್ತಿಯನ್ನು ಅಫ್ಘಾನಿಸ್ತಾನದಲ್ಲಿ ಇಂಚಿಂಚು ಹೆಚ್ಚಿಸಿಕೊಳ್ಳುತ್ತಿರುವಂತೆ ಪಾಕಿಸ್ತಾನದ ಎದೆ ಢವಗುಟ್ಟಲಾರಂಭಿಸಿತ್ತು. ಚೀನಾ ಶ್ರೀಲಂಕಾದಲ್ಲಿ ಬಂದರು ಅಭಿವೃದ್ಧಿಗೊಳಿಸಿ ತನ್ನ ನೌಕೆಯನ್ನು ನಿಲ್ಲಿಸುತ್ತದೆ ಎಂಬ ವಿಚಾರ ನಮಗೆಷ್ಟು ಗಾಬರಿ ಹುಟ್ಟಿಸುವಂಥದ್ದೋ, ಅಫ್ಘಾನಿಸ್ತಾನದೊಂದಿಗಿನ ನಮ್ಮ ಸ್ನೇಹ ಸಂಬಂಧ ಪಾಕಿಸ್ತಾನಕ್ಕೂ ಅಷ್ಟೇ ಗಾಬರಿ ಹುಟ್ಟಿಸುವಂಥದ್ದು. ಭಾರತ ಪಾಕಿಸ್ತಾನವನ್ನು ಸೈನ್ಯದ ಮೂಲಕ ಸುತ್ತುವರೆಯುವ ಕ್ರಮ ಇದು ಎಂದು ಅದು ಭಾವಿಸುತ್ತದೆ. ಆದರೆ ಭಾರತ ಎಂದಿಗೂ ಅಫ್ಘಾನಿಸ್ತಾನವನ್ನು ಈ ದಿಕ್ಕಿನಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಈಗ ಅಮೇರಿಕಾದ ಸೇನೆ ಕಾಲ್ಕೀಳುತ್ತಿರುವಂತೆ ಪಾಕಿಸ್ತಾನಕ್ಕೆ ಆನೆಬಲ ಬಂದಂತಾಗಿದೆ. ಅವರೆಷ್ಟು ದುಷ್ಟರೆಂದರೆ ಇತ್ತೀಚೆಗೆ ಪಾಕಿಸ್ತಾನೀಯನೊಬ್ಬ ಅಫ್ಘಾನಿಸ್ತಾನದಲ್ಲಿ ಭಾರತ ಕಟ್ಟುಕೊಟ್ಟಿರುವ ಅಣೆಕಟ್ಟನ್ನು ಹೊಡೆದುರುಳಿಸಲು ಪ್ರಯತ್ನಪಟ್ಟು ಸಿಕ್ಕುಬಿದ್ದಿದ್ದ. ಎಷ್ಟು ವಿಚಿತ್ರ ನೋಡಿ, ಮುಸಲ್ಮಾನರೇ ಇರುವ ರಾಷ್ಟ್ರವೊಂದಕ್ಕೆ ಹಿಂದುಗಳ ರಾಷ್ಟ್ರವೊಂದು ನೀರು ಕೊಟ್ಟರೆ, ಮತ್ತೊಂದು ಮುಸ್ಲೀಂ ರಾಷ್ಟ್ರ ಅದನ್ನು ಕಸಿಯುವ ಧಾವಂತದಲ್ಲಿದೆ. ಅಲ್ಲಾಹ್ ಯಾರನ್ನು ಮೆಚ್ಚುತ್ತಾನೆಂಬುದು ಈಗ ಬಲುದೊಡ್ಡ ಪ್ರಶ್ನೆ! ಅಮೇರಿಕಾದ ಸೇನೆ ಮರಳುವ ಪ್ರಕ್ರಿಯೆ ಆರಂಭವಾಗುವುದರೊಂದಿಗೆ ಪಾಕಿಸ್ತಾನದ ಶಕ್ತಿ ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಲೇ ಸಾಗಿದೆ. ಕನಿಷ್ಠಪಕ್ಷ 10 ಸಾವಿರ ಜನ ಪಾಕೀ ಸೈನಿಕರು ಅಲ್ಲೀಗ ತಾಲಿಬಾನಿಗಳ ಪರವಾಗಿ ದುಡಿಯುತ್ತಿದ್ದಾರೆ. ತನ್ನ ಗಡಿಗೆ ಹೊಂದಿಕೊಂಡಂತೆ ತಾಲಿಬಾನಿಗಳು ಅಡಗಿರುವ ಸ್ಥಳದಲ್ಲಿ ಅಫ್ಘಾನಿಸ್ತಾನ ವಾಯುದಾಳಿ ನಡೆಸಿದ್ದೇ ಆದರೆ ಅಫ್ಘನ್ ಸೇನೆಯ ವಿರುದ್ಧ ಪಾಕಿಸ್ತಾನ ದಾಳಿ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಇತ್ತೀಚೆಗೆ ಲಾಂಗ್ವಾರ್ ಜರ್ನಲ್ನ ಡಿಫೆನ್ಸ್ ಆಫ್ ಡೆಮಾಕ್ರಸೀಸ್ ನಡೆಸಿದ ಸಂಶೋಧನೆಯ ಪ್ರಕಾರ ಅಫ್ಘಾನಿಸ್ತಾನದ 325 ಜಿಲ್ಲೆಗಳಲ್ಲಿ ತಾಲಿಬಾನಿಗಳ ಹಿಡಿತ 76ರಲ್ಲಿದ್ದರೆ ಅಫ್ಘನ್ ಸಕರ್ಾರದ ತಾಕತ್ತು 127ರಲ್ಲಿದೆ. ಉಳಿದ 122 ಜಿಲ್ಲೆಗಳಲ್ಲಿ ಸಮಬಲವೆನಿಸಿದರೂ ಪಾಕಿಸ್ತಾನಿಗಳ ಸಹಕಾರ ಪಡೆದುಕೊಂಡ ತಾಲಿಬಾನಿಗಳು ಈ ಭಾಗದ ಮೇಲೆ ಹಿಡಿತವನ್ನು ಸಾಧಿಸುವುದು ಅಸಾಧ್ಯವಲ್ಲ. ಇವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಇರುವ ಅಫ್ಘಾನಿಸ್ತಾನ್ ನ್ಯಾಷನಲ್ ಡಿಫೆನ್ಸ್ ಅಂಡ್ ಸೆಕ್ಯುರಿಟಿ ಫೋರ್ಸಸ್ ಕೆಲವು ಲಕ್ಷ ಸೈನಿಕರನ್ನು ಹೊಂದಿರುವುದಾದರೂ ಸೈನ್ಯ ನಿರ್ವಹಣೆಗೆ ಮತ್ತೆ ಅಮೇರಿಕಾದಿಂದಲೇ ಹಣ ಬರಬೇಕು. ಇದಕ್ಕೆ ಪ್ರತಿಯಾಗಿ ಮತೀಯ ಆವೇಶದಿಂದ ಹುಚ್ಚಾಗಿರುವ ತಾಲಿಬಾನಿಗಳಿಗೆ ಚೀನಾದಂತಹ ರಾಷ್ಟ್ರಗಳು ಸಾಕಷ್ಟು ಹಣ ಸುರಿಯುತ್ತಿವೆ. ಸಹಜವಾಗಿಯೇ ಈ ಆವೇಶದಿಂದ ನುಗ್ಗುತ್ತಿರುವ ಈ ಮಂದಿ ಇಡಿಯ ಅಫ್ಘಾನಿಸ್ತಾನವನ್ನು ತೆಕ್ಕೆಗೆ ತೆಗೆದುಕೊಂಡುಬಿಡುತ್ತಾರೆ. ಮುಂದೆ ಲಷ್ಕರ್-ಎ-ತೈಯ್ಬಾ, ಜೈಶ್-ಎ-ಮೊಹಮ್ಮದ್ನಂತಹ ಉಗ್ರಗಾಮಿ ಸಂಘಟನೆಗಳಿಗೆ ಇದು ನಿಸ್ಸಂಶಯವಾಗಿ ಶಕ್ತಿ ಮತ್ತು ಪ್ರೇರಣೆಯಾಗಲಿದೆ. ನಾವು ಅದರ ಫಲವನ್ನು ಉಣ್ಣಬೇಕಾಗುವುದು ನಿಶ್ಚಿತ. ಹೀಗಾಗಿಯೇ ಭಾರತ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ. ಕಳೆದ ತಿಂಗಳು ಭಾರತ ತಾಲಿಬಾನಿನ ಪ್ರಮುಖರೊಂದಿಗೆ ಮಾತುಕತೆ ಆರಂಭಿಸಿ ತನಗೆ ಬೇಕಾದ್ದನ್ನು ಪಡೆದುಕೊಳ್ಳುವ ಆಲೋಚನೆಯನ್ನು ಮಾಡಿಬಿಟ್ಟಿದೆ. ತಾಲಿಬಾನಿ ಮುಖಂಡರು ಹಿಂದೆಂದಿಗಿಂತಲೂ ಎಚ್ಚರಿಕೆಯಿಂದ ಈಗ ವ್ಯವಹರಿಸುತ್ತಿದ್ದಾರೆ. ಇತ್ತ ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ ಪ್ರಕ್ರಿಯೆಯನ್ನು ಭಾರತದ ಆಂತರಿಕ ವಿಚಾರವೆಂದಿದ್ದಾರಲ್ಲದೇ ಉಯ್ಘುರ್ ಮುಸಲ್ಮಾನರ ತಗಾದೆಯನ್ನು ಚೀನಾದ ಆಂತರಿಕ ವಿಚಾರ ಎಂದು ಕರೆದಿದ್ದಾರೆ. ಇದು ಈ ಹೊತ್ತಿನಲ್ಲಿ ಅಫ್ಘಾನಿಸ್ತಾನಿ ಸಕರ್ಾರಕ್ಕೆ ಸಿಗಬಹುದಾದ ನಮ್ಮ ಸಹಕಾರವನ್ನು ತಡೆಯುವ ಉಪಾಯವಿದ್ದರೂ ಇರಬಹುದು. ಇದರ ಹಿಂದು-ಹಿಂದೆಯೇ ಅಫ್ಘನ್ ಸಕರ್ಾರದ ಮಂತ್ರಿಯೊಬ್ಬರು ತಾಲಿಬಾನಿಗಳನ್ನೆದುರಿಸುವಲ್ಲಿ ಭಾರತದ ಸಹಕಾರವನ್ನು ಕೋರಿರುವುದಲ್ಲದೇ ಭಾರತಕ್ಕೆ ಬಂದು ಈ ಕುರಿತಂತೆ ಮಾತುಕತೆ ನಡೆಸುವ ಉತ್ಸುಕತೆಯಲ್ಲೂ ಇದ್ದಾರೆ. ನಮ್ಮ ವಿದೇಶಾಂಗ ನೀತಿಗೆ ಈಗಿನದ್ದು ಬಲುದೊಡ್ಡ ಸವಾಲು. ಅಲ್ಲಿನ ಸಕರ್ಾರಕ್ಕೆ ಸಹಕಾರ ಮಾಡಿದರೆ ಭವಿಷ್ಯದುದ್ದಕ್ಕೂ ಭಯೋತ್ಪಾದನೆಯ ಭೀತಿ. ಸಹಕರಿಸದಿದ್ದರೆ ನ್ಯಾಯದ ಪರವಾಗಿ ನಿಂತಿಲ್ಲವೆಂಬ ಕೊರಗು. ಬಲು ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿರುವ ಮೋದಿ ಸಕರ್ಾರ ಈ ಅವಧಿಯಲ್ಲೇ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹುಡು-ಹುಡುಕಿ ಕೊಲ್ಲುತ್ತಿದೆ. ಕಳೆದ ಹದಿನೈದಿಪ್ಪತ್ತು ದಿನಗಳಲ್ಲಿಯಂತೂ ಕೆಲವು ಪ್ರಮುಖ ಭಯೋತ್ಪಾದಕ ನಾಯಕರೂ ಸೇರಿದಂತೆ ಅನೇಕರನ್ನು ಯಮಪುರಿಗಟ್ಟಿದೆ.


