ಟ್ಯಾಗ್: ಚೀನಾ

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿ ಇಪ್ಪತ್ತು ವರ್ಷಗಳ ನಂತರ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಮೋದಿಯನ್ನು ರಕ್ಕಸನೆಂದು ಬಿಂಬಿಸಲು ಮಾಧ್ಯಮಗಳು, ರಾಜಕಾರಣಿಗಳು, ಅಧಿಕಾರಿಗಳು, ಕೆಲವು ಎನ್‌ಜಿಒಗಳು ಮಾಡಿದ ಪ್ರಯತ್ನ ಕೊನೆಗೂ ಮಣ್ಣುಗೂಡಿದೆ. ಪುಟವಿಟ್ಟ ಚಿನ್ನದಂತೆ ಮೋದಿ ಮತ್ತೊಮ್ಮೆ ಬೆಳಗಿದ್ದಾರೆ.

2002ರ ಫೆಬ್ರವರಿ 27. ಅಯೋಧ್ಯಾದಿಂದ ಬರುತ್ತಿದ್ದ ರೈಲೊಂದಕ್ಕೆ ಮುಸಲ್ಮಾನರು ಗುಜರಾತಿನ ಗೋದ್ರಾದಲ್ಲಿ ಬೆಂಕಿ ಹಚ್ಚಿದರು. ಇದು ಅಚಾನಕ್ಕಾಗಿ ನಡೆದ ದಾಳಿಯಲ್ಲ. ಎಂದಿನಂತೆ ಕೈಲಿ ಕಲ್ಲುಗಳನ್ನು ಹಿಡಿದು, ಪೆಟ್ರೋಲು ಬಾಂಬುಗಳನ್ನು ಹಿಡಿದು ಸಿದ್ಧವಾಗಿದ್ದ ಮುಸಲ್ಮಾನ ಪುಂಡರು ರೈಲು ನಿಂತೊಡನೆ ಏಕಾಕಿ ದಾಳಿ ಮಾಡಿದರು. ಕಲ್ಲೆಸೆದು ಜನರನ್ನು ರೈಲಿನಿಂದ ಹೊರಬರದಂತೆ ತಡೆದರು. ಪೆಟ್ರೋಲ್ ಬಾಂಬುಗಳನ್ನು ಎಸೆದು ಬೋಗಿಗಳು ಹೊತ್ತುರಿಯುವಂತೆ ಮಾಡಿದರು. ಬೇಗೆ ತಾಳಲಾರದೆ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಹೊರಗೆ ನಿಂತು ಕಲ್ಲಿನಲ್ಲಿ ಹೊಡೆಯಲಾಯ್ತು. ಇಡಿಯ ಬೋಗಿಗಳು ಸುಟ್ಟು ಕರಕಲಾದವಲ್ಲದೇ 59 ಜನ ಕರಸೇವಕರು ಬೆಂದುಹೋಗಿದ್ದರು. ಅವರ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಎಂಥವನ ರಕ್ತವೂ ಕುದಿಯುತ್ತಿತ್ತು. ಆದರೆ ಈ ದೇಶದ ಮಾಧ್ಯಮಗಳಲ್ಲಿದ್ದವರು ಅಂದೂ ಅದರ ಕುರಿತಂತೆ ತಲೆಕೆಡಿಸಿಕೊಳ್ಳಲಿಲ್ಲ, ಇಂದೂ ಕೂಡ! ಕಳೆದ ಮಾರ್ಚ್‌ನಲ್ಲಿ ಪ್ರೇಮ್ಶಂಕರ್ ಝಾ ಈ ಪ್ರಕರಣವನ್ನು ನೆನಪಿಸಿಕೊಳ್ಳುತ್ತಾ ವೈರ್ ಪತ್ರಿಕೆಗೆ ಬರೆದ ಲೇಖನದಲ್ಲಿ, 1100 ಜನ ಸಾಮಥ್ರ್ಯ ಹೊಂದಿದ್ದ ಆ ರೈಲು 2000ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದೇ ಮೊದಲ ತಪ್ಪು ಎಂಬುದನ್ನು ಬರೆದುಕೊಂಡಿದ್ದಾರೆ. ಎಸ್6 ಬೋಗಿ ಬೆಂಕಿ ಹೊತ್ತಿಸಿಕೊಂಡು ಉರಿದು ಕರಸೇವಕರು ಸಾಯಲು ಕಾರಣವಾಗಿದ್ದು ಅದು ಅಗತ್ಯಕ್ಕಿಂತ ಹೆಚ್ಚು ತುಂಬಿದ್ದುದರಿಂದ ಎಂದು ವಾದಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಹಚ್ಚಿದ ಮುಸಲ್ಮಾನರದ್ದು ಯಾವ ತಪ್ಪೂ ಇಲ್ಲ. ರೈಲಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳದ್ದೇ ತಪ್ಪು. ಅರುಂಧತಿ ರಾಯ್ ಅಂತೂ ಅಂದಿನ ದಿನಗಳಲ್ಲೇ ಬಾಬರಿ ಮಸೀದಿಯನ್ನು ಉರುಳಿಸಿ ಬರುತ್ತಿದ್ದ ಕರಸೇವಕರ ಮೇಲೆ ಮುಸಲ್ಮಾನರಿಗೆ ಆಕ್ರೋಶವಿತ್ತು, ಹೀಗಾಗಿ ಈ ರೀತಿ ಆಯ್ತು ಎಂದು ದಂಗೆಕೋರರಿಗೆ ಕವರಿಂಗ್ ಫೈರ್ ಕೊಡುವ ಪ್ರಯತ್ನ ಮಾಡಿದ್ದಳು! ಮಸೀದಿ ಉರುಳುವ ಮತ್ತು ಗೋದ್ರಾ ರೈಲಿಗೆ ಬೆಂಕಿ ಹಚ್ಚುವ ಘಟನೆಗಳ ನಡುವೆ ಹತ್ತು ವರ್ಷಗಳ ಅಂತರವಿತ್ತು ಎಂಬುದನ್ನು ಆಕೆ ಮರೆತೇ ಹೋಗಿದ್ದಳು. ಹತ್ತು ವರ್ಷಗಳ ಹಿಂದೆ ನಿರ್ಜೀವ ಕಟ್ಟಡವೊಂದನ್ನು ಉರುಳಿಸಿದ ಘಟನೆಗೆ ಮುಸಲ್ಮಾನರು 59 ಜನರ ಸಜೀವ ದಹನ ಮಾಡಿದ್ದು ಸಹಜ ಪ್ರತಿಕ್ರಿಯೆಯಾಗಬಹುದಾದರೆ, ಈ ರೈಲು ದಹನದ ನಂತರ ಹಿಂದೂಗಳು ಮುಸಲ್ಮಾನರ ವಿರುದ್ಧ ಆಕ್ರೋಶಗೊಂಡಿದ್ದು ಮಾತ್ರ ಅಸಹಜ ಹೇಗಾಯ್ತು? ಈ ಪ್ರಶ್ನೆಯನ್ನು ಆಗಲೂ ಯಾರೂ ಕೇಳಲಿಲ್ಲ, ಈಗಲೂ ಕೂಡ ವ್ಯವಸ್ಥಿತವಾಗಿ ಮರೆಯುತ್ತಾರೆ.

ಆದರೆ ಗೋದ್ರಾ ನಂತರದ ಘಟನೆಗಳನ್ನು, ಮೋದಿಯನ್ನು ಶಾಶ್ವತವಾಗಿ ಮುಗಿಸುವ ಪ್ರಯತ್ನಕ್ಕೆ ಎಲ್ಲರೂ ರಣಹದ್ದುಗಳಂತೆ ಬಳಸಿಕೊಂಡರು. ಮೋದಿ ಮುಖ್ಯಮಂತ್ರಿಯ ಪಟ್ಟಕ್ಕೆ ಬಂದು ಆಗಷ್ಟೇ ನಾಲ್ಕು ತಿಂಗಳು ಕಳೆದಿದ್ದವು. ಕಚ್‌ನ ಭೂಕಂಪವನ್ನು ಎದುರಿಸಿ ನಿಂತು ಅವರು ಜನರಲ್ಲಿ ಮೂಡಿಸಿದ ವಿಶ್ವಾಸ ಪ್ರತಿಪಕ್ಷಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಅವಕಾಶವನ್ನು ಎಲ್ಲರೂ ಬಳಸಿಕೊಂಡರು. ರಾಷ್ಟ್ರಮಟ್ಟದಲ್ಲಿ ಹಿಂದೂಗಳನ್ನು ಅವಮಾನಗೊಳಿಸಲು ದಂಗೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಲಾಯ್ತು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಮೋದಿ ದಂಗೆಗಳು ಕೈಮೀರುತ್ತವೆಂದು ಗೊತ್ತಾದೊಡನೆ ಪಕ್ಕದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್, ಮಹಾರಾಷ್ಟ್ರದ ವಿಲಾಸ್‌ರಾವ್ ದೇಶ್‌ಮುಖರಿಗೆ ಪತ್ರ ಬರೆದು ರಕ್ಷಣೆಯ ದೃಷ್ಟಿಯಿಂದ ಸಹಾಯ ಕೊಡುವಂತೆ ಕೇಳಿಕೊಂಡರು. ಕಾಂಗ್ರೆಸ್ಸಿಗೆ ಸೇರಿದ್ದ ಈ ಮೂರೂ ರಾಜ್ಯಗಳು ಅಂದು ಮೋದಿಯ ವಿನಂತಿಗೆ ಪ್ರತಿಕ್ರಿಯಿಸಲೇ ಇಲ್ಲ. ಇದಕ್ಕೆ ವಿಪರೀತವಾಗಿ ದಂಗೆ ನಿಯಂತ್ರಣ ಮಾಡುವಲ್ಲಿ ಮೋದಿ ಸೋತರೆಂದು ಅದೇ ಮುಖ್ಯಮಂತ್ರಿಗಳು ಆನಂತರ ಮಾತನಾಡಲಾರಂಭಿಸಿದರು. ಸುಳ್ಳು ಸುದ್ದಿ ಹಬ್ಬಿಸಿ ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವಲ್ಲಿ ನಿಸ್ಸೀಮರಾದ ಎಡಪಂಥೀಯರು ಕೌಸರ್ ಬಾನೊ ಎಂಬ ಗರ್ಭಿಣಿ ಮುಸ್ಲೀಂ ಹೆಣ್ಣುಮಗಳ ಸಾವನ್ನೂ ಕೂಡ ತಮಗೆ ತಕ್ಕಂತೆ ಬಳಸಿಕೊಂಡರು. ಹಿಂದೂ ಪಡೆ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ಹೊಟ್ಟೆಯನ್ನು ಸೀಳಿ, ಒಳಗಿದ್ದ ಮಗುವನ್ನು ಕತ್ತಿಯಿಂದ ಕತ್ತರಿಸಿದರು ಎಂದೆಲ್ಲ ಸುದ್ದಿ ಹಬ್ಬಿಸಿದರು. ಆ ಮೂಲಕ ಮುಸಲ್ಮಾನರನ್ನು ಮೋದಿ ಸರ್ಕಾರದಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಮತ್ತು ಹಿಂದೂಗಳು ಅದೆಷ್ಟು ಕ್ರೂರಿಗಳು ಎಂದು ಬಿಂಬಿಸುವ ಪ್ರಯತ್ನ ಅದಾಗಿತ್ತು. ಸಾಮಾಜಿಕ ಜಾಲತಾಣಗಳು ಈಗಿನಷ್ಟು ವ್ಯಾಪಕವಾಗಿಲ್ಲದ್ದಿದ್ದದ್ದರಿಂದ ಇದರ ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲೇ ಇಲ್ಲ. 2010ರಲ್ಲಿ ವಿಸ್ತಾರವಾದ ವರದಿ ಬಂದಾಗಲೇ ಇದೊಂದು ಸುಳ್ಳು ಪ್ರಕರಣ ಎಂಬುದು ಗೊತ್ತಾಗಿದ್ದು. ತೀರಿಕೊಂಡ ಗರ್ಭಿಣಿ ಹೆಣ್ಣುಮಗಳ ಮರಣೋತ್ತರ ಪರೀಕ್ಷೆ ನಡೆಸಿದ ಡಾಕ್ಟರ್ ಜೆ.ಎಸ್ ಕನೋರಿಯಾ ಮಗು ಹೊಟ್ಟೆಯೊಳಗೆ ಸುರಕ್ಷಿತವಾಗಿದ್ದುದನ್ನು, ಎರಡೂವರೆ ಕೆಜಿಯಷ್ಟು ತೂಕವಿದ್ದುದನ್ನು ದಾಖಲಿಸಿದ್ದರು. ಆದರೆ ಆ ವರದಿಯ ನಂತರವೂ ಕೌಸರ್ ಬಾನೊ ಕಥೆ ಮಾತ್ರ ಹಾಗೆಯೇ ಉಳಿಯಿತು!

ಈ ದಂಗೆಯ ಕ್ಷಣ-ಕ್ಷಣದ ಮಾಹಿತಿಗಳನ್ನು ಬಿತ್ತರಿಸುವ ಧಾವಂತಕ್ಕೆ ಬಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಎಂದು ಹೇಳುತ್ತಾ ಸುಳ್ಳು ಸುದ್ದಿಗಳನ್ನೇ ವ್ಯಾಪಕವಾಗಿ ಪ್ರಚಾರ ಮಾಡಿ ದಂಗೆಗಳಿಗೆ ಪ್ರೇರಣೆಕೊಟ್ಟರು. ಬರ್ಖಾದತ್ ಸೂರತ್ತಿನ ವಜ್ರದ ಮಾರುಕಟ್ಟೆಯಲ್ಲಿ ನಿಂತು ‘ಇಲ್ಲಿ ಒಬ್ಬ ಪೊಲೀಸರೂ ಇಲ್ಲ. ಇಲ್ಲಿ ದಂಗೆ ವಿಸ್ತರಿಸಿದರೆ ಏನು ಕಥೆ?’ ಎಂದೆಲ್ಲಾ ವರದಿ ಮಾಡುತ್ತಿದ್ದಳು. ಕಚ್ ಭಾಗದಲ್ಲಿ ಹನುಮಾನ್ ಮಂದಿರವೊಂದನ್ನು ದುಷ್ಕರ್ಮಿಗಳು ಉರುಳಿಸಿದ್ದಾರೆ ಎಂಬ ಸುದ್ದಿಯನ್ನು ಆಕೆ ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಳು. ಮುಖ್ಯಮಂತ್ರಿಯಾಗಿದ್ದ ಮೋದಿ ಆಕೆಗೆ ಕರೆಮಾಡಿ, ‘ವಜ್ರದ ಮಾರುಕಟ್ಟೆಯಲ್ಲಿ ಪೊಲೀಸರಿಲ್ಲ ಎಂದು ಹೇಳುವ ಮೂಲಕ ತಾವು ದಂಗೆಕೋರರನ್ನು ಆಹ್ವಾನಿಸುತ್ತಿದ್ದೀರಾ?’ ಎಂದು ಕೇಳಿದ್ದರಲ್ಲದೇ, ಕಚ್ ಭಾಗದಲ್ಲಿ ಆಕೆ ಹೇಳಿದ ಯಾವ ಮಂದಿರವೂ ಉರುಳಿರಲಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡರು. ಅದರರ್ಥ ಹಿಂದೂ-ಮುಸಲ್ಮಾನರ ನಡುವಿನ ಕಂದಕವನ್ನು ವಿಸ್ತಾರಗೊಳಿಸಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬುದೇ ಅವರೆಲ್ಲರ ಪ್ರಯತ್ನವಾಗಿತ್ತು. ಅವರ ಗುರಿ ಮೋದಿಯಷ್ಟೇ ಆಗಿರಲಿಲ್ಲ. ಏಕೆಂದರೆ ಬಿಜೆಪಿಯಲ್ಲೇ ಅನೇಕ ಗೊಂದಲಗಳುಂಟಾಗಿ ಮೋದಿ ಅನಿವಾರ್ಯಕ್ಕೆ ಅಧಿಕಾರಕ್ಕೆ ಬಂದಿದ್ದರು. ಜನಸಾಮಾನ್ಯರು ರೋಸಿಹೋಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಮತ ಚಲಾಯಿಸಿದರೂ ಅಚ್ಚರಿ ಪಡಬೇಕಿರಲಿಲ್ಲ! ಎಲ್ಲ ಇಂಗ್ಲೀಷ್ ಮಾಧ್ಯಮಗಳಿಗೆ ಕಣ್ಣಿದ್ದುದು ಹಿಂದೂಗಳ ಮೇಲೆ. ಹಿಂದೂಗಳು ಆತಂಕವಾದಿಗಳು, ಕ್ರೂರಿಗಳು ಎಂದು ಬಿಂಬಿಸುವ ಜರೂರತ್ತು ಅವರಿಗಿತ್ತು. ಅದಕ್ಕೆ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮೋದಿ ಅನಿವಾರ್ಯವಾಗಿ ಎನ್ಡಿಟಿವಿಯನ್ನು ಗುಜರಾತಿನಲ್ಲಿ ತಡೆಹಿಡಿಯಬೇಕಾಯ್ತು. ಅಚ್ಚರಿ ಎಂದರೆ ಅಂದು ಅದೇ ಚಾನೆಲ್‌ನಲ್ಲಿದ್ದು ಈ ಇಡೀ ಸುಳ್ಳು ಸುದ್ದಿಯನ್ನು ಹರಡಿಸುವಲ್ಲಿ ನೇತಾರನಾಗಿದ್ದ ರಾಜ್‌ದೀಪ್ 17 ವರ್ಷಗಳ ನಂತರ 2019ರಲ್ಲಿ ಪತ್ರಕರ್ತ ಮನು ಜೋಸೆಫ್ ಕೇಳಿದ ಪ್ರಶ್ನೆಗೆ ‘ಈ ದಂಗೆಗೆ ಮೋದಿ ಕಾರಣರಲ್ಲವೇ ಅಲ್ಲ’ ಎಂದು ಉತ್ತರಿಸಿದ್ದ. ಹಾಗಿದ್ದರೆ ಅವತ್ತು ಹೇಳಿದ ಸುಳ್ಳುಗಳಿಗೆ ಯಾರು ಹೊಣೆ? ಅದರಿಂದಾಗಿ ಮೋದಿ ಸುದೀರ್ಘಕಾಲ ನರಕಯಾತನೆ ಅನುಭವಿಸಬೇಕಾಯ್ತಲ್ಲ, ಅದರ ಜವಾಬ್ದಾರಿ ಯಾರದ್ದು? ಈ ಪ್ರಶ್ನೆಗೆಲ್ಲ ಉತ್ತರಿಸಬೇಕಾದ್ದು ಯಾರು?


ಪತ್ರಕರ್ತರಷ್ಟೇ ಅಲ್ಲ, ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದರು. ಐಪಿಎಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಮೋದಿಯ ವಿರುದ್ಧ ತನ್ನೆಲ್ಲ ಆಕ್ರೋಶವನ್ನೂ ಹಂತ-ಹಂತವಾಗಿ ಹೊರಹಾಕಿದ. 2011ರಲ್ಲಿ ಆತ ಸ್ಫೋಟಕವಾದ ಮಾಹಿತಿಯೊಂದನ್ನು ಸಮಾಜದ ಮುಂದಿಟ್ಟ. ಕರಸೇವಕರನ್ನು ಸುಟ್ಟ ಪ್ರಕರಣದ ನಂತರ ಮೋದಿ ತುರ್ತು ಸಭೆಯೊಂದನ್ನು ಕರೆದು ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಮಾಡಿಕೊಡಬೇಕೆಂದೂ, ಈ ಬಾರಿ ಈ ಆಕ್ರೋಶ ಹೊರಹಾಕುವ ಪ್ರಕ್ರಿಯೆ ಹೇಗಿರಬೇಕೆಂದರೆ ಇನ್ನೆಂದೂ ಮುಸಲ್ಮಾನರು ಇಂತಹ ಕೃತ್ಯಕ್ಕೆ ಕೈ ಹಾಕದಂತಾಗಬೇಕೆಂದು ಹೇಳಿದ್ದರಂತೆ. ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಭಾಗವಹಿಸಲು ತನಗೂ ಆಹ್ವಾನವಿದ್ದ ಫ್ಯಾಕ್ಸ್ ಪ್ರತಿಯೊಂದನ್ನು ಆತ ಸಮಾಜದ ಮುಂದಿರಿಸಿದ. ಈ ಸಭೆಯಲ್ಲಿ ಎಂಟು ಜನ ಪ್ರಮುಖ ಪೊಲೀಸರಿದ್ದು ಅವರೆಲ್ಲರೂ ಈ ದಂಗೆ ನಿಲ್ಲದಂತೆ ನೋಡಿಕೊಂಡರು ಎಂದಿದ್ದ. ನಾನಾವತಿ ಮೆಹ್ತಾ ಕಮಿಷನ್ ಈ ಎಲ್ಲ ಆರೋಪಗಳನ್ನೂ ಅಲ್ಲಗಳೆಯಿತಲ್ಲದೇ ಆತ ಈ ಸಭೆಯಲ್ಲಿ ಭಾಗವಹಿಸಿರುವುದೇ ಸುಳ್ಳು ಎಂದಿತು. ಆತ ಹೇಳಿರುವ ಅಷ್ಟೂ ಹೇಳಿಕೆಯನ್ನು ಈ ಕಮಿಷನ್ ಸಾರಾಸಗಟಾಗಿ ತಿರಸ್ಕರಿಸಿತು. ಆತ ಮುಂದಿಟ್ಟಿರುವ ಫ್ಯಾಕ್ಸ್ ಪ್ರತಿಯೂ ಕೂಡ ಆ ಸಭೆಯದ್ದಲ್ಲವೆಂಬುದು ಇವರುಗಳ ತನಿಖೆಯ ಮೂಲಕ ಹೊರಬಂತು. ಮುಂದೆ ಇದೇ ಸಂಜೀವ್ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು ಟ್ರೋಲ್ ಮಾಡುತ್ತಾ ಮೋದಿ ವಿರೋಧಿಗಳ ಪಾಲಿನ ಹೀರೋ ಆಗಿ ಉಳಿದ.

ಇವರೆಲ್ಲರೂ ಸೇರಿ ವಾತಾವರಣವನ್ನು ಹೇಗೆ ರೂಪಿಸಿಬಿಟ್ಟಿದ್ದರೆಂದರೆ 72 ಗಂಟೆಗಳ ಕಾಲ ಮೋದಿ ಹಿಂದೂಗಳಿಗೆ ಪೂರ್ಣ ಅವಕಾಶವನ್ನು ಕೊಟ್ಟಿದ್ದರೆಂದು, ಅಷ್ಟರೊಳಗೆ ಮಾಡಬೇಕಾದ್ದೆಲ್ಲವನ್ನೂ ಮಾಡಿ ಮುಗಿಸಲು ಮುಕ್ತ ಪರವಾನಗಿ ನೀಡಿದ್ದರೆಂದು ನಂಬಿಸಿಬಿಟ್ಟಿದ್ದರು. ಹೀಗಾಗಿಯೇ ಮೋದಿ ಸೈನ್ಯವನ್ನು ಕರೆಸಲಿಲ್ಲ ಎಂಬುದು ಅವರ ಮೇಲಿದ್ದ ಅಪವಾದ. ಆದರೆ ದಂಗೆಗಳು ಆರಂಭವಾಗಿವೆ ಎಂದು ಗೊತ್ತಾದೊಡನೆ ಸೈನ್ಯದ ಸಹಕಾರ ಬೇಕೆಂದು ಮೋದಿ ಕೇಂದ್ರಸರ್ಕಾರಕ್ಕೆ ಪತ್ರ ಬರೆದಿದ್ದುದು ನಿಚ್ಚಳವಾಗಿತ್ತು. ಆದರೆ ಸೇನೆ ಗಡಿಭಾಗದಿಂದ ರಕ್ಷಣೆಗೆಂದು ಬರಲು ಕೆಲವು ಗಂಟೆಗಳ ಸಮಯವಾದರೂ ಹಿಡಿಯುತ್ತದೆಂಬುದು ಎಂಥವನಿಗೂ ಗೊತ್ತಿರಬೇಕಾದ ಸಂಗತಿ. ಮೂರು ಸಾವಿರ ಸೈನಿಕರ ಪಡೆ ಘಟನೆಯಾದ ಎರಡು ದಿನಗಳ ನಂತರ ಮಾರ್ಚ್ ಒಂದಕ್ಕೆ ಅಹ್ಮದಾಬಾದಿಗೆ ಬಂದಿಳಿದಿತ್ತು. ಮೋದಿ ದಂಗೆಗಳು ಆರಂಭವಾದ ದಿನ ಸಂಜೆಯೇ ಸೈನ್ಯದ ಸಹಾಯಕ್ಕಾಗಿ ಕರೆಮಾಡಿದ್ದು ದಾಖಲಾಗಿತ್ತು. ಆನಂತರದ ದಿನಗಳಲ್ಲಿ ಅನೇಕ ಪತ್ರಿಕೆಗಳು ಇದನ್ನು ವರದಿ ಮಾಡಿದವು. ಅಷ್ಟರವೇಳೆಗೆ ಮೋದಿಯ ಕುರಿತಂತೆ ಹಬ್ಬಿಸಬೇಕಾದ ಸುಳ್ಳುಗಳನ್ನೆಲ್ಲಾ ಹೇಳಿಯಾಗಿತ್ತು. ಈ ಅಯೋಗ್ಯರ ಸಾಮಥ್ರ್ಯ ಎಂಥದ್ದಿತ್ತೆಂದರೆ ಇಡಿಯ ಜಗತ್ತು ದಂಗೆಯ ಹಿಂದಿನ ಕಾರಣ ಮೋದಿ ಎಂಬುದನ್ನು ನಂಬಿತ್ತೆನ್ನುವುದನ್ನು ಬಿಡಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಇದನ್ನು ಒಪ್ಪಿಕೊಂಡು ಮೋದಿಯವರನ್ನು ಬದಲಾಯಿಸಿಬಿಡುವ ತವಕದಲ್ಲಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಟಲ್ಜಿ ರಾಜ್ಯಧರ್ಮದ ಪಾಲನೆಯ ಕುರಿತಂತೆ ಮೋದಿಗೆ ಕಿವಿಮಾತು ಹೇಳಿದ್ದೇನೆ ಎಂಬುದಂತೂ ಮೋದಿಯವರ ಪಾಲಿಗೆ ಕಂಟಕಪ್ರಾಯವೇ ಆಗಿತ್ತು!

ಮುಂದಿನ ಕನಿಷ್ಠ 12 ವರ್ಷಗಳ ಕಾಲ ಮೋದಿಯ ಪಾಲಿಗೆ ಇದು ವನವಾಸವೇ. ಅವರು ವಿದೇಶಕ್ಕೆ ಹೋಗುವಾಗ ಅಲ್ಲಿನ ಪತ್ರಿಕೆಗಳಲ್ಲಿ ಗೋದ್ರಾ ದಂಗೆಯ ಕುರಿತಂತೆ ಬರೆಸಲಾಗುತ್ತಿತ್ತು. ಚುನಾವಣೆಗೆ ಹೋಗುವ ಮುನ್ನ ಗೋದ್ರಾ ದಂಗೆಗಳನ್ನು ನೆನಪಿಸಿಕೊಡಲಾಗುತ್ತಿತ್ತು. ಗುಜರಾತಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದರೆ ಮೋದಿಯನ್ನು ದಂಗೆಕೋರ ಎಂದು ಬಿಂಬಿಸಿ ಹೂಡಿಕೆದಾರರನ್ನು ಹಿಂದೆ ಸರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಈ ಮನುಷ್ಯ ಎಲ್ಲವನ್ನೂ ಎದುರಿಸಿದ. 12 ವರ್ಷಗಳ ಕಾಲ ತನಗಾದ ಅವಮಾನವನ್ನು ನುಂಗಿಕೊಂಡ, ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ. ಮತ್ತೆ-ಮತ್ತೆ ಚುನಾವಣೆಗಳನ್ನು ಗೆದ್ದು 2014ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಹುಮತ ಪಡೆದು ಪ್ರಧಾನಿಯೂ ಆದ. 2019ರಲ್ಲಿ ಮತ್ತೆ ಪ್ರಧಾನಿಯಾದ. ಈಗ ಅದೇ ನರೇಂದ್ರಮೋದಿ ಈ ಎಲ್ಲ ಆರೋಪಗಳಿಂದ ಮುಕ್ತರಾಗಿ ಬಂದಿದ್ದಾರೆ. ಒಮ್ಮೆ ಹಿಂದಿರುಗಿ ನೋಡಿದಾಗ ಎಲ್ಲ ಕಠಿಣ ಸಂದರ್ಭದಲ್ಲೂ ಜೊತೆಯಲ್ಲಿದ್ದ ನಿಜ ಭಾರತೀಯನನ್ನು ಕಂಡು ಸಂತೋಷ ಪಡಬಹುದು ಅಥವಾ ರಣಹದ್ದುಗಳಂತೆ ಹಿಂದೆ ಬಿದ್ದಿದ್ದವರನ್ನು ಕಂಡು ಅಸಹ್ಯವೆನಿಸಬಹುದು!

ಮೋದಿ ಬರೋವರ್ಗೂ ನಿಮ್ದೇ ಹವಾ!

ಮೋದಿ ಬರೋವರ್ಗೂ ನಿಮ್ದೇ ಹವಾ!

ಚುನಾವಣೆಗಳು ಎದುರಿಗಿವೆ. ಆದರೆ ಸದ್ದೇ ಇಲ್ಲ. ಇನ್ನು ಹದಿನೈದಿಪ್ಪತ್ತು ದಿನಗಳಲ್ಲಿ ಈ ರಾಜ್ಯದ ಐದು ವರ್ಷಗಳ ಭವಿಷ್ಯ ನಿರ್ಧಾರವಾಗಲಿದೆ ಎಂಬ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ. ಬಿಸಿಲ ಝಳ ಒಂದೆಡೆಯಾದರೆ, ಮತ್ತೊಂದೆಡೆ ಎಲ್ಲ ಪಕ್ಷಗಳ ನಾಯಕರಲ್ಲೂ ಮನೆಮಾಡಿರುವ ಆತಂಕ. ಎಲ್ಲಾ ಪಕ್ಷಗಳೂ ಬಹುಮತ ತಮಗೇ ಅಂತ ಮೇಲ್ನೋಟಕ್ಕೆ ಬೀಗುತ್ತಿವೆಯಾದರೂ ಮೈದಡವಿ ಮಾತನಾಡಿಸಿದಾಗ, ಸ್ವಲ್ಪ ಕಷ್ಟವಿದೆ ಎನ್ನುವುದನ್ನು ಒಪ್ಪುತ್ತಾರೆ. ಏಕೊ ಈ ಬಾರಿ ಜನ ಬೂತಿಗೆ ಬಂದು ವೋಟ್ ಮಾಡುವುದೇ ಅನುಮಾನ ಅನ್ನಿಸುತ್ತಿದೆ. ಉರಿಬಿಸಿಲು ಒಂದು ಕಾರಣವಾದರೆ, ಎಲ್ಲಾ ಪಕ್ಷಗಳು ಒಂದೇ ಎನ್ನುವ ತಾತ್ಸಾರ ಮನೋಭಾವ ಮತ್ತೊಂದು.

ಇಡೀ ಚುನಾವಣೆಯ ಪ್ರಮುಖ ಬೇಸರದ ಸಂಗತಿ ಏನು ಗೊತ್ತೇ? ಜಾತಿಯ ಕಾರ್ಡನ್ನು ಪಕ್ಷಗಳು ಬಳಸುತ್ತಿರುವಂತಹ ರೀತಿ. ಲಿಂಗಾಯತನೇ ಮುಖ್ಯಮಂತ್ರಿ ಎನ್ನುವ ಬಿಜೆಪಿ, ಗೌಡರನ್ನು ಮುಂದಿಟ್ಟುಕೊಂಡು ಕಾಳಗ ನಡೆಸುತ್ತಿರುವ ಕಾಂಗ್ರೆಸ್ಸು. ಜಾತಿ-ಜಾತಿಗಳನ್ನು ಇವರು ಸೆಳೆಯಲು ನಡೆಸುತ್ತಿರುವ ಕಸರತ್ತು, ಗಿರಾಕಿಯನ್ನು ಆಕರ್ಷಿಸುವ ಕೆಂಪುದೀಪ ಪ್ರದೇಶದ ಬೆಲೆವೆಣ್ಣುಗಳ ಸರ್ಕಸ್ಸಿನಂತಿದೆ. ಸ್ವಲ್ಪ ಕಟುವೆನಿಸಿದರೂ ಸತ್ಯವೇ. ತಾನು ಬ್ರಾಹ್ಮಣ ಪಕ್ಷವಲ್ಲವೆಂದು ಸಾಬೀತುಪಡಿಸಿಕೊಳ್ಳಲು ಬಿಜೆಪಿ ಜಾತಿವಾರು ಟಿಕೆಟ್ ಹಂಚಿಕೆ ಪಟ್ಟಿ ಪ್ರಕಟಿಸಿದರೆ, ಅತ್ತ ಕಾಂಗ್ರೆಸ್ಸು ಲಿಂಗಾಯತರನ್ನು ಸೆಳೆಯಲು ಒಡಕಿನ ಎಲ್ಲ ಪ್ರಯೋಗವನ್ನೂ ಮಾಡಿಯಾಗಿದೆ. ಅಲ್ಲದೇ ಮತ್ತೇನು? ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರೋದು ಸರಿ, ಆದರೆ ಅವರನ್ನು ತಮ್ಮತ್ತ ಸೆಳೆದ ಕಾಂಗ್ರೆಸ್ಸು ಲಿಂಗಾಯತರಿಗಾದ ಅವಮಾನವೆಂಬಂತೆ ಬಿಂಬಿಸಿತಲ್ಲ! ಶೆಟ್ಟರ್ ಕೂಡ ತಮ್ಮನ್ನು ಹೊರದಬ್ಬುವ ಪ್ರಕ್ರಿಯೆಯ ನಾಯಕರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ರನ್ನು ಬಿಂಬಿಸಿ, ಉರಿವ ಬೆಂಕಿಗೆ ತುಪ್ಪ ಸುರಿದರು. ಅವರದ್ದು ತಪ್ಪು ಎಂದು ಹೇಳಲಾಗದು. ರಾಜಕೀಯವಾಗಿ ತಾನು ಜೀವಂತವಾಗಿರಬೇಕೆಂದರೆ ಇಂಥದ್ದೊಂದು ಕಸರತ್ತು ಅವರಿಗೆ ಅಗತ್ಯವಿತ್ತು. ಅಚ್ಚರಿಯೇನು ಗೊತ್ತೇ? ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿ ಬಿಜೆಪಿ ಆಯ್ಕೆಮಾಡಿದ ಮತ್ತೊಬ್ಬ ವ್ಯಕ್ತಿಯೂ ಲಿಂಗಾಯತರೇ! ಹಾಗಿದ್ದಮೇಲೆ ಲಿಂಗಾಯತರಿಗೆ ಮೋಸವಾಗಿದ್ದೆಲ್ಲಿ? ಇನ್ನು ಎಲ್ಲಾ ಅನಿಷ್ಟಗಳಿಗೂ ಸಂತೋಷರನ್ನೇ ಕಾರಣವೆನ್ನುವ ಮಂದಿ ಮೋದಿ-ಅಮಿತ್‌ ಶಾರನ್ನು ಅಷ್ಟು ದಡ್ಡರೆಂದುಕೊಂಡಿದ್ದಾರೋ ಅಥವಾ ಟಿಕೆಟ್ ಹಂಚಿಕೆಯಲ್ಲಿ ಅವರ ಪಾತ್ರವೇ ಇಲ್ಲ ಎಂದು ಭಾವಿಸಿದ್ದಾರೋ, ನಾನಂತೂ ಅರಿಯೆ. ಸಮಿತಿಯೊಳಗೆ ಘಟಾನುಘಟಿಗಳ್ಯಾರ್ಯಾರಿಗೆ ಟಿಕೆಟ್ ನಿರಾಕರಿಸಬೇಕು ಎಂಬ ಚರ್ಚೆ ಮೇಲ್ಮಟ್ಟದಲ್ಲಿ ನಡೆದಮೇಲೆಯೇ ನಿರ್ಣಯವಾಗಿರುತ್ತಲ್ಲ. ಅಂದಮೇಲೆ ಒಬ್ಬರದ್ದೇ ಜವಾಬ್ದಾರಿ ಹೇಗೆ? ಹಾಗೆ ಒಬ್ಬರ ಹೆಗಲಿಗೇ ಎಲ್ಲವನ್ನೂ ವರ್ಗಾಯಿಸುವುದಾದರೆ, ಟಿಕೆಟ್ ಹಂಚಿಕೆಯಲ್ಲಿ ಹಿಂದೆಂದೂ ಕಾಣದಷ್ಟು ಹೊಸಮುಖಗಳನ್ನು ತಂದಿರುವ ಶ್ರೇಯವೂ ಸಂತೋಷ್ ಅವರಿಗೇ ಸಲ್ಲಬೇಕಲ್ಲ! ಬಿಜೆಪಿಯವರಿಗೆಲ್ಲ ನೆನಪಿರಬೇಕಾದ ಒಂದು ಸಂಗತಿ ಎಂದರೆ ಬಿಜೆಪಿ ಸಂಘದ ಅಂಗಸಂಸ್ಥೆಯಷ್ಟೆ. ಸಂಘ ಅದರ ಬಾಲವಲ್ಲ. ಹೀಗಾಗಿ ಭಾಜಪದೊಂದಿಗೆ ಎಷ್ಟಾದರೂ ಕಿತ್ತಾಡಿಕೊಳ್ಳಿ, ಸ್ವಯಂಸೇವಕರು ನಿಮ್ಮ ಮೇಲೆ ಪ್ರೀತಿ ಇಟ್ಟಿರುತ್ತಾರೆ. ಸಂಘದ ತಂಟೆಗೆ ಬಂದರೆ ನಿಮ್ಮನ್ನು ಸದ್ದಿಲ್ಲದೇ ಪಕ್ಕಕ್ಕೆ ಸರಿಸಿಬಿಡ್ತಾರೆ. ಶೆಟ್ಟರ್ ವಿಷಯದಲ್ಲಿ ಆದದ್ದೂ ಅದೇ. ಅವರು ಸ್ವಯಂ ಸೇವಕರ ಅನುಕಂಪವನ್ನು ಕಳಕೊಂಡರು. ಅತ್ತ ಕಾಂಗ್ರೆಸ್ಸಿಗರೂ ನಂಬಲಾಗದ ಸ್ಥಿತಿಯನ್ನು ತಲುಪಿಬಿಟ್ಟರು. ಅವರದ್ದೀಗ ಇಬ್ಬಂದಿ. ಹಾಗಂತ ಜಗದೀಶ್ ಶೆಟ್ಟರ್‌ರ ರಾಜಕೀಯ ಚಾಣಾಕ್ಷಮತಿಯನ್ನು ಅನುಮಾನಿಸಬೇಡಿ. ಅವರಿಗೆ ಗೆಲ್ಲುವ ತಂತ್ರಗಾರಿಕೆ ಗೊತ್ತಿದೆ. ಆದರೆ ಈ ಧಾವಂತದಲ್ಲಿ ಸೊರಗಿದ್ದು ಮಾತ್ರ ಲಿಂಗಾಯತ ಸಮುದಾಯ. ಬ್ರಾಹ್ಮಣ ಮತ್ತು ಲಿಂಗಾಯತರ ನಡುವಿನ ಕಂದಕವನ್ನು ಅವರು ಇನ್ನಷ್ಟು ದೊಡ್ಡದು ಮಾಡಿಬಿಟ್ಟರು. ಬಿಜೆಪಿಯಲ್ಲಿದ್ದಷ್ಟೂ ದಿನ ಎಲ್ಲರನ್ನೂ ಬೆಸೆಯುವ ಪ್ರಯತ್ನ ಮಾಡುತ್ತಿದ್ದವರು, ಕಾಂಗ್ರೆಸ್ಸಿಗೆ ಕಾಲಿಟ್ಟೊಡನೆ ಬೆಂಕಿಹಚ್ಚಲು ಸಿದ್ಧವಾಗಿಬಿಟ್ಟರು. ಬಹುಶಃ ಒಡಕು ತರೋದು ಕಾಂಗ್ರೆಸ್ಸಿನ ಹುಟ್ಟುಗುಣವೇನೋ! ಕಾಂಗ್ರೆಸ್ಸಿಗರು ಆತ್ಮೀಯತೆ ತೋರುತ್ತಿದ್ದಾರೆಂದರೆ ಏನೊ ಅವಘಡ ಕಾದಿದೆ ಎಂದೇ ಅರ್ಥ. ಮುಖದಲ್ಲಿ ನಗು, ಬಗಲಲ್ಲಿ ಚೂರಿ ಅನ್ನೋದು ಕಾಂಗ್ರೆಸ್ಸಿಗರನ್ನು ನೋಡಿಯೇ ಹುಟ್ಟಿರಬೇಕು! ಒಂದಂತೂ ಸತ್ಯ. ನಾಟಕ ಮಾಡಿದರೆ ಬಹಳ ಕಾಲ ಉಳಿಯುವುದಿಲ್ಲ. ಲಿಂಗಾಯತರ ಮೇಲೆ ವಿಶೇಷ ಪ್ರೀತಿ ತೋರಿದ ಸಿದ್ದರಾಮಯ್ಯ, ‘ಲಿಂಗಾಯತರೆಲ್ಲ ಭ್ರಷ್ಟರು. ಅವರನ್ನು ಮುಖ್ಯಮಂತ್ರಿ ಮಾಡಲಾರೆವು’ ಎಂದಿದ್ದು ಅಂತರಂಗದ ಮಾತನ್ನು ಹೊರಹಾಕಿದೆ. ಜಾತಿಯನ್ನೇ ನೆಚ್ಚಿಕೊಂಡು ಚುನಾವಣೆಗೆ ಹೋದರೆ ಅನುಭವಿಸಲೇಬೇಕಾದ್ದು ಇದು.

