ನೆಲದ ಮಾತು

ಮಗೂ, ಶ್ವೇತಕೇತೂ….

Posted in ಕವಿತೆಯಂತೆ... by Chakravarty on January 20, 2008

ಅಹಂಕಾರದಿಂದ ಬೀಗಿದ ಮಗ
ಅಪ್ಪನೆದುರು ನಿಂತ.
“ತಂದೆ, ನಾ ಎಲ್ಲ ಕಲಿತಿರುವೆ
ನಿನಗಿಂತ ನಾ ತಿಳಿದವನೀಗ”
ಎಂದ.

ಅಪ್ಪ ನಕ್ಕ,
“ಓಹೋ! ಯಾವುದನರಿತು
ಮತ್ತೇನೂ ಕಲಿಯಬೇಕಿಲ್ಲವೋ ಅದನ್ನೂ….
ಅದನ್ನೂ ಅರಿತುಬಿಟ್ಟೆಯಾ!?”
ಮಗ ತಬ್ಬಿಬ್ಬು.

ಅಪ್ಪ ಕೇಳುತ್ತಲೇ ಹೋದ,
ಯಾರು ನೀನು?
ನೀನು ಯಾರು?
ದೇಹ ನೀನಾದರೆ, ನಿನ್ನ ಶವ ನೀನಾ?
ಮನವು ನೀನಾದರೆ, ಬುದ್ಧಿ ಯಾರದು?
ಬುದ್ಧಿ ನೀನಾದರೆ, ಚೈತನ್ಯವದೆಲ್ಲಿ?
ತಿಳಿಯಲಿರುವುದದೆಷ್ಟು?
ಇದನರಿತರೆ ಉಳಿಯುವುದು ಇನ್ನೆಷ್ಟು!?

ಮಗೂ ಶ್ವೇತಕೇತು,
ನಿನ್ನನರಿ.
ನಿನ್ನನರಿ, ನಿನ್ನನರಿ.
ಅದಕ್ಕಾಗಿ ‘ನಿನ್ನ’ ಮರಿ!

2 Responses

Subscribe to comments with RSS.

  1. ಸತ್ಯ. ನಮ್ಮನ್ನು ನಾವು ಮರೆತರೆ ಮಾತ್ರ ನಮ್ಮನ್ನರಿತು.. ಮುಂದೆ ಸಾಗಬಹುದು. ‘ಅಹಂ’ ಅರಿವಿಗೆ ಮೊದಲ ಮತ್ತು ಕೊನೆಯ ಅಡ್ಡಿ.

  2. hariharapura sridhar said, on September 30, 2008 at 12:35 pm

    ನಾನು, ನಾನು ,ಅನ್ನೋದು ಅಷ್ಟು ಸುಲಭವಾಗಿ ಹೋಗುಲ್ಲ. ಅದಿಲ್ಲದಿದ್ದರೆ ಇದೆಲ್ಲಾ ಯಾಕ್ರಿ? ಅದು ಹಿತಮಿತವಾಗಿದ್ದಾರೆ ಅದೂ ಚಂದ. ಇಲ್ಲದಿದ್ದರೆ ಸವಾರಿ ಮಾಡೋಕೆ ಜನ ಕ್ಯೂ ನಲ್ಲಿದ್ದಾರೆ, ಇದು ನಮಗೆ ನೆನಪಿರಲಿ.
    ಹರಿಹರಪುರಶ್ರೀಧರ್


Leave a Reply