ಅಮೇರಿಕಾಕ್ಕೆ ಅಂದುಕೊಂಡಷ್ಟು ಸುಲಭವಿಲ್ಲ. ಮಧ್ಯಪ್ರಾಚ್ಯದಲ್ಲಿ ತನ್ನ ಮೂಗುತೂರಿಸುವಿಕೆಯನ್ನು ಕಡಿಮೆ ಮಾಡಿಕೊಂಡು ಅದೀಗ ಇಂಡೊ-ಪೆಸಿಫಿಕ್ ಪ್ರದೇಶಗಳತ್ತ ತಿರುಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಬೆಳೆಯುತ್ತಿರುವ ಪರಿಯನ್ನು ನಿಯಂತ್ರಿಸಬೇಕಾಗಿರುವುದು ಸದ್ಯಕ್ಕೆ ಅದರ ಅಗತ್ಯ. ಅದಾಗಲೇ ಚೀನಾ ತನ್ನ ನೌಕಾಸೈನ್ಯವನ್ನು ವಿಸ್ತರಿಸಿಕೊಂಡಿರುವ ರೀತಿಯಿಂದಾಗಿ ಅದೀಗ ಅಮೇರಿಕಾವನ್ನೇ ಹಿಂದಿಕ್ಕಿ ಜಗತ್ತಿನ ನಂಬರ್ ಒನ್ ಆಗಿ ಬೆಳೆದಿದೆ. ದಕ್ಷಿಣ ಚೀನಾ ಸಮುದ್ರದ ಮೂಲಕ ಅದು ನಡೆಸುತ್ತಿರುವ ವ್ಯಾಪಾರ-ವಹಿವಾಟು ಅಮೇರಿಕಾವನ್ನು ಆತಂಕಕ್ಕೆ ಬೀಳಿಸುವಷ್ಟು. ಭಾರತವನ್ನು ತುಳಿಯುವ ಪ್ರಯತ್ನದಲ್ಲಿ ಅಮೇರಿಕಾ ಮುಂದಡಿಯಿಡ ಹೋದರೆ ತನ್ನ ಕಾಲಮೇಲೆ ಕುಠಾರಾಘಾತ ಮಾಡಿಕೊಳ್ಳುವುದು ನಿಶ್ಚಿತ. ಹೀಗಾಗಿ ಸದ್ಯಕ್ಕೆ ತೀರಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲವಾದರೂ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪಾಕ್ ಆಕ್ರಮಿತ ಕಾಶ್ಮೀರವೆಂಬ ಸ್ವಾಯತ್ತ ರಾಷ್ಟ್ರವೊಂದು ನಿಮರ್ಾಣವಾಗುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಏನಾಗುವುದೆಂದು ಕಾದು ನೋಡೋಣ..