ಒಡಕು ಜಾತಿಯ ವಿಚಾರದಲ್ಲಷ್ಟೇ ಅಲ್ಲ. ಅಮೂಲ್, ನಂದಿನಿ ಗಲಾಟೆಯಲ್ಲೂ ಕೂಡ. ಗುಜರಾತಿನ ಅಮೂಲ್‌ಗೆ ಕರ್ನಾಟಕಕ್ಕೆ ಬರಲು ಅವಕಾಶ ಕೊಟ್ಟಿದ್ದೇ ಸಿದ್ದರಾಮಯ್ಯ. ಈಗ ಗಲಾಟೆ ಮಾಡುತ್ತಾ ಇರೋದೂ ಅವರೇ. ತಮ್ಮ ಮತಗಳಿಕೆಗಾಗಿ ರಾಜ್ಯ-ರಾಜ್ಯಗಳ ನಡುವೆ ಕದನ ಹಚ್ಚಿಸಲು ಯತ್ನಿಸುತ್ತಿರುವ ಈ ಮಂದಿ ವಿಕಾಸ ಮಾಡೋದು ಸಾಧ್ಯವೇನು? ಈ ರೀತಿಯಲ್ಲೇ ಈ ರಾಜಕಾರಣಿಗಳು ಕರ್ನಾಟಕ-ತಮಿಳುನಾಡುಗಳ ನಡುವೆ ವಿಷಬೀಜ ಬಿತ್ತಿದ್ದು. ಇವರು ಹಚ್ಚಿದ್ದ ಬೆಂಕಿ ಆರಿಸಲು ಯಡಿಯೂರಪ್ಪನವರೇ ಬರಬೇಕಾಯ್ತು. ಕಂಠಮಟ್ಟ ನಂದಿನಿಗಾಗಿ ಕಿತ್ತಾಡಿದ ಸಿದ್ದರಾಮಯ್ಯ ರಾಜ್‌ದೀಪ್ ಸರ್‌ದೇಸಾಯಿಗೆ ನೀಡಿದ ಸಂದರ್ಶನದಲ್ಲಿ, ತಾನೇ ಅಧಿಕಾರಕ್ಕೆ ಬಂದರೂ ಅಮೂಲ್ ನಿಷೇಧಿಸುವುದಿಲ್ಲ. ಆದರೆ ಜನರಿಗೆ ಅದನ್ನು ಕೊಂಡುಕೊಳ್ಳದಿರುವಂತೆ ಕೇಳಿಕೊಳ್ಳುವೆ ಎಂದಿರುವುದಂತೂ ಇಬ್ಬಂದಿತನದ ದ್ಯೋತಕವೇ. ಜಗತ್ತು ಆರ್ಥಿಕವಾಗಿ ಬೆಳವಣಿಗೆಗೆ ಎಲ್ಲ ಸಭ್ಯಮಾರ್ಗಗಳ ಮೊರೆ ಹೋಗುತ್ತಿರುವಾಗ ಒಂದು ರಾಜ್ಯದ ವಸ್ತು ಮಾರಲು ಬಿಡೆವು ಎಂದು ಇನ್ನೊಂದು ರಾಜ್ಯದಲ್ಲಿ ಹಠಹಿಡಿದು ಕುಳಿತ ಪಕ್ಷ ರಾಷ್ಟ್ರೀಯ ಪಕ್ಷವೆನಿಸಿಕೊಳ್ಳಲು ಯೋಗ್ಯವಲ್ಲ. ಅಲ್ಲವೇನು!?

ಇನ್ನು ಮುಸಲ್ಮಾನರ ಮೇಲಿನ ಕಾಂಗ್ರೆಸ್ ಪಕ್ಷದ ಹಿಡಿತ ಮೆಚ್ಚಬೇಕಾದ್ದೇ‌. ಕೆಮ್ಮಿದ್ದಕ್ಕೂ, ಕ್ಯಾಕರಿಸಿದ್ದಕ್ಕೂ ಬೀದಿಗೆ ಬಂದು ನಿಲ್ಲುವ ಮುಸಲ್ಮಾನರು, ಆತಿಕ್ ಮೊಹಮ್ಮದನ ಸಾವಿಗೆ ಪ್ರತಿಕ್ರಿಯೆಯನ್ನೇ ಕೊಡಲಿಲ್ಲ ನೋಡಿದಿರಾ? ದೇಶದ ಮೂಲೆ-ಮೂಲೆಯಲ್ಲಿ ಸದ್ದುಮಾಡಿದ ಈ ಮಂದಿ ಕರ್ನಾಟಕದಲ್ಲಿ ಇಷ್ಟು ಮುಗುಮ್ಮಾಗಿರೋದು ಏಕೆ? ತಮ್ಮ ಗಲಾಟೆಯಿಂದ ಹಿಂದೂಗಳು ಒಗ್ಗಟ್ಟಾಗಿಬಿಡುವರೇನೋ ಎನ್ನುವ ಭಯ. ಮುಸಲ್ಮಾನರಿಂದ ಅವೈಜ್ಞಾನಿಕವಾದ ಮೀಸಲಾತಿಯನ್ನು ಕಿತ್ತುಕೊಂಡು ಗೌಡರು, ಪಂಚಮಸಾಲಿಗಳಿಗೆ ಬಿಜೆಪಿ ಹಂಚಿದಾಗಲೂ ಅವರು ತುಟಿಪಿಟಿಕ್ ಎನ್ನಲಿಲ್ಲ. ಏಕಿರಬಹುದು? ಈಗ ಗಲಾಟೆ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರಣವಾಗುವ ಬದಲು ಸಂಯಮ ಕಾಯ್ದುಕೊಂಡು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದು, ಆನಂತರ ಬೇಕಾದ ಆಟ ಆಡಿದರಾಯ್ತು ಎಂಬ ಉದ್ದೇಶವೇ ತಾನೇ? ದೇಶದಾದ್ಯಂತ ಮುಸಲ್ಮಾನರನ್ನು ಈ ರೀತಿ ನಿಯಂತ್ರಣದಲ್ಲಿರಿಸಿಕೊಳ್ಳುವ ಸಾಮರ್ಥ್ಯ ಇರೋದು ಕಾಂಗ್ರೆಸ್ಸಿಗೆ ಮಾತ್ರ. ಅಂದರೆ ಮುಸಲ್ಮಾನರು ನಡೆಸುವ ಅನೇಕ ದಂಗೆಗಳ ಹಿಂದೆ ಕೈವಾಡ ಯಾರದ್ದಿರಬೇಕು ಹೇಳಿ? ಇಲ್ಲವಾದರೆ ಅಖಂಡ ಶ್ರೀನಿವಾಸರಿಗೆ ಟಿಕೆಟ್ ತಪ್ಪಿಸಿ, ‘ಮುಸಲ್ಮಾನ ಮುಖಂಡರ ವಿರೋಧ ಇದ್ದದ್ದರಿಂದ’ ಅಂತ ಡಿಕೆಶಿ ಏಕೆ ಹೇಳುತ್ತಿದ್ದರು? ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಕಾಂಗ್ರೆಸ್ಸಿಗೆ ವೋಟು ನೀಡುವುದು ಅಂದರೆ ಮತ್ತೊಮ್ಮೆ ಮುಸಲ್ಮಾನರು ಅಟ್ಟಹಾಸ ನಡೆಸಿ ಬೀದಿಗಿಳಿಯುವುದು ಎಂದರ್ಥ, ಟಿಪ್ಪು ಜಯಂತಿಯ ವೈಭವ ರಾಜ್ಯದ ಮೂಲೆ-ಮೂಲೆಯಲ್ಲೂ ಕಾಣುವುದು ಎಂದರ್ಥ, ಸಾಲು-ಸಾಲು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾಗುವುದು ಎಂದರ್ಥ.

ಈ ಬಾರಿ ಹಣ ಚುನಾವಣೆಯಲ್ಲಿ ಕಾವೇರಿ ನೀರಿಗಿಂತ ಜೋರಾಗಿ ಹರಿಯಲಿದೆ. ಚುನಾವಣೆಗೂ ಮುಂಚಿನ ಮೂರ್ನಾಲ್ಕು ದಿನ ಮತದಾರರಿಗೆ ಹಬ್ಬ. ನಾಯಕರಿಂದ ಹಂಚಲೆಂದು ಹಣ ಪಡೆದವರ ಕಥೆಯನ್ನು ಕೇಳಲೇಬೇಡಿ. ಕಾಂಗ್ರೆಸ್ಸು ದುಡ್ಡಿರುವವರನ್ನು ಹುಡು-ಹುಡುಕಿ ಆರಿಸಿಕೊಂಡಿದೆ. ಅವರು ಆಕಾಂಕ್ಷಿಗಳಿಂದಲೇ ಎರಡೆರಡು ಲಕ್ಷ ಪೀಕಿ ಹತ್ತಾರು ಕೋಟಿ ಮಾಡಿಕೊಂಡವರಲ್ಲವೇ! ಬಿಜೆಪಿ ಟಿಕೆಟ್ ಹಂಚುವಾಗ ಬಹುತೇಕ ಬ್ಯಾಂಕ್ ಬ್ಯಾಲೆನ್ಸ್ ನೋಡಲಿಲ್ಲವೆಂಬುದು ಸುವಿದಿತ. ಹೀಗಾಗಿ ಇಲ್ಲಿನ ಬಹುತೇಕ ಹೊರೆ ಬೊಮ್ಮಾಯಿಯವರೇ ಹೊರಬೇಕೇನೋ! ಪ್ರಜಾಪ್ರಭುತ್ವವಾದ್ದರಿಂದ ಚುನಾವಣೆಯ ನೆಪದಲ್ಲಿ ಪ್ರತಿಯೊಬ್ಬರೂ ಅಧಿಕಾರದಲ್ಲಿದ್ದಾಗ ಗಳಿಸಿದ್ದನ್ನು ಕಕ್ಕಲೇಬೇಕು. ಮೊದಲೆಲ್ಲ ಸ್ವಲ್ಪ ಕೊಟ್ಟರೆ ಸಾಕಿತ್ತು. ಈಗ ಇತರೆಲ್ಲ ಕ್ಷೇತ್ರಗಳಂತೆ ಇಲ್ಲೂ ಸಾಕಷ್ಟು ಸ್ಪರ್ಧೆ ಏರ್ಪಟ್ಟಿರುವುದರಿಂದ ಸಣ್ಣ-ಪುಟ್ಟ ಮೊತ್ತಕ್ಕೆ ಮತದಾರನೂ ಬಾಗಲಾರ. ಎಂತಹ ದುರಂತ ಅಲ್ಲವೇ! ಈ ಲೇಖನದ ಮುಕ್ಕಾಲುಭಾಗ ಜಾತಿ, ಹಣ, ಹೆಂಡಗಳೆಂಬ ಕೊಳಕು ಸಂಗತಿಯದ್ದೇ ಚರ್ಚೆಯಾಯ್ತು.

ವಾಸ್ತವವಾಗಿ, ಚುನಾವಣೆಯ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಗೆ ನಾವೂ ಸಿದ್ಧವಾಗಬೇಕು. ಯಾವ ವ್ಯಕ್ತಿಗೂ ಸತತ ಎರಡನೇ ಬಾರಿ ಗೆದ್ದನಂತರ, ಮೂರನೇ ಬಾರಿ ಟಿಕೆಟ್ ನೀಡಬಾರದು. ಹತ್ತು ವರ್ಷ ಶಾಸಕನಾಗಿಯೂ ಏನನ್ನೂ ಕಡಿದು ಗುಡ್ಡೆ ಹಾಕದವ, ಮುಂದಿನ ಹತ್ತು ವರ್ಷದಲ್ಲಿ ಅದೇನು ಮಹಾ ಸಾಧಿಸಬಲ್ಲ ಹೇಳಿ? ಸತತ ಐದು ಬಾರಿ ಶಾಸಕ ಎನ್ನುವುದು ಹೆಗ್ಗಳಿಕೆಯಲ್ಲ. ಐದಾರು ಬಾರಿ ಶಾಸಕನಾದರೂ ಕ್ಷೇತ್ರವಿನ್ನೂ ಹಾಗೆಯೇ ಇದೆಯಲ್ಲ ಎಂಬ ಕಾರಣಕ್ಕೆ ಆ ಪ್ರತಿನಿಧಿ ಆತ್ಮಹತ್ಯೆ ಮಾಡಿಕೊಳ್ಳಬೇಕು, ಅಲ್ಲವೇನು? ಜಾತಿಯ ಆಧಾರದ ಮೇಲೆ ಟಿಕೆಟ್ ಹಂಚುವುದಾದರೆ ಸಣ್ಣ-ಪುಟ್ಟ ಜಾತಿಗಳ ಪ್ರತಿಭಾವಂತರು ಎಂದೂ ರಾಜಕೀಯಕ್ಕೆ ಬರಲೇಬಾರದೇನು? ಅವರು ನೇತೃತ್ವವಹಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಡೆಸುವ ಕನಸು ಕಾಣಲೇಬಾರದೇನು? ಇದು ಮತದಾರರಾಗಿ ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಪ್ರತಿಭಾವಂತನಿಗೆದುರಾಗಿ ನನ್ನ ಜಾತಿಯ ದಡ್ಡನನ್ನೂ, ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದವನನ್ನೂ, ಪರಮಭ್ರಷ್ಟನನ್ನೂ ಆಯ್ದುಕೊಳ್ಳುತ್ತೇನೆಂದರೆ ಅದಕ್ಕಿಂತ ಹೇಸಿಗೆ ಯಾವುದಿದೆ! ದುರಂತ ಏನು ಗೊತ್ತೇ? ಹೀಗೆ ಜಾತಿಯವರನ್ನು ಆರಿಸಿಕೊಳ್ಳೋದು ಸಮಾಜದ ದಡ್ಡರೆಂದುಕೊಳ್ಳಬೇಡಿ, ಬುದ್ಧಿವಂತರೂ ಕೂಡ. ಎಲ್ಲವನ್ನೂ ತ್ಯಾಗ ಮಾಡಿ ಸನ್ಯಾಸ ಸ್ವೀಕರಿಸಿದ ಸ್ವಾಮಿಗಳೂ ತಮ್ಮ ಜಾತಿಗಾಗಿ ಲಾಬಿ ಮಾಡುವುದನ್ನು ನೋಡಿದಾಗ ತ್ಯಾಗವೆಂಬ ಪದ ಅದೆಷ್ಟು ಮೌಲ್ಯ ಕಳಕೊಂಡಿದೆ ಎಂದು ಅರಿವಾಗುತ್ತದೆ.

ಆದರೆ ಕಾರ್ಮೋಡದ ನಡುವೆಯೂ ಒಂದು ಬೆಳ್ಳಿರೇಖೆ ಯಾವುದು ಗೊತ್ತೇ? ಅದು ನರೇಂದ್ರಮೋದಿಯೇ‌. ಅವರು ಯಾವ ಜಾತಿಯವರೆಂದು ಅನೇಕರಿಗೆ ಗೊತ್ತಿಲ್ಲ. ಅವರು ತಮ್ಮ ಜಾತಿಯವರೆಂದು ಯಾರನ್ನೂ ಮಂತ್ರಿ ಮಾಡಿದ ಉದಾಹರಣೆ ಇಲ್ಲ. ಅವರೆಂದಿಗೂ ತಮ್ಮ ಜಾತಿಯ ಮಠಾಧೀಶನಿಗೆ ಮತ್ತೆ-ಮತ್ತೆ ಹೋಗಿ ಅಡ್ಡಬಿದ್ದುದನ್ನು ಕಂಡವರಿಲ್ಲ. ತಥಾಕಥಿತ ಮೇಲ್ವರ್ಗದ ಮಠಾಧೀಶರಿರಲಿ, ಕೆಳವರ್ಗದವರೇ ಇರಲಿ ಮೋದಿ ಎದುರು ನಿಂತಾಗ ಗೌರವದಿಂದ ನಮಿಸುತ್ತಾರೆ. ಜನರೂ ಅಷ್ಟೇ, ಮೋದಿಯ ಭಾವಚಿತ್ರ ಕೊಳಕಾಗಿದ್ದರೆ ತಮ್ಮ ಬಟ್ಟೆಯಿಂದಲೇ ಅದನ್ನು ಒರೆಸಿ, ‘ದೇವರಪ್ಪಾ’ ಅಂತಾರೆ. ಅವರು ಜಾತಿಯ ವಿಷಯ ತೆಗೆಯಲಿಲ್ಲ, ಹಣದ ಮಾತೆತ್ತಲಿಲ್ಲ. ಭಾರತದ ಮೌಲ್ಯಗಳಿಗೆ ತಕ್ಕಂತೆ ಬದುಕಿದರು. ಭೂಮಿಗೆ ಹತ್ತಿರವಾಗಿ ಬದುಕಿದರು. ಹೀಗಾಗಿಯೇ ಅವರು ಪ್ರಧಾನಿಯಾಗಿರುವುದನ್ನು ಎಲ್ಲ ಜಾತಿಯ, ಎಲ್ಲ ವರ್ಗದ ಮತ್ತು ಎಲ್ಲ ಪಕ್ಷದ ಜನ ಸಂಭ್ರಮಿಸುತ್ತಾರೆ. ಜಾತಿಯ ಕಾರಣಕ್ಕೆ ಮುಖ್ಯಮಂತ್ರಿಯ ಪಟ್ಟದಲ್ಲಿ ಕುಳಿತುಕೊಳ್ಳಬೇಕು ಎನ್ನುವವರಿಗೆ ಇವೆಲ್ಲ ಅರ್ಥವಾಗೋದು ಬಹಳ ಕಷ್ಟ.

ಮೋದಿ ಕರ್ನಾಟಕಕ್ಕೆ ಬರಲಿದ್ದಾರೆ. ಇನ್ನು ಕೆಲವು ದಿನ ಮತ್ತೆ ಮತ್ತೆ ಬರಲಿದ್ದಾರೆ. ಅವರು ಬರುವವರೆಗೆ ಅಷ್ಟೇ ಉಳಿದವರ ಹವಾ. ಅವರು ಬಂದಮೇಲೆ ಅವರದ್ದೇ ಹವಾ. ಆ ತಣ್ಣನೆ ಗಾಳಿ ಜೋರಾಗಿ ಬೀಸಲಿ, ಬಿಸಿಲ ಬೇಗೆಯನ್ನು ಕಡಿಮೆ ಮಾಡಿ ರಾಜ್ಯಕ್ಕೆ ತಂಪು ತರುವವರನ್ನು ಅಧಿಕಾರಕ್ಕೆ ಕೂಡಿಸಲಿ. ಏನಂತೀರಿ?

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ನಿಮಗೆ ನೆನಪಿರಬೇಕಲ್ಲ, ತೈವಾನ್ ವಿಚಾರದಲ್ಲಿ ಅಮೇರಿಕಾ ಚೀನಾಕ್ಕೆ ಕಟುವಾದ ಸಂದೇಶ ನೀಡಿತ್ತು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ದರು. ಇವರೇ ಹುಟ್ಟುಹಾಕಿಕೊಂಡ ಸಂಘಟನೆಯೊಂದಿದೆ. ಇಂಡೋ-ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ ಎಂಬುದು ಅದರ ಹೆಸರು. ಚಿತ್ರಕಲಾ ಪರಿಷತ್ ನಲ್ಲಿ ಪ್ರತಿಭಟನೆಯ ನೆಪದಲ್ಲಿ ಈ ಕಾಂಗ್ರೆಸ್ಸಿಗರು ಚೀನಾದ ರಾಯಭಾರಿಯನ್ನೇ ಕರೆಸಿದ್ದರು. ಜೊತೆಗೆ ಒಂದು ಚಿತ್ರಪ್ರದರ್ಶನ. ಮುಖ್ಯ ಅತಿಥಿಯಾಗಿ ಭಾಗವಹಿಸಬೇಕೆಂದಿದ್ದವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯನವರು. ಸ್ವಲ್ಪ ಪ್ರತಿಭಟನೆಯಾದೊಡನೆ ‘ನಾನು ಬರುವುದಿಲ್ಲವೆಂದರೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಬಿಟ್ಟಿದ್ದಾರಲ್ಲ’ ಎಂದು ಮೊಸಳೆ ಕಣ್ಣೀರು ಸುರಿಸಿದ ಅವರು ಉಳಿದ ಕಾಂಗ್ರೆಸ್ಸಿಗರು ಈ ಪ್ರತಿಭಟನೆಗೆ ಹೋಗುವುದಿಲ್ಲವೆಂದೇನೂ ಹೇಳಲಿಲ್ಲ! ಪ್ರತಿಭಟನೆ ಆಯ್ತು ಕೂಡ. ಇಷ್ಟೆಲ್ಲಾ ಈಗೇಕೆಂದರೆ ಚೀನಾದ ಗಡಿಯ ಬರೋಬ್ಬರಿ ನೂರು ಕಿಲೋಮೀಟರ್ ದೂರದಲ್ಲಿ ಭಾರತ ಮತ್ತು ಅಮೇರಿಕಾಗಳು ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದಕ್ಕೆ ಚೀನಾ ಪ್ರತಿಭಟನೆ ವ್ಯಕ್ತಪಡಿಸಿ ಎಚ್ಚರಿಕೆ ಕೂಡ ಕೊಡುವ ಪ್ರಯತ್ನ ಮಾಡಿದೆ. ಭಾರತ ಎಂದಿನಂತೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಕೊಟ್ಟರೆ ಅಮೇರಿಕಾ ಕೂಡ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ದರ್ದು ನಿಮಗೆ ಬೇಕಿಲ್ಲ ಎಂದು ಹೇಳಿಬಿಟ್ಟಿದೆ. ಚೀನಾದ ವಿಚಾರದಲ್ಲಿ ಅಮೇರಿಕಾ ಆಂತರಿಕ ಹಸ್ತಕ್ಷೇಪ ಮಾಡಿದೆ ಎಂದು ಬಾಯಿಬಡಕೊಂಡಿದ್ದ ಕಾಂಗ್ರೆಸ್ಸಿಗರು ಈಗೇಕೋ ಶಾಂತರಾಗಿಬಿಟ್ಟಿದ್ದಾರೆ. ಪ್ರತಿಭಟನೆ ಇರಲಿ, ಚೀನಾದ ವಿರುದ್ಧ ಒಂದು ಹೇಳಿಕೆ ಕೊಡುವ ಸಾಹಸವನ್ನೂ ಮಾಡಲಿಲ್ಲ. ಚೀನಾದಲ್ಲಿ ಮಳೆ ಬಿದ್ದರೆ ಇವರಿಗೆ ಥಂಡಿಯಾಗುತ್ತದೆ. ಆದರೆ ಭಾರತದಲ್ಲಿ ಮಂಜೇ ಸುರಿದರೂ ಇವರಿಗೆ ಅದು ತೊಂದರೆ ಕೊಡುವುದಿಲ್ಲ. ದುರ್ದೈವವಲ್ಲವೇನು? 

ಇರಲಿ. ಇವರೆಲ್ಲ ಇಷ್ಟು ಆರಾಧಿಸುವ ಚೀನಾ ಕಳೆದ ಎಂಟ್ಹತ್ತು ದಿನಗಳಿಂದ ಪಡಬಾರದ ಪಾಡು ಪಡುತ್ತಿದೆ. ನವೆಂಬರ್ ತಿಂಗಳ ಕೊನೆಯ ಭಾಗದ ವೇಳೆಗೆ ಶಿಂಜಿಯಾಂಗ್ ಪ್ರಾಂತ್ಯದ ಉರುಕ್ಮಿಯಲ್ಲಿ ಹತ್ತಾರು ಮನೆಗಳುಳ್ಳ ಅಪಾರ್ಟ್ ಮೆಂಟ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಹತ್ತಕ್ಕೂ ಹೆಚ್ಚು ಮಂದಿ ತೀರಿಕೊಂಡರು. ಜನರ ಆಕ್ರೋಶಕ್ಕೆ ಕಾರಣವಾದ ಈ ಸಂಗತಿ ದಶಕಗಳಷ್ಟು ದೀರ್ಘಕಾಲದ ನಂತರ ಚೀನಿಯರನ್ನು ಪ್ರತಿಭಟನೆಯ ನೆಪದಲ್ಲಿ ಬೀದಿಗೆ ತಂತು. ಅಪಾರ್ಟ್‌ಮೆಂಟಿಗೆ ಬೆಂಕಿ ಹತ್ತಿಕೊಂಡರೆ ಪ್ರತಿಭಟನೆ ಮಾಡುವುದೇತಕ್ಕೆ ಎಂದು ಆಶ್ಚರ್ಯವಾಗಿರಬೇಕಲ್ಲವೇ? ಜೀರೊ ಕೋವಿಡ್‌ನ ಹುಚ್ಚಿಗೆ ಬಿದ್ದಿರುವ ಷಿ ಇಲ್ಲಿಂದ ಯಾರೊಬ್ಬರೂ ಆಚೆಗೆ ಬರದಿರುವಂತೆ ಹೊರಬಾಗಿಲಿಗೆ ಕಬ್ಬಿಣದ ರಾಡುಗಳಿಂದ ವೆಲ್ಡಿಂಗ್ ಮಾಡಿಸಿದ್ದರ ಪರಿಣಾಮ ಜನ ಅನಿವಾರ್ಯವಾಗಿ ಬೆಂಕಿಯಲ್ಲಿ ಬೇಯಬೇಕಾಗಿ ಬಂತು. ಜಗತ್ತಿನಾದ್ಯಂತ ಕೊವಿಡ್‌ನ ಸಂಕಟ ಇರಬಹುದೇನೋ ಎಂದೇ ಭಾವಿಸಿಕೊಂಡಿದ್ದ ಚೀನೀ ಮಂದಿಗೆ ಫುಟ್ಬಾಲ್ ವಿಶ್ವಕಪ್‌ನ ವೇಳೆಗೆ ಮುಖಕ್ಕೆ ಮಾಸ್ಕು ಕೂಡ ಧರಿಸದೇ ಓಡಾಡುತ್ತಿರುವ ಮಂದಿಯನ್ನು ಕಂಡು ಕಿರಿಕಿರಿ ಎನಿಸಿರಲು ಸಾಕು. ವರ್ಷ-ವರ್ಷಗಳೇ ಉರುಳಿದರೂ ಇನ್ನೂ ತಾವು ಕೋವಿಡ್‌ನ ಆತಂಕದಲ್ಲೇ ಬದುಕಬೇಕಾಯ್ತಲ್ಲ, ಮನೆಯಿಂದ ಹೊರಬರಲೂ ಸರ್ಕಾರದ ಅನುಮತಿ ಕೇಳಬೇಕಾಯ್ತಲ್ಲ ಎಂದವರಿಗೆ ಅನಿಸಿರಲು ಸಾಕು. ಕೊನೆಗೂ ಜನ ಬೀದಿಗೆ ಬಂದರು. ಲಾಕ್ಡೌನ್ ತೆಗೆಯಿರಿ ಎಂಬ ಘೋಷಣೆ ಕೂಗಲಾರಂಭಿಸಿದರು. ಪ್ರತಿಭಟನೆಯ ಕಾವು ಹಬ್ಬಲು ತುಂಬ ಸಮಯ ತೆಗೆದುಕೊಳ್ಳಲಿಲ್ಲ. ಶಾಂಘಾಯ್ ನವೆಂಬರ್ 26ಕ್ಕೆ ಬೀದಿಗೆ ಬಂತು. 2020ರಲ್ಲಿ ಹಾಂಗ್ ಕಾಂಗ್‌ನ ಮಂದಿ ಸರ್ಕಾರದ ದಮನ ನೀತಿಯ ವಿರುದ್ಧ ಪ್ರತಿಭಟನೆಗೆ ಖಾಲಿ ಕಾಗದ ಬಳಸಿದ್ದರಲ್ಲ ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಯ್ತು. ಸರ್ಕಾರದ ವಿರುದ್ಧ ಘೋಷಣೆ ಇದ್ದರೆ ತಾನೇ ಜೈಲಿಗೆ ತಳ್ಳುವುದು? ಖಾಲಿಯ ಹಾಳೆಯನ್ನು ಅವರು ಏನೆಂದು ಗುರುತಿಸುತ್ತಾರೆ? ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಮರುದಿನವೇ ಭಾಗವಹಿಸಿದವರನ್ನು ಬಂಧಿಸಲುದ್ಯುಕ್ತವಾಯ್ತು. ಇದನ್ನು ಪ್ರತಿಭಟಿಸಿ ಬೀಜಿಂಗ್‌ನಲ್ಲಿ ಜನ ಬೀದಿಗಿಳಿದರು. ಪೀಕಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದರು. ಈ ಬಾರಿ ಇದು ಬರಿ ಲಾಕ್ಡೌನ್ ತೆಗೆಯಿರಿ ಎಂಬುದಷ್ಟಕ್ಕೇ ಸೀಮಿತವಾಗದೇ ಷಿ ಜಿಂಪಿಂಗ್ ಅನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಲಾಯ್ತು ಕೂಡ. ಇದು ಅಧಿಕಾರಕ್ಕೆ ಬಂದಾಗಿನಿಂದಲೂ ಷಿಯ ಪಾಲಿಗೆ ಬಲುದೊಡ್ಡ ಹೊಡೆತ. ಲಾಂಗ್‌ಜೊವರೆಗೂ ಪ್ರತಿಭಟನೆಗಳು ಹಬ್ಬಿ ಮೊದಲ ಬಾರಿಗೆ ಚೀನಾದ ದಮನ ನೀತಿಯನ್ನು ಮೀರಿ ಸುದ್ದಿ ಜಗತ್ತಿನ ಮೂಲೆ-ಮೂಲೆಗೂ ತಲುಪಿತು. ಪ್ರತಿಭಟನೆಯ ವೇಳೆಯೇ ಇದರ ವರದಿ ಮಾಡುತ್ತಿದ್ದ ಬಿಬಿಸಿಯ ವರದಿಗಾರ ಎಡ್ವರ್ಡ್ ಲಾರೆನ್ಸ್ ನನ್ನು ಪೊಲೀಸರು ಮನಸೋ ಇಚ್ಛೆ ಬಡಿದರಲ್ಲದೇ ಆತನನ್ನು ಬಂಧಿಸಿ ಎಳೆದೊಯ್ದರೂ ಕೂಡ. ಹಾಂಗ್ ಕಾಂಗ್ ಶಾಂತವಾಗಿ ಚೀನಿಯರ ನೋವಿಗೆ ಬೆಂಬಲ ಸೂಚಿಸಿತು. ‘ನನಗೆ ಸ್ವಾತಂತ್ರ್ಯ ಕೊಡು, ಇಲ್ಲವೇ ಕೊಂದುಬಿಡು’ ಎನ್ನುವ ಮಾತು ಎಲ್ಲೆಡೆ ಕೇಳಿಬಂತು! 

ಚೀನಾದ ಜನ ಎಲ್ಲ ದಬ್ಬಾಳಿಕೆಯನ್ನೂ ಸಹಿಸಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಅವರನ್ನು ಸ್ವಲ್ಪ ಭಡಕಾಯಿಸಿದರೆ ಸಾಕು ಅವರಿಂದ ಬೇಕಾದ್ದನ್ನು ಮಾಡಿಸಿಕೊಳ್ಳಬಹುದು ಎಂಬ ಪರಿಸ್ಥಿತಿ ಇರುವಾಗ, ಅವರು ಬೀದಿಗೆ ಬಂದಿದ್ದಾದರೂ ಹೇಗೆ ಮತ್ತು ಏಕೆ ಎಂಬ ಪ್ರಶ್ನೆ ಸಹಜವೇ. ಇದಕ್ಕೆ ಕರೋನಾ ಎಂಬ ಮಹಾಮಾರಿಯೇ ಕಾರಣ ಎಂದರೆ ಅಚ್ಚರಿಯಲ್ಲ. ಕರೋನಾ ಆರಂಭವಾದಾಗ ಜಿರೊ ಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ ಷಿ ಕಠೋರ ಕ್ರಮಗಳ ಮೂಲಕ ಜನರನ್ನು ಸಾಯದೇ ಉಳಿಸಿಕೊಂಡ. ಆರಂಭದಲ್ಲಿ ಜನ ಪ್ರತಿಭಟಿಸಿದರಾದರೂ ಕಾಲಕ್ರಮದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಉಂಟಾದ ಸಾವು ನೋವುಗಳನ್ನು ಕಂಡು, ತಮ್ಮ ಅಧ್ಯಕ್ಷರಿಗಿರುವ ಜನರ ಆರೋಗ್ಯದ ಕುರಿತ ಕಾಳಜಿಯನ್ನು ಕಂಡು ಅವರು ಮನಸೋತರು. ಚೀನಾದಲ್ಲಿ ಕೊವಿಡ್ ಸಾವು ಹೆಚ್ಚು-ಕಡಿಮೆ ನಗಣ್ಯವೇ ಆಗಿತ್ತು. ಆದರೆ ಈ ತಂತ್ರ ಜನರ ಬದುಕನ್ನು ಸುದೀರ್ಘಕಾಲ ದುರ್ಭರಗೊಳಿಸಿದಾಗ ಅವರು ತಿರುಗಿ ಬೀಳುವ ಸಾಧ್ಯತೆ ಇತ್ತಲ್ಲ ಅದನ್ನು ಗಾಲ್ವಾನ್‌ನಲ್ಲಿ ಸಾಹಸ ಮಾಡುವ ಮೂಲಕ ಮುಚ್ಚಿಕೊಳ್ಳುವ ಯತ್ನ ಮಾಡಿತು ಚೀನಾ. ಅವರ ದುರದೃಷ್ಟಕ್ಕೆ 40ಕ್ಕೂ ಹೆಚ್ಚು ಸೈನಿಕರನ್ನು ಕಳಕೊಂಡು ಮುಖಭಂಗ ಅನುಭವಿಸಿತು. ಆದರೆ ತಮ್ಮ ಜನರ ಮುಂದೆ ಯಾವ ಸೈನಿಕರೂ ತೀರಿಕೊಂಡಿಲ್ಲ ಎಂದು ಹೇಳುವ ಮೂಲಕ ಮಾನವುಳಿಸಿಕೊಳ್ಳುವ ಯತ್ನ ಮಾಡಿತ್ತು. ಈ ವೇಳೆಗೆ ಎವರ್‌ಗ್ರ್ಯಾಂಡ್ ಎಂಬ ರಿಯಲ್ ಎಸ್ಟೇಟ್ ಕಂಪೆನಿಯೊಂದು ಬೀದಿಗೆ ಬಂದು ಚೀನಾದ ಮೇಲ್ಮಧ್ಯಮ ಮತ್ತು ಮಧ್ಯಮವರ್ಗದ ಮಂದಿ ಕಣ್ಣೀರಿಡುವಂತಾಯ್ತು. ಕರೋನಾಕ್ಕಿಂತ ಮುಂಚೆ ಜನರಿಂದ ಮತ್ತು ಅನೇಕ ಬ್ಯಾಂಕುಗಳಿಂದ ಸಾಕಷ್ಟು ಸಾಲಪಡೆದು ಅಗಾಧವಾಗಿ ಬೆಳೆದುನಿಂತ ಎವರ್ ಗ್ರ್ಯಾಂಡ್ 200 ನಗರಗಳಲ್ಲಿ ಆಸ್ತಿಯನ್ನು ಮಾಡಿತು. ತನ್ನ ಶೇರುದಾರರಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಟ್ಟು ಭರವಸೆ ಮೂಡಿಸಿತು. ಕರೋನಾ ಲಾಕ್ಡೌನಿನ ನಂತರ ಮನೆಗಳ ಮಾರಾಟ ತೀವ್ರ ಪ್ರಮಾಣದಲ್ಲಿ ಕಡಿಮೆಯಾಯ್ತಲ್ಲ ಕಂಪೆನಿ ಸಾಕಷ್ಟು ನಷ್ಟ ಅನುಭವಿಸಿತು. ಚೀನಾದ ಬ್ಯಾಂಕುಗಳಿಂದ ಸಾಲ ಪಡೆಯಬಹುದಾದ ಮಿತಿಯನ್ನು ದಾಟಿದ್ದರಿಂದ ಅದಕ್ಕೀಗ ಹಣಕಾಸಿನ ಮುಗ್ಗಟ್ಟು ಕಂಡುಬಂತು. ಹೂಡಿಕೆದಾರರಿಗೆ ಕೊಡಬೇಕಾಗಿದ್ದ ಹಣದ ಬದಲು ಅರೆನಿರ್ಮಿತ ಮನೆಗಳನ್ನು ನೀಡಲಾರಂಭಿಸಿತು. ಹಣವೇ ಬೇಕು ಎಂದವರ ಮುಂದೆ ಕೈಚೆಲ್ಲಿ ನಿಂತುಬಿಟ್ಟಿತು. ಶೆನ್‌ಜೆನ್‌ನಲ್ಲಿ ಮುಖ್ಯ ಕಛೇರಿಯ ಎದುರಿಗೆ ದೊಡ್ಡಮಟ್ಟದ ಜನ ಬೀದಿಗೆ ಬಂದುನಿಂತರು. ಈ ಕಂಪೆನಿಯ ಒಟ್ಟು ಸಾಲ ಎಷ್ಟಿತ್ತು ಗೊತ್ತೇನು? ಒಂದು ಅಂದಾಜಿನ ಪ್ರಕಾರ 88 ಬಿಲಿಯನ್ ಡಾಲರ್ಗಳಷ್ಟು! ಕಳೆದ ಜೂನ್ ತಿಂಗಳಿಗೆ ಕಟ್ಟಬೇಕಿದ್ದ ಬಡ್ಡಿಯೇ 80 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚಿತ್ತು. ಎವರ್ ಗ್ರ್ಯಾಂಡ್ ನ ಈ ಪರಿಸ್ಥಿತಿಯಿಂದಾಗಿ ಚೀನಾದಲ್ಲಿ ಒಟ್ಟಾರೆ ಮನೆಗಳ ಬೆಲೆಯೇ ಶೇಕಡಾ 20ರಷ್ಟು ಕುಸಿಯಿತು. ಎಲ್ಲ ರಿಯಲ್ ಎಸ್ಟೆಟ್ ಕಂಪೆನಿಗಳ ಶೇರು ಮೌಲ್ಯ ಪಾತಾಳಕ್ಕೆ ಹೋಯ್ತು. ಎಲ್ಲಕ್ಕಿಂತ ದೊಡ್ಡ ನಷ್ಟ ಅನುಭವಿಸಿದ್ದು ತಮ್ಮೆಲ್ಲ ಬದುಕಿನ ಹಣವನ್ನು ಈ ಕಂಪೆನಿಯೊಳಗೆ ಹೂಡಿದ್ದ ದೊಡ್ಡಮಟ್ಟದ ಮಧ್ಯಮವರ್ಗದ ಮಂದಿ!

ಚೀನಾದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಅದರ ಸಾಲ 8 ಟ್ರಿಲಿಯನ್ ಡಾಲರುಗಳಷ್ಟಾಗಿತ್ತು. ಒನ್ ಬೆಲ್ಟ್ ಒನ್ ರೋಡ್ ನೆಪದಲ್ಲಿ ಅದರ ಒಂದು ಟ್ರಿಲಿಯನ್ ಡಾಲರ್ ನಷ್ಟು ಹಣ ಸಿಕ್ಕುಹಾಕಿಕೊಂಡು ಕೂತಿತ್ತು. ಕರೋನಾ ನಂತರ ಪಶ್ಚಿಮದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದರಿಂದ ಮತ್ತಷ್ಟು ಹೊಡೆತ ಬಿದ್ದಿತ್ತು. ಇತ್ತ ಗಡಿಯಲ್ಲಿ ಭಾರತದೊಂದಿಗೆ ಖ್ಯಾತೆ ತೆಗೆದು ತನ್ನ ಸೈನಿಕರನ್ನು ಕರೆತಂದು ನಿಲ್ಲಿಸಿಕೊಂಡಿತ್ತಲ್ಲ, ಭಾರತವೂ ಈ ಬಾರಿ ಅಷ್ಟೇ ಗಟ್ಟಿಯಾಗಿ ತಳವೂರಿದ್ದರಿಂದ ಸೈನ್ಯದ ಖರ್ಚು-ವೆಚ್ಚವೂ ಊಹಿಸಲಾರದಷ್ಟಾಗಿತ್ತು. ಒಂದೆಡೆ ಕ್ಷಾಮ ಮತ್ತೊಂದೆಡೆ ಪ್ರವಾಹ, ಧಾನ್ಯ ದಾಸ್ತಾನನ್ನು ಶೇಕಡಾ 50ರಷ್ಟು ತಿಂದುಹಾಕಿತ್ತು. ಒಂದೆಡೆ ಕುಸಿಯುತ್ತಿರುವ ಕೈಗಾರಿಕೆ ಉತ್ಪನ್ನಗಳು, ಮತ್ತೊಂದೆಡೆ ಏರುತ್ತಿರುವ ನಿರುದ್ಯೋಗ ಚೀನಾವನ್ನು ಒಳಗಿಂದೊಳಗೇ ತಿನ್ನುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ತನ್ನ ಅವಧಿ ವಿಸ್ತಾರವನ್ನು ದೃಢಪಡಿಸಿಕೊಂಡ ಷಿ ಮತ್ತೆ ಜಿರೊಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ. ಮೊದಲ ಬಾರಿಗೆ ಈ ನೀತಿಯಿಂದಾಗಿ ಲಕ್ಷಾಂತರ ಮಂದಿಯ ಜೀವ ಉಳಿದಿರುವುದನ್ನು ಜನ ಮೆಚ್ಚಿದ್ದರು. ಆದರೆ ಈಗ ಜಗತ್ತೆಲ್ಲ ತಮ್ಮ ಚಟುವಟಿಕೆಗೆ ಮರಳಿರುವಾಗ ತಾವಿನ್ನು ಮನೆಗಳಲ್ಲಿ ತಮ್ಮ ತಾವು ಬಂಧಿಸಿಕೊಂಡು ಕುಳಿತಿರುವುದನ್ನು ಚೀನಿಯರಿಂದ ಸಹಿಸಲಾಗಲಿಲ್ಲ. ಶೂನ್ಯ ಕೋವಿಡ್ ಎಂಬುದೊಂದು ಕಟ್ಟುಕಥೆ ಎಂದು ಜಗತ್ತಿನ ವಿಜ್ಞಾನಿಗಳೆಲ್ಲ ಹೇಳುತ್ತಿರುವುದು ಈಗ ಅವರಿಗೆ ಸತ್ಯವೆನಿಸುತ್ತಿದೆ. ಡಾ. ಪಾಲ್ ಹಂಟರ್ ಚೀನಾದ ಕೊವಿಡ್ ಲಸಿಕೆ ಪ್ರಭಾವಿಯಾಗಿಲ್ಲ ಎಂದು ಹಿಂದೆಯೇ ಹೇಳಿದ್ದು ಈಗ ಸತ್ಯವೆನಿಸುತ್ತಿದೆ. ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪ್ರೊ. ದೇವಿಶ್ರೀಧರ್ ’80 ದಾಟಿರುವ ಚೀನಾದ ವೃದ್ಧರಲ್ಲಿ ಶೇಕಡಾ 40 ಮಂದಿಗೆ ಮಾತ್ರ ಬೂಸ್ಟರ್ ಲಸಿಕೆ ದೊರೆತಿರುವುದರಿಂದ ಭವಿಷ್ಯದ ದಿನಗಳು ಭಯಾನಕವಾಗಿದೆ’ ಎಂದಿದ್ದರಲ್ಲದೇ ಮಿಲಿಯನ್ಗಟ್ಟಲೆ ಮಂದಿ ಚೀನಾದಲ್ಲಿ ಇದುವರೆಗೂ ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎಂದೂ ಎಚ್ಚರಿಸಿದ್ದರು. ಲಾಕ್ಡೌನಿನಲ್ಲಿ ಇದ್ದಷ್ಟೂ ದಿನ ವೈರಸ್‌ಗೆ ಅವರು ತಮ್ಮತಾವು ತೆರೆದುಕೊಂಡಿರಲಿಲ್ಲ. ಈಗ ಮನೆಯಿಂದ ಹೊರಬರುತ್ತಿದ್ದಂತೆ ಮತ್ತೆ ವೈರಸ್ ಆಕ್ರಮಿಸಿಕೊಳ್ಳುತ್ತಿದೆ. ಆಹಾರ ದಾಸ್ತಾನು ಕಡಿಮೆ ಇರುವುದರಿಂದ ಈ ಬಾರಿಯ ನಿರ್ವಹಣೆ ಅಷ್ಟು ಸುಲಭವಾಗಿಲ್ಲ. ಮೊದಲ ಬಾರಿ ಕೊವಿಡ್ ಬಂದಾಗಲೇ ಪ್ರತಿಯೊಬ್ಬ ವ್ಯಕ್ತಿಯ ಹೆಸರಲ್ಲೂ ಕ್ಯುಆರ್ ಕೋಡ್ ಜನರೇಟ್ ಮಾಡಲಾಗಿತ್ತು. ಅದು ನಮ್ಮ ಆರೋಗ್ಯ ಸೇತು ಆ್ಯಪ್‌ಗಿಂತಲೂ ಭಿನ್ನವಾದ್ದು. ಮಾಲ್‌ಗೆ ಹೋಗಬೇಕಾಗಲೀ ಅಥವಾ ರೈಲು ಹತ್ತಿ ಪಕ್ಕದೂರಿಗಾದರೂ ಸರಿ ಎಲ್ಲೆಡೆ ಬಾಗಿಲು ತೆರೆದುಕೊಳ್ಳಬೇಕೆಂದರೆ ಕ್ಯುಆರ್ ಕೋಡ್ ಅನ್ನು ಯಂತ್ರಕ್ಕೆ ಹಿಡಿಯಲೇಬೇಕು. ಅಲ್ಲೇನಾದರೂ ಬಣ್ಣ ಕೆಂಪು ಬಂತೆಂದರೆ ಆ ಬಾಗಿಲು ನಿಮಗೆ ತೆರೆಯಲ್ಪಡುವುದೇ ಇಲ್ಲ. ಬದಲಿಗೆ ಅದು ಜೋರಾಗಿ ಸದ್ದು ಮಾಡಿ, ನಿಮ್ಮಿಂದ ಇತರರು ದೂರ ಓಡುವಂತೆ ಮಾಡುತ್ತದಲ್ಲದೇ ಕೊವಿಡ್ ಪೊಲೀಸರು ಬಂದು ನಿಮ್ಮನ್ನು ಬಂಧಿಸಲು ಅನುಕೂಲ ಮಾಡಿಕೊಡುತ್ತದೆ. ಒಮ್ಮೆ ಅವರು ಬಂಧಿಸಿದರೆಂದರೆ ನೀವು ಮುಂದಿನ ಒಂದು ತಿಂಗಳ ಕಾಲ ಅಥವಾ ಕ್ಯುಆರ್ ಕೋಡ್ ನಲ್ಲಿ ಬಣ್ಣ ಹಸಿರಿಗೆ ತಿರುಗುವವರೆಗೂ ನರಕ ಯಾತನೆ ಅನುಭವಿಸಲೇಬೇಕು. ಇನ್ನೂ ವಿಚಿತ್ರವೇನು ಗೊತ್ತೇ? ನಿಮಗೆ ಅರಿವಿಲ್ಲದೇ ಕ್ಯುಆರ್ ಕೋಡ್ ನಲ್ಲಿ ಕೆಂಪು ಬಣ್ಣ ಇದ್ದವನೊಂದಿಗೆ ನೀವು ಹತ್ತು ನಿಮಿಷ ಮಾತನಾಡಿದರೂ ನಿಮ್ಮ ಕ್ಯುಆರ್ ಕೋಡ್ ಕೆಂಪು ಬಣ್ಣಕ್ಕೆ ತಿರುಗಿಬಿಡುತ್ತದೆ. ಅಲ್ಲಿಗೆ ನೀವು ಸತ್ತಂತೆ. ಹೀಗಾಗಿಯೇ ಒಬ್ಬರ ಕ್ಯುಆರ್ ಕೋಡ್ ಕೆಂಪಾಗಿದೆ ಎಂಬ ಸದ್ದು ಬಂದೊಡನೆ ಉಳಿದ ಮಂದಿ ಅವನಿಂದ ದೂರವೋಡಲಾರಂಭಿಸುತ್ತಾರೆ. ಹೆಚ್ಐವಿ ಎನ್ನುವುದರ ಕುರಿತಂತೆ ತಪ್ಪು ಕಲ್ಪನೆಗಳಿದ್ದಾಗಲೂ ಭಾರತದಲ್ಲಿ ಮಂದಿ ಹೀಗೆ ನಡೆದುಕೊಂಡಿರಲಿಲ್ಲ. ಚೀನಾದಲ್ಲಿ ಜನರ ಆಕ್ರೋಶ ಈ ಕಾರಣಕ್ಕಾಗಿ ದಿನೇ ದಿನೇ ಹೆಚ್ಚುತ್ತಿದೆ!

ಜನ ಬೀದಿಗೆ ಬರಲು ಕಾರಣ ಇದೇ. ಇನ್ನೂ ಅಚ್ಚರಿಯ ಸಂಗತಿ ಏನು ಗೊತ್ತೇ? ಸರ್ಕಾರ ತನ್ನ ಬಳಿಯಿರುವ ಡಾಟಾ ಬಳಸಿ ತನ್ನ ವಿರೋಧಿಯ ಕ್ಯುಆರ್ ಕೋಡ್ ಕೆಂಪಾಗುವಂತೆ ಸಲೀಸಾಗಿ ಮಾಡಿಬಿಡಬಲ್ಲದು. ಅಲ್ಲಿಗೆ ನಿಮ್ಮನ್ನು ಕೊಲ್ಲಬೇಕೆಂದು ಷಿ ನಿಶ್ಚಯಿಸಿದರೆ ಆತನ ಪಾಲಿಗೆ ಅದು ಕಂಪ್ಯೂಟರ್ನಲ್ಲಿ ಒಂದು ಕ್ಲಿಕ್ ಮಾತ್ರ! 

ಯಾವುದಕ್ಕೂ ಮಣಿಯದ ಚೀನೀ ಆಡಳಿತ ಪಡೆ ಮೊದಲ ಬಾರಿಗೆ ಕೊವಿಡ್ ನಿಯಮಗಳನ್ನು ಸಡಿಲಗೊಳಿಸುವ ಮಾತನಾಡುತ್ತಿದೆ. ಹಾಗೇನಾದರೂ ಆತ ಪೂರ್ಣ ಸಡಿಲಿಸಿದ್ದೇ ಆದರೆ ಕನಿಷ್ಠ ಪಕ್ಷ ಎರಡು ಮಿಲಿಯನ್ ಮಂದಿ ಅದಕ್ಕೆ ಆಹುತಿಯಾಗಲಿದ್ದಾರೆ ಎಂಬ ಆತಂಕವನ್ನು ಜಗತ್ತು ವ್ಯಕ್ತಪಡಿಸುತ್ತಿದೆ. ಏನಾಗುವುದೆಂದು ಕಾದು ನೋಡಬೇಕಷ್ಟೇ! ಜನರ ಗಮನವನ್ನು ಆತನಿಗೆ ಬೇರೆಡೆ ಸೆಳೆಯಲು ಇರುವುದೊಂದೇ ಮಾರ್ಗ. ಯಾರೊಂದಿಗಾದರೂ ಕಾಲು ಕೆರಕೊಂಡು ಜಗಳಕ್ಕೆ ಹೋಗಬೇಕು. ಚೀನೀ ಜನರ ಭಾವನೆಯನ್ನು ಕೆರೆಯಬೇಕು. ಅದಾಗಲೇ ಗಾಲ್ವಾನಿನಲ್ಲಿ ಭಾರತ ಸರಿಯಾದ ತಪರಾಕಿ ಕೊಟ್ಟಿದೆ. ಜಪಾನ್ ರಕ್ಷಣಾ ಬಜೆಟ್ ಅನ್ನು ದುಪ್ಪಟ್ಟುಗೊಳಿಸಿದೆ. ಇನ್ನು ಅದಕ್ಕಿರುವುದು ತೈವಾನ್ ಒಂದೇ. ಮುಂದಿನ ದಿನಗಳಲ್ಲಿ ನಾವು ತೈವಾನ್ನತ್ತ ಏರಿಹೋಗುವ ಅಥವಾ ಆಂತರಿಕವಾಗಿ ಕುಸಿದುಹೋಗುವ ಚೀನಾ ನೋಡಬಹುದೆನಿಸುತ್ತದೆ! 

ಅಂದಹಾಗೆ, ಇವೆಲ್ಲದರ ನಡುವೆ ಕಾಣೆಯಾಗಿರುವುದು ಮಾತ್ರ ಸಿದ್ದರಾಮಯ್ಯನವರು..

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ಪ್ರಿಯ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಪ್ರೀತಿಯ ನಮಸ್ಕಾರ.

ಸೈದ್ಧಾಂತಿಕವಾಗಿ ನಾವು ಕಿತ್ತಾಡಬಹುದು. ವೈಚಾರಿಕ ಮತ ಭೇದ ಖಂಡಿತ ಇದ್ದಿರಬಹುದು. ಕೆಲವೊಮ್ಮೆ ಹದ ಮೀರಿ ಕಾಲೆಳೆದಿರಬಹುದು, ಅಪಹಾಸ್ಯವನ್ನೂ ಮಾಡಿರಬಹುದು. ಆದರೆ ದೇಶದ ವಿಚಾರ ಬಂದಾಗ ಮಾತ್ರ ನಮ್ಮಲ್ಲಿ ಮತ ಭೇದ ಇರುವಂತಿಲ್ಲ. ರಾಷ್ಟ್ರ ನನಗಿಂತಲೂ, ಒಂದು ಪರಿವಾರಕ್ಕಿಂತಲೂ, ಒಂದು ಊರಿಗಿಂತಲೂ ಬಲು ದೊಡ್ಡದ್ದು. ಹೀಗಾಗಿಯೇ ಬಲುಮುಖ್ಯವಾದ ಕೆಲವು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲೆಂದು ಈ ಪತ್ರ. 

ಅನೇಕ ಸಂಗತಿಗಳ ಕುರಿತಂತೆ ನಾವು ನಿಮ್ಮನ್ನು ವಿರೋಧಿಸುವುದಿದೆ. ಸರದಾರ್ ಪಟೇಲರಿಂದ ಅಧಿಕಾರವನ್ನು ಕಸಿದುಕೊಂಡ ಜವಾಹರ್‌ಲಾಲ್ ನೆಹರೂ ಬಗ್ಗೆ ಬೇಸರವಿದೆ. ಆದರೆ ನಾವದನ್ನು ಮರೆತಿದ್ದೇವೆ. ಇಂದಿರಾ ಬಾಬಾಸಾಹೇಬ್ ಅಂಬೇಡ್ಕರ್‌ರ ಸಂವಿಧಾನವನ್ನು ಗಾಳಿಗೆ ತೂರಿ ಎಲ್ಲ ಸ್ವಾತಂತ್ರ್ಯವನ್ನು ಕಸಿಯುವ ತುರ್ತು ಪರಿಸ್ಥಿತಿಯನ್ನು ಹೇರಿ ಭಾರತದ ಇತಿಹಾಸದಲ್ಲೊಂದು ಆರದ ಗಾಯವನ್ನು ಮಾಡಿಬಿಟ್ಟರಲ್ಲ, ನಾವದನ್ನು ನೆನಪಿಸಿಕೊಳ್ಳುವುದಿಲ್ಲ. ಇಂದಿರಾ ತೀರಿಕೊಂಡಾಗ ಸಿಖ್ಖರ ಹತ್ಯೆಯನ್ನು ನೀವೆಲ್ಲ ಸೇರಿ ಮಾಡಿದ್ದಿರಲ್ಲ, ಆ ಕುರಿತು ಸಿಖ್ಖರ ಕಣ್ಣೀರೇ ಇಂಗಿಹೋಗಿಬಿಟ್ಟಿದೆ, ಇನ್ನು ನಮ್ಮದೇನು ಲೆಕ್ಕ! ವಿಷಯ ಬಂತೆಂದೆ ನೆನಪಿಸಿಬಿಡುತ್ತೇನೆ. ಗೋಡ್ಸೆ ಗಾಂಧಿಯವರ ಹತ್ಯೆ ಮಾಡಿದ ಎಂಬ ಕಾರಣಕ್ಕೆ ಚಿತ್ಪಾವನ ಬ್ರಾಹ್ಮಣರನ್ನು ಅಟ್ಟಾಡಿಸಿ ಕೊಂದಿರಲ್ಲ, ಪಾಪ ಆ ಮಂದಿಯೂ ಅದನ್ನು ಮರೆತು ನೀವು ಅಪ್ಪಿ-ತಪ್ಪಿ ‘ಭಾರತ್ ಮಾತಾ ಕಿ’ ಎಂದರೆ ‘ಜೈ’ ಎಂದು ದನಿಗೂಡಿಸುತ್ತಾರೆ. ಬಿಡಿ, ಈ ದೇಶದವರೇ ಅಲ್ಲದ ಸೋನಿಯಾ ಪ್ರಧಾನಿಯಾಗಲೆಂದು ನೀವೆಲ್ಲ ಹಠ ಹಿಡಿದು ಕುಳಿತಿರಿ. ಆಕೆಯ ಮಗ ರಾಹುಲ್ ಇತ್ತೀಚೆಗೆ ಭಾರತ್ ಜೊಡೊ ಯಾತ್ರೆಯಲ್ಲಿ ಭಾರತವನ್ನು ತುಂಡರಿಸುವ ಸಂಕಲ್ಪಗೈದವರನ್ನೆಲ್ಲ ಜೊತೆಗೂಡಿಸಿಕೊಂಡು ನಡೆದ. ‘ಪಾಂಡವರಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡುತ್ತಿದ್ದರೇನು?’ ಎಂದಾತ ಪ್ರಶ್ನಿಸುವಾಗ ಯಾವುದೋ ಹಳ್ಳಿಯ ಮೂರನೇ ತರಗತಿಯ ಮಗುವನ್ನು ಮಾತನಾಡಿಸುತ್ತಿದ್ದೇವೇನೋ ಎನಿಸಿಬಿಡುತ್ತದೆ. ಆತನನ್ನೇ ಪ್ರಧಾನಿ ಮಾಡೋಣ ಎಂದು ನೀವಂದಾಗ ಪ್ರಜಾಪ್ರಭುತ್ವದ ಮರ್ಯಾದೆ ಕಾಪಾಡಲು ನಾವು ನಕ್ಕು ಸುಮ್ಮನಾಗಿಬಿಡುತ್ತೇವೆ. ಇನ್ನು ಈ ಪರಿವಾರದ ಅಳಿಯ ಎಂಬ ಒಂದೇ ಕಾರಣಕ್ಕೆ ರಾಬರ್ಟ್ ವಾದ್ರಾ ಪಡೆದ ಸವಲತ್ತು, ತೋರುವ ಧಿಮಾಕು ನೀವು ನೋಡಿದ್ದೀರಲ್ಲ, ಅದನ್ನೂ ನಾವು ಮನಸ್ಸಿನಲ್ಲಿಟ್ಟುಕೊಂಡಿಲ್ಲ ಏಕೆಂದರೆ ಇವರೆಲ್ಲರೂ ನಾಳೆ ತಮ್ಮದ್ದೇ ಒಂದು ದೇಶಕ್ಕೆ ಮರಳಿಬಿಡಬಲ್ಲರು. ನಾನು, ನೀವು ಇಲ್ಲಿಯೇ ಇರಬೇಕು. ಇದು ನಮ್ಮ ಪೂರ್ವಜರು ಜತನದಿಂದ ಕಟ್ಟಿದ ದೇಶ. ಇದು ಬೆಳೆದಷ್ಟೂ ಲಾಭವುಣ್ಣುವವರು ನಾವಷ್ಟೇ ಅಲ್ಲ, ಇಡಿಯ ಜಗತ್ತು. 

ಈಗೇಕೆ ಧಾವಂತದಿಂದ ಈ ಪತ್ರವೆಂದರೆ ಜಾರ್ಜ್ ಸೊರೊಸ್ ಇತ್ತೀಚೆಗಷ್ಟೇ ಮ್ಯುನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ನಲ್ಲಿ ಭಾರತದ ವಿರುದ್ಧ ಗುಟುರು ಹಾಕಿದ್ದಾನೆ, ‘ಮೋದಿ ಮತ್ತು ಅದಾನಿ ಇಬ್ಬರೂ ಆತ್ಮೀಯರು. ಅದಾನಿಯ ಕಂಪನಿ ಸ್ಟಾಕ್ ಮಾರುಕಟ್ಟೆಯಿಂದ ಹಣ ಕ್ರೋಢೀಕರಿಸಲು ಹೋಗಿ ಸೋತಿದೆ. ಆತ ಸ್ಟಾಕ್ಗಳ ಏರುಪೇರಿಗೆ ಕಾರಣನಾದವ. ಈ ವಿಷಯದಲ್ಲಿ ಮೋದಿ ಸುಮ್ಮನಿದ್ದಾರೆ. ಅವರು ವಿದೇಶದ ಹೂಡಿಕೆದಾರರಿಗೆ ಮತ್ತು ತಮ್ಮ ಸಂಸತ್ತಿಗೆ ಉತ್ತರ ಕೊಡಬೇಕಿದೆ’ ಎಂದಿದ್ದಾನಲ್ಲದೇ ಪ್ರಜಾಪ್ರಭುತ್ವವನ್ನು ಉಳಿಸಲಿಕ್ಕಾಗಿ ಭಾರತದಲ್ಲಿ ಸರ್ಕಾರವನ್ನು ಬೇಕಿದ್ದರೂ ಬದಲಾಯಿಸಬಲ್ಲೆ ಎಂಬ ಹೇಳಿಕೆ ಕೊಟ್ಟಿದ್ದಾನೆ. ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಕೂಡ ರಾಷ್ಟ್ರೀಯವಾದಿ ನಾಯಕರನ್ನು ಕಿತ್ತುಬಿಸುಟಲು ತಾನು ಹಣ ಹೂಡುವುದಾಗಿ ದರ್ಪದಿಂದಲೇ ಹೇಳಿದ್ದ. ಆತನ ದೃಷ್ಟಿ ನರೇಂದ್ರಮೋದಿಯವರತ್ತಲೇ ನೆಟ್ಟಿತೆಂಬುದು ಎಂಥವನಿಗೂ ಅರಿವಾಗುವಂತಿತ್ತು. 

ಅದರಲ್ಲೇನು ಮಹಾ? ಅನೇಕರು ರಾಷ್ಟ್ರದ ಪ್ರಮುಖರನ್ನು ಬದಿಗೆ ಸರಿಸಿ ಮತ್ತೊಬ್ಬರನ್ನು ಕೂರಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ಭಾರತದಲ್ಲಿ 28 ಪಕ್ಷಗಳು ಒಟ್ಟಾಗಿ ಮೋದಿಯನ್ನು ಕೆಳಗಿಳಿಸಿ ತಾವುಗಳೇ ಪ್ರಧಾನಿಯಾಗಲು ಹಾತೊರೆಯುತ್ತಿದ್ದಾರೆ. ಜಾರ್ಜ್ ಸೊರೊಸ್‌ದೇನು ವಿಶೇಷ? ಗಮನಿಸಬೇಕಾಗಿರುವ ಸಂಗತಿ ಇರುವುದೇ ಇಲ್ಲಿ. ಹಂಗೇರಿಯಲ್ಲಿ ಹುಟ್ಟಿದ ಸೊರೊಸ್ ಮೂಲತಃ ಯಹೂದಿ ಕುಟುಂಬಕ್ಕೆ ಸೇರಿದವ. ಆದರೆ ನಾಜಿಗಳ ಒತ್ತಡ ತೀವ್ರವಾದಾಗ ತನ್ನ ತಾನು ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡು ನಾಜಿಗಳೊಂದಿಗೆ ಕಪಟವಾಡಿಕೊಂಡು ಇದ್ದುಬಿಟ್ಟ. ಓರಗೆಯ ಅನೇಕ ಯಹೂದಿಗಳನ್ನು ನಾಜಿಗಳಿಗೆ ಗುರುತಿಸಲು ಸಹಾಯ ಮಾಡಿದವ ಈತನೇ ಎಂದು ಆರೋಪಿಸಲಾಗುತ್ತದೆ. ತಾನು ನೀಡಿದ ಸಂದರ್ಶನವೊಂದರಲ್ಲಿ ಆತ ಇದನ್ನು ಪರಿಪೂರ್ಣವಾಗಿ ಏನೂ ಅಲ್ಲಗಳೆದಿಲ್ಲ. ಯಹೂದಿಗಳ ಮೇಲಿನ ಅಂದಿನ ಆಕ್ರೋಶ ಅವನಿಗೆ ಇಂದೂ ತೀರಿದಂತೆ ಕಾಣುವುದಿಲ್ಲ. ಹೀಗಾಗಿ ಇಸ್ರೇಲ್ ರಾಷ್ಟ್ರವಾಗಬೇಕು ಎಂದು ಬಯಸುತ್ತಾನಾದರೂ ಅಲ್ಲಿಯೂ ರಾಷ್ಟ್ರವಾದ ಉಳಿಯಬಾರದು ಎಂದು ತನ್ನದ್ದೇ ವಾದ ಮಂಡಿಸುತ್ತಾನೆ. 1956ರಲ್ಲಿ ಉದ್ಯೋಗವರಸಿಕೊಂಡು ನ್ಯೂಯಾರ್ಕಿಗೆ ಬಂದ ಸೊರೊಸ್ ಕಡು ಕಷ್ಟದಿಂದಲೇ ಮೇಲೇರಿದವ. ತನ್ನ ವ್ಯಾಪಾರಿ ಚಾಕಚಕ್ಯತೆಯನ್ನು ಬಳಸಿಕೊಂಡು ಶೇರು ಮಾರುಕಟ್ಟೆಯಲ್ಲಿ ಹಣಹೂಡುವ ಧಂಧೆ ಆರಂಭಿಸಿದ. ಡಬಲ್ ಈಗಲ್, ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ ಕಂಪನಿಗಳು ಅವನದ್ದೇ. ಆತ ಅಮೇರಿಕಾದ ಇತಿಹಾಸದಲ್ಲೇ ಒಬ್ಬ ಯಶಸ್ವೀ ಹೂಡಿಕೆದಾರ ಎಂಬ ಹೆಸರು ಮಾಡಿದ್ದಾನೆ. ನೂರು ಹರ್ಷದ್ ಮೆಹ್ತಾಗಳನ್ನು ಹಾಕಿದರೆ ಒಬ್ಬ ಸೊರೊಸ್ ಹುಟ್ಟಬಹುದೇನೋ! ಸೊರೊಸ್ ಎಷ್ಟು ಸವಾಲುಗಳನ್ನು ಮೈಮೇಲೆಳೆದುಕೊಂಡನೆಂದರೆ ಅಷ್ಟೇ ವೇಗವಾಗಿ ತನ್ನ ಕಂಪನಿಯ ಮೌಲ್ಯವನ್ನೂ ವರ್ಧಿಸುತ್ತಾ ಹೋದ. ಅನೇಕ ರಾಷ್ಟ್ರಗಳು ಆತನನ್ನು ಕ್ರಿಮಿನಲ್ನಂತೆ ಕಾಣುತ್ತವೆ. 1992ರಲ್ಲಿ ಆತ ಬ್ರಿಟೀಷ್ ಸ್ಟಾಕ್ ಮಾರುಕಟ್ಟೆಯಲ್ಲಿ ತಾನು ಹೂಡಿದ್ದ 10 ಬಿಲಿಯನ್ ಡಾಲರ್‌ಗಳನ್ನು ಏಕಾಕಿ ತೆಗೆದು ಇಡಿಯ ಮಾರುಕಟ್ಟೆ ಕುಸಿಯುವಂತೆ ಮಾಡಿಬಿಟ್ಟಿದ್ದ. ಅಲ್ಲಿನ ಬ್ಯಾಂಕುಗಳು ಪತರಗುಟ್ಟಿಹೋಗಿದ್ದವು. ಬ್ರಿಟೀಷ್ ಪೌಂಡು ನೋಡನೋಡುತ್ತಲೇ ಕುಸಿದುಹೋಯ್ತು. ಕುಳಿತಲ್ಲೇ ಸೊರೊಸ್ ಒಂದು ಶತಕೋಟಿ ಅಮೇರಿಕನ್ ಡಾಲರ್ಗಳನ್ನು ಸಂಪಾದಿಸಿಬಿಟ್ಟ. ಇಂಗ್ಲೆಂಡಿನ ಬ್ಯಾಂಕು ಮುರಿದವ ಎಂದೇ ಆತನಿಗೆ ಹೆಸರು. 

1997ರಲ್ಲಿ ಏಷ್ಯಾದಲ್ಲಿ ಆರ್ಥಿಕ ಸಮಸ್ಯೆ ಎದುರಾಯ್ತಲ್ಲ, ಅದರ ಹಿಂದೆ ಇದ್ದ ದೊಡ್ಡ ಕೈ ಸೊರೊಸ್‌ನದ್ದೇ. ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾಗಳಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಮಂದಿ ಈ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾದರು. ಅಷ್ಟೂ ಜನರ ರಕ್ತ ಮೆತ್ತಿಕೊಂಡಿರುವುದು ಸೊರೊಸ್ನ ಕೈಗೇ! ಮಲೇಷಿಯಾದ ಪ್ರಧಾನಮಂತ್ರಿ ಮಹತಿರ್ ಮೊಹಮ್ಮದ್ ಆ ರಾಷ್ಟ್ರದ ಕರೆನ್ಸಿ ಕುಸಿಯಲು ಕಾರಣ ಸೊರೊಸ್ ಎಂದೇ ಆರೋಪಿಸುತ್ತಾರೆ. 1988ರಲ್ಲಿ ಫ್ರಾನ್ಸ್ ನಲ್ಲಿ ಸ್ಟಾಕ್ ಮಾರುಕಟ್ಟೆ ಏರುಪೇರಾಗಲು ಸೊರೊಸ್ ಕಾರಣನಾಗಿದ್ದ ಎಂಬುದಕ್ಕೆ ಅಲ್ಲಿನ ನ್ಯಾಯಾಲಯ 2002ರ ಡಿಸೆಂಬರ್ನಲ್ಲಿ ಆತನಿಗೆ 29 ಲಕ್ಷ ಡಾಲರ್ಗಳ ದಂಡ ವಿಧಿಸಿತ್ತು. ಕಾಲಕ್ರಮದಲ್ಲಿ ಆತನ ಕಂಪನಿ ಇತರರಿಂದ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಿತು. ಈ ವೇಳೆಗಾಗಲೆ ಅನೇಕ ರಾಷ್ಟ್ರಗಳೊಂದಿಗೆ ಆಟವಾಡಿದ ಸೊರೊಸ್ ತಾನೇ ಬಿಲಿಯನೇರ್ ಆಗಿಬಿಟ್ಟಿದ್ದ. ತಾನು ಮಾಡಿದ ಯಾವ ಕೆಲಸಕ್ಕೂ ಪಶ್ಚಾತ್ತಾಪ ಪಡಬೇಕಿಲ್ಲ ಎಂಬುದೇ ಆತನ ವಾದವಾಗಿತ್ತು. ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ರಷ್ಯಾ ಇಲ್ಲಿನ ಆರ್ಥಿಕತೆ ಕುಸಿಯಲು ಕಾರಣವಾಗಿದ್ದಕ್ಕೆ ನಿಮಗೆ ಬೇಸರವಿದೆಯೇ? ಎಂದು ಪತ್ರಕರ್ತ ಕೇಳಿದರೆ, ‘ನಾನು ಲಾಭ ಗಳಿಸಲೆಂದೇ ವ್ಯಾಪಾರ ಮಾಡುತ್ತೇನೆ. ಈ ವಿಚಾರ ಬಂದಾಗ ಅದನ್ನು ಬಿಟ್ಟು ಬೇರೆ ಯೋಚಿಸುವುದಿಲ್ಲ. ಈ ಹಂತದಲ್ಲಿ ನಡೆಯುವ ಯಾವುದೇ ಸಾಮಾಜಿಕ ಅವಘಡಗಳಿಗೂ ನಾನು ಜವಾಬ್ದಾರನಲ್ಲ. ಆದರೆ ಮಾನವೀಯತೆ ವಿಚಾರ ಬಂದಾಗ ನಾನು ಬೇರೆ ರೀತಿ ಯೋಚಿಸುತ್ತೇನಷ್ಟೆ’ ಎನ್ನುತ್ತಾನೆ. ಒಂದೆಡೆ ಸಾವಿರಾರು ಮಂದಿಯ ಸಾವಿಗೆ ಕಾರಣನಾಗಿ ಮತ್ತೊಂದೆಡೆ ಈ ಲಾಭದ ಒಂದಷ್ಟು ಹಣವನ್ನು ಸತ್ತವರ ಮಕ್ಕಳ ಅಧ್ಯಯನಕ್ಕೆಂದು ಮೀಸಲಾಗಿಟ್ಟುಬಿಟ್ಟರೆ ಆದೀತೇನು? 