ತರುಣರೇಕೆ ಇಸ್ಲಾಂ ಬಿಡುತ್ತಿದ್ದಾರೆ!?

ತರುಣರೇಕೆ ಇಸ್ಲಾಂ ಬಿಡುತ್ತಿದ್ದಾರೆ!?

ಹಸನ್ ಸುರೂರ್ ಬರೆದಿರುವ ‘ಹು ಕಿಲ್ಡ್ ಲಿಬರಲ್ ಇಸ್ಲಾಂ’ ಎಂಬ ಪುಸ್ತಕದ ಆಯ್ದ ಭಾಗವನ್ನು ಟೆಲಿಗ್ರಾಫ್ ಪತ್ರಿಕೆ ಕಳೆದ ವರ್ಷ ಪ್ರಕಟಿಸಿತ್ತು. ತರುಣ ಮುಸಲ್ಮಾನರು ಇಸ್ಲಾಮನ್ನು ತೊರೆಯುತ್ತಿರುವುದೇಕೆ ಎಂಬ ಪ್ರಶ್ನೆ ಅಲ್ಲಿತ್ತು. ಸಾಕಷ್ಟು ದಾಖಲೆಗಳ ಸಮೇತ ಇಸ್ಲಾಂ ತೊರೆಯುತ್ತಿರುವವರ ಕುರಿತಂತೆ ವಿವರವಾದ ಮಾಹಿತಿ ಆ ಲೇಖನದಲ್ಲಿತ್ತು. ಅಂಕಿ-ಅಂಶಿಗಳು ನಿಜವೇ ಆಗಿದ್ದರೆ, ತರುಣರು ಇಸ್ಲಾಂ ತೊರೆಯುತ್ತಿರುವ ಕಾರಣ ಲೇಖನದಲ್ಲಿ ಹೇಳಿರುವ ಅಂಶಗಳೇ ಆಗಿದ್ದರೆ ಈಗಂತೂ ಜಗತ್ತಿನ ಬಹುಪಾಲು ಜನ ಮುಸಲ್ಮಾನರೇ ಆಗಿಲ್ಲವೆನಿಸುತ್ತದೆ. ಅಮೇರಿಕಾದ ದ ನ್ಯೂ ರಿಪಬ್ಲಿಕ್ ಪತ್ರಿಕೆ ಕೆಲವು ವರ್ಷಗಳ ಹಿಂದೆ ಈ ಕುರಿತಂತೆ ವರದಿ ಪ್ರಕಟಿಸಿದಾಗ ಸೌದಿ ಅರೇಬಿಯಾವೂ ಸೇರಿದಂತೆ ಮುಸಲ್ಮಾನ ರಾಷ್ಟ್ರಗಳೆಲ್ಲಾ ಒಮ್ಮೆ ಅವಾಕ್ಕಾಗಿಬಿಟ್ಟಿದ್ದವು. ಫ್ರೀ ಅರಬ್ಸ್ ಎಂಬ ಪತ್ರಿಕೆಯ ಸಂಪಾದಕ ಈ ಕುರಿತಂತೆ ಬರೆಯುತ್ತಾ ನಾಸ್ತಿಕವಾದದ ಕುರಿತಂತೆ ಫೇಸ್ಬುಕ್ಕಿನಲ್ಲಿ ಹುಡುಕಾಡುವಾಗ ಭಿನ್ನ ಭಿನ್ನ ಅರಬ್ ರಾಷ್ಟ್ರಗಳ ಪೇಜುಗಳು ಕಂಡುಬಂದವೆಂದು ಹೇಳಿದ್ದರು. ಇವುಗಳನ್ನು ಅನುಸರಿಸುವವರ ಸಂಖ್ಯೆ ಕೆಲವು ನೂರುಗಳಿಂದ ಹಿಡಿದು ಹತ್ತು ಸಾವಿರವನ್ನು ಮೀರಿತ್ತು ಎಂಬುದನ್ನು ಅವರು ಗುರುತಿಸಲು ಮರೆಯಲಿಲ್ಲ. ಅಮೇರಿಕಾದಂತಹ ರಾಷ್ಟ್ರದಲ್ಲೋ ಅಥವಾ ಭಾರತದಲ್ಲೋ ಈ ರೀತಿಯ ಪೇಜುಗಳಿದ್ದರೆ ಲಕ್ಷಾಂತರ ಅನುಯಾಯಿಗಳಿದ್ದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಇಲ್ಲಿ ವಾಕ್ ಸ್ವಾತಂತ್ರ್ಯ ಇದೆ, ಆಲೋಚನೆಗೆ ಚೌಕಟ್ಟುಗಳಿಲ್ಲ. ಆದರೆ ಅರಬ್ ರಾಷ್ಟ್ರಗಳಲ್ಲಿ ಹಾಗಲ್ಲವೇ ಅಲ್ಲ. ನಾಲ್ಕು ಎಂದರೆ ಹೆಚ್ಚು ಮೂರು ಎಂದರೆ ಕಡಿಮೆ. ಷರಿಯಾ ಕಾನೂನುಗಳು ಯಾರನ್ನು ಯಾವಾಗ ತರಿದು ಬಿಸಾಡುವುದೋ ದೇವರೇ ಬಲ್ಲ. ಅಂಥದ್ದರಲ್ಲೂ ಈ ರೀತಿಯ ಅಲೋಚನೆಗಳು ಟಿಸಿಲೊಡೆಯುತ್ತಿವೆ ಎಂದರೆ ಕ್ರೌರ್ಯದಿಂದ ಕಟ್ಟಿದ ಸೌಧವೊಂದು ಕುಸಿದು ಬೀಳುವ ಕಾಲ ಸನ್ನಿಹಿತವಾಗಿದೆ ಎಂದೇ ಅರ್ಥ!

ಟ್ವಿಟರ್ನಲ್ಲೋ ಫೇಸ್ಬುಕ್ಕಿನಲ್ಲೋ ಎಕ್ಸ್ ಮುಸ್ಲೀಂ ಎಂದು ಕೊಟ್ಟು ನೋಡಿ. ಅನೇಕರು ಅದರಡಿಯಲ್ಲಿ ತಾವು ಇಸ್ಲಾಮನ್ನು ಬಿಟ್ಟಿರುವುದೇಕೆಂತಲೋ ನಾಸ್ತಿಕವಾದಿಗಳಾಗಿರುವುದು ಎಷ್ಟು ಸುಖವೆಂತಲೋ ಬಣ್ಣಿಸಿರುತ್ತಾರೆ. 2012ರಲ್ಲಿ ಗ್ಯಾಲಪ್ ಇಂಟರ್ನ್ಯಾಷನಲ್ ನಡೆಸಿದ ಸವರ್ೇಯೊಂದರಲ್ಲಿ ಸೌದಿಯ, ಹ್ಞಾಂ! ಸೌದಿಯ ಶೇಕಡಾ 5ರಷ್ಟು ಜನ ತಮ್ಮನ್ನು ತಾವು ಶ್ರದ್ಧೆಯಿಂದಲೇ ನಾಸ್ತಿಕವಾದಿಗಳಾದವರು ಎಂದು ಹೇಳಿಕೊಂಡಿದ್ದರು. ಸುಮಾರು 19 ಪ್ರತಿಶತದಷ್ಟು ಜನ ತಮ್ಮನ್ನು ತಾವು ತೀರಾ ಧಾಮರ್ಿಕವಲ್ಲ ಎಂದು ಪರಿಚಯಿಸಿಕೊಂಡಿದ್ದರು. ಈ ಸಂಖ್ಯೆ ಅಮೇರಿಕಾ, ಇಟಲಿ ಮೊದಲಾದ ರಾಷ್ಟ್ರಗಳಲ್ಲಿ ಇನ್ನೂ ಹೆಚ್ಚಾಗಿದೆ ಎಂಬುದನ್ನು ಮರೆಯುವಂತಿಲ್ಲ. ಮಧ್ಯ ಏಷ್ಯಾದಲ್ಲಿ ಅತ್ಯಂತ ಹೆಚ್ಚು ಡೌನ್ಲೋಡ್ ಆಗಿರುವ ಕೃತಿ ರಿಚಡರ್್ ಡಾಕಿನ್ನ ಗಾಡ್ ಡೆಲ್ಯೂಷನ್ ಎಂಬ ಪುಸ್ತಕ ಎನ್ನುವುದು ಗಮನಿಸಲೇಬೇಕಾದ ಸಂಗತಿ ಏಕೆಂದರೆ ಈ ಕೃತಿಯ ಲೇಖಕ ತನ್ನನ್ನು ತಾನು ನಾಸ್ತಿಕವಾದಿ ವಿಜ್ಞಾನಿ ಎಂದೇ ಕರೆದುಕೊಳ್ಳುತ್ತಾನೆ. ಮನೆಯ ಮಕ್ಕಳು ನಾಸ್ತಿಕವಾದದ ಸೆಳೆತಕ್ಕೆ ಒಳಪಡುತ್ತಿರುವುದನ್ನು ಕಂಡು ಗಾಬರಿಗೊಂಡ ಶ್ರದ್ಧಾವಂತ ಮುಸಲ್ಮಾನರು ಒಂದೆಡೆ ತಮ್ಮ ಮಕ್ಕಳನ್ನು ಮರಳಿ ತರುವಲ್ಲಿ ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ಈ ಸುದ್ದಿ ಹೊರಗೆ ಗೊತ್ತಾಗದಂತೆ ಮುಚ್ಚಿಡುವಲ್ಲಿ ಹರಸಾಹಸ ಮಾಡುತ್ತಿದ್ದಾರೆ. ಅದರಲ್ಲೂ ಧಾಮರ್ಿಕ ನಂಬಿಕೆಗಳ ವಿರುದ್ಧ ಮಾತನಾಡಿದವರನ್ನು ಕೊಂದೇಬಿಡುವ ಅರಬ್ ರಾಷ್ಟ್ರಗಳಲ್ಲಿ ಸುದ್ದಿಯನ್ನು ಮುಚ್ಚಿಟ್ಟು ಕಾಯುವುದು ಅತ್ಯಗತ್ಯವೇ ಸರಿ. ಅಮೇರಿಕಾದಲ್ಲಿ ವಾಸಿಸುತ್ತಿದ್ದ ಸೊಮಾಲಿಯಾದ ಮಹಾಡ್ ಓಲಾಡ್ನ ಕಥೆಯನ್ನು ದಿ ಎಕನಾಮಿಸ್ಟ್ 2018ರಲ್ಲಿ ಪ್ರಕಟಿಸಿತ್ತು. ಮಗ ಇಸ್ಲಾಮಿನ ಮೇಲೆ ಭರವಸೆ ಕಳೆದುಕೊಳ್ಳುತ್ತಿದ್ದಾನೆಂದು ಗೊತ್ತಾದಾಗ ಕೀನ್ಯಾ ಪ್ರವಾಸಕ್ಕೆ ಕರೆದೊಯ್ಯುತ್ತೇವೆಂದು ತಂದೆ-ತಾಯಿಯರು ಅವನನ್ನು ಪುಸಲಾಯಿಸಿದ್ದರು. ಅಲ್ಲಿ ಅವನನ್ನು ಮುಸ್ಲೀಂ ಮದರಸಾಕ್ಕೆ ಸೇರಿಸಿ ಮತ್ತೆ ಧರ್ಮದ ಕುರಿತಂತೆ ಆಸಕ್ತಿ ಮೂಡಿಸುವ ಪ್ರಯತ್ನ ಅವರದ್ದು. ವಿಮಾನದಲ್ಲಿರುವಾಗಲೇ ಈ ಕುರಿತ ಅನುಮಾನದಿಂದ ಎಚ್ಚರಗೊಂಡ ಮಹಾಡ್ ಇಳಿದೊಡನೆ ತಾಯಿಯ ಕೈಚೀಲದಿಂದ ಪಾಸ್ಪೋರ್ಟನ್ನು ಕಸಿದುಕೊಂಡು ಎಂಬೆಸ್ಸಿಗೆ ಹೋಗಿ ಅವರ ಸಹಕಾರದಿಂದ ಅಮೇರಿಕಾ ಮುಟ್ಟಿಕೊಂಡಿದ್ದ. ಇದು ಆತನೊಬ್ಬನ ಕಥೆಯಲ್ಲ. ಅರಬ್ ರಾಷ್ಟ್ರಗಳಿಂದ ತನ್ನನ್ನು ಉಳಿಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಹೆಣ್ಣುಮಕ್ಕಳು ಇಂದಿಗೂ ಕೇಳಿಕೊಳ್ಳುತ್ತಾರೆ!