ಸೊರೊಸ್ ಕೆಲಸ ಮಾಡುವ ಸ್ವರೂಪ ಹೇಗೆ ಗೊತ್ತೇ? ಆತ 1984ರಲ್ಲಿ ಓಪನ್ ಸೊಸೈಟಿ ಫೌಂಡೇಶನ್ ಎಂಬ ದತ್ತಿ ಸಂಸ್ಥೆಯನ್ನು ಆರಂಭಿಸಿದ. ಆತನ ವೆಬ್ಸೈಟನ್ನು ನಂಬುವುದಾದರೆ ಇದುವರೆಗೂ 32 ಬಿಲಿಯನ್ ಡಾಲರ್‌ಗಳಷ್ಟು ಸ್ವಂತ ಹಣವನ್ನು ಅದಕ್ಕಾಗಿ ನೀಡಿದ್ದಾನೆ. ಈ ಫೌಂಡೇಶನ್ ಜಗತ್ತಿನಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ದಾನ ನೀಡುತ್ತದೆ. ಆ ಮೂಲಕ ಆಯಾ ರಾಷ್ಟ್ರಗಳಲ್ಲಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಈ ಸ್ವಯಂ ಸೇವಾ ಸಂಸ್ಥೆಗಳು ಬಹುಪಾಲು ಎಡಪಂಥೀಯ ಚಿಂತಕರದ್ದೇ ಆಗಿದ್ದು ದೇಶ ವಿಭಜಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವಂಥವು. ಸ್ವತಃ ಪ್ರಧಾನಮಂತ್ರಿ ಮನಮಹೋನ್ ಸಿಂಗರ ಮಗಳು ಅಮೃತಾ ಸಿಂಗ್ ಈ ಸಂಸ್ಥೆಯ ನಿರ್ದೇಶಕಿಯಾಗಿ ದುಡಿದಿದ್ದವಳು. ಪ್ರಧಾನಮಂತ್ರಿಯೊಬ್ಬರ ಮಗಳು ಇಂತಹ ಸಂಸ್ಥೆಯೊಂದರಲ್ಲಿ ಇದ್ದಾಳೆ ಎಂದರೆ ಸರ್ಕಾರದ ಮೇಲೆ ಸೊರೊಸ್ ಹೊಂದಿದ್ದ ಪ್ರಭಾವ ಎಂಥದ್ದಿರಬಹುದು ಎಂದು ಯೋಚಿಸಿ! ಇಷ್ಟೇ ಅಲ್ಲ, ಸೋನಿಯಾ ಆಪ್ತನಾಗಿದ್ದ ಹರ್ಷ್ ಮಂದಾರ್ ಕೂಡ ಈತನೊಡನೆ ಕೆಲಸ ಮಾಡುತ್ತಿರುವವನೇ. ಹರ್ಷ್ ಮಂದಾರ್ ಸಾಮಾನ್ಯವಾದ ವ್ಯಕ್ತಿಯಲ್ಲ. ಆತ ಐಎಎಸ್ ಅಧಿಕಾರಿಯಾಗಿದ್ದು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ, 2002ರಲ್ಲಿ ನಡೆದ ಗುಜರಾತ್ ದಂಗೆಯ ನೆಪಹೇಳಿ ರಾಜಿನಾಮೆ ಕೊಟ್ಟು, ತನ್ನದ್ದೇ ಆದ ಸಾಮಾಜಿಕ ಸೇವಾ ಸಂಘಟನೆಗಳ ಮೂಲಕ ಆರಾಮದಾಯಕ ಬದುಕನ್ನು ಅನುಭವಿಸುತ್ತಿದ್ದಾನೆ. ಈತನ ಸರ್ಕಾರೇತರ ಸಂಸ್ಥೆಗಳಿಗೆ ಸೊರೊಸ್ ಉದಾರವಾಗಿ ಹಣ ನೀಡುತ್ತಾನೆ. ನಿಮಗೆ ಗಾಬರಿಯಾಗುವ ಸಂಗತಿ ಹೇಳಲೇ? ಆತ ಸೊನಿಯಾ ಯುಪಿಎ ಸರ್ಕಾರದ ಸಂದರ್ಭದಲ್ಲಿ ರೂಪಿಸಿಕೊಂಡಿದ್ದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯನೂ ಆಗಿದ್ದ. ಆ ಹೊತ್ತಿನಲ್ಲೇ ಬಂದ ಹಿಂದೂವಿರೋಧಿ ಕಮ್ಯುನಲ್ ವೈಯಲೆನ್ಸ್ ಬಿಲ್ ಈತನೇ ತಯಾರಿಸಿದ್ದು. ಆ್ಯಕ್ಷನ್ ಏಡ್ ಇಂಡಿಯಾ ಎಂಬ ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥನಾಗಿರುವ ಈತ ತನ್ನ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್‌ಗೆ ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಗಳಿಂದ ಪಡೆದುಕೊಂಡಿದ್ದಾನೆ. ಎನ್ಕೌಂಟರ್‌ಗೆ ಒಳಗಾದ ಇಶ್ರತ್ ಜಹಾನ್‌ಳಿರಲಿ, ಮುಂಬೈ ದಾಳಿಗೆ ಕಾರಣನಾದ ಯಾಕುಬ್ ಮೆಮನ್ ಇರಲಿ, ಕೊನೆಗೆ ಅಜ್ಮಲ್ ಕಸಬ್, ಅಫ್ಜಲ್ ಗುರುಗಳಾದರೂ ಸರಿ ಅವರೆಲ್ಲರ ಪರವಾಗಿ ದನಿ ಎತ್ತುವವರಲ್ಲಿ ಹರ್ಷ್ ಇದ್ದೇ ಇರುತ್ತಾನೆ. ಅಯೋಧ್ಯೆಯಲ್ಲಿ ರಾಮಮಂದಿರವಾಗಬೇಕೆಂಬ ಆದೇಶ ಬಂದಾಗ ಅದನ್ನು ಪರಿಶೀಲಿಸಬೇಕೆಂದು ನ್ಯಾಯಾಲಯಕ್ಕೆ ಹೋದ 40 ಮಂದಿಯಲ್ಲಿ ಈತನೂ ಇದ್ದ. ಸಿಎಎ ವಿರುದ್ಧ ದೆಹಲಿಯ ಶಾಹಿನ್‌ಬಾಗ್‌ನಲ್ಲಿ ಪ್ರತಿಭಟನೆಗೆ ಕೂತಿದ್ದರಲ್ಲ, ಆಗ ತನ್ನ ಕಾರ್ವಾನ್-ಎ-ಮೊಹಬ್ಬತ್ ಎಂಬ ಸಂಘಟನೆಯ ಮೂಲಕ ಪ್ರತಿಭಟನೆಯ ಸೂತ್ರದಾರ ಶರ್ಜಿಲ್ ಇಮಾಮ್‌ನಿಗೆ ಬೆಂಬಲ ಸೂಚಿಸಿದ್ದಲ್ಲದೇ ‘ಈಗ ನಿರ್ಣಯ ಸಂಸತ್ತಿನಲ್ಲೋ, ನ್ಯಾಯಾಲಯದಲ್ಲೋ ಆಗದು. ಅಯೋಧ್ಯೆ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಜಾತ್ಯತೀತತೆಯನ್ನು ರಕ್ಷಿಸಲಿಲ್ಲ. ಹೀಗಾಗಿಯೇ ಕದನ ಬೀದಿಯಲ್ಲೇ ನಡೆದುಬಿಡಲಿ’ ಎಂದಿದ್ದ. 

ಇಷ್ಟಕ್ಕೇ ಮುಗಿಯಲಿಲ್ಲ ಕರ್ನಾಟಕದ ಹರ್ತಿಕೋಟೆಯ ಸಲಿಲ್ ಶೆಟ್ಟಿ ಭಾರತ್ ಜೊಡೊ ಯಾತ್ರೆಯಲ್ಲಿ ರಾಹುಲ್ ಕೈ ಕೈ ಹಿಡಿದು ನಡೆದಿದ್ದ. ಆತ ಸೊರೊಸ್‌ನ ಓಪನ್ ಸೊಸೈಟಿ ಫೌಂಡೇಶನ್ ಜಾಗತಿಕ ಉಪಾಧ್ಯಕ್ಷ. ಆತನೇ ಈ ಹಿಂದೆ ಆಮ್ನೆಸ್ಟಿ ಇಂಟರ್ನ್ಯಾಷನಲ್‌ನ ಕಾರ್ಯದರ್ಶಿಯೂ ಆಗಿದ್ದ. ಅಂದಹಾಗೆ ಇದೇ ಸಂಸ್ಥೆ ಭಾರತ ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆಯಾಗಿ ವರ್ತಿಸುತ್ತಿದೆ ಎಂಬ ವರದಿ ಕೊಟ್ಟಿತ್ತು. ಈಗ ಆ ವರದಿಯ ಮಹತ್ವ ಅರಿವಾಗುತ್ತಿದ್ದಿರಬಹುದಲ್ಲವೇ? 

ಸೊರೊಸ್ ತನ್ನ ತಂಡದ ಮೂಲಕ ಅನೇಕ ಮಾಧ್ಯಮಗಳಿಗೂ ಹಣ ನೀಡುತ್ತಾನೆ. ಆ ಮೂಲಕ ಅಭಿಪ್ರಾಯವನ್ನೇ ಕೊಂಡುಕೊಳ್ಳುತ್ತಾನೆ. ಅನೇಕ ರಾಷ್ಟ್ರಗಳಲ್ಲಿ ತನಗೆ ಬೇಕಾದ, ತಾನು ಹೇಳಿದಂತೆ ಕೇಳುವ ಪಕ್ಷಗಳನ್ನು ಅಧಿಕಾರಕ್ಕೆ ತರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾನೆ. ಹಂಗೇರಿಯಂತಹ ಅನೇಕ ರಾಷ್ಟ್ರಗಳು ಆತನ ಹೂಡಿಕೆಯನ್ನು ವಿರೋಧಿಸುವುದು ಈ ಕಾರಣಕ್ಕಾಗಿಯೇ. 

ಈಗ ಎಲ್ಲವನ್ನೂ ಮತ್ತೊಮ್ಮೆ ಅವಲೋಕಿಸಿ ನೋಡಿ. ಸ್ವತಃ ಕ್ರಿಮಿನಲ್‌ಗಳ ಸಾಲಿಗೆ ಸೇರುವ ಸೊರೊಸ್ ಭಾರತದಲ್ಲಿ ಅನೇಕ ಸೇವಾ ಸಂಸ್ಥೆಗಳ ಮೂಲಕ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಾನೆ. ಮಾಧ್ಯಮಗಳನ್ನು ಹಿಡಿತದಲ್ಲಿರಿಸಿಕೊಳ್ಳುವ ಮೂಲಕ ಜನಾಭಿಪ್ರಾಯ ರೂಪಿಸುತ್ತಾನೆ. ಜಾಗತಿಕ ವರದಿಗಳು ಭಾರತದ ವಿರುದ್ಧ ಇರುವಂತೆ ನೋಡಿಕೊಳ್ಳುತ್ತಾನೆ. ಅಜೀಂ ಪ್ರೇಮ್‌ಜಿ ಥರದವರ ಮೂಲಕ ಇಲ್ಲಿ ಜನಮೆಚ್ಚುಗೆಯ ಕಾರ್ಯ ನಡೆಸುವಂತೆ ಮಾಡಿ ಪಿತೂರಿ ಮಾಡುತ್ತಾನೆ. ಕೊನೆಗೆ ಇವೆಲ್ಲದರ ಲಾಭ ಪಡೆಯಲು ಕಾಂಗ್ರೆಸ್ ನಾಯಕರ ಯಾತ್ರೆಗಳಿಗೆ ಹಣ ಕೊಡುತ್ತಾನೆ, ತನ್ನವರನ್ನೂ ಕಳಿಸುತ್ತಾನೆ. ವಿದೇಶದಲ್ಲಿ ಕೂತು ಭಾರತವನ್ನು ಚೂರು ಮಾಡುವ ಈ ಕಲ್ಪನೆ ಬ್ರಿಟೀಷರು ಭಾರತವನ್ನಾಳಿದಂತಲ್ಲವೇನು? 

ಆಕ್ರಮಣಕಾರಿಗಳನ್ನು ತುಂಡು ಬಟ್ಟೆ ಧರಿಸಿ ಮಹಾತ್ಮ ಓಡಿಸಿದರೆ, ಆತನ ಹೆಸರಿಟ್ಟುಕೊಂಡು ಬೇರೊಂದು ರೂಪದಲ್ಲಿ ಅವರನ್ನೇ ಕರೆತರಲು ಯತ್ನಿಸುವುದು ಎಷ್ಟು ಸರಿ?  ಮೊದಿಯನ್ನು ವಿರೋಧಿಸಿ ಅಭ್ಯಂತರವಿಲ್ಲ. ಆದರೆ ಆ ಧಾವಂತದಲ್ಲಿ ಭಾರತವನ್ನೇ ಪ್ರಪಾತಕ್ಕೆ ತಳ್ಳಬೇಡಿ. 

ಇದು ನನ್ನ ಕಳಕಳಿಯ ಕೋರಿಕೆ ಅಷ್ಟೆ!

ಪಾಕಿಸ್ತಾನಕ್ಕೆ ಸಹಾಯ ಬೇಕಿದೆ, ಜಿಂದಾಬಾದ್ ಎನ್ನುವವರು ಹೋಗಬಹುದು!

ಪಾಕಿಸ್ತಾನಕ್ಕೆ ಸಹಾಯ ಬೇಕಿದೆ, ಜಿಂದಾಬಾದ್ ಎನ್ನುವವರು ಹೋಗಬಹುದು!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರಕ್ಕೆ ಕಠೋರವಾದ ಎಚ್ಚರಿಕೆ ಕೊಟ್ಟಿದ್ದಾನೆ. ಆರು ದಿನಗಳೊಳಗೆ ಚುನಾವಣೆಯನ್ನು ಘೋಷಿಸದಿದ್ದರೆ ತನ್ನ ಜೊತೆಗಾರರೊಂದಿಗೆ ಬೀದಿಗಿಳಿಯುತ್ತೇನೆ ಎಂದಿದ್ದಾನೆ. ಈ ಬಾರಿ ಬೀದಿಗಿಳಿದರೆ ಇದು ಹಿಂಸಾತ್ಮಕವಾಗಿರುವ ಹೋರಾಟವಾಗಬಹುದು ಎಂಬ ಹೆದರಿಕೆಯೂ ಎಲ್ಲರಲ್ಲಿದೆ. ಇತ್ತ ಪಾಕಿಸ್ತಾನದ ಈಗಿನ ಪ್ರಧಾನಿ ಶೆಹ್ಬಾಜ್ ಷರೀಫ್ ಪಾಕಿಸ್ತಾನದ ಇಂದಿನ ಪರಿಸ್ಥಿತಿಗಳಿಗೆಲ್ಲ ಇಮ್ರಾನ್ಖಾನನ ಸರ್ಕಾರವೇ ಕಾರಣ ಎಂದು ಒಪ್ಪಿಸುವ ಹಠಕ್ಕೆ ಬಿದ್ದಿದ್ದಾರೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿ ಲಾಹೋರಿನಲ್ಲಿ ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಂನಲ್ಲಿ ಹಣ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ! 

ಪಾಕಿಸ್ತಾನದ ಸ್ಥಿತಿ ಸದ್ಯದಲ್ಲೇ ಶ್ರೀಲಂಕಾದಂತೆ ಆದರೆ ಯಾರೂ ಅಚ್ಚರಿ ಪಡಬೇಕಿಲ್ಲ. ಅನೇಕರು ಇದರ ಮೂಲವನ್ನು ಭಾರತದ ನೋಟು ರದ್ದತಿಯಲ್ಲಿ ಹುಡುಕುತ್ತಾರೆ. ಅಲ್ಲಿಯವರೆಗೂ ನಕಲಿ ನೋಟುಗಳ ಮುದ್ರಣದಿಂದ ಸಾಕಷ್ಟು ಸಂಪಾದನೆ ಮಾಡುತ್ತಿದ್ದ ಪಾಕಿಸ್ತಾನ ಏಕಾಕಿ ಪ್ರಪಾತಕ್ಕೆ ಬಿತ್ತು ಎನ್ನುವುದು ಅಭಿಪ್ರಾಯ. ಅದು ಸತ್ಯವೂ ಇರಬಹುದು. ಏಕೆಂದರೆ ಅಲ್ಲಿಯವರೆಗೂ ಮೆರೆದಾಡುತ್ತಿದ್ದ ಪಾಕಿಸ್ತಾನ ಆನಂತರ ಏಕಾಕಿ ತುಮುಲಕ್ಕೆ ಬಿತ್ತು. ಮುಂದೆ ಬೀದಿಗಿಳಿದು ಹೋರಾಟ ಮಾಡುತ್ತಲೇ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಈ ಪರಿಸ್ಥಿತಿಯನ್ನು ಹಾಳುಗೆಡವಿದ. ವಾಸ್ತವವಾಗಿ ಆತ ಅಧಿಕಾರಕ್ಕೆ ಬಂದದ್ದೇ ಸೈನ್ಯದ ಸಹಕಾರದೊಂದಿಗೆ. ಪಾಕಿಸ್ತಾನದ ವಿಚಾರದಲ್ಲಿ ಇದೇನು ಹೊಸ ಸಂಗತಿಯಲ್ಲ ಬಿಡಿ. ಸೈನ್ಯದ ಅನುಮತಿಯಿಲ್ಲದೇ ಅಲ್ಲಿ ಯಾವ ರಾಜಕೀಯ ಚಟುವಟಿಕೆಗಳೂ ನಡೆಯುವುದಿಲ್ಲ. ಆದರೆ ತನಗೆ ಬೇಕಾದ ಅಧಿಕಾರಿಯೊಬ್ಬನನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿಕೊಳ್ಳಲು ಸೈನ್ಯ ಅನುಮತಿ ನಿರಾಕರಿಸಿದಾಗ ಎಲ್ಲ ಗೊಂದಲವೂ ಆರಂಭವಾದವು. ಐಎಸ್ಐನ ಡೈರೆಕ್ಟರ್ ಜನರಲ್ನನ್ನು ವರ್ಗಾವಣೆ ಮಾಡುವಂತೆ ಸೈನ್ಯ ಆದೇಶಿಸಿತ್ತು. ತನಗೆ ನಿಷ್ಠನಾಗಿರುವ ಆತನನ್ನು ಚುನಾವಣೆಯವರೆಗೂ ಉಳಿಸಿಕೊಳ್ಳಬೇಕಿತ್ತಲ್ಲದೇ ಅಗತ್ಯಬಿದ್ದರೆ ಸೈನ್ಯದ ಮುಖ್ಯಸ್ಥನನ್ನಾಗಿ ಮಾಡಬೇಕೆಂಬುದು ಇಮ್ರಾನನ ಬಯಕೆಯಾಗಿತ್ತು. ಯಾವಾಗ ಆತ ಸೈನ್ಯದ ಮಾತನ್ನು ಕೇಳುವುದನ್ನು ವಿರೋಧಿಸಿದನೋ ಅಂದೇ ಆತನ ಮೇಲಿದ್ದ ಅಭಯಹಸ್ತ ಹೊರಟುಹೋಯ್ತು. ಆತನ ಬಹುಮತಕ್ಕೆ ಕಾರಣವಾಗಿದ್ದ ಎರಡು ಚಿಕ್ಕ ಪಕ್ಷಗಳು ದಳ ಬದಲಾಯಿಸಿ ಕಾನೂನಾತ್ಮಕವಾಗಿಯೇ ಸರ್ಕಾರವನ್ನು ಉರುಳಿಸಿದರು. ಇಮ್ರಾನ್ ಸುಮ್ಮನಿರಲಿಲ್ಲ. ಸರ್ಕಾರವನ್ನೇ ಬರ್ಖಾಸ್ತು ಮಾಡುವ ಪ್ರಯತ್ನವನ್ನೂ ಮಾಡಿದ್ದ. ಆದರದು ನ್ಯಾಯಾಲಯದಲ್ಲಿ ಬಿದ್ದುಹೋಯ್ತು. ಹೀಗಾಗಿ ಆತ ಅನಿವಾರ್ಯವಾಗಿ ಅಧಿಕಾರದಿಂದ ಇಳಿಯಬೇಕಾಯ್ತು. ಈ ರೀತಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧಿಕಾರ ಕಳೆದುಕೊಂಡ ಪಾಕಿಸ್ತಾನದ ಮೊದಲ ಪ್ರಧಾನಿಯಾದ ಆತ! ಹಾಗಂತ ಅವಧಿ ಪೂರೈಸದೇ ಹೋದ ಮೊದಲನೆಯವನೇನೂ ಅಲ್ಲ. ಬಹುತೇಕ ಪಾಕಿಸ್ತಾನದ ಎಲ್ಲ ಪ್ರಧಾನಿಗಳೂ ಅವಧಿಗೆ ಮುನ್ನವೇ ಕೆಳಗಿಳಿಯುತ್ತಾರೆ ಏಕೆಂದರೆ ಅವರೆಲ್ಲರೂ ಸೈನ್ಯದ ಕೈಗೊಂಬೆಗಳೇ ಆಗಿರುತ್ತಾರೆ. 

ಆದರೆ ಇಮ್ರಾನ್‌ಖಾನನಿಗೆ ಜನಬೆಂಬಲ ಜೋರಾಗಿಯೇ ಇತ್ತು. ಒಮ್ಮೊಮ್ಮೆ ಆತ ಪಾಕಿಸ್ತಾನದ ಕೇಜ್ರಿವಾಲನಂತೆ ಕಾಣುತ್ತಾನೆ. ಅಗತ್ಯ ಬಿದ್ದಾಗ ಮಾತನ್ನು ಹೊರಳಿಸುತ್ತಾ, ಜನರನ್ನು ನಂಬಿಸುವುದರಲ್ಲಿ ನಿಸ್ಸೀಮ. ಐಎಮ್ಎಫ್ನ ಸಾಲಕ್ಕೆ ಸಹಿ ಹಾಕಿ ಬಂದವನು ಅವನೇ. ಆದರೆ ಈ ಸಾಲ ಪಡೆಯಲು ಆತ ಕೈಗೊಳ್ಳಬೇಕಾಗಿದ್ದ ನಿರ್ಣಯಗಳು ಮಾತ್ರ ಕಠಿಣವಾಗಿದ್ದವು. ಅದಕ್ಕೂ ಒಪ್ಪಿಕೊಂಡು ಬಂದಿದ್ದ. ಈಗ ಆತನ ಸಕರ್ಾರ ಉರುಳಿ ಹೊಸ ಸಕರ್ಾರ ಬಂತಲ್ಲ. ಅದು ಈ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಬೇಕಾಯ್ತು. ಐಎಮ್ಎಫ್‌ನ ಸಾಲ ತರಲು ಇಮ್ರಾನ್ ಖಾನ್ ಘೋಷಿಸಿದ್ದ ಇಂಧನದ ಮೇಲಿನ ಸಬ್ಸಿಡಿಯನ್ನು ಕಡಿತ ಮಾಡಲೇಬೇಕಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಮೊನ್ನೆ ಪಾಕಿಸ್ತಾನದ ಪ್ರಧಾನಿ 30 ರೂಪಾಯಿಯಷ್ಟು ಇಂಧನ ಬೆಲೆ ಏರಿಸಿದ. ಇಮ್ರಾನ್ ಬೀದಿಯಲ್ಲಿ ನಿಂತು ಗೊಳೋ ಎಂದು ಅಳುವುದೊಂದಷ್ಟೇ ಬಾಕಿ. ತೈಲ ಬೆಲೆ ಏರಿಕೆಗೆ ತಾನೇ ಮಾಡಿಕೊಂಡಿದ್ದ ಒಪ್ಪಂದಗಳು ಕಾರಣವೆನ್ನುವುದನ್ನು ಆತ ಮರೆಮಾಚಿ ಜನರ ದುಃಖದ ಲಾಭವನ್ನು ಪಡೆದುಕೊಂಡು ಸಾವಿರಾರು ಮಂದಿಯನ್ನು ಬೀದಿಗಳಲ್ಲಿ ಸೇರಿಸಿ ಅವರನ್ನು ಭಡಕಾಯಿಸುವ ಕೆಲಸ ಮಾಡುತ್ತಿದ್ದಾನೆ! ಹೀಗಾಗಿಯೇ ಪಾಕಿಸ್ತಾನದ ಈಗಿನ ಪ್ರಧಾನಿ ಆಂತರಿಕ ದಂಗೆಯ ಮಾತಾಡುತ್ತಿರೋದು. ಇಮ್ರಾನ್ ಸ್ವಾತಂತ್ರ್ಯ ನಡಿಗೆಯನ್ನು ಇಸ್ಲಾಮಾಬಾದ್ಗೆ ಕೊಂಡೊಯ್ಯುವ ಮಾತನಾಡುತ್ತಿದ್ದಾನೆ. ಹೊಸ ಸರ್ಕಾರವನ್ನು ಆತನ ಬೆಂಬಲಿಗರು ನಂಬುತ್ತಿಲ್ಲ. ಅವರು ತೆಗೆದುಕೊಂಡ ಪ್ರತಿ ನಿರ್ಣಯವನ್ನೂ ವಿರೋಧಿಸುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಈಗಿನ ಪ್ರಧಾನಿ ಶೆಹ್ಬಾಜ್ ಷರೀಫ್ ನವಾಜ್ ಷರೀಫ್ನ ಸಹೋದರ. ಭ್ರಷ್ಟಾಚಾರದ ಪ್ರಕರಣಗಳ ಆರೋಪ ಹೊತ್ತಿರುವ ನವಾಜ್ ಈಗ ಪಾಕಿಸ್ತಾನದಲ್ಲಿಲ್ಲ, ಆದರೆ ಪಕ್ಷದ ಮೇಲೆ ಅವನ ಹಿಡಿತ ಈಗಲೂ ಬಲವಾಗಿದೆ. ಹೀಗಾಗಿಯೇ ಶೆಹ್ಬಾಜ್ ಅಧಿಕಾರದಲ್ಲಿ ಕುಳಿತಿದ್ದರೂ ಹಿಂದಿನಿಂದ ನಿಯಂತ್ರಣದಲ್ಲಿಟ್ಟುಕೊಂಡಿರೋದು ನವಾಜ್ರೇ. ಇಮ್ರಾನ್ ಖಾನನ ಮೇಲೆ ಈಗಿನ ಸರ್ಕಾರ ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿ ಒಳತಳ್ಳುವ ಯೋಜನೆಯನ್ನೇನೋ ಹಾಕಿಕೊಂಡಿದೆ. ಆದರೆ ನವಾಜ್ ಷರೀಫನ ಮೇಲಿನ ಆರೋಪಗಳಿಗೆ ಉತ್ತರ ಸಿಗುವವರೆಗೂ ಇಮ್ರಾನನನ್ನು ಮುಟ್ಟಿದರೆ ಜನ ಸಿಡಿದೇಳುವುದು ನಿಶ್ಚಿತ. ಈಗಾಗಲೇ ಇಮ್ರಾನಿನ ಬೆಂಬಲಿಗರು ಮಾಡಿರುವ ರಾದ್ಧಾಂತವನ್ನು ನಿಭಾಯಿಸುವಲ್ಲಿ ಈಗಿನ ಸಕರ್ಾರ ಸಂಪೂರ್ಣ ಸೋತುಹೋಗಿದೆ.

ಇತ್ತ ಪಾಕಿಸ್ತಾನದ ಸಾಲ ಏರುತ್ತಲೇ ಇದೆ. ಈಗಾಗಲೇ 90 ಬಿಲಿಯನ್ಗಳಷ್ಟು ಸಾಲ ಹೊಂದಿರುವ ಪಾಕಿಸ್ತಾನ ತನ್ನೆಲ್ಲ ಕನಸುಗಳನ್ನು ನುಚ್ಚುನೂರು ಮಾಡಿಕೊಂಡಿದೆ. ಪಾಕಿಸ್ತಾನದ ಜಿಡಿಪಿ 315 ಬಿಲಿಯನ್ ಡಾಲರ್ಗಳಿಂದ 292 ಬಿಲಿಯನ್ ಡಾಲರ್ಗಳಿಗೆ ಇಳಿದಿದೆ. ವಿದೇಶಿ ವಿನಿಮಯ ಉಳಿಕೆ 20 ಮಿಲಿಯನ್ ಡಾಲರ್ಗಳಷ್ಟಿದ್ದು ಇನ್ನು ಒಂದೂವರೆ ತಿಂಗಳಿಗಾಗುವಷ್ಟು ಆಮದನ್ನು ಮಾತ್ರ ಮಾಡಿಕೊಳ್ಳಬಹುದಾದ ಭಯಾನಕ ಸ್ಥಿತಿಯಲ್ಲಿ ಅವರಿದ್ದಾರೆ! ಇದನ್ನು ಗಮನಿಸಿಯೇ ತೈಲ ಉತ್ಪನ್ನಗಳಿಗಾಗಿ ವಿದೇಶಿ ಬ್ಯಾಂಕುಗಳು ಕೊಡುವ ಸಾಲದ ಗ್ಯಾರಂಟಿಯನ್ನು ರದ್ದು ಮಾಡಿಬಿಟ್ಟಿದೆ. ಪ್ರತಿರಾಷ್ಟ್ರದ ಬ್ಯಾಂಕುಗಳಿಗೂ ವಿದೇಶಿ ಬ್ಯಾಂಕುಗಳು ಸಾಲಕೊಟ್ಟು ಆಮದಿಗೆ ಅನುಕೂಲ ಮಾಡಿಕೊಡುತ್ತವೆ. ಅಕಸ್ಮಾತ್ ಆಯಾ ರಾಷ್ಟ್ರಗಳು ಹಣ ಪೂರೈಕೆ ಮಾಡುವಲ್ಲಿ ಸೋತರೆ ವಿದೇಶಿ ಬ್ಯಾಂಕುಗಳೇ ಎಲ್ಲ ಹೊಣೆಯನ್ನೂ ಹೊರಬೇಕು. ಇದನ್ನರಿತೇ ಈ ಬ್ಯಾಂಕುಗಳೆಲ್ಲ ಎಚ್ಚರಿಕೆಯ ಹೆಜ್ಜೆಯನ್ನಿರಿಸುತ್ತಿದೆ. ಸಾಲ ಮರಳಿ ಕೊಡುವ ತಾಕತ್ತು ಪಾಕಿಸ್ತಾನಕ್ಕೆ ಈಗ ಇಲ್ಲವೆಂಬುದು ಅವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಅದರರ್ಥ ಇನ್ನೆರಡು ತಿಂಗಳುಗಳ ನಂತರ ಪಾಕಿಸ್ತಾನದಲ್ಲಿ ಸುರಿದುಕೊಂಡು ಸಾಯಬೇಕೆಂದರೂ ಒಂದು ಹನಿ ಪೆಟ್ರೋಲು ಸಿಗಲಾರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪಾಕಿಸ್ತಾನ ವಿಷ ವರ್ತುಲದಲ್ಲಿ ಸಿಲುಕಿಕೊಂಡಿದೆ. ಆಂತರಿಕ ದಂಗೆಗಳ ಕಾರಣಕ್ಕೆ ಜಿಡಿಪಿ ಕಡಿಮೆಯಾಗುತ್ತಿದೆ, ಇದು ರಾಷ್ಟ್ರದ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುತ್ತಿದೆ. ಇದರಿಂದಾಗಿಯೇ ವಿದೇಶಗಳು ಸಾಲಕೊಡಲು ಮುಂದೆ ಬರುತ್ತಿಲ್ಲ. ಸಾಲವಿಲ್ಲದಿದ್ದುದರಿಂದ ಸರ್ಕಾರ ಧೈರ್ಯವಾಗಿ ಉತ್ಪಾದನೆಗೆ ಮುಂದಿಡಲಾಗುತ್ತಿಲ್ಲ. ಜಿಡಿಪಿ ಮತ್ತಷ್ಟು ಕುಸಿಯಲಿದೆ, ಸಾಲ ಮತ್ತಷ್ಟು ಹೆಚ್ಚಲಿದೆ. ಈ ವರ್ತುಲದಿಂದ ಸದ್ಯಕ್ಕೆ ಅವರು ಆಚೆಗೆ ಬರುವುದು ಕಷ್ಟವಿದೆ. ಅವರು ಮೊರೆ ಹೋಗಬೇಕಾಗಿರುವುದು ಸರ್ವಋತು ಮಿತ್ರ ಚೀನಾವನ್ನು ಮಾತ್ರ. ಆದರೆ, ಚೀನಾ ಪಾಕಿಸ್ತಾನವನ್ನು ಕ್ಯಾರೆ ಎನ್ನುತ್ತಿಲ್ಲ. ಪಾಕಿಸ್ತಾನ ತನ್ನ ಸಾಲವನ್ನು ಮರಳಿಸಬೇಕೆಂದು ಒತ್ತಡ ಹೇರುತ್ತಿದೆ ಕೂಡ. ಈ ಕಾರಣಕ್ಕಾಗಿಯೇ ಪಾಕಿಸ್ತಾನದ ಭರವಸೆಯ ಚೀನಾ ಪಾಕ್ ಎಕನಾಮಿಕ್ ಕಾರಿಡಾರ್ ಮೂಲೆಗುಂಪಾಗಿಹೋಗಿದೆ. ಪಾಕಿಸ್ತಾನ ಸುಮಾರು ಒಂದೂವರೆ ಬಿಲಿಯನ್ ಡಾಲರ್ಗಳಷ್ಟು ಹಣವನ್ನು ಚೀನೀ ಕಂಪೆನಿಗಳಿಗೆ ಕೊಡಬೇಕಾಗಿದೆ. ಹಣ ಕೊಡುವವರೆಗೆ ಪಾಕಿಸ್ತಾನಕ್ಕೆ ಸಹಕಾರ ನೀಡುವುದಿಲ್ಲ ಎಂದು ಚೀನಾ ಖಡಕ್ಕಾಗಿ ಹೇಳಿದೆ. ಅತ್ತ ಸೌದಿ ಅರೇಬಿಯಾ ಆಗಾಗ ತಾನು ಕೊಟ್ಟ ಸಾಲವನ್ನು ನೆನಪಿಸುತ್ತಾ ಮರಳಿ ಕೊಡುವಂತೆ ಒತ್ತಡ ಹೇರುತ್ತಿದೆ. ಈಗ ಐಎಮ್ಎಫ್ನಿಂದ ಸಾಲತಂದರೂ ಪಾಕಿಸ್ತಾನ ಈ ಸಾಲದ ಬಡ್ಡಿಯನ್ನು ತೀರಿಸಲು ಅದನ್ನು ಬಳಸಬಹುದೇ ವಿನಃ ಹೊಸ ಚಟುವಟಿಕೆಗಳಿಗಲ್ಲ. ಹಾಗೆಂದೇ ಅದೀಗ ಟರ್ಕಿಯತ್ತ ಮುಖಮಾಡಿ ನಿಂತಿದೆ. ಟರ್ಕಿಯೂ ಸಹಾಯ ಮಾಡಬಹುದಾದ ಬಲವಾದ ಸ್ಥಿತಿಯಲ್ಲಿದೆ ಎಂದೇನೂ ಭಾವಿಸಬೇಡಿ. ಮತ್ತು ಸಹಾಯ ಮಾಡುವ ಸಾಧ್ಯತೆ ಕಂಡುಬಂದರೆ ಭಾರತ ಅಡ್ಡಗಾಲು ಹಾಕಿ ನಿಲ್ಲುವುದು ನಿಶ್ಚಿತ. ಹೀಗಾಗಿಯೇ ಪಾಕಿಸ್ತಾನದ ಪರಿಸ್ಥಿತಿ ಬಲು ಭಯಾನಕವಾಗಿದೆ. ಇಲ್ಲಿ ಅನೇಕರು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುತ್ತಾರಲ್ಲ, ಅವರೆಲ್ಲ ಅಲ್ಲಿಗೆ ಹೊಗಿ ಪಾಕಿಸ್ತಾನದ ಶಕ್ತಿಯನ್ನು ವೃದ್ಧಿಸುವುದೊಳಿತು ಎಂದೆನಿಸುತ್ತದೆ.

ಅತ್ತ ಚೀನಾದ ಸ್ಥಿತಿಯೂ ಚೆನ್ನಾಗೇನೂ ಇಲ್ಲ. ಕ್ರಾಂತಿಯ ನಂತರ ಹುಟ್ಟಿಕೊಂಡ ಹೊಸ ಚೀನಾದಲ್ಲಿಯೇ ಮೊದಲ ಬಾರಿಗೆ ಆರ್ಥಿಕ ವೃದ್ಧಿಯ ದರವನ್ನು 5.5ರಷ್ಟು ಕನಿಷ್ಠ ಮಟ್ಟಕ್ಕೆ ನಿಗಧಿ ಪಡಿಸಲಾಗಿದೆ. ಅಧ್ಯಕ್ಷ ಷಿ ಮತ್ತು ಪ್ರಧಾನಿ ಲಿ ಕಿಕಿಯಾಂಗ್ ನಡುವಿನ ಜಗಳಗಳು ಈಗ ಎದ್ದೆದ್ದು ಕಾಣುತ್ತಿವೆ. ತನ್ನ ಶೂನ್ಯ ಕೊವಿಡ್ ಪಾಲಿಸಿಯನ್ನು ಹೆಮ್ಮೆಯಿಂದ ಕೊಂಡಾಡುತ್ತಿದ್ದ ಷಿ ಈಗ ಅದರ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದಾನೆ. ಇದರ ವಿರುದ್ಧ ಯಾರೂ ಮಾತನಾಡದಂತೆ ಆತ ನಿರ್ಬಂಧ ವಿಧಿಸಿದ್ದಾನೇನೋ ನಿಜ. ಸ್ವತಃ ಪ್ರಧಾನಿ ಲಿ ಪರೋಕ್ಷವಾಗಿ ಷಿಯನ್ನು ವಿರೋಧಿಸಲಾರಂಭಿಸಿದ್ದಾನೆ. ಕಂಪೆನಿಗಳು ಗುಳೆ ಹೋಗುತ್ತಿರುವ, ಜನರು ದಂಗೆಯೇಳುವ ಸ್ಥಿತಿ ನಿರ್ಮಾಣವಾಗಿರುವಂತಹ ಈ ಹೊತ್ತಲ್ಲಿ ಚೀನಾ ಎಚ್ಚರಿಕೆಯಿಂದ ಮುಂದಡಿಯಿಡುತ್ತಿದೆ. ಉಕ್ರೇನ್-ರಷ್ಯಾ ಯುದ್ಧದಲ್ಲಿ ರಷ್ಯಾದ ಬೆಂಬಲಕ್ಕೆ ಚೀನಾ ಪೂರ್ಣವಾಗಿ ನಿಂತಿರುವುದಂತೂ ಜಗತ್ತಿನ ಜನರ ಕಣ್ಣು ಕೆಂಪಗಾಗಿಸಿದೆ. ಇದರಿಂದಾಗಿಯೇ ಈ ಬಾರಿಯ ಕ್ವಾಡ್ ಸಭೆಯಲ್ಲಿ ಭಾರತಕ್ಕೆ ಬಲ ದೊರೆತದ್ದು. ಚೀನಾ ಯಾವ ಸೈನ್ಯದ ಮೇಲೆ ನಂಬಿಕೆ ಇರಿಸಿಕೊಂಡಿತ್ತೋ ಅದು ಕೂಡ ಕಾಗದದ ಹುಲಿ ಎಂದೇ ಜಗತ್ತು ಮಾತನಾಡಿಕೊಳ್ಳುವುದುನ್ನು ನೋಡಿದರೆ ಚೀನಾಕ್ಕೂ ಬಲವಾದ ಸಮಸ್ಯೆ ಇದೆ! 