ಹೀಗೆ ಇಸ್ಲಾಂ ಬಿಡುವುದೇಕೆನ್ನುವುದರ ಕುರಿತಂತೆ ಅನೇಕ ಚಚರ್ೆಗಳಾಗಿವೆ. ಆ ಮತದ ಆಕ್ರಮಣಕಾರಿ ನೀತಿಗಳು, ಇತರರನ್ನು ಭಯೋತ್ಪಾದನೆಯ ಮೂಲಕ ಕೊಲ್ಲುವುದಕ್ಕೆ ಅಲ್ಲಿಂದ ಪಡೆಯುವ ಪ್ರೇರಣೆ ಇವತ್ತಿನ ತರುಣರನ್ನು ಆ ಮತದಿಂದ ವಿಮುಖಗೊಳಿಸುತ್ತಿದೆ ಎಂಬುದು ಕೆಲವರ ವಾದವಾದರೆ ಬ್ರಿಯಾನ್ ವಿಟೇಕರ್ ತನ್ನ ಕೃತಿಯ ಸಂಶೋಧನೆಗೆ ತೊಡಗಿದ್ದಾಗ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ಅವನ್ನೆಲ್ಲಾ ಸುಳ್ಳೆಂದು ಸಾಬೀತುಪಡಿಸಿದ್ದಾರೆ. ಆತ ಹೇಳುವಂತೆ ಇಸ್ಲಾಮನ್ನು ತೊರೆದು ಬಂದಿರುವ ಬಹುತೇಕರು ಅದಕ್ಕೆ ಕಾರಣವಾಗಿ ಭಯೋತ್ಪಾದನೆಯನ್ನೋ ಮತಾಂಧತೆಯನ್ನೋ ಮುಂದಿಡುವುದಿಲ್ಲ. ಮತಗ್ರಂಥದಲ್ಲೇ ಇರುವ ಕೆಲವು ಅಸಂಬದ್ಧತೆಗಳ ಕುರಿತಂತೆ ಪ್ರಶ್ನೆಗೆ ಉತ್ತರ ಸಿಗದಾದಾಗ ಹೊರಹೋಗುತ್ತಿದ್ದಾರೆ ಅಂತ. ಮುಸಲ್ಮಾನರಲ್ಲದೇ ಒಳ್ಳೆಯ ವ್ಯಕ್ತಿತ್ವ ಹೊಂದಿರುವವರು ನರಕಕ್ಕೆ ಹೋಗುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅಲ್ಲಾಹ್ನಿಗೆ ಹಿಂದಿನದ್ದು, ಮುಂದಿನದ್ದು ಎಲ್ಲಾ ಗೊತ್ತಿರುವಾಗ ಕೆಲವರನ್ನು ಮಾತ್ರ ಕೆಟ್ಟ ಪಥದಲ್ಲಿ ನಡೆಸಿ ಆ ಕಾರಣಕ್ಕೆ ಅವರನ್ನೇ ಶಿಕ್ಷಿಸುವುದು ಯಾವ ನ್ಯಾಯ? ಭೂಮಿಯ ಮೇಲೆ ಹೆಂಡ ಕುಡಿಯುವುದನ್ನು ನಿಷೇಧಿಸಿ ಸ್ವರ್ಗದಲ್ಲಿ ಹೆಂಡದ ಹೊಳೆ ಹರಿಸುವುದೇಕೆ? ಎಂಬ ಅನೇಕ ಪ್ರಶ್ನೆಗಳನ್ನು ಅವರು ಕೇಳುತ್ತಾರೆ ಎಂದು ವಿಟೇಕರ್ ವಾದಿಸುತ್ತಾರೆ. ಹಾಗಂತ ಇಸ್ಲಾಂ ತೊರೆಯುವ ಮುನ್ನ ಸಾಕಷ್ಟು ಪರಿತಪಿಸಿ ಮೂಲಗ್ರಂಥಗಳನ್ನೆಲ್ಲ ಅಧ್ಯಯನ ಮಾಡಿ ತಾವು ಓದಿರುವ ಗ್ರಂಥವೂ ಕೂಡ ಅದರಂತೆಯೇ ಇದೆ ಎಂದು ಖಾತ್ರಿ ಪಡಿಸಿಕೊಂಡೇ ಬಿಟ್ಟುಹೋಗುತ್ತಾರೆ!

ಇವೆಲ್ಲದರೊಟ್ಟಿಗೆ ಜಗತ್ತಿನಾದ್ಯಂತ ಮುಸಲ್ಮಾನರು ನಡೆಸುತ್ತಿರುವ ದೊಂಬಿ-ಗಲಾಟೆಗಳು ಸಭ್ಯ, ಬುದ್ಧಿವಂತ, ಸಹನೆಯ ವ್ಯಕ್ತಿತ್ವವುಳ್ಳ ಯಾವ ಮುಸಲ್ಮಾನನನ್ನೂ ಸಂಪ್ರೀತಿಗೊಳಿಸಲಾರದು. ಇಂದಿನ ದಿನದ ಭಾವನೆ ಹೇಗಿದೆ ಎಂದರೆ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಿದ್ದಂತೆ ಇತರರು ಬದುಕುವುದೇ ಸಾಧ್ಯವಿಲ್ಲ ಎಂಬಷ್ಟರಮಟ್ಟಿಗೆ. ಇದು ಅವರಲ್ಲಿ ಜಾಗೃತಿ ಮೂಡಿಸಬೇಕಾಗಿರುವ ಸಂಗತಿಗಳು. ಅಚ್ಚರಿ ಎಂದರೆ ಈ ಲೇಖನದಲ್ಲಿ ಅರಬ್ ರಾಷ್ಟ್ರಗಳಷ್ಟೇ ಅಲ್ಲದೇ, ಪಾಕಿಸ್ತಾನ, ಭಾರತಗಳಲ್ಲೂ ಕೂಡ ತರುಣ ಮುಸಲ್ಮಾನರು ತಮ್ಮ ಮತ ಬಿಟ್ಟು ತೆರಳುತ್ತಿರುವುದರ ಕುರಿತಂತೆ ಉಲ್ಲೇಖಿಸಲಾಗಿದೆ. ಆದರೆ ಹೀಗೆ ಮತ ತೊರೆದವರು ಯಾರಿಗೂ ಹೇಳದೇ ಅದನ್ನು ಬಚ್ಚಿಟ್ಟುಕೊಳ್ಳುವುದರಿಂದ ಅದು ಹೊರಬರುವುದಿಲ್ಲ ಎಂದೂ ಅಭಿಪ್ರಾಯ ಪಡುತ್ತಾರೆ.

ಏನೇ ಆಗಲಿ, ಸೌಹಾರ್ದಯುತವಾಗಿ ಬದುಕಲು ಎಲ್ಲರೂ ಪ್ರಯತ್ನಿಸಬೇಕಾಗಿರುವ ಹೊತ್ತು ಇದು. ನಾವು ನಾಲ್ಕೋ ಆರನೆಯದ್ದೋ ಶತಮಾನದಲ್ಲಿಲ್ಲ. 21ನೇ ಶತಮಾನದಲ್ಲಿದ್ದೇವೆ. ಆಧುನಿಕ ವಿಜ್ಞಾನದೊಂದಿಗೆ ಎಲ್ಲವನ್ನೂ ಒರೆಗೆ ಹಚ್ಚಿ ಸತ್ಯವನ್ನು ಅನುಸರಿಸಬೇಕಾದ ಸಾಮಥ್ರ್ಯ ಪಡೆದಿದ್ದೇವೆ. ಜಾಗೃತರಾಗುವ ಹೊತ್ತು ಬಂದಿದೆ!

ಭಯೋತ್ಪಾದನಾ ನಿಗ್ರಹ- ಕೆಲವು ವೈಫಲ್ಯಗಳು

ಮತ್ತೊಂದು ಮಾಯದ ಗಾಯ!
ಸುಖಾಂತ್ಯವಾಯ್ತೆಂದು ಬೀಗಿದ್ದಷ್ಟೆ ಬಂತು. ಸತ್ಯ ಹೇಳಿ. ಒಂಭತ್ತು ಉಗ್ರಗಾಮಿಗಳನ್ನು ಕೊಲ್ಲಲು ೬೨ ಗಂಟೆಗಳಷ್ಟು ದೀರ್ಘ ಕಾಲ ಸವೆಸಿದ್ದನ್ನು (ಅದೂ ಭಾರತದ ಪ್ರಮುಖ ನಗರಿ ಮುಂಬಯ್ ನೊಳಗೆ) ಯಾರಾದರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದೇನು?
ಧಿಕ್ಕಾರವಿರಲಿ ಸರ್ಕಾರಗಳಿಗೆ!
ಧಿಕ್ಕಾರವಿರಲಿ ನಮ್ಮ ರಕ್ಷಣಾ ಪಡೆಗಳಿಗೆ!!

ಮೊದಲನೆಯದೇನೋ ಸರಿ. ಈ ಎರಡನೆಯದೇಕೆ ಎನ್ನುವಿರೇನೋ?
ಹೌದು. ಆ ಸಾಲು ಬರೆಯಬೇಕಾದರೆ ನನಗೂ ವಿಪರೀತ ನೋವಿದೆ. ಆದರೆ ಬರೆಯದೇ ವಿಧಿಯಿಲ್ಲ. ಕಾದಾಟದಲ್ಲಿ ಸತ್ತವರಿಗೆ ಶ್ರದ್ಧಾಂಜಲಿ ಅರ್ಪಿಸುವ ಭರದಲ್ಲಿ ಆದದ್ದನ್ನು ಮರೆತುಬಿಟ್ಟರೆ… ಮುಂದಿನ ವರ್ಷ ಮತ್ತೊಂದಷ್ಟು ಜನರಿಗೆ ಶ್ರದ್ಧಾಂಜಲಿ ಅರ್ಪಿಸಬೇಕಾದೀತು.

ನಮ್ಮ ಪೋಲಿಸ್ ಪಡೆ, ವಿಶೇಷ ದಳಗಳು ಮತ್ತು ಕಮಾಡೋಗಳ ನಡುವೆ ಹೊಂದಣಿಕೆ ಇಲ್ಲ ಎಂಬುದು ಮೊದಲಿಂದ ಗೊತ್ತಿದ್ದರೂ ಈಗ ಅದು ಸ್ಪಷ್ಟವಾಗಿ ಸಾಬೀತಾಯ್ತು. ಪ್ರತಿಯೊಬ್ಬರಿಗೂ ನಾವು ಮೇಲ್ಮಟ್ಟದವರೆನ್ನುವ ಹಮ್ಮು. ಗೆಲುವಿನ ಸಹಿ ತಮ್ಮಿಂದಲೇ ಬರೆಯಲ್ಪಡಬೇಕೆನ್ನುವ ಆತುರ. ಹೀಗಗಿ ಒಳಹೊಕ್ಕ ಉಗ್ರರೆಷ್ಟು? ಅಡಗಿರುವ ತಾಣಗಳಾವುವು? ತಾಜ್ ನ ಕಟ್ಟಡ ಹೇಗಿದೆ? ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಪ್ರತಿದಾಳಿ ಶುರುವಿಟ್ಟರು.
ಉಗ್ರ ನಿಗ್ರಹಕ್ಕೆಂದೇ ರಚನೆಯಾದ ದಳವೊಂದು  ಎಷ್ಟು ಬೆಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆಯೆಂದರೆ, ಒಬ್ಬ ಉಗ್ರನ ಕೈಲಿ ಮೂವರು ಪ್ರಮುಖ ಅಧಿಕಾರಿಗಳು ಕೊಲೆಯಾಗುವಷ್ಟು!
‘ಉಗ್ರ ನಿಗ್ರಹ ದಳ’ವೆಂದರೆ ಸಾಮಾನ್ಯ ಪೋಲಿಸರೆಂದು ಭಾವಿಸಬೇಡಿ. ಅವರಿಗೆ ಉಗ್ರರ ಮನಸ್ಥಿತಿಯ ಪರಿಚಯ ಮಾಡಿಕೊಡಲಾಗಿರುತ್ತದೆ. ಅವರ ಹೋರಾಟದ ಹೆಜ್ಜೆಗಳ ಅರಿವು ಮೂಡಿಸಲಾಗಿರುತ್ತದೆ. ಪ್ರತಿಯೊಬ್ಬನ ಶಕ್ತಿ ಸಾಮರ್ಥ್ಯಗಳ ಅಂದಾಜು ತಿಳಿಸಲಾಗಿರುತ್ತದೆ. ಜೊತೆಗೆ, ಗುಪ್ತಚರ ಇಲಾಖೆಗಳೊಂದಿಗೆ ಸಂಪರ್ಕ ಕೊಡಿಸಿ ಒಳಗಿನ ಶತ್ರುಗಳ ಬಗ್ಗೆಯೂ ವಿವರ ನೀಡಲಾಗಿರುತ್ತದೆ.
ಇಷ್ಟೆಲ್ಲಾ ಇದ್ದರೂ ಅತಿ ವಿಶ್ವಾಸದೊಂದಿಗೆ ಹೊರಟು ಬಲಿಯಾಗಿಬಿಟ್ಟರಲ್ಲ… ಸರಿಯಾ? ಬಹುಶಃ ಅವರು ತಮಗಿಂತ ಕೆಳಮಟ್ಟದ ಪೋಲಿಸರೊಂದಿಗೆ ಸಮನ್ವಯವನ್ನೇ ಸಾಧಿಸಿರಲಿಲ್ಲವೆನಿಸುತ್ತದೆ. ಅವರ ಸಮನ್ವಯತೆಯೇನಿದ್ದರೂ ಮುಖ್ಯಮಂತ್ರಿ, ಪಿ.ಎಂ, ಸೂಪರ್ ಪಿ.ಎಂ.ಗಳೊಂದಿಗೆ. ಇಲ್ಲವಾದರೆ, ಪ್ರಜ್ಞಾ ಸಿಂಗಳನ್ನು  ಬಂಧಿಸುವಲ್ಲಿ ಖರ್ಚು ಮಾಡಿದ ಬುದ್ಧಿಮತ್ತೆಯ ಹತ್ತನೇ ಒಂದು ಭಾಗದಷ್ಟಾದರೂ ಖರ್ಚು ಮಾಡಿದ್ದರೆ ಸಾಕಿತ್ತು. ಉಗ್ರರನ್ನು ಬಡಿಯುವುದು ಅಷ್ಟೊಂದು ಕಷ್ಟವಾಗುತ್ತಿರಲಿಲ್ಲ.

ಖಂಡಿತ. ಹೋರಾಡುತ್ತ ಮಡಿದವರ ಬಗ್ಗೆ ನನಗೆ ನೋವಿದೆ. ಗೌರವವಿದೆ. ಆದರೆ ಅವರನ್ನು ಉಗ್ರ ನಿಗ್ರಹಕ್ಕೆಂದು ನಿಯೋಜಿಸಿರುವುದು ಪ್ರಾಣ ಕೊಡಲಿಕ್ಕಲ್ಲ, ಪ್ರಾಣ ತೆಗೆಯಲಿಕ್ಕೆ. ಗಡಿ ಭಾಗದ ಸೈನಿಕನ ಸಾವಿಗೂ ಭಾರತದೊಳಗಿನ ಈ ವೀರರ ಸಾವಿಗೂ ಖಂಡಿತ ಸಮ್ಯವಿಲ್ಲ. ಅಲ್ಲಿ ಎದುರಾಳಿಯಾದವನು ತನ್ನದೇ ಆದ ಆಯಕಟ್ಟಿನ ಜಾಗದಲ್ಲಿ ನಿಂತಿರುತ್ತಾನೆ. ಅವನ ಶಕ್ತಿಯ ಅರಿವು ನಮ್ಮ ಸೈನಿಕರಿಗಿರುವುದಿಲ್ಲ. ಇಲ್ಲಿ, ಆಯಕಟ್ಟು ನಮ್ಮದು. ಸಾಮರ್ಥ್ಯವೂ ನಮ್ಮದೇ. ಅದರೂ ಫಲಿತಾಂಶ ಹೀಗಗಿಬಿಡುತ್ತದೆ.