ಶ್ರೀಲಂಕಾದ ಬಗ್ಗೆ ಮಾತನಾಡದಿರುವುದೇ ಒಳಿತು. ಚೀನಾದಿಂದ ಸಾಲ ತೆಗೆದುಕೊಂಡವರ ಕಥೆ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾಕ್ಕಿಂತ ಬಲವಾದ ಉದಾಹರಣೆ ಯಾರೂ ಬೇಕಾಗಿಲ್ಲ. ಶ್ರೀಲಂಕಾ ಉರಿದು ಹೋಗುವ ಹಂತದಲ್ಲಿದೆ. ಸಹಾಯ ಎಲ್ಲಿಂದ ಬರಬಹುದೆಂದು ಕಾತರದ ಕಂಗಳಿಂದ ಕಾಯುತ್ತಿದೆ. ಆದರೆ ಇಡಿಯ ಜಗತ್ತು ತೊಂದರೆಗೆ ಸಿಲುಕಿರುವಾಗ ಶ್ರೀಲಂಕಾದ ಉದ್ಧಾರಕ್ಕೆ ಸದ್ಯದಮಟಿಗೆ ಯಾರೂ ಬರಲಾರರು! ನೇಪಾಳವಾಗಲೀ ಮಯನ್ಮಾರ್ ಆಗಲಿ, ಮಲೇಷಿಯಾವಾಗಲಿ ಇಂಡೋನೇಷ್ಯಾವೇ ಆಗಲಿ, ಅತ್ತ ಅಮೇರಿಕಾ-ಯುರೋಪುಗಳೂ ಕೂಡ ಕರೋನ ನಂತರದ ಆರ್ಥಿಕ ದುಃಸ್ಥಿತಿಯತ್ತ ಹಂತ-ಹಂತವಾಗಿ ಹೆಜ್ಜೆ ಇಡುತ್ತಿವೆ. ಸ್ವಲ್ಪಮಟ್ಟಿಗೆ ಈ ಎಲ್ಲ ಹೊಡೆತಗಳಿಂದಲೂ ಪಾರಾಗಿರುವುದು ನಾವು ಮಾತ್ರ. 

ನರೇಂದ್ರಮೋದಿ ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದಾರೆ. ಜಗತ್ತಿನ ವೇದಿಕೆಯ ಮುಖ್ಯ ಭೂಮಿಕೆಯಲ್ಲಿ ಅವರನ್ನೀಗ ಎಲ್ಲರೂ ಗುರುತಿಸುತ್ತಿದ್ದಾರೆ. ರಷ್ಯಾ-ಉಕ್ರೇನುಗಳ ಯುದ್ಧವಿರಲಿ, ಶ್ರೀಲಂಕಾದ ಸಮಸ್ಯೆಯೇ ಇರಲಿ, ಜಾಗತಿಕ ವ್ಯಾಪಾರ-ವಹಿವಾಟುಗಳೇ ಇರಲಿ, ಅಥವಾ ಭಯೋತ್ಪಾದನೆ, ಪರಿಸರದ ವಿಚಾರಗಳೇ ಇರಲಿ ಮೋದಿಯ ಮಾತಿಗೆ ಜಗತ್ತು ತಲೆದೂಗುತ್ತಿದೆ. ನಾವು ನಿಜಕ್ಕೂ ಸಮರ್ಥ ಕೈಗಳಲ್ಲಿದ್ದೇವೆ. ಕರೋನಾ ನಮ್ಮನ್ನು ವಿಪರೀತವಾಗಿ ಬಾಧಿಸಲಿಲ್ಲ. ಕರೋನಾ ನಂತರ ಆರ್ಥಿಕ ಮುಗ್ಗಟ್ಟು ನಮ್ಮನ್ನು ಬಾಧಿಸಲಿಲ್ಲ, ಪಕ್ಕದ ಪಾಕಿಸ್ತಾನ ಪೆಟ್ರೋಲಿಗೆ 30 ರೂಪಾಯಿ ಹೆಚ್ಚು ಮಾಡಿದರೆ, ಭಾರತದಲ್ಲಿ 9 ರೂಪಾಯಿ ಕಡಿತಗೊಳಿಸಲಾಗಿತ್ತು. ಹಣದುಬ್ಬರವನ್ನು ಹಿಡಿತಕ್ಕೆ ತಂದುಕೊಳ್ಳಲು ಬಗೆಬಗೆಯ ಸಾಹಸ ಮಾಡುತ್ತಿದೆ ಭಾರತ. ಭಾರತೀಯರಿಗೆ ಕಷ್ಟಕಾಲದಲ್ಲಿ ತೊಂದರೆಯಾಗಬಾರದೆಂದು ಗೋಧಿ ಮತ್ತು ಸಕ್ಕರೆಯ ಮೇಲೆ ರಫ್ತು ನಿಷೇಧ ಹೇರಲಾಗಿದೆ. ಎಲ್ಲವೂ ಒಂದು ಹಂತಕ್ಕೆ ಬಂದು ನಿಲ್ಲುವಾಗ ಭಾರತ ಜಗತ್ತಿನ ಭೂಪಟದಲ್ಲಿ ಉಜ್ವಲವಾಗಿ ಬೆಳಗುತ್ತಿರುತ್ತದೆ. ಈ ವಿಶ್ವಾಸ ಪ್ರತಿ ಭಾರತೀಯನಿಗೂ ಇದೆ.

ಮತ್ತೊಮ್ಮೆ ಭಾರತ ಬಿಟ್ಟು ತೊಲಗಿ!

ಮತ್ತೊಮ್ಮೆ ಭಾರತ ಬಿಟ್ಟು ತೊಲಗಿ!


ಇಂದಿಗೆ 79 ವರ್ಷಗಳು ಕಳೆದೇಹೋದವು. ತುಂಡು ಪಂಚೆಯ ಮಹಾತ್ಮಾ ಗಾಂಧೀಜಿ ಆಗಸ್ಟ್ 7, 1942ರಂದು ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದ ವಿಶಾಲ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ‘ನಾನೊಂದು ಪುಟ್ಟ ಮಂತ್ರವನ್ನು ನಿಮಗೆ ಕೊಡಲಿದ್ದೇನೆ. ಅದನ್ನು ನಿಮ್ಮ ಹೃದಯದಲ್ಲಿ ಕೆತ್ತಿಟ್ಟುಕೊಳ್ಳಿ. ನಿಮ್ಮ ಪ್ರತಿ ಉಸಿರಿನಲ್ಲೂ ಅದು ವ್ಯಕ್ತವಾಗಲಿ. ಆ ಮಂತ್ರ, ಮಾಡು ಇಲ್ಲವೇ ಮಡಿ. ಒಂದೋ ನಾವು ಭಾರತವನ್ನು ಮುಕ್ತಗೊಳಿಸೋಣ, ಇಲ್ಲವೇ ಆ ಮಾರ್ಗದಲ್ಲಿ ಸಾವನ್ನಪ್ಪೋಣ. ನಾವು ಭಾರತದ ದಾಸ್ಯವನ್ನು ಶಾಶ್ವತಗೊಳಿಸುವ ಪ್ರಕ್ರಿಯೆಯನ್ನು ನೋಡುವುದು ಸಾಧ್ಯವಿಲ್ಲ’ ಎಂದಿದ್ದರು. ಮಾಡು ಇಲ್ಲವೇ ಮಡಿ ಎಂಬುದು ಅಲ್ಲಿಂದಾಚೆಗೆ ಪ್ರತಿಯೊಬ್ಬರ ಬಾಯಲ್ಲೂ ನುಲಿಯುವ ಮಂತ್ರವಾಗಿಬಿಟ್ಟಿತು. ಇದನ್ನು ಊಹಿಸದಿದ್ದ ಬ್ರಿಟೀಷರು ಜಾಗತಿಕ ಮಟ್ಟದಲ್ಲಿ ತಮ್ಮ ಗೌರವ ಕಾಪಾಡಿಕೊಳ್ಳಲು ಗಾಂಧಿಯೂ ಸೇರಿದಂತೆ ಎಲ್ಲ ಪ್ರಮುಖ ಕಾಂಗ್ರೆಸ್ ನಾಯಕರನ್ನು ದೇಶದಾದ್ಯಂತ ಬಂಧಿಸಿಬಿಟ್ಟರು. ಬ್ರಿಟೀಷರಿಗೆ ದಮನ ನೀತಿ ಹೊಸತಲ್ಲ. ಆದರೆ ಏಕಾಕಿ ಇಷ್ಟು ನಾಯಕರನ್ನು ಬಂಧಿಸಿದಾಗ ಅನುಯಾಯಿಗಳು ದಿಕ್ಕಿಲ್ಲದಂತಾದರಲ್ಲದೇ ಇಷ್ಟೂ ದಿನವೂ ಕಾಪಾಡಿಕೊಂಡು ಬಂದಿದ್ದ ಗಾಂಧೀಜಿಯವರ ಅಹಿಂಸಾ ನೀತಿ ಹಳ್ಳ ಹಿಡಿಯುವಂತಾಯ್ತು. ಆಂತರಿಕ ಸಭೆಯಲ್ಲಿ ಗಾಂಧೀಜಿ ಸಂಯಮ ಕಾಪಾಡಿಕೊಳ್ಳುವ ಮಾತನ್ನಾಡಿದ್ದರೇನೋ ನಿಜ. ಆದರೆ ಈ ಆಂದೋಲನ ಉಗ್ರಸ್ವರೂಪ ತಾಳದೇ ಹೋದರೆ ಬ್ರಿಟೀಷರಿಗೆ ಚುರುಕು ಮುಟ್ಟದು ಎಂಬುದು ಅವರಿಗೂ ಗೊತ್ತಿತ್ತು. ಅಹಿಂಸೆಗೆ ನಿಜವಾದ ರೂಪ ಬಂದಿದ್ದು ಆಗಲೇ. ಬಹಳ ಹಿಂದೆಯೇ ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಸೈಫುದ್ದೀನ್ ಕಿಚ್ಲು, ‘ಅಹಿಂಸೆ ಎನ್ನುವುದು ಹುಚ್ಚು-ಹುಚ್ಚಾಗಿ ಪಾಲಿಸಲ್ಪಡಬಾರದು’ ಎಂದು ಎಚ್ಚರಿಸಿದ್ದರು. ಕ್ರಾಂತಿಕಾರಿಗಳಂತೂ ದಿನಬೆಳಗಾದರೆ ಈ ಕುರಿತಂತೆ ಕಿತ್ತಾಟ ನಡೆಸುತ್ತಿದ್ದರು. ವೈಸ್ರಾಯ್ ಮೇಲೆ 1929ರಲ್ಲಿ ಕ್ರಾಂತಿಕಾರಿಗಳು ಬಾಂಬ್ ಎಸೆದಾಗ ಕಾಂಗ್ರೆಸ್ಸಿಗರು ಅದನ್ನು ಹೇಯಕೃತ್ಯವೆಂದು ಜರಿದಿದ್ದಲ್ಲದೇ ಈ ಕೃತ್ಯವೆಸಗಿದವರನ್ನು ಷಂಡರೆಂದು ಟೀಕೆ ಮಾಡಿದರು. ಗಾಂಧೀಜಿಯವರು ಕಾಂಗ್ರೆಸ್ಸು ಈ ಕೃತ್ಯವನ್ನು ಒಮ್ಮತದಿಂದ ಖಂಡಿಸಬೇಕೆಂದು ಪ್ರಾಥರ್ಿಸಿದುದರ ಪರಿಣಾಮವಾಗಿ ಭಾಗವಹಿಸಿದ 1239 ಪ್ರತಿನಿಧಿಗಳಲ್ಲಿ ಕೇವಲ 81 ಮಂದಿ ಹೂಂಗುಟ್ಟುವುದರೊಂದಿಗೆ ನಿರ್ಣಯ ಅಂಗೀಕೃತವಾಗಿತ್ತು! ಪಂಜಾಬ್ ಕಾಂಗ್ರೆಸ್ ಪ್ರತಿನಿಧಿಯಾಗಿದ್ದ ಸರಳಾದೇವಿ ಚೌಧುರಾಣಿಯವರು ಗಾಂಧೀಜಿ ಕೋಪಗೊಂಡುಬಿಟ್ಟಾರು ಎಂಬ ಕಾರಣಕ್ಕೆ ನಿರ್ಣಯದ ಪರವಾಗಿ ಮತಹಾಕಬೇಕಾಯ್ತು ಎಂದು ಅಂತರಂಗದ ಗುಟ್ಟನ್ನು ಬಾಯ್ಬಿಟ್ಟಿದ್ದರು. ಅಂದರೆ 1930ರ ವೇಳೆಗಾಗಲೇ ಸ್ವತಃ ಕಾಂಗ್ರೆಸ್ಸು ಅಹಿಂಸಾ ಚಳವಳಿಯಲ್ಲಿ ನಂಬಿಕೆ ಕಳೆದುಕೊಂಡುಬಿಟ್ಟಿತ್ತು. ಈ ನಿರ್ಣಯ ಅಂಗೀಕಾರಕ್ಕೆ ಗಾಂಧೀಜಿಯವರೆಣಿಸಿದಷ್ಟು ಬೆಂಬಲ ದೊರೆಯಲಿಲ್ಲವೆಂದು ಗೊತ್ತಾದಾಗ ಯಂಗ್ ಇಂಡಿಯಾದಲ್ಲಿ ಬಾಂಬಿನ ಪಂಥ ಎಂಬ ಹೆಸರಿನ ಲೇಖನವೊಂದನ್ನು ಬರೆದು ಕ್ರಾಂತಿಕಾರಿಗಳ ಮನೋಗತವನ್ನು, ಅವರ ಉಪಕರಣಗಳನ್ನು, ಅವರ ಉದ್ದೇಶಗಳನ್ನು ಅತ್ಯುಗ್ರವಾಗಿ ಖಂಡಿಸಿದರು. ಆ ವೇಳೆಗಾಗಲೇ ಅಹಿಂಸಾಮಾರ್ಗದ ನಿಧಾನಗತಿಯನ್ನು ವಿರೋಧಿಸಿ ಕ್ರಾಂತಿಕಾರಿಗಳ ಪಂಗಡ ಸೇರುತ್ತಿದ್ದ ತರುಣರು ಅದಕ್ಕೆ ಬಾಂಬಿನ ದರ್ಶನ ಎನ್ನುವ ಹೆಸರಿನ ಪ್ರತ್ಯುತ್ತರವನ್ನೂ ಕೊಟ್ಟಿದ್ದರು. ‘ಹಿಂಸೆಯ ಕೃತ್ಯಗಳನ್ನು ಪಾಪಕರ್ಮವೆಂದು ಟೀಕಾಕಾರರು ಹೇಳುತ್ತಾರೆ. ಆದರೆ ಪಶುಬಲದಿಂದ ತಪ್ಪು ಮಾಡುವುದು, ಅನ್ಯಾಯ ಮಾಡುವುದು ನಿಜವಾದ ಹಿಂಸೆ. ಆದರೆ ಈ ಕೆಲಸವನ್ನು ಕ್ರಾಂತಿಕಾರಿಗಳು ಮಾಡುತ್ತಿಲ್ಲ. ಈ ಅನ್ಯಾಯವನ್ನು ಹೋಗಲಾಡಿಸಲು ನಾವೂ ಬಯಸುತ್ತೇವೆ. ಘನ-ಗಂಭೀರವಾದ ಈ ಉದ್ದೇಶ ಸಾಧನೆಗಾಗಿ ಪ್ರಾಣಗಳನ್ನಪರ್ಿಸಲು ಸಿದ್ಧವಾಗಿದ್ದೇವೆ. ಹೀಗಿರುವಾಗ ಕ್ರಾಂತಿಕಾರಿಗಳನ್ನು ನಿಂದಿಸಿ, ಖಂಡಿಸುವುದು ಸಣ್ಣತನ’ ಎಂದು ಸುದೀರ್ಘವಾದ ಲೇಖನವನ್ನು ಬರೆದಿದ್ದರು. ಕ್ರಾಂತಿಕಾರ್ಯದ ಏಳುಬೀಳುಗಳು ನಡೆದೇ ಇದ್ದವು. ಆದರೆ ಸುಭಾಷರು ವಿದೇಶಕ್ಕೆ ಹೋಗಿ ಇಂಡಿಯನ್ ನ್ಯಾಷನಲ್ ಆಮರ್ಿ ಕಟ್ಟಿ ಜನಮಾನಸದಲ್ಲಿ ಉಂಟುಮಾಡಿದ ಭರವಸೆ ಇದೆಯಲ್ಲ, ಅದು ಬ್ರಿಟೀಷರಲ್ಲಂತೂ ನಡುಕ ಹುಟ್ಟಿಸಿತ್ತು. ಕಾಂಗ್ರೆಸ್ಸೂ ಸಣ್ಣಗೆ ಕಂಪಿಸಿತ್ತು.


ಎರಡನೇ ಮಹಾಯುದ್ಧ ಆರಂಭವಾಗುವ ಲಕ್ಷಣಗಳು ಗೋಚರಿಸಿದಾಗ ಇಂಗ್ಲೆಂಡು ಭಾರತವನ್ನು ಕೇಳದೆಯೇ ಈ ಯುದ್ಧದಲ್ಲಿ ನಮ್ಮನ್ನೂ ಒಂದು ಪಾಲುದಾರರನ್ನಾಗಿಸಿಬಿಟ್ಟಿತ್ತು. ಭಾರತವನ್ನು ಕೇಳಬೇಕಾದರೂ ಏಕೆ? ಎಂಬುದು ಅವರ ಧಾಷ್ಟ್ರ್ಯ. ಬೇರೆ ಸಂದರ್ಭದಲ್ಲಾಗಿದ್ದರೆ ಗಾಂಧೀಜಿ ಮರುಮಾತಿಲ್ಲದೇ ಯುದ್ಧಕ್ಕೆ ಬೆಂಬಲ ಕೊಡುವ ಠರಾವು ಮಂಡಿಸಿಬಿಡುತ್ತಿದ್ದರೇನೋ. ಆದರೆ ಸುಭಾಷರು ಜಾಗತಿಕ ಮಟ್ಟದಲ್ಲಿ ನಡೆಸಿದ ಓಡಾಟ ಮತ್ತು ಬ್ರಿಟನ್ನಿನ ಶತ್ರುಗಳೊಂದಿಗೆ ಗೆಳೆತನ ಸಾಧಿಸಿ ಭಾರತವನ್ನು ಮುಕ್ತಗೊಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ ಇಡಿಯ ಕಾಂಗ್ರೆಸ್ಸನ್ನು ಚುರುಕುಗೊಳಿಸಿಬಿಟ್ಟಿತ್ತು. ಯುದ್ಧದ ನಂತರ ಸ್ವಾತಂತ್ರ್ಯ ಘೋಷಣೆ ಮಾಡುವುದಿದ್ದರೆ ಮಾತ್ರ ನಮ್ಮ ಬೆಂಬಲ ಎಂದುಬಿಟ್ಟರು ಮಹಾತ್ಮಾ! ಪರಿಸ್ಥಿತಿಯನ್ನು ತಿಳಿಗೊಳಿಸಲು ಯುದ್ಧಕ್ಕೆ ಸಂಬಂಧಪಟ್ಟಂತೆಯೇ ಕ್ಯಾಬಿನೆಟ್ನ ಜವಾಬ್ದಾರಿ ಹೊತ್ತಿದ್ದ ಕ್ರಿಪ್ಸ್ ತನ್ನ ನಿಯೋಗದೊಂದಿಗೆ ಭಾರತಕ್ಕೆ ಬಂದ. ಒಂದರ್ಥದಲ್ಲಿ ಇದು ಕಾಂಗ್ರೆಸ್ಸಿನ ಗೆಲುವೇ. ಆದರೆ ಈ ಗೆಲುವು ಬಹಳಕಾಲ ಉಳಿಯಲಿಲ್ಲ. ಕ್ರಿಪ್ಸ್ ಭಾರತಕ್ಕೆ ಆಗಮಿಸುವಾಗಲೇ ವ್ಯವಸ್ಥಿತವಾಗಿ ಕಾಂಗ್ರೆಸ್ಸಿಗರನ್ನು ಮೂರ್ಖರನ್ನಾಗಿಸುವ ಯೋಜನೆಯೊಂದಿಗೆ ಬಂದಿದ್ದ. 1935ರ ಕಾನೂನಿನಲ್ಲಿ ಸಣ್ಣದೊಂದೆರಡು ತಿದ್ದುಪಡಿಗೆ ಆತ ಮನಸ್ಸು ಮಾಡಿದ. ಪೂರ್ಣಸ್ವಾತಂತ್ರ್ಯದ ಮಾತನ್ನೂ ಆಡದೇ ಸ್ವಾಯತ್ತ ರಾಷ್ಟ್ರದ ದಜರ್ೆಯನ್ನು ಕೊಡುವ ಭರವಸೆ ನೀಡಿದ. ಜೊತೆಗೆ ಮುಸಲ್ಮಾನರ ಪ್ರತ್ಯೇಕ ರಾಷ್ಟ್ರದ ಕಲ್ಪನೆಗೆ ನೀರೆರೆಯುವ ಎಲ್ಲ ಅಂಶಗಳನ್ನೂ ಚಚರ್ಿಸಿದ. ನಿಜಕ್ಕೂ ಗಾಂಧೀಜಿಗೆ ಭ್ರಮನಿರಸನವಾಗಿರಲಿಕ್ಕೆ ಸಾಕು. ಸತ್ಯ ಮತ್ತು ಅಹಿಂಸೆಯ ಅಸ್ತ್ರಗಳಿಗೆ ಬ್ರಿಟೀಷರ ಮನಸ್ಸು ಕರಗಿ ಅವರು ತಾವಾಗಿಯೇ ದೇಶವನ್ನು ಬಿಟ್ಟು ಹೋಗುತ್ತಾರೆ ಎಂಬ ಕನಸ್ಸು ಕಾಣುತ್ತಿದ್ದರು ಅವರು. ಜಗತ್ತೆಲ್ಲವನ್ನೂ ತಮ್ಮ ತಾಳಕ್ಕೆ ಕುಣಿಸುವ ಬ್ರಿಟೀಷರಿಗೆ ಒಂದೆರಡು ಪೀಳಿಗೆಯ ದೂರದೃಷ್ಟಿಯಲ್ಲ, ಸಾವಿರ ವರ್ಷಗಳ ನಂತರ ಬರುವ ಬ್ರಿಟೀಷ್ ಸಮುದಾಯ ಹೇಗಿರಬೇಕು ಎಂಬುದನ್ನು ಅವರು ಈಗ ಆಲೋಚಿಸುತ್ತಾರೆ. ಅಂಥದ್ದರಲ್ಲಿ ಭಾರತವನ್ನು ಸುಲಭವಾಗಿ ಬಿಟ್ಟುಹೋಗುವುದು ಸಾಧ್ಯವೇನು? ಅಷೇ ಅಲ್ಲ, ಈ ಬಾರಿ ಮಾತುಕತೆಯಲ್ಲಿ ಮುಸ್ಲೀಂ ಲೀಗ್ಗೆ ಅವರು ಕೊಟ್ಟ ಸ್ಥಾನ ಬಲುವಿಶೇಷವಾಗಿದ್ದರಿಂದ ಮಾತುಕತೆ ದೇಶ ವಿಭಜನೆಗೆ ಹೆಚ್ಚು ಶಕ್ತಿಯನ್ನೇ ತುಂಬಿತು. ಗಾಂಧೀಜಿ ಸತ್ಯಾಗ್ರಹಕ್ಕೆ ಕರೆಕೊಟ್ಟರು. ಅಷ್ಟೇ ಆಗಿದ್ದರೆ ವಿಶೇಷವೇನೂ ಇರಲಿಲ್ಲ. ‘ಮಾಡು ಇಲ್ಲವೇ ಮಡಿ’ ಎಂಬ ಅವರ ಉದ್ಘೋಷ, ಗಾಂಧೀಜಿ ಇನ್ನು ಸಹಿಸಲಾರೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿದಂತೆ ಕಾಣುತ್ತಿತ್ತು.


ಆಮೇಲೇನು? ಆಗಬಾರದ್ದು ನಡೆದೇ ಹೋಯ್ತು. ಮಾರ್ಗದರ್ಶನ ಮಾಡಲು ನಾಯಕರಿಲ್ಲದೇ ಇಡಿಯ ಆಂದೋಲನ ದಾರಿತಪ್ಪಿತು ಅಥವಾ ಸರಿಯಾದ ಸ್ವರೂಪದಲ್ಲಿ ಆಂದೋಲನ ಮುನ್ನುಗ್ಗಿತು. ಬೀದಿಗೆ ಬಂದ ದೊಡ್ಡ ಸಂಖ್ಯೆಯ ಜನ ರಸ್ತೆ ತಡೆ ನಡೆಸಿದರು, ರೈಲಿನ ಹಳಿಗಳನ್ನು ಕಿತ್ತೆಸೆದರು, ಪೊಲೀಸರಿಂದ ಶಸ್ತ್ರಗಳನ್ನು ಕಸಿದರು, ಅಲ್ಲಲ್ಲಿ ಬೆಂಕಿ ಹಚ್ಚಿದರು, ಇಡಿಯ ರಾಷ್ಟ್ರದಲ್ಲಿ ದೇಶಬಿಟ್ಟು ತೊಲಗಿ ಎನ್ನುವ ಈ ಘೋಷಣೆ ಗಲ್ಲಿ-ಗಲ್ಲಿಗಳಿಂದ ಮೊಳಗಲಾರಂಭಿಸಿತು. ಎಂಥವನೂ ಹೆದರಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಹೊತ್ತು ಅದು. ಬ್ರಿಟೀಷರು ಮುಲಾಜು ನೋಡಲಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನರ ಬಂಧನವಾಯ್ತು. ವೈಸ್ರಾಯ್ ಲಿನ್ಲಿತ್ಗೊಗೆ ಬರೆದ ಪತ್ರದಲ್ಲಿ ರಾಮ್ ಮನೋಹರ್ ಲೊಹಿಯಾ, ಸಕರ್ಾರ 50 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ. ಅದಕ್ಕೂ ಹೆಚ್ಚುಜನ ಗಾಯಾಳುಗಳಾಗಿದ್ದಾರೆ ಎಂದಿದ್ದರು. ಅಷ್ಟೇ ಅಲ್ಲ, ರಷ್ಯಾದ ಕ್ರಾಂತಿಯಲ್ಲಿ ಭಾಗವಹಿಸಿದ್ದು ಜನಸಂಖ್ಯೆಯ ಶೇಕಡಾ ಒಂದರಷ್ಟು ಮಾತ್ರ. ಆದರೆ ಈ ಆಂದೋಲನದಲ್ಲಿ ಜನಸಂಖ್ಯೆಯ ಶೇಕಡಾ 20ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎಂದಿದ್ದರು. ಬಹುಶಃ ಇಡಿಯ ಚಳವಳಿಯ ಕಲ್ಪನೆಯನ್ನು ಈ ಪತ್ರವೊಂದರಿಂದಲೇ ಕಟ್ಟಿಕೊಳ್ಳಬಹುದು. ಇಷ್ಟು ವ್ಯಾಪಕವಾಗಿ ಬೆಳೆದಿದ್ದ ಆಂದೋಲನ ನೋಡ-ನೋಡುತ್ತಲೇ ಹತ್ತಿಕ್ಕಲ್ಪಟ್ಟಿತು. ಮುಸ್ಲೀಂ ಲೀಗ್ ಭಾರತದ ಸಹಕಾರಕ್ಕೆ ಬರಲೇ ಇಲ್ಲ. ಗಾಂಧೀಜಿ ಕ್ರಿಪ್ಸ್ ಸಂಧಾನದ ವೇಳೆಗೆ ಮುಸಲ್ಮಾನರಿಗೆ ದೊರೆಯುವ ಪ್ರತ್ಯೇಕ ಸ್ಥಾನಮಾನವನ್ನೇ ವಿರೋಧಿಸಿದ್ದಾರೆ ಎಂಬುದು ಅವರ ವಾದ. ಕ್ರಿಪ್ಸ್ ಗೆದ್ದಿದ್ದ!


ಕ್ವಿಟ್ ಇಂಡಿಯಾ ನೆನಪಿಸಿಕೊಂಡಾಗಲೆಲ್ಲ ಅಯೋಗ್ಯ ಕಮ್ಯುನಿಸ್ಟರನ್ನು ನೆನಪಿಸಿಕೊಳ್ಳಲೇಬೇಕು. ಆರಂಭದಲ್ಲಿ ಅವರು ಮಹಾತ್ಮಾ ಗಾಂಧೀಜಿಯವರ ವಿರೋಧಕ್ಕೆ ನಿಂತು ಯುದ್ಧದ ಹೊತ್ತಿನಲ್ಲಿ ಅವಕಾಶವನ್ನು ಬಳಸಿಕೊಂಡು ಸ್ವಾತಂತ್ರ್ಯವನ್ನು ಗಳಿಸಿಕೊಂಡುಬಿಡಬೇಕು ಎನ್ನಲಾರಂಭಿಸಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ನುಗ್ಗುತ್ತಿರುವ ಸುಭಾಷ್ಚಂದ್ರ ಬೋಸರ ಬಗ್ಗೆ ಅಪಾರ ಸಹಾನುಭೂತಿಯೂ ಅವರಿಗಿತ್ತು. ಹಾಗಂತ ಅವರು ದೇಶಭಕ್ತರಾಗಿಬಿಟ್ಟರು ಎಂದೇನು ಭಾವಿಸಿಬಿಡಬೇಡಿ. ಚೀನಾದ ಕಮ್ಯುನಿಸ್ಟ್ ಪಾಟರ್ಿಯ ಶತವರ್ಷದ ಸಂಭ್ರಮಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗಿ ಕುಳಿತುಕೊಳ್ಳುವ ಅಯೋಗ್ಯ ಮಂದಿ ಈಗಲೂ ಇರುವಾಗ, ಅಂದು ದೇಶಭಕ್ತಿ ಇವರ ಹತ್ತಿರಕ್ಕಾದರೂ ಸುಳಿದಿತ್ತೇನು? ಸಾಧ್ಯವೇ ಇಲ್ಲ. ರಷ್ಯಾ ಜರ್ಮನಿಯ ಕುರಿತಂತೆ ಸಹಾನುಭೂತಿ ಹೊಂದಿದ್ದರಿಂದ ಇಲ್ಲಿನ ಕಮ್ಯುನಿಸ್ಟರಿಗೆ ಬ್ರಿಟೀಷರ ವಿರೋಧ. ಕಾಲಕಳೆದಂತೆ ಹಿಟ್ಲರ್ ರಷ್ಯಾದ ಮೇಲೂ ಏರಿ ಹೋದಾಗ ರಷ್ಯಾ ಬ್ರಿಟನ್ನಿನ ಪರವಾಗಿ ನಿಂತುಕೊಂಡಿತಲ್ಲ, ಆಗ ಕಮ್ಯುನಿಸ್ಟರು ಬ್ರಿಟನ್ನಿನ ಪರವಾಗಿ ಮಾತನಾಡಲಾರಂಭಿಸಿದರು. ಅವರಿಗೀಗ ಸುಭಾಷ್ಚಂದ್ರ ಬೋಸ್ ಜಪಾನಿನ ಅಧ್ಯಕ್ಷರ ನಾಯಿಯಂತೆ ಕಾಣಲಾರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಅವರ ರಾಷ್ಟ್ರನಿಷ್ಠೆ ಪ್ರಶ್ನಾರ್ಹವೇ!


ಈ ರೀತಿಯ ಇಬ್ಬಗೆಯ ನೀತಿಯುಳ್ಳ ಜನ ಬ್ರಿಟೀಷರಿಗೆ ವರದಾನವಾದರು. ದೊಡ್ಡ ಸಂಖ್ಯೆಯಲ್ಲಿ ಆಂದೋಲನ ನಡೆಯಿತಾದರೂ ದೀರ್ಘಕಾಲ ನಡೆಯದೇ ಸತ್ತುಹೋಯ್ತು. ಒಂದು ರೀತಿಯಲ್ಲಿ ಈ ಆಂದೋಲನ ಕಾಂಗ್ರೆಸ್ಸಿಗೆ ತಮ್ಮ ಸಾಮಥ್ರ್ಯದ ಅರಿವು ಮಾಡಿಸಿಕೊಟ್ಟಿತಲ್ಲದೇ ಬ್ರಿಟೀಷರಿಗೆ ಸಣ್ಣ ಆತಂಕವನ್ನು ಹುಟ್ಟುಹಾಕಿತು. ಗಾಂಧೀಜಿ ಶಾಂತಿಯ ಮಾತನ್ನಾಡಿದಾಗಲೇ ಈ ಪರಿಯ ಪ್ರತಿಭಟನೆ ಕಂಡುಬಂತು. ಇನ್ನು ಇಡಿಯ ದೇಶ ಶಸ್ತ್ರವನ್ನು ಕೈಗೆತ್ತಿಕೊಂಡರೆ ಕಥೆಯೇನು ಅನಿಸಿತ್ತು ಅವರಿಗೆ. ಯುದ್ಧ ಮುಗಿದಮೇಲೆ ಉಸಿರಾಡೋಣವೆಂದರೆ ಸುಭಾಷ್ಚಂದ್ರ ಬೋಸರ ಆಜಾದ್ ಹಿಂದ್ ಸೇನೆಯ ಸೈನಿಕರು ಭಾರತದಲ್ಲಿ ಉತ್ಪಾತವನ್ನೇ ಮಾಡಿಬಿಟ್ಟರು. ಸೈನಿಕರ ದಂಗೆಗಳನ್ನು ಊಹಿಸಿಕೊಂಡೇ ಬ್ರಿಟೀಷರ ಹೃದಯ ಬೆಚ್ಚಗಾಯ್ತು. ದೇಶಬಿಟ್ಟು ಹೊರಡಬೇಕು, ಆದರೆ ಜಾಗತಿಕ ಮಟ್ಟದಲ್ಲಿ ಅವಮಾನವಾಗದಂತೆ ನೋಡಿಕೊಳ್ಳಬೇಕು ಎಂಬ ನಿರ್ಣಯಕ್ಕೆ ಬಂದ ಅವರು ಅಂದುಕೊಂಡದ್ದಕ್ಕಿಂತ ಮುಂಚಿತವಾಗಿಯೇ ದೇಶಬಿಟ್ಟು ಹೊರಟರು.


ಸ್ವಾತಂತ್ರ್ಯ ಬಂದು 75 ವರ್ಷ ಕಳೆದಮೇಲೆಯೂ ಇದೇ ಗಾಂಧೀಜಿಯ ಅನುಯಾಯಿಗಳು ಇನ್ನೂ ಭಾರತವನ್ನು ಸ್ವರಾಜ್ಯವೆಂದು ಭಾವಿಸಿಯೇ ಇಲ್ಲ. ಈಗಲೂ ಭಾರತ್ ತೇರೆ ತುಕ್ಡೇ ಹೋಂಗೆ ಎಂದು ಘೋಷಣೆ ಕೂಗುವುದರಲ್ಲಿ ಹಿಂಜರಿಯುವುದಿಲ್ಲ. ದುರಂತವೆಂದರೆ ಜೆಎನ್ಯು ವಿದ್ಯಾಥರ್ಿಗಳು ಹೀಗೆ ಘೋಷಣೆ ಕೂಗಿದಾಗ ಅವರ ಬೆಂಬಲಕ್ಕೆ ಗಾಂಧಿ ಅನುಯಾಯಿಗಳ ದೊಡ್ಡ ಗಡಣವೇ ನಿಂತಿತ್ತು. 370ನೇ ವಿಧಿಯನ್ನು ಕೇಂದ್ರಸಕರ್ಾರ ಕಿತ್ತು ಬಿಸುಟಾಗ ಗಾಂಧಿ ಅನುಯಾಯಿಗಳು ಸಂಭ್ರಮಾಚರಣೆ ಮಾಡಬೇಕಿತ್ತು. 370ನ್ನು ಕ್ವಿಟ್ ಇಂಡಿಯಾ ಎನ್ನಬೇಕಿತ್ತು. ಊಹ್ಞೂಂ, ಹಾಗಾಗಲಿಲ್ಲ. ಸಂಸತ್ ಅಧಿವೇಶನದ ಹೊತ್ತಲ್ಲಿ ದಿನಬೆಳಗಾದರೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರಲ್ಲ ಗಾಂಧಿ ಅನುಯಾಯಿಗಳು ಕನ್ನಡಿಯಲ್ಲಿ ಒಮ್ಮೆ ಮುಖ ನೋಡಿಕೊಳ್ಳುವುದೊಳಿತು. ಗಾಂಧೀಜಿ ಮೂಲ ಶಿಕ್ಷಣದ ಕುರಿತಂತೆ ಮಾತನಾಡಿದರು. ಅದಕ್ಕೆ ಹತ್ತಿರವಿರುವ ಶಿಕ್ಷಣನೀತಿಯೊಂದನ್ನು ಪ್ರಸ್ತುತಪಡಿಸಿದರೆ ಗಾಂಧಿ ಅನುಯಾಯಿಗಳೇ ವಿರೋಧಿಸುತ್ತಾರಲ್ಲ, ಅಚ್ಚರಿ. ಸರಳತೆ ಗಾಂಧೀಜಿಯವರ ಮೂಲಮಂತ್ರವಾಗಿತ್ತು. ಮೈಮೇಲಿದ್ದ ಬಟ್ಟೆಯನ್ನು ಕಿತ್ತುಬಿಸುಟು ತುಂಡು ಪಂಚೆಗೆ ಬಂದಿದ್ದ ಪುಣ್ಯಾತ್ಮ. ಮಂತ್ರಿಗಳ, ಅಧಿಕಾರಗಳ ವಿಐಪಿ ಸಂಸ್ಕೃತಿಯನ್ನು ಹೊಡೆದಟ್ಟಿ ಅವರ ಗಾಡಿಗಳ ಕೆಂಪುದೀಪವನ್ನು ತೆಗೆಸಿದರೆ, ಗಾಂಧೀಜಿಯ ಹೆಸರು ಹೇಳುವವರು ಖುಷಿ ಪಡಬೇಕಲ್ಲವೇ? ಗೋಹತ್ಯೆ ನಿಷೇಧಕ್ಕೆ ಕಾನೂನು ಬಂದರೆ, ಸಂಭ್ರಮಿಸಬೇಕಾದ್ದು ಯಾರು ಹೇಳಿ? ಗಾಂಧಿಯ ಹೆಸರು ಹೇಳಿಕೊಂಡು ಬದುಕು ನಡೆಸುತ್ತಿರುವವರು ತಾನೆ? ಆದರೆ ಹಾಗೇಕೆ ಆಗುತ್ತಿಲ್ಲ. ಎಲ್ಲ ಬಿಡಿ, ರಾಮ್ಧುನ್ ಹೇಳುತ್ತಾ ರಾಮನ ಆದರ್ಶದ ಮೇಲೆಯೇ ಬದುಕುವ ಕಲ್ಪನೆ ಕಟ್ಟಿಕೊಡುತ್ತಿದ್ದ ಗಾಂಧಿಯ ನಾಡಿನಲ್ಲಿ ರಾಮ ಜನ್ಮಸ್ಥಾನ್ ಮಂದಿರ ಪುನರ್ನಿಮರ್ಾಣಗೊಳ್ಳುವಾಗ ಮುಂದೆ ನಿಂತು ಕಲ್ಲುಕಟ್ಟಬೇಕಾದವರು ಯಾರು ಹೇಳಿ? ಮತ್ತದೇ ಗಾಂಧಿಯ ಹೆಸರು ಎರವಲು ಪಡೆದವರು ತಾನೆ?
ಕ್ವಿಟ್ ಇಂಡಿಯಾ ಮತ್ತೊಮ್ಮೆ ಆಗಬೇಕಿದೆ. ಕ್ರೀಡಾಪಟುಗಳಿಗೆ ಪ್ರಶಸ್ತಿ ಕೊಡುವಾಗಲೂ ರಾಜಕಾರಣಿಗಳ ಹೆಸರು, ಆಸ್ಪತ್ರೆಗೆ ಹೆಸರಿಡುವಾಗಲೂ ರಾಜಕಾರಣಿಗಳದ್ದೇ. ಇವೆಲ್ಲವನ್ನೂ ಕಿತ್ತೆಸೆಯುವ ಕಾಲಬಂದಿದೆ. ಚುನಾವಣೆ ಬಂದೊಡನೆ ಜನಿವಾರ ಹಾಕಿಕೊಂಡು, ವಿಭೂತಿ ಬಳಿದುಕೊಂಡು, ಪಂಥಗಳ ರಾಜಕಾರಣ ಮಾಡಿ ಮತಸ್ವೀಕಾರ ಮಾಡುವ ಜನರಿಗೆ ಕ್ವಿಟ್ ಇಂಡಿಯಾ ಎನ್ನಬೇಕಿದೆ. ರೈತರಿಗೆ ನೇರವಾಗಿ ಲಾಭ ಸಂದಾಯವಾಗುವಾಗ ಅದನ್ನು ಬೇಕಂತಲೇ ವಿರೋಧಿಸುತ್ತಾ ರಸ್ತೆಯನ್ನು ಅಡ್ಡಗಟ್ಟಿ ಕೂರುತ್ತಾರಲ್ಲ, ಬಿರಿಯಾನಿ ತಿನ್ನುತ್ತಾ ಹೈವೇಗಳಲ್ಲಿ ಜನ ಸಂಚರಿಸದಂತೆ ಮಾಡುತ್ತಾರಲ್ಲ, ಅಂಥವರಿಗೆ ಎಚ್ಚರಿಕೆ ಕೊಡಬೇಕಿದೆ. ಹೊಸ ಭಾರತ ಹೀಗೆಯೇ ಮೈದಳೆಯಬೇಕಾಗಿರುವುದು. ನಾವು-ನೀವುಗಳೇ ಇದಕ್ಕೆ ಸತ್ಯಾಗ್ರಹಿಗಳು!

ಪ್ರಧಾನಿಯ ಪ್ರತಿಯೊಂದು ನಡೆಯೂ ಸಮರ್ಥ ಪಾಠ!

ಪ್ರಧಾನಿಯ ಪ್ರತಿಯೊಂದು ನಡೆಯೂ ಸಮರ್ಥ ಪಾಠ!


ಚೀನಾದ ಕಮ್ಯುನಿಸ್ಟ್ ಪಾಟರ್ಿಗೆ ಇತ್ತೀಚೆಗೆ ನೂರು ವರ್ಷವಾಯ್ತು. ಸುದೀರ್ಘವಾದ ಭಾಷಣವೊಂದರಲ್ಲಿ ತನ್ನ ಮನದಿಂಗಿತವನ್ನು ಷಿ ಜಿನ್ಪಿಂಗ್ ವ್ಯಕ್ತಪಡಿಸಿದ. ಆದರೆ ಇದೇ ಸಂದರ್ಭದಲ್ಲಿ ಜಾಗತಿಕವಾದ ಚೀನಿಯರ ಕುರಿತಂತಹ ಭಾವನೆಗಳು ವಿಭಿನ್ನ ತಿರುವನ್ನು ಪಡೆದುಕೊಳ್ಳುತ್ತಿರುವುದು ಚೀನಾಕ್ಕೆ ಒಳ್ಳೆಯ ಸಂಗತಿಯೇನೂ ಅಲ್ಲ. ಕೆಲವು ಗುಪ್ತ ಮಾಹಿತಿಗಳಂತೂ ದಿನಗಳೆದಂತೆ ಹೆಚ್ಚು-ಹೆಚ್ಚು ಹೊರಬರುತ್ತಿವೆ. ಇತ್ತೀಚೆಗೆ ಅಮೇರಿಕಾದ ಸಕರ್ಾರೇತರ ಸಂಸ್ಥೆಯೊಂದು ನಡೆಸಿದ ಸಂಶೋಧನೆಯಿಂದ ಒಂದಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಕಳೆದ ಆರು ತಿಂಗಳಲ್ಲಿ ಚೀನಾ ಅಮೇರಿಕಾದ ಟೈಮ್ ಪತ್ರಿಕೆಗೆ ಏಳು ಲಕ್ಷ ಡಾಲರ್ಗಳನ್ನು, ಫೈನಾನ್ಷಿಯಲ್ ಟೈಮ್ಸ್ಗೆ ಸುಮಾರು ಮೂರುಮುಕ್ಕಾಲು ಲಕ್ಷ ಡಾಲರ್ಗಳನ್ನು, ಫಾರಿನ್ ಪಾಲಿಸಿ ಪತ್ರಿಕೆಗೆ ಮೂರು ಲಕ್ಷ ಡಾಲರ್ಗಳನ್ನು, ಲಾಸ್ ಏಂಜಲೀಸ್ ಟೈಮ್ಸ್ಗೆ ಎರಡುಮುಕ್ಕಾಲು ಲಕ್ಷ ಡಾಲರ್ಗಳನ್ನು, ಇದಲ್ಲದೇ ಇತರೆ ಕೆಲವು ಪತ್ರಿಕೆಗಳಿಗೆ ಸೇರಿ ಹತ್ತು ಲಕ್ಷ ಡಾಲರ್ಗಳನ್ನು ನೀಡಿದೆ. ಸದಾ ಭಾರತ ವಿರೋಧಿ ಸುದ್ದಿಗಳಿಂದಲೇ ಕುಖ್ಯಾತವಾಗಿರುವ ವಾಷಿಂಗ್ಟನ್ ಪೋಸ್ಟ್ ಕಳೆದ ನಾಲ್ಕೈದು ವರ್ಷಗಳಲ್ಲಿ ಚೀನಾದಿಂದ 45 ಲಕ್ಷ ಡಾಲರ್ಗಳನ್ನು ಜೇಬಿಗಿಳಿಸಿಕೊಂಡಿದೆ. ಇದೇ ಅವಧಿಯಲ್ಲಿ ವಾಲ್ಸ್ಟ್ರೀಟ್ ಜರ್ನಲ್ 60 ಲಕ್ಷ ಡಾಲರ್ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ವರದಿಯಲ್ಲಿ ಇನ್ನೂ ಅನೇಕ ಪತ್ರಿಕೆಗಳ ಹೆಸರಿವೆ. ಇವೆಲ್ಲವೂ ಕಳೆದ ಒಂದು ದಶಕದಿಂದೀಚೆಗೆ ಚೀನಾದ ಕುರಿತ ಸುದ್ದಿಗಳನ್ನು ತಮ್ಮ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಕಟಿಸಿಕೊಂಡೇ ಬಂದವು. ತನ್ನ ರಾಷ್ಟ್ರದಲ್ಲಿ ಚೀನಾ ಪತ್ರಿಕಾ ನಿರ್ಬಂಧಗಳನ್ನು ಹೇರಿದಾಗ್ಯೂ, ಜನಸಾಮಾನ್ಯರ ಸ್ವಾತಂತ್ರ್ಯವನ್ನು ಕಸಿದು ಮೆರೆಯುತ್ತಿದ್ದಾಗ್ಯೂ, ಉಯ್ಘುರ್ ಮುಸಲ್ಮಾನರನ್ನು ನಾಯಿಗಿಂತಲೂ ಕಡೆಯಾಗಿ ಕಾಣುತ್ತಿದ್ದಾಗ್ಯೂ ಚೀನಾವನ್ನು ಮುಕ್ತಕಂಠದಿಂದ ಹೊಗಳುತ್ತಿದ್ದ ಪತ್ರಿಕೆಗಳು ಇವು. ಚೀನಾದ ಕುರಿತ ಒಂದು ಭ್ರಮಾಲೋಕವನ್ನೇ ನಮಗೆ ಸೃಷ್ಟಿಸಿಕೊಟ್ಟು ಅದರ ವಿರುದ್ಧ ನಾವು ಮಾತನಾಡಲಾಗದ ಸ್ಥಿತಿಯನ್ನು ಸೃಷ್ಟಿಸಿದ್ದವರೂ ಇವರುಗಳೇ.


ಜಾಹಿರಾತು ಕೊಡುವುದರಿಂದ ಈ ರೀತಿಯ ಒಂದು ಭ್ರಮೆಯನ್ನು ಸೃಷ್ಟಿಸುವುದು ಸಾಧ್ಯವೇ ಎಂಬ ಪ್ರಶ್ನೆ ನಿಮಗೇನಾದರೂ ಬಂದರೆ ನೀವೊಮ್ಮೆ ದೆಹಲಿ ಸಕರ್ಾರ ಮತ್ತು ಕೇಜ್ರಿವಾಲ್ರನ್ನು ನೆನಪಿಸಿಕೊಳ್ಳಬೇಕು. ಕಳೆದ ಒಂದು ವರ್ಷದಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳಿಗೆ ಜಾಹಿರಾತಿಗೆಂದೇ ಕೋಟ್ಯಂತರ ರೂಪಾಯಿ ಹಣ ಸುರಿದ ಕೇಜ್ರಿವಾಲ ಕರೋನಾ ಸಂದರ್ಭದಲ್ಲಿ ಜನ ಸಾಮಾನ್ಯರ ಕುರಿತು ಕಾಳಜಿ ವಹಿಸಿದ್ದಕ್ಕಿಂತಲೂ ಪತ್ರಿಕೆಗಳಿಗೆ ಹಣ ಸುರಿದದ್ದೇ ಹೆಚ್ಚು. ಅದರ ಪ್ರತಿಫಲವಾಗಿ ಕೇಜ್ರಿವಾಲನ ಸಕರ್ಾರದ ಕುರಿತಂತೆ ಒಂದು ಭ್ರಮೆಯನ್ನು ನಮಗರಿವಿಲ್ಲದಂತೆ ಸೃಷ್ಟಿಸಲಾಗಿತ್ತು. ಕರೋನಾ ಕಾಲಕ್ಕೆ ದೆಹಲಿಯಲ್ಲಿ ಏರುಮುಖವಾಗಿದ್ದ ರೋಗಿಗಳಿಗೂ ಪತ್ರಿಕೆಗಳು ಪ್ರಶ್ನಿಸಿದ್ದು ಮೋದಿಯನ್ನೇ ಹೊರತು ಕೇಜ್ರಿವಾಲನನ್ನಲ್ಲ. ದಿನ ಬೆಳಗಾದರೆ ಆಕ್ಸಿಜೆನ್ನ ಕೊರತೆ ಎಂದು ಕೂಗಾಡುತ್ತಿದ್ದ ಕೇಜ್ರಿವಾಲನನ್ನು ಮತ್ತೆ ಮತ್ತೆ ಟಿವಿಯಲ್ಲಿ ತೋರಿಸುತ್ತಿದ್ದ ಪತ್ರಕರ್ತರು ಆತ ಅನವಶ್ಯಕವಾಗಿ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿ ಬೇಕೆಂತಲೇ ಆತಂಕ ಮೂಡಿಸಿದ್ದ ಎಂಬ ಸುದ್ದಿ ಹೊರಬಂದಾಗ ಎಲ್ಲ ಪತ್ರಿಕೆಗಳು ಮುಗುಮ್ಮಾಗಿ ಕುಳಿತುಬಿಟ್ಟಿದ್ದವು. ನಮ್ಮ ತೆರಿಗೆಯ ಹಣದ ಜಾಹಿರಾತು ಪತ್ರಿಕೆಗಳನ್ನು ಪ್ರಶ್ನೆ ಕೇಳದಂತೆ ಮಾಡಿಬಿಟ್ಟಿದ್ದವು. ಇದೇ ಪರಿಸ್ಥಿತಿ ಷಿಯದ್ದೂ ಕೂಡ. ಆತನ ಎಲ್ಲ ದುರಾಚಾರವನ್ನು ಜಾಗತಿಕ ಮಾಧ್ಯಮಗಳು ಪ್ರಶ್ನಿಸದೇ ಇರಲು ಕಾರಣವೇ ಆತ ಸುರಿಯುತ್ತಿದ್ದ ಹಣ. ಆದರೀಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕಮ್ಯುನಿಸ್ಟ್ ಪಕ್ಷ ನೂರನೇ ವಷರ್ಾಚರಣೆಯನ್ನು ಸಂಭ್ರಮಿಸುವ ವೇಳೆಗೆ ಅದರ ಹುಳುಕುಗಳು ಸಮಾಜದ ಮುಂದೆ ಬಟಾ ಬಯಲಾಗಿ ನಿಂತಿವೆ. ವಾಸ್ತವವಾಗಿ ಗ್ಯಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಬಳಿ ಏಟು ತಿಂದದ್ದೇ ಚೀನಾದ ದುದರ್ೆಶೆಯ ಪರ್ವ ಆರಂಭವಾದ ಸಂದರ್ಭ ಎನ್ನಬಹುದು. ಕಾಲ್ಕೆರೆದು ಜಗಳ ಆರಂಭಿಸಿದ ಚೀನಾ ಬಫರ್ ಜೋನ್ಗಳಿಗೂ ನುಗ್ಗಿ ಡೇರೆಯನ್ನು ಹಾಕಿಕೊಂಡಿದ್ದು ಭಾರತೀಯ ಸೇನೆಗೆ ಅಚ್ಚರಿಯೇ ಆಗಿತ್ತು. ಭಾರತದೊಳಗೆ ಜನ ಕರೋನಾ ವಿರುದ್ಧ ಹೋರಾಡುತ್ತಿರುವಾಗ ಈ ರೀತಿ ನಿರ್ದಯವಾಗಿ ನಡೆದುಕೊಂಡಿದ್ದು ನಿಸ್ಸಂಶಯವಾಗಿ ಮಾನವೀಯತೆಯ ಚೌಕಟ್ಟಿನಿಂದ ಹೊರಗಿತ್ತು. ಎಂದಿನಂತೆ ಷಿ ಹಾಕಿದ ಬಿಸ್ಕತ್ತುಗಳಿಂದ ದಷ್ಟಪುಷ್ಟವಾಗಿ ಬೆಳೆದಿದ್ದ ಜಾಗತಿಕ ಮಾಧ್ಯಮಗಳು ಈ ಸುದ್ದಿಗೆ ಹೆಚ್ಚಿನ ಮಹತ್ವವನ್ನೇ ಕೊಡಲಿಲ್ಲ. ಭಾರತ ಈ ಘಟನೆಯಲ್ಲಿ ಹಿನ್ನಡೆ ಅನುಭವಿಸಲಿದೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಭಾರತೀಯ ಸೇನೆ ತಿರುಗಿ ಬಿದ್ದ ರೀತಿ ಚೀನಾಕ್ಕೆ ಬಲುದೊಡ್ಡ ಮುಖಭಂಗ. ಕಳೆದ ಆಗಸ್ಟ್ನ ಕೊನೆಯ ದಿನಗಳಲ್ಲಿ ನಿರಾಶ್ರಿತ ಟಿಬೆಟ್ ಸೈನಿಕರಿಂದ ರಚಿಸಲ್ಪಟ್ಟ ಸ್ಪೆಷಲ್ ಫ್ರಾಂಟಿಯರ್ ಫೋಸರ್್ ಪ್ಯಾಂಗಾಂಗ್ಸೊನ ದಕ್ಷಿಣಕ್ಕಿರುವ ಕೈಲಾಶ್ ಶ್ರೇಣಿಯ ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಂಡಮೇಲಂತೂ ಚೀನಾದ ದೌರ್ಬಲ್ಯಗಳು ಬೆಳಕಿಗೆ ಬಂದಿದ್ದವು. ಅನಿವಾರ್ಯವಾಗಿ ಚೀನಾ ಭಾರತದೊಂದಿಗೆ ಮಾತುಕತೆಗೆ ಬರಬೇಕಾಯ್ತಲ್ಲದೇ ಪ್ಯಾಂಗಾಂಗ್ ಭಾಗವನ್ನು ಬಿಟ್ಟು ಹೊರಡುವುದಾಗಿ ಹೇಳಿಕೊಂಡಿತು!


ಅಲ್ಲಿಯವರೆಗೂ ಚೀನಾದ ಮನ ನೋಯಿಸದಂತೆ ಅಂತಾರಾಷ್ಟ್ರೀಯ ಮಟ್ಟದ ಸಂಬಂಧಗಳನ್ನು ರೂಪಿಸಿಕೊಂಡು ಬರುತ್ತಿದ್ದ ಭಾರತ ಆನಂತರ ಪೂರ್ಣ ಬದಲಾಯ್ತು. ನಿಮಗೆ ನೆನಪಿರಬೇಕು. ಟಿಬೆಟ್ ಸಕರ್ಾರದ ಅಧ್ಯಕ್ಷರನ್ನು 2014ರಲ್ಲಿ ಮೋದಿ ಆಹ್ವಾನಿಸಿದ್ದರು. 2016ರಲ್ಲಿ ದಲೈ ಲಾಮಾ ಅವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಲಾಗಿತ್ತು. 2017ರಲ್ಲಿ ತವಾಂಗ್ ಭೇಟಿಗೆ ಅವರಿಗೆ ಅವಕಾಶವನ್ನೂ ಮಾಡಿಕೊಡಲಾಗಿತ್ತು. ಹೊಸ ಪ್ರಧಾನಿಗಳ ಬದಲಾಗಿರುವ ಆದ್ಯತೆಗಳ ಸೂಚನೆ ಚೀನಾಕ್ಕೆ ಕೊಡಲೇಬೇಕಾದ ಅನಿವಾರ್ಯತೆ ಮೋದಿಗಿತ್ತು. ಚೀನಾದೊಂದಿಗೆ ತಗ್ಗಿ-ಬಗ್ಗಿ ನಡೆಯುವ ಕಮ್ಯುನಿಸ್ಟ್ ಪಾಟರ್ಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವ ಕಾಂಗ್ರೆಸ್ಗಿಂತ ತಾನು ಭಿನ್ನ ಎಂದು ತೋರಿಸಲೇಬೇಕಾದ ಅನಿವಾರ್ಯತೆ ಮೋದಿಗಿತ್ತು. ಅದು ಲಾಭವೂ ಆಯ್ತು. ಷಿ ಜಿನ್ಪಿಂಗ್ ತಾನೇ ಭಾರತ ಭೇಟಿಗೆ ಬಂದ. ಮೋದಿಯವರನ್ನು ಮಾತನಾಡಿಸಿದ. ಹಾಗಂತ ಚೀನಾ ಬದಲಾಯಿತು ಎಂದೇನೂ ಇಲ್ಲ. ಅದೇ ಹೊತ್ತಲ್ಲಿ ಡೋಕ್ಲಾಂನಲ್ಲಿ ಚೀನೀ ಮತ್ತು ಭಾರತೀಯ ಸೈನಿಕರ ನಡುವೆ ಯುದ್ಧೋತ್ಸಾಹ ಏರ್ಪಟ್ಟುಬಿಟ್ಟಿತ್ತು. ಅದು ಭಾರತಕ್ಕೆ ಚೀನಾ ಕೊಟ್ಟ ಎಚ್ಚರಿಕೆ. ಆನಂತರ ಭಾರತ ಚೀನಾದ ವಿಚಾರದಲ್ಲಿ ಸ್ವಲ್ಪ ಮೆದು ಧೋರಣೆಯನ್ನೇ ಅನುಸರಿಸುತ್ತಿತ್ತು. ದಲೈಲಾಮಾ ಮತ್ತು ಮೋದಿ ಬಾಂಧವ್ಯ ಮೇಲ್ನೋಟಕ್ಕೆ ಸ್ವಲ್ಪ ಕಡಿಮೆಯೇ ಆಯ್ತು ಎನ್ನಬೇಕು. ಆದರೆ ಈಗ ಮತ್ತೆ ಅದು ಹಳಿಗೆ ಬಂದಿದೆ. ಮೊನ್ನೆಯಷ್ಟೇ ಮೋದಿ ದಲೈಲಾಮಾ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಇದು ಸಾಮಾನ್ಯವಾದ್ದೇನೂ ಅಲ್ಲ. ಕಮ್ಯುನಿಸ್ಟ್ ಪಾಟರ್ಿ ದಲೈಲಾಮಾರ ಆಧ್ಯಾತ್ಮಿಕ ಉತ್ತರಾಧಿಕಾರಿಯನ್ನು ತಾನೇ ನೇಮಿಸಬೇಕೆಂಬ ಧಾವಂತದಲ್ಲಿದೆ. ಈ ಹೊತ್ತಿನಲ್ಲಿ ದಲೈಲಾಮಾ ತವಾಂಗಿನಲ್ಲಿ ತಮ್ಮ ಉತ್ತರಾಧಿಕಾರಿಯನ್ನು ಹುಡುಕಿಕೊಂಡುಬಿಟ್ಟರೆ ಟಿಬೆಟ್ ಜನರ ಹೋರಾಟ ಮತ್ತೆ ಮುಂದುವರಿಯುತ್ತದೆ. ಹೀಗಾಗಿಯೇ ಚೀನಾಕ್ಕೆ ಭಾರತದ ಈ ನಡೆ ನಿಸ್ಸಂಶಯವಾಗಿ ಕಿರಿಕಿರಿ. ಕೈಲಾಶ್ ಶ್ರೇಣಿಗಳನ್ನು ಟಿಬೆಟಿಯನ್ ಸೈನಿಕರೇ ವಶಪಡಿಸಿಕೊಂಡಿರುವ ಸುದ್ದಿಯಂತೂ ಚೀನಾಕ್ಕೆ ನುಂಗಲಾರದ ತುತ್ತು. ಹೀಗಾಗಿಯೇ ಈಗ ಭಾರತೀಯ ಪಡೆಗಳೊಂದಿಗೆ ಕಾದಾಡಲು ಟಿಬೆಟಿಯನ್ ಸೈನಿಕರದ್ದೇ ಒಂದು ತುಕಡಿಯನ್ನು ಅದು ಸಿದ್ಧಗೊಳಿಸುತ್ತಿದೆ. ಚೀನಾದ ಮುಖ್ಯಭೂಮಿಯ ಸೈನಿಕರು ಭಾರತೀಯ ಪಡೆಗಳಿಂದ ಮುಖಭಂಗ ಅನುಭವಿಸಿದ್ದನ್ನು ಅದಕ್ಕೆ ಮರೆಯಲು ಆಗುತ್ತಲೇ ಇಲ್ಲ. ಈ ಎತ್ತರದಲ್ಲಿ ಪ್ರಬಲ ಭಾರತೀಯ ಸೈನಿಕರೊಂದಿಗೆ ಕಾದಾಡಲು ಟಿಬೆಟಿಯನ್ನರೇ ಸರಿ ಎಂದು ಅದು ನಿಶ್ಚಯಿಸಿಬಿಟ್ಟಿದೆ. ಹೀಗಾಗಿಯೇ ಈ ಸಾಹಸ. ಈ ಹೊತ್ತಿನಲ್ಲಿ ದಲೈಲಾಮಾಗೆ ಭಾರತ ಕೊಡುತ್ತಿರುವ ಗೌರವ ಚೀನಾದಲ್ಲಿ ತರಬೇತು ಪಡೆಯುತ್ತಿರುವ ಟಿಬೆಟ್ ಸೈನಿಕರ ಮನೋಸ್ಥೈರ್ಯವನ್ನು ಕುಸಿಯುವಂತೆ ಮಾಡುವುದಂತೂ ಅಕ್ಷರಶಃ ಸತ್ಯ.
ನಿಧಾನವಾಗಿ ಜಗತ್ತಿಗೆ ಚೀನಾದ ಉದ್ದೇಶಗಳು ಸ್ಪಷ್ಟವಾಗಿ ಅರ್ಥವಾಗುತ್ತಿವೆ. ಅದಾಗಲೇ ಶ್ರೀಲಂಕಾ ಚೀನಾ ಹೇರಿದ ಸಾಲದ ಸುಳಿಯಲ್ಲಿ ಸಿಕ್ಕು ಹಾಕಿಕೊಂಡು ಕಣ್ಣೀರಿಡುತ್ತಿದೆ. ತೆಗೆದುಕೊಂಡಿರುವ ಸಾಲವನ್ನು ತೀರಿಸಲು ಮತ್ತಷ್ಟು ಸಾಲವನ್ನು ಪಡೆದುಕೊಳ್ಳುತ್ತಿದೆ. ಭಾರತ, ಜಪಾನ್ಗಳಂತಹ ರಾಷ್ಟ್ರ ಬಿಡಿ ಬಾಂಗ್ಲಾದೇಶದಿಂದಲೂ ಶ್ರೀಲಂಕಾ ಸಾಲ ಪಡೆದುಕೊಂಡಿದೆ. ಈಗ ಐಎಮ್ಎಫ್ನತ್ತ ಮುಖಮಾಡಿ ಕುಳಿತಿದೆ. ಚೀನಾ ಒಂದರಿಂದಲೇ ಅದು ತೆಗೆದುಕೊಂಡಿರುವ ಸಾಲ ಐದು ಬಿಲಿಯನ್ ಡಾಲರ್ಗಳಿಗಿಂತಲೂ ಹೆಚ್ಚು. ಭಾರತ ಶ್ರೀಲಂಕಾದ ಕರೆನ್ಸಿಯಲ್ಲೇ ತಾನು ಕೊಟ್ಟ ಸಾಲವನ್ನು ಮರಳಿ ಪಡೆಯುವುದಾಗಿ ಶ್ರೀಲಂಕಾಕ್ಕೆ ಮಾತುಕೊಟ್ಟಿದೆ. ಭಾರತದ ಸಾಲ ಮತ್ತು ಅಭಿವೃದ್ಧಿ ಯೋಜನೆಗಳು ಚೀನಾ ನೀಡುವ ಸಾಲದಂತೆ ನಿಯಮಗಳನ್ನು ಹೊತ್ತು ಬರುವುದಿಲ್ಲ ಎಂಬುದು ಅವರಿಗೆಲ್ಲ ಈಗ ಅರ್ಥವಾಗುತ್ತಿದೆ. ಬಾಂಗ್ಲಾದೇಶ ಇದನ್ನು ಮೊದಲೇ ಕಂಡುಕೊಂಡಿತ್ತು. ಆಫ್ರಿಕನ್ ರಾಷ್ಟ್ರಗಳು ಅರಿಯಲಾರಂಭಿಸಿವೆ. ಏಷ್ಯಾ ಮತ್ತು ಜಗತ್ತಿನ ಇತರೆ ಭಾಗಗಳಲ್ಲಿ ಭಾರತ 60ಕ್ಕೂ ಹೆಚ್ಚು ವಿಭಿನ್ನ ಯೋಜನೆಗಳನ್ನು ಕೈಗೆತ್ತಿಕೊಂಡು ವಿಶ್ವಾಸ ಗಳಿಸಿಕೊಳ್ಳುತ್ತಿದೆ.


ಹಾಗಂತ ಪ್ರಬಲ ರಾಷ್ಟ್ರಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ವಿದೇಶಾಂಗ ನೀತಿಯೂ ನಮ್ಮದಲ್ಲ. ಕಳೆದ ಏಪ್ರಿಲ್ನಲ್ಲಿ ರಷ್ಯಾದ ವಿದೇಶಾಂಗ ಸಚಿವ ಸಗರ್ೆ ಲ್ಯಾವ್ರೊವ್ ಭಾರತಕ್ಕೆ ಭೇಟಿಕೊಟ್ಟು ಇಲ್ಲಿಂದ ನೇರವಾಗಿ ಶತ್ರು ರಾಷ್ಟ್ರವಾದ ಪಾಕಿಸ್ತಾನಕ್ಕೆ ಹೋಗಿದ್ದರು. ಪ್ರಬಲ ಅಮೇರಿಕಾವನ್ನು ಎದುರಿಸಿಕೊಂಡು ರಷ್ಯಾದ ಪರವಾಗಿ ವಾದಿಸುವ ನಮಗೆ ಇದು ನಿಜಕ್ಕೂ ಅಸಹನೀಯವಾಗಿತ್ತು. ಆಗ ಭಾರತ ತುಟಿಯನ್ನು ಎರಡು ಮಾಡಲಿಲ್ಲ. ಹಾಗಂತ ಪ್ರತೀಕಾರ ತೆಗೆದುಕೊಳ್ಳದೇ ಸುಮ್ಮನಿದ್ದರೆ ಅದು ನಮ್ಮ ಅಸಹಾಯಕತೆಯ ಪ್ರಶ್ನೆಯಾಗಿಬಿಡುತ್ತದೆ. ಹಾಗೆಂದೇ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಕಳೆದ ಶನಿವಾರ ರಷ್ಯಾದ ಭೇಟಿಯ ನಂತರ ಅದರೊಂದಿಗೆ ನಿರಂತರ ವಿರೋಧವನ್ನು ಕಾಯ್ದುಕೊಂಡು ಬಂದಿರುವ ಜಾಜರ್ಿಯಾಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ್ದಲ್ಲದೇ ಗೋವಾದಲ್ಲಿ ಮಡಿದ ಅಲ್ಲಿನ ರಾಣಿಯೋರ್ವಳ ಅಸ್ತಿಯನ್ನು ಹಸ್ತಾಂತರಿಸಿ ಸಮರ್ಥ ಸಂದೇಶವನ್ನೇ ಕೊಟ್ಟಿದ್ದಾರೆ. ಅಂದರೆ ಭಾರತ ಮನಮೋಹನ ಸಿಂಗರ ಕಾಲದ್ದಲ್ಲ. ತನಗಾದ ಅವಮಾನವನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಈ ರಾಷ್ಟ್ರ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಈ ಶಕ್ತಿಯೇ ಜಗತ್ತಿನ ಗೌರವಕ್ಕೆ ಪಾತ್ರವಾಗಿರೋದು ಮತ್ತು ಭಾರತ ಹೀಗೆ ಪ್ರಬಲವಾಗಿದೆ ಎನ್ನುವುದೇ ಹೂಡಿಕೆದಾರರಿಗೂ ವಿಶ್ವಾಸ ತುಂಬಿಸುವಂಥದ್ದು. ಈ ನಡುವೆ ಚೀನಾದೊಂದಿಗೆ ಸುಮಧುರ ಬಾಂಧವ್ಯವನ್ನು ಹೊಂದಿದ್ದ ಅಮೇರಿಕಾ ನಿಧಾನವಾಗಿ ತನ್ನ ಹಳೆಯ ಬಣ್ಣವನ್ನು ತೋರಲಾರಂಭಿಸಿದೆ. ಹಿಟ್ಲರ್ ಜರ್ಮನಿಯನ್ನು ಆಳುತ್ತಿರುವಾಗ ಅಮೇರಿಕಾದಲ್ಲಿ ರೂಸ್ವೆಲ್ಟ್ನ ಆಳ್ವಿಕೆ ಇತ್ತು. ಜರ್ಮನಿಯೊಂದಿಗೆ ವ್ಯಾಪಾರ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಂಡಿದ್ದ ಅಮೇರಿಕಾ ಹಿಟ್ಲರ್ನನ್ನು ವಿರೋಧಿಸುವ ಗೋಜಿಗೇ ಹೋಗಿರಲಿಲ್ಲ. 1936ರಲ್ಲಿ ಜರ್ಮನಿ ರೀನ್ಲ್ಯಾಂಡನ್ನು ಆಕ್ರಮಿಸಿಕೊಂಡಾಗ, ಆಸ್ಟ್ರಿಯಾಕ್ಕೆ ನುಗ್ಗಿದಾಗ, ಜೆಕೊಸ್ಲೊವಾಕಿಯಾವನ್ನು ನುಂಗಿದಾಗ ಅಮೇರಿಕಾ ಮುಗುಮ್ಮಾಗಿಯೇ ಇತ್ತು. ನಾಜಿಗಳು ಬೆಳೆದು ಯಹೂದ್ಯರ ಹತ್ಯೆ ಮಾಡಿದಾಗಲೂ ರೂಸ್ವೆಲ್ಟ್ ತುಟಿ ಬಿಚ್ಚಲಿಲ್ಲ. ಹಿಟ್ಲರ್ನ ಭಾಷಣ ಕೇಳಿದ್ದೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ರೂಸ್ವೆಲ್ಟ್, ‘ಅಷ್ಟು ಸುದೀರ್ಘ ಭಾಷಣವನ್ನು ಯಾರು ಕೇಳುತ್ತಾರೆ’ ಎಂದು ಮೂದಲಿಸಿ ನುಡಿದಿದ್ದ. ಆದರೆ ಯಾವಾಗ ಜರ್ಮನಿಗೆ ವ್ಯಾಪಾರ ಮಾಡುವುದಷ್ಟೇ ಉದ್ದೇಶ ಅಲ್ಲ, ಅಮೇರಿಕಾವನ್ನು ಮೀರಿ ಬೆಳೆಯುವುದು ಎಂದು ಅರಿವಾಯ್ತೋ ಆಗ ತಿರುಗಿ ಬಿದ್ದ. ಅಮೇರಿಕಾ ಜರ್ಮನಿಯನ್ನು ಮುಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಚೀನಾದ ವಿಚಾರದಲ್ಲಿಯೂ ಹಾಗೆಯೇ ಆಗುತ್ತಿದೆ. ನಿಧಾನವಾಗಿ ಜಗತ್ತೆಲ್ಲ ಒಂದಾಗಿ ಚೀನಿಯರ ವಿರುದ್ಧದ ದನಿ ರೂಪುಗೊಳ್ಳುತ್ತಿದೆ. ಭಾರತ ಇದರ ನೇತೃತ್ವ ವಹಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿದೆ. ಆದರೆ ಬರಿಯ ಯುದ್ಧಕಲೆ, ರಾಜತಾಂತ್ರಿಕತೆಯಷ್ಟೇ ಚೀನಿಯರನ್ನು ಮಣಿಸಲು ಸಾಕಾಗದು. ವೈಜ್ಞಾನಿಕವಾಗಿ ತಾಂತ್ರಿಕವಾಗಿಯೂ ಕೂಡ ನಾವು ಅಗ್ರಣಿಯಾಗಬೇಕಾದ ಅಗತ್ಯವಿದೆ.


ಮೊನ್ನೆ ಕೇಂದ್ರ ಕ್ಯಾಬಿನೆಟ್ ವಿಸ್ತಾರಗೊಂಡಾಗ ಪ್ರಧಾನಮಂತ್ರಿಯೇ ವಿಜ್ಞಾನ-ತಂತ್ರಜ್ಞಾನ ವಿಭಾಗವನ್ನು ತನ್ನ ಬಳಿ ಇಟ್ಟುಕೊಂಡರಲ್ಲ ಅದು ಈ ಹಿನ್ನೆಲೆಯಲ್ಲಿ ಬಲುದೊಡ್ಡ ಸಂದೇಶ. ಔಷಧಿ ಕ್ಷೇತ್ರದ ಸಂಶೋಧನೆಯಲ್ಲಿ ನಾವೀಗ ಜಗತ್ತಿನ ಕಣ್ಣುಕುಕ್ಕುವಷ್ಟು ಬೆಳೆದಿದ್ದೇವೆ. ಇನ್ನು ಇತರೆ ಕ್ಷೇತ್ರಗಳಲ್ಲೂ ಬಲವಾದ ಹೆಜ್ಜೆ ಇಡಬೇಕಿದೆ. ಇದು ಒಬ್ಬಿಬ್ಬರ ಕೆಲಸವಲ್ಲ; ಹೊಸ ಭಾರತ ನಿಮರ್ಾಣಕ್ಕೆ ರಾಷ್ಟ್ರದ ಪ್ರತಿಯೊಬ್ಬರೂ ಜೊತೆಯಾಗಿ ಮಾಡಬೇಕಾಗಿರುವ ಮಹಾಯಜ್ಞ!

ಕೊವಿಡ್ ಕಾಲದಲ್ಲಿ ಮನಮೋಹನ ಸಿಂಗರಿದ್ದಿದ್ದರೆ!

ಕೊವಿಡ್ ಕಾಲದಲ್ಲಿ ಮನಮೋಹನ ಸಿಂಗರಿದ್ದಿದ್ದರೆ!