ಏಕೆ ಗೊತ್ತೆ? ಇವರಿಗೆಲ್ಲ ದೇಶ ರಕ್ಷಣೆಗಿಂತ, ಕುರ್ಚಿಯ ಮೇಲೆ ಕುಳಿತ ನಾಯಕನ ರಕ್ಷಣೆಯ ಜರೂರತ್ತಿದೆ. ಇಲ್ಲವಾದರೆ, ಒಳ ಬಂದ ಉಗ್ರನ ಕೈಲಿರುವ ಕೇಸರಿ ದಾರ ನೋಡಿ ‘ಹಿಂದೂ ಉಗ್ರ’ ಎಂದು ಸಾಧಿಸಿಬಿಡುವ ಹಟಕ್ಕೆ ನಮ್ಮ ರಕ್ಷಣಾ ಇಲಾಖೆ ಬೀಳುತ್ತಿರಲಿಲ್ಲ.
ಬಿಡಿ. ಅವರ ಬಗ್ಗೆ ಇನ್ನು ಮಾತಾಡಿ ಪ್ರಯೋಜನವೇ ಇಲ್ಲ. ಅಕಸ್ಮಾತ್ ಹೀಗೆ ಒಳಗೆ ಬಂದಿರುವವರು ನಿಜವಾಗಿಯೂ ಹಿಂದೂ ಉಗ್ರನಾಗಿದ್ದಿದ್ದರೆ ಏನಾಗಿರುತ್ತಿತ್ತು? ಮಾಧ್ಯಮಗಳೆಲ್ಲ ಹಿಂದೂಗಳ ವಿರುದ್ಧ ತಿರುಗಿಬಿದ್ದಿರುತ್ತಿದ್ದವು. ಅನಂತಮೂರ್ತಿ, ಕಾರ್ನಾಡ್, ಗೌರಿ ಲಂಕೇಶರೆಲ್ಲ ಬೊಂಬಡಾ ಬಜಾಯಿಸಿಬಿಟ್ಟಿರುತ್ತಿದ್ದರು. ನಾವು, ನೀವು ಮುಖ ಎತ್ತಿಕೊಂಡು ರಸ್ತೆಗಿಳಿಯುವಂತಿರಲಿಲ್ಲ. ಇದೇ ಉಗ್ರ ನಿಗ್ರಹ ದಳದ ಸಿಬ್ಬಂದಿ ಆ ತಂಡದ ಅಷ್ಟೂ ಜನರನ್ನು ಹಿಡಿದು, ಹಿಂಸಿಸಿ, ಪ್ರತಿನಿತ್ಯ ಹೇಳಿಕೆಗಳನ್ನು, ಅವರಿಂದ ಪಡೆದ ಮಾಹಿತಿಗಳನ್ನು ಪತ್ರಿಕೆಗಳಿಗೆ ಬಹಿರಂಗಪಡಿಸುತ್ತಿತ್ತು. ವಾಸ್ತವವಾಗಿ ಹಾಗೆ ಮಾಡಬಾರದೆಂಬ ನಿಯಮವಿದೆ. ಆದರೆ ಪ್ರಜ್ಞಾ ಸಿಂಗಳ ವಿಚಾರದಲ್ಲಿ, ಪ್ರತಿನಿತ್ಯ ಪತ್ರಿಕೆಗಳ ಮುಖಪುಟದಲ್ಲಿ ವಿಚಾರಣೆಯ ವಿವರ ಬರುತ್ತಿತ್ತಲ್ಲ? ‘ಹಿಂದೂ’ಉಗ್ರಗಾಮಿ ಎಂದು ಸಾಬೀತುಪಡಿಸುವ ಯತ್ನ ನಡೆಯುತ್ತಿತ್ತಲ್ಲ? ಇದರಲ್ಲಿ ಕರ್ಕರೆ ಅವರ ಕೈವಡವಿತ್ತಾ? ಕೆಳೋಣವೆಂದರೆ, ಅವರು ಬದುಕಿಲ್ಲ. ಹೋಗಲಿ, ಸಾಧ್ವಿಯ ಕಿಡ್ನಿಗೆ ಏಟುಬೀಳುವಂತೆ ಅವಳನ್ನು ಬಡಿದಿದ್ದಾರಲ್ಲ, ಅದರ ಬಗ್ಗೆ ಅವರಿಗೆ ಗೊತ್ತಿತ್ತಾ? ಅದೂ ಗೊತ್ತಿಲ್ಲ.

ಇನ್ನು ಹೇಳುವುದೇನಿಲ್ಲ. ನಮ್ಮ ರಕ್ಷಣೆಗೆಂದು ನಿಯೋಜಿತರಾದವರ ರಕ್ಷಣೆ ನಾವೇ ಮಾಡಬೇಕಾ? ಅಷ್ಟಾದರೂ ಹೇಳಿಬಿಟ್ಟರೆ ನಾವೇ ಒಂದು ಪಡೆಕಟ್ಟಿ, ಒಂದು ಕೈ ನೋಡಬಹುದು. ಇಷ್ಟಕ್ಕೂ ದೇಶ ರಕ್ಷಣೆಯ ಹೊಣೆ ನಮ್ಮೆಲ್ಲರಿಗೂ ಇದೆಯಲ್ಲವೇ? ಬಹುಶಃ ನಾವೂ ನೀವೂ ಬಂದೂಕು  ಕೈಲಿ ಹಿಡಿದು ಹೋರಾಡುವ ಕಾಲ ಹತ್ತಿರ ಬಂದಿದೆ.
Be alert… Be ready.

ಅಮೆರಿಕನ್ನರಿಂದ ಪಾಠ ಕಲಿಯಲಿದು ಸಕಾಲ…

ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.

ಭಾರತದ ಹಿಂದಿನ ವೈಭವವನ್ನು ಹೇಳಿ- ಕೇಳಿ ಸಾಕಾಗಿಹೋಗಿದೆ. ಒಂದೋ ನಾವೀಗ ಬದುಕಬೇಕು, ಇಲ್ಲವೇ ಇಡಿಯ ರಾಷ್ಟ್ರವನ್ನು ನಿರ್ನಾಮಗೊಳ್ಳಲು ಬಿಟ್ಟು ಸಾಯಬೇಕು. ಹೋರಾಡಿ ಬದುಕುವುದಕ್ಕಿಂತ ನರಸತ್ತವರ ಹಾಗೆ ಸಾಯುವುದೇ ಸರಿ ಎಂದವರ ಬಗ್ಗೆ ಯಾರೇನೂ ಮಾಡಲಾಗದು. ಅಂಥವರು ತಮ್ಮೂರ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಹಾರಾಡುವ ಉಗ್ರರ ಗುಂಡುಗಳಿಗೆ ಹೆಣವಾಗುತ್ತಾರೆ. ಹೀಗೆ ಸತ್ತಿದ್ದಕ್ಕೆ ಸರ್ಕಾರದಿಂದ ಲಕ್ಷ ಲಕ್ಷ ರುಪಾಯಿಗಳ ಭಕ್ಷೀಸು ಪಡೆಯುತ್ತಾರೆ.
ಇಂತಹ ಸಾವಿಗೆ ನಮ್ಮ ಪಾಳಿ ಎಂದು ಬಂದೀತೋ ಎಂದು ಕಾಯುತ್ತ ಕೂರೋಣವೆ?

ನಮ್ಮಲ್ಲಿ ಜೀವಗಳಿಗೆ ಬೆಲೆಯೇ ಇಲ್ಲ. ಇಂದು ಬಾಂಬ್ ದಾಳಿಗೆ ತತ್ತರಿಸಿದ ಮುಂಬಯಿಯಲ್ಲಿ ನಾಳೆ ಎಲ್ಲವೂ ಸರಿಯಾಗಿಯೇ ನಡೆಯುತ್ತದೆ. ಬೆಳಗಿನ ಎಕ್ಸ್ ಪ್ರೆಸ್ ರೈಲು ಸರಿಯಾದ ಸಮಯಕ್ಕೆ ಬರುತ್ತದೆ. ಕಾಲಿಗೆ ಬಿಗಿಯಾಗಿ ಲೇಸ್ ಕಟ್ಟಿಸಿಕೊಂಡ ಮಗು ತನ್ನ ಶಾಲೆಗೆ ಹೊರಡುತ್ತದೆ. ತರಕಾರಿ ಮಾರಾಟ, ಹೆಂಗಸರ ಚೌಕಶಿ, ಷೇರು ಪೇಟೆ- ಎಲ್ಲವೂ ಮಾಮೂಲಿ. ಆದರೆ, ರಾಷ್ಟ್ರದ ಅಸ್ಮಿತೆಗೆ ಆದ ಗಾಯ…? ಅದು ಮಾಯುವುದು ಯಾವಾಗ?

೧೯೯೩ರಲ್ಲಿ ಆದ ಮುಂಬೈ ಸರಣಿ ಸ್ಫೋಟದ ರೂವಾರಿಗಳೇ ಇನ್ನೂ ಕೈಗೆ ಸಿಕ್ಕಿಲ್ಲ. ಸಂಸತ್ತಿನ ಮೇಲೆ ಆಕ್ರಮಣ ಮಾಡಿದವರಿಗೆ ಶಿಕ್ಷೆ ಘೋಷಣೆಯಾಗಿದ್ದರೂ ಜಾರಿಯಾಗಿಲ್ಲ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಿದವರೂ ಪತ್ತೆಯಾಗಿಲ್ಲ. ಕರಾಚಿಯಿಂದ ಉಗ್ರರು ಮುಂಬೈಗೆ ರಾಜಾರೋಷವಾಗಿ ಬಂದಿದ್ದಾರೆಂದರೆ, ಇಡಿಯ ರಕ್ಷಣಾ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆಯೆಂದು ಕೇಳುವವರಿಲ್ಲ.
ಪಟ್ಟಿ ಸಕಷ್ಟು ಉದ್ದವಿದೆ. ರಾಷ್ಟ್ರವೆಂಬ ನ್ಯಾಯಾಲಯದಲ್ಲಿ ನಾವೆಲ್ಲರೂ ಅಪರಾಧಿ ಸ್ಥಾನದಲ್ಲಿದ್ದೇವೆ. ನಿಷ್ಕ್ರಿಯತೆಯ ಕಳಂಕ ನಮ್ಮನ್ನು ಮೆತ್ತಿಕೊಂಡಿದೆ. ಇನ್ನು ಬಹುಕಾಲ ಇದು ನಡೆಯಲಾರದು. ನಮ್ಮ ದಾರಿ ನಾವು ಆರಿಸಿಕೊಳ್ಳಬೇಕಿದೆ. ಒಂದೋ ಹೇಡಿಗಳಂತೆ ಸಾಯಬೇಕು, ಇಲ್ಲವೇ ದೇಶದ್ರೋಹಿಗಳನ್ನು ಹುಡುಹುಡುಕಿ ಕೊಲ್ಲಬೇಕು. ಇದು ತುರ್ತು ಪರಿಸ್ಥಿತಿ. ಹೀನ ರಕ್ಷಣಾ ಮಂತ್ರಿ ಶಿವರಾಜ ಪಾಟೀಲರನ್ನು, ಚಮಚಾಗಿರಿಗಷ್ಟೇ ಸೂಕ್ತರಾದ ಮನಮೋಹನ ಸಿಂಗರನ್ನು ತರಾಟೆಗೆ ತೆಗೆದುಕೊಳ್ಳಲು ಇದು ಸಕಾಲವಲ್ಲ. 

ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು.
ನಮ್ಮ ಪ್ರಧಾನಿಗೆ ಅಷ್ಟೊಂದು ತಾಕತ್ತಿಲ್ಲ ಬಿಡಿ. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.

ಆದರೇನು? ಅಂಥದೊಂದು ಇಚ್ಛಾಶಕ್ತಿ ಬೇಕಲ್ಲ? ಓಟಿಗಾಗಿ ಗಡ್ಡ ನೆಕ್ಕುವವರು ಬದುಕಿರುವವರೆಗೆ ಅದು ಸಾಧ್ಯವಾಗಲಾರದು. ಅವರನ್ನು ಪಕ್ಕಕ್ಕೆ ತಳ್ಳಿನಾವೇ ಮುಂದೆ ಬಂದರೆ…? ಅದು ಸರಿ. ಎದುರು ಬಂದ ಸೋಗಲಾಡಿ ಬುದ್ಧಿಜೀವಿಗಳನ್ನು, ಭಾರತೀಯತೆಯ ಬದ್ಧ ದ್ವೇಷಿಗಳನ್ನು ಹಳ್ಳದಲ್ಲಿ ಹೂತು, ರಾಷ್ಟ್ರ ರಕ್ಷಿಸುವ ಹೊಣೆ ನಮ್ಮದೇ.

ಈ ಬಾರಿ ಪ್ರತ್ಯುತ್ತರ ನೀಡಬೇಕಿರುವ ಹೊಣೆ ಇಂಟೆಲಿಜೆನ್ಸ್ ಅಧಿಕಾರಿಗಳದಲ್ಲ, ರಾಜಕಾರಣಿಗಳದೂ ಅಲ್ಲ. ಅದು ನಮ್ಮದು. ನಮ್ಮದೇ.
ಭಯೋತ್ಪಾದಕರ ಬೆಂಬಲಿಗರು ನಮ್ಮ ನಡುವೆಯೇ ಇದ್ದಾರೆ. ಅಂಥವರ ಮೇಲೆ ದಿಗ್ಬಂಧನ ನಾವು ಹೇರೋಣ. ಒಂದೊಂದು ಅನ್ನದ ಕಾಳಿಗೂ ಅವರು ಪರಿತಪಿಸುವಂತಾಗಬೇಕು. ಅಲ್ಲಿಂದ ಹೊರಟ ಬೇಗೆ, ಭಯೋತ್ಪಾದನೆಯನ್ನು ಸುಟ್ಟು ಬೂದಿ ಮಾಡಲಿ. ನಮ್ಮಲ್ಲಿರುವ ಅಸ್ತ್ರ ಇದೊಂದೇ.
ಬಳಸಿ. ಚೆನ್ನಾಗಿ ಬಳಸಿ. ಇದು ಕೊನೆಯ ಯುದ್ಧ. ಈ ಬಾರಿ ಗೆಲ್ಲೋಣ. ಇಲ್ಲವೇ ಸತ್ತು ಮಲಗೋಣ. ಆಯ್ಕೆ- ನಿಮ್ಮದು.