ಕರೋನಾ ಎರಡನೇ ಅಲೆ ಅನೇಕರ ಬದುಕನ್ನು ಕಸಿದಿದೆ. ಅನೇಕರ ಆಪ್ತರನ್ನು ಸೆಳೆದೊಯ್ದಿದೆ. ಮನೆಗಳು ಬರಡಾಗಿವೆ. ನಿಜ, ಆದರೆ ಇವೆಲ್ಲದರ ನಡುವೆ ಎರಡನೆ ಅಲೆಯ ವೇಳೆಗೆ ಮೋದಿಯ ಸ್ಥಾನದಲ್ಲಿ ಮನಮೋಹನ ಸಿಂಗರೇ ಇದ್ದಿದ್ದರೆ ಪರಿಸ್ಥತಿ ಹೇಗಿರಬಹುದಿತ್ತೆಂದು ಊಹಿಸಿ ನೋಡಿದ್ದೀರಾ? ಸ್ವಂತ ನಿಧರ್ಾರ ತೆಗೆದುಕೊಳ್ಳಲಾಗದೇ ಅವರವರ ಹೆಗಲ ಮೇಲೆಯೇ ಜವಾಬ್ದಾರಿಯನ್ನು ಹೊರಿಸಿ, ಎಲ್ಲದಕ್ಕೂ ಮುಗುಮ್ಮಾಗಿ ಇದ್ದುಬಿಡುವ ಮನಮೋಹನ ಸಿಂಗರು ಈ ಎರಡನೇ ಅಲೆಯನ್ನು ಹೇಗೆ ನಿರ್ವಹಿಸಿರುತ್ತಿದ್ದರು ಎಂದು ಊಹಿಸಿದರೂ ಹೆದರಿಕೆಯಾಗುತ್ತದೆ! ಬಿಡಿ, ಈ ಸಂಕಟದ ನಡುವೆಯೂ ಸಮಾಧಾನದ ಅಂಶ ಮೋದಿ ಈ ಹೊತ್ತಲ್ಲಿ ಪ್ರಧಾನಿಯಾಗಿದ್ದಾರಲ್ಲ ಎಂಬುದಷ್ಟೇ. ಹೀಗಾಗಿಯೇ ಎಬಿಪಿ ಸಿ ವೋಟರ್ ನಡೆಸಿದ ಸವರ್ೇಯ ಪ್ರಕಾರ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸುಮಾರು ಶೇಕಡಾ 65ರಷ್ಟು ಜನ ಮೋದಿ ಮಾತ್ರ ಇಷ್ಟು ಸಮರ್ಥವಾಗಿ ಇದನ್ನು ನಿರ್ವಹಿಸಬಲ್ಲರು ಎಂದಿದ್ದಾರೆ. ಸಹಜವೂ ಹೌದು. ಮನಮೋಹನ ಸಿಂಗರಿಗೆ ಯಾವುದೆಲ್ಲ ದೌರ್ಬಲ್ಯಗಳೆನಿಸಿಕೊಂಡಿದ್ದವೋ ಮೋದಿಗೆ ಅವುಗಳೇ ಶಕ್ತಿ. ಯಾವುದು ರಾಹುಲ್ನಲ್ಲಿ ಇಲ್ಲವೇ ಇಲ್ಲವೋ ಮೋದಿಯೊಳಗೆ ಅವೆಲ್ಲವೂ ಇದೆ. ಹೀಗಾಗಿಯೇ ಈತ ಮಾತ್ರ ಅದನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಿದ್ದು. ಒಂದೊಂದೇ ಅಂಶಗಳನ್ನು ಗಮನಿಸಿ ನೋಡಿ.


ಮೋದಿಯ ಶಕ್ತಿ ಸಂವಹನ ಕಲೆ. ಹೇಳಬೇಕಾದ್ದನ್ನು ಸಮರ್ಥವಾಗಿ, ಮನಮುಟ್ಟುವಂತೆ ಹೇಳಬಲ್ಲ ಅವರ ಶಕ್ತಿ ಅಪರೂಪದ್ದು. ರಾತ್ರಿ 8 ಗಂಟೆಗೆ ಟಿವಿಯ ನೇರಪ್ರಸಾರದ ಮೂಲಕ ನಾಳೆಯಿಂದ ಜನತಾ ಕಫ್ಯರ್ೂ ಎಂದು ಮನಮೋಹನ ಸಿಂಗರು ಹೇಳುವುದನ್ನು ಒಮ್ಮೆ ಊಹಿಸಿಕೊಂಡು ನೋಡಿ. ಸಾಮಾನ್ಯ ಜನರಿರಲಿ ಕಾಂಗ್ರೆಸ್ಸಿನ ನಾಯಕರೂ ಅದನ್ನು ಅನುಸರಿಸುತ್ತಿರಲಿಲ್ಲ. ಮೋದಿ ಕಫ್ಯರ್ೂಗೆ ಬೆಂಬಲ ಕೊಡಿಸುವುದೇನು, ದೀಪ ಹಚ್ಚಿ ಎಂದಾಗಲೂ, ವೈದ್ಯರಿಗೆ ಗೌರವ ಸೂಚಿಸಲು ಚಪ್ಪಾಳೆ ತಟ್ಟಿ ಎಂದಾಗಲೂ ಜನ ಚಾಚೂ ತಪ್ಪದೇ ಅನುಸರಿಸಿದ್ದು ಅಚ್ಚರಿಯೇ. ಮೊದಲನೇ ಅಲೆಯ ವೇಳೆಗೆ ವೈಜ್ಞಾನಿಕ ಸಲಹೆಗಾರರ ಮೂಲಕ ಕೊವಿಡ್ ನಿರ್ವಹಿಸಬೇಕಾದ ರೀತಿಯನ್ನು ಅರಿತು ಸಂಪೂರ್ಣ ಲಾಕ್ಡೌನ್ಗೆ ಶರಣಾದ ಮೋದಿ ಎರಡನೇ ಅಲೆ ವ್ಯಾಪಕವಾಗಿ ಆವರಿಸಿಕೊಳ್ಳುವ ಮುನ್ನ ಚುನಾವಣಾ ರ್ಯಾಲಿಗಳಲ್ಲಿದ್ದರು. ಒಮ್ಮೆ ಎರಡನೇ ಅಲೆ ಬಾಧಿಸುತ್ತಿದೆ ಎಂದು ಗೊತ್ತಾದೊಡನೆ ರ್ಯಾಲಿಗಳನ್ನು ರದ್ದುಗೊಳಿಸಿ ಎಂದಿನಂತೆ ತಾವೇ ಮುಂಚೂಣಿಯಲ್ಲಿ ನಿಂತು ಎಲ್ಲರೊಡನೆ ಮಾತುಕತೆ ಆರಂಭಿಸಿಬಿಟ್ಟರು. ಯಾರನ್ನೂ ಅವರು ಬಿಡಲಿಲ್ಲ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಐದು ಸೂತ್ರಗಳನ್ನು ಮುಂದಿಟ್ಟರು. ಕೊವಿಡ್ ಪರೀಕ್ಷೆಗಳನ್ನು ಹೆಚ್ಚಿಸಿ ಪಾಸಿಟಿವ್ ಆದವರನ್ನು ಪ್ರತ್ಯೇಕಗೊಳಿಸುವ ಕೆಲಸವನ್ನು ಚುರುಕುಗೊಳಿಸುವಂತೆ ಕೇಳಿಕೊಂಡರು. ಲಸಿಕೆ ಉತ್ಸವವನ್ನು ವ್ಯಾಪಕವಾಗಿ ಜರುಗಿಸಲು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು. ರಾತ್ರಿ ಕಫ್ಯರ್ೂಗಳನ್ನು ಜಾರಿಗೊಳಿಸಿ ಅದನ್ನು ಕರೋನಾ ಕಫ್ಯರ್ೂ ಎಂದು ಕರೆಯುವಂತೆ ಸಲಹೆ ಕೊಟ್ಟರು. ಇದರಿಂದ ಲಾಭ ಹೆಚ್ಚೇನೂ ಆಗುತ್ತಿರಲಿಲ್ಲ. ಆದರೆ ಕರೋನಾ ಕಫ್ಯರ್ೂ ಎನ್ನುವ ಪದವೇ ಜನ ತೀಕ್ಷ್ಣವಾಗಿ ಆಲೋಚನೆ ಮಾಡಲು ಪ್ರೇರೇಪಿಸುತ್ತಿತ್ತು. ಇಷ್ಟನ್ನೂ ಹೇಳಿದ ಮೋದಿ ಯಾವ ಕಾರಣಕ್ಕೂ ಪೂರ್ಣ ಲಾಕ್ಡೌನ್ಗೆ ಶರಣಾಗಬೇಡಿ ಎಂದು ಕೇಳಿಕೊಳ್ಳುವುದನ್ನು ಮರೆಯಲಿಲ್ಲ. ಅನಿವಾರ್ಯವಾದಲ್ಲಿ ಮಾತ್ರ ಅಂತಹ ಕ್ರಮ ಕೈಗೊಳ್ಳಬೇಕೆಂದು ಸಲಹೆ ಕೊಟ್ಟರು. ಅದಾಗಲೇ ತಿಂಗಳುಗಟ್ಟಲೆ ವ್ಯಾಪಾರ ವಂಚಿತರಾದ ಉದ್ಯಮಿಗಳ ಕಾಳಜಿ ಅವರಿಗೆ ಇದ್ದೇ ಇತ್ತು. ದುರದೃಷ್ಟವೇನು ಗೊತ್ತೇ? ಯೋಗಿ ಆದಿತ್ಯನಾಥರನ್ನು ಬಿಟ್ಟು ಉಳಿದ ಯಾವ ಮುಖ್ಯಮಂತ್ರಿಗಳೂ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿಯೇ ಎಲ್ಲೆಡೆ ಕಾಲಕ್ರಮದಲ್ಲಿ ಹಾಹಾಕಾರವೆದ್ದಿತು. ಎರಡನೇ ಅಲೆಯನ್ನು ಸದ್ದಿಲ್ಲದೇ ಗೆದ್ದಿದ್ದು ಉತ್ತರ ಪ್ರದೇಶ ಮಾತ್ರ. ಹಾಗಂತ ಮೋದಿ ಮುಖ್ಯಮಂತ್ರಿಗಳೊಂದಿಗಷ್ಟೇ ಅಲ್ಲ. ನಿರಂತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಉಳಿದರು. ಜಿಲ್ಲಾಧಿಕಾರಿಗಳು, ಆರೋಗ್ಯದ ಪ್ರಮುಖ ಜವಾಬ್ದಾರಿ ಉಳ್ಳವರು, ಕೆಲವೊಮ್ಮೆ ಖಾಸಗಿ ವಲಯದವರು ಎಲ್ಲರೊಂದಿಗೆ ನಿರಂತರ ಚಚರ್ೆ ನಡೆದೇ ಇತ್ತು. ನಡು-ನಡುವೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತಂತೆಯೂ ಎಚ್ಚರಿಕೆ ನೀಡುತ್ತಲೇ ಇದ್ದರು. ಮನೆಯ ಹಿರಿಯರೊಬ್ಬರು ಮಕ್ಕಳಿಗೆ ತೊಂದರೆಯಾಗಬಹುದಾದ ಸಂದರ್ಭ ಬಂದಾಗ ಎಷ್ಟು ಕಾಳಜಿ ವಹಿಸಬಹುದೋ ಮೋದಿ ಅಷ್ಟೇ ಪ್ರೀತಿಯಿಂದ ವ್ಯವಹರಿಸಿದರು.


ಇನ್ನು ಲಸಿಕೆಗಳ ವಿಚಾರಕ್ಕೆ ಬರುವುದಾದರೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಸಮಸಮಕ್ಕೆ ನಿಂತು ಎರಡೆರಡು ವ್ಯಾಕ್ಸಿನ್ಗಳನ್ನು ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು. ಸಾಧನೆ ವಿಜ್ಞಾನಿಗಳದ್ದೇ ಹೌದು, ಆದರೆ ಅದರ ಹಿಂದೆ ಸಮರ್ಥ ವ್ಯಕ್ತಿಯೊಬ್ಬ ನಿಲ್ಲುವುದು ಅನಿವಾರ್ಯ. ಹೀಗೆಂದೊಡನೆ ಕಾಂಗ್ರೆಸ್ಸಿಗರು ಎದ್ದೆದ್ದು ಕುಣಿದಾಡಬಹುದೇನೋ. ಆದರೆ 2008ರಲ್ಲಿ ಯುಪಿಎ ಸಕರ್ಾರ ಚೆನ್ನೈನ ಬಿಸಿಜಿ ವ್ಯಾಕ್ಸಿನ್ ಲ್ಯಾಬೊರೇಟರಿ, ಕಣ್ಣೂರಿನ ಪ್ಯಾಸ್ಟ್ಯೂರ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಕಸೌಲಿಯ ಸೆಂಟ್ರಲ್ ರಿಸಚರ್್ ಇನ್ಸ್ಟಿಟ್ಯೂಟ್ಗಳನ್ನು ಏಕಾಏಕಿ ಮುಚ್ಚಿಬಿಟ್ಟಿತು. ಹೀಗೇಕೆ ಮಾಡಿತೆಂಬುದನ್ನು ಯಾರೂ ಬಾಯಿ ಬಿಡಲಿಲ್ಲ. ಆದರೆ ನಿಸ್ಸಂಶಯವಾಗಿ ಜಗತ್ತಿನ ಲಸಿಕೆ ಉತ್ಪಾದಕರ ಲಾಬಿಗೆ ಕಾಂಗ್ರೆಸ್ಸು ಮಣಿದಿತ್ತು ಎನ್ನುವುದು ಗೋಚರವಾಗುತ್ತಿತ್ತು. 2012ರಲ್ಲಿ ಸವರ್ೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿ ಅದನ್ನು ಮತ್ತೆ ತೆರೆಸಿತು. ಮೋದಿ ಈ ಬಾರಿ ಜಗತ್ತಿನ ಒತ್ತಡಕ್ಕೆ ಮಣಿಯುವುದಿರಲಿ, ಜಗತ್ತಿಗೇ ಒತ್ತಡ ಹೇರುವ ಸನ್ನಾಹದಲ್ಲಿದ್ದರು. ಲಸಿಕೆ ಉತ್ಪಾದನೆಯಾಗುವ ಕೆಲವು ದಿನಗಳ ಮುನ್ನ ಎರಡೂ ಸಂಸ್ಥೆಗಳಿಗೆ ಭೇಟಿಕೊಟ್ಟು ಲಸಿಕೆಯೊಂದಿಗೆ ಸಿದ್ಧವಾಗುತ್ತಿರುವ ಸಂದೇಶವನ್ನು ಜಗತ್ತಿಗೆ ಮುಟ್ಟಿಸಿದರು. ಈ ಸಂಸ್ಥೆಗಳಿಗೆ ಬೇಕಾದ ಹಣಕಾಸಿನ ನೆರವು ಒದಗಿಸಲಾಯ್ತು. ಲಸಿಕೆ ಸಿದ್ಧವಾದೊಡನೆ ಮುಂಚೂಣಿಯ ಕಾರ್ಯಕರ್ತರಿಗೆ ಅದನ್ನು ಕೊಡಲಾಯ್ತು. ಮುಂದೆ ಜನರಲ್ಲಿ ವಿಶ್ವಾಸ ತುಂಬಲು ತಾನೇ ಲಸಿಕೆ ಹಾಕಿಸಿಕೊಂಡರು ಮೋದಿ. ಆ ವೇಳೆಗೆ ಕಾಂಗ್ರೆಸ್ಸು ಲಸಿಕೆಗಳ ಸಾಮಥ್ರ್ಯವನ್ನು ಪ್ರಶ್ನಿಸುತ್ತಿತ್ತು. ಬಿಜೆಪಿ ವ್ಯಾಕ್ಸಿನ್ ಎಂದು ಮೂದಲಿಸಿದರು ಕೆಲವರು. ಇತ್ತೀಚೆಗಂತೂ ಕಾಂಗ್ರೆಸ್ಸಿನ ಒಬ್ಬ ನಾಯಕ ಈ ಲಸಿಕೆಗಳಲ್ಲಿ ಗೋವಿನ ರಕ್ತಸಾರವಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದ. ಆದರೆ ಮೋದಿ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದರು. ಲಸಿಕಾ ಉತ್ಸವಗಳನ್ನು ವ್ಯಾಪಕವಾಗಿ ನಡೆಸುತ್ತಾ ಜನ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಿದರು. ಊಹ್ಞೂಂ, ಅಂದುಕೊಂಡಷ್ಟು ವೇಗವನ್ನು ಅದು ಪಡೆಯಲಿಲ್ಲ. ಹಾಗಂತ ನಾಯಕ ಸುಮ್ಮನಿರುವಂತಿಲ್ಲವಲ್ಲ. ಜಗತ್ತಿನ ಅನೇಕ ರಾಷ್ಟ್ರಗಳಿಗೆ ಈ ಲಸಿಕೆಯನ್ನು ತಲುಪಿಸುತ್ತಾ, ವ್ಯಾಕ್ಸಿನ್ ಮೈತ್ರಿಗೆ ಭಾಷ್ಯ ಬರೆದರು. ಎರಡನೇ ಅಲೆಯ ನಟ್ಟನಡುವೆ ಕಾಂಗ್ರೆಸ್ಸು ‘ನಮ್ಮ ಮಕ್ಕಳ ವ್ಯಾಕ್ಸಿನ್ ಅನ್ನು ವಿದೇಶಕ್ಕೆ ಏಕೆ ಕಳಿಸಿದಿರಿ ಮೋದಿ?’ ಎಂದು ಪ್ರಚಾರ ಮಾಡಿದರಲ್ಲ; ಅದೇ ಲಸಿಕೆಗಳನ್ನು ತೆಗೆದುಕೊಳ್ಳಬಾರದೆಂದು ಇದೇ ಜನ ಹಿಂದೆಲ್ಲಾ ಹೇಳಿದ್ದನ್ನು ಮರೆತೇಬಿಟ್ಟಿದ್ದರಲ್ಲ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಾವು ಹಿಂದೇಟು ತೋರಿದ್ದು ಖಂಡಿತವಾಗಿಯೂ ಮುಳುವಾಯ್ತು. ಎರಡನೇ ಅಲೆ ನಮ್ಮನ್ನು ಬಲವಾಗಿ ಹಿಡಿದುಕೊಂಡಾಗ ವ್ಯಾಕ್ಸಿನ್ ಹಾಕಿಸಿಕೊಳ್ಳದ ನಾವು ವೈರಸ್ನ ಮುಂದೆ ಬಟಾ ಬಯಲಾಗಿ ನಿಂತುಬಿಟ್ಟಿದ್ದೆವು.


ಎರಡನೇ ಅಲೆ ಅಮರಿಕೊಂಡಾಗ ಆಕ್ಸಿಜನ್ ಕೊರತೆಯಾಗಬಹುದೆಂದು ಯಾವ ಪುಣ್ಯಾತ್ಮನೂ ಊಹಿಸಿರಲಿಲ್ಲ. ಮತ್ತು ಯಾವ ದೇಶದಲ್ಲೂ ಕೂಡ ಈ ರೀತಿಯ ಸ್ಥಿತಿ ನಿಮರ್ಾಣವಾಗಿದ್ದನ್ನು ಕಂಡಿರಲಿಲ್ಲ. ಏಕಾಕಿ ಆಸ್ಪತ್ರೆಗಳಲ್ಲ್ಲಿ ಆಮ್ಲಜನಕದ ಕೊರತೆಯಾಗುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಕರೋನಾ ಎಂದು ಗೊತ್ತಾದವರೆಲ್ಲ ಆಕ್ಸಿಜನ್ಗಾಗಿ ತಡಕಾಡುವಂತೆ ಮಾಧ್ಯಮಗಳು ಮಾಡಿಬಿಟ್ಟವು. ದೆಹಲಿಯಲ್ಲಂತೂ ಸ್ವತಃ ಮುಖ್ಯಮಂತ್ರಿಯೇ ಅಗತ್ಯಕ್ಕಿಂತ ನಾಲ್ಕುಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿ ಸಕರ್ಾರ ತಡಬಡಾಯಿಸುವಂತೆ ನೋಡಿಕೊಂಡರು. ಮೋದಿ ಸುಮ್ಮನಿರಲಿಲ್ಲ. ನಿರಂತರ ಸಭೆಗಳನ್ನು ನಡೆಸುತ್ತಾ ಉದ್ಯಮಿಗಳು ಕಾಖರ್ಾನೆಗಳಿಗೆ ಬಳಸುವ ಆಮ್ಲಜನಕವನ್ನು ರೋಗಿಗಳ ಬಳಕೆಗೆ ಬಳಸುವಂತೆ ಮಾಡಬಲ್ಲ ವ್ಯವಸ್ಥೆಯನ್ನು ರೂಪಿಸಿದರು. ಸರಕು ಸಾಗಣೆಯ ರೈಲು ಆಕ್ಸಿಜನ್ ಎಕ್ಸ್ಪ್ರೆಸ್ ಆಗಿ ನಿಮರ್ಾಣಗೊಂಡಿತು. ನಮ್ಮಿಂದ ವ್ಯಾಕ್ಸಿನ್ ಪಡಕೊಂಡಿದ್ದ ರಾಷ್ಟ್ರಗಳೆಲ್ಲ ಸಹಾಯಕ್ಕೆ ಧಾವಿಸಿದವು. ಎಲ್ಲೆಲ್ಲಿಂದ ಎಷ್ಟೆಷ್ಟು ಆಮ್ಲಜನಕದ ವ್ಯವಸ್ಥೆಯಾಯ್ತು ಎಂದು ಹೇಳಿದರೆ ಅದೇ ಒಂದು ಲೇಖನವಾದೀತು! ಆಮ್ಲಜನಕವನ್ನು ಪೂರೈಸಲಾಗದ ಆಫ್ರಿಕಾದ ಪುಟ್ಟ ರಾಷ್ಟ್ರಗಳು ಧಾನ್ಯವನ್ನು ಕೊಟ್ಟು ಕೃತಜ್ಞತೆ ಸಮಪರ್ಿಸಿದ್ದವು. ಇಡೀ ರಾಷ್ಟ್ರಕ್ಕೇ ಬೇಕಾದಷ್ಟು ಆಮ್ಲಜನಕ ಸಿಗುವುದು ಸಾಧ್ಯವೇ ಇಲ್ಲ ಎಂಬ ವಾತಾವರಣವನ್ನು ಪೂರ್ಣ ಬದಲಾಯಿಸಿ ದೇಶದ ಮೂಲೆ-ಮೂಲೆಯಲ್ಲೂ ಆಮ್ಲಜನಕ ದೊರೆಯುವಂತೆ ಮಾಡಿದ್ದು ಪ್ರಧಾನಿಯವರ ಸಾಧನೆಯೇ.


ಇವೆಲ್ಲವೂ ನಡೆಯುವಾಗ ಒಂದು ವಿಚಾರವನ್ನು ಗಮನಿಸಿದ್ದೀರಾ. ಈ ಸಂದರ್ಭಗಳಲ್ಲಿ ಡಾ. ಹರ್ಷವರ್ಧನ್ ಆರೋಗ್ಯ ಸಚಿವ ಎಂಬುದು ಅನೇಕರಿಗೆ ಗೊತ್ತಾಗಲೇ ಇಲ್ಲ. ಅವರು ಆಗೀಗ ಪತ್ರಿಕಾಗೋಷ್ಠಿಗಳನ್ನು ನಿರ್ವಹಿಸುತ್ತಿದ್ದರು ಅಷ್ಟೇ. ಉಳಿದೆಲ್ಲ ಕೆಲಸದ ನೇತೃತ್ವ ನರೇಂದ್ರಮೋದಿಯದ್ದೇ. ಗೆದ್ದಾಗಲಷ್ಟೇ ಈ ಮನುಷ್ಯ ಮುಂದೆ ನಿಲ್ಲುವುದಲ್ಲ, ಜನರಿಂದ ಬೈಗುಳಗಳನ್ನು ಸ್ವೀಕರಿಸಲು ಅವರೇ ಮುಂದೆ ನಿಂತಿದ್ದರು. ಕಾಂಗ್ರೆಸ್ ಕೆಲಸಕ್ಕೆ ಸೇರಿಸಿಕೊಂಡಿದ್ದ ಐದು ಲಕ್ಷ ಕೀಬೋಡರ್್ ಕುಟ್ಟಕರು ಎಲ್ಲ ಪ್ರಯತ್ನಗಳನ್ನು ಮಾಡಿದ ನಂತರವೂ ಮೋದಿ ಕಂಗೆಡಲಿಲ್ಲ. ಯೂಥ್ ಕಾಂಗ್ರೆಸ್ ವಿದೇಶದ ಎಂಬೆಸಿಯೊಂದಕ್ಕೆ ತಾನೇ ಆಕ್ಸಿಜನ್ ತಲುಪಿಸುವ ಪ್ರಯತ್ನ ಮಾಡಿ ಜಾಗತಿಕ ಮಟ್ಟದಲ್ಲಿ ಮೋದಿಯ ಮಾನ ಕಳೆಯಲು ಪ್ರಯತ್ನಿಸಿತು. ಸವರ್ೋಚ್ಚ ನ್ಯಾಯಾಲಯದಲ್ಲಿ ಪದೇಪದೇ ದಾವೆಗಳನ್ನು ಹೂಡಿ ಕಾಲೆಳೆಯುವ ಪ್ರಯತ್ನ ಮಾಡಲಾಯ್ತು, ದಿನ ಬೆಳಗಾದರೆ ನಿಂದನೆಯ ತುತ್ತೂರಿಗಳು ಮೊಳಗುತ್ತಲೇ ಇದ್ದವು, ಈ ಮನುಷ್ಯ ಮಾತ್ರ ಜಗ್ಗಲೇ ಇಲ್ಲ. ರೆಮ್ಡೆಸಿವಿರ್ ಇಂಜೆಕ್ಷನ್ಗಳ ಕೊರತೆಯಾಗಬಹುದು ಎಂದು ಗೊತ್ತಾದೊಡನೆ ಅದನ್ನು ಪಡೆದು ತಲುಪಿಸಲು ಹಠ ತೊಟ್ಟು ನಿಂತರು. ಈ ನಡುವೆ ಜನರಿಗೆ ಧಾನ್ಯದ ಕೊರತೆಯಾಗದಿರಲೆಂದು ಎಮ್ಎಸ್ಪಿ ಕೊಟ್ಟು ರೈತರಿಂದ ಸಾಕಷ್ಟು ಧಾನ್ಯ ಖರೀದಿ ಮಾಡಲಾಯ್ತು. ಕರೋನಾ ಕಾಲದಲ್ಲಿ ಏರಿದ ಆಹಾರತೈಲದ ಬೆಲೆಯನ್ನು ಬಲುಬೇಗ ನಿಯಂತ್ರಣಕ್ಕೆ ತಂದರು. ಪ್ಯಾಕೇಜುಗಳನ್ನು ಘೋಷಿಸಿ ತೊಂದರೆಗೊಳಗಾದ ಉದ್ಯಮವನ್ನು ಕೈ ಹಿಡಿದು ನಿಲ್ಲಿಸುವ ಯತ್ನ ಮಾಡಿದರು. ಹಾಗಂತ ಶಕ್ತಿ, ಸಾಮಥ್ರ್ಯವನ್ನು ಕಳೆದುಕೊಳ್ಳಲಿಲ್ಲ. ಚೀನಾದ ಗಡಿಯಲ್ಲಿ ಐವತ್ತು ಸಾವಿರ ಹೆಚ್ಚುವರಿ ಸೈನಿಕರನ್ನು ನಿಲ್ಲಿಸಿ ತಂಟೆಗೆ ಬರಬೇಡಿ ಎಂದರು. ಅಮೇರಿಕಾ ಸಹಕಾರ ಕೊಡುವುದಿರಲಿ, ಲಸಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ಕೊಡುವುದಿಲ್ಲವೆಂದಾಗ ಗುಟುರು ಹಾಕಿದರು. ಜಾಗತಿಕ ಒತ್ತಡ ಅಮೇರಿಕಾದ ಮೇಲೆ ಹೇಗೆ ನಿಮರ್ಾಣವಾಯ್ತೆಂದರೆ ಸ್ವತಃ ಬೈಡನ್ ನೆಟ್ಟಗಾಗಬೇಕಾಯ್ತು. ಇವೆಲ್ಲವುಗಳ ನಡುವೆಯೂ ಪಾಕಿಸ್ತಾನ ಎಫ್ಎಟಿಎಫ್ನ ಕಂದುಪಟ್ಟಿಯಿಂದ ಹೊರಬರದಂತೆ ನೋಡಿಕೊಂಡರು. ಬಂಗಾಳದಲ್ಲಿ ದೀದಿ ಕಾರ್ಯಕರ್ತರು ರಾಕ್ಷಸರಂತೆ ವತರ್ಿಸುತ್ತಾ ತನ್ನ ಪಕ್ಷದ ಕಾರ್ಯಕರ್ತರ ರುಂಡ ಚೆಂಡಾಡುತ್ತಿದ್ದಾಗ ಅದರ ವಿಚಾರಣೆಗೂ ಮುಂದಡಿಯಿಟ್ಟರು. ಒಂದೇ ಎರಡೇ ಹಗಲು-ರಾತ್ರಿ ಒಂದು ಮಾಡಿ ಅವರು ದುಡಿಯುತ್ತಾರೆ. ನಾವು ಅಂಗೈ ಅಗಲದ ಮೊಬೈಲನ್ನು ಕೈಲಿ ಹಿಡಿದು ಮನಸ್ಸಿಗೆ ಬಂದಂತೆ ಬೈದು ಸುಮ್ಮನಾಗಿಬಿಡುತ್ತೇವೆ. ಈಗ ಮತ್ತೊಮ್ಮೆ ಮೋದಿಯ ಜಾಗದಲ್ಲಿ ಮನಮೋಹನರಿದ್ದಿದ್ದರೆ ಏನಾಗಬಹುದಿತ್ತು ಎಂದು ಊಹಿಸಿ, ನಿಮ್ಮ ಎದೆಯೊಳಗೆ ಸ್ವಲ್ಪವಾದರೂ ಸಾಹಸ ಇದ್ದರೆ ಮೋದಿ ಬದಲಿಗೆ ರಾಹುಲ್ನನ್ನು ಊಹಿಸಿಕೊಂಡು ನೋಡಿ! ಎರಡನೇ ಅಲೆಯ ವೇಳೆಗೆ ದೇವರು ನಮ್ಮ ಮೇಲೆ ಎಷ್ಟು ಕೃಪೆ ಮಾಡಿದ್ದಾನೆ ಎಂದು ಅರ್ಥವಾದೀತು..


ನರೇಂದ್ರಮೋದಿಯವರಿಗೆ ಭಗವಂತ ಇನ್ನೂ ಹೆಚ್ಚಿನ ಶಕ್ತೊ ಕೊಡಲಿ.

ಒಳಗೊಳಗೇ ಕುಸಿಯುತ್ತಿದೆ ಚೀನಾ!

ಒಳಗೊಳಗೇ ಕುಸಿಯುತ್ತಿದೆ ಚೀನಾ!


ಗಡಿಯಲ್ಲಿ ಚೀನಾ ತಗಾದೆ ತೆಗೆದು ತಾನೇ ಕೆಟ್ಟದ್ದಾಗಿ ಸಿಕ್ಕುಹಾಕಿಕೊಂಡಿರುವುದು ಎಂಥವನಿಗೂ ಗೋಚರವಾಗುತ್ತಿದೆ. ತೀರಾ ಇತ್ತೀಚೆಗೆ ಚುಷೂಲ್ ಕಣಿವೆಯಲ್ಲಿ ಭಾರತೀಯ ಸೈನಿಕರು ಚೀನಾಕ್ಕೆ ಕೊಟ್ಟಿರುವ ಅಚಾನಕ್ಕು ಆಘಾತದಿಂದ ಹೊರಬರಲು ಅದಕ್ಕೆ ಸಾಕಷ್ಟು ಸಮಯವೇ ಬೇಕಾಗಬಹುದೇನೋ. ಚೀನಾ ಸುಮ್ಮನಂತೂ ಕೂಡುವುದಿಲ್ಲ. ಆದರೆ ತತ್ಕ್ಷಣಕ್ಕೆ ಪ್ರತಿಕ್ರಿಯಿಸಬೇಕಾದ ಭಯಾನಕವಾದ ಆಂತರಿಕ ಒತ್ತಡಕ್ಕೆ ಸಿಲುಕಿ ಅದು ತಪ್ಪುಗಳ ಮೇಲೆ ತಪ್ಪು ಮಾಡುತ್ತಲೇ ಸಾಗುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚೀನೀ ಸೈನಿಕರು ಹತರಾದುದರ ಬಗ್ಗೆ ಅದಾಗಲೇ ಒಳಗೊಂದು ಬೇಗುದಿ ಭುಗಿಲೇಳುತ್ತಿದೆ. ಮತ್ತೊಂದೆಡೆ ತೈವಾನ್, ಹಾಂಕಾಂಗುಗಳಷ್ಟೇ ಅಲ್ಲದೇ ಟಿಬೆಟ್ ಕೂಡ ಈಗ ಗರಿಗೆದರಿ ಕುಂತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮಿಸುಕಾಡಲಾಗದಂತೆ ಅದಕ್ಕೊಂದು ಖೆಡ್ಡಾ ರಚಿಸಲಾಗಿದೆ. ಅದಕ್ಕೆ ಸರಿಯಾಗಿ 1965ರ ಯುದ್ಧದ ಸೋಲನ್ನೇ ನೆನಪಿಸಿಕೊಂಡು ಯಾವ ಕಾಯರ್ಾಚರಣೆಗೂ ಹೆದರಿ ಕುಳಿತಿರುತ್ತಿದ್ದ ಭಾರತ ಈಗ ಗಡಿಯಲ್ಲಿ ಬಿಂದಾಸಾಗಿ ತಿರುಗಾಡುತ್ತಿದೆ. ಸೈನಿಕರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಗಡಿ ಭಾಗದಲ್ಲಿ ಶೇಖರಿಸುತ್ತಿರುವುದನ್ನು ನೋಡಿದರೆ ಈ ಬಾರಿ ಭಾರತ 65ರ ಕಳಂಕವನ್ನು ತೊಡೆದುಕೊಳ್ಳುವುದಷ್ಟೇ ಅಲ್ಲದೇ ಶಾಶ್ವತವಾಗಿ ಚೀನಾದ ತಂಟೆಯಿಂದ ಮುಕ್ತವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಮೊದಲೆಲ್ಲಾ ಚೀನಾದೊಂದಿಗೆ ಭಾರತದ ಅಧಿಕಾರಿಗಳು ಮಾತಿಗೆ ಕುಳಿತಾಗಿ ತಗ್ಗಿ-ಬಗ್ಗಿಯೇ ನಡೆಯಬೇಕಾಗುತ್ತಿತ್ತು. ಯಾವ ದಿಕ್ಕಿನಿಂದ ನೋಡಿದರೂ ಚೀನಾ ನಮಗಿಂತಲೂ ಬಲಾಢ್ಯವಾಗಿತ್ತಲ್ಲ, ಅದಕ್ಕೆ. ಈಗ ಹಾಗಿಲ್ಲ. ಮೊನ್ನೆ ಚುಷೂಲ್ನ ಎತ್ತರದ ಗುಡ್ಡಗಳನ್ನು ವಶಪಡಿಸಿಕೊಂಡ ಮೇಲಂತೂ ಪ್ಯಾಂಗಾಂಗ್ಸೊ ಭಾಗದ ಅಷ್ಟೂ ಪ್ರದೇಶಗಳ ಮೇಲೆ ನಾವು ನಿಗಾ ಇಡಲು ಸಾಧ್ಯವಾಗಿದೆ. ಒಬ್ಬ ನಿವೃತ್ತ ಸೈನಿಕರು ಹೇಳುವಂತೆ, ‘ಚೀನಾ ಯುದ್ಧವನ್ನು ಮೂರು ಅಥವಾ ನಾಲ್ಕನೇ ಲೆವೆಲ್ಗೆ ಒಯ್ಯಲು ಯತ್ನಿಸುತ್ತಿತ್ತು. ಭಾರತ ಈ ಗುಡ್ಡಗಳನ್ನು ಗೆದ್ದು ಅದನ್ನು ಒಂಭತ್ತನೇ ಲೆವೆಲ್ಗೆ ಒಯ್ದುಬಿಟ್ಟಿದೆ’ ಅಂತ. ಗುಡ್ಡಗಳ ಮೇಲಿನ ಕಾದಾಟದಲ್ಲಿ ಯಾರು ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಂಡಿರುತ್ತಾರೋ ಅವರ ಶಕ್ತಿ ಯಾವಾಗಲೂ ಹೆಚ್ಚು. ಈಗ ಆ ಇಡಿಯ ಭಾಗದಲ್ಲಿ ನಾವು ಚೀನಿಯರ ಮೇಲೆ ಅನಾಮತ್ತು ಕಣ್ಣಿಡಲು ಸಾಧ್ಯವಾಗುತ್ತದೆ. ಈ ಸಂಗತಿಯೂ ಕೂಡ ಚೀನಾದ ಜನರಲ್ಲಿ ಅಸಹನೆ ಹುಟ್ಟುಹಾಕಿದೆ. ಭಾರತದೊಂದಿಗೆ ಸದಾ ಮೇಲುಗೈ ಹೊಂದಿದ್ದ ಚೀನಾ ಈಗ ಅದನ್ನು ಕಳಕೊಂಡಿದೆ ಎಂಬ ಆಕ್ರೋಶ ಷಿಜಿನ್ಪಿಂಗ್ಗೆ ವಿರುದ್ಧವಾಗಿ ಬೆಳೆಯುತ್ತಿದೆ. ಅದಾಗಲೇ ಅಂತರ್ರಾಷ್ಟ್ರೀಯ ಚಿಂತಕರು ಹೇಳುವಂತೆ ಈ ಘಟನೆಗಳು ಷಿಯ ಅಧಿಕಾರಕ್ಕೆ ಮುಳುವಾಗುವ ಎಲ್ಲ ಸಾಧ್ಯತೆಗಳೂ ಇದೆ! ಇವಿಷ್ಟೂ ಸಾಲದೆಂಬಂತೆ ಚೀನಾದಿಂದ ತಪ್ಪಿಸಿಕೊಂಡು ಓಡಿ ಹೋದ ಅಲ್ಲಿನ ವೈರಾಲಜಿಸ್ಟ್ ಡಾ. ಲಿ ಮೆಂಗ್ ಮೊನ್ನೆ ಈಚೆಗೆ ಇಂಗ್ಲೆಂಡಿನ ಟಾಕ್ ಶೋ ಒಂದರಲ್ಲಿ ಲೂಸ್ ವುಮೆನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಡಿಯ ಕೊರೋನಾ ವೈರಸ್ ಸಕರ್ಾರಿ ಪ್ರಯೋಗಾಲಯಗಳಲ್ಲೇ ನಿಮರ್ಿತವಾಗಿದ್ದು ಎಂದು ಘಂಟಾಘೋಷವಾಗಿ ಹೇಳಿರುವುದಲ್ಲದೇ ಅದಕ್ಕೆ ಬೇಕಾಗಿರುವ ವೈಜ್ಞಾನಿಕ ಪುರಾವೆಯನ್ನು ತಾನು ಒದಗಿಸಲೂ ಸಿದ್ಧ ಎಂದು ದೃಢವಾಗಿ ಹೇಳಿದ್ದಾಳೆ. ಚೀನಾದಲ್ಲಿ ಹಬ್ಬಿದ ಹೊಸ ಬಗೆಯ ನ್ಯುಮೋನಿಯಾದ ಕುರಿತಂತೆ ಡಿಸೆಂಬರ್ ಕೊನೆಯ ಅಥವಾ ಜನವರಿ ಆರಂಭದ ವೇಳೆಗೆ ಆಕೆ ಮೊದಲ ವರದಿ ಕೊಟ್ಟಿದ್ದಳಂತೆ. ಜನವರಿ ಮಧ್ಯಭಾಗದಲ್ಲಿ ಮತ್ತೊಂದು ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಚೀನಾದ ಸಂಪಕರ್ಾಧಿಕಾರಿಯಾಗಿರುವ ತನ್ನ ಹಿರಿಯ ಅಧಿಕಾರಿಯೊಂದಿಗೆ ಹಂಚಿಕೊಂಡಿದ್ದಳಂತೆ. ಬಹುಶಃ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನೀ ಸಕರ್ಾರ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬಹುದೆಂಬ ಭರವಸೆ ಆಕೆಗಿತ್ತು. ಆಕೆ ಹೇಳುವ ಪ್ರಕಾರ ಹಾಗಾಗದೇ ‘ಬಾಯ್ಮುಚ್ಚಿಕೊಂಡಿದ್ದರೆ ಒಳಿತು. ಇಲ್ಲವಾದರೆ ಸದ್ದಡಗಿಸಲಾಗುವುದು’ ಎಂದಿತ್ತಂತೆ ಸಕರ್ಾರ. ಈಗ ಆಕೆ ಚೀನಾವನ್ನು ಬಿಟ್ಟು ಅನ್ಯರಾಷ್ಟ್ರಗಳಲ್ಲಿ ಕದ್ದುಮುಚ್ಚಿ ತಿರುಗಾಡುತ್ತಿದ್ದಾಳೆ. ಈ ವಿಚಾರದಲ್ಲಿ ಜಗತ್ತು ಆಕೆ ಕೊಡುವ ಪುರಾವೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅದು ಚೀನಾದ ವಿರುದ್ಧ ಬಲವಾದ ಸಾಕ್ಷಿ ಎಂದಾದರೆ ಚೀನಾದ ಆತಂಕಗಳ ಬುಟ್ಟಿಗೆ ಮತ್ತೊಂದು ಸೇರ್ಪಡೆಯಾದಂತೆಯೇ. ಇಷ್ಟೂ ದಿನಗಳ ಕಾಲ ಯಾವುದನ್ನು ಅಮೇರಿಕಾ ಜೋರಾಗಿ ಹೇಳುತ್ತಿತ್ತೋ ಅದನ್ನು ಜಗತ್ತೆಲ್ಲಾ ಒಪ್ಪುವ ಸ್ಥಿತಿ ನಿಸ್ಸಂಶಯವಾಗಿ ಬರಲಿದೆ!

ಹಾಗಂತ ಚೀನಾ ಸುಮ್ಮನಿಲ್ಲ. ಇದು ಚೀನಾದ ಬದುಕು ಸಾವಿನ ಹೋರಾಟ. ಈ ಬಾರಿ ಸೋತರೆ ಚೀನಾ ಸತ್ತಂತೆಯೇ. ಹಾಗೆಂದು ಅದು ಎಲ್ಲ ಅಸ್ತ್ರಗಳನ್ನು ಬಳಸುತ್ತಿದೆ. ಅಮೇರಿಕಾದಲ್ಲಿ ಟ್ರಂಪ್ ಸೋಲಿಗೆ ಪ್ರಯತ್ನ ಪಟ್ಟಂತೆಯೇ ಇಲ್ಲಿ ಮೋದಿಯ ಅವಹೇಳನಕ್ಕೆ ಮಾಡಬಹುದಾದ ಎಲ್ಲ ಕೆಲಸಗಳಿಗೂ ಬೆಂಬಲ ಕೊಡುತ್ತಿದೆ. ತೀರಾ ಇತ್ತೀಚೆಗೆ ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ತನ್ನ ಟ್ವಿಟರ್ ಅಕೌಂಟಿನಲ್ಲಿ ‘ಭಾರತದ ಸೈನ್ಯದಲ್ಲಿ ಸೈನಿಕರಿಗೆ ಮತ್ತು ಅಧಿಕಾರಿಗಳಿಗೆ ಸಿಗುವ ಊಟದಲ್ಲಿ ತಾರತಮ್ಯವಿದೆ’ ಎಂಬ ವರದಿ ಪ್ರಕಟಿಸಿತ್ತು. ಅದು ಭಾರತದ ಸೈನಿಕರ ಆತ್ಮಶಕ್ತಿಯನ್ನು ಕುಗ್ಗಿಸುವ ಚೀನಿಯರ ಕೊನೆಯ ಪ್ರಯತ್ನ. ಈ ಹಿಂದೆ ಲಡಾಖ್ನ ಎತ್ತರದ ಗುಡ್ಡಗಳನ್ನು ಕಾಪಾಡಿಕೊಳ್ಳುವ ಕ್ಷಮತೆ ಭಾರತೀಯ ಸೈನಿಕರಿಗಿಲ್ಲವೆಂದು ಅದು ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. ಇದನ್ನು ಕಮ್ಯುನಿಸ್ಟ್ ಪಾಟರ್ಿಯ ಮಾನಸಿಕ ಯುದ್ಧವೆಂದು ಕರೆಯಲಾಗುತ್ತದೆ. ಎದುರಾಳಿಗಳನ್ನು ಮಾನಸಿಕವಾಗಿ ಕೊಲ್ಲುವ ಯತ್ನ ಅದು. ದುರಂತವೆಂದರೆ ಗ್ಲೋಬಲ್ ಟೈಮ್ಸ್ನ ಇದೇ ವರದಿಯನ್ನು ಹಿಡಿದು ಕಾಂಗ್ರೆಸ್ಸಿನ ರಾಹುಲ್ ಸಕರ್ಾರವನ್ನು ಈ ತಾರತಮ್ಯದ ಕುರಿತಂತೆ ಟ್ವೀಟುಗಳ ಮೂಲಕ ಪ್ರಶ್ನಿಸಿದ್ದರು! ಆ ಮೂಲಕ ಕಾಂಗ್ರೆಸ್ಸು ಚೀನಾಕ್ಕೆ ತನ್ನ ಋಣವನ್ನು ತೀರಿಸಿತ್ತು. ಇದು ಚೀನಾದ ಆರಂಭಿಕ ಪ್ರಯತ್ನವಾಗಿರಬಹುದು. ಬರಲಿರುವ ದಿನಗಳಲ್ಲಿ ಭಾರತದ ವಿಚಾರಗಳ ಕುರಿತಂತೆ ಅನೇಕ ಸುಳ್ಳುಗಳನ್ನು ಹೆಣೆದು ನಮ್ಮ ಮುಂದೆಯೇ ಇಡಬಹುದಾಗಿರುವಂತಹ ಸಾಧ್ಯತೆಗಳಿವೆ ಮತ್ತು ಅದಕ್ಕೆ ಕಾಂಗ್ರೆಸ್ಸು ಬೆಂಬಲವಾಗಿ ನಿಲ್ಲುವ ಎಲ್ಲ ಲಕ್ಷಣಗಳೂ ಇದೆ. ಹೀಗಾಗಿಯೇ ಎಚ್ಚರಿಕೆ ಬಲು ಅಗತ್ಯ.


ಚೀನಾ ತಾನು ಉಳಿಯಲು ಯಾರ ಕುತ್ತಿಗೆಯ ಮೇಲೆ ಬೇಕಿದ್ದರೂ ಕಾಲಿಡುತ್ತದೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ. ಇದು ಚೀನಾದ ಪಾಲಿಗೆ ಕೊನೆಯ ಕದನ. ಮತ್ತೊಮ್ಮೆ ಟ್ರಂಪ್ ಗೆದ್ದರೆ, ಗಡಿಯಲ್ಲಿ ಭಾರತದೊಂದಿಗೆ ಚೀನಾ ಕದನದಲ್ಲಿ ಹೊಡೆಸಿಕೊಂಡಿತೆಂದರೆ, ಟಿಬೆಟ್ನಲ್ಲಿ ಜನಾಂದೋಲನವಾಯಿತೆಂದರೆ, ಕೊನೆಗೆ ಹಾಂಕಾಂಗ್, ತೈವಾನ್ಗಳು ಪ್ರತಿರೋಧದ ಜ್ವಾಲೆಯಲ್ಲಿ ಮುಖ್ಯಭೂಮಿ ಚೀನಾವನ್ನು ಸುಟ್ಟಿತೆಂದರೆ ಚೀನಾದ ಬದುಕು ಬಲು ಕಷ್ಟವಿದೆ. ಅಲ್ಲೊಂದು ಬಲುದೊಡ್ಡ ಆಂತರಿಕ ದಂಗೆಯಾದರೂ ಅಚ್ಚರಿ ಪಡಬೇಕಿಲ್ಲ. ಒಟ್ಟಾರೆ ಹೊಸ ಬದಲಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಸ್ವಲ್ಪ ಕಾಯೋಣ..

ಎಡಪಂಥೀಯರ ಬಂಡವಾಳ ಬಯಲಾದಷ್ಟೂ ರಾಷ್ಟ್ರಕ್ಕೆ ಒಳ್ಳೆಯದೇ!

ಎಡಪಂಥೀಯರ ಬಂಡವಾಳ ಬಯಲಾದಷ್ಟೂ ರಾಷ್ಟ್ರಕ್ಕೆ ಒಳ್ಳೆಯದೇ!

ಎಡಪಂಥೀಯರದ್ದು ವಿಚಿತ್ರವಾದ ಸಿದ್ಧಾಂತ. ತಮ್ಮವರು ಏನು ಮಾಡಿದರೂ ಸರಿಯೇ. ತಮ್ಮನ್ನೊಪ್ಪದವರು ಏನು ಮಾಡಿದರೂ ತಪ್ಪೇ. ಇದು ಇಂದಿನ ಚಿಂತನೆಯಲ್ಲ ಅವರದ್ದು. ಹುಟ್ಟಿದಾಗಿನಿಂದಲೂ ಹಾಗೆಯೇ. ಚೀನಾವನ್ನೇ ನೋಡಿ. ವೈರಸ್ಸನ್ನು ಜಗತ್ತಿಗೆ ಹಬ್ಬಿಸಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ, ಕೋಟ್ಯಂತರ ಜನರ ಬದುಕನ್ನು ಧ್ವಂಸಗೊಳಿಸಿದ್ದು ಸರಿಯಾದ ಕ್ರಮ. ಆದರೆ ಅಕ್ಕಪಕ್ಕದ ರಾಷ್ಟ್ರಗಳು ತಮ್ಮ-ತಮ್ಮ ಗಡಿಯ ರಕ್ಷಣೆ ಮಾಡಿಕೊಳ್ಳುತ್ತಾ ಇತರ ರಾಷ್ಟ್ರಗಳೊಂದಿಗೆ ಸಹಕಾರ ವೃದ್ಧಿಸಿಕೊಳ್ಳುವುದನ್ನು ಅದು ತಪ್ಪೆನ್ನುತ್ತದೆ. ತಾನು ಟಿಬೆಟ್ ನುಂಗಿದ್ದು ತಪ್ಪಲ್ಲ. ಆದರೆ ಭಾರತ ತನ್ನದ್ದೇ ಅಂಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುತ್ತೇನೆಂದರೆ ತಪ್ಪು. ತನ್ನ ದೇಶದಲ್ಲಿ ಮುಸಲ್ಮಾನರ ಬದುಕನ್ನು ನರಕಕ್ಕಿಂತಲೂ ಕಡೆಯಾಗಿಸಿದ ಚೀನಾ ಭಾರತೀಯರು 370ನೇ ವಿಧಿಯನ್ನು ಕಿತ್ತೊಗೆದು ಕಾಶ್ಮೀರದ ಮುಸಲ್ಮಾನರನ್ನು ಪ್ರತ್ಯೇಕತಾವಾದಿಗಳ ಕಬಂಧ ಬಾಹುವಿನಿಂದ ಬಿಡಿಸಿ ತಂದಿದ್ದು ಅಕ್ಷಮ್ಯವಂತೆ. ಇದೇ ಚಾಳಿ ಈ ದೇಶದ ಕಮ್ಯುನಿಸ್ಟರಿಗೂ ಇದೆ. ಒಂದಷ್ಟು ಘಟನೆಗಳನ್ನು ಈ ಹಿನ್ನೆಲೆಯಲ್ಲೇ ನಿಮ್ಮ ಮುಂದಿಡುವ ಪ್ರಯತ್ನ. ಇತ್ತೀಚೆಗೆ ಸುಷಾಂತ್ಸಿಂಗ್ ಸುದ್ದಿಯಲ್ಲಿರುವ ಚಿತ್ರನಟ. ಆತ ನಿಗೂಢವಾಗಿ ಸಾವನ್ನಪ್ಪಿದ್ದು ಮುಂಬೈ ಪೊಲೀಸರ ಪಾಲಿಗೆ ಸಹಜ ಸಾವು ಎನಿಸಿಕೊಂಡಿತ್ತು. ಆದರೆ ಮಾಧ್ಯಮಗಳು ಹಿಂದೆ ಬಿದ್ದು ಆ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲೇಬೇಕೆಂಬ ಆಗ್ರಹ ಮಂಡಿಸಿದವು. ಈ ಪ್ರಕರಣದಲ್ಲಿ ಶಿವಸೇನಾ ಮುಖ್ಯಸ್ಥನೊಬ್ಬ ಭಾಗಿಯಾಗಿರುವ ಅನುಮಾನವಿದ್ದುದರಿಂದ ಹೇಗಾದರೂ ಮಾಡಿ ಸುಷಾಂತ್ ಸಾವಿಗೆ ನ್ಯಾಯ ದೊರಕಬೇಕೆಂದರೆ ಪ್ರಕರಣ ಮುಂಬೈ ಪೊಲೀಸರಿಂದ ದಾಟಲ್ಪಡಲೇಬೇಕಿತ್ತು. ಇಡಿಯ ದೇಶ ಈ ಪರವಾಗಿ ದನಿ ಎತ್ತಿತು. ಪರಿಣಾಮ ಕೋಟರ್ಿನ ಮೂಲಕ ಪ್ರಕರಣ ಕಡ್ಡಾಯವಾಗಿ ಸಿಬಿಐಗೆ ವಗರ್ಾವಣೆಯಾಯ್ತು. ಅಷ್ಟರೊಳಗೆ ಪ್ರಕರಣದ ಸಾಕ್ಷ್ಯವನ್ನು ಮುಚ್ಚಿಹಾಕಲು, ಪ್ರಕರಣದ ವಿಚಾರಣೆ ನಡೆಸಲೆತ್ನಿಸಿದ ಬಿಹಾರ್ ಪೊಲೀಸರ ಉತ್ಸಾಹ ತಗ್ಗಿಸಲು ಮುಂಬೈ ಪೊಲೀಸರು ಮಾಡಿದ ಸಾಹಸ ಅಂತಿಂಥದ್ದಲ್ಲ. ಬಿಹಾರ್ ಪೊಲೀಸರು ವಿಚಾರಣೆಗೆಂದು ಬಂದೊಡನೆ ಬೇಕಂತಲೇ 14 ದಿನಗಳ ಕಾಲ ಅವರನ್ನು ಕ್ವಾರೆಂಟೈನ್ಗೆ ತಳ್ಳಲಾಯ್ತು. ಪ್ರಕರಣದ ವಿಚಾರಣೆಯಲ್ಲಿ ಯಾವ ದೋಷವೂ ಆಗಿಲ್ಲವೆಂದು ತೋರ್ಪಡಿಸಲು ಹರಸಾಹಸ ಮಾಡಲಾಯ್ತು. ಆಗ ಮಾಧ್ಯಮಗಳು ತಾವೇ ತನಿಖೆಯನ್ನು ಕೈಗೆತ್ತಿಕೊಂಡು ಅನೇಕ ಸೂಕ್ಷ್ಮ ಸಂಗತಿಗಳನ್ನು ಹೊರಗೆಡವುತ್ತಿದ್ದಂತೆ ಮುಂಬೈ ಪೊಲೀಸರು ಕಕ್ಕಾಬಿಕ್ಕಿಯಾದರು. ಮುಂದೇನು ಮಾಡಬೇಕೆಂದು ತೋಚದೇ ಇರುವಾಗಲೇ ಸಿಬಿಐ ಮುಂಬೈಗೆ ಧಾವಿಸಿತು. ಮಾಧ್ಯಮಗಳೂ ಕೂಡ ಒಂದು ಹೆಜ್ಜೆ ಹಿಂದೆ ಬರದೇ ಪ್ರಕರಣದಲ್ಲಿರುವ ಅನೇಕ ಸೂಕ್ಷ್ಮ ಸಂಗತಿಗಳನ್ನು ಬಯಲಿಗೆಳೆಯಲಾರಂಭಿಸಿದವು. ಆಗಲೇ ಇಡೀ ದೇಶಕ್ಕೆ ಕಂಟಕವಾದ ಡ್ರಗ್ ಮಾಫಿಯಾ ಹೊರಬಂದದ್ದು. ಈ ಮಾಫಿಯಾದಲ್ಲಿ ಬಲುದೊಡ್ಡ ಪಾತ್ರ ವಹಿಸಿರುವುದು ಬಾಲಿವುಡ್ನ ನಟನಟಿಯರೇ ಎಂಬುದು ಈ ಹಂತದಲ್ಲೇ ಬೆಳಕಿಗೆ ಬಂತು. ಇವರದ್ದೇ ಪ್ರಭಾವದಿಂದಾಗಿ ಕನ್ನಡದ ನಟನಟಿಯರೂ ಈ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಈಗ ಬೆಳಕಿಗೆ ಬಂದಿದೆ. ಇಷ್ಟೆಲ್ಲಾ ಇರುವಾಗ್ಯೂ ರಾಜ್ದೀಪ್ ಸರದೇಸಾಯಿಯಂತಹ ಎಡಪಂಥೀಯ ಪತ್ರಕರ್ತರು ಮಾಧ್ಯಮಗಳ ಈ ಹೋರಾಟದ ಕುರಿತಂತೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಾವೇ ವಿಚಾರಣೆ ನಡೆಸುವ ಮಾಧ್ಯಮಗಳ ಈ ಧಾವಂತಿಕೆಯನ್ನು ಅವರು ವಿರೋಧಿಸುತ್ತಾರೆ. ಅಚ್ಚರಿಯೆಂದರೆ ಇವರುಗಳೇ ಜಸ್ಟೀಸ್ ಲೋಯಾ ಸಾವಿಗೆ ಹತ್ಯೆಯ ರಂಗು ಕೊಟ್ಟಿದ್ದು. ಸ್ವತಃ ಲೋಯಾ ಕುಟುಂಬದವರೇ ಇದು ಕೊಲೆಯಲ್ಲ. ಆತ್ಮಹತ್ಯೆ ಎಂದು ಒತ್ತಿ-ಒತ್ತಿ ಹೇಳುವಾಗಲೂ ಎಡಪಂಥೀಯ ಪತ್ರಕರ್ತರೂ ಮಾತ್ರ ಬಿಟ್ಟೂ ಬಿಡದೇ ಅದನ್ನು ಕೊಲೆ ಎಂದು ಸಾಬೀತುಪಡಿಸುವ ಹಠಕ್ಕೆ ಬಿದ್ದಿದ್ದರು. ಅದೃಷ್ಟವಶಾತ್ ನ್ಯಾಯಾಲಯ ಕೊನೆಯಲ್ಲಿ ಜಸ್ಟೀಸ್ ಲೋಯಾ ಸಾವಿನಲ್ಲಿ ಮೋದಿಯಾಗಲೀ ಅಮಿತ್ಶಾ ಆಗಲೀ ಯಾವ ಪಾತ್ರ ವಹಿಸಿಲ್ಲವೆಂದು, ಅದು ಸಹಜ ಸಾವೆಂದು ತೀಪರ್ು ಕೊಟ್ಟಿತು. ಅಷ್ಟಾದರೂ ಅವರುಗಳಿಗೆ ಸಮಾಧಾನವಿಲ್ಲ. ಈಗಲೂ ಅದೇ ವಿಚಾರವನ್ನು ಕೆದಕುತ್ತಾ ಸ್ವತಃ ಪ್ರಧಾನಮಂತ್ರಿಯೇ ಈ ಹತ್ಯೆಯ ಸಂಚಿನಲ್ಲಿದ್ದಾರೆ ಎಂದು ಹೇಳಲೂ ಹಿಂಜರಿಯುವುದಿಲ್ಲ. ಆಗೆಲ್ಲಾ ಇದು ಮೀಡಿಯಾಗಳೇ ನಡೆಸುತ್ತಿರುವ ವಿಚಾರಣೆ ಎಂದು ಎಡಪಂಥೀಯರಿಗೆ ಅನ್ನಿಸಲೇ ಇಲ್ಲ. ಬಿಹಾರದ ಚುನಾವಣೆಗೆ ಸುಷಾಂತ್ನ ಹತ್ಯೆಯ ವಿಚಾರವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸುವ ಎಡಪಂಥೀಯ ಪತ್ರಕರ್ತರು ಮಹಾರಾಷ್ಟ್ರ ಚುನಾವಣೆಯಲ್ಲಿ ಜಸ್ಟೀಸ್ ಲೋಯಾ ಬಳಕೆಯಾಗಿದ್ದನ್ನು ಮತ್ತು ಮೋದಿ ಕಳೆಗುಂದಿಸುವಲ್ಲಿ ಅದನ್ನು ತಾವೂ ಬಳಸಿದ್ದರ ಕುರಿತಂತೆ ಚಕಾರವೆತ್ತಲಿಲ್ಲ.

ಕಂಗನಾ ವಿಷಯದಲ್ಲೂ ಹಾಗೆಯೇ ಆಯ್ತು. ಶಿವಸೇನೆಯ ಸಂಜಯ್ ರೌತ್ ಆಕೆಯನ್ನು ಮುಂಬೈಯಲ್ಲಿ ಇರುವಂತಿಲ್ಲ ಎಂದು ತಾಕೀತು ಮಾಡಿದ. ಕಂಗನಾಳ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಶಿವಸೈನಿಕರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕಿತ್ತೇನೋ. ಆಕೆ ತಲೆಕೆಡಿಸಿಕೊಳ್ಳಲಿಲ್ಲ. ಝಾನ್ಸಿ ರಾಣಿಯ ಮೇಲಿನ ತನ್ನ ಸಿನಿಮಾ ಹೊರಬರುವಾಗ ರಾಜಸ್ತಾನದ ಕಣರ್ಿ ಸೇನಾ ಪುಂಡಾಟಿಕೆ ಮಾಡಹೊರಟಿತ್ತಲ್ಲ ಆಗ ಕಚ್ಚೆ ಕಟ್ಟಿ ನಿಂತ ಈ ಹೆಣ್ಣುಮಗಳು, ‘ನಾನೂ ರಜಪೂತಳೇ. ತಾಕತ್ತಿದ್ದರೆ ಸಿನಿಮಾ ನಿಲ್ಲಿಸಿ, ನೋಡಿಬಿಡುತ್ತೇನೆ’ ಎಂದಿದ್ದಳು. ಕಣರ್ಿ ಸೇನಾ ಮಾತೂ ಆಡದೇ ತೆಪ್ಪಗಾಯ್ತು. ಈ ಬಾರಿಯೂ ಹಾಗೆಯೇ. ಮುಂಬೈ ಯಾರಪ್ಪನದೂ ಅಲ್ಲ. ಹೀಗಾಗಿ ತನ್ನನ್ನು ಓಡಿಸುವ ತಾಕತ್ತು ಯಾರಿಗೂ ಇಲ್ಲ ಎಂಬ ಹೇಳಿಕೆಯನ್ನು ಆಕೆ ಮುಲಾಜಿಲ್ಲದೇ ಕೊಟ್ಟಳು. ‘ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ’ ಎಂಬ ಹೇಳಿಕೆ ಕೊಟ್ಟು ಉದ್ಧವ್ ಠಾಕ್ರೆಯ ಸಕರ್ಾರಕ್ಕೆ ಕೈಗನ್ನಡಿ ಹಿಡಿದಳು ಆಕೆ. ಮೈಯ್ಯಲ್ಲಾ ಪರಚಿಕೊಂಡ ಸಂಜಯ್ ರೌತ್ ಕಂಗನಾ ಪಾಕಿಸ್ತಾನಕ್ಕೆ ಹೋಗುವುದಿದ್ದರೆ ನಾನೇ ಹಣಕೊಟ್ಟು ಕಳಿಸಿಕೊಡುವೆ ಎಂದು ಹೇಳಿ ಮತ್ತಷ್ಟು ವಿವಾದವನ್ನು ಮೈಮೇಲೆಳೆದುಕೊಂಡ. ಏಕೆಂದರೆ ಪಿಒಕೆ ಭಾರತದ ಅಂಗ ಎಂದು ಹೇಳುತ್ತಿದ್ದ ಹಿಂದೂಪರ ಪಕ್ಷಗಳಲ್ಲಿ ಶಿವಸೇನೆಯೇ ಮುಖ್ಯಭೂಮಿಕೆಯಲ್ಲಿತ್ತು. ಈ ಹೇಳಿಕೆಗೆ ಪ್ರತಿಕ್ರಿಯಿಸುವ ಭರದಲ್ಲಿ ಆತ ಅದನ್ನು ಪಾಕಿಸ್ತಾನಕ್ಕೆ ಬರೆದುಕೊಟ್ಟುಬಿಟ್ಟಿದ್ದ. ಜನರ ಬೈಗುಳಗಳನ್ನು ತಡೆಯಲಾಗದೇ ಮತ್ತೊಂದು ತಪ್ಪು ಹೆಜ್ಜೆಯನ್ನಿಟ್ಟು ಮಾಧ್ಯಮಗಳ ಮುಂದೆ ಕಂಗನಾಳನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸಿಬಿಟ್ಟ. ಮಾತೆತ್ತಿದರೆ ಸ್ತ್ರೀವಾದದ ಕುರಿತಂತೆ ಅರಚಾಡುತ್ತಾ ಹಿಂದೂಧರ್ಮದ ವಿರುದ್ಧ ಬೊಟ್ಟು ಮಾಡಿ ತೋರಿಸುವ ಎಡಪಂಥೀಯರು ಈಗೇಕೋ ಬಾಯಿಮುಚ್ಚಿ ಕುಳಿತಿದ್ದರು. ಈ ಹಿಂದೆ ಸುಷಾಂತ್ನ ಪ್ರಕರಣದ ಹಿನ್ನೆಲೆಯಲ್ಲಿ ಬಿಹಾರ್ ಪೊಲೀಸರನ್ನು, ಅಲ್ಲಿನ ಮುಖ್ಯಮಂತ್ರಿಯನ್ನು ನಿಂದಿಸಿದ್ದ ರಿಯಾ ಚಕ್ರವತರ್ಿಯನ್ನು ಬಿಹಾರ್ ಪೊಲೀಸ್ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡಾಗ ಇದೇ ಎಡಪಂಥೀಯ ಪಟಾಲಂ ಉರಿದುಬಿದ್ದಿತ್ತು. ಬಿಹಾರದ ಪೊಲೀಸರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿತ್ತು. ಈಗ ರಾಜಕೀಯ ನಾಯಕನೊಬ್ಬ ಕಂಗನಾಳ ವಿರುದ್ಧ ನಿಂದನೆಯ ಪದಗಳನ್ನು ಬಳಸಿದಾಗಲೂ ಅವರು ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ.

ಕನರ್ಾಟಕದಲ್ಲೂ ಇಂಥವರಿಗೆ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಮಾತುಗಳನ್ನು ಬದಲಾಯಿಸುವ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಮಂದಿ ಬೇಕಾದಷ್ಟಿದ್ದಾರೆ. ಗೌರಿ ಹತ್ಯೆಯ ಕುರಿತಂತೆ ಅಷ್ಟೆಲ್ಲಾ ಅರಚಾಡಿದವರು ಒಂದಾದ ಮೇಲೊಂದು ಹಿಂದೂಗಳ ಹತ್ಯೆಯಾಯಿತಲ್ಲ, ಆಗ ಮಾತನಾಡಲೇ ಇಲ್ಲ. ಡಿ.ಜೆ ಹಳ್ಳಿಯ ಪ್ರಕರಣದಲ್ಲಂತೂ ಹಿಂದೂಗಳ ಮನೆಯನ್ನೇ ಹುಡು-ಹುಡುಕಿ ಧ್ವಂಸಗೊಳಿಸಲಾಯ್ತು. ಆ ಮೂಲಕ ಆ ಭಾಗದ ಹಿಂದೂಗಳಲ್ಲಿ ಭಯದ ವಾತಾವರಣವನ್ನು ಹುಟ್ಟಿಸಿ ಅವರೆಲ್ಲರೂ ಆ ಪ್ರದೇಶವನ್ನೇ ಬಿಟ್ಟು ಮುಸಲ್ಮಾನರಿಗೆ ಕಾಣಿಕೆಯಾಗಿ ಕೊಟ್ಟು ಹೋಗಬೇಕೆಂಬ ರೀತಿಯಲ್ಲೆ ದಂಗೆಗಳನ್ನು ನಡೆಸಲಾಯ್ತು. ಸ್ವತಃ ಶಾಸಕರನ್ನೆ ಬಿಡದ ಜನ ಇನ್ನು ಸಾಮಾನ್ಯರ ಕುರಿತಂತೆ ತಲೆಕೆಡಿಸಿಕೊಳ್ಳುವರೇನು? ಒಟ್ಟಾರೆ ಭಯದ ವಾತಾವರಣವನ್ನು ಸೃಷ್ಟಿಮಾಡಿ ಮುಸಲ್ಮಾನರ ವಿರುದ್ಧ ಯಾರೂ ಮಾತನಾಡದಂತೆ ಮಾಡಿಬಿಟ್ಟರಲ್ಲಾ, ಧರಣಿಕೋರರಲ್ಲಿ ಒಬ್ಬರಾದರೂ ಟೌನ್ಹಾಲ್ ಮುಂದೆ ಕಾಣಿಸಿಕೊಂಡರಾ? ದೂರದ ಬಿಹಾರದಲ್ಲಿ, ಉತ್ತರ ಪ್ರದೇಶದಲ್ಲಿ ಒಂದಿಬ್ಬರು ಮುಸಲ್ಮಾನರ ಹತ್ಯೆಯಾದಾಗ ಇಲ್ಲಿ ಅಸಹಿಷ್ಣುತೆಯ ಕೂಗೆಬ್ಬಿಸಿ ಅರಚಾಡಿದವರ್ಯಾರೂ ಈ ಹೊತ್ತಿನಲ್ಲಿ ಮಾತೇ ಆಡಲಿಲ್ಲವಲ್ಲಾ. ಈಗ ಅವರಿಗೆ ಅಸಹಿಷ್ಣುತೆಯ ಭೂತ ಕಾಣಲೇ ಇಲ್ಲವೇ? ಅದರಲ್ಲೂ ದಲಿತ ಶಾಸಕನ ಮೇಲಿನ ಮುಸಲ್ಮಾನರ ಈ ಅತ್ಯಾಚಾರ ಎಡಪಂಥೀಯರ ಕಣ್ ತಪ್ಪಿದ್ದಾದರೂ ಹೇಗೆ? ಪ್ರಶ್ನೆ ಕೇಳಬೇಕಲ್ಲ.

ಇವರ ದ್ವಂದ್ವ ನೀತಿ ಇಲ್ಲಿಗೇ ಮುಗಿಯುವುದಿಲ್ಲ. ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಸಾಧುಗಳಿಬ್ಬರನ್ನು ಬರ್ಬರವಾಗಿ ಕೊಲ್ಲಲಾಯ್ತು. ಪೊಲೀಸರ ರಕ್ಷಣೆಯಲ್ಲಿದ್ದ ಸಾಧುಗಳು ತಮ್ಮನ್ನು ತಾವು ಸುರಕ್ಷಿತರೆಂದೇ ಭಾವಿಸಿದ್ದರು. ದುರಂತವೆಂದರೆ ಅದೇ ಪೊಲೀಸರು ಆ ಸಾಧುಗಳನ್ನು ದಂಗೆಕೋರರಿಗೆ ಒಪ್ಪಿಸಿದ್ದರು. ಇಡಿಯ ಪ್ರಕರಣದ ಹಿಂದೆ ಎಡಪಂಥೀಯರ ಪಡೆಯೊಂದಿತ್ತು ಎಂಬುದನ್ನು ಈಗ ಸತ್ಯಶೋಧಕ ಸಮಿತಿ ಹೊರಹಾಕಿದೆ. ಯಾವೊಬ್ಬನೂ ತುಟಿಪಿಟಿಕ್ ಎನ್ನುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳುವ ಹೋರಾಟವಿದ್ದಾಗ ಮಾತ್ರ ಬಾಯಿ ಬಿಡುತ್ತಾ ಅದಕ್ಕೆ ದಲಿತ ಸಂವೇದನೆಯ, ಸ್ತ್ರೀ ಸಂವೇದನೆಯ ಬಣ್ಣ ಬಳಿಯುತ್ತಾ ಕೂರುವ ಈ ಮಂದಿ ನಿಜವಾಗಿಯೂ ದಲಿತರಿಗೆ ಆಘಾತವಾದಾಗ, ಹೆಣ್ಣುಮಕ್ಕಳಿಗೆ ತೊಂದರೆಯಾದಾಗ ಬಾಯಿ ಬಿಡುವುದೇ ಇಲ್ಲ. ಇವರಿಗೆಲ್ಲ ಈಗಿರುವ ಒಂದೇ ಸಮಸ್ಯೆ ಎಂದರೆ ಅವರು ಆಶಾಭಾವನೆಯಿಂದ ನೋಡುತ್ತಿದ್ದ, ಮುಂದೊಂದು ದಿನ ತಮ್ಮೆಲ್ಲರ ಚಟುವಟಿಕೆಯ ಕೇಂದ್ರವಾಗಿ ನಿಲ್ಲುತ್ತದೆಂದು ಕನಸು ಕಾಣುತ್ತಿದ್ದ ಚೀನಾ ಕುಸಿದು ಬೀಳುತ್ತಿದೆ. ಅದಾಗಲೇ ಭಾರತ ಗಡಿಯಲ್ಲಿ ಪ್ರತಾಪ ತೋರಿರುವುದಲ್ಲದೇ 1962ರಲ್ಲಿ ಕಳೆದುಕೊಂಡಿದ್ದ ಕೆಲವು ಭೂಭಾಗಗಳನ್ನು ವಶಪಡಿಸಿಕೊಂಡಿರುವ ಸುದ್ದಿಯೂ ಬಂದಿದೆ. ರಷ್ಯಾದಲ್ಲಿ ಭಾರತದ ರಕ್ಷಣಾ ಸಚಿವರನ್ನು ಕಾಡಿ ಭೇಟಿ ಮಾಡಿದ ಚೀನಾದ ರಕ್ಷಣಾ ಸಚಿವರು ‘ಭಾರತ ನಮ್ಮ ಗಡಿ ಭಾಗದೊಳಕ್ಕೆ ನುಸುಳಲು ನಾವು ಬಿಡುವುದೇ ಇಲ್ಲ’ ಎಂಬ ಹೇಳಿಕೆ ಕೊಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಈ ಮಾತನ್ನು ನಾವು ಹೇಳುತ್ತಿದ್ದೆವು. ಭಾರತೀಯ ಸೇನಾನಿನಗಳ ಮನೋಬಲ ಬಲು ಎತ್ತರದಲ್ಲಿದೆ. ಚೀನಾ ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ತನ್ನ ಪ್ರತಾಪವನ್ನು ತೋರಿಸಲು ಸಾಧ್ಯವಾಗದಂತೆ ಭಾರತವೇ ಚೀನಾವನ್ನು ಗಡಿಯಲ್ಲಿ ಕಟ್ಟಿ ಹಾಕಿದೆ. ಅದೇ ವೇಳೆಗೆ ಮುಸಲ್ಮಾನ ರಾಷ್ಟ್ರಗಳೊಂದಿಗೂ ಸೇರಿ ಜಗತ್ತಿನ ಅನೇಕ ರಾಷ್ಟ್ರಗಳೊಂದಿಗೆ ತನ್ನ ಬಾಂಧವ್ಯವನ್ನು ಭಾರತ ಬಲಗೊಳಿಸಿಕೊಳ್ಳುತ್ತಲೇ ನಡೆದಿದೆ. ಆಂತರಿಕವಾಗಿಯೂ ಚೀನಾ ಕುಸಿಯುವ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿಯೇ ಚಡಪಡಿಸುತ್ತಿರುವ ಚೀನಾ ಭಾರತದೊಳಕ್ಕೆ ದಂಗೆಯನ್ನು ಹಬ್ಬಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಸಹಜವಾಗಿಯೇ ಅವರ ಮುಂದಿರುವ ಆಶಾಕಿರಣ ಕಾಂಗ್ರೆಸ್ಸು ಮತ್ತು ಎಡಪಂಥೀಯರು ಮಾತ್ರ. ಜೊತೆಗೆ ಜಿಹಾದಿಗಳು. ಇತ್ತೀಚೆಗೆ ತಾನೇ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ರಾಹುಲ್ ನೇತೃತ್ವದ ಕಾಂಗ್ರೆಸ್ಸು ಗಡಿ ವಿಚಾರವನ್ನು ಮುಂದಿಟ್ಟುಕೊಂಡು ನರೇಂದ್ರಮೋದಿಯ ವಿರುದ್ಧ ಆಂದೋಲನ ನಡೆಸಲು ಸಿದ್ಧತೆ ಮಾಡಿಕೊಂಡಿದೆ ಎಂಬರ್ಥದ ಟ್ವೀಟ್ ಮಾಡಿತ್ತು. ಇಷ್ಟು ದಿನ ಪಾಕಿಸ್ತಾನದ ಪತ್ರಿಕೆಗಳು ರಾಹುಲ್ನನ್ನು ಸಂಭ್ರಮಿಸುತ್ತಿದ್ದವು. ಈಗ ಚೀನಾದ ಪತ್ರಿಕೆಗಳೂ ಕೂಡ. ಎಲ್ಲ ಚುಕ್ಕಿಗಳೂ ಸೇರಿದರೆ ಭಾರತವನ್ನು ಚೂರುಗೊಳಿಸಬೇಕೆಂಬ ಇವರುಗಳ ವಿದ್ರೋಹದ ಚಿಂತನೆ ಕಣ್ಣಿಗೆ ರಾಚುವಂತಿದೆ. ಆದರೆ ಭಾರತೀಯರು ಹಿಂದೆಂದಿಗಿಂತಲೂ ಹೆಚ್ಚು ಜಾಗೃತವಾಗಿರುವುದರಿಂದ ಈಗೀಗ ಇವರ ಮನೋಗತಗಳೆಲ್ಲಾ ಬಯಲಿಗೆ ಬರುತ್ತಿವೆ. ಇದು ಭಾರತದ ಪುನರ್ ನಿಮರ್ಾಣದ ಪರ್ವಕಾಲ. ದೇಶವಿರೋಧಿ ಚಿಂತನೆ ನಡೆಸುವ ಇವರುಗಳ ಬಂಡವಾಳ ಹೆಚ್ಚು ಬಯಲಿಗೆ ಬಂದಷ್ಟೂ ಭಾರತ ಬಲುಬೇಗ ನಿಮರ್ಾಣಗೊಳ್ಳುತ್ತದೆ.